ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಗೋವಿಂದನ ದಯೆ

ಕೆಲವೊಮ್ಮೆ ಅವರ ಅಮೇರಿಕಾ ಮಾತು ಪುನರಾವರ್ತನೆಯಾಗುತ್ತಿತ್ತು ಮತ್ತು ವಿಪರೀತವಾಗುತ್ತಿತ್ತು. ಸುತ್ತಲೂ ಇದ್ದವರಿಗೆ ಬೇಸರ ತಂದಿದ್ದರೂ ಆಶ್ಚರ್ಯವಿಲ್ಲ.

ಗೋವಿಂದನ ದಯೆ Read Post »

ಕಥಾಗುಚ್ಛ

ನಮ್ಮದಾರಿ ಬರಿ ಚಂದ್ರನ ವರೆಗೆ

ಮನೆ ಎದುರಿನ ಚಚ್ಚೌಕದ ಜಾಗದಲಿ ಕೆಂಪು ಬಣ್ಣ ಮೆತ್ತಿದ ಸಿಮೆಂಟಿನ ಕಟ್ಟೆಯ ಮೇಲೆ ಕುಳಿತು, ದೊಡ್ಡದಾದ ಕಂಬಕ್ಕೆ ವಾಲಿಕೊಂಡು, ಕತ್ತನ್ನು ಎತ್ತೆತ್ತಿ,ಅತ್ತಿತ್ತ ನೋಡುತ್ತ,ಬಿಟ್ಟ ಹೂಗಳ ಲೆಕ್ಕ ಹಾಕುತ್ತಿದ್ದಳು

ನಮ್ಮದಾರಿ ಬರಿ ಚಂದ್ರನ ವರೆಗೆ Read Post »

ಇತರೆ

ಜೀವಾದಿಗಳ ಸಾನಿಧ್ಯದಲ್ಲಿ !

ನೂರೆಂಟು ಕಗ್ಗಂಟುಗಳ ಈ ಮಾನವ ಬದುಕಿನಲ್ಲಿ ಭ್ರಮೆಯಿಲ್ಲದೆ ಜೀವಿಸುವುದು ಅಸಾಧ್ಯ. ಒಬ್ಬೊಬ್ಬರಿಗೆ ಒಂದೊಂದು ಭ್ರಮೆ. ಹಾಗೇ ನನಗೆ ‘ಜೀವಜಂತು’ಗಳ ಪ್ರೀತಿಯ ಭ್ರಮೆ ; ಅಥವಾ ಇದೊಂದು ಹುಚ್ಚಿದ್ದರೂ ಇರಬಹುದು ಎಂದು ನನಗೆ ಮತ್ತು ನನ್ನನ್ನು ಬಲ್ಲವರಿಗೆ ಒಂದು ಸಣ್ಣ ಅನುಮಾನ !

ಜೀವಾದಿಗಳ ಸಾನಿಧ್ಯದಲ್ಲಿ ! Read Post »

ಕಾವ್ಯಯಾನ

ಸಾಯಬೇಡಿ…ಜೋಕೆ

ಕವಿತೆ ಸಾಯಬೇಡಿ…ಜೋಕೆ ಡಾ. ಅರಕಲಗೂಡು ನೀಲಕಂಠ ಮೂರ್ತಿ. ಸಾಯಬೇಡಿ ಜೋಕೆಇದು ಸಾಯಲು ಸೂಕ್ತ ಸಮಯವಲ್ಲ! ಯಾರಿಗೂ ಈ ಸಮಯಸಾವಾಗದಿರಲಿವಯೋಧಿಕ್ಯ ಕಾರಣಕೂ ಕೂಡ! ಸದ್ಯ ಸತ್ತವರ ಮನೆಯ ಸುತ್ತನೆರೆಹೊರೆಯ ಗುಮಾನಿಪಿಸು ಪಿಸು ಗುಮ್ಮದನಿಎಲ್ಲ ಹಾಗಿರಲಿ ಗಾಳಿಯೂ ಸಹ ಬೆದರಿಬೀಸುವುದನೆ ನಿಲ್ಲಿಸೀತುಅಥವಾ ಭಯದಿ ರಭಸ ಸುತ್ತೀತು… ಸತ್ತ ದುರ್ದೈವಿಯ ಹೊರಲುಭುಜಗಳ ಎಣಿಕೆಯ ಮಾತಂತಿರಲಿನರಪೇತಲರೂ ಅನುಮಾನನೀವೇ ಭುಜಗಳಾಗಿಹೊತ್ತೊಯ್ಯಬೇಕು ಬಹುಶಃ ಜೋಪಾನ! ಇನ್ನು ಈ ಇಂಥ ಹೊತ್ತಲೂಸಮಯವೇ ಸಂದರ್ಭವೇಅಥವಾ ಸೂಕ್ತ ತಾಣವೇಸಾವೆಂಬ ಸೈತಾನನ ಆಕ್ರಮಣಕೆ…ಈಗಂತೂ ಕುಣಿವ ಕರೋನಬೀಭತ್ಸ ಕೇಕೆ!ಆಸ್ಪತ್ರೆಯಲೆ ಉಸಿರು ನಿಂತರಂತುಮನೆಗೂ ಶವ ಬರದು ಯಾರದುಮುಗಿಸುವರು ದಫನ್ ಎಂದುಒಟ್ಟೊಟ್ಟಿಗೆ ಕಸಕ್ಕಿಂತ ಕಡೆಯಾಗೆಸೆದುದೂರ ಎಲ್ಲೋ ಊರ ಹೊರಗೆಸಾಮೂಹಿಕ ಗುಂಡಿಯೊಳಗೆ…! ಸೊಳ್ಳೆ ಜಿರಲೆಗಳನೂ ಕೂಡಒಂದೊಂದೆ ತಾಳ್ಮೆಯಲಿಸಂದಿಗೊಂದಿಗಳಲಿಕೆದಕಿ ಬೆದಕಿ ಚಚ್ಚುವವರುಕಸದ ಬುಟ್ಟಿಗೆಸೆವವರು ನಾವು! ಸತ್ತವರೇನೋ ಹೊರಟು ಹೋದರು ನಿಜನೀವು-ನಾವು ಕಳೆದುಕೊಂಡವರು?ದುಃಖದ ಮಡು ತುಂಬಿದವರು?ವರುಷ ವರುಷವೂ ಇನ್ನುವಿಚಿತ್ರ ವಿಚಿಕಿತ್ಸೆಯ ರೀತಿಗೆ ಹೀಗೆನಮ್ಮ ನಿಮ್ಮಮನೆ ಮೈಲಿಗೆ! ಕಾಗೆ ಕೂಗು ಕೂಡಈಗ ಬಹು ದೂರ ನಿಮಗೆ ನಮಗೆಬಹುಷಃ…ಅದಕೂ ಸೂತಕದ ಮರುಳು!ಮತ್ತದೂ ಸಹ ಕೂರದುನಿಮ್ಮ ನಮ್ಮ ಐಬು ಛಾವಣಿ ಮೇಲೆಹಾಗೂ ಹಾರದಿನ್ನು ಸುತ್ತಮುತ್ತ ಗಿರಕಿ ಎಂದೆಂದಿಗೂ… ಆದ್ದರಿಂದಜೋಕೆ ಯಾರೂ ಸಾಯಬೇಡಿದಯಮಾಡಿಯಾರಿಗೂ ಈ ಸಂದಿಗ್ಧ ಸಮಯಸಾವಾಗದಿರಲಿವಯೋಧಿಕ್ಯ ಕಾರಣಕೂ ಕೂಡಇದು ಸೂಕ್ತ ಸಮಯ ಅಲ್ಲವೇ ಅಲ್ಲ…! ********************************

ಸಾಯಬೇಡಿ…ಜೋಕೆ Read Post »

You cannot copy content of this page

Scroll to Top