ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ರೈತಗಜಲ್ ಹಸಿರುಸಿರಿನ ಸಿರಿ ನೀನು ಧರಣಿ ಮೇಲೆ ದಯೆಬಾರದೆ ಮಳೆರಾಯಾಹರಸುವ ಹೆಸರೇ ನೀರು ಸುರಿಯುತ್ತ ಇಳೆಯ ಬೆರೆಯಬಾರದೆ ಮಳೆರಾಯಾ ನೇಗಿಲು ಕಾಯಕವಿಲ್ಲದೆ ಕುಳಿತಿದೆ ಸುಣ್ಣವಿರದ ಗೋಡೆಯನ್ನು ಅಂಟಿಕೊಂಡುರೈತನ ಹೊಲ ಉಳುವ ಜೋಡೆತ್ತನ್ನಾದರೂ ಬದುಕಿಸಬಾರದೆ ಮಳೆರಾಯಾ ಅಟ್ಟ ಬಿಟ್ಟು ಹಸಿದ ಹೊಟ್ಟೆ ಸೇರಿವೆ ಬೀಜಕ್ಕಿಟ್ಟ ಕಾಳೆಂಬುದನ್ನೂ ಮರೆತುಗುಟ್ಟಾಗುಳಿಯದ ಸಾಲಕ್ಕಾದರೂ ಬಡ್ಡಿಯಾಗಬಾರದೆ ಮಳೆರಾಯಾ ಮಣ್ಣ ಮಕ್ಕಳೆಲ್ಲ ನೊಂದು ಬೆಂದು ಕಣ್ಣೀರು ಹಾಕುತ್ತಿಹರುನಿನ್ನಿರುವಿಕೆಯ ಸಣ್ಣ ಸುಳಿವೊಂದು ತೋರಬಾರದೆ ಮಳೆರಾಯಾ ಬವಣೆಗೆಲ್ಲ ಪ್ರೀತಿಯುಣಿಸಿ ಧರೆಯೊಡಲಿಗೆ ವರವಾಗಿ ಬಾಸಕಲಕ್ಕಾಧಾರವೇ ಜಲವೆನ್ನುವ ‘ಸರೋಜ’ಳ ಮನವಿ ಸ್ವೀಕರಿಸಬಾರದೆ ಮಳೆರಾಯಾ *************************************** ಸರೋಜಾ ಶ್ರೀಕಾಂತ ಅಮಾತಿ

Read Post »

ಇತರೆ, ದಾರಾವಾಹಿ

ದಾರಾವಾಹಿ ಅಧ್ಯಾಯ: 14 ಶಂಕರನ ರೋಚಕ ಪ್ರಹಸನವನ್ನು ಏಕನಾಥರು ತಮ್ಮ ಕಣ್ಣು ಕಿವಿಗಳೆರಡನ್ನೂ ಒಂದು ಮಾಡಿ ಅರೆಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರೆ ಅತ್ತ ದೇವಕಿ ಒಳಕೋಣೆಯ ದಾರಂದಕ್ಕೊರಗಿ ಕುತೂಹಲದಿಂದ ಆಲಿಸುತ್ತಿದ್ದಳು. ಆದರೆ ಅವಳನ್ನು ಗಮನಿಸಿದ ಮೇಲೆಯೇ ಶಂಕರನ ಕಥೆಯಲ್ಲಿ ದುಪ್ಪಟ್ಟು ನವರಸಗಳು ತುಂಬಿ ತುಳುಕತೊಡಗಿದವು ಎಂಬುದು ಏಕನಾಥರಿಗೆ ತಿಳಿಯಲಿಲ್ಲ. ಆದ್ದರಿಂದ ಕಥೆ ಕೇಳುವ ಆತುರದಲ್ಲಿದ್ದ ಅವರು, ‘ಮತ್ತೇನಾಯಿತು ಮಾರಾಯಾ…? ಆ ಹಂದಿ ನಿನ್ನ ಪುರಂದರಣ್ಣನ ಕುಂಡೆಗೆ ತಿವಿದೇ ಬಿಟ್ಟಿತಾ ಹೇಗೇ…!’ ಎಂದು ಹಾಸ್ಯ ಮಾಡಿ ನಕ್ಕರು. ಆಗ ಶಂಕರ ಮರಳಿ ಕಥೆ ಮುಂದುವರೆಸಿದ. ‘ಇಲ್ಲ ಗುರೂಜಿ, ಅದು ಇನ್ನೇನು ತಿವಿದೇ ಬಿಟ್ಟಿತು ಎಂಬಷ್ಟರಲ್ಲಿ ಆ ಕಾಡು ಜನರ ತಂಡದ ಸಪೂರ ಓಟೆಯಂತಿದ್ದ ಯುವಕನೊಬ್ಬ ಎಲ್ಲಿದ್ದನೋ ರಪ್ಪನೆ ಧಾವಿಸಿ ಬಂದು ಹಂದಿಯೆದುರು ನೆಗೆದು ನಿಂತುಬಿಟ್ಟ! ಅವನ ಕೈಯಲ್ಲೊಂದು ದೊಣ್ಣೆಯಿತ್ತು. ಆ ಹುಡುಗನನ್ನು ಕಂಡ ಹಂದಿಯು ಯಮದರ್ಶನವಾದಂತೆ ಬೆಚ್ಚಿ ಬಿದ್ದದ್ದು, ಅವನನ್ನೇ ಹಿಡಿದು ತಿವಿಯುವುದನ್ನು ಬಿಟ್ಟು ಸರಕ್ಕನೆ ಹಿಂದಿರುಗಿ ಕರ್ಕಶವಾಗಿ ಘೀಳಿಡುತ್ತ ಉಳಿದ ಹಂದಿಗಳತ್ತ ಧಾವಿಸಿ ಹೋಗಿ ತಾನೂ ಬಲೆಗೆ ಬಿದ್ದುಬಿಟ್ಟಿತು! ಆಗ ನಮಗೆಲ್ಲ ಹೋದ ಜೀವ ಬಂದಂತಾಯಿತು ನೋಡಿ. ನಂತರ ನಾನು ಹೇಗೋ ಕಷ್ಟಪಟ್ಟು ಆ ದಪ್ಪ ಮರದಿಂದ ಇಳಿದೆ. ಅಷ್ಟರಲ್ಲಿ ತುಂಬಾ ದೂರ ಓಡಿ ಹೋಗಿದ್ದ ಪುರಂದರಣ್ಣನೂ ಕುಂಟುತ್ತ ತೇಕುತ್ತ ಹಿಂದಿರುಗಿದರು. ಆದರೆ ಪಾಪ ಅವರು ಮರ ಹತ್ತಲು ಪ್ರಯತ್ನಿಸಿದ್ದ ರಭಸಕ್ಕೆ ಅವರ ಹೊಟ್ಟೆಯ ಒಂದೆರಡು ಕಡೆ ಚರ್ಮವೇ ಕಿತ್ತು ಹೋಗಿ ರಕ್ತ ಸುರಿಯುತ್ತಿತ್ತು.   ರಫೀಕ್ ಮಾತ್ರ ಎಲ್ಲಿದ್ದನೋ? ಸುಮಾರು ಹೊತ್ತಿನ ಮೇಲೆ ಅಷ್ಟು ದೂರದಿಂದ ಅವನ ತಲೆ ಕಾಣಿಸಿತು. ಹೆದರಿ ಕಂಗಾಲಾಗಿದ್ದ ಅವನು ತನ್ನ ಸುತ್ತಮುತ್ತ ಬಹಳ ಜಾಗ್ರತೆಯಿಂದ ದಿಟ್ಟಿಸುತ್ತ, ಹಂದಿಗಳೆಲ್ಲ ಬಲೆಗೆ ಬಿದ್ದಿವೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಬೆಲ್ಚಪ್ಪನಂತೆ ಬಂದು ನಮ್ಮ ಹತ್ತಿರ ನಿಂತುಕೊಂಡ. ಆದರೆ ಇಷ್ಟೆಲ್ಲ ನಡೆಯುವಾಗ ಅಲ್ಲಿ ಇನ್ನೊಂದು ಗಮ್ಮತ್ತೂ ನಡೆಯುತ್ತಿತ್ತು ಗುರೂಜೀ! ಏನು ಗೊತ್ತುಂಟಾ, ಆ ಮುದುಕ ಕಾಡು ಮನುಷ್ಯನಿದ್ದನಲ್ಲ ಅವನು ಮತ್ತು ಅವನ ಸಂಗಡಿಗರೆಲ್ಲ ಸೇರಿ ಸುಮಾರು ದೂರದಲ್ಲಿ ನಿಂತುಕೊಂಡು ನಮ್ಮ ಬೊಬ್ಬೆ ಮತ್ತು ಪ್ರಾಣಸಂಕಟದ ಒದ್ದಾಟವನ್ನೆಲ್ಲ ನೋಡುತ್ತ ಬಿದ್ದು ಬಿದ್ದು ನಗುತ್ತಿದ್ದರು ಕಳ್ಳ ಬಡ್ಡಿಮಕ್ಕಳು! ಆ ಹೊತ್ತು ನನಗವರ ಮೇಲೆ ಬಂದ ಸಿಟ್ಟು ಅಷ್ಟಿಷ್ಟಲ್ಲ ನೋಡಿ! ರಪ್ಪನೆ ಮುದುಕನನ್ನು ಕರೆದು, ‘ನೀನೆಂಥದು ಮಾರಾಯಾ… ಆ ಮೃಗಗಳನ್ನು ಓಡಿಸಿಕೊಂಡು ಬರುವ ಮೊದಲು ನಮಗೆ ಸೂಚನೆ ಕೊಡುವುದಲ್ಲವಾ…? ಅವುಗಳಿಂದ ನಮ್ಮನ್ನು ಕೊಲ್ಲಿಸಬೇಕೆಂದಿದ್ದಿಯಾ ಹೇಗೇ…?’ ಎಂದು ಜೋರಾಗಿ ಗದರಿಸಿ ಬಿಟ್ಟೆ. ಅದಕ್ಕಾತ ‘ಹ್ಹೆಹ್ಹೆಹ್ಹೆ, ಇಲ್ಲಿಲ್ಲ ಧಣೇರಾ, ನಮ್ ಬೇಟೆಯಾಗ ಅಂಥದ್ದೆಲ್ಲಾ ನಡೆಯಾಕಿಲ್ರೀ. ನೀವೆಲ್ಲ ಸುಖಾಸುಮ್ಮನೆ ಹೆದರಿ ಎಗರಾಡಿಬಿಟ್ಟಿರಷ್ಟೇ!’ ಎಂದು ಇನ್ನಷ್ಟು ನಗುತ್ತ ಹೇಳಿದ. ಇಂಥ ಕೆಲಸದಲ್ಲಿ ಪಳಗಿದ್ದ ಅವರೆಲ್ಲ ಬೇಕೆಂದೇ ನಮ್ಮನ್ನು ಹೆದರಿಸಿ ಮಜಾ ತೆಗೆದುಕೊಳ್ಳುತ್ತಿದ್ದರು ಅಂತ ನಮಗೆ ಆಮೇಲೆ ಅರ್ಥವಾಗಿ ಮುದುಕನನ್ನು ಹಿಡಿದು ಎರಡು ಬಾರಿಸುವ ಅಂತ ತೋರಿತು. ಆದರೂ ಸುಮ್ಮನಾದೆ’ ಎಂದ ಶಂಕರ ಆ ಘಟನೆಯನ್ನು ನೆನೆದು ಜೋರಾಗಿ ನಗತೊಡಗಿದ. ಏಕನಾಥರಿಗೂ ನಗು ಉಕ್ಕಿ ಬಂತು. ಅತ್ತ ದಾರಂದದೆಡೆಯಲ್ಲಿ ದೇವಕಿಯೂ ನಗುತ್ತಿದ್ದಳು. ಆದರೆ ಅವಳನ್ನು ಗಮನಿಸದ ಏಕನಾಥರು, ‘ಲೇ, ಇವಳೇ…ಎರಡು ಕಪ್ಪು ಕಾಫಿ ಮಾಡಿಕೊಂಡು ಬಾರೇ… ಹಾಗೇ ತಿನ್ನಲೇನಾದರೂ ತಾ…!’ ಎಂದು ಗಟ್ಟಿ ಸ್ವರದಲ್ಲಿ ಕೂಗಿದಾಗ ಅವಳು ಬೆಚ್ಚಿಬಿದ್ದು, ‘ಆಯ್ತೂರೀ…!’ ಎಂದು ಒಳಗೆ ಓಡಿದಳು. ಗುರೂಜಿಯ ಪತ್ನಿ ಹೊರಟು ಹೋದುದನ್ನು ಕಂಡ ಶಂಕರನಿಗೆ ಮುಂದಿನ ಕಥೆ ಹೇಳುವ ಹುರುಪು ಸ್ವಲ್ಪ ತಗ್ಗಿತು. ಆದರೂ ಮುಂದುವರೆಸಿದ. ‘ಅಲ್ಲಾ ಗುರೂಜಿ, ಆ ಕಾಡು ಜನರು ಎಂಥ ಭಯಂಕರ ಮನುಷ್ಯರು ಅಂತೀರೀ! ಸುಮಾರು ಹದಿನೆಂಟು ಇಪ್ಪತ್ತರ ವಯಸ್ಸಿನ ಮೂವರು ಹುಡುಗರು, ಬಲೆಗೆ ಬಿದ್ದು ಆಕಾಶ ಸಿಡಿಯುವಂತೆ ಹೂಳಿಡುತ್ತಿದ್ದ ಆ ಮೃಗಗಳತ್ತ ಹೆಬ್ಬುಲಿಗಳಂತೆ ನೆಗೆದರು. ಯಾವ ಮಾಯಕದಿಂದಲೋ ಅವುಗಳ ಹಿಂಗಾಲುಗಳನ್ನು ಸಟಕ್ಕನೆ ಹಿಡಿದು ಮೇಲೆತ್ತಿ ಅದೇ ವೇಗದಲ್ಲಿ ನೆಲಕ್ಕೆ ಕೆಡಹಿ ಬಿಗಿಯಾಗಿ ತುಳಿದು ಹಿಡಿದುಕೊಂಡು ಕ್ಷಣದಲ್ಲಿ ಅವುಗಳ ಹೆಡೆಮುರಿ ಕಟ್ಟಿದರು. ಅವು ಕಚ್ಚದಂತೆ ಮೂತಿಗೂ ಹಗ್ಗ ಬಿಗಿದರು! ಅದನ್ನೆಲ್ಲ ನೋಡುತ್ತಿದ್ದ ಆ ಮುದುಕ ಅವರಿಗೇನೋ ಸಂಜ್ಞೆ ಮಾಡಿದ. ಆದರೆ ಅಷ್ಟರಲ್ಲಿ ನಮಗೆ ಮತ್ತೊಂದು ಮಂಡೆಬಿಸಿ ಎದುರಾಯಿತು ನೋಡಿ!’ ಎಂದು ಶಂಕರ ಕೆಲವುಕ್ಷಣ ಮಾತು ನಿಲ್ಲಿಸಿದ. ‘ಹೌದಾ…ಮತ್ತೇನಾಯಿತು ಮಾರಾಯಾ, ಮತ್ತೆ ಅಲ್ಲಿಗೆ ಕಾಡುಕೋಣಗಳೇನಾದರೂ ನುಗ್ಗಿದವಾ ಹೇಗೆ?’ ಎಂದು ಗುರೂಜಿ ಮರಳಿ ಹಾಸ್ಯ ಮಾಡಿದರು. ‘ಅಯ್ಯೋ, ಅದಲ್ಲ ಗುರೂಜಿ. ಸುಮಾರು ದೂರದಲ್ಲಿ ಯಾವನೋ ಒಬ್ಬ ಯುವಕ ನಿಂತುಕೊಂಡು ನಮ್ಮ ಕೆಲಸದ ಫೋಟೋಗಳನ್ನು ತೆಗೆಯುತ್ತಿದ್ದ! ನಮ್ಮ ತಂಡದ ಹುಡುಗ ಅದನ್ನು ನೋಡಿದವನು ಪುರಂದರಣ್ಣನಿಗೆ ತಿಳಿಸಿದ. ಅವರಿಗೆ ಆತಂಕವಾಯ್ತು. ಯಾಕೆಂದರೆ ಈಗ ಕಾಡುಪ್ರಾಣಿಗಳನ್ನು ಹಿಡಿಯುವುದು ದೊಡ್ಡ ಅಪರಾಧವಂತಲ್ಲ? ಅವನನ್ನು ಹೇಗೆ ತಡೆಯುವುದೆಂದು ತೋಚದೆ, ಎಲ್ಲರೂ ಕೈಗೆ ಸಿಕ್ಕಿದ ಬಡಿಗೆಗಳನ್ನೆತ್ತಿಕೊಂಡು ಅವನತ್ತ ಓಡಿದೆವು. ಆದರೆ ಅವನು ಭಯಂಕರ ಆಸಾಮಿ ಗುರೂಜಿ. ನಾವು ಅಷ್ಟು ಜನ ಅವನ ಮೇಲೆ ನುಗ್ಗಿ ಹೋದರೂ ಅವನು ಸ್ವಲ್ಪವೂ ಹೆದರದೆ, ನಾವೆಲ್ಲ ಓಡಿ ಬರುವುದನ್ನೂ ಚಕಚಕಾಂತ ಫೋಟೋ ತೆಗೆಯುತ್ತಲೇ ಇದ್ದ. ಹಾಗಾಗಿ ಅವನನ್ನು ಹೆದರಿಸಬೇಕೆಂದಿದ್ದ ಪುರಂದರಣ್ಣನೇ ಅಳುಕಿದರು. ಆದರೆ ನಾವೆಲ್ಲ ಅವರ ಸುತ್ತ ಇದ್ದುದನ್ನು ಕಂಡು ಧೈರ್ಯ ತಂದುಕೊಂಡವರು, ‘ಹೇ, ಹೇ… ಯಾರು ಮಾರಾಯಾ ನೀನು? ಫೋಟೋ ಗೀಟೋ ತೆಗೀಬಾರ್ದು. ಹೋಗ್ ಹೋಗ್!’ ಎಂದು ಗದರಿಸಿದರು. ಅವನು ಆಗಲೂ ನಮ್ಮನ್ನು ಕ್ಯಾರೇ ಅನ್ನದೆ ದಿಟ್ಟಿಸಿದವನು, ‘ನೋಡೀ, ನಾನೊಬ್ಬ ಪ್ರೆಸ್ ರಿಪೋರ್ಟರ್. ಆ ಪ್ರಾಣಿಗಳನ್ನು ಯಾಕೆ ಹಿಡಿಯುತ್ತಿದ್ದೀರಿ? ವನ್ಯಜೀವಿಗಳನ್ನು ಬೇಟೆಯಾಡೋದು ಆಫೆನ್ಸ್ ಅಂತ ಗೊತ್ತಿಲ್ವಾ ನಿಮ್ಗೇ? ಈಗಲೇ ಅವುಗಳನ್ನು ರಿಲೀಸ್ ಮಾಡಿ. ಇಲ್ಲದಿದ್ದರೆ ಎಲ್ಲರ ಮೇಲೆ ಕೇಸು ಹಾಕಬೇಕಾಗುತ್ತದೆ ಹುಷಾರ್!’ ಎಂದು ನಮಗೇ ಧಮಕಿ ಹಾಕುವುದಾ…? ಅವ ಪೇಪರಿನವನೆಂದ ಕೂಡಲೇ ಪುರಂದರಣ್ಣ ಸಮಾ ತಣ್ಣಗಾದರು. ಆದರೂ ತಪ್ಪಿಸಿಕೊಳ್ಳುವ ಉಪಾಯ ಅವರ ನಾಲಿಗೆಯ ತುದಿಯಲ್ಲೇ ಇತ್ತು ನೋಡಿ, ‘ನೀವು ಯಾರಾದರೂ ನಮಗೇನ್ರೀ? ಆ ಹಂದಿಗಳು ನಮ್ಮ ಬೇಸಾಯವನ್ನೆಲ್ಲ ತಿಂದು ಲಗಾಡಿ ತೆಗಿತಾ ಇರ್ತಾವೆ. ಅದಕ್ಕೆ ಕೆಲವನ್ನು ಹಿಡಿದು ಬೇರೆ ಕಾಡಿಗೆ ಬಿಡುತ್ತೇವೆ ಅಂತ ಅರಣ್ಯ ಇಲಾಖೆಯ ಪರ್ಮೀಷನ್ ತೆಗೆದುಕೊಂಡೇ ಹಿಡಿಸುತ್ತಿರುವುದು!’ ಎಂದು ತಾವೂ ರೂಬಾಬಿನಿಂದ ಉತ್ತರಿಸಿದರು. ‘ಹೌದಾ! ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟಿದೆಯಾ? ಹಾಗಾದರೆ ಅವರೆಲ್ಲಿ? ಒಬ್ಬರಾದರೂ ಇರಬೇಕಿತ್ತಲ್ಲಾ? ಅಥವಾ ಅವರ ಅನುಮತಿ ಪತ್ರವಾದರೂ ನಿಮ್ಮಲ್ಲಿರಬೇಕು, ಎಲ್ಲಿದೆ ತೋರಿಸಿ…?’ ಎಂದು ಅವನೂ ಜೋರಿನಿಂದ ಪ್ರಶ್ನಿಸಿದ.     ಆಗ ಪುರಂದರಣ್ಣನ ದಮ್ಮು ಖಾಲಿಯಾಯ್ತು. ‘ಅದೂ, ಏನಾಯ್ತೆಂದರೇ…?’ ಎಂದು ಬ್ಬೆ…ಬ್ಬೆ…ಬ್ಬೇ…! ಅಂದವರು ತಕ್ಷಣ ಸಂಭಾಳಿಸಿಕೊಂಡು, ‘ಅದು ಹಾಗಲ್ಲ ಇವ್ರೇ, ಇಲ್ಲಿನ ಕೆಲಸ ಮುಗಿದ ನಂತರ ಆ ಹಂದಿಗಳನ್ನು ಕೊಂಡೊಯ್ದು ಇಲಾಖೆಗೆ ಒಪ್ಪಿಸುತ್ತೇವೆ. ನಿಮಗೆ ನಂಬಿಕೆಯಿಲ್ಲದಿದ್ದರೆ ಒಂದು ನಂಬರ್ ಕೊಡುತ್ತೇನೆ. ಫೋನ್ ಮಾಡಿ ತಿಳಿದುಕೊಳ್ಳಿ. ನಮ್ಮ ಹಿರಿಯರ ಕಾಲದಿಂದಲೂ ನಾವು ಬೇಸಾಯವನ್ನೇ ನಂಬಿಕೊಂಡು ಬದುಕುತ್ತಿರುವವರು ಮಾರಾಯ್ರೇ! ಆದರೇನು ಮಾಡುವುದು? ಈಗೀಗ ಈ ದರಿದ್ರ ಪ್ರಾಣಿಗಳು ಒಂದು ಮುಡಿ ಭತ್ತ ಬೆಳೆಯಲೂ ಬಿಡುತ್ತಿಲ್ಲ. ಹೀಗಾದರೆ ನಮ್ಮಂಥ ಬಡ ರೈತರು ಬದುಕುವುದಾದರೂ ಹೇಗೆ ಹೇಳಿ? ಜನರ ಕಷ್ಟಸುಖಗಳನ್ನು ತಿಳಿದು ವ್ಯವಹರಿಸುವ, ಸಹಾಯ ಮಾಡುವ ನಿಮ್ಮಂಥವರೇ ನಮಗೆ ತೊಂದರೆ ಕೊಟ್ಟರೆ ಹೇಗೆ…?’ ಎಂದು ಅವನೊಡನೆ ದೈನ್ಯದಿಂದ ಮಾತಾಡಿದರು. ಆದರೆ ಅವನು ಅದಕ್ಕೆ ಉತ್ತರಿಸಲಿಲ್ಲ. ಹಾಗಾಗಿ ಅವರೂ ಮತ್ತೇನೂ ಮಾತಾಡದೆ ಹಿಂದಿರುಗಿದಾಗ ನಾವೂ ಅವರನ್ನು ಹಿಂಬಾಲಿಸಬೇಕಾಯ್ತು.    ಒಂದು ವೇಳೆ ಪುರಂದರಣ್ಣ ಆವಾಗ, ‘ಏಯ್, ಏನ್ ನೋಡ್ತಿದ್ದೀರಾ? ಆ ಮಗನನ್ನು ಹಿಡ್ಕೊಂಡು ನಾಲ್ಕು ಬಡಿಯಿರನಾ…!’ ಅಂತ ಒಂದೇ ಒಂದು ಮಾತು ಅನ್ನುತ್ತಿದ್ದರು ಅಂತಿಟ್ಟುಕೊಳ್ಳಿ ಗುರೂಜೀ, ಆ ಬಡ್ಡೀಮಗನ ಕ್ಯಾಮರಾವನ್ನಲ್ಲೇ ಕಲ್ಲಿಗೆ ಬಡಿದು ಪುಡಿ ಮಾಡಿ ಅವನಿಗೆ ನಾಲ್ಕು ಒದ್ದು ಓಡಿಸಲು ನಮ್ಮ ಕಾಡು ಹುಡುಗರೆಲ್ಲ ತುದಿಗಾಲಿನಲ್ಲಿ ನಿಂತಿದ್ದರು ಗೊತ್ತುಂಟಾ! ಆದರೆ ನಮ್ಮವರೇ ಠುಸ್ಸಾದ ಮೇಲೆ ಏನು ಮಾಡುವುದು ಹೇಳಿ? ಅವನೂ ಮತ್ತೇನೂ ಹೇಳದೆ ಹೊರಟು ಹೋದ. ಅಷ್ಟಾದ ನಂತರ ಇನ್ನೊಂದು ಸಮಸ್ಯೆಯಾಯ್ತು. ಸ್ವಲ್ಪಹೊತ್ತಿನಲ್ಲಿ ಪುರಂದರಣ್ಣನ ಪರಿಚಯದ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಒಬ್ಬ ಕರೆ ಮಾಡಿದವನು, ‘ನಿಮ್ಮ ಮೇಲೆ ಪೇಪರ್ ರಿಪೋರ್ಟರ್ ಒಬ್ಬ ನಮ್ಮ ಹೈಯರ್ ಆಫೀಸರ್‍ಗೆ ಕಂಪ್ಲೇಂಟ್ ಮಾಡಿದ್ದಾನೆ. ಹಾಗಾಗಿ ನಾವು ಯಾವ ಕ್ಷಣದಲ್ಲಾದರೂ ಸ್ಪಾಟಿಗೆ ಬರಬಹುದು. ಆದಷ್ಟು ಬೇಗ ಹಂದಿಗಳನ್ನು ಅಲ್ಲಿಂದ ಸಾಗಿಸಿಬಿಟ್ಟು ಬೇಟೆಯಾಡಿದ ಯಾವ ಗುರುತೂ ಸಿಗದಂತೆ ನೋಡಿಕೊಳ್ಳಿ!’ ಅಂತ ಸೂಚನೆ ಕೊಟ್ಟ. ಅಷ್ಟು ತಿಳಿದ ನಾವೆಲ್ಲ ಕಂಗಾಲಾಗಿ ಕೆಲಸವನ್ನು ನಿಲ್ಲಿಸಿದೆವು. ಆ ಬುಡಕಟ್ಟಿನ ಜನರು ಕೂಡಲೇ ಹಂದಿಗಳನ್ನೂ, ಬೇಟೆಯ ಸಾಮಾನುಗಳನ್ನೂ ಹೊತ್ತುಕೊಂಡು ಹೊರಟರು. ನಾವೂ ಅವರನ್ನು ಹಿಂಬಾಲಿಸಿದೆವು. ಆದರೆ ಪುರಂದರಣ್ಣನಿಗೆ ಆ ಪೇಪರಿನವನ ಮೇಲೆ ವಿಪರೀತ ಸಿಟ್ಟು ಬಂತು. ‘ಆ ಬಡ್ಡೀಮಗನ ಸೊಕ್ಕು ಮುರಿಯಲೇಬೇಕು!’ ಎಂದು ಕುದಿದರು. ಆದರೆ ಅದಕ್ಕಿಂತ ಮೊದಲು ಅವನ ಪೂರ್ವಾಪರ ವಿಚಾರಿಸಲು ತಮ್ಮ ಅಳಿಯ ರವಿಪ್ರಕಾಶನಿಗೆ ಫೋನ್ ಮಾಡಿದರು. ರವಿಪ್ರಕಾಶನಿಂದ ಅವನು ಈಶ್ವರಪುರದ ಸ್ಥಳೀಯ ಪತ್ರಿಕೆಯೊಂದರ ಮುಖ್ಯ ವರದಿಗಾರನಲ್ಲದೇ ಬೆಂಗಳೂರಿನ ಪ್ರಸಿದ್ಧ ಪ್ರಾಣಿ ದಯಾ ಸಂಸ್ಥೆಯೊಂದರ ಸದಸ್ಯನೂ ಆಗಿದ್ದಾನೆ ಎಂಬ ಸಂಗತಿ ತಿಳಿಯಿತು.    ಪ್ರಾಣಿ ದಯಾ ಸಂಘ ಎಂದ ಕೂಡಲೇ ನನಗೂ ಹೆದರಿಕೆಯಾಯ್ತು ಗುರೂಜಿ! ಅವರು ಹಾಕುವ ಕೇಸು ಯಾರಿಗೆ ಬೇಕು ಮಾರಾಯ್ರೇ. ಜೀವನಪರ್ಯಂತ ಬಂಜರವಾಗುತ್ತದೆ! ಹಾಗೇನಾದರೂ ಆದರೆ ನನ್ನ ಅಷ್ಟು ದೊಡ್ಡ ಜಮೀನಿನ ಕೆಲಸ ನಿಂತು, ನಾನು ಅಲಕ್ಕ ಲಗಾಡಿ ಹೋಗುವುದಂತು ಗ್ಯಾರಂಟಿ!’ ಎಂದು ಶಂಕರ ಸೋಲೆಪ್ಪಿಕೊಂಡ. ಅದಕ್ಕೆ ಏಕನಾಥರೂ, ‘ಹೌದು ಹೌದು ಮಾರಾಯಾ. ಯಾರ ತಂಟೆಯಾದರೂ ಬೇಕು. ಈ ಪ್ರಾಣಿ ದಯಾ ಸಂಘ ಮತ್ತು ಅರಣ್ಯ ಇಲಾಖೆಯವರ ಸಹವಾಸವಲ್ಲ. ವಿಶ್ವ ಪರಿಸರ ಸಂಸ್ಥೆಯೂ ಈಚೆಗೆ ಪರಿಸರ ಸಂರಕ್ಷಣಾ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ಆರಂಭಿಸಿರುವುದು ಪೇಪರಿನಲ್ಲಿ ಆಗಾಗ ಬರುತ್ತಲೇ ಇರುತ್ತದೆ. ಹಾಗಾಗಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಯೂ ಬಹಳ ಬಿಗುಗೊಂಡಿದೆ!’ ಎಂದು ಶಂಕರನ ಭಯವನ್ನು ತಾವೂ ಸಮರ್ಥಿಸಿಕೊಂಡರು. ಶಂಕರ ಮತ್ತೆ ಮಾತು ಮುಂದುವರೆಸಿದ. ‘ಹೌದಂತೆ ಗುರೂಜಿ, ಪುರಂದರಣ್ಣನೂ ಅದಕ್ಕೇ ಸುಮ್ಮನಾದರು. ಆದರೆ ಅವರು ಆ ಸಮಸ್ಯೆಯನ್ನು ಎಂಥ ಉಪಾಯದಿಂದ ನಿವಾರಿಸಿಕೊಂಡರು ಗೊತ್ತುಂಟಾ?’ ಎಂದು ಶಂಕರ ತಾವೊಂದು ಅದ್ಭುತ ಸಾಧಿಸಿದಂತೆ ನಗುತ್ತ ಅಂದ. ‘ಅಂಥದ್ದೇನು ಮಾಡಿದರು ಮಾರಾಯಾ..!’ ‘ಪುರಂದರಣ್ಣ ಕೂಡಲೇ ರಫೀಕನೊಡನೆ ಒಂದಿಷ್ಟು ‘ಸಮ್‍ಥಿಂಗ್’ ಅನ್ನು ಅರಣ್ಯ ಇಲಾಖೆಗೆ ಕಳುಹಿಸಿಕೊಟ್ಟು ಅವರ ಬಾಯಿ ಮುಚ್ಚಿಸಿದರು. ಅದರ ಬೆನ್ನಿಗೆ ಆ ಪತ್ರಕರ್ತನ ಹತ್ತಿರದ ಗೆಳೆಯನೊಬ್ಬನನ್ನೂ ಹಿಡಿದರು. ಅವನು ಇವರ ಅಳಿಯನ ದೋಸ್ತಿಯಂತೆ. ಅವನ ಹತ್ತಿರ, ‘ತಮ್ಮಿಂದ ಆಗಿರುವ ತಪ್ಪನ್ನು ಕ್ಷಮಿಸಿ, ಅರಣ್ಯ ಇಲಾಖೆಗೆ ನೀಡಿರುವ ದೂರನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ನಮ್ಮ ಪರವಾಗಿ ನೀನೇ ಅವನೊಡನೆ ವಿನಂತಿಸಿಕೊಂಡು ಅವನನ್ನು ಒಪ್ಪಿಸಬೇಕು ಮಾರಾಯಾ!’ ಎಂದು ಅವನ ಮಂಡೆ ಗಿರ್ಮಿಟ್ ಆಗುವಂತೆ ಮಾತಾಡಿ ಬೇಡಿಕೊಂಡರು. ಅವನು ಪುರಂದರಣ್ಣನಿಗೆ ಭಾರಿ ಮರ್ಯಾದೆ ಕೊಡುವವನು. ಆದ್ದರಿಂದ ಅವರ ಮಾತಿಗೆ ಕಟ್ಟುಬಿದ್ದು ಹೇಗೋ ಪತ್ರಕರ್ತನ ಮನವೊಲಿಸಿ ಕೇಸು ವಾಪಾಸ್ ಪಡೆಯುವಂತೆ ಮಾಡಿದ. ಇಲ್ಲದಿದ್ದರೆ ನನ್ನ ಜಾಗಕ್ಕೆ ಇಷ್ಟೊತ್ತಿಗೆ ದೊಡ್ಡ ‘ಸ್ಟೇ’ ಬಿದ್ದು ನಾನು ಊರುಬಿಟ್ಟೇ ಓಡಿ ಹೋಗಬೇಕಿತ್ತೋ

Read Post »

You cannot copy content of this page

Scroll to Top