ವಿಧಿ
ದೂರ ನಿಂತು ಮಾತುಗಳನ್ನು ನುಂಗಿಕೊಳ್ಳಬೇಕಿದೆ
ನರಕವಾಗಿದ್ದ ನಾಲ್ಕು ಗೋಡೆಗಳೇ ಪರಿಚಿತವಾಗಿವೆ
ಈಗ ಗೋಡೆಗಳಿಗೂ ಮಾತು ಬಂದಿವೆ
ದೀಪ ಮತ್ತೊಂದು ದೀಪವನ್ನು ಹಚ್ಚುತ್ತದೆಯೆ ಹೊರತು ಅಸೂಯೆಯಿಂದ ತಾನೇ ಬೆಳಗಬೇಕೆಂಬ ಸ್ವಾರ್ಥದಿಂದ ಅಥವಾ ಅಹಂನಿಂದ ಇನ್ನೊಂದು ದೀಪವನ್ನು ನಂದಿಸುವುದಿಲ್ಲ. ನಾವುಗಳೂ ದೀಪಗಳಾಗಬೇಕಿದೆ. ಹಿತಶತೃಗಳ ಮುಖವಾಡ ಕಿತ್ತೆಸೆದು ನಿಜ ಮಾನವರಾಗಿ ಬದುಕಬೇಕಿದೆ
ಅಮ್ಮನಿಗೆ “ಸೀರೆ” ಅವಳ ಏಕೈಕ ವ್ಯಕ್ತ ವಾಗಿತ್ತು. ಸೀರೆ ಸೀರೆ ಸೀರೆ, ಎಲ್ಲಿ ಹೋದರೂ ಮನೆಯಲ್ಲಿದ್ದರೂ. ಅವಳಿಗೆ ಅದು ಎಂದೂ ವ್ಯಾಪಾರ ಆಗಿರಲಿಲ್ಲ, ಬದುಕಿನ ಶೈಲಿ ಯಾಗಿತ್ತು. ಅವಳು ಉಡದೆಯೇ ಹೋದ ಹತ್ತಾರು ಬಗೆ ಬಾಕಿ ಇದೇ ನಿಜ, ಆದರೆ ಅವಳಿಂದ ಅದ ಪಡೆಯದೆಯೇ ಉಳಿದ ಹೆಣ್ಣಿಲ್ಲ. ಸೀರೆಯೇ ಅಮ್ಮನಾಗಿದ್ದು ಈಗ ಅರಿವಿಗೆ ಬಂತು ಮಗಳಿಗೂ
ಸೀರೆಯಲ್ಲಿ ಬಂಧಿಯಾದ ಅಮ್ಮನ ಬದುಕು… Read Post »
ಹಾಸ್ಯ ಲೇಖನ ಕೋಳಿ ಕಥೆ ಕೇಳಿ ಶಾಂತಿವಾಸು ನಮ್ಮ ಮನೆಯ ಪಕ್ಕದಲ್ಲಿ ಒಂದು ಸೌದೆ ಡಿಪ್ಪೋ ಇತ್ತು. ಆಗೆಲ್ಲಾ ಮಧ್ಯಾನ್ಹ 3 ಗಂಟೆಗೆ ನಾವು ಸ್ಕೂಲಿನಿಂದ ವಾಪಸ್ ಬರುವಾಗ, ಥೇಟ್ ಈಗಿನ ಲಾಕ್ಡೌನ್ ತರಹದ ನಿಶಬ್ದವೇ ಇರುತ್ತಿತ್ತು. ಅಜ್ಜ ಸೌದೆ ಹೊಡೆಯುವಾಗ ಬಿಡುವ “ಹುಶ್ಸಾ ಹುಶ್ಸಾ” ಉಸಿರಿನ ಶಬ್ದ ಮೂರ್ನಾಲ್ಕು ಮನೆಗಳ ದಾಟಿ ಕೇಳುತ್ತಿತ್ತು. ಉಸಿರಾಡುವುದೇ ಅಷ್ಟು ದೊಡ್ಡ ಶಬ್ದವೆಂದರೆ, ಇನ್ನು ಮಾತಾಡುವಾಗ ಧ್ವನಿ ಹೇಗಿರಬೇಡ? ಅದಕ್ಕಿಂತ ಜಗಳವಾಡುವಾಗ ಇನ್ನೂ ನಾಲ್ಕು ರಸ್ತೆಗೆ ಕೇಳಿಸುವುದಿಲ್ಲವೇ? ಅಜ್ಜನ ಹೆಸರು ಕೂಡ ವೀರಭದ್ರಪ್ಪ. ಆ ಅಜ್ಜ ಸುಮಾರು ಕೋಳಿಗಳನ್ನೂ ಸಾಕಿತ್ತು. ನಾನು ಗಿಡಗಳನ್ನು ಬಹಳ ಅಸ್ಥೆಯಿಂದ ನೋಡಿಕೊಳ್ಳುತ್ತಿದ್ದೆ ಕಣ್ರೀ. ಮರದ ರಿಪೀಸಿನ ಕಾಂಪೌಂಡಿನ ಅಂಚಿಗೆ ನಮ್ಮಮ್ಮ ನನಗೆ ಸ್ವಲ್ಪ ಜಾಗ ಕೊಟ್ಟಿದ್ದರು. ಅವರು ಬೆಳೆಸಿದ ಗಿಡ ಬಳ್ಳಿಗಳಿಗೆ ನಾನು ನೀರು ಹಾಕುವಂತಿರಲಿಲ್ಲ. ಹಾಗೂ ಕಣ್ತಪ್ಪಿಸಿ ಹಾಕಿ ಬಿಟ್ಟರೆ “ಹೋಯ್ತು, ಹೋಯ್ತು. ಅದು ವಾಂತಿ ಮಾಡಿಕೊಂಡು ಸತ್ತೋಗುತ್ತೆ. ನೀನು ನೀರು ಹಾಕ್ಬೇಡ ಅಂತ ಎಷ್ಟು ಸಲ ಹೇಳೋದು. ಚೊಂಬು ಕೊಡೆ ಇಲ್ಲಿ ಪೊರ್ಕಿ” ಅಂತ ಚೊಂಬು ಕಿತ್ಕೊಂಡು, ಅದರಲ್ಲೇ ಬೋರೆ ಮತ್ತು “ಟಣ್” ಅಂತ ಶಬ್ದ ಬರೋಹಾಗೆ ಕುಟ್ಟುತ್ತಿದ್ದರು. ಜಾಣೆ ಕಸ್ತೂರಮ್ಮ. ಒಂದೇ ಏಟಿಗೆ ಶಬ್ದ ಮತ್ತು ಪೆಟ್ಟು ಬೀಳೋ ಹಾಗೆ ಅಂದ್ರೆ ಒಂದೇ ಕಲ್ಲಿಗೆ ಎರಡು ಕಾಯಿ ಬೀಳುತ್ತೆ ಅನ್ನಲ್ವಾ ಹಾಗೆ ಕುಟ್ಟುತ್ತಿದ್ರು. ಹೇಳಿದ್ನಲ್ಲಾ ನಾನು ಗಿಡಗಳನ್ನ ಬಹಳ ಅಸ್ಥೆಯಿಂದ ನೋಡಿಕೊಳ್ತಿದ್ದೆ. ಕಾಂಪೌಂಡ್ ಅಂಚಿಗೆ ಭದ್ರಾಕ್ಷಿ, ಅದೇನೋ ಆಗೆಲ್ಲಾ ಒಂಥರಾ ತಿಳಿ ನೇರಳೆ ಜೊತೆ ಬಿಳಿ ಮಿಶ್ರಿತ ಬಣ್ಣ ಇದ್ದ ಗಂಟೆಯಾಕಾರದ ಗೊಬ್ಬು ವಾಸನೆಯ ಹೂವು ಮತ್ತು ಸ್ಮಶಾನದ ಹೂವು ಅಂತಾರಲ್ಲ? ಅದೇ ಈಗ್ಲೂ ಕಲ್ಲುಗಳ ಸಂದಿಯಲ್ಲಿ ಬಿಳಿ ಅಥವಾ ಪಿಂಕ್ ಹೂ ಬಿಟ್ಟಿರುತ್ತಲ್ಲ ಆ ಗಿಡಗಳನ್ನು ತಂದು ನೆಡುತ್ತಿದ್ದೆ. ನಾನು ನಿಜಕ್ಕೂ ವಿಶೇಷವಾಗಿ ನೆಡುತ್ತಿದ್ದೆ. ಎಲ್ಲರೂ ಭೂಮಿ ಅಗೆದು ನೆಟ್ಟರೆ, ನಾನು ಜೇಡಿ ಮಣ್ಣನ್ನು ಗುಡ್ಡೆಯಂತೆ ಮಾಡಿ ಅದರಲ್ಲಿ ಗಿಡದ ಬೇರಿಟ್ಟು, ತಿಪ್ಪೆ ಗುಂಡಿಯಲ್ಲೆಲ್ಲಾ ಓಡಾಡಿ ಕಡ್ಡಿಯಿಂದ ಕೆದಕಿ ಕೆದಕಿ, ಎರೆಹುಳುಗಳನ್ನು ಹೆಕ್ಕಿ ಬೆಂಕಿಪೊಟ್ಟಣದಲ್ಲಿ ತುಂಬಿಕೊಂಡು ಬಂದು ಬೇರಿನ ಮೇಲೆ ಹಾಕಿ, ನೀರು ತುಂಬಿ, ಹುಳು ತೇಲುವಾಗ ಮಣ್ಣು ಮುಚ್ಚುತ್ತಿದ್ದೆ. ನಾನು ಹೇಳಬೇಕಾದ ವಿಷಯ ಬೇರೆಲ್ಲೋ ಹೋಯ್ತು ನೋಡಿ. ಏನು ಹೇಳ್ತಿದ್ನಪ್ಪಾ? ಹೂಂ, ಹಾ ಸೌದೆ ಡಿಪ್ಪೋ ತಾತನ ಕೋಳಿ ಕಥೆ. ಊಂ, ಏನು ಗೊತ್ತಾ? ಆ ಅಜ್ಜನ ಕೋಳಿಗಳು ನಮ್ಮ ಕಂಪೌಂಡ್ ದಾಟಿ ಬಂದು ಬಂದು ನನ್ನ ಮಣ್ಣು ಹುಳಗಳನ್ನು ತಿಂದುಬಿಡುತ್ತಿತ್ತು. ನಾನೂ ಎಷ್ಟು ಸಹಿಸುವುದು. ಅಜ್ಜ ಬೆಳಗ್ಗಿನಿಂದ ಸಂಜೆ ತನಕ ಸೌದೆ ಸೀಳಿಕೊಂಡು ರೋಡಲ್ಲೇ ಇರ್ತಿತ್ತು. ಗಂಡು ಹುಡುಗರ ಜೊತೆ ಅಲೆದಾಡ್ತಾ ಕಾಯಿಗೆ ಕಲ್ಲು ಹೊಡೆದು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ನಲ್ಲಾ? ಸದ್ದಿಲ್ಲದಂಗೆ ಕೋಳಿ ಕಾಲಿಗೆ ಕಲ್ಲು ಬೀಸಿ ಏನೂ ಗೊತ್ತಿಲ್ಲದ ಹಾಗೆ ಹೋಗಿಬಿಡುತ್ತಿದ್ದೆ. ನನಗೆಷ್ಟು ಬುದ್ದಿ ನೋಡಿ, ನಮ್ಮ ಕಂಪೌಂಡ್ ಒಳಗೆ ಕಾಲು ಮುರಿದು ಬಿದ್ದ ಕೋಳಿ ಕುಯ್ಯೋ ಕುಯ್ಯೋ ಅಂತ ಬೊಡ್ಕೊಂಡ್ರೆ, ಯಾರು ಕಾಲು ಮುರಿದಿದ್ದು ಅಂತ ಅಜ್ಜನಿಗೆ ಗೊತ್ತಾಗಲ್ವಾ? ರೋಡಲ್ಲಿ ನಿಂತ್ಕೊಂಡು “ಕಸ್ತೂರಮ್ಮ ಮೌ ಕಸ್ತೂರಮ್ಮ” ಅಂತ ದನಿ ಬರ್ತಿದ್ದಂಗೆ ನಮ್ಮಮ್ಮನಿಗೆ ಅರ್ಥ ಆಗಿ, ಜುಟ್ಟು ಹಿಡಿದು ಎಳ್ಕೊಂಡೇ ಹೊರಗೆ ಬರ್ತಿದ್ರು. ನನ್ನ ಜುಟ್ಟೆ ಮತ್ತೆ ಇನ್ಯಾರದ್ದು? “ತಗೋ ತಾತ ಇವಳ್ನ ನೀನೇ ಸಾಕ್ಕೋ” ಅಂತ ತಂದು ಮುದುಕನ ಮುಂದೆ ನಿಲ್ಲಿಸಿದ್ರೆ, ಅಜ್ಜ ಏನು ಮಾಡುತ್ತೆ? ಆಗ್ಲೇ ಅದಕ್ಕೆ ದೊಡ್ಡ ಹೆಂಡತಿ ಹತ್ತು ಮಕ್ಕಳನ್ನು ಹೆತ್ತು ಕೊಟ್ಟು ಸತ್ತುಹೋಗಿತ್ತು. ಎರಡನೇ ಹೆಂಡತಿ ಬೇರೆ ಒಂದು ಹೆಣ್ಣು ಮಗುವನ್ನು ಕಂಕುಳಲ್ಲಿ ಇಟ್ಕೊಂಡು ಓಡಾಡ್ತಿತ್ತು. ಇಷ್ಟು ದೊಡ್ಡ ಸಂತೆಯಲ್ಲಿ ನನ್ನನ್ನು ಎಲ್ಲಿ ಬಿಡೋದು ಅಜ್ಜ? “ಐ ತೆಗೀ, ಕೋಳಿ ಕಾಲು ಮುರ್ದಾಕೌಳಲ್ಲಾ? ಅದುನ್ನ ಇಟ್ಕೊಂಡು ನಾನೇನ್ ಮಾಡ್ಲಿ? ನಂಗೆ ಬೇರೆ ಕೋಳಿ ಕೊಡ್ಸು” ಅಂತ ವ್ಯಾಪಾರ ಶುರು ಮಾಡುವಷ್ಟರಲ್ಲಿ, ಬಾಡಿಗೆ ಮನೆಯಲ್ಲಿದ್ದ ಬಾಲಾಜಿಯವರು ಬಂದು “ಇವಳನ್ನು ಏನು ಮಾಡೋದಾ? ಒಳ್ಳೆ ಪ್ರಶ್ನೆ ಕೇಳಿದ್ರಿ ಬಿಡಿ ಯಜ್ಮಾನ್ರೇ. ಮದ್ವೆ ಮಾಡ್ಕೊಳ್ಳಿ. ಮುದ್ದೆ ಬೇಯ್ಸೊಕ್ಕಾಗುತ್ತೆ” ಎಂದು ಅಜ್ಜನಿಗೆ ನಗು ತರಿಸುವ ಪ್ರಯತ್ನ ಮಾಡುತ್ತಿದ್ದರು. ನಮ್ಮ ತಾತ ಒದ್ದೆ ಬಟ್ಟೆಯ ಉದ್ದ ತುಂಡಿಗೆ ನೀರುಹಾಕಿ ಉಂಡೆ ಮಾಡಿದ ಕೆಮ್ಮಣ್ಣು ಇಟ್ಟು ತಂದು, ಸುಮ್ನೆ ಇರಲಾರದೆ ಎದ್ದು ಎದ್ದು ಓಡಲು ಪ್ರಯತ್ನಿಸಿ ಕುಯ್ಯೋ ಕುಯ್ಯೋ ಅಂತ ಮತ್ತೆ ಮತ್ತೆ ಬೀಳುತ್ತಿದ್ದ ಕೋಳಿಯನ್ನು ಹಿಡಿದು ಮೂಳೆ ಮುರಿದ ಕಾಲಿಗಿಟ್ಟು ಗಟ್ಟಿಯಾಗಿ ಕಟ್ಟಿ, ಅದರ ಬಾಯಗಲಿಸಿ ಸಕ್ಕರೆ ಕರಗಿಸಿದ ನೀರು ಸುರಿಯುತ್ತಿದ್ದರು. ಅಲ್ಲಿ ತನಕ ಅಜ್ಜ ಕೋಳಿಯನ್ನು ಮುಟ್ಟುತ್ತಲೂ ಇರಲಿಲ್ಲ ಕೊನೇ ಪಕ್ಷ ಅದಕ್ಕೆ ನಡೆಯುವ ಔಷದೋಪಚಾರದ ಕಡೆಗೂ ನೋಡುತ್ತಿರಲಿಲ್ಲ. ಅದು ಮುಂದೆ ನಡೆಯಬಹುದಾದ ಜಗಳಕ್ಕೆ ಮುನ್ನುಡಿ ಎನ್ನುವುದನ್ನು ಮತ್ತೆ ಹೇಳುವಂತಿಲ್ಲ. “ಗೋವಿಂದಪ್ಪ, ಬೇರೆ ಕೋಳಿ ತಂದುಕೊಡು. ಎರಡು ಕಿಲೋ ಅದೆ.” ಅನ್ನುತ್ತಾ ಸುಮ್ಮನೆ ಅಲ್ಲೇ ನಿಂತಿರುತ್ತಿತ್ತು. ನಾನು ಒಳಗೆ ಹೋದರೆ ನಮ್ಮಪ್ಪ ಒದೆಯುತ್ತಿದ್ದರು. ಕೋಳಿ ಹತ್ತಿರ ನಿಂತಿದ್ದರೆ ಯಾವ ಸಮಯದಲ್ಲಾದರೂ ಜಗಳ ಶುರುವಾಗಿ ನಿಂತಲ್ಲೇ ಒದೆ ಬೀಳುತ್ತಿತ್ತು. ನಮ್ಮ ತಾತ ಕೋಳಿ ಕೆಳಗೆ ಬಿಟ್ಟು “ನೋಡು ನಿನ್ನ ಕೋಳಿ ಚೆನ್ನಾಗೇ ನಡೀತಾ ಇದೆ. ತಗೊಂಡೋಗಿ ಬುಟ್ಟಿ ಮುಚ್ಚಿಬಿಡು. ಬೆಳಗ್ಗೆ ಹೊತ್ತಿಗೆ ಸರಿ ಹೋಗುತ್ತೆ. ಹೋಗು ಭದ್ರಪ್ಪ” ಎನ್ನುತ್ತಾ ಹಲ್ಲಿಲ್ಲದ ಬೊಚ್ಚು ಬಾಯಿ ತೆಗೆದು ನಗು ಬರದಿದ್ದರೂ, ನಗುತ್ತಾ “ಹೆ ಹೆ, ನೋಡು ನೋಡು. ನಡೀತಾ ಇದೆ” ಎಂದು ಕಣ್ಣಲ್ಲಿ ಮಿಂಚು ಹರಿಸುತ್ತ ಕುಂಟುವ ಕೋಳಿ ಕಡೆ ನೋಡಿದರೆ, ಸೌದೆ ಅಜ್ಜ ಅಪ್ರಯತ್ನಪೂರ್ವಕವಾಗಿ ಅತ್ತ ನೋಡಿ, “ಕುಂಟ್ತಾ ಐತಲ್ಲಾ? ಎಲ್ಲಿ ಚೆನ್ನಾಗಿ ನಡೀತಾ ಅದೆ?” ಅಂದ್ರೆ ನಮ್ಮಮ್ಮ “ಬಾ ತಾತಾ, ನಾನೇ ತಂದು ಬುಟ್ಟಿ ಮುಚ್ತೀನಿ. ಬೆಳಗ್ಗೆ ಓಡಾಡ್ದೇ ಇದ್ರೆ ಕೇಳು” ಅಂತ ಕುಂಟ್ಕೊಂಡು ಕುಡುಕನಂತೆ ಓಡಾಡೋ ಕೋಳಿನ ಎತ್ಕೊಂಡು ಹೋಗಿ ಬಿದುರಿನ ಬುಟ್ಟಿ ಮುಚ್ಚಿ ಬರುತ್ತಿದ್ದರು. ಮನೆಗೆ ಬಂದು “ಆ ಮುದ್ಕಾ ಬೇರೆ ಕೋಳಿ ಬೇಕು ಅಂದ್ರೆ ಏನು ಮಾಡೋದು ಈಗ? ಎರಡು ಕೆಜಿ ಇದೆ ಅಂತಾನೆ. ನಾನೇ ಎತ್ತಿ ನೋಡುದ್ನಲ್ಲಾ ಒಂದೂವರೆ ಕೆಜಿನೂ ಬರಲ್ಲ ಅಲ್ವಾ ತಾತ” ಎಂದು ತನ್ನ ಮಾವನಿಗೆ ಕಷ್ಟ ಹೇಳಿಕೊಳ್ಳುತ್ತಾ ಸೌದೆ ಮುದುಕನನ್ನು ಬೈದು, “ನಾಳೆ ಮತ್ತೆ ಮುದ್ಕ ಬಂದು ಬೇರೆ ಕೋಳಿನೇ ಬೇಕು ಅನ್ಲಿ, ಆಮೇಲೆ ನಿನಗಿದೆ ಪೊರಕೆ ಪೂಜೆ” ಎನ್ನುತ್ತಾ ಹಲ್ಲು ಕಡಿದು, ನಾಳಿನ ಸಂಭ್ರಮದ ಮುನ್ಸೂಚನೆಯನ್ನು ಸಾರಿ ಹೇಳುತ್ತಿದ್ದರು ನಮ್ಮಮ್ಮ. ಹಾಗಾಗಿ ಕೋಳಿಯ ಮುರಿದ ಕಾಲು ಸರಿ ಹೋಗಿದೆಯೋ ಇಲ್ಲವೋ ಎನ್ನುವ ನಿರೀಕ್ಷೆ ಎಲ್ಲರಿಗಿಂತ ನನಗೆ ಸ್ವಲ್ಪ ಹೆಚ್ಚಿಗೇ ಇರುತ್ತಿತ್ತು. ಮತ್ತೊಮ್ಮೆ ನಮ್ಮಮ್ಮ ಅಪ್ಪ ಎಲ್ಲೋ ಹೋಗಿದ್ದ ಸಮಯದಲ್ಲಿ ಅದೇ ಸೌದೆ ಡಿಪ್ಪೋ ಅಜ್ಜನ ಕೋಳಿ ಒಂದು ಕಂಪೌಂಡ್ ಒಳಗೆ ಬಂತು. ಆಗಾಗ ಕೋಪ ಬರಿಸುತ್ತಿದ್ದ ಕೋಳಿಯನ್ನು ಅಟ್ಟಾಡಿಸಿ ಹಿಡಿದು, ಬಾಣಂತಿಯಾಗಿದ್ದ ನಮ್ಮಕ್ಕನಿಗಾಗಿ ತರಿಸಿಟ್ಟಿದ್ದ ಬಿಸ್ಕೆಟ್ ಬ್ರಾಂದಿಯನ್ನು ಅವಳು ಬೇಡ ಎನ್ನುತ್ತಿದ್ದರೂ ಕೇಳದೆ, ಅದರ ಬಾಯಿಗೆ ಸುರಿದು ಹತ್ತು ನಿಮಿಷ ಬಿಟ್ಟು ಹೊರಗೆ ಬಿಟ್ಟೆ. ನೋಡಬೇಕಿತ್ತು ಅದರ ಆಟ. ಹಾಕಿದ ಐದಾರು ತೊಟ್ಟು ಬ್ರಾಂದಿಗೇ ಮನೆಯ ಮುಂದಿದ್ದ ಚಪ್ಪಡಿ ಸಂದಿಯಲ್ಲಿ ಕಾಲು ಬಿಟ್ಟು ಮೇಲೆ ಎಳೆದುಕೊಳ್ಳಲಾಗದೆ ತೂರಾಡಿ ಅಲ್ಲೇ ಬೀಳುತ್ತಿತ್ತು. ನಮ್ಮಕ್ಕ ಎತ್ತಿ ಸ್ವಲ್ಪ ಮುಂದೆ ಬಿಡುತ್ತಿದ್ದಳು. ಅವಳಿಗೂ ಹೊರಗೆ ಬಿಡಲು ಭಯ. ಅಜ್ಜ ಸೌದೆ ಸೀಳಿಕೊಂಡು ಹೊರಗೇ ಇರುತ್ತಿತ್ತಲ್ಲ? ಈ ಕೋಳಿನೋ ತೂರಾಡಿಕೊಂಡು ಮತ್ತೆ ಮತ್ತೆ ಮನೆ ಕಡೆಗೇ ಬರುತ್ತಿತ್ತು. ಹಲ್ಲು ಕಡಿಯುತ್ತಾ “ಅಮ್ಮ, ಅಣ್ಣ, ತಾತ ಎಲ್ರೂ ನೀನು ಮಾಡೋ ಚೇಷ್ಟೆ ಬಗ್ಗೆ ಹೇಳ್ದಾಗ ನಂಬಿರ್ಲಿಲ್ಲ. ಈ ಕೋಳಿ ಹೊರಗೇ ಹೋಗ್ತಾ ಇಲ್ಲ. ಏನು ಮಾಡೋದು ಈಗ?” ಎನ್ನುತ್ತಾ ತಲೆ ಚಚ್ಚಿಕೊಂಡಳು ಅಕ್ಕ. ನಾನು ಮುಖ ಚಿಕ್ಕದು ಮಾಡಿಕೊಂಡು, ಅಜ್ಜ ಅಪ್ಪಿತಪ್ಪಿ ಒಳಗೆ ಹೋದ ಸಮಯದಲ್ಲಿ ಹೊರಗೆ ಬಿಡೋಣವೆಂದು ಅದನ್ನು ಹೊತ್ತೊಯ್ದು ಕಂಪೌಂಡ್ ಹತ್ತಿರ ಹಿಡಿದು ಸ್ವಲ್ಪ ಹೊತ್ತು ನಿಂತೆ. ಕುಡುಕ ಕೋಳಿ ಕೈಯ್ಯನ್ನು ಕುಕ್ಕಲು ಶುರು ಮಾಡಿತು. ನೋವು ಸಹಿಸಲಾರದೆ ಆಗಿದ್ದಾಗಲಿ ಅಂತ ಮೆಲ್ಲಗೆ ಗೇಟ್ ತೆಗೆದು ಹೊರಗೆ ಬಿಟ್ಟುಬಿಟ್ಟೆ. ಕೋಳಿ ಅದರ ಮನೆ ಕಡೆ ಹೋಗದೆ, ಬೀಳುತ್ತಾ ಏಳುತ್ತಾ ಅಲ್ಲಲ್ಲೇ ಓಡಾಡುತ್ತಿದ್ದರೆ ನನಗೆ ನಗುವೋ ನಗು. ಅಕ್ಕ ಮತ್ತೆ ಗುರಾಯಿಸಿದರೆ ನಾನು “ಸಂಜೆ ಅದು ಮನೆಗೆ ಹೋಗೋ ತನಕ ಅಜ್ಜ ಅದನ್ನೇನೂ ಹುಡುಕಲ್ಲ ಬಿಡಕ್ಕ” ಎನ್ನುತ್ತಾ ಸಿಕ್ಕಾಪಟ್ಟೆ ಮಜಾ ತಗೊಂಡಿದ್ದೆ. ಅಕ್ಕನೂ ಕೂಡ ಆ ಕ್ಷಣವೇ ನನ್ನ ವಿರುದ್ದದ ಕೂಟಕ್ಕೆ ಸೇರಿಹೋದಳೆಂದು ಮತ್ತೆ ಹೇಳಬೇಕಿಲ್ಲ ಅಲ್ಲವೇ? ***********************
ಕವಿತೆ ಬಾಗಿಲನ್ನು ತೆರೆದಿಡಿ ವಿಶ್ವನಾಥ ಎನ್ ನೇರಳಕಟ್ಟೆ ಬಾಗಿಲನ್ನು ತೆರೆದಿಡಿತುಸು ಗಾಳಿಯಾಡಲಿಬರಿಯ ಕಿಟಕಿಸಾಲುವುದಿಲ್ಲ ಈ ಕಾಲಕ್ಕೆಎದೆಯುರಿಯ ಆರುವಿಕೆಗೆಹಿರಿದು ಗಾಳಿಯ ಸಹಕಾರವಿರಲಿ ಬಿಸಿಲ ಝಳಕ್ಕೆ ಬಳಲಿದ ಪಕ್ಷಿಗಳುಬರಲಿ ಒಳಕ್ಕೆವಿರಮಿಸಲಿ ತುಸು ಹೊತ್ತುಪ್ರಣಯನಾದದ ಕೇಕೆಅನುರಣಿಸಲಿ ಭಿತ್ತಿಗಳಲಿ ಮನೆಯೊಳಗೆ ಮುತ್ತಿರುವ ಕತ್ತಲುಕಣಕಣವಾಗಿ ಕಡಿದುಹೋಗಲಿಹೊರಗಿನ ಬೆಳಕಿನಲ್ಲಿಕಣ್ಣ ದೃಷ್ಟಿ ಸೂಕ್ಷ್ಮವಾಗಲಿ ಬಾಗಿಲನ್ನು ತೆರೆದಿಡಿ ಎದೆಯ ಕವಾಟಗಳಲ್ಲಿಸಾಮರಸ್ಯದ ಗಾಳಿಯಾಡಲಿ
ಬಾಗಿಲನ್ನು ತೆರೆದಿಡಿ Read Post »
ಗಜಲ್ ಸಿದ್ಧರಾಮ ಹೊನ್ಕಲ್ ಏಳು ದಶಕಗಳೇ ಕಳೆದವು ಹೊಸ ಮಳೆಯು ಸುರಿಯಲಿಲ್ಲ ನೋಡು ಸಾಕಿಭೂತಾಯಿ ಮಕ್ಕಳ ಬಂಜೆತನ ಹಿಂಗಲೇಯಿಲ್ಲ ನೋಡು ಸಾಕಿ ದುಡಿ ದುಡಿದು ನೊಂದ ರೈತನ ಮುಖದಲ್ಲಿ ನಗೆಯು ಅರಳಲಿಲ್ಲಜಗಕೆ ಅನ್ನ ಹಾಕುವವರ ಬಾಯಿಯೇ ಸಿಹಿಯಾಗಲಿಲ್ಲ ನೋಡು ಸಾಕಿ ಗಾಂಧಿ ಕಂಡ ಗ್ರಾಮೀಣ ಭಾರತದ ಕನಸುಗಳೆಲ್ಲ ಜಾರಿ ಕಡಲ ಪಾಲಾದವು ಈ ಮಣ್ಣಲಿಹಳ್ಳಿ ಹಳ್ಳಿಗಳೆಲ್ಲ ಗುಳೇ ಎದ್ದು ಹೋಗಿ ಸುಖವೆಂಬುದೇ ಸುಳಿಯಲಿಲ್ಲ ನೋಡು ಸಾಕಿ ಕುರ್ಚಿಯ ಕನಸಿನಲಿ ಸ್ವಾರ್ಥದ ಸೆಳವಿನಲಿ ದೇಶ ನಮ್ಮ ನಮ್ಮವರಲ್ಲಿಯೇಹರಾಜಾಯಿತುಅಧಿಕಾರದ ಅಮಲಿನಲ್ಲಿ ರೈತರ ನೆಮ್ಮದಿಗೆ ಯಾರು ಪೂರ್ಣ ಚಿಂತಿಸಲಿಲ್ಲ ನೋಡು ಸಾಕಿ ‘ಹೊನ್ನಸಿರಿ’ ಭೂತಾಯಿ ಮಕ್ಕಳ ಆಶೋತ್ತರಗಳಿಗೆ ಉತ್ತರ ಎಲ್ಲಿಹದುಸ್ವಾರ್ಥದ ಈ ಪಡಿಪಾಟಲಿಗೆ ಬಂಡೆಳದೇ ಫಲ ದೊರಕುವದಿಲ್ಲ ನೋಡು ಸಾಕಿ ***************************************************
ಕವಿತೆ ಅಮ್ಮ ಸಂತೋಷ್ ಹೆಚ್ ಈ ಈ ಜೀವಕ್ಕೆ ಗರ್ಭದಿ ನೆಲೆ ಕೊಟ್ಟುಹೃದಯದಲಿ ಪ್ರೀತಿಯ ಬಚ್ಚಿಟ್ಟುಭವಿಷ್ಯದ ಕನಸಿನ ಗಿಡನೆಟ್ಟುನವಮಾಸ ಕಳೆದಳು ಅಮ್ಮ ನನ್ನ ಒಡಲಿಗೆ ಮಡಿಲಾದೆ ನೀನುಹಾಲನ್ನು ಎರೆದ ತಾಯಿಯು ನೀನುಈ ದೇಹಕ್ಕೆ ಉಸಿರನ್ನು ನೀಡಿದವಳು ನೀನುಆ ಋಣವ ತೀರಿಸಲಾಗದ ಮಗನಾದೆ ನಾನು ಮನೆಯೆಂಬ ಗುಡಿಗೆ ದೇವರು ನೀನುಹಸಿವನ್ನು ನೀಗಿಸೋ ಕರುಣಾಮಯಿ ನೀನುಬಿಸಿಲಲ್ಲೂ ಕೂಡ ನೆರಳಾದೆ ನೀನುಆ ಮರಕ್ಕೆ ನೀರೆರೆಯುವ ಮಗನಾದೆ ನಾನು ಅಜ್ಞಾನವೆಂಬ ಇರುಳನ್ನು ಸರಿದುಅರಿವೆಂಬ ಬೆಳಕನ್ನು ನೀಡಿದೆ ನೀನುಈ ಬಾಳಿಗೊಂದು ದೀಪವು ನೀನುಆ ದೀಪ ಕಾಯೋ ಮಗನಾದೆ ನಾನು ಎಲ್ಲ ಜೀವಿಗಳಿಗೂ ಅಮ್ಮನೇ ಮೂಲಹುಡುಕಿದರು ಸಿಗದು ಅದರ ಮೂಲಅಮ್ಮನ ಒಡಲು ಪ್ರೀತಿಯ ಕಡಲುಅಳಿವಿಲ್ಲದ-ಹುಳುಕಿಲ್ಲದ ಪ್ರೀತಿಯು ನಿನ್ನದು ********
ಕೊಡಗಿನ ಕಾನನದ ಮಡಿಲೊಳಗಿದ್ದುಕೊಂಡು ಯಾವ ವಾದ-ಪಂಥಗಳಿಗೂ ಪಕ್ಕಾಗದೆ, ಆಪ್ತವೆನಿಸುವಂತಹ ತಮ್ಮದೇ ಶೈಲಿ, ಭಾಷೆ, ತಂತ್ರ ಮತ್ತು ರೂಪಕಗಳನ್ನು ಕಂಡುಕೊಳ್ಳುತ್ತಾ ಕಾವ್ಯ ಕೃಷಿ ಮಾಡುತ್ತಿದ್ದಾರೆ ಸ್ಮಿತಾ. ಹೀಗೆಯೇ ಕಾವ್ಯದ ಸುಗ್ಗಿಯಾಗಿ ಅವರು ಸಾಹಿತ್ಯ ಶಿಖರದ ಉತ್ತುಂಗಕ್ಕೇರಲಿ ಎಂಬುದು ಓದುಗರ ಆಶಯ.
ಮಾತು ಮೀಟಿ ಹೋಗುವ ಹೊತ್ತು Read Post »
ಮತ್ತೆ ಮೈಸೂರು ತಲುಪಿದಾಗ ಅಂಡಮಾನ್ ನ ಮಧುರ ನೆನಪುಗಳು ತುಂಬಿ ತುಂಬಿ ನಮ್ಮೊಂದಿಗೆ ಬಂದಿದ್ದವು
ದಾರಾವಾಹಿ ಆವರ್ತನ ಅದ್ಯಾಯ-16 ಈಶ್ವರಪುರ ಪೇಟೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಹಣ ಪಡೆದ ಗೋಪಾಲ ಸೀದಾ ಶಂಕರನ ಸೈಟಿಗೆ ಬಂದು ನಿಂತ. ಶಂಕರ ತನ್ನ ಮೇಸ್ತ್ರಿ ಸುಬ್ರಾಯನೊಡನೆ ಕಟ್ಟಡ ಕಾಮಗಾರಿಯ ಮಾತುಕತೆಯಲ್ಲಿದ್ದ. ಸ್ವಲ್ಪಹೊತ್ತಿನಲ್ಲಿ ಮೇಸ್ತ್ರಿಯನ್ನೂ ಕೂಲಿಯಾಳುಗಳನ್ನೂ ಕೆಲಸಕ್ಕೆ ತೊಡಗಿಸಿ ಗೋಪಾಲನತ್ತ ಬಂದ. ಗೋಪಾಲ, ಶಂಕರ ಹೇಳಿದ್ದಷ್ಟು ಹಣವನ್ನು ಕೊಟ್ಟು ಗುಜಿರಿಯನ್ನು ಕೊಂಡ. ಬಳಿಕ ತಾನು ಹೇಳಿದ ಜಾಗದ ವಿಷಯವಾಗಿ ಅವನೇನಾದರೂ ಮಾತಾಡುತ್ತಾನೋ ಎಂದು ಕಾದ. ಆದರೆ ಶಂಕರ ಬೇಕೆಂದೇ ಆ ವಿಷಯವನ್ನು ಮರೆತಂತೆ ನಟಿಸಿದ. ಆದ್ದರಿಂದ ಗೋಪಾಲನೇ ಮಾತೆತ್ತಿದ. ‘ಶಂಕರಣ್ಣ, ನಿನ್ನೆ ನೀವು ನನಗೊಂದು ಜಾಗ ತೋರಿಸುತ್ತೇನೆ ಅಂದಿದ್ದಿರಿ ನೆನಪುಂಟಾ…?’ ಎಂದ ವಿನಯದಿಂದ. ‘ಓಹೋ, ಹೌದಲ್ಲವಾ ಮಾರಾಯ. ನೀನು ನಿನ್ನೆ ಆ ಬಗ್ಗೆ ಮಾತಾಡಿ ಹೋಗಿದ್ದಿ. ಆದರೆ ಈ ನನ್ನ ಸಾವಿರ ವ್ಯವಹಾರ ತಾಪತ್ರಯವಿದೆಯಲ್ಲ ಅದೆಲ್ಲವನ್ನೂ ಮರೆಸಿ ಬಿಡುತ್ತದೆ ನೋಡು!’ ಎಂದ ಶಂಕರ ಗತ್ತಿನಿಂದ. ‘ಪರ್ವಾಗಿಲ್ಲ ಶಂಕರಣ್ಣ, ನಿಮ್ಮ ವ್ಯವಹಾರ ನಮ್ಮ ಹಾಗೆ ಸಣ್ಣದಾ…!’ ಎಂದು ಗೋಪಾಲನೂ ಅವನ ಹುಸಿ ಮರೆವನ್ನು ಸಮರ್ಥಿಸಿದ. ‘ಹ್ಞೂಂ ಹೌದು. ಅದಿರಲಿ, ನಿನ್ನೆ ನಾನು ಜಾಗದ ವಿಷಯ ಹೇಳಿದ್ದೆನಲ್ಲ ಅದು ಇಲ್ಲೇ ಬುಕ್ಕಿಗುಡ್ಡೆಯಲ್ಲಿದೆ. ಕೆಲವು ವರ್ಷಗಳ ಹಿಂದೆ ಅಲ್ಲೊಂದು ದೊಡ್ಡ ಮದಗದ ಪಕ್ಕದ ಗುಡ್ಡೆಯೊಂದನ್ನು ಪರ್ಚೆಸ್ ಮಾಡಿ ಐದಾರು ಸೆಂಟ್ಸ್ಗಳ ಲೇಔಟ್ ಮಾಡಿಸಿದ್ದೆ. ಅದರ ಒಂದು ಕೊನೆಯಲ್ಲಿ ನಾಲ್ಕು ಸೆಂಟ್ಸಿನಷ್ಟಗಲದ ಸೈಟೊಂದು ಉಳಿದುಬಿಟ್ಟದೆ ನೋಡು. ಒಳ್ಳೆಯ ಜಾಗ ಮಾರಾಯ ಅದು. ಆ ವಠಾರಕ್ಕೆ ‘ಭಾಗೀವನ’ ಅಂತ ನನ್ನ ಅಮ್ಮನ ಹೆಸರಿಟ್ಟಿದ್ದೇನೆ. ಅದರ ಪಕ್ಕದಲ್ಲಿ ಒಂದು ಚಂದದ ಹಾಡಿಯೂ ಇದೆ. ಯಾರಾದರೂ ನಿನ್ನಂಥ ಬಡವರಿಗೋ ಅಥವಾ ನನ್ನ ಕೂಲಿಯಾಳುಗಳಿಗೋ ಆದಷ್ಟು ಕಡಿಮೆ ಬೆಲೆಗೆ ಕೊಟ್ಟರಾಯ್ತೆಂದುಕೊಂಡಿದ್ದೆ. ನೀನು ಕೇಳಿದ್ದು ಒಳ್ಳೆಯದಾಯ್ತು. ಆ ಮದಗವೂ ವರ್ಷವಿಡೀ ತುಂಬಿರುತ್ತದೆ. ಹಾಗಾಗಿ ಬರೇ ಎಂಟು, ಹತ್ತು ಅಡಿಯಷ್ಟು ಆಳದ ಬಾವಿ ತೋಡಿದರೂ ಬೊಂಡದಂಥ ನೀರು ಸಿಗುತ್ತದೆ. ಈಗ ಅಲ್ಲಿ ಸೆಂಟ್ಸ್ಗೆ ಮೂರು ಲಕ್ಷ ನಡಿತಾ ಇದೆ!’ ಎಂದ ಶಂಕರ ಎತ್ತಲೋ ನೋಡುತ್ತ. ಶಂಕರ, ‘ಜಾಗ ಇದೆ ಮಾರಾಯಾ!’ ಎಂದಾಕ್ಷಣ ಗೋಪಾಲನಿಗೆ ಕುಣಿದಾಡಿ ಬಿಡುವಷ್ಟು ಸಂತೋಷವಾಯಿತು. ಆದರೆ ಅವನ ಬೆಲೆ ಕೇಳಿದಾಕ್ಷಣ ಎದೆಯೊಮ್ಮೆ ಧಸಕ್ ಎಂದಿತು. ಗೋಪಾಲನ ಮುಖ ಒಮ್ಮೆಲೇ ಕಳೆಗುಂದಿದ್ದನ್ನು ಓರೆಗಣ್ಣಿನಿಂದ ಗ್ರಹಿಸಿದ ಶಂಕರ, ‘ಅರೆರೇ, ಬೆಲೆ ಕೇಳಿ ಹೆದರಿ ಬಿಟ್ಟಿಯಾ ಮಾರಾಯಾ…? ಅಲ್ಲಿ ಸೆಂಟ್ಸಿಗೆ ಅದೆಷ್ಟು ಲಕ್ಷ ನಡೀತಾ ಇದ್ದರೂ ನೀನು ಅಷ್ಟೆಲ್ಲ ಕೊಡಬೇಕಾಗಿಲ್ಲವನಾ…!’ ಎಂದು ನಗುತ್ತ ಸಮಾಧಾನಿಸಿದ. ಆಗ ಗೋಪಾಲ ಮರಳಿ ಯಥಾಸ್ಥಿತಿಗೆ ಬಂದ. ‘ಹೌದಾ ಶಂಕರಣ್ಣ. ಹಾಗಾದರೆ ಸರಿ. ನಿಮ್ಮನ್ನು ನನ್ನ ಪಾಲಿನ ದೇವರು ಅಂತಲೇ ಭಾವಿಸಿದ್ದೇನೆ. ನನ್ನ ಕುಟುಂಬಕ್ಕೊಂದು ಸಣ್ಣ ಗೂಡು ಕಟ್ಟಲು ನೀವು ಜಾಗ ತೋರಿಸಿದ್ದು ಅಮೃತ ಕುಡಿದಷ್ಟು ನೆಮ್ಮದಿಯಾಯ್ತು. ಹಾಗೆಯೇ ಒಂದು ಸರಿಯಾದ ರೇಟನ್ನೂ ಹೇಳಿಬಿಡಿ. ಎಷ್ಟು ಕೊಡಬೇಕು ನಾನು…?’ ‘ನೋಡು ಗೋಪಾಲ, ನೀನಾಗಿರುವುದರಿಂದ ಸೆಂಟ್ಸಿಗೆ ಬರೇ ಒಂದು ಲಕ್ಷ ಕೊಟ್ಟರೆ ಸಾಕು. ನಾಲ್ಕು ಸೆಂಟ್ಸಿಗೆ ನಾಲ್ಕು ಲಕ್ಷ ಅಷ್ಟೇ! ಯಾವಾಗ ದುಡ್ಡು ರೆಡಿ ಮಾಡುತ್ತೀಯೋ ಆವಾಗ ನಿನ್ನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಬಿಡುತ್ತೇನೆ’ ಎಂದು ಶಂಕರ ಸಲೀಸಾಗಿ ಹೇಳಿಬಿಟ್ಟ. ಆದರೆ ಗೋಪಾಲ ಮತ್ತೆ ಆತಂಕಕ್ಕೆ ಬಿದ್ದ. ಹಾಗಾಗಿ ತನ್ನ ಕಷ್ಟಕಾರ್ಪಣ್ಯಗಳನ್ನೂ ಮತ್ತು ಮುತ್ತಯ್ಯನ ಕಿರಿಕಿರಿಯನ್ನೂ ಬಗೆಬಗೆಯಿಂದ ಶಂಕರನಿಗೆ ವಿವರಿಸಿದ. ಆದ್ದರಿಂದ ಶಂಕರ ಕರುಣೆ ಉಕ್ಕಿದವನಂತೆ ನಟಿಸುತ್ತ ಸೆಂಟ್ಸಿಗೆ ಮತ್ತೂ ಹತ್ತು ಸಾವಿರ ರೂಪಾಯಿ ಕಡಿಮೆ ಮಾಡಿದ. ಅದರಿಂದ ಗೆಲುವಾದ ಗೋಪಾಲ, ಒಂದು ವಾರದೊಳಗೆ ಹಣ ಹೊಂದಿಸಿಕೊಂಡು ಬರುವುದಾಗಿ ಅವನಿಗೆ ಮಾತುಕೊಟ್ಟು ಗುಜರಿಯನ್ನು ರಿಕ್ಷಾ ಟೆಂಪೊವೊಂದಲ್ಲಿ ತುಂಬಿಸಿಕೊಂಡು ಹಿಂದಿರುಗಿದ. ಈಶ್ವರಪುರದ ಪೇಟೆಯ ದೊಡ್ಡ ಅಂಗಡಿಯೊಂದಕ್ಕೆ ಗುಜರಿಯನ್ನು ಮಾರಿ ಒಂದಷ್ಟು ಲಾಭಾಂಶ ಗಳಿಸಿ, ಆತುರದಿಂದ ಮನೆಗೆ ಧಾವಿಸಿದ. ಆಹೊತ್ತಿನಲ್ಲಿ ರಾಧಾ ತೋಟದಲ್ಲಿ ಮಡಲು, ತಪ್ಪರಿಕೆ ಹೆಕ್ಕಿ ರಾಶಿ ಹಾಕುತ್ತಾ ಇದ್ದವಳು ಗಂಡನನ್ನು ಕಂಡು, ಏನೀವತ್ತು ಇಷ್ಟು ಬೇಗ ಬಂದುಬಿಟ್ಟರು…? ಎಂದು ಯೋಚಿಸಿದಳು. ಅಷ್ಟರಲ್ಲಿ ಗೋಪಾಲ ಅಂಗಳದಲ್ಲಿ ಸೈಕಲ್ ನಿಲ್ಲಿಸಿ, ಹೆಂಡತಿ ತೋಟದಲ್ಲಿ ದುಡಿಯುತ್ತಿರುವುದನ್ನು ಕಂಡ. ಮರುಕ್ಷಣ ಅವನ ಮನಸ್ಸು ಹಿಂಡಿತು. ಛೇ! ಇವಳೊಬ್ಬಳು ಪಾಪದ ಹೆಣ್ಣು, ದಿನನಿತ್ಯ ಮನೆಯಲ್ಲೂ ಹೊರಗೂ ಎಷ್ಟೊಂದು ದುಡಿಯುತ್ತಾಳೆ! ಆದರೆ ನನ್ನನ್ನು ಮದುವೆಯಾಗಿ ಬಂದ ನಂತರ ಒಂದು ದಿನವೂ ಇವಳನ್ನು ಸುಖವಾಗಿಡಲು ನನ್ನಿಂದ ಸಾಧ್ಯವಾಗಿಲ್ಲ. ಇನ್ನು ಮುಂದೆ ಸ್ವಂತ ಮನೆಯಾದ ಮೇಲಾದರೂ ಚೆನ್ನಾಗಿ ನೋಡಿಕೊಳ್ಳಬೇಕು!-ಎಂದು ಯೋಚಿಸಿ ಸಮಾಧಾನ ತಂದುಕೊಂಡ. ‘ಹೇ, ರಾಧಾ ಕೆಲಸ ಮಾಡಿದ್ದು ಸಾಕು ಮಾರಾಯ್ತೀ… ಸ್ವಲ್ಪ ಇಲ್ಲಿ ಬಾ!’ ಎಂದು ಅಕ್ಕರೆಯಿಂದ ಕರೆದ. ಅಷ್ಟು ಕೇಳಿದ ಅವಳು, ‘ಹ್ಞೂಂ ಬಂದೆ ಮಾರಾಯ್ರೇ…!’ ಎಂದುತ್ತರಿಸಿ ಸೆರಗಿನಿಂದ ಬೆವರೊಸಿಕೊಳ್ಳುತ್ತ ಬಂದಳು. ಗೋಪಾಲ ಕೈಕಾಲು ಮುಖಕ್ಕೆ ನೀರೆರೆದುಕೊಂಡು ಒಳಗೆ ಹೋಗಿ ಗೋಡೆಗೊರಗಿ ಕುಳಿತ. ರಾಧಾಳೂ ಬಂದು ಗಂಡನೆದುರು ಕುಳಿತುಕೊಂಡಳು. ‘ನಿನಗೊಂದು ಸಂತೋಷದ ಸುದ್ದಿ ಉಂಟು ಮಾರಾಯ್ತೀ…!’ ‘ಹೌದಾ, ಎಂಥದದು…?’ ‘ಕೊನೆಗೂ ನಿನ್ನ ಹಠಕ್ಕೂ, ದಿನಾ ನಾವು ದೇವರೊಡನೆ ಪ್ರಾರ್ಥಿಸಿಕೊಂಡದ್ದಕ್ಕೂ ಪ್ರತಿಫಲವೆಂಬಂತೆ ಜಾಗವೊಂದು ಸಿಕ್ಕಿದ ಹಾಗಾಯ್ತು ಮಾರಾಯ್ತಿ!’ ಎಂದ ಉತ್ಸಾಹದಿಂದ. ಅಷ್ಟು ಕೇಳಿದ ರಾಧಾಳಿಗೆ ನಿಂತ ನಿಲುವಿನಲ್ಲೇ ಕೊಪ್ಪರಿಗೆ ಸಿಕ್ಕಷ್ಟು ಸಂತೋಷವಾಯಿತು. ‘ಹೌದಾ ಮಾರಾಯ್ರೇ…ಯಾವ ಊರಲ್ಲಿ? ನಾವದನ್ನು ನೋಡಲು ಹೋಗುವುದು ಯಾವಾಗ…?’ ಎಂದಳು ಆತುರದಿಂದ. ‘ಸದ್ಯದಲ್ಲೇ ಹೋಗುವ. ಆದರೆ ಅದಕ್ಕಿಂತ ಮೊದಲು ಮೂರು ಲಕ್ಷದ ಅರವತ್ತು ಸಾವಿರ ರೂಪಾಯಿ ಆಗಬೇಕು. ಎಲ್ಲಿಂದ ಹೊಂದಿಸುವುದು ಮಾರಾಯ್ತೀ?’ ಎಂದ ದುಗುಡದಿಂದ. ‘ಅಷ್ಟೇ ತಾನೇ ಆಗುತ್ತದೆ ಬಿಡಿ!’ ಎಂದು ರಾಧಾ ನಿಶ್ಚಿಂತೆಯಿಂದ ಅಂದಾಗ ಗೋಪಾಲನಿಗೆ ಅಚ್ಚರಿಯಾಯಿತು. ‘ಆಗುತ್ತದೆ ಎಂದರೆ ಏನರ್ಥ…! ನೀನು ಕೂಡಿಟ್ಟಿದ್ದೀಯಾ…?’ ಎಂದ ಒರಟಾಗಿ. ‘ಅಯ್ಯೋ ಅಷ್ಟೊಂದು ಹಣ ಕೂಡಿಡಲು ನಮ್ಮಿಂದ ಸಾಧ್ಯವಿದೆಯಾ ಮಾರಾಯ್ರೇ…?’ ಎಂದಳವಳು ನಗುತ್ತ. ಅವಳ ನಗು ಕಂಡ ಗೋಪಾಲನಿಗೆ ತನ್ನ ಆತಂಕವನ್ನವಳು ಗೇಲಿ ಮಾಡುತ್ತಿದ್ದಾಳೆಂದೆನ್ನಿಸಿ ರೇಗಿಬಿಟ್ಟಿತು. ‘ಹಾಗಾದರೆ ಯಾರು ನಿನ್ನಪ್ಪ ಕೊಡುತ್ತಾರಾ…?’ ಎಂದ ಉಡಾಫೆಯಿಂದ. ‘ಅರೆರೇ, ಅಪ್ಪ ಯಾಕೆ ಕೊಡಬೇಕು ಮಾರಾಯ್ರೇ? ಜಾಗವನ್ನು ನೀವು ಅವರ ಹೆಸರಿಗೆ ಬರಿತೀರಾ? ನಮಗೆ ಬೇಕಿದ್ದರೆ ನಾವೇ ಮಾಡಿಕೊಳ್ಳಬೇಕಪ್ಪಾ!’ ಎಂದು ಮತ್ತೂ ತುಂಟ ನಗುತ್ತ ಬೀರುತ್ತ ಅಂದವಳು, ‘ಇಷ್ಟಕ್ಕೆಲ್ಲಾ ಕೋಪಿಸಿಕೊಂಡರೆ ಹೇಗೆ ಮಾರಾಯ್ರೇ? ಮೊನ್ನೆ ತಾನೇ ನಾವಿಬ್ಬರು ಅದರ ಬಗ್ಗೆ ಮಾತಾಡಿ ನಿರ್ಧರಿಸಿದ್ದನ್ನು ಇಷ್ಟು ಬೇಗ ಮರೆತು ಬಿಟ್ರಾ…?’ ಎಂದು ಹುಸಿ ಮುನಿಸಿನಿಂದ ಕೇಳಿದಳು. ಆಗ ಗೋಪಾಲನಿಗೆ ಅಂದಿನ ಮಾತುಕತೆಯೆಲ್ಲ ನೆನಪಾಯಿತು. ‘ಓಹೋ… ಹೌದಲ್ಲವ ಮಾರಾಯ್ತೀ!’ ಎಂದು ಪೆಚ್ಚಾಗಿ ನಕ್ಕ. ಹೀಗೆ ಸಂಕಷ್ಟವನ್ನೂ ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಎದುರಿಸುತ್ತ ಬಾಳುತ್ತಿದ್ದ ಗೋಪಾಲ ದಂಪತಿ ಶಂಕರನ ಜಾಗ ಕೊಳ್ಳುವ ವಿಚಾರದಲ್ಲಿ ಮರುದಿನವೇ ಕಾರ್ಯಪ್ರವೃತ್ತರಾದರು. ಗೋಪಾಲ, ತನ್ನ ಮದುವೆಯಲ್ಲಿ ಹೆಣ್ಣಿನ ಕಡೆಯವರು ಉಡುಗೊರೆಯಾಗಿ ನೀಡಿದ್ದ ಚಿನ್ನ ಚೈನನ್ನೂ ಮತ್ತು ತಾನು ಚಿನ್ನದಂಗಡಿಯ ‘ಲಕ್ಕಿ ಡ್ರಾ’ಕ್ಕೆ ತಿಂಗಳು ತಿಂಗಳು ಕಟ್ಟುತ್ತ ಹೆಂಡತಿಗೂ ಮಗಳಿಗೂ ಮಾಡಿಸಿ ಹಾಕಿದ್ದ ಆಭರಣಗಳನ್ನೂ ಕೂಡಿಸಿ ಅದರ ಮೊತ್ತವನ್ನು ಲೆಕ್ಕ ಹಾಕಿದ. ಆದರೂ ಸಾಲುವುದಿಲ್ಲ ಎಂದೆನ್ನಿಸಿತು. ಕೊನೆಯದಾಗಿ ಮಗಳ ಕಿವಿಯಲ್ಲಿ ಉಳಿದಿದ್ದ ಸಣ್ಣ ಓಲೆಗಳನ್ನೂ ಬಿಚ್ಚಿಕೊಂಡು ಹೋಗಿ ಮಾರಿ ಒಂದಷ್ಟು ಹಣ ಹೊಂದಿಸಿದ. ಇತ್ತ ರಾಧಾ ಒಂದೂವರೆ ಲಕ್ಷ ರೂಪಾಯಿಯನ್ನು ತನ್ನ ‘ಸ್ತ್ರೀಶಕ್ತಿ’ ಸಂಘದಿಂದ ಸಾಲ ಪಡೆದು ಗಂಡನ ಕೈಯಲ್ಲಿಟ್ಟಳು. ಆದ್ದರಿಂದ ಗೋಪಾಲ, ಇನ್ನು ಹೆಂಡತಿಯೊಂದಿಗೆ ಜಾಗ ನೋಡಲು ಹೋಗಿ ಅವಳಿಗೆ ಹಿಡಿಸಿದ ಮೇಲೆ ಅದನ್ನು ಕೊಳ್ಳುವುದೆಂದು ನಿರ್ಧರಿಸಿದ. ಆವತ್ತು ಮಕ್ಕಳು ಶಾಲೆಗೆ ಹೋದ ಕೂಡಲೇ ಶಂಕರನಿಂದ ಅನುಮತಿ ಪಡೆದು ರಾಧಾಳನ್ನು ಸೈಕಲ್ಲಿನಲ್ಲಿ ಕುಳ್ಳಿರಿಸಿಕೊಂಡು ಜಾಗ ನೋಡಲು ಬುಕ್ಕಿಗುಡ್ಡೆಯತ್ತ ಹೊರಟ. ಅಂಬಾಗಿಲಿಗೆ ಬಂದು ವೆಂಕಟ್ರಾಯರ ಸಣ್ಣ ದಿನಸಿ ಅಂಗಡಿಯಲ್ಲಿ ರಾಧಾಳಿಗೆ ಕೋಲ್ಡ್ಡ್ರಿಂಕ್ಸ್ ಕುಡಿಸಲು ಸೈಕಲ್ ನಿಲ್ಲಿಸಿದ. ಗೋಪಾಲ ದಂಪತಿ ಅಪರೂಪಕ್ಕೆ ಒಟ್ಟಿಗೆ ಸವಾರಿ ಹೊರಟಿರುವುದನ್ನು ಕಂಡ ತಮಾಷೆ ಸ್ವಭಾವದ ವೆಂಕಟ್ರಾಯರು, ‘ಓಹೋ ಏನು ಗೋಪಾಲ ಅರ್ಧಾಂಗಿಯ ಸಮೇತ ಚಕ್ರದ ಕುದುರೆ ಹತ್ತಿದ್ದಿಯಾ! ಎಲ್ಲಿಗೆ ಪ್ರಯಾಣ…?’ ಎಂದು ಹಾಸ್ಯ ಮಾಡಿ ನಕ್ಕರು. ಅವರ ಮಾತಿಗೆ ರಾಧಾ ನಾಚಿಕೊಂಡಳು. ಗೋಪಾಲ ನಗುತ್ತ, ‘ಒಂದೊಳ್ಳೆಯ ಕೆಲಸಕ್ಕೆ ಹೊರಟಿದ್ದೇವೆ ವೆಂಕಟ್ರಾಯರೇ, ನಿಮ್ಮ ಆಶೀರ್ವಾದ ಬೇಕು!’ ಎಂದ ನಮ್ರನಾಗಿ. ‘ಓಹೋ, ಹೌದಾ…! ಹಾಗಾದರೆ ಎಲ್ಲಿಗೆ ಅಂಥ ಕೇಳಿದ್ದು ತಾಪ್ಪಾಯ್ತು ನೋಡು. ಆಗಲಿ, ನೀವು ಹೊರಟಿರುವ ಕಾರ್ಯವು ಹದವಾದ ಹಣ್ಣಾಗಲಿ ಅಂತ ಹರಸುತ್ತೇನೆ. ಹೋಗಿಬನ್ನಿ!’ ಎಂದು ಕೈಯೆತ್ತಿ ಹಾರೈಸಿದರು. ‘ಅಷ್ಟಾದರೆ ಸಾಕು ವೆಂಕಟ್ರಾಯರೇ…!’ ಎಂದು ಕೈಮುಗಿದ ಗೋಪಾಲ, ‘ಎರಡು ಕೋಲ್ಡ್ ಕೊಡಿ’ ಎಂದ ನಗುತ್ತ. ಅವರು ಯಾವುದೋ ಎರಡು ಬಾಟಲಿಗಳನ್ನು ಫ್ರೀಡ್ಜ್ನಿಂದ ತೆಗೆದುಕೊಟ್ಟರು. ರಾಧಾ, ವೆಂಕಟ್ರಾಯರಿಗೆ ಬೆನ್ನುಮಾಡಿ ನಿಂತುಕೊಂಡು ಪಾನೀಯ ಕುಡಿದು ಬಾಟಲಿಯನ್ನು ಗಂಡನ ಕೈಗಿಟ್ಟಳು. ಗೋಪಾಲನೂ ಕುಡಿದು ಬಾಟಲಿಗಳನ್ನು ಮೇಜಿನ ಮೇಲಿಟ್ಟು ದುಡ್ಡುಕೊಟ್ಟು ವೆಂಕಟ್ರಾಯರಿಗೆ ನಮಸ್ಕರಿಸಿ ಮತ್ತೆ ಹೆಂಡತಿಯನ್ನು ಕೂರಿಸಿಕೊಂಡು ಹೊರಟವನು ಕಾಲು ಗಂಟೆಯಲ್ಲಿ ಬುಕ್ಕಿಗುಡ್ಡೆಗೆ ಬಂದು ತಲುಪಿದ. ಸುಮಾರು ದೂರದಿಂದಲೇ ಭಾಗೀವನ ಬಡಾವಣೆಯು ಎದ್ದು ಕಾಣುತ್ತಿತ್ತು. ಆ ವಠಾರದ ತುಂಬಾ ವಿವಿಧ ಮಾದರಿಯ ತಾರಸಿ ಸೌಧಗಳೂ, ಎರಡಂತಸ್ತಿನ ಸುಂದರ ಬಂಗಲೆಗಳೂ ತಲೆಯೆತ್ತಿ ನಿಂತಿದ್ದವು. ರಾಧಾ ಗೋಪಾಲರು, ಆ ವಿಶಾಲ ಪ್ರದೇಶದಲ್ಲಿ ತಮ್ಮದೆಂಬ ಜಾಗವೊಂದು ಎಲ್ಲಿದೆ? ಎಂದು ಹುಡುಕುತ್ತ ಸಮೀಪ ಹೋದರು. ಶಂಕರ ಹೇಳಿದಂತೆ ಬಡಾವಣೆಯ ಪೂರ್ವದಿಕ್ಕಿನ ಮೂಲೆಯೊಂದರಲ್ಲಿ ಸಣ್ಣ ಜಾಗವೊಂದು ಖಾಲಿಯಿತ್ತು. ಇಬ್ಬರೂ ಅತ್ತ ಹೋಗಿ ಜಾಗವನ್ನೂ ಅದರ ಸುತ್ತಲಿನ ಪರಿಸರವನ್ನೂ ತವಕದಿಂದ ಪರೀಕ್ಷಿಸಿದರು. ರಾಧಾಳಿಗೆ ಜಾಗವು ತುಂಬಾ ಹಿಡಿಸಿತು. ಇಷ್ಟೊಂದು ಶ್ರೀಮಂತ ವಠಾರದಲ್ಲಿ ಯಾರ ತಂಟೆ ತಕರಾರೂ ಇಲ್ಲದ ಮತ್ತು ಸಮತಟ್ಟಾದ ಜಮೀನೊಂದು ದೊರಕಿದ್ದು ತಮ್ಮ ಅದೃಷ್ಟವೇ ಸರಿ! ಎಂದುಕೊಂಡ ಅವಳು ಖುಷಿಪಟ್ಟಳು. ಸೆಂಟ್ಸಿಗೆ ಕಡಿಮೆಯೆಂದರೂ ಎರಡು ಲಕ್ಷ ಬೆಲೆ ಬಾಳುವ ಇಂಥ ಸೈಟನ್ನು ಅಷ್ಟು ಕಡಿಮೆ ಬೆಲೆಗೆ ನೀಡಿದ ಶಂಕರನಲ್ಲಿ ಬಡ ರಾಧಾ ಗೋಪಾಲರಿಗೆ ನಿರಾಕಾರ ಬ್ರಹ್ಮನೇ ಕಾಣಿಸಿದ್ದ! ಗಂಡಹೆಂಡತಿ ಗೆಲುವಿನಿಂದ ಮನೆಗೆ ಹಿಂದಿರುಗಿದರು. ಜಾಗವನ್ನು ಕೊಂಡರಾಯಿತೇ? ಅದರಲ್ಲಿ ವಾಸಿಸಲು ಸಣ್ಣದೊಂದು ಗುಡಿಸಲು ಮತ್ತು ನೀರಿಗೊಂದು ಬಾವಿಯೂ ಬೇಡವೇ? ಅಷ್ಟನ್ನು ಮಾಡಲು ಇನ್ನೊಂದಷ್ಟು ರೂಪಾಯಿಗಳೂ ಬೇಕು! ಆದರೆ ಅದನ್ನು ಹೇಗೆ, ಎಲ್ಲಿಂದ ಹೊಂದಿಸುವುದಪ್ಪಾ…?’ ಎಂಬ ಮತ್ತೊಂದು ಚಿಂತೆಯಲ್ಲಿ ಮುಳುಗಿದ್ದ ಗೋಪಾಲನ ಕೈಗೆ ಅದೇ ಹೊತ್ತಲ್ಲಿ ರಾಧಾ ಕಾಗದದ ಸಣ್ಣದೊಂದು ಪೊಟ್ಟಣವನ್ನು ತುರುಕಿಸಿದಳು. ಅವನು ಅಚ್ಚರಿಯಿಂದ ಅವಳನ್ನು ದಿಟ್ಟಿಸುತ್ತ ಪೊಟ್ಟಣವನ್ನು ಬಿಚ್ಚಿದ. ಆದರೆ ಆ ವಸ್ತುವನ್ನು ಕಂಡವನ ಮನಸ್ಸು ನೋವಿನಿಂದ ಹಿಂಡಿತು. ಮದುವೆಯ ನಿಯಮದಂತೆ ತಾನು ಅಭಿಮಾನದಿಂದ ಮಾಡಿಸಿ ತನ್ನವಳ ಕೊರಳಿಗೆ ಕಟ್ಟಿದ್ದ ಎರಡು ಪವನಿನ ಕರಿಮಣಿ ಸರವಾಗಿತ್ತದು. ಹೆಂಡತಿಯನ್ನು ವಿಷಾದದಿಂದ ನೋಡಿದವನು, ‘ಏನಿದು ರಾಧಾ…?’ ಎಂದ ಆತಂಕದಿಂದ. ‘ಕಾಣುವುದಿಲ್ಲವಾ? ನೀವು ಕಟ್ಟಿದ ಕರಿಮಣಿ ಮಾರಾಯ್ರೇ! ಕೊಂಡು ಹೋಗಿ ಅಡವಿಟ್ಟು ಅಥವಾ ಮಾರಿ ಬಂದ ಹಣದಿಂದ ಕೆಲಸ ಆರಂಭಿಸಿ. ಮನೆಯೊಂದು ಆದ ಮೇಲೆ ಕರಗಿ ಹೋದ ಚಿನ್ನಾಭರಣವನ್ನೆಲ್ಲ ಮತ್ತೆ ಮಾಡಿಸಿಕೊಂಡರಾಯ್ತು!’ ಎಂದು ಹಗುರವಾಗಿ ಅಂದಳು. ಆದರೂ ಅದನ್ನು ತೆಗೆದುಕೊಳ್ಳಲು ಗೋಪಾಲನ ಮನಸ್ಸು ಒಪ್ಪಲಿಲ್ಲ. ಆದರೆ ಅದನ್ನು ಬಿಟ್ಟು ಅವನಿಗೆ ಬೇರೆ ದಾರಿಯೂ ಕಾಣಲಿಲ್ಲ. ಆದ್ದರಿಂದ ಮರುಮಾತಾಡದೆ ತೆಗೆದುಕೊಂಡು ಹೋಗಿ ಅಡವಿಟ್ಟು ಹಣಪಡೆದ. ದುಡ್ಡು
You cannot copy content of this page