ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಕಾಗೆ ಮುಟ್ಟಿದ ನೀರು

ಪುಸ್ತಕ ಪರಿಚಯ ಕಾಗೆ ಮುಟ್ಟಿದ ನೀರು ಪುಸ್ತಕ:- ಕಾಗೆ ಮುಟ್ಟಿದ ನೀರುಲೇಖಕರು:-ಡಾ.ಪುರುಷೋತ್ತಮ ಬಿಳಿಮಲೆಪ್ರಕಾಶನ:-ಅಹರ್ನಿಶಿ ಪ್ರಕಾಶನ,ಶಿವಮೊಗ್ಗ ಕಾಗೆ ಮುಟ್ಟಿದ ನೀರು ಪುಸ್ತಕ ಅನೇಕ ಓದುಗ ಪ್ರಭುಗಳ ಉತ್ತಮ ಅನಿಸಿಕೆಗಳ ಓದಿ ತೀರಾ ಮನಸ್ಸಾಗಿ ಓದಲು ಹಂಬಲ ಹೆಚ್ಚಾಗಿ,ತೀರಾ ಕಡಿಮೆ ರಿಯಾಯತಿಯಲ್ಲಿ ಪುಸ್ತಕ ಕೊಡುವುದಾದರೆ ಕಳಿಸಿ ಎಂದು ಪ್ರಕಾಶಕರಿಗೆ ಸಂದೇಶವನ್ನು ಕಳಿಸಿದ ಕೂಡಲೇ, ಆಯ್ತು ವಿಳಾಸ ಬರಲಿ ಎಂದು ಅತ್ತಕಡೆಯಿಂದ ಕಳುಹಿಸಿ ಕೊಟ್ಟರು.ಆತ್ಮಕತೆ ನನ್ನಿಷ್ಟದ ಒಂದು ಓದುವಿನ‌ ವಿಭಾಗ. ಪುಸ್ತಕವೂ ಕೈಸೇರಿತು, ಸಿಕ್ಕಗಳಿಗೆ ಮೊದಲು ಬೆನ್ನುಡಿ-ಮುನ್ನುಡಿ ಓದುವ ಹವ್ಯಾಸ ನನ್ನದಾಗಿದೆ. ಬಿಳಿಮಲೆರವರು ಒಬ್ಬ ಎಡಪಂಥೀಯರು, ಚಿಂತಕರೂ, JNU ಯಲ್ಲಿ ಪ್ರಾಧ್ಯಾಪಕರು ಅಂತ ಮಾತ್ರ ತಿಳಿದಿದ್ದ ನನಗೆ, ಕಾಗೆ ಮುಟ್ಟಿದ ನೀರಿನಿಂದ ಅವರೇನೂ ಅಂತ ಮತ್ತಷ್ಟು ಒಳಹೊಕ್ಕು ತಿಳಿಯಲು ಅನುಕೂಲವಾಯಿತು. ಬಂಟಮಲೆಯಿಂದ ದೆಹಲಿವರೆಗೆ ಬೆಳೆದು ದೇಶ-ವಿದೇಶ ಸುತ್ತಿ ಅನೇಕ ಕಾರ್ಯಗಳನ್ನು ಮಾಡಿದ ಇವರ ಎದೆಗಾರಿಕೆಗೆ ಮೆಚ್ಚಲೇಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪಳಗಿಸುತ್ತಿರುವುದು ಸಹ ವಿಶೇಷ. ಬಾಲ್ಯದ ನೆನಪನ್ನು ಹೆಕ್ಕಿ, ಪಿಯು ಫೇಲಾಗಿ ಶಿಕ್ಷಣ ಪೂರೈಸಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಾ, ಬದುಕು ಬಂದಂತೆ ಎದುರಿಸಿ, ಕೊನೆಗೆ ಬದುಕು ಕಟ್ಟಿಕೊಂಡ ಇವರ ಯಶೋಗಾಥೆ ನನಗೆ ಸ್ಪೂರ್ತಿ ಆಗಬಹುದೆಂದರೆ ತಪ್ಪಾಗಲಿಕ್ಕಿಲ್ಲ. ದೊಡ್ಡ-ದೊಡ್ಡ ಮನುಷ್ಯರೆನಿಸಿಕೊಂಡವರ ಮನಸ್ಥಿತಿ ಹೇಗಿರುತ್ತದೆಂದು ಕಂಬಾರರ ಕರಾಳ ಮುಖವನ್ನ ಎತ್ತಿ ಹಿಡಿದು, ಅಮೆರಿಕನ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿನ ಇವರ ಸೇವೆ, ಜೆ-ಎನ್-ಯುನಲ್ಲಿ ಕನ್ನಡ, ಕನ್ನಡಪೀಠ ಕಟ್ಟಿದ್ದು ಒಂದು ದಾಖಲೆ, ಇತಿಹಾಸ. ಮದುವೆ, ದೆಹಲಿಯಲ್ಲಿ ಮನೆ, ಪುನರ್ಜನ್ಮ, ಮಾಟಮಂತ್ರ, ಜಾತಿ, ರೋಗದಲ್ಲೂ ಗೆದ್ದಿದ್ದು ಮೇಲ್ನೊಟ್ಟಕ್ಕೆ ಕಟ್ಟುಕತೆಯಂತಿದ್ದರೂ ಇದೊಂದು ವಿಶೇಷ. ಹೋರಾಟದ ಬದುಕು ಆಪ್ತವಾಗಿ ಓದಿಸಿಕೊಂಡು ಹೋಗುವ ಪುಸ್ತಕ. ನೀರೇ ಗತಿಯಿಲ್ಲದ ಊರಲ್ಲಿ ಕಾಗೆ ಮುಟ್ಟಿದ ನೀರು ನಲ್ಲಿ, ಹಳ್ಳ-ಕೊಳ್ಳದಲ್ಲಿ ಬಂದಿದೆ ನೀವು ಮುಟ್ಟುತ್ತೀರೋ ಇಲ್ಲೋ ಕುಡಿತಿರೋ ಇಲ್ಲ, ಬಳಸುತ್ತಿರೋ ಇಲ್ಲೋ ಅಂತ ಗದ್ಗರ್ತೀತನಾಗಿ ಯಾರೋ ಗದರಿಸಿ ಹಾಡು ಹಾಡಿದಂತೆ ಕಿವಿಯಲ್ಲಿ ಇಂಪರಿಸುತಿದೆ. ಸಕಲ ರೋಗಗಳಿಂದಾನೆ ಬದುಕುತ್ತಿದ್ದಾರೋ ಏನೋ ಅನ್ನಿಸುತ್ತಿದೆ.ಇತ್ತೀಚಿಗೆ ನಿವೃತ್ತರಾಗಿರಬಹುದು ಯಕ್ಷಗಾನದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಕಲಾವಿದ, ಸಂಶೋಧಕ, ಜಾನಪದ ಸಂಶೋಧಕರು, ಕನ್ನಡವಾದಿ, ಮಹಿಳಾಪರರು ಅಪಾರ ಶಿಷ್ಯೋತ್ಸವವನ್ನು ಹೊಂದಿರುವ ನೇರ, ನಿಷ್ಠುರವಾದಿ ಇವರ ಅನುಭವಗಳನ್ನು ಓದುತ್ತಾ ಹೋದರೆ ನಾವೇ ಇದ್ದು ಅನುಭವಿಸುತ್ತಿದ್ದೇವೆನೋ ಅಂತ ಅನ್ನಿಸುವ ಮಟ್ಟಿಗೆ ಆಪ್ತತೆಯ ನಿರೂಪಣೆ ಮುನ್ನುಡಿಯಲ್ಲಿ ಅಚ್ಚುಕಟ್ಟಾಗಿ ಕನ್ನಡಿ ತೋರಿಸಿದ ದಿನೇಶ್ ಅಮಿನ್ ಮಟ್ಟುರವರು, ಒಂದು ರಾತ್ರಿಯಿಡೀ ಯಕ್ಷಗಾನ ನೋಡಿದಂತ ಅನುಭವವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. *********************************** ಶಿವರಾಜ್ ಮೋತಿ

ಕಾಗೆ ಮುಟ್ಟಿದ ನೀರು Read Post »

ಕಾವ್ಯಯಾನ

ಮಳೆಗಾಲದ ಬಿಸಿಲುಕವಿತೆ

ಕವಿತೆ ಮಳೆಗಾಲದ ಬಿಸಿಲು ಅಬ್ಳಿ,ಹೆಗಡೆ ಹಗಲ ಶಿಶು ಶಶಿಯೊಡನೆಆಟದಲಿ ಸೋತು.ಮುಗಿಲುಗಳ ಮರೆಯಲ್ಲಿಅಳುತಿಹನು ಕೂತು.ಮಗುವ ಕಾಣದ ತಾಯಿರಮಿಸಿ ತಾ ಕರೆಯೆ-ಕಣ್ಣೊರೆಸಿ ಹೊರ ಬಂದಮಗು-ನಗುವ ‘ಹೊಳೆಯೆ’. ******************************

ಮಳೆಗಾಲದ ಬಿಸಿಲುಕವಿತೆ Read Post »

ಕಾವ್ಯಯಾನ

ಬದುಕು- ಬವಣೆ

ಕವಿತೆ ಬದುಕು- ಬವಣೆ ಸಹನಾ ಪ್ರಸಾದ್ ಗಂಡ ಹೆಂಡಿರ ಸಂಬಂಧಸಂಸಾರಕ್ಕೆ ಇದೇ ಮೆರಗುಉಫ಼್ಫ಼್ ಹೇಳಲಾಗದು ಅನುಬಂಧಜತೆಗಿರುವರು ಸಾಯುವವರೆಗೂ ಆದರೆ ಇರಲೇಬೇಕಿಲ್ಲ ಪ್ರೀತಿವ್ಯಾವಹಾರಿಕವಾದರೂ ನಡೆದೀತುಇದ್ದರೆ ಸಮಾಜದ ಭೀತಿಪ್ರೀತಿಯೂ ಗಿಲೀಟು ಬತ್ತಿ ಹೋದ ಮೇಲೆ ಪ್ರೀತಿಯ ಚಿಲುಮೆಜತೆಗಿರುವುದೂ ಅನಿವಾರ್ಯವಾದಾಗಮುದುಡಿದ ಮನಸ್ಸುಗಳಿಗೆ ಎಲ್ಲಿದೆ ಒಲುಮೆಕಿತ್ತೇ ಹೋಯಿತೇನೋ ಅನಿಸುತ್ತೆ ಹೃದಯದ ಭಾಗ ನಮ್ಮ ಸಮಾಜದಲ್ಲಿ ಇಲ್ಲ ವಿಚ್ಚೇದನಒಮ್ಮೆ ಜತೆಗೂಡಿದರೆ ಮುಗಿಯಿತು ಬದುಕುಒಳ್ಳೆ ಜನ ಸಿಗದಿದ್ದರೆ ಬದುಕೇ ವೇದನಸಹಿಸಿಕೊಳ್ಳಬೇಕು ಖಾಲಿಯಾಗುವವರೆಗೂ ಸರಕು! *************************

ಬದುಕು- ಬವಣೆ Read Post »

ಇತರೆ, ಜೀವನ

ಬದಲಾದ ಕಾಲಕ್ಕೆ ಹಳ್ಳಿಯ ಬದುಕು

ಲೇಖನ ಬದಲಾದ ಕಾಲಕ್ಕೆ ಹಳ್ಳಿಯ ಬದುಕು ಸರಿತಾ ಮಧು ಹಳ್ಳಿಗಳ ದೇಶವೇ ನಮ್ಮದು. ಮೊದಲಾದರೆ ಸುಂದರ ಸ್ವರ್ಗದಂತೆ ಇದ್ದವು. ಕೂಡು ಕುಟುಂಬ, ಅದಕ್ಕೆ ಹೊಂದಿಕೊಂಡಂತೆ ಗದ್ದೆ- ತೋಟಗಳು, ರಕ್ತ ಸಂಬಂಧಗಳು ಹಾಗೂ ಮಾನವೀಯ ನೆಲೆಯಲ್ಲಿ ಒಟ್ಟಿಗೆ ಸೇರಿ ನಲಿಯುತ್ತಿದ್ದ ಸಂದರ್ಭಗಳು. ಮೂರು – ನಾಲ್ಕು ತಲೆಮಾರಿನ ಅನುಭವಗಳ ಬೆರೆತ ಸಂಸಾರ. ಮನೆಗಳಲ್ಲಿ ಆಡಂಬರವಿರಲಿಲ್ಲ ಮನಸಿನಲ್ಲಿ ಆತ್ಮೀಯತೆ ಇತ್ತು. ಅವಿಭಕ್ತ ಭಾವ ರಕ್ತಗತವಾಗಿ ಮುಂದುವರೆಯುತ್ತಿತ್ತು. ಹಣಕಾಸಿಗೆ ಅಡಚಣೆಯಿತ್ತು ಅದರ ಹೊರತು ಪರಿಶುದ್ಧವಾದ  ಬದುಕಿಗಲ್ಲ. ನಗರ ಜೀವನಕ್ಕೆ ಮನಸೋತ ಕೆಲವು ವ್ಯಕ್ತಿಗಳು ಮಾತ್ರ ಈ ವ್ಯವಸ್ಥೆಯ ವಿರೋಧಿಸಿ ಹೊರನಡೆದಿರಬಹುದು. ಶಾಲಾ ಶಿಕ್ಷಣದ ಜೊತೆ ಜೊತೆಗೆ ಹಿರಿಯರ ಮೂಲಕ ಅನೌಪಚಾರಿಕವಾಗಿ ಜೀವನ ಮೌಲ್ಯಗಳು ಒಟ್ಟುಗೂಡಿ ಮುಂದಿನ ಬದುಕಿಗೆ ಮೆರುಗು ತರುತ್ತಿದ್ದವು.ಹಳ್ಳಿಯ ಶಾಲೆಯಲ್ಲಿ ಕಲಿತ ನನ್ನನ್ನೂ ಒಳಗೊಂಡಂತೆ ಸಾವಿರಾರು ಕನಸುಗಳಿಗೆ ರೆಕ್ಕೆ ಹಚ್ಚಿದ್ದು ನಮ್ಮ ಹಳ್ಳಿಯೇ . ಇಲ್ಲಿಗೆ ಸುಮಾರು ಐವತ್ತು – ಅರವತ್ತು ವರ್ಷಗಳ ಹಿಂದಿನ ಜೀವನ ಬಹಳ ಕಠಿಣವಾಗಿತ್ತು. ಹೀಗಂತ ನನ್ನ ಅಪ್ಪ ಲೆಕ್ಕವಿಲ್ಲದಷ್ಟು ಸಲ ನಮ್ಮ ಬಳಿ ಹೇಳಿದ್ದಾರೆ. ಅವರು ವಾಸಿಸುತ್ತಿದ್ದ ಮನೆಯಲ್ಲಿ ಕನಿಷ್ಟ ಮೂವತ್ತು ಮಂದಿ ಇರುತ್ತಿದ್ದರು. ಊಟವೆಂದರೆ ಅವರಿಗೆ ಮೂಲಭೂತ ಅವಶ್ಯಕತೆ ಆಗಿತ್ತು. ಕಾರಣ ಈಗಿನಷ್ಟು  ಸುಖ ಸಮೃದ್ಧಿಯ ಭೋಜನವಿರುತ್ತಿರಲಿಲ್ಲ. ಅನ್ನದ ಊಟವೆಂದರೆ ಅದು ಹಬ್ಬ ಹರಿದಿನಗಳಿಗೆ ಮಾತ್ರವಂತೆ. ರಾತ್ರಿ ರೊಟ್ಟಿ ಊಟವಾದರೆ ಒಂದೆರಡು ರೊಟ್ಟಿಗಳನ್ನು ಪಲ್ಯದ ಸಮೇತ ಸುತ್ತಿ ಜೋಡಿಸಿಟ್ಟ  ಜೋಳದ ಚೀಲಗಳ ನಡುವೆ ಬಚ್ಚಿಡುತ್ತಿದ್ದರಂತೆ.ಅದು ರಹಸ್ಯವಾಗಿ ಬೆಳಗಿನ ತಿಂಡಿಗಾಗಿ.ಶಾಲೆಗೆ ಹೋಗುವಾಗ ತಿನ್ನುವುದಕ್ಕಾಗಿ. ಕಾರಣ ಈಗಿನಂತೆ ಮಕ್ಕಳ ಕೈತಿಂಡಿ ಇರುತ್ತಿರಲಿಲ್ಲ. ಹಾಗಾಗಿಯೇ ಅವರು ಸದೃಢ ವಾಗಿದ್ದಿರಬೇಕು. ಬಟ್ಟೆಗಳೂ ಕೂಡ ಅತಿ ಕಡಿಮೆ . ಆದರೆ ನಮ್ಮ ಈಗಿನ ಬದುಕು ವಿಭಿನ್ನವಾದ ನೆಲೆ ಕಂಡುಕೊಂಡಿದೆ. ಎಲ್ಲವೂ ಕೈಗೆಟುಕುವ ಅಂತರದಲ್ಲೇ ಇವೆ . ಸಾವೂ ಕೂಡಾ ಅಲ್ಲವೇ? ನಮ್ಮ ಹಿಂದಿನ ಹಳ್ಳಿ ಹಾಡು ಪಾಡು ಕಷ್ಟಕರ ವಾಗಿದ್ದಿರಬಹುದು. ಆದರೆ ಈಗಿನಂತೆ ಇರಲಿಲ್ಲ. ಎಲ್ಲವೂ ನಗರೀಕರಣದ   ಪ್ರಭಾವ . ಅನುಕರಿಸಿದ್ದು ತುಸು ಹೆಚ್ಚೇ ಆಯಿತಲ್ಲವೇ? ಆಧುನಿಕತೆಯ ಸೋಗಿಗೆ ಮುಗ್ಧ ಜನರು ಗುರುತೇ ಸಿಗದಷ್ಟು ಬದಲಾದರು. ಕುಟುಂಬಗಳು ಒಡೆದವು ಹಾಗೆಯೇ ಭಾವನೆಗಳೂ. ಮೊದಲೆಲ್ಲ ಬೀದಿಯಲ್ಲಿ ಜಗಳಗಳು ಸಾಮಾನ್ಯವಾಗಿ ಇದ್ದವು. ಅಲ್ಲಿಗೆ ಮಾತು ನೇರವಾಗಿ ಮುಗಿಯುತ್ತಿದ್ದವು. ಆದರೆ ಈಗ ಮುಸುಕಿನೊಳಗಿನ ಗುದ್ದಾಟ. ಮಾತುಗಳಿಲ್ಲದ ಒಳಗೊಳಗಿನ ಕಿಚ್ಚುಗಳು, ಸಲ್ಲದ ಮಾತುಗಳು. ನಿಜಕ್ಕೂ ಹಳ್ಳಿಗಳು ಬದಲಾಗಬಾರದಿತ್ತು. ಸೌಕರ್ಯಗಳಿಗೆ ಮನಸೋತ ಮಂದಿ ನೆಮ್ಮದಿಯನ್ನು ಬಲಿನೀಡಿದ್ದಾರೆ. ಹೊಲಗದ್ದೆಗಳು ಕ್ರಮೇಣ ತೋಟಗಳಾದವು. ಆಹಾರ ಬೆಳೆಗಳು ಮರೆಯಾಗಿ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡಲಾಯಿತು. ಮೊದಲಾದರೆ ವಸ್ತುಗಳ ವಿನಿಮಯದ ಮೂಲಕವೇ ಜೀವನ ನಡೆಯುತ್ತಿತ್ತು. ಮನೆಯಲ್ಲಿ ಎಲ್ಲವೂ ಚೀಲದಲ್ಲಿ , ಹಗೇವು ಅಥವಾ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದವು‌. ಆದರೆ ಈಗ ಹಳ್ಳಿಗಳಲ್ಲಿ ಭತ್ತ, ರಾಗಿ, ಜೋಳ, ಅವರೆ, ಉದ್ದು, ಕಡಲೆ ಹೀಗೆ ಬೆಳೆಗಳೇ ಇಲ್ಲ. ಮನೆಯಲ್ಲಿ ದನಕರುಗಳೂ ಇಲ್ಲ. ಸಾಕುವವರಿಲ್ಲದೇ ಎಲ್ಲವೂ ಮಾರಲ್ಪಟ್ಟವು. ಸ್ವಂತಿಕೆಯೂ ಬಿಕರಿಯಾಯಿತು ಈ ನಡುವೆ. ಎತ್ತುಗಳಿಲ್ಲದ ಜಾಗಕ್ಕೆ ಟ್ರ್ಯಾಕ್ಟರ್ಗಳು, ಎತ್ತಿನ ಬಂಡಿಯ ಜಾಗಕ್ಕೆ ಕಾರುಗಳು ಮನೆಯನ್ನು ಸೇರಿದವು. ಎಲ್ಲವೂ ಬಹಳ ಬೇಗ ಬದಲಾಗಿ ಬಿಟ್ಟಿತು. ಜೀವನ ಶೈಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಕರೆದೊಯ್ದಿತು. ಬಣ್ಣ ಬಣ್ಣದ ಬಟ್ಟೆಗಳಂತೆ ಹೊದಿಕೆ ಮಾತ್ರ ಬದಲಾಗಲಿಲ್ಲ ಮನುಷ್ಯನೇ ಬದಲಾವಣೆಗೆ ಒಳಪಟ್ಟನು. ಕಾರಣ ಬದಲಾವಣೆ ಜಗದ ನಿಯಮ , ಏನಂತೀರಿ? ಆಹಾರ – ವಿಹಾರ , ಉಡುಗೆ- ತೊಡುಗೆ, ಮನೆ- ಸಂಸಾರ ಎಲ್ಲವೂ ಸಾರ್ವಜನಿಕವಾಗಿ ಪ್ರದರ್ಶನಗೊಂಡವು. ನಾಲ್ಕು ಗೋಡೆಗಳ ನಡುವಣ ಬದುಕು ನಾಲ್ಕು ದಿಕ್ಕುಗಳಲ್ಲಿ ಪ್ರಸಾರವಾಗಿದ್ದು ನಮ್ಮ ಸಾಧನೆಯೇ? ಹಳ್ಳಿಗಳಾದ್ರೂ ಮೊದಲಿನಂತೆ ಇರಬೇಕಿತ್ತು ಅಂತ ನನಗೆ ತುಂಬಾ ಸಲ ಅನಿಸಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಅಮ್ಮನ ಅಡುಗೆಯ ವಿಷಯದಲ್ಲಿ ನಾನೂ ತುಂಬಾ ಮಿಸ್ ಮಾಡಿಕೊಳ್ಳಲು ಕಾರಣ ಇದೆ. ಅಮ್ಮ ಒಲೆಯಲ್ಲಿ ಅಡುಗೆ  ಮಾಡುತ್ತಿದ್ದ ದಿನಗಳವು. ಎಷ್ಟು ರುಚಿಯಾಗಿರುತ್ತಿತ್ತು ಅಂದರೆ ಈಗಲೂ ಬಾಯಿಯಲ್ಲಿ ನೀರೂರುತ್ತದೆ.ನಮ್ಮ ಮನೆಗೆ ಸದಾ ಬರುತ್ತಿದ್ದ ನನ್ನ ಅಪ್ಪನ ಸೋದರಮಾವ ಕೇವಲ ಸಾಂಬಾರನ್ನೇ ಸೊರ್ ಎಂದು ಕುಡಿದುಬಿಡುತ್ತಿದ್ದರು. ಇದಲ್ಲವೇ ಹಳ್ಳಿಯ ಊಟದ ಗಮ್ಮತ್ತು‌. ಈಗೆಲ್ಲಿದೆ ನಮಗೆ ಒಲೆ ಹಚ್ಚಿ ಅಡುಗೆ ಮಾಡುವ ಸಮಯ ಗ್ಯಾಸ್ ಮೇಲೆ ಕುಕ್ಕರ್ ಸೀಟಿ ಒಡೆಸಿ , ರುಬ್ಬುವ ಯಂತ್ರದಲ್ಲಿ ನುಣ್ಣಗೆ ಮಾಡಿ  ಜಠರಕ್ಕೆ ಕೆಲಸವನ್ನು ನೀಡದೇ ಬೊಜ್ಜು ಬರಿಸಿಕೊಂಡಿದ್ದು. ಬರೆಯುತ್ತಾ ಹೋದರೆ ಹಳ್ಳಿಯ ಜೀವನದ ಸೊಗಸಿಗೆ ಪದಗಳೇ ಕಡಿಮೆ. ನನಗಂತೂ ಹೀಗೆ ಹಲವಾರು ಬಾರಿ ಅನಿಸಿದ್ದು ಹೋದವರೆಲ್ಲ ಪುಣ್ಯಮಾಡಿದ್ದಿರಬೇಕು. ಸಂಪೂರ್ಣ ಜೀವನವನ್ನು ಅನುಭವಿಸಿದ್ದಾರೆ‌. ಮೊದಲ ಹಳ್ಳಿಯ ಬದುಕು ಮತ್ತೊಮ್ಮೆ ಬಾರದೇ? ******************************

ಬದಲಾದ ಕಾಲಕ್ಕೆ ಹಳ್ಳಿಯ ಬದುಕು Read Post »

ಕಾವ್ಯಯಾನ

ರಚ್ಚೆ ಹಿಡಿದ ಮನ

ಕವಿತೆ ರಚ್ಚೆ ಹಿಡಿದ ಮನ ಸ್ವಭಾವ ಕೋಳಗುಂದ ಮಳೆ ನಿಂತ ನೆಲದಲ್ಲಿನಡೆಯುತ್ತಲೇ ಇದ್ದಳುಗುರುತು ಮಾಡಿ ಗುರಿಯೆಡೆಗೆ ಹಸಿಟ್ಟಿಗೆ ಬಿಸಿ ನೀರು ಸುರುವಿತಟ್ಟಿ ಬೆಳರ ಚಿತ್ರದ ಹಚ್ಚೆಬೆಂದ ರೊಟ್ಟಿ ಹಸಿದ ಹೊಟ್ಟಗೆ ಹರಗಿದ ಹೊಲಕ್ಕೆ ಬೀಜ ಬಿತ್ತಿನೀರು ಹಾಯಿಸಿ ಕಳೆ ಕಿತ್ತುಕೊಯ್ಲಿಗೆ ಕಾದು ರಾಶಿ ಪೈರಾಗಿಸಿದ್ದ ರಚ್ಚೆ ಹಿಡಿದ ಕೂಸುನೆಟಿಗೆ ತೆಗೆದು ನೀವಾಳಿಸಿರಂಚು ಬೂದಿಯ ತಿಲಕದ ಕೈಚಳಕ ಗುಡಿಯ ಗಂಟೆಯ ನಾದಕ್ಕೆತಲೆದೂಗಿದ ಎಳೆ ಜೋಳದ ತೆನೆನೊರೆ ಉಕ್ಕಿ ಕೆಚ್ಚಲ ತಂಬಿಗೆ ಸೋರಿತ್ತು ಕೊಟ್ಟಗೆಯ ಕರು ಚಂಗನೆ ಎಗರಿಅಂಗಳದ ರಂಗೋಲಿ ಗೋಮಮಯಅಜ್ಜಿಗೆ ಕೈಲಾಸ ತೀರ್ಥ ಕೋಲು ಕನ್ನಡಕದ ಅಜ್ಜಊರುರು ಅಲೆದು ಊರು ಕಟ್ಟಿದಮೊಮ್ಮೊಗನು ಮನೆಯೊಡೆದತಲೆ ಬಾಗಿಲು ಸೀಳಿ *****

ರಚ್ಚೆ ಹಿಡಿದ ಮನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಸ್ಮಿತಾ ಭಟ್ ಒಲವಿನ ನಿರೀಕ್ಷೆಯ ಬದುಕ ಮುಗಿಸಿದ್ದೇನೆನಲಿವಿನ ದೀಪದೆದುರು ಕಣ್ಮುಚ್ಚಿ ಕುಳಿತಿದ್ದೇನೆ/ ಯಾರಿಗೆ ಯಾರೂ ಆಸರೆಯಲ್ಲ ಇಲ್ಲಿಸೆರೆಯಾದ ಉಸಿರಿನ ಕೀಲಿ ತೆಗೆದಿದ್ದೇನೆ / ಕ್ಷಮಿಸು ಕಣ್ಣತೇವಕ್ಕೆ ನನ್ನ ಹೊಣೆ ಮಾಡದಿರುಕರವಸ್ತ್ರ ಇರಿಸಿಕೊಳ್ಳುವ ರೂಢಿ ಮರೆತಿದ್ದೇನೆ/ ಮೊಗಕೆ ಒಳಗುದಿಯ ತೋರುವ ಇರಾದೆ ಇಲ್ಲಬರಿದೇ ತರತರದ ಮಾತಾಗಿ ನಗುತ್ತಿದ್ದೇನೆ/ ಬಲಹೀನ ಮನಸು ಏನೂ ಸಾಧಿಸದು ಮಾಧವಾಭವಿತವ್ಯದ ಬಾಗಿಲಿಗೆ ತೋರಣವ ಕಟ್ಟಿದ್ದೇನೆ/ *********************************

ಗಝಲ್ Read Post »

ಕಾವ್ಯಯಾನ

ಆಯ್ಕೆ ನಿನ್ನದು

ಕವಿತೆ ಆಯ್ಕೆ ನಿನ್ನದು ಸುಮಾ ಆನಂದರಾವ್ ಜುಳುಜುಳು ಹರಿವ ಝರಿ ತೊರೆಗಳುನಯನ ಮನೋಹರ ಪರ್ವತ ಶಿಖರಗಳುಬಣ್ಣ ಬಣ್ಣದ ಹೂ ಗೊಂಚಲುಗಳುಹೀರಿದ ಮಕರಂದದಿ ಮಧು ಪಾತ್ರೆಯಸಿಹಿ ತುಂಬಿಸಿ ಝೇಂಕರಿಪ ದುಂಬಿಗಳುಕಣ್ಮನ ಸೂರೆಗೊಳ್ಳುವ ಹಚ್ಚ ಹರಿದ್ವರ್ಣಒಳನುಸುಳಲು ಹೊಂಚುಹಾಕುತಿಹ ಸೂರ್ಯಕಿರಣಒಂದೇ ಎರೆಡೇ ಗೋವರ್ಧನ ಗಿರಿ ಸಂಪತ್ತು ಶ್ಯಾಮನೇಕೆಭಾರದ ಗಿರಿಯ ಒಂದೇ ಬೆರಳಲಿ ಹಿಡಿದ ?ಹಗುರಾದ ಕೊಳಲನೇಕೆ ಎರಡು ಕೈಯಲಿ ಪಿಡಿದ!ಅಚ್ಚರಿಯೊಡನೆ ದಿವ್ಯ ಸತ್ಯವೊಂದಿಹುದುಗಿರಿಯಲಿ ಸೌಂದರ್ಯ ತುಂಬಿಕೊಂಡರೂಗಾಢ ಕತ್ತಲು, ಭಯಂಕರ ಮೃಗಗಳು, ಸರೀಸೃಪಗಳುಓಡಲಾಳದಿ ಇವೆಯಲ್ಲವೇ?ಕೊಳಲಾದರೋ ತನ್ನೊಳಗೆ ನುಗ್ಗಿದ ಶ್ವಾಸವನ್ನು ಸಹ ಹಿಡಿದಿಡದೆಸುಶ್ರಾವ್ಯವಾಗಿ ಕಿವಿಗೆ ಇಂಪು ನೊಂದ ಮನಕೆ ತಂಪು ನೀಡುವುದು ನಿರಾಡಂಬರ ನಿಷ್ಕಲ್ಮಶವ ಅನಾವರಣಗೊಳಿಸುವಕೊಳಲಾಗುವೆಯ ಶ್ಯಾಮ ನಿನ್ನ ಭದ್ರವಾಗಿಎರೆಡು ಕೈಯಲಿ ಪಿಡಿವಗಿರಿಯಾಗುವೆಯ ಆಗಲು ಹಿಡಿವ ಆದರೆಎತ್ತಿ ಆಗಸದೆತ್ತರಕೆ ಒಂದೇ ಬೆರಳಲಿಆಯ್ಕೆ ನಿನ್ನದು *****************************************

ಆಯ್ಕೆ ನಿನ್ನದು Read Post »

ನಿಮ್ಮೊಂದಿಗೆ

ಒಂದು ಲಸಿಕೆ ಹನಿ

ಕವಿತೆ ಒಂದು ಲಸಿಕೆ ಹನಿ ಕೊಟ್ರೇಶ್ ಅರಸೀಕೆರೆ ತಮ್ಮದಲ್ಲದ ತಪ್ಪಿಗೆ ಜೀವ ತೆತ್ತವರಿಗಾಗಿಬೂದಿ ಮುಚ್ಚಿದ ಕೆಂಡದ ಬದುಕುಒಡಲಲಿಟ್ಟುಕೊಂಡವರಿಗಾಗಿಬರಿಗಾಲಲ್ಲಿ ನಡೆದ ಪುಟ್ಟ ಕಂದಮ್ಮಗಳಿಗೆನನ್ನ ಆತ್ಮಗೌರವ ಬಿಟ್ಟು ಕೇಳಿಕೊಳ್ಳತ್ತೇನೆಒಂದು ಲಸಿಕೆ ಹನಿಯನ್ನು ಚುಮುಕಿಸಿನಿಮಗಾಗಿಯೇ ಓಟು ಒತ್ತುತ್ತೇನೆ! ರಾತ್ರಿಯೆಲ್ಲ ಕೆಮ್ಮಿ ಉಸಿರಿಗಾಗಿ ಹೋರಾಡಿಪ್ರಾಣ ಬಿಟ್ಟವರಿಗಾಗಿಮಕ್ಕಳನ್ನು ಮನೆಯಲ್ಲಿರಿಸಿ ಸೇವೆಗೈದ ವೈದ್ಯದಾದಿಯರಿಗಾಗಿಸೇವೆ ಮಾಡುತ್ತಲೇ ಪ್ರಾಣ ಬಿಟ್ಟವರ ಪರವಾಗಿಮಂಡಿಯೂರಿ ಕೇಳಿಕೊಳ್ಳುತ್ತೇನೆ ಒಂದು ಹನಿಲಸಿಕೆ ಚುಮುಕಿಸಿ ನಿಮಗಾಗಿ ಓಟು ಒತ್ತುತ್ತೇನೆ! ನಾನು ಯಾರಲ್ಲೂ ಹೇಳುವುದಿಲ್ಲ ನೀವು ಪರಮ ದ್ರೋಹಿಗಳೆಂದುನಾನು ಯಾರಲ್ಲೂ ಹೇಳುವುದಿಲ್ಲ ನೀವುಠಕ್ಕ ದೇಶಭಕ್ತರೆಂದುನಾನು ಯಾರಲ್ಲೂ ಹೇಳುವುದಿಲ್ಲ ನೀವುವಂಚಕರೆಂದುಒಂದು ಹನಿಯ ಲಸಿಕೆ ಚುಮುಕಿಸಿ ಬಿಡಿನನ್ನ ಓಟು ನಿಮಗಾಗಿ ಎಂದು! ನಾನೂ ವಂಚಿಸಲು ಸಿದ್ಧನಿದ್ದೇನೆ ಜೀವಕ್ಕಾಗಿನಾನೂ ಮೋಸ ಮಾಡಲು ಸಿದ್ಧನಿದ್ದೇನೆ ಮಡಿದ ಮುಗ್ಧರಿಗಾಗಿನಾನೂ ಪರಮ ಪಾಪಿಯಾಗಲು ಸಿದ್ಧನಿದ್ದೇನೆ ನನ್ನ ಹತ್ತು ಬೆರಳುಗಳಲ್ಲೂ ಓಟು ಒತ್ತುತ್ತೇನೆಒಂದು ಹನಿಯ ಲಸಿಕೆ ಚುಮುಕಿಸಿ ಬಿಡಿ! ನಾನು ಓಟು ಒತ್ತುತ್ತಲೇ ಇರುವೆನಿಮ್ಮ ದಾಹ ತೀರಿಸಿಕೊಳ್ಳಿಬೇಡಿಕೊಳ್ಳುತ್ತೇನೆ ಈ ಜನಾಂಗದಉಳಿವಿಗಾಗಿ ಒಂದು ಲಸಿಕೆ ಹನಿಯಚುಮುಕಿಸಿ ಬಿಡಿ! *****************************

ಒಂದು ಲಸಿಕೆ ಹನಿ Read Post »

ಕಾವ್ಯಯಾನ

ಈ ರೋಗ…

ಕವಿತೆ ಈ ರೋಗ… ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೊರಗೆ ಕಾಯುತ್ತ ಇದ್ದಾನೆನನಗಾಗಿಕ್ಲಿನಿಕ್ ರಷ್ ಆಗಿದೆಹೇಳಿ ಕೇಳಿಕೋವಿಡ್ ಕಾಲ!ಆತನ ಮನೆಗೆ ಹೋಗಿಬರಬೇಕಿದೆ… ಬೈಕ್ ಹತ್ತಿ ಹೊರಟಾಗಹೊರಟಾಗ ಗಾಢ ಸಂಜೆನಾ ಮುಂದು ಆತ ಹಿಂದೆಯಾರದೋ ಜಮಾನಿನಕಾಲುದಾರಿ ಹಿಡಿದುಹಳ್ಳಿಯಕಡೆ… ಝಗಮಗವಿಲ್ಲದ ಊರಲ್ಲಿಎಲ್ಲೆಲ್ಲೂ ಮಬ್ಬುಗತ್ತಲೆಇಲ್ಲಿ ಈ ಹೆಂಚಿನಮನೆಯೊಳಗೂ ಅರೆಜೀವದಮಿಣುಕುದೀಪಅದೇ ಅವಸ್ಥೆಯಲಿನರಳುತ್ತಮೂಲೆಯ ಮಂಚವೊಂದರಮೇಲುರುಳಿದ್ದವಯೋವೃದ್ಧಆಗಲೇ ಅರೆಜೀವದ ಸೊಪ್ಪು…ಮೂಳೆ ಚಕ್ಕಳ!ಜೊತೆಗೆ ಬಿಡುವಿಲ್ಲದ ಕೆಮ್ಮಿಗೆಉಬ್ಬಿಳಿವ ಹೊಕ್ಕುಳ…ಮೈ ಕೆಂಪಾದ ಜ್ವರದ ತಾಪಉಲ್ಬಣಿಸಿತ್ತುಅಷ್ಟರಲ್ಲಿ ಕ್ಷಯ ಆಸ್ಥಿತಿಗೆ!ಎಂಥ ರೋಗ ಈಜನದ ನಡುವೆ!ಎಲ್ಲಿ ಕೊಡಲಿ ಮದ್ದುಇಲ್ಲಿ ಇಂಥ ಮನೆಯಲ್ಲಿಇಂಥ ರೋಗಿಗೆತೊಟ್ಟಿಮನೆಯಂಥಈ ಕುಟುಂಬದಲ್ಲಿ!ಸಾವಿಗೆ ಒಂದೇ ಒಂದಡಿಮೇಲಿನ ತ್ರಿಶಂಕು ರೋಗಿ!ಈ ಸಂಕಟದ ನನ್ನಈ ಗತಿಯಾವ ಆಸ್ಪತ್ರೆಗೂಕಳಿಸಲೂ ಆಗದ ಸ್ಥಿತಿಏನು ವೃತ್ತಿಯೋಎಷ್ಟರ ವೈದ್ಯವೋ ಏನೋ…ಅಂತೂ ವಿಧಿಯೆಂದುಹೇಳಿದೆ…ಬೈಕ್ ಏರಿ ಹೊರಟೆ… **********************************

ಈ ರೋಗ… Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಪಡುವಣ ನಾಡಿನ ಪ್ರೇಮವೀರ ಪಡುವಣ ನಾಡಿನ ಪ್ರೇಮವೀರಇಂಗ್ಲಿಷ್ ಮೂಲ : ಜೆ.ಎಂ. ಸಿಂಜ್ ಕನ್ನಡಕ್ಕೆ : ಡಾ.ಬಸವರಾಜ ನಾಯ್ಕರ್ಗೀತಾಂಜಲಿ ಪಬ್ಲಿಕೇಷನ್ಸ್ಪ್ರಕಟಣಾ ವರ್ಷ : ೨೦೦೮ಬೆಲೆ : ರೂ.೧೨೫ಪುಟಗಳು : ೨೪೦ ಐರ್‌ಲ್ಯಾಂಡಿನ ಪ್ರಸಿದ್ಧ ನಾಟಕಕಾರ ಜೆ.ಎಂ.ಸಿಂಜ್‌ನ ಐದು ನಾಟಕಗಳು ಇಲ್ಲಿವೆ. ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದ ಸಿಂಜ್ ತನ್ನ ಬಾಲ್ಯವನ್ನು ದಕ್ಷಿಣ ಡಬ್ಲಿನ್‌ನ ಗುಡ್ಡಗಾಡು ಪ್ರದೇಶದಲ್ಲಿ ಕಳೆದಿದ್ದ. ಆದ್ದರಿಂದಲೇ ನಿಸರ್ಗ ಸೌಂದರ್ಯದ ಬಗ್ಗೆ ಅಪಾರ ಒಲವನ್ನು ಅವನು ಬೆಳೆಸಿಕೊಂಡ. ಅವನ ನಾಟಕಗಳಲ್ಲಿ ಹಳ್ಳಿಯ ಬದುಕಿನ ಸನ್ನಿವೇಶಗಳು ಮತ್ತು ವರ್ಣನೆಗಳು ಯಥೇಚ್ಛವಾಗಿ ಕಾಣ ಸಿಗುತ್ತವೆ.  ಸಿಂಜ್ ಬದುಕಿದ್ದು ಮೂವತ್ತೇಳು ವರ್ಷಗಳ ಕಾಲ ಮಾತ್ರ. ಅದರೊಳಗೆ ಒಟ್ಟು ಆರು ನಾಟಕಗಳನ್ನು ಅವನು ಬರೆದ. ಅವುಗಳಲ್ಲಿ ಐದು ನಾಟಕಗಳು ಐರಿಷ್ ನ್ಯಾಷನಲ್ ಥಿಯೇಟರಿನಲ್ಲಿ ಪ್ರದರ್ಶನಗೊಂಡವು. ಅವು ಶಾಡೋ ಆಫ್ ದ ಗ್ಲೆನ್ , ರೈಡರ‍್ಸ್ ಟು  ದ ಸೀ, ದಿ ವೆಲ್ ಆಫ್ ದಿ ಸೇಂಟ್ಸ್, ದ ಪ್ಲೇಬಾಯ್ ಆಫ್ ದಿ ವೆಸ್ಟೆರ್ನ್ ವರ್ಲ್ಡ್ ಮತ್ತು ದಿ ಡೀಡ್ ಆಫ್ ದಿ ಸಾರೋಜ್. ಈ ಐದೂ ನಾಟಕಗಳನ್ನು ಬಸವರಾಜ ನಾಯ್ಕರ್ ಅವರು ಕನ್ನಡದ ಜಾಯಮಾನಕ್ಕೆ ಹೊಂದಿಕೊಳ್ಳುವಂತೆ  ರೂಪಾಂತರಿಸಿದ್ದಾರೆ.  ದಿ ಶಾಡೋ ಆಫ್ ದಿ ಗ್ಲೆನ್( ಕೊಳ್ಳದ ನೆರಳು) ನಾಟಕವು ಒಂದು ಹಳ್ಳಿಯ ಒಂಟಿ ಮನೆಯಲ್ಲಿ ನಡೆಯುವ ಘಟನೆಯನ್ನು ಚಿತ್ರಿಸುತ್ತದೆ. ಈ ನಾಟಕವು ಸಿಂಜ್‌ನ ಆತ್ಮ ಚರಿತ್ರೆಯಂತಿದೆ. ಸಾವಿನ ಬಗೆಗಿನ ಆತನ ಭಯವನ್ನು ಇದು ಚಿತ್ರಿಸುತ್ತದೆ. ಹೊರನೋಟಕ್ಕೆ ಇದು ಹಾಸ್ಯನಾಟಕದಂತೆ ಕಂಡರೂ ಹೆಣ್ಣಿನ ಮನಸ್ಸನ್ನು ಕಾಡುವ ಅಭದ್ರತೆಯ ಭಾವನೆ ಮತ್ತು ಹೆಣ್ಣು ಸದಾ ಗಂಡಿನ ಮೇಲೆ ಅವಲಂಬಿಸುವ ಹಾಗೂ ಗಂಡು ಅವಳ ಬಗ್ಗೆ ತೋರಿಸುವ ತಾತ್ಸಾರದಿಂದಾಗಿ ಸಂಭವಿಸುವ ದುರಂತಗಳನ್ನು ಅದು  ಚಿತ್ರಿಸುತ್ತದೆ. ‘ರೈಡರ‍್ಸ್ ಟು ದ ಸೀ’( ಸಾವಿನೆಡೆಗೆ ಸವಾರಿ) ನಾಟಕವು ಸಿಂಜ್ ವಾಸಿಸಿದ್ದ ಆರನ್ ಎಂಬ ಹಳ್ಳಿಯ ಹಿನ್ನೆಲೆಯನ್ನು ಹೊಂದಿದೆ. ಅಲ್ಲಿನ ಒಂದು ಕುಟುಂಬದಲ್ಲಿ ಜನಿಸುವ ಎಲ್ಲ ಮಕ್ಕಳೂ ಸಮುದ್ರ ಪಾಲಾಗಿ, ತಾಯಿ ಅನುಭವಿಸುವ ಯಾತನೆಯನ್ನು ಚಿತ್ರಿಸುತ್ತದೆ. ಇಲ್ಲೂ ಸಿಂಜ್‌ನ ಸಾವಿನ ಭಯವೇ ಇದೆ.  ‘ದ ಥಿಂಕರ‍್ಸ್ ವೆಡ್ಡಿಂಗ್ ‘( ಕಲಾಯಿಗಾರನ ಮದುವೆ) ಎನ್ನುವುದು ಒಂದು ವೈನೋದಿಕ. ಇಲ್ಲಿನ ಮುಖ್ಯ ಪಾತ್ರಗಳು ಐರಿಷ್ ಕಲಾಯಿಗಾರರು. ‘ದ ಪ್ಲೇಬಾಯ್ ಆಫ್ ದ ವೆಸ್ಟೆರ್ನ್ ವರ್ಲ್ಡ್’ (ಪಡುವಣ ನಾಡಿನ ಪ್ರೇಮವೀರ) ಬಹಳ ಪ್ರಸಿದ್ಧ ನಾಟಕ.  ಇದು ವೈನೋದಿಕದಂತೆ ಕಂಡರೂ ಒಂದು ದುರಂತ ಕಥೆ. ಕ್ರಿಸ್ತಿ ಮ್ಯಾಹನ್ ಎಂಬ ಯುವಕ ಹೇಳುವ ಸುಳ್ಳುಗಳಿಂದ  ಅವನು ಹೋಗುವ ಸಾರಾಯಿ ಅಂಗಡಿಯ ಮಾಲೀಕ ಫ್ಲಾಹರ್ಟಿಯ ಮಗಳು ಪೆಗೀನ್ ಮೈಕಳನ್ನು ಮದುವೆಯಾಗುವ ಅವಕಾಶವನ್ನು ಅವನು ಕಳೆದುಕೊಳ್ಳುತ್ತಾನೆ. ಕಾನೂನಿನ ಭಯದಿಂದಾಗಿ ಅವನೂ ಊರು ಬಿಟ್ಟು ಹೋದ ನಂತರ ಅವನ ವ್ಯಕ್ತಿತ್ವದ ಪ್ರಭಾವದಿಂದ ಅವನಲ್ಲಿ ಮೋಹಿತಳಾದ ಪೆಗೀನ್ ದುಃಖಿಸುತ್ತಾಳೆ.  ಕೊನೆಯ ನಾಟಕ ‘ದ ವೆಲ್ ಆಫ್ ದ ಸೇಂಟ್ಸ್’ ( ಜೋಗೀಭಾವಿ) ಮೂರು ಅಂಕಗಳಿರುವ ಒಂದು ನಾಟಕ.  ಮಾರ್ಟಿನ್ ಮತ್ತು ಮೇರಿ ಡೌಲ್ ಎಂಬ ಕುರುಡ ದಂಪತಿಗಳು ಸಂತನೊಬ್ಬನ ಸಹಾಯದಿಂದ ದೃಷ್ಟಿ ಪಡೆದುಕೊಂಡರೂ ತಮ್ಮ  ಪ್ರಮಾ ದದಿಂದಾಗಿ ಬದುಕನ್ನು ಹಾಳು ಮಾಡಿಕೊಳ್ಳುವ ಕಥೆ ಇಲ್ಲಿದೆ. ನಾಟಕದ ವಸ್ತುವಿಗೆ ಐರ್‌ಲ್ಯಾಂಡಿನ ಹಿನ್ನೆಲೆಯಿದ್ದರೂ ಇದು ಸಾರ್ವತ್ರಿಕ ಮಹತ್ವ ಪಡೆದಂತಹ ಕತೆ. ಈ ಎಲ್ಲ ನಾಟಕಗಳು ಕಲಬುರ್ಗಿ ಮತ್ತು ಧಾರವಾಡಗಳಲ್ಲಿ ರಂಗದ ಮೇಲೆ ಬಂದಿವೆ ಮತ್ತು ಆಕಾಶವಾಣಿಯಲ್ಲೂ ಪ್ರಸಾರವಾಗಿವೆ. ಅನುಭವಿ ಅನುವಾದಕರು ಮಾತ್ರವಲ್ಲದೆ ಭಾಷಾ ವಿದ್ವಾಂಸರೂ ಆಗಿರುವ ನಾಯ್ಕರ್ ಅವರು ಮಾಡಿದ ರೂಪಾಂತರವು ನಾಟಕಗಳಿಗೆ ಕನ್ನಡದ್ದೇ ಮೆರುಗನ್ನು ನೀಡಿವೆ. ***************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top