ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ದುರಾಸೆ ಹಿಂದೆ ದುಃಖ

ಕಥೆ ದುರಾಸೆ ಹಿಂದೆ ದುಃಖ ಲಕ್ಷ್ಮೀದೇವಿ ಪತ್ತಾರ   ಮಂಗಲಾ, ಸುಮಾ ನೆರೆಹೊರೆಯವರು.ಸಾಯಂಕಾಲದ ಹೊತ್ತಾದರೆ ಸಾಕು ಎದುರು ಮನೆ ಸುಮಾ,ಮಂಗಲಾಳ ಮನೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕೂಡುವುದು ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದೆ.ಹೀಗೆ ಸಾಯಂಕಾಲ ಎಂದಿನಂತೆ ಬಂದ ಸುಮಾಳನ್ನು ಕುರಿತು “ಏನೇ ಸುಮಾ ನಿನ್ನೆ ಎಲ್ಲಿಗೋ ಹೋದಂಗಿತ್ತು ಎಲ್ಲಿಗೆ ಹೋಗಿದ್ದೆ” ಕೇಳಿದಳು ಮಂಗಲಾ. “ಏನು ಕೇಳ್ತೀಯಾ ಮಂಗಲಾ ಹಂಪೆ ಉತ್ಸವದ ಅಂದ-ಚಂದ. ನೋಡಲು ಎರಡು ಕಣ್ಣು ಸಾಲೋದಿಲ್ಲ. ಅಬ್ಬಾ ಒಂದೊಂದು ಕಡೆ ಒಂದೊಂದು ಕಾರ್ಯಕ್ರಮ. ಬಗೆ ಬಗೆ ಸಾಮಾನು. ಮಸ್ತ ಊಟದ ವ್ಯವಸ್ಥೆ. ಕೈಯಾಗ ದುಡ್ಡಿದ್ದರ ಸಾಕು. ಏನು ಬೇಕು ಅದನ್ನು ತಗೋಬಹುದು. ಅಲ್ಲದೆ ಫ್ರೀ ಬಸ್ ಬಿಟ್ಟಾರ. ಫ್ರೀ ಊಟ, ಫ್ರೀ ಬಸ್ ನೀನು ಹೋಗಿ ಬಾರಲ್ಲ “ಎಂದಳು ಸುಮಾ. ನನ್ನ ಗಂಡಂದು ಬರೇ ದುಡ್ಡೇ ಹುಚ್ಚು. ಮುಂಜಾಲೆ ಹೋದರೆ ಒಮ್ಮೆಲೆ ಕತ್ತಲಾದ ಮೇಲೆ ಮನೆ ಕಾಣೋದು. ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ ಎಂದು ಮಂಗಲಾ ತನ್ನ ದುಃಖ ತೋಡಿಕೊಂಡಳು. ಅದಕ್ಕೆ ಸುಮಾ ಒಳ್ಳೆಯ ಉಪಾಯವನ್ನೇ ಸೂಚಿಸಿದಳು. ಹೇಗೂ ನಿನ್ನ ಗಂಡ ದುಡೀಲಿಕ್ಕೆ ಹೋದಾಗ ನೀನು, ನಿನ್ನ ಮಗನೊಂದಿಗೆ ಹೋಗಿ ಬಾ. ನಮ್ಮ ಊರು ಜನ ಬೇಕಾದಷ್ಟು ಮಂದಿ ಹೊಂಟಾರ. ನೀನು ಹೋಗಿ ಸಾಯಂಕಾಲದೊಳಗೆ ಬಂದು ಬಿಡು” ಎಂದಳು. ಇಷ್ಟು ಹೇಳೋದು ಒಂದೇ ತಡ ಮೊದಲೇ ಗಯ್ಯಾಳಿ, ಎಲ್ಲದರ ಹಪಾಹಪಿ ಇರುವ ಮಂಗಲಾ ತನ್ನ  ಮಗನನ್ನು          ಕರೆದುಕೊಂಡು ಫ್ರೀ ಬಸ್ ಹತ್ತಿ ಹೊರಟೇ ಬಿಟ್ಟಳು. ಹಾಗೆ 4-5 ವರ್ಷದ ಮಗನಿಗೆ, ಮಂಗಲಾಗೆ ಹಂಪಿಯ ಸೋಬುಗು ಮೆರಗು, ಜನದಟ್ಟಣೆ ಕಂಡು ಬೆರಗಾಗಿ ನಾವು ಎಲ್ಲಿಗೆ ಬಂದಿದ್ದೇವೆ ಎಂದು ಹೌಹಾರುವಂತಾಯಿತು. ಗಟ್ಟಿಗಿತ್ತಿ ಮಂಗಲಾ ಓಡ್ಯಾಡಿ ತನ್ನ ಮಗನಿಗೆ ಆಟಿಗೆ ಸಾಮಾನು ತನಗೆ ಮನೆಗೆ ಬೇಕಾದ ವಸ್ತುಗಳನ್ನು ಕೊಂಡು ಕೊಂಡು ಊಟದ ವ್ಯವಸ್ಥೆ ಮಾಡಿದ್ದಲ್ಲಿಗೆ ಬಂದಳು. ಅಲ್ಲೆ ಇದ್ದ ಪರಿಚಿತೆ ಮಹಿಳೆ ಜೊತೆ ಮಾತಾಡಿದಳು. ನಂತರ ಬಹಳ ನುಕೂ-ನುಗ್ಗಲು ಇದ್ದ ಕಾರಣ ಮಗುವನ್ನು ಪರಿಚಿತಳಿಗೆ ಕೊಟ್ಟು “ನಿನಗೂ ಒಳಗ್ಹೋಗಿ ಊಟ ತರುವೆ. ಇಲ್ಲೆ ನನ್ನ ಮಗು ನೋಡಿಕೊಂಡಿರಿ” ಎಂದು ಹೇಳಿ ಒಳಗ್ಹೋದಳು. ಅಲ್ಲೆಗೆ ಆಕಸ್ಮಿಕವಾಗಿ VIP ಆಗಮನವಾಗಿ ಅವನ ಗುಂಪಿನ ಹಿಂದೆ ಮಂಗಳಾ ವಿಶೇಷ ಊಟವಿದ್ಹೆಡೆಗೆ ಹೋದಳು. ನೋಡಿದರೆ ಬಗೆ ಬಗೆ ಅಡುಗೆ ಮೊದಲೇ ಅತಿ ಆಶೆಯ ತಿನಿಸು ಬಡಕಿ ಮಂಗಳ ಒಂದೊಂದೆ ಅಡುಗೆ ತಿನ್ನುತ್ತಾ ಹೋದಳು. ಒಂದೊಂದು ವಿಶೇಷ ರುಚಿ ಹೊಂದಿರುವ ಅಪರೂಪದ ಅಡುಗೆ. ಈ ತರದ ಊಟ ಒಮ್ಮೆಯೂ ಮಾಡಿರದ ಮಂಗಳ ಉಣ್ಣುತ್ತಾ ಉಣ್ಣುತ್ತಾ ತನ್ನ ಮಗುವನ್ನು, ಮಗುವನ್ನು ಕರೆದುಕೊಂಡು ಕುಳಿತಿರುವ ಪರಿಚಯದವಳನ್ನು ಮರೆತಳು. ಆಕೆಗೆ ಊಟ ಒಯ್ಯಬೇಕೆಂಬುದ ಮರೆತು ಹಾಗೆ ಗದ್ದಲದ ನಡುವೆ ಹೊರಬಂದಳು. VIP ನೋಡಲು ನೂಕು ನುಗ್ಗಲು. ಈ ಗದ್ದಲದಲ್ಲೆ ಪ್ಲಾಸ್ಟಿಕ ಡಬ್ಬಿಗಳನ್ನು ಹೊತ್ತು ಮಾರುವನು ಗದ್ದಲದಲ್ಲೆ ಸಿಕ್ಕೂ ಅವನ ಸಾಮಾನುಗಳು ಚೆಲ್ಲಾಪಿಲ್ಲಿಯಾದವು. ಅವನ್ನು ಕೆಲವರು ಎತ್ತಿಕೊಂಡು ಹೋದರು. ಈಕೆಗೂ ತೆಗೆದುಕೊಂಡು ಒಯ್ಯಬೇಕೆಂದು ಯೋಚಿಸುವಷ್ಟರಲ್ಲೆ ಮಗುವಿನ ನೆನಪಾಯಿತು. ಓಡಿ ಹೋಗಿ ನೋಡುತ್ತಾಳೆ. ಮಗುವು ಇಲ್ಲ. ಅಪರಿಚಿತ ಹೆಂಗಸು ಇಲ್ಲ. ಹುಚ್ಚಿಯಂತೆ ಹುಡುಕುತ್ತಾ ಹೋದಳು. ಗದ್ದಲಿನಲ್ಲೆ ಕಂಡಕಂಡವರಿಗೆ ತನ್ನ ಮಗು ಹೀಗೆ ಇತ್ತು. ನೋಡಿದಿರಾ ಎಂದು ಕೇಳಿದಳು. ಎಲ್ಲಿ ನೋಡಿದರೆ ಸುಳಿವಿಲ್ಲ. ಹೀಗೆ ಹುಡುಕುವಾಗ ಮಗುವನ್ನು ನೋಡಿಕೊಂಡಿರಲು ಹೇಳಿದ ಹೆಂಗಸು ಸಿಕ್ಕಳು.ಮಂಗಲಾ “ನನ್ನ ಮಗು ಎಲ್ಲಿ” ಎಂದರೆ, “ಎಷ್ಟು ಹೊತ್ತು ಅಂತ ಕಾಯೋದು. ನನ್ನ ಹೊಟ್ಟೆಯೂ ಚುರುಗುಟ್ಟಿತು. ನಾನು ಮೊದಲೇ ಒಂತರಾ ಮನುಷ್ಯಳು. ಯಾವಾಗ ಹೇಗೆ ಇರುತ್ತೇನೂ ನನಗೆ ಗೊತ್ತಿರುವುದಿಲ್ಲ. ನನಗೂ ನೀನು ಬೇಗ ಬರದೇ ಇರುವುದು ಬೇಸರವಾಗಿ ನಿನ್ನ ಮಗುವನ್ನು ಅಲ್ಲೆ ಬಿಟ್ಟು ಬಂದೆ “ಎಂದಳು. ಮಂಗಲಾಗೆ ಆಕಾಶವೇ ಕಳಚಿ ಬಿದ್ದಾಂತಾಯಿತು. ನಿಂತ ನೆಲವೇ ಕುಸಿದಂತಾಯಿತು. ತರ ತರ ನಡುಗಿ ಹೋದಳು. ತನ್ನ ಒಂದು ಕ್ಷಣದ ಬಾಯಿ ರುಚಿ ಆಶೆಗೆ (ದುರಾಶೆಗೆ) ಮುಂದಿನ ಪರಿಣಾಮ ಯೋಚಿಸಲಿಲ್ಲವಲ್ಲ. ನನ್ನ ಮಗು ಏಲ್ಲಿ ಹೋಯಿತು. ಯಾರು ಎತ್ತಿಕೊಂಡು ಹೋದರು. ನನ್ನ ಮಗುವನ್ನು ಏನೂ ಮಾಡುವರೊ. ಎಂತಹ ಮುದ್ದಾದ ಸುಂದರ ಮಗು ನನ್ನದು. ದೇವರು ನನಗೇಕೆ ಇಂತಹ ಬುದ್ಧಿ ಕೊಟ್ಟೆ ಎಂದು ಒಂದೇ ಸಮನೆ ಹಲುಬುತ್ತಾ, ಕಣ್ಣೀರಿಡುತ್ತಅ ಕಂಡ ಕಂಡವರನ್ನೂ ತನ್ನ ಮಗು ಕುರಿತು ಕೇಳುತ್ತಾ ಹುಚ್ಚಿಯಂತೆ ಹುಡುಕುತ್ತಾ ಹೊರಟಳು. ************************

ದುರಾಸೆ ಹಿಂದೆ ದುಃಖ Read Post »

ಕಾವ್ಯಯಾನ

ನಮ್ಮ ಮನೆ

ಕವಿತೆ ನಮ್ಮ ಮನೆ ಡಾ. ಅರಕಲಗೂಡು ನೀಲಕಂಠ ಮೂರ್ತಿ ಅರಮನೆಯಂತಿಲ್ಲ ಈ ನನ್ನ ಮನೆಮಧ್ಯಮವರ್ಗದಅತೀ ಸಾಮಾನ್ಯ ಅನುಕೂಲದಸಣ್ಣದೊಂದು ಸೂರು ಅಷ್ಟೆ!ಹಜಾರವಿದೆಅದೂ ಮಧ್ಯಮಒಂದೆರಡು ರೂಮುತಲೆಯಿಂದ ಕಾಲ ಉದ್ದುದ್ದಧಾರಾಳ ನೀಡುವಷ್ಟು!ಊಟಕ್ಕೆ ನೆಲಮತ್ತು ಅಡುಗೆಗೊಂದು ದೊಡ್ಡ ಬಿಲ! ಬನ್ನೀ ಸ್ವಾಮಿಯಾರು ಬೇಕಾದರೂ ಬನ್ನಿಎಷ್ಟು ಜನರಾದರೂ ಬನ್ನಿಒಳಗೆ ಹಿಡಿಸುವಷ್ಟು…ಅಥಿತಿಗಳಾಗಿಅಥವಾ ಹಿತೈಷಿಗಳಾಗಿಸ್ನೇಹದಿಂದ…ಬಂದು ಇದ್ದು ಹೋಗಿನಿಮಗಿಷ್ಟವಾದಷ್ಟು ದಿನನೆಮ್ಮದಿಯಿಂದ… ದಿನದಿನವೂ ಸುತ್ತಿ ಬನ್ನಿನಮ್ಮೂರ ಸುತ್ತಮುತ್ತಅನತಿ ದೂರದಲ್ಲೇ ಇವೆಅನೇಕ ಪ್ರವಾಸಿ ಸ್ಥಳಕಣ್ಣು ತುಂಬಿಸಿಕೊಂಡು ಬನ್ನಿ ಎಲ್ಲಊರೊಳಗೆ ಬೀಡು ಬಿಟ್ಟಿರುವ ಅನೇಕಾನೇಕ ಥರದ ಮೇಳ…ಕಾಯ್ದಿರುವೆವು ದಿನವೂ ನಿಮಗಾಗಿನಮ್ಮದೇ ಮನೆಯ ನಮ್ಮ ಸಮ ಊಟಕ್ಕೆಮತ್ತು ಹಂಚಿಕೊಳ್ಳರಿನಮ್ಮದೇ ಹಜಾರ ಕೊಠಡಿನಿಮ್ಮ ನಿಶ್ಚಿಂತೆಯ ಶಯನಕ್ಕೆ… ಹೊರಡುವ ದಿನಹೊರಡಿ ತೃಪ್ತಿ ನೆಮ್ಮದಿಯಲಿನಮಗೂ ನಿಮಗೂ ಇರಲಿವಿಶ್ವಾಸ ಮೊದಲಿನಂತೆ ಈಗಲೂಇನ್ನೂ ಖುಷಿ ಈಗದು ಮತ್ತೂ ಹೆಚ್ಚಿದ್ದರೂ…ಹಾಗೂ ಬಿಟ್ಟು ಹೋಗಿ ಎಲ್ಲಒಳಾಂಗಣ ಇದ್ದ ಹಾಗೇ ಮೊದಲುಅಲ್ಲಲ್ಲಿ ಗೋಡೆ ಕಟ್ಟುವ ಬದಲು…ಮತ್ತು…ಉಳಿಸಿ ಹೋಗದಿರಿನಮ್ಮೊಳಗೆ ಕರಾಮತ್ತಿನ ಕಿಷ್ಕಿಂಧ… ******************************

ನಮ್ಮ ಮನೆ Read Post »

honkal
ಅನುವಾದ

ಗಝಲ್

ಗಝಲ್ ಸಿದ್ಧರಾಮ ಹೊನ್ಕಲ್ ತರಹಿ ಗಜಲ್-೧೨೫ ಮಿಸ್ರಾ:-ಅವಳಿಂದ ಬೇರಾದ ಮೇಲೆ ಅವಳಂತೆ ಯಾರೂ ದೊರೆಯಲೇ ಇಲ್ಲ ಮೂಲ:-ಬಶೀರ್ ಬದ್ರ್ಕನ್ನಡಕ್ಕೆ:-ಡಾ.ಸಿದ್ಧರಾಮ ಹಿರೇಮಠ ಕೂಡ್ಲಿಗಿ ಮನ ಸಾಗರದಲ್ಲಿ ಮತ್ತೆ ಹುಡುಕಿದೆ ಇವಳಂತೆ ಯಾರೂ ದೊರೆಯಲೇ ಇಲ್ಲಅವಳಿಂದ ಬೇರಾದ ಮೇಲೆ ಅವಳಂತೆ ಯಾರೂ ದೊರೆಯಲೇ ಇಲ್ಲ ಆಡಿದ ಪಿಸು ಮಾತು ಮಧುರ ನೆನಪಾಗಿ ಕಾಡುವವು ಬೇರೆ ಬೇಕೆನಿಸುವದಿಲ್ಲನಾನಿಲ್ಲಿ ಅವಳಲ್ಲಿ ಏಕಾಂಗಿಭಾವ ಕಾಡುವುದಂತೆ ಯಾರು ದೊರೆಯಲೇ ಇಲ್ಲ ಈ ಪ್ರೀತಿಯಲಿ ಕಣ್ಣು ಮತ್ತು ಕರುಳುಗಳು ಅರಿತಷ್ಟು ಮತ್ತೆ ಯಾರು ಅರಿಯುವದಿಲ್ಲಕೆಲವರು ಬಂದು ಅವಳಿಗೂ ಇಷ್ಟವಾಗದೇ ಹೋದರಂತೆ ಯಾರೂ ದೊರೆಯಲೇ ಇಲ್ಲ ನಮ್ಮೀರ್ವರ ಆಯ್ಕೆಗಳು ಒಂದೇ ನೋವು ಒಂದೇ ಎಂದು ಸದಾ ಹಚ್ಚಿಕೊಂಡಿದ್ದಳುಬಿಟ್ಟಿರಲಾರೆ ಬದುಕುಪೂರ್ತಿ ಎಂದು ಮತ್ತೆ ಮರೆತಳಂತೆ ಯಾರೂ ದೊರೆಯಲೇ ಇಲ್ಲ ಪ್ರೀತಿ ಪ್ರೇಮದಿ ಬೆರೆತು ಸವಿಮಾತು ಖುಷಿ ಕ್ಷಣ ಹಂಚಿಕೊಂಡೆವು ಆ ಸುವರ್ಣಕಾಲಹೋಗುವ ಮುನ್ನ ಬಿಟ್ಟ ನೆನಪುಗಳು ಸದಾ ಜೊತೆಗಿಟ್ಟಂತೆ ಯಾರು ದೊರೆಯಲೇ ಇಲ್ಲ ಅವಳಿಗೆ ಬೇಕೆನಿಸಿದರೆ ಸಿಗಲಿ ನನಗೆ ಹಿಡಿಸುವಂತಹ ಯಾರು ಮತ್ತೆ ಸಿಗುವದೇ ಬೇಡಹೊನ್ನಸಿರಿ’ಕನಸಲಿ ಸಹ ಬಿಟ್ಟು ಕೊಳ್ಳಲಾರನಂತೆ ಯಾರು ದೊರೆಯಲೇ ಇಲ್ಲ ********************************

ಗಝಲ್ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ದಿ ಲಾಸ್ಟ್ ಲೆಕ್ಚರ್ ದಿ ಲಾಸ್ಟ್ ಲೆಕ್ಚರ್ ( ಆತ್ಮ ಕಥನ ರೂಪದ ಉಪನ್ಯಾಸಗಳು)ಮೂಲ : ರ‍್ಯಾಂಡಿ ಪಾಶ್ ಕನ್ನಡಕ್ಕೆ : ಎಸ್.ಉಮೇಶ್ಪ್ರ : ಧಾತ್ರಿ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೦೦ಪುಟಗಳು : ೧೯೩ ಮೂಲಕೃತಿಯ ಅದ್ಭುತ ಜನಪ್ರಿಯತೆಯಿಂದಾಗಿ ಕನ್ನಡಕ್ಕೂ ಬಂದು ಕನ್ನಡದಲ್ಲೂ ಮಾರಾಟ ಮತ್ತು ಜನಪ್ರಿಯತೆಗಳ ದೃಷ್ಟಿಯಿಂದ ಅಪಾರ ಯಶಸ್ಸು ಪಡೆದ ಕೃತಿಯಿದು. ಮೂಲ ಲೇಖಕ ರ‍್ಯಾಂಡಿ ಪಾಶ್ ಜಠರದ ಕ್ಯಾನ್ಸರಿನಿಂದ ಪೀಡಿತನಾಗಿ ಇನ್ನು ಕೆಲವೇ ತಿಂಗಳುಗಳಷ್ಟೇ ಬದುಕುವನೆಂದು ವೈದ್ಯಕೀಯ ವರದಿ ಬಂದಾಗ ಅಮೆರಿಕಾದ ಕಾರ್ನಿಗಿ ಮೆಲನ್ ವಿಶ್ವವಿದ್ಯಾನಿಲಯದವರು ಆತನ ಅಂತಿಮ ಉಪನ್ಯಾಸಕ್ಕೆ ಒಂದು ಅವಕಾಶ ಮಾಡಿಕೊಡುತ್ತಾರೆ. ಆ ಸಂದರ್ಭದಲ್ಲಿ ರ‍್ಯಾಂಡಿ ಪಾಶ್ ಒಂದು ಗಂಟೆ ಕಾಲ ತನ್ನ ಬಾಲ್ಯದ ಕನಸುಗಳು, ಅನುಭವಗಳು, ಘಟನೆಗಳು, ತನ್ನ ತಂದೆ ತಾಯಿಗಳ ಉದಾತ್ತ ಗುಣಗಳು, ಅವರೊಂದಿಗಿನ ಕೌಟುಂಬಿಕ ಬದುಕಿನಲ್ಲಿ ತಾನು ಅನುಭವಿಸಿದ ಸಂತಸ, ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ತಾನು ಮಾಡಿದ ಕೆಲಸಗಳು, ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ, ಜೈ ಎಂಬ ಹೆಣ್ಣನ್ನು ತನ್ನ ೩೭ನೆಯ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಆಕೆಯೊಂದಿಗಿನ ಸಂತಸಭರಿತ ದಾಂಪತ್ಯ ಜೀವನ, ಮೂವರು ಎಳೆಯ ಮಕ್ಕಳಾದ ಡೈಲಾ, ಲೋಗನ್ ಮತ್ತು ಛೋಲೆಯೊಂದಿಗಿನ ಸುಂದರ ಸಾಂಸಾರಿಕ ಬದುಕು, ತನ್ನ ಮಕ್ಕಳಿಗೆ ಆದರ್ಶ ತಂದೆಯಾಗಲು ಆತ ಪಟ್ಟ ಶ್ರಮ, ಕ್ಯಾನ್ಸರ್ ಇದೆ ಎಂಬುದು ತಿಳಿದಾಗ ಉಂಟಾದ ಆಘಾತ, ತಳಮಳ ಮತ್ತು ತಲ್ಲಣ, ಪ್ರೀತಿಸುವ ಹೆಂಡತಿಯನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗಬೇಕಲ್ಲ ಎಂಬ ನೋವು, ಆದರೂ ತಾನಿಲ್ಲದ ಕೊರತೆ ಮಕ್ಕಳನ್ನು ಕಾಡಬಾರದು ಎಂಬ ಕಾಳಜಿಯಿಂದ ಅವರೊಂದಿಗೆ ಖುಷಿಯಿಂದ ಆಡಿದ ಎಲ್ಲ ಕ್ಷಣಗಳನ್ನೂ ವೀಡಿಯೋದಲ್ಲಿ ಸೆರೆ ಹಿಡಿದದ್ದು-ಹೀಗೆ ಹಲವಾರು ವೈಯಕ್ತಿಕ ಸಂಗತಿಗಳನ್ನು ಕುರಿತು ತಮ್ಮ ಉಪನ್ಯಾಸದಲ್ಲಿ ವಿಸ್ತರಿಸುತ್ತಾರೆ. ಲೇಖಕರ ಆತ್ಮಕಥನದ ರೀತಿಯಲ್ಲಿರುವ ಈ ಎಲ್ಲ ಮಾತುಗಳು ಈ ಕೃತಿಯಲ್ಲಿ ದಾಖಲಿಸಲ್ಪಟ್ಟಿವೆ. ಆತನ ಒಂದೊಂದು ಮಾತುಗಳೂ ಅವುಗಳಲ್ಲಿ ಕಾಣುವ ತಾತ್ವಿಕ ಮೌಲ್ಯಗಳಿಂದ ಬೆರಗು ಹುಟ್ಟಿಸುತ್ತವೆ. ಸಾವನ್ನು ಗಟ್ಟಿ ಮನಸ್ಸಿನಿಂದ ಎದುರಿಸಿ ತಾನು ತೊರೆದು ಹೋಗುತ್ತಿರುವ ಕುಟುಂಬಕ್ಕೆ ತನ್ನ ಅಗಲುವಿಕೆಯಿಂದ ಯಾವ ತೊಂದರೆಯೂ ಆಗಬಾರದೆಂದು ಅವರೆಲ್ಲರನ್ನೂ ಮಾನಸಿಕವಾಗಿ ಸಿದ್ಧಪಡಿಸುವ ರ‍್ಯಾಂಡಿಪಾಶರವರ ಧೈರ್ಯ ಮತ್ತು ಆತ್ಮವಿಶ್ವಾಸಗಳು ಅಪ್ರತಿಮವಾಗಿವೆ. ಹಾಗೆಯೇ ಆತನ ಪರಿಸ್ಥಿತಿಯ ಚಿತ್ರಣವು ಮನಕದಡುತ್ತದೆ. ಸ್ವತಃ ಲೇಖಕರೇ ಸಾವನ್ನೆದುರಿಸುವ ಸಂದರ್ಭದಲ್ಲಿ ನೀಡಿದ ಅಂತಿಮ ಉಪನ್ಯಾಸದಲ್ಲಿ ಮಂಡಿಸಿದ ವಿಚಾರಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ಸಾವು ಸನ್ನಿಹಿತವಾದ ವ್ಯಕ್ತಿಯ ದಿಟ್ಟ ಮನೋಭಾವವನ್ನು ಬಹಳ ಸುಂದರವಾಗಿ ಚಿತ್ರಿಸುತ್ತದೆ. ಎಸ್.ಉಮೇಶ್ ಅವರ ಅನುವಾದ ಸರಳವಾಗಿದ್ದು ನಯವಾಗಿ ಓದಿಸಿಕೊಂಡು ಹೋಗುತ್ತದೆ. ************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಕಾವ್ಯಯಾನ

ವಿಪ್ಲವ

ಕವಿತೆ ವಿಪ್ಲವ ಚಂದ್ರಪ್ರಭ ಬಿ. ಇಂದೇಕೊ ಅವ್ವ ನೆನಪಾಗುತ್ತಿದ್ದಾಳೆ…ಅಪ್ಪನ ಬನಿಯನ್ನುತಮ್ಮನ ಚಡ್ಡಿತನ್ನ ಲಂಗವನ್ನುಢಾಳಾಗಿ ಬಿಸಿಲಿಗೆಎಲ್ಲೆಂದರಲ್ಲಿ ಒಣಗಲು ಹಾಕುತ್ತಿದ್ದ ಅವ್ವನನ್ನ ಕಂಚುಕವನ್ನು ಒಣ ಹಾಕಲುಹುಡುಕುತ್ತಿದ್ದಳುಮರೆಯಾದ ಒಂದು ಜಾಗವನು… ಈಗ ತಾನೆ ಮನೆಗೆ ಮರಳಿದವಲುಂಗಿಯುಟ್ಟುಬನಿಯನ್ನೆಂಬ ಮಾಯಕವನುಹಗ್ಗಕ್ಕೆ ಇಳಿಬಿಟ್ಟು ಗಾಳಿಗೆ ಮೈಯೊಡ್ಡಿಹಾಯಾಗಿ ನಿಂತುಕೊಂಡುದ ಕಂಡುಮತ್ಸರಗೊಳ್ಳುತ್ತೇನೆ ಒಳಗೊಳಗೇ… ತೆರೆದುಕೊಳ್ಳುತ್ತ ಸಂಜೆಯ ಕೆಲಸಗಳಿಗೆಗಡಿಬಿಡಿಯಲಿರುವ ನನ್ನ ನೋಡಿಗದರುತ್ತಾರೆ ಅತ್ತೆ :ಅದೆಂತದು ಚೂಡೀ ದಾರ..?ಉಡಬಾರದೆ ಒಪ್ಪವಾಗಿ ಸೀರೆ…ನೆಂಟರಿಷ್ಟರು ಬಂದು ಹೋಗುವ ಮನೆ! ಈ ಚೂಡೀದಾರ ಎನುವ ಮಾಯೆಕೆಲಸ ಕಾರ್ಯದಲಿ ನನಗೆಷ್ಟು ಹಿತಎನ್ನುವುದನುಅರಿಯಲಾರರೇಕೆನೆಂಟರು…ಇಷ್ಟರು…ಅತ್ತೆ…? ತನ್ನವ್ವನ ಗದರುವಿಕೆಇನಿಯಳ ಗೊಣಗಾಟ ಯಾವುದೂಕೇಳಿಸುವುದೇ ಇಲ್ಲಪತ್ರಿಕೆಯಲಿ ಮುಖ ಹುದುಗಿಸಿರುವನನ್ನವನಿಗೆ! **********************************

ವಿಪ್ಲವ Read Post »

ಮಕ್ಕಳ ವಿಭಾಗ

ಕನ್ನಡ ಕಂದ

ಮಕ್ಕಳ ಪದ್ಯ ಕನ್ನಡ ಕಂದ ಮಲಿಕಜಾನ ಶೇಖ . ಕನ್ನಡ ನಾಡಿನ ಕಂದನು ನಾನುಕನ್ನಡವನ್ನೆ ಬೆಳಗುವೇನು..ಅ,ಆ,ಇ,ಈ ಎನ್ನುತ್ತಾ ನಾನುಕನ್ನಡವನ್ನೆ ಕಲಿಯುವೇನು. ಸಹ್ಯಾದ್ರಿಯ ಗಿರಿಕಂದರಗಳಕಾವೇರಿ ಕೃಷ್ಣೆ ತುಂಗೆ ತೀರದಲಿಶ್ರೀಗಂಧ ವನ್ಯಸಿರಿ ನಾಡಿನಲಿಸೌಗಂಧ ತುಂಬಿದ ಮಣ್ಣಿನಲಿಎಂದಿಗೂ ನಾನು ಮೆರೆಯುವೇನು.. ಹರಿಹರ ಕೃಷ್ಣರು ಕಟ್ಟಿದಚಾಲೂಕ್ಯ ಕದಂಬರು ಆಳಿದಚೆನ್ನಮ್ಮಾ ಓಬವ್ವಾ ಹೋರಾಡಿದವೀರರು ಧೀರರು ಮೆರೆದಿಹಶೌರ್ಯದ ಇತಿಹಾಸ ಕೇಳುವೇನು.. ಶರಣರು ದಾಸರು ಬದುಕಿದಸೂಫಿ ಸಂತರು ಬೆಳಗಿದಸತ್ಯ ಶಾಂತಿ ನಿತ್ಯ ನೀತಿಐಕ್ಯ ಮಂತ್ರ ಸಾರಿದಪಾವನ ನೆಲಕ್ಕೆ ನಮಿಸುವೇನು. ರನ್ನ ಪಂಪರ ಅಪಾರ ಪಾಂಡಿತ್ಯಕುವೆಂಪು ಬೇಂದ್ರೆಯ ಅಗಾಧ ಜ್ಞಾನದಿಜೆ.ಪಿ ಬಿಚಿ ಗಿರೀಶ ಕಂಬಾರರಭವ್ಯದ ಅಕ್ಷರ ಪಾಠವನುಕೇಳುತ ಓದುತ ನಲಿಯುವೇನು. ಎಲ್ಲೆ ಇರಲಿ ಹೇಗೆ ಇರಲಿಯಾರೆ ಇರಲಿ ಏನೇ ಬರಲಿಕನ್ನಡ ಬಾವುಟ ಹಾರಿಸುವೆಕನ್ನಡ ಡಿಂಡಿಂ ಬಾರಿಸುತಾಕನ್ನಡ ತೇರನು ಎಳೆಯು **************************

ಕನ್ನಡ ಕಂದ Read Post »

ಇತರೆ

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦ ಬಿದಲೋಟಿ ರಂಗನಾಥ್ ಮತ್ತು ಡಾ. ಶೋಭಾ ನಾಯಕ್ ಗೆ ೨೦೨೦ ರ ಸಾಲಿನ ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ರಾಜ್ಯಮಟ್ಟದಲ್ಲಿ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿತ್ತು. ಈ ಸಲ ಒಟ್ಟು ೫೬ ಹಸ್ತಪ್ರತಿಗಳು ಬಂದಿದ್ದವು. ಕೊನೆಯ ಹಂತದಲ್ಲಿ ಅಂಕಗಳು ಸಮ ಬಂದ ಕಾರಣ ಇಬ್ಬರು ಕವಿಗಳ ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಗಿದೆ. ಉತ್ತರ ಕನ್ನಡ ಮೂಲದ ಶೋಭಾ ನಾಯಕ್ ರ ‘ಶಯ್ಯಾಗೃಹದ ಸುದ್ದಿಗಳು’ ಮತ್ತು ತುಮಕೂರು ಜಿಲ್ಲೆಯ ಮಧುಗಿರಿಯ ಬಿದಲೋಟಿ ರಂಗನಾಥರ ‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ಹಸ್ತಪ್ರತಿಗಳು ಈ ಸಲದ ಕಾವ್ಯಪ್ರಶಸ್ತಿಗೆ ಆಯ್ಕೆಯಾಗಿವೆ. ಹಿರಿಯ ಕವಿಗಳಾದ ಸತೀಶ ಕುಲಕರ್ಣಿ ಮತ್ತು ಈಶ್ವರ್ ಹತ್ತಿ ತೀರ್ಪುಗಾರ ರಾಗಿದ್ದರು ವಿಜೇತ ಕವಿಗಳಿಬ್ಬರಿಗೂ ಪ್ರತ್ಯೇಕವಾಗಿ ೫,೦೦೦ ರೂ. ನಗದು ಬಹುಮಾನ ಮತ್ತು ಫಲಕಗಳನ್ನು ಡಿಸೆಂಬರ್ ತಿಂಗಳು ಕೊಪ್ಪಳದಲ್ಲಿ ನಡೆಯುವ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ವಿತರಿಸಲಾಗುವುದೆಂದುಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಮತ್ತು ತಳಮಳ ಪ್ರಕಾಶನದ ಪರವಾಗಿ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. **************************

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦ Read Post »

ಕಾವ್ಯಯಾನ

ನಾ..ದಶಮುಖ

ಕವಿತೆ ನಾ..ದಶಮುಖ ಅಬ್ಳಿ,ಹೆಗಡೆ   ನನ್ನ ಮುಖ ನಾನೇ             ಇನ್ನೂ ಓದದ             ಓದಬೇಕೆಂದರೂ             ಓದಲಾಗದ,ಹಳೆಯ             ಪುಟ್ಟ ಪುಸ್ತಕ             ತೆರೆಯದೇ..             ಎಷ್ಟೋ ಕಾಲದ             ಮೇಲೆ             ಹೊತ್ತು ಗೊತ್ತಿಲ್ಲದೇ             ಯಾರ್ಯಾರೋ             ಬಂದು,ಮಡಚಿದ             ನೆರಿಗೆಗಳ             ನೇರಮಾಡಿ             ಧೂಳ ಝಾಢಿಸಿ             ಅವಸರದಲ್ಲಿ ಓದಿ             ತಮ್ಮಿಷ್ಟದಂತೇ             ತಮಗನಿಸಿದಂತೇ             ವ್ಯಾಖ್ಯಾನಿಸಿ             ನನ್ನೆದುರು ಕನ್ನಡಿ             ಆಗುತ್ತಾರೆ ನನಗೆ.             ನನ್ನ ಒಂದು ಮುಖ             ಹತ್ತಾಗಿ,ಒಂದೊಂದೂ             ಒಂದೊಂದು ತರಹ             ನನಗೇ ದಿಗ್ಭ್ರಮೆ             ನನಗೇ ಅರಿವಿಲ್ಲದ             ನನ್ನ ದಶಮುಖ             ಕಾಣಿಸಿದ ಕನ್ನಡಿಗೆ                     ನಾನೆಂದೂ ಕ್ರತಜ಼. **********************************

ನಾ..ದಶಮುಖ Read Post »

ಇತರೆ

ಕನ್ನಡ, ಕನ್ನಡವೇ ಆಗಿರಲಿ

ಗೌರಿ.ಚಂದ್ರಕೇಸರಿ. ಭಾಷೆಯ ಮೇಲೆ ಗಾಢವಾದ ಪ್ರಭಾವ ಬೀರುವ ಸಂಸ್ಕøತಿಯು ಭಾಷೆಯ ಹರಿವನ್ನು ಬದಲಾಯಿಸುತ್ತ ಹೋಗುತ್ತದೆ. ಕೊರಕಲಿನಗುಂಟ ನೀರು ಹರಿಯುವಂತೆ ಸಮಯ ಸಂದರ್ಭಕ್ಕೆ ತಕ್ಕಂತೆ ಹೊಸತನವನ್ನು ಪಡೆಯುತ್ತಲೇ ಹೋಗುತ್ತದೆ. 2500 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ನಮ್ಮದು. ಬದಲಾವಣೆ ಆರೋಗ್ಯಕರವಾದದ್ದೇ. ಆದರೆ ಪರಕೀಯ ಶಬ್ದಗಳು ಕನ್ನಡದೊಡನೆ ಮಿಳಿತಗೊಂಡು ಹಾಡಿನ ರೂಪದಲ್ಲಿ ಕಿವಿಗೆ ಬೀಳುತ್ತಿದ್ದರೆ ಕೇಳಲು ಅಸಹನೀಯವೆನಿಸುತ್ತದೆ.      ತಳಹದಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಓದುವ ಇಂದಿನ ಮಕ್ಕಳು ಕನ್ನಡದ ಮೇಲೆ ಪ್ರಭುತ್ವವನ್ನು ಸಾಧಿಸಲು ಹೇಗೆ ಸಾಧ್ಯ? ಸರಳಗನ್ನಡದ ಎಷ್ಟೋ ಶಬ್ದಗಳ ಅರ್ಥವೇ ಗೊತ್ತಿಲ್ಲದ ಇಂದಿನ ಯುವಜನಾಂಗ ಕನ್ನಡ ಸಾಹಿತ್ಯವನ್ನು ಎಷ್ಟರ ಮಟ್ಟಿಗೆ ಅರ್ಥೈಸಿಕೊಳ್ಳಲು ಸಾಧ್ಯ? ಮನೋರಂಜನೆ ನೀಡುವಲ್ಲಿ ಅಗ್ರ ಸ್ಥಾನವನ್ನು ಹೊಂದಿರುವ ಸಿನಿಮಾ, ದೂರದರ್ಶನಗಳು ಇಂದಿನ ಯುವಜನಾಂಗದ ಆಶಯಕ್ಕೆ ಬದ್ಧರಾಗಿಬೇಕಾದ ಅನಿವಾರ್ಯತೆ ಬಂದೊದಗಿದೆ. ಅರ್ಥವಿಲ್ಲದ ಶಬ್ದಗಳು ಸಿನಿಮಾ ಸಾಹಿತ್ಯದಲ್ಲಿ ಜಾಗ ಪಡೆದು ಕನ್ನಡವೊಂದು ಕಲಬೆರಕೆ ಭಾಷೆಯಾಗಿ ಬೆಳೆಯುತ್ತಿದೆ. ವಿಪರ್ಯಾಸವೆಂದರೆ ಇಂತಹ ಹಾಡುಗಳೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತವೆ. ಬುದ್ಧಿಜೀವಿಗಳಾದ ಸಾಹಿತಿಗಳು, ಕವಿಗಳೂ ಇದಕ್ಕೆ ಒಗ್ಗಿ ಹೋಗಿದ್ದಾರೆ.      ಕನ್ನಡಕ್ಕೊಂದು ಹೊಸ ಕಾಯಕಲ್ಪ ಕೊಡುವ ಪ್ರಯತ್ನ ಎಂಬ ಯುವ ಜನಾಂಗದ ಅಂಬೋಣವನ್ನು ಹಿಂದಿನ ತಲೆಮಾರಿನವರು ಒಪ್ಪುವುದಾದರೂ ಹೇಗೆ? ಕನ್ನಡಕ್ಕೊಂದು ತನ್ನದೇ ಆದಂತಹ ಸೊಗಡಿದೆ. ಇಂಪು,ಕಂಪಿದೆ. ಕನ್ನಡದ ಗಂಧ ಗಾಳಿ ಇಲ್ಲದವರು ತಿಣುಕಾಡಿ ಬರೆಯುವ ಹಾಡುಗಳೇ ಇಂದು ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ನಮ್ಮ ಅಕ್ಕ-ಪಕ್ಕದ ಮೂರ್ನಾಲ್ಕು ಭಾಷೆಯ ಶಬ್ದಗಳನ್ನು ಕಡ ಪಡೆದು ಒಂದು ಕವನವನ್ನು ಗೀಚಿ ಅದಕ್ಕೊಂದು ಕಿವಿಗಡಚಿಕ್ಕುವ ಸಂಗೀತವನ್ನು ಅಳವಡಿಸಿಬಿಟ್ಟರೆ, ಬೆಳಗಾಗುವುದರಲ್ಲಿ ಅದು ಚಿಕ್ಕ ಮಕ್ಕಳಾದಿಯಾಗಿ ಎಲ್ಲರ ಬಾಯಲ್ಲೂ ಕೇಳಿಬರುತ್ತದೆ.      ಹೊಸತನವನ್ನು ತರುವ ಹೆಸರಿನಲ್ಲಿ ಕನ್ನಡವನ್ನು ಕಂಗ್ಲೀಷ್ ಮಾಡುವುದಾಗಲಿ ಇಲ್ಲ, ಬೀದಿಯಲ್ಲಾಡುವ ಟಪೋರಿ ಭಾಷೆಯನ್ನು ಎತ್ತಿಕೊಂಡು ಕನ್ನಡಕ್ಕೆ ಸುರಿಯುವುದನ್ನು ಮಾಡಿದರೆ ಅದೊಂದು ಬರಹವಾಗಲಿ ಅಥವಾ ಹಾಡಾಗಲಿ ಆಗಲಾರದು. ಕನ್ನಡವನ್ನು ಕನ್ನಡ ಭಾಷೆಯನ್ನಾಗಿಯೇ ಉಳಿಸುವದು ಇಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ. ಅನೇಕ ಪ್ರಕಾರಗಳಲ್ಲಿರುವ ಕನ್ನಡದ ಕೃತಿಗಳನ್ನು ಓದಿದಾಗ ಕನ್ನಡದ ಶ್ರೀಮಂತಿಕೆಯ ಅರಿವಾಗುತ್ತದೆ, ನಮ್ಮ ಶಬ್ದ ಸಂಗ್ರಹ ಬೆಳೆಯುತ್ತದೆ. ಹೊರಹೊಮ್ಮುವ ಭಾವನೆಗಳು ಕನ್ನಡಮಯವಾಗಿರುತ್ತವೆ ಆಗ ಮಾತ್ರ ಕನ್ನಡ ಭಾಷೆ ಕನ್ನಡವಾಗಿರಲು ಸಾಧ್ಯ. *******                                                                                    .                         .

ಕನ್ನಡ, ಕನ್ನಡವೇ ಆಗಿರಲಿ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರತ್ನರಾಯ ಮಲ್ಲ ದೇವರ ಮಂದಿರಗಳಿಗಿಂತ ಮಸಣವೇ ಲೇಸುಆಡಂಬರದ ಪ್ರದರ್ಶನಕ್ಕಿಂತ ಮೌನವೇ ಲೇಸು ಬಜಾರ ಎಂದರೆ ಎಲ್ಲರೂ ಬೆನ್ನು ಹತ್ತುವವರೆಯಾರೂ ಬರದ ಸ್ಮಶಾನದ ಪ್ರಯಾಣವೇ ಲೇಸು ಬಂಧಗಳು ನರಳುತಿವೆ ಬಾಡಿದ ಬಾಂಧವ್ಯದಲ್ಲಿತಬ್ಬಲಿಯಲ್ಲಿ ಅರಳಿದ ಈ ಒಂಟಿತನವೇ ಲೇಸು ಶ್ರೀಮಂತಿಕೆಯು ಆಟವಾಡುತಿದೆ ಜಗದೊಳಗೆಜೊತೆ ಜೊತೆಗೆ ಹೆಜ್ಜೆ ಹಾಕುವ ಬಡತನವೇ ಲೇಸು ಅನುದಿನವೂ ಸಾಯಿಸುತಿವೆ ಮೌಲ್ಯಗಳು ನನ್ನ‘ಮಲ್ಲಿ’ಯ ಹೃದಯದಲ್ಲಿರುವ ಮರಣವೇ ಲೇಸು **********************

ಗಝಲ್ Read Post »

You cannot copy content of this page

Scroll to Top