ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಹಾಸ್ಯಲೇಖನ

ನಾ ಮಾಡಿದ ಉಪ್ಪಿಟ್ಟು  ಗೋಪಿನಾಥ್ ನಾ ಮಾಡಿದ ಉಪ್ಪಿಟ್ಟು  ರೀ ಒಂದ್ ಸಲ ಸೌಟು ಹಿಡಿದು ನೋಡಿ ಗೊತ್ತಾಗುತ್ತೆ ಅಡಿಗೆ ಮಾಡುವುದು ಏನು ಮಹಾ ಅಂತಿರಲ್ಲಾ, ಮೂವತ್ತು ಅಂಕ ಗಳಿಸಿ ಸಾಕೆಂದಳು ! ನಾ ಅವಳ ಚಾಲೆಂಜ್ ಒಪ್ಪಿಕೊಂಡೆ..ಆದರೆ ಒಂದ್ ಕಂಡಿಷನ್. ನೀನು ಯಾವುದೇ ಕಾರಣಕ್ಕೂಅಡಿಗೆಮನೆಯೊಳಗೆ ‌ಬರಬಾರದು ! ಅವಳು ಖುಷಿಯಿಂದ ನಿಮ್ಮಗ್ರಹಚಾರಕ್ಕೆ ನಾನೇನು ಮಾಡಲಾದೀತೆಂದು ರೂಮು ಸೇರಿದಳು. ನಾನು ಬಹಳ ಹುಮ್ಮಸ್ಸಿನಲ್ಲಿದ್ದೆ, ಅಡಿಗೆ ಮನೆಗೆ ಹೋಗಿ ಸೌಟು ಕೈಲಿ ಹಿಡಿದು ಕೈ ಚೌಕವನ್ನು ಹೆಗಲಿಗೇರಿಸಿ ನಳಮಹರಾಜನ ಹಾಗೆ ಪೋಸ್ ಕೊಟ್ಟು ಸೆಲ್ಫೀ ತೆಗೆದುಕೊಂಡೆ..ನಾಳೆ‌ ಇವಳು ಅಲ್ಲಗೆಳದರೆ ?! ಏನು ಮಾಡುವುದು ಒಪ್ಪಿಕೊಂಡಾಗಿದೆ  T.V. ತಿರುಗಿಸಿದೆ, ಮೊದಲಿಗೆ ಕಂಡಿದ್ದು ಪಾಕಶಾಲೆಯ ಕಾರ್ಯಕ್ರಮ ಖುಷಿ ಇಂಗಿಹೋಯಿತು ಅಂದು ಭಾನುವಾರ ಬಾಡೂಟ ನಮಗೆ ಲಾಯ್ಕಲ್ಲಂತ.. ಹಾಗೆ ಎಲ್ಲ ಚಾನಲ್ಗಳ ಪಾಕ ನಿಪುಣೆಯರನ್ನು ನೆನಸಿಕೊಂಡು ಧೈರ್ಯವಾಗಿ ಮುಂದಡಿಯಿಟ್ಟೆ. ತಲೆಯಲ್ಲಿ ಅವರುಗಳು ಹೇಳಿದ್ದು ಮೆಲಕು ಹಾಕುತ್ತಾ… ‘ಮೊದಲಿಗೆ ಅಡಿಗೆ ಮನೆಗೆ ಹೋಗಬೇಕು, ಸರಿ ಅಡಿಯಿಟ್ಟೆ..ಮುಂದೆ ? ಒಲೆಗೆ ಬೆಂಕಿ ಹಚ್ಚಬೇಕು ! ಛೇ ಅಲ್ಲ, ಒಲೆಹಚ್ಚಬೇಕೂ..ಬಾಣಲೆ ಒಲೆ ಮೇಲೆ ಇಡಬೇಕು, ಆಮೇಲೆ ಮುಂದೆ ? ಅವಳು‌ರೂಮಿನಿಂದ ಬೊಬ್ಬೆ ಹೊಡೆದಳು ‘ಏನದು ಸೀದ ವಾಸನೆ ? ಬಾಣಲೆ ಸೀದಿತ್ತು ಕೈಕಾಲಾಡದೆ ಸ್ಟವ್ ಆಫ್ ಮಾಡಿದೆ, ಆ..ಈಗ ಜ್ಞಾಪಕ ಬಂತು ಎಣ್ಣೆ ಹಾಕಬೇಕು. ಹೌದು ಏನೆಣ್ಣೆ ಹಾಕುತ್ತಾರೆ ? ಸಂದೇಹ ನಿವಾರಿಸಿಕೊಳ್ಳುವ ಸಲುವಾಗಿ ‘ಲೇ.. ಎಣ್ಣೆ ಕಾಣುತ್ತಿಲ್ಲಾಂದೆ, ಸುಮ್ಮನೆ ಹೇಳಬೇಕಲ್ಲವಾ ?‌ ‘ನೀವು ಎಣ್ಣೆ ಹಾಕುವ ಸಮವಿನ್ನೂ ಇದೆ ರಾತ್ರಿಯಾಗಿಲ್ಲ ! ಆ…ಮತ್ತೆ ಕಡಲೆಕಾಯಿ ಎಣ್ಣೆ ಎರಡನೇ ಅಟ್ಟದಲ್ಲಿದೆ. ಸರಿ ಎಣ್ಣೆ ಹಾಕಿದೆ ಬಾಣಲೆಗೆ ಧಗ ಧಗ ಬೆಂಕಿ..ಬಾಣಲೆ ಅಷ್ಟು ಕಾದಿತ್ತು..’ರೀ ಮನೆಗೇ ಬೆಂಕಿ ಹಚ್ಚಿದರೇನು ? ‘ಇಲ್ಲ ಮಹರಾಯಿತಿ ಗಾಬರಿಯಾಗ ಬೇಡ ಎಂದು ಅವಳಿಗೆ ಹೇಳಿ ಹಣೆ ಮೇಲಿನ ಬೆವರನ್ನು ಒರಸಿಕೊಂಡೆ, ಹೆಚ್ಚಿಕೊಂಡ  ಈರುಳ್ಳಿ, ಹಸಿ ಮೆಣಸಿಕಾಯಿ, ಕೊತ್ತಂಬರಿ,  ಕರಿಬೇವು ಮೂರು ನಾಲ್ಕು ಬೇಳೆಗಳು ಎಲ್ಲವನ್ನು ಒಟ್ಟಿಗೆ ಹಾಕಿದೆ‌ ಚಿನಕುರಳಿ ಪಟಾಕಿ ಸದ್ದು..ಮತ್ತೆ ಏನೋ ಬಿಟ್ಟೆ ಎಂದು ನೆನಪಾಗಿ ಒಂದಿಷ್ಟು ಉಪ್ಪು ಸುರಿದೆ..ಈಗ ನೀರು ಹಾಕ ಬೇಕು ಎನಿಸಿ ನೀರು ಹಾಕಿದೆ, ಕೊತ ಕೊತ ಕುದಿಯುವಾಗ ರವೆ ಹಾಗೆನೆ..ಸ್ವಲ್ಪ ಹೊತ್ತು ತಟ್ಟೆಯನ್ನು ಮುಚ್ಚಿಡಬೇಕು. ಅಬ್ಬಾ ಎಲ್ಲಾ ಸರಿಯಾಗಿ ಮಾಡಿದೀನಿ ಎನಿಸಿ ಪರೀಕ್ಷೆ ಮುಗಿಸಿ‌ ವಿಜಯ ಧ್ವಜವನ್ನು ಹಾರಿಸಿದಷ್ಟು ಖುಷಿಯಾಗಿತ್ತು. ‘ಲೇ ಆಯಿತು ಬಂದು ನೋಡು ಎಂದು ದರ್ಪವಾಗಿ ಹೇಳಿದೆ..ಆದರೆ ನನ್ನ ಮೂಗನ್ನೇ ನಂಬದಾದೆ ಸೀದ ಬಗ್ಗಡದ ವಾಸನೆ..ಸ್ಟವ್ ಆರಿಸುವುದನ್ನೇ ಮರೆತಿದ್ದೆ, ರವೆ ಹುರಿದಿರಲಿಲ್ಲ‌.  ಇವಳು ಒಳಗೆ ಬರದೆಯೇ ಅಲ್ಲಿಂದಲೇ ಹೇಳಿದಳು ‘ಹಿತ್ತಲ ನಲ್ಲಿ ಕೆಳಗೆ‌ ಬಾಣಲೆಯಿಟ್ಟು ಜೋರಾಗಿ ನೀರು ಬಿಟ್ಟು ಬನ್ನಿ. ‘ಏನಾಯಿತೆಂದು‌ ನಾ ಕೇಳಲೇ ಇಲ್ಲ, ನಾನು ಫಸ್ಟ್‌ ಕ್ಲಾಸಲ್ಲಿ ಫೇಲಾಗಿದ್ದೆ. ಬಾಗಿಲ ಬೆಲ್ ಆಯಿತು..ಹೊರಗೆ ಹೋಟೆಲ್ ಹುಡುಗ ಪಾರಸಲ್ ಹಿಡಿದು ನಿಂತಿದ್ದ. **************************************

ಹಾಸ್ಯಲೇಖನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಬಾ ಮಗುವೆ ಬಾ! ಕು.ಸ.ಮಧುಸೂದನ ನಾನೇನೂ ಅಲ್ಲ ಮೊನ್ನೆ ಮೂರುವರ್ಷದ ಮಗುವೊಂದು ನೀನ್ಯಾರೆಂದು ಕೇಳಿದಾಗ ಹೇಳಲಾಗದೆ ಏನನ್ನೂ ತಡವರಿಸಿದಾಗ ಮೊದಲಬಾರಿ ಯೋಚಿಸಿದೆ ನಾನ್ಯಾರುಮತ್ತುನಾನೇನು? ಯಾವ ದಾರಿಯೂ ನನ್ನದಾಗಲಿಲ್ಲಅಥವಾ ನನ್ನದಾಗಿ ಮಾಡಿಕೊಳ್ಳಲಾಗಲಿಲ್ಲ. ಸೋತಿದ್ದೇನೊ ಗೊತ್ತಾಯಿತಾದರುಆಟ ಆಡಿದ್ದೆನಾ ಇಲ್ಲ ಆಡಿದಂತೆ ನಟಿಸಿದ್ದೆನಾ ಗೊತ್ತಿಲ್ಲ. ಎಲ್ಲರೂ ಇತಿಹಾಸದ ಭಾಗವಾಗಲು ಸಾದ್ಯವಿಲ್ಲವಾದರುಅದರದೊಂದು ಅದ್ಯಾಯದ ಅಂಚಿನಲ್ಲಿಯಾದರು ಏನಾದರು ಆಗಿರುತ್ತಾರೆ. ಕನಸುಗಳು ನನಗೂ ಇದ್ದವುಸಾಕಾರಗೊಳಿಸಿಕೊಳ್ಳುವ ಅನೇಕ ಅಡ್ಡ ದಾರಿಗಳೂ ನನಗೆ ಗೊತ್ತಿದ್ದವು ಆದರಾ ಎಲ್ಲ ದಾರಿಗಳು ನನ್ನ ಆತ್ಮಸಾಕ್ಷಿಯ ವಿರುದ್ದವಾಗಿದ್ದವು. ಆತ್ಮದ ಮಾತಿಗಿಂತ ಸುಖವೇ ಮುಖ್ಯಎಂದು ನಾನಂದುಕೊಂಡಿದ್ದರೆ ಇವತ್ತು ಮದ್ಯದಂಗಡಿಯ ಹೊಸಿಲಲಿಇಳಿಸಂಜೆಗಳ ನೀಳ ರಾತ್ರಿಗಳ ಕಳೆಯ ಬೇಕಿರಲಿಲ್ಲ. ದೇವರೆಂದೂ ನನಗೆ ಸಹಾಯ ಮಾಡುವನೆಂದು ನಾನೆಂದೂ ನಂಬಲಿಲ್ಲನಂಬಿದ್ದರೂ ಪಾಪ ಅವನಿಗೆಷ್ಟು ಜನ ಗ್ರಾಹಕರೋ ಸಮಯವಾದರೂ ಹೇಗೆ ಸಿಕ್ಕೀತು ನನ್ನಂತ ಪಾಪಿಯ ಬಗ್ಗೆ ಯೋಚಿಸಲು. ನನ್ನ ಸುತ್ತ ತೀರಾ ದೇವರಂತ ಮನುಷ್ಯರಾರು ಇರಲಿಲ್ಲ.ನನ್ನ ಸರಿದಾರಿಯಲ್ಲಿ ನಡೆಸಲು. ನಾನು ಶಾಲೆಗೆ ಹೋಗಿದ್ದು ಒಂದಷ್ಟು ಅಕ್ಷರಗಳನ್ನು ಕಲಿಯಲು ಮಾತ್ರ ಅವರು ನೀತಿಪಾಠ ಹೇಳಲು ಶುರು ಮಾಡಿದೊಡನೆ ನಾನು ನಿದ್ದಗೆ ಜಾರುತ್ತಿದ್ದೆ.ಅನೀತಿಯಲ್ಲೇ ಮುಳುಗಿದವರು ನೀತಿಯ ಬಗ್ಗೆಮಾತಾಡುವುದು ತಪ್ಪೆಂದು ಅವರಿಗೂ ಗೊತ್ತಿತ್ತು. ಹಾಗಂತ ನಾನು ಕಡುಪಾಪಿಯೇನು ಆಗಿರಲಿಲ್ಲ. ಹಸಿದು ಬಂದವರಿಗೆ ನನ್ನ ತಟ್ಟೆಯಲಿದ್ದ ಅನ್ನದಲ್ಲೆ ಒಂದಿಷ್ಟು ತೆಗೆದು ನೀಡಿದ್ದೇನೆ. ಬಾರವಾದ ಮೂಟೆ ಹೊತ್ತು ಹೋಗುತ್ತಿದ್ದ ವಯಸ್ಸಾದ ಹಮಾಲಿಯೊಬ್ಬನಿಗೆ ಅವನ ಬಾರ ಹೊತ್ತು ಸಹಾಯ ಮಾಡಿದ್ದೇನೆ ಹಾಗೆಯೇ ಅಕ್ಕಪಕ್ಕದವರಿಗೆ ಕಿರಿಕಿರಿಯಾಗದಂತೆ ರಾತ್ರಿಗಳಲ್ಲಿ ಕಂಠಮಟ್ಟ ಕುಡಿದರೂ ಗದ್ದಲಮಾಡದೆ ತೆಪ್ಪಗೆಮಲಗಿ ಉಪಕಾರವನ್ನೂ ಮಾಡಿದ್ದೇನೆ! ಇವತ್ತಿಗೂ ನನಗೆ ಅಯ್ಯೋ ಅನಿಸುವುದುಕಾನ್ವೆಂಟಿಗೆ ಹೋಗುವ ಆ ಎಳೆಯ ಕಂದಮ್ಮಗಳನ್ನು ಕಂಡಾಗ ತಮ್ಮ ಪೂರ್ವೀಕರೆಲ್ಲ ಸೇರಿ ಮಾಡಿದಷ್ಟೂ ಪಾಪಗಳ ಮೂಟೆಯನ್ನು ಬೆನ್ನಿನ ಚೀಲಕ್ಕೇರಿಸಿಕೊಂಡು ನಡುಬಾಗಿಸಿ ನಡೆಯುವ ಮಕ್ಕಳನ್ನುನೋಡಿದಾಗೆಲ್ಲ ಗಾಣದ ಎತ್ತುಗಳು ನೆನಪಾಗಿ ಕಣ್ಣಲ್ಲಿ ನೀರು ಸುರಿಸುತ್ತೇನೆ. ತಮಗೆ ವಯಸ್ಸಾದ ಮೇಲೆ ಅನ್ನ ಹಾಕಲೆಂದುಅವರ ಬಾಲ್ಯವನ್ನು ಕಿತ್ತುಕೊಂಡುಶಾಲೆಯೆಂಬ ನರಕಕ್ಕೆ ಕಳಿಸುವ ಅಪ್ಪಅಮ್ಮಂದಿರನ್ನು ಹಿಡಿದುಒದೆಯಬೇಕೆಂದು ಸಾವಿರ ಸಾರಿ ಅನಿಸಿದರೂಸುಮ್ಮನಾಗಿದ್ದೇನೆ! ಬಾ ಮಗುವೆ ಇಲ್ಲಿ ಬಾನಿನ್ನ ಹೆಗಲ ಮೇಲಿನ ಬ್ಯಾಗನ್ನು ಇಲ್ಲಿ ಇಳಿಸಿ ಇಡು ಬಾ ನನ್ನ ಜೊತೆ ಊರಂಚಿನ ಕಾಡಿಗೆ ಹೋಗೋಣ. ಅಲ್ಲಿ ನಿನ್ನಂತೆಯೇ ಮುದ್ದಾಗಿರುವ ಚಿಟ್ಟೆಗಳಿವೆಹೂ ಹುಡುಕಿ ಹಾರುವ ಅವನ್ನು ಹಿಡಿಯೋಣ ಪಕ್ಕದಲ್ಲಿ ಹರಿಯುವ ನದಿಯ ದಂಡೆಯಲ್ಲಿ ಕೂತುಮರಿಮೀನುಗಳಿಗೆ ಗಾಳ ಹಾಕಿ ಕಾಯೋಣ. ಮದ್ಯಾಹ್ನ ಹೊಟ್ಟೆ ಹಸಿದಾಗ ಅಲ್ಲೇ ಸಿಗುವಕಾಡಿನ ಹಣ್ಣುಗಳ ಕಚ್ಚಿ ತಿನ್ನೋಣ ಒಂದು ಹೇಳುತ್ತೇನೆ ಕೇಳು ಮಗುನಿಸರ್ಗ ಕಲಿಸುವುದಕ್ಕಿಂತ ಹೆಚ್ಚಾದ ಪಾಠವನ್ನುಯಾವ ಶಾಲೆಗಳು ಯಾವ ಶಿಕ್ಷಕರುಗಳೂ ಕಲಿಸಲಾರರು. ನಾಗರೀಕತೆಯ ಮುಖವಾಡ ಹೊತ್ತ ಜಗತ್ತಿನಲ್ಲಿಯಾರೂಕಲಿಸದೆ ಕಲಿಯಬಹುದಾದದ್ದುವಂಚನೆ ದ್ರೋಹಗಳು ಮಾತ್ರ ಬಾ ಮಗುವೆ ಬಂದುಬಿಡು ನಾನು ಸಾಯುವುದರೊಳಗಾಗಿ ನಿನಗೆಮೀನು ಹಿಡಿಯುವುದ ನದಿಯೊಳಗ ಈಜುವುದಬೆಣಚುಕಲ್ಲು ಗೀಚಿ ಬೆಂಕಿ ಹೊತ್ತಿಸಿ ಮೀನು ಬೇಯಿಸುವುದಕಲಿಸುವೆ. ಬಾ ಮಗುವೆ ನಾನು ನಿನ್ನ ಅಪ್ಪನಾಗಲಾರದ ಅಪ್ಪ!……..

ಕವಿತೆ ಕಾರ್ನರ್ Read Post »

ಇತರೆ

ಪ್ರಸ್ತುತ

ಶಿವ ಒಂದುವಿಶ್ಲೇಷಣೆ ಗಣೇಶ ಭಟ್ ಶಿರಸಿ ಪ್ರತಿವರ್ಷ ಶಿವರಾತ್ರಿ ಬಂದೊಡನೆ ಶಿವನ ಆರಾಧನೆ ಜೋರಾಗುತ್ತದೆ; ಶಿವನ ಕುರಿತಾಗಿ ಲೇಖನಗಳು, ಪುಸ್ತಕಗಳು ಬರುತ್ತವೆ. ಎಲ್ಲವೂ ಹೆಚ್ಚು ಕಡಿಮೆ ಒಂದೇ ಅಚ್ಚಿನಲ್ಲಿ ಎರಕಹೊಯ್ದಂತಿರುತ್ತವೆ. ನಾನಿಲ್ಲಿ ಹೇಳಹೊರಟಿರುವದು ಶಿವನ ಕುರಿತಾದ ಒಂದು ವಿಶಿಷ್ಟ ಪುಸ್ತಕದ ಕುರಿತು. ಅದರ ಹೆಸರೇ ನಮಃ ಶಿವಾಯ ಶಾಂತಾಯ. ಶ್ರೀ ಶ್ರೀ ಆನಂದಮೂರ್ತಿ ಎಂದು ಅನುಯಾಯಿಗಳಿಂದ ಕರೆಯಲ್ಪಡುವ ಶ್ರೀ ಪ್ರಭಾತ ರಂಜನ್ ಸರ್ಕಾರರು 1982 ರ ಎಪ್ರಿಲ್ 11 ರಿಂದ ಪ್ರಾರಂಭಿಸಿ 13 ಅಗಸ್ಟ್ 1982 ರವರೆಗೆ ಸುಮಾರಾಗಿ ವಾರದಲ್ಲಿ ಒಂದರಂತೆ ನೀಡಿದ 20 ಪ್ರವಚನ ಸಂಗ್ರಹವೇ ಈ ಪುಸ್ತಕ. ಶ್ರೀ ಶ್ರೀ ಆನಂದ ಮೂರ್ತಿಯವರ ಅಭಿಪ್ರಾಯದಂತೆ ಶಿವ ಒಬ್ಬ ಐತಿಹಾಸಿಕ ಮಹಾಪುರುಷ. ಜಡ್ಡುಗಟ್ಟಿದ್ದ ಮಾನವ ಸಮೂಹದ ಪ್ರಗತಿಗೆ ಚಾಲನೆ ನೀಡಲು ಸುಮಾರು ಏಳು ಸಾವಿರ ವರ್ಷಗಳ ಹಿಂದೆ ಆವಿರ್ಭವಿಸಿದ ತಾರಕ ಬ್ರಹ್ಮ. ಮಾನವ ನಾಗರಿಕತೆ ಮತ್ತು ಸಂಸ್ಕøತಿಗಳ ನಿರ್ಮಾಣದಲ್ಲಿ ಶಿವನದು ವಿರಾಟ ಭೂಮಿಕೆ. ಅವನ ಕೊಡುಗೆ ಅಪಾರ. ಶಿವನನ್ನು ಹೊರತುಪಡಿಸಿ ಮಾನವ ಸಮಾಜದ ನಾಗರಿಕತೆ, ಸಂಸ್ಕøತಿಗಳು ನಿಲ್ಲಲಾರವು. ಒಂದು ವೇಳೆ ಪ್ರಥ್ವಿಯ ಇಂದಿನ ಮತ್ತು ಭವಿಷ್ಯದ ಮಾನವ ಸಮಾಜದ ಕುರಿತು ಯಥಾರ್ಥವಾಗಿ ವಿಚಾರಿಸುವುದಾದರೆ ಅಥವಾ ಇತಿಹಾಸವನ್ನು ಬರೆಯುವುದಾದರೆ , ಶಿವನನ್ನು ಬಿಟ್ಟು ಸಾಗಲಾರೆವೆಂದು ಅವರು ಹೇಳುತ್ತಾರೆ. ಮಾನವ ಸಮಾಜಕ್ಕೆ ಶಿವನ ಕೊಡುಗೆ ಅಪಾರ. ಸಂಗೀತ ಕ್ಷೇತ್ರವನ್ನೇ ತೆಗೆದುಕೊಂಡರೆ, ಇಂದಿನ ಸಂಗೀತವು ಸುರ- ಸಪ್ತಕವನ್ನು ಆಧರಿಸಿದೆ. ಅಂದಿನ ಸಮಯದ ಋಗ್ವೇದ ಯುಗದಲ್ಲಿ ಛಂದವಿತ್ತು. ಆದರೆ ರಾಗ- ರಾಗಿಣಿಗಳ ಉದ್ಭವವಾಗಿರಲಿಲ್ಲ. ಸುರ- ಸಪ್ತಕದ ಪರಿಚಯವಿರಲಿಲ್ಲ. ವಿವಿಧ ಪ್ರಾಣಿ, ಪಕ್ಷಿಗಳ ಧ್ವನಿ ತರಂಗಗಳು ವಿಶ್ವದ ಧ್ವನಿ ತರಂಗದೊಂದಿಗೆ, ಆರೋಹ- ಅವರೋಹಗಳೊಂದಿಗೆ ಸಾಮರಸ್ಯ ಹೊಂದಿರುವುದನ್ನು ಶಿವನು ಗುರ್ತಿಸಿದನು. ಇದರ ಪರಿಣಾಮವಾಗಿ ಏಳು ಪ್ರಾಣಿಗಳ ಧ್ವನಿಯನ್ನು ಕೇಂದ್ರವಾಗಿಸಿಕೊಂಡು ಸುರ ಸಪ್ತಕವನ್ನು ರಚಿಸಿದನು. ಧ್ವನಿ ವಿಜ್ಞಾನವು ಸ್ವರ ವಿಜ್ಞಾನವನ್ನು ಅವಲಂಬಿಸಿದೆ. ಇದು ಮಾನವನ ಶ್ವಾಸ, ನಿಃಶ್ವಾಸಗಳನ್ನು ಆಧರಿಸಿದೆ. ಇದನ್ನು ಆಧರಿಸಿಯೇ ಛಂದದ ಜೊತೆಗೆ ನೃತ್ಯ ಮತ್ತು ಮುದ್ರೆಯನ್ನು ಸಹ ಶಿವನು ಜೋಡಿಸಿದನು. ಆದ್ದರಿಂದಲೇ ಅವನು ನಟರಾಜ. ಈ ಜ್ಞಾನವನ್ನು ಭರತ ಮಹರ್ಷಿಯ ಮೂಲಕ ಜನರಿಗೆ ತಲುಪಸಿದನು. ಶಿವನು ಕೇವಲ ಸಂಗೀತ ಮತ್ತು ನೃತ್ಯಕ್ಕೆ ಮಾತ್ರ ವಿಧಿಬದ್ಧ, ಛಂದೋಬದ್ಧ ರೂಪವನ್ನು ನೀಡಲಿಲ್ಲ; ಜೀವನದ ಪ್ರತಿಯೊಂದು ಅಭಿವ್ಯಕ್ತಿಯನ್ನೂ ಶಿಸ್ತುಬದ್ಧಗೊಳಿಸಿದನು. ಶಿವನು ಸಮಯಕ್ಕಿಂತ ಮೊದಲು ವಿವಾಹ ಪದ್ಧತಿ ಇರಲಿಲ್ಲ. ವ್ಯಕ್ತ್ತಿಯ ಪರಿಚಯವನ್ನು ತಾಯಿಯ ಹೆಸರಿನಿಂದ ಗುರ್ತಿಸಲಾಗುತ್ತಿತ್ತು. ತಂದೆಯಾದವನಿಗೆ ಕುಟುಂಬ ನಿರ್ವಹಣೆಯಲ್ಲಿ ನಿರ್ದಿಷ್ಟ ಪಾತ್ರವಿರಲಿಲ್ಲ. ವಿವಾಹ ( ಅಂದರೆ ಒಂದು ವಿಶೇಷ ನಿಯಮಾನುಸಾರ ನಡೆಯುವುದು) ಪದ್ಧತಿಯನ್ನು ಅರ್ಥಾತ್ ಕೌಟುಂಬಿಕ ವ್ಯವಸ್ಥೆಗೆ ಭದ್ರ ಅಡಿಪಾಯ ಹಾಕಿದವನು ಸದಾಶಿವ. ಶಿವ- ಪಾರ್ವತಿಯರ ವಿವಾಹವನ್ನು ಪ್ರಥಮ ವಿವಾಹವೆಂದೂ ಹೇಳುತ್ತಾರೆ. ನವ ವಿವಾಹಿತರಿಗೆ ಆಶೀರ್ವಾದ ಮಾಡುವಾಗ ಶಿವ- ಪಾರ್ವತಿಯರಂತೆ ಆದರ್ಶ ದಾಂಪತ್ಯ ನಿಮ್ಮದಾಗಲಿ ಎಂದು ಹೇಳುವ ಸಂಪ್ರದಾಯ ಇಂದಿಗೂ ಕೂಡಾ ಇದೆ. ಶ್ವಾಸ-ನಿಶ್ವಾಸಗಳು ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ. ವಿವಿಧ ನಾಡಿಗಳು ( ಇಡಾ, ಪಿಂಗಳಾ, ಸುಷುಮ್ನಾ) ಕಾರ್ಯ ನಿರ್ವಹಿಸುವ ವಿಧಾನ, ಮಾನವನ ಉಸಿರಾಟದೊಂದಿಗೆ ಅವುಗಳ ಸಂಬಂಧದ ಕುರಿತು ತಿಳಿ ಹೇಳಿದವನು ಶಿವ. ಶ್ವಾಸ- ಪ್ರಶ್ವಾಸಗಳು ಕೆಲವೊಮ್ಮೆ ಬಲನಾಸಿಕ ಅಥವಾ ಎಡನಾಸಿಕ ಹಾಗೂ ಕೆಲವೊಮ್ಮೆ ಎರಡೂ ನಾಸಿಕಗಳ ಮೂಲಕ ನಡೆಯುವುದನ್ನು ಗಮನಿಸಿರುತ್ತೇವೆ. ಉಸಿರಾಟದ ವಿಶೇಷತೆಗೂ, ಮಾನವನ ದಿನಚರ್ಯೆಗೂ ನೇರ ಸಂಬಂಧ ಇರುವುದನ್ನು ತೋರಿಸಿಕೊಳ್ಳುವುದು ಶಿವ. ಬಲನಾಸಿಕದಲ್ಲಿ ಶ್ವಾಸೊಚ್ವಾಸ ನಡೆದಿರುವಾಗ ಯಾವ ಕಾರ್ಯಗಳನ್ನು ಮಾಡಬೇಕು, ದೈಹಿಕ ಶ್ರಮಕ್ಕೆ ಪೂರಕವಾದ ಉಸಿರಾಟ ಎಂತಿರಬೇಕು. ಯೋಗಾಸನಕ್ಕೆ, ಧ್ಯಾನಕ್ಕೆ ಪೂರಕವಾದ ಉಸಿರಾಟದ ವಿಧಾನ ಹೇಗಿರಬೇಕು ಮುಂತಾಗಿ ತಿಳಿಸಿದವನು ಶಿವ. ಈ ವಿಜ್ಞಾನವನ್ನು ಸ್ವರಶಾಸ್ತ್ರ ಅಥವಾ ಸ್ವರೋದಯ ಅಥವಾ ಸ್ವರ ವಿಜ್ಞಾನ ಎಂದು ಕರೆಯಲಾಯಿತು. ಮಾನವನ ದೇಹದಲ್ಲಿ ಹಲವು ಗ್ರಂಥಿಗಳಿವೆ. ಅವು ಸ್ರವಿಸುವ ಗ್ರಂಥಿರಸದ ಪ್ರಮಾಣ ದೈಹಿಕ ಆರೋಗ್ಯವನ್ನು, ಮಾನಸಿಕ ಸ್ಥಿರತೆಯನ್ನು ನಿಯಂತ್ರಿಸುತ್ತದೆ. ಗ್ರಂಥಿಗಳ ನಿಯಂತ್ರಣಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ದೇಹ ಚಲನೆ ಅಗತ್ಯ. ಅಂತಹ ದೈಹಿಕ ಚಲನೆಯನ್ನು ಮುದ್ರೆ, ಛಂದಗಳನ್ನು ಸೇರಿಸಿದ ನೃತ್ಯ ರೂಪದಲ್ಲಿ ಶಿವನು ನೀಡಿದನು. ಪುರುಷರಲ್ಲಿ ಆತ್ಮವಿಶ್ವಾಸ ಬೆಳೆಸುವ, ಧೈರ್ಯ ಹೆಚ್ಚಿಸುವ, ಛಲ ಬೆಳೆಸುವುದಕ್ಕಾಗಿ ತಾಂಡವ ನೃತ್ಯವನ್ನು ಶಿವನು ಪರಿಚಯಿಸಿದನು. ಕಳೆದ ಏಳುಸಾವಿರ ವರ್ಷಗಳ ಹಿಂದೆ ಜನಪ್ರಿಯಗೊಂಡಿದ್ದ ತಾಂಡವ ಕ್ರಮೇಣ ಜನಮಾನಸದಿಂದ ಮರೆಯಾಗಿ ಬಿಟ್ಟಿದೆ. ಇದೇ ತಾಂಡವವನ್ನು ಸಕಾರಣವಾಗಿ ಪುನಃ ಜನಪ್ರಿಯಗೊಳಿಸುವ ಕಾರ್ಯವನ್ನು ಶ್ರೀ ಪ್ರಭಾತ ರಂಜನ್ ಸರ್ಕಾರರು ಮಾಡಿದ್ದಾರೆ. ಜಗತ್ತಿನಾದ್ಯಂತ ಇರುವ ಆನಂದ ಮಾರ್ಗದ ಪುರುಷ ಅನುಯಾಯಿಗಳು ತಾಂಡವ ನೃತ್ಯವನ್ನು ಕಲಿತು, ಯೋಗಾಸನದಂತೆ ಪ್ರತಿದಿನ ಎರಡು ವೇಳೆ ಅಭ್ಯಾಸ ಮಾಡಲು ಅವರು ಸೂಚಿಸಿದ್ದಾರೆ. ಇತರರಿಗೂ ತಾಂಡವ ನೃತ್ಯವನ್ನು ಉಚಿತವಾಗಿ ಬೋಧಿಸುವ ವ್ಯವಸ್ಥೆ ಮಾಡಿದ್ದಾರೆ.. ವೈದ್ಯಕಶಾಸ್ತ್ರಕ್ಕೆ ಶಿವನ ಕೊಡುಗೆ ಅಪಾರ. ಶಲ್ಯಕರಣ, ವಿಶಲ್ಯಕರಣ, ಶವಚ್ಛೇದಗಳೆಲ್ಲವನ್ನೂ ಶಿವನು ಆಯುರ್ವೇದ ಶಾಸ್ತ್ರದೊಂದಿಗೇ ಸಮ್ಮಿಲಿತಗೊಳಿಸಿದ್ದರು. ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರು. ಯಜ್ಞ- ಯಾಗಗಳೂ ಅವರೊಂದಿಗೇ ಬಂದವು. ಭಾರತದ ಮೂಲನಿವಾಸಿಗಳಿಗೆ ಅಮೂಲ್ಯವಾದ ಆಹಾರ ವಸ್ತುಗಳನ್ನು ಯಜ್ಞ ಕುಂಡದಲ್ಲಿ ಸುರಿಯುವುದು, ಪ್ರಾಣಿಗಳ ಬಲಿ ನೀಡುವುದು ಒಪ್ಪಿತವಾಗಿರಲಿಲ್ಲ. ಇದು ಧರ್ಮವೇ ಅಲ್ಲವೆಂದು ಶಿವನು ಸಾರಿದನು. ಧರ್ಮವೆಂದರೆ ಪರಮ ಸಂಪ್ರಾಪ್ತಿಯ ಮಾರ್ಗ; ಪಾಶವೀ ಸುಖದ ಮಾರ್ಗವಲ್ಲ ಎಂದು ಶಿವನು ಘೋಷಿಸಿದ್ದನು. ಸಮಸ್ತ ಕರ್ಮಗಳ ಏಷಣವನ್ನು ಈಶ್ವರನತ್ತ ತಿರುಗಿಸಿ ಸಾಗುವುದೇ ಧರ್ಮದ ಪೂರ್ಣತೆಯೆಂಬುದು ಶಿವನ ಅಭಿಪ್ರಾಯವಾಗಿತ್ತು. ಶಿವನ ಕಾಲದಲ್ಲಿ ಭಾರತದ ಮೂಲ ನಿವಾಸಿಗಳು ( ಆಸ್ಟ್ರೀಕೋ- ಮಂಗೋಲ- ನಿಗ್ರೋಯೆಡ್ ಜನಾಂಗದವರು) ಮತ್ತು ಹೊರಗಿನಿಂದ ಬಂದ ಆರ್ಯರ ಸಂಬಂಧ ಒಳ್ಳೆಯದಾಗಿರಲಿಲ್ಲ. ಇಲ್ಲ್ಲಿನವರನ್ನು ಅಸುರರು, ದಾನವರು, ದಾಸರು, ಶೂದ್ರ ಮುಂತಾಗಿ ಆರ್ಯರು ಸಂಬೋಧಿಸುತ್ತಿದ್ದರು. ಗೌರಿ ಅಥವಾ ಪಾರ್ವತಿ ಆರ್ಯಕನ್ಯೆ. ಶಿವನನ್ನೇ ಧ್ಯಾನಿಸಿ, ಅವನನ್ನೇ ವಿವಾಹವಾಗ ಬಯಸಿದವಳು. ಶಿವ ಮತ್ತು ಗೌರಿಯ ವಿವಾಹದ ನಂತರ ಆರ್ಯ ಮತ್ತು ಆರ್ಯೇತರರ ಸಂಬಂಧ ಸುಧಾರಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಇನ್ನಷ್ಟು ಕೆಡತೊಡಗಿತು. ಗೌರಿಯ ತಂದೆಯಾದ ಆರ್ಯಕುಲದ ದಕ್ಷನು ಶಿವನನ್ನು ನಿಂದಿಸಲೆಂದೇ, ಶಿವನನ್ನು ಬಿಟ್ಟು ಒಂದು ಯಜ್ಞವನ್ನು ನಡೆಸಿದನು. ಶಿವನಿಗೆ ಆಮಂತ್ರಣ ನೀಡದೇ ಇದ್ದುದÀಲ್ಲದೇ ಯಜ್ಞ ಸ್ಥಳದಲ್ಲಿ ನಡೆದ ಶಿವ ನಿಂದನೆಯನ್ನು ಸಹಿಸಲಾರದ ಗೌರಿಯು ಆತ್ಮತ್ಯಾಗ ಮಾಡಿದಳು. ಹಲವರ ಅಭಿಪ್ರಾಯದಲ್ಲಿ ದಕ್ಷಯಜ್ಞರ ಘಟನೆ ಪೌರಾಣಿಕ ಕಲ್ಪನೆ. ಆದರೆ ಶ್ರೀ ಶ್ರೀ ಆನಂದ ಮೂರ್ತಿಯವರು ಹೇಳುವಂತೆ ಗೌರಿಯ ಆತ್ಮತ್ಯಾಗದ ನಂತರ ಆರ್ಯ ಮತ್ತು ಅನಾರ್ಯರ ಸಂಬಂಧ ಸುಧಾರಿಸತೊಡಗಿತು. ಐತಿಹಾಸಿಕ ಶಿವನಿಗೆ ಮೂವರು ಪತ್ನಿಯರು. ಆರ್ಯಕುಲದ ಗೌರಿ, ಅನಾರ್ಯಕನ್ಯೆಯಾದ ಕಾಳಿ, ಮಂಗೋಲಿಯನ್ ಕನ್ಯೆಯಾದ ಗಂಗೆ. ಭೈರವ ಪಾರ್ವತಿಯ ಮಗ. ಭೈರವಿ ಕಾಳಿಯ ಮಗಳು. ಕಾರ್ತಿಕೇಯ ಗಂಗೆಯ ಮಗ. ಶಿವನ ಕುರಿತಾಗಿ ಹಲವು ನಂಬಿಕೆಗಳು, ಊಹಾಪೋಹಗಳು, ಕಲ್ಪನೆಗಳು ಜನರ ಮನಸ್ಸಿನಲ್ಲಿ ತುಂಬಿಕೊಂಡಿವೆ. ಶಿವನ ಜಟೆಯಿಂದ ನೀರು ಹರಿದು ಬರುವುದನ್ನು ತೋರಿಸಿ ಅದನ್ನು ಗಂಗೆ ಎಂದು ನಂಬುತ್ತಾರೆ. ಇದಕ್ಕೆ ಶ್ರೀ ಶ್ರೀ ಆನಂದ ಮೂರ್ತಿಯವರ ವಿವರಣೆ ತುಂಬಾ ಮಾರ್ಮಿಕವಾಗಿದೆ. ಪಾರ್ವತಿಯ ಮಗನಾದ ಭೈರವ ಹಾಗೂ ಕಾಳಿಯ ಮಗಳು ಭೈರವಿ ಇಬ್ಬರೂ ಧರ್ಮನಿಷ್ಠರೂ, ತಂತ್ರಸಾಧಕರೂ ಆಗಿದ್ದರು. ಆದರೆ, ಗಂಗೆಯ ಪುತ್ರ ಕಾರ್ತಿಕೇಯನು ಹಾಗಿರಲಿಲ್ಲ. ಇದು ಅವಳ ದುಃಖಕ್ಕೆ ಕಾರಣವಾಗಿತ್ತು. ಅವಳ ದುಃಖವನ್ನು ಮರೆಸುವ ಸಲುವಾಗಿ ಶಿವನು ಅವಳಿಗೆ ಹೆಚ್ಚಿನ ಸಮಾಧಾನ ಮಾಡುತ್ತಿದ್ದನು. ಮತ್ತು ಸಮಯ ನೀಡುತ್ತಿದ್ದನು. ಇದನ್ನೇ ಶಿವನು ಗಂಗೆಯನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾನೆಂದು ಆಡಿಕೊಳ್ಳುತ್ತಿದ್ದರು. ಸಾವಿರಾರು ವರ್ಷಗಳ ನಂತರ ಇದೇ ವಿಷಯ ಬದಲಾಗಿ ಶಿವನ ಜಟೆಯಿಂದ ಗಂಗೆ( ನೀರು) ಯ ಉದ್ಭವವಾಗುವ ಕಥೆ ಹುಟ್ಟಿಕೊಂಡಿತು. ಅಸುರರೆಂದರೆ ಕ್ರೂರಿಗಳೆಂದೂ, ಬೃಹತ್ ದೇಹ ಹೊಂದಿದ ಅನಾಗರಿಕ ಜನರೆಂದು ನಮ್ಮ ಪುರಾಣ ಕಥೆಗಳಲ್ಲಿ ಓದುತ್ತೇವೆ. ಆದರೆ ಶ್ರೀ ಶ್ರೀ ಆನಂದ ಮೂರ್ತಿಯವರ ಪ್ರಕಾರ ಮಧ್ಯ ಏಷಿಯಾದ ಅಸ್ಸೀರಿಯಾ ಪ್ರಾಂತ್ಯದ ನಿವಾಸಿಗಳೇ ಅಸುರರು. ಇವರು ಆರ್ಯರ ಬದ್ಧ ದ್ವೇಷಿಗಳಾಗಿದ್ದರು. ಆರ್ಯರ ನಡೆ, ನುಡಿ, ಆಚರಣೆಗಳನ್ನು ಅಸುರರು ಒಪ್ಪುತ್ತಿರಲಿಲ್ಲ. ತಮ್ಮ ಶ್ರೇಷ್ಠತೆಯನ್ನು ಒಪ್ಪದ ಅಸುರರನ್ನು ಕೊಲ್ಲುವದು ತಮ್ಮ ಹಕ್ಕು ಎಂಬಂತೆ ಆರ್ಯರು ವರ್ತಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಅಸುರರು ರಕ್ಷಣೆ ಕೋರಿ ಶಿವನಲ್ಲಿಗೆ ಬರುತ್ತಾರೆ. ಅಂದು ನಡೆಯುತ್ತಿದ್ದ ಜನಾಂಗೀಯ ದ್ವೇಷವನ್ನು ತಣಿಸಲು ಶಿವನು ಸಾಕಷ್ಟು ಶ್ರಮಿಸಿದನು ಮತ್ತು ಅಸುರರಿಗೆ ರಕ್ಷಣೆ ನೀಡಿದನು, ಸಮಾಜದಲ್ಲಿ ಗೌರವ ಪಡೆಯಲು ಅನರ್ಹರೆಂದು ಆರ್ಯರಿಂದ ತೀರ್ಮಾನಿಸಲ್ಪಟ್ಟ ಜನಸಾಮನ್ಯರು ಶಿವನ ಅನುಯಾಯಿಗಳಾಗಿದ್ದರು. ಇಂತಹ ಹಲವು ಘಟನೆಗಳು ಮುಂದಿನ ದಿನಗಳಲ್ಲಿ ಆರ್ಯರ ಪ್ರಭಾವಕಕ್ಕೊಳಗಾಗಿ ರಚಿತವಾದ ಕಥೆ, ಪುರಾಣಗಳಲ್ಲಿ ವಿಕೃತವಾಗಿ ಪ್ರಸ್ತುತಪಡಿಸಲ್ಪಟ್ಟವು. ಅದರಿಂದಾಗಿಯೇ ಅಸುರರು ಶಿವ ಭಕ್ತರಾಗಿ ಶಿವನಿಂದ ವರ ಪಡೆದವರಾಗಿ ಯಜ್ಞ- ಯಾಗಾದಿಗಳನ್ನು ಕೆಡಿಸುವವರಾಗಿ ತೋರಿಸಲ್ಪಟ್ಟಿದ್ದಾರೆ. ಜನಸಾಮಾನ್ಯರನ್ನು ಶಿವಗಣಗಳೆಂದೂ, ಸ್ಮಶಾನವಾಸಿಗಳೆಂದೂ ವಿವರಿಸುವುದನ್ನು ಕಾಣುತ್ತೇವೆ. ಪುರಾಣಗಳ ಮೂಲಕ, ಜಾನಪದ ಕಥೆ, ದಂತಕಥೆಗಳ ಮೂಲಕ ಶಿವನಿಗೂ ಹಾಗೂ ಇತರ ದೇವಿ, ದೇವತಾ ಪುರುಷರಿಗೂ ಒಂದೊಲ್ಲೊಂದು ರೀತಿಯ ಸಂಬಂಧ ಕಲ್ಪಿಸಿರುವುದನ್ನು ಕಾಣುತ್ತೇವೆ. ವಾಸ್ತವದಲ್ಲಿ ಐತಿಹಾಸಿಕ ಶಿವನಿಗೂ, ಅವರೆಲ್ಲರಿಗೂ ಯಾವ ಸಂಬಂಧವೂ ಇರಲಿಲ್ಲ. ಆದರೂ ಇಂತಹ ಸಂಬಂಧ ಸೃಷ್ಟಿಗೆ ಮೂಲಕಾರಣ ಶಿವನ ಉನ್ನತ ವ್ಯಕ್ತಿತ್ವ. ಮಾನವ ಸಮಾಜ ಅದರಲ್ಲೂ ವಿಶೇಷವಾಗಿ ಭಾರತೀಯ ಸಮಾಜದ ಮೇಲೆ ಉಂಟಾಗಿರುವ ಶಿವನ ಗಾಢ ಪ್ರಭಾವವೇ ಇಂತಹ ಕಥೆಗಳಿಗೆ ಕಾರಣ. ಶಿವನ ಪತ್ನಿಯೆಂದು ನಂಬಲಾಗಿರುವ ದುರ್ಗೆ, ಪಾರ್ವತಿಯೂ ಅಲ್ಲ; ಕಾಳಿಯೂ ಅಲ್ಲ, ದುರ್ಗೆಯ ಕಲ್ಪನೆ ಮಾಡಿರುವುದೇ ಶಿವನ ಸಮಯದ ಐದು ಸಾವಿರ ವರ್ಷಗಳ ನಂತರ. ಕೆಲವು ಪುರಾಣ ಕಥೆಗಳಲ್ಲಿರುವಂತೆ ಲಕ್ಷ್ಮೀ ಮತ್ತು ಸರಸ್ವತಿಯರು ಶಿವನ ಪುತ್ರಿಯರೇ ಅಲ್ಲ. ಶಿವನ ಮಗನೆಂದು ಹೇಳಲಾಗುವ ಗಣೇಶನು ಶಿವನಿಗಿಂತ ಬಹು ಪುರಾತನನು. ಗಣದ ಮುಖ್ಯಸ್ಥನಾಗಿ ಕಲ್ಪನೆಯಲ್ಲಿದ್ದ ಗಣೇಶನನ್ನು ಶಿವನೊಂದಿಗೆ ಜೋಡಿಸಿರುವುದು, ಲಿಂಗಪೂಜೆಯೊಂದಿಗೆ ಶಿವನ ಸಂಬಂಧ ಕಲ್ಪಿಸಲು ಕಾರಣವೆಂದರೆ ಶಿವನ ಅಸಮಾನ್ಯ, ಅಲೌಕಿಕ ಪ್ರಭಾವವು ಜನಸಮೂಹದ ಮೇಲೆ ಇರುವುದೇ ಕಾರಣ. ಶಿವನೊಂದಿಗೆ ಸಂಬಂಧ ಕಲ್ಪಿಸಿ ಅವರ ಗೌರವ ಹೆಚ್ಚಿಸಿಕೊಳ್ಳುವ ಪ್ರಯತ್ನವಿದು. ಆದ್ದರಿಂದಲೇ ಶಿವನ ಸಮ್ಮಾನದಲ್ಲಿಯೇ ಸರ್ವರ ಸಮ್ಮಾನವಿದೆಯೆಂದು ಹೇಳುತ್ತಾರೆ. ನಮಃ ಶಿವಾಯ ಶಾಂತಾಯ ಪುಸ್ತಕದಲ್ಲಿ ಇಂತಹ ಹಲವು ಅಪರೂಪದ ಮಾಹಿತಿಗಳು ಸಿಗುತ್ತವೆ. ಶ್ರೀ ಶ್ರೀ ಆನಂದ ಮೂರ್ತಿಯವರು ಹೇಳಿದ್ದಾರೆಂಬ ಕಾರಣಕ್ಕಾಗಿಯೇ ಶಿವನನ್ನು ಐತಿಹಾಸಿಕ ಮಹಾಮೇರು ವ್ಯಕ್ತಿಯೆಂದು ನಂಬಬೇಕೇ ಎಂಬ ಪ್ರಶ್ನೆ ಸಹಜ. ಶಿವನ ಅಸ್ತಿತ್ವಕ್ಕೆ ಆಧಾರವಾಗಿ ಯಾವ ಶಿಲಾ ಲೇಖವೂ ಇಲ್ಲ. ಯಾಕೆಂದರೆ ಅಂದು ಲಿಪಿಯ ಆವಿಷ್ಕಾರ ಆಗಿರಲೇ ಇಲ್ಲ. ಆದರೂ ಶಿವನ ಐತಿಹಾಸಿಕ ಸತ್ಯವನ್ನು, ತಾರ್ಕಿಕವಾಗಿ ಲೇಖಕರು ಸಿದ್ಧಪಡಿಸುತ್ತಾರೆ. ಇದೇ ಅವರ ಪ್ರವಚನಗಳ ವಿಶೇಷತೆ. ನಮಃ ಶಿವಾಯ ಶಾಂತಾಯ ಬರೀ ಶಿವನ ಕಥೆಯಲ್ಲ. ಕಳೆದ ಏಳು ಸಾವಿರ ವರ್ಷಗಳ ಭಾರತದ ಇತಿಹಾಸವಿದು. ಶಿವನ ನಂತರ ಭಾರತದಲ್ಲಿ ಉಂಟಾದ ಬದಲಾವಣೆಗಳು ಹುಟ್ಟಿಕೊಂಡ ಹೊಸ ಹೊಸ ಪಂಥಗಳು, ಮತಗಳು ಮತ್ತು ಅವು ಯಾವ ರೀತಿಯಲ್ಲಿ ಶಿವನಿಂದ, ಶಿವತತ್ವದಿಂದ ಪ್ರೇರಿತವಾದವೆನ್ನುವುದನ್ನು ವಿವರಿಸಲಾಗಿದೆ, ಬೌದ್ಧ, ಜೈನ ಮತಗಳು ಕೂಡಾ ಹೇಗೆ ಶಿವನ ಪ್ರಭಾವಕ್ಕೊಳಗಾಗಿ ತಮ್ಮ ನಂಬಿಕೆಯ ದೇವ- ದೇವತೆಗಳನ್ನು ಶಿವನೊಂದಿಗೆ ಜೋಡಿಸಿದರೆಂಬ ಮಾಹಿತಿಯನ್ನು ನೀಡಲಾಗಿದೆ. ಬೌದ್ಧರ ತಾರಾನಾಥ, ಜೈನರ ಮಂಜುನಾಥ ಮುಂತಾದ ಹಲವು ಉದಾಹರಣೆಗಳೂ ಲಭ್ಯ. ದೇಶದ ವಿವಿಧ ಪ್ರದೇಶಗಳಲ್ಲಿ ಆಚರಣೆಯಲ್ಲಿರುವ ಸಂಪ್ರದಾಯಗಳು ಶಿವನೊಂದಿಗೆ ಹೊಂದಿರುವ ಸಂಬಂಧಗಳ ವಿಶ್ಲೇಷಣೆಯನ್ನು ನೀಡಲಾಗಿದೆ. ಶಿವೋಕ್ತಿ

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಬಂದು ಹೋಗು ಡಾ.ಗೋವಿಂದ ಹೆಗಡೆ ಬಾ ಶಂಭು, ಬಾ ಕುಳಿತುಕೋ ಕ್ಷಣ ಸಾವರಿಸಿಕೋ ಹುಷಾರು! ನಿನ್ನ ಆ ಹಳೆಯ ಹುಲಿಯದೋ ಆನೆಯದೋ ಚರ್ಮ ಹರಿದುಹೋದೀತು! ಹೊಸದು ಸಿಗುವುದು ಸುಲಭವಲ್ಲ ಮಾರಾಯ! ನಮ್ಮ ಮಂಗಮಾಯ ಕಲೆ ನಿನಗೂ ತಿಳಿಯದೇನೋ ಮತ್ತೆ ಅರಣ್ಯ ಇಲಾಖೆಯವರ ಕೈಯಲ್ಲಿ ಸಿಕ್ಕೆಯೋ ನಿನ್ನ ಕತೆ -ಅಷ್ಟೇ! ಆ ಕೊರಳ ಹಾವು ಆ ಜಟೆ ಅದಕ್ಕೊಂದು ಚಂದ್ರ ಸಾಲದ್ದಕ್ಕೆ ಗೌರಿ! ಕೈಯ ಭಿಕ್ಷಾಪಾತ್ರೆ ತ್ರಿಶೂಲ ಕಪಾಲ ಮಾಲೆ ಯಾಕಯ್ಯ ನಿನಗೆ ಈ ಯುಗದಲ್ಲೂ ಅದೆಲ್ಲ?! ನರಮನುಷ್ಯರಂತೆ ಎಲ್ಲ ಬಿಟ್ಟು ಆರಾಮಾಗಿ ಇರಬಾರದೇ? ಮನೆಯಲ್ಲಿ ಎಲ್ಲ ಕ್ಷೇಮವೇ ನಿನ್ನ ಸತಿ ಗಿರಿಜೆ ಮುನಿದು ಚಂಡಿಯಾಗಿಲ್ಲ ತಾನೆ ? ಕರಿಮುಖ ಷಣ್ಮುಖರು ಕುಶಲವೇನಯ್ಯ ಭಸ್ಮಾಸುರನಿಗೆ ನೀನೇ ವರ ಕೊಟ್ಟೆ ಮತ್ತೆ ಪಾಡೂ ಪಟ್ಟೆ ಮೋಹಿನಿ ಕಾಪಾಡಿದಳಂತೆ ನಿನ್ನ ಈಗಿನ ಕತೆ ಬೇರೆ ಭಸ್ಮಾಸುರನ ಚಹರೆ ಬದಲಾಗಿದೆ ಕೊಬ್ಬಿ ಕಾಡುತ್ತಿದ್ದಾನೆ ಕಾಪಾಡುತ್ತೀಯಾ ನೀನು ಕರೆತರುವೆಯಾ ಮೋಹಿನಿಯನ್ನು ದೇವ ದಾನವರ- ಯಾಕೆ ಸಕಲ ಲೋಕಗಳ ಉಳಿಸಲು ವಿಷ ಕುಡಿದವ ನೀನು ಈ ಮನುಷ್ಯರ ಈ ಅವನಿಯ ಉಳಿಸಲು ಏನಾದರೂ ಮಾಡಯ್ಯ ಇಂದೇನೋ ಶಿವರಾತ್ರಿಯಂತೆ ಅಭಿಷೇಕ ಅರ್ಚನೆ ಉಪವಾಸ ಜಾಗರಣೆ ಎಂದೆಲ್ಲ ಗಡಿಬಿಡಿಯಲ್ಲಿ ಮುಳುಗಿದ್ದಾರೆ ಜನ ಬಾ, ಆರಾಮಾಗಿ ಕೂತು ಹರಟು ಹೇಳು, ಕುಡಿಯಲು ಏನು ಕೊಡಲಿ ಅನಾದಿ ಅನಂತನಂತೆ ನೀನು ನಮ್ಮ ಆದ್ಯಂತವೂ ಲಕ್ಷಲಕ್ಷ ತಾಪಗಳ ತುಂಬಿಕೊಂಡಿದ್ದೇವೆ ಹಾಸಿ ಹೊದೆವಷ್ಟು ಉಸಿರು ಕಟ್ಟುವಂತೆ ಇಂದು ಬಂದಂತೆ ಆಗೀಗ ಬಾ, ಮುಖ ತೋರಿಸು ನಮ್ಮ ಆಚೆಗೂ ಇದೆ ಬದುಕು ನೆನಪಿಸಲು ಬಂದು ಹೋಗು ಸಾಧ್ಯವಾದರೆ ಮನುಕುಲವೆಂಬ ಈ ಭಸ್ಮಾಸುರನ ಅವನಿಂದಲೇ ಉಳಿಸಿ ಹೋಗು. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿರೀಕ್ಷೆ ಅಪೇಕ್ಷೆ ರೇಖಾ ವಿ.ಕಂಪ್ಲಿ ಗೇಣಗಲ ಗಭ೯ದಲ್ಲಿ ಅದೆಷ್ಟು ಸುರಕ್ಷಿತ… ಅಮ್ಮ ನಿನ್ನಿಂದ ಬೇಪ೯ಟ್ಟು ನಾನೆಷ್ಟು ಅರಕ್ಷಿತ…. ಬರುತಲಿವೇ ಕಷ್ಟಗಳು ಅನಿರೀಕ್ಷಿತ… ಆದರೂ ಕಾದಿರುವೆ ಒಳಿತನು ನಿರೀಕ್ಷಸುತ…. ಯಾರಿಗೂ ಆಗಲು ಬಯಸುವುದಿಲ್ಲ ಆಕಷಿ೯ತ…. ಆದರೂ ಏಕೆ ನಾನು ಎಲ್ಲರಿಂದಲೂ ಅಲಕ್ಷಿತ…. ದೈವವು ನಿಂತಿದೆ ನನ್ನ ಸದಾ ಪರೀಕ್ಷಿಸುತ ಆದರೂ ಅಮ್ಮ ಸದಾ ನಿನ್ನ ಪ್ರೇಮ ಅಪೇಕ್ಷಿಸುತ.. *******

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

“ದುಃಖ” ಮೂಲ ಸುಮನಾ ರಾಯ್(ಇಂಗ್ಲೀಷ್) ಕನ್ನಡಕ್ಕೆ:ಕಮಲಾಕರ ಕಡವೆ “ದುಃಖ” ದುಃಖ ಒಂದು ಬಿಳಿ ಆಕಳ ಮೇಲೆ ಕೂತ ಬಿಳಿ ಕೊಕ್ಕರೆಒಂದು ಮಾತ್ರ ಇನ್ನೊಂದರ ತೂಕ ಸಹಿಸ ಬಲ್ಲದು ದುಃಖ ನದಿತೀರದ ಬಿಳಿ ಮರಳುಅದು ಒದ್ದೆಯಾಗಿದ್ದಾಗಲೂ ಬಿಳಿಯೇ. ದುಃಖ ಬೇಲಿ ಮೇಲಣ ಬಿಳಿ ದಾಸವಾಳಅದಕ್ಕೆ ಬಿಳಿ ಮೊಗ್ಗು, ಬಿಳಿ ಹೆಣ. ದುಃಖ ಮಂಜು-ಮುಸುಕಿದ ಮರ, ಬಿಳಿ ರೆಪ್ಪೆಗೂದಲುಅದರ ಹೆಣೆಗಳು ತಮ್ಮದೇ ತೂಕದಿಂದ ಜೋಲುತ್ತವೆ. ದುಃಖ ಕಾಡಾನೆಯ ದಂತ, ಚೂಪು, ವರ್ಷಾನುವರ್ಷಗಳ ಶೇಖರಣೆಅದರ ಸೌಂದರ್ಯ, ಶೋಭೆ ದೂರದಿಂದ ಮಾತ್ರ. ದುಃಖ ಕಣ್ಣ ಬಿಳಿಪಾಪೆ, ನೋವು ತೊಟ್ಟಿಕ್ಕುವ ಪರದೆಅದು ತನ್ನ ತಾ ತೊಳೆದು, ಕೆಂಪಾಗಿ, ಮತ್ತೆ ಬಿಳಿಗೆ ತಿರುಗುತ್ತದೆ ದುಃಖ ಒಂದು ಸಂಗ್ರಹಾಲಯ, ಬಿಳಿ ಗೋಡೆ ಮೇಲಿನ ಚಿತ್ರಗಳುನಾವದನು ಬಿಟ್ಟರೂ, ಅದು ಬಿಡದು ನಮ್ಮನು ************ Sadness Sadness is a white crane on a white cow.Only one can bear the weight of another. Sadness is white sand on a river bank.It is white even when wet. Sadness is white hibiscus resting on a fence.It has a white bud and a white corpse. Sadness is a snow-covered tree, eyelashes of white.Its branches droop with its own weight. Sadness is a wild elephant’s tusk, sharp, a deposition of years.It has beauty and grace only from a distance. Sadness is the sclera, the screen from which hurt drips.It washes itself, tinges red and becomes white again. Sadness is a museum, pictures on white walls.You leave it but it never leaves you. ***********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಕೊಡುವುದಾದರೂ ಯಾರಿಗೆ? ವಿಜಯಶ್ರೀ ಹಾಲಾಡಿ ಹೌದು ಈ ಪ್ರೀತಿಯನ್ನು ಮೊಗೆಮೊಗೆದು ಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆ ಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದ ಮುಖ –ಮುಖವಾಡಗಳು … ರಾತ್ರಿ -ಹಗಲುಗಳನ್ನು ಗೆಜ್ಜೆಕಾಲಿನಲ್ಲಿ ನೋಯಿಸಲೆ … ಯಾತನೆಯನ್ನು ನುಂಗುತ್ತಿರುವೆ ಸಂಜೆಯ ಏಕಾಂತಗಳಲ್ಲಿ ಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆ ಮಂಡಿಯೂರಿದ್ದೇನೆ ಹಟಮಾರಿ ಕಡಲಾಗಿದ್ದೇನೆ.. ತರ್ಕಕ್ಕೆ ನಿಲುಕದ ಗಳಿಗೆ -ಗಳಲ್ಲಿ ಒಂಟಿಹೂವಂತೆ ನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆ ಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನು ಮತ್ತೆ ಹುಟ್ಟಿಸಿಕೊಳ್ಳಲು ಸಾಧ್ಯವಾಗುವುದಾದರೆ ಪ್ರೀತಿಯಿಂದ ಆರ್ತಳಾಗಿದ್ದೇನೆ. (ಚಿತ್ರಕೃಪೆ-ವಿಜಯಶ್ರೀ ಹಾಲಾಡಿ)

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತುಮುಲ ಬಿ.ಎಸ್.ಶ್ರೀನಿವಾಸ್ ಬಿಟ್ಟು ಬಿಡಬೇಕು ಬಗ್ಗಡದ ನೀರನ್ನು ತನ್ನಷ್ಟಕ್ಕೆ ತಾನೇ ತಿಳಿಯಾಗಿ ಪ್ರತಿಬಿಂಬ ತೋರಿಸುವವರೆಗೂ ಹರಿಯಬಿಡಬೇಕು  ಯೋಚನೆಗಳ ಕಡಿವಾಣವಿಲ್ಲದ ಕುದುರೆಯನ್ನು ಓಡಲಾಗದೆ ತಾನೇ ನಿಲ್ಲುವವರೆಗೂ ಸುರಿಸಿಬಿಡಬೇಕು ಕಂಬನಿ ಮನದ ಬೇಗುದಿಯೆಲ್ಲ ಕರಗಿ ಶಾಂತಿ ನೆಲೆಸುವವರೆಗೂ ನಡೆದು ಹೋಗಲಿ ಪ್ರಳಯ ಪರಶಿವನ ತಾಂಡವ ನೃತ್ಯ ಭ್ರಮೆಗಳೆಲ್ಲ ಭಸ್ಮವಾಗುವವರೆಗೂ ಕರಗಿದಾ ಕತ್ತಲಲಿ ಬಸವಳಿದ ಮೈಮನಕೆ ಗಾಢನಿದ್ರೆಯು ಆವರಿಸಬೇಕು ಮುಂಜಾನೆ ಹಕ್ಕಿ ಚಿಲಿಪಿಲಿ ಅರುಣೋದಯ ರಾಗದಲಿ ಹೊಸಬೆಳಕು ಮೂಡಬೇಕು ********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಕೃತಿ: ತಗಿ ನಿನ್ನ ತಂಬೂರಿ(ಶರೀಫರ ತತ್ವ ಭಾಷ್ಯ) ಲೇಖಕಿ; ಚಂದ್ರಪ್ರಭ ಬಿ. ಪ್ರಕಾಶಕರು: ಅಜಬ್ ಪ್ರಕಾಶನ, ನಿಪ್ಪಾಣಿ ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಅಜಬ್ ಪ್ರಕಾಶನ, ನಿಪ್ಪಾಣಿ ರವರ ಹೊಸ ಪ್ರಕಟಣೆ. ಬನಹಟ್ಟಿಯ ಚಂದ್ರಪ್ರಭಾ ಲೇಖನಿಯಿಂದ ಇದು ಚೊಚ್ಚಲ ಪುಸ್ತಕ. ಕನ್ನಡ ನಾಡಿನ ಬಹು ಜನಪ್ರಿಯ ಜಾನಪದ ಕವಿ, ತತ್ವ ಪದಕಾರ ಶರೀಫ ಸಾಹೇಬರ ಆಯ್ದ ೨೫ ತತ್ವ ಪದಗಳನ್ನು ಇಲ್ಲಿ ಲೇಖಕರು ಚರ್ಚೆಗೆ ಒಳಪಡಿಸಿದ್ದಾರೆ. ಪ್ರಸ್ತಾವನೆಯಲ್ಲಿ ಸ್ವತಃ ಲೇಖಕಿ ಹೇಳುವಂತೆ ಶಿವಯೋಗದ ಹಿನ್ನೆಲೆಯಲ್ಲಿ ಈ ಪದ್ಯಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಪೂರಕವಾಗಿ‌ ಬಸವಾದಿ ಶರಣರ ವಚನಗಳನ್ನು ಅಲ್ಲಲ್ಲಿ ಉಲ್ಲೇಖಿಸಿ ಶರಣರ ವಚನಗಳು ಹಾಗೂ ಶರೀಫರ ತತ್ವ ಪದಗಳಿಗಿರುವ ತಾತ್ವಿಕ ಹಿನ್ನೆಲೆಯತ್ತ ಬಲು ಸೊಗಸಾಗಿ ಗಮನ ಸೆಳೆಯಲಾಗಿದೆ. ಸಾಮಾನ್ಯ ಜನಜೀವನದ ಆಗು ಹೋಗುಗಳನ್ನೇ ರೂಪಕವನ್ನಾಗಿ ಮಾಡಿಕೊಳ್ಳುವಾಗಲೂ ಶರೀಫರ ತತ್ವ ಪದಗಳ ಗೂಢಾರ್ಥ ಪರಮಾರ್ಥ ಸಾಧನೆಯತ್ತ ಕೈ ಹಿಡಿದು ನಡೆಯಿಸುವುದನ್ನು ಲೇಖಕಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಆಯಾ ಸಂದರ್ಭಗಳಲ್ಲಿ ಅಗತ್ಯವೆನಿಸುವ ದೃಷ್ಟಾಂತ ನೀಡುವ ಮೂಲಕ ಸಂಗತಿಗಳನ್ನು ಓದುಗ ಸ್ನೇಹಿ ಮಾಡುವ ನಿಟ್ಟಿನಲ್ಲಿ ಲೇಖಕರು ಪರಿಶ್ರಮ ಪಟ್ಟಿದ್ದು ಕಂಡು ಬರುತ್ತದೆ. ಸುದೀರ್ಘವಾದ ತಮ್ಮ ಪ್ರಸ್ಥಾವನೆಯಲ್ಲಿ ಯೋಗ, ಶಿವಯೋಗ ಇತ್ಯಾದಿ ಕುರಿತು ಹೇಳುವ ಲೇಖಕರು ಕಾವ್ಯ ಕುರಿತು ವ್ಯಕ್ತಪಡಿಸುವ ಅಧ್ಯಾಯ ಗಮನ ಸೆಳೆಯುತ್ತದೆ. ಅದೇ ರೀತಿ ಯೋಗದಲ್ಲಿ ಪ್ರಸ್ತಾಪವಾಗುವ ಹಲವಾರು ತಾಂತ್ರಿಕ ಪಾರಿಭಾಷಿಕ ಪದಗಳ ವಿವರಣೆ ಕೂಡಾ ಪೂರಕವಾಗಿದೆ. ಶರೀಫರ ಜೀವನದ ಆಗು ಹೋಗುಗಳನ್ನು ತಿಳಿಸುವ ಮೂಲಕ ಅವರೊಬ್ಬ ಸಮನ್ವಯದ ಹರಿಕಾರ ಎಂಬ ಅಂಶವನ್ನು ಕೊನೆಯಲ್ಲಿ ನಿರೂಪಿಸಲಾಗಿದೆ. ಶರೀಫರು ಬೇರೆಲ್ಲ ಆಗುವುದಕ್ಕಿಂತ ಮಿಗಿಲಾಗಿ ಓರ್ವ ಶಿವಯೋಗ ಸಾಧಕರಾಗಿದ್ದರು, ಅಪ್ಪಟ ಶರಣರಾಗಿದ್ದರು, ಮೌಢ್ಯ ವಿರೋಧಿಯಾಗಿದ್ದರು, ಜನಾನುರಾಗಿಯಾಗಿದ್ದರು ಎಂಬ ಸ್ಪಷ್ಟ ನಿಲುವನ್ನು ಲೇಖಕರು ಅತ್ಯಂತ ಶ್ರದ್ಧೆಯಿಂದ ನಿರೂಪಿಸುವುದನ್ನು ಇಲ್ಲಿ ಕಾಣಬಹುದು. ಪುಸ್ತಕ ದೊರೆಯುವ ಸ್ಥಳ: ರೂ. ೧೮೦/- ಬೆಲೆಯ ಪುಸ್ತಕ “ಅರು ಪ್ರಕಾಶನ” ಬನಹಟ್ಟಿ ಇವರಲ್ಲಿ ಲಭ್ಯವಿದೆ. ಸಂಪರ್ಕ ಸಂಖ್ಯೆ 9916542172 ಡಿ. ಎ. ಬಾಗಲಕೋಟ, ‘ಅರು ನಿಲಯ’, ಬೀಳಗಿ ಓಣಿ, ಬನಹಟ್ಟಿ 587311, ಜಿ.‌ ಬಾಗಲಕೋಟ – ಇವರನ್ನು ಸಂಪರ್ಕಿಸಬಹುದು.

ಪುಸ್ತಕ ಪರಿಚಯ Read Post »

ಅನುವಾದ

ಅನುವಾದ ಸಂಗಾತಿ

ಅಂಥ ಹೆಣ್ಣಲ್ಲ ನಾನು… ಮೂಲ: ಕಿಶ್ವರ್ ನಾಹಿದ್ ಕನ್ನಡಕ್ಕೆಚಂದದ್ರಪ್ರಭ .ಬಿ. ಅಂಥ ಹೆಣ್ಣಲ್ಲ ನಾನು… ಸಂತೆಯಲ್ಲಿ ನಿಂತು ನೀವು ಬಯಸುವುದನ್ನೇ ನಿಮಗೆ ಮಾರಾಟ ಮಾಡುವ ಅಂಥವಳು ನಾನಲ್ಲ ನೆನಪಿಟ್ಟುಕೊಳ್ಳಿ, ನೀವು ನಿಮ್ಮ ಕೈಯಾರೆ ನಿರ್ಮಿಸಿದ ಕಲ್ಲಿನ ಕೋಟೆಯ ನಡುವೆ ಸುಭದ್ರವಾಗಿ ಬಂಧಿಸಿಟ್ಟ ಅವಳು, ನಾನು ಕಲ್ಲ ಗೋಡೆಗಳು ನನ್ನ ಧ್ವನಿಯನ್ನು ಬಂಧಿಸಲಾರವು ಎಂಬ ಸತ್ಯವನು ನೀವು ಅರಿಯದೆ ಹೋದಿರಿ ರೂಢಿ ಸಂಪ್ರದಾಯದ ಹೆಸರಲ್ಲಿ ಏನೆಲ್ಲವನು ನೀವು ನುಚ್ಚು ನೂರು ಮಾಡಿದಿರೊ ಆ ಅವಳೇ ನಾನು ನೀವು ಅರಿಯಲು ವಿಫಲರಾದಿರಿ ಕತ್ತಲೆಯ ಗರ್ಭದಲ್ಲಿ ಬೆಳಕನ್ನು ಬಂಧಿಸಲಾಗದು ನೆನಪಿಟ್ಟುಕೊಳ್ಳಿ ಯಾರ ಮಡಿಲಿನ ನವಿರಾದ ಹೂ ದಳಗಳನ್ನು ಕಿತ್ತೆಸೆದು ಅಲ್ಲಿ ಮುಳ್ಳುಗಳನ್ನು ಪ್ರತಿಷ್ಠಾಪಿಸಿದಿರೊ ಆ ಅವಳೇ ನಾನು ನಿಮಗೆ ತಿಳಿದಿಲ್ಲದಿರಬಹುದು… ಆದರೆ ಸಂಕೋಲೆಗಳು ಪರಿಮಳವನ್ನು ಉಸಿರುಗಟ್ಟಿಸಿ ಹೊಸಕಲಾರವು ಶೀಲ ಚಾರಿತ್ರ್ಯಗಳ ಹೆಸರಿನಲ್ಲಿ ಮಾರಾಟದ ಸರಕಾಗಿಸಿದ ಆ ಅವಳು ನಾನಲ್ಲ ಅರಿಯಲು ಸೋತಿರಿ ನೀವು ಮಡುವಿನಲ್ಲಿ ಮುಳು ಮುಳುಗಿಸಿ ಉಸಿರುಗಟ್ಟಿಸಿ ನನ್ನ ಹೊಸಕಿದೆನೆಂದು ನೀವು ಬೀಗುವಾಗಲೂ ನೀರ ಮೇಲೆ ನಾ ನಡೆಯಬಲ್ಲೆ ಎಂಬುದನು ನನ್ನನ್ನು ಒಂದು ಹೊರೆಯೆಂದು ಬಗೆದು ಪೀಡೆ ತೊಲಗಿ ಹೋಗಲೆಂದು ಅವಸರಿಸಿ ಯಾರಿಗೊ ಕೊಟ್ಟು ಕೈ ತೊಳೆದುಕೊಂಡ ಆ ಅವಳು ನಾನು ಇನ್ನಾದರೂ ಅರಿಯಿರಿ ಬುದ್ದಿಗೂ ಭಾವಕೂ ಸಂಕೋಲೆ ತೊಡಿಸಿದ ದೇಶಕ್ಕೆ ಸ್ವಾತಂತ್ರ್ಯವೆಲ್ಲಿ? ಪ್ರಗತಿಯೆಲ್ಲಿ? ಯಾರ ಚೈತನ್ಯ ತಾಯ್ತನ ನಿಷ್ಠೆಗಳನ್ನು ಮಾರಾಟದ ಸರಕಾಗಿಸಿದಿರೊ ಆ ಅವಳು ನಾನು ನನಗೀಗ ಅರಳುವ ಸಮಯ ಜಾಹೀರಾತಿನ ಗೋಡೆಯ ಮೇಲೆ ಅರೆ ಬೆತ್ತಲೆ ಅರೆ ಪ್ರಜ್ಞಾವಸ್ಥೆಯಲ್ಲಿ ಮಾರಾಟಕ್ಕೆ ನಿಂತ ಆ ಅವಳೇ? ಅಲ್ಲ, ಅಲ್ಲಲ್ಲ.. ನಾನು ಅವಳಲ್ಲವೇ ಅಲ್ಲ ***** I Am Not That Woman I am not that woman Selling you socks and shoes! Remember me, I am the one you hid In your walls of stone, not knowing That my voice cannot be smothered by stones I am the one you crushed With the weight of custom and tradition Not knowing That light cannot be hidden in darkness. Remember me, I am the one whose lap You picked flowers And planted thorns and embers Not knowing That chains cannot smother my fragrance I’m not that woman Whom you bought and sold In the name of chastity Not knowing That I can walk on water When I am drowning I am the one you married off To get rid of a burden Not knowing That a nation of captive minds Cannot be free I am the commodity you traded in My chastity, my motherhood, my loyalty Now it is time for me to flower free. The woman on the post, half naked selling socks and shoes — No, no, I am not that woman.

ಅನುವಾದ ಸಂಗಾತಿ Read Post »

You cannot copy content of this page

Scroll to Top