ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ದೇವರಮನೆಯಲ್ಲಿ ಕುರಿಂಜಿ (ಬಿಸಿಲನಾಡಾದ ಬಳ್ಳಾರಿ ಸೀಮೆಯಲ್ಲೂ ಕುರಿಂಜಿಯಿದೆ ಎಂಬ ಖಬರಿಲ್ಲದೆ,ಎರಡು ವರ್ಷದ ಹಿಂದೆ ಬರೆದ ಲೇಖನವಿದು.) ತರೀಕೆರೆ ಸೀಮೆಗೆ ಸೇರಿದ ಕೆಮ್ಮಣ್ಣುಗುಂಡಿ, ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕಲ್ಹತ್ತಿಗಿರಿ ಮುಂತಾದ ಶೋಲಾ ಬೆಟ್ಟಗಳಲ್ಲಿ ಬಾಲ್ಯದಿಂದಲೂ ಅಲೆದಿದ್ದೇನೆ. ಆಗ ಕಳೆಯಂತೆ ಬೆಳೆದಿರುತ್ತಿದ್ದ ಅನಾಮಿಕವಾದ ಹಸಿರು ಗಿಡಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಅವು 12 ವರ್ಷಕ್ಕೊಮ್ಮೆ ಹೂಬಿಟ್ಟು ಗಿರಿಕಣಿವೆಗಳನ್ನು ಹೂವಿನ ತೊಟ್ಟಿಲಾಗಿ ಮಾಡಬಲ್ಲ ಕುರಿಂಜಿಗಳೆಂದು ಗೊತ್ತಿರಲಿಲ್ಲ. ತಿಳಿಯುತ್ತ ಹೋದಂತೆ, ನಮ್ಮ ಆಸುಪಾಸಿನಲ್ಲೇ ಇರುವ ಅವನ್ನು ಗಮನಿಸದೆ ಹೋದೆನೆಲ್ಲ ಎಂದು ತುಸು ಲಜ್ಜೆಯಾಗಿತ್ತು. ಕಳೆದ ಋತುವಿನಲ್ಲಿ ಕುರಿಂಜಿಯ ಭೇಟಿ ಮಾಡಿದೆ. ಕುರಿಂಜಿಯ ಸಾಮಾನ್ಯವಾಗಿ ಪಶ್ಚಿಮಘಟ್ಟದ ಶೋಲಾಕಾಡುಗಳಲ್ಲಿ ಬೆಳೆಯುತ್ತದೆ. ಅದರಲ್ಲೂ ನಾಲ್ಕೈದು ಸಾವಿರ ಅಡಿ ಎತ್ತರದಲ್ಲಿ ಮತ್ತು ಧೋಧೋ ಮಳೆ ಬೀಳುವಲ್ಲಿ. ಶೋಲಾಕಾಡುಗಳ ವಿಶಿಷ್ಟ ಚಹರೆಯೆಂದರೆ-ಬೋಳಾಗಿ ಕಾಣುವ ಹುಲ್ಲುಬೆಳೆದ ಬೆಟ್ಟಗಳು; ಆಳವಾದ ಕಣಿವೆಗಳಲ್ಲಿ ಹಸಿರುಹಿಮ ಹೆಪ್ಪುಗಟ್ಟಿದಂತೆ ಕಾಡು; ಬೆಟ್ಟ-ಕಣಿವೆಗಳನ್ನು ಹೊಗೆಯಂತೆ ಬಂದು ತಬ್ಬಿಕೊಂಡು ಆಟವಾಡುವ ಮೋಡಗಳು; ಹರನ ಜಟೆಯಿಂದ ಜಿನುಗುವ ಗಂಗೆಯಂತೆ ಒಸರುವ ಜಲಧಾರೆಗಳು; ಮುಖದೋರದೆ ಹಚ್ಚನೆ ಕಂಬಳಿಯೊಳಗೆ ಅಡಗಿ ಕಣಿವೆಯೇ ಹಾಡುವಂತೆ ಮಾಡುವ ಹಕ್ಕಿಗಳು; ಅಪರೂಪಕ್ಕೆ ಹುಲ್ಲುಹಾಸಿನ ನೆತ್ತಿಗಳ ಮೇಲೆ ಕಾಣುವ ಕಾಡುಕೋಣ, ಕಾಡುಕುರಿ, ಕಡವೆ, ಜಿಂಕೆಗಳು; ಎಂದೂ ಕಾಣಿಸದ ಹುಲಿ.ಇಂತಹ ಪರಿಸರದಲ್ಲಿ ವಾಸಿಸುವ ಕುರಿಂಜಿ, ನೋಡಲು ಮೊಳಕಾಲೆತ್ತರದ ಸಾಧಾರಣ ಗಿಡ; ಕಪ್ಪುಹಸುರಿನ ದಪ್ಪನೆಯ ಎಲೆಗಳಿಗೆ ಹಸ್ತರೇಖೆಯಂತೆ ಎದ್ದುಕಾಣುವ ಗೀರುನರ; ಚಳಿಗೆದ್ದ ನವಿರಿನಂತೆ ಸೂಕ್ಷ್ಮವಾದ ಸುಂಕು. ಅಂಚಿನಲ್ಲಿ ಗರಗಸದ ಹಲ್ಲಿನಂತೆ ಕಚ್ಚುಗಳು. ಫರ್ನ್ ಹಾಗೂ ಹುಲ್ಲಿನ ಜತೆ ಬೆರೆತು ಬೆಳೆಯುವ ಇದು, ಹೂವಿಲ್ಲದ ದಿನಗಳಲ್ಲಿ ಯಾವ ಆಸಕ್ತಿಯನ್ನೂ ಕೆರಳಿಸುವುದಿಲ್ಲ. ಗೊರಟೆಯಂತೆ ಕಾಣುವ ಇದರ ಹೂ ಕೂಡ ಬಹಳ ಸುಂದರವಲ್ಲ. ಬಹುಶಃ ಹೂಬಿಡಲು ತೆಗೆದುಕೊಳ್ಳುವ ದೀರ್ಘಕಾಲ ಮತ್ತು ಹೂತಳೆದ ಕಾಲಕ್ಕೆ ಕಣಿವೆಗಳನ್ನೆ ನೀಲಿಯಾಗಿಸುವ ಶಕ್ತಿಯಿಂದ ಅದು ಖ್ಯಾತೆ. ಉದಕಮಂಡಲದ ಬೆಟ್ಟಗಳಿಗೆ ‘ನೀಲಗಿರಿ’ ಹೆಸರು ಬರಲು ಕುರಿಂಜಿಯೇ ಕಾರಣ. ನೀಲದ ಜತೆಗೆ ತಿಳಿಗೆಂಪು ಹಾಗೂ ಮಾಸಲುಬಿಳಿ ಕುರುಂಜಿಯೂ ಇವೆ. ಮಲೆನಾಡಿಗರಾದ ಕಲ್ಕುಳಿ ಹೆಗ್ಗಡೆಯವರ ಪ್ರಕಾರ, ಕುರಿಂಜಿ ಜಾತಿಗೆ ಸಮೀಪವಾದ ಗುರುಗಿ ಸಹ ಐದಾರು ವರ್ಷಕ್ಕೊಮ್ಮೆ ಹೂಬಿಡುತ್ತದೆ. ವ್ಯತ್ಯಾಸವೆಂದರೆ, ಕುರಿಂಜಿ ಬೆಟ್ಟದ ಬಯಲಲ್ಲಿದ್ದರೆ, ಗುರುಗಿ ಕಾಡಂಚಿನ ನೆರಳಲ್ಲಿ ಬೆಳೆಯುತ್ತದೆ. ಕುರಿಂಜಿ ಕೆಮ್ಮಣ್ಣುಗುಂಡಿ, ಬಾಬಾಬುಡನ್‍ಗಿರಿ, ಕುದುರೆಮುಖ, ಕೊಡಚಾದ್ರಿ, ದೇವರಮನೆ, ಕುಮಾರಪರ್ವತಗಳ ಶೋಲಾಗಳಲ್ಲಿ ಚದುರಿಕೊಂಡಿದೆ. ಕುದುರೆಮುಖದ ಬಳಿ ಕುರಿಂಜಿ ಎಂಬ ಬೆಟ್ಟವೇ ಇದೆ. ಕುರಿಂಜಿಗೆ ಕನ್ನಡದಲ್ಲಿ ಹಾರ್ಲೆ ಎನ್ನುವರು. ಇದರ ನಿಜ ವೈಭವ ತಮಿಳುನಾಡಿನ ಉದಕಮಂಡಲ, ಪಳನಿ, ಕೊಡೈಕೆನಾಲ್, ಏರ್ಕಾಡು ಹಾಗೂ ಕೇರಳದ ಮುನ್ನಾರ್‍ಗಳಲ್ಲಿದೆ. ಅಲ್ಲಿ ಇಡೀ ಬೆಟ್ಟಕಂದರಗಳ ಮೇಲೆ ರಂಗಿನ ಚಾದರವಾಗಿ ಹಬ್ಬುವ ಕುರುಂಜಿ ತನ್ನ ಸರ್ವಾಧಿಕಾರ ಸ್ಥಾಪಿಸುತ್ತದೆ; ಹಿಮಾಲಯದ ಹೂಕಣಿವೆಗಳ ಚೆಲುವನ್ನು ನೆನಪಿಸುತ್ತದೆ. ನಾನು ಕುರಿಂಜಿ ಕಾಣಲು ನನಗೆ ಅತಿಪರಿಚಿತವಾಗಿರುವ ಬಾಬಾಬುಡನಗಿರಿ ಶ್ರೇಣಿಯನ್ನು ಬಿಟ್ಟು, ಮೂಡಿಗೆರೆ ಸಮೀಪದ ದೇವರಮನೆಯನ್ನು ಆರಿಸಿಕೊಂಡೆ. ದೇವರಮನೆ ಕೆಳಗಿನ ಬೆಟ್ಟಗೆರೆಯಲ್ಲಿರುವ ಕಿರಿಯಗೆಳೆಯ ಸಂಪತ್, ‘ಹೂಬಿಟ್ಟಿವೆ ಬನ್ನಿ. ಆದರೆ ಕಾಡಾನೆಗಳ ಕಾಟ’ ಎಂದು ಎಚ್ಚರಿಕೆ ಸಹಿತವಾದ ಆಹ್ವಾನ ಕೊಟ್ಟರು. ಕ್ಯಾಮೆರಾಧಾರಿ ಸೋದರ ಕಲೀಮನೊಡನೆ ಬೆಟ್ಟಗೆರೆಗೆ ಹೋದೆ. ಸಂಪತ್ ಮನೆ ಅವರ ಪುಟ್ಟ ಕಾಫಿತೋಟದಲ್ಲಿದೆ. ಮನೆಯ ಸುತ್ತಮುತ್ತವಿದ್ದ ಮರ ಗಿಡಗಳಿಗೆ ಶೋಲಾ ಪರಿಸರದ ನೂರಾರು ಬಗೆಯ ಹಕ್ಕಿಗಳು ಬಂದುಹೋಗುತ್ತಿದ್ದವು. ಈ ಹಾರುವ ಹೂಗಳನ್ನು ಕಂಡು ಕುರುಂಜಿಯನ್ನು ಮರೆಯುವ ಲಕ್ಷಣ ತೋರಿಸುತ್ತಿದ್ದ ಪಕ್ಷಿಪ್ರಿಯ ತಮ್ಮನನ್ನು ಉಪಾಯವಾಗಿ ಎಬ್ಬಿಸಿಕೊಂಡು ದೇವರಮನೆಗೆ ಹೊರಟೆವು.ದೇವರಮನೆ- ಕರ್ನಾಟಕದಲ್ಲಿ ಹಾಯುವ ಪಶ್ಚಿಮಘಟ್ಟಗಳ ಸಾಲಿನ ಮೋಹಕ ಪರ್ವತ ಶ್ರೇಣಿಗಳಲ್ಲಿ ಒಂದು. ಹಚ್ಚನೆಯ ಹಚ್ಚಡ ಹೊದ್ದ ಪರ್ವತ-ಕಣಿವೆ; ಅವಕ್ಕೆ ಮನಬಂದಾಗ ಮುಸುಕುವ ಹೊಗೆಮಂಜಿನ ಅಪ್ಪುಗೆ. ಇದು ಭೈರವಾರಾಧನೆಯ ಕ್ಷೇತ್ರ ಕೂಡ. ‘ದೇವರ’ ವಿಶೇಷಣ ಅಂಟಿಸಿಕೊಡಿರುವ ಹಳ್ಳಿ, ಕಣಿವೆ, ಗುಡ್ಡ, ಕಾಡು, ಕೆರೆಗಳು ಸಾಮಾನ್ಯವಾಗಿ ಭೈರವಾರಾಧನೆಗೆ ಸಂಬಂಧಿಸಿದವು. ಅಲ್ಲಿರುವ ಭೈರವ ಗುಡಿಯನ್ನೂ ರುದ್ರಭೀಷಣ ಭಂಗಿಯ ಮೂರ್ತಿಶಿಲ್ಪಗಳನ್ನೂ ಕಂಡರೆ, ಹಿಂದೆ ಇದೊಂದು ನರಬಲಿ ಮುಂತಾಗಿ ತಾಂತ್ರಿಕ ನಿಗೂಢಾಚರಣೆ ನಡೆಯುತ್ತಿದ್ದ ಸ್ಥಳವಾಗಿತ್ತು ಎಂದು ಭಾಸವಾಗುತ್ತದೆ. ಪುರಾವೆಗೆಂಬಂತೆ ಅಲ್ಲೊಂದು ನರಬಲಿ ಫಲಕವೂ ಇದೆ.ಬೆಟ್ಟಗೆರೆಯಿಂದ ದೇವರಮನೆಗೆ ಏರುಹಾದಿ. ತೆಳಗೆ ಕಣಿವೆಯಾಳದಲ್ಲಿ ಕಾಣುವ ಒಂದು ಹಳ್ಳಿಯ ಹೆಸರು ಕೇಳಿ ಖುಶಿಯಾಯಿತು: ‘ಕೋಗಿಲೆ’! ಹಾದಿಯುದ್ದಕ್ಕೂ ಚಿಕ್ಕಚಿಕ್ಕ ಬೆಟ್ಟಗಳು. ಅವುಗಳ ತುಂಬ ಹೊಲದಲ್ಲಿ ಪೈರು ಬೆಳೆದಂತೆ ಕುರುಂಜಿ ಗಿಡ. ಕುರುಂಜಿ ಕನಕಾಂಬರದಂತೆ ಮುಚ್ಚಿದ ಮಗುವಿನ ಮುಷ್ಠಿಯಂತಹ ಪುಟ್ಟತೆನೆಯಲ್ಲಿ ಹೂಬಿಡುತ್ತ ಬರುತ್ತದೆ. ನಾವು ಹೋದಾಗ ಹೂವೈಭವ ಮುಗಿಯುತ್ತಿತ್ತು. ಕೂಲಿಗೆ ಹೋಗುವ ಹೆಂಗಸರು ರಸ್ತೆಯಲ್ಲಿ ನಡೆವಾಗ ಕೈಗೆ ಸಿಕ್ಕ ಬೇಲಿಹೂವನ್ನು ತುರುಬಿಗೆ ಸಿಕ್ಕಿಸಿಕೊಳ್ಳುವಂತೆ, ತೆನೆಯ ತುದಿಯಲ್ಲಿ ಕೆಲವಷ್ಟೆ ಉಳಿದಿದ್ದವು. ಸ್ಥಳೀಯರಿಗೆ `ಹಾರ್ಲೆ’ ಎಂಟು ಹತ್ತು ಹನ್ನೆರಡು ವರ್ಷಕ್ಕೊಮ್ಮೆ ಹೂಬಿಡುವುದು ತಿಳಿದಿದೆ. ಅದನ್ನೊಂದು ವಿಶೇಷವೆಂದು ಅವರು ಭಾವಿಸಿಲ್ಲ. ಅದನ್ನು ದನ ತಿಂದರೆ ಉಚ್ಚಿಕೊಳ್ಳುತ್ತವೆ ಎಂಬುದನ್ನು ಬಲ್ಲರು. ಮಲೆನಾಡ ಜಾನಪದದಲ್ಲೂ ಕುರಿಂಜಿಯ ಉಲ್ಲೇಖ ಕಾಣಲಿಲ್ಲ. ಪದ್ಮಾ ಶ್ರೀರಾಮ್ ಅವರು ಬರೆದ ‘ನೀಲಮೊಗದ ಚೆಲುವೆ’ಯಂತಹ ಕೆಲವು ಲೇಖನಗಳನ್ನು ಬಿಟ್ಟರೆ, ಇದರ ಮೇಲೆ ಹೆಚ್ಚಿನ ಬರೆಹಗಳೂ ಇದ್ದಂತಿಲ್ಲ. ಬಿ.ಜಿ.ಎಲ್. ಸ್ವಾಮಿಯವರ ‘ಹಸಿರುಹೊನ್ನು’ ಕೂಡ ಕುರಿಂಜಿಯ ಪ್ರಸ್ತಾಪಿಸುವುದಿಲ್ಲ. ಪಶ್ಚಿಮಘಟ್ಟಗಳಲ್ಲಿ ಜೀವಮಾನವೆಲ್ಲ ಕಳೆದ ತೇಜಸ್ವಿಯವರಿಗೂ ಕುರಿಂಜಿ ಕಾಡಿಲ್ಲ. ಬಹುಶಃ ಪ್ರಾಣಿ ಹಕ್ಕಿಗಳ ಮೇಲೆ ಅವರಿಗಿದ್ದಷ್ಟು ಕುತೂಹಲ ಸಸ್ಯಗಳ ಬಗ್ಗೆ ಇರಲಿಲ್ಲವೆ?ಕನ್ನಡ ಸಂಸ್ಕøತಿಗೆ ಹೋಲಿಸಿದರೆ, ತಮಿಳು ಸಂಸ್ಕøತಿಯಲ್ಲಿ ಕುರಿಂಜಿ ನೂರಾರು ರೂಪದಲ್ಲಿ ಕಾಣಿಸುತ್ತದೆ. ಅಲ್ಲಿನ ಬುಡಕಟ್ಟು ಜನ, ಮದುಮಗಳಿಗೆ ಎರಡು ಕುರುಂಜಿ ವಯಸ್ಸಾಯಿತು, ಅವನಿಗೆ ಸಾಯುವಾಗ ಎಂಟು ಕುರಿಂಜಿ ವಯಸ್ಸಾಗಿತ್ತು ಎಂದು, ಅದನ್ನು ಆಯಸ್ಸು ಅಳೆಯುವ ಮಾನವಾಗಿಸಿಕೊಂಡಿರುವರು. ತಮಿಳಿನ ಪ್ರಾಚೀನ ಅಭಿಜಾತ ಸಾಹಿತ್ಯದಲ್ಲಿ ಕುರಿಂಜಿ ವಿರಾಜಮಾನ. ಪ್ರೇಮಕಾವ್ಯವಿರುವ ಸಂಗಂ ಸಾಹಿತ್ಯದಲ್ಲಿ ತಮಿಳುನಾಡನ್ನು ಕರಾವಳಿ, ಮರುಭೂಮಿ, ಕಾನುಪ್ರದೇಶ, ಹೊಲಗದ್ದೆಯ ಬಯಲು ಹಾಗೂ ಬೆಟ್ಟಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಭೂಪ್ರದೇಶದ ಜತೆಗೂ ಒಂದೊಂದು ಸಸ್ಯ ಇಲ್ಲವೇ ಹೂವನ್ನು ಸಮೀಕರಿಸಲಾಗಿದೆ. ಗುಡ್ಡಗಾಡಿನ ಪ್ರದೇಶಕ್ಕೆ ಕುರಿಂಜಿ ಸಂಕೇತ. ಇದರಿಂದ `ಕುರಿಂಜಿ ತಿಣೈ’ ಎಂಬ ಕಾವ್ಯ ಸಂಪ್ರದಾಯವೇ ಹುಟ್ಟಿದೆ. ಈ ಕಾವ್ಯದ ವಸ್ತು, ಅಗಲಿದ ಪ್ರೇಮಿಗಳ ಮಾತುಕತೆ ಮತ್ತು ಕೂಟ. ಇದಕ್ಕೆ ಪೂರಕವಾಗಿ ಕುರಿಂಜಿ ತಿಣೈನಲ್ಲಿ ಬೆಟ್ಟಪ್ರದೇಶದ, ಕುರಿಂಜಿ ಹೂವಿನ, ನಡುರಾತ್ರಿಯ, ಇಬ್ಬನಿ ಸುರಿವ ಚಳಿಗಾಲದ, ಹುಲಿ ಆನೆ ನವಿಲುಗಳ, ಬಿದಿರಿನ ಹಿಂಡಿಲುಗಳ, ಜಲದ ಅಬ್ಬಿಗಳ, ದುಂಬಿಗಳ, ಜೇನುಕೀಳುವ ಜನರ ಬದುಕಿನ ವರ್ಣನೆಗಳು. ಈ ಕಾವ್ಯಮಾರ್ಗದ ಅಧಿದೇವತೆ ಮುರುಗನ್. ಬೆಟ್ಟಪ್ರದೇಶದ ದೈವವಾದ ಮುರುಗನ್ ಕುರಿಂಜಿಹಾರ ತೊಟ್ಟು ಬುಡಕಟ್ಟಿನ ಚೆಲುವೆಯಾದ ವೆಳ್ಳಿಯನ್ನು ಪ್ರೇಮಿಸುವವನು. ಕೊಡೈಕೆನಾಲಿನ ಕುರಿಂಜಿ ಬನದಲ್ಲಿ ಅವನದೊಂದು ಗುಡಿಯಿದೆ. ತಮಿಳರ ಆದಿಮಕಾವ್ಯವಾದ ‘ಶಿಲ್ಪಪ್ಪದಿಕಾರಂ’ನ ನಾಯಕಿ ಕನ್ನಗಿ ಸಹ ಕಡಲತೀರದಲ್ಲಿ ಹುಟ್ಟಿಬೆಳೆದು, ಮದುರೆಯಂತಹ ಬಯಲುನಾಡಲ್ಲಿ ದುರಂತ ಕಂಡು, ಕೊನೆಗೆ ಕುರುಂಜಿ ಹೂವಿನ ಬೆಟ್ಟದಲ್ಲಿ ಪ್ರಾಣತ್ಯಾಗ ಮಾಡುವವಳು. ತಮಿಳು ಮನೆಮಾತಿನ ಕನ್ನಡ ಕವಿ, ಎ.ಕೆ. ರಾಮಾನುಜನ್ ಪ್ರಾಚೀನ ಸಂಗಂ ಸಾಹಿತ್ಯವನ್ನು ‘ಪೊಯೆಮ್ಸ್ ಆಫ್ ಲವ್ ಅಂಡ್ ವಾರ್’ ಹಾಗೂ ‘ಇಂಟೀರಿಯರ್ ಲ್ಯಾಂಡ್‍ಸ್ಕೇಪ್’ ಎಂದು ಇಂಗ್ಲೀಶಿಗೆ ಅನುವಾದಿಸಿದ್ದಾರೆ. ಅವರು ಅನುವಾದಿಸಿರುವ ಕುರಿಂಜಿ ತಿಣೈನ ಎರಡು ಪದ್ಯಗಳ ಕನ್ನಡ ಸಾರವಿದು: 1. ಇಳೆಗಿಂತಲೂ ದೊಡ್ಡ, ದಿಟಕ್ಕೂ ಆಗಸಕ್ಕಿಂತಲೂ ಎತ್ತರನೀರಿಗಿಂತಲೂ ಹೆಚ್ಚು ಆಳ ನನ್ನ ಗಂಡಿನ ಮೇಲಣ ಪ್ರೇಮಪರ್ವತಗಳ ಇಳುಕಲಿನಲಿ ಕಡುಕಪ್ಪನೆಯ ದೇಟಿನಚೆಲುವಾದ ಕುರಿಂಜಿ ಹೂಗಳಿಂದ ದುಂಬಿಗಳು ಮಾಡುವ ಜೇನು 2. ಹುರುಳಿಕಾಯ ಬತ್ತಲೆಬೇರು ನಸುಗೆಂಪಾಗಿದೆಕಾಡುಕೋಳಿಯ ಕಾಲಿನಂತೆಚಿಗರೆ ಹಿಂಡು ಮಾಗಿದ ಕಾಯಿಗಳ ಮೇಲೆರಗುತಿದೆಇಬ್ಬನಿ ಸುರಿವ ಮುಂಜಾನೆಯ ಋತುವಿನ ಹೊಡೆತಕ್ಕೆಬೇರೆ ಮದ್ದಿಲ್ಲ, ನನ್ನ ಗಂಡಿನ ಹರವಾದ ಎದೆಯ ಹೊರತು. ಕುರಿಂಜಿ ತಿಣೈ ಕಾವ್ಯಮಾರ್ಗವೆಂದರೆ- ಪಶ್ಚಿಮಘಟ್ಟದ ಸಸ್ಯಾವಳಿ, ಕೀಟ, ಹಕ್ಕಿ, ಪ್ರಾಣಿ, ನೀರು, ಗಾಳಿ, ಜನ, ಅವರ ದುಡಿಮೆ, ಹಾಡು ಕತೆ ಸಂಗೀತಗಳೆಲ್ಲವನ್ನು ತುಂಬಿಕೊಂಡ ಅನನ್ಯಲೋಕ. ಈ ಲೋಕದಲ್ಲಿ ಒಂದು ಲೋಕದೃಷ್ಟಿಯೂ ಅಡಗಿದೆ. ಕುರಿಂಜಿಪಾಟ್ಟು ಎಂಬ ಹಾಡುಗಳನ್ನು ನಾಟ್ಟುಕುರಿಂಜಿ ಎಂಬ ರಾಗದಲ್ಲಿ ಸಂಜೆ ಹೊತ್ತು ಹಾಡುವರು; ಅದರ ಜತೆ ನುಡಿಸುವ ತಂತಿವಾದ್ಯದ ಹೆಸರು ಕುರಿಂಜಿಯಾಳ್. ತಮಿಳು ಸಂಸ್ಕøತಿಯ ಜತೆ ಆಪ್ತನಂಟನ್ನು ಏರ್ಪಡಿಸಿಕೊಳ್ಳದೆ ಹೋದ ಕನ್ನಡ ಸಾಹಿತ್ಯಕ್ಕೆ ಇವೆಲ್ಲ ಯಾವುದೊ ಲೋಕದ ವಿಚಾರಗಳಂತೆ ತೋರಬಹುದು. ಸಂಸ್ಕøತ ಕಾವ್ಯಮೀಮಾಂಸೆಗೆ ತನ್ನನ್ನು ಅಗತ್ಯಕ್ಕಿಂತ ಹೆಚ್ಚಾಗಿ ತೆತ್ತುಕೊಂಡು ಜೀತಮಾಡಿದ ಕನ್ನಡ ಶಿಷ್ಟ ಕಾವ್ಯಪರಂಪರೆ, ದ್ರಾವಿಡ ಸೀಮೆಯ ಸ್ಥಳೀಯ ಸಾಂಸ್ಕøತಿಕ ನೆಲೆಗಳ ಮೂಲಕ ತನ್ನದೇ ಮೀಮಾಂಸೆ ಕಟ್ಟಿಕೊಳ್ಳಲಾರದೆ ಹೋಯಿತು. ಆಧುನಿಕ ಕಾಲದಲ್ಲಿ ಈ ತಮಿಳು ಸಂಸ್ಕøತಿಯೊಂದಿಗೆ ಕನ್ನಡ ಸಂಸ್ಕøತಿಯನ್ನು ಕೂಡಿಸುವ ಕಸುವು ಬಿಜಿಎಲ್ ಸ್ವಾಮಿಗಿತ್ತು. ರಾಮಾನುಜನ್‍ಗಿತ್ತು. ಶಿವಪ್ರಕಾಶರಿಗಿದೆ. ಈ ದಿಸೆಯಲ್ಲಿ ಕನ್ನಡವು ಹೊಸಹಾದಿ ಸೋಸಬೇಕಿದೆ.ಕುರಿಂಜಿ ಸಂಸ್ಕøತಿಯನ್ನು ತಮಿಳು ಸಿನಿಮಾ ಸಂಗೀತ ಚಿತ್ರಕಲೆಗಳು ಅದ್ಭುತವಾಗಿ ಮುಂದುವರೆಸಿದವು. ಅಲ್ಲಿ ಕುರಿಂಜಿ ಹೆಸರಲ್ಲಿ ಶಾಲೆ ಆಸ್ಪತ್ರೆ ಹೋಟೆಲು ರೆಸಾರ್ಟು ಬಡಾವಣೆಗಳಿವೆ; ಒಬ್ಬ ಇಂಜಿನಿಯರ್ ತಮಿಳು ಲಿಪಿಗಾಗಿ ಕುರಿಂಜಿ ಫಾಂಟ್ ಎಂಬ ಅಕ್ಷರವಿನ್ಯಾಸ ಸೃಷ್ಟಿಸಿರುವನು. ತಮಿಳು ಸಿನಿಮಾ ಗೀತಕಾರನೊಬ್ಬನ ಹೆಸರು ಕುರಿಂಜಿಪ್ರಭ; ತಮಿಳು ಸಿನಿಮಾಗಳು ಕುರಿಂಜಿಯ ಹೂಸುಗ್ಗಿಯನ್ನು ಸೆರೆಹಿಡಿಯಲು ಮರೆಯುವುದಿಲ್ಲ. ‘ಕುರಿಂಜಿ ಮಲರ್’ ಚಿತ್ರದಲ್ಲಿ ‘ಕುರಿಂಜಿ ಮಲರೈ’ ಎಂಬ ಜಾನಕಿ-ಜೇಸುದಾಸ್ ಹಾಡಿರುವ ಇಂಪಾದ ಹಾಡಿದೆ. ವ್ಯಂಗ್ಯವೆಂದರೆ ಈ ಹಾಡಿನ ಮೊದಲ ಸಾಲು ಕುರಿಂಜಿ ಬೆಳೆಯುವ ಶೋಲಾಬೆಟ್ಟಗಳಲ್ಲಿ ಚಿತ್ರೀಕರಣಗೊಂಡಿದೆ. ಅದು ಹೂವಿಲ್ಲದ ಕಾಲ. ತಮಿಳರ ಈ ಯತ್ನಗಳ ಹಿಂದೆ ಅವರ ಸಾಂಸ್ಕøತಿಕ ಪ್ರಜ್ಞೆಯಿದೆ. ಜತೆಗೆ ಸಾಂಸ್ಕøತಿಕ ಸಂಕೇತಗಳನ್ನು ಮಾರುಕಟ್ಟೆಗಾಗಿ ಬಳಸುವ ವ್ಯಾಪಾರಿ ಜಾಣ್ಮೆ ಕೂಡ. ಕೇರಳ-ತಮಿಳುನಾಡಿನ ಗಿರಿಧಾಮಗಳಿಗೆ ಪ್ರವಾಸಿಗರನ್ನು ಸೆಳೆಯಲು ಅವರಿಗೆ ಕುರಿಂಜಿಯೊಂದು ದೊಡ್ಡ ಆಕರ್ಷಣೆ. ಅಲ್ಲಿನ ಹೋಟೆಲುಗಳಲ್ಲಿ ಕುರಿಂಜಿ ಋತುವಿನ ವರ್ಷಗಳ್ನು ಸೂಚಿಸುವ ಮಾಹಿತಿ ಬರೆಹಗಳಿರುತ್ತವೆ. ಒಮ್ಮೆ ದಕ್ಷಿಣ ಭಾರತದ ಎತ್ತರ ಶಿಖರವಾದ ಮುನ್ನಾರಿನ ಎರವಿಕುಲಮ್‍ಗೆ ಕಾಡುಮೇಕೆ ನೋಡಲು ಹೋಗಿದ್ದೆವು. ಕುರಿಂಜಿ ಗಿಡಗಳಿಂದ ತುಂಬಿಹೋಗಿದ್ದ ಬೆಟ್ಟದ ಕೋಡಿನಲ್ಲಿ ಮೇಕೆ ನಿರಾಳ ಮೇಯುತ್ತಿದ್ದವು. ಅದು ಹೂವಿನ ಕಾಲವಾಗಿರಲಿಲ್ಲ. ಈಚೆಗೆ ಕುರಿಂಜಿ ನೆಲೆಗಳಾದ ಶೋಲಾಗಳನ್ನು ಚಹತೋಟಗಳನ್ನಾಗಿ ಮಾಡಲಾಗಿದೆ. ಕುರಿಂಜಿ ದಟ್ಟವಾದ ಹುಲ್ಲಿನ ಜತೆ ಬೆಳೆಯುವುದರಿಂದ, ಆ ಹುಲ್ಲಿಗೆ ಬೆಂಕಿಬಿದ್ದಾಗಲೆಲ್ಲ ತಾನೂ ಭಸ್ಮವಾಗುತ್ತದೆ. ಕರ್ನಾಟಕದ ಶೋಲಾಗಳಲ್ಲಿ ಈ ಖಾಂಡವದಹನ ಪ್ರಸಂಗಗಳು ಸಾಮಾನ್ಯೆ. ಈಗೀಗ ತಮಿಳುನಾಡಲ್ಲಿ ಕುರಿಂಜಿ ಉಳಿಸುವ ಚಳುವಳಿಗಳೂ ಹುಟ್ಟಿಕೊಂಡಿವೆ. ಕೆಲವು ಜಾತಿಯ ಮೀನುಗಳು ಹೊಳೆಗಳಲ್ಲಿ ನೂರಾರು ಮೈಲಿ ಪಯಣಿಸಿ ಹೊಸಸಂತಾನಕ್ಕೆ ಮೊಟ್ಟೆಯಿಟ್ಟು ಜೀವಬಿಡುತ್ತವೆ. ಅದರಂತೆ ದಶಕಗಳ ಕಾಲ ಕಾಯುವ ಕುರಿಂಜಿ ಹೂತರೆ ಅದರ ಮರಣದ ಸೂಚನೆ. ಬಿದಿರು ಕೂಡ ಹೀಗೆ ತಾನೇ? ಕುರಿಂಜಿ ಹೂತಳೆದು ಸತ್ತ ಬಳಿಕ, ಬಿದ್ದ ಅದರ ಬೀಜಗಳು ಮಳೆಗಾಲಕ್ಕೆ ಕಾದು ಸಸಿಯಾಗಿ ಹೊಸ ಬದುಕನ್ನು ಆರಂಭಿಸುತ್ತವೆ. ಇದರ ಹುಟ್ಟುಸಾವಿನ ಈ ಯಾನ ಎಷ್ಟು ಸಹಸ್ರ ಶತಮಾನಗಳಿಂದ ನಡೆದುಬಂದಿದೆಯೊ? ಹೆಚ್ಚಿನ ಸಸ್ಯಗಳಿಗೆ ‘ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆ’; ಕುರಿಂಜಿಗಾದರೊ ದಶಕಕೊಂದು ಹೊಸತು ಜನ್ಮ. ಆದರೆ ಸಾವಿನ ಸಾನಿಧ್ಯದಲ್ಲಿ ಅದು ಹೂತಳೆದು ಪಡುವ ಸಂಭ್ರಮ, ಸಾವು ಮತ್ತು ಮರುಹುಟ್ಟುಗಳ ನಡುವೆ ಮಾಡುವ ಧ್ಯಾನ ಅಪೂರ್ವ. ಕುರಿಂಜಿ ಬೆಳೆಯುವ ಮುಳ್ಳಯ್ಯನಗಿರಿ, ಬಾಬಾಬುಡನಗಿರಿ ಕೊಡಚಾದ್ರಿಗಳು ನಾಥರು ಸೂಫಿಗಳು ಅವಧೂತರ ತಾಣಗಳಾಗಿದ್ದು, ಇಲ್ಲಿ ಧ್ಯಾನದ ಗುಹೆಗಳಿವೆ; ವಿಭಿನ್ನ ದಾರ್ಶನಿಕ ಪರಂಪರೆಗೆ ಸೇರಿದ ಸಂತರು ಒಂದೇ ಗುಹೆಗಳಲ್ಲಿದ್ದ ಚರಿತ್ರೆಯಿದೆ. ಮಂಜು ಮಳೆ ಬಿಸಿಲು ಚಳಿಗಳೆಂಬ ಪರೀಷಹಗಳನ್ನು ಎದುರಿಸುತ್ತ ಸಹಸ್ರಾರು ವರ್ಷಗಳಿಂದ ನಿಂತಿರುವ ಶೋಲಾಬೆಟ್ಟಗಳನ್ನು ನೋಡುವಾಗ, ಅವೂ ಸ್ವತಃ ಧ್ಯಾನಸ್ಥವಾಗಿವೆ ಅನಿಸುತ್ತದೆ. ಅವುಗಳ ತುದಿಯಲ್ಲಿ

Read Post »

ವಾರದ ಕವಿತೆ

ನದಿ. ವಾರದ ಕವಿತೆ ಪೂರ್ಣಿಮಾ ಸುರೇಶ್ ಕಿರಿಕಿರಿಕೊಡಲು ಆರಂಭಿಸಿವೆಈ ಸಂಖ್ಯೆಗಳುಇಸವಿ,ಮಾಸ,ದಿನತಳದಲ್ಲಿ ಅದೆಷ್ಟುಮಧು ಉಳಿದಿದೆಋತುಸುತ್ತು ಸುತ್ತಿಚೈತ್ರದ ಎಳೆಹಸಿರುಪಚ್ಚೆಹಳದಿಯಾಗಿ ಮಾಗಿಗೊಣಗಿಕ್ಷೀಣ ಆಕ್ರಂದನ ಚೀರಿ ಕಳಚುವತರಗೆಲೆಯ ನಿಟ್ಟುಸಿರುನಿರಂತರ ಮರ್ಮರ ಹೆಜ್ಜೆ,ದನಿ,ಗಾಳಿಯಸ್ಪರ್ಶಕ್ಕೆಒಡಲ ಹಾಡು ನಿಟ್ಟುಸಿರುಒಣ ಶಬ್ದ ಸೂತಕವಾಗಿ ತೊಡೆಯಲ್ಲಿ ತರಚಿಉಳಿದುಹೋದಕಲೆಗಳೂಆಪ್ತ ಪಳೆಯುಳಿಕೆ ನೀರಾಗುವ ಪುಳಕಿತಘಳಿಗೆಯಲ್ಲೂಬಚ್ಚಲಿನ ಹಂಡೆಇಣುಕಿಉಳಿದಿರಬಹುದಾದಬೆಚ್ಚಗಿನ ನೀರಿನಲೆಕ್ಕಾಚಾರಒದ್ದೆ ತಲೆಗೂದಲಿನ ಸಂದಿಯಲಿಜಲಬಿಂದುಗಳಪಿಸು ಒಂದು ಕುಂಭದ್ರೋಣಮಳೆಯಾಗಿಒಣಗಿ ಬಿರುಕು ಬಿಟ್ಟ ,ಬೆಟ್ಟ, ಬಯಲು, ತೊರೆ,ತೊಯ್ದುಒದ್ದೆ ಒದ್ದೆಯಾಗಿಹೆಣ್ಣಾಗಬೇಕುಹರಿಯುತ್ತಲೇ ಇರಬೇಕು *************************************************

Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಜಯಶ್ರೀ ಭ.ಭಂಡಾರಿ ಬಂದರೆ ನೀನುಬಾಳಿಗೆ ಬೆಳಕಾಗಿಬಾಳುವೆನು ನಾ. ದೂರಾಗಿ ಹೋದೆ.ನಡುನೀರಲಿ ಬಿಟ್ಟು.ಪ್ರಿಯತಮೆಯ. ಅಲೆಗಳಲ್ಲಿಸಾಗರದಿ‌ ನಲಿವುತೀರದ ಮೋಹ. ಕಾಡಬೇಡ ‌ನೀಈ ಹೃದಯ ನಿನ್ನದುತೋರು ಕರುಣೆ. ಮುಂಗಾರು ಮಳೆನಿಲ್ಲದೇ ಸುರಿತಿಹೆಕಾಡುತಿಹೆ ನೀ. ರಾಧೆಯ ನೋವುಕೊಳಲ ನಾದದಿಂದದೂರವಾಯಿತು. ಕೃಷ್ಣ ಸನಿಹಇದ್ದರೆ ಮರೆವಳುರಾಧೆ ತನ್ನ ‌‌‌‌ತಾ ಗೋಪಾಲನಿಗೆಗೋಪಿಕೆಯರ ಆಟಯಮುನೆಯಲಿ ******************

ಹಾಯ್ಕುಗಳು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವತ್ಸಲಾ ಶ್ರೀಶ ಕೊಡಗು ಕಲೆಯ ನೆಲೆಗೆ ಒಲವ ಬಳಸಿ ಸೆಳೆದೆಯಲ್ಲ ಗೆಳೆಯಹಲವು ಮಾತು ಗುನುಗಿ ದೂರ ನಿಂತೆಯಲ್ಲ‌ ಗೆಳೆಯ ಕಿವಿಯ ಜುಮುಕಿ ಮುತ್ತಿನಲ್ಲಿ ಹೆಸರ ಬರೆದೆ ಗುಟ್ಟಲಿತುಂಟತನದಿ ಕೆನ್ನೆ ಮುಟ್ಟಿ ಮತ್ತೇರಿದೆಯಲ್ಲ ಗೆಳೆಯ ದೂರದಲ್ಲಿ ಹಾಡನೊಂದು ಕೇಳೆ ಮನವು ಪುಳಕವಿಲ್ಲಿಹಣೆಯ ಮುತ್ತ ನೆನಪು ನೀಡಿ ಕಾಡಿದೆಯಲ್ಲ ಗೆಳೆಯ ಬೆರಳಿಗೊಂದು ಬೆರಳು ಸೇರಿಸಿ ನಾಲ್ಕು ಹೆಜ್ಜೆ ಇರಿಸಿದೆನೂರು ಜನ್ಮ ಜೊತೆಯ ಬೇಡಿ ನಿಂತೆಯಲ್ಲ ಗೆಳೆಯ ಬಿಸಿಯುಸಿರು ಕೊರಳ ತಾಗಿ ಪ್ರೀತಿ ಕವನ ಗೀಚಿದೆಕಣ್ಣಿನಲ್ಲಿ ಪ್ರೇಮ ಬಿಂಬ ಪ್ರತಿಷ್ಠೆಯಾಗಿದೆಯಲ್ಲ ಗೆಳೆಯ ಕದಪುಗಳ ರಂಗು ನುಡಿಯುತಿದೆ ಕೇಳದ ಕತೆಯೊಂದನುಭೂಮಿ ಬಾನು ಸಂಜೆ ಪ್ರಣಯ ಗುಲ್ಲಾಗಿದೆಯಲ್ಲ ಗೆಳೆಯ ಒಲವಿಗೆ ತೆರಿಗೆ ಪಾವತಿಸಿ ಬಂದು ನಿಂತಂತೆ ನಿಲ್ಲುವೆತಪಸ್ಯಾಳ ಗೆಲ್ಲಲು ಹೊಸ ವರಸೆಯಂತಿದೆಯಲ್ಲ ಗೆಳೆಯ *********************************** **************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ಮನಸ್ಸೇಕೋ ಮತ್ತೆ ನೊಂದು ಮೌನದಿ ಕಮರಿಹೋಗಿದೆಯಾಕೋ ಸುಮ್ಮನೇ ಮನಸಲ್ಲೆ ಬೆಂದು ಲೀನವಾಗಿದೆ ಯಾಕೆ ಏನು ಯಾರಿಗಾಗಿ ಇದೆಲ್ಲ ಒಂದು ತಿಳಿಯದಾಗಿದೆಕಾರಣವಿಲ್ಲದೇ ಸಂಕಟ ಆಗುವದೇಕೋ ಅರಿಯದಾಗಿದೆ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರುಚಿ ಸಿಗದಾಗಿದೆಭರಪುರ ಬೆಳೆದ ರೈತನ ಫಸಲು ಹೊಲವೇ ಕದ್ದಂತಾಗಿದೆ ಬಿತ್ತುವದು ಅವನ ಧರ್ಮ ಬೆಳೆ ಪಡೆವುದು ಕರ್ಮವಾಗಿದೆಉಂಡು ಕೊಂಡು ಹೋದ ಲಂಡರದೇ ಬಲು ಹಿತವಾಗಿದೆ ಕೊಚ್ಚೆಯಲ್ಲಿ ಬಿದ್ದ ಮಾಣಿಕ್ಯಕ್ಕೆ ತನ್ನ ಬೆಲೆ ತಿಳಿಯದಾಗಿದೆಹೊನ್ನಸಿರಿ’ ಇರಲಿ ನೋಯಬೇಡ ಈ ಭೂಮಿ ಗುಂಡಾಗಿದೆ *****************************

ಗಜಲ್ Read Post »

ಇತರೆ

ಅಕಾರಣ ಅಕಾಲ

ಕವಿತೆಯ ಕುರಿತು ಅಕಾರಣ ಅಕಾಲ ನಾಗರೇಖಾ ಗಾಂವಕರ್ ಸಾಹಿತ್ಯದ ನಿಲುವುಗಳು ಭಿನ್ನ ರೀತಿಯಲ್ಲಿ ಎಂದಿಗೂ ಅಭಿವ್ಯಕ್ತಿಗೊಳ್ಳುತ್ತಲೇ ಇರುವುವು. ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿಯುವ ಸಾಹಿತಿಗಳು, ಕವಿಗಳು ತಮ್ಮ ವ್ಯಕ್ತಿತ್ವವನ್ನು ಅಷ್ಟೇ ಶುದ್ಧ ಪಾರದರ್ಶಕತೆಗೆ ಒಗ್ಗಿಕೊಂಡು, ನಡೆದಂತೆ ನುಡಿಯುವ  ಛಾತಿಯುಳ್ಳವರಾಗಿರಬೇಕು. ಇಲ್ಲವಾದಲ್ಲಿ ಅದು ಅಪಹಾಸ್ಯಕ್ಕೆ ಗುರಿಯಾದ ಸಂದರ್ಭಗಳಿವೆ. ಹಾಗೇ ಕವಿತೆಯಲ್ಲಿ ಕವಿಯನ್ನು ಹುಡುಕುವ ಪ್ರಯತ್ನ ಸಲ್ಲ ಎಂಬ ವಾದವೂ ಇದೆ. ಆದರೆ ಇದು ಕೂಡಾ ಎಲ್ಲ ಸಂದರ್ಭಗಳಿಗೆ ಸರಿಯಾಗದು. ಕವಿತೆ ಭಾವನೆಗಳ ಪದಲಹರಿ. ಹಾಗಾಗಿ ಅನ್ಯರ ಅನುಭವಗಳ ಮೇಲೆ ಬರೆದ ಕವಿತೆಗಳು ಆಪ್ತವಾಗಲಾರವು. ಕವಿ ತನ್ನ ನಿಕಷಕ್ಕೆ ಒಡ್ಡಿಕೊಳ್ಳಬೇಕು. ಅನುಭವಗಳಿಗೆ ತೆರೆದುಕೊಳ್ಳಬೇಕು. ಕಂಡಿದ್ದನ್ನು ನೋಡಿದ್ದನ್ನು  ರಸಾನುಭವ ನೀಡುವಂತೆ ಕಟ್ಟಿಕೊಡಬೇಕು. ಹೀಗೆ ಹತ್ತಾರು ಬಗೆಯ ನಿಲುವುಗಳು  ಅಭಿಪ್ರಾಯಗಳು  ಆಗಾಗ ಅಭಿವ್ಯಕ್ತವಾಗಿದ್ದನ್ನು ನಾನು ಗ್ರಹಿಸಿದ್ದೆ. ಇತ್ತೀಚಿನ ಸಮಕಾಲೀನ ಕವಿಗಳು ಅವರ ಭಾವತೀವ್ರತೆ, ಮುಕ್ತಛಂದದ ರೀತಿ ಎಲ್ಲವೂ ಹೆಚ್ಚು ಹೆಚ್ಚು ಪ್ರಚಲಿತವಾಗುತ್ತ ಅದರಲ್ಲಿಯೇ ಹೊಸ ಚಿಂತನೆಗಳು, ನೋವು ನಲಿವುಗಳು, ಬದುಕಿನ ಖುಷಿ, ಆಕ್ರೋಶಗಳು ವ್ಯಕ್ತವಾದ ಬಗೆಯಿಂದ ಹೃದಯಕ್ಕೆ ಆಪ್ತ ಎನ್ನಿಸಿಬಿಡುತ್ತಿವೆ. ಆ ಪಾತ್ರಗಳೇ ನಾವಾದಂತೆ, ಆ ನೋವು ಇಲ್ಲ ನಲಿವು ನನ್ನದೂ ಕೂಡಾ ಆಗಿರುವ ಸಾಧ್ಯತೆ. ಸಮಾಜಮುಖಿ ಎನ್ನುವುದಕ್ಕಿಂತ ತನ್ನನ್ನು ತೆರೆದುಕೊಳ್ಳುವುದು, ಇಲ್ಲ ಅವ್ಯಕ್ತಕ್ಕಿಂತ ವ್ಯಕ್ತ ನಿಲುವಲ್ಲಿ ಪಾರದರ್ಶಕವಾಗುವುದು ಇತ್ತೀಚಿನ ಬರಹಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿದೆ. ಅಂತಹ ಒಂದು ಆಪ್ತ ಕವಿತೆ ಸಮಕಾಲೀನ ಕವಯತ್ರಿ ನಂದಿನಿಯ –“ಅಕಾರಣ ಅಕಾಲ”  ಕವಯತ್ರಿ ನಂದಿನಿಯ ಭಾವಜಗತ್ತನ್ನು ಒಮ್ಮೆ ನವಿರಾಗಿ ಸ್ಪರ್ಷಿಸುವ ಪ್ರಯತ್ನ ಮಾಡಿದ್ದೇನೆ. ಅಕಾರಣವಾಗಿ ಈ ಕವಿತೆಯನ್ನು ಇಷ್ಟಪಟ್ಟಿದ್ದೇನೆ. ಅಕಾರಣ ಅಕಾಲದಲ್ಲಿ ನನ್ನ ಹುಡುಕಿ ಬಂತು ಅದು ಧಗೆಯ ಧೂಳು ತುಂಬಿದ ಒಂದು ಕಡು ಮಧ್ಯಾಹ್ನ.. ಗಿಜುಗುಡುವ ಮೌನ, ಗವ್ವೆನ್ನುವ ಸದ್ದು. ವಿರಾಮದ ಕಾಲವಿರಬೇಕು ಜಗದ ವಿದೂಷಕನಿಗೆ ಚಿಟ್ಟೆ ಹಾರಿಬಿಟ್ಟು ಹೂವ ಬಟ್ಟಲಲಿ ಬಯಕೆ ತುಂಬಿಟ್ಟ ತುಂಬಿದ ಬಿಂದಿಗೆಯಂಥ ಕಂಗಳು ಸಂಪಿಗೆ ಎಸಳಂಥ ಬೆರಳು ಭೇಟಿ ಆದವು ಸದ್ದಿನ ಸೂರಿನಡಿಯಲ್ಲಿ.. ತುಸು ಹೊತ್ತು ಸುಖವಾದ ಮೌನ ಬಿಟ್ಟಸ್ಥಳಕ್ಕೆ ಹುಟ್ಟಿಕೊಂಡವು ಮಾತು … ಗೊತ್ತಿಲ್ಲ ನನಗೆ.. ಅದು ಹೇಗೆ ಬಂತೆಂದು: ಕಡುಧಗೆಯ ದಿನದ ದಣಿವಿಂದ ಬಂತೇ? ಮಾಗಿಯಿರುಳಿನ ಮುಗಿಲ ಬೆಳಕಿಂದ ಬಂತೇ? ನೆಲಮುಗಿಲು ಒಲಿದಾಗ ಅಳುಕಾಗಿ ಬಂತೇ? ಗೊತ್ತಿಲ್ಲ ನನಗೆ ಅದು ಯಾಕೆ ಬಂತೆಂದು: ಬರದ ದಿನಗಳ ಬದುಕ ನೆರೆಯಾಗಿ ಬಂತೇ? ಬಯಲೆದೆಯ ಮೇಲೊಂದು ನವಿಲಾಗಿ ಬಂತೇ? ಬದಲಾಗದ ನೆಲೆಯ ಸೊಬಗಾಗಿ ಬಂತೇ..? ಬಂದೇ ಬಂತು.. ಹಗಲುಗಳ ಕಸಿಯಿತು..ಹಸಿವನ್ನೆ ಕೊಂದಿತು ಹರಿವನ್ನು ತೊರೆಯಿಸಿತು.. ಹುಡುಕಾಟ ಕೊನೆಯಾಯ್ತು ಬಂದೇ ಬಂತು ಸೊನ್ನೆಯಾಗಿಸಿತು ನನ್ನತನ ಚಂದವೆನಿಸಿತು ಒಂದುತನ ಬಂಧವೆಂದರೆ ಇದೇ ಎನಿಸಿ ಬಂಧನವೂ ಇದೇ..? ಬದಲಾದೆನೇ ನಾನು.. ಬೆಳಕಾದೆನೇ? ಮುಂದಿನದೆಲ್ಲಾ ಇತಿಹಾಸ ತಪ್ಪಿತು ದಿನಚರಿಯ ಪ್ರಾಸ. ಕತ್ತಲಾಯಿತೆಂದು  ಹಕ್ಕಿ ಬಿಚ್ಚಿಟ್ಟ ರೆಕ್ಕೆಗಳು ನನ್ನ ಪಕ್ಕೆ ಪಕ್ಕದಲ್ಲಿ.. ಚೆಲ್ಲಿದವು ಚುಕ್ಕಿ ಹೆಕ್ಕಿಕೋ ಎನ್ನುತ್ತಾ… ಒಳಗೊಳಗೆ ಹದ ಬೇಗೆ.. ಬೆಂಕಿ ಕೆನ್ನಾಲಿಗೆ…. ಇಲ್ಲವೆನ್ನುವುದೇ ಸುಖವೆನುವ ಕಾಲದಲ್ಲಿ ಇದೆ.. ಇದು ಅದೇ.. ಎನ್ನುತ್ತಾ ಬಂದೇ ಬಂತು ಅಕಾಲದಲ್ಲಿ ಅಕಾರಣ ಕಿರುಬೆರಳ ನೆರವಿಟ್ಟು ಕರೆಯಿತು ಹೊರಗೆ ಎಷ್ಟು ಬಾಯಿಗೆ ಹಾಕಬೇಕಿತ್ತು ಹೊಲಿಗೆ ಎಷ್ಟು ನೋಟಗಳಿಗೆ ಕಟ್ಟಬೇಕಿತ್ತು ಬಟ್ಟೆ ಅಡಿಯಿಟ್ಟೆ ನಡುಗುತ್ತಾ.. ಇದು ಬೆಂಕಿ ಜಾಡು ಎದೆಯೊಳಗೆ ಬೆಳಕ ಹಾಡು ಒಂದು ಪ್ರೇಮದಲ್ಲಿ ಮುಳುಗುವುದೆಂದರೆ ..! ಎಷ್ಟು ಅಸ್ಪಷ್ಟ ಸಾಲುಗಳ ಬರೆದೆ.. ಅರ್ಥವಿರಲಿಲ್ಲ.. ವ್ಯರ್ಥವಾಗಲೂ ಇಲ್ಲ.. ತೂಗಿ ಆಡಲಿಲ್ಲ.. ಸೋಗು ನಟಿಸಲಿಲ್ಲ. ಎಷ್ಟು ದಕ್ಕಿದೆವು ನಾವು ಒಬ್ಬರಿಗೊಬ್ಬರು ಏನೆಲ್ಲಾ ಕಳೆದದ್ದು? ಕೂಡುವಾಸೆಗೆ ಬೇಡಿದ್ದು ಯಾರು ಮೊದಲು? ಯಾವುದೀ ಬೆರಗು? ಹೇಗೆ ತೆರೆದೆವು ನಾವು ಹೃದಯದ  ಬಾಗಿಲು ಇದು.. ಇದುವೇ ತವಕ.. ನಾನು ಕಾಣದ ಲೋಕ.. ಎದೆಯೊಳಗೆ ಎದೆ ಬೆರೆತು,ಭವವೆಲ್ಲಾ ಬೆವೆತು ಮತ್ತೆಮತ್ತೆ ಎಚ್ಚೆತ್ತು,. ಏರುವಾಗಲೂ ಇರುವನ್ನೆ ಅರಿತು ಕಳೆದುಹೋದೆನು ನಾನು ಪರಿಚಿತದ ಹಾದಿಯಲಿ ಸಂತೆಯಲ್ಲೇ ಒಂಟಿ ತಿರುಗಿ.. ನಾಳೆಯ ಮೊಗ್ಗಿಗೆ ಈ ಸಂಜೆಯೇ ಬೆಂಕಿ ಬೇರು ಉರಿವಾಗ ಚಿಗುರಲ್ಲಿ ಹೂವು ಮೀಯದೆ ಮಡಿಯುಟ್ಟು ಮಂಡಿಯೂರಿ ಬಿಡಿಸಿ ಅರ್ಪಿಸದ ಹೊರತು ಬದುಕಿಲ್ಲ ಇಲ್ಲಿ ಅಕಾಲ, ಅಕಾರಣ ಜನನಕ್ಕೆ ಹಸಿವು ಹೆಚ್ಚು. ಎಲ್ಲಿತ್ತು ಈ ಅಳಲು? ದಿನದಿನವೂ ಹೊಸ ಅರಳು ಸುಖವೆನಿಸುತ್ತದೆ ಅಸೂಯೆ ಹುಸುಹುಸಿ ದ್ವೇಷ ಬಯಸಿ ಮಾಡುವ ಮೋಸ ಸಂಜೆಗೊಂದಿಷ್ಟು ಮುನಿಸು ನಾಳೆಗೇನಿದೆ ಹೊಸ ಜಗಳ? ಅಕಾರಣ ಅಕಾಲದಲ್ಲಿ ಬಂದ ನನ್ನ ಅಂತರಂಗ ಸಂಚಲನವೇ.. ನಾನು ನಿಟ್ಟುಸಿರಾದೆ ನೀನಲ್ಲಿ ನರಳಿ ನಾನು ನಕ್ಕರೆ ನಿನ್ನ ನೀಲಿಮರವೂ ಹೊರಳಿ ನೀನು ಕರೆದರೆ ಸಾಕು ಇಲ್ಲಿ ದೇವಕಣಗಿಲೆ ಅರಳಿ ನನ್ನ ಹಿತವಾದ ನೋವೇ. ಕಾಯದ ಕಾವೇ ಕಾಯುವ ಸಾವೇ ಇನ್ನೆಷ್ಟು ಸರಕುಗಳ ಪೇರಿಸಿವೆ ಇಲ್ಲಿ ಹೇಗೆ ಅಡಗಿಸಲಿ ಎದೆಯಡಿಯ ನದಿಯನ್ನು? ಯಾವ ಹಾದಿಯಿದು, ಎಲ್ಲಿ ತಲುಪಿಸುವುದು ನಮ್ಮನ್ನು? ನನ್ನ ಆತ್ಮದ ತುಂಬಾ ನಿನ್ನವೇ ಬೇರುಗಳು ಚಿಗುರು, ಮುಗುಳು, ಎಸಳು  ಪರಿಮಳವೂ ನೀನೇ ನನ್ನೊಲವಿನ ಅಕಾರಣವೇ ಸುಖವಾದ ದುಃಖಿ ನಾನು ಗಾಳಿಯಲಿ ಹಾಡು ಹೇಳಬೇಡ ದಯಮಾಡಿ ಹಂಬಲಿಸುವೆ ನಾನು ಇನ್ನೂ ಇದು ಧಗೆಯ ಧೂಳು ತುಂಬಿದ ಒಂದು ಕಡು ಮಧ್ಯಾಹ್ನ.. ಆರಂಭವಾಗಿಲ್ಲ.. ನನ್ನ ಪ್ರೀತಿಯಿನ್ನೂ.. ಇದೊಂದು ದೀರ್ಘ ಕವನ. ಇಡೀ ಒಂದು ಚಿತ್ರಣವನ್ನು ನಮ್ಮ ಕಣ್ಣಮುಂದೆ ಬೆಳ್ಳಿಪರದೆಯ ಮೇಲೆ ಚಿತ್ರ ಮೂಡಿಸಿದಂತೆ ಚಿತ್ರಿಸುತ್ತಾ ಹೋಗಬಲ್ಲದು. ಕಾವ್ಯ ಮೋಹಿ ಹೆಣ್ಣೊಬ್ಬಳ ಅಂತರಂಗದ ಅಂತಪುರದ ಗೀತೆ. ತೀವ್ರ ಭಾವವೇ ಇಲ್ಲಿ ಸ್ಥಾಯಿ. ಕವಿತೆಯ ಪ್ರಾರಂಭದಲ್ಲಿ  ಅಕಾರಣವಾಗಿ ಅಕಾಲದಲ್ಲಿ ಬಂದದ್ದು ಏನೆಂದು ಹೊಳೆಯದೇ ವಿರಹಿಣಿಯೊರ್ವಳ ಹುಡುಕಾಟದ ಹಾಗೆ ಕಾಣುವ ಕವಿತೆ ಮಧ್ಯಭಾಗಕ್ಕೆ ಬರುತ್ತಲೇ, ಪ್ರೇಮವನ್ನು ಭಿನ್ನವಾಗಿ ಗ್ರಹಿಸುವಂತೆ ಮಾಡುತ್ತದೆ. ಕಾವ್ಯವನ್ನೆ ಪ್ರಿಯಕರನ ರೂಪದಲ್ಲಿ ಕಾಣುವ ಉತ್ಕಟತೆ ಇಲ್ಲಿದೆ. ಪ್ರಿಯ ಬೇರೆಯಲ್ಲ, ಕವಿತೆ ಬೇರೆಯಲ್ಲ.. ಅಕಾರಣ ಅಕಾಲದಲ್ಲಿ ನನ್ನ ಹುಡುಕಿ ಬಂತು ಅದು ಧಗೆಯ ಧೂಳು ತುಂಬಿದ ಒಂದು ಕಡು ಮಧ್ಯಾಹ್ನ.. ಗಿಜುಗುಡುವ ಮೌನ, ಗವ್ವೆನ್ನುವ ಸದ್ದು. ಇದು ಬಯಸಿದ್ದೂ ಅಲ್ಲ, ಪಡೆದದ್ದು ಅಲ್ಲ. ಕಾರಣವಿಲ್ಲದೇ ಬಂದಿದ್ದು, ಕಾಲವಲ್ಲದ ಕಾಲದಲ್ಲಿ ಹತ್ತಿರವಾದದ್ದು. ಕಾರ್ಯಕಾರಣ ಎನ್ನುವುದು ಎಲ್ಲರಿಗೂ ಸಮ್ಮತವಾಗಿಯೇ ಇರುವಂತಹದ್ದು. ಆದರೆ ಇದು ಎಲ್ಲ ಸಂಗತಿಗೆ ಹೊರತಾದದ್ದು. ನಡು ಮಧ್ಯಾಹ್ನ, ನಡು ವಯಸ್ಸಿನ ಹೊತ್ತು, ಮನಸ್ಸು ಬೇಗೆಯಲ್ಲಿ ಬೆಂದು ಧೂಳು ತುಂಬಿಕೊಂಡ ಹೊತ್ತು, ಮೌನದ ಅಭ್ಯಾಸವಾಗಿ ಅದೇ ಮಾತಿಗಿಂತ ಹೆಚ್ಚು ಸದ್ದು ಮಾಡುತ್ತಿದ್ದ ಹೊತ್ತು, ಜಗದ ನಿಯಾಮಕ ತನ್ನ ಖುಷಿಯ ಕ್ಷಣದಲ್ಲಿ ವಿರಾಮದ ಅವಧಿಯಲ್ಲಿ ಇದ್ದ ಹೊತ್ತು, ಚಿತ್ತಾಕರ್ಷಕ ಚಿಟ್ಟೆಯನ್ನ ಇತ್ತ ಹಾರಿ ಬಿಟ್ಟ, ಬಯಕೆಯನ್ನೆ ಮನದ ಬಟ್ಟಲಲ್ಲಿ ತುಂಬಿಟ್ಟ ಎಂದು ತೀವ್ರವಾಗಿ ಅನುಭವಿಸುತ್ತಾ ಹೇಳುವ ಕವಯತ್ರಿ ಆಹ್ಲಾದದ ಜಗತ್ತಿನಲ್ಲಿ ಸಹೃದಯನ ಮನಸ್ಸನ್ನು ಸೆರೆ ಹಿಡಿಯುತ್ತಾರೆ. ತುಂಬಿದ ಬಿಂದಿಗೆಯಂಥ ಕಂಗಳು ಸಂಪಿಗೆ ಎಸಳಂಥ ಬೆರಳು. ಇಲ್ಲಿ ವ್ಯಕ್ತವಾಗುವ ಭಾವವೇ ಇಡೀ ಕವಿತೆಯ ಘನತೆಯನ್ನು ತೋರಿಸುತ್ತದೆ. ಕಂಗಳು ಬೆಳಕಾಗಿ, ಜ್ಞಾನವಾಗಿ ಕಂಡರೆ, ಬೆರಳು ಅರಿವನ್ನು ಪದಕ್ಕಿಳಿಸುವ ಬೆರಗಾಗಿ ಬಂದಿದೆ. ಅವರಿಬ್ಬರ ನಡುವಿನ ಭೇಟಿ, ಬಿಟ್ಟಸ್ಥಳಕ್ಕೆ ಹುಟ್ಟಿಕೊಂಡ ಮಾತು, ಎಂತಹ ಚಂದದ ಆಲೋಚನೆ. ಬಂದೇ ಬಂತು ಎನ್ನುವ ಈ ಪ್ರೀತಿ ನವಿಲಾಗಿ, ಬದುಕಿನ ನೆರೆಯಾಗಿ,ನೆಲೆಯ ಸೊಬಗಾಗಿ ಬಂತೆನ್ನುವುದು  ಈ ಪ್ರೇಮದ ಮೇಲಿನ  ವ್ಯಾಮೋಹಕ್ಕೆ ಉತ್ಪ್ರೇಕ್ಷೆಯಾಗಿದೆ. ಬಂದ ದಿನದಿಂದ ನಿತ್ಯದ ಹರಿವನ್ನೆ ತೊರೆಯಿಸಿದೆ, ಹಗಲುಗಳೇ ಇಲ್ಲ ಈಗ, ಹಸಿವೆನ್ನುವುದು ದೂರ, ಇದು ಬಂಧವಾಗಷ್ಟೇ ಉಳಿಯದೇ ಬಂಧನವೂ ಆಗಿದೆ. ಆದರೆ ಕವಯತ್ರಿಗೆ .ಬೆಳಗಾಗುವ ದಾರಿಯಲ್ಲಿ ಈ ಬಂಧನವೂ ಹಿತವಾಗಿದೆ. ಮುಂದಿನದೆಲ್ಲಾ ಇತಿಹಾಸ ತಪ್ಪಿತು ದಿನಚರಿಯ ಪ್ರಾಸ. ಬೆಂಕಿಯ ಕೆನ್ನಾಲಿಗೆಗೆ ಬಳಲಿದ ಹೊತ್ತು,ಹೊಸ ಕನಸುಗಳು ಮೂಡಿದ್ದು, ಹಕ್ಕಿ ಬಿಚ್ಚಿಟ್ಟ ರೆಕ್ಕೆಗಳು. ಚುಕ್ಕಿಗಳು ಅವಳ ಜೊತೆಯಾದದ್ದು,  ಆ ಸುಂದರತೆಯನ್ನು ಜೊತೆ ಮಾಡಿದ್ದು ಈ ಪ್ರೇಮ.  ಈ ಪ್ರೇಮ ಅವಳನ್ನು ಎಷ್ಟು ಬೆಂಬಲಿಸುತ್ತಿದೆ ಎಂದರೆ ನಡೆವ ಹಾದಿಗೆ ತನ್ನ  ಕಿರುಬೆರಳನ್ನು ನೀಡಿ ಹೊರಗೆ ಬರುವುದು ಕಲಿಸಿದೆ. ಆದರೆ ಜಗದ ಬಾಯಿಗೆ  ಹೊಲಿಗೆ ಹೇಗೆ ಹಾಕಲಿ ಎಂಬ ಚಿಂತೆ,  ವಿಕಾರ ನೋಟಗಳ ಹೇಗೆ ಎದುರಿಸಲಿ ಎಂಬ ಭಯ, ಆದರೂ ಧೃತಿಗೆಡದ ಈ ಕವಿತೆ ಬೆಂಕಿಯ ಜಾಡೆನ್ನುವುದ ತಿಳಿದೂ ಬೆಳಕಾಗುವ ಹಂಬಲ ಹೊತ್ತಾಕೆ. ಈ ಪ್ರೇಮ, ಕಾವ್ಯ ಪ್ರೇಮ ಅವಳಲ್ಲಿ ಅಂತರಂಗದ ಸಂಚಲನೆಯೇ ಆಗಿದೆ. ದ್ವೇಷ, ಅಸೂಯೆ, ಮೋಸ, ಮುನಿಸು, ಜಗಳ ಕಾವ್ಯಲೋಕದ  ನಿತ್ಯ ಕಾಯಕಗಳೆ ಆಗಿ ಮೆರದಿವೆ. ಒಂದು ಪ್ರೇಮದಲ್ಲಿ ಮುಳುಗುವುದೆಂದರೆ ..! ಎಷ್ಟು ಅಸ್ಪಷ್ಟ ಸಾಲುಗಳ ಬರೆದೆ.. ಅರ್ಥವಿರಲಿಲ್ಲ.. ವ್ಯರ್ಥವಾಗಲೂ ಇಲ್ಲ.. ಆ ಪುರುಷನಲ್ಲಿ, ಕಾವ್ಯ ಪುರುಷನ ಪ್ರೇಮದಲ್ಲಿ ಮುಳುಗಿದ ಸಂದರ್ಭ ಎಷ್ಟು ಅಸ್ಪಷ್ಟ ಸಾಲುಗಳಿಗೆ ಕಾರಣವಾಯಿತು ಎನ್ನುತ್ತಾಳೆ. ಆದರೆ ಅವೆಲ್ಲ ವ್ಯರ್ಥವಾಗಲಿಲ್ಲ. ಕಳೆದುಕೊಳ್ಳುತ್ತಲೇ ದಕ್ಕಿಸಿಕೊಂಡಿದ್ದು ಬಹಳಷ್ಟಿದೆ.ತೂಗಿ ಆಡಲಿಲ್ಲ.. ಸೋಗು ನಟಿಸಲಿಲ್ಲ. ಎಷ್ಟು ದಕ್ಕಿದೆವು ನಾವು ಒಬ್ಬರಿಗೊಬ್ಬರು ಏನೆಲ್ಲಾ ಕಳೆದದ್ದು? ಪ್ರೀತಿಯಲ್ಲಿ ಸ್ವಾರ್ಥ ವ್ಯಕ್ತಿತ್ವರಳಿಸುವ ಬದಲು ಸಂಕುಚಿತಗೊಳಿಸುತ್ತದೆ. ಒಳಗಿನ ಸೆಲೆ ಉಕ್ಕುತ್ತಲೆ ಇರಬೇಕು. ಬರಿದಾಗದಂತೆ. ಲೌಕಿಕದ ಸುತ್ತ ನೆರೆದ ಬಯಕೆಗಳು, ಹೆಣ್ಣಿನ ಮನಸ್ಸು ಬಯಸುವ ಸುಕೋಮಲ ಪ್ರೀತಿ. ಕಾರಣವಿಲ್ಲದೇ ಬಂದ ಈ ಸಂಗತಿ ಕಾಲವಲ್ಲದ ಕಾಲದಲ್ಲಿ ಹತ್ತಿರವಾದದ್ದು,  ಅತಿರೇಕದ ಭಾವಗಳು ಎನ್ನಿಸಿದರೂ ಉತ್ಕಟತೆಯನ್ನೆ ಪ್ರೇಮದ ಮದಿರೆಯನ್ನೇ ಕವಿತೆ ಹೇಳಿದ್ದು ಮನಸ್ಸು ಅದರೊಳಗೆ ನಾನೆ ಆಗಿ, ನನ್ನೊಳಗೆ ಕವಿ ಕಂಡಂತಾಗಿ, ಬಹುಶಃ  ಒಬ್ಬ ಆರ್ದ್ರ ಮನಸ್ಸಿನ ಹೆಣ್ಣುಗಳ ಪ್ರತೀಕವಾಗಿ      ಕವಯತ್ರಿ ಕಾಣುತ್ತಾರೆ. ನಿತ್ಯದ ಬದಲಾಗದ ದಿನಚರಿಯಲ್ಲಿ ಏಕತಾನತೆಯನ್ನೆ ಉಂಡು ನರಳಿ ಮೌನದ ಸದ್ದಿಗೆ ಮಸುಕಾಗುತ್ತಿದ್ದ ಜೀವವೊಂದರ ಬದಲಾದ ನಿಲುವು, ಹೊಸತನ, ಅದಕ್ಕೆ ಕಾರಣವಾದ ಸಂಗತಿಯೊಂದರ ಸುತ್ತ ಸುತ್ತುವ ಕವಿತೆ, ಬದುಕನ್ನೆ ತೆರೆದಿಟ್ಟದೆ. ಕಾವ್ಯ ಅವಳೊಳಗಿನ ಚೇತನವನ್ನು ಬಡಿದೆಬ್ಬಿಸಿದೆ,  ಜನರ ನುಡಿಗಳಿಗೆ ಭಯಗೊಳ್ಳುತ್ತಿದ ಆಕೆ ಈಗದನ್ನು ಮೀರಿದ್ದಾಳೆ. ಅವರ ವಕ್ರ ದೃಷ್ಟಿ ಅವಳಿಗೆ ಅಭ್ಯಾಸವಾಗುತ್ತಾ, ಹೆಜ್ಜೆಗಳು ದೃಢವಾಗುತ್ತಿವೆ. ಆದರೂ ಯಾವುದೂ ಸ್ಥಿರವಲ್ಲ ಎಂಬ ಪ್ರಜ್ಞೆ ಆಕೆಗಿದೆ. “ಗಾಳಿಯಲ್ಲಿ ಹಾಡು ಹೇಳಬೇಡ” ಎನ್ನುವ ಕವಯತ್ರಿ  ಇನ್ನೂ ಅಸ್ಥಿರತೆಯನ್ನು ಎದುರಿಸುತ್ತಿರುವ ಸಾಂಕೇತಿಕ. ಎಲ್ಲಿ ಪ್ರಾರಂಭವೋ ಅಲ್ಲೆ ಕೊನೆ ಎಂಬ ದರ್ಶನ ನೀಡುವಂತೆ ಮತ್ತೆ ಕೊನೆಯ ಸಾಲುಗಳು ಓದುಗನ ವ್ಯಾಕುಲ ಗೊಳಿಸುತ್ತವೆ. ಪೇಮದ ಹಾದಿಯಲ್ಲಿ ಕಾಣುವ ಎಲ್ಲ ಏಳುಬೀಳುಗಳು, ನೋವು ನಲಿವುಗಳು ಇಲ್ಲಿ ಸಹಜವಾಗಿ ಬಂದಿವೆ. ಇದು ಬರೀ ಪ್ರಿಯನ ಕುರಿತಾದ ಕನವರಿಕೆಯಲ್ಲ. ಅದಕ್ಕೂ ಮೀರಿ ತನ್ನ ತಾನು ಕಂಡುಕೊಳ್ಳುವ ದಾರಿಯಲ್ಲಿನ ಗತಿ ಈ  ಕವಿತೆ ಅತಿಯಾದ ವಿವರಣೆಗಳ ಭಾರದಿಂದ ನಲುಗಿದೆ. ಸೂಕ್ಷ್ಮತೆಯೂ, ಕಿರಿದರಲ್ಲಿ ಹಿರಿದರ್ಥವನ್ನೂ ಹೇಳುವುದು ಕವಿತೆಯ  ಶ್ರೇಷ್ಟತೆ.ಇಲ್ಲಿ ಆ ಸಂಗತಿಗಳ ಕೊರತೆ ಕಾಣುತ್ತಿದೆ.ಆದರೂ ಕವಿತೆ ಹೃದಯವನ್ನು ಗೆದ್ದಿದೆ. *****************

ಅಕಾರಣ ಅಕಾಲ Read Post »

ಕಾವ್ಯಯಾನ

ಮಧ್ಯಕಾಲ

ಕವಿತೆ ಮಧ್ಯಕಾಲ ಸ್ಮಿತಾ ಭಟ್ ಈ ಶರತ್ ಕಾಲವೆಂದರೆನೆನಪಾಗುವುದುಮದುವೆಯಾಗಿ ವರ್ಷಗಳು ಸಂದಮಧ್ಯಕಾಲದ ಜೋಡಿ . ಇತ್ತ ಪ್ರೇಮವೂ ಇಲ್ಲಅತ್ತ ಪಕ್ವತೆಯೂ ಇಲ್ಲಬರೀ ಒಣ ಹವೆ. ಶರವೇಗದಲಿ ಸರಿದೇ ಹೋದಮಳೆ ಮತ್ತದರ ಸೆಲೆರೆಂಬೆಗಂಟಿದ ಎಲೆಗಳಅಮಾಯಕ ನೋಟಕಳೆದ ಕಿಲ ಕಿಲ ಪ್ರೇಮದ್ದೂ. ಮುಂಜಾವಿಗೆ ಹೊದ್ದ ಶೀಕರಮುದುಡಿಯೇ ಕುಳಿತ ಅಲರುಬಿಸುಪಿಲ್ಲದ ವಿಷಾದ ನಸುಕು. ಕೈ ಚಾಚಿದ ತರುಹಕ್ಕಿ ಕುಳಿತ ಒಲವುಕೊಟ್ಟ ಪುಟ್ಟ ಕಾವು ಅಪ್ಪಿದ ಆಪ್ಯಾಯತೆಗಳಿಗೆಸುಳಿಗಾಳಿಯ ಪರೀಕ್ಷೆಕೊನರದ ಕಾಲದಸ್ಥಬ್ಧ ಭಾವಗಳ ನಕ್ಷೆ.ಹಗೂಽರ ರೂಢಿಯಾಗೇ ಬಿಡುತ್ತದೆಉದುರುವದು ಮತ್ತುಚಿಗುರಿಕೊಳ್ಳುವುದೂ… ******************************

ಮಧ್ಯಕಾಲ Read Post »

ಕಾವ್ಯಯಾನ

ಹಾಯ್ಕು

ಕವಿತೆಗಳು ಹಾಯ್ಕು ಭಾರತಿ ರವೀಂದ್ರ. 1) ನೆನಪುಮೊದಲ ಮಳೆನೆನಪುಗಳ ಧಾರೆಮನಸ್ಸು ಒದ್ದೆ. 2) ಸ್ವಾಗತಮೂಡಣ ದೊರೆಹಕ್ಕಿಗಳ ಸ್ವಾಗತಹೊಸ ಬದುಕು. 3) ನೆಪಬೀಸೋ ಗಾಳಿಗೆಅವಳದೇ ಧ್ಯಾನವು,ಸೋಕಿದ ನೆಪ. 4) ನಾಚಿಕೆಇಳೆ ನಾಚಿಕೆ :ಕದ್ದು ನೋಡಿದ ರವಿ,ಶಶಿ ಮುನಿಸು 5) ಸೋನೆನವಿಲು ನೃತ್ಯ :ಬೆರಗಾದ ಮುಗಿಲು,ಸುರಿದ ಸೋನೆ. 6) ಗೆಜ್ಜೆಮನ ಮಯೂರ:ನಿನ್ನ ನಗು ಕಂಡಾಗ,ಗೆಜ್ಜೆ ನಾಚಿತು. 7) ಕನ್ನಡಿಕಣ್ಣ ಕನ್ನಡಿ:ತುಂಬೆಲ್ಲ ನಲ್ಲ ನೀನೇ,ಮೌನ ಪ್ರೀತಿಗೆ. 8) ಹರ್ಷಭೂ ತಾಯಿ ಹರ್ಷ:ಹೂವಾಗಿ ಅರಳೈತಿ,ಮಧು ಸಂಭ್ರಮ. 9) ಮುತ್ತುನೀನಿತ್ತ ಮುತ್ತುಮಿಂಚೈತಿ ನೋಡು,ನನ್ನಕಣ್ಣ ಕಾಡಿಗೆ. 10) ಮಧುಮುತ್ತಿನ ಮಧು :ಮತ್ತೇರಿತು ದುಂಬಿಗೆ,ಶೃಂಗಾರ ಕಾವ್ಯ. *******************************************

ಹಾಯ್ಕು Read Post »

ಇತರೆ

ಕಾದಂಬರಿ ಕುರಿತು ಚೋಮನ ದುಡಿ ಡಾ.ಶಿವರಾಮ ಕಾರಂತ ತಿಲಕ ನಾಗರಾಜ್ ಹಿರಿಯಡಕ ಚೋಮನ ದುಡಿಯ ಮೋಡಿಗೆ ಮನಸೋತಿರುವೆ…  ಯಾವುದೇ ಕೃತಿ ಓದಿದರೂ ನನ್ನನ್ನು ಮತ್ತೆ ಮತ್ತೆ ಕಾಡುವುದು ನೆಚ್ಚಿನ ಸಾಹಿತಿ ಕಾರಂತಜ್ಜರ ‘ಚೋಮನ ದುಡಿ’ ಅಂದಿನ ಕಾಲದ ಕಾರ್ಗತ್ತಲ ಸ್ವರೂಪ, ಆ ಕತ್ತಲನ್ನು ಲೆಕ್ಕಿಸದೆ ಜನರು ಊರ ಜಾತ್ರೆಯನ್ನು ಸಂಭ್ರಮಿಸುತ್ತಿದ್ದ ಪರಿ, ಇಂದು ಹಗಲಿನಂತೆ ಬೆಳಗುವ ರಾತ್ರಿಯ ಕಾಣುವ ನಮನ್ನು ಬೇರಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ಚೋಮನ ದುಡಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನಸ್ಸಿಗಿಳಿಯುತ್ತವೆ. ನಮಗಿವತ್ತು ಕೇವಲವೆನಿಸುವ  ಇಪ್ಪತ್ತು ರೂಪಾಯಿ ಈ ಕಾದಂಬರಿಯಲ್ಲಿ ಒಗ್ಗಟ್ಟಾಗಿದ್ದ ಚೋಮನ ಸಂಸಾರವನ್ನು ಛಿದ್ರಗೊಳಿಸಿಬಿಡುತ್ತದೆ. ಹೇಗೋ ಗಂಜಿ,ಉಪ್ಪು, ಕಾಳುಕಡಿ ತಿಂದುಂಡಿದ್ದ ಸಂಸಾರ ಚೋಮ ಮಾಡಿದ್ದ ಸಾಲದ ಸುಳಿಯೊಳಗೆ ಸಿಲುಕಿ ನಲುಗುತ್ತದೆ. ಅಪ್ಪನ ಸಾಲ ತೀರಿಸ ಹೊರಟ ಗುರುವ, ಚನಿಯರಲ್ಲಿ ಗುರುವ ತನ್ನ ವಯೋ ಸಹಜ ಬಯಕೆಯಿಂದ ಅವಳಾರನ್ನೋ ಕಟ್ಟಿಕೊಳ್ಳುತ್ತಾನೆ. ಚನಿಯ ಜ್ವರಕ್ಕೆ ಬಲಿಯಾಗುತ್ತಾನೆ. ಇಷ್ಟಾಗಿದ್ದರೆ ಸಾಕಿತ್ತೇನೋ ಇಪ್ಪತ್ತು ರೂಪಾಯಿ ಯಿಂದ ಇಪ್ಪತ್ತೈದಕ್ಕೇರಿದ ಅಪ್ಪನ ಸಾಲದ ಹೊರೆಯನ್ನು ಬೆಳ್ಳಿ ಹೊರುತ್ತಾಳೆ , ಕೊನೆಗೆ ತೀರಿಸುತ್ತಾಳೆ ಕೂಡ. ಆದರೆ ಅಲ್ಲೊಂದಷ್ಟು ನಡೆಯುವ ಘಟನಾವಳಿಗಳು ಮನ ಕಲಕುತ್ತವೆ‌. ಎಷ್ಟಂದರೂ ಹೆಣ್ಣುಮಗಳಲ್ಲವೇ? ನೀಲನ ಘೋರ ಅಂತ್ಯಕ್ಕೆ ಛೆ! ಎಂಬ ಉದ್ಗಾರ ನಮಗರಿವಿಲ್ಲದೆ ಹೊರಬರುತ್ತದೆ. ಇಲ್ಲಿ ಬೆಳ್ಳಿ ಮತ್ತು ಚೋಮನ ಪಾತ್ರಗಳು ಬಹುವಾಗಿ ಕಾಡುತ್ತವೆ. ತಂದೆಯನ್ನು, ಅಣ್ಣತಮ್ಮಂದಿರನ್ನು ಬಹುವಾಗಿ ಪ್ರೀತಿಸುವ, ತಾಯಿ, ತಂಗಿ,ಅಕ್ಕ , ಜವಾಬ್ದಾರಿಯುತ ಹೆಣ್ಣುಮಗಳು ಹೀಗೆ ವಿವಿಧ ಪಾತ್ರಗಳನ್ನು ನಿಭಾಯಿಸುವ ಬೆಳ್ಳಿ ಹಾದಿ ತಪ್ಪಿದಳೆ? ಎಂದುಕೊಳ್ಳುವಾಗ ಇಲ್ಲ ವಯೋ ಸಹಜ ಬಯಕೆಗೆ ಬಲಿಯಾದಳೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಆದರೂ ಬೆಳ್ಳಿಯ ಬಗ್ಗೆ ಮನಸ್ಸಿನ ಮೂಲೆಯಲ್ಲಿ ಮರುಕವೊಂದು ಹುಟ್ಟಿಕೊಳ್ಳುತ್ತದೆ. ಇನ್ನು ಚೋಮನೇನಾದರೂ ಸಿಕ್ಕಿದರೆ ” ಅಯ್ಯೋ ಚೋಮ ಹೆಂಡದಂಗಡಿಗೆ ಹಾಕೊ ದುಡ್ಡಿಂದ ಸಾಲಾನಾದ್ರು ತೀರಿಸ್ಬಾರ್ದಾ? ” ಅಂತ ಕೇಳಿಬಿಡಬೇಕು ಎನ್ನುವಷ್ಟು ನೈಜವಾಗಿ ಮೂಡಿಬಂದಿರುವ ಪಾತ್ರ ಚೋಮನದು. ಮೊದಲಿನಿಂದ ಕೊನೆಯವರೆಗೂ ಚೋಮನ ಜೊತೆಗಾರನಾಗಿ ಕಾದಂಬರಿಯುದ್ದಕ್ಕೂ ಸದ್ದು ಮಾಡೋ  ದುಡಿ ಕೊನೆಯಲ್ಲಿ  ತನ್ನ ಸದ್ದಿನೊಂದಿಗೆ ಚೋಮನ ಉಸಿರನ್ನೂ ಜೊತೆಗೆ ಚೋಮನ ಬೇಸಾಯದ ಕನಸನ್ನೂ ಕರೆದೊಯ್ದು ಕಣ್ಣಂಚನ್ನು ತೇವಗೊಳಿಸುತ್ತದೆ. ಬದುಕಿನುದ್ದಕ್ಕೂ ಚೋಮನ ದುಡಿಯ “ಡಮ ಡಮ್ಮ ಢಕ ಢಕ್ಕ” ಸದ್ದು ಸದಾ ಕರ್ಣಗಳಲ್ಲಿ  ಅನುರಣಿಸುತ್ತಲೇ ಇರುತ್ತದೆ. ******************************* ತಿಲಕ ನಾಗರಾಜ್ ಹಿರಿಯಡಕ

Read Post »

ಇತರೆ

ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಚಂದ್ರಿಕಾ ನಾಗರಾಜ್ ಹಿರಿಯಡಕ ಮಲೆಯ ಝೇಂಕಾರಗಳಿಗೆ ಕಿವಿಯಾಗುತ್ತಾ… ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅನೇಕ ಕಾದಂಬರಿಗಳು ಜೀವಂತಿಕೆ ಪಡಕೊಂಡಿವೆ. ಅನೇಕ ಸಾಹಿತಿಗಳು ತಮ್ಮ ಕೃತಿಗಳ ಮೂಲಕಾನೇ ಉಸಿರಾಡುತ್ತಿದ್ದಾರೆ. ಅಂತಹ ಮೇರು ಸಾಹಿತಿಗಳಲ್ಲಿ ಪ್ರಮುಖರು ಕುವೆಂಪು. ಪ್ರಕೃತಿಯೊಂದಿಗಿನ ನಂಟಿನಲ್ಲೇ ಸಂಬಂಧಗಳನ್ನು ಅರಳಿಸುತ್ತಾ ಸಾಗಿಸುವ ಶ್ರೇಷ್ಠ ಕವಿ ಕುವೆಂಪು. ಅವರ ಕೃತಿಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು “ಮಲೆಗಳಲ್ಲಿ ಮದುಮಗಳು”. ಕಣ್ಣಿಗೆ ದಣಿವೇ ನೀಡದೆ ಓದಿಸಿಕೊಂಡು ಹೋಗುವ ಕಾದಂಬರಿ. ಮಲೆಗಳಲ್ಲಿ ಕಾಡುವ ಮದುಮಗಳ ಬರಹ ಕಾವ್ಯವಿದು.ಕಾದಂಬರಿಯ ಪ್ರತೀ ಪಾತ್ರವೂ ಮುಖ್ಯವೇ…ಒಂದೊಂದೂ ಕವಿತೆಯಂತೆ ಇಳಿಯುತ್ತವೆ. ಗುತ್ತಿ – ತಿಮ್ಮಿಯ ಪ್ರೇಮ, ಐತ – ಪೀಂಚಲುವಿನ ಮೋಹ, ಮುಕುಂದಯ್ಯ – ಚಿನ್ನಮ್ಮರ ಒಲವ ಚೆಲುವು ಎಲ್ಲವೂ ಇಲ್ಲಿ ದೊಡ್ಡ ಸೊಬಗು…ಈ ಸೊಬಗ ಹಿಂದೆ ಹಿಂದೆ ಹೋದಷ್ಟು ಎಲ್ಲಿಯೂ ನಿಲ್ಲಲಾಗುವುದಿಲ್ಲ…ದಾರಿ ಸಾಗಿದಂತೆ ಸಾಗುತ್ತಿರಬೇಕಷ್ಟೇ…ಪ್ರೇಮಕ್ಕೆ ಕೊನೆ ಎಂಬುವುದಿಲ್ಲ…ಅದು ಯಾರನ್ನೂ ಸೆಳೆಯಬಲ್ಲ ಸೂಜಿಗಲ್ಲು…ಪ್ರಕೃತಿಯಂತೆ….ಇಲ್ಲಿ ಪ್ರೇಮ ಹಾಗೂ ಪ್ರಕೃತಿ ಒಂದಾಗಿ ಮೇಳೈಸಿದೆ..ಹಾಗಂದ ಮೇಲೆ ಬೇರೆ ದಿಗ್ಭ್ರಮೆಗಳು ಬೇಕೇ…! ಪ್ರೀತಿಯೊಂದಿಗೆ ಬೆಸೆದ ಬಂಧಗಳ ನಡುವೆ ಜಾತಿಯ ನರಳಾಟ ಕಿವಿಗೆ ಕರ್ಕಶವಾಗುತ್ತದೆ.ಜಾತಿ ಭೇದದ ವಾಸನೆ ಮೂಗಿಗೆ ಬಡಿಯುತ್ತದೆ. ದೈಹಿಕ ವಾಂಛೆಗಳಿಗೆ ಬಲಿಯಾದ ಮುಗ್ಧ ಪ್ರೇಮದ ಕಿರುಚಾಟ ಕಿವಿಗೆ ಅಡರುತ್ತದೆ. ಇಲ್ಲಿ ಕಾಡುವ ದುರಂತಗಳಿವೆ..ಒಂದು, ಎಳಸು ಪ್ರೇಮವೊಂದರ ದುರ್ಮರಣ, ಮತ್ತೊಂದು ಮೂಕ ಪ್ರೇಮದ ಸಾವು…ಸಿರಿವಂತನಾದ ದೇವಯ್ಯನಿಗೆ ಇಟ್ಟುಕೊಂಡವಳಾಗಿಯಾದರೂ ಜೊತೆಯಾಗ ಬೇಕೆಂಬೋ ಕಾವೇರಿಯ ಉತ್ಕಟ ಪ್ರೇಮವಿಲ್ಲಿ ಭಯಂಕರ ಅಂತ್ಯ ಕಾಣುತ್ತದೆ ನೋಡಿ…ಅದು ಹೆಣ್ಣು ಬಾಕತನವನ್ನು ತೋರಿಸಿದೆ. ಆಕೆಗೆ ಬೇಕಾಗಿದ್ದು ದೇವಯ್ಯ…ಪ್ರೇಮ…ಅದಕ್ಕಾಗಿ ಚೀಂಕ್ರನೆಂಬೋ ನಂಬಿಕೆಯ ಹಿಂದೆ ಹೊರಡುತ್ತಾಳೆ. ಹೆಣ್ಣೆಂಬ ಕಾರಣಕ್ಕೆ ಭಕ್ಷಣೆಗೊಳ ಪಡುತ್ತಾಳೆ…ತನ್ನನ್ನು ತಾನು ಕೊಂದು ಕೊಳ್ಳುತ್ತಾಳೆ…ಕಾದಂಬರಿಯ ಆರಂಭ ಭಾಗದಲ್ಲಿ ಬರೋ ‘ಹುಲಿಯಾ’ ನಾಯಿಗುತ್ತಿಯ ಬದುಕಿನ ಪ್ರತೀ ಹೆಜ್ಜೆಗಳನ್ನು ಮೂಸುತ್ತಾ ಹಿಂಬಾಲಿಸುವ ನಿಯತ್ತಿನ ಜೀವಿ…ಒಂದರ್ಥದಲ್ಲಿ ಈ ಕಾದಂಬರಿಯಲ್ಲಿ ಅದರ ಪಾತ್ರವೂ ಖುಷಿ ಕೊಡುತ್ತದೆ…ಕೊನೆಗೆ ನೋಯಿಸುತ್ತದೆ…ನಿಯತ್ತು…ಪ್ರೀತಿ ಎಲ್ಲದಕ್ಕೂ ಹುಲಿಯಾ ಸಾಕ್ಷಿ…ಮಲೆ ಪ್ರೇಮದ ಗಂಧ ಹುಲಿಯಾನ ಏದುಸಿರಿನೊಂದಿಗೆ ಬೆರೆತಂತೆ ಭಾಸವಾಗುತ್ತದೆ. ಅದೊಂದು ಪ್ರೇಮಭರಿತ ಒಡನಾಟವಲ್ಲದೇ ಮತ್ತೇನು…ಅಕ್ಕಣಿಯ ಮೇಲೆ ಅಕ್ಕರೆ ಹೊಂದಿದ್ದ ಚೀಂಕ್ರ ಪಿಜಿಣನ ಸಾವನ್ನು ಬಯಸಿ ಸ್ವಾರ್ಥಿಯಾದ…ಆದರೆ….ಮೂಕ ಪ್ರಾಣಿ ಹುಲಿಯಾದು ಯಾವ ಸ್ವಾರ್ಥವಿರದ, ನಿಷ್ಕಲ್ಮಶ ನಿಷ್ಠೆಯ ಪ್ರೇಮದ ಕುರುಹಾಗಿ ಉಳಿಯುತ್ತದೆ. ಕೊನೆಗೊಂದು ಪ್ರೇಮಮಯ ಅಂತ್ಯ…ಕ್ಷಮಿಸಿ, ಅಂತ್ಯವೆಲ್ಲಿಂದ ಬಂತು..! ಒಂದಷ್ಟು ವಿಚಾರಗಳನ್ನ, ಪಾತ್ರಗಳನ್ನು ಒಳಗೆ ಕಾಡಲು ಬಿಟ್ಟ ಮೇಲೆ ಅಲ್ಲಿ ಅಂತ್ಯವೆಂಬುದು ಇರುತ್ತದೆಯೇ…ಕೊನೆ ಎಲ್ಲಿಂದ ಅಲ್ಲವೇ…ಒಂದರ ಅಂತ್ಯವೆಂಬಂತೆಯೇ ಮತ್ತೊಂದರ ಆರಂಭ…ಇಲ್ಲೂ ಕಾದಂಬರಿ ಕೊನೆಯ ಪುಟ ತಲುಪಿದೆಯಷ್ಟೇ ಮಳೆಯಲ್ಲಿ ಮಿಂದು ಎದ್ದ ಮಲೆಯ ಹಸಿರೊಂದಿಗೆ ಬೆರೆತ ಝೀರುಂಡೆಗಳ ಸದ್ದಿನಂತೆ ಸದಾ ಅನುರಣಿಸುತ್ತದೆ…ನಮ್ಮನ್ನೂ ಮಲೆಯ ದೃಶ್ಯ ಕಾವ್ಯದೊಳಗೆ ಬಂಧಿಸುತ್ತದೆ. ********************************* ಚಂದ್ರಿಕಾ ನಾಗರಾಜ್ ಹಿರಿಯಡಕ

Read Post »

You cannot copy content of this page

Scroll to Top