ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕನ್ನಡಾಂಬೆ

ಚಂದ್ರಮತಿ ಪುರುಷೋತ್ತಮ್ ಭಟ್

ಕರುನಾಡ ತಾಯೆ ಭುವನೇಶ್ವರೀ ಅಮ್ಮಾ ಕರುಣೇಶ್ವರೀ
ಕರವ ಮುಗಿದು ಕೇಳುವೆನು ಕರುಣಿಸು ಬಾ ಕರುಣಾಮಯೀ

ಬಲಗೈಯಲ್ಲಿ ದೀಪ ಹಿಡಿದ ಜ್ಞಾನದಾತೆ ಅಮ್ಮಾ ನೀನು
ಎಡಗೈಯಲ್ಲಿ ಪತಾಕೆ ಹಿಡಿದ ನ್ಯಾಯದೇವಿ ಅಮ್ಮಾ ನೀನು

ಫಲಪುಷ್ಪ ಭರಿತಳಾಗಿ ಗಿರಿಯನೇರಿ ನಿಂತ ಅಮ್ಮಾ ನೀನು
ನಮ್ಮೆಲ್ಲರ ಪೊರೆಯುತಿರುವ ಅನ್ನದಾತೆ ಅಮ್ಮಾ ನೀನು

ಅದೆಂಥ ಸ್ವರ್ಗ ಸುಖವು ಅಮ್ಮಾ ಜನ್ಮ ಕೊಟ್ಟ ನಿನ್ನ ಮಡಿಲು
ಮೇಲುಕೀಳು ಎಣಿಸದೆ ದಯಾಮಯಿಯಾದ ಅಮ್ಮಾ ನೀನು

ಅದೆಷ್ಟು ಅಂದ ಚೆಂದ ನನಗೆ ನಿನ್ನ ಅಮ್ಮಾ ಎಂದು ಕೂಗಲು
ತನು ಮನದಲ್ಲೂ ಕನ್ನಡ ಮಿಡಿಸಿದ ಕನ್ನಡಾಂಬೆ ಅಮ್ಮಾನೀನು

ದುಷ್ಟರಿಗೆ ಶಿಕ್ಷಿಸಿ ಶಿಷ್ಟರಿಗೆ ರಕ್ಷಿಸುವ ಮಹಾಮಾಯೆ ಅಮ್ಮಾ ನೀನು
ಹಸಿರು ಸಿರಿಯ ಸುಧೆಯ ಕೊಟ್ಪ ಶಾಂತಿದೂತೆ ಅಮ್ಮಾ ನೀನು

ಮಕ್ಕಳಿಗೆ ಅಕ್ಷರದಾಹ ನೀಗಿಸುವ ಶಾರದಾಂಬೆ ಅಮ್ಮಾ ನೀನು
ಜಾತಿ ಕುಲ ತೊಲಗಿಸಿ ಕಣ್ತಣಿಸಿದ ಕಣ್ಮಣಿ ಕನ್ನಡಮ್ಮಾ ನೀನು

ದೂಷಣೆಗೂ ಮೌನವಾಗಿ ಸಹನಶೀಲಳಾಗಿರುವೆ ಅಮ್ಮಾನೀನು
ಎಲ್ಲೆಡೆ ಏಕತೆಯ ಮಂತ್ರ ಬೀರಿ ಜಗನ್ಮಾತೆಯಾದೆ ಅಮ್ಮಾ ನೀನು

*****************************

About The Author

5 thoughts on “ಕನ್ನಡಾಂಬೆ”

  1. ತುಂಬಾ ಚೆನ್ನಾಗಿದೆ ಮೇಡಂ
    ಇದೇ ರೀತಿ ಇನ್ನೂ ಹೆಚ್ಚು ಕವನಗಳನ್ನು ಬರೆಯಿರಿ.

Leave a Reply

You cannot copy content of this page

Scroll to Top