ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮನಿಷಾ

ವೀಣಾ ನಿರಂಜನ್

നാണക്കേടിന്റെ കണക്കിൽ കേരളവും | Sexual Abuse | Atrocities against women |  Kerala News | Malayalam News | Manorama Online

ಮೊದಲೇ ಕುರುಡಿಯಾಗಿದ್ದ
ನ್ಯಾಯ ದೇವತೆಯ
ಮೂಗಿಯನ್ನಾಗಿಸಿದರು ಮಗಳೇ
ನಿನ್ನ ನಾಲಿಗೆ ಕತ್ತರಿಸಿ
ಅವರ ಗಂಡಸುತನಕ್ಕೆ ಧಿಕ್ಕಾರವಿರಲಿ

ಅವರ ಬೆಚ್ಚನೆಯ ಮನೆಗಳಲ್ಲಿ
ಬಚ್ಚಿಟ್ಟ ನಿಧಿಯಂತೆ ನೀನೂ ಕೂಡ
ಅರಿತಿದ್ದರೆ ಸಾಕಿತ್ತು ಅವರು
ಹತ್ತೂ ಕಡೆ ಚಾಚಿದ ವಿಷ ಸರ್ಪಗಳ
ಹೆಡೆ ಮುರಿದು ಕಟ್ಟುತ್ತಿದ್ದರು

ಅರಿಯದಾದರೆ ಅವರು
ನಿನ್ನೊಳಗಿನ ಕುಡಿಯನ್ನು
ಹೊರಲಾರದಷ್ಟು ಪಾಪದ
ಮೂಟೆ ಹೊತ್ತು ನಡೆದರು
ಸಾವೂ ಕೂಡ ಸಹಜವಾಗಿ
ಸುಳಿಯಲಾರದಿನ್ನು ಅವರ ಬಳಿ

ಇಲ್ಲಿ ವಿಲ ವಿಲ ಒದ್ದಾಡುತ್ತಿದ್ದಾಳೆ
ನ್ಯಾಯ ದೇವತೆ
ನಿನ್ನ ನೆತ್ತರ ಬಿಸಿಯ ಸೋಕಿ
ಉರಿಯುತ್ತಿದ್ದಾಳೆ ನಖಶಿಖಾಂತ
ಸತ್ಯದ ನಾಲಿಗೆಯು ನೇತಾಡುತ್ತಿದೆ
ನಿನ್ನ ನಾಲಿಗೆಯ ಹಾಗೇ

ತೀರ್ಪು ಏನಾದರೇನು ಮಗಳೇ
ನಿನ್ನ ಜೀವಕ್ಕೆ ಬೆಲೆ ಕಟ್ಟಲಾದಿತೇ
ಬೇಡ ಮಗಳೇ
ನಿನ್ನ ಪಾಡು, ನಿನ್ನ ನೋವು ಮುಂದೆಂದೂ
ಬಾರದಿರಲಿ ನಿನ್ನಕ್ಕ ತಂಗಿಯರ ಪಾಲಿಗೆ

ಎಲ್ಲರೊಳಗಿನ ತಾಯಿ, ತಂಗಿ, ಅಕ್ಕ, ಮಗಳು
ಪ್ರಜ್ವಲಿಸುತಿರಲಿ ಸದಾ
ಅವರ ಎದೆಯೊಳಗೊಂದು ಸೂಜಿ
ಇರಿಯುತಿರಲಿ ಮೊನಚಾಗಿ
ಕಳಚಿ ಬೀಳಲಿ ಪಾಪದ ಕೊಂಡಿ
ಹರೇ ರಾಮ್ ಹರೇ ರಾಮ್

******************************

               

About The Author

Leave a Reply

You cannot copy content of this page

Scroll to Top