ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಉಕ್ಕುವ ನೀರಿಗೆ ಲಕ್ಷ್ಮಣ ರೇಖೆ ಇಲ್ಲ

ಕವಿತೆ ಉಕ್ಕುವ ನೀರಿಗೆ ಲಕ್ಷ್ಮಣ ರೇಖೆ ಇಲ್ಲ ಪೂರ್ಣಿಮಾ ಸುರೇಶ್ ನದಿ ಕಡಲ ದಂಡೆಯಲಿ ಮನೆಉಬ್ಬರ, ಇಳಿತ ,ರಮ್ಯ ಹರಿದಾಟಒಂದಿಷ್ಟು ಮೊರೆತ ಮತ್ತಷ್ಟುಆಲಾಪ ರಾಗ ವಿರಾಗಆಗಾಗ ರಾಡಿ ಮತ್ತಷ್ಟು ಸೆಳೆತದ ಮೋಡಿಕಚಕುಳಿ ಇಡುವ ಪುಟ್ಟ ಭಾವಗಳಹರಿವಿನ ಹರಿದಾಟ ಪುಲಕ ಹಸಿರುಮತ್ತೀಗ ಉಪ್ಪು ಜಲ ಕಟ್ಟದಿರಿ ಮನೆನದಿ ಕಡಲ ದಂಡೆಯಲಿ ನೆರೆಯೀಗ ಉಕ್ಕೀತು ‌ಹೊಳೆಯೀಗ ಬಿಕ್ಕೀತುಸಮುದ್ರದ ಒಡಲಲ್ಲೂ ಆರದ ಅಲೆಅಲೆನಿಮಗೆ ತಿಳಿಯದು ಪ್ರವಾಹದ ಉರಿಕಾದ ಕಾಯುವ ವಿಧವಿಧ ಪರಿಹರಿದು ಉಕ್ಕುವ ನೀರಿಗೆ ಲಕ್ಷಣರೇಖೆ ಇಲ್ಲ ಅಂಗಳ, ಪಡಸಾಲೆ ದೇವರಮನೆಪಾಕದ ತಾಣದಲ್ಲೂ ಇದೀಗ ನೆರೆಕೊಚ್ಚಿಕೊಂಡು ಹೋಗುತ್ತಿದೆಅದನ್ನು ಇದನ್ನು ಮತ್ತುನನ್ನ- ನನ್ನೊಳಗನ್ನೂ ***************************

ಉಕ್ಕುವ ನೀರಿಗೆ ಲಕ್ಷ್ಮಣ ರೇಖೆ ಇಲ್ಲ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಚರ್ಚೆ ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಮೆಲ್ಕಂಡವಿಷಯವಾಗಿ ಸಂಗಾತಿ ಪತ್ರಿಕೆ ಕನ್ನಡದ ಬರಹಗಾರರಿಗೆ ಕೆಲವು ಪ್ರಶ್ನೆಗಳನ್ನು ಹಾಕಿತ್ತು ಅದಕ್ಕೆ ಬಂದ ಉತ್ತರಗಳನ್ನು ಇಲ್ಲಿ ಒಂದೊಂದಾಗಿಪ್ರಕಟಿಸಲಾಗುತ್ತಿದೆ. ಸಂಗಾತಿ ಕೇಳಿದ ಪ್ರಶ್ನೆಗಳು ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಪ್ರಶ್ನೆ ಮೂರು,ಮಹಿಳೆಯೊಬ್ಬರು ಅಧ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇಗೆ ಎದುರಿಸಬಹುದು? ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅಧ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ? ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅಧ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು ಡಾ.ಪಾರ್ವತಿ ಜಿ.ಐತಾಳ್ ಮಹಿಳಾ ಅಧ್ಯಕ್ಷರು ಖಂಡಿತಾ ಬೇಕು …………………………………………. ಮಹಿಳೆಯರ ಸ್ಥಿತಿಗತಿಗಳು ಮೊದಲಿನಂತಿಲ್ಲ, ಅವರಿಗೆ ಬೇಕಾದಷ್ಟು ಸ್ವಾತಂತ್ರ್ಯ ಸಿಕ್ಕಿದೆ, ಶಿಕ್ಷಣ-ಉದ್ಯೋಗಾವಕಾಶಗಳು ಸಿಕ್ಕಿವೆ ಅನ್ನುತ್ತಾರೆ. ಸಾವಿರಾರು ವರ್ಷಗಳಿಂದ ಶೋಷಣೆ-ದಬ್ಬಾಳಿಕೆ, ಹಿಂಸೆ-ದೌರ್ಜನ್ಯಗಳಿಂದ ನಲುಗುತ್ತಲೇ ಬಂದಿರುವ ಹಿಂದಿನ ಕಾಲದ ಸ್ತ್ರೀಯರ ದುಸ್ಥಿತಿಗೆ ಹೋಲಿಸಿ ನೋಡಿದರೆ ಈ ಮಾತುಗಳು ನಿಜವೇ ಆದರೂ ಇವೆಲ್ಲವೂ ಹೊರನೋಟಕ್ಕೆ ಕಾಣುವ ಬದಲಾವಣೆಗಳು ಅಷ್ಟೆ. ಸ್ತ್ರೀಯರ ಇಂದಿನ ನಿಜಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿ ತಿಳಿಯ ಬೇಕಾದುದು ಬಹಳಷ್ಟಿದೆ.          ಸದಾ ಸಾಮಾಜಿಕ ಸಮಾನತೆಯ ಬಗ್ಗೆ ಏರುಧ್ವನಿಯಲ್ಲಿ ಭಾಷಣ ಬಿಗಿಯುವ  ಅನೇಕರು ಸ್ತ್ರೀಯರಿಗೆ ಸಮಾನ ಸ್ಥಾನ ಕೊಡುವ ವಿಚಾರದಲ್ಲಿ ತೆರೆಯ ಹಿಂದೆ ಸರಿಯುತ್ತಾರೆ. ಯಾಕೆಂದರೆ ಅವರು ತಮ್ಮ ತಮ್ಮ ಮನೆಗಳಲ್ಲೇ ತಾಯಿ, ಹೆಂಡತಿ, ಮಗಳಂದಿರು ಅಕ್ಕ ತಂಗಿಯರನ್ನು  ಅಡುಗೆ ಕೆಲಸ, ಮನೆಗೆಲಸ ಮತ್ತು ಇನ್ನಿತರ ಹಲವಾರು ವಿಚಾರಗಳಲ್ಲಿ ಅಸಮಾನತೆಯ ನೆಲೆಯಲ್ಲೇ ನಡೆಸಿಕೊಳ್ಳುವವರಾಗಿರುತ್ತಾರೆ. ಇವೆಲ್ಲವೂ ಸಂಪ್ರದಾಯ-ಪದ್ಧತಿಗಳ ಹೆಸರಿನಲ್ಲೇ ನಡೆಯುತ್ತವೆ. ಹೆಂಗಸರು ಮಾಡುವ ಕೆಲಸಗಳನ್ನು ತಾವು ಮಾಡುವುದು ತಮ್ಮ ಘನತೆಗೆ ಕಡಿಮೆ ಎಂದು ತಿಳಿದುಕೊಳ್ಳುವ ಪುರುಷರು ಇಂದಿಗೂ ನಮ್ಮ ಸುತ್ತು ಮುತ್ತ ಇದ್ದಾರೆ. ವೇದಿಕೆಯ ಮೇಲೆ ಸಮಾನತೆಯ ಮಾತುಗಳನ್ನಾಡಿ ಮನೆಗೆ ಹೋದ ಕೂಡಲೇ ಹೆಂಗಸರ ಕೈಯಲ್ಲಿ ಸೇವೆ ಮಾಡಿಸಿಕೊಳ್ಳುವವರಿದ್ದಾರೆ. ಬೆರಳೆಙಿಕೆಯ ಮಂದಿ ಸ್ತ್ರೀಯರ ಬಗ್ಗೆ ಸಹಾನುಭೂತಿ ತೋರಿಸುವವರಿದ್ದರೂ ಅವರು ಸಮಾನ ಜವಾಬ್ದಾರಿಯನ್ನು ಹೊರಲು ಎಂದೂ ಸಿದ್ಧರಾಗುವುದಿಲ್ಲ. ಮನೆಯಲ್ಲೇ ಗಾಣದೆತ್ತಿನಂತೆ ದುಡಿಯುವ ಪೂರ್ಣಕಾಲಿಕ ಗೃಹಿಣಿಯಾದರೂ ಉದ್ಯೋಗದಲ್ಲಿದ್ದು ಇಮ್ಮಡಿ ಜವಾಬ್ದಾರಿಗಳನ್ನು ಹೊರುವ ಸ್ತ್ರಿಯಾದರೂ ಅವರನ್ನು ಪುರುಷರು ನಡೆಸಿಕೊಳ್ಳುವ ರೀತಿಯಲ್ಲಿ ಇನ್ನೂ ಬದಲಾವಣೆಯಾಗಿಲ್ಲ.   ರಾಜಕೀಯದಲ್ಲೂ ಅಷ್ಟೆ. ಸ್ತ್ರೀಯರಿಗೆ ೩೩% ಮೀಸಲಾತಿಯ ಪ್ರಶ್ನೆ ಇನ್ನೂ ಬಗೆಹರಿದಿಲ್ಲ.ಪಂಚಾಯತ್-ನಗರಸಭೆಗಳಲ್ಲಿ ಮಹಿಳೆಯರು ಸ್ಪರ್ಧಿಸಿ ಆಯ್ಕೆಗೊಳ್ಳುತ್ತಾರಾದರೂ ಆಡಳಿತ ಸೂತ್ರವನ್ನು ಪೂರ್ತಿಯಾಗಿ ಕೈಯೊಳಗಿಟ್ಟುಕೊಳ್ಳುವವರು ಬಹಳ ಕಡಿಮೆ. ಎಷ್ಟೋ ಸಲ ಅವರು ಪುರುಷರ ಕೈಗೊಂಬೆಗಳಾಗಿರುತ್ತಾರೆ.ಹೆಣ್ಣಿನ ಸ್ಥಾನಮಾನಗಳ ಸುತ್ತ ಸುತ್ತಿಕೊಂಡಿರುವ ಸಾಂಪ್ರದಾಯಿಕ ಕಟ್ಟುಪಾಡುಗಳೇ ಇದಕ್ಕೆ ಕಾರಣ. ತನ್ನ ದೈನಂದಿನ ಬದುಕಿನ ಜಂಜಾಟಗಳಿಂದ ದಣಿಯುವ ಆಕೆಗೆ    ಯಾವುದರಲ್ಲಿಯೂ ಆಸಕ್ತಿ ಉಳಿಯುವುದಿಲ್ಲ.    ವಿವಾಹ ಮತ್ತು ಕುಟುಂಬ ವ್ಯವಸ್ಥೆಗಳು ಭಾರತೀಯ ಸಂಸ್ಕೃತಿಯ ಜೀವಾಳ. ಅದು ಇವತ್ತಿನ ವರೆಗೆ ಜೀವಂತವಾಗಿದ್ದರೆ  ಮಹಿಳೆಯರ ಸಹನೆ, ತ್ಯಾಗ ಹಾಗೂ ಶರಣಾಗತಿಯ ಮನೋಭಾವಗಳೇ ಕಾರಣ. ಇಂದಿನ ಬದಲಾದ ವಾತಾವರಣದಲ್ಲಿ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸುವಲ್ಲಿ ಹೆಣ್ಣಿನ ಪಾಲಿಗೆ ಅಡ್ಡಿಯಾಗುವುದು ಇವೇ ವಿಷಯಗಳು. ಮನೆಗೆ ಬೇಕಾದ ಹಣ ಸಂಪಾದನೆ ಮಾಡುವವನೆಂದು ಎದೆಯುಬ್ಬಿಸಿ ಹೇಳುವ ಗಂಡಸರಿಗಿಂತ ದುಪ್ಪಟ್ಟು ಕೆಲಸಗಳನ್ನು ಮನೆಯಲ್ಲಿ ಮಾಡುವ ಮಹಿಳೆಯರು ಮನೆ-ಗಂಡ-ಮಕ್ಕಳಿಗಾಗಿ ತಮ್ಮ ಸಮಯ ಮತ್ತು ಶಕ್ತಿಗಳನ್ನು ಪೂರ್ತಿಯಾಗಿ ವ್ಯಯಿಸಬೇಕಾಗುತ್ತದೆ. ಕೌಟುಮಬಿಕ ಬದುಕಿನಿಂದ ದೂರ ಉಳಿಯುವ ಮಹಿಳೆಯರಿಗಷ್ಟೇ ಹೊರಗಿನ ಕೆಲಸಗಳಲ್ಲಿ ಭಾಗವಹಿಸುವುದು ಸುಲಭವಾಗುತ್ತದೆ.   ಸಾಹಿತ್ಯ ಕ್ಷೇತ್ರದಲ್ಲೂ ಅಷ್ಟೆ.ಮಹಿಳೆಯರು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಮಾರು ಒಂದು-ಒಂದೂವರೆ ಶತಮಾನಗಳಷ್ಟೇ ಆಗಿವೆ. ಅದರಲ್ಲೂ ಇಂದು ಪುರುಷ ಸಾಹಿತಿಗಳಿಗೆ ಸಮನಾಗಿ ನಿಲ್ಲುವವರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಇನ್ನು ಸಭೆ-ಸಮ್ಮೇಳನಗಳನ್ನು ನೋಡಿದರೆ ವೇದಿಕೆಯಲ್ಲಿ ಹತ್ತರಲ್ಲಿ ಒಂಬತ್ತು ಮಂದಿಯೂ ಪುರುಷರೇ ಆಗಿರುತ್ತಾರೆ. ವೆದಿಕೆಯ ಒಂದು ಬದಿಯಲ್ಲಿ ನಿಂತು ಪ್ರಾರ್ಥನೆ ಹಾಡುವುದೋ ಸ್ವಾಗತಿಸುವುದೋ ಕಾರ್ಯಕ್ರಮ ನಿರೂಪಿಸುವುದೋ ಮುಂತಾದ ಚಿಲ್ಲರೆ ಕೆಲಸಗಳಿಗೆ ಮಹಿಳೆಯರ ಪಾತ್ರ ಸೀಮಿತವಾಗಿರುತ್ಯದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರು ವರ್ಷಗಳು ಕಳೆದರೂ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ಸಿಕ್ಕಿದ ಮಹಿಳೆಯರು ಒಬ್ಬರೋ ಇಬ್ಬರೋ ಮಾತ್ರವೆಂದರೆ ಏನರ್ಥ?  ಸಿಕ್ಕುವ ಎಲ್ಲಾ ಅಧಿಕಾರ-ಅವಕಾಶಗಳನ್ನು ಬಾಚಿಕೊಳ್ಳಲು ಪುರುಷ ವರ್ಗವೇ ಹೊಂಚು ಹಾಕುತ್ತಿರುವಾಗ ಮೊದಲೇ ಬಸವಳಿದು ತನಗೇನೂ ಬೇಡವೆಂದು ದೂರ ನಿಲ್ಲುವ ಮಹಿಳೆಯರಿಗೆ ಸ್ಥಾನಮಾನಗಳು ಸಿಗುವುದಾದರೂ ಹೇಗೆ?   ಹೌದು. ನಮ್ಮಲ್ಲಿ ಪ್ರತಿಭಾವಂತ ಮಹಿಳೆಯರು, ಪ್ರಾಮಾಣಿಕವಾಗಿ ಕೆಲಸ ಮಾಡಬಲ್ಲವರು ಸಾಕಷ್ಟು ಮಂದಿ ಇದ್ದಾರೆ. ಅಂಥವರು ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳ ಅಧ್ಯಕ್ಷ ಪದವಿಗೆ ಏರಬೇಕು. ಮನೆಯಲ್ಲಿ ತನ್ನ ದುಡಿಮೆಯನ್ನು ಗುರುತಿಸುವವರಿಲ್ಲದಿದ್ದರೂ ನಿಸ್ವಾ ರ್ಥವಾಗಿ ಕರ್ಮಯೋಗಿಯಂತೆ ದುಡಿಯುವ ಮಹಿಳೆ ಒಂದು ಸಾರ್ವಜನಿಕ ಸಂಸ್ಥೆಯಲ್ಲೂ ಹಣದಾಸೆ-ಅಧಿಕಾರದಾಸೆಗೆ ಬಲಿಯಾಗದೆ ಸಮರ್ಪಕವಾಗಿ ಸೇವೆ ಮಾಡಬಲ್ಲಳು. ಬಹುಶಃ  ಮಹಿಳೆಯರ ಸಮಸ್ಯೆಯ ನಿವಾರಣೆಗಾಗಿಯೂ ಆಕೆ ಪ್ರಯತ್ನಿಸಬಲ್ಲಳು. ಅದರೆ ಮಹಿಳೆ ಅಧ್ಯಕ್ಷಳಾಗಬೇಕಿದ್ದರೆ ಚುನಾವಣಾ ಪ್ರಚಾರದಿಂದ ಹಿಡಿದು ಅಧಿಕಾರಾವಧಿಯ ಕೊನೆಯ ತನಕವೂ ಪುರುಷರ ಸಹಕಾರ-ಬೆಂಬಲಗಳು ಆಕೆಗೆ ಅಗತ್ಯವಿದೆ. ಹಾಗೆಂದು ಮೀಸಲಾತಿಯ ಅಗತ್ಯವಿಲ್ಲ.   ಸರಕಾರವೇ ಒಂದು ಬಾರಿ ಕೇವಲ ಪುರುಷರು ಮಾತ್ರ ಚುನಾವಣೆಗೆ ಸ್ಪರ್ಧಿಸುವುದು, ಇನ್ನೊಮ್ಮೆ ಮಹಿಳೆಯರು ಮಾತ್ರ ಸ್ಪರ್ಧಿಸುವುದು ಎಂಬ ನಿಯಮವನ್ನು ಮಾಡುವುದು  ಸೂಕ್ತ. ಇದರಿಂದ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕುವುದು ಖಾತ್ರಿಯಾಗುತ್ತದೆ. ***********************************************

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ

ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು

ಲೇಖನ ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು ನೂತನ ದೋಶೆಟ್ಟಿ ಅವಳು ಸ್ವೇಹಿತೆಯರ ಸಹಾಯದಿಂದ ಡಿಗ್ರಿ ಮುಗಿಸಿದಳು. ತರಗತಿಯ ಸಮಯದಲ್ಲಿ ಲಕ್ಷ್ಯ ಕೊಟ್ಟು ಕೇಳುತ್ತಿದ್ದರೂ ಬರೆದುಕೊಳ್ಳಲು ಅವರ ನೆರವು ಬೇಕಾಗುತ್ತಿತ್ತು. ಪರೀಕ್ಷೆಯ ಸಮಯದಲ್ಲಿ ಅವರು ಅವಳಿಗೆ ಇಡಿಯ ಪುಸ್ತಕವನ್ನು, ನೋಟ್ಸುಗಳನ್ನು ಓದಿ ಹೇಳುತ್ತಿದ್ದರು. ತಮ್ಮ ಪರೀಕ್ಷೆಯ ಸಿದ್ಧತೆಯ ಜೊತೆಗೆ ಅವಳ ಪರೀಕ್ಷೆಯ ಸಿದ್ಧತೆಯನ್ನು ಮಾಡುವ/ಮಾಡಿಸುವ ಜವಾಬ್ದಾರಿ ಅವಳ ಸ್ನೇಹಿತೆಯರದು. ಅದನ್ನು ಅವರೆಲ್ಲ ಮನಃಪೂರ್ವಕವಾಗಿ ಮಾಡುತ್ತಿದ್ದರು. ಪರಿಕ್ಷೆ ಮುಗಿದ ಮೇಲೆ ಸ್ನೇಹಿತೆಯರೆಲ್ಲ ಸೇರಿ ಪಿಕ್ಚರ್ ಪ್ರೋಗ್ರ‍್ರಾಂ ಹಾಕುತ್ತಿದ್ದರು. ಅದಕ್ಕೆ ಅವಳು ನಾನು ಹೇಗೆ ನಿಮ್ಮೊಡನೆ ಬರಲಿ? ನೀವೆಲ್ಲ ಹೋಗಿ ನೋಡಿಕೊಂಡು ಬನ್ನಿ ಎಂದರೆ ಅವಳಂತೆ ತಾವೂ ಸಿನಿಮಾವನ್ನು ಕೇಳಿಸಿಕೊಂಡೇ ಸಂತಸ ಪಡುತ್ತಿದ್ದರು. ಅದಕ್ಕಾಗಿ ಅವರು ತಮ್ಮ ಮನೆಯ ಹತ್ತಿರದಲ್ಲಿದ್ದ ಟಾಕೀಸಿನ ಹಿಂಭಾಗದ ವಿಸ್ತಾರವಾದ ಕಟ್ಟೆಯ ಮೇಲೆ ಕುಳಿತು ಮೈಯೆಲ್ಲ ಕಿವಿಯಾಗಿ ಸಿನಿಮಾವನ್ನು ಕೇಳಿಸಿಕೊಂಡು ಆನಂದಿಸುತ್ತಿದ್ದರು. ಇದು ಅವರ ಸ್ನೇಹ. ಅವರು ಅಂಜುಂಗೆ ಗೆಳತಿಯರಷ್ಟೇ ಅಲ್ಲ. ಆಕೆಯ ಕಣ್ಣಾಗಿದ್ದರು. ಆಕೆ ತಮ್ಮಂತೆಯೇ ಕಾಲೇಜಿನ ದಿನಗಳನ್ನು ಆನಂದಿಸಬೇಕೆಂದು ತಾವು ನೋಡುತ್ತಿದ್ದುದನ್ನು ಕೆಲವು ಬಾರಿ ಆಕೆಗೆ ಹೇಳುತ್ತ, ಕೆಲವು ಬಾರಿ ಅವಳಂತೆಯೇ ಕಿವಿಗಳಲ್ಲಿ ಆಸ್ವಾದಿಸುತ್ತ, ಜಾತಿ ಧರ್ಮಗಳ ಗಡಿ ಮೀರಿದ ನಿಸ್ಪೃಹ ಸ್ನೇಹಕ್ಕೆ ಮಾದರಿಯಂತಿದ್ದರು. ಸದಾ ಉತ್ಸಾಹದ ಚಿಲುಮೆಯಾದ ಅಂಜುಂ ಓದು ಮುಗಿದ ಕೂಡಲೇ ಉದ್ಯೋಗದ ಸಂದರ್ಶನಕ್ಕೆ ಸಿದ್ಧಳಾದಳು. ಅದಕ್ಕಾಗಿ ಮಾತಿನ ಮೂಲಕ ಅರಿಯಬಹುದಾದ ಮೊಬೈಲನ್ನು ಬಳಸಿ ಉಳಿದ ಆಪ್‌ಗಳನ್ನು ಅದರಲ್ಲಿ ಅಳವಡಿಸಿಕೊಂಡಳು. ಸಂದರ್ಶನದಲ್ಲಿ ಅವಳಿಗೆ ತನ್ನ ಕಾರ್ಯ ವಿಧಾನವನ್ನು ವಿವರಿಸಲು ಕೇಳಿದಾಗ ಅವಳು ನೀಡಿದ ಪ್ರಾತ್ಯಕ್ಷಿಕೆಗೆ ಉದ್ಯೋಗದಾತರು ದಂಗಾಗಿ ಉದ್ಯೋಗ ಅವಳಿಗೆ ಒಲಿದು ಬಂತು. ಆ ಪ್ರತಿಷ್ಠಿತ ಕಂಪನಿ ಅವಳಿಗೆ ಒಬ್ಬ ಸಹಾಯಕನನ್ನು ನೀಡಿ ಅವಳಿಗೆ ಗೌರವ ಸಲ್ಲಿಸಿತು. ಅಂಜುಂ ಇದನ್ನೆಲ್ಲ ಛಲದಿಂದ, ಸ್ವಾಭಿಮಾನದಿಂದ, ಆತ್ಮಬಲದಿಂದ ಸಾಧಿಸಿದಳು.ಅವಳ ಮುಂದಿನ ಬಾಳಿನ ಬಗ್ಗೆ ಯೋಚಿಸಬೇಕಾದ ಹಿರಿಯರು ಹೆದರಿದರು. ಆಗ ಆಕೆಯ ಬಾಳಿಗೆ ಬೆಳಕು ತಂದವರು ಮಧ್ಯಮ ದೃಷ್ಟಿ ಹೊಂದಿದ್ದ ಚಂದ್ರಶೇಖರ. ಇದನ್ನು ಒಪ್ಪದ ಆಕೆಯ ಹಿರಿಯರು ಆಕೆಯನ್ನು ತಮ್ಮ ಮನೆ, ಮನಗಳಿಂದ ದೂರ ಮಾಡಿದರು. ಒಂದು ರೀತಿಯಲ್ಲಿ ಅದು ಆಕೆಯ ಸುದೈವವೇ. ಈಗ ಒಲಿದು ಬಂದ ಪತಿಯೊಂದಿಗೆ ಸುಖದ ಸಂಸಾರ ನಡೆಸುತ್ತಿದ್ದಾಳೆ ಅಂಜುಂ. ಅವಳಿಗೆ ಎರಡು ಗಂಡು ಮಕ್ಕಳು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಅವತ್ತು ರಾತ್ರಿ ಪ್ರಯಾಣದಲ್ಲಿ ಒಂದು ಕಡೆ ಬಸ್ಸು ನಿಂತಾಗ ಇಳಿದ ನಾನು ಉಳಿದ ಹೆಂಗಸರನ್ನು ಸೇರಿಕೊಂಡು ‘ಹೆಂಗಸರಿಗೆ’ ಬೋರ್ಡಿನ ಕಡೆಗೆ ಹೊರಟೆ. ಸರತಿ ಸಾಲಿನಲ್ಲಿ ನನ್ನ ಹಿಂದೆ ಗಂಡ-ಹೆಂಡತಿ ಇಬ್ಬರು ಬರುತ್ತಿದ್ದರು. ನಾನು ಅವರನ್ನು ನಿದ್ದೆಗಣ್ಣಿನಲ್ಲಿ ಸರಿಯಾಗಿ ಗಮನಿಸಿರಲಿಲ್ಲ. ಟಾಯ್ಲೆಟ್ಟಿನ ಮುಂಬಾಗದವರೆಗೂ ಆಕೆಯ ಕೈಹಿಡಿದು ಬಂದ ಆ ಗಂಡ ಅವಳನ್ನು ಬಿಟ್ಟು, ನನ್ನನ್ನು ಉದ್ದೇಶಿಸಿ ‘ಮೇಡಂ, ಇವರನ್ನು ಸ್ವಲ್ಪ ಒಳಗೆ ಕರೆದುಕೊಂಡು ಹೋಗಿ’ ಎಂದರು. ಆಗಲೇ ನಾನು ಅವರಿಬ್ಬರನ್ನು ಸರಿಯಾಗಿ ಗಮನಿಸಿದ್ದು. ತಕ್ಷಣವೇ ಅವರ ಗುರುತು ಹತ್ತಿದ ನಾನು ‘ನೀವು ಚಂದ್ರಶೇಖರ ಅಲ್ವೆ? ‘ ಎಂದೆ. ಹೌದು ಎಂದ ಅವರಿಗೆ ನನ್ನ ಪರಿಚಯವನ್ನು ನಾನು ಹೇಳುತ್ತಿದ್ದಂತೆ ಅವರಿಗಾದ ಆನಂದ ಅಷ್ಟಿಷ್ಟಲ್ಲ. ನಗುನಗುತ್ತಲೇ ಮಾತಾಡುವ ಅಂಜುಂ ಈಗ ಕಿಲಕಿಲ ಎಂದಳು. ಸರಿಸುಮಾರು ಒಂದು ದಶಕದ ನಂತರ ಭೇಟಿಯಾದರೂ ಗುರುತು ಪರಿಚಯವನ್ನು ನಾವಿಬ್ಬರೂ ಮರೆತಿರಲಿಲ್ಲ. ಅವರಿಬ್ಬರನ್ನು ಮರೆಯುವುದಾದರೂ ಹೇಗೆ ಸಾಧ್ಯ? ಹಿಂತಿರುಗಿ ನಾವು ಮೂವರೂ ಬರುವಾಗ ಅವರ ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿನಲ್ಲಿ ಬಿಟ್ಟಿದ್ದು ಅವರನ್ನು ತಾವು ನೋಡಲು ಹೋಗುತ್ತಿರುವುದಾಗಿ ಹೇಳಿದರು.ನೋಡುವುದೆಂದರೆ ಅವರಿಗೆ ಭಾವಿಸುವುದು, ಊಹಿಸುವುದು, ಸ್ಪರ್ಶಿಸುವುದು. ಇಂದ್ರಿಯಗಳನ್ನು ಮೀರಿದ ಭಾವಬಂಧದಲ್ಲಿ ಎಲ್ಲ ಸುಖವನ್ನೂ ಸೂರೆಗೊಳ್ಳುವ ಈ ಜೋಡಿಯನ್ನು ಕಂಡು ಮನ ತುಂಬಿ ಬಂದಿತು. ಅವರ ಸಂತೋಷಕ್ಕೆ , ತುಂಬು ಜೀವನಕ್ಕೆ ಅವರ ಮುಖದಲ್ಲಿ ಸದಾ ಇರುತ್ತಿದ್ದ ನಗು, ಮಂದಹಾಸ, ಹೊಳಪುಗಳೇ ಸಾಕ್ಷಿಯಾಗಿದ್ದವು. ಜಾತಿವಾದಗಳನ್ನು ಮುಂದಿಟ್ಟುಕೊಂಡಿದ್ದರೆ ಇವರ ಮುಖಗಳಲ್ಲಿ ಇವನ್ನು ಕಾಣುತ್ತಿದ್ದೆವೋ ಇಲ್ಲವೊ. ಅದೆಲ್ಲವನ್ನೂ ಮೀರಿದ ಮಾನವತಾವಾದ, ಮಾನವೀಯತೆಯ ನೆಲೆಯಲ್ಲಿ ಅವರಿಟ್ಟ ಹೆಜ್ಜೆಗಳು, ಅದಕ್ಕೆ ಸಹಾಯ ಮಾಡಿದ ಎಲ್ಲರೂ ಆ ಕ್ಷಣಕ್ಕೆ ನನಗೆ ಮಹಾತ್ಮರೆನಿಸಿದರು.ಒಲವು ನಲಿವುಗಳ ಭಾಷೆಯನ್ನು ಆಡುವ ಅರ್ಹತೆಯನ್ನು ಹೊಂದಿರುವ ಏಕಮಾತ್ರ ಜಾತಿ ಮಾನವಜಾತಿ. ನಮ್ಮ ನಡುವೆ ಇಂತಹ ಜಾತಿಯನ್ನು ಸದ್ದಿಲ್ಲದೇ ಸಲಹುತ್ತಿರುವ ಅಂಜುಂ, ಚಂದ್ರಶೇಖರ್ ರ ಸಂತತಿ ಸಾವಿರವಾಗಲಿ.

ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಡಿ ವಿ ಪ್ರಹ್ಲಾದರ ಆರ್ತ ಯಾಪನೆ “ದಯಾ ನೀ, ಭವಾ ನೀ” ಡಿ ವಿ ಪ್ರಹ್ಲಾದ ತಮ್ಮ ಹೊಸ ಸಂಕಲನ “ದಯಾ ನೀ, ಭವಾ ನೀ”  ಸಂಕಲನಕ್ಕೆ ನನ್ನನ್ನೆರಡು ಮಾತು ಬರೆಯಲು ಕೇಳಿದಾಗ ನನಗೆ ಆಶ್ಚರ್ಯ. ಏಕೆಂದರೆ ನಮ್ಮಲ್ಲಿ ಬಹುತೇಕರು  ಸ್ವ ಪ್ರತಿಷ್ಠೆ ಮತ್ತು ಒಣ ಸಿದ್ಧಾಂತಗಳನ್ನು ಮೆರೆಸಲು ಈ ನಡುವೆ ಕವಿತೆಯನ್ನೂ ಗುರಾಣಿಯಂತೆ ಬಳಸುತ್ತಿರುವ ಸಂಧಿಗ್ದ ಕಾಲವಿದು. ಈ ಇಂಥ ಕಾಲದಲ್ಲಿ ನಮ್ಮ ಸಂಕಲನಗಳಿಗೆ ಮುನ್ನುಡಿ ಹಿನ್ನುಡಿ ಬೆನ್ನುಡಿಗಳಿಗೆ ನಾವಾಶ್ರಯಿಸುವುದು ಪೀಠಾಧಿಪತಿಗಳ ಬೆನ್ನು ಕೆರೆಯುವ ಸನ್ನಿಧಾನಕ್ಕೆ ಮತ್ತು ಆ ಅಂಥ ಗುರು ಪೀಠ ನಮ್ಮನ್ನು ನಮ್ಮ ಸಂಕಲನವನ್ನು ಎಲ್ಲೆಲ್ಲಿ ಎಷ್ಟೆಷ್ಟು ಸಾಧ್ಯವೋ ಅಲ್ಲಲ್ಲೆಲ್ಲ ತೂರಿಸುವ ಹಿತಾಸಕ್ತಿ ಮತ್ತು ಶಕ್ತಿ ಹೊಂದಿದೆಯೇ ಅಂತ ಪ್ರಕಾಶನದ ಕರಾರಿಗೆ ಸಹಿ ಹಾಕುವ ಮೊದಲು ಖಾತರಿ ಮಾಡಿಕೊಳ್ಳುತ್ತೇವೆ. ಈ ಇಂಥ ಸಂಧಿ (ವಾತದ) ಕಾಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಏನೇನೂ ಅಲ್ಲದ ಆದರೆ ಬದುಕಿನ ಬಂಡಿಗೆ ಕವಿತೆಯೊಂದೇ ಮೆಟ್ಟಿಲು ಅಂತ ನಂಬಿ ಅದನ್ನೇ ಆಶ್ರಯವಾಗಿಟ್ಟುಕೊಂಡಿರುವ ನನ್ನಿಂದ ಅವರು ಮುನ್ನುಡಿ ಬರೆಸಿದ್ದು ಏಕೋ ಕಾಣೆ. ಇನ್ನು ಅವರ ಈ ಹೊಸ ಸಂಕಲನದ ಪದ್ಯಗಳನ್ನು ಕುರಿತು ಹೇಳುವ ಮೊದಲು ಅವರೇ ಕಟ್ಟಿ ಬೆಳೆಸಿದ ಸಂಚಯದ ಮೂಲಕ ಅದೆಷ್ಟು ಹೊಸ ಪ್ರತಿಭೆಗಳಿಗೆ ಅವರು ಹಾರುಮಣೆಯಾದರು ಮತ್ತು ಪ್ರಕಾಶನದ ಗಂಧ ಗಾಳಿಯ ಅರಿವೇ ಇಲ್ಲದ ನನ್ನಂಥ ಎಷ್ಟೊಂದು ಅನಾಮಿಕ ಮಿಂಚುಹುಳುಗಳನ್ನು ಮಿನುಗುವ ನಕ್ಷತ್ರಗಳನ್ನಾಗಿಸಿದರು.  ಹಾಗೆ ಮೆರೆಯ ಹೊರಟ ಅದೆಷ್ಟೋ ಮಿಣುಕುಗಳು ಉಲ್ಕೆಗಳಂತೆ ಉರಿದು ಹೋದದ್ದೂ ಈಗ ಇತಿಹಾಸ. ಇರಲಿ, ಗಾಯದ ಕಲೆ ಕಂಡ ಕೂಡಲೇ ಅನುಭವಿಸಿದ ನೋವಿನ ಯಾತನೆ ನೆನಪಾಗುವುದು ಸಹಜ. ಶ್ರೀನಿವಾಸ ರಾಜು ಮೇಶ್ಟ್ರು ಮತ್ತು ಪ್ರಹ್ಲಾದ್ ಪ್ರತಿ ವರ್ಷ ಕಾವ್ಯ ಸ್ಪರ್ಧೆ ನಡೆಸಿ ಕೈ ತುಂಬ ಪುಸ್ತಕಗಳನ್ನು ಕೊಡುತ್ತಿದ್ದರು. ಯಾವ ಪ್ರವೇಶ ಶುಲ್ಕವೂ ಇಲ್ಲದ ಆ ಸ್ಪರ್ಧೆಗೆ ನಾಮುಂದು ತಾಮುಂದೆಂದು ಬರುತ್ತಿದ್ದ ಅದೆಷ್ಟು ಕವಿತೆಗಳಿಗೆ ಸಂಚಯ ಆಶ್ರಯ ಕೊಟ್ಟು ಸಲಹಿತು. ನೆನೆದಾಗಲೆಲ್ಲ ಅವರ ನಿಸ್ಪೃಹ ಸಾಹಿತ್ಯ ಸೇವೆ ಕಣ್ಣ ಮುಂದೆ ಕಟ್ಟುತ್ತದೆ. ಇನ್ನು ಸಾಹಿತ್ಯ ಪತ್ರಿಕೆಗಳ ನಿಯತ ಪ್ರಸಾರವೇ ಇಲ್ಲದ ಕಾಲದಲ್ಲಿ ಸಂಚಯ ನಡೆದಷ್ಟೂ ಕಾಲವೂ ನಿಯಮಿತವಾಗಿ ನಿಯತ ಕಾಲಿಕವಾಗಿ ಬಂದಿತು. ಸಂಯುಕ್ತ ಸಂಚಿಕೆ ಎಂದು ಅಚ್ಚು ಹಾಕಿ ನಾಮ ಹಾಕುವವರ ನಡುವೆ ಅವರದು ಏಕಾಂಗಿ ಹೋರಾಟವಾಗಿತ್ತು. ವಿಶೇಷ ಸಂಚಿಕೆಗಳ ಮೂಲಕ ಸಂಚಯ ಸಾಹಿತ್ಯ ಚರಿತ್ರೆಯಲ್ಲಿ  ಇತಿಹಾಸದ ಪುಟಗಳನ್ನೇ ಬರೆಯಿತು. ಲಂಕೇಶ್, ತೇಜಸ್ವಿ, ಡಾ. ರಾಜ್, ಹಿಂದ್ ಸ್ವರಾಜ್ ಒಂದೇ ಎರಡೇ? ಈಗಲೂ ನನ್ನ ಪುಸ್ತಕದ ಕಪಾಟಲ್ಲಿ ಸಂಚಯದ ಸಂಚಿಕೆಗಳು ಸುಭದ್ರವಾಗಿ ಕೂತಿವೆ, ರೆಫರೆನ್ಸಿಗೆಂದು ತೆಗೆದಾಗಲೆಲ್ಲ ಮತ್ತೇನೋ ಹೊಸ ದಾರಿ ಕಾಣಿಸುವುದೂ ಉಂಟು. “ಡ್ರೀಮರ್” (1995) ಡಿ ವಿ ಪ್ರಹ್ಲಾದ್ ಅವರ ಮೊದಲ ಸಂಕಲನ. ಆಮೇಲೆ ನನ್ನಂಥವರ ಒತ್ತಾಯಕ್ಕೆ ತಂದದ್ದು “ನಾಳೆಯಿಂದ”.(2005) ೯೦ರ ದಶಕದ ಮೊದಲ ಸಂಕಲನದ ೧೧ ವರ್ಷಗಳ ತರುವಾಯ ಬಂದ ‘ನಾಳೆಯಿಂದ’ ಸಂಕಲನ ‘ಡ್ರೀಮರಿನ ಕನಸುಗಳು ಕರಗಿ ಹೋದ ಕುರುಹುಗಳಾಗದೇ ನಾಳೆಯಿಂದಲಾದರೂ ಮತ್ತೆ ಯತ್ನಿಸಿ ಸಫಲನಾಗುವ ಕನಸಿನ ವಿಸ್ತರಣೆಯೇ ಆಗಿತ್ತು. ನವ್ಯದ ಪ್ರಭಾವಳಿಯಲ್ಲೇ ಅರಳಿದ್ದ “ಡ್ರೀಮರ್” ‘ನಾಳೆಯಿಂದ’ ತರುವಾಗಲೇ ಸಾಕಷ್ಟು ಮಾಗಿದ್ದ. ನವ್ಯದ ಸಹಜ ಪ್ರತಿಮೆಗಳಾದ “ಸ್ವ” ಮತ್ತು ಎಲ್ಲವನ್ನೂ ಕಟೆದು ಕಟ್ಟುವ ಕನಸುಗಳಿದ್ದ ಡ್ರೀಮರ್ ನಾಳೆಯಿಂದ ತರುವಾಗ ವಯಸ್ಸಿನಲ್ಲಿ ನಿರ್ಧಾರದಲ್ಲಿ ಮತ್ತು ಅನುಭವ ಜನ್ಯ ಬದುಕ ಶ್ರೀಮಂತಿಕೆಯಿಂದ ಮಾಗಿದ್ದ. ಹಾಗಾಗಿ ಯಾವತ್ತಿಗೂ ಪೋಸ್ಟ್ ಪೋನ್ ಮಾಡುತ್ತಲೇ ಇರುವ ನಮ್ಮ ಕೆಲಸ ಕಾರ್ಯಗಳ ವೈಖರಿಗೆ ಕವಿ ಕೊಟ್ಟ ದಿಟ್ಟ ಉತ್ತರ ಅದಾಗಿತ್ತು. ಸ್ವತಃ ಸಾಹಿತ್ಯ ಪತ್ರಿಕೆಯೊಂದರ ಸಂಪಾದಕನಾಗಿ, ಸಂಕಿರಣ ಶೀರ್ಷಿಕೆಯ ಮೂಲಕ ಅದೆಷ್ಟು ಹೊಸ ಪ್ರತಿಭೆಗಳ ಪುಸ್ತಕಗಳಿಗೆ ಅವರಿವರಿಗೆ ಹೇಳಿ, ಬೇಡಿ ವಿಮರ್ಶೆ ಬರೆಸಿದರು. ದುರಂತ ಅಂದರೆ ಅವರ ಪುಸ್ತಕಗಳ ಬಗ್ಗೆ ಈ ಯಾವ ಮಹನೀಯರೂ ಸೊಲ್ಲೇ ಎತ್ತಲಿಲ್ಲ. ಸದ್ಯ ಇದೀಗ ಸಂಚಯದ ಪ್ರಕಟಣೆ ನಿಂತ ಮೇಲೆ ಪುನಃ ಪದ್ಯದ ಸಂಗಕ್ಕೆ ಪ್ರಹ್ಲಾದ್ ಹೊರಳಿದ್ದಾರೆ. ಯಾವತ್ತೂ ಬರಹಗಾರನಿಗೆ ಕವಿತೆಯೇ ತಂಗುದಾಣ, ನಿಲುದಾಣ ಮತ್ತು ಹಲವೊಮ್ಮೆ ಅಡಗು ತಾಣ. ಯಾಕೆಂದರೆ ನಮ್ಮೊಳಗಿನ ಕನಸು, ಊಹೆ, ಅನಿಸಿಕೆ, ಸಮಾಜದ ಮೇಲಣ ಟಿಪ್ಪಣಿಗಳಿಗೆ ಕವಿತೆಯ ಪೋಷಾಕು ತೊಡಿಸಿ ನಮ್ಮ ಒಳ ಮನಸ್ಸಿನ ಮಾತನ್ನು ಹೇಳುತ್ತೇವೆ. ಅದು ಮುಟ್ಟ ಬೇಕಾದವರಿಗೆ ಮುಟ್ಟಿತೋ ಇಲ್ಲವೋ ನಮ್ಮ ಶಂಖ ನಾವು ಊದುತ್ತಲೇ ಇರುತ್ತೇವೆ. ಎಲ್ಲೋ ಅಪರೂಪಕ್ಕೆ ಕೆಲವರು ಕ್ಲಿಕ್ಕಾಗಿ ಬಹುಮಾನ, ಪ್ರಶಸ್ತಿ, ಪಾರಿತೋಷಕಗಳ ಪಡೆದು ಇದ್ದಲ್ಲೇ ಸುತ್ತ ತೊಡಗುತ್ತಾರೆ. ಆದರೆ ಸಾಂಸ್ಕೃತಿಕ ಲೋಕದ ಸಕಲೆಂಟು ದೇವರ ಸಂಪರ್ಕವಿದ್ದೂ ಪ್ರಹ್ಲಾದ್ ಸಂಕೋಚದಲ್ಲೇ ಉಳಿದು ಬಿಟ್ಟರು. ಆ ಅವರ ಸಂಕೋಚವೇ ಅವರೆಲ್ಲ ಪದ್ಯಗಳ ಆತ್ಮವಾಗಿ ಮತ್ತು ಅವರು ನಡೆಯುತ್ತಿರುವ ಅವರದೇ ದಾರಿಯ ಪ್ರತಿಫಲನವಾಗಿಯೂ ನನಗೆ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ಈ “ದಯಾ..ನೀ  ಭವಾ..ನೀ” ಸಂಕಲನದ ಪದ್ಯಗಳನ್ನು ಓದುತ್ತ ಓದುತ್ತ ಟಿಪ್ಪಣಿಸುತ್ತ ಹೋದ ಹಾಗೆ ಇಲ್ಲಿನ ಎಲ್ಲ ಪದ್ಯಗಳೂ ಅವರ  ಮೊದಲೆರಡು ಸಂಕಲನಗಳ ಮುಂದುವರೆದ ತಂತುವಾಗಿಯೇ ನನಗೆ ಕಂಡಿದೆ. ಹಾಗೆ ನೋಡಿದರೆ ಎಲ್ಲ ಕವಿಗಳ ಹಣೆಬರಹವೂ ಇಷ್ಟೇ ಆಗಿದೆ. ಆಗಿರಬೇಕು ಕೂಡ. ತಾನು ಬಯಸಿದ ತಾನು ನಂಬಿದ ಸಿದ್ಧಾಂತದ ಪರ ವಕಾಲತ್ತು ಹಾಕುವ ಕವಿಯೊಬ್ಬ  ಎಷ್ಟೆಲ್ಲ ಸಂಕಲನ ತಂದರೂ ತಾನು ನಂಬಿದ ಸಿದ್ಧಾಂತಕ್ಕೆ ನಿಷ್ಠೆ ಇಟ್ಟುಕೊಂಡಿದ್ದು  ಸಂಕಲನದಿಂದ ಸಂಕಲನಕ್ಕೆ ಮತ್ತಷ್ಟು ವ್ಯಾಪಿಸುತ್ತ ಹೋಗುತ್ತಾನೆ. ಎಲ್ಲೊ ಕೆಲವರು ಶೋಕಿಗೆ ಅಥವ ಲೋಕಪ್ರಿಯತೆಯ ಹಂಬಲಕ್ಕೆ ಬಿದ್ದು ತಮ್ಮ ಸೊಂಟ ತಾವೇ ಮುರಿದುಕೊಂಡು ಅಲ್ಲಿಂದಿಲ್ಲಿಗೆ ಕುಪ್ಪಳಿಸುತ್ತ ಎಲ್ಲಿಯೂ ಸಲ್ಲದವರಾಗುತ್ತಾರೆ ಮತ್ತು ಒಟ್ಟೂ ಕಾಣ್ಕೆಯ ಕಾರಣದಿಂದ ಹೊರಗೇ ಉಳಿಯುತ್ತಾರೆ. “ಡ್ರೀಮರ್” ಪುಸ್ತಕದ ಮುನ್ನುಡಿಯಲ್ಲಿ ಎಕ್ಕುಂಡಿ ಅದೆಷ್ಟು ಚೆನ್ನಾಗಿ ಪ್ರಹ್ಲಾದರ  ಪದ್ಯಗಳನ್ನು ಬಗೆಯುತ್ತಲೇ ಅವನ್ನು ಧ್ಯಾನಿಸುವ ಆಪ್ತ ಶೈಲಿಯನ್ನು ಹೇಳಿಕೊಟ್ಟಿದ್ದಾರೆಂದರೆ ಅವರ ಮಾತಿನ ಮುಂದೆ ನಾನೇನು ಹೇಳಿದರೂ ಅದು ಪೇಲವವೇ ಆಗುತ್ತದೆ. ಇರುವ ಕೇವಲ ೧೮ ಕವಿತೆಗಳಲ್ಲೂ ಅದೇನು ನವ್ಯದ ಪ್ರತಿಮೆಗಳನ್ನು ಇಡಿಕರಿಸಿಟ್ಟಿದ್ದರು ಎಂದರೆ ಈ ಕಾಲದ ಹುಡುಗರು ತಮ್ಮ ನೂರು ಪದ್ಯಗಳಲ್ಲೂ ಅಲ್ಲಿನ ರೂಪಕ ಮತ್ತು ಪ್ರತಿಮೆಗಳನ್ನು ಮತ್ತೆ ಸೃಷ್ಟಿಸಲಾರರು. ರಸ್ತೆ ಬದಿಯಂಗಡಿಯಲ್ಲಿ ಬಿಡಿಸಿಟ್ಟ ಹಣ್ಣು ಮುತ್ತಿರುವ ನೊಣದ ಹಿಂಡಲ್ಲೂ ಅಲ್ಲೊಂದು ಜೇನು    (ಪ್ರತೀಕ್ಷೆ) ಅಂತ ಧೇನಿಸಿದ ಕವಿ ಗಂಡು ಬಿಕ್ಕುವ ಹಾಗಿಲ್ಲ ಹೆಣ್ಣು ನಕ್ಕ ನೆನಪಿಲ್ಲ ಬೆಳುಕು ಬೀರಿದ್ದ ಪ್ರಖರ ಬಲ್ಬುಗಳು ಬರ್ನಾಗಿ ಬಿತ್ತು ಕನಸು, ನೇಯುವ ಗಿರಣಿ ಬೆಂಕಿ ನುಂಗಿತ್ತು(ಬೃಹನ್ನಳೆಯ ಸ್ವಗತ) ಅಂತ ಹೇಳುವಾಗ ಬದುಕಿನ ಎರಡೂ ತುದಿಗಳನ್ನು ಅದೆಷ್ಟು ಸಲೀಸಾಗಿ ದಾಟಿಬಿಡುತ್ತಾರಲ್ಲ ಅದೇ ನನ್ನ ಪಾಲಿನ ಸೋಜಿಗ. ಡ್ರೀಮರಿನ ಎಲ್ಲ ಪದ್ಯಗಳೂ ಗೊತ್ತಿದ್ದೋ ಗೊತ್ತಿಲ್ಲದೆಯೋ ನವ್ಯದ ಭರ್ಜರಿ ಪೋಷಾಕು ತೊಟ್ಟಿವೆ. ಆ ಪೋಷಾಕಿಗೆ ಮುಖ್ಯವಾಗಿ ಅಡಿಗ ಕ್ವಚಿತ್ತಾಗಿ ರಾಮಾನುಜನ್ ಮತ್ತು ಅಪರೂಪಕ್ಕೆ ಎಕ್ಕುಂಡಿ ಬಟ್ಟೆ ಕೊಟ್ಟಿದ್ದಾರೆ. ಗೋತಾ ಹೊಡೆದ ಗಾಳಿಪಟ ಕರೆಂಟು ಕಂಬಿಯ ಮೇಲೆ ತಲೆ ಕೆಳಗು ಮಲಗಿತ್ತು    (ಗಾಳಿಪಟ) ಅನ್ನುವಾಗ ಯಾವ ಯಾವುವೋ ಕಾರಣಕ್ಕೆ ಉತ್ಸಾಹ ಕಳಕೊಂಡ ನಮ್ಮೆಲ್ಲರ ಬದುಕಾಗಿ ಆ ಗಾಳಿಪಟ ಕಾಡುತ್ತದೆ. ಇನ್ನು ಸಂಕಲನದ ಶೀರ್ಷಿಕೆಯೂ ಆಗಿರುವ “ಡ್ರೀಮರ್” ಓದಿದ ಮೇಲೆ ಅಂತರ್ಜಾಲದಲ್ಲಿ ಅದಕ್ಕೆ ಪ್ರೇರಣೆಯಾದ ಜಪಾನೀ ಕತೆಯನ್ನು ಹುಡುಕಿ ಓದಿದೆ. ತಲ್ಲಣಿಸಿದೆ. ಏಕೆಂದರೆ ಎಲ್ಲವನ್ನೂ ಮರೆತು ಭ್ರಮೆಯಲ್ಲಿ ಕೊಂಚಕಾಲ ಮಾತ್ರವೇ ಇರಬಲ್ಲೆವು. ಆಮೇಲೆ ಕಾಡುವುದು ಮತ್ತದೇ ನಮ್ಮ ಸುತ್ತಣದ ನಮ್ಮ ಜೊತೆಗಾರರ ಬದುಕೇ! ವಾಸ್ತವದ ಗಹಗಹಿಕೆಯ ಮುಂದೆ ಕ್ಷಣ ಸುಖದ್ದು ಬರಿಯ ಅಮಲು. ಕಡೆಗೂ ನಾವು ಬಯಸುವುದೇನು?, “ಸಾಬರ ಹುಡುಗ ಮತ್ತು ಹಳೇ ಮರ” ಕವಿತೆಯ ಸಾಲು; ಕೊಡು ಕೊಡು ನನಗೊಂದೇ ಒಂದು ಹೂ ಕೊಡು! ಅಂಗಿಗಿಟ್ಟು ಗುನುಗುವೆ ನನ್ನ ಹಾಡು! ಆದರೆ ಸದ್ಯದ ವರ್ತಮಾನ ಹೂವನ್ನಿರಲಿ ಒಣ ಎಲೆಯನ್ನೂ ಕೊಡದಷ್ಟು ಕಠಿಣವಾಗಿದೆ, ಕ್ರೂರವೂ ಆಗಿದೆ. ಇನ್ನು ಪ್ರಹ್ಲಾದರ ಎರಡನೆಯ ಸಂಕಲನ “ನಾಳೆಯಿಂದ” ದ ಕೆಲವು ಪದ್ಯಗಳ ಸಾಲು ಸ್ಮರಿಸಿ ಮುಂದಕ್ಕೆ ತೆರಳುತ್ತೇನೆ. ಈ ಸಂಕಲನದಲ್ಲಿ ಒಟ್ಟಾಗಿ ಇರುವುದು ಕೇವಲ ೨೫ ಕವಿತೆಗಳು. ತಾನು ಹೇಳ ಹೊರಟದ್ದನ್ನು ಎಲ್ಲಿ ಓದುಗ ದೊರೆ ಗಮನಿಸುವುದಿಲ್ಲವೋ ಎನ್ನುವ ಕಾರಣ ಕೊಟ್ಟು ನೂರು ಪದ್ಯಗಳನ್ನು ಅಡಿಕಿರಿಸಿ ಯಾವುದನ್ನೂ ಓದದಂತೆ ಮಾಡಿಕೊಂಡ ಹಲವು ಕವಿಗಳು ನಮಗೆ ಗೊತ್ತಿದ್ದಾರೆ. ನಾನೀಗಾಗಲೇ ಹೇಳಿದಂತೆ ಸಂಕಲನದಿಂದ ಸಂಕಲನಕ್ಕೆ ಕವಿಯ ಪಯಣದ ಹಾದಿ ಮುಂದುವರೆಯುವುದೇ ವಿನಾ ಅವನು ನಂಬಿದ ದಾರಿಯಲ್ಲ. ಹಾಗಾಗಿ ಕವಿ ಸೃಷ್ಟಿಸಿಕೊಂಡ ದಾರಿ ಇದುವರೆಗೂ ಯಾರೂ ಸವೆಸದ ಮತ್ತು ಆ ಕವಿಯೇ ಕಂಡು-ಕೊಂಡ ಕಚ್ಚಾ ರಸ್ತೆ ಆಗಿರಬೇಕು ಎನ್ನುವುದು ಲಾಕ್ಷಣಿಕರ ಅಭಿಮತ. ಇಲ್ಲಿರುವ ೨೫ ಕವಿತೆಗಳೂ ಡ್ರೀಮರಿನ ಮುಂದುವರೆದ ಕನಸುಗಳೇ. ಎಲ್ಲೋ ನವ್ಯದ ಬಿಸುಪು ಕಡಿಮೆಯಾದಂತೆ ಕಂಡು ಆಡುನುಡಿ ಕಂಡಿದೆ ಅಂದ ಮಾತ್ರಕ್ಕೇ ಇವು ಯಾವುವೂ ನವ್ಯದ ಮೂಸೆಯಲ್ಲಲ್ಲದೆ ಬೇರೆಲ್ಲಿಂದಲೂ ಉದಯಿಸಿಲ್ಲ. ಎಚೆಸ್ವಿ ಮುನ್ನುಡಿ ಇರುವ ಈ ಸಂಕಲನದ ಶೀರ್ಷಿಕೆಯೇ ಬಹುಮುಖ್ಯ ಪದ್ಯ “ನಾಳೆಯಿಂದ”. ನಮ್ಮ ಸೋಲನ್ನು ಒಪ್ಪಿಕೊಳ್ಳದ ಮತ್ತು ಅನಿಸಿದ್ದನ್ನು ಮಾಡಲಾಗದ ನಾವು ಸುಳ್ಳು ಸುಳ್ಳೇ ಮತ್ತೆ ಮತ್ತೆ ಹೇಳಿಕೊಳ್ಳುವ ಮಾತೆಂದರೆ ” ನಾಳೆಯಿಂದ”, ಇಂಗ್ಲಿಶಿನಲ್ಲಿ procrastination ಎಂಬ ಪದಕ್ಕೆ ತೀರ ಸಮೀಪದ್ದು. ಒಂದಲ್ಲ ಒಂದು ಕಾರಣ ಕೊಟ್ಟು ಮಾಡಬೇಕಾದ ಕೆಲಸವನ್ನು ( ಕಳ್ಳಂಗೊಂದು ಪಿಳ್ಳೆ ನೆವ) ಮುಂದಕ್ಕೆ ಹಾಕುವುದಕ್ಕೆ ನಾಳೆಯಿಂದ ಅಂತ ಜಾರಿಕೊಳ್ಳುತ್ತೇವಲ್ಲ ಅದೇ ಆಗಿದೆ. ಪ್ರಾಯಶಃ ಮತ್ತೆ ಪದ್ಯ ಬರೆಯಲು ತೊಡಗುತ್ತೇನೆಂದು ಪ್ರಹ್ಲಾದ್ ಅವತ್ತೇ ನಿರ್ಧರಿಸಿದ್ದಿರೋ ಹೇಗೆ?? ಜಗದ ಮೋಡದ ಮಾಡಿಗೆ ಯಾರು ಹೆಸರಿಟ್ಟವರು ಏರಿದಷ್ಟೂ ಎವರೆಷ್ಟು ಉಳಿಯುತ್ತದೆ ರವಷ್ಟು ( ಮೆಟ್ಟಲಾರದ ಮುಗಿಲು) ಅಂತ ಆರಂಭವಾಗುವ ಪದ್ಯ ಆ ಹಿಮದ ಆಲಯದ ಏರುವೆತ್ತರ ಬಿಟ್ಟು ಮುದುರಿ ನಿಂತ ಕುದುರೆಗೆ ಕೆನೆತವಿಲ್ಲ ಆವತ್ತಿನ ಮೊರೆತವಿಲ್ಲ ಅಂತ ಮುಂದುವರೆದು ಕಡೆಗೆ ನಿಲ್ಲುವುದು ಹೀಗೆ; ಮೆಟ್ಟಿ ಬಾವುಟ ನೆಟ್ಟ ಪ್ರತಿ ಎತ್ತರದ ತುದಿಗೂ ಒಂದೊಂದು ಬಟಾಬಯಲು ಮೆಟ್ಟಲಾರದ ಮುಗಿಲು. ನಮ್ಮೆಲ್ಲರೊಳಗಿನ ದೌರ್ಬಲ್ಯವನ್ನು ಹೀಗೆ ಅನಾಮತ್ತು ಎತ್ತಿ ಆಡುವ ಕವಿ ಹಾಗೇ ತಲೆಗೆ ಮೊಟಕುತ್ತಾನಲ್ಲ,  ಈ ಇಂಥ ಕವಿಯನ್ನು ನವ್ಯದ ಶಾಲೆಯ ತಂಟೆಕೋರ ವಿದ್ಯಾರ್ಥಿ ಅನ್ನದೇ ವಿಧಿಯಿಲ್ಲವಲ್ಲ! ಹತ್ತಿ ಹತ್ತಿ ಎತ್ತರಕ್ಕೆ ಇನ್ನೂ ಎತ್ತರಕ್ಕೆ ಕಾಣಲಾರದು ಯಾವ ಜಗದ ನೋವು ( ಭೀಮಣ್ಣನ ರಾಮಕಲಿ) ಭೀಮಸೇನ ಜೋಷಿಯವರ ‘ರಾಮ್ ಕಲಿ’ ರಾಗ ಕೇಳಿ ಅಂತ ಪದ್ಯದ ತಳದಲ್ಲಿ ಟಿಪ್ಪಣಿ ಇದೆ. ನಿಜವಾದ ರಾಮನನ್ನು (ರಾಮ ಅಂದರೆ ಆನಂದ) ಅನುಸರಿಸಿದರೆ ಹತ್ತಿಯಂತೆ ಹಗುರಾಗಿ ಎಂಥ ಎತ್ತರಕ್ಕೂ ಹತ್ತಿ ನಿಂತು ಜಗದೆಲ್ಲ ನೋವ ಪರಿಹಾರ ಅಂತ ಅರ್ಥೈಸಿಕೊಂಡರೆ ಜೀವ ನಿರುಮ್ಮಳವಾಗುತ್ತದೆ. ಇನ್ನು ‘ಒಂದು ವಿರಳ ಭೇಟಿ’ ಅನ್ನುವ ಸರಳ ಪದ್ಯ ಓದುವಾಗ ಯಾಕೋ ಪ್ರತಿಭಾ ನಂದಕುಮಾರರ “ನಾವು ಹುಡುಗಿಯರೇ ಹೀಗೆ” ನೆನಪಾಯಿತು. ಆ ಪದ್ಯದಲ್ಲಿ ಕವಿ ಗೆಳತಿಯ ಜೊತೆ ಏನೇನನ್ನೋ ಮಾತಾಡುತ್ತ ಮತ್ತೆ ಹಳೆಯ ಸ್ನೇಹವ ನೆನೆದು ಕಡೆಗೆ ಅವನ ಅವಳಲ್ಲೂ ತನ್ನ ಬಿಂಬವನ್ನೇ ಕಾಣುತ್ತಾಳೆ. ಆದರೆ ಈ ಪದ್ಯದ ಸರಾಗ ಓಟ ಆ ಪದ್ಯದ ಹಾಗೇ ಲಯವರಿತ ಹದದಲ್ಲಿ ಓಡುತ್ತೋಡುತ್ತಲೇ ಆಪತ್ತಿಗೆ ಆಗದ ಗೆಳೆಯನನ್ನು ಸ್ಮರಿಸುತ್ತದೆ. ಗೇಲಿ

Read Post »

ಇತರೆ

ನಾ ಮೆಚ್ಚಿದ ನಾಟಕ

ಲೇಖನ ನಾ ಮೆಚ್ಚಿದ ನಾಟಕ ಮಾಲಾ ಮ ಅಕ್ಕಿಶೆಟ್ಟಿ.   ಸುಮಾರು ಒಂದುವರೆ ವರ್ಷದ ಹಿಂದೆ  ಬೆಳಗಾವಿಯಲ್ಲಿ ಕುವೆಂಪು ವಿರಚಿತ “ಶ್ರೀರಾಮಾಯಣ ದರ್ಶನಂ” ನ ನಾಟಕ ರೂಪ, ದೇಹ ಮತ್ತು ಮನಸ್ಸಿಗೆ ಆನಂದ ನೀಡಿತ್ತು. ಅದ್ಭುತವಾದ ನಾಟಕ ಪ್ರದರ್ಶನವನ್ನು ನೋಡಿದ ಕೃತಜ್ಞತಾಭಾವ ಆ ವರ್ಷಕ್ಕೆ ಸಲ್ಲುತ್ತದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಈ ಕೃತಿ ನಿರ್ಮಾಣಕ್ಕೆ ಸುಮಾರು ಒಂಬತ್ತು ವರ್ಷ ತಗುಲಿದೆ. ಅಂದರೆ ಕುವೆಂಪು ಇದನ್ನು ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಪ್ರಾರಂಭಿಸಿ ನಲ್ವತ್ತೋಂದರಲ್ಲಿ ಮುಗಿಸಿದರು. ಈ ಕೃತಿಗೆ ಐವತ್ತು ವರ್ಷಗಳು ತುಂಬಿದ ಸವಿನೆನಪಿಗಾಗಿ ನಾಟಕರೂಪದಲ್ಲಿ ಪ್ರದರ್ಶನ ಮಾಡಲಾಗಿತ್ತು.        ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಈ ನಾಟಕವನ್ನು ಪ್ರದರ್ಶಿಸಲಾಗಿತ್ತು. ಮೂಲ ಕೃತಿ ನಡುಗನ್ನಡದಲ್ಲಿ ಇದ್ದು 5 ಸಂಚಿಕೆಗಳು, 22291 ಸಾಲುಗಳು ಹಾಗೂ 877 ಪುಟಗಳನ್ನು ಹೊಂದಿದೆ. ಇಂಥ ಬೃಹತ್ ಕೃತಿಯನ್ನು ಅದೂ ಮೂಲ ನಡುಗನ್ನಡದಲ್ಲಿ ನಾಟಕ ರೂಪಕ್ಕೆ ಇಳಿಸಿರುವುದು ಹೆಮ್ಮೆಯ ವಿಚಾರ. ನಾಟಕ 5 ಗಂಟೆಗೆ ಸೀಮಿತಗೊಂಡು 50 ಕಲಾವಿದರನ್ನು ಪರಿಚಯಿಸುತ್ತದೆ. ಈ ಮೊದಲು ಕುವೆಂಪುರವರ “ಮಲೆಗಳಲ್ಲಿ ಮದುಮಗಳು” 9 ಗಂಟೆಗಳವರೆಗೆ ನಾಟಕ ರೂಪದಲ್ಲಿ ಪ್ರದರ್ಶಿಸಲಾಗಿತ್ತು.ಆದರೆ ರಾಜ್ಯಾದ್ಯಂತ ಆಗಿರಲಿಲ್ಲ. ಆದರೆ ಇದು ರಾಜ್ಯಾದ್ಯಂತ ಪ್ರದರ್ಶನಗೊಂಡಿತು. ವೈಚಾರಿಕತೆಯ ತಳಹದಿಯನ್ನು ಇಲ್ಲಿ ಕಾಣಬಹುದು.           ನಾಟಕದ ಪ್ರಯೋಗ ಮೂಲ ನಡುಗನ್ನಡದಲ್ಲಾಗುತ್ತೋ ಅಥವಾ ಹೊಸಗನ್ನಡಕ್ಕೆ ರೂಪಾಂತರವಾಗಿರುತ್ತೊ ಎಂಬ ಗೊಂದಲದಲ್ಲಿದ್ದೆವು. ಆದರೆ ಪ್ರದರ್ಶನದ ಮೊದಲ ದೃಶ್ಯದಲ್ಲಿ ಅದು ಮನವರಿಕೆಯಾಯಿತು. ಅದನ್ನು ಮೂಲ ನಡುಗನ್ನಡದಲ್ಲೇ ಇಡಲಾಗಿತ್ತು. ಆದರೆ ಒಂದಂತೂ ನಿಜ ನಾಟಕದ ದೃಶ್ಯ, ನಟನೆ ಹಾಗೂ ಪ್ರದರ್ಶನದ ಶೈಲಿ ಮೂಲ ಕೃತಿಯನ್ನು ಓದದವರಿಗೂ ತಿಳಿಯುವಂತೆ ಪ್ರಸ್ತುತಪಡಿಸಿದರು. ಬಾಲವಿಲ್ಲದ ಹನುಮಾನ, ಬಾಣ ಬಿತ್ತಳೆಗಳಿಲ್ಲದ ರಾಮ ಹಾಗೂ ಇತರರು ಹಾಗೂ ಯುದ್ಧ ಸನ್ನಿವೇಶಗಳು ಅಮೋಘವಾಗಿ ಮೂಡಿಬಂದವು. ಕುಂಭಕರ್ಣನ ಪಾತ್ರವು ಪಾತ್ರಧಾರಿಯಿಲ್ಲದೆ ಯಶಸ್ವಿಯಾಗಿ ಪ್ರೇಕ್ಷಕರಿಗೆ ತಿಳಿಯುವಂತೆ, ಕೇವಲ ಎರಡು ದೊಡ್ಡ ಪಾದಗಳ ಮೂಖಾಂತರ ಮತ್ತು ಸಂಭಾಷಣೆ, ಬೆಳಕಿನ ಟೆಕ್ನಿಕ್ ನ ಸಹಾಯದಿಂದ ಪ್ರಸ್ತುತಪಡಿಸಲಾಗಿತ್ತು.              ಮರಾಠಿ ಭಾಷೆಯ ಪ್ರಭಾವ ಜಾಸ್ತಿನೇ ಇದೆ ಎನ್ನುವ ಬೆಳಗಾವಿಯಲ್ಲಿ ಜೀರಿಗೆ ಹಾಲ್ ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಕನ್ನಡದ ಉತ್ಕೃಷ್ಟ ಕೃತಿಯ ನಾಟಕದ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು. ಸುಮಾರು 5 ಗಂಟೆಗಳಲ್ಲಿ ಸಂಪೂರ್ಣ ಕೃತಿಯನ್ನು ಹಿಡಿದಿಡಲು ಪ್ರಯತ್ನಿಸಲಾಗಿತ್ತು. ಅದೂ ಅಲ್ಲದೆ ಪೂರ್ತಿ 5 ಗಂಟೆಗಳು ಹೇಗೆ ಕಳೆದವು ಎಂದು ಗೊತ್ತಾಗದಷ್ಟು ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಹಿಂದಿನ ಕಾಲದ ಶ್ರೀಲಂಕಾ ಮತ್ತು ಅಯೋಧ್ಯೆಯ ವಸ್ತ್ರಾಲಂಕಾರವನ್ನು ಮರುಸೃಷ್ಟಿಸಲಾಗಿತ್ತು. ವಸ್ತ್ರಾಲಂಕಾರ ವಿಭಿನ್ನವಾಗಿ ಮನಸೂರೆಗೊಂಡು ಜೊತೆಗೆ ಸಂಗೀತದ ರಸಾನುಭವ ತುಂಬಾನೇ ನೂತನವಾದ ಪ್ರಯೋಗವೆನಿಸಿತು.ರಾಮಾಯಣದಲ್ಲಿ ಬರುವ ಆಯಾ ಪ್ರದೇಶಗಳಿಗೆ ಹೋಲುವಂಥ ವಿಶಿಷ್ಟವಾದ ಸಂಗೀತವನ್ನು ಪ್ರಯೋಗಿಸಿದರು. ಅಯೋಧ್ಯೆಯನ್ನು ಯಕ್ಷಗಾನ, ನಗಾರಿ, ಚಂಡೆ ಮಾದರಿಯಲ್ಲಿ, ಲಂಕಾವನ್ನು ನಾಗಾಲ್ಯಾಂಡ್ ಹಾಗೂ ಚಾವು ಮಾದರಿಯಲ್ಲಿ,ಕಿಷ್ಕಿಂದವನ್ನು ಮಿಳಾವ್ ಮತ್ತು ತಮಟೆ ವಾದ್ಯಗಳೊಂದಿಗೆ ವಿಭಿನ್ನವಾಗಿ ಪ್ರಯೋಗಿಸಿದರು.       ನಾಟಕದ ಸಂಭಾಷಣೆ ಎಲ್ಲಿಯೂ ಬೋರ್ ಅನಿಸಲಿಲ್ಲ ಜೊತೆಗೆ ಮಧ್ಯಮಧ್ಯದಲ್ಲಿ ಬರುವ ಸಂಗೀತ ಪ್ರೇಕ್ಷಕರನ್ನು ಮನರಂಜಿಸಿತು. ಅದರಲ್ಲಂತೂ ನಾಗಾಲ್ಯಾಂಡ್ನ ಮಾದರಿಯ ಸಂಗೀತ ಮನಸೂರೆಗೊಂಡಿತು. ಪ್ರತಿ ಹಂತವನ್ನು ಬೆಳಗಾವಿ ಪ್ರೇಕ್ಷಕರು ಆನಂದಿಸಿದರು. ನಾಟಕದ ಕೊನೆಯವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದು ಇಂಥ ನಾಟಕಗಳ ಪ್ರದರ್ಶನ ಹೆಚ್ಚೆಚ್ಚು ನಡೆಯಬೇಕೆಂಬುದನ್ನು ಪರೋಕ್ಷವಾಗಿ ಒತ್ತಾಯಿಸದಂತೆ ಕಂಡು ಬಂತು.              ಸಿನಿಮಾರಂಗವಂತೂ ಅತ್ಯಂತ ಜನಪ್ರಿಯ. ಸಮಾಜಮುಖಿ ವಿಚಾರಗಳನ್ನು ಸಿನಿಮಾದ ಮುಖಾಂತರ ಹೇಳುವುದು ತುಂಬಾನೇ ಸುಲಭ. ಎಲ್ಲ ವರ್ಗದವರು ಹಾಗೂ ಶಿಕ್ಷಣದ ವ್ಯತ್ಯಾಸಗಳಿದ್ದರೂ ಸಿನಿಮಾ ಎಲ್ಲರನ್ನು ರಂಜಿಸಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಇದಕ್ಕೆ ಹೋಲಿಸಿದರೆ ನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯೇ. ಜೊತೆಗೇ ಓದುವ ಹವ್ಯಾಸವೂ ಜನರಲ್ಲಿ ಕಡಿಮೆ.          ಸಿನಿಮಾದಲ್ಲಿ ನಟಿಸುವ ನಟರ ನಟನೆ ತುಂಬಾನೇ ಸ್ವಾಭಾವಿಕ ಅಥವಾ ನೈಸರ್ಗಿಕ ಎಂದೆನಿಸುತ್ತದೆ. ಆದರೆ ಜನ ನಾಟಕವನ್ನು ನಾಟಕವಾಗಿಯೇ ಸ್ವೀಕರಿಸುತ್ತಾರೆ.ಬಹುಶಃ ಅದು ಸಿನಿಮಾದಂಥ ಸ್ವಾಭಾವಿಕತೆಯನ್ನು ತಂದು ಕೊಡಲ್ಲ. ಹಾಗೆಯೇ ಯೋಚಿಸಿದಾಗ ನಟರ ಅಭಿನಯ ಅಷ್ಟೊಂದು ಪ್ರತಿಭಾನ್ವಿತವಾಗಿರಬಹುದು ಜೊತೆಗೆ ಸಿನಿಮಾದ ಆಧುನಿಕ ತಂತ್ರಜ್ಞಾನ ಇದಕ್ಕೆ ಸಾಥ್ ನೀಡುತ್ತದೆ. ಪಾತ್ರಧಾರಿಗಳ ನಟನೆ ಪ್ರಶಂಸಾ ಅರ್ಹತೆಯನ್ನು ಪಡೆದಾಗೂ ಅದು ಕೇವಲ ನಾಟಕವೆಂದೇ ಪರಿಗಣಿಸಲಾಗುತ್ತದೆ. ಆದರೆ ಒಂದೊಂದು ನಿಜ ಸಿನಿಮಾದಲ್ಲಿರುವ ಹಾಗೆ ಬಹಳ ಟೆಕ್ಸ್ ಗಳಿಗೆ ನಾಟಕದಲ್ಲಿ ಅವಕಾಶವೇ ಇಲ್ಲ. ಎಲ್ಲವೂ ಒಂದೇ ಟೇಕ್ನಲ್ಲಿ ಅತ್ಯದ್ಭುತವಾಗಿ ಮೂಡಿಬರಲು ಪಾತ್ರಧಾರಿಗಳು ಶ್ರಮಪಡಬೇಕು. ವಿಪರ್ಯಾಸವೆಂದರೆ ಈ ಶ್ರಮ ಬಹಳಷ್ಟು ಸಿನಿಮಾ ಪ್ರಿಯರಿಗೆ ಕಂಡು ಬರುವುದೇ ಇಲ್ಲ. “ಶ್ರೀರಾಮಾಯಣ ದರ್ಶನಂ” ನಾಟಕದಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು ನಡುಗನ್ನಡ. ಹೈಸ್ಕೂಲ್ ಹಂತದಲ್ಲಿ ಯಾವುದಾದರೂ ಪದ್ಯ ಹಳಗನ್ನಡ ಅಥವಾ ನಡುಗನ್ನಡದಲ್ಲಿದ್ದಾಗ ಬಾಯಿಪಾಠ ಮಾಡುವುದು, ಕಡ್ಡಾಯವಾದಾಗ ಪಟ್ಟ ಕಷ್ಟಗಳು ಮಾಡಿದವರಿಗೇನೇ ಗೊತ್ತು. ಅಂಥದ್ರಲ್ಲಿ ಸಂಪೂರ್ಣ ಐದು ಗಂಟೆಗಳ ಕಾಲ ನಡೆಯುವ ಎಲ್ಲಾ ಸಂಭಾಷಣೆಯೂ ಅಪ್ಪಟ ನಡುಗನ್ನಡದಲ್ಲಿ ಪ್ರಸ್ತುತಪಡಿಸಲಾಗಿದೆ. ಇಷ್ಟೊಂದನ್ನು ನೆನಪಿಟ್ಟುಕೊಂಡು ದೃಶ್ಯಕ್ಕೆ ತಕ್ಕಂತೆ ಪ್ರದರ್ಶಿಸುವುದು ಶ್ಲಾಘನೀಯ. ಕನ್ನಡದ ಮತ್ತಷ್ಟು ಕೃತಿಗಳು ಹೀಗೆಯೇ ನಾಟಕದ ರೂಪ ಪಡೆದರೆ ಅನುಕೂಲ ಜಾಸ್ತಿ.ಜೊತೆಗೆ ಅತ್ಯುತ್ತಮ ಕೃತಿಗಳನ್ನು ಓದದವರು ಇದರ ಮುಖೇನ ಕೃತಿಗಳನ್ನು ಅರ್ಥಮಾಡಿಕೊಳ್ಳಬಹುದು ಹಾಗು ಪರೋಕ್ಷವಾದ ಓದನ್ನು ಆಸ್ವಾದಿಸಬಹುದು. ಇದಕ್ಕೆ “ಶ್ರೀರಾಮಾಯಣ ದರ್ಶನಂ” ಒಂದು ಉತ್ತಮ ಉದಾಹರಣೆಯಾಗಿದೆ.ನಾಟಕ ಬಹಳಷ್ಟು ಪ್ರದರ್ಶನಗಳನ್ನು ರಾಜ್ಯಾದ್ಯಂತ ಕಂಡಿತು. ನಾಟಕವನ್ನು ನೋಡಿ ಆನಂದಿಸಿದ ನನಗೆ ಇಂಥ ಹೆಚ್ಚೆಚ್ಚು ಪ್ರಯೋಗಗಳು ಕನ್ನಡದಲ್ಲಿ ಆಗಬೇಕೆಂದೆನಿಸಿತು.  ***************************************************

ನಾ ಮೆಚ್ಚಿದ ನಾಟಕ Read Post »

ಇತರೆ

ಕೊಂಕಣಿ ಕವಿ ಪರಿಚಯ

ಲೇಖನ ಕೊಂಕಣಿ ಕವಿ ಪರಿಚಯ  ಮೆಲ್ವಿನ್ ಕಾವ್ಯನಾಮ : ಮೆಲ್ವಿನ್ ರಾಡ್ರಿಗಸ್. ಬಿಬಿಮ್ ಓದಿನ ನಂತರ ಸೋಷಿಯೋಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೆಲ್ವಿನ್ ಅವರು ಕರಾವಳಿಯ ಪ್ರಸಿದ್ಧ “ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿದ್ದಾರೆ. ಸಾಹಿತ್ಯ ಸೇವೆಯಲ್ಲಿ ಇವರಿಗೆ ದೊರೆತ ಪ್ರಶಸ್ತಿಗಳು ಅಪಾರ. ಕೊಂಕಣಿ ಭಾಷಾ ಮಂಡಲ್ ಗೋವಾ (1989) ಕೊಂಕಣಿ ಕುಟುಂಮ್, ಬೆಹರೈನ್ (2006) ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ (2006). ಡಾಕ್ಟರ್ ಟಿ.ಎಮ್.ಎ ಪೈ ಫೌಂಡೇಶನ್ ಉತ್ತಮ‌ಕೊಂಕಣಿ ಪುಸ್ತಕ ಪ್ರಶಸ್ತಿ.(2009) ಸಾಹಿತ್ಯ ಅಕಾಡೆಮಿ ಪ್ರಶಸ್ತಿ(2011) ವಿಮಲಾ ಪೈ ವಿಶ್ವಕೊಂಕಣಿ ಕವಿತಾ ಪ್ರಶಸ್ತು (2016). ಇವರ ಕೆಲವು ಕೃತಿಗಳು. ಮೊಗಾಪೆಳೊ – 1988; ಫಿಂತಾಂ – 2000 ವಾಟ್ – 2003 ಪ್ರಕೃತಿಚೊ ಪಾಸ್ – 2008 & 2019 ವಿಂಚ್ಣಾರ್ ಕವಿತಾ – 2012 ದೇವಿ ನಿನ್ಕಾಸಿ – 2015; ಉಗ್ತೇಂ ದಾರ್ – 2018 ( ಕೆ, ಎಸ್ ನರಸಿಂಹಸ್ವಾಮಿಯವರ “ತೆರೆದ ಬಾಗಿಲು” ಕವಿತೆಯ ಕೊಂಕಣಿ ಅನುವಾದ. ನಿಮಗಾಗಿ ಅವರ ಎರಡು ಕವಿತೆಗಳು ಕನ್ನಡ ಅನುವಾದದೊಂದಿಗೆ. ಪಾಂಚ್ ಬಾಯ್ಲಾಂಚೊ ದಾದ್ಲೊ ಹಾಂವ್ ಸದಾಂಯ್ ಚಿಂತಾಲೊಂ – ಹೊ ದಾದ್ಲೊ ಕಸೊ ಆಪ್ಲ್ಯಾ ಪಾಂಚ್ ಬಾಯ್ಲಾಂಕ್ ಆಟಾಪುನ್ ಆಸಾ ಎಕಾಚ್ ಘರಾಂತ್! ಹಾಂವೆಂ ತಾಚ್ಯಾ ಘರಾಕ್ ಕಾನ್ ದಿಲೆ. ಗೊಮ್ಟಿ ಚಿರ್ಡಿತಾನಾ ಭಾಯ್ರ್ ಯೇಂವ್ಕ್ ಉಸ್ಮಡ್ಚ್ಯಾ ಉಸ್ವಾಸಾಚ್ಯಾ ಆಕ್ಲಾಸಾಚ್ಯೊ ಬೋಬೊ! ಇನ್‌ಕ್ವಿಜಿಸಾಂವಾಚ್ಯಾ ಕಾಳಾರಯ್ ಅಶ್ಯೋಚ್ ಆಸ್ತಾಲ್ಯೊ ಕೊಣ್ಣಾ! ಜಶೆಂ- ಮಧ್ಯಾನ್ ರಾತಿಚ್ಯಾ ಮೊನೆಪಣಾಂತ್ ತಡಿಕ್ ಮಾರ್‍ಚ್ಯಾ ಲ್ಹಾರಾಂಚಿ ಗಾಜ್- ತಸಲಿ ಉಚಾಂಬಳಾಯ್! ಕಾಂಯ್ ನಿದುನ್ ಆಸಲ್ಲೆ ಬಾಯ್ಲೆಚ್ಯಾ ಘಾಗ್ರ್ಯಾಕ್ ಉಜೊ ದಿಲ್ಯಾರ್ ಜಾವ್ಯೆತಾ ತಸಲಿ! ಬೋವ್‌ಶ್ಯಾ ಕೆಸ್ಟ್ಯಾಂಕ್ ಧರ್ನ್ ವಣ್ಟಿಕ್ ಆಪ್ಟಿತಾನಾ ಜಾಂವ್ಚೆ ಕಾಂಪ್ಣೆಕ್ ಥರ್ಥರ್‍ಚ್ಯಾ ಪಾಕಾಸಾಂ ವಯ್ಲ್ಯಾ ನಳ್ಯಾಂಚೆ ಕಾಂಪೆರೆ…. ಹಾಂವೆಂ ಮ್ಹಜೆಂ ದಾರ್ ಉಗ್ತೆಂ ಕೆಲೆಂ! ಪಯ್ಲೆಚ್ಯಾ ಹಾತಾಂತ್ ಮುಸಾಳ್ ದುಸ್ರೆಚ್ಯಾ ಹಾತಾಂತ್ ಬಯ್ತಾಡ್ ಎಕ್ಲಿ ಘುಂವ್ಡಾವ್ನ್ ಆಸಾ ಪೆಂಕ್ಟಾದಾಬ್ ಆನ್ಯೇಕ್ಲಿ ಮೆಳಲ್ಲ್ಯಾಂಚಿಂ ಮಾಸಾಂ ಚಾಬ್ ಉರಲ್ಲಿ ಶಿಂಪ್ಡಾವ್ನ್ ಆಸಾ ಮಿರ್‍ಸಾಂಗೆ ಪಿಟಿ ಆಂಗ್ಣಾಂತ್ ಮ್ಹಾಭಾರತ್ ಲಾಯ್-ಲುಟಿ, ಖೊಂಟೊ ಮುಟಿ. ಕಾಲ್ ತೊ ಪಾಂಚ್ ಬಾಯ್ಲಾಂಕ್ ಎಕಾಚ್ ಘರಾಂತ್ ಘೆವ್ನ್ ರಾಂವ್ಚೊ ದಾದ್ಲೊ ಮೆಳ್ಳೊ. ಕಿತೆಂ ಸಾಂಗುಂ! ಖರೋಚ್ ತೊ ಮ್ಹಾಕಾ ಪಾಂಚ್ ಲಿಪಿಂಕ್ ಪೊಟ್ಲುನ್ ಧರಲ್ಲೆ ಕೊಂಕ್ಣಿಬರಿ ದಿಸ್ಲೊ! -ಮೆಲ್ವಿನ್ ರೊಡ್ರಿಗಸ್ ಐದು ಹೆಂಡಿರ ಗಂಡ. ನಾನು ಸದಾ ಯೋಚಿಸುತಿದ್ದೆ.. ಈ ಗಂಡಸು ಹೇಗೆ ತನ್ನ ಐದೂ ಹೆಂಡತಿಯರನ್ನು ಸಂಭಾಳಿಸುತಿದ್ದಾನೆ ಅದು ಕೂಡ ಒಂದೇ ಮನೆಯೊಳಗೆ! ನಾನು ಅವನ ಮನೆಗೆ ಕಿವಿ ಹಚ್ಚಿದೆ. ಕತ್ತು ಹಿಸುಕುವಾಗ ಹೊರ ಬರಲು ಚಡಪಡಿಸುವ ಉಸಿರಿನ ಅಸಹಾಯಕ ಚೀರುವಿಕೆ. ಇನ್‍ಕ್ವಿಸಿಷನ್ ಕಾಲದಲ್ಲೂ ಹೀಗೆಯೇ ಇದ್ದಿತ್ತೇನೋ! ಹಾಗೇ- ಮಧ್ಯರಾತ್ರಿಯ ಮೌನದೊಳಗೆ ದಡವನ್ನು ಅಪ್ಪಳಿಸುವ ಅಲೆಗಳ ಭೋರ್ಗರೆತದ ಮೊರೆತ ಮಲಗಿದ್ದ ಹೆಂಡತಿಯ ಬಟ್ಟೆಗಳಿಗೆ ಉರಿ ಹಚ್ಚಿದಂತೆ. ಬಹುಶಃ ಜುಟ್ಟು ಹಿಡಿದು ತಲೆಯನ್ನು ಗೋಡೆಗೆ ಅಪ್ಪಳಿಸುವಾಗಿನ ಅದುರುವಿಕೆಗೆ ನಡುಗುವ ತೊಲೆಗಳ ಮೇಲಿನ ಹೆಂಚುಗಳ ನಡುಕ. ನಾನು ನನ್ನ ಬಾಗಿಲನ್ನು ತೆರೆದಿಟ್ಟೆ. ಒಬ್ಬಳ ಕೈಯಲ್ಲಿತ್ತು ಒನಕೆ ಮತ್ತೊಬ್ಬಳ ಹಿಡಿಯಲ್ಲೊಂದು ಕೋಲು. ಇನ್ನೊಬ್ಬಳು ತಿರುಗಿಸುತಿದ್ದಳು ಛಾಟಿಯಂತಹುದೇನನ್ನೋ ಸಿಕ್ಕಿದವರ ಮಾಂಸವನ್ನೇ ಕಚ್ಚಲು ತಯಾರಾಗಿದ್ದ ಮಗದೊಬ್ಬಳು. ಇನ್ನು ಉಳಿದವಳು ಮೆಣಸಿನ ಪುಡಿ ಎರಚುತಿದ್ದಳು. ಅಂಗಳದೊಳಗೆ ಮಹಾಭಾರತ ಜಗಳ- ಕದನ ಮಾರಾಮಾರಿ. ನಿನ್ನೆ.. ಐದು ಜನ ಪತ್ನಿಯರ ಜೊತೆ ಒಂದೇ ಮನೆಯಲ್ಲಿ ವಾಸಿಸುತ್ತಿರುವ ಆ ಗಂಡಸು ಎದುರಾದ. ಏನೆಂದು ಹೇಳಲಿ..! ನನಗೆ ಅವನು ಪಕ್ಕಾ ಐದು ಲಿಪಿಗಳನ್ನು ಅಪ್ಪಿಕೊಂಡ ಕೊಂಕಣಿ ಭಾಷೆಯಂತೆಯೇ ಕಂಡ. ಕನ್ನಡಕ್ಕೆ: ಶೀಲಾ ಭಂಡಾರ್ಕರ್. ಝುಜ್     ವಾಜಪೇಯಿ ಆನಿ ಆಡ್ವಾಣಿಚ್ಯಾ ಕದೆಲಾಂಚೊ         ಏಕ್ ಪಾಯ್             ಆಪ್ಲ್ಯಾ ಉತ್ರಾಂನಿ ಮೊಡುನ್                 ಮುಶಾರ್ರಫಾಚ್ಯೆ ಮಿಲಿಟರಿ ಫವ್ಜೆಚಿ                     ತೋಖ್ಣಾಯ್     ಕರ್‍ತಾಂ, ಭಾರತಾಕ್ ಬೆಂಡುನ್         ದಾವ್ಯಾ ಹಾತಾನ್ ಖಾಡ್ಕಿ ಉಕ್ಲುನ್             ಉಜ್ವ್ಯಾ ಹಾತಾನ್ ವಾಕೊರ್ ಧರುನ್                 ಹೊ ಪಾಕಿಸ್ತಾನಿ ಕೆಲ್ಸಿ                     ಮ್ಹಜ್ಯಾ ಗಳ್ಯಾಲಾಗ್ಚೆಂ ಖಾಡ್ ಕಾಡ್ತಾ!     ಪಾಕಿಸ್ತಾನಿ ಸೊಜೆರಾಂಚ್ಯಾ ಹಾತಾಂತ್         ಸಾಂಪ್ಡಾಲ್ಲ್ಯಾ             ಭಾರತೀಯ್ ಸೊಜೆರಾಚಿ ಕಾಂಪ್                 ಮ್ಹಜ್ಯಾ ಶಿರಾಂನಿ!                     ಖಿಣಾಕ್ ಸೊಜೆರಾಚೊ ಆವ್ತಾರ್ ಜಾವ್ನ್                         ಗಳೊ ಕಾಪಿತ್ ಕೊಣ್ಣಾ                             ಮ್ಹಳ್ಳಿ ಭಿರಾಂತ್!     ರಾತ್ ಇಕ್ರಾಂಕ್ ತೆಂಕ್ಲ್ಯಾ         ಸೆಲುನಾಂತ್             ಆಮ್ಚ್ಯಾ ದೊಗಾಂವಿಣೆಂ ತಿಸ್ರೊ ನಾ                 ದಾವೊ ದೊಳೊ ತಿರ್‍ಸೊ ಕರುನ್                     ಸೆಲುನಾಂತ್ಲ್ಯಾ ಆರ್‍ಶಾಭಾಯ್ರ್                         ಜನೆರಾಚ್ಯಾ ಹಿಂವಾಂತ್ಲೊ                             ನಿದೊಂಕ್ ಗೆಲ್ಲೊ, ದುಬಾಯಾಂತ್ಲೊ     ಮಾರೊಗ್ ದೆಖ್ತಾನಾ         ಕಾರ್‍ಗಿಲ್ ದೊಂಗ್ರಾವಯ್ಲ್ಯಾ ಕುಲ್ಕುಲ್ಯಾಂತ್‌ಯ್             ಝುಜ್‌ಲ್ಲ್ಯಾ ಸೊಜೆರಾಂಬರಿ                 ಗೊಮ್ಟ್ಯಾಚ್ಯೊ ಕಾತಿ                     ವಾಕೊರಾಚ್ಯೆ ಧಾರಿಲಾಗಿಂ                         ಝುಜ್ತಾತ್ ಭೊಗ್ತಾ     ಹಾಂವ್ ‘ಮಲ್ಬಾರಿ’ ಯಾ ‘ಮದ್ರಾಸಿ’         ತೊ ವಿಚಾರ್‍ತಾ:             ‘ಮಂಗ್ಳುರಿ’ ಮ್ಹಜಿ ಜಾಪ್.                 ‘ಆಮ್ಚಿಂ ಮಿಸ್ಸಾಯ್ಲಾಂ ಆತಾಂ                     ವಯ್ರ್‌ಥಾವ್ನ್ ಸಕಯ್ಲ್‌ಪಾಸೂನ್     ತುಮ್ಚ್ಯಾ ಕೇರಳಾಚಿಂ ಸಯ್ತ್ ಖಿಮಾಂ         ಕರ್‍ಚ್ಯೆ ತಾಕ್ತೆಚಿಂ’             ತೊ ಮ್ಹಜ್ಯೆ ಗೊಮ್ಟೆಚಿ ಕಾತ್                 ವೋಡ್ನ್ ಧರ್‍ನ್ ಉರ್‌ಲ್ಲಿಂ ಖಾಡಾಚಿಂ                     ಥೊಡಿಂ ಮುಳ್ಕಾಟಾಂ ಖರ್‍ವಟಾಯ್ತಾ     ‘ಸಗ್ಳೆಂ ಕಾಶ್ಮೀರ್ ಆಮ್ಚೆಂ         ಹೊ ಕಂಟ್ರೋಲಾಚೊ ಗೀಟ್ ವೊಡ್ಲಾ ದೆಕುನ್             ಆಕಾಂತ್‌ವಾದಾಚೆಂ ಪೀಟ್                 ಫುಗನಾಸ್ತಾಂ ರಾವ್ತಾ?’                     ಮದೆಂ ಮದೆಂ ಉರ್ದುಂತ್     ಗಾಳಿ ದೀವ್ನ್ ಆಸ್‌ಲ್ಲೊ ಕೆಲ್ಸಿ, ಎಕಾನೇಕ್         ‘ಬುಲ್‌ಶಿಟ್’ ಮ್ಹಣೊನ್             ದಾರ್ ಉಗ್ಡೊನ್ ಭಾಯ್ರ್ ಥಿಂಪಿ ಥುಕ್ತಾ     ಓಲ್ಡ್‌ಸ್ಪಾಯ್ಸಾಚೆ ಥೊಡೆ ಥೆಂಬೆ         ಮ್ಹಜ್ಯಾ ಗಾಲಾಂಚೆರ್ ಪುಸ್ತಾನಾ             ಜಾಂವ್ಚ್ಯಾ ಹುಲೊಪಾನ್                 ಲಾಹೋರ್ ಸೊಲ್ಲ್ಯಾಚಿಂ ಕೊಸಾಳ್‌ಲ್ಲಿಂ ರುಪಾಂ                     ಮ್ಹಜ್ಯಾ ದೊಳ್ಯಾಂ ಸಾಮ್ಕಾರ್ ಕುಪಾಂ                         ಜಾವ್ನ್ ಮಾಂಡ್ತಾತ್     ‘ಆಮಿ ಬೋರ್ಡರಾವಯ್ಲೆ ಮನಿಸ್         ಇಂಡಿಯಾಚ್ಯಾ ಗುಳ್ಯಾಂಕ್             ಆಮ್ಚೆ ಸಂಬಂಧ್ ತುಟ್ತಾತ್                 ಕಾಳ್ಜಾಂ ಫಾಳ್ತಾತ್                     ಆನಿ ಕುಟ್ಮಾಂ ಕೊಸಾಳ್ತಾತ್                         ತರಿ ಆಮಿ     ಭಿಯಾನ್ ನಿದನಾಂವ್         ಆಮಿ ರಗ್ತಾಂತ್ ನ್ಹಾತಾಂವ್             ಆನಿ ಹರ್‍ಯೆಕಾ ಮನ್ಶಾಸಂಬಂಧಾ ಮಧೇಂಯ್                 ಉಣ್ಯಾರ್ ಎಕ್ಯೆ ಬೊಂದುಕೆಕ್ ಜಾಗೊ ದಿತಾಂವ್                     ಮ್ಹಜ್ಯಾ ಸಾತ್ ವರ್‍ಸಾಂಚ್ಯಾ     ಫಾತಿಮಾಚೊ ಅತ್ಮೊ         ಬೋರ್ಡರಾಚೆರ್ ಪಾಸಾಯೊ ಮಾರ್‍ತಾ         ಆನಿ ಆಮ್ಚೆಕುಶಿಂ ಉಸಾಳ್ಚ್ಯಾ             ಗುಳಿಯಾಂಚಿ ದಿಶಾ ಬದ್ಲಿತಾ                     ತಶೆಂ ಆಮಿ                         ಭಿರಾಂತೆವಿಣೆಂ ಭೊಂವ್ತಾಂವ್’     ಧಾರುಣ್ ಲೆಕ್‌ಲ್ಲ್ಯಾ ಕೆಲ್ಸಿಚೆಂ         ಕಾಳೀಜ್ ಲೊಣಿಯೆಬರಿ ಕಡ್ತಾ             ಆನಿ ದೊಳ್ಯಾಂತ್ಲೆಂ ಏಕ್ ದೂಕ್                 ಝಡೊನ್ ಮ್ಹಜ್ಯಾ ಆಂಗಾರ್                     ಪಾಂಗರ್‌ಲ್ಲ್ಯಾ ವಸ್ತ್ರಾಚೆರ್ ಇರ್‍ತಾ     ಮ್ಹಜ್ಯಾ ಗಾಲಾಂಚೆರ್         ‘ನೀವಿಯಾ ಕ್ರೀಮ್’ ಮಾಖ್ತಾನಾ             ತಾಚ್ಯಾ ತಳಾತಾಭಿತರ್                 ಕಾಂಪ್ಚ್ಯಾ ಶಿರೆಂಚೊ ಶಿರ್‍ಶಿರೊ                     ಮ್ಹಜ್ಯಾ ಗಾಲಾಂಚ್ಯೆ ಕಾತಿವಯ್ಲ್ಯಾನ್                         ಚರೊನ್ ಕಾಳ್ಜಾಕ್ ಕಸ್ಕಸಾಯ್ತಾ     ಹಾಂವ್ ಉಟ್ತಾಂ         ಆನಿ ಹರ್‍ಶೆಂಚ್ಯಾಕ್‌ಯ್ ಪಾಂಚ್ ಧಿರಾಮ್             ಚಡ್ತಿಕ್ ಭಕ್ಷಿಸ್ ದಿತಾನಾ                 ‘ಶುಕ್ರಿಯಾ ಸಾಹೀಬ್                     ಬಡಿ ಮೆಹರ್‌ಬಾನಿ ಆಪ್‌ಕಿ’                         ತೊ ಮ್ಹಣ್ತಾ ಆನಿ ಭಾಯ್ರ್ ವೆಚ್ಯಾಕ್                             ದಾರ್ ಉಗ್ತೆಂ ಕರ್‍ತಾ     ಕಾಳೊಕಾಂತ್ಲ್ಯಾ ದುಬಾಯಾಂತ್ಲ್ಯಾ         ರಸ್ತ್ಯಾರ್ ಚಲೊನ್ ವೆತಾನಾ             ಮ್ಹಜ್ಯಾ ಗಾಲಾಂಕ್ ಆಪಡ್ತಾಂ                 ಸಕಡ್ ಸಾಫ್ ಸಫಾಯ್ ಜಾಲಾಂ                     ಮ್ಹಳ್ಳ್ಯಾಚಿ ಖಾತ್ರಿ ಕರ್‍ಚೆ ಆದಿಂ     ರಸ್ತ್ಯಾ ಬಗ್ಲೆಚ್ಯಾ ರುಕಾಚೆರ್         ಸೊಜೆರಾಂಚೆ ಕೊಣ್ಣಾ             ದೋನ್ ಅತ್ಮೆ                 ಕಿಡ್ಕಿಡ್ಚೆ ಆಯ್ಕತಾತ್     ಮ್ಹಜ್ಯೆ ಮತಿಂತ್ ನವ್ಯಾನ್         ಏಕ್ ಝುಜ್ ಸುರು ಜಾತಾ             ಆಕೇರ್ ನಾತ್‌ಲ್ಲೆಂ ಝುಜ್!   –  ಮೆಲ್ವಿನ್ ರೊಡ್ರಿಗಸ್ ಯುದ್ಧ ವಾಜಪೇಯಿ ಮತ್ತು ಆಡ್ವಾಣಿಯ ಕುರ್ಚಿಯ ಒಂದು ಕಾಲನ್ನು ತನ್ನ ಮಾತುಗಳಿಂದಲೇ ಮುರಿದು ಮುಷರ್ರಫ್ಪನ ಮಿಲಿಟರಿಯ ಗುಣಗಾನ ಮಾಡುತ್ತಾ, ಭಾರತವನ್ನು ಬೆಂಡೆತ್ತಿ ಎಡಕೈಯಲ್ಲಿ ಗದ್ದವನ್ನೆತ್ತಿ ಬಲಗೈಯಲ್ಲಿ ವಸ್ತರ ಹಿಡಿದು ಈ ಪಾಕಿಸ್ತಾನಿ ಕ್ಷೌರಿಕ ನನ್ನ ಕುತ್ತಿಗೆ ಬಳಿಯ ಗಡ್ಡ ತೆಗೆಯುತ್ತಾನೆ ಪಾಕಿಸ್ತಾನಿ ಸೈನಿಕನ ಕೈಯಲ್ಲಿ ಸಿಲುಕಿದ ಭಾರತೀಯ ಸೈನಿಕನ ನಡುಕ ನನ್ನ ಮೈಯಲ್ಲಿ ಕ್ಷಣದಲ್ಲೇ ಸೈನಿಕನ ಅವತಾರ ತಾಳಿ  ಕುತ್ತಿಗೆ ಸೀಳುವನೋ ಎಂಬ ಹೆದರಿಕೆ ರಾತ್ರಿ ಹನ್ನೊಂದಾಗುತ್ತಿದೆ ಸಲೂನಿನಲ್ಲಿ ನಮ್ಮಿಬ್ಬರ ವಿನಹ ಮತ್ತೊಬ್ಬನಿಲ್ಲ ಎಡಗಣ್ಣ ಕಿರಿದು ಮಾಡಿ ಸೆಲೂನಿನ ಗಾಜಿನಾಚೆಗೆ ಜನವರಿಯ ಚಳಿಯನ್ನು ಹೊದ್ದು ಮಲಗಿದ, ದುಬಾಯಿಯ ರಸ್ತೆ ನೋಡುವಾಗ ಕಾರ್ಗಿಲ್ ಶಿಖರದ ಚಳಿಯಲ್ಲಿಯೂ ಹೋರಾಡಿದ ಸೈನಿಕನಂತೆ ಕುತ್ತಿಗೆಯ ಚರ್ಮ ವಸ್ತರದ ಮೊನಚಿನೊಡನೆ ಹೋರಾಡಿದ ಭಾವ ನಾನು ‘ಮಲ್ಬಾರಿ’ ಯಾ ‘ಮದ್ರಾಸಿ’ ಅವನ ಪ್ರಶ್ನೆ ‘ಮಂಗಳೂರಿಗ’ ನನ್ನ ಉತ್ತರ ನಮ್ಮ ಮಿಸ್ಸಾಯ್ಲ್ ಗಳು ಈಗ ಮೇಲಿನಿಂದ ಕೆಳಗಿನ ತನಕ ನಿಮ್ಮ ಕೇರಳವನ್ನು ಕೂಡಾ ಖೈಮಾ ಮಾಡುವ ತಾಕತ್ತು ಪಡೆದಿವೆ ಅವನು ನನ್ನ ಕುತ್ತಿಗೆಯ ಚರ್ಮ ಹಿಡಿದೆಳೆದು ಅಳಿದುಳಿದ ಗಡ್ಡದ ಚೂರುಗಳನ್ನು ಕೆರೆಯುತ್ತಾನೆ ಇಡೀ ಕಾಶ್ಮೀರ ನಮ್ಮದು ಈ ಕಂಟ್ರೋಲಿನ ಗೆರೆ ಎಳೆದ ಕೂಡಲೇ ಭಯೋತ್ಪಾದನೆ ಉಬ್ಬರಿಸದೆ ನಿಂತಿತೆ? ನಡು ನಡುವೆ ಉರ್ದುವಿನಲ್ಲಿ ಬೈಯುತ್ತಾ ಇದ್ದ ಕ್ಷೌರಿಕ, ಒಮ್ಮೆಲೇ ‘ಬುಲ್ ಶಿಟ್’ ಎನ್ನುತ್ತಾ ಬಾಗಿಲು ತೆರೆದು ಉಗುಳುತ್ತಾನೆ ಓಲ್ಡ್ ಸ್ಪೈಸ್ ನ ಕೆಲ ಹನಿಗಳನ್ನು ನನ್ನ ಕೆನ್ನೆಗಳಿಗೆ ಹಚ್ಚುವಾಗ ಎದ್ದ ಉರಿಗೋ ಇರಬಹುದು ಮುರಿದ ಲಾಹೋರ್ ಒಪ್ಪಂದದ ತುಣುಕುಗಳು ನನ್ನ ಕಣ್ಣೆದುರು ಮೋಡಗಳಾಗಿ ಆವರಿಸುತ್ತವೆ ನಾವು ಬಾರ್ಡರ್ ಮೇಲಿನ ಜನರು ಇಂಡಿಯಾದ ಗುಂಡುಗಳಿಗೆ ನಮ್ಮ ಸಂಬಂಧಗಳು ಹರಿಯುತ್ತವೆ ಹೃದಯಗಳು ಬಿರಿಯುತ್ತವೆ ಮತ್ತು ಕುಟುಂಬಗಳು ಮುರಿಯುತ್ತವೆ ಆದರೂ ನಾವು ಹೆದರಿ ಮಲಗುವುದಿಲ್ಲ ನಾವು ರಕ್ತಸ್ನಾನ ಮಾಡುತ್ತೇವೆ ಮತ್ತು ಪ್ರತಿ ಮನುಷ್ಯ ಸಂಬಂಧದ ನಡುವೆಯೂ ಒಂದು ಬಂದೂಕಿಗೆ ಜಾಗ ನೀಡುತ್ತೇವೆ. ನನ್ನ ಏಳು ವರ್ಷದ ಫಾತಿಮಾಳ ಆತ್ಮ ಬಾರ್ಡರ್ ನಲ್ಲಿ ಅಲೆಯುತ್ತಾ ನಮ್ಮ ದಿಕ್ಕಿಗೆ ಹಾರುವ ಗುಂಡುಗಳ ದಿಕ್ಕನ್ನು ಬದಲಿಸುತ್ತವೆ ಹಾಗಾಗಿ ನಾವು ಹೆದರದೆ ತಿರುಗಾಡುತ್ತೇವೆ. ಕಾಠಿಣ್ಯ ತುಂಬಿದ ಕ್ಷೌರಿಕನ ಹೃದಯ ಬೆಣ್ಣೆಯಂತೆ ಕರಗುತ್ತದೆ ಆತನ ಒಂದು ಕಣ್ಣ ಹನಿ ಉದುರಿ ನನಗೆ ಹೊದಿಸಿದ ಬಟ್ಟೆಯಲ್ಲಿ ಇಂಗುತ್ತದೆ. ನನ್ನ ಕೆನ್ನೆಗಳಿಗೆ ‘ನೀವಿಯಾ ಕ್ರೀಮ್’ ಹಚ್ಚುವಾಗ ಆತನ ಅಂಗೈಯೊಳಗೆ ನಡುಗುವ ನರಗಳ ನಡುಕ ನನ್ನ ಕೆನ್ನೆಯ ಚರ್ಮದೊಳಗಿಂದ ಹರಿದು ಹೃದಯವನ್ನು ಅಲ್ಲಾಡಿಸುತ್ತದೆ ನಾನು ಎದ್ದು ಎಂದಿಗಿಂತ ಐದು ಧಿರಾಮ್ ಹೆಚ್ಚು ಭಕ್ಷೀಸು ನೀಡುವಾಗ ‘ಶುಕ್ರಿಯಾ ಸಾಹೀಬ್ ಬಡಿ ಮೆಹರ್ ಬಾನಿ ಆಪ್ ಕಿ’ ಎನ್ನುತ್ತಾ ಹೊರ ಹೋಗಲು ಬಾಗಿಲು ತೆರೆಯುತ್ತಾನೆ. ಕತ್ತಲಿನ ದುಬಾಯಿಯ ರಸ್ತೆಯಲ್ಲಿ ನಡೆಯುವಾಗ ನನ್ನ ಕೆನ್ನೆಗಳನ್ನು ಮುಟ್ಟುತ್ತೇನೆ ಎಲ್ಲಾ ಸಫಾಯ್ ಆಗಿದೆ ಎಂಬುದರ ಖಾತರಿ ಮಾಡುವ

ಕೊಂಕಣಿ ಕವಿ ಪರಿಚಯ Read Post »

ಕಾವ್ಯಯಾನ

ಕಾಯುವಿಕೆ

ಕವಿತೆ ಕಾಯುವಿಕೆ ತೇಜಾವತಿ ಹೆಚ್.ಡಿ. ಎಷ್ಟು ಘಮಘಮಿಸಿತ್ತಿದ್ದೆ ನೀನು..ಸುತ್ತೆಲ್ಲಾ ಮೂಲೆಗೂ ಕಂಪ ಪಸರಿಸುತ್ತಿದ್ದೆಯಲ್ಲ.. !ದಾರಿಹೋಕರನ್ನೂ ಕೈಬೀಸಿ ಕರೆದುತನ್ನೆಡೆಗೆ ಸೆಳೆವ ಮಾಯಾವಿ ನೀನು! ನಿನ್ನ ನೋಡಿದಾಗೆಲ್ಲ ಮುದ್ದಿಸಲೇ ಒಮ್ಮೆ ಎನ್ನಿಸುತ್ತುತ್ತು..ನೀನೋ…ಮುಟ್ಟಿದರೆ ಮಾಸುವಷ್ಟು ಶುಭ್ರ ಮೃದುಮಲ್ಲಿಗೆ..ಹಿತವೆನಿಸುತ್ತಿತ್ತು ಸಾಂಗತ್ಯಸಿಕ್ಕರೆ ದಿನವೂ ಮುಡಿಯಬೇಕೆನಿಸುತ್ತಿತ್ತು.. ಈಗಲೂ ಅಲ್ಲೇ ನಿನ್ನ ವಾಸ್ತವ್ಯಅದೇ ಗಿಡ ಅದೇ ಬಳ್ಳಿಎಲ್ಲೆಡೆ ಹರಡಿ ಮೈತುಂಬಾ ಹೂಗಳ ಪರಿಮಳ ! ಆದರೆ ಈಗೀಗ ಯಾಕೋನೀನೇ ತಲೆನೋವಾಗಿರುವೆಯಲ್ಲ !ಮುಡಿಯುವುದಿರಲಿ ವಾಸನೆಯೂ ಸೇರದುಇಲ್ಲಿ ಬದಲಾಗಿದ್ದು ಘಮಲೋ ಭಾವವೋ ನಾನರಿಯೆಅಂತೂ ಅಂದು ಆಕರ್ಷಿತವಾಗಿದ್ದೆ ಇಂದು ತಿರಸ್ಕೃತವಾಯ್ತು.. ನಾನು ಅಂದು ಸವಿದ ಸುಗಂಧಇಂದು ಮತ್ಯಾರದ್ದೋ ಪಾಲುಇಂದಿನ ನನ್ನ ತಲೆನೋವುನಾಳೆ ಇನ್ಯಾರದ್ದೋ… ಇಲ್ಲಿ ಯಾವುದು ಸ್ಥಿರ ಹೇಳಿಹಗಲಿಂದೆ ಇರುಳು ಇರುಳಿಂದೆ ಹಗಲುಕಾಲಚಕ್ರದಲ್ಲಿ ಎಲ್ಲವೂ ಸರತಿ..ಕಾಯುವಿಕೆ ಮಾತ್ರ ನಮ್ಮದು.. ****************************************

ಕಾಯುವಿಕೆ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಅಮೇರಿಕಾ ಬೊಗಸೆಯಲ್ಲಿ ಕಂಡಷ್ಟು ನೆನಪಿನಲ್ಲಿ ಉಳಿದಷ್ಟು ಪುಸ್ತಕದ ಹೆಸರು – ಅಮೇರಿಕಾ – ಬೊಗಸೆಯಲ್ಲಿ ಕಂಡಷ್ಟು ನೆನಪಿನಲ್ಲಿ ಉಳಿದಷ್ಟು ಪುಸ್ತಕದ ಬೆಲೆ ನೂರು ರೂಪಾಯಿ. ಹತ್ತು ಪರ್ಸೆಂಟ್ ರಿಯಾಯಿತಿಯಲ್ಲಿ ತೊಂಭತ್ತು ರೂಪಾಯಿಗಳು. ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ನಲ್ಲಿ ಕಳಿಸುವುದಕ್ಕೆ ಸರಿಸುಮಾರು ಮೂವತ್ತೈದು ರೂಪಾಯಿಗೂ ಮೇಲ್ಪಟ್ಟು ಆಗುತ್ತದೆ. ಹಾಗಾಗಿ ಒಟ್ಟು 90+35 ನೂರಾ ಇಪ್ಪತ್ತೈದು ಆಗುತ್ತದೆ. ಬ್ಯಾಂಕ್ ಟ್ರಾನ್ಸ್ಫರ್ ಮಾಡುವುದಾದರೆ ಎಸ್. ಬಿ. ಐ. ಖಾತೆ ಸಂಖ್ಯೆ 10386457906. ಜಯನಗರ ಎರಡನೇ ಬ್ಲಾಕ್ ಶಾಖೆ IFSC Code SBIN0003286. ನನ್ನ ಮೊಬೈಲ್ ಸಂಖ್ಯೆ 9886723505/8310506843 – ಇವೆರಡು ಸಂಖ್ಯೆಯಲ್ಲಿ ಯಾವುದಕ್ಕಾದರೂ ವಿಳಾಸವನ್ನು ಕಳುಹಿಸಬಹುದು. ಗೂಗಲ್ ಪೇ ಮುಖಾಂತರವೂ 9886723505 ಈ ಸಂಖ್ಯೆಗೆ ಕಳುಹಿಸಬಹುದು. ನಾವು ಮಾಡಿದ್ದು ಒಟ್ಟು 92 ದಿನದ ಪ್ರವಾಸ. ಅಮೇರಿಕಾ ಪಶ್ಚಿಮ ತೀರದಲ್ಲಿರುವ ಕ್ಯಾಲಿಫೋರ್ನಿಯಾ ಹಾಗೂ ನೆವಾಡಾ ಮತ್ತು ಆರಿಜ಼ೋನಾ ರಾಜ್ಯಗಳು ಅಂತೆಯೇ ಮಧ್ಯ ಅಮೇರಿಕಾದ ಕ್ಯಾನ್ಸಸ್ ಮತ್ತು ವಿಚಿಟಾ ನಗರಗಳು. ನಾನೇ ಸ್ವಂತ ಮುದ್ರಣ ಮಾಡಿಸಿರುವೆ. ಇದು ಪ್ರವಾಸ ಕಥನಕ್ಕಿಂತ ಹೆಚ್ಚಾಗಿ ನಡೆಯಲು ಸಾಧ್ಯವಿಲ್ಲದೆ ಗಾಲಿಕುರ್ಚಿಯ ಮೇಲೆ ಆ ಪ್ರದೇಶಗಳನ್ನು ನೋಡಿಬಂದ ಅನುಭವ ಕಥನ/ಸಾಹಸಗಾತೆ ========================================= ಬದುಕು ಪುಕ್ಸಟ್ಟೆ ಅಲ್ಲ ಪುಸ್ತಕದ ಹೆಸರು: ಬದುಕು ಪುಕ್ಸಟ್ಟೆ ಅಲ್ಲ (ವ್ಯಕ್ತಿತ್ವ ವಿಕಸನ) ಲೇಖಕರ ಹೆಸರು: ರಾಘವೇಂದ್ರ ಈ ಹೊರಬೈಲು ಪುಟಗಳು: 120. ಬೆಲೆ: 100/- ಪ್ರಕಾಶಕರ ಹೆಸರು ಮತ್ತು ವಿಳಾಸ: ಗೋಮಿನಿ ಪ್ರಕಾಶನ, ಶಾಂತಿನಗರ, ತುಮಕೂರು- 572102 ಪುಸ್ತಕ ದೊರೆಯುವ ವಿಳಾಸ: ಗುಬ್ಬಚ್ಚಿ ಸತೀಶ್, ತುಮಕೂರು ಮೊಬೈಲ್ ಸಂಖ್ಯೆ: 9986692342 / 9538242068. ಲೇಖಕ ಸದಾಶಿವ ಸೊರಟೂರು ಬರೆದ ಬೆನ್ನುಡಿಯಿಂದ: ಜಗತ್ತಿನ ಕಡೆ ಮುಖ ಮಾಡಿ ಕೂತು, ಅದರೊಂದಿಗೆ ತನ್ನ ಬದುಕಿನೊಳಗಿನ ಅನುಭವದ ಸರಕುಗಳನ್ನು ತಾಳೆ ಹಾಕಿಕೊಳ್ಳುವ ಹೊತ್ತಿಗೆ ಕಳೆದ ಒಂದೊಂದು ಕ್ಷಣವು ಕೂಡಾ ನನಗೊಂದು ಪಾಠವಾಗಿಬಿಟ್ಟಿತಲ್ಲ ಅನಿಸಿಬಿಡುತ್ತದೆ. ಯಾರಿಗೇ ಆಗಲಿ ಆ ಕ್ಷಣಕ್ಕೆ ಬದುಕು ಪುಕ್ಸಟ್ಟೆ ಅಲ್ಲ ಅನ್ನೋದು ಅರ್ಥವಾಗಿಬಿಡುತ್ತದೆ. ಬಿಡಿ, ಅದು ನೀಡುವ ಬೇಡಿಕೆಗಳ ಪಟ್ಟಿ ದೊಡ್ಡದು. ಬದುಕಿನ ಅಂತಹ ಹತ್ತಾರು ಹಸಿಹಸಿ ಅನುಭವಗಳೊಂದಿಗೆ ರಾಘವೇಂದ್ರ ಈ ಹೊರಬೈಲು ಅವರು ಈ ಪುಸ್ತಕದಲ್ಲಿ ನಿಮ್ಮೊಂದಿಗೆ ಮುಖಾಮುಖಿಯಾಗಿದ್ದಾರೆ. ಅನುಭವಗಳು ಕೊಟ್ಟು ಹೋದ ಬದುಕಿನ ಪಾಠವನ್ನು ಪಕ್ಕದಲ್ಲಿ ಕೂತು, ಆತ್ಮೀಯವಾಗಿ ಹೇಳುವಂತೆ ನಿರೂಪಿಸಿದ್ದಾರೆ. ಅರೆ, ಇದು ನನ್ನದು ಕೂಡಾ ಅನ್ನಿಸುವಂತೆ ಬರೆದಿದ್ದಾರಲ್ಲ ಅನಿಸಿಬಿಡುತ್ತದೆ. ಅದು ಅವರ ಶಕ್ತಿ. ಓದುತ್ತಾ ಹೋದಂತೆ ಅನುಭವಗಳು ಪಾಠದಂತೆ ಆವರಿಸಿಕೊಳ್ಳುವ ಪರಿ ಅದ್ಭುತವಾಗಿದೆ. ಮೇಷ್ಟ್ರು ಕೂಡಾ ಆಗಿರುವ ರಾಘವೇಂದ್ರ ಅವರಿಗೆ ಅಂಥದೊಂದು ಕಲೆ ಸೊಗಸಾಗಿ ಸಿದ್ಧಿಸಿದೆ .

ಪುಸ್ತಕ ಪರಿಚಯ Read Post »

ಕಾವ್ಯಯಾನ

ಮೂಕ ಸಾಕ್ಷಿ

ಕವಿತೆ ಮೂಕ ಸಾಕ್ಷಿ ಸರೋಜಾ ಶ್ರೀಕಾಂತ್ ಇತ್ತೀಚೆಗೆ ಸುಣ್ಣವಿರದ ಗೋಡೆಯೂ ಸನಿಹ ಬರಗೊಡದುಬಣ್ಣಿಸುವ ಕಿವಿಯಾಗುವುದು ಬಿಟ್ಟು ವರ್ಷಗಳೇ ಆದವೇನು!? ನೆಪಕ್ಕಾದರೂ ಸಾಂತ್ವನದ ನುಡಿಗಳಾರೂ ಆಡಲಿಲ್ಲದಿನಂಪ್ರತಿ ಸಾಯೋರಿಗೆ ಅಳುವರಾರು ಅಂದರೆಲ್ಲ ಈಗೀಗ ಜೋತು ಬಿದ್ದ ಸೂರಿನ ಜಂತಿಗೂ ಜಿಗುಪ್ಸೆಸಂಕಷ್ಟದ ಮಾಳಿಗೆ ಬಿಟ್ಟು ಕಾಲನಡಿ ಅಡಗಿ ಮಾಯವಾಗುವುದೇ ಇಷ್ಟವಂತೆ ಇಲಿ ಬಿಡಿ,ಇರುವೆ ಜಿರಳೆಗಳ ಹಾವಳಿಯಾವುದೂ ಇಲ್ಲಿಲ್ಲಬರಿದಾದ ಡಬರಿಗೆ ಯಾವ ಸಪ್ಪಳದ ಖಬರಿಲ್ಲ….! ನಿದ್ರೆ ಇರದ ರಾತ್ರಿಗಳಲ್ಲೆಲ್ಲಾ ಹರಕು ಹಾಸಿಗೆಯಿಂದ ಹೊರ ಬರುತ್ತಲೇ ಇರುವ ಕಾಲುಗಳುಸುಳ್ಳಾಗಿಸುತ್ತವೆ ಗಾದೆ ಮಾತನ್ನು ನಿತ್ಯ ಒಂದಿಷ್ಟು ಹೊತ್ತಾದರೂ ತಣ್ಣಗಿರುವುದೊಂದೆ , ಅದೇಬೆಳಗಾಗುತ್ತಲೇ ಕಣ್ಣೊರೆಸಿ ಖಾಲಿಯಾಗುವ ಮಣ್ಣಿನ ಪಾತ್ರೆ ಅವನಿಂದಾಚೆ ಏನೂ ಇಲ್ಲಅವನಿಚ್ಛೆಯ ಆಯ್ಕೆಯಲ್ಲಿ ನಾವೂ ಇರುವೆವಲ್ಲಆದಿಗೊಂದು ಅಂತ್ಯವೂ ಇದೆಯಲ್ಲ….!!!. ********************************

ಮೂಕ ಸಾಕ್ಷಿ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼

ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼     ನನ್ನಲ್ಲಿರುವ ಚೂರು ಪಾರು ಆತ್ಮವಿಶ್ವಾಸವನ್ನು ಒಗ್ಗೂಡಿಸಿ ಏನನ್ನೇ ಮಾಡಲು ಹೊರಟರೂ ಉತ್ಸಾಹಕ್ಕೆ ತಣ್ಣೀರೆರುಚುವವರು ಸುತ್ತಲೂ ಸುತ್ತುವರೆದಂತೆ ಇರುತ್ತಾರೆ. ಅಷ್ಟೇ ಅಲ್ಲ ಮನದಲ್ಲಿ ಉಕ್ಕುತ್ತಿರುವ ಹಂಬಲವನ್ನು ಚಿವುಟಿ ಚಿಂದಿ ಮಾಡುತ್ತಾರೆ. ಎಷ್ಟೋ ಸಲ ನನ್ನಿಂದ ಏನೂ ಆಗುವುದಿಲ್ಲ ಅನ್ನುವ ಭಾವವನ್ನು ಮೂಡಿಸುವವರೂ ಇದ್ದಾರೆ. ಅವರಿವರ ಇಂಥ ಗಿರಕಿಯೊಳಗೆ ಸಿಕ್ಕಿ ಬಿದ್ದರೆ ನನ್ನ ಕಥೆ ಮುಗಿದೇ ಹೋಗುತ್ತದೆ ಅಂತ ಅನ್ನಿಸಿದರೂ ಅದರಿಂದಾಚೆ ಬರಲು ಆಗುತ್ತಿಲ್ಲ. ‘ಏನಾದರೂ ಆಗಲಿ ಮುನ್ನುಗ್ಗು ಎಂಥ ಸೋಲೇ ಎದುರಾದರೂ ಎದೆಗುಂದಬೇಡ ಧೈರ್ಯದಿಂದ ಹೆಜ್ಜೆ ಹಾಕು. ‘ಛಲವೇ ಗೆಲುವಿನ ಬಲ.’ ಎಂದು ಗುರುಗಳು ಹೇಳಿದ ಮಾತುಗಳನ್ನು ನೆನೆದಾಗಲೊಮ್ಮೆ “ಗೆಲ್ಲುವುದು ಕಷ್ಟವಲ್ಲ ಗೆಲ್ಲಲೇಬೇಕೆಂದು ಮನಸ್ಸು ಮಾಡುವುದು ಕಷ್ಟ. ದೃಢ ಸಂಕಲ್ಪ ತೊಡುವುದು ಇನ್ನೂ ಕಷ್ಟ..”ಎಂದೆನಿಸುತ್ತದೆ. ಇದು ಬಹುತೇಕ ಯುವ ಸ್ಪರ್ಧಾರ್ಥಿಗಳ ಮತ್ತು ವಿದ್ಯಾರ್ಥಿಗಳ ಸ್ವಗತವಾಗಿದೆ. ಗೆಲುವು. . . .        ಗೆಲುವು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ಗೆಲ್ಲಲು ಬಯಸುತ್ತಾರೆ.ಕನಸುಗಳು ಬೇರೆ ಬೇರೆ ಬಣ್ಣ ಸುರಿದು ಕೈ ಬೀಸಿ ಕರೆಯುತ್ತವೆ. ಇನ್ನೇನು ಗೆಲುವು ಕೈಯಲ್ಲಿ ಸಿಕ್ಕಿತು ಎನ್ನುವಷ್ಟರಲ್ಲಿ ಕೈ ಜಾರಿದ ಕಹಿ ಅನುಭವವನ್ನು ಮರೆಯುವದಾದರೂ ಹೇಗೆ? ಗೆಲುವಿನ ವಿಷಯವಾಗಿ ಅನೇಕ ಸಲ ಮನಸ್ಸಿಗೆ ಮತ್ತು ಬುದ್ಧಿಗೆ ಚಕಮಕಿ ನಡೆದಿರುತ್ತದೆ. ಕೆಲವೊಮ್ಮೆ ಗುರಿಯ ಕುರಿತು ಬಲು ಶಿಸ್ತಿನ ವ್ಯಕ್ತಿಯಾದರೂ ಗೆಲುವು ಮರೀಚಿಕೆ ಆಗುವುದುಂಟು. ಯಶಸ್ಸಿನ ವಿಷಯದಲ್ಲಿ ಅಸಮಾಧಾನದಲ್ಲಿ ಇರುವುದನ್ನು ಕಾಣುತ್ತೇವೆ.ನನ್ನ ಜೀವನ ಈಗ ಯಾವ ಘಟ್ಟದಲ್ಲಿದೆ ಅದನ್ನು ಎಲ್ಲಿಗೆ ಕೊಂಡೊಯ್ಯಬೇಕು? ಗೆಲುವಿನತ್ತ ಹೆಜ್ಜೆ ಹಾಕುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೊರಟಾಗ ಜೀವನ ಧ್ಯೇಯವನ್ನು ಕಂಡುಕೊಂಡು ಆ ಗುರಿಯತ್ತ ದಿಟ್ಟ ಹೆಜ್ಜೆ ಹಾಕುವಾಗ ಏಕಾಂಗಿಯಾಗಿ ಉಳಿಯುವ ಮಾತಿಲ್ಲ. ‘ ರೈತ ಬಿತ್ತಿದ ತಕ್ಷಣ ಫಲ ಬರುವುದಿಲ್ಲ. ನೀರು ಗೊಬ್ಬರ ಸಕಾಲಕ್ಕೆ ಹಾಕಿದ ಮೇಲೆ ಅಲ್ಲವೇ ಬೆಳೆ ಬರುವುದು.’ ಹಾಗೆಯೇ ಗೆಲುವೂ ಸಹ. ಮನಸ್ಸಿನಲ್ಲಿ ಗೆಲ್ಲಬೇಕೆನ್ನುವ ಬಯಕೆ ಮೂಡಿದರೆ ಸಾಲದು ಅದಕ್ಕೆ ಪೂರಕ ಅಂಶಗಳನ್ನು ಪೂರೈಸಿದಾಗ ಮಾತ್ರ ಫಲಿಸುವುದು. ಸ್ವಯಂ ಪ್ರೀತಿ ಇಲ್ಲದಿರುವುದು ಗೆಲುವಿನ ಗಿಡಕ್ಕೆ ಕಾಡುವ ಕ್ರಿಮಿ ಇದ್ದಂತೆ. ರೋಲೋ ಮೇ ಹೇಳುವಂತೆ ‘ಸ್ವಯಂ-ಪ್ರೀತಿ ಅವಶ್ಯಕ ಮತ್ತು ಒಳ್ಳೆಯದು ಮಾತ್ರವಲ್ಲ ಅದು ಇತರರನ್ನು ಪ್ರೀತಿಸಲು ಸಹ ಒಂದು ಪೂರ್ವಭಾವಿ ಅಗತ್ಯವಾಗಿರುತ್ತದೆ.’  ಬೆಳೆಯನ್ನು ಕಾಡುವ ಕ್ರಿಮಿಗಳಿಗೆ ಕೀಟನಾಶಕ ಸಿಂಪಡಿಸಿ ನಿಯಂತ್ರಿಸಿದAತೆ ಗೆಲುವಿನ ಶತ್ರುಗಳಾವವು? ಅವುಗಳನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ತಿಳಿಯಬೇಕೇ? ಹಾಗಾದರೆ ಮುಂದಕ್ಕೆ ಓದಿ.. . . ಸ್ಪಷ್ಟ ಗುರಿ    ಬಹುತೇಕರು ಎಡುವುದೇ ಇಲ್ಲಿ. ಗುರಿಯ ನಿರ್ಧಾರವಿಲ್ಲದಿದ್ದರೆ ಹೋಗುವುದಾದರೂ ಎಲ್ಲಿಗೆ? ಗಾಳಿಯಲ್ಲಿ     ಹೊರಟ ಕರುವಿನಂತೆ ಆಗುತ್ತದೆ ಬದುಕು. ಕಡಲಯಾನಿಗಳಿಗೆ ಬೇಕಾದ ಪ್ರಮುಖ ವಸ್ತು ಎಂದರೆ ದಿಕ್ಸೂಚಿ. ಹೋಗುವ ದಿಕ್ಕು ಗೊತ್ತಿಲ್ಲದೇ ಮುನ್ನಡೆದರೆ ಆಪತ್ತು ಕಟ್ಟಿಟ್ಟ ಬುತ್ತಿ. ಎಲ್ಲವೂ ಇದ್ದು ಏನೂ ಇಲ್ಲದವರ ತರಹ ಹಲುಬುವುದು ಗೋಳಾಡುವುದೇ ಜೀವನವಾಗಬಾರದು. ಸ್ಪಷ್ಟ ಗುರಿ ಇಲ್ಲದಿರುವುದು ಗೆಲುವಿಗೆ ದೊಡ್ಡ ಶತ್ರು.  ಗುರಿಯನ್ನೇ ಗುರುತಿಸದಿರುವುದು.  ಗುರಿ ನಿರ್ಧಾರವು ಒಂದು ಸಾಹಸ ಸಂಕೇತ. ಗುರಿ ನಿರ್ಧರಿಸುವುದು ಮತ್ತು ಅದನ್ನು ಎಡೆಬಿಡದೇ ಅನುಸರಿಸುವುದು ಅನಿವಾರ್ಯ. ಯೋಜನೆಗಳನ್ನು ಹಾಕದಿರುವುದು. ಯೋಜನೆಗಳು ನಕ್ಷತ್ರಗಳಂತೆ ಗುರಿಯತ್ತ ಚಲಿಸುವಾಗ ಅವುಗಳನ್ನು ಮಾರ್ಗ ಸೂಚಿಗಳಂತೆ ಆಯ್ಕೆ ಮಾಡಿಕೊಳ್ಳಬೇಕು.ಆ ದಾರಿಗುಂಟ ಗಮ್ಯ ಸ್ಥಾನವನ್ನು ತಲುಪಬಲ್ಲೆವು. ಬದ್ಧತೆಗಳು ನಂಬಿಕೆಗಳು ಸಮಾನವಾಗಿರದಿದ್ದರೆ ಜೀವನದಲ್ಲಿ ಸುಖದಿಂದ ಇರಲು ಸಾಧ್ಯವಿಲ್ಲ ಅಂತೆಯೇ ಗುರಿ ಇಲ್ಲದ ಜೀವನ ಗೆಲುವಿನ ದಡ ಸೇರಲು ಸಾಧವಿಲ್ಲ.. ಗುರಿ ನಮ್ಮ ಮನಸ್ಸಿಗೆ ಸ್ಪೂರ್ತಿ ನೀಡುತ್ತದೆ. ಬರೆದಿಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಇಡುವಂತೆ ಮಾಡುತ್ತದೆ.’ಸ್ಪಷ್ಟ ಗುರಿ ಎಂದರೆ ಸಾಮಾನ್ಯನಾಗಿಯೇ ಇರಲು ನಿರಾಕರಿಸುವುದು.. ಅಸಾಮಾನ್ಯನಾಗುವ ನಿರ್ಧಾರ ಕೈಗೊಂಡಂತೆ.’ ಮುಂದಿನ ಜೀವನದ ದಿಟ್ಟ ಪ್ರಯತ್ನ. ಏಕೆಂದರೆ ಅದು ನಿಮ್ಮಲ್ಲಿ ಅಡಗಿರುವ ಸುಪ್ತ ಶಕ್ತಿಗಳನ್ನು ಸಾಧ್ಯತೆಗಳನ್ನು ಹೊರಗೆಳೆಯುವ ಚೈತ್ರ ಕಾಲ.  ಆಲಸ್ಯತನ    ಆಲಸ್ಯ ನಮ್ಮ ಶರೀರದೊಳಗೇ ಇರುವ ದೊಡ್ಡ ಶತ್ರು. ಇದನ್ನು ಹೊರ ಓಡಿಸಲು ಮನಸ್ಸು ಮಾಡದಿದ್ದರೆ ಜೀವನವನ್ನು ನುಂಗಿ ಹಾಕಿ ಬಿಡುತ್ತದೆ. ಬಣ್ಣದ ಮಾತುಗಳನ್ನು ಹೇಳುತ್ತ ಕುಳಿತರೆ ಬದುಕು ಉದ್ದಾರವಾಗುವುದಿಲ್ಲ ಎಂಬುದು ಕಟು ಸತ್ಯ. ‘ನಾವು ಪಡೆದುಕೊಳ್ಳುವ ವಸ್ತುಗಳಲ್ಲೆಲ್ಲಾ ಬಹು ಬೇಸರದಿಂದ ಪಡೆದುಕೊಳ್ಳುವುದು ಬುದ್ಧಿವಾದ.’ ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿರುವುದೇ. ಗುರು ಹಿರಿಯರು ಹೇಳುವ ಬುದ್ಧಿವಾದವನ್ನು ಕಿವಿಗೆ ಹಾಕಿಕೊಳ್ಳದೇ ಆಲಸ್ಯತನವನ್ನೇ ಸಮರ್ಥಿಸಿಕೊಳ್ಳುವುದನ್ನು ರೂಢಿಸಿಕೊಂಡಿರುವುದು ಶೋಚನೀಯ ವಿಚಾರ. ‘ಸಮರ್ಥತೆ ಇರಲಾರದೇ ಆರ್ಥಿಕತೆ ಇರಲಾರದು.’ಎಂಬುದು ಬಲ್ಲವರ ಮಾತು. ಅಂತೆಯೇ ‘ಶ್ರಮವಿರಲಾರದೇ ಗೆಲುವು ಇರಲಾರದು.’ ಎಂಬ ನುಡಿಯನ್ನು ಅದಕ್ಕೆ ಜೋಡಿಸಬಹುದು. ಇದು ಸಾರ್ವಕಾಲಿಕ ಸತ್ಯ ಕೂಡ. ಕಷ್ಟ ನಷ್ಟಗಳ ನಡುವೆ ಫೀನಿಕ್ಸ್ ಪಕ್ಷಿಯಂತೆ ಮೈ ಕೊಡವಿ ಎದ್ದು ನಿಂತು ಬದುಕಿ ಬಾಳುವವರ ಚಿತ್ರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿರುತ್ತವೆ. ಅಂಥವುಗಳನ್ನೆಲ್ಲ ನೋಡಿದಾಗೊಮ್ಮೆ ನಾನೂ ಹಾಗೆ ಆಗಬೇಕೆಂದುಕೊಂಡರೂ ಮನಸ್ಸು ಮಾತ್ರ ಚೇತನ ಆವಸ್ಥೆಗೆ ಬರುವುದೇ ಇಲ್ಲ. ಅದಕ್ಕೆ ಎಲ್ಲ ಕಾರಣ ದೃಢ ಸಂಕಲ್ಪದ ಅಭಾವ. ‘ಅಚಲ ಸಂಕಲ್ಪವೇ ಆಲಸ್ಯತನಕ್ಕೆ ಮದ್ದು.’ ಶ್ರದ್ಧೆಯ ದುಡಿಮೆಗೆ ಮೋಸವಿಲ್ಲವೆಂದು ಗುರಿಯ ದಾರಿಯಲ್ಲಿ ಹೆಜ್ಜೆ ಹಾಕಬೇಕು.ಸೋಮಾರಿತನದ ಗೂಡಾದ ಮೆದುಳು ತಾರ್ಕಿಕವಾಗಿ ಏನನ್ನೂ ಯೋಚಿಸದು. ಆದ್ದರಿಂದ ಸೋಮಾರಿತನದ ಬೇರನ್ನು ಕಿತ್ತೊಗೆಯುವುದೊಂದೇ ದಾರಿ. ಸಮಯ ನಿರ್ವಹಣೆ ಬಹುತೇಕ ಪ್ರಾಜ್ಞರ ಪ್ರಕಾರ ‘ಜೀವನವೆಂದರೆ ಸಮಯ.’ ಸಮಯ ನಿರ್ವಹಣೆಯಲ್ಲಿಯೇ ಜೀವನದ ನೋವು ನಲಿವು ಸೋಲು ಗೆಲುವು ಎಲ್ಲವೂ ಅಡಗಿವೆ. ಮಾಡುವ ಕೆಲಸಗಳ ಬಗೆಗೆ ಸರಿಯಾದ ಚಿತ್ರಣ ಇರದಿದ್ದರೆ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿ ಸಮಯ ಪೋಲು ಮಾಡಿ ಬಿಡುತ್ತೇವೆ. ಅಷ್ಟೇ ಅಲ್ಲ ಮಾಡಬೇಕಾದ ಸಮಯದೊಳಗೆ ಕೆಲಸವನ್ನು ಮುಗಿಸಲು ಆಗುವುದಿಲ್ಲ ಮುಖ್ಯವಾದ ಕೆಲಸಗಳಿಗೆ ಸಮಯವೇ ಇಲ್ಲದಂತಾಗುತ್ತದೆ.ಕೆಲಸಗಳ ಪ್ರಾಮುಖ್ಯತೆಯ ಅರಿವಿಲ್ಲದೇ ಕಷ್ಟ ಪಟ್ಟು ಕೆಲಸ ಮಾಡಿದರೂ ಸರಿಯಾದ ಫಲಿತಾಂಶ ದೊರೆಯುವುದಿಲ್ಲ.ಆದ್ದರಿಂದ ಪ್ರತಿನಿತ್ಯ  ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಹಿಂದಿನ ದಿನ ರಾತ್ರಿ ಇಲ್ಲವೇ ಬೆಳಿಗ್ಗೆ ತಯಾರಿಸಿಕೊಳ್ಳುವುದು ಸೂಕ್ತ. ಮುಖ್ಯವಾದ ಕೆಲಸಗಳಲ್ಲಿ ತೊಡಗಿರುವಾಗ ಇತರರಿಗೆ ‘ಇಲ್ಲ ಆಗುವುದಿಲ್ಲ ಎಂದು ಹೇಳುವುದನ್ನು ಕಲಿಯಲೇಬೇಕು. ಇಲ್ಲದಿದ್ದರೆ ಮನಸ್ಸಿನ ಮೇಲೆ ಹಲವಾರು ಕೆಲಸಗಳನ್ನು ಹೇರಿದಂತಾಗಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗುವುದು.’ಯಾವ ವ್ಯಕ್ತಿಗೆ ಸಮಯ ನಿರ್ವಹಣೆ ಗೊತ್ತಿದೆಯೋ ಅವನು ಯಶಸ್ವಿ ವ್ಯಕ್ತಿಯಾಗುವನು.’ ನಿರ್ವಹಣೆ ಗೊತ್ತಿಲ್ಲದವನು ಸಮಯದ ಅಭಾವದ ಕುರಿತು ದೂರುವನು. ಉತ್ಸಾಹ     ಹೊಸ ಹುರುಪು ಸ್ಪಷ್ಟ ಚಿಂತನೆಗಳು ಇರದಿದ್ದರೆ ಯಾವುದರಲ್ಲಿಯೂ ಮುನ್ನಡೆಯುವುದು ಕಷ್ಟ. ಉತ್ಸಾಹದಿಂದ ವಿಶ್ವಾಸ ವೃದ್ಧಿಯಾಗುವುದು.ನೀವು ಏನನ್ನೇ ಮಾಡಲು ಮುಂದಾದರೂ ನಿಮ್ಮ ಉತ್ಸಾಹಕ್ಕೆ ತಣ್ಣೀರೆರಚುವವರು ಮತ್ತು ವಿಪತ್ತುಗಳು ಸಂಕಷ್ಟಗಳು ಇದ್ದೇ ಇರುತ್ತವೆ.ನೀವು ಈಗ ನದಿ ಹರಿಯುವ ದಿಕ್ಕಿನಲ್ಲಿ ದೋಣಿಯನ್ನು ನಡೆಸುತ್ತಿರುವವರು ನಿಮಗೀಗ ಮುಂದೆ ಹೋಗುವುದನ್ನು ಬಿಟ್ಟು ಬೇರೆ ದಾರಿ ಇಲ್ಲ.ಅಥವಾ ಹಿಂದೆ ಹೋಗಬೇಕು.ಖ್ಯಾತ ಸಾಹಿತಿ ಮಾಕ್ ð ಟ್ವೇನ್ ಹೇಳುವಂತೆ “ಪ್ರತಿಯೊಬ್ಬರೂ ತಾನಿರುವ ಸ್ಥಿತಿಯಲ್ಲಿ ಉಳಿದರೆ ಪ್ರಪಂಚದಲ್ಲಿ ಹೀರೋಗಳೇ ಇರುವುದಿಲ್ಲ.”ದುರ್ಬಲ ಹೃದಯದವರಾಗಿ ನಿನ್ನೆ ಅನ್ನುವ ಕಳೆದು ಹೋಗಿರುವ ಇತಿಹಾಸದಲ್ಲಿ ಉಳಿದು ಬಿಟ್ಟರೆ ತೊಂದರೆ ಖಚಿತ.“ಉತ್ಸಾಹ ಎನ್ನುವುದು ಕಲ್ಲಿದ್ದಲಿನೊಳಗಿನ ಕಾವು ಆಗಬೇಕೇ ಹೊರತು ಹುಲ್ಲು ಮೆತ್ತೆಗೆ ಹತ್ತಿದ ಬೆಂಕಿ ಆಗಬಾರದು.”ಎಷ್ಟೋ ಸಲ ಗೆಲುವಿನ ಹತ್ತಿರವೇ ಇದ್ದರೂ ಗಡಿಬಿಡಿಯಲ್ಲಿ ಸೋಲಿನತ್ತ ಹೊರಳುತ್ತೇವೆ. ಕೊನೆ ಹನಿ  ಗೆಲುವನ್ನು ನಮ್ಮದಾಗಿಸಿಕೊಳ್ಳಲು ಅಲ್ಪಾಸೆಗೆ ಒಳಗಾಗುತ್ತೇವೆ. ಶ್ರಮದ ಬದಲು ಅಡ್ಡ ದಾರಿ ಹಿಡಿಯುತ್ತೇವೆ. ‘ಗೆಲುವು ಎಂದರೆ ಭೂಮಿಯನ್ನು ಅಗೆದು, ಮರಳನ್ನು ಜಾಲಾಡಿಸಿ ಚಿನ್ನವನ್ನು ತೆಗೆಯುವ ಪ್ರಯತ್ನದಂತೆ.ಕಷ್ಟಪಟ್ಟು ಜಾಲಾಡಿದರೆ ಕೊನೆಗೊಂದು ದಿನ ಸಿಗುವುದು.. ಪ್ರಯತ್ನದಿಂದ ಗೆಲುವಿನ ಸಾಗರವೇ ನಮ್ಮದಾಗುವುದು. ತಾಳ್ಮೆ ಬೇಕಷ್ಟೇ.ಕ್ಷಣಿಕ ಕ್ಷುಲ್ಲಕ ಆಸೆಗಳನ್ನು ಬಿಟ್ಟು ಅಮೃತದಂಥ ಪ್ರಯತ್ನದ ಬೆನ್ನು ಹತ್ತಬೇಕು. ಹತ್ತು ಹಲವು ಕಡೆ ಹಾರುವ ಚಂಚಲ ಮನವನ್ನು ಗುರಿಯತ್ತ ನೆಲೆಯಾಗಿಸುವುದರಲ್ಲೇ ಗೆಲುವಿದೆ. ನಿರಂತರ ಪ್ರಯತ್ನಿಸುವವನಿಗೆ ಗೆಲುವು ತಾನಾಗಿಯೇ ಕೈ ಚಾಚಿ ಅಪ್ಪಿಕೊಳ್ಳುತ್ತದೆ. ಬದುಕಿನ ಹಸಿ ಗೋಡೆಯ ಮೇಲೆ ಗೆಲುವಿನ ಹೊಸ ಚಿತ್ತಾರ ಬರೆಯುತ್ತದೆ.                     ************************************ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼ Read Post »

You cannot copy content of this page

Scroll to Top