ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಸ್ವಾಭಿಮಾನಿ

ಪುಟ್ಟ ಕಥೆ ಸ್ವಾಭಿಮಾನಿ ಮಾಧುರಿ ಕೃಷ್ಣ ಸಂಬಂಧಿ ಮಹಿಳೆ…ಹನ್ನೆರಡಕ್ಕೆ ಮದುವೆಯಾಗಿತ್ತು. ಎಲ್ಲರೂ ಮೊದಲ ಮಗುವಿನ ಬರವಿನಲ್ಲಿದ್ದರೆ ಅಪ್ಪನಾಗುವವನು ಮಾಯ ! ಕಷ್ಟಪಟ್ಟು ಹುಡುಕಿ ಹುಡುಕಿ ಕರೆ ತರುತ್ತಿದ್ದರು.ಮೂರು ಮಕ್ಕಳಾದ ಮೇಲೆ ತಿಳಿವು ಬಂದದ್ದು ಇನ್ನೂ ಇಪ್ಪತ್ತರ ಗಡಿಯಲ್ಲೇ ಇದ್ದ ಯುವತಿ ಹೆಂಡತಿಗೆ. ಬಗಲಲ್ಲೆರಡು ಸೀರೆ ತುರುಕಿಕೊಂಡು ಕಾದೇ ಕಾದಳು. ಐದು ತಿಂಗಳ ಮೊಲೆಹಾಲು ಕುಡಿಯುತ್ತಿದ್ದ ಮಗುವನ್ನು ಕೆಳಗಿಳಿಸಿ ಸದ್ದಿಲ್ಲದೆ ಅಪರರಾತ್ರಿಯಲ್ಲಿ ಗಂಡನ ಹಿಂದೆ ಹೋದಳು.ಟಿಕೇಟು ಕೇಳಿದಾಗ ಮುಂದೆ ಮುದುಡಿ ಕುಳಿತ ಗಂಡನೆಡೆ ಕೈ ಮಾಡಿದಳು. ದೂರದ ತಮಿಳುನಾಡಿನಲ್ಲಿ ರೈಲಿಳಿದಾಗ ಗಂಡನನ್ನು ಗಲ್ಲಾದಲ್ಲಿ ಕೂರಿಸಿ ತಾನು ಕಾಫಿ ತಿಂಡಿ ಊಟ ತಯಾರಿಸುತ್ತ ಮೂರು ವರ್ಷಗಳ ಮೇಲೆ ಮಕ್ಕಳನ್ನು ಕರೆಸಿ ಕೊಂಡಳು. ಕೆಲವೇ ವರ್ಷಗಳಲ್ಲಿ ಒಬ್ಬ ಮಗ ಹೋಟೆಲ್ ಉದ್ಯಮಿ ಇನ್ನೊಬ್ಬ ಡಾಕ್ಟರ್ ,ಮತ್ತೊಬ್ಬ ಆಡಿಟರ್ …ಕೊನೆಯವಳಾಗಿ ಹುಟ್ಟಿದ ಮಗಳು ಕಾಲೇಜು ಪ್ರಾಧ್ಯಾಪಕಿ….. ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಕೊಂಡು ಬಿದ್ದಿದ್ದಾಳೆ. ತೊಂಭತ್ತರಲ್ಲಿರುವ ಆ ವೃದ್ಧೆ ಸ್ವಾಭಿಮಾನಿಯಾಗಿಯೇ ಉಳಿದಿದ್ದಾಳೆ. ಮಠವೊಂದರ ಲಿಫ್ಟ್ ನಲ್ಲಿ ಹತ್ತಿ ಮೇಲೇರಲು ಕೈ ಆಸರೆ ಸ್ವೀಕರಿಸಿದವಳು ಲಿಫ್ಟ್ ಐದನೇ ಮಹಡಿಯಲ್ಲಿ ನಿಂತ ಕ್ಷಣವೇ ಕೊಡವಿಕೊಂಡು ಊದಿಕೊಂಡಿದ್ದರೂ ಸ್ವಂತ ಕಾಲುಗಳಿಂದಲೇ ಮುಂದೆ ಮುಂದೆ ನಡೆದದ್ದು ಅಚ್ಚರಿ ಅಭಿಮಾನದಿಂದ ನೋಡುತ್ತಲೇ ಆಕೆಯ ಹಿಂದೆ ದೇವತಾಕಾರ್ಯ ನಡೆಯುವಲ್ಲಿಗೆ ನಾನೂ ಒಳ ಹೊಕ್ಕೆ. ಸಂಗಾತಿ. ಕಾಮ್ ನಲ್ಲಿ ಕವಯಿತ್ರಿ ವಿಶಾಲಾ ಆರಾಧ್ಯರ ‘ಬುದ್ಧನೊಂದಿಗೊಂದು ದಿನ’ ಕವಿತೆ ಓದಿದೆ…ಯಾರೂ ಕೇಳದೊಂದು ಪ್ರಶ್ನೆ ಅವರು ಗೌತಮ ಬುದ್ಧನಿಗೆ ಕೇಳಿದ್ದರು…’ ಆ ರಾತ್ರಿ ಯಶೋಧರೆಯೂ ನಿನ್ನನ್ನು  ಹಿಂಬಾಲಿಸಿ ಬಂದಿದ್ದರೆ ಏನಾಗುತಿತ್ತು ?.’ಏನೂ ಆಗಬಹುತಿತ್ತಲ್ಲವೇ ,ನನ್ನ ಕಣ್ಮುಂದೆ ಈ ಸಂಬಂಧಿ ಬಂದೇ ಬಂದು ನಿಂತಳು. ***************************************************

ಸ್ವಾಭಿಮಾನಿ Read Post »

ಕಾವ್ಯಯಾನ

ಶ್…. ! ನಿಶ್ಯಬ್ದವಾಗಿರಿ ನೀವು

ಕವಿತೆ ಶ್…. ! ನಿಶ್ಯಬ್ದವಾಗಿರಿ ನೀವು ತೇಜಾವತಿಹೆಚ್.ಡಿ. ಅದೇ ದಾರಿಯಲ್ಲಿನಿತ್ಯ ಪ್ರಯಾಣಿಸುತ್ತಿದ್ದೆನನ್ನದೇ ಲಹರಿಯಲ್ಲಿಐಹಿಕದ ಜಂಜಾಟದಲ್ಲಿಮನಸ್ಸಿನ ಹೊಯ್ದಾಟದಲ್ಲಿ ನಿಗೂಢ ಬದುಕ ಬಯಲಿನಲ್ಲಿಎಲ್ಲವೂ ಬೆತ್ತಲೆನಮ್ಮದೇನಿದೆ ಇಲ್ಲಿ,? ಆಗೋ.. ಅಲ್ಲಿ ಗೋಚರಿಸುತ್ತಿದೆಪ್ರಶಾಂತ ನೀರವ ತಾಣ…ಇಲ್ಲೇ ಹಿತವೆನಿಸುತ್ತದೆ ನನಗೆ ಶ್……! ನಿಶ್ಯಬ್ದವಾಗಿರಿ ನೀವುಎಚ್ಚರಗೊಂಡಾರು ಮತ್ತೆ ಇದ್ದಾಗಹಾಸಿಗೆ ಹೊದಿಕೆಯಿಲ್ಲದೆ ನಲುಗಿದ ಜನರುಬೆಚ್ಚಗೆ ಮಲಗಿಹರಿಲ್ಲಿಮಣ್ಣಿನ ಪದರಗಲಾಗಿ! ಅಹಮ್ಮಿನ ಕೋಟೆಯೊಳಗೆಅಹಂಕಾರದಿಂದ ಮೆರೆದವರೆಲ್ಲಾಮಣ್ಣುಸೇರಿ ಗೆದ್ದಲಿಡಿದಿಹರಿಲ್ಲಿ.. ! ತಾನು ತಾನೆಂದು ತನ್ನವರ ಸ್ವಾರ್ಥಕ್ಕಾಗಿಕಚ್ಚಾಡಿದವರೆಲ್ಲಾಏಕಾಂಗಿಯಾಗಿ ಕೊಳೆಯುತಿಹರಿಲ್ಲಿ.. ! ಕ್ಷಣಿಕ ಬಾಳಲಿ ವಿಶ್ವ ಗೆಲ್ಲುವಶಾಶ್ವತ ಕನಸು ಕಂಡುನನಸಾಗದೇ ಉಳಿದುಕನವರಿಸಿ ನರಳಿವಸ್ತಿ ಮಾಡಿಹರಿಲ್ಲಿ.. ! ಸೂರ್ಯನ ರಶ್ಮಿ ತಾಕದ ಕಾಯಗಳುಹಸಿವು ಚಳಿ ಮಳೆ ಗಾಳಿಯ ಹಂಗಿಲ್ಲದೆಪಂಚಭೂತಗಳನ್ನು ಸೇರಿಹರಿಲ್ಲಿ.. ! ಹೆಸರಿಗಾಗಿ ಹಾರಾಡಿಹೆಸರಿಲ್ಲದೇ ಅಳಿದುಕೊನೆಗೆ…ಆರಡಿ ಮೂರಡಿಯಲಿಫಲಕವ ಹಾಕಿಸಿಕೊಂಡಿಹರಿಲ್ಲಿ..! ಧರ್ಮ -ಅಧರ್ಮಗಳಾಚೆಮನುಷ್ಯನೇ ರೂಪಿಸಿಕೊಂಡನೀತಿ – ನಿಯಮಗಳಾಚೆಎಲ್ಲರೂ ಒಂದಾಗಿ ಬೆರೆತಿಹರಿಲ್ಲಿನಿಸರ್ಗದ ನಿಜ ಸೂತ್ರದ ಸ್ಮಶಾನದ ಗೋರಿಗಳಲ್ಲಿ….. ! ಶ್….! ಶಬ್ದ ಮಾಡದಿರಿ ನೀವು..ಎಚ್ಚರಗೊಂಡಾರು ಮತ್ತೆ….! *******************************

ಶ್…. ! ನಿಶ್ಯಬ್ದವಾಗಿರಿ ನೀವು Read Post »

ಕಾವ್ಯಯಾನ

ಭವದ ಭಾವಸೇತು

ಕವಿತೆ ಭವದ ಭಾವಸೇತು ನಾಗರೇಖಾ ಗಾಂವಕರ್ ಮನದೊಡಲ ಕಡಲಪ್ರಕ್ಷುಬ್ಧ ಸುಳಿಗಳುಮುತ್ತಿಕ್ಕುವ ಅಲೆಗಳಾಗುತ್ತವೆ,ಆ ಪ್ರೀತಿಗೆ ಯಮುನೆ ತಟದಿ ಕೂತಹೂತ ಕಾಲಿನ ಆಕೆಮುರುಳಿಯಲಿ ಬೆರೆತಉಸಿರ ತೇಕುತ್ತಾಕಣ್ಣ ಬೆಳಕನ್ನೆ ಹಾಸಿಭಾವ ಸೇತುವಿನ ನಾಡಿ ಹಿಡಿದುಭವದ ನೆರಳಿಗೆ ಹಂಬಲಿಸುತ್ತಾಳೆ. ಯಾವ ರಾಗವದು, ಬೆಸೆದದ್ದುಒಪ್ಪುತಪ್ಮ್ಪಗಳ ಭಿನ್ನಸಹಮತಗಳ ನಡುವೆಸಂಕಲಿಸಿ ಹೃದಯಗಳ ಬೆಸುಗೆ ಹೊನಲು ಬೆಳಕಿನ ಕೂಡಮಂದ್ರಸ್ಥಾಯಿಯ ನುಡಿಸಿಅಗೋಚರದ ಮಹಲಿನಲಿಮುಕ್ತಿ ಮಂಟಪವಿಟ್ಟುರಾಗದ್ವೇಷದ ಬೆಂಕಿಯನುತಣ್ಣಗಾಗಿಸಿ ಪರವತೋರುತ್ತಾನೆ ಪ್ರೀತಿಯಲಿ ಮುಳುಗುವ ಹರಿಗೋಲುತೂತುಗಳ ಹೊದ್ದ ಬರಿದುಜೀವದ ಗೋಳು.ಅಲ್ಲೂ ಪಯಣದ ಹಂಬಲದಮುಗಿಯದಾ ಬದುಕಪ್ರೀತಿಯ ಪಾಡುಹಾಡುತ್ತಾನೆ ಪ್ರೀತಿಸುವುದೆಂದರೆಆತ್ಮಕ್ಕೆ ಆತ್ಮವೇ ಆಗಿನಿಲುಕದ ನೆಲೆಯಲ್ಲೂಆಲಿಂಗನದ ಕನಸ ಹೊತ್ತುಸಾಗುವುದು,ಎಂದವನ ಪ್ರೀತಿಯರಾಧೆಯಾಗುವುದೆಂದರೆ ಅವನ ಪರವಶತೆಗೆತನ್ನೆಲ್ಲವನ್ನೂ ಮರೆತುಬಿಡುವುದು.ನಾಗರೇಖಾ ಗಾಂವಕರ *****************************

ಭವದ ಭಾವಸೇತು Read Post »

ಪುಸ್ತಕ ಸಂಗಾತಿ

ಸೌಗಂಧಿಕಾ

ಪುಸ್ತಕಪರಿಚಯ ಸೌಗಂಧಿಕಾ ನನಗೆ ಪ್ರವಾಸ ಮಾಡುವಾಗ ಪುಸ್ತಕದ ಪುಟಗಳನ್ನ ತೆರೆದು ಸವಿಯುವುದೆಂದರೇ ತಾಯಿ ತುತ್ತು ಮಾಡಿ ಬಾಯಿಗೆ ಹಾಕುವಾಗ ಸಿಗುವ ಸುಖದಷ್ಟೇ ನನಗೆ ಆನಂದ. “ಸೌಗಂಧಿಕಾ” ಕವನ ಸಂಕಲನ ನನ್ನ ಕೈ ಸೇರಿ ಸುಮಾರು ಆರೇಳು ತಿಂಗಳು ಕಳಿಯಿತೇನೋ ಆದರೆ ಎರಡು ಮೂರು ಬಾರಿ ಸವಿದರೂ ಕವನಸಂಕಲನದ ಜನಕಿಗೆ ನನ್ನ ಮನದಾಳದ ನುಡಿಗಳನ್ನ ಹೇಳಲು ಇಷ್ಟು ದಿನ ಬೇಕಾಯಿತು. ಎರಡು ದಿನದ ಹಿಂದೆ ಕೊಚ್ಚಿಗೆ ಪ್ರಯಾಣ ಮಾಡುವಾಗ ಮನದಲಿ ಬೇಸರದ ಛಾಯೆಯೇ ಆವರಿಸಿಕೊಂಡಿತು. ಈ ಬೇಸರವನ್ನ ದೂರಮಾಡಿದ್ದು ಮಾತ್ರ ಕವಯತ್ರಿ ವಿಶಾಲ ಆರಾಧ್ಯರವರಿಂದ ರಚಿತವಾದ “ಸೌಗಂಧಿಕಾ” ಕವನಸಂಕಲನ. ಹೌದು ಈ ಕವನಸಂಕಲನವನ್ನ ಪಕ್ಕದಲಿದ್ದ ನನ್ನ ಜೋಳಿಗೆಯಿಂದ ತೆಗೆದು ಮತ್ತೆ ಸವಿದೆ , ಸುಮಾರು ಐವತ್ತಾರು ಕವನಗಳನ್ನ ಒಳಗೊಂಡು ಓದುಗರಿಗೆ ಉತ್ತೇಜನಕಾರಿಯಾಗಿದೆ. ಕವಯಿತ್ರಿ ಯವರು ಇಂತಹ ಸಾಹಿತ್ಯ ರಚಿಸಿದ್ದಾರೆ ಎಂದರೇ ಇವರ ತಪಸ್ಸಿನ ಶಕ್ತಿಯೇ ಕಾರಣ. ಸ್ಪೂರ್ತಿ ತುಂಬುವ ಅಮೃತದ ಬಳ್ಳಿಗಳು ಪ್ರತಿ ಕವನಗಳಲ್ಲಿ ಇರುವುದನ್ನ ನಾ ಕಂಡು ಮೂಕನಾದೆ. ಯಾವುದೇ ಒಂದು ಕವನಸಂಕಲನವನ್ನ ಸವಿಯುವಾಗಓದುಗ ಮೊದಲು ನೋಡುವುದು ಕವಯತ್ರಿರವರು ಬಳಸಿರುವ ಪದಭಂಡಾರವನ್ನ , ಕವನಸಂಕಲನದೊಳಗಿನ ಸಂದೇಶಗಳನ್ನ , ಪ್ರತಿ ಕವನಗಳ ಶೀರ್ಷಿಕೆಯನ್ನ, ಇಷ್ಟೆಲ್ಲವನ್ನ ಮೆಲಕು ಹಾಕುತ್ತಲೇ ಕವಯತ್ರಿಯವರ ಚಿಂತನೆಗಳಡೆಗೆ ಓದುಗ ಒಂದು ಪಕ್ಷಿ ನೋಟವನ್ನ ಹರಿಸದೇ ಬಿಡಲಾರ . ಸಾಮಾನ್ಯ ಓದುಗನಾದ ನಾನು ಕೂಡ ಇದನ್ನ ಪಾಲಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ನನ್ನ ಭಾವನೆ . ವಿಶಾಲ ಆರಾಧ್ಯರವರು ಆದರ್ಶಶಿಕ್ಷಕಿ . ಬಾಲ್ಯದಿಂದಲೇ ಸಾಹಿತ್ಯದ ಗೀಳು ಅಂಟಿಸಿಕೊಂಡಿರುವ ಇವರು ಈ ಕರುನಾಡಿಗೆ ಅತ್ಯುನ್ನತ ಸಂದೇಶಗಳನ್ನ ರವಾನೆ ಮಾಡುವಂತಹ ಒಂದು ಕೃತಿಯನ್ನ ಹೊರತಂದಿರುವುದು ಇವರಿಗಿರುವ ಸಾಹಿತ್ಯ ಪ್ರೀತಿಯೇ ಕಾರಣ ಎನ್ನಬಹುದು. ಸಂಘಟಕಿ, ಸಾಹಿತ್ಯ ಆರಾಧಕಿ, ಗಾಯಕಿ, ಸರಳ ವ್ಯಕ್ತಿತ್ವದ ಆದರ್ಶ ಕವಯತ್ರಿಯ ಪುಸ್ತಕದ ಬಗ್ಗೆ ಎರಡು ಸಾಲು ಬರೆಯಲು ನಾ ಅರ್ಹನೋ ಅಥವಾ ಅನರ್ಹನೋ ಎಂಬ ಭಾವ ಇದೀಗ ನನ್ನನ್ನ ಕಾಡುತಿದೆ. ಕಾರಣ ಈ ಕವನಸಂಕಲನವನ್ನ ಭೇದಿಸುತ್ತ ಹೋದಂತೆ ಓದುಗನಿಗೆ ಹಲವು ರೀತಿಯ ಕಿರಣಗಳು ಗೋಚರಿಸುತ್ತವೆ . ಡಾ. ಮನು ಬಳಿಗಾರ್ ರವರ “ಹಾರೈಕೆ,” ಶೂದ್ರಶ್ರೀನಿವಾಸ್ ರವರ “ಮುನ್ನುಡಿ,” ಎಂ.ಜಿ.ದೇಶಪಾಂಡೆಯವರ “ನಲ್ನುಡಿ” , ಉದಯ್ ಧರ್ಮಸ್ಥಳರವರ “ಚೆನ್ನುಡಿ ” ಹಾಗೂ ಹಲವಾರು ಕವಿಗಳ ಅಭಿಪ್ರಾಯಗಳು , ಶುಭಕೋರಿರುವ ಆತ್ಮೀಯ ಬಳಗ ಹೀಗೆ ವಿಭಿನ್ನತೆಯಿಂದ ಈ ಪುಸ್ತಕ ಹೊರಬಂದಿರುವುದು ನೋಡಿದರೆ ಕವಯತ್ರಿಯವರಿಗೆ ಬೆನ್ನುಲುಬಾಗಿ ನಿಂತ ಬಳಗವನ್ನ ಮರೆತಿಲ್ಲ . ಇವರ ಈ ಆದರ್ಶ ನಡೆಯೇ ಇಂದು ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನ ಹೊಂದಲು ಕಾರಣವೂ ಇರಬಹುದು. ಪುಸ್ತಕದ ಬಿಡುಗಡೆಗೆ ನನಗೆ ಅಹ್ವಾನ ನೀಡಿದ್ದರು ಆದರೆ ಕಾರಣಾಂತರಗಳಿಂದ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಇದೀಗ ಕವನ ಸಂಕಲನದ ಒಳನೋಟದತ್ತ ಸಾಗುತಿದ್ದೇನೆ … ಕವಯತ್ರಿರವರ ಹೆಸರಿಗೆ ತಕ್ಕಂತೆ ಕವನಸಂಕಲನದ ಪ್ರತಿ ಕವನಗಳು ಕೂಡ ವಿಶಾಲವಾಗಿಯೇ ಇವೆ. ನಾನಾ ದೃಷ್ಟಿಕೋನಗಳಿಂದ ನೋಡಿದರೂ ಸ್ವಚ್ಚತೆ ಎದ್ದು ಕಾಣುತ್ತಿದೆ. ಪದಗಳ ಜಾಡಿನೊಳಗೆ ಹೋದರೆ ಚಿಂತನೆಯತ್ತ ಕೊಂಡೋಯ್ಯುವ ಶಕ್ತಿ ಪ್ರತಿ ಕವನಗಳಲ್ಲಿಯೂ ಇದೆ. ವಿಶಾಲ ಆರಾಧ್ಯರವರು ಪದಬ್ರಹ್ಮನಿಂದ ವರವಾಗಿ ಲೇಖನಿಯನ್ನ ಪಡೆದಿರಬಹುದೇ ? ಖಂಡಿತ ಹೌದು. . ಬಳಸಿರುವ ಪದಗಳಂತು ಮುಗಿಲು ಮುಟ್ಟಿವೆ. ಯಾವುದೇ ಕವನಗಳಲ್ಲಿ ಭಾವಗಳಿಗೆ ಕೊರತೆಯಿಲ್ಲ. ಸಂದೇಶ ಸಾರುವಲ್ಲಿ ಪ್ರತಿ ಪದ್ಯಗಳು ಸಫಲತೆ ಕಂಡಿವೆ. ನಾಡುನುಡಿ, ಹೆಣ್ಣಿನ ಆಕ್ರಂಧನ, ವಿರಹ, ಶೃಂಗಾರ , ಸಾಮಾಜಿಕ ,ಕೌಟುಂಬಿಕ, ಹಾಗೂ ಕೆಲವು ವಚನಗಳಂತೆಯೇ ಸಂದೇಶ ಬೀರುವ ಪದ್ಯಗಳು , ಮತ್ತೆ ಕೆಲವು ಪುರಾಣ ಕಾಲದ ಕವಿಗಳು ರಚಿಸುತ್ತಿದ್ದ ಸಾಹಿತ್ಯದಂತೆ, ಇನ್ನೂ ಕೆಲವೂ ಈ ಸಮಾಜದ ಆಗುಹೋಗುಗಳ ಬಗ್ಗೆ ,ಹಾಗೂ ಭವಿಷ್ಯದ ದೃಷ್ಟಿಯಿಂದ ರಂಜಕಾಂಶಗಳನ್ನೇ ಹೊತ್ತು ಸಂದೇಶ ಸಾರುತ್ತಿರುವ ಉತ್ತಮ ಶೀರ್ಷಿಕೆಯುಳ್ಳ ಪದ್ಯಗಳು …. ಇಷ್ಟೆಲ್ಲವನ್ನ ಒಂದೇ ಕವನಸಂಕಲನದೊಳಗೆ ತುಂಬಿರುವ ಚಾಣಾಕ್ಷತನಕ್ಕೆ ಕವಯತ್ರಿಯವರಿಗೆ ನಮನಗಳನ್ನ ಅರ್ಪಿಸಲೇ ಬೇಕು. ಹೃದಯದ ಗೂಡೊಳಗುಟ್ಟುವ…. ಚಿತ್ತದಲಿ ಚಿತ್ತಾಪಹಾರಕಗಳು…..ರವಿಜಾರಿ ಶಶಿ ಮೂಡಿ….ಕರಿ ಇರುಳ ಕತ್ತಲೆಯೊಳಗೆ …ಕರುಳ ಕಡಿವ ಕೊರತೆಗಳಿಗೆ ….ಗರ್ಭ ಗುಡಿಯಲ್ಲೇ ಪ್ರೀತಿ ಎರೆದವಳು ಹೆಣ್ಣು.ಉಬ್ಬಿದುದರವ ಸ್ಪರ್ಶಿಸಿ ಉಬ್ಬಿದವಳು…… . ಹೀಗೆ ಪ್ರತಿ ಪದ್ಯಗಳಲ್ಲಿ ಉನ್ನತ ಮಟ್ಟದ ಭಾವ ಝೇಂಕರಿಸುವ ಸಾಲುಗಳಿಗೆ ಜನ್ಮ ನೀಡಿ , ಕ್ರೋಡೀಕರಿಸಿ ಕವನ ಕಟ್ಟುವುದು ಸುಲಭದ ಕೆಲಸವಲ್ಲ.. ಈ ಕವನಸಂಕಲನವನ್ನ ಒಮ್ಮೆ ಸವಿದರೇ ಸವಿಯುತ್ತಿರಲೇ ಬೇಕೆನಿಸುತ್ತದೆ. ಓದುಗನಿಗೆ ಆರೋಗ್ಯಕರ ಔಷಧಿ ಈ ಕವನಸಂಕಲನ ಎಂದರೂ ತಪ್ಪಾಗಲಾರದು. ಇದೀಗ ವಿಶಾಲ ಆರಾಧ್ಯರವರು ಎರಡನೇ ಕೃತಿಯನ್ನ ಬಿಡುಗಡೆ ಗೊಳಿಸಲು ಸಜ್ಜಾಗಿದ್ದಾರೆ , ಇವರ ಈ ಕೃತಿಯೂ ಸೌಗಂಧಿಕಾ ಕೃತಿಯಂತೆ ರಾಜ್ಯಾದ್ಯಂತ ಹೆಸರುವಾಸಿಯಾಗಲಿ ಎಂದು ಮನದಾಳದಿಂದ ಹಾರೈಸುವೆ. ಒಟ್ಟಿನಲ್ಲಿ ಈ ಕವನಸಂಕಲನದೊಳಗೆ ಹಲವಾರು ಯುವ ಸಾಹಿತಿಗಳಿಗೆ ಅವಕಾಶ ನೀಡಿ ಮನದಲಿ ಯಾವುದೇ ರೀತಿಯ ಸ್ವಾರ್ಥ ಇಲ್ಲ ಎಂಬ ಸಂದೇಶವನ್ನ ಈ ಕರುನಾಡಿಗೆ ಸಾರಿದ್ದಾರೆ . ಮುಖಪುಟದ ನನ್ನ ಆತ್ಮೀಯ , ಲೇಖಕರಾದ, ವಿವೇಕಾನಂದ ಸರ್, ಕವಿಗಳಾದ ರಾಮಚಂದ್ರ ಸಾಗರ್, ಸರಸ್ವತಿ ಪುತ್ರಿ ಅಕ್ಕಮಹಾದೇವಿ ಹಾರೋಗೇರಿ ಇವರೆಲ್ಲರ ಅಭಿಪ್ರಾಯಗಳು ಪುಸ್ತಕದೊಳಗೆ ಮುದ್ರೆಯಾಗಿವೆ. ಪುಸ್ತಕದ ವಿನ್ಯಾಸವೂ ಕೂಡ ಅದ್ಬುತ. ವಿಶಾಲ ಆರಾಧ್ಯರವರು ಈ ನಾಡಿಗೆ ಸಿಕ್ಕಿರುವ ನಕ್ಷತ್ರ . ಸಾಹಿತ್ಯ ಲೋಕದಲ್ಲಿ ಇದೇ ರೀತಿ ಸರಳ ವ್ಯಕ್ತಿತ್ವವನ್ನ ರೂಡಿಸಿಕೊಂಡು ಸಾಗುವ ಯಾರೇ ಆಗಿರಲಿ ಸಾಹಿತ್ಯ ಲೋಕ ಬಹುಬೇಗ ಅಪ್ಪಿಬಿಡವುದು. ಇದಕ್ಕೆ ತಕ್ಕ ಉದಾಹರಣೆ ಎಂದರೇ ಸರಸ್ವತಿ ಪುತ್ರಿ, ಅಕ್ಷರ ಮಾಂತ್ರಕಿ, ಅಕ್ಷರ ರಾಕ್ಷಸಿ, ಚಿಂತಕಿ ,ವಿಶಾಲ ಆರಾಧ್ಯರವರು ಎಂದು ಹೇಳಲು ಇಚ್ಚಿಸುತ್ತೇನೆ . ********************************************** ಕಲಿರಾಜ್ ಹುಣಸೂರು.

ಸೌಗಂಧಿಕಾ Read Post »

ಕಾವ್ಯಯಾನ

ಗುಪ್ತಗಾಮಿನಿ

ಕವಿತೆ ಗುಪ್ತಗಾಮಿನಿ ಮಮತಾ ಶಂಕರ ಇಲ್ಲಿ ಹುಟ್ಟಿದ ಮೇಲೆನಾವು ಇಲ್ಲಿನ ಕೆಲವುಅಲಿಖಿತ ಆದೇಶಗಳ ಪಾಲಿಸಲೇಬೇಕಾಗುತ್ತದೆ ಯಾರೋ ಅಜ್ನಾತ ಕ್ರೂರಿಗಳ ಕೈಗೆ ಸಿಕ್ಕುನಾವು ನಲುಗಬಹುದೆಂಬ ಒಣ ಗುಮಾನಿಯಿಂದತಮ್ಮ ಕರುಣಾಳು ಕೈಯಿಂದ ನಮ್ಮನ್ನು ರಕ್ಷಿಸುತ್ತೇವೆಂದುಮುಸುಕಲ್ಲಿ ಮುಚ್ಚಿಟ್ಟು ಕಾಪಿಡುತ್ತಾರೆ….ಮತ್ತು ಪತಿ ಪಿತ ಸುತರಾದಿಯಾಗಿಅವರೆಲ್ಲಾ ನಮ್ಮನ್ನು ಪೊರೆಯುವವರೆಂದುಕರೆಯಲ್ಪಡುವವರಾಗಿ ನಮ್ಮನಡೆಯಲಾಗದ ನಿಶ್ಯಕ್ತ ಕಾಲುಗಳಾಗಿರುತ್ತಾರೆಹಾಗೆಯೇಇವರೆಲ್ಲಾ ಶೂರರೇ ಆಗಿರಬೇಕೆಂಬ ಕರಾರೇನಿರುವುದಿಲ್ಲ…. ಕೆಲವೊಮ್ಮೆ ನಾವುನಿರ್ವೀರ್ಯರ ನಿಷ್ಪಂದರ ಸುಪರ್ದಿಯಲ್ಲಿಸುಖಿಗಳೆಂದು ಜಗತ್ತಿಗೆ ತೋರಿಸುವಲ್ಲಿನೆಮ್ಮದಿಯ ಪಡೆದವರಾಗಿರುತ್ತೇವೆ…. ಹೇಗಿದೆ ನೋಡಿ….ಸುಳ್ಳಿನ ಪ್ರತಿಬಿಂಬವನ್ನು ಜಗತ್ತು ನಂಬುತ್ತದೆಅಷ್ಟೇಕೆ…..? ಪೋಷಿಸುತ್ತದೆ ಕೂಡ….. ಓ…… ಮಾಯೆ ಮುಸುಕಿದ ಜಗದ ಕಣ್ಣೇನಿನಗೆಂದೂ ಕಾಣದಸತ್ಯದ ಮುಖ ನಮ್ಮಂತರಂಗ…ಅಘೋಷಿತ ನಿಷೇಧಾಜ್ಞೆಗಳಲ್ಲಿಬದುಕುವ ನಾವುನಿಮ್ಮನ್ನು ದ್ವೇಷಿಸುತ್ತೇವೋ, ಪ್ರೀತಿಸುತ್ತೇವೋಅಥವಾ ಕ್ಷಮಾಕರಗಳಿಂದ ನಿಮ್ಮನ್ನಪ್ಪಿದೇವರಾಗಿರುತ್ತೇವೋ…….ನಮಗೇ ಗೊತ್ತು….ನೀವೇನ ಬಲ್ಲಿರಿ……..? ****************************************

ಗುಪ್ತಗಾಮಿನಿ Read Post »

ಕಾವ್ಯಯಾನ

ಸವಿ ಬೆಳದಿಂಗಳು

ಕವಿತೆ ಸವಿ ಬೆಳದಿಂಗಳು ರಾಘವೇಂದ್ರ ದೇಶಪಾಂಡೆ ಈ ಸಂಜೆ, ಈ ಒಂಟಿತನಸಾಕ್ಷಿಯಾಗುತಿದೆ ಆಕಾಶದಿನದ ವಿದಾಯಕೆಸಂಜೆ ಸಮೀಪಿಸುತ್ತಿದ್ದಂತೆನೆನಪಾದೆ ನೀ ನನ್ನಲಿ…ಗಾಳಿಯಲ್ಲಿ ತೇಲಿ ಬರುತಿದೆಸುವಾಸನೆಯೊಂದು ಅಪರಿಚಿತವಾಗಿಕೆಲವೊಮ್ಮೆ ಪರಿಚಿತವಾಗಿಯೂಹೇಳುವುದು ಕಥೆಯನ್ನು ಒಮ್ಮೊಮ್ಮೆಕೇಳಲು ಪ್ರಯತ್ನಿಸುವೆನೆನಪಾದೆ ನೀನಾಗಆಗಸದಿ ಚಂದ್ರ ಇಳಿದು ಬರುತಿರುವಾಗಹುಡುಕಿಕೊಂಡು ಬಂದನೇ ಚಂದ್ರಆಕಾಶದಲ್ಲಿ ಯಾರನ್ನಾದರೂ …! ತಿಳಿದುಕೊಳ್ಳಲು ಬಯಸುವೆನುಚಂದ್ರನ ಬಗ್ಗೆ ಯಾರಲ್ಲಾದರುನೆನಪಾದೆ ನೀನಾಗಪಸರಿಸುವ ಸುಗಂಧದಲ್ಲಿಆಸ್ವಾದಿಸುವೆ ತಂಗಾಳಿಯಲಿ ನಿನ್ನನು…ಕರೆಯುವರಾರೊ ಮೆದುಧ್ವನಿಯಲಿಬೆಳದಿಂಗಳ ಹೆಸರಿನಲಿನಿರ್ಮಿಸುತಿರುವೆ ಮೆಟ್ಟಿಲುಗಳಏರಿ ಬೆಳದಿಂಗಳ ಸವಿಯಲು.ಪ್ರಯತ್ನಿಸುತ್ತೇನೆ ಏರಲುನೆನಪಿಸಿಕೊಂಡು ನಿನ್ನನುಕೇವಲ‌ ನಿನಗಾಗಿ ಮಾತ್ರವೇ …! *****************************************

ಸವಿ ಬೆಳದಿಂಗಳು Read Post »

ಆರೋಗ್ಯ, ಇತರೆ

ಟೆಲಿಮೆಡಿಸನ್-

ಲೇಖನ ಟೆಲಿಮೆಡಿಸನ್- ದೂರವಾಣಿಯಮೂಲಕತಲುಪಿಸುವಸಹಾಯವಾಣಿ ಡಾ.ವಿಜಯಲಕ್ಚ್ಮೀಪುರೋಹಿತ್ ದೂರವಾಣಿಯಮೂಲಕವೇರೋಗಿಯ/ ರೋಗದಅವಸ್ಥೆತಿಳಿದುಕೊಂಡುಸೂಕ್ತಸಲಹೆ, ಸಂಶಯಪರಿಹಾರ, ಪಥ್ಯಪಾಲನೆ, ಔಷಧಿ, ಉಪಚಾರಕ್ರಮ, ಮನೋಸ್ಥೈರ್ಯಬೆಳೆಸುವದು,ಅವಶ್ಯಕತೆಇದ್ದಲ್ಲಿಅಂಬುಲನ್ಸವ್ಯವಸ್ಥೆಕಲ್ಪಿಸುವದು, ರೋಗಿಯನ್ನಸೂಕ್ತವಾದಆಸ್ಪತ್ರೆಗೆಸೇರಿಸುವದುಇತ್ಯಾದಿಸೇವೆಗಳನ್ನುಬರೀದೂರವಾಣಿಸಂಭಾಷಣೆಯಮೂಲಕಒದಗಿಸುವಮಹತ್ವದಕಾರ್ಯವನ್ನುಈಟೆಲಿಮೆಡಿಸಿನ್ಸೇವೆಯಮೂಲಕಮಾಡಲಾಗುತ್ತದೆ. ಕೋವಿಡ 19 , ಇದುಕೊರೊನಾಎಂಬವೈರಸ್ಮುಖಾಂತರಮನುಕುಲಕ್ಕೆಬಂದುತೊಂದರೆಉಂಟುಮಾಡಿದಹೊಸಕಾಯಿಲೆ . ಕಣ್ಣು, ಮೂಗುಬಾಯಿಯಮೂಲಕಮಾನವದೇಹವನ್ನುಸೇರುವಈವೈರಾಣುಗಂಟಲಪ್ರವೇಶಿಸಿಅಲ್ಲಿಂದlungs ಪುಪ್ಪುಸದಕಾರ್ಯಕ್ಷಮತೆಯನ್ನುತಗ್ಗಿಸುತ್ತಹೋಗುತ್ತದೆ. ಹಾಗೆಯೆಉಸಿರಾಟದತೊಂದರೆಗಂಭೀರವಾಗಬಹುದು, ಅಲ್ಲದೆಬೇರೆಅವಯವಗಳಿಗೂರೋಗಹರಡಿತೀವ್ರತೊಂದರೆಉಂಟಾಗಬಹುದುಒಮ್ಮೊಮ್ಮೆರೋಗಿಯುಸಾವನ್ನಪ್ಪಬಹುದು. ಇಂತಹವಿಷಮಪರಿಸ್ಥಿತಿಯಲ್ಲಿನಮ್ಮಕರ್ನಾಟಕಸರಕಾರವನ್ನುಅವರಶ್ಲಾಘನೀಯಕೆಲಸವನ್ನುನಾವೆಲ್ಲಮೆಚ್ಚಲೇಬೇಕು. “ಆಪ್ತಮಿತ್ರ“ಸಹಾಯವಾಣಿಸಂಪರ್ಕನಾಡಿನಎಲ್ಲಜನತೆಗೂಕಲ್ಪಿಸಿಕೋಟ್ಟಿದ್ದಾರೆ. ಈಸಹಾಯವಾಣಿಯುನಮ್ಮಮಾನ್ಯಮುಖ್ಯಮಂತ್ರಿಗಳಾದಶ್ರೀಯಡಿಯೂರಪ್ಪನವರು, ಆರೋಗ್ಯಇಲಾಖೆಯಮಂತ್ರಿಗಳುಅಲ್ಲದೇ disaster management team (ವಿಪತ್ತುನಿರ್ವಹಣೆತಂಡ.) ಮತ್ತುಕರ್ನಾಟಕದಆರೋಗ್ಯಹಾಗೂಕುಟುಂಬರಕ್ಷಣೆಯವರೂ ( karnataka health and family welfare)ಈಸಹಾಯವಾಣಿಯಸದುದ್ದೇಶದಲ್ಲಿಭಾಗವಹಿಸಿದ್ದಾರೆ. ನಮ್ಮಆಯುಷ್ಯಇಲಾಖೆಯ joint director dr sridhar ಅವರೂ commissionar _ಆದಶ್ರೀಮತಿ ಮೀನಾಕ್ಷಿನೇಗಿಅವರುಸೇರಿದಂತೆರೋಗದಹತೋಟಿಗೆಸರಿಯಾದಸಮಯಕ್ಕೆಇದನ್ನುಸಾರ್ವಜನಿಕಬಳಕೆಗೆಸಿಧ್ದಪಡಿಸಿದ್ದಾರೆ. ಅಲ್ಲದೇಈಡಿಜಿಟಲ್ಆ್ಯಾಪ( digital app) ಮಾಡುವಲ್ಲಿ(Infosys )ಇನಫೋಸಿಸ್ಸಂಸ್ಥೆಯವರಸಹಾಯಹಸ್ತವೂಇದೆ. CRM system  develop ಮಾಡಿದ್ದಾರೆ. ಇದೊಂದು toll free ನಂಬರಾಗಿರುತ್ತದೆ. ಯಾರುಬೇಕಾದರೂಈಸಹಾಯವಾಣಿಗೆಕರೆಮಾಡಬಹುದು.ಇದಕ್ಕೆಯಾವಶುಲ್ಕಇಲ್ಲ. ಕರ್ನಾಟಕದಯಾವದೇಊರು, ಹಳ್ಳಿಯಿಂದಕರೆಮಾಡಿತಮ್ಮಆರೋಗ್ಯದಬಗ್ಗೆತಿಳಿದುಕೊಳ್ಳಬಹುದು. ಇಡೀನಮ್ಮರಾಜ್ಯದಲ್ಲಿಇಂತಹ 6  ಕೇಂದ್ರಗಳಿದ್ದುಬೆಂಗಳೂರು, ಮೈಸೂರು,ಮಂಗಳೂರುಇತ್ಯಾದಿಕಡೆಗಳಲ್ಲಿಈಕೇಂದ್ರಗಳಿವೆ. ಈಕೋವಿಡ್ಕಾಯಿಲೆಗೆಸಂಬಂಧಿಸಿದಂತೆನಮ್ಮಆಪ್ತಮಿತ್ರವು 2 ಹಂತದಲ್ಲಿಕಾರ್ಯನಿರ್ವಹಿಸುತ್ತದೆ. ಇಲ್ಲಿಮುಖ್ಯವಾಗಿinfluenza like illness,( Ili) severe acute respiratory Illness  (Sari) ಈರೋಗದಹಂತಗಳನ್ನುತಿಳಿದುಸಕಾಲಕ್ಕೆಸೂಕ್ತಸಹಾಯಒದಗಿಸುವಲ್ಲಿಬಹಳಸಹಾಯಕಾರಿಆಗಿದೆ. ಹಾಗೂಬಹಳಷ್ಟುಜನರುಹೊರದೇಶದಿಂದಬಂದತಕ್ಷಣವೇಈ app download ಮಾಡಿಕೊಂಡುನಮನ್ನ್ನುಸಂಪರ್ಕಿಸಿದಉದಾಹರಣೆಗಳಿವೆ. ಮೊದಲನೆಯಹಂತದಲ್ಲಿರೋಗಿಯಬಗ್ಗೆಎಲ್ಲಮಾಹಿತಿಸಂಗ್ರಹಿಸಿರುತ್ತಾರೆ. ಅಂದರೆರೋಗಿಯಹೆಸರು, ವಯಸ್ಸು, ಊರು, ಮನೆವಿಳಾಸ,ಅವರಿಗಿರುವಲಕ್ಷಣಗಳು, ಎಷ್ಟುದಿನಗಳಿಂದಶುರುಆಗಿದೆ, ಈಸಧ್ಯದಲಕ್ಷಣಹೊರತುಪಡಿಸಿಮತ್ತೆಏನಾದರೂಕಾಯಿಲೆಆಂದರೆರಕ್ತದಒತ್ತಡ, ಸಕ್ಕರೆಕಾಯಿಲೆ, ಮೂತ್ರಜನಕಾಂಗಗಳರೋಗ, ಕಾನ್ಸರ, ಅಥವಾಅವರಿಗೆಈಗಾಗಲೇಕೊರೊನಾಸೋಂಕುತಗುಲಿದೆಯಾ,? ಅಥವಾಕೊವಿಡ್ಪೇಶಂಟರೋಗಿಗಳಸಂಪರ್ಕಕ್ಕೆಬಂದಿರುತ್ತ್ತಾರಾ?ಅವರವಾಸಸ್ಥಳಅಥವಾಕಚೇರಿಯಲ್ಲ್ಲಾಗಲಿ, ಕೊವಿಡ್ಪೇಶಂಟ್ಇದ್ದಾರಾಅವರಸಂಪರ್ಕಕ್ಕೆಬಂದಿದಾರಾ? ಮತ್ತೆಕೆಲವುಜಾಗಗಳು hot spot, containment zone ಗಳಾಗಿದ್ದುಅಲ್ಲಿಂದಏನಾದರೂಆವ್ಯಕ್ತಿಬಂದಿದ್ದಾರಾಇತ್ಯಾದಿಮಾಹಿತಿಇರುತ್ತದೆ. ಅಂದರೆರೋಗಿಯಎಲ್ಲಸವಿವರವಾದಮಾಹಿತಿ patients  detailed historyಇದ್ದಲ್ಲಿಅದನ್ನ್ಅವರುಮೊದಲನೇಹಂತದಲ್ಲಿಉಲ್ಲೇಖಿಸಿರುತ್ತ್ತಾರೆ. ಈಮೊದಲಹಂತದಲ್ಲಿನರ್ಸಿಂಗ ,nursingಫಾರ್ಮಾpharmaಹಾಗೂಆಯುಷ(ayush )Jr ವೈದ್ದರುಕಾರ್ಯನಿರ್ವಹಿಸುತ್ತಾರೆ. ಹಾಗೂಮೊದಲನೇಹಂತದವರುದಿನಾಲೂಒಮ್ಮೆಎಲ್ಲರೋಗಿಗಳಜೊತೆಮಾತನಾಡಿಅವರಆರೋಗ್ಯವಿಚಾರಿಸುತ್ತಾರೆ. ಏನಾದರೂಅವಶ್ಯವಿದ್ದಲ್ಲಿಮತ್ತೆಎರಡನೇಹಂತಕ್ಕೆಕಳಿಸುತ್ತಾರೆ. ಎರಡನೇಹಂತಕ್ಕೆಈವಿವರಗಳುಬಂದಾಗಅಲ್ಲಿಹೆಚ್ಚಾಗಿ30ವರ್ಷಅನುಭವೀವೈದ್ದರುಇಂಟಿಗ್ರೆಟೆಡಮೆಡಿಸಿನಓದಿದವೈದ್ಯಕೀಯವೃತ್ತಿಯವರುತಮ್ಮಸೇವೆಸಲ್ಲಿಸುತ್ತಾರೆ.ನಮಗೆಒಂದುಪೇಶಂಟ್ಬಂದತಕ್ಷಣನಮ್ಮಮೊಬೈಲಗೆಒಂದು sms ಮೆಸೆಜಕೂಡಬರುತ್ತ್ತದೆ. ಇಂತಹಹೆಸರಿನಪೇಷಂಟ್ನಿಮ್ಮಸೇವೆಗೆಕಾಯುತ್ತಿದ್ದಾರೆದಯವಿಟ್ಟುಕರೆಗೆಸ್ಪಂದಿಸಿಅಂತತಿಳಿಸಿರುತ್ತ್ದೆ.ನಾವುಎಸ್ಟುಬೇಗನಮ್ಮಿಂದಆಗುತ್ತದೊಅಂದರೆ ಒಂದು_5 ರಿಂದ10 ನಿಮಿಷದಒಳಗೆಆಕೇಸನ್ನುವಿಚಾರಣೆಗೆತೆಗೆದುಕೊಳ್ಳುತ್ತ್ತೆವೆ. ಮೊದಲನೇಹಂತದಲ್ಲಿಬಂದಮಾಹಿತಿಗಳನ್ನುಕೂಲಂಕುಷವಾಗಿಓದಿತಿಳಿದುಕೊಂಡುತಕ್ಷಣಪೇಶಂಟ್ಗೆನಾವುಆಪ್ತಮಿತ್ರಸಹಾಯವಾಣಿಯಮೂಲಕಫೋನ್ಮಾಡುತ್ತೆವೆ. ಆಗಪೇಸಂಟಗೆನಾವುಆಪ್ತಮಿತ್ರದಿಂದಡಾಕ್ಟರಕರೆಮಾಡುತ್ತ್ತಿದ್ದೆವೆ,ನಿಮ್ಮಸಮಸ್ಯೆಏನುಅಂತಕೇಳಿತಿಳಿದುಕೋಳ್ಳುತ್ತೆವೆ. ಆಗಅವರಲಕ್ಷಣ, ರೋಗದುಲ್ಬಣತೆಅಂದರೆ, ನೆಗಡಿಕೆಮ್ಮು, ಜ್ವರ,  ಮತ್ತಿನ್ನಿತರಲಕ್ಷಣಗಳಅವಸ್ಸ್ಥೆತಿಳಿದುಕೊಂಡುರೊಗಿಗೆಆವೇಳೆಯಲ್ಲಿಯಾವತರಹದಸೇವೆಯಅವಶ್ಯಕತೆಇದೆಎಂಬುದನ್ನುಪರೀಕ್ಷಿಸಿಅದಕ್ಕೆತಕ್ಕಂತೆ SMS message ಮೂಲಕಔಷಧಕಳಿಸಿಕೊಟ್ಟುಹೇಗೆಸೇವಿಸಬೇಕುಅಂತವಿವರಕೊಟ್ಟಿರುತ್ತದೆ . ಇನ್ನುಕೆಲವರಿಗೆರೋಗದಬಗ್ಗೆಸರಿಯಾದತಿಳುವಳಿಕೆಇಲ್ಲದೆವ್ರಥಾಗಾಬರಿಯಲ್ಲಿದ್ದುಮಾನಸಿಕಉದ್ವೇಗಕ್ಕೆಒಳಗಾಗಿರುತ್ತಾರೆ. ಅಂತಹರೋಗಿಗಳಿಗೆಸೂಕ್ತವಾದತಿಳುವಳಿಕೆ, counselling ಮಾಡಿಅವರಸಂಶಯಪರಿಹಾರಮಾಡಲಾಗುತ್ತದೆ . ಇನ್ನುಕೆಲವರಿಗೆಜ್ವರಸತತವಾಗಿಬರುತ್ತಿದ್ದುಅವರನ್ನುಅವರಮನೆಯಹತ್ತಿರದಜ್ವರಚಿಕಿತ್ಸಾಲಯ(fever clinic) ಗೆವಿಳಾಸವನ್ನುನಾವೇಕೊಟ್ಟುಕಳುಹಿಸುತ್ತೆವೆ. ಈ_app ತಯಾರುಮಾಡುವಾಗಲೇಕರ್ನಾಟಕದಎಲ್ಲಊರುಗಳಲ್ಲಿಜನರಿಗೆಅನಕೂಲವಾಗುವಂತೆfever clinic ಗಳವಿಳಾಸತಿಳಿಸುವವ್ಯವಸ್ಥೆಯನ್ನುಬಹಳಚೆನ್ನಾಗಿಕಲ್ಪಿಸಿಕೊಟ್ಟಿದೆ. ನಾವುಕೂಡನಮ್ಮ computer ನಲ್ಲಿನೊಡಿತತ್ಕ್ಷಣಕ್ಕೆಅದನ್ನುರೋಗಿಗೆಕೊಟ್ಡಾಗಆರೋಗಿಯುಸಕಾಲಕ್ಕೆfever clinin ತಲುಪಬಹುದು. ಅಲ್ಲಿಅವಶ್ಯಕತೆಇದ್ದಾಗ swab test ಮಾಡುತ್ತಾರೆ, ಇಲ್ಲವಾದಲ್ಲಿರೋಗಿಯನ್ನು physical exam ಮಾಡಿಅವರವರಲಕ್ಷಣಪ್ರಕಾರಔಷಧಿಸಲಹೆಮಾಡುತ್ತಾರೆ. ಅದೆಲ್ಲಶುಲ್ಕರಹಿತವಾದಪ್ರಕ್ರಿಯೆಗಳು. ಮತ್ತೆಕೆಲವುಸಂದರ್ಭಗಳಲ್ಲಿಉಸಿರಾಟದತೊಂದರೆ, ತೀವ್ರಜ್ವರಕೊವಿಡ್ಪಾಸಿಟಿವ್ಇದ್ದಾಗನಮ್ಮಕೊವಿಡ್ಅಂಬುಲನ್ಸಸರ್ವೀಸ್ಬಹಳಉತ್ತಮವಾಗಿಕಾರ್ಯನಿರ್ವಹಿಸುವಲ್ಲಿಸಫಲಆಗಿದೆ. (Covid ambulance service). Ambulance drivers ಗೆನಮ್ಮಮೆಸೆಜ್ಹೋಗಿ, ಅದರಜೊತೆಗೆರೋಗಿಯಹೆಸರು, ವಿಳಾಸ, ಫೋನ್ನಂಇತ್ಯಾದಿಗಳುಮಾಹಿತಿಯಾಗಿದ್ದುರೋಗಿಯನ್ನುಸರಿಯಾದಆಸ್ಪತ್ರೆಗೆ, ಸರಿಯಾದವೇಳೆಯಲ್ಲಿತಲುಪಿಸುವಕೆಲಸಮಾಡುತ್ತಾರೆ. ಅದುಸರಕಾರಿಅಥವಾಖಾಸಗೀಆಸ್ಪತ್ರೆಆಗಿರಬಹುದು‌ರೋಗಿಯಇಚ್ಛೆಯ , ಅನುಕೂಲದಪ್ರಕಾರಅವರನ್ನುಆಸ್ಪತ್ರೆಗೆಸೇರಿಸಲಾಗುತ್ತದೆ. ಆಸ್ಪತ್ರೆಗಳಲ್ಲಿಯೂಕೆಲವುವಿಧಗಳಿವೆ: *CCC: covid care centre :ಇದರಲ್ಲಿಲಕ್ಷಣಗಳಿಲ್ಲದಆದರೆಕೊವಿಡ್ಪಾಸಿಟಿವ್ಇದ್ದುಜೊತೆಗೆಕಡಿಮೆರೋಗದತೊಂದರೆಗಳುಕಂಡುಬಂದಲ್ಲಿಈಕೇಂದ್ರಗಳಿಗೆದಾಖಲಿಸಲಾಗುವದು. (Asymptomatic and mild cases) *DCHC: Dedicated Covid Health Centre. ಇದರಲ್ಲಿcovid positive ಇದ್ದು,ಕಡಿಮೆಲಕ್ಷಣಗಳಿಂದಹಿಡಿದುಮಧ್ಯಮರೋಗಇದ್ದವರನ್ನುದಾಖಲಿಸಲಾಗುತ್ತದೆ. ಹಾಗೂಇಂತಹವರಿಗೆ _24 ಗಂಟೆಗಳನಿಗಾಇಟ್ಟಿರಲಾಗುತ್ತದೆ. *DCH: Dedicated Covid Hospital: ಇದರಲ್ಲಿ intensive care unit(icu), ventilator ವೆಂಟಿಲೇಟರಗಳಸೌಲಭ್ಯಗಳಿದ್ದುಬಹಳತೀವ್ರಅವಸ್ಥೆಯಲ್ಲಿಯರೋಗಿಗಳನ್ನುಇರಿಸಲಾಗುತ್ತದೆ. ಹಾಗೂರೋಗಿಯನ್ನುಬಹಳಜಾಗರೂಕವಾಗಿನೋಡಿಕೊಳ್ಳಲಾಗುತ್ತದೆ. ಈರೀತಿನಮ್ಮಆಪ್ತಮಿತ್ರಸಹಾಯವಾಣಿಯಲ್ಲಿರೋಗಿಯಅವಶ್ಯಕತೆನೋಡಿಕೋಂಡುತಕ್ಕವ್ಯವಸ್ಥೆಒದಗಿಸಲಾಗುತ್ತದೆ. ಅದರಪ್ರಕಾರವಾಗಿ OTC ( over the counter) Health Counselling , Ambulance Assignment,, Non Medical Case, Follow up ಮುಂತಾದಸಲಹೆಗಳಲ್ಲಿನಾವುಯಾವದನ್ನುರೋಗಿಗೆಸೂಚಿಸಿದರೀತಿಯಲ್ಲಿಅದನ್ನತಿಳಿಸಿಆಕೇಸನ್ನುಅವತ್ತಿಗೆಮುಗಿಸುತ್ತೆವೆ.(Close) ಮಾಡಿರುತ್ತೆವೆ. ಇನ್ನುintegrated drs ಬಗ್ಗೆಹೇಳಬೆಕೆಂದರೆನಾವುBAMS 51/2 years ಓದಿಮುಂದೆ_2_ವರ್ಷದ integrated medicine  short term course ನ್ನುಆಗಿನಬೇಂಗಳೂರುವಿಶ್ವವಿದ್ಯಾಲಯದಿಂದಆಧುನಿಕಶಿಕ್ಷಣತರಬೇತಿಪಡೆದುವಿಕ್ಟೋರಿಯಾ, ವಾಣಿವಿಲಾಸಕೆಸಿಜನರಲ್ಮುಂತಾದಆಸ್ಪತ್ರೆಗಳಲ್ಲಿಪೂರ್ಣಾವಧಿಯತರಬೇತಿಪಡೆದವರಾಗಿರುತ್ತೆವೆ. ಹಾಗೂಈಗಎಲ್ಲವೈದ್ಯರು25-30 ವರ್ಷ family physician ಆಗಿಸಮಾಜದಲ್ಲಿಸೇವೆಸಲ್ಲಿಸಿದವರಾಗಿದ್ದೇವೆ. ಅಷ್ಟೇಅಲ್ಲದೇಈಆಪ್ತಮಿತ್ರಸಹಾಯವಾಣಿಯಕೆಲಸವನ್ನು computer ನಲ್ಲಿಮಾಡಬೇಕಾದಅನಿವಾರ್ಯತೆಯಲ್ಲಿಎಲ್ಲವೈದ್ಯರೂಅದನ್ನು__operate ಮಾಡುವದನ್ನುಕಡಿಮೆಅವಧಿಯಲ್ಲಿಕಲಿತುಸರಕಾರದಿಂದಒದಗಿಸಿರುವ training session ನನ್ನುಎಲ್ಲವೈದ್ರುಉತ್ಸಾಹದಿಂದಕಲಿತುಕೆಲಸಕ್ಕೆಸಿಧ್ದರಾದರು. ಕೆಲವುವೈದರುತಮ್ಮತಮ್ಮ clinic ಗಳಲ್ಲಿಯೂಕೆಲಸಮಾಡಿprivate practice ನಲ್ಲೂರೋಗಿಗಳನ್ನುಪರೀಕ್ಷಿಸಿ, ತಮ್ಮಜೀವನದಪರಿವೆಯನ್ನುಲೆಕ್ಕಿಸದೇ, ತಮ್ಮಕುಟುಂಬದವರಿಂದದೂರಉಳಿದು, ಈಸರಕಾರದಸಹಾಯವಾಣಿಯಲ್ಲಿಕೈಜೋಡಿಸಿಅತ್ಯಂತಮಹತ್ತರವಾದಶ್ಲಾಘನೀಯವಾದಕಾರ್ಯವನ್ನುಮಾಡಿದ್ದಾರೆಂದುಹೇಳಲುಹೆಮ್ಮೆಅನಿಸುತ್ತದೆ. ಎರಡೂಹೊತ್ತಿನclinic ನೋಡಿಕೊಂಡುಈಕೆಲಸದಲ್ಲ್ಲೂಕೈಜೋಡಿಸಿದವರಿದ್ದಾರೆ.  ಆಪ್ತಮಿತ್ರಸಹಾಯವಾಣಿಯುಎರಡು shift ನಲ್ಲಿಕೆಲಸನಿರ್ವಹಣೆಮಾಡುತ್ತದೆ. ಒಂದುಬೆಳಿಗ್ಗೆ8 a. M to 2 p.m ೮ಗಂಟೆಯಿಂದಮಧ್ಯಾಹ್ನ೨ಗಂಟೆವರೆಗೂಹಾಗೂ2 p.m to _9 p.m.(೨_ಗಂಟೆಯಿಂದರಾತ್ರಿ೯ಗಂಟೆ) ವರೆಗೂಕಾರ್ಯಮಾಡುತ್ತದೆ. ನಮ್ಮನಮ್ಮಕೆಲಸದಅವಧಿ ಯಲ್ಲಿನಮಗೆಬಂದಿರುವಪೇಶಂಟಗಳನ್ನುಸಂಪರ್ಕಿಸಿಸೂಕ್ತನಿರ್ಧಾರತೆಗೆದುಕೊಳ್ಳಬೇಕಾಗುತ್ತದೆ. ಹಾಗೂಒಂದುವೇಳೆಎಲ್ಲಪೇಶಂಟಟಿಕೆಟ್ಗಳನ್ನುಪೂರ್ತಿಗೊಳಿಸಲಾಗದಿದ್ರೆಮುಂದೆಸ್ವಲ್ಪಹೆಚ್ಚಿನಸಮಯತಗೊಂಡುಅವತ್ತಿನಎಲ್ಲರೋಗಿಗಳನ್ನುಅಟೆಂಡ್ಮಾಡಬೇಕಾಗುತ್ತದೆ. ಅಲ್ಲದೇನಮ್ಮಎಲ್ಲಮಹಿಳಾವೈದ್ಯರಪಾಲೂಇದರಲ್ಲಿಬಹುದೊಡ್ಡದಾಗಿದೆ.clinic ನೋಡಿಕೊಂಡು, ಮನೆಯಲ್ಲಿಯಾವಕೆಲಸದವರಸಹಾಯಇಲ್ಲದೇಹೋದರೂಮನೆಕೆಲಸದಜವಾಬ್ದಾರಿಯನ್ನುತಮ್ಮಹೆಗಲಿಗೇರಿಸಿಕೊಂಡುಹೊತ್ತುಹೊತ್ತಿಗೆಮನೆಯಎಲ್ಲರಊಟತಿಂಡಿಯನ್ನುಮಾಡುವಲ್ಲಿಚಾಕಚಕ್ಯತೆಯನ್ನುತೋರಿಸಿ,ಅಷ್ಟೇಲವಲವಿಕೆಯಿಂದಈಸಹಾಯವಾಣಿಯಕೆಲಸದಲ್ಲಿಕೈಜೋಡಿಸಿದ್ದಾರೆ. ಅದಕ್ಕೇಹೇಳುವದಲ್ವೇ“ತೊಟ್ಟಿಲತೂಗುವಕೈಜಗತ್ತನ್ನೇತೂಗಬಲ್ಲದು”ಅಂತ. ಎಷ್ಟೊಮನೆಗಳಲ್ಲಿಪುರುಷರೂಇಂತಹಸಂದಿಗ್ದಸಮಯದಲ್ಲಿಮನೆಕೆಲಸದಲ್ಲಿಕೈಜೋಡಿಸಿದ್ದುಹೊಗಳಿಕೆಗೆಸೂಕ್ತವಾದದ್ದು. ಎಲ್ಲವೈದ್ದರೂತಮ್ಮವಯಸ್ಸನ್ನುಮರೆತುಅತೀಉತ್ಸಾಹದಿಂದಸರಕಾರದಜೊತೆನಿಂತು, ಮಾನವೀಯತೆಯಮಮಕಾರವನ್ನುಎತ್ತಿಹಿಡಿದಿದ್ದಾರೆ. ಹಾಗೂಜನಪದೋಧ್ವಂಸ (pandemic disease)ರೋಗಗಳಬಗ್ಗೆನಮ್ಮಪುಸ್ತಕಗಳಲ್ಲಿಓದಿತಿಳಿದರೂಪ್ರತ್ಯಕ್ಷವಾಗಿನಿಭಾಯಿಸುವಅನುಭವವೇಬೇರೆ . ಅದೊಂದುಸಂತ್ರಪ್ತಿ,ಆನಂದನಿಜಆದರೆಒಮ್ಮೊಮ್ಮೆರೋಗಿಯತೀವ್ರಸ್ವರೂಪದಸಂದರ್ಭದಲ್ಲಿ , ಅವರಗೋಳುಅವರಮನೆಯಪರಿಸ್ಥಿತಿ, ಆರ್ಥಿಕಕಷ್ಟ, ಸಣ್ಣಸಣ್ಣಮಕ್ಕಳಿಗೂರೋಗಅಂಟಿರುವದು , ಎಲ್ಲರಮನಸ್ಸಿನಆತಂಕ, ಗಾಬರಿರೋಗಿಗಳುಅಂಬುಲನ್ಸನಲ್ಲಯೇಉಸಿರಾಟದತೊಂದರೆಯಿಂದಬಳಲುವದುಇವೆಲ್ಲಕೇಳಿನಮ್ಮಹ್ರದಯವೂಮಮಕಾರದಿಂದಮಿಡಿದುನಮ್ಮೆಲರಕಣ್ಣಂಚಿನಲಿನೀರುಬಂದಿದ್ದೂಇದೆ. ವೈದ್ಯರಾಗಿನಮ್ಮಕೈಲಾದಸ್ಟುಮಾಡಿದ್ದೇವೆಅಂತನಾವೇಸಮಾಧಾನಮಾಡಿಕೊಂಡರೂಪೇಶಂಟಗಳಆರ್ತನಾದನಮ್ಮಕಿವಿಯಲ್ಲಿಎಷ್ಟೋಹೊತ್ತುಇದ್ದೇಇರುತ್ತದೆ.ಇದೇಸಮಯದಲ್ಲಿನಮ್ಮಕೆಲವುವೈದ್ಯರುತಾವೇಸ್ವತ: ಕಾಯಿಲೆಗೆತುತ್ತಾದಉದಾಹರಣೆಗಳೂಇವೆ. ಕೆಲವರುಪರಿವಾರದಇತರಸದಸ್ಯರೊಡನೆಆಸ್ಪತ್ರೆಸೇರಿಚಿಕಿತ್ಸೆಪಡೆದುಕೊಂಡರೆಇನ್ನಕೆಲವರುಮನೆಯಲ್ಲಿಯೇಇದ್ದು(home quarantine ) ಆಗಿದ್ದುಚಿಕಿತ್ಸೆಪಡೆದಿದ್ದಾರೆ. ದೈವವಶಾತ್ನಮ್ಮತಂಡದವೈದ್ದರುಸಮಯಕ್ಕೆಸರಿಯಾಗಿಚಿಕಿತ್ಸೆಪಡೆದುಗುಣಮುಖರಾಗಿದ್ದಾರೆಎಂಬುವದೇಸಮಾಧಾನಕರವಿಷಯ. ನಮ್ಮಈಕೆಲಸಕ್ಕೆಬಹಳಜನರೋಗಿಗಳುಧನ್ಯವಾದಗಳನ್ನುಹೇಳುತ್ತಬಹಳತ್ರಪ್ತ್ತಿಯನ್ನುಹೋಂದಿದ್ದಾರೆ. ನಾವುಎಲ್ಲಸಲಹೆಗಳನ್ನುನೀಡಿದಬಳಿಕವೂಎಷ್ಟೋಸಲಪೇಶಂಟಗಳುಧನ್ಯವಾದಹೇಳುತ್ತಲೇಇರುತ್ತಾರೆ. ಹಾಗೂಸಾರ್ವಜನಿಕರೂಕೂಡಸಾಕಸ್ಟುಅರಿವುಮೂಡಿಸಿಕೊಂಡಿದ್ದಾರೆ. ಮಾಸ್ಕಧರಿಸುವದು,ಜನಗಳಮಧ್ಯಅಂತರಕಾಪಾಡಿಕೊಳ್ಳುವದು, ಕೈಗಳನ್ನುಶುಚಿಯಾಗಿಟ್ಟುಕೊಳ್ಳುವದು , ಆರೋಗ್ಯಕರಆಹಾರಸೇವನೆ, ವ್ಯಾಯಾಮ, ಧ್ಯಾನ, ಅನಾವಶ್ಯಕವಾಗಿಹೊರಗಡೆತಿರುಗಾಡದೇಇರುವದು, ಪ್ರತಿಷ್ಟೆಯನ್ನುಪಕ್ಕಕ್ಕಿಟ್ಟುಸರಳವಾದಕೆಲವೇಜನಸಮೂಹದಲ್ಲಿಹಬ್ಬ, ಮದುವೆ, ಹುಟ್ಟುಹಬ್ಬದಆಚರಣೆಗಳನ್ನುಅನುಸರಿಸುತ್ತಿದ್ದಾರೆ. ಹೀಗಾಗಿಬಹಳಜನಕಾಯಿಲೆಬರದಂತೆಕಾಪಾಡಿಕೊಳ್ಳುವಲ್ಲಿಸಫಲರಾದರೆ, ಇನ್ನುಬಹಳಜನಕಾಯಿಲೆಬಂದನಂತರವೂಚೆನ್ನಾಗಿಚೇತರಿಸಿಕೊಂಡದ್ದನ್ನುಕಾಣುತ್ತೆವೆ. ಹಾಗೂನಮ್ಮಸರಕಾರವೂಈಗಬಹಳಸ್ಟುವೈದ್ಯರನ್ನುಇದರಲ್ಲಿನೇಮಕಮಾಡಿಯಾರೂತೊಂದರೆಗೀಡಾಗದೇಬೇಗನೆಚಿಕಿತ್ಸೆಸೌಲಭ್ಯಒದಗಿಸುವಲ್ಲಿಮುಂದಾಗಿದೆ.‌ ಹಾಗಾಗಿಮೊದಮೊದಲುಒಬ್ಬೊಬ್ಬವೈದ್ಯರಿಗೂಅತಿಯಾದಸಂಖ್ಯೆಯಲ್ಲಿಪೇಶಂಟಬರುತ್ತಿದ್ದುಈಗಸ್ವಲ್ಪಸುಧಾರಣೆಕಂಡುಬಂದಿದೆ. ಇದಕ್ಕೆಲ್ಲಪರಿಹಾರಬೇಗಸಿಗಲಿ,ಎಲ್ಲರಜೀವನಸುಗಮವಾಗಿಸಾಗಲಿಅಂತಭಗವಂತನಲ್ಲಿಪ್ರಾರ್ಥೊಸೋಣ. **********************************************

ಟೆಲಿಮೆಡಿಸನ್- Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಜುಮ್ಮಾ- ಕಥಾ ಸಂಕಲನ ಜುಮ್ಮಾ- ಕಥಾ ಸಂಕಲನತೆಲುಗು ಮೂಲ: ವೇಂಪಲ್ಲಿ ಶರೀಫ್ಕನ್ನಡಕ್ಕೆ:ಸೃಜನ್ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೭೫ಪುಟಗಳು : ೯೬ ಮುಸ್ಲಿಂ ಸಂವೇದನೆಗಳಿಗೆ ಧ್ವನಿ ನೀಡುವ ಮತ್ತು ಓದುಗರ ಮನಮಿಡಿಯುವಂತೆ ಮಾಡುವ ೧೩ ಹೃದಯಸ್ಪರ್ಶಿ ಕಥೆಗಳ ಸಂಕಲನವಿದು. ಮುಖ್ಯವಾಗಿ ಗ್ರಾಮೀಣ ತಳ ಸಮುದಾಯದವರ ಕುರಿತಾದ ಕಥೆಗಳು ಇಲ್ಲಿವೆ. ಬದುಕಿನಲ್ಲಿ ಸುಖವೆಂದರೇನೆಂದೇ ತಿಳಿಯದ ಅಸ್ತಿತ್ವಕ್ಕಾಗಿ ಹೆಣಗಾಡುವ ಮಂದಿ ಇಲ್ಲಿದ್ದಾರೆ.  ಲೇಖಕರಾದ ವೇಂಪಲ್ಲಿ ಶರೀಫ್ ತಮ್ಮ ಸುತ್ತಮುತ್ತ ತಾವು ಕಂಡ ಜಗತ್ತನ್ನು ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲದೆ ನಿರುದ್ವಿಗ್ನತೆಯಿಂದ ದಾಖಲಿಸುತ್ತಾ ಹೋಗುತ್ತಾರೆ.  ತಮ್ಮ ಅನುಭವಗಳನ್ನು ತಾರ್ಕಿಕ ವಿಶ್ಲೇಷಣೆಗೆ ಒಳಪಡಿಸಿ ನಿರೂಪಿಸುತ್ತ ಹೋಗುತ್ತಾರೆ.  ಇಲ್ಲಿನ ಪ್ರತಿಯೊಂದು ಕಥೆಯೂ ದಮನಿತರ ಹದಗೆಟ್ಟ ಬದುಕು ಮತ್ತು ವ್ಯವಸ್ಥೆಯ ಹುಳುಕನ್ನು ಪ್ರತಿಫಲಿಸುತ್ತ ಓದುಗರ ಕಣ್ಣುಗಳನ್ನು ಹನಿಗೂಡಿಸುತ್ತವೆ. ದುಃಖವು ಈ ಕಥೆಗಳ ಸ್ಥಾಯೀಭಾವ.            ‘ಪರದೆ’ ಅನ್ನುವ ಕಥೆಯಲ್ಲಿ ಪರದೆ ಅನ್ನುವುದು ಧಾರ್ಮಿಕತೆಯ ದ್ಯೋತಕವಾದರೂ  ಅದು ಹೇಗೆ ಮನುಷ್ಯ ಸಂಬಂಧಗಳ ನಡುವೆ ಗೋಡೆ ನಿರ್ಮಿಸುತ್ತದೆ ಮತ್ತು ಬದುಕನ್ನು ಹೇಗೆ ಕೃತಕಗೊಳಿಸುತ್ತದೆ ಎನ್ನುವ ಸತ್ಯವನ್ನು ಕಥೆ ಬಯಲಿಗೆಳೆಯುತ್ತದೆ. ‘ಜುಮ್ಮಾ’ ಎಂಬ ಕಥೆಯಲ್ಲಿ ಧಾರ್ಮಿಕ ಶ್ರದ್ಧೆಯ ಹೆಸರಿನಲ್ಲಿ ಶುಕ್ರವಾರ ನಮಾಜು ಮಾಡಲು ಮಸೀದಿಗೆ ಹೋಗಲೇ ಬೇಕೆಂದು ಒತ್ತಾಯಿಸುವ ಅಮ್ಮ  ಕೊನೆಯಲ್ಲಿ ಅಷ್ಟು ಭವ್ಯವಾದ ಮಸೀದಿಯೊಳಗೆ  ಸ್ಫೋಟ ಸಂಭವಿಸಿದ ಸುದ್ದಿ ಕೇಳಿ  ತನ್ನ ನಂಬಿಕೆಯಿಂದಲೇ ಕಳಚಿಕೊಳ್ಳುವುದು ಬದುಕು ಹೇಗೆ ಮತೀಯ ನಂಬಿಕೆಗಿಂತ ದೊಡ್ಡದು ಅನ್ನುವ ಸತ್ಯವನ್ನು ನಿರೂಪಿಸುತ್ತದೆ.  ‘ಜೀಪು ಬಂತು’ ಎಂಬ ಕಥೆ ಬಡತನದ ಕುರಿತಾದದ್ದು. ಜೀವನೋಪಾಯಕ್ಕಾಗಿ ಹೊಲದಲ್ಲಿ ಬೆವರು ಸುರಿಸುವ ರೈತ ಮಳೆಯಿಲ್ಲದೆ ಅಸಹಾಯಕನಾಗಿ ಬೋರ್ ಹಾಕಿಸಿದರೆ  ವಿದ್ಯುತ್ ಇಲಾಖೆಯ ಅಧಿಕಾರಿಗಳು ಬಂದು ಹಣ ಕಟ್ಟಲಿಲ್ಲವೆಂದು ಅವನ ಜತೆಗೆ ನಿರ್ದಯವಾಗಿ ನಡೆದುಕೊಳ್ಳುವುದು  ಅಧಿಕಾರಶಾಹಿಯ ಕ್ರೌರ್ಯವನ್ನು  ಬಿಂಬಿಸುತ್ತದೆ.  ‘ಪಚ್ಚೆ ರಂಗೋಲಿ’ ಕಥಾನಾಯಕನ ಅಕ್ಕ ಹಿಂದೂ ಸಂಸ್ಕೃತಿಯಾದ ರಂಗೋಲಿಯ ಮೇಲಿನ ಪ್ರೀತಿಯಿಂದಾಗಿ ತನ್ನ ಕಣ್ಣುಗಳನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುವುದು, ಮುಂದೆ ತನ್ನ ಆ ಆಸೆಯನ್ನು ಮೆಹಂದಿ ವಿನ್ಯಾಸದ ಮೂಲಕ ಪೂರೈಸಿಕೊಳ್ಳುವುದು-ಚಿಕ್ಕ ಚಿಕ್ಕ ವಿಷಯಗಳೂ ಹೇಗೆ ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಗುತ್ತವೆ ಎಂಬುದನ್ನು ಹೇಳುತ್ತದೆ.      ಹೀಗೆ ಇಲ್ಲಿನ ಎಲ್ಲ ಕಥೆಗಳೂ ಮತೀಯ ಪೂರ್ವಾಗ್ರಹದಿಂದ ಮುಕ್ತವಾದ ಸೌಹಾರ್ದದ ಆಶಯವನ್ನು ವ್ಯಕ್ತಪಡಿಸುತ್ತಾನೆ. ಮೂಲಕಥೆಗಳ ವಸ್ತು, ಭಾಷೆ, ನಿರೂಪಣಾ ತಂತ್ರ ಎಲ್ಲವೂ ಸೊಗಸಾಗಿವೆ. ಅನುವಾದದ ಶೈಲಿ ಬಹಳ ಸುಂದರವಾಗಿದೆ. ************************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top