ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಒಂದು ಕೊಂಕಣಿ ಬಾಷೆಯ ಕವಿತೆ ಜವಾಬ್ ಪಂಚ್‍ವೀಸ್ ವರ್ಸಾ ಉಪರಾಂತ ಪರತ ತಾಕ್ಕಾ ಭೇಟೂಚೊ ಅವಕಾಶ. ತಶಿ ಮಣೂನ ಆಯ್ಲಾ ತಾಗೆಲೆ ಸಂದೇಶ‌. ಮನ ಧಾಂವ್ಲೆ ಪಂಚ್‍ವೀಸ ವರಸಾ ಮಾಕ್ಷಿ. ಪತಂಗಾ ವರಿ ಉಬಲೆ ದೇವ ಸಾಕ್ಷಿ. ತಾಗೆಲೊ ಏಕ ಸವಾಲಾ ಚೊ ಝಾಪ್ ಮೆಗೆಲೆ ಭಿತ್ತರಿ ವರಲಾ. ತ್ಯಾ ವೇಳ ಉತ್ರಾಂನ ಮೆಗೆಲೆ ಸಾಥ್ ದಿಲಲೆ ನಾ. ಆಜ ಹಾಂವ ತಾಗೆಲೆ ಸಗ್ಳೇ ಸವಾಲಾಚೆ ಜವಾಬ ದಿತ್ತಲಿ ಮನಾಚೆ ಜಡಾವಣ ದೆವೊನು ಹಗೂರ ಜಾತ್ತಲಿ ಧಾಂವಲಿ ಹಾಂವ ಸಾನ ಚೆಲ್ಯೆಲ ವರಿ. ತೆದನಾ ಆಮ್ಮಿ ಮೆಳ್ಚೆ ಕೆದಳಾಚೆ ಜಾಗೇರಿ. ಹರ್ದೆ ಧಡಧಡು. ಪೊಟ್ಟಾಂತು ಭಂವರಾ ಗೊಂದೊಳು. ಆಯ್ಲೊ ತೊ.. ತಾಣೆ ಲಾಗ್ಗಿ ಯೆವ್ಚೆ ದಿಸಲೆ. ವಯ್ ಕೀ ನಯ್ ಮಳೆಲೆ ಸಂಶಯ ಆಯ್ಲೆ. ಮಾಸ್ಕ್ ಗಾಲ್ಲೆಲೆ ತೊಂಡಾನ ಹಾಂವ ಹಾಸ್ಲಿ ತೋ ಹಾಸ್ಲೊ ಕಿ ನಾ ಮಳೆಲೆ ಮಾಕ್ಕಾ ದಿಸನಿ ಬಸ್ಲಿಂಚಿ ಆಮ್ಮಿ ಏಕ ಮೀಟರ್ ದೂರ ರಾಕುಕ ಮೊಣು ಸಾಮಾಜಿಕ ಅಂತರ. ತೋ ಬಶಿಲೊ ಮೌನ ಆನಿ ಮೆಗೆಲೆ ಉತ್ರಂ ಭಾಯರ ಪಣಿ. ಚಡತಾ ಆಶಿಲಿ ವತ್ತಾ ಚಿ ಹುನಸಾಣಿ ಸಾಬಾರ ವೇಳಾನ ತಾಣೆ ಆಪಯ್ಲೆ ಮೆಗೆಲೆ ನಾಂವ. ಹೂಂ ಮಳ್ಳೆ ಶಿವಾಂಯ್ ವಿಂಗಡ ಉಲ್ಲಯ್ನಿ ಹಾಂವ. ತಾಣೆ ಸಾಂಗ್ಲಿ ತಾಗೆಲಿ ಘರ್ ಚಿ ಖಬರ. ಚೆರ್ಡುಂವಾಲಿ, ಬಾಯ್ಲೆಲಿ ಆನಿ ತಾಗೆಲೆ ಉದ್ಯೋಗಾ ಚಿ. ಹಾಂವೆ ಮೆಗೆಲೆ ಸಂಸಾರಾ ಚಿ. ತಾಗೆಲೆ ಡಯಾಬಿಟೀಸ್ ಆನಿ ಮೆಗೆಲೆ ಸೈನಸ್. ಇತುಲೇ ಚಿ ಆಮ್ಮಿ ಉಲ್ಲಯಿಲೆ ಸಗ್ಳೇ ದೀಸ್. ಸಾಂಜ್ ಜಾಲ್ಲಿ ಸೂರ್‍ಯು ಬುಡ್ಲೊ. ತಾಗೆಲೆ ಸವಾಲಾಚೊ ಜವಾಬ ಮೆಗೆಲೆ ಭಿತ್ತರೀ ವರಲೊ. ಹಾಂವ ಮೆಗೆಲೆ ಘರಾ ಆನಿ ತೋ ತಾಗೆಲೆ ಘರಾ ಚಮಕಲೊ. ಮನಾಚೊ ಭಾರು ಮನಾನ ಪರತ ವಾಂವಲೊ. ********** ಶೀಲಾ ಭಂಡಾರ್ಕರ್

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಲಾಕ್ಡೌನ್ ತೆರವಿನ ಪರಿಣಾಮಗಳು ರೇಶ್ಮಾ ಗುಳೇದಗುಡ್ಡಾಕರ್ ಕೊರೊನಾ ಸಾವಿರದ ಗಡಿದಾಟಿದೆ ಇಂತ ಆತಂಕದ ಸ್ಥಿತಿ ಯಲ್ಲಿ ಸರ್ಕಾರ ಲಾಕ್ಡೌನ್ ಹಂತ ಹಂತವಾಗಿ ತೆರವು ಗೊಳಿಸುವದು ಎಷ್ಟು ಸರಿ? ಸಾರಿಗೆ ಸಂಚಾರ ಆರಂಭವಾದರೆ ಸಾಮಾಜಿಕ ಅಂತರ ಸಾದ್ಯವೆ ನಮ್ಮ  ಜನರ ಇಗಿನ ಮನಸ್ಥಿತಿ ಯಲ್ಲಿ  ರಾಜ್ಯದ ಲ್ಲಿ ?ಶಾಲೆ ಪುನಾರಂಭ ಎರಡು ಪಾಳಿಯಲ್ಲಿ ಮಾಡಲು ಸಚಿವರು ಹೇಳಿದರು ಇಂತಹ ಸಂಧರ್ಭದಲ್ಲಿಕೊರೊನಾ ತಡೆಗಟ್ಟಲು ಸೂಕ್ತ ವ್ಯವಸ್ಥೆ ಇದೆಯೇ ಶಾಲೆಯಲ್ಲಿ  ಎಂಬುದನ್ನು ಪರೀಶೀಲಸ ಬೇಕು . ಶಾಲಾ ಅವರಣದಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾದ್ಯವೇ ಎಂಬ ಪ್ರಶ್ನೆ ಉದ್ಬವಾಗುತ್ತದೆ . ಪೂರ್ವ ಪ್ರಾಥಮಿಕ ಮಕ್ಕಳ ಆರೋಗ್ಯ ಭದ್ರತೆಗೆ ಸ್ಯಾನಿಟೈಸರ್ ಬಳಕೆ ನೆಚ್ಚಿಕೊಂಡು ಮಕ್ಕಳನ್ನು ಕಾಪಾಡಲು ಸಾದ್ಯವಿಲ್ಲ ಇಷ್ಟು ದಿನ ಕಷ್ಟ ಪಟ್ಟು ಹಿಡಿದಿಟ್ಟ ಮಕ್ಕಳು ಒಮ್ಮೆಲೆ ಶಾಲೆಗೆ ಪ್ರವೇಶಿಸುತ್ತವೆ.ಅಲ್ಲಿ ಅವರದ್ದೆ ಆದ ಪ್ರಪಂಚ ರಚನೆಯಾಗುತ್ತದೆ ಮಕ್ಕಳು ಆಟ ಆಡುವಾಗ ,ಊಟಮಾಡುವಾಗ ತಮ್ಮದೇ ಆದ ಗುಂಪನ್ನು ರಚಿಸಿಕೊಂಡು ನಲಿಯುವ ಮಕ್ಕಳು ಬ್ರೇಕ್ ಸಮಯದಲ್ಲಿ ಒಬ್ಬರಿಗೊಬ್ಬರು ಕೈಹೀಡಿದು ಎಳೆದಾಡುತ ಓಡಾಡುವ ಚಿಣ್ಣರನ್ನು ಸಾಮಾನ್ಯ ಸಮಯದಲ್ಲೇ  ನಿಗ್ರಹಿಸುವದು ಶಿಕ್ಷಕರಿಗೆ ಸವಾಲಿನ ಸಂಗತಿ . ಇನ್ನು ಇಂತಹ ಕಠಿಣ ಸಂದರ್ಭದಲ್ಲಿ ಪಾಲನೆ ಸಾದ್ಯವೇ ಎಂಬುದನ್ನು ಅವಲೋಕಿಸ ಬೇಕಿದೆ .   ಕೊಠಡಿಯಲ್ಲಿ ಅಂತರ ಸಾದ್ಯ ಆದರೆ ಆವರಣದಲ್ಲಿ ಪಾಲಿಸುವದು ಕಷ್ಟ ದ ಸಂಗತಿ . ಇಂತಹ ಸಮಯದಲ್ಲಿ ಶಾಲೆ ಪುನರಾರಂಭವಾದರೆ .ವೈದ್ಯಕೀಯ ಸಿಬ್ಬಂದಿಯ ಅಗತ್ಯ ಮತ್ತುಪ್ರತಿ ತಾಲೂಕಿನಲ್ಲಿ ಮಕ್ಕಳ ತಜ್ಞ ವೈದ್ಯರು ಇದ್ದರಾಯೇ? ಎಂಬುದನ್ನು ಸರ್ಕಾರ ಪರೀಕ್ಷಸ ಬೇಕು .ಇಷ್ಟುದಿನ ನಮ್ಮನ್ನು ಕಾದ ಪೋಲಿಸ್  ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿಗಳು ಕೊರೊನಾ ಪೀಡಿತರಾದರು! .ಹೀಗಿರುವಾಗ ಇನ್ನು ಈ ಸರದಿ ಶಿಕ್ಷಕರು ,ಮಕ್ಕಳು,ಶಾಲಾ ಸಿಬ್ಬಂದಿದಾಗುತ್ತದೆ ಹೊರತು ಶೈಕ್ಷಣಿಕ ಆರಂಭವಾಗುವದಿಲ್ಲ . ಕೊರೊನಾ ದೆಸೆಯಿಂದ ಕೆಲಸ ಕಳೆದುಕೊಂಡು  ನಗರಗಳಿಂದ ಆಗಾಧ ಪ್ರಮಾಣದಲ್ಲಿ ಜನರು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ.ಈ ಗ್ರಾಮಗಳಲ್ಲಿಯೂ ಶಾಲೆಗಳಿವೆ,ಹೊಸ  ಹೊಸ ದಾಖಲಾತಿಯೂ ಶೈಕ್ಷಣಿಕ ವರ್ಷದಲ್ಲಿ  ಅಗುತ್ತದೆ  ಮಕ್ಕಳ ಸಂಖ್ಯೆ ಸಾಮಾನ್ಯ ವಾಗಿ ಏರುತ್ತದೆ .ಅಗ ಇಲ್ಲಿನ ಮಕ್ಕಳ, ಶಿಕ್ಷಕರ ಆರೋಗ್ಯ ವು .ನಾವು ಗಮನಿಸಬೇಕು ಈಗ ನಗರಗಳಿಗಿಂತ ಜನರ , ಪ್ರಮಾಣ ಗ್ರಾಮದಲ್ಲಿ ಹೆಚ್ಚಿದೆ .ಇಗ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ,ಅವುಗಳ ಸಾಮರ್ಥ್ಯ, ಅಲ್ಲಿ ವೈದ್ಯಕೀಯ ಸೌಲಭ್ಯ ಎಲ್ಲವು ಮುಖ್ಯ ಪಾತ್ರ ವಹಿಸುತ್ತವೆ .ಇಗಿನ ಪರಿಸ್ಥಿತಿ ಯಲ್ಲಿ ತಾಲೂಕು ಆಸ್ಪತ್ರೆಗಳಲ್ಲೆ ವೈದ್ಯ ರು ಲಭ್ಯವಿಲ್ಲ ಕೊರೊನಾ ಕಾರಣದಿಂದ ಇಂತಹ ಸಂದರ್ಭಗಳಲ್ಲಿ ಗ್ರಾಮೀಣ ಮಕ್ಕಳ ಆರೋಗ್ಯ ಕಾಪಾಡುವದು ಹೇಗೆ? > ಇದನ್ನು ಗಂಭಿರವಾಗಿ ಯೋಚಿಸ ಬೇಕಿದೆ. ಲಾಕ್ಡೌನ್ ತೆರವಿಗೆ ಚಿಂತಿಸುವದಕ್ಕಿಂತ .ಕೊರೊನಾ ಬಗ್ಗು ಬಡಿಯಲುಚಿಂತಿಸ ಬೇಕು .ದಿನೆ ದಿನೆ ವ್ಯಾಪಕವಾಗಿ ಹರಡುತ್ತಿರುವ ಸೋಂಕು,ಒಂದೆಡೆ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಮಾರ್ಕೇಟ್, ಅಂಗಡಿ, ಯಲ್ಲಿ ಮುಗಿ ಬಿದ್ದ ಜನ . ಇಂತಹ ಸೂಕ್ಷ್ಮ  ಪರಿಸ್ಥಿತಿಯಲ್ಲಿ ಲಾಕ್ಡೌನ್   ಪರಿಣಾಮಕಾರಿ ಯಾಗಿ ಜಾರಿಗೊಳಿಸುವ ಅಗತ್ಯವಿದೆ.    ತೆರವು ಮತ್ತಷ್ಟು ಕೊರೊನಾ ಅಟ್ಟಹಾಸಕ್ಕೆ ದಾರಿ ಮಾಡಿದಂತಾಗುತ್ತದೆ.ಮುಂದಾಗುವ ಅಪಾಯವನ್ನು ಗಮನದಲ್ಲಿ ಇಡ್ಟುಕೊಂಡು ನಿಯಮ ರೂಪಿಸಿ ಜನರ ಬದುಕನ್ನು ಉಳಿಸ ಬೇಕದ ತುರ್ತು ಅಗತ್ಯವಿದೆ ಇಲ್ಲವಾದಲ್ಲಿ ರಾಜ್ಯದ ಲ್ಲಿ ಮಹಾ ಮರಣ ಮೃದಂಗ ಬಾರಿಸುವದರಲ್ಲಿ ಸಂಶಯವಿಲ್ಲ . ( ಬರಹವನ್ನು ನೀವು ಓದುವ ಸಮಯದಲ್ಲಿ ರಾಜ್ಯದಾದ್ಯಂತೆಕೊರೋನಾ ಸೋಂಕಿತರ ಸಂಖ್ಯೆ ಮಮತ್ತಷ್ಟು ಏರಿಕೆಯಾಗಿದೆ) *****************************

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ನಾಲಿಗೆ ಕತ್ತರಿಸಿ ನಡೆದವರು ಜಹಾನ್ ಆರಾ ದೂರ ವಿಮಾನದಿಂದ ಹಾರಿ ಬಂದವರು ತಂದ ಆಧುನಿಕತೆಯ ಭಾರವನ್ನು ಸಾವಿರಾರು ಮೈಲಿ ಹೊತ್ತು ನಡೆಯುತ್ತಿದ್ದೇವೆ ಈಗ ಕಾಲುಗಳು ಸೋತಿವೆ ತಲುಪುವ ಊರು ಇನ್ನೂ ಬಹು ದೂರ ದುಡಿದು ತಿಂದ ದೇಹ ದಾರಿಯುದ್ಧಕ್ಕೂ ಬೇರೆಯವರ ದಾನಕ್ಕಾಗಿ ಕೈ ಒಡ್ಡಿತು ಮೇಲೆ ಕುಳಿತವನು ಆಡಿಸಿದಂತೆ ದೀಪವು ಹಚ್ಚಿದ್ದೇವೆ ನಮ್ಮ ರಕುತ ಬಸೆದು ಜಾಗಟೆಯೂ ಬಾರಿಸಿದ್ದೇವೆ ಖಾಲಿ ಹೊಟ್ಟೆ ಬಡಿದು ಹಗಲು-ರಾತ್ರಿ ಬಿಸಿಲು ಹಸಿವು ಯಾರ ಮಾತು ಕಿವಿಗೆ ಬೀಳಲಿಲ್ಲ ನಿಮ್ಮ ಆಶಾದಾಯಕತೆಯ ಹೊರತು ಊರಿನಲ್ಲಿ ತನ್ನವರು ಸತ್ತರು ಜೊತೆಗೆ ನಡೆದವರು ಇಲ್ಲವಾದರು ಕರಾಳತೆಯ ಕರಳು ಯಾವ ವಯಸ್ಸಿಗೂ ಮಿಡಿಯಲಿಲ್ಲ ಪ್ರಸವ ಬೇಗೆಯು ಸಹಿಸಿದೆವು ಗರ್ಭವನ್ನು ಇಳಿಸಿ ನಡೆದೆವು ಬಿಟ್ಟು ಬಂದ ಗೂಡು ಸೇರಲು ಹಗಲಿರುಳು ನಡೆದೆವು ಸೌಲಭ್ಯವಿದೆಯಂತೆ ಮಾಗಿದ ಮಾವಿನಂತೆ ನಮಗೆ ಗೊಟ್ಟೆಯಾದರು ಸಿಕ್ಕಿದರೆ ಚೀಪಿ ನಾವು ತಿಂದಷ್ಟೇ ಸುಖಿಸುವೆವು ನಡೆನಡೆದು ಸೊರಗಿದ ಚಪ್ಪಲಿಗಳು ನಮ್ಮ ಮೇಲೆ ವಿರಸ ಹಾಡುವೆ ಇನ್ನೂ ಪಾದದ ಚರ್ಮಕ್ಕೆ ಹೊಲಿಗೆ ಹಾಕಿಕೊಂಡು ನಡೆಯುತ್ತಿದ್ದೇವೆ ನೀವು ತಂದ ಹುಳುಗಳು ನಮ್ಮ ಹೆಸರು ಹೇಳುತ್ತಿದೆ ಕೇಳಿ ವಲಸಿಗರಿಂದ ಕಾರ್ಮಿಕರಿಂದ ‘ನಾ ರಾರಾಜಿಸುವೆ ‘ಎನ್ನುತ್ತಿವೆ ನೋಡಿ ನೀವು ಬಾಯಿಮುಚ್ಚಿಕೊಂಡು ಇರಲು ಹೇಳಿದ್ದೀರಿ ನಾವು ನಾಲಿಗೆಯನ್ನು ಕತ್ತರಿಸಿ ನಡೆಯುತ್ತಿದ್ದೇವೆ ನೋಡಿ ಸ್ವಲ್ಪ ಕರುಣೆ ಇದ್ದರೆ ನಿಮಗೆ ರಸ್ತೆಗಳನ್ನು ಕತ್ತರಿಸಿ ಕಿರಿದಾಗಿಸಿ ನಾಲ್ಕೈದು ಹೆಜ್ಜೆಗಳಲ್ಲಿ ಮನೆ ಸೇರುವಂತೆ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೀವನಕ್ಕೊಂದು ಕ್ಲಾಸ್ ಶೀಲಾ ಭಂಡಾರ್ಕರ್ ನಾನೊಂದು ಹೆಜ್ಜೆ ಇಡುವುದರಲ್ಲಿ..ಸಾಗುತ್ತದೆ. ನಾಲ್ಕು ಹೆಜ್ಜೆ ಮುಂದೆ ನನ್ನ ಜೀವನ. ಪುನಃ ನನ್ನ ಒಂದು ಹೆಜ್ಜೆಗೆ ಅದು ಮತ್ತೆ ನಾಲಕ್ಕು. ಆದರೂ ನಗುತ್ತಲೇ ಇದ್ದ ನನ್ನ ನೋಡಿ. ಕೇಳಿತೊಮ್ಮೆ ನನ್ನದೇ ಮನಸ್ಸು. ನಗುತ್ತಲೇ ಇರುವಿಯಲ್ಲ.. ಬದುಕೇ ನಿನ್ನಿಂದ ಬಲು ಮುಂದೆ ಸಾಗಿದ್ದರೂ..!! ನಾನಂದೆ.. ಎಷ್ಟು ವೇಗವಾಗಿ ಸಾಗಿದರೂ ಇದ್ದೇ ಇದೆಯಲ್ಲ ಮುಂದೆ ಗಡಿ.. ಅಲ್ಲಿಂದ ಇಡಲಾದೀತೆ ಒಂದೇ ಒಂದು ಅಡಿ. ಅಲ್ಲಿ ನಿಂತು ಕಾಯುತ್ತಿರಲಿ. ತಲುಪುತ್ತೇನೆ ನಾನು ನನ್ನದೇ ವೇಗದಲ್ಲಿ ನನ್ನದೇ ಗತಿಯಲ್ಲಿ ತಿರುಗಿ ನೋಡಿ ನಗುತ್ತೇನೆ. ಕಳೆದ ದಿನಗಳನ್ನೊಮ್ಮೆ. ಓಡುವ ಭರದಲ್ಲಿ ನಿಲ್ಲದೆ ಓಡಿದ ಜೀವನವನ್ನೊಮ್ಮೆ ಮಾತನಾಡಿಸಿ… ಜೀವಿಸುವುದು ಹೇಗೆಂದು ತಿಳಿಸಿಕೊಡುತ್ತೇನೆ.. *******

ಕಾವ್ಯಯಾನ Read Post »

ಅಂಕಣ ಸಂಗಾತಿ

ಗಾಳೇರ್ ಬಾತ್

ಗಾಳೇರ್ ಬಾತ್-02 Housekeeping ನ ಆ ದಿನಗಳು.…….         ಈ ಲೇಖನದ ತಲೆಬರಹ ಓದಿದರೆ ನಿಮಗೆ ಆಶ್ಚರ್ಯವಾಗಬಹುದು. ಓದಿದವರಿಗೆ ಅಷ್ಟೇಕೆ ಕೇಳಿದವರಿಗೂ ಕೂಡ ವಿಚಿತ್ರ ಅನಿಸುತ್ತದೆ. ಯಾಕೆಂದರೆ ನನ್ನ life ಯೇ ಒಂತರಾ ವಿಚಿತ್ರ. ನಾನೇನೋ ಅವತ್ತು ಟೂರ್ ಪೀಸ್ ಗಾಗಿ ಬಂದು ಬೆಂಗಳೂರು ಸೇರ್ಕೊಂಡ್ ಬಿಟ್ಟೆ. ಸೇರ್ಕೊಂಡ್ ಅನಂತರದಲ್ಲಿ hotel ನಲ್ಲಿ cleaner ಆಗಿ ಕೆಲಸ ನಿರ್ವಹಿಸಿದೆ. ಆ hotel ಮಾಲೀಕ ಸರಿಯಾಗಿ ಸಂಬಳ ಕೊಡುವುದಿಲ್ಲ ಎಂದು ತಿಳಿದ ಮೇಲೆ ಅನಿವಾರ್ಯವಾಗಿ ದುಡಿದ ಶ್ರಮ ಅಲ್ಲಿಯೇ ಬಿಟ್ಟು house keeping ಕೆಲಸಕ್ಕೆ ಸೇರಿದೆ. ನಿಜ ನನ್ನಂತೆ ಊರು ಬಿಟ್ಟು ಬೆಂಗಳೂರು ಸೇರಿದ ಎಷ್ಟೋ ಯುವಕರು ಮೊದಲು ಕೆಲಸ ಗಿಟ್ಟಿಸಿಕೊಳ್ಳುವುದು ಬಹುತೇಕ ಹೋಟೆಲ್ಗಳಲ್ಲೇ! ಯಾಕೆಂದರೆ ಅಂತವರಿಗೆ ಬೆಂಗಳೂರು ಅಪರಿಚಿತ. ಎಲ್ಲಿ ವಸತಿ, ಎಲ್ಲಿ ನೀರು, ಎಲ್ಲಿ ಗಾಳಿ, ಎಲ್ಲಿ ಬಟ್ಟೆ ? ಇಷ್ಟೆಲ್ಲಾ ಕೊರತೆಗಳ ನಡುವೆ ಊರು ಬಿಟ್ಟು ಬಂದವರಿಗೆ ಬದುಕು ಕಟ್ಟಿಕೊಳ್ಳಲು ಹೋಟೆಲ್ಗಳೇ ಸೂಕ್ತ. ನಮ್ಮಂತ ಅಮಾಯಕರನ್ನೇ ಬಂಡವಾಳ  ಮಾಡಿಕೊಳ್ಳುವ ಕೆಲವೊಂದು ಹೋಟೆಲ್ ಮಾಲೀಕರು ಸಂಬಳ ಕೊಡದೆ ವಂಚಿಸಿದಾಗ ಅನಿವಾರ್ಯವಾಗಿ ಬೇರೆ ಉದ್ಯೋಗಗಳತ್ತ ಚಿತ್ತಾ ಅರಿಸಬೇಕಾಗುತ್ತದೆ. ಹಾಗೆಯೇ ನಾನು ಕೂಡ.         ಅದೊಂದು big company. ಆ company ಹೆಸರು ನಾನು ಹೇಳುವುದಿಲ್ಲ. ಆದರೆ ಅದು ಬೆಂಗಳೂರಿನ ಮಧ್ಯಭಾಗದಲ್ಲಿರುವ ಶಾಂತಿನಗರದ ಅಂಚಿನಲ್ಲಿದೆ. ಅಲ್ಲಿಯೇ ನಾನು housekeeping  ದಿನಗಳನ್ನು ಕಳೆದಿದ್ದು. ನನಗೆ ಎಲ್ಲಾ ಹೊಸತು. ಒಂದು ರೀತಿಯ ವಿಚಿತ್ರ ಜನ. ಲೇ ಮಾವ, ಲೇ ಬಾವಾ ಎನ್ನುತ್ತಲೇ ಬೆಳೆದ ನನಗೆ “ಏನು ಗುರು ಏನು ಸಮಾಚಾರ” ಎನ್ನುವ ಮಾತುಗಳು ಅಷ್ಟೇ ವಿಸ್ಮಯವಾಗಿ ಕಾಡುತ್ತಿದ್ದವು. “ಸೂಳೇಮಗ”, “ಬೊಳಿಮಗ” ಎಂದು ಬಯ್ಯೂವ ನಮ್ಮ ಹಳ್ಳಿಯ ಭಾಷೆ ಕಾಮಿಡಿಗೂ ಸೈ ಜಗಳಕ್ಕೂ ಸೈ. ಆದರೇ ಬೆಂಗಳೂರಿನ “ಅವನಮ್ಮನ್” ಎನ್ನುವ ಶಬ್ದ ಜಗಳಕ್ಕೆ ಮಾತ್ರ ಸೀಮಿತವಾಗಿದ್ದು ನನಗೆ ಒಂಥರಾ ಭಾಷೆಯ ಗಮ್ಮತ್ತು ರುಚಿಸುತ್ತಿತ್ತು. ಹಾಗೋ ಹೀಗೋ ಹೇಗೋ ಮಾಡಿ ಕಂಪನಿಯಲ್ಲಿ housekeeping ಕೆಲಸವನ್ನು ಗಿಟ್ಟಿಸಿಕೊಂಡೆ. ನನಗೆ ಆಗ ಪರಿಚಿತರಾಗಿದ್ದು ತುಂಬ ಜನ ಸ್ನೇಹಿತರು. ಆದರೆ ಅವರೆಲ್ಲಾ ಈಗ ಸರಿಯಾಗಿ ನೆನಪಿಲ್ಲ. ಅಲ್ಲಿ ನಡೆದ ಘಟನೆಗಳು ಮಾತ್ರ ನನ್ನ ಮೆದುಳಿನಲ್ಲಿ ಅಳಿಸದೆ print ಆಗಿಬಿಟ್ಟಿವೆ. ಕೆಲಸಕ್ಕೇನೂ ಸೇರಿದೆ. ಕಂಪನಿಯವರು ವಸತಿಯನ್ನು ಕೊಟ್ಟಿದ್ದರು. ಆ ವಸತಿಯ ಬಂಗಲೆ ಹೇಗಿತ್ತೆಂದರೆ? ನನಗೂ ಈಗಲೂ ಕೂಡ ಪದಗಳು ಸಿಗುತ್ತಿಲ್ಲ. ಆ ಬಂಗಲೆಯನ್ನು ವರ್ಣಿಸಲು. ಬೆಂಗಳೂರಿನ ದೊಡ್ಡ ಚರಂಡಿ ಅದು. ಅದೆಷ್ಟೋ ಜನರ ನೋವುಗಳನ್ನು ತನ್ನ ಒಡಲಲ್ಲಿ  ತುಂಬಿಕೊಂಡು, ಅದೆಷ್ಟೋ ಜನರ ಮಲಿನವನ್ನು ತನ್ನ ಕೈಯಲ್ಲಿಟ್ಟುಕೊಂಡು ಹರಿಯುತ್ತಿತ್ತೆಂದರೆ ನನಗೂ ಈಗಲೂ ಕೂಡ ಆಶ್ಚರ್ಯ ವಾಗುತ್ತದೆ. ತುಂಬಾ ಶಾಂತತೆಯ ಸ್ವಭಾವ. ಸಮುದ್ರದಂತೆ ಭೋರ್ಗರೆಯುವುದಿಲ್ಲ. ನದಿಯಂತೆ ಕುಣಿಯುವುದಿಲ್ಲ. ತನ್ನ ಪಾಡಿಗೆ ತಾನು ಹೊರಟರೆ ನೋಡುವ ಜನರೆಲ್ಲ ಮೂಗಿನ ಮೇಲೆ ಕೈ ಇಟ್ಟು ಕೊಳ್ಳಬೇಕು. ಅಂತಹ ನಡಿಗೆ ಆ ಚರಂಡಿಯದ್ದು.         ಅದರ ಪಕ್ಕದಲ್ಲಿಯೇ ನಮ್ಮ ಬಂಗಲೆ. ಬಂಗಲೆ ಎಂದರೆ ಸಾಮಾನ್ಯವಾಗಿ ಹತ್ತಾರು ಜನ. ಹೌದು ನಾವು ಕೂಡ ಅಲ್ಲಿ ಹತ್ತಾರು ಹುಡುಗರು ವಾಸಿಸುತ್ತಿದ್ದೆವು. ಆದರೆ ನಮ್ಮ ಬಂಗಲೆ ಗಾತ್ರದಲ್ಲಿ ಅಷ್ಟೊಂದು ವಿಶಾಲ ವಾಗಿರಲಿಲ್ಲ. ಆದರೆ ಅದರ ಮನಸ್ಸು ಮಾತ್ರ ತುಂಬಾ ದೊಡ್ಡದು. ಯಾಕೆಂದರೆ ಅಲ್ಲಿ ವಾಸಿಸುತ್ತಿದ್ದ ನಾವು ಬೇರೆ ಬೇರೆ ರಾಜ್ಯ, ಬೇರೆ ಬೇರೆ ಜಿಲ್ಲೇ, ಬೇರೆ ಬೇರೆ ಜಾತಿ, ಬೇರೆ ಬೇರೆ ಧರ್ಮದ ಹುಡುಗರು ಇದ್ದೆವು. ಯಾರನ್ನೂ ಕೂಡ ಪ್ರತ್ಯೇಕವಾಗಿ ನೋಡುತ್ತಿರಲಿಲ್ಲ. ಎಲ್ಲರನ್ನೂ ಒಂದೇ ಸಮವಾಗಿ ಕಾಣುವ ಆ ಬಂಗಲೆ ನಮಗೆ ಮೂಲಭೂತ ಸೌಕರ್ಯಗಳು ನೀಡಿದ್ದು ತುಂಬಾ ಕಡಿಮೆ. ಅದಕ್ಕಾಗಿಯೇ ನಾವು ಆ ದಿನ ಐಕ್ಯತೆಯಿಂದ ಇದ್ದೇವು ಅನಿಸುತ್ತದೆ. ವಸತಿ ಏನೋ ಕೊಟ್ಟಿದ್ದರು, ಆದರೆ ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕಿತ್ತು. ಬಿಡಿಗಾಸೂ ಇಲ್ಲದ ನನಗೆ ತಿಂಗಳ ಸಂಬಳ ಸಿಗುವರಿಗೂ ಹೇಗೆ ಹೊಟ್ಟೆಯನ್ನು ಸಂಭಾಳಿಸುವುದು ಎನ್ನುವ ಚಿಂತೆಯಲ್ಲಿದ್ದೆ. ನನಗೆ ತುಂಬಾ ಆತ್ಮೀಯರಾದ ಸ್ನೇಹಿತರು ಒಂದೆರಡು ದಿನ ಊಟದ ವ್ಯವಸ್ಥೆಯನ್ನು ನೋಡಿಕೊಂಡರು. ಅವರು ಕೂಡ ಎಷ್ಟು ದಿವಸ ನೋಡಿಕೊಂಡಾರು? ಹೀಗೆ ಆ ಒಂದು ದಿನ ಕೆಲಸ ಮುಗಿಸಿ ಕಂಪನಿಯ  main gate ನಲ್ಲಿ ಕುಳಿತಿದ್ದೆ. ನನ್ನ ಸಪ್ಪೆ ಮುಖ ನೋಡಿದ security guard ಒಬ್ಬರು ನನ್ನ ವಿಚಾರಿಸಿದಾಗ ಊಟಕ್ಕೆ ನನ್ನ ಹತ್ತಿರ ಹಣ ಇಲ್ಲ ಎಂದು ತಿಳಿಸಿದೆ. ಆಗ ಅವರು ಕಂಪನಿಗೆ ಬಂದ materialsನ ಖಾಲಿ ಬಾಕ್ಸ್ ಅಲ್ಲಿ ಬಿದ್ದಿರುವುದಾಗಿ ತೋರಿಸಿ, ಅವುಗಳನ್ನು ಗುಜರಿಗೆ ಹಾಕು. ಅದರಲ್ಲಿ ಬಂದಂತ ದುಡ್ಡು 50:50 ಎಂದರು. ನನ್ನ ಪಾಲಿಗೆ ಆ ದಿನದಿಂದ ಅವರು ದೇವರಾಗಿದ್ದರು. ನಾನು ಕೆಲಸ ಮುಗಿದ ನಂತರ ಪ್ರತಿದಿನ ರಟ್ಟಿನ ಬಾಕ್ಸ್ ಅನ್ನು ಗುಜರಿಗೆ ಹಾಕಿ ಬಂದ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಒಂದೊಂದು ಸಾರಿ ರಟ್ಟಿನ ಬಾಕ್ಸ್ ಕಡಿಮೆ ಇದ್ದಾಗ ಐದೋ ಹತ್ತೋ ರೂಪಾಯಿ ಬರುವುದು. ಆಗ ನಾನು ಬಿಸ್ಕೆಟ್ ತಿಂದು ಜೀವನ ನಡೆಸಿದ್ದುಂಟು. ಅದೇನೇ ಇರಲಿ ಬಿಡಿ ಇವತ್ತಿಗೂ ಕೂಡ ನಮ್ಮ ಭಾರತ ದೇಶದಲ್ಲಿ ಹಾಗೆ ಬದುಕುವರು ಉಂಟು ಎಂದು ಕೇಳಿದಾಗ ನನಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ನಾನು ಕೂಡ ಒಂದಾನೊಂದು ಕಾಲದಲ್ಲಿ ಆಗೆ ಬದುಕಿದ್ದೆ. ಹಾಗಾಗಿ ನನಗೆ ಇದು ಕೌತುಕ ಎನಿಸುವುದಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂತಹ ಹಸಿವಿನ ಕುರಿತು ಸರ್ಕಾರದ ಕಣ್ಣು ತೆರೆಸಬೇಕು ಎಂಬ ಹಂಬಲ ಇವಾಗಲು ಕೂಡ ಇದೆ.        ಹೇಗೋ ಮಾಡಿ ಮೊದಲ ತಿಂಗಳು ಮುಗಿಯಿತು. ಕೈಗೆ ಸಂಬಳ ಬಂದಿತ್ತು. ಮುಖದಲ್ಲಿ ಸ್ವಲ್ಪ ಮಂದಹಾಸ. Company ಯಲ್ಲಿಯೇ ಪರಿಚಿತರಾದ ಸ್ನೇಹಿತರ ಜೊತೆ ಸಂತೋಷದಿಂದ ದಿನ ಕಳೆಯುತ್ತಿದ್ದೆ. ನನಗೂ ಆಗಲೂ ಕೂಡ ಕವಿತೆ ಬರೆಯುವ ಹುಚ್ಚಿತ್ತು. ದೊಡ್ಡ ದೊಡ್ಡ ಕವಿತೆ ಅಲ್ಲದಿದ್ದರೂ ಚಿಕ್ಕ ಚಿಕ್ಕ ಸಾಲುಗಳನ್ನು ಬರೆಯುತ್ತಾ ಎಲ್ಲರನ್ನೂ impression ಮಾಡುತ್ತಿದ್ದೆ. ಆಗ  companyಯಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಮತ್ತು ಹುಡುಗರು ನನ್ನ ತುಂಬಾ ಇಷ್ಟ ಪಡುತ್ತಿದ್ದರು. ಆಗ ನನಗೆ ಪರಿಚಿತವಾದ ಕೆಲವೊಂದು ಹುಡುಗಿಯರೆಂದರೆ ಶಾಂತಿ, ಆಶಾ, ಜ್ಯೋತಿ ಇವರೆಲ್ಲಾ ಇನ್ನೂ ಹರೆಯದ ಹುಡುಗಿಯರು. ಕಮಲ, ಸುಜಾತ ಇವರು ಮದುವೆಯಾದ ಆಂಟಿಯರು. ಇವರನ್ನೇ ನಾನು ಯಾಕೆ ಇಲ್ಲಿ ಹೇಳುತ್ತೇನೆ ಎಂದರೆ ಇವರದ್ದೆಲ್ಲಾ ಒಂದೊಂದು ಕಥೆ ಉಂಟು.            ನಮ್ಮ ಬಂಗಲೆಯಲ್ಲಿದ್ದಿದ್ದು ನಾವೆಲ್ಲ  bachelors. ನಾವ್ಯಾರು ಅಡುಗೆ ಮಾಡಿಕೊಳ್ಳುತ್ತಿರಲಿಲ್ಲ. ಅಡುಗೆ ಮಾಡಿಕೊಳ್ಳಲು ಆ ಬಂಗಲೆಯಲ್ಲಿ ಅಡುಗೆಮನೆಯ ವ್ಯವಸ್ಥೆಯೇ ಇರಲಿಲ್ಲ. ಸರಿಯಾಗಿ bathroom ಮತ್ತು toilet ಇಲ್ಲದ ಬಂಗಲೆಯಲ್ಲಿ ಅಡುಗೆಮನೆ ಎಂಬುದು ಕನಸಿನ ಮಾತೇ ಎಂದೇ ಹೇಳಬಹುದು. ಇನ್ನೂ ಮಳೆಗಾಲ ಬಂತೆಂದರೆ ಸಾಕು ಮಳೆರಾಯ ನಮ್ಮನ್ನೆಲ್ಲ ಮುತ್ತಿಕ್ಕಿಬಿಡುತ್ತಿದ್ದ.‌ ಅಂತದ್ರಲ್ಲಿ ನಾವು ಎಲ್ಲಿಂದ ಅಡುಗೆ ಮಾಡಿಕೊಳ್ಳುವುದು? ಹಾಗಾಗಿ ನಮ್ಮ ದಿನನಿತ್ಯದ ಊಟ ಹೋಟೆಲ್ಗಳಲ್ಲಿಯೇ ಸಾಗುತ್ತಿತ್ತು. ಇಲ್ಲ ಕಂಪನಿ ಕೊಡುವ pocket ಆಹಾರದಲ್ಲಿಯೇ ಮುಗಿದುಬಿಡುತ್ತಿತ್ತು. ಇದೆಲ್ಲದರ ನಡುವೆ ಆಶಾ ಮತ್ತೆ ಜ್ಯೋತಿ ಎಂಬ ಹುಡುಗಿಯರು ಒಂದು business ಶುರು ಮಾಡಿಕೊಂಡಿದ್ದರು. Business ಅಂದ ತಕ್ಷಣ ನಿಮ್ಮ mindನಲ್ಲಿ ಏನೇನೋ ವಿಚಾರಗಳು ಓಡಾಡುವುದು ಬೇಡ. ಯಾಕಂದ್ರೆ ನೀವು ತಿಳಿದುಕೊಂಡಿರತಕ್ಕಂತ business ಅಂತದ್ದೇನಿಲ್ಲ.        ಕೆಲಸದ ಮಧ್ಯೆ tifin ಗೆಂದು ಬಿಡುವು ವಿರುತ್ತದೆ. ಆ ಕಂಪನಿಯ building ತುಂಬಾ ದೊಡ್ಡದು. ಅದರ ಕೆಳಗಿನ ಅಂತಸ್ತಿನಲ್ಲಿ ಸಾವಿರಾರು vehicles ಗಳನ್ನು parking ಮಾಡಿರುತ್ತಾರೆ. ಆ parking ಸ್ಥಳದಲ್ಲಿ ನಾವು ಊಟ ಮತ್ತು ತಿಂಡಿ ಮುಗಿಸುತ್ತಿದ್ದೆವು. ಅಷ್ಟೇ ಏಕೆ ಒಮ್ಮೊಮ್ಮೆ ನಮ್ಮ ಜೊತೆಗೆ ಕೆಲಸ ಮಾಡತಕ್ಕಂತ ladies ಮತ್ತು ಹುಡುಗಿಯರು, vehicle ಗಳ ಮರೆಯಲ್ಲಿ ತಮ್ಮ ಬಟ್ಟೆಗಳನ್ನು ಬದಲಿಸಿ uniform ತೊಟ್ಟು ಕೊಂಡಿದ್ದುಂಟು. ಕನಿಷ್ಠ ಬಟ್ಟೆ ಬದಲಿಸಲು room ಇಲ್ಲದ ನಾವುಗಳು ಕೂಡ ಆ ಒಂದು  big company employees ಎಂದೇಳಿ ಕೊಳ್ಳುವುದಷ್ಟೇ ನಮಗೆ ಹೆಮ್ಮೆ. ಅದಕ್ಕೇನೇ ಇರಬೇಕು ಕಾರ್ಮಿಕರ ಸಂಘಗಳು ಹುಟ್ಟಿಕೊಂಡಿದ್ದು ಅನಿಸುತ್ತದೆ.       ಅದೊಂದು ದಿನ. ತಿಂಡಿ ತಿನ್ನುವ ಸಮಯ. ಕೆಲವು ಹುಡುಗರು ತಿಂಡಿ ತಿನ್ನಲು ಹೊರಗಡೆ ಹೋಗಿದ್ದರು. ಕೆಲವರು parking ಸ್ಥಳದಲ್ಲಿಯೇ ತಿಂಡಿ ತಿನ್ನುತ್ತಿದ್ದರು. ನನಗೆ ಹಸಿವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ನನ್ನ ಜೇಬಿನಲ್ಲಿ ದುಡ್ಡಿಲ್ಲ. ಏನು ಮಾಡುವುದೆಂದು ಯೋಚಿಸುತ್ತಾ….  ಪ್ರಕಾಶನೂ ಕೂಡ ನನ್ನ ಆಗೇ ನಿನ್ನೆ ದುಡ್ಡಿಲ್ಲ ಎಂದು ಹೇಳಿದ್ದ. ಹಾಗಿದ್ದರೆ ಅವನು ಈ ದಿನ ತಿಂಡಿಗೆ ಏನು ಮಾಡುವನು! ಎಂದು ಇಬ್ಬರೂ ಸೇರಿ ಯಾರ ಹತ್ತಿರ ನಾದರೂ ಸಾಲ ಕೇಳೋಣ ಎಂದುಕೊಂಡು  parking ಸ್ಥಳಕ್ಕೆ ಬಂದೆ. ಅಲ್ಲಿ ನೋಡಿದರೆ ಆಶಾ ಮತ್ತು ಪ್ರಕಾಶ ತುಂಬಾ ಸಲಿಗೆಯಿಂದ ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಏನೇನೋ ಮಾತನಾಡುತ್ತಾ ಆಗಾಗ ಕಿಲಕಿಲನೆ ನಗುತ್ತ ತಿಂಡಿ ತಿನ್ನುತ್ತಿದ್ದರು. ಇದನ್ನು ಕಂಡ ನನಗೆ ಅವರ ಪಕ್ಕ ಹೋಗಿ ಮಾತನಾಡಿಸಬೇಕೆಂದು ಅನಿಸಲಿಲ್ಲ. ಪಾಪ ಅವನೋ ಎಲ್ಲಿಂದಲೋ ನನ್ನ ಆಗೆ ಬಂದ ಬಡಪಾಯಿ. ಅವನಾದರೂ ಸುಖವಾಗಿ ತಿನ್ನಲಿ ಎಂದು ಮನಸ್ಸು ಹೇಳುತ್ತಿದ್ದರೆ. ನನ್ನ ತಲೆ ಏನೇನೋ ಯೋಚಿಸುತ್ತಿತ್ತು. ಇದು ಹೀಗೆಯೇ ಪ್ರತಿದಿನ ನಡೆಯುತ್ತಲೇ ಇತ್ತು.         ಮತ್ತೊಂದು ದಿನ.  ನಾನು ಆಶಾ ಮತ್ತು ಪ್ರಕಾಶ ತಿಂಡಿ ತಿನ್ನುವುದನ್ನು ನೋಡುತ್ತ ಕುಳಿತಿದ್ದೆ. ಆ ದಿನ ಪ್ರಕಾಶ ತಿಂಡಿಯನ್ನು ತಿಂದು ಬೇಗನೇ ಹೊರಟು ಹೋದ. ಸ್ವಲ್ಪ  ಹೊತ್ತಿನ ನಂತರ  ಆಶಾಳ ಹತ್ತಿರ ಪ್ರಭು ಕೂಡ ಬಂದು ಕುಳಿತ. ನಾನು ಇವನ್ಯಾಕಪ್ಪಾ ಇವಳ ಹತ್ತಿರ ಹೋದನೆಂದು ಯೋಚಿಸುತ್ತಿರುವಾಗಲೇ ಆಶಾ ತನ್ನ bagನಿಂದ tifin box ಅನ್ನು ತೆಗೆದು ಅವನ ಕೈಗೆ ಕೊಟ್ಟಳು. ಅವನು ಕೂಡ ನಗುನಗುತ್ತಲೇ boxನ್ನು ಬಿಚ್ಚುತ್ತಾ ತಿಂಡಿಯನ್ನು ತಿಂದು ಹೊರಟುಹೋದ. ಸ್ವಲ್ಪ ಹೊತ್ತಿನ ನಂತರ ಆಶಾಳೂ ಕೂಡ ಅಲ್ಲಿಂದ ಹೊರಟು ಹೋದಳು. ನನ್ನ maind ನಲ್ಲಿ ಲೆಕ್ಕಾಚಾರಗಳು ತುಂಬಾ ನಡೆಯಲಿಕ್ಕೆ ಶುರುವಿಟ್ಟುಕೊಂಡವು. ನಾನು ಈ ಮೊದಲು mostly ಪ್ರಕಾಶ ಮತ್ತು ಆಶಾ love ಮಾಡುತ್ತಿರಬಹುದೇನೋ! ಅದಕ್ಕಾಗಿಯೇ ಆಶಾ ಪ್ರಕಾಶನಿಗೆ ಪ್ರತಿದಿನ ತಿಂಡಿ ತಂದುಕೊಡುತ್ತಿದ್ದಳು ಎಂದುಕೊಂಡಿದ್ದೆ. ಆದರೆ ಇವತ್ತು ಪ್ರಭುವಿಗೂ ಕೂಡ ತಿಂಡಿ ಕೊಟ್ಟಿದ್ದರಿಂದ ನನ್ನ ಮನಸ್ಸಿನಲ್ಲಿ ಅವಳ ಬಗ್ಗೆ ಬೇರೆನೆ ಯೋಜನೆಗಳು ಶುರುವಾದವು. ಇವಳೇನು ದ್ರೌಪದಿನ ಇಬ್ಬಿಬ್ಬರನ್ನು love ಮಾಡುತ್ತಿದ್ದಾಳೆ. ಯಪ್ಪಾ ಶಿವನೇ ಇಂಥವರನ್ನೆಲ್ಲ ಆ ದೇವರೇ ಕಾಪಾಡಬೇಕು. ಎಂದು ಯೋಚಿಸುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಪ್ರಕಾಶ ಬಂದು;   “ಏನೋ ಗಾಳೇರ ಯಾಕೆ ಇಲ್ಲಿ ಕೂತಿದೀಯ, ಟಿಫಿನ್ ಆಯ್ತಾ” ಎಂದಾಗ ನನಗೆ ತಡೆದುಕೊಳ್ಳಲಾಗದೆ,     “ನನಗೆಲ್ಲಿಂದ ಟಿಫಿನಪ್ಪ, ನಿಮಗೇನು ನಿಮ್ಮ ಹುಡುಗಿ ಆಶಾ ಇದ್ದಾಳೆ. ಮನೆಯಿಂದ ನಿಮಗೆ ಬೇಕುಬೇಕಾದದ್ದು ತಂದು ಮಾಡಿಕೊಡುತ್ತಾಳೆ. ಸೌಜನ್ಯಕ್ಕಾದರೂ ಒಂದು ಮಾತು ಕರೆಯುವುದಿಲ್ಲ ಲೋ ಪ್ರಕಾಶ” ಎಂದುಬಿಟ್ಟೆ.      “ಹೇ ಅವಳೇನು ಪುಕ್ಸಟ್ಟೆ ಕೊಡಲ್ಲಪ್ಪ….. ಟಿಫಿನ್ ಗಾಗಿ ತಿಂಗಳ ಸಂಬಳ ಆದಮೇಲೆ ಒಂದು ಟಿಫಿನ್ ಗೆ ಮೂವತ್ತು ರೂಪಾಯಿ ಅಂತ ಲೆಕ್ಕ ಹಾಕಿಕೊಂಡು ಇಸ್ಕೋತಾಳೆ ನಿನಗೆ ಬೇಕಿದ್ರೆ ಹೇಳು ನಾಳೆಯಿಂದ ಇನ್ನೊಂದು box extra ತರಲಿಕ್ಕೆ ಹೇಳತೀನಿ” ಅಂತ ನನ್ನ ಉತ್ತರಕ್ಕೂ ಕಾಯದೆ ಹೊರಟು ಹೋದ.      ನಾನು ಆಶಾ

ಗಾಳೇರ್ ಬಾತ್ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್.ಡಿ. ನಿನ್ನ ಬಿಟ್ಟು ನಾನು ಬಹುದೂರ ಬಂದಿರುವೆನು ಗೆಳೆಯ ನೀನು ಅತ್ತು ಕೂಗಿದರೂ ಕೇಳಿಸದಾಗಿದೆ ನನಗೀಗ ಗೆಳೆಯ ಇಷ್ಟು ದಿನ ಪ್ರೀತಿಯ ಭ್ರಮಿಸಿ ಕನವರಿಸಿ ನಿತ್ರಾಣವಾಗಿರುವೆನು ನಾನು ಮನವೀಗ ಅರಸಿಬಂದರು ಮರುನೋಡದೆ ಒಪ್ಪಿಕೊಳ್ಳದಾಗಿದೆ ಗೆಳೆಯ ಬಿಸಿಲ್ಗುದುರೆಯೇರಿ ಮೋಹದ ಓಣಿಯ ಜೀವಜಲಕ್ಕಾಗಿ ಓಡಿದೆ ನಾನು ಹೆಜ್ಜೆಗಳು ಬಸವಳಿದು ಕಣ್ಣರಳಿಸಲಾರದೆ ಕಳೆಗುಂದಿದೆ ಗೆಳೆಯ ಘಮಭರಿತ ಸುಮವೀಗ ನಿರ್ವಾತಕ್ಕೆ ಸಿಲುಕಿ ಕಠಿಣ ಶಿಲೆಯಾಗಿ ಬದಲಾಗಿದೆ ಕ್ರಿಯೆಗೆ ಪ್ರತಿಕ್ರಿಯಿಸುವ ಸೂಕ್ಷ್ಮ ಸಂವೇದನೆಗಳ ಕಳೆದುಕೊಂಡಿದೆ ಗೆಳೆಯ ನೀನೀಗ ಒಲವ ಅಮೃತಧಾರೆಯನ್ನೇ ಸ್ಪುರಿಸಿದರೂ ಹಿತವಾಗುತ್ತಿಲ್ಲ ನನಗೆ ಗೋರ್ಕಲ್ಲ ಮೇಲೆ ಮಳೆ ಸುರಿದು ನಿಷ್ಪ್ರಯೋಜಕವಾಗಿದೆ ಗೆಳೆಯ ಐಹಿಕದ ಯಾವುದೂ ಬೇಡ ದೂರದ ಬೆಳಕೊಂದ ಅರಸಿ ಹೊರಟಿಹೆ ಈಗ ನನ್ನಷ್ಟಕ್ಕೆ ನನ್ನ ಬಿಟ್ಟುಬಿಡು ನನ್ನಿಷ್ಟದ ಬದುಕು ಸನಿಹವಾಗಿದೆ ಗೆಳೆಯ ಹೋಗಬೇಕೆಂದಿರುವೆ ಜಾತಿಮತ ಲಿಂಗಭೇದ ತೂರಿ ನೀತಿನಿಯಮಗಳಾಚೆ ಸ್ವಚ್ಛಂದವಾಗಿ ನಿತ್ಯ ತೇಜದಿ ಪ್ರಜ್ವಲಿಸುವ ತಾರೆಯಾಗುವ ಹಂಬಲವಾಗಿದೆ ಗೆಳೆಯ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿರುಪದ್ರವಿ ವಸುಂಧರಾ ಕದಲೂರು ಗಿಡಗಂಟಿ ಬಳಿ ಹೂ ಕೊಯ್ಯಲು ಹೋದೆ; ಮೈ ಮೇಲೆ ಕಪ್ಪು ಇರುವೆ ಹತ್ತಿದೆ. ಅದು ಹಾದಿ ತಪ್ಪಿತೆ ಅಥವಾ ನಾನು ತಪ್ಪಿದೆನೆ ಬೆರಳ ಬೆಟ್ಟಗುಡ್ಡ ಏರಿಳಿದು, ಅಂಗೈ ರೇಖೆ ಅಳೆದು, ಸರಸರಾ ಸರಸರಾ ಸಂಚರಿಸಿತು ಸಾವಧಾನವೇ ಇಲ್ಲ ಸರಸರಾ ಸರಸರಾ.. ನೋಡುತಿದ್ದೆ ಕಂಗೆಟ್ಟದ್ದು ಯಾರು ಭುಜದ ಮೇಲೆ; ಹಣೆ, ಮೂಗು, ಕೆನ್ನೆ ಮೇಲೆಲ್ಲಾ ಹರಿದಾಡಿತು ಸರಸರಾ ಸರಾಸರಾ.. ಈ ಮೈ, ಈ ಜೀವವುಳ್ಳ ನನ್ನನ್ನು ಹೊತ್ತ ಮೈ ; ಬಲು ಬಂಜರೆನಿಸಿತೇನು ಎದೆಗಿಳಿಯಲಿಲ್ಲ; ಒಲವ ಪಸೆ ಕಾಣಲಿಲ್ಲ. ಹರವಾದ ಈ ದೇಹ ಒಂದು ಇರುವೆಗೂ ಆಗಿಬರದಷ್ಟು ದೊಡ್ಡದು; ಸತ್ತ ಮೇಲೆ ಬೂದಿಕಸ. ಸರಸರಾ ಸರಸರಾ.. ತಡಕಾಡಿತು ಬಿಡುಗಡೆಯ ಹಾದಿಗೆ ಸರಸರಾ ಸರಸರಾ.. ಸಿಕ್ಕಿತದೋ ಕಾಲ ಬುಡದಲ್ಲಿ ನೆಲ, ಹಸಿರು, ಬದುಕು, ಒಲವು.. ಸರಸರಾ ಸರಸರಾ.. ಒಮ್ಮೆಗೆಲೆ ಕಳಚಿತು. ಹೇಗೆ ಜಾರಿಕೊಂಡಿತೋ ತಿಳಿಯದು ಯಾರಿಲ್ಲಿ ಆ ನಿರುಪದ್ರವಿ ! ••••••••••••• —

ಕಾವ್ಯಯಾನ Read Post »

You cannot copy content of this page

Scroll to Top