ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಮನದ ಮುಗಿಲ ಹಾದಿ ರೇಶ್ಮಾ ಗುಳೇದಗುಡ್ಡಾಕರ್ ಕುಸುಮಾ- ಸರಳ ರೂಪ ,ಯಾವ ಹಮ್ಮು ಬಿಮ್ಮುಗಳಿಗೆ ಅವಳಲ್ಲಿ ಜಾಗವಿರಲಿಲ್ಲ  . ಬ್ಯಾಂಕ್ ಒಂದರ ಉದ್ಯೋಗ. ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆ ಯ ಪತಿ ಅತ್ತೆ-ಮಾವನ ಒಬ್ಬನೇ ಮಗ. ಮುಂದಿನ ಬೀದಿಯಲ್ಲಿ ನಾದಿನ ಮನೆ ಸ್ಥಿತಿ ವಂತ ಕುಟುಂಬ . ಮದುವೆಯಾಗಿ ಹತ್ತು ವರ್ಷ ಕಳೆದರೂ ಅವಳಿಗೆ ಮಗುವಿನ ಭಾಗ್ಯ ಇರಲಿಲ್ಲ . ಇದಕ್ಕೆ ಅವಳಲ್ಲಿ ಯಾವ ದೋಷವು ಇರಲಿಲ್ಲ..!!! . ತನ್ನಲ್ಲಿ ಇಲ್ಲದ ತಪ್ಪಿಗೆ ಅವಳಲ್ಲಿ ಮಾಗಲಾರದ ಗಾಯವಾಗಿ  ಮನದಲ್ಲಿ ಜೀವಂತವಾಗಿತ್ತು ..‌‌   ಅವಳ ಈ ನೋವನ್ನು ಹಂಚಿಕೊಳ್ಳುವ , ಸಮಾಧಾನಿಸುವ ಯಾವ ಪ್ರಾಣಿಯು ಅವಳಿಗೆ ಮನೆಯಲ್ಲೂ ಆಫೀಸಿನಲ್ಲೂ ಇರಲಿಲ್ಲ …‌!!!??       ಸದಾ ಅವಳ ಸಂಬಳ ದ ಲೆಕ್ಕ ಚಾರ ಮಾಡುವ ಅತ್ತೆಮಾವ , ಹಂಗಿಸುವ ನಾದಿನಿ , ಇದನ್ನು  ಕಂಡುಕಾಣದಂತೆ ಇರುವ ಪತಿ.ಇನ್ನು ಆಫೀಸಿನಲ್ಲಿ ಇವಳ ಉದ್ಯೋಗ , ಗಂಡನ ಸಿರಿತನದ ಬಗ್ಗೆಯೇ ಮಾತು ಮತ್ತು ಉಚಿತ ಸಲಹೆ ಕೊಡುವವರ ಸಂಖ್ಯೆಇತ್ತೆ ಹೊರತು ಮನಕ್ಕೆ ಹತ್ತಿವಾಗುವ ಯಾವ ಜೀವಿಯೊ ಇರಲಿಲ್ಲ .> >    ಆದರೆ ಸರಳ ಮೃದು ಮನದ ಸ್ನೇಹಾಳ ಗೆಳತನಕ್ಕೆ ಯಾವುದೇ ಅಡ್ಡಿ ಇರಲಿಲ್ಲ .ಸಮಯ ಸಿಕ್ಕಾಗಲೇಲ್ಲ ಸ್ನೇಹಾಳ ಮನೆ ,ಪಾರ್ಕ್ , ವಾಕಿಂಗ್ ಎಂಬ ಹೆಸರಿನಿಂದ  ಸಮಯ ಕಳೆಯುತ್ತದ್ದಳು .ಇಲ್ಲವಾದರೆ ಅವಳು ಮೌನಿ …. ಒಂದು ಪ್ರೀತಿತುಂಬಿದ ಮಾತು ಸಾಕು ಬದುಕಿನಲ್ಲಿ ಭರವಸೆ ಬರಲು ಆದರೆ ಅಂತಹ ಮಾತು , ಮನಗಳು ಸಿಗುವದು ಈ ಜಗತ್ತಿನಲ್ಲಿ ಬಹಳ ದುಬಾರಿ … ಸದಾ ಹಣ ,ಅಧಿಕಾರ , ಕೆಲಸ, ಹೀಗೆ ಗೌರವಿಸುವ ಜಗತ್ತಿನಲ್ಲಿ ನಮಗಾಗಿ ಸ್ಪಂದಿಸುವ ನಿಷ್ಕಲ್ಮಷ ಸ್ನೇಹ ಸಂಬಂಧ ಬಹಳ ವಿರಳ .      ಕುಸುಮಾ ಲಘುಬಗೆಯಿಂದ ಮನೆಯ ಕೆಲಸ ಮುಗಿಸಿಬ್ಯಾಂಕ್ ಗೆ ಹೊರಡಲು ತಯಾರಾದಳು ಸಮಯ ಆಗಲೇ ಹತ್ತು ಆಗುತ್ತಾ ಬರುತ್ತಿತ್ತು . ಅತ್ತೆ  ಟಿ.ವಿ ನೋಡುವದರಲ್ಲಿ ಮಗ್ನರಾಗಿದ್ದರು .ಪತಿರಾಯ ಹೊರಡುವ ತಯಾರಿಯಲ್ಲಿದ್ದ ಇವಳು ಒಟ್ಟಿಗೆ ಹೊರಟರಾಯಿತು ಎಂದು ಹೊಬಂದಳು ಅಗಲೇ ಅವಳ ಅತ್ತೆ ಮಗನಿಗೆ ತನ್ನ ತಂಗಿಯ ಮನೆಗೆ ಹೊಗಿ ಆಫೀಸಿಗೆ ಹೋಗಲು ಆಜ್ಞೆ ಮಾಡಿದರು …!!  ಪತಿರಾಯ ಸಮ್ಮತಿಸಿ .ಕುಸುಮಾಳಿಗೆ ಕಣ್ಣಲ್ಲೆ ಬಾಯ್ ಹೇಳಿ ಹೊರಟು ಹೋದ .    ಕುಸುಮಾ ಇನ್ನು ಬಸ್ಸೇ ಗತಿ ಎಂದು  ಗೇಟಿನ ಬಳಿಬಂದಳು ಅಂಗಳದಲ್ಲಿ ತಾನು ಮುಂಜಾನೆ ಹಾಕಿದ ರಂಗೋಲಿ ಅರಳಿ ನಕ್ಕು ಮಾತಾಡಿಸಿದಂತೆ ಭಾಸವಾಯಿತು ಕುಸುಮಾ ಅದನ್ನು ನೋಡಿ ಸಂತೋಷದಿಂದ  ಬಸ್ ನಿಲ್ದಾಣ ಕ್ಕೆ ಬಂದಳು ..          ಬಸ್ಸು ತಂಗುದಾಣದ ಎದುರಿಗೆ ಸರ್ಕಾರಿ ಆಸ್ಪತ್ರೆ ಇತ್ತು. ಅಲ್ಲಿ ಜನಸಂಣಿ ತುಂಬಿ ರಸ್ತೆ ತುಂಬಾ ಜನರು ತುಂಬಿ ಅಳು ನರಳಾಟ ಕಂಡುಬಂತು .ಕುಸುಮಾ ಅದನ್ನು ನೋಡಿ ಕೊಂಚ ಗಲಿಬಿಲಿಗೊಂಡಳು ಇಷ್ಟು ಪ್ರಮಾಣದ ಜನ ಎಂದೋ ಅವಳು ಈ ದಾರಿಯಲ್ಲಿ ಕಂಡಿರಲಿಲ್ಲ .     ಜನರನ್ನು ಕೇಳಿದಳು …..ಸ್ಪಷ್ಟ ಮಾಹಿತಿ ಸಿಗಲಿಲ್ಲ ಅಷ್ಟರಲ್ಲಿ ಆಸ್ಪತ್ರೆಯ ನೌಕರರಾದ ಪರಿಚಿತ ಅಪ್ಪಣ್ಣ ಬರುತ್ತಿರುವದು ಕಂಡು ಕುಸುಮಾ ಅವರ ಬಳಿ  ತೆರಳಿ ಮಾತಾಡಿಸಿದಳು ಅವರು ರಾಜ್ಯದ ಹೆದ್ದಾರಿಯಲ್ಲಿ ನಸುಕಿಗೆ ಭೀಕರ ಅಪಘಾತವಾಗಿದ್ದು ಬೆಳಗಾವಿ ಸಮೀಪದ ತಾಂಡ ಜನರು ಕೂಲಿ ಕೆಲಸಕ್ಕಾಗಿ ಗುಳೆ ಹೋರಟಿದ್ದರುಅವರನ್ನು ತುಂಬಿಕೊಂಡು ಬಂದ ಟ್ಯಾಕ್ಟರ್ ಮತ್ತು ಎದುರಿಗೆ ಬರುತ್ತದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ತುಂಬಾ ಹೆಣಗಳು ಚೆಲ್ಲಾಪಿಲ್ಲಿಯಾಗಿದ್ದು ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆ ಗೆ ದಾಖಲಿಸಲಾಗಿದ್ದು ಅವರಿಗೆ ರಕ್ತ ದ ಮಾದರಿ ತರಲು ಸಾಯಿ ಮಲ್ಟಿಸ್ಪಷೇಲ್ ಆಸ್ಪತ್ರೆಗೆ ಹೊರಟಿರುವುದಾಗಿ ತಿಳಿಸಿದರು .  ಕುಸುಮಾ ತನ್ನದು “ಓ ನೇಗೆಟಿವ್ ಇದೆ ಬೇಕಾದರೆ ಹೇಳಿ ಕೊಡುತ್ತೆನೆ ಎಂದಳು” .ಅವರು ತುಂಬಾ ಸಂತೋಷಗೊಂಡು “ಹಲವು ರಕ್ತ ನಿಧಿಗೆ ಹೇಳಿದ್ದವು ಮುಂಜಾನೆಯಿಂದ ಬನ್ನಿ ನೋಡೋಣ ”  ಎಂದು ಹೇಳಿ ಅವಳನ್ನು ಕೊಡಲೆ ಆಸ್ಪತ್ರೆ ಯ ಒಳಗೆ ಕರೆದುಕೊಂಡು ಹೋದರು .          ಕುಸುಮಾ ಅಪಘಾತದ ತೀವ್ರ ತೆಯನ್ನು ಮೊದಲ ಬಾರಿಗೆ ಜೀವನದಲ್ಲಿ ಕಣ್ಣಲ್ಲಿ ಕಂಡಳು . ಮಕ್ಕಳು ವೃದ್ದರು ಎನ್ನದೆ ಎಲ್ಲರೋ ನರಳುತ್ತಿದ್ದರು . ಇಡೀ ಆಸ್ಪತ್ರೆ ರೋದನದಿದಂದ ತುಂಬಿತ್ತು ಕುಸುಮಾ ಭಾವಜೀವಿ ಅವಳ ಮನವು ದುಃಖಿಸಿತ್ತು ಮೂಕವಾಗಿ ……ಸಾವು ನೋವು ಸಕಲ ಚರಾಚರಗಳಿಗೊ ಒಂದೇ ಅಲ್ಲವೇ ತುತ್ತಿನ ಚೀಲತುಂಬಿಸಲು ಹೋಗಿದ್ದವರು ಜವರಾಯನ ಬಾಯಿಗೆ ತುತ್ತಾಗಿದ್ದರು!?       ಮೆಲ್ಲನೆ ಅವರಗಳನ್ನು ನೋಡುತ್ತಾ ಭಾರವಾದ ಹೆಜ್ಜೆ ಹಾಕುತ್ತಾ ವಾರ್ಡಿನತ್ತ ನಡೆದಳು  ಅಪ್ಪಣನವರು ಇದನ್ನು ಗಮನಿಸಿ “ಆಸ್ಪತ್ರೆ ಗಳಲ್ಲಿ ಇದು ನಿತ್ಯವು ಇರುವ ಸಾಮನ್ಯ ಸಂಗತಿ ಆದರೆ ಇಂದು  ಜನರ ನರಳಾಟ ಅಫಘಾತದ ಪರಿಣಾಮ ಹೆಚ್ಚಾಗಿದೆ . ನಿಮಗೆ ಇದು ಹೊಸದು ಬನ್ನಿ ತಾಯಿ ಈ ಜೀವ ನೀರಿನ ಮೇಲಿನ ಗುಳ್ಳೆಯಂತೆ .ಅದರೂ ಜನಗಳು ಈ ಸತ್ಯವ ಮರೆತು ನಾನು ,ನನ್ನದು ಎಂಬ ಸ್ವಾರ್ಥ ದ ಕೋಟೆಯಲ್ಲಿ ಬದುಕುತ್ತಾನೆ ” ಎಂದು ಹೇಳುತ್ತಾ ಅವಳನ್ನು ಸಾಮಾಧಾನಿಸುತ್ತಾ ಕರೆದುಕೊಂಡು ಹೋದರು ಅವರು ಸಾತ್ವಿಕ ನಿಷ್ಠಾವಂತ ನೌಕರರಾಗಿದ್ದರು ಇಡೀ ಆಸ್ಪತ್ರೆ ಯಲ್ಲೆ ಉತ್ತಮ ಕೆಲಸಗಾರ ಎಂಬ ನಂಬಿಕೆ ಗಳಿಸಿದರು .ಹಣ ಪಕ್ಷಪಾತದ ಯಾವ ಆಮಿಷ ಕ್ಕೆ ಒಳಗಾಗದೆ ಸೇವೆಯನ್ನು ಸಲ್ಲುಸುತ್ತಾ ಜೀವನ ನಡೆಸುತ್ತದ್ದರು. ಕುಸುಮಾಳ ಮುಂದಿನ ಬೀದಿಯ ಲ್ಲೆ ಇವರ ಮನೆಯೊ ಇತ್ತು .       ಕುಸುಮಾಳ ರಕ್ತ ದ ಮಾದರಿಯನ್ನು ಮತ್ತುಅವಳ ಆರೋಗ್ಯವನ್ನು ಪರೀಕ್ಷಿಸಿ. ಅವಳನ್ನು  ಒಂದು ಕೊಠಡಿ ಯಲ್ಲಿ ರಕ್ತ  ನೀಡಲು ಅವಕಾಶ ಮಾಡಕೊಟ್ಟರು  ಕುಸುಮಾ ಅಷ್ಟರಲ್ಲಿ ತನ್ನ ಸಹೋದ್ಯೋಗಿ ಗೆ ಕರೆಮಾಡಿಸಂಕ್ಷಪ್ತವಾಗಿ ವಿಷಯ ತಿಳಿಸಿ ರಜೆ ಪಡೆಯಲು ಹೇಳಿದಳುಪತಿಗೆ ಹೇಳುವ ಗೋಜಿಗೆ ಹೋಗಲಿಲ್ಲ .ಚಿಕ್ಕ ವಿಚಾರ ಇಗಲೇ ಹೇಳುವ ಅಗತ್ಯವಿಲ್ಲ ಅಗತ್ಯ ಬಂದರೆ ಹೇಳಿದರಾಯುತು ಎಂದು ಕೊಂಡು ಮೊಬೈಲ್ ಬ್ಯಾಗಿಗೆ ಹಾಕಿಕೊಂಡು ಕೊಠಡಿಗೆ ಬಂದಳು .            ಎಲ್ಲಾ ಮುಗಿದು  ಮಧ್ಯಾಹ್ನದ ಕಳೆಯುತ್ತಾ ಬಂದಿತು .ಅಪ್ಪಣ್ಣ ನವರು ಅವಳನ್ನು ಆಗಾಗ ಬಂದು ವಿಚಾರಿಸುತ್ತಾ  ಹೊಗುತ್ತಿದ್ದರು .      ಅವಳಿಗೆ ದಾಳಿಂಬೆ ಪಾನಕ ತಂದರು ” ಸ್ವಲ್ಪ ವಿರಮಿಸಿ ನಿಮ್ಮ ಪತಿಗೆ ಮಾಹಿತಿ ತಿಳಿಸಿರುವೆ ಅವರು ಇನ್ನೇನು ಬರುತ್ತಾರೆ ” ಎಂದು ತಿಳಿಸಿದರು. ” ತಮ್ಮಿಂದ ತುಂಬಾ ಉಪಕಾರವಾಯ್ತು ಎಂದು ಹೇಳಿ ಕೆಲಸ ತುಂಬಾ ಇದೆ ಹೊರಡುವಾಗ ಕೌಂಟರ್ ಅಲ್ಲಿ ಇರುತ್ತೇನೆ ಏನಾದರೊ ಬೇಕಾದರೆ ಸಂಕೋಚ ಪಡದೆ ಕೇಳಿ” ಎಂದು ಕುಸುಮಾಳಿಗೆ  ಹೇಳಿ  ಹೋದರು .ಅವಳು ಅಲ್ಲೆ ಮಂಚದ ಮೇಲೆ ವಿರಮಿಸುತ್ತಾ ಕುಳಿತಳು .ಅಷ್ಟರಲ್ಲಿ ಪತಿ ಅಭಯ್ ನ ಆಗಮನವಾಯಿತು .” ಅಪ್ಪಣ್ಣ ನನಗೆ ಕಾಲ್ ಮಾಡಿ ಹೇಳಿದರು ಇಗ ಹೇಗಿರುವೆ ? ಹೋಗೊಣವೇ ಮನೆಗೆ ? ” ಎಂದನು .      ಸರಿ ಎಂದು ಕುಸುಮ ಅಭಯ್ ಕೊಠಡಿ ಇಂದ ಹೊರನಡೆದರು ಆಸ್ಪತ್ರೆ ಯ ತುಂಬಾ ನರ್ಸ, ನೌರರು ,ಡಾಕ್ಟರ್ಗಳ ಗಡಿಬಿಡಿ ಓಡಾಟ , ಚಿತ್ಕಾರ, ನರಳಾಟ ಮುಗಿಲು ಮುಟ್ಟಿತ್ತು ಪೋಲಿಸರ ಉಪಸ್ಥಿತಿ, ಸಂಬಂಧಿಕರ ಹುಡುಕಾಟ , ಹೀಗೆ ಒಂದು ವಿಭಿನ್ನ ಲೋಕವೊಂದು ಅಲ್ಲಿ ಸೃಷ್ಟಿ ಯಾಗಿತ್ತು …..            ಕುಸುಮಾಳ ಮನದಲ್ಲಿ ಹಲವು ಪ್ರಶ್ನೆ ಉತ್ತರಗಳು ಈ ಹೊಸ ಅನುಭವಕ್ಕೆ ಸಾಕ್ಷಿ ಎಂಬಂತೆ ಉದ್ಬವಿಸುತ್ತಿದ್ದವು ಅಭಯ್  ಅವಳ ಮನದ ಇಂಗಿತ ಅರಿತು ಅವಳ ಕೈ ಹೀಡಿದು  ಕರೆದುಕೊಂಡು ಹೊರಬಂದನುಹೊರ ಬರುವಾಗ ಕೆಳಗಿನ ವಾರ್ಡ ಅಲ್ಲಿ ಸತ್ತ ತಾಯಿಯ ಶವದ ಮೇಲೆ ಹಾಲುಕುಡಿಯಲು ಹವಣಿಸುತ್ತಾ ಅಳುತ್ತಿದ್ದಒಂಭತ್ತುತಿಂಗಳ ಹೆಣ್ಣು ಮಗುವಿನ ದೃಶ್ಯ ಕುಸುಮಾಳ ಎದೆಯನ್ನು ಸೀಳಿಬಿಟ್ಟಿತ್ತು!     ಆ ಮನಕಲಕುವ ಸಂಗತಿಗೆ ಕುಸುಮಾಳ ಕಣ್ಣಾಲಿಗಳು ತುಂಬಿ ಬಂದವು .ಅಲ್ಲಿದ್ದ ಜನರಿಗೆ ಯಾರಿಗೊ ಇದರ ಪರಿವೆ ಇರಲಿಲ್ಲ .ಎಲ್ಲರಿಗೊ ಒಂದೊಂದು ನೋವು ಮನತುಂಬಿದ್ದವು .ತಮ್ಮಗಳ ನೋವಲ್ಲೆ ಜಗವ ಮರೆತಿದ್ದರು .    ಕುಸುಮಾ ಒಂದುಕ್ಷಣ ತನ್ನನ್ನೇ ತಾನು  ಆ ಮಗುವಿನಲ್ಲಿ ಕಂಡಳು ಹತ್ತು ವರ್ಷಗಳಿಂದ ಸತತ ನೋವು ,ಅವಮಾನಕ್ಕೆ ಶರಣಾಗಿ ಎಲ್ಲರೂ ಇದ್ದು ಇಲ್ಲದಂತೆ  ಬದುಕಿನಲ್ಲಿ ದಾರಿ ಕಾಣದೆ ನಿತ್ಯವು ದಹಿಸುತ್ತಿದ್ದಳು ಅಂತರಂಗದ ಬೆಂಕಿಯಲ್ಲಿ…!  ಇಂದು ಆ ಮಗು ವು ಇಷ್ಟು ಜನಗಳ ಮಧ್ಯ ತನ್ನವರ ಕಳೆದುಕೊಂಡು ಆನಾಥವಾಗಿತ್ತು …!!! .   ಕುಸುಮಾ   ಓಡಿ ಆ ಮಗುವನ್ನುಎತ್ತಿಕೊಂಡು ಸಂತೈಸುತ್ತಾ ಹೊರಬಂದಳು ಅವಳ ಈ ಅನೀರಿಕ್ಷತ  ನಡೆ ಪತಿ ಅಭಯ್ ಗೆ ಅಚ್ಚರಿಂದರು ಅವಳನ್ನು ಪ್ರಶ್ನಿಸುವ ದಿಟ್ಟತನ ಕ್ಕೆ ಅವನು ಕೈಹಾಕಲಿಲ್ಲ .ಸತ್ಯ ಅವನಿಗೋ ತಿಳಿದಿತ್ತು .    ಕುಸುಮಾ ಮಗುವನ್ನು ಎತ್ತಕೊಂಡು ಮನೆಗೆ ಬಂದಳು ಪತಿಯ ಜೊತೆಗೆ .ಮನೆಯಲ್ಲಿ ಇದ್ದ ಅತ್ತೆ – ಮಾವ  ನಾದಿನಿ ಮದ್ಯಾಹ್ನದ ಊಟ ಮುಗಿಸಿ ರಾತ್ರಿ ಗಾಗಿ ಸಂಬಾರ್ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸುತ್ತಿದ್ದ ನಾದಿನಿ (ಇದು ಅವಳ ನಿತ್ಯದ ಕಾಯಕ …!!) ಎಲ್ಲರ ಮುಖದಲ್ಲೂ ಅಚ್ಚರಿ ಮತ್ತು ಪ್ರಶ್ನಾರ್ಥಕ ಚಿಹ್ನೆ ಉದ್ಬವಿಸಿದ್ದವು …!??   ತನ್ನ ಇಬ್ಬರು ಹೆಣ್ಣುಮಕ್ಕಳಲ್ಲಿ ಒಂದನ್ನು ಅಣ್ಣನಿಗೆ ದತ್ತು ಕೊಡುವ ಅದಮ್ಯ ಬಯಕೆ ಇತ್ತು  ನಾದಿನಿ ಗೆ .ಅಣ್ಣನ ಆಸ್ತಿ ತನಗೇ ಸೇರುತ್ತದೆ ಈ ಮೂಲಕ ಎಂಬ ಅದ್ಬುತ ಚಿಂತನೆಯಿಂದ !  ಅಭಯ್ ಗೆ ಒತ್ತಾಯ ಮಾಡುತ್ತಿದ್ದಳು ಇದಕ್ಕೆ ತನ್ನ ತಾಯಿಯ ಸಹಕಾರವು ಇತ್ತು . ಅದರೆ ಇದಕ್ಕೆ ಅಭಯ್ ಯಾವದೇ ಸೊಪ್ಪು ಹಾಕಿರಲಿಲ್ಲ  .ಆದರೆ ಈಗ ಎಲ್ಲ ಬುಡ ಮೇಲಾಗಿತ್ತು…..ಒಂದೇ ಹೊಡೆತಕ್ಕೆ .ಆ ಪುಟ್ಟ ಮಗುವನ್ನು ಕುಸುಮ ತಬ್ಬಿ ಹೀಡಿದು ಎತ್ತಿಕೊಂಡ ನೋಟವೇ ಅವರನ್ನು ಹೆಚ್ಚು ಕೆಣಕಿತ್ತು .ಕುಸುಮಳ ಮನದ ಇಂಗಿತ ಭಾವನಾತ್ಮಕವಾಗಿ ಅರಿವು ಮಾಡಿತ್ತು.     ಅತ್ತೆ ,ಮಾವ , ನಾದಿನಿ ಎಲ್ಲರೂ ಒಮ್ಮಲೇ ಅರ್ಭಟ ನಡೆಸಿದರು .  ಅಭಯ್ ಕುಸುಮಾ ಳ ಮೇಲೆ ಮಾತಿನ ಯುದ್ಧ.  ನಡೆಯಿತು ಆದರೆ ಕುಸುಮಾ ಳ ನಿರ್ಧಾರ ಬದಲಿಸುವ ಪ್ರಯತ್ನ ವಿಫಲವಾಯಿತು .ಕೊನೆಗೆ ಕುಸುಮಾ   ಮಗುನಿನೊಂದಿಗೆ ಒಬ್ಬಳೆ ಬದುಕುವ ನಿರ್ಧಾರ ವನ್ನು ಪ್ರಕಟಿಸಿದಳು .ಅಭಯ್ ಕ್ಷಣಮಾತ್ರದಲ್ಲಿ ಅದುರಿಹೋದ .ಕುಸುಮಾಳನ್ನು ತಡೆದು ನಿಧಾನವಾಗಿ ಹತ್ತು ವರ್ಷ ಮುಚ್ಚಿಟ್ಟ ಸತ್ಯ ಹೇಳಿದನು .ತನ್ನಿಂದ ಕುಸುಮಾಳಿಗೆ ಮಗು ನೀಡಲು ಸಾದ್ಯವಿಲ್ಲ .ಇದನ್ನು ಜಗತ್ತಿಗೆ ತಿಳಿಸಿ ಅವಮಾನ ಪಡುವದನ್ನು ತಪ್ಪಿಸಿಕೊಂಡು ನಿರಾತಂಕವಾಗಿ ಕುಸುಮಾಳ ಮೇಲೆ ಈ ಮಿಥ್ಯವನ್ನು ಹೊರಿಸಿದ್ದಾಗಿ , ಕುಸುಮಾಳನ್ನು ಬಿಟ್ಟು ಬದಕುಲು ಅಸಾದ್ಯವೆಂದು ಮೊದಲಬಾರಿಗೆ ಅಭಯ್ ಕುಸುಮಾಳ ನ್ನು ಹೀಡಿದು ಕ್ಷಮೆ ಯಾಚಿಸಿದನು ..!   ಅವನ ಮಾತುಗಳು ಮನದಾಳದಿಂದ ಹೊರಬಂದಿದ್ದವು ಕಂಗಳು ತುಂಬಿ ನಾಚಿಕೆಯಿಂದ ತಲೆತಗ್ಗಿಸಿದ್ದನು.ನಾದಿನಿ ರಭಸವಾಗಿ ಕ್ಯಾರಿಯರ್ ತೆಗೆದುಕೊಂಡು ಹೊರನಡೆದಳು …!!!?    ಅತ್ತೆಮಾವ ನಿಗೆ ಕುಸುಮಾಳ ಸಂಕಟಕ್ಕಿಂತ ಕುಸುಮಾಳ ಅವಮಾನ ನಿರಾಶೆಗಿಂತ . ಮಗಳಿಗಾದ ನಿರಾಶೆ ತೋಕವೇ ಹೆಚ್ಚಾಗಿ ಕಂಡಿತ್ತು …..!. ತಾವು ಇನ್ನು ಮುಂದೆ ಇಲ್ಲಿ ಇರುವದಿಲ್ಲ .  ಈ ಮಗು ನಮ್ಮ ರಕ್ತವಲ್ಲ ಇದು ನಮ್ಮದಲ್ಲ ನನ್ನ ಆಸ್ತಿಯಲ್ಲಿ ಒಂದು ಭಾಗವು ನಿನಗೆ ಇಲ್ಲ ಎಂದು ಘೋಷಿಸಿ ಹಳ್ಳಿಗೆ ಹೊರಡಲು ತಯಾರಾದರು.!!.  ಅಭಯ್ ಯಾರನ್ನು ಸಮಾಧಾನಿಸುವ ಗೋಜಿಗೆ ಹೊಗಲಿಲ್ಲ .ಮಗುವನ್ನು ಎತ್ತಿಕೊಂಡು ಕುಸುಮಾಳನ್ನು ಕರೆದುಕೊಂಡು ರೂಮಿಗೆ ಬಂದನು . ನಾಳೆ ವಕೀಲರನ್ನು ಕಂಡು ಮಗುವಿನ ಬಗ್ಗೆ ಮಾತುಕತೆ

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಸಂಬಂಧಗಳ ನವೀಕರಣ ಸುಧಾ ಹೆಚ್.ಎನ್ ನನ್ನಿಂದ ಆಗಲ್ಲ ಮೇಡಂ, ನನಗೆ ಅವನ ಜೊತೆ ಹೆಂಡತಿತರ ಸಂಸಾರ  ಮಾಡಕ್ಕೆ ಸಾಧ್ಯನೇ ಇಲ್ಲ,ನನಗೆ ಡೈವರ್ಸ್ ಬೇಕು” ಅಂದಳು ಹುಡುಗಿ. ಇಪ್ಪತ್ತೊಂದರ ಹರೆಯದ ಲಕ್ಷಣವಾದ ವಿದ್ಯಾವಂತೆ.       ತಾಯಿಯನ್ನು ಕಳೆದುಕೊಂಡು ತಂದೆಯ ಆನಾದಾರಕ್ಕೊಳಗಾಗಿ ಅನಾಥವಾಗಿದ್ದ ಎರಡು ವರ್ಷದ, ಈ ಹುಡುಗಿಯನ್ನು ಮೊಮ್ಮಗಳ ನಾಥೆಯಿಂದ ಮಡಿಲಿಗೆ ಹಾಕಿಕೊಂಡಿದ್ದಳು,ತಾಯಿಯ ತಾಯಿ ಅಂದರೆ ಅಜ್ಜಿ. ಅಜ್ಜಿ…ಮತ್ತವಳ ಹುಟ್ಟು ಕುರುಡ ಮಗನೇ ಇವಳ ಬಂದು-ಬಳಗ ಎಲ್ಲಾ,ಅಜ್ಜಿ ಹೊಲ, ಮನಿ ಚಾಕರಿ ಎಂದು ಬಿಡುವಿಲ್ಲದೆ ದುಡಿಯುತ್ತಿದ್ದರೆ,ಹುಡುಗಿಗಿಂತ ಏಳು ವರ್ಷ ದೊಡ್ಡವನಾದ ಸೋದರ ಮಾವಜತನದಿಂದ ಸೊಸೆಯ ನ್ನು ಸಂಬಾಳಿಸುತ್ತಿದ್ದ. ಅವಳನ್ನು ತೊಟ್ಟಿಲಲ್ಲಿಟ್ಟು ತೂಗುತ್ತಿದ್ದ. ಅವಳ ಪ್ರತಿ ಚಲನೆ ಅವಳರಿವನ್ನು ಆವರಿಸಿ ಒಳಗಣ್ಣು ತೆರೆದಿಟ್ಟು ಜೋಪಾನ ಮಾಡಿದ್ದ. ಈ ಹುಡುಗಿ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ,ಮಾವ-ಸೊಸೆ ಪರಸ್ಪರ ಅವಲಂಬಿತರಾಗಿ ಬದುಕತೊಡಗಿದ್ದರು. ಶಾಲೆ ಕಲಿಯ ತೊಡಗಿದ್ದು ಆ ಹುಡುಗಿಯಾದರೂ ಮಗ್ಗಿ,ಕತೆ,ಪದ್ಯ ಪಾಠ ವೆಲ್ಲಾ ಮಾವನಿಗೂ ಕಂಠಪಾಠವಾಗಿದ್ದವು. ಇವಳಿಗೆ ತಂದೆ ತಾಯಿಯ ಕೊರತೆ ಕಾಣಲೇ ಬಾರದು, ಅವನಿಗೆ ಕಣ್ಣು ಗಳಿಗೆ ಮುತ್ತಿದ್ದ ಕತ್ತಲ ಅರಿವು ಆಗಲೇ ಬಾರದು, ಎನ್ನುವುದನ್ನು ಪರಸ್ಪರರಿಗೆ ನಂಬಿಸುವ ಹಾಗೆ ಇವರಿಬ್ಬರ ಜೀವನ ನಡೆದಿತ್ತು. ಅದು ಮಾನವ ಸಹಜವಾದ ಪ್ರೀತಿಯೋ..ಅನಿವಾರ್ಯವೋ…ಅವಲಂಬನೆಯೋ ಅವರೆಂದೂ ಈ ಕುರಿತು ಯೋಚಿಸಲೇ ಇಲ್ಲ. ಹುಡುಗಿ ಆಗಲೇ ಕಾಲೇಜು ಮೆಟ್ಟಿಲು ಹತ್ತಿದ್ದಳು. ಇದ್ದಕ್ಕಿದ್ದಂತೆ ಅಜ್ಜಿ ಜಡ್ಡು ಬಂದು ಹಾಸಿಗೆ ಹಿಡಿದಿತ್ತು. ತನ್ನನ್ನೇ ನೆಚ್ಚಿಕೊಂಡ ಹರೆಯದ ಮೊಮ್ಮಗಳು ಕಣ್ಣು ಕಾಣದ ಮಗ ,ಊರಿನ ಹಳೆ ತಲೆಗಳು ಅಜಮಾಯಿಷಿ ಕೊಟ್ಟ ಸಲಹೆಯಂತೆ ನರಳುತ್ತಲೇ ಕುರುಡು ಮಗನೊಂದಿ ಗೆ ಮೊಮ್ಮಗಳ ಮದುವೆ ಮಾಡಿ ಮುಗಿಸಿತ್ತು ಅಜ್ಜಿ. ಮದುವೆ ನಂತರ ಮೂರರಿಂದ ನಾಲ್ಕು ತಿಂಗಳ ಕಾಲ ಅಜ್ಜಿಯ ಆರೈಕೆಯಲ್ಲಿ ಕಳೆದು ಹೋಗಿತ್ತು. ಅಜ್ಜಿಗೆ ಇದೆಲ್ಲ ರೇಜಿಗವನ್ನು ನೋಡಿ, ಅನುಭವಿಸುವ ಯೋಗ ಇದ್ದದ್ದ ಕ್ಕೋ ಏನೋ ಬದುಕಿ ಉಳಿದಿತ್ತು. ಈ ಮಧ್ಯೆಯೂ ಹುಡುಗಿ ವಿದ್ಯಾಭ್ಯಾಸ ಮುಂದುವರಿಸಿದ್ದಳು. ಮೂರು ತಿಂಗಳಿನಿಂದ ಕೆಲಸಕ್ಕೂ ಹೋಗತೊಡಗಿದ್ದಳು. ವರ್ಷ ದಿಂದ ತೊಡರುಗಾಲು ಹಾಕತೊಡಗಿದ್ದ ಇವರಿಬ್ಬರ ಸಂಬಂಧ ಇತ್ತೀಚೆಗೆ ಮುಗ್ಗರಿಸಿ ಬಿದ್ದಿತ್ತು. ಕುರುಡ ಗಂಡ ನಿಂದ ಡೈವರ್ಸ್ ಕೊಡಿಸಿ ಎಂದು ನನ್ನ ಬಳಿ ಬಂದಿದ್ದಳು ಹುಡುಗಿ. ” ಮೇಡಂ ಮಾವ ನಿನಗೆ ಏನು ಬೇಕೋ ಅದು ಬರ್ಕಂಡು ಬಾ ಸಹಿ ಮಾಡಿ ಕೊಡ್ತೀನಿ ಕೋರ್ಟೆಗೆಲ್ಲಾ ಹೋಗೋದೇ ನು ಬ್ಯಾಡ ಅಂದಿದಾನೆ.” ಅಂದಳು.” ನೋಡಮ್ಮ, ಹಾಗೆಲ್ಲಾ ಗಂಡ-ಹೆಂಡತಿ ನೀವು, ನೀವೇ ಕರಾರು , ಪತ್ರ ಅಂತ ಬರೆದುಕೊಂಡರೆ ಅದು ಕಾನೂನುಬದ್ಧ ವಿಚ್ಛೇದನ ಆಗಲ್ಲ. ಹಿಂದೂಗಳಲ್ಲಿ ವಿಚ್ಛೇದನ ನ್ಯಾಯಾಲಯದ ಮೂಲಕಾನೇ ಆಗಬೇಕು . ಸಾಮಾನ್ಯವಾಗಿ ಮದುವೆ ಯಾದ ಒಂದು ವರ್ಷ ಅದ್ಮೇಲೆ ಮಾತ್ರ ಡೈವೋರ್ಸ್ ಕೇಸ್ನ ಕೋರ್ಟಿಗೆ ಹಾಕಬಹುದು. ನಾವು ಕೇಸು ಹಾಕಬೇಕು ಅಂದ್ರೆ ಕಾರಣಗಳು ಬೇಕು. ನೀವು ಎರಡು ವರ್ಷಕ್ಕಿಂತ ಹೆಚ್ಚು ಸಂಸಾರ ಮಾಡದೆ ಬೇರೆ ಬೇರೆ ಇದ್ದಿರಬೇಕು. ಅವನು ನಿನಗೇನಾದರು ಹಿಂಸೆ ಕೊಟ್ಟಿರಬೇಕು , ಏನಾದರೂ ಕಾಯಿಲೆ ಇದ್ದಿರಬೇಕು. ಅವನು ನಿನ್ನ ಜೊತೆ ಅಲ್ಲದೆ ಬೇರೆ ಇನ್ನೊಂದು ಮದುವೆಯಾಗಿದ್ದರೆ,ಬೇರೆ ಧರ್ಮಕ್ಕೆ ಸೇರಿದ್ದರೆ ಹೀಗೆ ಯಾವುದಾದರು ಕಾರಣಗಳಿದ್ದ ರೆ ಅವನ ವಿರುದ್ಧ ಡೈವೋರ್ಸ್ ಕೇಳಿ ಕೇಸು ಹಾಕಬಹು ದು. ಡೈವೋರ್ಸ್  ಅಂದರೆ  ಹುಡುಗಾಟವಲ್ಲ . ತುಂಬಾ ಕಷ್ವ. ಕೋರ್ಟಿಗೆ ತುಂಬಾ ಸಮಯ ಓಡಾಡಬೇಕು.  ನಿನಗೆ ನಿನ್ನ ಗಂಡ  ಡೈವರ್ಸ್ ಕೊಡೋಕೆ ತಯಾರಿದಾನೆ ಅನ್ನೋದಾದ್ರೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ತಗೋಬಹುದು. ಒಂದು ಕೆಲಸ ಮಾಡು ನಿಮ್ಮಜ್ಜೀನ , ಸಾಧ್ಯವಾದರೆ ಗಂಡನ್ನೂ ಕರ್ಕೊಂಡು ಬಾ. ನಾನು ಮಾತಾಡ್ತೀನಿ “ಅಜ್ಜಿ,ಗಂಡ ಎಲ್ಲರನ್ನೂ ಕೂರಿಸಿ, ಮಾತಾಡಿ ಸಮಾಧಾನ ಹೇಳಿ ರಾಜಿ ಮಾಡಿ ಕಳಿಸುವ ಉದ್ದೇಶದಿಂದ ಹೇಳಿ ಕಳಿಸಿದ್ದಕ್ಕೆ ಅಜ್ಜಿ,ಗಂಡನೊಂದಿಗೆ ಬಂದು ‌ ನನ್ನೆದುರು   ಕೂತಿದ್ದಳು.   “ಏನಂತೀರಾ ಅಜ್ಜಿ”. ” ಏನ್ ಹೇಳದವ, ಸಣ್ಣಾಕಿದ್ದಾಗ ಅವನ ಜೊತೆ ಪಾಡಾಗೇ ಇದ್ಲು. ಅರಗಳಿಗೇನು ಅವನ್ನ ಬಿಟ್ಟುರ್ತಿಲಿಲ್ಲ. ಅವನ ಕೈ ಹಿಡ್ಕಂಡೇ ಇರಾಕಿ. ಅವನ ಎಲ್ಲಾ ಚಾಕ್ರಿ ತಾನೇ ಮಾಡಕಿ. ಅವನಿಗೊಂದು ಅಸರೆ ಆಗತೈತಿ ಅಂತ ಮದ್ವಿ ಮಾಡ್ದೆ”. ಅಜ್ಜಿ ತನ್ನ ಪರಿಮಿತಿಯಲ್ಲಿ ಪ್ರಾಮಾಣಿಕವಾಗಿಯೇ ನಡೆದುಕೊಂಡಿದ್ದಳು.” ಆ ವಯಸ್ಸಿನಲ್ಲಿ ನನಗೆ ಏನು ಗೊತ್ತಾಕತಿ ಅಜ್ಜಿ. ನೀನು, ಮಾವ ಬಿಟ್ಟರೆ ನನಗೆ ಬ್ಯಾರೆ ಯಾರೂ ದಿಕ್ಕಿದ್ರು?. ಅವನ ಜೊತೇನೆ ಇರ್ತಿದ್ದೆ. ನೀನು ಬ್ಯಾರೆ ಸಾಯಂಗಿದ್ದಿ. ಹಂಗಂತ ನನಗೆ ಸರಿ-ತಪ್ಪು ತಿಳೀದಿರೋ ವಯಸ್ಸಲ್ಲಿ ನೀನು ಕಣ್ಣು ಕಾಣ್ದವನ ಜೊತೆ ಮದುವೆ ಮಾಡಿಬಿಟ್ಟರೆ ನನಗೆ ಅನ್ಯಾಯ ಮಾಡಿದಂಗೆ ಆಗಾಕಿಲ್ವಾ ? ಸಾಯೋಗುಂಟ ಇವನ ಜೊತೆ ನಾ ಹೆಂಗೆ ಬಾಳ್ಲಿ. ನಂಗೂ ಆಸೆ ಅಂತ ಇರಾಕಿಲ್ವಾ”? ವಯಸ್ಸು , ಕಲಿತ ವಿದ್ಯೆಯ ಪರಿಣಾಮ ಬುದ್ಧಿ ಬಲಿತು ಹೊರಗಿನ ಬಣ್ಣದ ಪ್ರಪಂಚದ ಪರಿಚಯವಾಗಿ ಪ್ರಸ್ತುತ ಪರಿಸ್ಥಿತಿಗೆ ಒಗ್ಗಿಕೊಳ್ಳಲಾಗದ, ಸಂಬಂಧ ಹರಿದುಕೊಳ್ಳಲಾಗದ ಗೊಂದಲದ ಮನಸ್ಥಿತಿಗೆ ಬಲಿಯಾಗಿದ್ದಳು ಆ ಹುಡುಗಿ. “ಕಷ್ಟಪಟ್ಟು ಸಾಕಿ, ಸಲುವಿ, ಮೈಯನೆರೆದ್ದಿದ್ದೂ ನಿನಗ್ಯಾಕೆ ಅನ್ಯಾಯ ಮಾಡ್ಲೇ ತಾಯಿ ನನಗ್ಯಾರಿದಾರೆ? ನೀವಿಬ್ರೂ ಆವಾಗ ಚನ್ನಾಗಿದ್ರಿ,ನನಗೇನೋ ಬ್ಯಾನಿ ಅವಾಗಬಂದಿತ್ತು. ನಿಮ್ಮಿಬ್ಬರನ್ನೇ ಬಿಟ್ಟು ಸತ್ತೋಗಿಬಿಟ್ರೇ? ನೀವಿಬ್ರೂ ಅನಾಥ ಅಗೋಗ್ತೀರ ಅನ್ನೊದಿಗಿಲಿಂದ ಮದುವೆ ಮಾಡ್ಬಿಟ್ಟೆ ! ನಿಮ್ಮವ್ವನ್ನ ಆಣೇಗೂ ಮುಂದೆ ನಿನ್ನ ಜೀವನ ಈ ಮದುವಿಂದ ಹಾಳಾಗತೈತಿ ಅನ್ನೋದು ಅರುವಾಗಲಿಲ್ಲ ನಂಗೆ. ಇರಕ್ಕೆ ಮನೆ ಇತ್ತು ,ನಾಕು ಎಕ್ರಿ ಜಮೀನಿತ್ತು, ಹೆಂಗೋ ಇಬ್ರೂ ಜೀವನ ಮಾಡ್ಕಂಡು ಹೋಕಿರಿ ಅಂತ ಯೋಚ್ನಿ ಮಾಡ್ದೆ.” ಅಜ್ಜಿ ಕಣ್ಣೀರಾಯಿತು. ” ಈಗ ಏನು ಮಾಡೋಣ ಅಜ್ಜಿ” ನಾನು ಕೇಳಿದೆ. ” ಮತ್ತೇನ್ಮಾಡದೈತವಾ, ನನ್ನ ಮಗನಿಗೂ ಇದು ಹೊಂದಲ್ಲಬೇ . ಸುಮ್ಕೆ ಅಕಿ ಹೆಂಗೆ ಹೇಳ್ತಾಳೋ ಹಂಗೆ ಮಾಡಾನ . ದಿನಾ ಇದೇ ರೇಜಿಗ ನೋಡಿ ಸಾಕಾಗೇತಿ ಅಂತ ಹ್ವಾದ ದೀಪಾವಳಿಂದ ವರಾತ ಹಚ್ಚಿದ್ದ. ನಾನೆ ತಡ್ದಿದ್ದೆ. ಇಲ್ಲಿತನ ಬಂದಾಳೆ ಅಂದ್ರೆ ತೀರ್ತಲ್ಲ , ಅಕಿ ಹೆಂಗೆ ಹೇಳ್ತಾಳೆ ಹಂಗೆ ಮಾಡ್ರೀ. ನನ್ನ ಮಗನ ಹಣೆ ಬರದಾಗ ಇದ್ದಾಂಗ ಆಕತಿ.” ಅಜ್ಜಿ ಗಟ್ಟಿಯಾಗಿಯೇ ಹೇಳಿದಳು. “ನೀನೇನಂತಿಯಪ್ಪ “. ನನ್ನ ಗೊಂದಲದ ಪ್ರಶ್ನೆ. ” ನಮ್ಮಿಂದ ತಪ್ಪು ಆಗೇತಿ ಮೇಡಂ. ತಂದೆ,ತಾಯಿ ಇಲ್ದಿರೋ , ಇನ್ನು ಸರಿಯಾಗಿ ತಿಳುವಳಿಕಿ ಬಾರದ ಹುಡುಗಿ ಮದುವೀನ ನನ್ನಂಥ ಬದುಕು ಕತ್ತಲಾದವನ ಜೋಡಿ ನಮ್ಮವ್ವ ಮಾಡ್ತೀನಿ ಅಂದಾಗ ನಾನಾದ್ರೂ ಯೋಚನೆ ಮಾಡಿ ಒಲ್ಲೆ ಅನ್ನಬೇಕಾಗಿತ್ತು. ನಮ್ಮವ್ವ ಲೋಕ ತಿಳೀದವಳು. ಅವಳ ಮನಸ್ಸಿನಲ್ಲಿ ವಿಷ ಇರ್ಲಿಲ್ಲ. ನಾನೇ ದುರಾಸೆಗೆ ಬಿದ್ದೆ. ನಮ್ಮನ್ನೇ ನಂಬಿದ್ದವಳಿಗೆ ಮೋಸ ಮಾಡ್ದಂಗಾಗೈತಿ. ಇವತ್ತಿನತನಕ ಆಕಿ ನನ್ನ ಹಡದವ್ವನಷ್ಟೇ ಸಮ ಕಾಳಜಿಯಿಂದ ನೊಡ್ಕಂಡವಳೆ. ನನ್ನ ಚಾಕರಿ ಮಾಡ್ಯಾಳೆ,ಗೆಳತಿತರ ಒಂದಿಷ್ಟು ಜ್ಞಾನ ,ಬುದ್ದಿ ಕಲಿಸಿದಾಳೆ. ತಬಲ , ಸಂಗೀತದ ಹೊಸ ಜಗತ್ತು ನನಗೆ ತೋರಿಸಿದ್ದು ಆಕೀನೇ ತೀರಿಸಲಾರದಷ್ಟು ,ಆಕಿ ಋಣ ನನ್ನಮೇಲೈತೆ. ಮುಂದೆ ಆಕಿ ಸುಖವಾಗಿ ಬಾಳಿ, ಬದುಕಬೇಕು. ಅದಕ್ಕೆ ನಾನು ಏನು ಮಾಡಬೇಕು ಹೇಳಿರಿ ? .” ಹುಡುಗನ ಸಮತೂಕದ ಮಾತು,ಸಮರ್ಪಣಾ ಭಾವ,ಅಂತರಂಗದ ಶುದ್ಧತೆ , ಸಮಚಿತ್ತದ ನಿರ್ಧಾರ, ತಪ್ಪೊಪ್ಪಿಗೆಯೊಂದಿಗೆ ಋಣಸಂದಾಯದ ಆಶಯ. ನಾನು ನಿರೀಕ್ಷಿಸದ ಪರಿಪೂರ್ಣ ವ್ಯಕ್ತಿತ್ವದ ಅನಾವರಣ ನನ್ನ ಬಾಯಿ ಕಟ್ಟಿಸಿತು . ಪರಸ್ಪರರ ಒಳಿತಿಗೆ ತುಡಿಯುವ ಆ ಮೂರೂ ಜೀವಗಳಿಗೆ ಮನದೊಳಗೆ ಶರಣೆಂದೆ. ಎರಡು ಎಕರೆ ಜಮೀನನ್ನು ಶಾಶ್ವತ ಜೀವನಾಂಶವನ್ನಾಗಿ ಆಕೆಯ ಹೆಸರಿಗೆ ಬರೆದುಕೊಟ್ಟು ಹರಸಿದರು ತಾಯಿ. ಮಗ. ಈ ವೈವಾಹಿಕ ಬಂಧನದಿಂದ ಬಿಡುಗಡೆಯಾದ. ಅಜ್ಜಿ , ಮಾವ, ಮೊಮ್ಮಗಳ ಬಂಧ ಜವಬ್ದಾರಿಯನ್ನು ಗಟ್ಟಿಗೊಳಿಸಬೇಕೆಂದು ಮೂವರಿಗೂ ತಾಕೀತು ಮಾಡಿ, ವಿಚ್ಛೇದನದ ಅರ್ಜಿ ಗುಜರಾಯಿಸುವ ತಯಾರಿಯಲ್ಲಿ ತೊಡಗಿದೆ. ……….. ………..

ಕಥಾಯಾನ Read Post »

ಇತರೆ

ಸಿನಿಮಾ ಸಾಹಿತ್ಯ

ಯೋಗರಾಜ್ ಭಟ್ಟರ ಗೀತೆಗಳ ಗಮ್ಮತ್ತು ರಾಘವೇಂದ್ರ ಈ ಹೊರಬೈಲು “ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ ಯಾರ ಸ್ಪರ್ಷದಿಂದ ಯಾರ ಮನವು ಹಸಿಯಾಗುವುದೋ ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ” ಹತ್ತು ವರ್ಷಗಳ ಹಿಂದೆ, ಹಿರಿಯರು ಕಿರಿಯರೆನ್ನದೆ ಕರುನಾಡಿನ, ಅಷ್ಟೇ ಏಕೆ ಅದರಾಚೆಯ ಎಲ್ಲರೆದೆಯೊಳಗೂ ತಣ್ಣನೆ ಹನಿಹನಿಯಾಗಿ ಸುರಿದು, ಆರ್ದ್ರಗೊಳಿಸಿ, ಮನಸಿನೊಳಗೆ ಚಿರಂತನವಾಗಿ ನಿಂತ “ಮುಂಗಾರು ಮಳೆ” ಎಂಬ ಚಿತ್ರದ ಅಮರ ಗೀತೆಯ ಸಾಲುಗಳಿವು. ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಎಂದು ಪ್ರಾರಂಭವಾಗುವ ಈ ಹಾಡಿನ ಮೇಲಿನ ಸಾಲುಗಳನ್ನು ಈ ಹತ್ತು ವರ್ಷಗಳಲ್ಲಿ ಅದೆಷ್ಟು ಸಾವಿರ ಬಾರಿ ಕೇಳಿದ್ದೇನೋ, ಅದೆಷ್ಟು ಸಾವಿರ ಬಾರಿ ಗುನುಗಿದ್ದೇನೋ ನನಗೇ ಗೊತ್ತಿಲ್ಲ. ಮುಂಗಾರು ಮಳೆಗಿಂತ ಹಿಂದೆ ಹಾಗೂ ಅದು ಬಂದ ನಂತರ ಕೂಡಾ ಅಮೋಘ ಎನ್ನಬಹುದಾದ ಅದೆಷ್ಟೋ ಹಾಡುಗಳನ್ನು ಕೇಳಿದ್ದರೂ, ಈ ಹಾಡಿನ ಪ್ರತೀ ಸಾಲೂ ಮಾಡಿದ ಮೋಡಿ ಪದಗಳಲ್ಲಿ ವರ್ಣಿಸಲಸಾಧ್ಯ. ಇಂತಹ ಅನನ್ಯ ಗೀತೆಯನ್ನು ನೀಡಿದ ಮಹಾನ್ ಬರಹಗಾರ ಯೋಗರಾಜ್ ಭಟ್ಟರ ಬಗ್ಗೆ ಅದಕ್ಕೂ ಮೊದಲು ಕೆಲವೊಮ್ಮೆ ಮಾತ್ರ ಕೇಳಿದ್ದೆ. ಆದರೆ ಈ ಹಾಡಿನ ನಂತರ ನಾನಷ್ಟೇ ಅಲ್ಲ ಕರ್ನಾಟಕದ ಎಲ್ಲ ಸಂಗೀತ ಪ್ರಿಯರು, ಪ್ರಿಯರಲ್ಲದವರೂ ಪಕ್ಕಾ ಅವರ ಅಭಿಮಾನಿಗಳಾದದ್ದು ಸುಳ್ಳಾಗುವುದಕ್ಕೆ ಸಾಧ್ಯವೇ ಇಲ್ಲ. ಇಂತಹ ಅನೇಕ ಮಾಧುರ್ಯದ ಗೀತೆಗಳಾಚೆ ತಮ್ಮದೇ ವಿಶೇಷ ಶೈಲಿಯ, ಮಾತನ್ನೇ ಹಾಡಾಗಿಸುವ ಅವರ ರೀತಿ ನಿಜವಾಗಿಯೂ ನಿಬ್ಬೆರಗಾಗಿಸುತ್ತದೆ. ಉಡಾಳತನದಲ್ಲಿ ಪ್ರಾರಂಭವಾಗುವ ಹಾಡಿಗೆ ಗಾಂಭೀರ್ಯತೆಯ, ತಾತ್ವಿಕತೆಯ ಅಂತ್ಯ ಹೇಳುವ ಮಹಾನ್ ಮೇಧಾವಿ ಅವರು. ಮೇಲ್ನೋಟಕ್ಕೆ ಹಾಡಿನಲ್ಲಿ ಉಡಾಫೆತನವಿದ್ದರೂ ತಕ್ಷಣವೇ ತನ್ನತ್ತ ಕಿವಿಗೊಡಿಸುವ ಸೆಳೆತವಿರುವುದು ಅವರ ಈ ಹಾಡುಗಳ ಶಕ್ತಿ. “ಅಲ್ಲಾಡ್ಸು ಅಲ್ಲಾಡ್ಸು” ಎಂದು ಪ್ರಾರಂಭಿಸುತ್ತಲೇ ಜೀವನವನ್ನು ಟಾನಿಕ್ಕು ಬಾಟಲನ್ನಾಗಿಸಿ, ಅಂತ್ಯದಲ್ಲಿ “ನಿನ್ನ ಜೀವನಾನ ನೀನೇ ಅಲ್ಲಡಿಸಬೇಕೋ” ಎಂಬಲ್ಲಿಗೆ ತಂದು ನಿಲ್ಲಿಸೋ ಶಕ್ತಿ ಕೇವಲ ಭಟ್ಟರಿಗೆ ಮಾತ್ರ ಸಾಧ್ಯವೇನೋ. “ಗಿಜಿ ಗಿಜಿ ಕಯ ಕಯ ಪಂ ಪಂ ಪಂ” ಎಂದು ವಕ್ರ ವಕ್ರವಾಗಿ ಪ್ರಾರಂಭಿಸುವ ಭಟ್ಟರು, “ಕುಬೇರ ಮೂಲೆ ಮಾತ್ರ ಕಟ್ಸಿ ಟಾಯ್ಲೆಟ್ನಲ್ಲಿ ಹೋಗಿ ಮಲ್ಕೊ” ಎಂದು ನಮ್ಮ ಸಮಾಜದ ಒಂದು ಕುರುಡು ನಂಬಿಕೆ ಮತ್ತು ವ್ಯವಸ್ಥೆಯ ಮೇಲೆ ತಣ್ಣನೆ ಚಾಟಿ ಬೀಸ್ತಾರೆ. “ಯಕ್ಕ ರಾಜ ರಾಣಿ ನಿನ್ನ ಕೈಯೊಳಗೆ. … ಕಾಕಾ ಕಾಕಾ ಕಾಕಾ ಕಾಕಾ ಅಂದರ್ ಬಾಹರ್” ಎನ್ನುತ್ತಲೇ ” ದೇವ್ರವ್ನೇ ಮನೆ ಮಾರಿಬಿಡಿ” ಎಂದು ಕುಟುಕಿ ಅಂದರ್ ಬಾಹರ್ನಿಂದ ಮನೆ ಮಾನ ಕಳ್ಕೊಂಡವರಿಗೆ ಮರ್ಯಾದೆಯಿಂದ ಬುದ್ಧಿ ಹೇಳ್ತಾರೆ. “ಕತ್ಲಲ್ಲಿ ಕರಡೀಗೆ ಜಾಮೂನು ತನಿಸೋಕೆ ಯಾವತ್ತೂ ಹೋಗ್ಬಾರ್ದು ರೀ” ಎಂದು ಕತ್ತಲು ಕರಡಿ ಹೀಗೆ ಏನೇನೋ ಹೇಳುತ್ತಲೇ “ಮಾಡರ್ನು ಪ್ರೇಮಕ್ಕೆ ಮೈಲೇಜು ಕಮ್ಮಿ” ಎಂದು ಇಂದಿನ ‘ಪಾಕೆಟ್ ಖಾಲಿಯಾಗೋವರೆಗಿನ, ತೆವಲು ತೀರಿಸಿಕೊಳ್ಳುವಂತ ಪ್ರೀತಿಗೆ’ ಪಾಠ ಹೇಳ್ತಾರೆ. “ಹತ್ರುಪಾಯ್ಗೊಂದ್ ಹತ್ರುಪಾಯ್ಗೊಂದ್” ಎನ್ನುತ್ತಲೇ ಇಂದಿನ ಸಂಬಂಧಗಳೇ ಮಾರಾಟಕ್ಕಿಟ್ಟಿರುವ ಸರಕಾಗಿರುವುದರ ಬಗ್ಗೆ‌ ನಾಜೂಕಾಗಿಯೇ ಚುರುಕು ಮುಟ್ಟಿಸುತ್ತಾರೆ. ಇವು ಕೆಲವೇ ಉದಾಹರಣೆಗಳಷ್ಟೇ. ಪ್ರಾರಂಭದಲ್ಲಿ ವಕ್ರ ವಕ್ರವೆನ್ನುವಂತೆ ಭಾಸವಾಗುವ ಹಾಡುಗಳಿಗೆ ಗಂಭೀರ ಸಂದೇಶ ತುಂಬಿ ತಾತ್ವಿಕ ನೆಲೆಗಟ್ಟಿನಲ್ಲಿ ನಿಲ್ಲಿಸಿ, ಎಲ್ಲರೂ ಒಮ್ಮೆ ಯೋಚಿಸುವಂತೆ, ಮತ್ತೆ ಮತ್ತೆ ಕೇಳುವಂತೆ ಮಾಡುವ, ಹರಿತವಾದ ಭಾಷೆಯನ್ನು ತನ್ನದೇ ಧಾಟಿಯಲ್ಲಿ ದಾಟಿಸುವ ತಾಕತ್ತು, ಸಮಾಜದ ಗಾಯವನ್ನು ಬೇರೆಯದೇ ರೀತಿಯಲ್ಲಿ ತೋರಿಸುತ್ತಾ, ಅದಕ್ಕೆ ಮುಲಾಮನ್ನೂ ತಮ್ಮ ಸಾಹಿತ್ಯದ ಮೂಲಕವೇ ನೀಡುವ ಕಲೆ ಭಟ್ಟರಿಗಿರುವುದು ಅವರ ದೊಡ್ಡ ಶಕ್ತಿ. “ಅದೇನು ಸಾಹಿತ್ಯನಪ್ಪ, ‘ಕಾಲಿ ಕ್ವಾಟ್ರು, ಅಲ್ಲಾಡ್ಸು, ಕಾ ಕಾ ಕಾ’ ಅಂತ ಅಸಭ್ಯ” ಅಂತ ಭಟ್ಟರ ಸಾಹಿತ್ಯವನ್ನು ಛೇಡಿಸುವವರೂ ಇರಬಹುದು. ಛೇಡಿಸುವವರ ಬಾಯ್ಮುಚ್ಚಿಸುವ ಸಾಹಿತ್ಯ ಭಟ್ಟರ ಬಾಂಡಲಿಯಿಂದ ಗರಿಗರಿಯಾಗಿ ಹೊರಬರುತ್ತಿವೆ. ಭಟ್ಟರನ್ನು ಮೀರಿಸುವ ಇನ್ನೂ ಅತ್ಯದ್ಭುತ ಸಾಹಿತಿಗಳಿರಬಹುದು. ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಅಜರಾಮರವಾಗುವಂತ ತುಂಬಾ ದೊಡ್ಡ ಹೆಸರುಗಳಿವೆ. ಆದರೆ ಭಟ್ಟರು ಅವರಿಗಿಂತ ಕಡಿಮೆಯೇನೂ ಇಲ್ಲ ಎಂಬುದೂ ಇಲ್ಲಿಯ ಕಳಕಳಿ. ಅವರ ಮುಗುಳುನಗೆ ಹಾಡಿನ ಕುರಿತು ಒಮ್ಮೆ ಸ್ನೇಹಿತ, ಸಾಹಿತಿ ಸದಾಶಿವ ಸೊರಟೂರು ಬರೆದ ಮುದ್ದಾದ ಲೇಖನಕ್ಕೆ ಅಷ್ಟೇ ಮುದ್ದಾಗಿ, ಪ್ರಾಮಾಣಿಕವಾಗಿ “ನಾನಿನ್ನು ಕೂತ್ಕೊಂಡು ನೆಟ್ಟಗೆ ಬರೀತೀನಿ” ಎಂದುತ್ತರಿಸಿದ ಭಟ್ಟರ ರೀತಿ ಇಂದಿನ ಅದೆಷ್ಟೋ ‘ಸ್ವಯಂ ಹೊಗಳು ಕವಿಗಳಿಗೆ’ ಬೆತ್ತವಿಲ್ಲದ ಪಾಠ. ನಾನೊಬ್ಬ ದೊಡ್ಡ ಬರಹಗಾರನೆಂಬ ಹಮ್ಮಿಲ್ಲದ ಭಟ್ಟರ ಸ್ವಭಾವವೋ ಅಥವಾ ಸದಾಶಿವರವರ ಬರಹದ ಮೋಡಿಯೋ ಅಥವಾ ಎರಡೂನೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ಅವರೇ ಹೇಳುವಂತೆ ನೆಟ್ಟಗೆ ಕೂತ್ಕೊಂಡು ಬರೆಯದೆಯೇ ಅದ್ಭುತ ಸಾಹಿತ್ಯ ನೀಡುತ್ತಿರುವ ಭಟ್ಟರು, ಸರಿಯಾಗಿ ಬರೆಯಲು ಪ್ರಾರಂಭಿಸಿದರಾದರೆ ಅದೆಂತಹ ಅತ್ಯದ್ಭುತ ಬರಹ ಹೊರಬರಬಹುದು, ಅದೆಂತಹ ದೊಡ್ಡ ಸಾಹಿತಿಯ ಉಗಮವಾಗಬಹುದು ಅಲ್ವಾ? ಅಂತಹ ಅತ್ಯದ್ಭುತ ಬರಹ ಭಟ್ಟರಿಂದ ಸಾವಿರಾರು ಬರಲಿ, ಅದರಿಂದ ನನ್ನಂತಹ ಕೋಟ್ಯಂತರ ಸಾಹಿತ್ಯಾಭಿಮಾನಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಲಿ ಎಂಬ ಚಿಕ್ಕ ಬಯಕೆ. ************

ಸಿನಿಮಾ ಸಾಹಿತ್ಯ Read Post »

ಕಾವ್ಯಯಾನ

ಕಾವ್ಯಯಾನ

‘ಒಲವ ವಿಜ್ಞಾಪನೆ ವಸುಂಧರಾ ಕದಲೂರು ಹೀಗೆ…ಮಾತು ಮಾತಿಗೂ ಮಾರುತ್ತರ ಬೇಡಎನ್ನವೆಯಲ್ಲಾ ನನ್ನ ಸೋಗೆಮಾತೇ ಆಡದಲೆ ನಾ ನಿನಗೆಅರ್ಥ ಮಾಡಿಸುವುದು ಹೇಗೆ ಚೆಂದದಲಿ  ಮಾತನಾಡದೆಬಿಮ್ಮನೆ ಬಿಗುಮಾನದಲಿನೀ ನಿನ್ನ ಪಾಡಿಗೆ, ನಾ ನನ್ನಷ್ಟಕೆಇರಲೇನು ಸೊಗಸು ಹೇಳು ಮುನಿಸು ಮೋಡ ಕರಗಿಸೋನೆ ಸುರಿದು ಕುದಿ ಮನಸುತಂಪಾಗಿ, ಹಸಿರು ಚಿಗುರಿತೆನೆ ತುಂಬಿ ಬಾಗುದಿರಲೇನು ಚೆಂದ ಮೌನಕ್ಕೂ ಬೇಸರ ಬಂತೀಗಮನಸು ಸೋಲುತಿದೆ ಬಾ ಬೇಗಈ ಬಾಳಿನಾಚೆ ಇನ್ನೇನಿದೆನಾನಿನಗೆ ನೀನನಗೆಂದು ಒಲವಾಗಿದೆ *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಹೇಮಗಂಗಾ ಲೌಕಿಕ ಸುಖಗಳು ತೃಣಸಮಾನವೆಂದು ಹೊರಟವಳು ನೀನು ಎಲ್ಲ ತ್ಯಜಿಸಿ ವೈರಾಗ್ಯವನೇ ಆಭರಣದಂತೆ ಧರಿಸಿದವಳು ನೀನು ಮೋಹಿಸಿದ ಕೌಶಿಕನೊಡನೆ ಬಾಳು ಮುಳ್ಳಿನ ಮಂಚವಾಯಿತು ಅರಮನೆಯ ವೈಭೋಗದತ್ತ ಚಿತ್ತವಿಡದೇ ನಡೆದವಳು ನೀನು ಹಸಿವೆ, ನಿದಿರೆ, ಅಂಜಿಕೆಗಳಾವುವೂ ಕಾಡಲಿಲ್ಲ ನಿನ್ನ ಹೇಗೆ ? ಚೆನ್ನಮಲ್ಲಿಕಾರ್ಜುನನ ಅರಸುತ್ತಾ ಕಾನನದಿ ಅಲೆದವಳು ನೀನು ಅಗಣಿತ ಅನುಭವದ ಮೂಸೆಯಲಿ ಪುಟಕ್ಕಿಟ್ಟ ಚಿನ್ನವಾದೆ ಹೆಣ್ಣೂ ಗಂಡಿಗೆ ಸಮಾನವೆಂಬ ತತ್ವ ಜಗಕೆ ಸಾರಿದವಳು ನೀನು ಆಧ್ಯಾತ್ಮವನಪ್ಪಿ ಮೊದಲಿಗಳಾದೆ ಶಿವಶರಣೆಯರ ಸಾಲಿನಲ್ಲಿ ವಚನಕ್ಷೇತ್ರದ ಹೇಮ ಮುಕುಟಕೆ ರತ್ನವಾದವಳು ನೀನು ********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಕನ್ನಡ ಮೂಲ: ಸುಬ್ರಾಯಚೊಕ್ಕಾಡಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಎಲೆ ಇದರ ಹಂಗೇ ಬೇಡ ಎಂದು ಮರದಿಂದ ಕಳಚಿಕೊಂಡ ಎಲೆ ಈಗ ಸ್ವತಂತ್ರ- ಮೇಲಕ್ಕೆ ಎತ್ತುವ ,ಕೆಳಕ್ಕೆ ತಳ್ಳುವ ಗಾಳಿಯ ನಡುವೆ ಎಲೆಗೆ ಆಕಾಶದಲ್ಲಿ ಜೀಕುತ್ತ ಸ್ವಚ್ಛಂದ ವಿಹರಿಸುವ ಹಕ್ಕಿ ಕನಸು ಗುರಿಯಿರದ ಚಲನೆಯಲಿ ಕನಸೊಡೆದು ನಗು ಮಾಯವಾಗಿ ಆಕಾಶ ದಕ್ಕದೆ ನೆಲ ಕೈಗೆಟುಕದೆ ಎಲೆ ಎಲೆಲೆ ಹೊಯ್ದಾಡಿ, ಈಗ ತ್ರಿಶಂಕು. ಹಕ್ಕಿ ಮಾತ್ರ ಮೇಲೆ ನಸು ನಗುತ್ತಿದೆ ಮರದ ಜೊತೆ ಎಲೆಯ ಸ್ಥಿತಿ ನೋಡಿ. ಆಕಾಶ ಸುಮ್ಮನಿದೆ. ಕರುಣಾಮಯಿ ಧರಿತ್ರಿ ಅವಚಿಕೊಳ್ಳುತ್ತದೆ ಎಲೆಯ ತನ್ನ ತೆಕ್ಕೆಯಲ್ಲಿ ಅಡಗಿಸಿಕೊಳ್ಳುತ್ತದೆ ತನ್ನ ಒಡಲಲ್ಲಿ. — ಸುಬ್ರಾಯಚೊಕ್ಕಾಡಿ. LEAF Thought not tobe In its owe took off from the tree that leaf is now free The leaf amid the lifting up and pushing down air being swinged with a dream of free flying bird. In its aimless journey with broken dreams forgets laughs. neither found the land nor the sky. The leaf .. ..wavelets fluctuated, in a state of trishanku. The bird sitting upon laughs at its condition With the tree. The sky is mum sympathetic earth embosoms the leaf hides it out in its womb. — Translated by – Nagarekha Gaonka

ಅನುವಾದ ಸಂಗಾತಿ Read Post »

ಇತರೆ

ಲಹರಿ

ಹೆತ್ತಮ್ಮನಲ್ಲದ ಅಮ್ಮ ಸಂಧ್ಯಾ ಶೆಣೈ [5:25 pm, 10/05/2020] SANDHYA. SHENOY: ನಮ್ಮ ಮಟ್ಟಿಗೆ ಪ್ರತಿಯೊಂದು ದಿನವೂ ತಾಯಂದಿರ ದಿನವೇ. ಆದರೂ ಕೆಲವೊಂದು ದಿನಗಳ ಹೆಸರನ್ನು ಕೇಳುವಾಗ ಮೈ ಪುಳಕಗೊಂಡು ನಮಗೆ ತಾಯಿಯಂತಹ ಪ್ರೀತಿಯನ್ನು ಕೊಟ್ಟವರ ನೆನಪೆಲ್ಲವೂ ಆಗುತ್ತದೆ .ಹಾಗಾಗಿ ಈ ದಿನವನ್ನು ನಾನು ಹೆತ್ತಮ್ಮ ನಲ್ಲದಿದ್ದರೂ ಅಮ್ಮನಂತೆ ಪ್ರೀತಿಸುವ ನಮ್ಮೆಲ್ಲ ಅಮ್ಮಂದಿರ ದಿನ ಎಂದೇ ಕರೆಯಲು ಬಯಸುತ್ತೇನೆ. ಹಾಗೂ ಇವತ್ತಿನ ಈ ನನ್ನ ಲೇಖನವನ್ನು ನಮ್ಮ ಪ್ರೀತಿಯ ಸೋದರತ್ತೆಯ ತಾರಮಕ್ಕಳಿಗೆ ಅರ್ಪಿಸುತ್ತೇನೆ. ಈಗ ಅವಳು ಹೇಳಬಹುದು “ಆ ಹುಚ್ಚಿ ನನ್ನ ಬಗ್ಗೆ ಏನು ಬರೀತಾಳಾ..” ಎಂದು . ನಾವು ಚಿಕ್ಕವರಿರುವಾಗ ನಮಗೆ ರಜೆ ಬಂದ ಕೂಡಲೇ ನಾವು ಪೆಠಾರಿ ಕಟ್ಟುವುದು ಒಂದೇ ತೀರ್ಥಹಳ್ಳಿಯ ಚಿಕ್ಕಪ್ಪನ ಮನೆಗೆ ..ಇಲ್ಲವೇ ಉಡುಪಿಯ ನಮ್ಮ ಸೋದರತ್ತೆ ತಾರಮಕ್ಕನ ಮನೆಗೆ .ಎರಡೂ ಕಡೆ ನಮ್ಮ ಸಮವಯಸ್ಕರು ಇದ್ದರು ಮಾತ್ರವಲ್ಲ ನಮ್ಮನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಅಮ್ಮಂದಿರು ಇದ್ದರು .ಚಿಕ್ಕಮ್ಮನ ವಿಷಯ ಇನ್ನೊಮ್ಮೆ ಬರೆಯುತ್ತೇನೆ . ನಾನು ಬಹಳ ಚಿಕ್ಕವಳಿರುವಾಗ ಅಮ್ಮನೊಡನೆ ಉಡುಪಿಗೆ ಹೋಗುತ್ತಿದ್ದೆ. ಆಗ ಬ್ರೆಡ್ ಗೆ ಮನೆಯಲ್ಲಿ ಕಡೆದ ಬೆಣ್ಣೆಯನ್ನು ದಪ್ಪಗೆ ಹಚ್ಚಿ ಅದರ ಮೇಲೆ ಸಕ್ಕರೆ ಹಾಕಿ ತಿಂದಿದ್ದು ಅದೇ ಅಲ್ಲಿಯೇ ಮೊದಲು .ನನಗಂತೂ ಆ ದಿನದ ಆ ಬ್ರೆಡ್ ಮತ್ತು ಬೆಣ್ಣೆ ಸಕ್ಕರೆಯ ರುಚಿ ಇಂದಿಗೂ ನಾಲಿಗೆ ತುದಿಯಲ್ಲಿಯೇ ಇದೆ. ಅಷ್ಟೊಂದು ರುಚಿಕರವಾಗಿ ಇದ್ದಂತಹ ಆ ಬ್ರೆಡ್ ಮತ್ತು ಬೆಣ್ಣೆಯ ಖುಷಿಯನ್ನು ತೋರಿಸಿದವರು ನಮಗೆ ತಾರಮಕ್ಕ. ಆ ಮನೆಯ ಕಾಂಪೌಂಡಿನಲ್ಲಿರುವ ಮಂದಾರ.. ಕರವೀರ.. ಕರಿಬೇವಿನ ಮರ ಇವುಗಳ ನಡುವೆ ಆಡಿದ್ದು ನನಗಿನ್ನೂ ನೆನಪಿದೆ .ಅಕ್ಕಪಕ್ಕದ ಮನೆಯವರೂ ನೆನಪಿದ್ದಾರೆ. ಹಾಗೆ ಸ್ವಲ್ಪ ಸಮಯದಲ್ಲಿ ಅವರು ವಳಕಾಡಿನ ಮನೆಗೆ ಶಿಫ್ಟ್ ಮಾಡಿದರು. ಮನೆ ತುಂಬಾ ದೊಡ್ಡದಿತ್ತು. ಆದರೆ ಬೇಸಿಗೆಯಲ್ಲಿ ನೀರಿಗೆ ಬಹಳ ಅಭಾವವಿತ್ತು. ನಮಗೆ ಮಕ್ಕಳಿಗೆ ಎಲ್ಲಿ ತಿಳಿಯುತ್ತದೆ ಅವರ ಕಷ್ಟ .ರಜೆ ಅಂದ ಕೂಡಲೇ ಅವರ ಮನೆಗೆ ಹೊರಡುತ್ತಿದ್ದೆ. ಉಡುಪಿಗೆ ಬಸ್ಸಿನಲ್ಲಿ ಬರುವಾಗ ಮಣಿಪಾಲದಲ್ಲಿ ಬಸ್ಸು ನಿಂತಿದ್ದಾಗ ಅಲ್ಲೇ ಇರುವ ಸಿನಿಮಾ ಬೋರ್ಡನ್ನು ನೋಡುತ್ತಿದ್ದೆ .ಯಾಕೆಂದರೆ ನನಗೆ ನೂರಕ್ಕೆ ನೂರು ಪರ್ಸೆಂಟ್ ಗೊತ್ತಿತ್ತು ತಾರಮಕ್ಕ ನನಗೆ ಒಂದಾದರೂ ಸಿನಿಮಾ ನೋಡಲು ಕಳಿಸಿಯೇ ಕಳಿಸುತ್ತಾರೆ ಎಂದು. ಹಾಗಾಗಿ ಈಗ ಯಾವ ಸಿನಿಮಾ ನಡೀತಾ ಇದೆ .ನಾನು ಯಾವುದು ನೋಡಬಹುದು ಎಂದು ಮಣಿಪಾಲದಿಂದ ಉಡುಪಿಯ ತನಕ ಲೆಕ್ಕಾಚಾರ ಹಾಕುತ್ತಲೇ ಬರುತ್ತಿದ್ದೆ. ಬಂದವಳು ಸಣ್ಣ ಹುಡುಗಿಯಾದರೂ ಯಾರೋ ವಿಐಪಿ ಬಂದಂತೆ ಪ್ರೀತಿಯಿಂದಲೇ ಸ್ವಾಗತಿಸುತ್ತಿದ್ದಳು. ಸರಿ ಮರುದಿನದಿಂದಲೇ ನಾನು ಮನೋಹರ ನಿತಿನ ಸೇರಿ ಅಜರ್ಕಾಡಿಗೆ ಹೋಗುವುದೇನು.. ದೇವಸ್ಥಾನದ ಕೆರೆಯಲ್ಲಿ ಮಕ್ಕಳು ಈಜುವುದನ್ನು ನೋಡಲು ಹೋಗುವುದೇನು.. ದೊಡ್ಡಮ್ಮನ ಮನೆಗೆ ಹೋಗುವುದೇನು ..ಆ ಬೇಸಿಗೆರಜೆ ಸಮಯದಲ್ಲಿ ಹೆಚ್ಚಾಗಿ ಸರ್ಕಸ್ ಕೂಡ ಇರುತ್ತಿತ್ತು. ಆ ಸರ್ಕಸ್ ನೋಡಲು ನಮ್ಮ ಕೇಶವಮಾಮ ನೊಟ್ಟಿಗೆ ಹೋಗುವುದೇನು ..ಒಟ್ಟಾರೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ .ನಾನು ಮೊದಲೇ ಹೇಳಿದಂತೆ ಯಾವುದಾದರೂ ಒಂದು ಕೆಲವೊಮ್ಮೆ ಎರಡೂ ಸಿನಿಮಾ ನಮಗೆ ನೋಡಲು ಖಂಡಿತವಾಗಿಯೂ ಸಾಧ್ಯವಾಗುತ್ತಿತ್ತು. ಸಿನಿಮಾ ನೋಡಿದ ಮೇಲೆ ಅಲ್ಲೇ ಪಕ್ಕದಲ್ಲಿರುವ ಡಯಾನ ಹೊಟೇಲಿನಲ್ಲಿ ನಮಗೆ ಐಸ್ಕ್ರೀಂ ತಿನ್ನಿಸುವ ಪರಿಪಾಠವಿತ್ತು. ಮನೋಹರ ಮತ್ತೆ ನಿತಿನ ಅದ್ಯಾಕೋ ಫ್ರೂಟ್ ಸಲಾಡ್ ತಿನ್ನುತ್ತಿದ್ದರು. ನನಗೆ ಫ್ರೂಟ್ ಸಲಾಡ್ ತಗೊಂಡರೆ ಐಸ್ ಕ್ರೀಂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬರಬಹುದು ಎಂದು ಐಸ್ಕ್ರೀಮೇ ಬೇಕೆಂದು ಹೇಳುತ್ತಿದ್ದೆ .ಆ ಗಾಜಿನ ಬೌಲ್ನಲ್ಲಿ ಇದ್ದಂತಹ ಐಸ್ಕ್ರೀಂ ಮತ್ತು ಅದಕ್ಕಾಗಿಯೇ ಇರುವ ಚಮಚದಿಂದ ಚೂರು ಚೂರೇ ತೆಗೆದು ಬಾಯಿಯಲ್ಲಿ ಹಾಕಿ ತಿನ್ನುತ್ತಾ ಅನುಭವಿಸುವ ಸ್ವರ್ಗ ಸುಖ ಬಹುಶಃ ಈಗ ಯಾವ ಐಸ್ಕ್ರೀಂ ತಿಂದರೂ ಸಿಗಲಿಕ್ಕಿಲ್ಲ . ನಾನಾಗಲೇ ಹೇಳಿದಂತೆ ಮನೆಯ ಪಕ್ಕದ ಬಾವಿಯಲ್ಲಿ ನೀರು ಖಾಲಿಯಾಗಿ ಸ್ವಲ್ಪ ದೂರದ ಬಾವಿಯಿಂದಲೇ ನೀರು ತರಬೇಕಿತ್ತು ಆದರೆ ಈ ನಮ್ಮ ತಾರಮಕ್ಕ ಒಂದೇ ಒಂದು ದಿನವೂ ನಮ್ಮ ಬಳಿ ತಮ್ಮ ನೀರಿನ ಕಷ್ಟವಾಗಲಿ ಅಥವಾ ನಾವು ಬಂದು ಅವರಿಗೆ ಕಷ್ಟವಾಗಿದೆ ಎಂದಾಗಲಿ ಹೇಳಿದ್ದು ಇಲ್ಲವೇ ಇಲ್ಲ..ಈಗಲೂ ಉಡುಪಿಯಲ್ಲಿ ಮೇ ತಿಂಗಳಲ್ಲಿ ಬಹಳ ನೀರಿನ ಅಭಾವವಿರುತ್ತದೆ ಹಾಗಾಗಿ ನನ್ನ ಪರಿಚಿತರು ಯಾರಾದರೂ ಉಡುಪಿಗೆ ಬರುವುದಿದ್ದರೆ ನಾನು ಮೊದಲೇ ಹೇಳುತ್ತೇನೆ “ನೀವು ಉಡುಪಿಗೆ ಬರುವ ಪ್ಲಾನನ್ನು ಏಪ್ರಿಲ್ ಮೇ ತಿಂಗಳಲ್ಲಿ ಹಾಕಲೇಬೇಡಿ. ಯಾಕೆಂದರೆ ಇಲ್ಲಿ ಒಂದು ತುಂಬಾ ಸೆಕೆ ..ಎರಡನೆಯದು ನೀರಿನ ಅಭಾವ.. ಹಾಗಾಗಿ ಏನು ಬರುವುದಿದ್ದರೂ ಆಗಸ್ಟ್ ನಂತರ ಫೆಬ್ರವರಿ ತಿಂಗಳೊಳಗೆ ಬಂದುಬಿಡಿ” ಎಂದೇ ಹೇಳುತ್ತೇನೆ. ಯಾರಿಗೋ ಯಾಕೆ ನನ್ನ ಸ್ವಂತ ಮಗಳಿಗೆ ಕೂಡ “ನೀನು ಬರುವುದಾದರೆ ಏಪ್ರಿಲ್ ನಲ್ಲೇ ಬಾ ಮಾರಾಯತಿ.. ಮೇ ತಿಂಗಳಲ್ಲಿ ಬೇಡ ..ಮೇ ತಿಂಗಳಲ್ಲಿ ನೀನು ನಿನ್ನ ಗಂಡನ ಮನೆಯಲ್ಲೇ ಇರು” ಎನ್ನುತ್ತೇನೆ. ಆಗೆಲ್ಲ ಒಂದೆ ಫ್ಯಾನ್ ಇದ್ದುದರಿಂದ ಎಲ್ಲರೂ ಒತ್ತೊತ್ತಾಗಿ ಅದೇ ಫ್ಯಾನ್ ನಡಿಯಲ್ಲಿ ಮಲಗುತ್ತಿದ್ದದ್ದು ನೆನಪಾದರೆ ಬಹಳ ಖುಷಿ ಅನ್ನಿಸ್ತಾ ಇದೆ .ಹಾಗೆ ಮನೆಯಲ್ಲಿ ಗ್ಯಾಸ್ ಇಲ್ಲದಿದ್ದರೂ ಈಗಿನಂತೆ ಮಿಕ್ಸಿ ಗ್ರ್ಯಾಂಡರ್ ಏನೂ ಇಲ್ಲದಿದ್ದರೂ ಕಟ್ಟಿಗೆ ಒಲೆ ..ಹಾಗೆ ಮರದ ಹುಡಿಯನ್ನು ಪ್ರತಿದಿನವೂ ತುಂಬಿಸಿ ತುಂಬಿಸಿ ಅವರೇ ಮಾಡುತ್ತಿದ್ದಂತಹ ಒಂದು ಡಬ್ಬಿ ಅಂತಹ ಒಲೆ ಯಲ್ಲಿಯೇ ಬಹಳ ರುಚಿಯಾದ ಅಡುಗೆಯನ್ನು ಮಾಡಿ ಬಹಳ ಪ್ರೀತಿಯಿಂದ ಬಡಿಸುತ್ತಿದ್ದರು . ಅಡುಗೆ ಮನೆಯನ್ನು ಕನ್ನಡಿಯಂತೆ ಶುಭ್ರಗೊಳಿಸಿ ತಾವು ಕೂಡ ಅತ್ಯಂತ ಶುಭ್ರವಾಗಿ ಯಾವಾಗಲೂ ಸ್ವಚ್ಛವಾದ ಕಾಟನ್ ಸೀರೆಯನ್ನು ಉಟ್ಟು ಶಿಸ್ತಿನಿಂದ ಇರುತ್ತಿದ್ದ ತಾರಮಕ್ಕಳನ್ನು ನೆನೆಸಿದರೆ.. ಈಗ ಮನೆಯಲ್ಲಿ ಎಲ್ಲಾ ಸೌಕರ್ಯವಿದ್ದರೂ ಕೊಳಕು ಕೊಳಕಾಗಿ ಇರುವ ಹೆಂಗಸರನ್ನು ನೋಡಿದರೆ ತಲೆ ಬಿಸಿಯಾಗುತ್ತದೆ .. ನಾನು ಮುಂಬೈ ಶಹರವನ್ನು ಬಿಟ್ಟು ಉಡುಪಿಯಲ್ಲಿ ನನ್ನ ಗಂಡನ ಮನೆಗೆ ಬಂದು ಇದ್ದಾಗ ನನ್ನ ಯಜಮಾನರು ಸೌದಿ ಅರೇಬಿಯಾದಲ್ಲಿದ್ದು ಆಗ ಚಿಕ್ಕ ಮಗುವನ್ನು ಕರೆದುಕೊಂಡು ನಾನು ಆಗಾಗ ತಾರಮಕ್ಕಳ ಮನೆಗೆ ಒಳಕಾಡಿಗೆ ಹೋಗುತ್ತಿದ್ದೆ.. ಒಂದು ದಿನ ನಾನು ಹೋಗುವಾಗ ಗುರುವಾರ .ನಾನು ಹೋದವಳು ಹೇಳಿದೆ “ತಾರಮಕ್ಕ ..ಗುರುವಾರ ನಾನು ರಾತ್ರಿ ಊಟ ಮಾಡುವುದಿಲ್ಲ ಹಾಗಾಗಿ ಒಂದಿಷ್ಟು ಅವಲಕ್ಕಿ ಮಾಡಿ ಕೊಡ್ತೀರಾ” ಎಂದೆ.. “ಆಯ್ತಾಯ್ತು “ಎಂದು ಹೇಳಿದರು ಆಮೇಲೆ ರಾತ್ರಿ ಊಟಕ್ಕೆ ಕೂತಾಗ ನನಗೆ ಬಿಸ್ಕೂಟ್೦ಬಡೇ ಕೊಡ್ತಾ ಇದ್ದಾರೆ .ನಾನು ಹೇಳಿದೆ . “ತಾರಮಕ್ಕ ನಿನ್ನದೊಂದು ಯಾಕೆ ಬಿಸ್ಕಿಟ್೦ಬಡೇ ಮಾಡಿದ್ದು” ಎಂದಾಗ “ಇರಲಿಯಾ ..ನಾವೂ ತಿನ್ನದೇ ಬಹಳ ದಿನವಾಯಿತು “ಎಂದು ಹೇಳಿ ನಾಳೆಗೆಂದು ಮಾಡಿ ಇಟ್ಟ ಉದ್ದಿನ ಹಿಟ್ಟಿನಲ್ಲಿಯೇ ಸ್ವಲ್ಪ ಹಿಟ್ಟು ತೆಗೆದು ಬಿಸ್ಕೂಟ್೦ಬಡೆ ಮಾಡಿಕೊಟ್ಟಿದ್ದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅಷ್ಟು ಪ್ರೀತಿ ಅವರಿಗೆ . ನನ್ನನ್ನು ಐದಾರು ತಿಂಗಳ ಮಗುವಿನೊಂದಿಗೆ ಒತ್ತಾಯಪೂರ್ವಕ ಅವರ ಮನೆಯಲ್ಲಿ ಆ ರಾತ್ರಿ ಉಳಿಸಿಕೊಂಡು ಮರುದಿನ ಹೊಸ ಸಾಬೂನು ತೆಗೆದು ಆ ಮಗುವಿಗೆ ಸ್ನಾನ ಮಾಡಿಸಿ ಅದಕ್ಕೆ ಕಿಟಿಕಿಯ ಹತ್ತಿರವೇ ಹಾಸಿಗೆಯನ್ನು ಹಾಕಿ ..ತಮ್ಮ ಮೆದು ಮೆದುವಾದ ಸೀರೆಯನ್ನು ಹಾಸಿಗೆ ಮೇಲೆ ಹರಡಿ ..ಮಲಗಿಸಿದ್ದು ನನಗಿನ್ನೂ ಕಣ್ಣೆದುರು ಕಾಣಿಸ್ತಾ ಇದೆ .ತಮ್ಮ ಹಳೆಯ ವಾಯಿಲ್ ಸೀರೆಗಳನ್ನೇ ಅವರು ಹಾಸಿಗೆಗೆ ಬೆಡ್ಶೀಟ್ಟನಂತೆ ಹಾಕುತ್ತಿದ್ದರಿಂದ ಆ ಮೃದುವಾದ ಸೀರೆಯ ಮೇಲೆ ಮಲಗುವ ಸುಖ ಇವತ್ತು ಯಾವುದೇ ಬಾಂಬೆ ಡೈಯಿಂಗ್ ಬೆಡ್ಶೀಟಿನಲ್ಲಿ ಸಿಗಲಿಕ್ಕಿಲ್ಲ .ಇವತ್ತು ನಾನು ಹೊದ್ದುಕೊಳ್ಳುವುದೂ ಅವರದೇ ಎರಡು ಮೂರು ಸೀರೆಗಳನ್ನು ಸೇರಿಸಿ ಮಾಡಿದ ಒಂದು ಗೊದ್ದೋಡಿಯನ್ನು. ದೊಡ್ಡಮ್ಮನ ಮನೆಯಲ್ಲಿ ಯಾವುದೇ ಶ್ರಾದ್ಧ ..ಏನಾದರೂ ವಿಶೇಷ ಆದರೆ ಮುಂಚಿನ ದಿನ ಹೋಗಿ ಕಡೆಯುವ ಕಲ್ಲಿನಲ್ಲಿ ಏನೆಲ್ಲಾ ರುಬ್ಬಬೇಕು ಅದನ್ನೆಲ್ಲ ರುಬ್ಬಿಟ್ಟು. ನಾನು ಕೆಲವೊಮ್ಮೆ ಸಂಜೆ ದೊಡ್ಡಮ್ಮನ ಮನೆಗೆ ಹೋದಾಗ ಈ ತಾರಮಕ್ಕ ಎಂದಿನಂತೆ ತಮ್ಮ ಕಾಟನ್ ಸೀರೆಯನ್ನು ನೀಟಾಗಿ ಉಟ್ಟು ನಗುತ್ತಾ ಕುಳಿತಿರುವುದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಎಷ್ಟೇ ಕೆಲಸವಿರಲಿ ತಮ್ಮ ಆ ಕಾಟನ್ ಸೀರೆಗಳಿಗೆ ಹದವಾಗಿ ಗಂಜಿ ಹಾಕಿ …ಕೈಯಿಂದ ತಿಕ್ಕಿ ತಿಕ್ಕಿ ನೀಟಾಗಿ ಮಡಚಿ ಅದನ್ನು ಹಾಸಿಗೆಯ ಅಡಿಯಲ್ಲಿಟ್ಟು ಇಸ್ತ್ರಿಪೆಟಿಗೆ ಇಲ್ಲದಿದ್ದರೂ ಈ ಇಸ್ತ್ರೀಯನ್ನು ಮಾಡಿ ಅದನ್ನು ಉಟ್ಟುಕೊಂಡು ಬರುತ್ತಿದ್ದರೆ ಎಂಥವರಿಗಾದರೂ ಗೌರವ ಉಕ್ಕಿ ಬರಬೇಕು. ಹಾಗಾಗಿ ನನ್ನ ಅಣ್ಣ ಅವರನ್ನು ಕಾಟನ್ ಕುಂತಿ ಎಂದೇ ಕರೆಯುತ್ತಾರೆ. ಯಾಕೆಂದರೆ ಯಾವಾಗಲೂ ಕಾಟನ್ ಸೀರೆಯನ್ನು ಉಡುವ ಇವರಿಗೂ ಕುಂತಿಯಂತೆ ಐವರು ಗಂಡು ಮಕ್ಕಳು. ನನ್ನ ದೊಡ್ಡ ಅಕ್ಕನ ಹೆರಿಗೆ ಸಮಯದಲ್ಲಿ ಅಜ್ಜಿ ಏನನ್ನೋ ತರಲು ಮಾಳಿಗೆಗೆ ಹತ್ತಿದವರು ಇಳಿಯುವಾಗ ಬಿದ್ದು ಕಾಲು ಮುರಿದು ಮಣಿಪಾಲ ಆಸ್ಪತ್ರೆಯಲ್ಲಿ ತಿಂಗಳಾನುಗಟ್ಟಲೆ ಇದ್ದರು .ಆ ಸಮಯದಲ್ಲಿ ಮಧ್ಯಾಹ್ನದ ಊಟ ..ಹಾಗೂ ರಾತ್ರಿ ಊಟ ಸೋಮೇಶ್ವರದಿಂದ ಬಸ್ಸಿನಲ್ಲಿ ಬರುತ್ತಿತ್ತು .ಆದರೆ ಬೆಳಗ್ಗಿನ ಉಪಾಹಾರ ಕೇಶವ್ ಮಾಮ ಮಣಿಪಾಲಕ್ಕೆ ಆಫೀಸಿಗೆ ಬರುವಾಗ ತಂದು ಆಸ್ಪತ್ರೆಗೆ ಕೊಟ್ಟು ಹೋಗುತ್ತಿದ್ದರು .ಹಾಗೇ ಸಂಜೆ ತಿಂಡಿಯನ್ನು ತಾರಮಕ್ಕ ತಮ್ಮ ಮನೆಯಿಂದಲೇ ತರುತ್ತಿದ್ದರು. ತಮ್ಮ ಮನೆ ಕೆಲಸಗಳನ್ನೆಲ್ಲ ಬೇಗನೆ ಮುಗಿಸಿ ನಾಳೆ ಬೆಳಗ್ಗಿನ ತಿಂಡಿಯ ತಯಾರಿಯನ್ನು ಮಾಡಿಟ್ಟು ರಾತ್ರಿಯ ತಯಾರಿಯನ್ನೂ ಮುಗಿಸಿ.. ಮಧ್ಯಾಹ್ನ ಊಟವಾದ ಮೇಲೆ ಬಿಸಿಲಿನಲ್ಲಿ ಸಾಧಾರಣ ತಮ್ಮ ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಸಿಟಿ ಬಸ್ ಸ್ಟ್ಯಾಂಡಿನ ವರೆಗೆ ನಡೆದುಕೊಂಡು ಬಂದು .ಅಲ್ಲಿ ಈಗಿನಂತೆ ಗಳಿಗೆಗೊಂದು ಬಸ್ಸಿನಂತೆ ಇರದೆ ವಿರಳವಾಗಿರುತ್ತಿದ್ದ ಬಸ್ಸಿಗೆ ಕಾದು ..ಮಣಿಪಾಲಕ್ಕೆ ಬಂದು.. ಅಲ್ಲಿಂದ ಬಾಳಿಗಾ ವಾರ್ಡಿನ ತನಕ ನಡೆದುಕೊಂಡು ಬಂದು ನಮಗೆ ತಿಂಡಿಯನ್ನು ಕೊಟ್ಟು.. ವಾಪಸು ಪುನಃ ಬಸ್ಸಿನಲ್ಲಿ ಸಿಟಿ ಬಸ್ ಸ್ಟ್ಯಾಂಡಿಗೆ ಹೋಗಿ ಮನೆ ತನಕ ನಡೆದುಕೊಂಡು ಹೋಗಿ ಪುನಃ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಇದು ಒಂದು ದಿನವಲ್ಲ ಪೂರ್ತಿ ಅಜ್ಜಿ ಇರುವಷ್ಟು ದಿನ.ಆಗೆಲ್ಲಾ ಯಾಕೋ ಹೊರಗಿನಿಂದ ತಿಂಡಿ ತಂದು ತಿನ್ನುವ ಕ್ರಮವೇ ಇರಲಿಲ್ಲ ಹಾಗಾಗಿ ಈ ಒಂದು ಕೆಲಸವನ್ನು ಅವರು ಚಾಚೂ ತಪ್ಪದೆ ಮಾಡುತ್ತಿದ್ದರು. ಇಷ್ಟು ಮಾತ್ರವೇ ಮಿಷನ್ ಹಾಸ್ಪಿಟಲ್ ನಲ್ಲಿ ಯಾರಾದರೂ ಎಡ್ಮಿಟ್ ಆದರು ಅವರ ಮನೆಯಿಂದಲೇ ಊಟ ತಿಂಡಿ ಸರಬರಾಜು .. ಹಾಗೆ ಅವರ ಮಕ್ಕಳೆಲ್ಲರೂ ಮುಂಬಯಿಗೆ ಹೋದ ಮೇಲೆ ಕೇಶವಮಾಮನಿಗೆ ಆರೋಗ್ಯ ತಪ್ಪಿದಾಗ ಅನಿವಾರ್ಯವಾಗಿ ಅವರಿಗೆ ಉಡುಪಿಯ ಮನೆಯನ್ನು ಬಿಟ್ಟು ಮಕ್ಕಳಿರುವ ಕಡೆ ಮುಂಬಯಿಗೆ ಹೋಗಲೇಬೇಕಾಯಿತು. ತಮ್ಮಉಡುಪಿಯ ಮನೆಯ ಅಕ್ಕಪಕ್ಕದಲ್ಲಿರುವ ಮನೆಯವರನ್ನು ಪ್ರೀತಿಸುತ್ತಾ.. ಅವರ ಪ್ರೀತಿಯನ್ನು ಪಡೆಯುತ್ತಾ .. ತನ್ನಿಚ್ಛೆಯಂತೆ ಬದುಕುತ್ತಾ ಒಂದೇ ಜಾಗದಲ್ಲಿ ಬಹಳ ವರ್ಷದಿಂದ ಇದ್ದು ಅಭ್ಯಾಸವಿದ್ದವರು.. ಬೊಂಬಾಯಿ ಜೀವನಕೆ ಅಷ್ಟೇನೂ ಖುಷಿಯಿಂದ ಹೋದದ್ದಲ್ಲ .. ಆದರೂ ಮನೋಹರ ಅವರಿಗಾಗಿಯೇ ಒಂದು ಸಣ್ಣ ಮನೆಯನ್ನು ಅಂಬಾಡಿ ರೋಡಿನಲ್ಲಿ ಮಾಡಿದ್ದರಿಂದ ಅಲ್ಲಿ ಒಂದು ರೀತಿಯ ಸಂತೋಷದಲ್ಲೇ ಇದ್ದರು .ಆದರೂ ಇಷ್ಟು ವರ್ಷಗಳಿಂದ ಇದ್ದ ಒಂದು ಜಾಗವನ್ನು ಬಿಟ್ಟು ಇನ್ನೊಂದು ಜಾಗಕ್ಕೆ ಹೋಗಿ ಹೊಸತಾಗಿ ಜೀವನ ಮಾಡುವುದು ಅಷ್ಟೊಂದು ಸುಲಭದ ವಿಚಾರವೇನೂ ಅಲ್ಲವಲ್ಲ. ನಾನ೦ತೂ ಮುಂಬಯಿಗೆ ಹೋದಾಗ ಅವರ ಮನೆಗೂ ಒಂದು ಭೇಟಿ ಇದ್ದೇ ಇತ್ತು. ಅದಾಗಿ ಸ್ವಲ್ಪ ಸಮಯದ ನಂತರ ಮನೋಹರ ಅವನ ಮದುವೆಯಾಗುವ ಸಮಯದಲ್ಲಿ ಅವರ ಹಿರಿಮಗ ಅಂದರೆ ನನ್ನ ದೊಡ್ಡ ಭಾವನ ಮನೆಯ ಹತ್ತಿರದಲ್ಲೇ ಒಂದು ಸ್ವಲ್ಪ ದೊಡ್ಡ ಮನೆಯನ್ನೇ ಖರೀದಿಸಿದ್ದ.

ಲಹರಿ Read Post »

You cannot copy content of this page

Scroll to Top