ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ದಂಗೆ. ಜ್ಯೋತಿ ಡಿ.ಬೊಮ್ಮಾ. ಶಾಂತಿದೂತ ಪಾರಿವಾಳವೇ ಇನಿತು ಹೇಳಿ ಬಾ ಅವರಿಗೆ ದ್ವೇಷ ತುಂಬಿದ ಎದೆಗೂಡೊಳಗೆ ಕೊಂಚ ಪ್ರೀತಿಯ ಸಿಂಚನ ಮೂಡಿಸಲು.. ಪ್ರೀತಿಯ ಮೇಘದೂತನೆ ಸ್ವಲ್ಪ ಅರುಹಿ ಬಿಡು ಅವರನ್ನು ಸೇಡಿನ ಜ್ವಾಲೆಯಿಂದ ಒಬ್ಬರನ್ನೊಬ್ಬರು ದಹಿಸಿಕೊಳ್ಳದಿರೆಂದು.. ಎಲ್ಲೆಡೆ ಸಮನಾಗಿ ಹಬ್ಬಿದ ಬೆಳದಿಂಗಳೆ ತಿಳಿಸಿ ಹೇಳು ಅವರಿಗೆ ಹಿಂದಿನಂತೆ ಮುಂದೆಯೂ ಇದು ರಾಮ ರಹೀಮರ ನಾಡೇ ಎಂದು.. ಎಲ್ಲರಿಗೂ ಬೆಳಕನ್ನು ಹಂಚುವ ಬಿಸಿಲೆ ಅರ್ಥ ಮಾಡಿಸು ಅವರಿಗೆ ಅಮಾಯಕರನ್ನೂ ಪ್ರಚೋದಿಸಿ ದಂಗೆ ಎಬ್ಬಿಸಿ ಶಾಂತಿ ಕದಡುವ ಆಗಂತುಕರಿದ್ದಾರೆಂದು.. ನಾಲ್ಕು ದಿಕ್ಕಿಗೂ ಬೀಸುವ ಗಾಳಿಯೆ ದೃಢ ಪಡಿಸು ಅವರನ್ನೂ ಇಲ್ಲಿ ಯಾರು ಯಾರ ಹಕ್ಕು ಕಸಿಯುತ್ತಿಲ್ಲವೆಂದೂ ದಾಖಲೆ ಹೊಂದುವದರಿಂದ ನಮ್ಮ ಹಕ್ಕುಗಳು ಇನ್ನಷ್ಟೂ ಗಟ್ಟಿಗೊಳ್ಳುತ್ತವೆಂದು.. ಎಲ್ಲರ ತೃಷೆ ತೀರಿಸುವ ಜಲದೇವಿಯೇ ಶುಧ್ಧ ಗೊಳಿಸು ಮನಕ್ಕಂಟಿದ ಮಲೀನವನ್ನೂ ಭಾರತದಲ್ಲಿರುವ ನಾವೆಲ್ಲರೂ ಭಾರತೀಯರಾಗಿರೋಣ ಎಂದೆಂದಿಗೂ. ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸುಜಾತಾ ರವೀಶ್ ಆಸೆಯ ತೇರನೇರು ಮರೆತು ಹಳತನು ಹೊಸತು ನಿರೀಕ್ಷೆಯಲಿ ಗೆಳತಿ  ಭಾಷೆಯ ರಥದಲ್ಲಿ ಕಲೆತು ಬಾಳಪಥ ನಿರತ ಪರೀಕ್ಷೆಯಲ್ಲಿ ಗೆಳತಿ  ಒಲವು ಬಂದಿರಲು ದಿನವು ಹೃದಯದಿ ನಿನ್ನದೇ ಆರಾಧನೆ ಏತಕೆ?  ಬಲವು ತಂದಿರಲು ಮನದಿ ಉಪಾಸನೆ ಪಾವನ ಪ್ರತೀಕ್ಷೆಯಲಿ ಗೆಳತಿ ಸಂಗಾತಿ ಬರೆದಿರಲು ಮುನ್ನುಡಿ ಬದುಕಿನ ಪ್ರಣಯ ಕಾದಂಬರಿಯಲಿ  ಸಂಪ್ರೀತಿ ಮೆರೆದಿರಲು ಕನ್ನಡಿ ಬಾಳಿನ ಬರಹ ಸಮೀಕ್ಷೆಯಲಿ ಗೆಳತಿ   ನಿನ್ನಯ ಆಗಮನದಿ ಮನಸಿದು ಮುಗಿಲನು ನೋಡಿದ ನವಿಲಿನಂತೆ ನನ್ನ ಆಂತರ್ಯದ ಕನಸಿದು ನಲಿವಿನ ಮೋಡಿಯ ಅಪೇಕ್ಷೆಯಲಿ ಗೆಳತಿ ಬೆಸುಗೆ ತಂತಿಗಳು ಜೋಡಿಸಿ ಭರವಸೆ ನೇದಿಹ ಅನುಬಂಧ ವಿದು  ಒಸಗೆ ವಿನಂತಿಗಳು ಸುಜಿಯ ವಿಶ್ವಾಸ  ಕೋರುವ ಅಕಾಂಕ್ಷೆಯಲಿ ಗೆಳತಿ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಲುಗೆ ಮೀರಿ ಬಂದಾಕಿ ರೇಖಾ ವಿ.ಕಂಪ್ಲಿ ಸಲುಗೆ ಮೀರಿ ಬಂದಾಕಿ ಮಲ್ಲಿಗೆ ಮುಡಿದು ನನ್ನ ಮೆಲ್ಲನೆ ತಬ್ಬವಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ…….. ಮನಸ್ಸೆಂಬ ಗುಡಿಯಲಿ ನನ್ನ ಪೂಜಿಸಿವಾಕಿ ಹಗಲಿರುಳು ನೋಡದೆ ದುಡಿಯುವಾಕಿ ಜೀವದ ಹಾದಿಬೆಳ್ಚುಕ್ಕಿ ಮೂಡಿಸಿದಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ……… ತನ್ನವರ ಮರೆತು ನನ್ನ ನಂಬಿದಾಕಿ ನನ್ನ ಹುಚ್ಚಿಹಾಂಗ ಪ್ರೀತಿಸುವಾಕಿ ಗುಡಿ ಗೋಪುರಗಳ ಸುತ್ತಿ ನನಗಾಗಿ ಪ್ರಾಥಿ೯ಸುವಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ……… ಹಾಗಾಗ ಗುದ್ದಾಡಿ ನನ್ನ ಕ್ಷಮಿಸುವಾಕಿ ನನಗಿಂತ ಹೆಚ್ಚಾಗಿ ಚಿಂತಿಸುವಾಕಿ ಹಾಗಾಗ ಬಿಕ್ಕಿಬಿಕ್ಕಿ ಅಳುವಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ………. ***************************

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಕೇಜ್ರಿವಾಲಾರವರ ಕ್ರೇಝಿವಾಲಾಗಳಿಗಾಗಿ………. ಗಣೇಶಭಟ್,ಶಿರಸಿ ಕೇಜ್ರಿವಾಲಾರವರ ಕ್ರೇಝಿವಾಲಾಗಳಿಗಾಗಿ………. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಪಡೆದ ದೊಡ್ಡ ಗೆಲುವು, ಆ ಪಕ್ಷದ ನೇತಾರ ಅರವಿಂದ ಕೇಜ್ರಿವಾಲಾರ ಅಭಿಮಾನಿಗಳ, ಅವರ ಕ್ರೇಝಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಕೇಜ್ರಿವಾಲಾರವರೇ ದೇಶದ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಹೊಂದಿದ್ದಾರೆ ಎಂಬ ಭಾವನೆ ಇಂಥವರಲ್ಲಿ ಬಲಿಯುತ್ತಿದೆ. ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಸೋಲಿಸಿದ್ದು ದೊಡ್ಡ ಸಾಧನೆ ಎಂದೇ ಕೊಂಡಾಡಲಾಗುತ್ತಿದೆ. ಆಮ್ ಆದ್ಮಿ ಪಕ್ಷದ ಗೆಲುವಿಗೆ ಹಲವು ಕಾರಣಗಳನ್ನು ಮಾಧ್ಯಮ ತಜ್ಞರು ನೀಡಿದ್ದಾರೆ. ಈ ಸುದ್ದಿಯನ್ನು ಬಿತ್ತರಿಸುವಾಗ, ಸೋತ ಪಕ್ಷದ ವಿರುದ್ಧ ಮಾಧ್ಯಮದವರು ಬಳಸಿದ ಭಾಷೆಯಲ್ಲಿ ಆದ ಮಹತ್ತರ ಬದಲಾವಣೆಯನ್ನು ಎಷ್ಟು ಜನ ಗಮನಿಸಿದ್ದಾರೋ ಗೊತ್ತಿಲ್ಲ. ಅಧಿಕಾರ ಹೊಂದಿರುವ ಪಕ್ಷ ಸೋತಾಗ ಮಖಾಡೆಯಾಗಿ ಮಲಗಿತು , ನೆಲಕಚ್ಚಿತು , ಹೀನಾಯ ಸೋಲು ಮುಂತಾಗಿ ಬಳಕೆಯಾಗುತ್ತಿದ್ದ ಮಾಮೂಲಿ ಶಬ್ದಗಳು ಬಿಜೆಪಿಯ ಕುರಿತು ಬಳಕೆಯಾಗಲಿಲ್ಲ. ಕಾಂಗ್ರೆಸ್ ಕುರಿತು ಕೆಲವರು ಈ ಶಬ್ದಗಳನ್ನು ಬಳಸಿದರಾದರೂ ಚುನಾವಣಾ ಪರಿಣಾಮದ ವಿಶ್ಲೇಷಣೆಯಲ್ಲಿ ಗೆಲುವಿನ ಕಾರಣಗಳ ಕುರಿತೇ ಹೆಚ್ಚಿನ ಒತ್ತು ನೀಡಲಾಗಿತ್ತು. ಇಂತಹ ಸಂದರ್ಭಗಳಲ್ಲಿ ಬಳಕೆಯಾಗುವ ಇನ್ನೊಂದು ನುಡಿಗಟ್ಟೆಂದರೆ ಮತದಾರ ಬುದ್ದಿವಂತನಾಗಿದ್ದಾನೆÀ ಎಂಬುದು. ಇದು ಕೂಡಾ ಅಷ್ಟಾಗಿ ಬಳಕೆಯಾಗಲಿಲ್ಲ. ಮಾಧ್ಯಮದವರ ಈ ಬದಲಾವಣೆಯನ್ನು ಧನಾತ್ಮಕ ಪರಿವರ್ತನೆ ಎಂದು ಭಾವಿಸುವುದು ತಪ್ಪಾಗುತ್ತದೆ. ನಮ್ಮ ದೇಶದ ಸಮೂಹ ಮಾಧ್ಯಮಗಳು ಬಂಡವಾಳಶಾಹಿಗಳ ನಿಯಂತ್ರಣದಲ್ಲಿರುವುದು ವಾಸ್ತವ. ಬಂಡವಾಳವಾದಿಗಳಿಗೆ ಬಿಜೆಪಿ ಅತ್ಯಂತ ಅಪ್ಯಾಯಮಾನ ಪಕ್ಷ. ಆದ್ದರಿಂದಲೇ ಆ ಪಕ್ಷದ ಸೋಲಿನ ಕುರಿತು ಹೆಚ್ಚಿನ ಟೀಕೆ ಮಾಡಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಧ್ಯಮ ದೊರೆಗಳು ಇಷ್ಟ ಪಡುವುದಿಲ್ಲ. ಕಾಂಗ್ರೆಸ್ ಕೂಡಾ ಬಂಡವಾಳಶಾಹಿಗಳ ಪರವಾಗಿಯೇ ಇರುವ ಪಕ್ಷ. ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಖಾಸಗೀಕರಣವನ್ನು ನಡೆಸುತ್ತಿರುವ ವೇಗ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಾರಂಭವಾದ ಖಾಸಗೀಕರಣದ ವೇಗ ನಿಧಾನ ( ಗಂಟೆಗೆ 10 ಕಿ.ಮೀ ವೇಗ ಎನ್ನೋಣ) ಆದರೆ ಬಿಜೆಪಿ ಖಾಸಗೀಕರಣದ್ದು ಅತಿ ವೇಗ ( ಗಂಟೆಗೆ 110 ಕಿ.ಮೀ). ಈ ಪಕ್ಷಗಳ ನಡುವೆ ಅರವಿಂದ ಕೇಜ್ರಿವಾಲಾರವರ ಆಮ್ ಆದ್ಮಿ ಪಕ್ಷದ ವೇಗ ಇನ್ನೂ ಸ್ಪಷ್ಟವಾಗಬೇಕಿದೆಯಾದರೂ ಅದು ಕೂಡ ಖಾಸಗೀಕರಣದ ಪರವಾಗಿಯೇ ಇರುವ ಪಕ್ಷ ಎಂಬುದು ಸ್ಪಷ್ಟ. ದೆಹಲಿಯ ಚುನಾವಣೆಯಲ್ಲಿ ಆಮ್‍ಆದ್ಮಿ ಪಕ್ಷದ ಗೆಲುವಿಗೆ ಸೂಚಿತವಾಗಿರುವ ಕಾರಣಗಳಲ್ಲಿ ದೆಹಲಿಯ ಸರ್ಕಾರಿ ಶಾಲೆಗಳ ಸುಧಾರಣೆ ಪ್ರಮುಖವಾದದ್ದು. ಸರ್ಕಾರಿ ಶಾಲೆಗಳ ಮಟ್ಟವನ್ನು ಏರಿಸಲು ಸಾಧ್ಯ. ಖಾಸಗಿ ಕ್ಷೇತ್ರದ ಶಾಲೆಗಳ ಸಮಾನಕ್ಕೇರಿಸಲೂ ಬಹುದೆಂಬುದನ್ನು ಸಾಧಿಸಿರುವುದನ್ನು ಗಮನಿಸದಿರಲು ಸಾಧ್ಯವೇ ಇಲ್ಲ. ಅಮೇರಿಕಾದ ಅಧ್ಯಕ್ಷರ ಶ್ರೀಮತಿಯವರು ಸರ್ಕಾರಿ ಶಾಲೆಗೆ ಭೇಟಿ ನೀಡಿರುವುದು ಗಣನೀಯವೇ ಸರಿ. ಆದರೂ, ಈ ವಿಷಯದಲ್ಲಿ ಎರಡು ಸಂಗತಿಗಳು ಎದ್ದು ಕಾಡುತ್ತವೆ. ಮೊದಲನೆಯದಾಗಿ ಖಾಸಗಿ ಶಾಲೆಗಳು ನಡೆಸುತ್ತಿರುವ ಶೋಷಣೆಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು. ಅತಿ ಎನ್ನುವಷ್ಟು ಶುಲ್ಕ ಆಕರಣೆ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಸಂಸ್ಥೆಗಳು ದೆಹಲಿ ಸರ್ಕಾರ ಲೀಸ್ ಮೇಲೆ ನೀಡಿರುವ ಭೂಮಿಯನ್ನೇ ಬಳಕೆ ಮಾಡಿಕೊಳ್ಳುತ್ತಿವೆ. ಈ ಅಂಶವನ್ನೂ ಗಮನದಲ್ಲಿರಿಸಿಕೊಂಡು ಶೋಷಕ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಕ್ರಮ ಕೈಗೊಳ್ಳಲು ಸಾಧ್ಯವೆಂದು ದೆಹಲಿಯ ಹಲವು ನಾಗರಿಕರು ಅಭಿಪ್ರಾಯ ಪಡುತ್ತಾರೆ. ಎರಡನೇಯದೆಂದರೆ ಶಿಕ್ಷಣದ ಗುಣಮಟ್ಟದಲ್ಲಿ ಆಗಬೇಕಾದ ಮೂಲಭೂತ ಬದಲಾವಣೆ. ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಪೋರೇಟ್ ವಲಯಕ್ಕೆ ಬೇಕಾಗುವ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವ ಕಾರ್ಖಾನೆಗಳಾಗಿವೆ. ಈ ಪ್ರಕ್ರಿಯೆಯಲ್ಲಿ ತಾವೂ ಕೂಡ ಹಣ ಗಳಿಸುತ್ತವೆ. ಅಂತಹ ಶಾಲಾ, ಕಾಲೇಜುಗಳಲ್ಲಿ ಕೂಡಾ ಯೋಗ, ಧ್ಯಾನ ಮುಂತಾದವುಗಳನ್ನು ಕಲಿಸಲಾಗುತ್ತದೆ. ಆದರೆ, ಅವುಗಳ ಉದ್ದೇಶ ವಿದ್ಯಾರ್ಥಿಗಳ ಮನಸ್ಸನ್ನು ಶಾಂತಗೊಳಿಸಿ, ಅವರಲ್ಲಿ ಗುಲಾಮಗಿರಿ ಭಾವವನ್ನು ತುಂಬುವುದೇ ಆಗಿದೆ. ತಾನು ಶಿಕ್ಷಣ ಪಡೆದು, ಯಾವುದೋ ಕಂಪನಿಯಲ್ಲಿ ಕೆಲಸ ಪಡೆದು, ಹೆಚ್ಚೆಚ್ಚು ಸಂಬಳ ಪಡೆಯುತ್ತ ಕಂಪನಿಯನ್ನು (ಅಂದರೆ ಖಾಸಗೀಕರಣವನ್ನು) ಗಟ್ಟಿಗೊಳಿಸಬೇಕೆಂಬ ಭಾವವನ್ನು ಪರೋಕ್ಷವಾಗಿ ಬೆಳೆಸಲಾಗುತ್ತಿದೆ. ಇದರ ಪರಿಣಾಮವೆಂದರೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ, ಸಮಾಜದ ಇತರರೊಂದಿಗೆ ಸಹಜವಾಗಿ ಬೆರೆಯಲಾರದ ಮೇಲರಿಮೆ, ಅನಗತ್ಯವಾದ ಸ್ಪರ್ಧಾತ್ಮಕ ಮನೋಭಾವದ ಬೆಳವಣಿಗೆಯಿಂದಾಗಿ ಇತರರನ್ನು ಪ್ರೀತಿಸಲಾರದ, ಸಹಿಸಲಾರದ , ವೈರಿಗಳೋಪಾದಿಯಲ್ಲಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಬ್ರಿಟಿಷರ ಬಳುವಳಿಯ ಶಿಕ್ಷಣ ಪದ್ಧತಿಯ ಮುಂದುವರಿಕೆಯಾದ ಇಂದಿನ ಶಿಕ್ಷಣ ಪದ್ಧತಿಯನ್ನು ಖಾಸಗಿ ಕ್ಷೇತ್ರದವರು ಒಂದು ಉದ್ಯಮವನ್ನಾಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕೂಡಾ ಇದೇ ವಿಧದ ಶಿಕ್ಷಣ ನೀಡುವ ಬದಲಿಗೆ ಭಾರತೀಯ ಶಿಕ್ಷಣ ಪದ್ಧತಿಯನ್ನು ಅನುಷ್ಠಾನಗೊಳಿಸಲು ಕೇಜ್ರಿವಾಲರವರು ಪ್ರಯತ್ನಿಸಲಿಲ್ಲವೆಂಬ ಆಕ್ಷೇಪ ಹಲವರದು. ಆತ್ಮವಿಶ್ವಾಸದಿಂದ ಬದುಕನ್ನು ರೂಢಿಸಿಕೊಳ್ಳುವ ಶಿಕ್ಷಣ ಪದ್ಧತಿಯನ್ನು ದೆಹಲಿಯ ಮುಖ್ಯಮಂತ್ರಿಯವರು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರುತ್ತಾರೆಂದು ನಿರೀಕ್ಷಿಸುವ ಯಾವ ಸೂಚನೆಯೂ ಅವರ ಕಾರ್ಯಸೂಚಿಯಲ್ಲಿ ಕಂಡು ಬರುತ್ತಿಲ್ಲ. ಯಾಕೆಂದರೆ, ಕೇಜ್ರಿವಾಲಾರವರ ಆಮ್ ಆದ್ಮಿ ಪಕ್ಷವು ಬಂಡವಾಳವಾದಿ ಚೌಕಟ್ಟಿನಾಚೆಗೆ ಚಿಂತಿಸುತ್ತಿಲ್ಲ. ಅಪರಾಧ ಹಿನ್ನೆಲೆಯ ಎಮ್ಮೆಲ್ಲೆಗಳು, ಪಕ್ಷಾಂತರಿಗಳಿಗೆ ಟಿಕೆಟ್ ನೀಡಿಕೆ ಮುಂತಾದ ವಿಷಯಗಳಲ್ಲಿ ಇತರ ರಾಜಕೀಯ ಪಕ್ಷಗಳ ರೀತಿಯಲ್ಲೇ ಆಪ್‍ನ ವರ್ತನೆಯಿದೆ. ಚುನಾವಣೆಯಲ್ಲಿ ಹರಿದ ಹಣದ ಮೂಲ ಕೂಡಾ ಅವೇ ಆಗಿವೆ. ನಗರವಾಸಿಗಳ ನಿರೀಕ್ಷೆಗಳನ್ನು ಗುರ್ತಿಸುವಲ್ಲಿ ಕೇಜ್ರಿವಾಲಾರವರು ಯಶಸ್ವಿಯಾಗಿರುವುದು ಚುನಾವಣೆಯಲ್ಲಿ ಅವರ ಸಫಲತೆಗೆ ಕಾರಣ. ಒಂದು ಹಂತದವರೆಗೆ ಉಚಿತ ವಿದ್ಯುತ್, ಉಚಿತ ನೀರು ಮುಂತಾದ ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನದಿಂದ ಮತದಾರರ ಮನ ಗೆಲ್ಲಲು ಆಪ್ ಯಶಸ್ವಿಯಾಗಿದೆಯೆಂಬುದು ನಿಚ್ಚಳ. ಆದರೆ ಇಂತಹ ಕಾರ್ಯಕ್ರಮಗಳು ದೀರ್ಘಾವಧಿಯಲ್ಲಿ ಸಮಾಜಕ್ಕೆ ಹಿತಕಾರಿಯೇ ಎಂಬ ಕುರಿತು ಯೋಚಿಸಲೇಬೇಕಾಗಿದೆ. ಸಮ ಮತ್ತು ಬೆಸ ಸಂಖ್ಯೆಯ ನೋಂದಾಯಿತ ವಾಹನಗಳ ಬಳಕೆಯನ್ನು ವಾರದ ನಿರ್ದಿಷ್ಟ ದಿನಗಳಿಗೆ ಮಿತಗೊಳಿಸಿ ದೆಹಲಿಯ ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೇವೆಂಬ ಕೇಜ್ರಿವಾಲಾರವರ ಹೇಳಿಕೆಯನ್ನು ಬಡಾಯಿ ಎನ್ನುವುದೇ ಸೂಕ್ತವೆಂಬುದು, ದೆಹಲಿಯ ವಾಯುಮಾಲಿನ್ಯವನ್ನು ಗಮನಿಸುವವರಿಗೆ ಅರ್ಥವಾಗುತ್ತದೆ. ಮುಖ್ಯ ರಸ್ತೆಗಳು ಚೆನ್ನಾಗಿದ್ದರೂ ನಗರದ ಒಳ ರಸ್ತೆಗಳ ಪರಿಸ್ಥಿತಿ, ಬಿದ್ದಿರುವ ಕಸದ ರಾಶಿಗಳನ್ನು ನೋಡಿದವರಿಗೆ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಬಹಳಷ್ಟಿದೆಯೆಂಬುದರ ಅರಿವಾಗುತ್ತದೆ. ದೆಹಲಿ ಬೆಳೆಯುತ್ತಿದೆ, ಪಕ್ಕದ ರಾಜ್ಯಗಳ ಗಡಿರೇಖೆಗಳನ್ನು ದಾಟಿಯೂ ದೆಹಲಿ ಬೆಳೆಯುತ್ತಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಸ್ವತಂತ್ರವಾಗಿ ಹೊಂದಿರದ ರಾಜ್ಯವಾದ ದೆಹಲಿಗೆ ಕೃಷಿಯ ಚಿಂತೆಯಿಲ್ಲ. ಗ್ರಾಮೀಣ ಅಭಿವೃದ್ಧಿಯ ಹೊಣೆಗಾರಿಕೆಯಿಲ್ಲ, ಆದರೂ ಉದ್ಯೋಗ ಸೃಷ್ಟಿಯ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಒಂದರ್ಥದಲ್ಲಿ ದೆಹಲಿ ರಾಜ್ಯವೆಂದರೆ ಮಹಾನಗರ ಪಾಲಿಕೆಯ ಮುಂದಿನ ಹಂತವೇ ಆಗಿದೆ. ಕೆಲವು ರಾಜ್ಯಗಳಲ್ಲಿ ಆಪ್‍ನ ಅಸ್ತಿತ್ವವಿದೆ. ಸರ್ಕಾರದ ಉನ್ನತ ಹುದ್ದೆಗೆ ರಾಜೀನಾಮೆ ನೀಡಿ, ಭ್ರಷ್ಟಾಚಾರ ವಿರೋಧಿ ಅಲೆಯಲ್ಲಿ ಅಧಿಕಾರಕ್ಕೇರಿದ ಅರವಿಂದ ಕೇಜ್ರೀವಾಲರ ಆಪ್ ಏಕವ್ಯಕ್ತಿ ಪಕ್ಷವಾಗುತ್ತಿದೆ. ಕೇಜ್ರಿವಾಲಾರವರ ವರ್ಚಸ್ಸೊಂದನ್ನೇ ಅವಲಂಬಿಸಿ, ರಾಜ್ಯದ, ದೇಶದ ಅಭಿವೃದ್ಧಿ ಸಾಧಿಸುತ್ತೇವೆಂದು ನಂಬುವುದು ವ್ಯಾವಹಾರಿಕವಾಗಲಾರದು. ದುಡಿಯುವ ಸಾಮಥ್ರ್ಯ ಇರುವ ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶ ಸೃಷ್ಟಿಸುವ , ದುಡಿಮೆಯ ಪ್ರತಿಫಲದಿಂದ ದುಡಿಮೆಗಾರ ಮತ್ತು ಅವರ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ , ಔಷಧೋಪಚಾರಗಳನ್ನು ಪಡೆಯುವ ಅವಕಾಶ ನಿರ್ಮಿಸಬೇಕಾದುದು ಸರ್ಕಾರದ ಕರ್ತವ್ಯ. ಈ ಸೌಲಭ್ಯವನ್ನು ಪಡೆಯುವುದು ಪ್ರತಿಯೋರ್ವ ನಾಗರಿಕನ ನೈಸರ್ಗಿಕ ಹಕ್ಕು. ಆದರೆ, ತಮ್ಮ ಈ ಹಕ್ಕಿನ ಅರಿವು ಹೆಚ್ಚಿನವರಿಗೆ ಇಲ್ಲದಿರುವ ಕಾರಣದಿಂದ ಸರ್ಕಾರ ನೀಡುವ ದಯಾಭಿಕ್ಷೆಯಿಂದಲೇ ಅವರು ತೃಪ್ತರು. ಈ ಕುರಿತಾಗಿ ಆಪ್ ಪಕ್ಷಕ್ಕೆ ಸ್ಪಷ್ಟ ವಿಚಾರ ಅಥವಾ ಕಾರ್ಯಕ್ರಮವಿಲ್ಲ. ಕೃಷಿರಂಗದ ಸಮಸ್ಯೆಗಳು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಲು ಬೇಕಾದ ಕಾರ್ಯಸಾಧ್ಯ ಯೋಜನೆಗಳು ಆಪ್ ಬಳಿ ಇಲ್ಲ. ಕೃಷಿ ರಂಗದ ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸಿ, ಪರ್ಯಾಯ ಉದ್ಯೋಗ ಕಲ್ಪಿಸುವ ಯೋಜನೆಗಳು ಆಪ್‍ನಲ್ಲಿ ಇಲ್ಲ. ಮೊಹಲ್ಲಾ ಕ್ಲಿನಿಕ್‍ಗಳು ಉಪಯುಕ್ತವೆಂಬುದು ನಿಜ. ಆದರೆ ಔಷಧ ತಯಾರಿಕರ ಪ್ರಬಲ ಲಾಭಿಯನ್ನು ಹಿಮ್ಮೆಟ್ಟಿಸುವ ಸಾಮಥ್ರ್ಯ ಅವಕ್ಕಿಲ್ಲ. ಜನರನ್ನು ಶೋಷಿಸುತ್ತಿರುವ ಔಷದೋಪಚಾರ ಕ್ಷೇತ್ರದ ಹೈಟೆಕ್ ಲಾಬಿಗಳನ್ನು ಮಣಿಸಿ ಜನಪರವಾಗಿಸುವ ಚಿಂತನೆಯನ್ನು ಆಪ್ ಹೊಂದಿಲ್ಲ. ಸ್ಥಳೀಯರಿಗೇ ಉದ್ಯೋಗಾವಕಾಶಗಳ ಮೀಸಲಾತಿಯೆಂಬ ವಿಚಾರ ಇಂದು ಜನಪ್ರಿಯವಾಗುತ್ತಿದೆ; ಪ್ರಾದೇಶಿಕವಾದ ಬೆಳೆಯುತ್ತಿದೆ. ಈ ಜನಾಂದೋಲನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅರ್ಥವ್ಯವಸ್ಥೆಯನ್ನು ಬಲಪಡಿಸುವ , ಈ ಭಾವನೆಗಳು ಸಂಕುಚಿತವಾಗದೇ ವಿಶಾಲ ಮನೋಭಾವ ತಳೆಯುವಂತೆ ಪರಿವರ್ತಿಸುವ ಕುರಿತು ಆಪ್ ಬಳಿ ವಿಚಾರಧಾರೆಯಿಲ್ಲ. ಭ್ರಷ್ಟಾಚಾರದ ವಿರೋಧಿ ಅಲೆಯನ್ನೇರಿ ಅಧಿಕಾರಕ್ಕೆ ಬಂದಿರುವ ಆಪ್ ಭ್ರಷ್ಟಾಚಾರವನ್ನು ತಡೆಗಟ್ಟುವ , ನಿಯಂತ್ರಿಸುವ ದೀರ್ಘಕಾಲೀನ ಕಾರ್ಯಕ್ರಮಗಳನ್ನು ಪ್ರಾರಂಭಿಸಿಲ್ಲ. ಆ ಕುರಿತು ಅವರ ಬಳಿ ಸಿದ್ಧಾಂತವೂ ಇಲ್ಲ. ಬಿಜೆಪಿಯ ಹುಸಿ ರಾಷ್ಟ್ರೀಯವಾದ, ಮತೀಯ ದ್ವೇಷಗಳನ್ನು ಎದುರಿಸುವ ಧನಾತ್ಮಕ ಚಿಂತನೆ, ಕಾರ್ಯಯೋಜನೆಗಳು ಅರವಿಂದರ ಬಳಿ ಇಲ್ಲದಿರುವುದರಿಂದಲೇ ಈ ಕುರಿತು ಅವರು ಮೌನವಹಿಸಿದ್ದಾರೆ. ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಅಥವಾ ಅವಕ್ಕೆ ಪ್ರತಿಕ್ರಿಯಿಸದಿರುವುದೇ ಪರಿಹಾರವಲ್ಲ. ನಗರವಾಸಿಗಳ ನಾಡಿ ಮಿಡಿತವನ್ನು ಸರಿಯಾಗಿ ಗ್ರಹಿಸಿ, ಚುನಾವಣೆಯಲ್ಲಿ ಗೆದ್ದು ದೆಹಲಿ ಗದ್ದುಗೆಯನ್ನು ಮೂರನೇ ಬಾರಿ ಏರಿರುವ ಅರವಿಂದ ಕೇಜ್ರಿವಾಲಾರವರ ಕುರಿತು ಕ್ರೇಝಿಗಳಾಗಿರುವವರು ಪ್ರತಿಪಾದಿಸುತ್ತಿರುವಂತೆ , ಭಾರತದ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಆಪ್‍ಗೆ ಇದೆಯೇ ಎಂಬುದನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸುವುದು ಇಂದಿನ ಅವಶ್ಯಕತೆ. *******************************

ಪ್ರಸ್ತುತ Read Post »

ಕಥಾಗುಚ್ಛ

ಕಥಾಯಾನ

ಕನಸು ತಾರಾ ಸತ್ಯನಾರಾಯಣ್ ದಿನಾ ಐದುವರೆಗೆ ಏಳುತ್ತಿದ್ದ ಸುಶೀಲಮ್ಮ, ಇಂದು ಬೆಳಿಗ್ಗೆ ಕಣ್ಣುಬಿಟ್ಟಾಗ ಘಂಟೆ ಆರುವರೆ ಆಗಿತ್ತು.ಅಯ್ಯೋ!ಇವತ್ತುಎದ್ದಿದ್ದು ತಡವಾಯ್ತು ,ಇನ್ನಮಕ್ಕಳೆಲ್ಲ  ಆಫೀಸಿಗೆ ಹೊರಟುಬಿಡ್ತಾರೆ .ಬೇಗ ತಿಂಡಿ ಮಾಡ್ಬೇಕು ಅಂದುಕೊಂಡ ಅವರಿಗೆ ಒಂದುಕ್ಷಣ ಬೆಳಗಿನ ಜಾವದ ಕನಸು ನೆನಪಿಗೆ ಬಂದು ಮೈಯಲ್ಲಾ ಜುಂ ಅಂದು,ದೇವರೆ ಆ ಕನಸು ನನಸಾಗದಿರಲಿ ಅಂತ ದೇವರಿಗೆ ಕೈ ಮುಗಿದು ಸ್ನಾನ ಮಡಲು ಬಾತ್ ರೂಂಗೆಹೋದರು. ನಂತರ ಕಾಫಿಡಿಕಾಕ್ಷನ್ ಹಾಕಿ ಒಲೆಮೇಲೆ ಹಾಲು ಕಾಯಲು ಇಟ್ಟಾಗಲೂ..‌‌‌‌‌..ಸುಶೀಲಮ್ಮನಿಗೆ ಬೆಳಗಿನ ಜಾವ ಬಿದ್ದ ಕನಸಿನದ್ದೇ ಯೋಚನೆ. ಹಾಗೂ ಹೀಗೂ ಕಾಫಿ ಬೆರಸಿ,ಎಲ್ಲರಿಗು ಕೊಟ್ಟು, ತಾವು ಕೈಯಲ್ಲಿ ಕಾಫಿ ಹಿಡಿದು ಕೂತರು. ಆದರೆ ಮನಸು ಮತ್ತೆ ಕನಸಿನತ್ತ ವಾಲಿತ್ತು.  ಯಾಕೆ ಹಾಗೆ ಕನಸು ಬಿತ್ತು?ಈಗ್ಗೆ ಸುಮಾರು ತಿಂಗಳ ಹಿಂದೆ ಕನಸಿನಲಿ ಹೊಗೆ ನೋಡಿದ್ದೆ.ಬೆಳಗ್ಗೆ ಎದ್ದ ಕೂಡ್ಲೆ ನನ್ನ ಚಿಕ್ಕಮ್ಮ ಹೋದರೆಂಬ ಸುದ್ದಿ ಬಂತು.ಸಾಮಾನ್ಯವಾಗಿ ನನಗೆ ಬೆಳಗಿನ ಜಾವ ಸ್ಪಷ್ಟವಾಗಿ ಕಂಡ ಕನಸು ಕೆಲವೂಮ್ಮೆನಿಜವಾಗುತ್ತೆ‌. ಇವತ್ತು  ನಮ್ಮ ಮನೆಯಲ್ಲಿ ಏನೋ ಅನಾಹುತವಾಗುತ್ತೆ.ಸುಶೀಲಮ್ಮನಿಗೆ ಇನ್ನು ತಡೆಯದಾಯಿತು.ಕೈಯಲ್ಲಿದ್ದ ಕಾಫಿ ತಣ್ಣಗಾಗಿತ್ತು;ಅದನ್ನು ತಂದು ಹಾಗೇ ಇಟ್ಟ ಸುಶೀಲಮ್ಮ, ಸೀದಾ ಮಗನ ರೂಂಗೆ ಹೋದರು.ಮಗ ಸ್ನಾನಮಾಡಿ ಆಫೀಸಿಗೆ ಹೋಗಲು ರೆಡಿಯಾಗುತ್ತಿದ್ದ ಮಗನನ್ನು ನೋಡಿ ಸುಶೀಲಮ್ಮ,”ಮಧುಕರ, ಇವತ್ತು ನೀನು ಅಕ್ಷರ ಇಬ್ರು ಆಫೀಸಿಗೆ ಹೋಗ್ಬೇಡಿ”ಅಂತ ಹೇಳುತ್ತಿರಬೇಕಾದರೆ,ಕೆಳಗಡೆಯಿಂದ ಶ್ರೀಪಾದರಾಯರು “‌ಸುಶೀ, ನನ್ನ ವಾಕಿಂಗ್ ಸ್ಟಿಕ್ ಎಲ್ಲಿ? ಕಾಣುಸ್ತಿಲ್ಲ!”ಅಂದಾಗ, ಸುಶೀಲಮ್ಮ,”ಮಧುಕರ ನೀನು, ಅಕ್ಷರ ಕೆಳಗೆ ಬನ್ನಿ”ಅಂದು ತರಾತುರಿಯಲ್ಲಿ ಇಳಿದು ಹೋದ್ರು.ಬಾತ್ ರೂಂನಲ್ಲಿದ್ದ ಅಕ್ಷರ ಆಚೆಬಂದು, “ಏನಂತೆ !ನಿಮ್ಮ ಅಮ್ಮಂದು?””ಏನೂಂತ ಗೊತ್ತಿಲ್ಲ. ಏನೋ ಇಬ್ರು ಆಫೀಸಿಗೆ ಹೋಗ್ಬೇಡಿ ಅಂತ ಹೇಳ್ತಿದ್ರು. ಅಷ್ಟೊತ್ತಿಗೆ ಅಪ್ಪಾ ಕರದ್ರು.ಅಮ್ಮ ಹೋದ್ರು.”ನೋಡಿ ನಿಂಮ್ಮಮ್ಮ ಏನ್ ಬೇಕಾದ್ರೂ ಹೇಳ್ಲಿ, ಇವತ್ತು ನಾನು ಆಫೀ‌‌ಸಿಗೆ ಹೋಗ್ಲೆ ಬೇಕು.ಇವತ್ತು ನನ್ನ ಪ್ರಾಜೆಕ್ಟ್ಂದು ‘ಡೆಮೋ’ಇದೆ. ಫಾರಿನ್ನಿನ್ನೀಂದ ನಮ್ಮ ಆಫೀಸಿನವರು ಬರುತ್ತಿದ್ದಾರೆ. “ಸರಿಯಮ್ಮ,ನಡಿ ಈಗ ಕೆಳಗೆ ಹೋಗೋಣ” “ಒಂದ್ನಿಮಿಷ, ತಲೆಬಾಚಿಕೊಂಡು ಬರುತೀನಿ ಆಫೀಸಿಗೆ ಹೊರಡಕ್ಕೆ ಸರಿಹೋಗುತ್ತೆ.”ಕೆಳಗಡೆ ಬಂದ ಸುಶೀಲಮ್ಮ ರಾಯರಿಗೆ,” ನೋಡಿ ಇವತ್ತು ವಾಕಿಂಗೇ ಅಲ್ಲಾ….ನೀವು ಮನೆ ಬಿಟ್ಟು ಆಚೆ ಎಲ್ಲು ಹೋಗಬಾರದು.!”” ಏನು !ನಂಗೆ ಆರ್ಡರ್ ಮಾಡ್ತಾ ಇದಿಯಾ? ಏನಿವತ್ತು ವಿಶೇಷ? ಕೋಣಂದು ಮುಂಜಿನಾ?”ಅಣಕಿಸಿಕೊಂಡು ಮಾತಾಡಿದರು ರಾಯರು . “ನೋಡಿ, ನೀವುನಂಗೆ ಏನು ಬೇಕಾದರು ಅನ್ನಿ .ಆದ್ರೆ ನಂಗೆ, ಎಲ್ರು ನನ್ನ ಕಣ್ಣಮುಂದೆ ಚನ್ನಾಗಿರಬೇಕೂಂತ ಹೇಳ್ತಿರೋದು.ಇವತ್ತು ಯಾರೂ ಮನೆಬಿಟ್ಟು ಆಚೆ ಹೋಗ್ಬೇಡಿ” ಅಂತ ಹೇಳಿ ಇಷ್ಟುಹೊತ್ತು ಅಳುವನ್ನು ನುಂಗಿಕೊಂಡಿದ್ದ ಸುಶೀಲಮ್ಮನಿಗೆ; ಇನ್ನುತಡೆಯಕ್ಕೆ ಆಗದೆ ಬಿಕ್ಕೀ ಬಿಕ್ಕೀ ಅತ್ತರು.ಅದನ್ನು ನೋಡಿ ಶ್ರೀಪಾದರಾಯರು,ತಣ್ಣಗಾಗಿ ತಕ್ಷಣ ಹೆಂಡತಿ ಹತ್ತಿರ ಧಾವಿ‌‌ಸಿ ಬಂದರು.ಅಷ್ಟೊತ್ತಿಗೆ ಮಧುಕರ ಅವನಹೆಂಡತಿ ಅಕ್ಷರ ಬಂದ್ರು. ಅಮ್ಮ ಅಳುತ್ತಿದ್ದನ್ನ ನೋಡಿ,”ಅಮ್ಮ,ಯಾಕಮ್ಮ ಅಳ್ತಿದಿಯಾ? ಏನಾಯ್ತು?”ರಾಯರಿಗೂ ಏನೂ ತೋಚದೆ ಗಾಬರಿಯಾಗಿದ್ದರು. ಪಕ್ಕದ ರೂಂನಲ್ಲಿದ್ದ ಶ್ರೀಕರ, ಇವರುಗಳ ಮಾತು ಕೇಳಿ, ಅವನ ಹೆಂಡತಿ ವಾಣಿ, ತನ್ನ ಮಗುವನ್ನು ಎತ್ತಿಕೊಂಡು ಅಲ್ಲಿಗೆ ಬಂದರು.ರಾಯರು,”ಸುಶೀ,ಯಾಕೆ ಅಳ್ತಿದೀಯಾ? ಏನಾಯ್ತು ಹೇಳು”ಅಂದಾಗ, ಸುಶೀಲಮ್ಮ ಕಣ್ಣುವರಸಿಕೊಂಡು,”ಇವತ್ತು ಬೆಳಗಿನ ಜಾವ ,ನನ್ನ  ಕನ‌‌ಸಿನಲಿ ನಮ್ಮ ಮನೆ ಮುಂದೆ ಬೆಂಕಿ ಹಾಕಿದೆ.!ಬೆರಣಿಯಿಂದ ಹೊಗೆ ಬರುತ್ತಿದೆ. ಇದು ಅಶುಭ ಕನಸು. ಅಷ್ಪೇಅಲ್ಲಾ.‌…!ಬೆಳಗ್ಗೆ ಎದ್ದಾಗಲಿಂದ ಏನೋ ಒಂಥರಾ ತಳಮಳ ಸಂಕಟ. ಏನೋ ಆಗಬಾರದ್ದು ಆಗುತ್ತೆ; ಅಂತ ಅನ್ನಿ‌ಸಿದೆ. ಬೆಳಗಿನ ಜಾವ ಬಿದ್ದ ಕನ‌ಸು ದಿನದಲ್ಲೆ ಫಲಕೊಡುತ್ತೆ.ಅದಕ್ಕೆ ಹೇಳ್ತಾ ಇದೀನಿ,ಇವತ್ತು ಯಾರೂ ಮನೆಬಿಟ್ಟು ಆಚೆ ಹೋಗ್ಬೇಡಿ.”ಮಧುಕರ ಅಮ್ಮನ ಕನಸು ಕೇಳಿ “ಇಷ್ಟೆನಾ? ನೀನು ನಮ್ಮನ್ನು ಇಲ್ಲಿಗೆ ಕರೆದಿದ್ದು ! ಇಲ್ಲಿ ನೀನು ಅಳ್ತಾಇದ್ದದ್ದು ನೋಡಿ ನನಗೆ ಗಾಭರಿ ಆಗಿತ್ತು.ನೋಡಮ್ಮ, ಹಾಗೆ ಕೆಟ್ಟದಾಗುತ್ತೆ ಅನ್ನೋದಾದ್ರೆ ನಾವು ಮನೆನಲ್ಲಿದ್ರು ಆಗುತ್ತೆ. ಸುಮ್ನೆ ಇರು ಏನೂಆಗಲ್ಲ.”ಶ್ರೀಕರ ಇದ್ದವನು, “ಅಮ್ಮಾ. ಕನಸಿಗೋಸ್ಕರ ಎಲ್ರನ್ನು ಆಚೆ ಹೋಗ್ಬೇಡಿ ಅಂತ ಹೇಳೋದು ತಪ್ಪಮ್ಮ. ನಿನ್ನ ಕನಸು ನಿಜವಾಗಿದೆ ಒಪ್ಕೋತೀನಿ. ಆದ್ರೆ ಅದು ಕಾಕತಾಳೀಯ ಅಷ್ಟೆ. ನಿನ್ನ ಚಿಕ್ಕಮ್ಮನಿಗೆ ಕ್ಯಾನ್ಸರ್ ಆಗಿತ್ತು ಅವರು  ಉಳಿಯಲ್ಲ ಅಂತ ಎಲ್ರಿಗು ಗೊತ್ತಿತ್ತು.ನಿನ್ನ ಕನಸನಲಿ ಹೊಗೆ ನೋಡ್ದೆ.ಬೆಳಗ್ಗೆ ಎದ್ದು,ಏನೋಸುದ್ದಿ ಬರುತ್ತೆ ಅಂದೆ.ಚಿಕ್ಕಮ್ಮ ಸತ್ತಸುದ್ದಿ  ಬಂತು.ಆಮೇಲೆ ನಿನ್ನ ತಂಗಿ ಮಗಳು ಲತಾಗೆ ಕೆಲಸ ಸಿಕ್ಕಹಾಗೆ ಕನಸುಬಿತ್ತು ಅಂದೆ .ಮೂರು ನಾಲ್ಕು ದಿನಗಳಾದ್ಮೇಲೆ ಅವಳಿಗೆ ಕೆಲ‌‌ಸ ಸಿಕ್ತು. ಇದು ಅಷ್ಟೆ, ಅವಳಿಗೆ ಕೆಲಸ ಸಿಕ್ಕಿದರೆ ಸಾಕೂಂತ ನೀನೂ ಚಿಕ್ಕಮ್ಮ ಯಾವ ಯಾವ ರೀತಿಯಲ್ಲಿ ದೇವರನ್ನ ಕೇಳಿಕೊಂಡಿಲ್ಲಾ ಹೇಳಿ.ಇದಕ್ಕೆ ನಮ್ಮ ಸುಪ್ತ ಮನಸ್ಸಿನ ಹಾಗೂ ಜಾಗೃತ ಮನಸ್ಸಿನ ತಾಕಲಾಟಗಳು, ಆಸೆ ನಿರಾ‌ಸೆಗಳು,ಅನುಭವಗಳು ಕನಸುಗಳಲ್ಲಿ ನೇರವಾಗಿ ಇಲ್ಲಾ ಸಂಕೇತವಾಗಿ ಪ್ರತಿಬಿಂಬಿಸುತ್ತೆ.ಈ ಕನ‌ಸು ನಮ್ಮ ಮಾನಸಿಕ ಸಮತೋಲನ ಕಾಪಾಡಲು ನೆರ ವಾಗುತ್ತೆ. ಆದ್ರೆ ಕನಸುಗಳನ್ನ ಸುಖ ದುಃಖ ಎಂದು ಗುರುತಿಸೋದು ಅದಕ್ಕೆ ಪ್ರಾಮುಖ್ಯತೆ ಕೊಡೋದು ತಪ್ಪು ಅಮ್ಮ.”ನೋಡು ಶ್ರೀ, ನೀನು ಡಾಕ್ಟರ್ ಆಗಿ ನೀನು ಹೇಳಿದ್ದು ಸರಿ ಇರಬಹುದು .ಆದ್ರೆ ನಿವೆಲ್ಲ ನನ್ನ ಕನಸಿಗೆ ಪ್ರಾಮುಖ್ಯತೆ ಕೊಡದಿದ್ರೂ ಪರವಾಗಿಲ್ಲ.ಆದ್ರೆ ನನ್ನ ಮನಸ್ಸಿಗೆ ಪ್ರಾಮುಖ್ಯತೆ ಕೊಡಿ.ನೋಡುಶ್ರೀ, ನೀನಿವತ್ತು ಕ್ಲನಿಕ್ ಗೆ ಹೋಗೋಹಾಗಿಲ್ಲ.” “ಸುಶೀ,ನನ್ನ ಮಾತು ಕೇಳು “ಏನೋ ಹೇಳಲು ಹೊರಟ ರಾಯರ ಮಾತನ್ನುಕೇಳದೆ,ಸುಶೀಲಮ್ಮ “ನೋಡಿ ನೀವು ಯಾರಾದ್ರು ಮನೆಯಿಂದ ಆಚೆ ಹೋದ್ರೆ  ನನ್ಮೇಲಾಣೆ.”ಎಂದುಹೇಳಿ ಕಣ್ಣಲ್ಲಿ ನೀರು ತುಂಬಿಕೊಂಡರು ಸುಶೀಲಮ್ಮ. ಅಮ್ಮನ ಕಣ್ಣೀರ  ನೋಡಿ ಎಲ್ರು ಒಪ್ಪಿಕೊಂಡರು. ಅಕ್ಷರ ಮಾತ್ರ ಗಂಡನಿಗೆ ಗುಟ್ಟಾಗಿ, “ನನ್ನ ಪಾಡಿಗೆ ನಾನು ಆಫೀಸಿಗೆ ಹೋಕ್ತೀನಿ. ನೀವು ಅತ್ತೆಗೆ ಏನೂ ಹೇಳೋಕೆಹೋಗ್ಬೇಡಿ, ನಂದು ‘ಡೆಮೋ’ಮುಗಿಸಿಕೊಂಡು ಬೇಗ ಬರ್ತೀನಿ”ಅಂದಾಗ, ಮಧುಕರ ಮನಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ. ಅಂತು ಎಲ್ರು ಮನೇನಲ್ಲಿ ಇರುವುದಾಗಿ ಹೇಳಿದಮೇಲೆ ಸುಶೀಲಮ್ಮ ತಿಂಡಿಮಾಡಲು ಒಳಗೆ ಹೋಗುತ್ತಿದ್ದವರಿಗೆ, ರಾಯರು,”ಸುಶೀ ನಿನ್ನ ಮಾತಿಗೆ. ನಾವೆಲ್ಲ ಒಪ್ಪಿದೀವಿ ಅದಕ್ಕೆ ಈಗ ಮತ್ತೆಕಾಫಿಬೇಕು.”ಅಂದಾಗ, ಮಕ್ಕಳು ಸೊಸೆಯರೂ ಧ್ವನಿಗೂಡಿಸಿದರು.ಸುಶೀಲಮ್ಮ, “ಆಯ್ತು ಈಗ ತಂದೆ” ಅನ್ನುತ್ತ ಒಳಕ್ಕೆ ಹೋದರು.            ಸುಶೀಲ,ಶ್ರೀಪಾದರಾಯರಿಗೆ, ಇಬ್ಬರು ಗಂಡು ಮಕ್ಕಳು. ಇಬ್ಬರಿಗೂ ಮದುವೆ ಆಗಿದೆ. ಮೊದಲನೆ ಮಗ ಶ್ರೀಕರ ಡಾಕ್ಟರ್.ಮದುವೆ ಆಗಿ ಮೂರು ವರ್ಷವಾಗಿದೆ. ಎಂಟು ತಿಂಗಳ ಹೆಣ್ಣು ಮಗುವಿದೆ. ಎರಡನೇ ಮಗ ಮಧುಕರ ಈಗಷ್ಟೇ ಮದುವೆ ಆಗಿದೆ ಗಂಡ ಹೆಂಡತಿಇಬ್ರು ಸಾಫ್ಟವೇರ್ ಇಂಜನಿಯರ್ ಗಳು ಶ್ರೀಪಾದರಾಯರು ಪ್ಯಾಕ್ಟರಿ ಒಂದರಲ್ಲಿ ಕೆಲ್ಸದಲ್ಲಿದ್ದರು. ಈಗ ರಿಟೈರ್ಡ ಆಗಿ ಮೂರುವರ್ಷ ವಾಗಿದೆ. ಸುಖೀಕುಟುಂಬ ಅಂತ ಹೇಳಬಹುದು.     ಎಲ್ಲರಿಗು ಮತ್ತೂಂದು ಬಾರಿ ಕಾಫಿಕೊಟ್ಟು ರಾಯರಿಗೆ ಅವರಿಗೆ ಇಷ್ಟವಾದ ಸಕ್ಕರೆ ಇಲ್ಲದ ಕಾಫಿ ಕೊಟ್ಟು, ಸುಶೀಲಮ್ಮ ಇವತ್ತು ತಿಂಡಿ ತಡವಾಯಿತೆಂದು, ತರಾತುರಿಯಲ್ಲಿ ಬೇಗ ಉಪ್ಪಟ್ಟು ಮಾಡಿದರು.ಮಧುಕರ,ಅಮ್ಮನಿಗೆ ಹೆಂಡತಿ ಆಫೀಸಿಗೆ ಹೋಗಿದ್ದು, ತಿಳಿಯಬಾರದೆಂದು”,ಅಮ್ಮಾ,ಅಕ್ಷರ ಕಂಪ್ಯೂಟರ್ ನಲ್ಲಿಕೆಲ್ಸಮಾಡ್ತಿದಾಳೆ ನಮ್ಮಿಬ್ಬರಿಗೆ ಹಾಕಿಕೊಡು ನಾನು ಮೇಲೆ ತಗೊಂಡುಹೋಗ್ತೀನಿ”ಅಂತಹೇಳಿ ತಗೊಂಡುಹೋದ. ರಾಯರಿಗೆ ಇಷ್ಟವಿಲ್ಲದ ಉಪ್ಪಿಟ್ಟು ರುಚಿಸಲಿಲ್ಲ. ಸುಶೀಲಮ್ಮ ಹೇಗೋ ತಿಂಡಿಕಥೆ ಮುಗಿಸಿ ಅಡುಗೆಗೆ ಶುರು ಹಚ್ಚಿಕೊಂಡರು. ಅಡುಗೆ ಮಾಡಿ,ಎಲ್ಲರನ್ನುಊಟಕ್ಕೆ ಕರೆದು ಬಂದರು.ಅಷ್ಟೊತ್ತಿಗೆ ಅಕ್ಷರ ಆಫೀಸಿನಿಂದ ಬಂದಿದ್ದು ಮಧುಕರನಿಗೆ ‌ಸಮಾದಾನವಾಗಿತ್ತು.ಎಲ್ಲರು ಊಟಕ್ಕೆ ಬಂದರು.ರಾಯರು‌ ಸಹ ತಮ್ಮ ರೂಂನಿಂದ ಎದ್ದುಬರುತ್ತಿರ ಬೇಕಾದರೆ ಹಾಗೇ ಕುಸಿದುಬಿದ್ದರು. ಮುಖ ಮೈಯಲ್ಲಾ ಬೆವರುತ್ತಿತ್ತು.ಕೈಕಾಲುಗಳು ನಡುಗುತ್ತಿತ್ತು.ಇದನ್ನು ನೋಡಿದ ಮದುಕರ ತಕ್ಷಣ  ಶ್ರೀಕರನನ್ನು ಕರೆದ. ಇಬ್ಬರು ‌ಸೇರಿ ರಾಯರನ್ನು ರೂಂನಲ್ಲಿ ಮಲಗಿಸಿದರು.ಇದನ್ನು ನೋಡಿದ ಸುಶೀಲಮ್ಮನ ಎದೆ ಬಡಿತ ಜೋರಾಯಿತು.ರಾಯರಿಗೆ ಏನೋ ಆಗೇ ಬಿಡುತ್ತದೆಂದು ತುಂಬಾ ಹೆದರಿದರು, ಇಬ್ಬರು ಸೊಸೆಯರು ಮಾವನವರಿಗೆ ಏನೂ ಆಗಲ್ಲವೆಂದು ಸಮಾಧಾನ ಮಾಡುತ್ತಿದ್ದರು.ಶ್ರೀಕರ ರಾಯರಿಗೆ  ಬಿ.ಪಿ,ಶುಗರ್ ಟೆಸ್ಟ್ ಮಾಡಿದಾಗ ಶುಗರ್ ಕಡಮೆ ಇರುವುದು ಗೊತ್ತಾಗಿ ತಕ್ಷಣ ಸಕ್ಕರೆ ನೀರು ಕೊಟ್ಟಾಗ, ರಾಯರು ಚೇತರಿಸಿಕೊಂಡರು.ಆರೋಗ್ಯವಾಗಿದ್ದ ರಾಯರಿಗೇಕೆ ಹೀಗಾಯ್ತು?ಅಂತ ಸುಶೀಲಮ್ಮ ಶ್ರೀಯನ್ನು ಆತಂಕದಿಂದ ವಿಚಾರಿಸಿದಾಗ,”ನೀನು ಆತಂಕಪಡೋಂತಹುದು ಅಪ್ಪನಿಗೆ ಏನೂ ಆಗಿಲ್ಲ.ಅವರಿಗೆ ಶುಗರ್ ಇಲ್ಲದಿದ್ರು ಶುಗರ್ ಲೆಸ್ ಕಾಫಿ ಕುಡಿದಿದ್ದಾರೆ. ಅವರಿಗೆ ಇಷ್ಟ ಅಂತ ನೀನು ಕೊಡ್ತಿಯಾ!ಇವತ್ತು ಸರಿಯಾಗಿ ತಿಂಡಿಬೇರೆ ತಿಂದಿಲ್ಲ.ಎಲ್ಲಾಸೇರಿ ದೇಹದಲ್ಲಿ ಶುಗರ್ ಕಡಮೆಆಗಿದೆ‌ ಈಗ ಬೇಗ ಊಟಕ್ಕೆ ಬಡಿಸುನಡಿ‌. ಎಲ್ಲಾಸರಿಹೋಗುತ್ತೆ.” ಅಂದಾಗ ಎಲ್ರುಬಂದು ಊಟ ಮುಗಿಸಿದ್ರು.ಸುಶೀಲಮ್ಮ ಮಾತ್ರ ರಾಯರಮೇಲೆ  ಒಂದುಕಣ್ಣು ಇಟ್ಟಿದ್ದರು. ಎಲ್ಲರದು ಊಟ ಆದಮೇಲೆ ತಾವು ನಾಮಕಾವಸ್ಥಗೆ ಊಟ ಮಾಡಿ, ಸೀದ ರಾಯರಿದ್ದಕಡೆ ಬಂದು ಕುಳಿತರು .”ಈಗ ಹೇಗಿದೆ ?”ನಂಗೇನು ಆಗಿಲ್ಲ ಸುಶೀ ಆರಾಮವಾಗಿದೀನಿ.””ಯಾಕೋ ನೀವು ಸುಸ್ಥಾಗಿದ್ದು ನೋಡಿ ನನಗೆ ತುಂಬ ಭಯ ಆಯ್ತು.”ಅಂತ ಸುಶೀಲಮ್ಮಕೆಮ್ಮ ತೊಡಗಿದರು.”ನೀನ್ಯಾಕೆ ಕೆಮ್ಮುತಿದಿಯಾ?”ಅಂದು, “ಸುಶೀ”ಅನ್ನುತ್ತ ಹತ್ತಿರ ಬಂದ್ರು ರಾಯರು ,ಸುಶೀಲಮ್ಮ ರಾಯರ ಕೈ ಹಿಡಿದುಕೊಂಡು ಹಾಗೇ ವಾಲಿದರು. ರಾಯರು ಗಾಬರಿಯಾಗಿ ಮಕ್ಕಳನ್ನ ಕೂಗಿದರು ಮಗ ಬಂದು ಟಿಷ್ಟ್ ಮಾಡುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.ಅವರಿಗೆ ಹಾರ್ಟ ಫೇಲ್ಯುರ್ ಆಗಿ ಹೋಗಿಬಿಟ್ಟರು. ಅವರ ಕನಸು ನಿಜವಾಗಿತ್ತು. ನಮ್ಮನ್ನೆಲ್ಲ ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತ್ತಿದ್ದ ಅಮ್ಮ,ನಾವು ಅವರ ಬಗ್ಗೆ ಕಾಳಜಿ ವಹಿಸಬೇಕಾಗಿತೆಂದು ಎಲ್ಲರ ಮನಸಿಗು ನಾಟಿತ್ತು.  *********************

ಕಥಾಯಾನ Read Post »

ಕಾವ್ಯಯಾನ

ಅನುವಾದ ಸಂಗಾತಿ

ಪಾತರಗಿತ್ತಿಯ ನಗು ಮೂಲ: ಕ್ಯಾಥರೀನ್ ಮ್ಯಾನ್ಸ್ ಫೀಲ್ಡ್ ಕನ್ನಡಕ್ಕೆ: ಕಮಲಾಕರ ಕಡವೆ ನಮ್ಮ ಗಂಜಿಯ ಬಟ್ಟಲಿನ ಮಧ್ಯಒಂದು ನೀಲಿ ಪಾತರಗಿತ್ತಿಯ ಚಿತ್ರ;ಪ್ರತಿ ಮುಂಜಾನೆ ಅದರ ತಲುಪಿದ ಮೊದಲಿಗರಾಗಲು ನಮ್ಮ ಪ್ರಯತ್ನ.ಅಜ್ಜಿ ಹೇಳುತ್ತಿದ್ದಳು: “ಪಾಪ, ಆ ಪಾತರಗಿತ್ತಿಯ ತಿಂದುಬಿಡಬೇಡಿ!”ಹಾಗೆಂದಾಗ ನಾವು ನಗುತ್ತಿದ್ದೆವು.ಅಜ್ಜಿ ಯಾವಾಗಲೂ ಹಾಗೆ ಹೇಳುತ್ತಿದ್ದಳು, ಪ್ರತಿಸಲ ನಮಗೆ ನಗು.ಅದು ಅಷ್ಟು ಅಪ್ಯಾಯಮಾನ ಜೋಕಾಗಿತ್ತು.ನನಗೆ ಖಾತ್ರಿ ಇತ್ತು, ಒಂದು ಮುಂಜಾನೆಆ ಪಾತರಗಿತ್ತಿ ವಿಶ್ವದ ಅತ್ಯಂತ ಹಗುರ ನಸು ನಗುವ ನಗುತ್ತ,ನಮ್ಮ ಬಟ್ಟಲಿನಿಂದ ಎದ್ದು ಹಾರಿ ಹೋಗುವುದೆಂದು,ಹೋಗಿ ಅಜ್ಜಿಯ ಮಡಿಲ ಮೇಲೆ ಕೂರುವದೆಂದು. ******* “Butterfly Laughter” In the middle of our porridge platesThere was a blue butterfly paintedAnd each morning we tried who should reach thebutterfly first.Then the Grandmother said: “Do not eat the poorbutterfly.”That made us laugh.Always she said it and always it started us laughing.It seemed such a sweet little joke.I was certain that one fine morningThe butterfly would fly out of our plates,Laughing the teeniest laugh in the world,And perch on the Grandmother’s lap.

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಆರೋಪಿ!! ಚೈತ್ರ ಶಿವಯೋಗಿಮಠ ಆರೋಪಿ!! ಕಾಲನ ವಿರುದ್ಧ ಸಿಕ್ಕಾಪಟ್ಟೆ ಆರೋಪಗಳಿವೆ!! ಅವನು ಸರಿಯಿಲ್ಲ, ಕೆಟ್ಟು ಹೋಗಿದ್ದಾನೆ, ಮೋಸ ಮಾಡಿದ್ದಾನೆ… ಹೀಗೇ ಓಡುತ್ತಲೇ ಇದ್ದಾನೆ ಅವ, ಆರೋಪದ ಪಟ್ಟಿಯಿಂದ ತಪ್ಪಿಸಿಕೊಳ್ಳಲು! ಅರೆ, ಯಾರೋ ಮೊಕದ್ದಮೆ ಹೂಡೇ ಬಿಟ್ಟಿದ್ದಾರೆ… ಓಡುತ್ತಿದ್ದಾನೆ ಅಂತ!! ಇದೆಂತ ಸಂಕಷ್ಟ ಬಂದೊದಗಿತು!! ಮತ್ತಷ್ಟು ಗತಿ ಹೆಚ್ಚಿಸಿದ ಓಡುವವನ ಕಾಲ ಅಡಿಯಲ್ಲಿ ಸಿಕ್ಕು ನರಳುತ್ತಿದ್ದಾರೆ ಕೆಲರು ಮತ್ತೊಂದಷ್ಟು ಅವನ ತೆಕ್ಕೆಯಲ್ಲಿನ ಸಂಪತ್ತನ್ನ ಸಿಕ್ಕಷ್ಟು ಬಾಚಿಕೊಳ್ಳಲೆತ್ನಿಸಿದ್ದಾರೆ.. ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ!! ಆದರೆ ಆರೋಪಿಯನ್ನ ಮಾತ್ರ ಇನ್ನೂ ಬಂಧಿಸಲಾಗಿಲ್ಲ! *********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಲಂಗರು ಹಾಕಿದ ಹಡಗು ವಿಜಯಶ್ರೀ ಹಾಲಾಡಿ ಕಾಡಿಗೆ ಕಪ್ಪಿನ ಕತ್ತಲಲ್ಲಿ ಅವಳು ಬಿರಬಿರನೆ ಸಂಚರಿಸುತ್ತಿದ್ದಳು ಮಸಿ ಇರುಳಿನ ಹಾಗೆ ಚೆಲ್ಲಿಕೊಂಡ ಕೂದಲ ಕಡಲು ತೂರಾಡುತ್ತಿದ್ದವು ಕಂಪಿಸಿದ ಎಲೆಎಲೆ ಮಣ್ಣ ಕಣ ಕಣ ಉದುರುತ್ತಿದ್ದ ಧೂಳುಮಳೆ ಅಲ್ಲೇ ಯಥಾಸ್ಥಿತಿಯಲ್ಲೇ ಗಾಬರಿಬಿದ್ದು ಸ್ತಬ್ಧವಾದವು ಕಾಲ್ಗೆಜ್ಜೆಯ ರಿಂಗಣಕ್ಕೆ ಕಪ್ಪೆ ಕೀಟ ರಾತ್ರಿ ಸಡಗರಿಸಿ ಪುಳಕವಾದವು .. ನದೀ ತೀರದಲ್ಲಿ ಮರ ಗಿಡ. ತಂಗಾಳಿಯೊಂದಿಗೆ ಘಲ್ ಘಲ್ ಸಪ್ಪಳ -ವಾಲಿಸಿದ ಗೂಬೆಯೊಂದು ಬಂಡೆಯಾಚೆ ಸರಿದು ಕ್ಷಣದಲ್ಲಿ ಮರೆಯಾಯಿತು ಅದರ ಮಿದು ಕಂದಮ್ಮ -ಗಳು ತೋಳದಿಂಬೊಳಗೆ ಹುದುಗಿ ಕೂತು ಕಣ್ಣಗಲಿಸಿದವು! ಅವಳ ನೀಳ ಬೆರಳುಗಳಲ್ಲಿ ಮಿಂಚುಹುಳದ ಕಂದೀಲು ತೂಗಾಡುತ್ತಿತ್ತು …. ಚಂದಿರನಾದರೂ ತುಸು ಬಾಗಿ ಜೇನುಮರಳಿಗೆ ಮುತ್ತಿಟ್ಟು ದಾರಿ ತೋರುತ್ತ ಅನುಸರಿಸುತ್ತಿದ್ದ. ಹೂ ಪಕಳೆಯಂತಾ ತನ್ನ ಗೋಧಿ ಪಾದವ ತುಸುವೇ ನದಿ ನೀರಿಗೆ ಸೋಕಿಸಿ ಮಂದಹಾಸ -ದಲ್ಲಿ ಮಿಂದು ಸುಯ್ದಳು ತೊಯ್ಯುವ ಉಡುಪು ಲೆಕ್ಕಿಸದೆ ಕಚಗುಳಿ ಇಡುವ ಮೀನು -ಮರಿಗಳ ಸ್ಪರ್ಶಕ್ಕೆ ತೆರೆಯುತ್ತ ಇಳಿದಳು ಕೊರೆವ ನದಿಗಿಳಿದಳು …. ರೊಯ್ಯರೊಯ್ಯನೆ ಬೀಸು ಹೆಜ್ಜೆಯ ಸುಖಿಸುತ್ತ ನೀರ ಮೇಲೆ ಕಾಲೂರಿ ಲೀಲಾಜಾಲ – ಜಾಲ ದೊಳಗೆ ನಡೆದೇಬಿಟ್ಟಳು ತೀರದಿಂದ ತೀರದಾಚೆ ಗಾಳಿಯಲೆ ಎಣಿಸುತ್ತ ಲಂಗರು ಹಾಕಿದ ಹಡಗೊಂದು ಬೆಚ್ಚಿ ಪಟಪಟನೆ ರೆಕ್ಕೆಬಡಿದು ಸುಮ್ಮನಾಯಿತು ಚುಕ್ಕಿಬೆಳಕು ಸುರಿದಿದ್ದ ಕಂದೀಲು ಅಗೋ …. ಚೂರು ಚೂರೇ ದಿಗಂತ -ದಲ್ಲಿ ಮಾಯವಾಯಿತು ..! ********************************

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಯುದ್ದವೆಂದರೆ ಕು.ಸ.ಮಧುಸೂದನ ಯುದ್ದವೆಂದರೆ ಕೋವಿ ಫಿರಂಗಿಗಳು ಮದ್ದು ಗುಂಡುಗಳು ಸೋಲು ಗೆಲುವುಗಳು ಮಾತ್ರವಲ್ಲ ಯುದ್ದವೆಂದರೆ ಅಂಗೈನ ಮದರಂಗಿ ಆರುವ ಮೊದಲೇ ಹಣೆಕುಂಕುಮ ಅಳಿಸಿಕೊಳ್ಳುವ ಹೆಣ್ಣಗಳು ಅಪ್ಪನ ತಬ್ಬುವ ಮೊದಲೇ ತಬ್ಬಲಿಯಾಗುವ ಹಸುಗೂಸುಗಳು ಮಗನ ಮನಿಯಾರ್ಡರಿಗಾಗಿ ಕಾತು ಕೂತ ಮುದಿಜೀವಗಳು. ಮತ್ತೂ ಯುದ್ದವೆಂದರೆ ಇರುವುದೆಲ್ಲವ ನಾಶ ಮಾಡಹೊರಟು ತಾವೂ ನಾಶವಾಗುವ ಹಳೆಯ ಆಟ ಮನುಕುಲದ ಖಳರ ಚಟ! *********

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಸತ್ತ ದೇಹದ ಉಸಿರು ಶ್ರೀದೇವಿ ಕೆರೆಮನೆ “ನೀನು ತುಂಬ ಗಟ್ಟಿ” ಒಂದಿಷ್ಟು ಜಗಳ, ವಾದವಿವಾದ ಮುಗಿಸಿದ ನಂತರ ಎರಡು ದಿನ ಅಖಂಡ ಮೌನವೃತವನ್ನಾಚರಿಸಿ ಇನ್ನೇನು ದಿನ ಮುಗಿದು ಎಲ್ಲರೂ ನಿದ್ದೆಗೆ ಜಾರಿ ನಾನು ಮಾತ್ರ ನಿದ್ರಾಹೀನಳಾಗಿ ಹೊರಳಾಡುವ ರಾತ್ರಿಯ ಮೊದಲ ಪ್ರಹರದ ಕೊನೆಯಲ್ಲಿ ಹೇಳಿದ ನಾನು ಮಾತನಾಡಲಿಲ್ಲ “ನನ್ನ ಬಿಟ್ಟು ನೀನು ಬದುಕಬಲ್ಲೆ ಬಿಡು” ಒಂದುವರೆ ನಿಮಿಷದ ಚಿಕ್ಕ ಮೌನದ ನಂತರ ಮತ್ತೊಮ್ಮೆ ತಣ್ಣನೆಯ ದನಿಯಲ್ಲಿ ಕೂರಲಗಿನಂತೆ ಉಸುರಿದ ನಾನು ಮಾತಾಡಲಿಲ್ಲ ಆಗಲೂ ಯಾವ ಮಾತಿಂದಲೂ ಏನೂ ಪ್ರಯೋಜನವಿಲ್ಲವೆಂಬುದು ವೇದ್ಯವಾಗಿತ್ತು ಅರ್ಥ ಕಳೆದುಕೊಂಡ ಪದಗಳು ಎದೆಯೊಳಗೆ ಬಿಕ್ಕುತ್ತಿರುವುದನ್ನು ಅವನಿಗೆ ತೆರೆದು ತೋರಿಸುವುದಾದರೂ ಹೇಗೆ ಹನಿಗೊಂಡಿದ್ದ ಕಣ್ಣಂಚು ನೋಡುವ ವ್ಯವಧಾನ ಅವನಿಗಿರಲಿಲ್ಲ ಚೆನ್ನಾಗಿ ಗೊತ್ತು ನನಗೆ ಕೆಲವು ದಿನಗಳ ನಂತರ ಮತ್ತೊಮ್ಮೆ ಇಂತಹುದೇ ಜಗಳ ಮನಸ್ತಾಪದ ಸಮಯದಲ್ಲಿ ಆ ದಿನ ಹೇಳಿದ್ದೆನಲ್ಲ ನೀನು ತುಂಬ ಗಟ್ಟಿ ಎಂದು ಎನ್ನುತ್ತ ಈಗ ಹೇಳಿದ್ದಕ್ಕೆ ಅಧಿಕೃತ ಮುದ್ರೆಯೊತ್ತಿ ದೃಢಪಡಿಸಿ ಸೀಲು ಒತ್ತಬಹುದು ಎದೆಯೊಳಗೆ ಭಾವನೆಗಳೆಲ್ಲ ಮುದುಡಿ ದೇಹ ಸತ್ತು ಕೇವಲ ಉಸಿರು ತೇಕುತ್ತಿರುವುದನ್ನು ಹೇಗೆ ತೋರಿಸಲಿ ಅವನು ಮಾತಾಡದ ಒಂದೊಂದು ಕ್ಷಣವೂ ನನ್ನ ಆಯುಷ್ಯದ ಒಂದೊಂದು ವರ್ಷವನ್ನು ಕಡಿಮೆ ಮಾಡುತ್ತಿರುವುದನ್ನು ಹೇಗೆ ಪ್ರಮಾಣಿಸಲಿ ಸತ್ತ ದೇಹದ ಉಸಿರು ತಾಗಿ ಕೊಳೆತ ವಾಸನೆ ಸುತ್ತೆಲ್ಲ ಅಡರಿ ಮೌನ ಇಂಚಿಂಚಾಗಿ ಕೊಲ್ಲುತ್ತಿರುವಾಗ ಜೀವಮಾನದ ಲೆಕ್ಕ ಇಡುವುದಾದರೂ ಯಾರು? ******

ಕಾವ್ಯಯಾನ Read Post »

You cannot copy content of this page

Scroll to Top