ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ರುಕ್ಮಿಣಿ ನಾಗಣ್ಣವರ ನೀ ಬರುವ ದಾರಿಯಲಿ ಕಂಗಳಿರಿಸಿ ಕಾಯುತಿರೆ ಕಾತುರದಿ ಸಂಧಿಸಲು ಬೇಗ ಬಾ ಕಾಣದ ನಿನ್ನನು ಹೊಳೆದಂಡೆಯೂ ಕೂಗುತಿರೆ ದಡಬಡಿಸಿ ಸಂತೈಸಲು ಬೇಗ ಬಾ ತುಟಿ ಮೇಲೆ ತರದ ಥರಥರ ಹೊಸಥರದ ಯೋಚನೆ ನೂರು ಪಟ್ಟಿ ಮಾಡಿರುವೆ ಎದುರು ಬದುರು ಕೂತು ಚರ್ಚಿಸಿ ನಾಳೆಗೊಂದ ಹೊಸಗನಸ ನೇಯಲು ಬೇಗ ಬಾ ಹೊತ್ತುಗಳೆಯಲರಿಯದ ಇಂದ್ರಿಯಗಳು ವಿರಹದಾಗ್ನಿಯಲಿ ಬೆಂದು ಚಡಪಡಿಸುತಿರೆ ಅಂಗೈಲ್ಹಿಡಿದ ಹರಳುಗಳು ಸಜೆ ಅನುಭವಿಸುತಿವೆ ಬಿಡುಗಡೆಗೊಳಿಸಲು ಬೇಗ ಬಾ ಹೃದಯಗೂಡಿನ ಬೆಚ್ಚನೆ ಭಾವಗಳು ನಿನಗಾಗಿ ಹಪಹಪಿಸಿ ಆತಂಕದಿ ತಲ್ಲಣಿಸುತಿರೆ ಎದೆಗೆದೆಯ ಬೆಸೆದು ತುಟಿಗೆ ತುಟಿ ಜಡಿದು ನನ್ನನ್ನೇ ಲೂಟಿ ಮಾಡಲು ಬೇಗ ಬಾ ಇರುಳ ದಾರಿಯಲಿ ಸುರಿದೊಲವ ಬೆಳಕ ತೊರೆದು ಹೋಗದಿರು ಕಡುವಿರಹ ಸುಡುತಲಿರೆ ‘ರುಕ್ಮಿಣಿ’ಯ ಒಂಟಿಹೆಜ್ಜೆಗೂ ನಿತ್ರಾಣ ಹೆಗಲಿಗ್ಹೆಗಲ ಜೋಡಿಸಿ ಕಾಲ ಸರಿಸಲು ಬೇಗ ಬಾ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಎದೆಕದದ ಅಗುಳಿ ತೆಗೆದಂತೆ ಅದೊಂದು ಹಾಡು ಮತ್ತಕಡಲಲಿ ಮುಳುಗಿದಂತೆ ಅದೊಂದು ಹಾಡು ಚಿಟ್ಟೆಗಳ ಹಿಂಬಾಲಿಸುತ್ತ ಪರವಶ ಹುಡುಗ ಪುಲಕಗಳೆ ಬೊಗಸೆಗಿಳಿದಂತೆ ಅದೊಂದು ಹಾಡು ಸಂತೆಯ ಝಗಮಗಗಳಿಗೆ ಕಣ್ಣು ತೆತ್ತು ಪೋರಿ ಬಯಕೆಗಳಿಗೆ ಹರಯ ಬಂದಂತೆ ಅದೊಂದು ಹಾಡು ಕೋಲೂರಿ ತಡವರಿಸಿ ನಡೆದು ಇಳಿಸಂಜೆಗೆ ನೆನಪಮಡುವಲಿ ಮಿಂದಂತೆ ಅದೊಂದು ಹಾಡು ಸವೆದ ಜಾಡುಗಳ ಸವೆಸಿ ತಿರುಗಣಿ ಬದುಕು ‘ವಿಶು’ ನಡುವೆ ಕಾಡುವ ಕೊಳಲುಲಿಯಂತೆ ಅದೊಂದು ಹಾಡು ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸುಜಾತಾ ರವೀಶ್ ಏಕೋ ತಿಳಿಯೆ  ವಿಷಾದದಲೆಗಳಲಿ ಮುಳುಗಿಬಿಟ್ದಿದೆ ಕವಿತೆ  ಏನೋ ಅರಿಯೆ ಅಂತರಂಗದಾಳದಲಿ ಹುದುಗಿಬಿಟ್ಠಿದೆಕವಿತೆ  ಸ್ಪರ್ಧೆಗಳ ಪ್ರವಾಹದ ಹುಚ್ಚುಹೊಳೆಯಲಿ ಕೊಚ್ಚಿಹೋಯ್ತೇಕೆ ಕವಿತೆ ? ಪರಸ್ಪರ ಪ್ರಶಂಸೆ ಮೆಚ್ಚುವಬ್ಬರದಲಿ ಮುಚ್ಚಿಬಿಟ್ಟಿದೆ ಕವಿತೆ  ಮನದಾಳದ ಭಾವಾಭಿವ್ಯಕ್ತಿ ಎಂಬುದೇ ಮರೆಸಿಬಿಟ್ಟಿದೆ ಕವಿತೆ  ಸವಾಲುಗಳ ಎದುರಿಸುತ ಯಶವನೇ ಮೆರೆಸಿಬಿಟ್ಟಿದೆ ಕವಿತೆ  ಪರರ  ನಿರ್ಣಯಗಳೆಂಬ ರಾಜಕೀಯದಲಿ ಸೋತುಬಿಟ್ದಿದೆ ಕವಿತೆ  ಪಕ್ಷಪಾತಗಳ ಸ್ಮಶಾನದಲಿ ಹೂತು ಹೋಗಿಬಿಟ್ಟಿದೆ ಕವಿತೆ ವಿಜಯವ ಅರಸುತಲಿ ಬಂಧನಗಳ ಮೀರಿಬಿಟ್ಟಿದೆ ಕವಿತೆ  ಸುಜಿಹೃದಯವ ಉರಿಸುತಲಿ ಚೈತನ್ಯ ಹೀರಿಬಿಟ್ಟಿದೆ ಕವಿತೆ ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಯುಧಕ್ಕಿಂತ ಹರಿತ ರಾಜು ದರ್ಗಾದವರ ಮೊನ್ನೆತಾನೆ ಗೊತ್ತಾಯ್ತು ಕವಿತೆಗಳು ಆಯುಧಕ್ಕಿಂತ ಹರಿತವೆಂದು! ಸಮಾಜಕ್ಕೆ ಅಪಾಯಕಾರಿಯೆಂದೀಗ ಘೋಷಿಸಿ ಜೈಲಿಗಟ್ಟಿದ್ದಾರೆ ಕವಿತೆಗಳನ್ನು ಬರೆದವನ. ಕವಿ ಸಿಕ್ಕಿರಬಹುದು ಆದರೆ ಆ ಕವಿತೆ ಅದೆಲ್ಲಿಯವರೆಗೂ ತಲುಪಿದಿಯೋ? ನಿಮ್ಮಲ್ಲಿಯೂ ಅಂತ ಕವಿತೆಯಿದ್ದರೆ ಪಸರಿಸಬೇಡಿ. ಸುಟ್ಟುಬಿಡಿ…! ಅವರಿಗೂ ಬೇಕಾಗಿದ್ದು ಅದೇ..!! ************

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಅಕ್ಷರಸಂತ ಹಾಜಬ್ಬ ಕೆ.ಶಿವು ಲಕ್ಕಣ್ಣವರ ಸ್ವಂತ ದುಡುಮೆಯಿಂದ ಶಾಲೆ ಕಟ್ಟಿಸಿದ ಹರೆಕಳ ಹಾಜಬ್ಬರು ಪದ್ಮಶ್ರೀ ಪಡೆದ ಸಾಹಸಗಾಥೆ..! ಆ ವ್ಯಕ್ತಿ ಕೋಟ್ಯಾಧಿಪತಿಯಲ್ಲ. ಸ್ವಂತಮನೆಯೂ ಅವನಿಗೆ ಇರಲಿಲ್ಲ. ಉನ್ನತ ವಿದ್ಯಾಭ್ಯಾಸವಂತೂ ದೂರದ ಬೆಟ್ಟವಾದರೂ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹರೆಕಳ ಹಾಜಬ್ಬನವರು ತಮ್ಮ ಜೀವನ ಸುಃಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು… ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 120ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರುವ ಮೂಲಕ ಅಕ್ಷರದ ಕನಸುಗರು. ಹಾಜಬ್ಬ ಅವರು ಬೆಳಗಾಗುತ್ತಲೇ ಬಿಳಿ ಆಂಗಿ ಬಿಳಿ ಪಂಚೆ ಧರಿಸಿ ಮಂಗಳೂರಿನ ಬಸ್‌ ನಿಲ್ದಾಣಗಳಲ್ಲಿ ಬುಟ್ಟಿ ಹಿಡಿದು ಕಿತ್ತಳೆ ಹಣ್ಣು ಮಾರುವ ಕಾಯಕ ಮುಂದುವರಿಸಿದ್ದಾರೆ… ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳ ಇವರ ಊರು… ಹಾಜಬ್ಬ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದು, ಪುತ್ರ ಪೈಂಟಿಂಗ್ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ… ಹೀಗೆ ಹಣ್ಣು ಮಾರುವಾಗ ವಿದೇಶಿ ವ್ಯಾಪಾರಿಯೊಬ್ಬರು ಇಂಗ್ಲೀಷ್ ನಲ್ಲಿ ಹಣ್ಣಿನ ಬೆಲೆ ಕೇಳುತ್ತಾರೆ. ಶಿಕ್ಷಣ ಇಲ್ಲದ ಹಾಜಬ್ಬರಿಗೆ ಬೆಲೆ ಹೇಳಲು ಗೊತ್ತಾಗುವುದಿಲ್ಲ. ಇದರಿಂದ ಮನನೊಂದ ಹಾಜಬ್ಬ ಅವರಿಗೆ ಶಿಕ್ಷಣ ಎಷ್ಟು ಮುಖ್ಯ ಅನ್ನೋದು ಮನದಟ್ಟು ಆಗುತ್ತದೆ. ತನ್ನದೇ ಊರಿನಲ್ಲಿದ್ದ ಮಕ್ಕಳಿಗೆ ಹತ್ತಿರದಲ್ಲೇ ಇದ್ದ ಖಾಸಗಿ ಶಾಲೆಗೆ ಸೇರಿಸಲು ಊರಿನ ಜನರು ಪರದಾಡುವುದನ್ನ ನೋಡಿ ಹಾಜಬ್ಬ ನಮ್ಮ ಊರಿಗೆ ಉಚಿತ ಶಿಕ್ಷಣ ಸಿಗೋ ಶಾಲೆ ಬೇಕು ಅನ್ನೋ ನಿರ್ಧಾರಕ್ಕೆ ಬರುತ್ತಾರೆ. ಹೇಗಾದರೂ ಮಾಡಿ ಶಾಲೆ ಕಟ್ಟಲೇ ಬೇಕು ಅಂತ ನಿರ್ಧಾರ ಮಾಡಿ ಶಾಲೆ ಕಟ್ಟಲು, ಜಾಗಕ್ಕಾಗಿ ಸರ್ಕಾರಿ ಕಛೇರಿಗಳನ್ನು ಅಲೆಯೋದಕ್ಕೆ ಶುರು ಮಾಡಿದರು. ಮೂರು ದಿನಗಳ ನಂತರ ಹಾಜಬ್ಬರ ಆಸೆಯಂತೆ ಸರ್ಕಾರದಿಂದ ಸ್ವಲ್ಪ ಜಾಗ ಸಿಕ್ಕುತ್ತದೆ. ಜಾಗ ಸಿಕ್ಕ ನಂತರ ಅಧಿಕಾರಿಗಳು ಸ್ಥಳ ಕೊಟ್ಟು ಕೈ ತೊಳೆದು ಕೊಳ್ಳುತ್ತಾರೆ. ಆದರೆ ಹಾಜಬ್ಬ ಸುಮ್ಮನಾಗೋದಿಲ್ಲ. ಹಾಜಬ್ಬ ಅಂದಿನಿಂದ ಹೆಚ್ಚಿನ ಸಮಯ ಕಿತ್ತಳೆ ಹಣ್ಣು ಮಾರೋದಕ್ಕೇ ಶುರು ಮಾಡುತ್ತಾರೆ. ಯಾಕೆಂದರೆ ಕಿತ್ತಳೆ ಹಣ್ಣನ್ನು ಮಾರಿ ಬಂದ ಹಣದಿಂದ ಹಾಜಬ್ಬ ತನ್ನ ಹೆಂಡತಿ ಮಕ್ಕಳನ್ನ ಸಾಕಬೇಕಿತ್ತು. ಇನ್ನು ಹಣ್ಣು ಮಾರಿ ಬಂದ ನಂತರ ಹಳೆ ಬಟ್ಟೆ ತೊಟ್ಟು ಹಾಜಬ್ಬ ಶಾಲೆಗೆ ಕೊಟ್ಟ ಜಾಗವನ್ನು ಸಮತಟ್ಟು ಮಾಡೋ ಕೆಲಸ ಪ್ರಾರಂಭ ಮಾಡ್ತಾರೆ. ಇದಾದ ನಂತ್ರ ಹೆಚ್ಚುಹೊತ್ತು ಹಣ್ಣು ಮಾರಿ ಕೊಡಿಟ್ಟ ಹಣದಲ್ಲಿ ಶಾಲೆ ಕಟ್ಟಲು ಜಲ್ಲಿ ಸೀಮೆಂಟ್ ಇಟ್ಟಿಗೆಯನ್ನು ತರಿಸಿ ಶಾಲೆ ಕಟ್ಟಡ ಕಟ್ಟಲು ಶುರು ಮಾಡುತ್ತಾರೆ… 1995ರಿಂದ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ. 1999-2000ರ ಸಾಲಿಗೆ ನ್ಯೂಪಡುಗೆ ಪ್ರಾಥಮಿಕ ಶಾಲೆ ಮಂಜೂರಾಗುತ್ತದೆ. ಆದರೆ ಮೂಲ ಸೌಕರ್ಯದ ವ್ಯವಸ್ಥೆ ಮಾಡುವುದು ಕಷ್ಟಕರವಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಹಾಜಬ್ಬ ಸರಕಾರಿ ಇಲಾಖೆ ಸೇರಿದಂತೆ ದಾನಿಗಳ ಸಹಕಾರದಿಂದ ಶಾಲಾ ಕಟ್ಟಡ ಸೇರಿದಂತೆ, ಮೈದಾನ ನಿರ್ಮಿಸಿಕೊಡುತ್ತಾರೆ. 1999ರಲ್ಲಿ ಹರೇಕಳದಲ್ಲಿ ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಪಾಠ ಶಾಲೆ ಶುರುವಾಗುತ್ತದೆ. ಶಾಲೆ ಕಟ್ಟಿ ಸುಮ್ಮನಾಗದ ಹಾಜಬ್ಬ ಶಾಲೆಯ ಕಸ ಗುಡಿಸೋದು ,ತೊಳೆಯೋ ಕೆಲಸವನ್ನು ತಾವೇ ಮಾಡುತ್ತಾರೆ… ಕಿತ್ತಲೆ ವ್ಯಾಪಾರ ಮುಗಿಸಿ ಮನೆಗೆ ಹೋದವರೇ ಹಳೆ ಬಟ್ಟೆ ತೊಟ್ಟುಕೊಂಡು ಜಾಗ ಸಮತಟ್ಟು ಮಾಡಲು ಶುರುವಿಟ್ಟುಕೊಳ್ಳುತ್ತಾರೆ. ಅದೆಷ್ಟೋ ದಿನದ ನಂತರ ಜಾಗ ಸಮತಟ್ಟುಗೊಳ್ಳತದೆ. ನಂತರ ಕಿತ್ತಳೆ ಹಣ್ಣಿನ ವ್ಯಾಪಾರದಲ್ಲಿ ಶಾಲೆಗಾಗಿ ಉಳಿಸಿದ ಹಣದಲ್ಲಿ ಜಲ್ಲಿ, ಕಲ್ಲು, ಸಿಮೆಂಟು ತಂದು ರಾಶಿ ಹಾಕುತ್ತಾರೆ. ಹಣ ಇದ್ದಷ್ಟು ಕೆಲಸದವರನ್ನು ನೇಮಿಸಿ ಕಟ್ಟಡ ಕೆಲಸ ಶುರುವಿಟ್ಟುಕೊಳ್ಳುತ್ತಾರೆ. ಹಣ ಖಾಲಿಯಾದರೆ ತಾನೇ ಮೇಸ್ತ್ರಿಯಾಗಿ ಕೆಲಸ ಮಾಡುತ್ತಾರೆ. ಅಂತೂ, ಹಾಜಬ್ಬರ ಸಂತೋಷಕ್ಕೆ ಪಾರವೇ ಇರುದಿಲ್ಲ. ಚಿಕ್ಕ ಮಗುವಿನಂತೆ ಕುಣಿತ್ತಾರೆ. ದಿನಾ ಶಾಲೆಯಲ್ಲಿ ನೆಲ ಒರೆಸುವುದರಿಂದ ಹಿಡಿದು, ಅಂಗಳ ಗುಡಿಸುವುದನ್ನೂ ತಾನೇ ನಿರ್ವಹಿಸಿ ಕಿತ್ತಳೆ ವ್ಯಾಪಾರಕ್ಕೆ ತೆರಳುತ್ತಾರೆ. ಅಷ್ಟರಲ್ಲಿ ಹಾಜಬ್ಬರ ಪತ್ನಿ ಮೈಮುನಾ ಆರೋಗ್ಯ ಕೈಕೊಡುತ್ತದೆ. ಆದರೆ ಮಗುವಿನ ಮನಸ್ಸಿನ ಹರೆಕಳ ಹಾಜಬ್ಬರಿಗೆ ಹೊಸತೊಂದು ಆಶೆ ಹುಟ್ಟಿಕೊಳ್ಳುತ್ತದೆ. ಅದು ಐದನೇ ತರಗತಿಯವರೆಗೆ ಇದ್ದ ಶಾಲೆಯನ್ನು ಏಳನೇ ತರಗತಿಯವರೆಗೆ ವಿಸ್ತರಿಸುವುದು… ಒಂದು ಸರ್ಕಾರ ಮಾಡಬೇಕಾದ ಎಲ್ಲಾ ಕೆಲಸವನ್ನು ಕೇವಲ ಕಿತ್ತಳೆ ಹಣ್ಣು ಮಾರಾಟ ಮಾಡಿದ ದುಡ್ಡಿನಲ್ಲಿ ಹಾಜಬ್ಬ ಮಾಡುತ್ತಿರುವುದನ್ನು ಗಮನಿಸಿದ ಹಲವಾರು ಸಂಘ ಸಂಸ್ಥೆಗಳು ಹಾಜಬ್ಬರನ್ನು ಕರೆದು ಸನ್ಮಾನಿಸುತ್ತವೆ. ಆ ಸನ್ಮಾನದ ಪತ್ರದ ಜೊತೆ ನೀಡುವ ಕವರಿನಲ್ಲಿ ಐನೂರು ರೂಪಾಯಿಯೋ, ಒಂದು ಸಾವಿರ ರೂಪಾಯಿಯೋ ಇರುತ್ತಿದ್ದವು. ಅದೆಲ್ಲವೂ ಬಳಕೆಯಾಗುತ್ತಿದ್ದುದು ಶಾಲೆಯ ಕಲ್ಲು,ಜಲ್ಲಿ, ಮರಳು, ಸಿಮೆಂಟಿಗೆ. ಹಾಜಬ್ಬರ ಶಾಲೆ ಪ್ರಚಾರಕ್ಕೆ ಬಂದ ನಂತರ ಮಂಗಳೂರಿನಲ್ಲಿರುವ ಕೆಲವೊಂದು ಪ್ರತಿಷ್ಠಿತ ಕಂಪನಿಗಳೂ ಹಾಜಬ್ಬರ ಸಾಧನೆ ಕಂಡು ಹರೆಕಳ ಗ್ರಾಮಕ್ಕೆ ಬಂದು ಶಾಲೆ ವೀಕ್ಷಿಸಿ ಒಂದಷ್ಟು ದಾನ ಮಾಡಿದ್ದಾರೆ. ಒಂದೆರಡು ಲಕ್ಷ ರೂಪಾಯಿ ದಾನ ಮಾಡಿ ಗೊಡೆಯಲ್ಲಿ ಹೆಸರು ಕೆತ್ತಿಸಿಕೊಳ್ಳುತ್ತಾರೆ. ಆದರೆ ಶಾಲೆಯ ಎಲ್ಲೂ ಹಾಜಬ್ಬರ ಹೆಸರಾಗಲೀ, ಫೋಟೋ ಆಗಲಿ ಕಾಣ ಸಿಗುವುದಿಲ್ಲ… ಒಮ್ಮೆ ಕಟ್ಟಡದ ಕಾಂಕ್ರೀಟ್ ಕೆಲಸ ನಡೆಯುತ್ತಿದ್ದಾಗ ಸಿಮೆಂಟಿಗೆ ನೀರು ಹಾಕಲು ಕಟ್ಟಡದ ಮೇಲೆ ಹೋದ ಹಾಜಬ್ಬ ಆಯ ತಪ್ಪಿ ಮೇಲಿಂದ ಕೆಳಗೆ ಬಿದ್ದು ಬಿಟ್ಟರು. ತನ್ನ ಕೈಗೆ ಬಂದ ಸನ್ಮಾನದ ದುಡ್ಡುಗಳೆಲ್ಲಾ ಕಟ್ಟಡದ ಪಾಲಾಗಿತ್ತು. ಖಾಸಗಿ ಆಸ್ಪತ್ರೆಗೆ ಸೇರಿದರೆ ಬಿಲ್ಲು ತೆರಲು ದುಡ್ಡಿಲ್ಲ. ಅದಕ್ಕಾಗಿ ಸರಕಾರಿ ಆಸ್ಪತ್ರೆಯಲ್ಲಿ ತುಂಬಾ ಸಮಯ ಚಿಕಿತ್ಸೆ ಪಡೆಯಬೇಕಾಯಿತು. ಇದರಿಂದಾಗಿ ಹಾಜಬ್ಬರ ಹೈಸ್ಕೂಲ್ ಕಟ್ಟಡ ನೆನೆಗುದಿಗೆ ಬಿತ್ತು. ಅಂತೂ ಇಂತೂ ಸಾವರಿಸಿಕೊಂಡ ಹಾಜಬ್ಬ ಆಸ್ಪತ್ರೆಯಿಂದ ಬಿಡುಗಡೆ ಆದವರೇ ಮತ್ತೆ ಕಟ್ಟಡ ನಿರ್ಮಾಣಕ್ಕೆ ತೊಡಗಿಕೊಳ್ಳುತ್ತಾರೆ. ಕೊನೆಗೂ ಹೈಸ್ಕೂಲ್ ಕಟ್ಟಡ ಪೂರ್ಣಗೊಳ್ಳುತ್ತದೆ… ಹಾಜಬ್ಬ ಇಷ್ಟೆಲ್ಲಾ ಮಾಡಿದ್ದು ಸರಕಾರಿ ಶಾಲೆಯೊಂದರ ನಿರ್ಮಾಣಕ್ಕೆ. ಅಲ್ಲಿರುವುದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ. ಇಡೀ ಶಾಲೆಗೆ ಸರಕಾರಿ ಜಮೀನೊಂದು ಹೊರತುಪಡಿಸಿ ಉಳಿದೆಲ್ಲಾ ಹಣ ಬಳಕೆಯಾಗಿದ್ದು ಹಾಜಬ್ಬರದ್ದು ಮತ್ತು ದಾನಿಗಳದ್ದು. ಕನ್ನಡಪ್ರಭ ಮತ್ತು ಸಿಎನ್ಎನ್-ಐಬಿಎನ್ ಸನ್ಮಾನ ಸೇರಿದಂತೆ ಸಂಘ ಸಂಸ್ಥೆಗಳು ಮಾಡಿದ ಸನ್ಮಾನದ ದುಡ್ಡು ಮತ್ತು ಕಿತ್ತಳೆ ಹಣ್ಣಿನ ವ್ಯಾಪಾರದಿಂದಲೇ ಒಂದು ಪೂರ್ಣ ಪ್ರಮಾಣದ ಸರಕಾರಿ ಶಾಲೆಯನ್ನು ನಿರ್ಮಿಸಿದರು. ಹಾಜಬ್ಬರ ಮಗ ಹಾಜಬ್ಬರೇ ನಿರ್ಮಿಸಿದ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದವರೆಗೆ ಹಾಜಬ್ಬರೇ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿದ್ದರು. ಕಳೆದ ಜೂನ್‌ನಿಂದ ಹಾಜಬ್ಬರ ಮಕ್ಕಳ ಹೈಸ್ಕೂಲ್ ವಿದ್ಯಾಬ್ಯಾಸ ಪೂರ್ಣಗೊಂಡಿದೆ. ಈಗ ಹಾಜಬ್ಬರಿಗೂ ಹೈಸ್ಕೂಲ್‌ಗೂ ಸಂಬಂಧವೇ ಇಲ್ಲ. ತಾನೇ ಕಟ್ಟಿದ ಶಾಲೆಗೆ ತಾನೊಬ್ಬ ‘ಸಾರ್ವಜನಿಕ’ಮಾತ್ರ. ಆದರೆ ಹಾಜಬ್ಬ ಈಗಲೂ ಬೆಳಿಗ್ಗೆ ಶಾಲೆಗೆ ಹೋಗಿ ಸ್ವಚ್ಚತೆ ನಿರ್ವಹಿಸಿ ಬರುತ್ತಾರೆ… ರಾಜ್ಯೋತ್ಸವ ಪ್ರಶಸ್ತಿ, 2004 ರಲ್ಲಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು “ವರ್ಷದ ವ್ಯಕ್ತಿ” ಎಂದು ಪ್ರಶಸ್ತಿ ನೀಡುತ್ತದೆ. ಸಿಎನ್ಎನ್-ಐಬಿಎನ್ ಪ್ರಶಸ್ತಿ ಕೂಡ ದಕ್ಕುತ್ತದೆ. ಪದ್ಮಶ್ರೀ ಪ್ರಶಸ್ತಿ ಈಗ ಸಿಗುತ್ತದೆ… ಇಂತಹ ಸಾಧಕ ಹರೇಕಳ ಹಾಜಬ್ಬ ಎಂತಹವಿರಿಗಾದರೂ‌ ಮಾದರಿಯಾಗುತ್ತಾರೆ… ‌‌‌‌‌‌‌ ‌‌‌‌ *************************

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಧುಮ್ಮಿಕ್ಕಿ ಇಳಿದು ಬಾ ಜಲಧಾರೆಯಂತೆ ಕರೆವೆ ನನ್ನೊಳಗೆ ಒತ್ತಾಸೆಯಾಗಿ ನಿಲ್ಲು ಬಾ ನದಿ ದಂಡೆಗಳಂತೆ ಹರಿವೆ ನಿನ್ನೊಳಗೆ ನನ್ನ ನೆರಿಗೆ ನೆರಿಗೆಯೊಳಗೂ ಹುದುಗಿ ಹೀಗೆ ಕಾಡುವುದೇಕೆ ಚಿತ್ತಾರದಂಚಿನ ಸೆರಗಾಗಿ ಬೀಸಿ ಬಾ ತೊನೆವೆ ತೆಕ್ಕೆಯೊಳಗೆ ಮುಸ್ಸಂಜೆ ಮಾಧುರ್ಯ ಮಗುಚಿ ಬಿದ್ದಿದೆ ಇಲ್ಲಿ ನೀನಿಲ್ಲದೆ ಸಂಪ್ರೀತಿ ಕೊಡವ ಹೊತ್ತು ಬಾ ಮಧು ಸುರಿವೆ ಒಳಗೊಳಗೆ ಸುರಚಾಪದಲ್ಲೇನಿಹುದು ಬಿಡು ಅಂಥ ಬಣ್ಣ ಬಣ್ಣದ ಆಟೋಪ ರಂಗಿನೋಕುಳಿಯ ಎರಚಿ ಬಾ ಆಡೋಣವೆ ಕಣ್ ಕಣ್ಣೊಳಗೆ ಜೀವ ಸೊಬಗನ್ನೆಲ್ಲ ಒಂದೇ ಗುಕ್ಕಿನಲ್ಲಿ ಸೂರೆಗೊಂಡರೆ ಸಾಕೆ ಗುಟುಕು ಗುಟುಕಾಗಿ ಹೀರು ಬಾ ಉಸಿರಾಗುವೆ ಎದೆಯೊಳಗೆ ಪ್ರೀತಿಗೊಂದಿಷ್ಟು ಬದ್ಧತೆಯ ಬೆರೆಸಿ ಸಂತಸದಿ ಸಾಗೋಣ ಮುಂದೆ ಮೌನದಲೂ ಮಾತಾಗಿ ಮತ್ತೇರಿ ಬಾ ಮುತ್ತಾಗುವೆ ಮನದೊಳಗೆ “ಸುಜೂ” ಳ ಪರಮ ಸುಖದ ಕನಸ ಪರಿಯ ಬಣ್ಣಿಸಲೆಂತು ಹೇಳು ಪರಿ ಪರಿಯಲಿ ಬಯಸಿ ಒಲಿದೊಲಿದು ಬಾ ಪಲ್ಲವಿಸುವೆ ಬಾಳೊಳಗೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹಮ್ಮು ಬಿ.ಎಸ್.ಶ್ರೀನಿವಾಸ್ ಬಲ್ಲವನೆಂಬ ಭ್ರಾಮಕ ಹಮ್ಮು ತಲೆತಿರುಗಿಸುವ ಅಮಲು ಏನೂ ಅರಿಯದ ಪಾಮರನ ಪ್ರಾಮಾಣಿಕ ಅಳಲು ಅಮಾಯಕತ್ವವೆ ಮೇಲು ಅಗ್ಗದ ಉಪದೇಶಕ್ಕಿಂತ ನಡೆದು ತೋರಿಪುದು ಮೇಲು ನಿಜಸಾಧಕರಿಗೆ ಸವಾಲು ಸಲ್ಲದು, ನಾ ಕಂಡಿದ್ದೇ ಸತ್ಯವೆಂಬುದು ಅಹಮಿಕೆ ಡೌಲು ಬಲ್ಲವರು ಹೇಳುವರು ಸತ್ಯ ಒಂದೇ ಆದರೂ ಧೃಷ್ಟಿಕೋನ ನೂರಾರು ಹಿಮಾಲಯದ ಶಿಖರಕ್ಕೂ ಏರುವ ದಾರಿ ಹಲವಾರು ಮಾತಿನೀಟಿಯಲಿ ಪರರ ಘಾತಿಸುತ ಸಮನಾರಿಲ್ಲ ಎನಗೆಂದು ಬಿಂಕದಿ ಮೆರೆದು ಬೀಗಿದರೆ ಮೆಚ್ಚುವನೆ ಪರಮಾತ್ಮನು ಮೇಲೇರಿದರೆ ಕೆಳಗಿನದು ಕುಬ್ಜವಾಗುವುದು ಸಹಜ ಕೆಳಗಿರುವವರ ಕೈಹಿಡಿದು ಧನ್ಯತೆ ಪಡೆವವ ನಿಜ ಮನುಜ *********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕಾಮೋಲವೆಂಬ ಅಂತರಂಗದ ಶೋಧ. ಸ್ಮಿತಾ ಅಮೃತರಾಜ್ ಕೃತಿ: ಕಾಮೋಲ (ಕಥಾ ಸಂಕಲನ) ಲೇಖಕ: ಅಜಿತ್ ಹರೀಶಿ ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ  ಬರಹಗಾರರಾಗಿರುವ ಡಾ. ಅಜೀತ್ ಹರೀಶಿ ಶಿವಮೊಗ್ಗದ ಸೊರಬದವರು. ಕೃಷಿ, ವೈದ್ಯವೃತ್ತಿಯ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಕತೆ, ಕವಿತೆ ಬರೆಯುತ್ತಾ ತನ್ನ ಸೃಜನಶೀಲತೆಯನ್ನು ಬತ್ತದಂತೆ ಕಾಪಿಟ್ಟುಕೊಂಡಿರುವ  ಅಜೀತ್ ಹೆಗಡೆಯವರು ಈಗಾಗಲೇ ತಮ್ಮ ಬರಹಕ್ಕೆ ಅನೇಕ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡವರು.   ಅವರ  ವೈವಿಧ್ಯಮಯ ಬರಹದ ಓಘದ ಕುರಿತು ನನಗೆ ಯಾವೊತ್ತು ತೀರದ ಅಚ್ಚರಿ. ಈಗಷ್ಟೇ ಓದಿ ಮುಗಿಸಿದ ,ವಿಶಿಷ್ಟ ಕುತೂಹಲ ಶಿರೋನಾಮೆ ಹೊಂದಿದ ಅವರ ಕಥಾಸಂಕಲನ ಕಾಮೋಲ. ಪ್ರೀತಿ,ಪ್ರೇಮ, ಕಾಮ,ಕ್ರೌರ್ಯ, ಹೀಗೆ  ಮನುಷ್ಯನ ಒಳಗೆ ಅಡಗಿರುವ ಅನೇಕ ಸುಪ್ತ ಭಾವಗಳನ್ನೆಲ್ಲಾ ಅನಾವರಣಗೊಳಿಸುತ್ತಾ ಹೋಗುತ್ತದೆ. ನಾವು ಕಂಡ ಕೆಲವೊಂದು ನಮ್ಮ ಸುತ್ತ ಮುತ್ತಲಿನ ಚರ್ಯೆಗಳು ಕೂಡ ಇದೇ ಕತೆಯ ಪಾತ್ರದಂತೆ ಭಾಸವಾಗುತ್ತದೆ. ಇದು ಅಜಿತ್ ರವರ ಕಥನಗಾರಿಕೆಯ ಕುಶಲತೆಗೆ ಸಾಕ್ಷಿ. ಮನುಷ್ಯನ ಪ್ರತಿಯೊಂದು ಕ್ರಿಯೆಯ ಹಿಂದೆ ಅವನಿಗೆ ದಕ್ಕಿದ ,ಬದುಕಿನಲ್ಲಿ ಘಟಿಸಿ ಹೋದ ಕೆಲವೊಂದು ಅಘಾತಕಾರಿ ಸಂಗತಿಗಳು ಆಳವಾಗಿ ಬೇರು ಬಿಟ್ಟು ಅವನಿಗೂ ಗೊತ್ತಿಲ್ಲದೆ  ಹೇಗೆ ಪ್ರಕಟಗೊಳ್ಳುತ್ತವೆ ಅನ್ನುವಂತದ್ದು ನಮಗೆ  ಕತೆಗಳನ್ನು ಓದುತ್ತಾ ಹೋದ ಹಾಗೆ ಮನದಟ್ಟಾಗುತ್ತದೆ. ಬಹುಷ; ತಮ್ಮ ವೃತ್ತಿಯಲ್ಲಿ ಅವರು ಇಂತಹ ವ್ಯಕ್ತಿತ್ವದವರಿಗೆ ಮುಖಾಮುಖಿಯಾಗುವ ಕಾರಣ ಜೊತೆಗೆ ವೈಜ್ಞಾನಿಕ ತಿಳುವಳಿಕೆ ಕೂಡ ಇರುವ ಕಾರಣ ಇಲ್ಲಿಯ ಕತೆಗಳು ಶೋಧನೆಗೆ ತೊಡಗುತ್ತವೆ. ಕಂಡುಂಡ ಘಟನೆಗಳನ್ನು ಕಲಾತ್ಮಕವಾಗಿ ಹೊರ ಹಾಕುವುದರಲ್ಲಿ ಅಜಿತ್ ಹೆಗಡೆಯವರು ಕುಶಲಿಗರು.  ಬದುಕಿನ ಪ್ರತಿಯೊಂದು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ದಿಟ್ಟಿಸುತ್ತಾ ಅದರ ಒಳ ಹೊರಗನ್ನು ಬಗೆಯುವ ಇಲ್ಲಿನ ಕತೆಗಳಲ್ಲಿ ಜೀವಂತಿಕೆ ಇದೆ. ಒಟ್ಟು ೧೪ ಕತಾಗುಚ್ಚವಿರುವ ಈ ಕತಾಸಂಕಲನದಲ್ಲಿ ಮನುಷ್ಯ ಸಂಬಂಧದ ವಿವಿಧ ಮಗ್ಗುಲುಗಳ ಪರಿಚಯವಿದೆ. ಲೌಕಿಕ ಬದುಕಿನಲ್ಲಿ ಪರಿಶುದ್ಧ ಪ್ರೇಮಕ್ಕೆ ಅವಕಾಶವಿಲ್ಲದಾಗ  ಅಕ್ಕನಂತೆ ಅಲೌಕಿಕ ಪೇಮದಲ್ಲೇ ಮನಸನ್ನು ನೆಲೆಗೊಳಿಸಿ ಅದರಲ್ಲಿ ನೆಮ್ಮದಿಯನ್ನು ಹುಡುಕುವ  ಇಲ್ಲಿನ ಕತೆ ಒಂದು ವಿಭಿನ್ನ ಪ್ರಯತ್ನ.  ಮನುಷ್ಯನ ಒಳಗಿನ  ಭಾವದ ಸೆಲೆ ಹೇಗೆ ಬದುಕನ್ನು ಅರಳಿಸಬಲ್ಲದು ಅನುವಂತದ್ದನ್ನು ಹೇಳುತ್ತಾ ಕವಿತೆಯ ಸೆಲೆ ಅನ್ನುವಂತದ್ದು ನೋವು ನಿವಾರಣೆಯಂತೆ ಅನ್ನುವಂತದ್ದನ್ನ ಬರೆಯುತ್ತಾರೆ. ಸ್ವತ; ಕತೆಗಾರರು ಕವಿಯಾದ ಕಾರಣ ಕವಿತೆಯ ಸಾಂಗತ್ಯದಿಂದ ಬದುಕು ಹಸನಾಗುವುದೆಬುದನ್ನು ಕಟ್ಟಿಕೊಡುತ್ತಾರೆ. ಇಲ್ಲಿಯ ಕಾಡುವ  ಆಯಿಯ ಕತೆಯ ತುಂಬಾ ವಿವರಣೆಯಂತೆ ಅನ್ನಿಸಿದರೂ ಓದಿ ಮುಗಿಸಿದಾಗ  ಅಲ್ಲಿರುವ ಅಂತ;ಕರಣ ಕಣ್ಣಂಚನ್ನು ತೇವಗೊಳಿಸಿ ಬಿಡುತ್ತದೆ. ಮನುಷ್ಯನ ವರ್ತನೆಗಳನ್ನು ವಿಭಿನ್ನ ನೆಲೆಯಲ್ಲಿ ಶೋಧಿಸುತ್ತಾ ಅಂತರಂಗದ ತುಮುಲಗಳನ್ನು ಚಿತ್ರಿಸುವ ಕೆಲಸವನ್ನ ಇಲ್ಲಿನ ಕತೆಗಳು ಮಾಡಿವೆ. ಹೊಸ ದೃಷ್ಟಿಕೋನದಿಂದ ಬದುಕನ್ನು ನೋಡಲು ಪ್ರೇರೇಪಿಸುವ ಇಲ್ಲಿನ ಕತೆಗಳು ಸ್ನೇಹಕ್ಕೆ ಯಾವುದೇ ಸಿದ್ಧಾಂತಗಳ ಕಟ್ಟುಪಾಡುಗಳಿರಬಾರದು  ಅನ್ನುವಂತದ್ದನ್ನ ಕಟ್ಟಿಕೊಡುತ್ತಾ ಮಾನವೀಯ ಪ್ರೇಮದ ನೆಲೆಯಲ್ಲಿ ಕತೆಗಳು ಪ್ರಕಟಗೊಳ್ಳುತ್ತವೆ. ಪ್ರಾಧೇಶಿಕ ಭಾಷೆಯನ್ನು ಕತೆಗಳ ಮೂಲಕ ಸಮರ್ಥವಾಗಿ ದುಡಿಸಿಕೊಂಡ  ಅಜಿತ್ ರವರ ಪ್ರತಿಭೆ, ಶ್ರದ್ಧೆ, ಶ್ರಮ ಶ್ಲಾಘನೀಯ. ಕಾಮೋಲ ಓದುತ್ತಾ ಹೋದಂತೆ ಮನುಷ್ಯನ ದು;ಖ, ಸಂಕಟ, ಪ್ರೇಮ,ಕಾಮ, ಎಲ್ಲ ತಳಮಳಗಳಿಗೂ  ಹೊಸ ಅರ್ಥ ಕಂಡುಕೊಳ್ಳುವಲ್ಲಿ ಕತೆ ಯಶಸ್ವಿಯಾಗಿವೆ.ಅಜಿತ್ ಹೆಗಡೆಯವರ ಕಥನ ಕುತೂಹಲ ಮತ್ತಷ್ಟು ಕತೆಗಳಿಗೆ ಸಾಕ್ಷಿಯಾಗಲಿ.     ************

ಪುಸ್ತಕ ವಿಮರ್ಶೆ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸಮಬಾಳು ಸಹಬಾಳ್ವೆ ಸಮತೆಯ ರೀತಿ ಗಣತಂತ್ರ ವೆಂದರೆ ಶಾಂತಿ ಸಹಿಷ್ಣುತೆ ಸಹನೆ ಪ್ರೀತಿ ಗಣತಂತ್ರವೆಂದರೆ ಪಾರತಂತ್ರ್ಯದ ಕತ್ತಲು ಅಳಿದರಷ್ಟೇ ಸಾಕೇ ಸ್ವಯಮಾಡಳಿತ-ಸಂವಿಧಾನದ ಕ್ರಾಂತಿ ಗಣತಂತ್ರವೆಂದರೆ ಎಷ್ಟೊಂದು ವೇಷ ಭಾಷೆ ಸಂಸ್ಕೃತಿ ವೈವಿಧ್ಯಗಳು ಎಲ್ಲರೆದೆ ಹೂಗಳನು ಪೋಣಿಸುವ ನೀತಿ ಗಣತಂತ್ರವೆಂದರೆ ಸಮಾನ ಆಶೋತ್ತರಗಳು ಸುರಾಜ್ಯದ ಕನಸು ಎಲ್ಲರ ಮುಗಿಲುಗಳ ವಿಸ್ತರಿಸುವ ಪ್ರಣತಿ ಗಣತಂತ್ರವೆಂದರೆ ಹೊರಗಿನ ಶತ್ರುಗಳ ಜೊತೆಗೆ ಒಳಗಿನ ವಿಕೃತಿಗಳು ಹುಸಿಗಳ ಮೀರುವ ನಿಜ ಬದುಕಿನ ಕಾಂತಿ ಗಣತಂತ್ರವೆಂದರೆ ನಮ್ಮ ರಾಷ್ಟ್ರ ನಮ್ಮ ಜೀವ ಭಾವ ಸದಾ ಜಾಗೃತ ಎಲ್ಲ ಸ್ವರಗಳನು ಬೆಸೆಯುವ ಸಮಶ್ರುತಿ ಗಣತಂತ್ರವೆಂದರೆ *************** ಡಾ.ಗೋವಿಂದ ಹೆಗಡ ೆ

ಕಾವ್ಯಯಾನ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಅಕ್ಕಯ್ಯನೆಂಬ ಯಶೋಧೆ ನಾನು ಆಗತಾನೇ ಬೈಕಿನಿಂದಿಳಿದು ಹೆಲ್ಮೆಟ್ ತೆಗೆಯುತ್ತಿದ್ದೆ. ಹೊಲದ ಕಡೆ ಹೊರಟಿದ್ದ ರಂಗಪ್ಪಣ್ಣ ನನ್ನನ್ನು ನೋಡಿ ತಕ್ಷಣ ಗುರುತಿಸಲಾಗದೇ, ಹಾಗೆಯೇ ಸ್ವಲ್ಪ ಹೊತ್ತು ನಿಂತರು. “ ಓಹೋಹೋಹೋಹೋ… ಏನ್ ಅಳಿಮಯ್ಯಾ, ಅಪ್ರೂಪದಂಗೆ….. ಎಷ್ಟೊಂದ್ ವರ್ಷ ಆಗಿತ್ತಲ್ಲ ನಿಮ್ಮನ್ನ ನೋಡಿ, ಹಾಂ?” ಅಂತ ತನ್ನದೇ ರಾಗದಲ್ಲಿ ರಂಗಪ್ಪಣ್ಣ ಮಾತಾಡಿಸಿ ಹೆಗಲಮೇಲೆ ಹೊತ್ತಿದ್ದ ನೇಗಿಲನ್ನೂ ಇಳಿಸದಂತೆ ಹಾಗೆಯೇ ನೋಡುತ್ತಾ ನಿಂತರು. “ಏನ್ ಮಾಡೋದು ರಂಗಪ್ಪಣ್ಣ? ಹೊಟ್ಟೆಪಾಡು, ಊರುಬಿಟ್ಟು ಊರಿಗೆ ಹೋದ ಮೇಲೆ ಅಪರೂಪವೇ ಆಗಬೇಕಲ್ಲ” ಎನ್ನುತ್ತಾ, ನಾನು ಅವರಿದ್ದ ಕಡೆ ನಡೆದು, ಊರಲ್ಲಿದ್ದಾಗ ಮಾತನಾಡುವ ಧಾಟಿಯಲ್ಲಿಯೇ ಸ್ವಲ್ಪ ದೈನ್ಯತೆಯಿಂದ ಹೇಳಿದೆ. ಊರಲ್ಲಿರುವಾಗ ನಾನು ಚಡ್ಡಿ ಹಾಕಿ ಗೋಲಿ, ಬುಗುರಿಗಳನ್ನು ಆಡುತ್ತಿದ್ದ ವಯಸ್ಸು. ಆಗೆಲ್ಲ ರಂಗಪ್ಪಣ್ಣನಂತಹವರು ನಮ್ಮನ್ನು ಚಿಕ್ಕವರಾಗಿ ನೋಡಿ ಮಾತನಾಡಿಸಿದ್ದವರು, ಇದ್ದಕ್ಕಿದ್ದ ಹಾಗೆಯೇ ಗೌರವದಿಂದ ನೀವು, ತಾವು, ಹೇಗಿದ್ದೀರಾ ಅಂದರೆ ಅದು ಅಷ್ಟಾಗಿ ಸ್ವಾಭಾವಿಕವೆನಿಸುತ್ತಿರಲಿಲ್ಲ. ಯಾವ ಕಾರಣಕ್ಕಾಗಿ ಗುಣವಿಶೇಷಣವನ್ನು ಸೇರಿಸಿದಂತೆ ಗೌರವಿಸುತ್ತಿದ್ದಾರಿವರು ಅನ್ನಿಸಿ ಇರಿಸುಮುರಿಸೆನಿಸಿತು. “ಏನೋ, ಚೆನ್ನಾಗಿದಿಯೇನಪ್ಪಾ ಒಟ್ನಲ್ಲಿ? ಯಾವ್ದೋ ದೂರುದ್ ದೇಶಕ್ ಹೋದೆ ಅಂತ ಕೇಳಿದ್ದೆ” “ಹುಂ, ನಾನ್ ಚೆನ್ನಾಗಿದ್ದೀನಿ ನೀವೆಲ್ಲ ಚೆನ್ನಾಗಿದ್ದೀರಲ್ಲ? ಬರ್ತಿದ್ದ ಹಾಗೇ ಊರು ಬದಲಾಗಿರುವುದು ಗೊತ್ತಾಗುತ್ತೆ. ಅಲ್ಲಿ ಹಲಸಿನ ಮರ ಇಲ್ಲ, ಇಲ್ಲಿ ಕರಿಬೇವಿನ ಗಿಡ ಇಲ್ಲ, ಇನ್ನು ಆ ಮೂರು ಮನೆಗಳು ಹೊಸದಾಗಿ ಕಟ್ಟಿರೋದು” ಎನ್ನುತ್ತಾ ಸುತ್ತ ಕೈಯಾಡಿಸಿದೆ. ಅಷ್ಟರಲ್ಲಿ ಪಕ್ಕದ ಮನೆಯ ಜಗುಲಿ ಮೇಲೆ ಕುಳಿತು ಮಾತನಾಡುತ್ತಿದ್ದ ಮೂರ್ನಾಲ್ಕು ಜನ, ನಮಗೆ ಮರೆಯಾಗಿದ್ದವರಲ್ಲಿ ಒಬ್ಬರು ನಮ್ಮ ಕಡೆ ಇಣುಕಿ… “ಯಾವಾಗ್ ಬಂದ್ಯಪ್ಪಾ, ಬಾರೋ ಈ ಕಡೀಕೆ” ಅಂದರು. “ಈಗತಾನೇ ಬರ್ತಿದ್ದೀನಿ. ರಂಗಪ್ಪಣ್ಣ ನೋಡಿ ನಿಂತುಕೊಂಡ್ರು. ಮಾತಾಡಿಸ್ತಿದ್ದೆ” ಅಷ್ಟರಲ್ಲಿ ರಂಗಪ್ಪಣ್ಣ, “ಸರಿ, ಇರ್ತಿಯಾ ಒಂದೆರಡು ದಿನಾ ಇಲ್ಲ ಈಗ್ಲೇ ಬಂಡಿ ತೆಗಿತೀಯಾ? ಹೊಲ್ತಾಕ್ ಹೋಗಬೇಕು. ಕೆಲ್ಸ ಮುಗಿಸಿ ಬತ್ತೀನಿ. ಸಿಕ್ತಿಯಲ್ಲಾ? ಬಾ ಮತ್ತೆ ನಮ್ಮನೆ ಕಡೀಕೆ” ಅಂದರು. “ ಇಲ್ಲ, ಹೀಗೇ ಎಲ್ಲರನ್ನೂ ನೋಡಿ ಹೊರಟುಬಿಡ್ತೀನಿ ರಂಗಪ್ಪಣ್ಣ. ಕೆಲಸ ಜಾಸ್ತಿಯಿದೆ ಈ ಸಾರ್ತಿ. ಮತ್ತೆ ಮುಂದಿನ ವರ್ಷ ಬಿಡುವು ಮಾಡ್ಕೊಂಡು ಬಂದಾಗ ಒಂದೆರಡು ದಿನ ಇರೋ ಪ್ಲಾನ್ ಮಾಡ್ತೀನಂತೆ. ನೀವು ಹೊರಡಿ, ನೇಗಿಲು ಹೊತ್ಕೊಂಡು ಎಷ್ಟೊತ್ತು ನಿಂತ್ಕೊಂಡಿರ್ತಿರಾ” ಅಂದೆ. “ ಸರಿ ಬತ್ತಿನಪ್ಪಾ, ಹಿಂಗ್ ಬಂದ್ ಹಂಗ್ ಹೋಯ್ತೀಯಾನ್ನು? ಇನ್ನು ಮಾತೆತ್ತಿದ್ರೆ ಮುಂದಿನವರ್ಷ ಅಂತೀಯ. ಹೆಂಗೋ ಚೆನ್ನಾಗಿರು. ಬರ್ಲಾ?” “ಆಗಲಿ, ಸಿಗ್ತೀನಿ ಮತ್ತೆ” ಅಷ್ಟರಲ್ಲಿ ಜಗುಲಿಯ ಮೇಲಿದ್ದವರೆಲ್ಲಾ ಒಮ್ಮೆ ಇಣುಕಿಯಾಯ್ತು. ಇನ್ನು ನಾನು ಅಲ್ಲಿಗೇ ಹೋಗಿ “ಚೆನ್ನಾಗಿದ್ದೀರಾ ಎಲ್ಲರೂ?” ಅಂದೆ. “ನಾವೆಲ್ಲ ಇದ್ಹಂಗೇ ಇದೀವಿ, ನಮ್ದೇನೂ ಹೊಸಾದಿಲ್ಲ. ಅದೇ ಹಳೇದು ಊರಲ್ಲಿ, ನಿನ್ ಸಮಾಚಾರ ಹೇಳಪ್ಪಾ” ಅಂದವರೇ, ಒಬ್ಬೊಬ್ಬರೂ ನನ್ನನ್ನು ವಿಚಾರಿಸಿಕೊಂಡರು, ಎಲ್ಲಿದ್ದೀನಿ, ಏನು ಕೆಲಸ, ಎಷ್ಟು ಸಂಬಳ, ದೂರದೇಶದ ಸಂಪಾದನೆ ನಮ್ಮ ದೇಶದ ಎಷ್ಟು ರೂಪಾಯಿಗೆ ಸಮ.. ಹೀಗೆ ತಮ್ಮ ಕುತೂಹಲ ಇರುವುದನ್ನೆಲ್ಲಾ ಕೇಳುತ್ತಾ ಮಾತು ಮುಂದುವರಿಸಿದರು. ಅಷ್ಟರಲ್ಲಿ ಫೋನ್ ರಿಂಗಾಯಿತು. ಯಾವುದೋ ಗೊತ್ತಿಲ್ಲದ ನಾಲ್ಕಂಕಿಯ ನಂಬರು. ಫೋನ್ ರಿಸೀವ್ ಮಾಡದೇ ಹಾಗೆಯೇ ಕಟ್ ಮಾಡಿದೆ. “ಅಲ್ಲೆಲ್ಲೇ!… ನೋಡ್ರಲೇ, ರಾಜಣ್ಣನ ಇಟ್ಕಂಡವ್ನೆ ಫೋನಲ್ಲಿ… ಇನ್ನೂ ನೆನಪೈತಾ ಇಲ್ಲಿಂದೆಲ್ಲಾ? ಹಳೇ ಪಿಚ್ಚರೆಲ್ಲ ನೋಡ್ತೀಯಾ ಅನ್ನು” ಅಂದರು. “ನಾನೂ ನಿಮ್ ತರಾನೇ ಕನ್ನಡದವನೇ ಅಲ್ವಾ? ನಿಮ್ಮ ಜೊತೆಯಲ್ಲೇ ಭಾನುವಾರ ನಾಲಕ್ ಗಂಟೆಗೆ ಬರೋ ಬ್ಲಾಕ್ ಅಂಡ್ ವೈಟ್ ಸಿನಿಮಾ, ಮತ್ತೆ ವಿಸಿಪಿ ತಂದು ನೋಡ್ತಿದ್ದ ಸಿನಿಮಾ.. ಇವೆಲ್ಲ ಹೆಂಗ್ ಮರೆಯಕ್ಕಾಗುತ್ತೆ? ಆ ಮಟ್ಟಿಗೆ ಮರೆವು ಬಂದ್ರೆ ನನ್ನನ್ನೇ ನಾನು ಮರೆಯುವಂಥಾ ಯಾವುದೋ ಖಾಯಿಲೆ ಬಂದಿದೆ ಅಂತಲೇ ಅರ್ಥ” ಅಂದೆ. ಮಾತು ಹಾಗೆಯೇ ಇನ್ನೂ ಸುಮಾರು ಹತ್ತು ಹದಿನೈದು ನಿಮಿಷ ಮುಂದುವರಿಯಿತು. ಅಲ್ಲಿಯವರೆಗೂ ಜಗುಲಿಯ ಮೇಲೆ ಕೂತಿದ್ದವರ ಜೊತೆ ಮಾತನಾಡುತ್ತಾ ಒಂದೇ ಕಡೆ ಇದ್ದವನನ್ನು ನಿಂಗಪ್ಪಮಾವನ ಮನೆ ಅತ್ತೆ ನಾನು ಬಂದು ಮಾತನಾಡುತ್ತಿದ್ದು ನೋಡಿದವರೇ ಟೀ ಮಾಡಿ ತಂದು, “ಚೆನ್ನಾಗಿದಿಯೇನಪ್ಪಾ? ನಾವೆಲ್ಲಾ ಜ್ಞಾಪಕದಲ್ಲಿದ್ದೀವಾ” ಅನ್ನುತ್ತಾ ಟೀ ಮುಂದೆ ಹಿಡಿದರು. “ನಾನು ಟೀ ಕುಡಿಯಲ್ಲ… ಇಷ್ಟೊತ್ತಲ್ಲಿ ಯಾಕ್ ಮಾಡಾಕ್ ಹೋದ್ರಿ ಅತ್ತೆ, ಎಲ್ಲಿ ಒಂಚೂರ್ ಕೊಡಿ” ಅಂತ ಒಂದು ಗ್ಲಾಸ್ ನಿಂದ ಇನ್ನೊಂದಕ್ಕೆ ಅರ್ಧದಷ್ಟು ಸುರಿದು ಸ್ವಲ್ಪವೇ ಹಿಡಿದು ನಿಂತೆ. ಹಾಗೆ ತಿರುಗುತ್ತಲೇ ಜಗುಲಿಯ ತುದಿಯಲ್ಲಿ ಒಂದು ಮುಖ ನನ್ನನ್ನೇ ದಿಟ್ಟಿಸುತ್ತಾ ನಿಂತಿದೆ. “ಅಕ್ಕಯ್ಯಾ!!! ನೀನ್ ಯಾವಾಗಿಂದ ನಿಂತಿದ್ದಿಯಾ ಇಲ್ಲಿ “ ಅನ್ನುತ್ತಲೇ, ಸರಸರನೆ ಟೀ ಹೀರಿ ಗ್ಲಾಸ್ ಹಾಗೆಯೇ ಇರಿಸಿ ಬರ್ತೀನಿ ಮತ್ತೆ ಅಂದವನೇ, ಅಕ್ಕಯ್ಯನ ಕಡೆ ದೌಡಾಯಿಸಿದೆ. “ನೋಡ್ತಾನೆ ಇದಿನಿ, ಈಗ ತಿರುಗ್ತಾನಾ, ಈಗ ತಿರುಗ್ತಾನಾ ಅಂತ ಆಗ್ಲಿಂದಾ… ಮರೆತೇ ಹೋದಂಗಾಗಿ ಮನೆ ಕಡೆ ಬರದೇ ಹೋದರೆ ಅಂತ ಕಾಯ್ತಾ ಇದಿನಿ ಕಾಣಪ್ಪಾ… ದೊಡ್ಡೋವರಾಗಿದ್ದೀರಾ ಈಗ, ನಾವೆಲ್ಲಾ ಕಾಣುಸ್ತೀವಾ ನಿಮ್ ಕಣ್ಣಿಗೆ?” ಅನ್ನುವ ತನ್ನದೇ ಸ್ವಂತಿಕೆಯ ಆಕ್ರಮಣಕಾರಿ ಚುಚ್ಚುಮಾತು ಬಿಸಾಕಿದರು ಅಕ್ಕಯ್ಯ. ಅಕ್ಕಯ್ಯನೆಂದರೆ ನನ್ನ ತಾಯಿಗಿಂತಲೂ ಹಿರಿಯ ಆದರೆ ನನ್ನ ಅಜ್ಜಿಗಿಂತ ಕಿರಿಯ ಜೀವ. ಬಂಡೆಕೊಪ್ಪಲು ಅವರ ತವರಾದ್ದರಿಂದ ಕೊಪ್ಪಲು ಅಕ್ಕಯ್ಯ ಅಂತಲೇ ಕರೆಯುತ್ತಿದ್ದೆವು. ಅಕ್ಕಯ್ಯನೆಂದರೆ ನನ್ನ ಓರಗೆಯಿಂದ ಶುರುವಾಗಿ ನನಗಿಂತಲೂ ಹದಿನೈದು ವರ್ಷ ಚಿಕ್ಕ ವಯಸ್ಸಿನ ನನ್ನ ಮಾವನ ಮಕ್ಕಳೆಲ್ಲರಿಗೂ ಅವರು ಅಕ್ಕಯ್ಯನೇ… ನಾನು ಚಿಕ್ಕ ಮಗುವಾಗಿದ್ದಾಗಿನ ನನ್ನ ಜೀವನದ ಚಿತ್ರವನ್ನು ಅಕ್ಕಯ್ಯನಷ್ಟು ಸವಿಸ್ತಾರವಾಗಿ ಕ್ಷಣಕ್ಷಣವನ್ನೂ ಎಳೆಯಾಗಿ ಇನ್ಯಾರೂ ಹೇಳಿಲ್ಲ, ಹೇಳಲಾರರೂ ಕೂಡ. ನಾವು ಬೆಳೆಯುತ್ತಿದ್ದ ವಯಸ್ಸಿನಲ್ಲಿ ಅಮ್ಮ ಅಜ್ಜಿಯರ ಜೊತೆ ಇದ್ದಷ್ಟೇ ಹೊತ್ತು ಅಕ್ಕಯ್ಯನ ಜೊತೆಯೂ ಇರುತ್ತಿದ್ದೆವು. ಅಕ್ಕಯ್ಯನಿಗೆ ಸ್ವಂತ ಮನೆ ಅಂತ ಇದ್ದರೂ, ಹೆಚ್ಚಾಗಿ ನಮ್ಮ ಮನೆಯಲ್ಲಿಯೇ ಇರುತ್ತಿದ್ದರು. ಕೆಲಸಗಳಲ್ಲೂ ನಮ್ಮ ಮನೆಯವರ ಹಾಗೆಯೇ ಎಲ್ಲದಕ್ಕೂ ಜೊತೆಯಾಗಿದ್ದವರು. ಮದುವೆಯಾದ ಒಂದು ವರ್ಷದೊಳಗೇ ಅವರ ಪತಿ ತೀರಿಕೊಂಡರಂತೆ. ಆ ಕೊರಗಿನಲ್ಲೇ ಇದ್ದ ಗರ್ಭಿಣಿ ಅಕ್ಕಯ್ಯನಿಗೆ ಹುಟ್ಟಬೇಕಾದ ಮಗುವೂ ಜೀವವಿಲ್ಲದೇ ಹುಟ್ಟಿತ್ತಂತೆ. ವಿಧಿಯ ಆ ಎರಡು ದೊಡ್ಡ ಪೆಟ್ಟುಗಳು, ಆಕೆಯ ಏಕತಾನತೆಯ ನೋವು ಮರೆಯುವುದಕ್ಕಾಗಿಯೋ ಏನೋ, ನಮ್ಮೆಲ್ಲರನ್ನೂ ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನೋಡುತ್ತಿದ್ದರು ಅಕ್ಕಯ್ಯ. ಹಿರಿಯ ವಯಸ್ಸಿನವರಾದರೂ, ಸೋದರಮಾವಂದಿರು, ಅಮ್ಮ ಅಕ್ಕ ಎಲ್ಲ ಕರೆಯುವ ಹಾಗೆಯೇ ಕೊಪ್ಪಲು “ಅಕ್ಕಯ್ಯ” ಎನ್ನುವ ಹೆಸರು ನಮಗೂ ರೂಢಿಯಾಗಿತ್ತು. ಅಂಥಾ ಅಕ್ಕಯ್ಯ ಇದ್ದಕ್ಕಿದ್ದ ಹಾಗೆಯೇ ನನ್ನನ್ನು ನೋಡಿ “ಎಲಾ ಇವನಾ ನನ್ನನ್ನು ಹುಡುಕಿಕೊಂಡು ಓಡಿ ಬರಬೇಕಾದವನು, ಜಗುಲಿ ಮೇಲೆ ಸಿಕ್ಕವರ ಜೊತೆ ಮಾತಾಡುತ್ತಾ ಕೂತುಕೊಂಡಿದಾನಲ್ಲ” ಅನ್ನುವ ಕೋಪವನ್ನು ಮುಖದಲ್ಲಿ ಆಗಲೇ ಧರಿಸಿಯಾಗಿತ್ತು. “ಅಯ್ಯೋ, ಈಗತಾನೇ ಬಂದಿದಿನಲ್ಲ ಅಕ್ಕಯ್ಯ, ಊರಿಗೆ ಬಂದು ನಿನ್ನನ್ನು ವಿಚಾರಿಸದೇ ಹೋಗೋಕಾಗುತ್ತಾ, ಅದೇನ್ ತಮಾಷೆನಾ?” ಅಂದವನೇ ಅಕ್ಕಯ್ಯನಿಗಿಂತ ಮೊದಲೇ ದಾಪುಗಾಲಿಡುತ್ತಾ ಅಕ್ಕಯ್ಯನ ಮನೆಯ ಕಡೆ ಹೊರಟೆ. ಅಕ್ಕಯ್ಯನ ಮನೆ ಬಾಗಿಲು ಮುಂದೆ ಬಂದು ಹಾಗೆಯೇ ನಿಂತೆ…. ಹಳೆಯ ಚಿತ್ರಗಳೆಲ್ಲ ಒಮ್ಮೆಲೇ ತಲೆಯಲ್ಲಿ ಮಿಂಚಿದಂತಾಗಿ ಮುಗುಳ್ನಗೆಯನ್ನಷ್ಟೇ ಮುಖದ ಮೇಲಿರಿಸಿಕೊಂಡು ಅಕ್ಕಯ್ಯನನ್ನೂ ನೋಡುತ್ತಾ ಹಾಗೆಯೇ ನಿಂತೆ… ನಗುವಾಗಲೀ ಅಳುವಾಗಲೀ ಅಕ್ಕಯ್ಯನ ಬಳಿ ಅದನ್ನು ಬಚ್ಚಿಡುವಷ್ಟು ನಾಟಕವನ್ನು ಅಕ್ಕಯ್ಯನ ಮುಂದೆಯೇ ಎಂದೂ ನಾನು ಮಾಡಲಾಗುವುದಿಲ್ಲ. ಯಾಕೆ ಅಂದರೆ ಅಕ್ಕಯ್ಯನೇ ಹೇಳುವ ಹಾಗೆ ಗೇಣುದ್ದ ಇದ್ದವನಾಗಿನಿಂದ ಹೈಸ್ಕೂಲು ತಲುಪುವ ತನಕ ಅವರ ಕಣ್ಣೆದುರಲ್ಲೇ ಬೆಳೆದಿದ್ದ ನನಗೆ ವಯಸ್ಸು ಎಷ್ಟೇ ಆದರೂ ಅಕ್ಕಯ್ಯನ ಕಣ್ಣುತಪ್ಪಿಸುವಂತಹ ನಟನೆ ನನ್ನ ಅನುಭವಕ್ಕೆ ನಿಲುಕಲಾಗದ್ದು. ನಿಂತಿದ್ದವನನ್ನೇ ಮತ್ತೆ ದಿಟ್ಟಿಸಿ, “ನೋಡು, ನೋಡು, ಊದಪ್ಪಾ… ಇಲ್ಲೇ ಮಂಡಿಹಾಕಿ ತೆವುಳ್ತಾ ಇದ್ದೆ, ಇಲ್ಲೇ ಕೂತ್ಕಂಡು ಚೌಕಾಬಾರಾ ಆಡಿದ್ದೆ, ಬೆಳೆದಿದ್ದಿಯಾ ಅಂತ ಈಗ ನಗಾಡ್ತೀಯೇನಾ ಊದಪ್ಪಾ?” “ಅದಲ್ಲ ಅಕ್ಕಯ್ಯ ಅಂತ ತಾಳಲಾರದೇ ಮುಗುಳ್ನಗೆಯನ್ನು ಜೋರು ನಗೆಯಾಗಿಯೇ ಪರಿವರ್ತಿಸಿ, ನಾನು ಎಷ್ಟು ಬೆಳೆದಿದ್ದೀನಿ ಅಂತ ನನಗೇ ಗೊತ್ತಿರಲಿಲ್ಲವಲ್ಲಾ… ನಿನ್ನ ಮನೆಯ ಬಾಗಿಲು ಮುಂದೆ ನಿಂತಾಗಲೇ ಅದರ ವ್ಯತ್ಯಾಸ ಕಾಣ್ತಾ ಇರೋದು. ಅದಕ್ಕೇ ಹಾಗೆ ನಕ್ಕೆ” ಅಂದೆ. “ಹೂಂ ಕನಪ್ಪಾ, ಗಳಾ ಬೆಳ್ಕಂಡಂಗೆ ಬೆಳ್ಕಂಡಿದಿಯಾ. ನನ್ ಬಾಗ್ಲು ನಿನ್ಹಂಗೇ ಬೆಳೆಯಕ್ಕಿಲ್ಲವಲ್ಲಾ, ಹುಶಾರಾಗಿ ನೋಡ್ಕಂಡ್ ಬಾರೋ ಮಾರಾಯ, ಏಟ್ ಗೀಟ್ ಮಾಡ್ಕಂಡು ಮತ್ತೆ ನನಗೆ ಯೋಚ್ನೆ ಹತ್ತಿಸ್ಬ್ಯಾಡ” ಅಂದರು. ಮನೆ ಮುಂದೆ ನಿಂತವನೇ ಹಾಗೆಯೇ ಒಂದು ನಿಮಿಷ ಸುತ್ತ ಗಮನಿಸುತ್ತಾ ನಿಂತೆ… ಬಾಗದೇ ಇದ್ದರೆ ಮೇಲಿನ ಅರ್ಧ ಬಾಗಿಲು ಕಾಣುತ್ತಿರಲೇ ಇಲ್ಲ. ಮನೆಯ ಮಾಳಿಗೆಯ ತುದಿ ನನಗೆ ಕಣ್ಣಿನ ಎತ್ತರಕ್ಕೆ ಇದೆ. ಮನೆಯಲ್ಲಿ ಏನೂ ಬದಲಾವಣೆಯಾಗಿಲ್ಲ… ಇದ್ದ ಹಾಗೆಯೇ ಇದೆ.. ಅದೇ ಹೆಂಚು. ಅದೇ ಮಾಳಿಗೆ. ನೆಲಕ್ಕೆ ಊತುಹೋಗಿರುವುದೇನೋ ಎಂದು ಅನುಮಾನಿಸುವಷ್ಟು ಚಿಕ್ಕದೆನಿಸುತ್ತಿತ್ತು. “ಎಷ್ಟೊತ್ತ್ ನೋಡಿದ್ರೂ ಅಷ್ಟೇ ಬಾರಪ್ಪಾ… ನೀನ್ ಬಂದಿದಿಯಾ ಅಂತ ಏನ್ ಬೆಳೆಯಾದಿಲ್ಲ ಮನೆ” ಅಂದಿದ್ದೇ ಚಾಪೆಯನ್ನು ಹಾಸಿ ಕೂರುವುದಕ್ಕೆ ರೆಡಿ ಮಾಡಿದರು ಅಕ್ಕಯ್ಯ. ಅರ್ಧಕ್ಕಿಂತಲೂ ಹೆಚ್ಚು ಬಾಗಿ ದೇಗುಲದ ಗರ್ಭಗುಡಿಗೆ ತಲುಪುವ ಪೂಜಾರಿಯ ಭಂಗಿಯಲ್ಲಿ ಒಳಗೆ ಹೊಕ್ಕೆ… ಒಳಗೆ ಹೋಗಿ ನಿಂತರೂ… ಸರಿಯಾಗಿ ತಲೆಯ ಮೇಲೆ ಅರ್ಧ ಇಂಚಿನಷ್ಟೇ ಅಂತರ. ನಡುವೆ ಇರುವ ಅಟ್ಟದ ಗಳುಗಳು ತಲೆಗೆ ಅಡ್ಡಲಾಗುವಂತಿದ್ದವು… “ಅಕ್ಕಯ್ಯ ಇಲ್ನೋಡು… ಈ ಗೋಡೆಯಷ್ಟು ಎತ್ತರ ಇದ್ದೆ ಮೊದಲು… ಆಮೇಲೆ ಈ ಗೋಡೆಯಷ್ಟು ಇದ್ದೆ. ಈಗ ನೋಡಿದರೆ ಅಟ್ಟವನ್ನೇ ಹೊತ್ಕೊಂಡಿದೀನಿ ಅನ್ನುವಷ್ಟು ಬೆಳೆದಿದಿನಿ, ಅಲ್ವಾ?” ಎನ್ನುತ್ತಾ ಮನೆಯೊಳಗೆ ಕಾಲಿಡುತ್ತಲೇ ಎಡಬದಿಗೆ ಸಿಕ್ಕ ಎರಡೂವರೆ ಅಡಿಯ ಅಡ್ಡಗೋಡೆ, ಮೂರೂವರೆ ನಾಲ್ಕಡಿಯಷ್ಟಿದ್ದು ಅಡುಗೆ ಮನೆಯನ್ನು ಬೇರ್ಪಡಿಸಿದ್ದ ಇನ್ನೊಂದು ಗೋಡೆಯನ್ನು ತೋರಿಸಿದೆ. “ಅಲ್ವಾ ನೋಡು ಮತ್ತೆ… ಅನ್ನ ತಟ್ಟೆಗೆ ಹಾಕಿದರೆ, ಇಲ್ಲ್ ಜಾಗ ಐತೆ ಇಲ್ಲಿಗೂ ಹಾಕು… ಅಲ್ಲಿ ಖಾಲಿ ಕಾಣ್ತದೆ ಅಲ್ಲಿಗೂ ಹಾಕು… ತುಪ್ಪ ಎಲ್ಲಿ? ಅಂತಿದ್ದೆ .. ತುಪ್ಪ ಇಲ್ಲದಿದ್ರೆ ಊರೆಲ್ಲ ಒಟ್ಟು ಮಾಡ್ತಿದ್ದೆ… ತಿನ್ತಾ ಇದ್ದ ಮೂರು ತುತ್ತಿಗೆ ಇಡೀ ತಟ್ಟೆ ಅನ್ನವನ್ನೆಲ್ಲ ಕಲಸಿ ಬೇರೆಯವರಿಗೆ ಪ್ರಸಾದ ಕೊಡ್ತಾ ಇದ್ದೆ. ಬೆಳೀದೇ ಇನ್ನೇನಾಗ್ತೀಯಪ್ಪಾ… ಇದ್ಯಾವುದಾದ್ರೂ ಗೊತ್ತಿರ್ತದಾ ನಿಂಗೆ… ಅನ್ನ ಹೋಗ್ಲಿ, ರೊಟ್ಟಿ, ಅದೂ ದೊಡ್ಡದೇ ಆಗಬೇಕು ಒಂಚೂರು ಮುರೀದೇ ಇರೋ ರೌಂಡಾಗಿರೋದು… ಅದರ ಮೇಲೆ ಬೆಣ್ಣೆಯಿಲ್ಲದಿದ್ದರೆ ಮತ್ತೆ ಗೊಳೋ ಅಂತಾ ಇದ್ದೆ! ಹಬ್ಬ ಅಂತ ಕಿವಿಗೆ ಬೀಳದ ಹಾಗೆ ನೋಡ್ಕೋಬೇಕಾಗಿತ್ತು ಕಣಾ ನಿಂಗೆ. ಹಬ್ಬ ಅಂದರೆ ಅದರ ಹಿಂದೆಲೇ ಬರ್ತಾ ಇದ್ದೆ ಪಾಯಸ ಎಲ್ಲಿ ಅಂತ. ಒಂದು ದಿನ ಎರಡು ದಿನಕ್ಕೆ ಮುಗಿತಾ ಇರಲಿಲ್ಲ. ವಾರವೆಲ್ಲಾ ಆಗಬೇಕಾಗಿತ್ತು ಪಾಯಸ. ಕೊನೆಕೊನೆಗೆ ನೀನು ರಚ್ಚೆಹಿಡಿಯೋದು ತಾಳಲಾರದೇ ಅನ್ನ ಬಸಿದ ಗಂಜಿಗೇ ಚೂರು ಬೆಲ್ಲ ಬೆರೆಸಿ ಅದನ್ನೇ ಪಾಯಸ ಅಂತಾ ಸಮಾಧಾನ ಮಾಡ್ತಾ ಇದ್ದೋ. ಇನ್ನ ಗಿಣ್ಣು ಮಾಡಿದರೆ ಒಂದು ಬೇಸಿನ್ನು ನಿನಗೇ ಅಂತಾನೇ ಕಾಯಿಸಬೇಕಾಗಿತ್ತು. ತುಂಡು ಮಾಡಿ ಕೊಟ್ಟರೆ ಅದಕ್ಕೂ ರಂಪ ಮಾಡ್ತಾಯಿದ್ದೆ. ಒಂದ್ ಕೂದಲೆಳೆಯಷ್ಟೂ ಹೆಚ್ಚು ಕಮ್ಮಿ ಆಗಂಗಿರಲಿಲ್ಲ. ನಾವು ಮೂರ್ನಾಲ್ಕು ಜನ ಸುತ್ತ ಇದ್ದರೂ ಅಳದ ಹಾಗೆ ನೋಡ್ಕೋಳೋಕಾಗಲ್ಲ ಅಂತ ನಿಮ್ಮ ಮಾವಂದಿರು ನಮಗೇ ಬೈಯ್ತಾ ಇದ್ದರು. ಒಂದಾ ಎರಡಾ ನಿನ್ನ ಹಟಾ? ಅಯ್ಯಪ್ಪಾ… ನಾವೆಲ್ಲ ಇದ್ದರು ಎಲ್ಲರಿಗೂ ಸುಸ್ತಾಗಿಸಿರುವಿಯಲ್ಲೋ ಮಾರಾಯಾ! ಒಂದೊಂದ್ ಸಲ ನಾನೆಂಗೋ ನಿಭಾಯಿಸಿದಿನಿ.. ನಿಮ್ಮಕ್ಕ, ನಿಮ್ಮಮ್ಮ (ತಾಯಿಯೇ ಅಕ್ಕ, ಅಜ್ಜಿ ಅಮ್ಮ). ನಿಮ್ಮಮ್ಮಂಗೆ ಅವರ ಮಕ್ಕಳೂ

ಹೊತ್ತಾರೆ Read Post »

You cannot copy content of this page

Scroll to Top