ವ್ಯಾಲಂಟೈನ್ ವಿಶೇಷ
ಮೌನದಲ್ಲಿನ ಮಾತು
ಕಾವ್ಯ ಸಂಗಾತಿ ಮೌನದಲ್ಲಿನ ಮಾತು ಶ್ರೀವಲ್ಲಿ ಮಂಜುನಾಥ ಕವಿತೆ ಏನ ಹೇಳಲಿ ಸಖನೆ,ನೀ ನುಡಿಯದಿರಲೇನುನಿನ್ನ ಈ ಮೌನದಲೇನನ್ನ ಹಿಡಿದಿಟ್ಟಿರುವೆ ! ನಿಶೆಯಳಿದು,ಉಷೆಯುದಿಸೆಹೊನ್ನಯೆಳೆಯಂದದಿನಿನ್ನ ದನಿಯದು ತಾಆಗಸದಿ ಮೂಡುವುದು! ಹಕ್ಕಿಯೆದೆಗೂಡಿಂದಹೊರಟ ದನಿಯಲಿನಿನ್ನ ಇನಿದನಿಯುಕಲರವವಗೈದಿಹುದು ! ಆ ಇನಿದನಿಯನ್ನುಆಲಿಸಿದ ಈ ಬುವಿಯಮರಗಳು, ಮೌನದಲೆಹೂವುಗಳ ಅರಳಿಸುತ್ತಿಹುದು! ಮೌನದಾ ಸೆರಗಲ್ಲೆಮಾತುಗಳಡಗಿದೆಯಲ್ಲಮನದ ಮಾತುಗಳನೆಲ್ಲಕಂಗಳರುಹಿದೆಯಲ್ಲ! ಮೌನದರಮನೆಯರಸ,ಮಾತನಾಡದೆಯೆನಗೆಗಿಳಿಮಾತ ಕಲಿಸಿದಾನಿನಗೆ ನಾ ಶರಣು !! ಶ್ರೀವಲ್ಲಿ ಮಂಜುನಾಥ
ಸಂಕ್ರಾಂತಿ ಬಂತೋ ರತ್ತೋ ರತ್ತೋ ವಿಶಾಲಾ ಆರಾಧ್ಯ ಭಾರತವು ಅನೇಕ ಧರ್ಮಗಳನ್ನೊಳಗೊಂಡ ದೇಶ. ಹಬ್ಬಗಳು ಎಲ್ಲಾ ಧರ್ಮಗಳಲ್ಲಿ ಹಾಸು ಹೊಕ್ಕಾಗಿವೆ. ಈ ಹಬ್ಬಗಳಿಗೆ ತನ್ನದೇ ಆದ ವಿಶೇಷ ಹಿನ್ನೆಲೆ ಮತ್ತು ಪ್ರತೀಕಗಳು ಇವೆ. ಭಾರತೀಯರೆಲ್ಲಾ ಕೂಡಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ. ಆಯಾ ಧರ್ಮದವರು ಆಚರಿಸುವ ಹಬ್ಬಗಳು ಮತ್ತೊಂದು. ಉತ್ತರಭಾರತದಲ್ಲಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ.. ಅದೇ ಹಬ್ಬಗಳನ್ನು ಬೇರೆ ಹೆಸರಿನಿಂದ ದಕ್ಷಿಣ ಭಾರತೀಯರು ಆಚರಿಸುತ್ತಾರೆ. ಇಂತಹ ಹಬ್ಬಗಳಲ್ಲಿ ಸಂಕ್ರಾಂತಿಯು ನಮ್ಮ ದಕ್ಷಿಣ ಭಾರತೀಯರಿಗೆ ಅದರಲ್ಲೂ ಹಿಂದೂಗಳಿಗೆ ಇದು ಮಹತ್ವದ ಹಬ್ಬವಾಗಿದೆ. ಇದು ರೈತಾಪಿ ಹಬ್ಬವಾಗಿದೆ. ಇದನ್ನು ಹೊಲಗದ್ದೆಗಳಲ್ಲಿ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವು ನಾಡಿನ ರೈತಾಪಿ ಜನಗಳ ಸಮೃದ್ಧಿಯ ಸಂಕೇತವಾಗಿದೆ. ಈ ಸಂಕ್ರಾಂತಿಯು ಧಾರ್ಮಿಕ ತತ್ವಗಳಿಂದ ಬೇರ್ಪಟ್ಟು ಆಚರಿಸಿದರೂ ಸಹ ಇದಕ್ಕೆ ಜ್ಯೋತಿಷ್ಯ ಶಾಸ್ತ್ರದ ಅಡಿಪಾಯವೂ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂಗಳು ಆಚರಿಸುವುದು ವಾಡಿಕೆ. ಈ ಸಂಕ್ರಾಂತಿಯನ್ನು ಮಕರ ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಇದನ್ನು ಪ್ರತಿವರ್ಷ ಜನವರಿ ೧೪ ರಂದು ಆಚರಿಸಲಾಗುತ್ತದೆ. ಇದಕ್ಕೆ ಉತ್ತರಾಯಣ ಎಂದೂ ಕರೆಯಲಾಗುತ್ತದೆ. ಈ ದಿನ ಸೂರ್ಯ ತನ್ನ ಪಥವನ್ನು ಬದಲಿಸಿ ಮಕರ ರಾಶಿಗೆ ಪ್ರವೇಶಿವನು. ಅದಕ್ಕಾಗಿ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಹಬ್ಬದಲ್ಲಿ ವಿಶೇಷವಾಗಿ ಗಂಗಾ, ಯಮುನ ಮತ್ತು ಪ್ರಯಾಗ ಸೇರಿದಂತೆ ಯಾವುದೇ ನದಿಯಲ್ಲಿ ಸ್ನಾನಮಾಡಿದರೆ ಮೋಕ್ಷವೆಂದು ಪರಿಗಣಿಸಲಾಗಿದೆ. ಈ ಹಬ್ಬದಲ್ಲಿ ಸೂರ್ಯನ ಪೂಜೆ ವಿಶೇಷವಾಗಿರುತ್ತದೆ. ಹಳ್ಳಿಯ ಮೂಲದ ಈ ಹಬ್ಬದಲ್ಲಿ ಮುಂಜಾನೆಯೇ ಹೆಂಗೆಳೆಯರು ಮನೆಮುಂದೆ ಸಗಣಿಯಿಂದ ಸಾರಿಸಿ ರಂಗೋಲಿಯಿಂದ ಸಿಂಗರಿಸುತ್ತಾರೆ. ಮನೆಯಲ್ಲಿ ಮತ್ತು ಹಳ್ಳಿಯಲ್ಲಿ ಅಂದು ವಿಶೇಷ ಕಳೆತುಂಬಿರುತ್ತದೆ. ಸಂಕ್ರಾಂತಿಗೆ ರೈತರು ತಮ್ಮ ವ್ಯವಸಾಯಕ್ಕೆ ನೆರವಾದ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣಹಚ್ಚಿ, ವಿವಿಧ ಬಣ್ಣದ ರಿಬ್ಬನ್ ಗಳಿಂದ ಸಿಂಗರಿಸಿ ಗೋಮಾತೆಯೊಂದಿಗೆ ಪೂಜಿಸುವರು. ಬೆಳೆದ ಧಾನ್ಯಗಳಾದ ಕಡಲೆಪಪ್ಪು, ಬೆಲ್ಲ, ಎಳ್ಳು, ಕಡಲೆಬೀಜಗಳನ್ನು ಹುರಿದು ಅದರೊಂದಿಗೆ ಸಕ್ಕರೆ ಅಚ್ಚು ಮುಂತಾದವನ್ನು ಬೆರೆಸಿ ಕಬ್ಬಿನ ಜಲ್ಲೆಯೊಂದಿಗೆ ಅಕ್ಕ ಪಕ್ಕದ ಸ್ನೇಹಿತರಿಗೆ ಹಂಚಿ “ಎಳ್ಳು ಬೆಲ್ಲ ತಿನ್ನೋಣ, ಒಳ್ಳೆ ಮಾತನಾಡೋಣ” ಎಂದು ಪರಸ್ಪರ ಹೇಳುತ್ತಾ……. ಹಿಂದಿನ ದ್ವೇಷ, ಕೋಪ, ಮನಸ್ತಾಪಗಳನ್ನು ಮರೆತು ಸಂತೋಷದಿಂದ ಮುಂದಿನ ದಿನಗಳನ್ನು ಕಳೆಯಲು ಸ್ನೇಹದ ಹಸ್ತ ಚಾಚುವ ಹಬ್ಬವಾಗಿದೆ. ಕೆಲವರು ಈ ಹಬ್ಬದಲ್ಲಿ ಹೆಸರುಬೇಳೆ ಮತ್ತು ತರಕಾರಿಗಳನ್ನು ಸೇರಿಸಿ ಮಾಡಿದ ಕಿಚಡಿ ಅನ್ನವನ್ನು ರುಚಿಯಾಗಿ ತಯಾರಿಸಿ ಸವಿಯುವರು. ಇದನ್ನೇ ಅನೇಕರು ಪೊಂಗಲ್ ಎಂದೂ ಕರೆಯುವರು. ಈ ವರ್ಷದ ಸಂಕ್ರಾಂತಿ ಎಲ್ಲರಿಗೂ ಸಂತಸ ತರಲಿ, ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೋನ ಬೇಗ ನಾಶಹೊಂದಿ ಜನರು ನಿರ್ಭಯವಾಗಿ ಸರಳ ಜೀವನ ನಡೆಸುವಂತಾಗಲಿ ಎಂದು ತಿಳಿಸುತ್ತಾ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ತಮಗೆಲ್ಲಾ.
ಕಾವ್ಯ ಸಂಗಾತಿ ನನಗೂ ನಿನ್ನಂತಾಗಬೇಕಿತ್ತು ಅದೆಷ್ಟೋ ಸಲ ನಾನೂ ನಿನ್ನಂತಾಗಲು…ಎದೆಯಾಳದ ಕನಸಿನ ಕಣ್ಣಿಗೆ ಕಪ್ಪು ಪಟ್ಟಿ ಬಿಗಿಯುತಿದ್ದೆತೀವ್ರವಾದ ಭಾವಗಳು ಎಲ್ಲೆ ಮೀರದಂತೆಇತಿಮಿತಿಯ ರೇಖೆಯನೆಳೆಯುತಿದ್ದೆ ಕೆಲವೊಮ್ಮೆ ಮಾತುಗಳು ಹಳಿ ತಪ್ಪಿದಾಗಕರಾಳ ಮೌನ ಎದೆಯನ್ನು ಸುಡುತಿತ್ತುಅಭದ್ರತೆಯ ನೆಲೆಯೊಳಗೆ ಓಲಾಡಿಸುತಿತ್ತು ಅಂದುಕೊಂಡಂತೆ ಇರಲಾಗದೆಸಣ್ಣ ತಪ್ಪುಗಳೂ ವಿರಾಟ ರೂಪ ತಳೆದುಮೂರ್ತರೂಪಕ್ಕಿಳಿಸುವ ಛಲದಿನಕಳೆದಂತೆ ಇಳಿಯುತ್ತಲೇ ಇತ್ತು ನಿನ್ನ ಸಖ್ಯವಾದ ಮೇಲೆನಾನೆನುವ ಅಹಂಭಾವ ಬಿಗುಮಾನಎಲ್ಲವೂ ದೂರ ಸರಿದುನಿನ್ನ ಅನುನಯದೊಳು ಹೂವಾಗಿದ್ದು ಸುಳ್ಳಲ್ಲ ಬೇಕು ಬೇಡಗಳ ನಡುವಿನ ಒಳಪಂಥದಲಿಅದೆಷ್ಟೋ ಬಾರಿ ನಾನೂ ನೀನೂಸೋತು ಗೆಲ್ಲುತಿದ್ದೆವು ಕೆಲವೊಮ್ಮೆ ಮಾತು ಮೌನಗಳ ಮಥನದಲಿ ವಿರಹದ ಅಲೆಗಳೆದ್ದು ನಲುಗಿ ಸುಸ್ತಾದಾಗನನಗೂ ನಿನ್ನಂತಾಗುವ ಹಂಬಲ ದಿನ ಕಳೆದಂತೆ ನೋಯಿಸುವ ಭಾವಗಳನ್ನೆಲ್ಲನಿರಾಕಾರಕ್ಕಿಳಿಸಿದೆನನಗೂ ನಿನ್ನಂತಾಗಬೇಕಿತ್ತುನನ್ನತನವನ್ನಾದರೂ ಉಳಿಸಿಕೊಳ್ಳುವಷ್ಟು ಈಗ ಕಳವಳವಿಲ್ಲ ಕಳುವಾಗುವ ಭಯವೂ ಇಲ್ಲಬಂದಂತೆ ಬದುಕನೊಪ್ಪಿಕೊಳ್ಳುವದಿಟ್ಟನಡೆ ನಿನ್ನಂತೆ… ನಾನಂದುಕೊಂಡಂತೆ ಅನಿತಾ ಪಿ. ತಾಕೊಡೆ
ಪ್ರೀತಿಯ ಸಂಗಾತಿ ಬಳಗವೇ ….
ಈ ಸಂದರ್ಭದಲ್ಲಿ ಸಂಗಾತಿ ಬಳಗ, ನಮ್ಮ ಲೇಖಕರಿಗೆ, ಓದುಗರಿಗೆ ಪುಟ್ಟದಾಗಿ ನಮ್ಮ ಸೌಹಾರ್ದ ಪರಂಪರೆಯನ್ನು ನೆನಪಿಸಿದೆ. ನಮ್ಮ ಎಲ್ಲಾ ಬಳಗಕ್ಕೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು..
ಪ್ರೀತಿಯ ಸಂಗಾತಿ ಬಳಗವೇ …. Read Post »
ರೇಣುಕಾ ರಮಾನಂದ ಗೆ ವಿಭಾ ಸಾಹಿತ್ಯ ಪ್ರಶಸ್ತಿ
ರೇಣುಕಾ ರಮಾನಂದ ಗೆ ವಿಭಾ ಸಾಹಿತ್ಯ ಪ್ರಶಸ್ತಿ ೨೦೨೧ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ರೇಣುಕಾ ರಮಾನಂದ ಅವರ ‘ಸಾಂಬಾರ ಬಟ್ಟಲ ಕೊಡಿಸು’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಬಾನು ಮುಷ್ತಾಕ್ ಮತ್ತು ಕೆ. ಫಣಿರಾಜ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ‘ಬದುಕಿನ ಅಸ್ತತ್ವದ ಸ್ಥಿತಿ, ಅದರಿಂದ ಉಂಟಾಗುವ ಆತಂಕಗಳು ಹಾಗೂ ಅವುಗಳನ್ನು ಎದುರಿಸುವ ಭಂಡ ಸಂಕಲ್ಪ ಭಾವವನ್ನು ಭಾಷೆಯನ್ನು ಮಾತ್ರವೇ ಪ್ರಮಾಣವಾಗಿಟ್ಟುಕೊಂಡು ಚಿತ್ರವತ್ತಾಗಿ ಕಟ್ಟುವ ಬಗೆಗಾಗಿ “ಸಾಂಬಾರ ಬಟ್ಟಲ ಕೊಡಿಸು” ನಮ್ಮ ಆಯ್ಕೆ’ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ. ಕವಿ ಪರಿಚಯ: ರೇಣುಕಾ ರಮಾನಂದ ಅವರು ಉತ್ತರಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರು. ವೃತ್ತಿಯಲ್ಲಿ ಶಿಕ್ಷಕಿ. ೨೦೧೭ ರಲ್ಲಿ ಪ್ರಕಟವಾದ ಇವರ ಮೊದಲ ಕವಿತಾ ಸಂಕಲನ ‘ಮೀನು ಪೇಟೆಯ ತಿರುವು’ ಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಮುಂಬೈ ಸುಶೀಲಾ ಶೆಟ್ಟಿ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಕಾವ್ಯ ಮಾಣಿಕ್ಯ ಪುರಸ್ಕಾರ, ಹರಿಹರಶ್ರೀ ಪ್ರಶಸ್ತಿ, ಕೆ.ವಿ ರತ್ನಮ್ಮ ದತ್ತಿ ಇನ್ನಿತರ ಪ್ರಶಸ್ತಿಗಳು ದೊರೆತಿವೆ. ಇವರ ಬಿಡಿ ಕಥೆ, ಕವಿತೆಗಳಿಗೆ ಮುಂಬೈ ನೇಸರು ಜಾಗತಿಕ ಬಹುಮಾನ, ಜೀವನ ಪ್ರಕಾಶನ ಯುಗಾದಿ ಕಾವ್ಯ ಬಹುಮಾನ, ತುಷಾರದ ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾ ಬಹುಮಾನ, ಮುಂಬೈ ಗೋಕುಲವಾಣಿ ಕಥಾ ಬಹುಮಾನ, ಗುಲ್ಬರ್ಗಾ ವಿ.ವಿ ಜಯತೀರ್ಥ ರಾಜಪುರೋಹಿತ ಕಥಾ ಬಹುಮಾನಗಳು ದೊರಕಿವೆ. ಇಟಲಿಯ ಪಿಯಾಸೆಂಜಾ ಮ್ಯೂಸಿಯಂ ನಲ್ಲಿ ಇವರ ಕವಿತೆ ದಾಖಲಾಗಿದೆ. ಕಥೆ, ಕವಿತೆ, ಅಂಕಣಗಳಲ್ಲಿ ಉತ್ತರಕನ್ನಡದ ದಟ್ಟ ಪ್ರಾದೇಶಿಕತೆಯ ಸೊಗಡಿದೆ.
ರೇಣುಕಾ ರಮಾನಂದ ಗೆ ವಿಭಾ ಸಾಹಿತ್ಯ ಪ್ರಶಸ್ತಿ Read Post »
ಪ್ರೀತಿಯ ಸಂಗಾತಿ ಬಳಗವೇ
ಸಂಗಾತಿ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಸಂಗಾತಿ ಎಂಬ ಪುಟ್ಟ ಗಿಡ ಬೆಳೆಯುತ್ತಾ , ಬೆಳೆಯುತ್ತಾ ನೆರಳು ನೀಡುವ ಮರವಾಗುತ್ತಿದೆ..
ಪ್ರೀತಿಯ ಸಂಗಾತಿ ಬಳಗವೇ Read Post »








