ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜ಼ಲ್

ಗಜ಼ಲ್ ಎ . ಹೇಮಗಂಗಾ ಗುರಿಯತ್ತ ದಿಟ್ಟಿ ನೆಟ್ಟ ಕಂಗಳನು ಇಷ್ಟು ಬೇಗ ಮುಚ್ಚುವುದು ಬೇಕಿರಲಿಲ್ಲ‘ ಸರಿ ‘ ಎಂದು ಗಟ್ಟಿ ಮನದಲಿ ಇಷ್ಟು ಬೇಗ ಮರೆಯಾಗುವುದು ಬೇಕಿರಲಿಲ್ಲ ನೆತ್ತರೊಸರಿದ ಹಾದಿಯಲಿ ಸಾಗಬೇಕಿತ್ತು ಚುಚ್ಚಿದ ಮುಳ್ಳ ಕಿತ್ತೊಗೆಯುತಾಸಮಸ್ಯೆಗಳ ಬಲೆ ತುಂಡರಿಸದೇ ಇಷ್ಟು ಬೇಗ ಹೊರಡುವುದು ಬೇಕಿರಲಿಲ್ಲ ನಿನಗಿಂತ ಅದೃಷ್ಟಹೀನರ ದುಸ್ಥಿತಿ ಕೊಂಚವೂ ಕಾಣದಾಗಿ ಹೋಯಿತೇಕೆಸಾವೇ ಎಲ್ಲಕೂ ಪರಿಹಾರವೆಂದು ಇಷ್ಟು ಬೇಗ ದೂರಾಗುವುದು ಬೇಕಿರಲಿಲ್ಲ ಬಾಳ ನಾಟಕ ನಿಲ್ಲದೇ ನಡೆವುದು ವಿಧಿಯೆಂಬ ಸೂತ್ರಧಾರಿ ಆಡಿಸಿದಂತೆನ್ಯಾಯ ಸಲ್ಲಿಸದೇ ಪಾತ್ರಕೆ ಇಷ್ಟು ಬೇಗ ನಿರ್ಗಮಿಸುವುದು ಬೇಕಿರಲಿಲ್ಲ ಎದುರಾಗುವ ಪ್ರತೀ ಕಷ್ಟ ,ಸುಖವನು ಅನುಭವಿಸಲೇಬೇಕು ಹೇಮಮಸಣದ ಮನೆ ನೀನೇ ಬಯಸಿ ಇಷ್ಟು ಬೇಗ ಸೇರುವುದು ಬೇಕಿರಲಿಲ್ಲ ************************* ಮೊನ್ನೆ ಯುವ ಬರಹಗಾರ್ತಿಯೊಬ್ಬರ ಆತ್ಮಹತ್ಯೆ ನನ್ನ ಮನಸ್ಸಿಗೆ ಅಪಾರ ಆಘಾತವನ್ನು ನೀಡಿತು ಮಧುಸೂದನ್ ಅವರೇ……ಆ ನೋವಿನಲ್ಲಿ ಬರೆದ ಗಜಲ್ ಇದು

ಗಜ಼ಲ್ Read Post »

ಕಾವ್ಯಯಾನ, ಗಝಲ್

ಗಜಲ್..

ಬೆಳಕಿನ ದೀಪ ಹಚ್ಚುವ ಅವಳ ಕಣ್ಣುಗಳ ಸಿದಿಗೆಯ ಮೇಲೆ ನೋಡಲಾಗದೆ ಸೋಲುತ್ತಿದ್ದೇನೆ…
ಅವಳಿಲ್ಲದ ನನ್ನ ಮನದ ಕೀಲುಗಳಿಗೆ ಹಚ್ಚುವ ದವಾ ಯಾಕಾಗಿಬೇಕು ನನಗೂ ಕಫನ್ ತೊಡಿಸಿಬಿಡು ಸಾಕಿ…

ಗಜಲ್.. Read Post »

You cannot copy content of this page

Scroll to Top