ಗೋವು ಮತ್ತು ರೈತ
ಕವಿತೆ ಗೋವು ಮತ್ತು ರೈತ ಡಾ.ಶಿವಕುಮಾರ್ ಮಾಲಿಪಾಟೀಲ ಗೋವು ಪುಣ್ಯಕೋಟಿರೈತ ಪುಣ್ಯಾತ್ಮಗೋವು ತ್ಯಾಗಿರೈತ ಯೋಗಿ ಗೋವು ಬೀದಿಪಾಲಾಗಿದೆರೈತ ಗುಳೆ ಹೊರಟಿದ್ದಾನೆ ಇಬ್ಬರೂ ಮೂಖರೆಇಬ್ಬರೂ ಅಮಾಯಕರೆ ರೈತ ಕಷ್ಟ ಪಡುತ್ತಾನೆಹಗಲು ರಾತ್ರಿ ಎನ್ನದೆಜಗಕೆ ಅನ್ನ ಕೊಡಲುಜಾತಿ ಧರ್ಮ ನೋಡದೆ ಎತ್ತು ಕಷ್ಟ ಪಡುತ್ತದೆರೈತ ಮಿತ್ರನಾಗಿ ಉಳಿಮೆಮಾಡುತ ಮಳೆ ಬಿಸಿಲು ಲೆಕ್ಕಿಸದೆ, ಬಾರಕೊಲು ಏಟುತಿಂದರೂ ಒಮ್ಮೆಯೂ ಎದುರಾಡದೆ ಗೋವಿನ ಹಾಲು ಮೊಸರುತುಪ್ಪ ನೀಡುತ್ತದೆ ಮಕ್ಕಳಿಂದಮುದುಕರವರೆಗೆಜಾತಿ ಧರ್ಮ ಕೇಳದೆ ಹೌದುಗೋವಿನ ಹೊಟ್ಟೆಯಲ್ಲಿ ಬಂಗಾರವಿದೆರೈತನ ಬೆನ್ನಿನ ಮೇಲೆದೇಶ ನಿಂತಿದೆ ಗೋವಿನ ಹೊಟ್ಟೆ ಕೊಯ್ಯತ್ತಿದ್ದಾರೆ ಬಂಗಾರ ಹುಡುಕಲು ರೈತನ ಬೆನ್ನು ಮುರಿಯುತ್ತಿದ್ದಾರೆ ಅಧಿಕಾರ ಪಡೆಯಲು ಯಾರು ರಾಜನಾದರೂಬಡವನಿಗೆ ಹೊಡೆಯುವುದೆ ಕಾಯಕಇದು ಶತ ಶತಮಾನದ ಬಳುವಳಿ ಪ್ರತಿ ಚುನಾವಣೆಯಲ್ಲಷ್ಟೆರೈತನ ಮೂಳೆಗಳುಗೋವಿನ ಮಾಂಸಕಾಣುತ್ತದೆನಂತರ ಮತ್ತೆರೈತಮಾರಾಟವಾಗುತ್ತಾನೆಗೋವು ರಪ್ತಾಗುತ್ತದೆ ಜನರಿಗೂ ಗೋವು ಬೇಕುಗೃಹ ಪ್ರವೇಶಕ್ಕೆ ಹೋಮ ಹವನಕ್ಕೆ ನಂತರ ಬೀದಿಪಾಲು ರೈತನೂ ಬೇಕು ಸಭೆ ಸಮಾರಂಭಗಳಿಗೆ ,ನಾಯಕರಭಾಷಣಕ್ಕೆ ನಂತರ ಸಾಲದ ಪಾಲು ಪ್ರಕೃತಿ ,ಸಮಾಜದ ಜೊತೆಗೆಹೋರಾಡಿ ಸೋತು ಗೋವಿನಹಗ್ಗ ರೈತನ ಕೊರಳಲಿ ಅಂತ್ಯ ಆಗುತ್ತಿದೆ ಹೌದು ,ಈಗೀಗ ಹಳ್ಳಿಗಳಲ್ಲಿಗೋವು ಅಂಬಾ ಅನ್ನುತ್ತಿಲ್ಲರೈತ ಉಳಿಮೆ ಮಾಡುತ್ತಿಲ್ಲ ರೈತ ,ಗೋವಿನ ಬೆಲೆ ಬಾರಿ ಕುಸಿದಿದೆಆದರೆ ಮಣ್ಣಿಗೆ ,ಮರಳಿಗೆಭೂಮಿಯ ಬೆಲೆ ಏರುತ್ತಿದೆ ಗೋವಿನ ಹಾಲು ಕುಡಿದವರುವಿಷ ಕಕ್ಕುತ್ತಿದ್ದಾರೆರೈತನ ಅನ್ನ ತಿಂದವರುರೈತನಿಗೆ ,ರೈತನ ಬೆಳೆದ ಬೆಳೆಗೆಬೆಲೆ ನಿಗದಿ ಪಡಿಸುತ್ತಿದ್ದಾರೆ ಹಾಲಿನ ಡೈರಿಯ ಹಾಲುಕುಡಿಯುವವರಿಗೆಪುಡ್ ಬಜಾರ್ ನಲ್ಲಿ ಪುಡ್ತಿನ್ನುವವರಿಗೆ ರೈತ ,ಗೋವು ಯಾಕೆ ಬೇಕು??? **********************************************









