ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಂತರಂಗದ ಪ್ರೀತಿಯ ದೀಪ ಬೆಳಗಬೇಕಿದೆ ತೂಗುದೀಪವೇವಿರಹವು ಮಂಜಿನ ಹೂವಾಗಿ ಕರಗಬೇಕಿದೆ ತೂಗುದೀಪವೇ ಒಲುಮೆಯ ಮಧುರ ನಕ್ಷತ್ರಗಳ ಎಣಿಕೆಯ ಎಷ್ಟೋ ರಾತ್ರಿಗಳು ಕಳೆದಿವೆಹೃದಯಗಳ ಬಡಿತ ಕೇಳುತ ಕರಗಳಲ್ಲಿ ಬೆರೆಯಬೇಕಿದೆ ತೂಗುದೀಪವೇ ಬೇವಫಾ ನಾವಿಬ್ಬರೂ ಅಲ್ಲ ಜನುಮಾಂತರ ಬಂಧನ ಬದಲಾಗುವುದೆಸ್ಪಂದಿಸಿದ ಭಾವ ರಾಗ ರಾಗಿಣಿಯರು ಬಾಳಬೇಕಿದೆ ತೂಗುದೀಪವೇ ಚಾತಕ ಪಕ್ಷಿಯಂತೆ ಕಾಯುತಿರುವೆ ನಿನ್ನೊಲುಮೆಯ ಗುಟುಕಿಗಾಗಿಹೃದಯಗಳಲ್ಲಿ ಮೂಡಿದ ಪ್ರೀತಿಯು ನೀಗಬೇಕಾಗಿದೆ ತೂಗುದೀಪವೇ ಆಮಂತ್ರಣ ನೀಡದೆ ಬರುವ ಸಾವು ಬರುವ ಮುನ್ನವೇ ಮಾಜಾದುಃಖ ದುಮ್ಮಾನ ಬಿಟ್ಟು ಒಂದಾಗಬೇಕಿದೆ ತೂಗುದೀಪವೇ ಮಾಜಾನ್ ಮಸ್ಕಿ

ಗಜಲ್ Read Post »

ಕಾವ್ಯಯಾನ

ಕಾವ್ಯ ಸಂಗಾತಿ ನೀನಿರಲು ಅನಿತಾ ನಸುಕಿನಲಿ ಹಸಿರೆಲೆಯ ಮೇಲೆಬಿದ್ದ ಇಬ್ಬನಿ ಬೇಡಿದೆ ಭಗವಂತನಜಗವ ಬೆಳಗುವ ದಿನಕರನ ಕಿರಣಸ್ಪರ್ಶಿಸಲು ಮೊಗ್ಗಾಗಿ ಅರಳಿದ ಸುಂದರ ಸುಮಹಾತೊರೆಯುತಿದೆ, ಏಳು ಬೆಟ್ಟಗಳಮೇಲೇರಿ ನಿಂತ ಆ ದೇವರಕಾಲ ಬಳಿ ಸೇರಲು! ಗುಡಿಯ ಘಂಟೆ ಧ್ಯಾನಿಸುತಿದೆಸುಶ್ರಾವ್ಯವಾಗಿ ತನ್ನ ಸದ್ದುಜಗನ್ನಿಯಮಕನ ತಲುಪಲು! ಗರ್ಭಗುಡಿಯ ಪ್ರಣತಿಕಾಯುತಿದೆ ಕರುಣಮಯ ಪರಮಾತ್ಮನಮುಖಾರವಿಂದವ ಉಜ್ವಲಿಸಲು! ಜಗದ ಪ್ರತಿ ಚಲನೆಯೂ ನೀನಾಗಿರಲುಧ್ಯಾನಿಸದೆ ಇರಲಾರದುಈ ಮನವು, ಅನುಕ್ಷಣವೂನನ್ನೊಳಗೆ ನೀನಿರಲು!

Read Post »

You cannot copy content of this page

Scroll to Top