ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಬಸವಣ್ಣ ಮತ್ತು ಚಲನಶೀಲತೆ

ಲೇಖನ ಬಸವಣ್ಣ ಮತ್ತು ಚಲನಶೀಲತೆ ವಚನ ಕಾಲದ ಜೊತೆ ಪಿಸುಮಾತು ನಾಗರಾಜ್ ಹರಪನಹಳ್ಳಿ ಕರ್ನಾಟಕ, ಕನ್ನಡಿಗರ ಮಟ್ಟಿಗೆ ೧೨ನೇ ಶತಮಾನ ಮಹತ್ವದ ಕಾಲಘಟ್ಟ. ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ ಕಂಡ ಕಾಲವದು. ಬಸವಣ್ಣ ಮತ್ತು ಆತನ ಸಮಕಾಲೀನ ವಚನಕಾರರು ಅನುಭವ ಮಂಟಪದ ಮೂಲಕ ಸಮಾಜದಲ್ಲಿ, ಜನರ ಬದುಕಲ್ಲಿ, ಅಧಿಕಾರ ಕೇಂದ್ರದಲ್ಲಿ ಚಲನಶೀಲತೆ ತಂದರು. ಜಡತ್ವಕ್ಕೆ ಚಾಟೀ ಬೀಸಿದರು. ಸ್ಥಗಿತ ವ್ಯವಸ್ಥೆಗೆ ಪರ್ಯಾಯ ಸೂಚಿಸಿದರು. ಬಸವಣ್ಣನ ಹೆಸರೇ ಚಲನಶೀಲ.‌ ಬುದ್ಧನ ನಂತರ ಭಾರತದಲ್ಲಿ ಆಂದೋಲ ಮತ್ತು ಚಳುವಳಿಯ ಮಾದರಿ ನಮಗೆ ಕಾಣಸಿಗುವುದು ಬಸವಣ್ಣನ ಕಾಲದಲ್ಲಿ. ಸ್ಥಗಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಅಕ್ಷರ ,ಅನ್ನ ಹಾಗೂ ಕ್ರಿಯೆಯ ಮೂಲಕ ಸಮಾಜದಲ್ಲಿ ಸ್ಥಾಪಿತ‌ಹಿತಾಸಕ್ತಿಗಳಿಗೆ ಸದ್ದಿಲ್ಲದೆ  ಪೆಟ್ಟುಕೊಟ್ಟವರು ಬಸವಣ್ಣ ಹಾಗೂ ವಚನಕಾರರು. ಬದಲಾವಣೆ ಬಯಸಿದ ವ್ಯವಸ್ಥೆಯ ಮಗ್ಗಲಿಗೆ ಪರ್ಯಾಯವನ್ನು ಸೂಚಿಸಿ ಅದನ್ನು ಕಾರ್ಯಗತ ಮಾಡ ಹೊರಟದ್ದು ಸಮಾಜದಲ್ಲಿ ಹೊಸ ಪರಿವರ್ತನೆಗೆ ಕಾರಣವಾಯಿತು. ಬಸವಣ್ಣ ಚಲನಶೀಲತೆಗೆ ಬಳಸಿದ ನಾಲ್ಕು ಅಸ್ತ್ರಗಳು : ಕಾಯಕ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ದಾಸೋಹ. ಸಮಾಜದಲ್ಲಿ ಪ್ರತಿ ದುಡಿಮೆಗೂ ಒಂದು ಗೌರವ ತಂದು ಕೊಡುವ   ಮೂಲಕ ಕಾಯಕ ಪ್ರಜ್ಞೆಗೆ ಬಸವಣ್ಣ ಹೆಚ್ಚು ಒತ್ತು ನೀಡಿದರು.‌  ಹಾಗೆ ಶ್ರಮ ಜೀವಿಗಳನ್ನು ಸಮಾನವಾಗಿ ಕಂಡರು.‌ ಬಿಜ್ಜಳನ ಅಸ್ಥಾನದ ಪ್ರಧಾನ ಮಂತ್ರಿಯಾಗಿದ್ದ‌ ಬಸವಣ್ಣನವರು ಅತ್ಯಂತ ವಿನಯಿಯೂ ಆಗಿದ್ದರು. ಇದು ಸಹ ಒಂದು ಚಲನೆ. ಮಂತ್ರಿಯಾದವರು ವಿನಯಿಯಾಗಿರುವುದು ಭಾರತದಲ್ಲಿ ವಿರಳ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಹಾಗೆ ಅಧಿಕಾರ ಕೇಂದ್ರವನ್ನು ತಾವು ಕಾಪಾಡಿಕೊಂಡು  ಮೌಲ್ಯಗಳಿಗಾಗಿ ತ್ಯಜಿಸಿದವರು ಸಹ ವಿರಳಾತಿವಿರಳ. ಈ ನಿಟ್ಟಿನಲ್ಲಿ ಬಸವಣ್ಣ ನಮಗೆ ಸಿಗುವ ಮೊದಲ ಉದಾಹರಣೆ. ಅವರು ಅಧಿಕಾರ ಕೇಂದ್ರದಲ್ಲಿದ್ದು ವಿನಯಿಯಾಗಿದ್ದರು.  “ಮಾದಾರ ಚೆನ್ನಯ್ಯನ ಮನೆಯ ಮಗ ನಾನು” ಎನ್ನುವ ಬಸವಣ್ಣ ಇನ್ನೊಂದೆಡೆ “ ಕಕ್ಕಯ್ಯನ ಮನೆಯ ದಾಸಿಯ ಮಗನು ಚೆನ್ನಯ್ಯನ ಮನೆಯ ದಾಸಿಯ ಮಗಳು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು ಅವರಿಬ್ಬರಿಗೆ ಹುಟ್ಟಿದ ಮನೆಯ ಮಗ ನಾನು ಕೂಡಲ ಸಂಗಮದೇವನ ಸಾಕ್ಷಿಯಾಗಿ…”  ಎಂಬಲ್ಲಿ ತನ್ನ ಜನ್ಮವನ್ನು ಸಮಾಜದ ಕೆಳಸ್ಥರದೊಂದಿಗೆ ಸಮೀಕರಿಸಿಕೊಂಡು ವಿನಯಿಯಾಗುತ್ತಾರೆ. ಹಾಗೆ ಜಾತಿ ವ್ಯವಸ್ಥೆಗೆ ಪೆಟ್ಟು ನೀಡಲು ಬಸವಣ್ಣ ಈ ವಚನ ಬರೆಯುತ್ತಾ , ಪ್ರತಿ ಹೆಜ್ಜೆಯಲ್ಲೂ  ಪ್ರಯೋಗಶೀಲತೆಗೆ ತನ್ನನ್ನೇ ಒಡ್ಡಿಕೊಂಡರು ಎನ್ನಬಹುದು. ಧರ್ಮಕ್ಕೆ ಹೊಸ ವ್ಯಾಖ್ಯಾನ: ” ದಯೆಯಿಲ್ಲದ ಧರ್ಮಯಾವುದಯ್ಯಾ, ದಯೆ ಇರಬೇಕು ಸಕಲ ಜೀವರಾಶಿಯಲ್ಲಿ” ಎನ್ನುತ್ತಾ ಧರ್ಮಕ್ಕೆ ಹೊಸ ವ್ಯಾಖ್ಯಾನ ನೀಡಿದ ಬಸವಣ್ಣ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ” ಎನ್ನುವ ಮೂಲಕ ಬಹುದೊಡ್ಡ ಕ್ರಾಂತಿಗೆ ಮುನ್ನುಡಿ ಬರೆಯುತ್ತಾರೆ. ದೇವರನ್ನು ಮನುಷ್ಯರ ಹೃದಯದಲ್ಲಿ , ಅಂಗೈಯೊಳಗಿನ ಲಿಂಗವಾಗಿಸಿ, ಕರಸ್ಥಲಕ್ಕೆ ದೇವರನ್ನು ಕರೆತರುವುದು ಆ ಕಾಲದಲ್ಲಿ ತಂದ ಬಹುದೊಡ್ಡ ಚಲನೆ. ಕಾಯಕವೇ ಕೈಲಾಸ ಎನ್ನುವ ಮೂಲಕ ಸ್ವರ್ಗ ಎಂಬುದು ದುಡಿಮೆಯಲ್ಲಿದೆ ಎಂಬ ಸರಳ ತತ್ವವನ್ನು ಏಕಕಾಲಕ್ಕೆ ದೊರೆಗೂ, ಜನ ಸಾಮಾನ್ಯನಿಗೂ ತಲುಪಿಸಿದ್ದು ಬಸವಣ್ಣನ‌ ಹೆಗ್ಗಳಿಕೆ. ಕಾಯಕದಲ್ಲಿ ನಿರತನಾದೊಡೆಗೆ ಲಿಂಗವನ್ನು, ಜಂಗಮನನ್ನು ಮರೆಯಬೇಕು. ಅಂಥ ಶ್ರದ್ಧೆಯನ್ನು ಬಸವಣ್ಣ ಸಮಾಜದ ಮುಂದಿಡುತ್ತಾರೆ. “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ”ಎನ್ನುವ ಮೂಲಕ ಜನರಿಗೆ ಸ್ಥಾವರ ವ್ಯವಸ್ಥೆಯ ಬಗೆಗಿನ‌ ನಂಬಿಕೆಯನ್ನು ಕೊಂಚ ತಗ್ಗಿಸುತ್ತಾರೆ. “ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ” ಎನ್ನುವ ವಚನದ ಮೂಲಕ ಅಗಮ್ಯ ,ಅಗೋಚರನಾದ ಕೂಡಲ ಸಂಗಮನೊಂದಿಗೆ ಅನುಸಂಧಾನ ಮಾಡುತ್ತಾರೆ.‌ ನಿನೊಮ್ಮೆ ಒಡಲುಗೊಂಡು ನೋಡಾ ? ಎಂದು ದೇವರನ್ನು ಪ್ರಶ್ನಿಸುವ ವಚನಕಾರರ ಮನಸ್ಥಿತಿ ೧೨ನೇ ಶತಮಾನದಲ್ಲಿ ಹುಟ್ಟಿದ್ದು ಕ್ರಾಂತಿಯೇ ಸರಿ. ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬಸವಣ್ಣ ಒಂದು ಹಂತದಲ್ಲಿ ಹೀಗೆ ಹೇಳುತ್ತಾರೆ ; ಅನ್ನದೊಳಗೊಂದಗುಳ ಸೀರೆಯೊಳಗೊಂದೆಳೆಯ ಬಯಸಿದೆನಾದೊಡೆ ನಿಮ್ಮಾಣೆ,‌ನಿಮ್ಮ ಪ್ರಮಥರಾಣೆ…ಎನ್ನುವ ಆತ್ಮಸಾಕ್ಷಿಯ ಪ್ರಜ್ಞೆಯೊಂದಿಗೆ ವ್ಯವಸ್ಥೆಯನ್ನು ಪಲ್ಲಟಗೊಳಿಸಲು ಮಾಡಿದ ಪ್ರಯತ್ನ ದೊಡ್ಡದು. ” ಹಾವ ತಿಂದವರ ನುಡಿಸಬಹುದು ಗರ ಬಡಿದವರ ನುಡಿಸಬಹುದು ಸಿರಿಗರ ಹೊಡೆದವರ ನುಡಿಸಲಾಗದು ಬಡತನ ಎಂಬ ಮಂತ್ರವಾದಿ ಸುಳಿಯಲು ಒಡನೆ ನುಡಿವರು “ ಎನ್ನುತ್ತಾನೆ ಬಸವಣ್ಣ .ಸಮಾಜದಲ್ಲಿ ವರ್ಗ ವ್ಯವಸ್ಥೆ ಮೇಲ್ಪದರು ಹೇಗೆ ಕಲ್ಲಾಗಿರುತ್ತದೆ,‌ಹೃದಯಹೀನವಾಗಿರುತ್ತದೆ ಎಂಬುದನ್ನು ಬಸವಣ್ಣ ಹೇಳಿದ ಬಗೆ ಇದು.‌ ಬಡತನವನ್ನೇ ಸಿರಿಯ ಬಗ್ಗಿಸಲು ಇರುವ ಮಂತ್ರವಾದಿ ಎನ್ನುತ್ತಾನೆ. ಮಂತ್ರ ತಂತ್ರಗಳ, ವೇದ ಶಾಸ್ತ್ರ ಆಗಮಗಳ ಕಡು ವಿರೋಧಿಯಾಗಿದ್ದ ಬಸವಣ್ಣ , ವಚನದ ನುಡಿಗಟ್ಟು ಹಾಗೂ ಭಾಷಾ ಬಳಕೆಯಲ್ಲಿನ‌ ಲಯವೂ ಸಹ ಸೊಗಸು. ಬಾಲ್ಯದಲ್ಲಿ ತನಗೆ ಕೊಡಲು ಮುಂದಾಗಿದ್ದ  ಜನಿವಾರ ಸಂಸ್ಕಾರ ಅಕ್ಕ‌ನಿಗೆ ಏಕಿಲ್ಲ ಎಂದು ಪ್ರಶ್ನಿಸಿ , ಗಂಡು ಹೆಣ್ಣು ಸಮಾನರು ಎಂಬ ಆಲೋಚನೆಯನ್ನು ಬಾಲ್ಯದಲ್ಲಿಯೇ ತನ್ನ ಎದೆಯಲ್ಲಿ ಬಿತ್ತಿಕೊಂಡಿದ್ದ ಬಸವಣ್ಣ .‌ ಬಾಗೇವಾಡಿಯಲ್ಲಿ ಬಿತ್ತಿಕೊಂಡ ವೈಚಾರಿಕತೆ ಬೀಜ ಮರವಾಗಿ ಬೆಳೆದು  ಫಲ ಕೊಟ್ಟಿದ್ದು ಬೀದರಿನ ಕಲ್ಯಾಣದಲ್ಲಿ. ಇದು ಬಹು ಮಹತ್ವದ ಚಲನಶೀಲತೆಗೆ ಕಾರಣವಾಯಿತು. ಇಡೀ ವ್ಯವಸ್ಥೆ ಭ್ರಷ್ಟವಾಗಿ, ಅಧಿಕಾರಶಾಹಿ ಮತ್ತು ರಾಜ ಕೆಟ್ಟುಹೋದಾಗ ಹತಾಶನಾಗುವ ಬಸವಣ್ಣ ಬರೆದ ವಚನ ಹೀಗಿದೆ ; ” ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದೊಡೆ ನಿಲಲುಬಾರದು ಏರಿ ನೀರುಂಬೆಡೆ, ಬೇಲೆಕೆಯ್ಯ ಮೇವಡೆ ತಾಯಿ ಮೊಲೆಹಾಲು ನಂಜಾಗಿ ಕೊಲುವೆಡೆ ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ“ ಹೀಗೆ ಪ್ರತಿಯೊಂದು ಕ್ರಿಯೆಯನ್ನು ಕೂಡಲಸಂಗಮನ ಸಾಕ್ಷಿಯಾಗಿರಿಸಿಕೊಂಡೇ ಚಲನಶೀಲತೆಗೆ ದುಡಿದ ಬಸವಣ್ಣ ಹಾಗೂ ವಚನಕಾರರು ಕರ್ನಾಟಕಕ್ಕೆ ಸದಾ ನೆನಪಿಡುವ ವೈಚಾರಿಕತೆಯನ್ನು ನೀಡಿದರು. ***************

ಬಸವಣ್ಣ ಮತ್ತು ಚಲನಶೀಲತೆ Read Post »

ಇತರೆ

ಮಾನವೀಯತೆ ಮರೆಸುತ್ತಿದೆ ಕೊರೊನ

ಲೇಖನ ಮಾನವೀಯತೆ ಮರೆಸುತ್ತಿದೆ ಕೊರೊನ ರಾಧಾ ಆರ್.ಡಿ. ತವರು ಮನೆಗೆ ಹದಿನೈದು ದಿನದ ಮಟ್ಟಿಗೆ  ಹೋಗಿದ್ದ ನಾನು ಬಿಗಿ ಲಾಕ್ಡೌನ್ ಆಗುತ್ತೆ ಎಂದು ಒಂದೇ ವಾರಕ್ಕೆ ದಿಡೀರ್ ಅಂತ ವಾಪಸ್ ಹೊರಟೆ.ಊರಿಂದ ಶಿರದ ವರೆಗೂ  ನನ್ನ  ಮತ್ತು ಪಾಪುನ ಅಪ್ಪಾಜಿ ಅಣ್ಣ ಬಿಡಬೇಕು ಅಂತ ಹಾಗೆ ಅಲ್ಲಿಂದ ನಮ್ಮನೆಯವರು ಕರೆದುಕೊಂಡು ಹೋಗಬೇಕು ಅಂತ  ಹೊರಡುವ ಮುನ್ನ ತೀರ್ಮಾನ ಆಗಿತ್ತು, ಬೆಳಗ್ಗೆ ಸುಮಾರು ಆರು ಗಂಟೆಗೆ ನಮ್ಮ ಊರಿಂದ ಹೊರಟೆವು, ಮೂರು ತಾಸಿನ ಪ್ರಯಾಣದ ನಂತರ ಅಂದರೆ ಒಂಬತ್ತು ಗಂಟೆಗೆ ಶಿರ ಟೋಲ್ ತಲುಪಿ ದೆವು. ಅಷ್ಟರಲ್ಲಿ ನನ್ನ ಯಜಮಾನರು ಅಲ್ಲಿಗೆ ಬಂದು ಬೆಳಗಿನ ಉಪಹಾರ ಸವಿಯುತ್ತಾ ನಮಗಾಗಿ ಕಾದು ನಿಂತಿದ್ದರು. ಅಣ್ಣ ಹಾಗೂ  ಅಪ್ಪಾಜಿ,ಅಣ್ಣನ ಕಾರಿನಿಂದ   ಲಗೇಜ್ ಅನ್ನು ನಮ್ಮ ಕಾರಿಗೆ ಇಡುತ್ತಾ ನನ್ನ ಯಜಮಾನರ ಜೊತೆ ಮಾತಿಗಿಳಿದರು. ಪರಸ್ಪರ ಕ್ಷೇಮ ಸಾಮಾಚ್ಹಾರ ನಡೆಯುತ್ತಿತ್ತು, ಆಷ್ಟೊತ್ತಿಗೆ ಎಲ್ಲಿದ್ದನೋ ಏನೋ ಪಟ್ಟೆ ಪಂಚೆ ,ಅಂಗಿ ಧರಿಸಿ ತಲೆಮೇಲೆ ಇನ್ನೊಂದು     ಪಂಚೆ ಹೊದ್ದಿದ್ದ ಒಬ್ಬ ಮಧ್ಯಮ ವಯಸ್ಸಿನ ವ್ಯಕ್ತಿ ಬಂದು ಬೆಳಗಿನ ತಿಂಡಿ ತಿಂತಾ ಇದ್ದ ನನ್ನ ಯಜಮಾನರನ್ನು ಕೇಳಿದ….. ಸ್ವಾಮೀ….. ನಂಗೂ ಸ್ವಲ್ಪ ಊಟ ಕೊಡಿಅಂತ…. ಹತ್ತಿರಕ್ಕೆ ಬರುತ್ತಿದ್ದ,ಅವನು ಮಾಸ್ಕ್ ಬೇರೆ ಹಾಕಿರಲಿಲ್ಲ, ನಮಗೆ ಭಯ, ಕೊರೊನ ಕಾಲ ಅಂತ, ಇವರು ಹೇಳಿದ್ರು ಎಂಜಲಾಗಿದೆ ಕಣಪ್ಪ ಹೇಗೆ ಕೊಡಲಿ, ಹತ್ತಿರ ಬರಬೇಡ, ಅಲ್ಲೇ ನಿಲ್ಲು, ನಾನು ಒಂದೇ ಡಬ್ಬಿ ತಂದಿರುವೆ ಎಂಜಲಾಗಿದೆ ಹೇಗೆ ಕೊಡಲಿ ಅಂದರು, ಆ ವ್ಯಕ್ತಿ ಬಿಡುವ ಪೈಕಿ ಆಗಿರಲಿಲ್ಲ, ಅದರಲ್ಲೇ ಎರಡು ತುತ್ತು ಕೊಡಣ್ಣ, ಇಲ್ಲ ಅನಬ್ಯಾಡ, ನೀ ತಿನ್ನೋದ ನೋಡಿ ಊಟ ಸಿಗುತ್ತೆ ಅಂತ ಬಂದೀನಿ, ಕೊಡಣ್ಣ ಅಂತ ಕೇಳ್ತಾನೇ ಇದ್ದ. ಎಂಜಲು ಕೊಡಲು ಇವರಿಗೆ ಮನಸಿಲ್ಲ. ಹಾಗೆ ಹೋಗಲು ಆತ ತಯಾರಿಲ್ಲ, ನನ್ನಣ್ಣ ಆತನಿಗೆ ಹೇಳಿದ ಸ್ವಾಮೀ ಕಾರಿನಲ್ಲಿ ಮಗು ಇದೆ, ಹತ್ತಿರ ಬರ್ಬೇಡ, ಕೊಡಬಾರದು ಎಂಬ ಭಾವನೆ ನಮಗಿಲ್ಲ, ಕೊರೊನ  ಕಾಲ ಬರಬೇಡ ಹತ್ತಿರ ಎಂದು ಅಳಿಮಯ್ಯನಿಗಾಗಿ ಕೇಳಿಕೊಂಡ, ಇವ ಎಂದು ಯಾರನ್ನೂ ಹೀಗೆ ಕಳಿಸಿದ್ದವನಲ್ಲ, ಯಾರಾದರೂ ಕಷ್ಟ ಎಂದರೆ ,ಊಟ ಇಲ್ಲ ಎಂದರೆ ತನ್ನ ಬಳಿ ಇದ್ದ ಎಲ್ಲವನ್ನೂ ಎಷ್ಟೋ ಸಾರಿ ಕೊಟ್ಟು ಬಂದಿರುವ ಉದಾರಿ ಇವ. ಇವನ ಬಾಯಲ್ಲಿ ಕೊರೊನ ಹೀಗೆ ಮಾತನಾಡಿಸಿತ್ತು,ಅಷ್ಟರಲ್ಲಿ ಕಾರಿನ ಬಾಗಿಲು ತೆಗೆದು ಅಣ್ಣ ದೂರ ನಿಲ್ಲಿ ಮಗು ಇದೆ ತೊಂದರೆ ಕೊಡಬೇಡಿ ಎಂದು ನಾನು ಹೇಳಿದೆ. ಅಷ್ಟರಲ್ಲಿ ಜೇಬಿನಿಂದ ದುಡ್ಡು ತೆಗೆದು ನೆಲದ ಮೇಲೆ ಹಾಕಿ ತಗೊಳಪ್ಪ ಎಂದರು ನನ್ನ  ಅಪ್ಪಾಜಿ, ಅಣ್ಣ, ನೆಲದ ಮೇಲೆ ಹಾಕ್ತಿಯಲ್ಲಾ ಅಣ್ಣ ,ಅಂದ ಆ ವ್ಯಕ್ತಿ, ನನ್ನ ತಂದೆ ಎನ್ ಮಾಡ್ಲಿ ಕೊರೊನ ಕಾಲ ಕಾಣಪ್ಪ, ಅಂದರು, ಆತ ದುಡ್ಡು ಜೇಬಿಗೆ ಹಾಕಿಕೊಂಡ, ಆಗ ನನಗೆ ಸಣ್ಣ ವಯಸ್ಸಿನಲ್ಲಿ ನಮ್ಮ ಮನೇಲಿ ನಡೆದ ಒಂದು ಘಟನೆ ನನ್ನ ತಲೆಯಲ್ಲಿ ಮಿಂಚಿ ಮಾಯವಾಯ್ತು,,, ನಮ್ಮ ಮನೆಯಲ್ಲಿ  ಬಿಕ್ಷೆಗೆ ಯಾರಾದರೂ ಬಂದರೆ ಎಂದೂ ಕೂಡ ನನ್ನ ಅಪ್ಪ ಅಮ್ಮನ ಬಾಯಲ್ಲಿ ಬಿಕ್ಷುಕ  ಬಂದ ಎನ್ನುವ ಪದ ನಾನು ಕೇಳಿಲ್ಲ. ಬದಲಾಗಿ ಬಾಗಿಲಿಗೆ ಯಾರೋ ಬಂದಿದ್ದಾರೆ ನೀಡಿ ಎಂದು ಹೇಳುತ್ತಿದ್ದುದು ಈಗಲೂ ನಮ್ಮ ಮನೆಯಲ್ಲಿ ಇದೆ.ಒಂದು ದಿನ ಹೀಗೆ ಯಾರೋ ಬಾಗಿಲಿಗೆ ಒಬ್ಬ ಬಂದ, ಅಮ್ಮಯ್ಯ (ನನ್ನ ಅತ್ತೆ, ಮದುವೆ ವಯಸ್ಸಿನ ಕನ್ಯೆ, ಅವಳಿಗೆ ಎಂದೂ ಅತ್ತೆ ಎಂದು ನಾವು ಕರೆದಿಲ್ಲ, ಈಗಲೂ ಏಕವಚನದಿಂದಲೇ ಮಾತನಾಡಿಸುತ್ತೇವೆ) ನೀಡಲು ತಡ ಮಾಡಿದಳು, ಆ ವ್ಯಕ್ತಿ ಬಾಗಿಲಲ್ಲಿ ಕಾದು ಸಾಕಾಗಿ ಬೇರೆ ಊರಿನ ಕಡೆ ಹೊರಟ, ಇದು ಕೂಡಲೆ ನನ್ನ ತಂದೆಗೆ ಗೋತ್ತಾಗಿದೆ. ಅವರು ಒಳಗೆ ಬಂದು ಅಮ್ಮಯ್ಯಳಿಗೆ ಬೈದರು,ಯಾಕೆ ಹಾಗೆ ಕಳಿಸಿದೆ, ಯಾಕೆ, ಬಾಗಿಲಿಗೆ ಬಂದವರಿಗೆ ನೀಡಲು ಆಗಲ್ಲವಾ? ಅಂತ, ಅದಕ್ಕೆ ಅಮ್ಮಯ್ಯ ಇಲ್ಲ ಅಣ್ಣ  ಹಾಗೇನಿಲ್ಲ. ಮತ್ತೆ ಬರುತ್ತಾನೆ ಬಿಡು. ಹೋದ್ರೆ ಹೋಗ್ಲಿ. ಅಂದ್ಲು, ನನ್ನ ಅಪ್ಪನಿಗೆ ಪಿತ್ತ ನೆತ್ತಿಗೆ ಏರಿತು  ಆಕೆಗೆ ಬೈದು ಹೇಳಿದರು. ನೋಡು ಬಾಗಿಲಿಗೆ ಬಂದವರನ್ನು ಹಾಗೆ ಕಳಿಸಬಾರದು, ಹೋಗಿ ಏನಾದ್ರೂ ಕೊಟ್ಟು ಬಾ ಎಂದು, ಕೂಡಲೆ ಆಕೆ ಅವ ಪಕ್ಕದ ಮನೆ ಹತ್ತಿರ ಇರಬಹುದು ಎಂದು ಹೊರಗೆ ಹೋಗಿ ನೋಡಿದರೆ ಅವ ಅಲ್ಲಿ ಇರಲಿಲ್ಲ, ಸ್ವಲ್ಪ ಮುಂದೆ ಹೋಗಿ ನೋಡಿದ್ರೆ ಆಗ್ಲೇ ಮಜ್ಜಿ ಕಟ್ಟೆ ಮೋರಿ (ನಮ್ಮೂರಿನಿಂದ ಸ್ವಲ್ಪ ದೂರದಲ್ಲಿ ರಸ್ತೆಯ ಮಗ್ಗುಲಲ್ಲಿ   ಇದೆ ಕಟ್ಟೆ.ಇಲ್ಲಿ ಸಂಜೆ ಹೊತ್ತು ಕೆಲಸ ಮಾಡಿ ದಣಿದ ಕೆಲವರು ಪಟ್ಟಂಗ ಹೊಡೆಯಲು ಬಂದು ಕುಂತು ಮಾತಾಡ್ತಾರೆ)  ಹತ್ರ ಇದಾನೆ🙆🏾‍♀️ಹಾಗೆ ಮನೆಗೆ ಹೋದ್ರೆ ಅಣ್ಣ ಬೈತಾನೆ ಅಂತ ಓಡೋಕೆ ಶರು ಮಾಡಿದಳು….. ಅಣ್ಣ ನಿಲ್ಲು… ಅಣ್ಣ ನಿಲ್ಲು.. ಎಂದು ಕೂಗಿ ಕರೆದು ಮನೆಗೆ ಕರೆದುಕೊಂಡು ಬಂದು ನೀಡಿ ಕಳಿಸಿದಳು, ಆಗ ನನ್ನ ಅಪ್ಪಾಜಿ ಖುಷಿಃ ಪಟ್ಟರು.,,,, (ಹಾಗಂತ ನಾವೇನು ಆಗರ್ಭ ಸಿರಿಸಂತರೇನಲ್ಲ ).ಇಂತ ನನ್ನ ಅಪ್ಪನ ಕೈಲಿ ಈ ಕೊರೊನ ದುಡ್ಡನ್ನು ನೆಲದ ಮೇಲೆ ಹಾಕುವ ಹಾಗೆ ಮಾಡಿತ್ತು. . ಆ ದುಡ್ಡನ್ನು ಆ ವ್ಯಕ್ತಿ ಜೇಬಿಗೆ ಹಾಕಿಕೊಂಡು ಹೊರಟ… ಆದರೂ ಅವನ ಕಣ್ಣು ಊಟದ ಮೇಲೆ ಇತ್ತು. ಪಾಪ, ಎಷ್ಟು ಹಸಿದಿದ್ದನೋ ಏನೋ,,,, ,,, ಮುಂದೆ ಸ್ವಲ್ಪ ದೂರ ಹೋಗಿ ಅಲ್ಲಿ ನಿಂತಿದ್ದ ಲಾರಿ ಚಾಲಕನ ಹತ್ತಿರ ಮಾತಿಗಿಳಿದ,,,, ಅಷ್ಟರಲ್ಲಿ ನನ್ನ ಕಂದ ನಿದ್ದೆಯಿಂದ ಎದ್ದ, ನನಗೆ ಅದೇ ಬೇಕಿತ್ತು, ಪಾಪುವನ್ನು ಅವರ ಅಪ್ಪನ ಕೈಗೆ ಕೊಟ್ಟು ನಾವು ಉಪಹಾರಕ್ಕೆ ತಂದಿದ್ದ ತಿಂಡಿಯ ಚೀಲವನ್ನು ಆತುರ ಆತುರವಾಗಿ ಹುಡುಕಿ ತೆಗೆದೆ, ಒಂದು ಕಾಗದದ ತಟ್ಟೆಗೆ ಎರಡು ರೊಟ್ಟಿ ,ಚಟ್ನಿ, ಹಾಕಿದೆ ಪಲ್ಯ ಹಾಕುವ ಹೊತ್ತಿಗೆ ಅವನು ಹೋದರೆ, ಅಯ್ಯೋ ಸಾಕು ಇರಲಿ, ಎಂದು ಅವನ ಕಡೆ ನೋಡಿ ಬಾ ಎಂದು ಸನ್ನೆ ಮಾಡಿದೆ, ಅವ ನಮ್ಮ ಕಡೆ ಬರತೊಡಗಿದ, ಇವರೆಲ್ಲ ಹೇಯ್ ಅವನು ಮತ್ತೆ ಬರ್ತಾ ಇದಾನೆ…. ಅಂತ ಗಾಬರಿಯಲ್ಲಿ ಹೇಳಿದರು, ನಾನೇ ಕರೆದೆ ಎಂದು ಹೇಳುತ್ತಾ ಅವನಿಗೆ  ಸನ್ನೆ ಮಾಡಿದೆ…… ನಾನು ಈ ತಟ್ಟೆ ಇಲ್ಲಿ ಇಡುತ್ತೇನೆ. ನೆಲದ ಮೇಲೆ, ನೀನು ತಗೊಂಡು ಹೋಗು, ಅಂತ. ಅವನಿಗೆ ಅರ್ಥವಾಯಿತು, ಆಯ್ತು ಎಂದು ತಲೆ ಅಲ್ಲಾಡಿಸಿದ. ನಾನು ಆ ತಟ್ಟೆ ನೆಲದ ಮೇಲೆ…. (ಅಂದರೆ ಅದು ರಸ್ತೆನೇ…..) ಇಟ್ಟು… ತಗೊ ಎಂದು ಹೇಳಿ ನನ್ನವರ  ಹತ್ತಿರ  ಬಂದು ನಿಂತೆ…. ಅವನಿಗೆ ಆದ ಖುಷಿಃ ಅಷ್ಟು ಇಷ್ಟಲ್ಲ….. ಆ ತಟ್ಟೆಗೆ ಭಕ್ತಿ ಇಂದ ಮೂರು ಸಲ ನಮಸ್ಕರಿಸಿ ತನ್ನಲ್ಲಿ ಇದ್ದ ಒಂದು ಕಪ್ಪು ಕವರಿಗೆ ಹಾಕಿ ಕೊಂಡು..ನನ್ನ ಕಡೆ ನೋಡುತ್ತಿದ್ದ ಅವನಿಗೆ ನನ್ನನ್ನು  ಕ್ಷಮಿಸು ಎಂಬ ತಪ್ಪಿತ ಮನೋಭಾವದಿಂದ ನಾನು ಕೈ ಮುಗಿದೆ, ಆ ಹೊತ್ತಿನ ಊಟ ಸಿಕ್ಕಿತಲ್ಲ ಎಂಬ ತ್ರುಪ್ತ ಮನೋಭಾವದಿಂದ ಆತ ಕೈ ಎತ್ತಿ ಮುಗಿದು ಹೊರಟು ಹೋದ. ಆತನಿಗೆ ಊಟ ಕೊಟ್ಟೆನಲ್ಲಾ ಎಂಬ ಸಮಾಧಾನ ನನ್ನಲ್ಲಿ ಇತ್ತಾದರೂ ನೆಲದ ಮೇಲೆ ಇಟ್ಟೆನಲ್ಲ  ಎಂಬ ಅಸಮದಾನ ಇತ್ತು…. ಹಾಗೆಯೇ ನಾವು ಬೆಳಗಿನ ಉಪಹಾರ ಮುಗಿಸಿ ಪರಸ್ಪರ ನಮ್ಮ ಊರಿನ ಕಡೆ ಪ್ರಯಾಣ ಮುಂದುವರೆಸಿದೆವು… ಮಾರ್ಗ ಮದ್ಯೆ ನನ್ನ ಅಮ್ಮನ ನೆನಪಾಯಿತು. ನನ್ನಮ್ಮ ಹೇಳಿದ್ದ ಅವಳ ಅನುಭವದ ಒಂದು ಘಟನೆ ನೆನಪಾಯಿತು… ನಮ್ಮ ಮನೆಯ ಮುಂದೆ ಸುಮಾರು ಬೆಳಗ್ಗೆ ಹನ್ನೊಂದು  ಗಂಟೆ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ  ಕೂತಿದ್ದನಂತೆ. ಅಮ್ಮ ಹೊರಗಡೆ ಬಂದಾಗ ತಾಯಿ ಹೊಟ್ಟೆ ತುಂಬ ಹಸಿದಿದೆ ತಿನ್ನಲು ಏನಾದ್ರೂ ಕೊಡವ್ವ ಎಂದನಂತೆ, ಪ್ರತಿದಿನ ಒಬ್ಬರಿಗೆ ಉಳಿಯುವಷ್ಟು ಅಡಿಗೆ ತಿಂಡಿ ಮಾಡುತ್ತಿದ್ದ ನನ್ನಮ್ಮ ಅವತ್ತು ಅಳತೆಗೆ ಸರಿಯಾಗಿ ಅಡಿಗೆ ಮಾಡಿ ಎಲ್ಲ ಖಾಲಿ ಮಾಡಿ ತೊಳೆದು ಇಟ್ಟಿದ್ದಳಂತೆ. ಇವ ಊಟ ಕೇಳಿದರೆ ಕೊಡಲು ಅಡಿಗೆ ಇಲ್ಲ…. ಇಲ್ಲ ಎನ್ನಲು ಬಾಯಿ ಬಂದಿಲ್ಲ… ಕೊಡಲೇ ಆತನಿಗೆ ಹೇಳಿದಳಂತೆ… ಅಣ್ಣ ಹತ್ತು ನಿಮಿಷ ಇಲ್ಲೇ ಕೂತಿರು,ತಿನ್ನಲು ತರುವೆ….ಇಲ್ಲೇ ಇರು ಬಂದೆ, ಎಂದವಳೇ…. ಮುಂದಿನ ಬಾಗಿಲು ಹಾಕಿ…. (ಸುರಕ್ಷತೆಯನ್ನು ಸಹ ನೋಡಿಕೊಳ್ಳ ಬೇಕಲ್ಲ) ಅಡುಗೆ ಮನೆಗೆ ಹೋಗಿ ಹತ್ತು ನಿಮಿಷದಲ್ಲಿ ಚಿತ್ರಾನ್ನ ಮಾಡಿ, . ಮನೆಯ ಹಿಂದೆ ಇರುವ ಬಾಳೆ ಗಿಡದಲ್ಲಿ ಎಲೆ ಕೊಯ್ದು ಅದರಲ್ಲಿ ಊಟ ಇಟ್ಟು, ಒಂದು ನೀರಿನ ಬಾಟಲಿನಲ್ಲಿ ನೀರು ತುಂಬಿಸಿಕೊಂಡು  ಬಂದು ಬಾಗಿಲು ತೆಗೆದಳಂತೆ,,, ಪಾಪ ಆತ ಅಲ್ಲೇ ಕಾಯುತ್ತಾ ಕುಳಿತಿದ್ದ ನಂತೆ. ಕೊಡಲೇ ಅವನಿಗೆ ಊಟ ನೀರು ಕೊಟ್ಟು ತಗೊ ಅಣ್ಣ ಊಟ ಮಾಡು ಅಂದಳಂತೆ, ಪಾಪ ಎಷ್ಟು ಹಸಿವೆ ಇತ್ತೋ ಏನೋ ಗಪಗಪನೆ ತಿಂದು ನೀರು ಕುಡಿದು ನಿನ್ನ ಹೊಟ್ಟೆ ತಣ್ಣಗೆ ಇರಲವ್ವ ಎಂದು ಎರಡು ಕೈ ಎತ್ತಿ ಹರಸಿ ಹೊರಟು ಹೋದನಂತೆ,, ,, ಇಂತಹ ಎಷ್ಟೋ ಅನುಭವಗಳು ನನ್ನ ತಾಯಿಗೆ ಆಗಿವೆ. ಇಂತಹ ಎಷ್ಟೋ  ಆಶೀರ್ವಾದಗಳು ನನ್ನ ತಾಯಿಗೆ ಸಿಕ್ಕಿವೆ,,, ಅದಕ್ಕೆ ಏನೋ ದೇವರು ಆಕೆಯನ್ನ ಚನ್ನಾಗಿ ಇಟ್ಟಿದ್ದಾನೆ,,, ನಾನು ಕೂಡಲೆ ನನ್ನ ಅಮ್ಮನಿಗೆ ಫೋನ್ ಮಾಡಿ ನಡೆದ ಘಟನೆ ಹೇಳಿದೆ…. ಅದಕ್ಕೆ ನನ್ನ ಅಮ್ಮ ಹೇಳಿದಳು,,,, ಒಳ್ಳೆ ಕೆಲಸ ಮಾಡಿದೆ ಕಣವ್ವ,,,, ದೇವರು ಒಂದೊಂದು ಸಲ ಯಾವುದೋ ರೂಪದಲ್ಲಿ ಬಂದು ನಮ್ಮ  ಪರೀಕ್ಷೆ  ಮಾಡ್ತಾನಂತೆ,,, ಸದ್ಯ ನೀನು ಅವನ್ನ ಹಾಗೆ ಕಳಿಸಿಲ್ಲ ,,, ಯಾವತ್ತು,,, ಯಾರನ್ನು,,,, ಬರಿ ಹೊಟ್ಟೇಲಿ ಕಳಿಸಬೇಡ,,,,,, ಒಳ್ಳೇ ಕೆಲ್ಸ ಮಾಡಿದೆ ಕಣವ್ವ…… ಎಂದಳು…. ಮನಸಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ಆಯ್ತಾದರೂ…. ನೆಲದ ಮೇಲೆ ಇಟ್ಟೆನಲ್ಲ… ಎಂಬ ಅಸಮಧಾನ ಈಗಲೂ ಇದೆ. ಈ ಕೊರೊನ ನಮ್ಮನ್ನ ನಮ್ಮ ಮಾನವೀಯ ಗುಣವನ್ನು ಅಳಿಸಿ ಹಾಕುತ್ತಿದೆ ಎಂದು ಬೇಸರವಾಗುತ್ತಿದೆ. ಥೂ  ಎಂತ ಕಾಲ ಬಂತು ಯಾರಾದರೂ ಊಟ ನೀರು ಕೇಳಿದರೆ ಕೊಡಲು ಭಯ….. ಬಿಕ್ಷೆ ಕೊಡಲು ಭಯ…. ಹತ್ತಿರ ನಿಂತು ಮಾತನಾಡಲು ಭಯ…… ಯಾರಾದರೂ ಸತ್ತರೆ ನೋಡಲು ಹೋಗಲು ಭಯ…… ನೋಂದವರಿಗೆ ಸಾಂತ್ವನ ಹೇಳಲು ಭಯ….. ಹಣ್ಣು ತರಕಾರಿ. ಮುಟ್ಟಲು ಭಯ….. ಮಕ್ಕಳನ್ನು ಮೊಮ್ಮಕ್ಕಳನ್ನು ಮುದ್ದಿಸಲು ಭಯ…… ಥೂ ಎಂತ ಕಾಲ ಬಂತಪ್ಪ……… ಹೇ  ಕೊರೊನ ಹೋಗಿ ಬಿಡು ನೀ ಆದಷ್ಟು ಬೇಗ….. ನಿನ್ನಿಂದ ನಮ್ಮ ಮಾನವೀಯತೆಗೆ ಬಿದ್ದಿದೆ ಬೀಗ……… ಯರಲ್ಲೂ ಇರಲಿಲ್ಲ ಅಮಾನವೀಯತೆಗೆ ಜಾಗ…… ಏಲರಲ್ಲೂ ತುಂಬಿ ತುಳುಕಾಡಿದೆ ಭಯವೆಂಬ ರೋಗ….. ಹೇ ಕೊರೊನ ಹೋಗಿಬಿಡು ನೀ ಆದಷ್ಟು ಬೇಗ…… *******

ಮಾನವೀಯತೆ ಮರೆಸುತ್ತಿದೆ ಕೊರೊನ Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-18 ಶಂಕರನ ಭಾಗೀವನದಲ್ಲಿ ಗೋಪಾಲನ ಮನೆಯನ್ನು ಸೇರಿಸಿ ಒಟ್ಟು ಮೂವತ್ತೊಂದು ಮನೆಗಳಿವೆ. ಮುಸ್ಲೀಮರು ಮತ್ತು ಕ್ರೈಸ್ತರನ್ನು ಹೊರತುಪಡಿಸಿ ಉಳಿದ ಬಹುತೇಕ ಜಾತಿಯವರು ಭಾಗಿವನದಲ್ಲಿ ಐದು, ಆರು, ಏಳು, ಹತ್ತು ಮತ್ತು ಇಪ್ಪತ್ತು ಸೆಂಟ್ಸ್‍ಗಳ ಜಾಗದ ಮಾಲಕರಾಗಿ ಹೊಸ ಮನೆಗಳ ಒಡೆಯರಾಗಿ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಗೋಪಾಲನ ಮನೆಯ ಪಕ್ಕದ ಮನೆ ಬ್ಯಾಂಕರ್ ನಾರಾಯಣರದ್ದು. ಅವರ ಒತ್ತಿನಲ್ಲಿ ಮರದ ವ್ಯಾಪಾರಿ ಸುಂದರಯ್ಯನವರಿದ್ದಾರೆ. ಅವರಾಚೆಗಿನದ್ದು ಜೀವವಿಮಾ ಕಂಪನಿಯ ನಿವೃತ್ತ ಉದ್ಯೋಗಿ ಲಕ್ಷ್ಮಣಯ್ಯ, ಸುಮಿತ್ರಮ್ಮ ದಂಪತಿಯದ್ದು. ಅವರ ಬಳಿಕದ್ದು ಉಮೇಶಯ್ಯನದ್ದು ಅದರ ನಂತರದ್ದು, ಪ್ರಸಿದ್ಧ ‘ನವರತ್ನ’ ಚಿನ್ನಾಭರಣ ಮಳಿಗೆಯ ಉದ್ಯೋಗಿ ರಮೇಶನದ್ದು. ಆ ನಂತರದವು ರಾಜೇಶ್ ಕುಮಾರ್ ಮತ್ತು ಜಗದೀಶ್ ಕುಮಾರ್ ಹಾಗೂ ಕೇಶವನದ್ದು. ಇನ್ನೂ ಮುಂದಕ್ಕೆ ಹೋದರೆ ಮೊಗವೀರರದ್ದೂ ಮತ್ತು ಸರಕಾರದ ವಿವಿಧ ಅಂಗಸಂಸ್ಥೆಗಳ ನೌಕರರದ್ದೂ ಕೆಲವು ಮನೆಗಳಿವೆ.    ಭಾಗೀವನದ ಮುಖ್ಯ ದ್ವಾರದ ಬಲಮುಗ್ಗಲಿನ ಸುಮಾರು ಇಪ್ಪತ್ತು ಸೆಂಟ್ಸ್ ಜಾಗದಲ್ಲಿ ವಿವಿಧ ಮರಮಟ್ಟುಗಳಿಂದ ತುಂಬಿ ಹಚ್ಚಹಸುರಿನಿಂದ ಕಂಗೊಳಿಸುತ್ತ ಭಾಗೀವನಕ್ಕೆ ವಿಶೇಷ ಶೋಭೆಯನ್ನು ನೀಡುವಂಥದ್ದೊಂದು ಚಂದದ ತೋಟವಿದೆ. ಅದರ ನಡುವೆ ಪ್ರಾಚೀನ ವಿನ್ಯಾಸದಿಂದ ನಿರ್ಮಿಸಿದ ಸುಂದರವಾದ ಹೆಂಚಿನ ಮನೆಯೊಂದಿದೆ. ಅದು ಆಯುರ್ವೇದ ವೈದ್ಯ ಡಾಕ್ಟರ್ ನರಹರಿಯ ಮನೆ. ಅವನು ಅಪ್ಪಟ ನಿಸರ್ಗಪ್ರೇಮಿ ಮತ್ತು ಮೇಲಾಗಿ ಬ್ರಹ್ಮಾಚಾರಿ ಕೂಡಾ. ಮಧ್ಯಮವರ್ಗದ ಸುಸಂಸ್ಕೃತ ಕುಟುಂಬವೊಂದರಲ್ಲಿ ಜನಿಸಿದ ಇವನು ಸುಮಾರು ಮೂವತ್ತೆರಡರ ಹರೆಯದ ಎಣ್ಣೆಗೆಂಪಿನ ಸ್ಫುರದ್ರೂಪಿ ತರುಣ. ನರಹರಿಯ ಹೈಸ್ಕೂಲ್ ವಿದ್ಯಾಭ್ಯಾಸದ ಹಂತದಲ್ಲಿ ಬಲಾಯಿ ಪಾದೆಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಬಸ್ಸು ಅಪಘಾತವೊಂದರಲ್ಲಿ ಅವನ ತಂದೆ ತಾಯಿ ಇಬ್ಬರೂ ಗತಿಸಿದರು. ಹಾಗಾಗಿ ಮಾವಂದಿರ, ಅಂದರೆ ತಾಯಿಯ ಅಣ್ಣ ತಮ್ಮಂದಿರ ಆಸರೆಯಲ್ಲಿ ಬೆಳೆಯುತ್ತ ವಿದ್ಯೆಯನ್ನು ಮುಂದುವರೆಸಿದವನು ಹೆತ್ತವರ ಮತ್ತು ತನ್ನಾಸೆಯಂತೆ ಆಯುರ್ವೇದ ವೈದ್ಯಕೀಯವನ್ನು ಕಲಿತ. ಪದವಿ ಶಿಕ್ಷಣ ಮುಗಿಯುತ್ತಲೇ ಈಶ್ವರಪುರದ, ‘ಆಯುರ್ ಕೇರ್ ಹೆಲ್ತ್ ಸೆಂಟರ್’ ಆಸ್ಪತ್ರೆಯಲ್ಲಿ ಉದ್ಯೋಗ ದೊರಕಿತು. ಕೆಲವು ವರ್ಷಗಳ ಕಾಲ ಅವಿರತವಾಗಿ ರೋಗಿಗಳ ಸೇವೆ ಮಾಡಿದವನು ಭಾಗೀವನದಲ್ಲಿ ಜಾಗವೊಂದನ್ನು ಖರೀದಿಸಿ ಪುಟ್ಟ ಮನೆಯೊಂದನ್ನು ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ. ನರಹರಿಯು ಬಾಲ್ಯದಿಂದಲೇ ಹಸಿರು ಪ್ರಕೃತಿ ಮತ್ತು ವನ್ಯಜೀವಿಗಳ ಕುರಿತು ಅಪಾರ ಪ್ರೀತಿಯನ್ನು ಬೆಳೆಸಿಕೊಂಡವನು. ಹಾಗಾಗಿ ತನ್ನ ಬಿಡುವಿನಲ್ಲಿ ದೇಶದಾದ್ಯಂತ ಹಬ್ಬಿರುವ ಪಶ್ಚಿಮಘಟ್ಟಗಳಲ್ಲೂ ಅವುಗಳ ತಪ್ಪಲಿನ ವಿವಿಧ ಅಭಯಾರಣ್ಯಗಳಲ್ಲೂ ದಣಿವರಿಯದೆ ಸಂಚರಿಸುವಂಥ ನೆಚ್ಚಿನ ಹವ್ಯಾಸವನ್ನು ರೂಢಿಸಿಕೊಂಡಿದ್ದ. ಅದರ ಫಲವಾಗಿ ಹಸಿರು ಪರಿಸರ ಮತ್ತು ಮೂಕ ಜೀವಜಾಲಗಳ ಕುರಿತು ವಿಶೇಷ ಜ್ಞಾನವೂ ಹಾಗೂ ನಿಸರ್ಗದೊಂದಿಗೆ ಅನ್ಯೋನ್ಯವಾಗಿ ಬೆರೆತು ಬಾಳುವ ಸಹಜ ಕಲೆಯೂ ಅವನಿಗೊಲಿದಿತ್ತು.    ಭಾಗೀವನದ ಬಡಾವಣೆಯ ಕುಟುಂಬಗಳಲ್ಲಿ ಮೇಲ್ಮಮಧ್ಯಮವರ್ಗ ಮತ್ತು ಶ್ರೀಮಂತರೇ ಹೆಚ್ಚಾಗಿರುವುದು. ಬಹುತೇಕರು ಸರಕಾರಿ ಉದ್ಯೋಗ ಮತ್ತಿತರ ಉನ್ನತ ನೌಕರಿಯಲ್ಲಿದ್ದಾರೆ. ಆದರೆ ಇವರೆಲ್ಲರ ನಡುವೆ ಗೋಪಾಲನದೊಬ್ಬನದೇ ಸಣ್ಣ ಹಂಚಿನ ಮನೆಯ, ಕಡು ಬಡತನದ ಕುಟುಂಬವಿರುವುದು. ಭಾಗೀವನದ ಎಡ ಮಗ್ಗುಲಿನ ಸುಮಾರು ಐವತ್ತು ಗಜ ದೂರದಲ್ಲಿ ಒಂದು ಎಕರೆಗಳಷ್ಟು ವಿಸ್ತಾರವಾದ ಮದಗವೊಂದಿದೆ. ಅದು ವರ್ಷವಿಡೀ ತುಂಬಿ ಹರಿಯುತ್ತದೆ. ಅದನ್ನು ನೋಡಿಯೇ ಶಂಕರ ಭಾಗೀವನದ ಭೂಮಿಯನ್ನು ಖರೀದಿಸಿದ್ದು. ಆ ಸಮೃದ್ಧ ಸರೋವರದಿಂದಾಗಿ ಬುಕ್ಕಿಗುಡ್ಡೆ ಗ್ರಾಮದ ನೂರಾರು ಮನೆಗಳ ಬಾವಿಗಳು ವರ್ಷವಿಡೀ ತುಂಬಿರುತ್ತವೆ. ಕೃಷಿಭೂಮಿಗಳು, ತೋಟಗಾರಿಕೆಗಳು ಉತ್ತಮ ಫಸಲು ನೀಡುತ್ತವೆ. ಭಾಗೀವನದ ಮನೆಗಳ ಬಾವಿಗಳಲ್ಲೂ ಹದಿನೈದರಿಂದ ಇಪ್ಪತ್ತು ಅಡಿಗಳೊಳಗೆ ಶುದ್ಧ ನೀರು ಸಿಕ್ಕಿದೆ. ಆದ್ದರಿಂದ ಈ ಬಡಾವಣೆಗೆ ನೀರಿನ ಸಮಸ್ಯೆ ಎಂದೂ ಕಾಡಿದ್ದಿಲ್ಲ.    ಈ ಸರೋವರವು ಸದಾ ತುಂಬಿರಲು ಮುಖ್ಯ ಕಾರಣವೂ ಇದೆ. ಮದಗದ ಸುತ್ತಲಿನ ಮುಕ್ಕಾಲು ಪ್ರದೇಶವನ್ನು ಪುರಾತನವಾದ ದೊಡ್ಡ ಅಡವಿಯೊಂದು ಆವರಿಸಿಕೊಂಡಿದೆ. ಈ ಪರಿಸರವು ಶೀನಯ್ಯ ಎಂಬವನ ಕುಟುಂಬಕ್ಕೆ ಸೇರಿದ್ದು ಎಂದು ಊರ ಜನರು ಹೇಳುತ್ತಾರೆ. ಈ ಕಾಡಿನಲ್ಲಿ ಮೂರು ನಾಲ್ಕು ಶತಮಾನಗಳಷ್ಟು ಪ್ರಾಚೀನವಾದ ಮರಗಳು, ಅನೇಕ ಬಗೆಯ ಬಳ್ಳಿಗಳು, ಬಗೆಬಗೆಯ ಔಷಧೀಯ ಸಸ್ಯಸಂಪತ್ತುಗಳು ಮತ್ತು ವಿವಿಧ ಜಾತಿಯ ಕಾಡುಪ್ರಾಣಿಗಳು ವಾಸಿಸುತ್ತಿದ್ದವು. ಅಲ್ಲದೇ ಆ ಮಲೆಯು ನಾಗ, ಪರಿವಾರ ದೈವಗಳ ವಾಸಾಸ್ಥಾನವೆಂದೂ ಹೇಳಲಾಗುತ್ತಿತ್ತು. ಆದ್ದರಿಂದ ಊರವರು ಆ ಹಾಡಿಯೊಳಗೆ ಹೋಗಲು ಹೆದರುತ್ತಿದ್ದರು. ದೇಶವನ್ನು ಸಂರಕ್ಷಿಸುವ ಬಲಿಷ್ಠ ಯೋಧರ ಪಡೆಯಂತಿದ್ದ ಆ ಅರಣ್ಯದ ಅಸಂಖ್ಯಾತ ಮರಗಳು ಪ್ರತೀವರ್ಷ ಮಳೆ ಮೋಡಗಳನ್ನು ತಡೆದು ನಿಲ್ಲಿಸಿ, ಮಳೆಯನ್ನು ಭೂವಿಗಿಳಿಸಿ ಮದಗವನ್ನು ತುಂಬಿಸುತ್ತ ಸುತ್ತಮುತ್ತಲಿನ ಚರಾಚರ ಜೀವರಾಶಿಗಳಿಗೂ ಜೀವನಾಡಿಯಾಗಿವೆ. ಹಾಗಾಗಿ ಮಳೆಗಾಲ ಸಮೀಪಿಸುತ್ತಿದ್ದಂತೆಯೇ ವಿವಿಧ ದೇಶಗಳಿಂದ ವಲಸೆ ಹೊರಡುವ ಪಕ್ಷಿಸಂಕುಲವು ಇಲ್ಲಿಗೆ ಬಂದು ಮದಗದ ದಡದ ಮರಗಳಲ್ಲೂ ಮತ್ತು ಹಾಡಿಯೊಳಗೂ ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುತ್ತ ಬದುಕುವುದನ್ನು ನೋಡುವುದೇ ಒಂದು ಮಧುರಾನಂದ!    ಭಾಗೀವನದಲ್ಲಿ ಜಾಗಕೊಳ್ಳಲು ಮತ್ತು ಮನೆಗಳನ್ನು ಖರೀದಿಸಲು ಬಂದವರಲ್ಲಿ ಹೆಚ್ಚಿನವರು ಅದರ ಸುತ್ತಮುತ್ತಲಿನ ಹಸಿರು ಸೌಂದರ್ಯಕ್ಕೆ ಮಾರುಹೋಗಿಯೇ ಶಂಕರನ ದುಬಾರಿ ಬೆಲೆಯನ್ನೂ ಲೆಕ್ಕಿಸದೆ ಕೊಂಡಿದ್ದರು. ಶಂಕರ ಭಾಗೀವನದ ಜಮೀನನ್ನು ಲೇಔಟ್ ಮಾಡಿಸಿ, ಮನೆಗಳನ್ನು ಕಟ್ಟಿಸಿ ಮಾರಾಟವನ್ನೇನೋ ಮಾಡಿದ್ದ. ಆದರೆ ಆ ಬಡಾವಣೆಯ ಸುತ್ತಲೂ ಆವರಣವೊಂದನ್ನು ಕಟ್ಟಿಸಿಕೊಡಲು ಅವನ ಜಿಪುಣತನ ಬಿಟ್ಟಿರಲಿಲ್ಲ. ಇತ್ತೀಚೆಗೆ ಬಾಕುಡಗುಡ್ಡೆಯ ಜಾಗಕ್ಕೆ ದೊಡ್ಡ ಮೊತ್ತವನ್ನು ಸುರಿದಿದ್ದುದರಿಂದಲೂ ಅದರಲ್ಲಿ ಹುಟ್ಟಿಕೊಂಡಿದ್ದ ನಾಗನ ಸಮಸ್ಯೆಯಿಂದಲೂ ಭಾಗೀವನದ ಆವರಣದ ಕಥೆಯನ್ನು ಮರೆತುಬಿಟ್ಟಂತಿದ್ದ. ಆದರೆ “ತಮ್ಮ ಬಡಾವಣೆಯ ಸುತ್ತಮುತ್ತ ಹೊಲಗದ್ದೆಗಳು ಮತ್ತು ದಟ್ಟ ಕುರುಚಲು ಹಾಡಿಗಳು ಇದ್ದುದರಿಂದ ಕಾಡುಪ್ರಾಣಿಗಳು, ಹಾವು, ಅರಣೆ, ಚೇಳು ಮತ್ತು ಕ್ರಿಮಿಕೀಟಗಳು ತಮ್ಮ ವಠಾರದೊಳಗೂ, ಮನೆಗಳೊಳಗೂ ಬಂದು ತೊಂದರೆ ಕೊಡುತ್ತವೆ. ಆದ್ದರಿಂದ ಆದಷ್ಟು ಬೇಗ ಪಾಗರ ನಿರ್ಮಿಸಿಕೊಡಬೇಕು!” ಎಂದು ವಠಾರದವರು ಶಂಕರನನ್ನು ಒತ್ತಾಯಿಸುತ್ತಿದ್ದರು.    ಆದರೆ ಅವನು, ‘ಆಯ್ತು, ಆಯ್ತು. ಸದ್ಯದಲ್ಲೇ ಮಾಡಿಸಿ ಕೊಡುವ. ಮೊನ್ನೆಯವರೆಗೆ ಶಿಲೆಕಲ್ಲಿನ ತಾಪತ್ರಯ ಇತ್ತು. ಈಗ ಮರಳು ಮತ್ತು ಸಿಮೆಂಟಿನ ಕೊರತೆ ಶುರುವಾಗಿದೆ. ಹಾಗಾಗಿ ಇನ್ನೂ ಸ್ವಲ್ಪ ಕಾಲ ಹೋಗಲಿ!’ ಎನ್ನುತ್ತ ಕಾಲಾಹರಣ ಮಾಡುತ್ತಿದ್ದ. ಹೀಗಿದ್ದವನಿಗೆ ಈಚೆಗೆ ಹೊಸದೊಂದು ಉಪಾಯವೂ ಹೊಳೆದಿದ್ದುದರಿಂದ, ‘ಅಲ್ಲಾ, ನಿಮ್ಮ ನಿಮ್ಮ ಜಾಗಗಳಿಗೆ ನೀವು ನೀವೇ ಕಂಪೌಂಡ್ ವಾಲ್ ಹಾಕಿಕೊಂಡಿದ್ದೀರಿ. ಹೀಗಿರುವಾಗ ಮತ್ತೆಂಥ ಭಯ ನಿಮಗೆ?’ ಎಂದು ನಗುತ್ತ ಜಾರಿಕೊಳ್ಳುತ್ತಿದ್ದಾನೆ. ಇನ್ನು ಹತ್ತು ಹದಿನೈದು ಮನೆಗಳವರೂ ತಂತಮ್ಮ ಜಾಗಗಳಿಗೆ ಪಾಗರ ಕಟ್ಟಿಕೊಂಡರೆ ಇಡೀ ಬಡಾವಣೆಯ ಆವರಣಕ್ಕೆ ತಗಲುವ ದೊಡ್ಡ ಖರ್ಚುವೆಚ್ಚ ಉಳಿದಂತೆಯೇ ಎಂಬುದು ಅವನ ಯೋಚನೆ. ಆದರೆ ಅವನ ಈ ಲೆಕ್ಕಾಚಾರದಿಂದ ಮುಂದೊಂದು ದಿನ ಇಡೀ ಭಾಗೀವನದ ನಿವಾಸಿಗಳಿಗೆ ದೊಡ್ಡ ತಾಪತ್ರಯಗಳು ಬಂದು ಬಡಿಯಲಿವೆ ಎಂಬುದು ಅವನಿಗಾಗಲಿ ಅಥವಾ ಭಾಗೀವನದ ನಿವಾಸಿಗಳಿಗಾಗಲಿ ತಿಳಿದಿರಲಿಲ್ಲ!                                                                                                *** ರಾಧಾ, ಕೃಷಿಕ ಕುಟುಂಬದಿಂದ ಬಂದ ಹೆಣ್ಣು. ಹಾಗಾಗಿ ಬಾಲ್ಯದಿಂದಲೂ ಅವಳಿಗೆ ಹಸು, ಕೋಳಿ, ನಾಯಿ, ಬೆಕ್ಕುಗಳೆಲ್ಲ ಹತ್ತಿರದ ಬಂಧುಗಳಂತಿದ್ದವು. ಆದರೆ ಅಲೆಮಾರಿಯಂಥ ಗಂಡನನ್ನು ಕಟ್ಟಿಕೊಂಡ ಮೇಲೆ ಅವಳಿಗೆ ಆ ಪ್ರಾಣಿಗಳೊಂದಿಗಿನ ಸಂಬಂಧವು ಕಡಿದುಹೋಗಿತ್ತು. ತನಗೊಂದು ಸ್ವಂತ ಮನೆಯಾದ ಮೇಲಾದರೂ ತನ್ನಿಷ್ಟದ ಪ್ರಾಣಿಪಕ್ಷಿಗಳನ್ನು ಸಾಕಬೇಕು ಎಂದು ಅವಳು ಆಗಾಗ ಅಂದುಕೊಳ್ಳುತ್ತಿದ್ದಳು. ಹಾಗಾಗಿ ಈಗ ಸ್ವಂತ ಮನೆಯೇನೋ ಆಗಿದೆ. ಆದರೆ ಕೇವಲ ನಾಲ್ಕು ಸೆಂಟ್ಸಿನಷ್ಟಗಲದ ಜಾಗದಲ್ಲಿ ಸಣ್ಣ ಮನೆಯಾಗಿ ಒಂದು ತುಂಡು ಅಂಗಳ ಮಿಕ್ಕಿರುವುದೇ ಹೆಚ್ಚು. ಅಂಥದ್ದರಲ್ಲಿ ಸಾಕುಪ್ರಾಣಿಗಳಿಗೆಲ್ಲಿಯ ನೆಲೆ! ಎಂದುಕೊಳ್ಳುತ್ತ ನಿರಾಶಳಾಗುತ್ತಿದ್ದಳು. ಆದರೂ ಅವಳು ತನ್ನ ಆಸೆಯನ್ನು ಬಿಟ್ಟಿರಲಿಲ್ಲ. ವಠಾರದವರಿಗೆ ತೊಂದರೆಯಾಗದಂತೆ ಕೋಳಿ, ನಾಯಿ ಮತ್ತು ಗಬ್ಬದ ಹಸುವೊಂದನ್ನು ತಂದು ಇದ್ದ ಜಾಗದೊಳಗೆಯೇ ಸುಧಾರಿಸಿಕೊಂಡು ಸಾಕಿದರೆ ಒಂದಿಷ್ಟು ಮೇಲ್ಸಂಪಾದನೆಯಾದರೂ ಆದೀತು ಎಂದು ಆಲೋಚಿಸುತ್ತಿದ್ದಳು. ಹೀಗಾಗಿ ಆ ಸಂಗತಿಯನ್ನು ಒಮ್ಮೆ ಗಂಡನಿಗೂ ಹೇಳಿ ಚರ್ಚಿಸಿದಳು. ಗೋಪಾಲನ ಅಜ್ಜಿ, ಅಜ್ಜಂದಿರೂ ಕೃಷಿಕರಾಗಿದ್ದವರು. ಅವನ ಬಾಲ್ಯವೂ ಕೆಲವು ಕಾಲ ಅವರೊಂದಿಗೆ ಕಳೆದಿತ್ತು. ಶಾಲಾ ರಜಾ ದಿನಗಳಲ್ಲಿ ಅಜ್ಜಿಯ ಮನೆಗೆ ಹೋದಾಗಲೆಲ್ಲ ಅವನೂ ಹೆಚ್ಚಾಗಿ ದನಕರು, ನಾಯಿ ಮತ್ತು ಕೋಳಿಗಳೊಂದಿಗೆ ಆಟವಾಡಿಕೊಂಡೇ ಬೆಳೆದವನು. ಆದ್ದರಿಂದ ಮಡದಿಯ ಯೋಚನೆ ಅವನಿಗೂ ಇಷ್ಟವಾಯಿತು. ‘ಆಯ್ತು ಮಾರಾಯ್ತಿ ಸಾಕುವ. ಆದರೆ ನಮ್ಮ ವಠಾರದಲ್ಲಿ ಹೆಚ್ಚಾಗಿ ಮಡಿಮೈಲಿಗೆಯವರೇ ಇರುವುದಲ್ಲವಾ. ಅವರ್ಯಾರೀಗೂ ತೊಂದರೆಯಾಗದಂತೆ ಸಾಕಬೇಕು ನೋಡು!’ ಎಂದ ಗಂಭೀರವಾಗಿ. ‘ಹೌದು ಮಾರಾಯ್ರೇ, ನನಗೂ ಆ ಯೋಚನೆ ಬಂದಿತ್ತು. ಆದರೂ ನೀವು ಹೇಳಿದ ಹಾಗೆ ಅವುಗಳು ಇನ್ನೊಬ್ಬರ ವಠಾರದತ್ತ ಹೋಗದಂತೆ ನೋಡಿಕೊಂಡರಾಯ್ತು!’ ಎಂದಳು ತಾನೂ ಕಾಳಜಿಯಿಂದ. ಗೋಪಾಲ ಮರುದಿನವೇ ಗರಡಿಗುಡ್ಡೆಯ ವನಜಕ್ಕನ ಮನೆಗೆ ಹೋಗಿ ಒಂದು ಜೊತೆ ಊರ ಕೋಳಿಯನ್ನು ಕೊಂಡು ತಂದು ಹೆಂಡತಿಗೊಪ್ಪಿಸಿದ. ಅವು ಬಹಳಬೇಗನೇ ಮನೆಮಂದಿಯ ಆರೈಕೆಯಿಂದಲೂ, ಪಕ್ಕದ ಹಾಡಿಗುಡ್ಡೆಗಳಲ್ಲಿ ಸಿಗುವ ಕ್ರಿಮಿಕೀಟಗಳ ಸೇವನೆಯಿಂದಲೂ ತಮ್ಮ ವಂಶೋತ್ಪತ್ತಿಯನ್ನು ಹುಲುಸಾಗಿ ಬೆಳೆಸತೊಡಗಿದವು. ಪರಿಣಾಮ ಕೆಲವೇ ಕಾಲದೊಳಗೆ ನಾಲ್ಕೈದು ಹುಂಜಗಳು ಅಂಕದ ಹೋರಾಟಕ್ಕೂ ಹುರಿಗೊಂಡು ನಿಂತವು. ಇದರಿಂದ ಹುರುಪುಗೊಂಡ ಗೋಪಾಲ ಅವುಗಳನ್ನು ಮಸಣದಗುಡ್ಡೆ, ಪುತ್ತೂರು, ಗರಡಿಗುಡ್ಡೆ ಮತ್ತು ಕೆಂಪ್ತೂರಿನಲ್ಲಿ ನಡೆಯುವ ಕೋಳಿ ಅಂಕಗಳಿಗೆ ಕೊಂಡುಹೋಗಿ ಮಾರುತ್ತ ಸಾವಿರ ಸಾವಿರ ಗಳಿಸತೊಡಗಿದ. ಅದೇ ಹಣದಿಂದ ಒಂದು ಗಬ್ಬದ ಹಸುವೂ ರಾಧಾಳ ಮನೆಯನ್ನು ಪ್ರವೇಶಿಸಿತು. ಅಷ್ಟಾಗುತ್ತಲೇ ನೆರ್ಗಿಹಿತ್ತಲಿನ ಕರಿಮಾರು ಹಾಡಿಯೊಂದರ ಪಕ್ಕದ ಕಸದ ತೊಟ್ಟಿಯಲ್ಲಿ ಯಾರೋ ಎಸೆದು ಹೋಗಿದ್ದ ಮತ್ತು ಇನ್ನೂ ಕಣ್ಣು ಬಿಟ್ಟಿರದ ಮೂರು ನಾಯಿ ಮರಿಗಳಲ್ಲಿ ದಷ್ಟಪುಷ್ಟವಾದ ಚೆಂದದ ಹೆಣ್ಣು ಮರಿಯೊಂದನ್ನು ಗೋಪಾಲ ಮನೆಗೆ ತಂದು ಸಾಕತೊಡಗಿದ. ರಾಧಾ ಅದಕ್ಕೆ ‘ಮೋತಿ’ ಎಂದು ಹೆಸರಿಟ್ಟಳು. ಆ ಕುನ್ನಿಯು ಅವನ ಮಕ್ಕಳ ಪ್ರೀತಿಯ ಆರೈಕೆಯಿಂದ ಎಲ್ಲರೊಡನೆ ಅನ್ಯೋನ್ಯವಾಗಿ ಬೆರೆತು ತನ್ನ ನಾಲ್ಕು ಸೆಂಟ್ಸಿನ ಪ್ರದೇಶದೊಳಗೆ ಅಪರಿಚಿತವಾದ ಸಣ್ಣದೊಂದು ಕೀಟವನ್ನೂ ನುಸುಳಲು ಬಿಡದೆ ಕಾವಲು ಕಾಯುತ್ತ ಬೆಳೆಯುತ್ತಿತ್ತು. ಹೀಗೆ ಗೋಪಾಲನ ಸಂಸಾರ ಸ್ವಂತ ಜಾಗದಲ್ಲಿ ಪ್ರಕೃತಿಗೆ ಅತೀ ಆಪ್ತವಾಗಿ ಜೀವನ ಸಾಗಿಸತೊಡಗಿತು.    ಗೋಪಾಲ ಹೊಸದಾಗಿ ಕೊಂಡು ತಂದಿದ್ದ ‘ಫೈಟರ್’ ಜಾತಿಯ ಹೇಟೆಯೊಂದು ಒಮ್ಮೆ ಹದಿನಾರು ಮೊಟ್ಟೆಗಳನ್ನಿಟ್ಟು ಇಪ್ಪತ್ತೊಂದು ದಿನಗಳ ಕಾಲ ಅವುಗಳಿಗೆ ಕಾವು ನೀಡಿ ಮರಿ ಮಾಡಿತು. ಆ ಹೇಟೆಯು ತನ್ನ ಮರಿಗಳೊಂದಿಗೆ ಹೊರಗೆ ಹೋದೀತೆಂದುಕೊಂಡು ರಾಧಾ ದಿನಾಲು ಅದನ್ನು ತನ್ನ ಇಳಿ ಮಾಡಿನ ಕಂಬಕ್ಕೆ ಕಟ್ಟಿ ಹಾಕಿ ಸಾಕುತ್ತಿದ್ದಳು. ಹಾಗಾಗಿ ಮರಿಗಳು ಮನೆಯ ವಠಾರದೊಳಗೆಯೇ ಓಡಾಡುತ್ತ ಬಲಿಯುತ್ತಿದ್ದವು. ಆದರೆ ಕ್ರಮೇಣ ಬೆಳೆದ ಮರಿಗಳು ತಾಯಿಯನ್ನು ಬಿಟ್ಟು ಹೊರಗೆ ಇಣುಕಲು ಮತ್ತು ಓಡಲು ಹವಣಿಸತೊಡಗಿದವು. ಅದನ್ನು ಕಂಡ ರಾಧಾ ಒಂದು ದಿನ ಹೇಟೆಯನ್ನು ಮರಿಗಳೊಂದಿಗೆ ಸುಮಾರು ದೂರದ ಮದಗದತ್ತ ಅಟ್ಟಿಕೊಂಡು ಹೋಗಿ ಮೇಯಲು ಬಿಟ್ಟು ಬಂದಳು. ಆದರೆ ಚುರುಕು ಬುದ್ಧಿಯ ಆ ಹೇಟೆಯು ಯಜಮಾನ್ತಿ ಗಮನಿಸುವವರೆಗೆ ಮಾತ್ರವೇ, ‘ಕೊಟ, ಕೊಟಾ…ಕೊಟ, ಕೊಟಾ…!’ ಎಂದು ತನ್ನ ಮರಿಗಳನ್ನು ಕರೆಯುತ್ತ ಮದಗದತ್ತ ಹೋಯಿತು. ಅವಳು ಯಾವಾಗ ಹಿಂದಿರುಗಿ ಹೋದಳೋ ಹೇಟೆಯೂ ತಟ್ಟನೆ ತನ್ನ ದಿಕ್ಕು ಬದಲಿಸಿಬಿಟ್ಟಿತು. ತನ್ನ ಮರಿಗಳ ಮೇಲೆ ಅತೀವ ಕಾಳಜಿಯಿದ್ದ ಅದು ಮದಗದ ಆಸುಪಾಸು ಹದ್ದು, ಗಿಡುಗ, ಕಾಗೆ, ನರಿ, ಮುಂಗುಸಿ ಮತ್ತು ಕಾಡುಬೆಕ್ಕುಗಳಂಥ ಅಪಾಯದ ಪ್ರಾಣಿಗಳಿರುವುದನ್ನು ತಿಳಿದಿತ್ತು. ಹಾಗಾಗಿ ಅವುಗಳಿಂದ ತನ್ನ ಮರಿಗಳಿಗೆ ಅಪಾಯವೆಂದೂ ಮತ್ತು ಇಲ್ಲಿನ ಕ್ರಿಮಿಕೀಟಗಳಿಗಿಂತಲೂ ಮೇಲ್ಮಟ್ಟದ ಮೇವು ತನ್ನ ಬಡಾವಣೆಯೊಳಗಿನ ಮನೆಗಳಲ್ಲಿಯೇ ದೊರಕುತ್ತದೆ ಎಂಬುದನ್ನೂ ಅರಿತಿತ್ತು. ಆದ್ದರಿಂದ ಹೇಟೆಯು ತನ್ನ ವಠಾರದ ಮನೆಗಳತ್ತಲೇ ಮುಖ ಮಾಡಿದ್ದು ಮೊದಲಿಗೆ ಬ್ಯಾಂಕರ್ ನಾರಾಯಣರ ಮನೆಯ ಗೇಟು ನುಸುಳಿ ಅಂಗಳವನ್ನು ಹೊಕ್ಕಿತು. (ಮುಂದುವರೆಯುವುದು)  *************************** ಗುರುರಾಜ್ ಸನಿಲ್ ಗುರುರಾಜ್ ಸನಿಲ್

Read Post »

ಇತರೆ

ಪ್ರಜಾಪ್ರಭುತ್ವವಾದಿ ಬಸವಣ್ಣ

ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ದೇಶದ ಏಕತೆ ಈಎಲ್ಲ ಅಂಶಗಳೂ ಶರಣರ , ಅವರ ನಡೆಹಾಗೂ ನುಡಿಗಳಲ್ಲಿ ಹಾಸು ಹೊಕ್ಕಾಗಿದ್ದುದನ್ನು ವಚನಗಳಲ್ಲಿ ಕಾಣುತ್ತೇವೆ.

ಪ್ರಜಾಪ್ರಭುತ್ವವಾದಿ ಬಸವಣ್ಣ Read Post »

ಇತರೆ

ಕನ್ನಡದ ಸಾಕ್ಷೀಪ್ರಜ್ಞೆ, ಗಾಂಧಿವಾದಿ ದೊರೆಸ್ವಾಮಿ

ಲೇಖನ ಕನ್ನಡದ ಸಾಕ್ಷೀಪ್ರಜ್ಞೆ, ಗಾಂಧಿವಾದಿ ದೊರೆಸ್ವಾಮಿ ಆರ್.ಜಿ.ಹಳ್ಳಿ ನಾಗರಾಜ ಕನ್ನಡದ ಸಾಕ್ಷೀಪ್ರಜ್ಞೆಯಂತಿದ್ದು ನಮ್ಮನ್ನಗಲಿದ ಶತಾಯುಷಿ ಎಚ್. ಎಸ್. ದೊರೆಸ್ವಾಮಿ ಅವರ ಜನಪರ ಕಾಳಜಿ ಬಗ್ಗೆ ಹತ್ತಾರು ನಿದರ್ಶನ ಕೊಡಬಹುದು. ತಕ್ಷಣ ನಾನಿದ್ದ ಕಚೇರಿಯ ಒಂದು ಘಟನೆಯಿಂದ ಅವರನ್ನಿಲ್ಲಿ ನೆನೆಯುತ್ತೇನೆ: ಅವರಿಗೆ‌ 102 ವರ್ಷವಾಗಿತ್ತು. ಒಂದುದಿನ ಬೆಂಗಳೂರು  ಕೆರೆಗಳ  ಮಾಲಿನ್ಯದ ಬಗ್ಗೆ ಲಿಖಿತ ದೂರು ಕೊಡಲು 3ನೇ‌ ಮಹಡಿಗೆ  ಬಂದರು! ಕಚೇರಿಯಲ್ಲಿ ಇದ್ದವರಿಗೆಲ್ಲ ಆಶ್ಚರ್ಯ ಹಾಗೂ ದಿಗಿಲು. ಅಧ್ಯಕ್ಷರನ್ನು ಕಾಣಬೇಕು,  ಇದ್ದಾರಾ? ಎಂದರು. ಹೊರಗೆ ಸಾಕಷ್ಟು ಜನ ಕಾಯುತ್ತಿದ್ದರು ಈ‌ ಶತಾಯುಷಿಯನ್ನು ಕಂಡ ಸಿಬ್ಬಂದಿ ನೇರವಾಗಿ ಅಧ್ಯಕ್ಷರ ಛೇಂಬರಿಗೆ ಕಳುಹಿಸಿದರು. ಏನೋ ಚರ್ಚೆಯಲ್ಲಿದ್ದ ಅಧ್ಯಕ್ಷರು ಈ ಹಿರಿಯ ಜೀವ‌ ಬಂದದ್ದು ಕಂಡು ಆಶ್ಚರ್ಯವಾಯಿತು. ಕೂಡಲೆ  ಕುರ್ಚಿಯಿಂದ ಎದ್ದುಬಂದು, ಅವರನ್ನು ಬರಮಾಡಿಕೊಂಡು ಕೈ ಹಿಡಿದು ಕುರ್ಚಿಯಲ್ಲಿ ಕೂರಿಸಿದರು. ಈ ಇಳಿ ವಯಸ್ಸಿನಲ್ಲಿ ದೊರೆಸ್ವಾಮಿ ಅವರೇ ಕಚೇರಿಗೆ ಬಂದಿದ್ದಾರೆಂದರೆ ಏನೋ ದೊಡ್ಡ ಸಮಸ್ಯೆಯೇ ಇರಬೇಕೆಂದುಕೊಂಡ ಅಧ್ಯಕ್ಷರು, “ಸಾರ್ ಇಷ್ಟುದೂರ ನೀವೇಕೆ ಬಂದಿರಿ? ಒಂದು ಫೋನ್ ಮಾಡಿದ್ದರೆ ನಾನೇ ಸಮಸ್ಯೆ ಬಗೆಹರಿಸುತ್ತಿದ್ದೆನಲ್ಲ” ಅಂದರು. ಆಗ ತಾವು ತಂದಿದ್ದ ದೂರನ್ನು ಅಧ್ಯಕ್ಷರಿಗೆ ನೀಡಿದರು. ಅದನ್ನು ಓದಿದ ಅಧ್ಯಕ್ಷರಿಗೆ ಎಲ್ಲಾ ಅರಿವಾಗಿ, ಬೇಗ ನಾನೇ ನಿಂತು ಈ ಸಮಸ್ಯೆ ಬಗೆಹರಿಸಿ ನಿಮ್ಮನ್ನು ಕಾಣುತ್ತೇನೆ” ಅಂದರು. . ಈ ಮೇಲಿನ ಘಟನೆ ನಡೆದು ಎರಡೂವರೆ ವರ್ಷವಾಗಿದೆ.  ಸ್ಥಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,  ಚರ್ಚ್ ಸ್ಟ್ರೀಟ್, ಬೆಂಗಳೂರು. ಬರಮಾಡಿಕೊಂಡ ಅಧ್ಯಕ್ಷರು: ಲಕ್ಷ್ಮಣ್. ಕೆಲವು ನಿಮಿಷ ಅವರು ಬೆಂಗಳೂರು ಕೆರೆಗಳ ಹೂಳು, ಕೊಳಚೆ ನೀರು ಹರಿದು ಕೆರೆ ಒಡಲು ಸೇರುವ‌ ವಿಚಾರ, ಜಲಚರಗಳ ನಾಶ… ಎಲ್ಲಾ ಪ್ರಸ್ತಾಪ ಮಾಡಿದರು. ನಾನು ಆಗ ಆ ಕಚೇರಿಯಲ್ಲಿ ಮಾಧ್ಯಮ ಸಲಹೆಗಾರ / ಪರಿಸರ ಪತ್ರಿಕೆ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ನನ್ನ ಅಲ್ಲಿ ಕಂಡ ದೊರೆಸ್ವಾಮಿಯವರು ಅನೇಕ‌ ನೆನಪು‌ ಕೆದಕಿ ಮಾತಾಡಿದರು. ಅಧ್ಯಕ್ಷರಿಗೆ ನನ್ನ ಬಗ್ಗೆ ಹೇಳಿದರು. ಆ ವಯಸ್ಸಲ್ಲೂ ಅವರ ನೆನಪಿನ‌ ಶಕ್ತಿಗೆ ಶರಣೆಂದೆ. ಅಧ್ಯಕ್ಷ ಲಕ್ಷ್ಮಣ್ ಅವರು ದೊರೆಸ್ವಾಮಿ ಅವರ ಕೈ ಹಿಡಿದು, ಮಾತಾಡುತ್ತ  3ನೇ ಮಹಡಿಯಿಂದ ಲಿಪ್ಟಲ್ಲಿ ಕೆಳಗೆ ಕರೆತಂದರು. ನಾನು ಅವರ ಜೊತೆ ಇದ್ದೆ. ಮತ್ತೆ ಬಾಗಿಲಲ್ಲಿ ಮಾತಾಡುತ್ತ ಬೀಳ್ಕೊಟ್ಟೆವು. ** ದೊರೆಸ್ವಾಮಿ ಅವರಿಗೆ 98 ವಯಸ್ಸಾದಾಗ ವಾರಪತ್ರಿಕೆಯೊಂದಕ್ಕೆ ಸಂದರ್ಶನ ಮಾಡಿ, ಲೇಖನ‌ ಮಾಡಿದ್ದೆ. (ಅದು ನನ್ನ ಹೆದ್ದಾರಿ‌ ಕವಲು ಸಂಕಲನದಲ್ಲಿದೆ.) ಅವರ ಜೊತೆ ಉತ್ತಮ ಸಂಪರ್ಕ ಇತ್ತು. ಅನೇಕ ಧರಣಿಗಳಲ್ಲಿ… ಸ್ವಾತಂತ್ರ್ಯ ಉದ್ಯಾನವನ, ಟೌನ್ ಹಾಲ್, ಗಾಂಧಿ ಪ್ರತಿಮೆ ಎದುರು… ಹೀಗೆ ಹಲವೆಡೆ ಜೊತೆ ಭಾಗವಹಿಸಿದ್ದೇವೆ. ದೊರೆಸ್ವಾಮಿ ಅವರು‌ ಲೇಖಕರು ಹಾಗೂ ಪ್ರಕಾಶಕರೂ ಆಗಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ ರಚನೆಯಾಗಿ ಒಂದು ದಶಕವೂ ಆಗಿರಲಿಲ್ಲ.‌ ಅದರ ಕಚೇರಿ ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಪುಸ್ತಕ ಮಾರಾಟ ಮಳಿಗೆಯ ಭಾಗದಲ್ಲಿತ್ತು. ಆಗ ಕೆಲವು ನೂನ್ಯತೆಗಳು ತಲೆದೋರಿ, ಲೇಖಕ/ಪ್ರಕಾಶಕರ ಪುಸ್ತಕ ಖರೀದಿಗೆ ಕೊಕ್ಕೆ ಹಾಕಲಾಗಿತ್ತು. ಆ ಸಂದರ್ಭ  ಪ್ರಾಧಿಕಾರದ ವಿರುದ್ಧ ಪ್ರತಿಭಟನೆಯನ್ನು ಕಚೇರಿ ಎದುರೇ ಹಮ್ಮಿಕೊಳ್ಳಲಾಯಿತು. ಪ್ಲೇ ಕಾರ್ಡು ಹಿಡಿದು ದೊರೆಸ್ವಾಮಿ ಮೊದಲು ಕೂತರು. ಅವರ ಜೊತೆ ಎ.ಎಸ್. ಮೂರ್ತಿ, ಡಾ. ವಿಜಯಾ, ಡಾ. ಲಕ್ಷ್ಮಿನಾರಾಯಣಭಟ್ಟ, ಪ್ರೊ. ಎಂ.ಎಚ್. ಕೃಷ್ಣಯ್ಯ, ನಾನು ಮೊದಲ್ಗೊಂಡು ಹತ್ತಾರು ಲೇಖಕರು ಪ್ರತಿಭಟನೆ ಮಾಡಿದೆವು. ಎಚ್ಚೆತ್ತ ಪ್ರಾಧಿಕಾರ ಸರ್ಕಾರದ ಮೊರೆಹೋಗಿ, ತಿಂಗಳಲ್ಲೇ ಪುಸ್ತಕ ಖರೀದಿಗೆ ವ್ಯವಸ್ಥೆ ಮಾಡಿತು. ಗೆಲುವಿನ ಇಂಥ ಎಷ್ಟೋ ನಿದರ್ಶನಗಳಿವೆ. ಅವರದ್ದು ಸದಾ ಜನಪರ ಕಾಳಜಿ. ಭ್ರಷ್ಟಾಚಾರದ ವಿರುದ್ಧ ಮೊದಲ ದನಿ. ಸುಳ್ಳು, ಕಪಟ, ವಂಚನೆ ಅವರಿಗಾಗದು. ಅವರೊಬ್ಬ ನಿಷ್ಠುರವಾದಿ. ಮಾತು ಖಡಕ್. ರಾಜಿಯಾಗದ ಮನಸ್ಸು. ಪ್ರಾಮಾಣಿಕವಾಗಿದ್ದವರ ಜೊತೆ ಅವರ ಸ್ನೇಹ. ಅದರಲ್ಲೂ ಯುವಕರ ಬಗ್ಗೆ ಅಪಾರ ಪ್ರೀತಿ, ಕಾಳಜಿ. ವೇದಿಕೆಯಲ್ಲಿ ನಿಂತು, (ಈಚೆಗೆ ಕುಳಿತು) ಮೈಕ್ ಹಿಡಿದರೆ ನಿರರ್ಗಳವಾಗಿ ಮಾತಾಡುತ್ತ ಭ್ರಷ್ಟರೆಲ್ಲರ ಜಾತಕ ಬಿಚ್ಚಿಡುತ್ತಿದ್ದರು. ಅವರು ಪ್ರತಿದಿನ ಹತ್ತಾರು ಪತ್ರಿಕೆ ಓದುತ್ತಿದ್ದರು. ಪುಸ್ತಕಗಳ ಅಧ್ಯಯನ ಮಾಡುತ್ತಿದ್ದರು. ಅವರೊಬ್ಬ ನಿಜವಾದ ಪ್ರಜಾಪ್ರಭುತ್ವವಾದಿ ಹೋರಾಟಗಾರರು. ಸ್ವಾತಂತ್ರ್ಯ ಹೋರಾಟದಲ್ಲಿ‌ ಭಾಗವಹಿಸಿದವರು. ಭೂಗತರಾಗಿ (ಈಗಿನ ಆಂಧ್ರದ) ಆಧೋನಿಯಿಂದ “ಪ್ರಜಾಧ್ವನಿ” ಎಂಬ ಪತ್ರಿಕೆ ಅಚ್ಚುಹಾಕಿ, ಬ್ರಿಟಿಷರ ವಿರುದ್ಧ ಕಹಳೆ ಊದಿದವರು. ಅನ್ಯಾಯ ಎಲ್ಲಿ ನಡೆಯುತ್ತೋ ಅಲ್ಲಿ ಅವರ ದನಿ. ಪ್ರತಿಭಟನೆ, ಧರಣಿ ಬಂಧನ, ಜೇಲು ಅವರ ಬದುಕಿನ ಭಾಗವಾಗಿತ್ತು. ಕಿರಿಯ ಹೋರಾಟಗಾರರನ್ನು ಸದಾ ಹುರಿದುಂಬಿಸುತ್ತಿದ್ದ ಹಿರಿಯ ಅಜ್ಜ ಅವರು. ಅವರಿಗೆ ಕರ್ನಾಟಕ ರತ್ನ ನೀಡಿ ಸರ್ಕಾರ ಗೌರವಿಸಬೇಕು ಎಂದು ಸಂದರ್ಶನ‌ ಮಾಡಿದ್ದ ಸಂದರ್ಭದ ಲೇಖನದಲ್ಲಿ ಬರೆದಿದ್ದೆ. ಆದರೆ, ಸರ್ಕಾರಕ್ಕೆ ಅಂಥ ಕಾಳಜಿ ಇರಬೇಕಲ್ಲ? ಅವರು, ಆಳುವ‌ ಸರ್ಕಾರಗಳ ವೈಫಲ್ಯಗಳನ್ನು ಎತ್ತಿ ತೋರಿಸಿ, ಅದರ ವಿರುದ್ಧವೇ ಪ್ರತಿಭಟನೆಯ ದನಿ ಎತ್ತುತ್ತಿದ್ದರಿಂದ  ಸರ್ಕಾರ ಮುಜುಗರಕ್ಕೆ ಒಳಗಾಗುತ್ತಿತ್ತು.   ಸರ್ಕಾರದ ವಿರುದ್ಧವಾಗೆ ಚಳವಳಿ ನಡೆಸುತ್ತಿದ್ದರಿಂದ ಸಹಜವಾಗೇ ಆಯಾ ಸರ್ಕಾರಗಳಿಗೆ ಅವರು ಅಪಥ್ಯವಾಗಿದ್ದರು. ಸರಳ‌ ಸಜ್ಜನ ಗಾಂಧಿವಾದಿ ಎಚ್ ಎಸ್ ದೊರೆಸ್ವಾಮಿ ಅವರು ಸರ್ಕಾರದ ಯಾವುದೇ ಪ್ರಶಸ್ತಿ, ಗೌರವ, ಸ್ಥಾನಮಾನ ಅಪೇಕ್ಷೆ ಪಡಲಿಲ್ಲ. ಹೀಗಾಗಿ ಅವರು ಸದಾ ನಮ್ಮ ಮನದಲ್ಲಿ ಇರುತ್ತಾರೆ ಹಾಗೂ ಜನಪರ ಚಳವಳಿಗಳಲ್ಲಿ ಜೀವಂತವಾಗಿರುತ್ತಾರೆ ಎಂದು ಭಾವಿಸುವೆ. ಅವರ ನಿಧನಕ್ಕೆ ನನ್ನ ಅಶ್ರುತರ್ಪಣ. **************

ಕನ್ನಡದ ಸಾಕ್ಷೀಪ್ರಜ್ಞೆ, ಗಾಂಧಿವಾದಿ ದೊರೆಸ್ವಾಮಿ Read Post »

ಇತರೆ

ಭಾವ ಪುಷ್ಪಗಳು

ಭಾವದ ಅನುಭಾವದ ಎತ್ತರ ಬಿತ್ತರಗಳನ್ನು ವರ್ಣಿಸಲು ಅಸಾಧ್ಯ. ಆಲದ ಮರದಂತೆ ನೂರಾರು ಸಾವಿರಾರು ವರುಷಗಳಿಂದ ಬಾಳಿ ಬಂದ ಭಾವ ಸಂಸ್ಕøತಿಯನ್ನು ಹೆಮ್ಮೆಯಿಂದ ಬೆಳೆಸೋಣ ಬೆಳೆಯೋಣ ಭಾವ ಪುಷ್ಪಗಳು ನಮ್ಮ ಎದೆಯ ಅಂಗಳದಲ್ಲಿ ನಿತ್ಯ ಅರಳಲಿ ಬದುಕು ಇನ್ನಷ್ಟು ಮತ್ತಷ್ಟು ಸುಂದರವಾಗಲಿ.

ಭಾವ ಪುಷ್ಪಗಳು Read Post »

ಇತರೆ

ಬುದ್ಧ ಪೂರ್ಣಿಮೆ

ತನ್ನ 29ನೇ ವಯಸ್ಸಿನಲ್ಲಿಯೇ ಸತ್ಯವನ್ನು ಹುಡುಕುತ್ತಾ ಪ್ರಪಂಚ ಪರ್ಯಟನೆ ಕೈಗೊಂಡ ಮಹಾನ್​ ವ್ಯಕ್ತಿ ಬುದ್ಧ. ಬಡವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವನು. ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಲೋಕಕ್ಕೆ ಸಾರಿದಾತ.

ಬುದ್ಧ ಪೂರ್ಣಿಮೆ Read Post »

ಇತರೆ

ಪರಿಸರ ಯೋಧ ಸುಂದರಲಾಲ್ ಬಹುಗುಣ..!

ಕೊರೋನ ಅಬ್ಬರದಲ್ಲಿ ಇಂತಹ ಮಹಾನ್ ಚೇತನವನ್ನು ಕಳೆದುಕೊಂಡಿರುವುದು ನಮ್ಮ ದೌರ್ಭಾಗ್ಯವೇ ಸರಿ. ಅವರ ದೇಹಕ್ಕೆ ಸಾವಾಗಿರಬಹುದು. ಆದರೆ ಅವರು ಹಾಕಿಕೊಟ್ಟ ಪರಿಸರ ಚಳವಳಿಯ ಕಾವು ನಿರಂತರವಾಗಿರುತ್ತದೆ.

ಪರಿಸರ ಯೋಧ ಸುಂದರಲಾಲ್ ಬಹುಗುಣ..! Read Post »

ಇತರೆ

ಶಾಹು ಮಹಾರಾಜ್ ಎಂಬ ಜೀವಪರ ರಾಜ

ಲೇಖನ ಶಾಹು ಮಹಾರಾಜ್ ಎಂಬ ಜೀವಪರ ರಾಜ ಆಶಾ. ಎಸ್ ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‌ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು. ಛತ್ರಪತಿ ಶಾಹು ಮಹಾರಾಜ್ ಹುಟ್ಟಿದ ಊರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್‍. ಸಾಕುತಾಯಿ ಆನಂದಿಬಾಯಿ. ತಾತ ಕಾಗಲ್ ಗ್ರಾಮದ ಪ್ರಸಿದ್ದ ವ್ಯಕ್ತಿ ಯಶವಂತರಾವ್ ಘಾಟ್ಗೆ. ಪತ್ನಿ ಲಕ್ಷೀಬಾಯಿ. ಮಕ್ಕಳು ರಾಧಾಬಾಯಿ, ೩ನೇ ರಾಜಾರಾಮ್, ಶ್ರೀಮಾನ್ ಮಹಾರಾಜಕುಮಾರ್ ಶಿವಾಜಿ ಮತ್ತು ರಾಜಕುಮಾರಿ ಅವುಬಾಯಿ. ಇವರು ವಿದ್ಯಾಭ್ಯಾಸವನ್ನು ರಾಜಕೋಟೆಯ ರಾಜಕುಮಾರ್ ಕಾಲೇಜಿನಲ್ಲಿ ಮಾಡಿದರು. ಇವರು ಮೂಲತಃ ಕುಣುಬಿ(ಕುರುಬ) ಸಮುಧಾಯಕ್ಕೆ ಸೇರಿದವರಾಗಿರುತ್ತಾರೆ. ಕೊಲ್ಲಪುರದ ಮಹಾರಾಣಿ ಆನಂಧಿಬಾಯಿರವರು ಮಾರ್ಚ್ 11, 1884ರಂದು ಶಾಹುರವರನ್ನು ದತ್ತು ಸ್ವೀಕಾರ ಮಾಡಿಕೊಳ್ಳುತ್ತಾರೆ. ಮಹಾರಾಜರ ಮೀಸಲಾತಿಯ ವಿಚಾರವನ್ನು ಬಹುತೇಕ ಬ್ರಾಹ್ಮಣರು ವಿರೋಧ ಮಾಡುತ್ತಿರುತ್ತಾರೆ, ಬೇಸೆತ್ತ ಕೆಲವು ಗೂಂಡಗಳಿಂದ ಮಹಾರಾಜರನ್ನು ಕೊಲೆ ಮಾಡುವ ಪ್ರಯತ್ನವು ನಡೆಯುತ್ತದೆ. ಶಾಹುರವರಿದ್ದ ರೈಲಿಗೆ ಬಾಂಬನ್ನು ಸಹ ಇಡಲಾಗುತ್ತದೆ ಆದರೆ ಆ ಕೊಲೆಯ ಪ್ರಯತ್ನವು ವಿಫಲವಾಗಿಬಿಡುತ್ತದೆ.  ಒಮ್ಮೆ ಮಹಾರಾಜರು ಅರಮನೆಯ ಆವರಣದಲ್ಲಿ ಗಾಳಿ ಸಂಚಾರ (walking) ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಗಣಪತಿರಾವ್ ಎಂಬ ಬ್ರಾಹ್ಮಣ ವಕೀಲ ಶಾಹುರವರನ್ನು ಕಾಣಲು ಬರುತ್ತಾರೆ ಮೀಸಲಾತಿಯ ಬಗ್ಗೆ ಚರ್ಚೆ ಮಾಡುತ್ತಾ ಅರ್ಹತೆಯಿಲ್ಲದವರಿಗೆಲ್ಲಾ ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಹಾಗೂ ಎಲ್ಲಾ ರಂಗಗಳಲ್ಲೂ ನೀವು ಮೀಸಲಾತಿ ಕೊಟ್ಟರೆ ಪ್ರತಿಭೆಗೆ ದಕ್ಕೆಯುಂಟಾಗುವುದಿಲ್ಲವೇ? ಎಂದು ಮಹಾರಾಜರನ್ನು ಪ್ರಶ್ನಿಸುತ್ತಾನೆ. ಆಗ ಶಾಹು ಮಹಾರಾಜರು ಓ ನಿಮಗೆ ಆ ರೀತಿ ಅರ್ಥವಾಗಿದೆಯೇ ಬನ್ನಿ ನನ್ನ ಜೊತೆ ಎಂದು ಆ ವಕೀಲನನ್ನು ಕರೆದುಕೊಂಡು ಸಂಚಾರ ಮಾಡುತ್ತಾ ಮಾಡುತ್ತಾ ಅರಮನೆಯ ಆವರಣದಲ್ಲಿ ಕುದುರೆಗಳನ್ನು ಕಟ್ಟಿರುವ ಜಾಗಕ್ಕೆ ತಲುಪುತ್ತಾರೆ ಅಲ್ಲಿ ಕುದುರೆಗಳನ್ನು ಗುಂಪು ಗುಂಪುಗಳಾಗಿ ಮಾಡಿ ಮೇವನ್ನು ಹಾಕಲಾಗಿರುತ್ತದೆ. ಇದನ್ನು ಗಮನಿಸಿದ ಮಹಾರಾಜರು ಯಾರಲ್ಲಿ ಈ ಕುದುರೆಗಳನ್ನು ಕಟ್ಟಿದವರು ಎಂದಾಗ ಸ್ಥಳದಲ್ಲೇ ಇದ್ದ ಕುದುರೆಗಳನ್ನು ನೋಡಿಕೊಳ್ಳುವವನು ನಾನೇ ಪ್ರಭು ಎನ್ನುತ್ತಾನೆ. ಆಗ ಮಹಾರಾಜರು ಅವನನ್ನು “ಏನಯ್ಯ ನಿನಗೆ ಬುದ್ಧಿ ಇದೆಯಾ? ಕುದುರೆಗಳನ್ನು ಏಕೆ ಈ ರೀತಿ ಗುಂಪುಗುಂಪುಗಳನ್ನಾಗಿ ವಿಂಗಡನೆ ಮಾಡಿ ಬೇರೆ ಬೇರೆ ಕಡೆ ಮೇವನ್ನಕಿದ್ದೀಯಾ? ಎಲ್ಲಾ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬಹುದಾ ಗಿತ್ತಲ್ಲವೇ? ಎಂದು ಪ್ರಶ್ನಿಸಿ ಜೊತೆಯಲ್ಲಿದ್ದ ವಕೀಲನನ್ನು ಕೇಳುತ್ತಾರೆ ಗಣಪತಿರಾವ್ ರವರೇ ನಾನು ಕೇಳಿದ್ದು ಸರಿ ತಾನೆ? ಎಂದಾಗ ಆ ವಕೀಲ ಹೌದು ಮಹಾರಾಜರೇ ನೀವು ಕೇಳಿದ್ದು ಸರಿಯಾಗಿದೆ. ಅವನು ಆ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬೇಕಿತ್ತು ಎನ್ನುತ್ತಾನೆ. ಆಗ ಸೇವಕನು ಮಹಾರಾಜರ ಪ್ರಶ್ನೆಗಳನ್ನು ಉದ್ದೇಶಿಸಿ “ಮಹಾರಾಜರೇ ಈ ಕುದುರೆಗಳಲ್ಲಿ ಕೆಲವು ವಯಸ್ಸಾಗಿರುವ ಕುದುರೆಗಳಿವೆ, ಗಾಯಗಳಾಗಿ ಪೆಟ್ಟು ಮಾಡಿ ಕೊಂಡಿರುವ ಕುದುರೆಗಳಿವೆ, ಸಣ್ಣ ಪ್ರಾಯದ ಕುದುರೆಗಳಿವೆ ಹಾಗೂ ದಷ್ಟಪುಷ್ಟವಾದ ಬಲಿಷ್ಟವಾಗಿರುವ ಕುದುರೆಗಳಿವೆ ಈ ಎಲ್ಲಾ ಕುದುರೆಗಳನ್ನು ಒಂದೇ ಕಡೆ ಸೇರಿಸಿ ಮೇವನ್ನಾಕಿದರೆ ಯಾವ ಕುದುರೆಗಳಿಗೆ ಹೆಚ್ಚು ಶಕ್ತಿ ಇದೆಯೋ ಅಂದರೆ ದಷ್ಟಪುಷ್ಟವಾದ ಕುದುರೆಗಳು ಮೇವೆಲ್ಲಾ ತಿಂದು ಬಿಡುತ್ತವೆ. ಆಗ ವಯಸ್ಸಾದ ಕುದುರೆಗಳಿಗೆ, ಗಾಯಗಳಾಗಿರುವ ಕುದುರೆಗಳಿಗೆ, ಸಣ್ಣ ಪ್ರಾಯದ ಕುದುರೆಗಳಿಗೆ ಮೇವು ಸಿಗದೇ ದುರ್ಬಲವಾಗಿ ಹಸಿವಿನಿಂದಲೇ ಸತ್ತು ಹೋಗುತ್ತವೆ. ಆದ್ದರಿಂದ ವಯಸ್ಸಾದ ಕುದುರೆಗಳಿಗೆ ಒಂದು ಕಡೆ, ಸಣ್ಣ ಪ್ರಾಯದ ಕುದುರೆಗಳಿಗೆ ಒಂದು ಕಡೆ, ಗಾಯಗೊಂಡಿರುವ ಕುದುರೆಗಳಿಗೆ ಒಂದು ಕಡೆ, ಬಲಿಷ್ಟ ಕುದುರೆಗಳಿಗೊಂದು ಕಡೆ ಮೇವನ್ನಾಕಿದ್ದೇನೆ ಆಗ ಎಲ್ಲಾ ಕುದುರೆಗಳಿಗೂ ಮೇವು ಸಿಗುತ್ತದೆ” ಎಂದು ಉತ್ತರಿಸುತ್ತಾನೆ. ಆಗ ಆ ಬ್ರಾಹ್ಮಣ ವಕೀಲನಿಗೆ ಮೀಸಲಾತಿಯ ಬಗ್ಗೆ ಅರ್ಥವಾಗಿ “ಮಹಾರಾಜರೇ ದಯವಿಟ್ಟು ಕ್ಷಮಿಸಿ ಈಗ ನಿಮ್ಮ ಮೀಸಲಾತಿಯ ಬಗ್ಗೆ ನನಗೆ ಸಂಪೂರ್ಣವಾಗಿ ಅರ್ಥವಾಯಿತೆಂದು” ಅಲ್ಲಿಂದ ಹೊರಟುಹೋಗುತ್ತಾನೆ. ********************

ಶಾಹು ಮಹಾರಾಜ್ ಎಂಬ ಜೀವಪರ ರಾಜ Read Post »

ಇತರೆ

ಶಾಲಾ journey

ಅಂದು ಹೊಡೆದು, ಬೈದು ನನ್ನನ್ನು ಶಾಲೆಗೆ ಸೇರಿಸಲು ಜೊತೆಗಿದ್ದ ಏಳರಲ್ಲಿ ಐದು ಜನ ಈಗಿಲ್ಲ. ಆದರೆ ಒದೆ ತಿಂದ ಪುಣ್ಯವಂತೆ ನಾನು, ನನಗೆ ಪ್ರತಿಯೊಬ್ಬರ ಬಗ್ಗೆಯೂ ಗೌರವ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ.

ಶಾಲಾ journey Read Post »

You cannot copy content of this page

Scroll to Top