ಧಾರಾವಾಹಿ ಸಂಗಾತಿ- ಒಂಭತ್ತು ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಭಾಗ- ಒಂಬತ್ತುಜಯದೇವಿ ತಾಯಿಯ ಜೀವನ ವೃತ್ತಾಂತ ಜಯದೇವಿ ತಾಯಿಯವರ ಒಂದು ಅಪೂರ್ಣ ಕನಸು ……ನನಸಾಗಿತ್ತು…!!ಕಷ್ಟ ಕಾರ್ಪಣ್ಯಗಳನ್ನು ಮೌನವಾಗಿ ಸಹಿಸುತಮನದಾಳದ ಕಿಚ್ಚಿನಲಿ ಮಂಥನಗೊಂಡು ಉಲ್ಬಣಗೋಳ್ಳುತ್ತಿದ್ದ ಭಾವನೆಗಳನ್ನು ಮೊದಲ ಬಾರಿಗೆ ಕನ್ನಡ ಭಾಷೆಲ್ಲಿ ಬರೆದಾಗ ಆದ ಆನಂದ ಹೇಳತಿರದಾಗಿತ್ತು…..,!!. ಕನ್ನಡ ನುಡಿಗಳು ಅವರಿಗೊಂದು ಹೊಸ ಲೋಕದ ಬಾಗಿಲು ತೆರೆದವು. ವರ್ಷಗಳ ಕಾಲ ಮನದೊಳಗೆ ಸಂಗ್ರಹವಾಗಿದ್ದ ನಿಶ್ಶಬ್ದ ನೋವುಗಳು, ಪ್ರಾರ್ಥನೆಗಳು,ಮಾತನಾಡಲಾಗದ ಮಾತುಗಳು ಪದಗಳಾಗಿ ಹರಿಯಲಾರಂಭೀಸಿದವು….!! ಅವರು ಕನ್ನಡವನ್ನು ಅಪ್ಪಿಕೊಂಡದ್ದು ಕೇವಲ ಕಲಿಕೆಯ ಕಥೆಯಲ್ಲ,ಇದು ಸಾಹಿತ್ಯ ಲೋಕದ ವಿಜಯಗಾಥೆ! ಹೊಸ ಬೆಳಗಿನ ಉದಯ ಗಾಥೆ..!! ಕನ್ನಡ ಭಾಷೆಯನು ಗಾಢವಾಗಿ ಪ್ರೀತಿಸುತ್ತ….ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಮಹಿಳಾ ಅಧ್ಯಕ್ಷರಾಗಿ ನಡೆದರು ಕರ್ನಾಟಕ ವಿಶ್ವವಿದ್ಯಾಲಯವೇ ಅವರ ಬಳಿ ಬಂದು ಡಾಕ್ಟರೇಟ್ ಪದವಿಯನ್ನು ಕೊಡಮಾಡಿತು. ಸರ್ವಜ್ಞ ನಂತರ ಪ್ರಥಮ ಬಾರಿಗೆ ತ್ರಿಪದಿಯಲ್ಲಿ ಪುರಾಣವನ್ನು ನಿರ್ಮಿಸಿದರು… ಕನ್ನಡ ಸರಸ್ವತ ಲೋಕದ ಅನಘ್ನ ರತ್ನರಾಗಿ ಖ್ಯಾತಿ ಪಡೆದುಕೊಂಡವರು. ಕನ್ನಡ ಭಾಷೆಯನ್ನು ಕಲಿತ ಜಯದೇವಿ ತಾಯಿಯವರು ಅತ್ಯಂತ ವೇದಾವಿ ಭಾಷಣಕಾರ್ತಿಯಾಗಿ ಹೊರಹೊಮ್ಮಿದರು. ನಾಡಿನ ಮೂಲೆ ಮೂಲೆಗಳಿಂದ ಸುತ್ತಮುತ್ತಲು ಹಳ್ಳಿಗಳಿಂದ ಅವರಿಗೆ ಅವ್ಹಾನ ಬರಲು ಆರಂಭಿಸಿತು . ತಮ್ಮ ಮಾತುಗಳಿಂದ ಜನರ ಮನವನ್ನು ಪರಿವರ್ತಿಸಲಾರಂಭಿಸಿದರು. ಜೊತೆ ಜೊತೆಗೆಪತಿ ಮತ್ತು ಅತ್ತೆ ಸಂತಸದಿಂದ ಸಹಕರಿಸಲಾರಂಭಿಸಿದರು. ಸರಸ್ವತಿ ಮಂದಿರ ಸ್ಥಾಪನೆಯೊಂದಿಗೆ ಸ್ತ್ರೀಯರಿಗೆ ಶಿಕ್ಷಣ ಕೊಡಲು ಸೊಲ್ಲಾಪುರದಲ್ಲಿ ಪ್ರಾರಂಭಿಸಿದ್ದು.. ಅದು ಮಂದಗತಿಯಲ್ಲಿ ನಡೆದಿತ್ತು….ಆದರೆ ಜಯದೇವಿ ತಾಯಿಯವರು ಅಧ್ಯಕ್ಷತೆಯನ್ನು ವಹಿಸಿದ ಮೇಲೆ ಮೊದಲು ಸ್ತ್ರೀ ಶಿಕ್ಷಣದ ಅವಶ್ಯಕತೆಯನ್ನು ಹೆಚ್ಚು ಒತ್ತು ಕೊಡಲಾರಂಭಿಸಿದರು. ಅವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ *ಒಂದೆರಡು ಭಾಷೆಗಳನ್ನು ಮಾತನಾಡಲು ಕಲಿಯುವುದು ಮಾತ್ರವಲ್ಲ ನಿತ್ಯ ಜೀವನದಲ್ಲಿ ಉಪಯೋಗವಾಗುವಂತಹ ಗೃಹ ಜ್ಞಾನ..ಸಾಯನ್ಯಕಲಿಕಯೊಂದಿಗೆ …,ಉಚ್ಚ ಶಿಕ್ಷಣವು ಮಹಿಳೆಗೆ ಸಿಗಬೇಕು. ಇಂಗ್ಲೀಷರು ತಮ್ಮ ಅನುಕುಲಕ್ಕೆ ಹಾಕಿದ ಗಿಳಿ ಪಾಠದ ಪದ್ಧತಿಯ ಶಾಲೆ ಬದಲಾಗಬೇಕು. ಸುಸಂಸ್ಕೃತ ಜೀವನ ನಡೆಸುವಂತಹ ಶಿಕ್ಷಣ ಸಿಗಬೇಕು. ಜೀವನದ ಎಲ್ಲಾ ಹಂತಗಳ ಅಧ಼ಃಪತನಕ್ಕೆ ಕಾರಣವಾದ ಅಜ್ಞಾನವನ್ನು ಹೊಡೆದು ಓಡಿಸಲು …..ಸಾಕ್ಷರತೆಯ ಅಸ್ತ್ರದಿಂದಲೇ ಸಾಧ್ಯ. ಹಸಿರು ಕ್ರಾಂತಿ ಹೊಟ್ಟೆಯ ಹಸಿವನ್ನು ಹಿಂಗಿಸಿದರೆ ಅಕ್ಷರದ ಕ್ರಾಂತಿಯು ಬುದ್ಧಿ ಹಸಿವನ್ನು ಅಡಗಿಸುವದೆಂದು*ಅಭಿಪ್ರಾಯ ಪಡುತ್ತಿದ್ದರು. 1930ರ ಸಮಯದಲ್ಲಿ ಸೊಲ್ಲಾಪುರದ ಕೋರ್ಟ್ ಮಾರ್ಷಲ್ ನಡೆದಿತ್ತು… ಹಲವಾರು ಜನರು ಬ್ರಿಟಿಷರ ಗುಂಡಿಗೆ ಬಲಿಯಾಗಿದ್ದರು. ಇದರಲ್ಲಿ ಮಹಿಳೆಯರು ಸೇರಿದ್ದರು. ಎಲ್ಲಿ ನೋಡಿದರಲ್ಲಿ ಅಸಹಕಾರ ಚಳುವಳಿಗೆ ಸಂಬಂಧಿಸಿದ ಗಲಭೆ ನಡೆದಿದ್ದವು . ಇಬ್ಬರು ಪೊಲೀಸರು ಹತರಾಗಿದ್ದರೆಂದರೆ ಕೇಳಬೇಕೆ.,… ಬ್ರಿಟಿಷರ ಕ್ರೌರ್ಯವೂ ಹೇಳತೀರದಾಗಿತ್ತು . ಧನಶೆಟ್ಟಿ ಹಾಗೂ ಇನ್ನು ಮೂರು ಜನರ ಮೇಲೆ ಮೊಕದಮೆ ಹುಡಿ ಗಲ್ಲಿಗೆರಿಸಲಾಗಿತ್ತು.ಈ ಶಿಕ್ಷೆಯನ್ನು ವಿರೋಧಿಸಿ ಪುಣೆ ಮುಂಬೈ, ಕನ್ನಡ ನಾಡಿನಲ್ಲಿಯೂ ಪ್ರತಿಭಟನೆಗಳು, ಉಪವಾಸ ಸತ್ಯಾಗ್ರಹಗಳು ನಡೆದಿದ್ದವು. ಈ ಹೋರಾಟಗಳಲ್ಲಿ ಜಯದೇವಿ ತಾಯಿಯವರ ತಾಯಿ ಸಂಗವ್ವನ ಜೊತೆ ತಾಯಿಯವರು ಬೆಂಬಲಿಸಿ ಉಗ್ರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 1932 ರಲ್ಲಿ ಬ್ರಿಟಿಷ್ ಸೈನಿಕರು ರಾಷ್ಟ್ರಧ್ವಜವನ್ನು ಅಪಮಾನಿಸಿದ್ದರಿಂದ ದ್ವಜ ಸತ್ಯಾಗ್ರಹ ನಡೆದು ಅಲ್ಲಿ ದೇಶದ ವಿವಿಧ ಪ್ರಾಂತಗಳ ಜನರು ಸೇರಿದ್ದರು ಅಲ್ಲಿ ನಡೆದ ಗಲಿಬಿಯಲ್ಲಿ ನೂರಾರು ಜನ ಕನ್ನಡಿಗರು ಬಂದಿತ್ತರಾಗಿದ್ದರು. ಈ ಸಂಘಟನೆಯು ಆರಂಭದಲ್ಲಿ ಹೆಚ್ಚಾಗಿ ಪುರುಷರೇ ಪಾಲ್ಗೊಳ್ಳುತ್ತಿದ್ದು ರಾಷ್ಟ್ರದ ಹಿತಕ್ಕಾಗಿ ಹೋರಾಡುವ ಮಹಿಳೆಯರಿಗೆ ಒಂದು ನಿರ್ದಿಷ್ಟವಾದ ಸಂಘಟನೆ ಇರ್ಲಿಲ್ಲ ನಂತರ ಮಹಿಳೆಯರನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳಲು ಜಯದೇವಿತಾಯಿ ಹಾಗೂ ಇನ್ನಿತರರು ರಾಷ್ಟ್ರೀಯ ಚಳುವಳಿ ತರಬೇತಿ ನೀಡುವ ಗುರಿಯನ್ನು ವಿಸ್ತರಿಸಿದರು . 1934ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷಣೆಯಾಗಿ ಹೋದರು. 1939 ರಲ್ಲಿ ಜಯದೇವಿ ತಾಯಿಯವರು ವೀರಶೈವ ಮಹಾಸಭೆಯ ಮಹಿಳಾ ಪರಿಷತ್ತಿನ ಅಧ್ಯಕ್ಷರಾದರು 1938 ರಲ್ಲಿ ಜಯದೇವಿ ತಾಯಿಯವರು ಸೊಲ್ಲಾಪುರ .ಹುಬ್ಬಳ್ಳಿ ಧಾರವಾಡಗಳಲ್ಲಿ ಅಕ್ಕನ ಬಳಗವನ್ನು ಸ್ಥಾಪಿಸಿದರು ಆ ಮೂಲಕ ಶರಣರ ವಿಚಾರಧಾರೆಯನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಪ್ರಾರಂಭಿಸಿದರು. ಶರಣರ ಸಾಹಿತ್ಯಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾ ಸಮಾಜದವರೊಂದಿಗೆ ಅದನ್ನು ತಿಳಿಹೇಳುತ್ತ ಅನುಭವ ಪಥದಲ್ಲಿ ಸಾಗಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ರಾಷ್ಟ್ರದ ಆಗು-ಹೋಗುಗಳ ಅರಿವು ಮೂಡಿಸಿ ರಾಷ್ಟ್ರೀಯತೆಯನ್ನು ಉತ್ತೇಜಿಸಲು ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡವು. ಜಯದೇವಿಯವರು ಮಹಿಳೆಯರ ಹೋರಾಟಕ್ಕೆ ಬೆಂಬಲಿಸಲು 1947ರಲ್ಲಿ ತಮ್ಮ ಮನೆಯಾದ ಜಯನಿಕೀತನದಲ್ಲಿ ಸೇವಾ ದಳದ ಪ್ರೌಢ ಶಾಖೆಯನ್ನು ಆರಂಭಿಸಿದರು. ಎರಡನೆ ಮಹಾ ಯುಧ್ಧದ ಸಂದರ್ಭದಲ್ಲಿ ಬ್ರಿಟಿಷರಿಗೆ ಸೈನಿಕರ ಅವಶ್ಯಕತೆ ಎದುರಾದಾಗ ದೇಶದಾದ್ಯಂತ ಬೆಟಾಲಿಯನ್ ಕಟ್ಟಲು ಜನರನ್ನು ಮತ್ತು ಪ್ರಮುಖರನ್ನು ಪ್ರೋತ್ಸಾಹಿಸುತ್ತಿದ್ದರು. ಇದರ ಪರಿಣಾಮವಾಗಿ ವಾರದ ಮಲ್ಲಪ್ಪನವರಿಗೆ ರಾವ್ ಬಹದ್ದೂರ್ ಪದವಿ ಕೊಟ್ಟರೆ….ಮಡಿಕೆ ಚನ್ನಬಸಪ್ಪನವರಿಗೆ ಮ್ಯಾಜಿಸ್ಟ್ರೇಟ್ ಪದವಿಯನ್ನು ಕೊಟ್ಟರು. ಸೊಲ್ಲಾಪುರದಲ್ಲಿ ಲಿಂಗಾಯತರು ಹೆಚ್ಚು ಇರುವುದರಿಂದ ಲಿಂಗಾಯತ ಬೆಟಾಲಿಯನ್ ಕಟ್ಟಲು ಪ್ರೇರೇಪಿಸಿದರು ಬ್ರಿಟಿಷರು .ಅಲ್ಲಿಯ ಸ್ಥಳೀಯ ಮುಖಂಡರಾದ ವಾರದ, ಮಡಕಿ ಲಿಗಾಡೆ,ತಂಬಾಕಿ ಮನೆತನಗಳ ಮೇಲೆ ಒತ್ತಾಯ ಬೀರಲು ಪ್ರಯತ್ನಿಸಿದರು. ಅದೇ ರೀತಿಯಾಗಿ ಲಿಗಾಡೆ ಅವರ ಆಸ್ತಿಯ ಮೇಲೆ ಋಣ ಭಾರ ಹೇರಿದ್ದೇವೆಂದು ಇದಕ್ಕಾಗಿ ಜಯದೇವಿ ತಾಯಿಯವರು ತಮ್ಮ ಕೆಲಸಕ್ಕೆ ಸಹಕರಿಸಬೇಕೆಂದು ಕೇಳಿಕೊಂಡರು.ಅಂದಿನ ದಿನಗಳಲ್ಲಿ ಪ್ರಭಾವಿ ಭಾಷಣ ಕಾರ್ತಿ ,ಪ್ರಸಿದ್ಧಸಮಾಜ ಸೇವೆವಕಿಯಾದ ತಾಯಿಯವರು ಲಿಂಗಾಯತರನ್ನು ಇಂಗ್ಲಿಷ್ ಸೇನಾ ಪಡೆಗೆ ಸೇರಿಸಲು ಹುರಿದುಂಬಿಸುವಂತೆ ಭಾಷಣ ಮಾಡಲು ಕೇಳಿಕೊಂಡರು…… ಬ್ರಿಟಿಷ್ ಸರ್ಕಾರವು ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರಿಗೆ ವ್ಯಾಪಾರದ ಋಣಭಾರ ಕಡಿಮೆ ಮಾಡುವುದಾಗಿ ಆಮಿಷೆ ಒಡ್ಡಿತು…. ಪತ್ನಿ ಜಯದೇವಿ ತಾಯಿಯವರು ಲಿಂಗಾಯೆತರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರುವಂತೆ ಪ್ರಯತ್ನಿಸುವಂತೆ ಕೇಳಿಕೊಂಡರು….. ಕೊನೆಗೆ ಲಿಂಗಾಯೆತರನ್ನು ಸಂಘಟಿಸಲೇಬೇಕೆನ್ನುವ ಆದೇಶವಿತ್ತರು ..!!!! ಚನ್ನಮಲ್ಲಪ್ಪನವರಿಗೆ ಚೆನ್ನಾಗಿ ಗೊತ್ತಿತ್ತು ….. ಬಲಾಡ್ಯ ಬ್ರಿಟಿಷರ ವಿರುದ್ಧ ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ … ದೇಶಪ್ರೇಮವೆನೋ ನಿಜ…..ದೇಶ ಸ್ವಾಭಿಮಾನ ,ದೇಶಮಾತೆಗಾಗಿ ಬಲಿದಾನ-ತ್ಯಾಗ ಇವೆಲ್ಲ ದುಷ್ಟ ಬ್ರಿಟಿಷರ ಎದುರು ನಿರರ್ಥಕ … ಬ್ರಿಟಿಷರ ಬಲದ ಎದುರು ನಾವು ತೃಣ ಸಮಾನರು ವಿವೇಕತನವೆಂದರೆ ನಮ್ಮ ವ್ಯಾಪಾರವನ್ನು ನಮ್ಮ ಮನೆತನವನ್ನು ಉಳಿಸಿಕೊಳ್ಳುವುದರಲ್ಲಿ ಜಾಣತನವಿರುವದು ಇಲ್ಲದ್ದಿದರೆ ಹೇಳು ಹೆಸರಿಲ್ಲದಂತೆ ನಾಶವಾಗಿ ಹೋಗುವುದು ಖಚಿತ ಅನ್ನೋದು ದೃಢವಾಗಿ ನಂಬಿದವರು….ಹೀಗಾಗಿ ವೈಯಕ್ತಿಕ ಹಿತಾಸಕ್ತಿಯುತರಾಗಿದ್ದರು, ತನ್ನ ವ್ಯಾಪಾರದತ್ತ ಹೆಚ್ಚು ಗಮನವನ್ನು ಕೊಡುತ್ತಿದ್ದರು. ಹಾಗೆ ಜಯದೇವಿತಾಯಿಯವರಿಗೆ ಸೈನ್ಯ ಕಟ್ಟುವುದಕ್ಕಾಗಿ ಕೇಳಿಕೊಂಡಿದ್ದರು ಕೂಡಾ ಪತಿ ಚೆನ್ನಲ್ಲಪ್ಪನವರು. ಬ್ರಿಟಿಷರು ಜಯದೇವಿ ತಾಯಿಯವರಿಗೆ ಕೇಸರಿ-ಇ- ಹಿಂದ್ ಪದವಿಯನ್ನು ಕೊಡುವುದಾಗಿ ಮುಂದೆ ಬಂದರು. ಇದ್ಯಾವದಕ್ಕೂ ಅವರು ವಿಚಲಿತರಾಗಲಿಲ್ಲ. ಅದಕ್ಕಾಗಿ ದೊಡ್ಡ ಮೊತ್ತದ *ವಾರ್ ಫಂಡ*ನ್ನು ಕಟ್ಟಬೇಕಾಯಿತು. ಮನೆಯವರ ಯಾವ ಒತ್ತಡಕ್ಕೂ ಮಣಿಯದ ತಾಯಿಯವರು ರಾಷ್ಟ್ರೀಯ ಪ್ರೇಮ ಅಚಲವಾಗಿತು.. ಬ್ರಿಟಿಷರ ಆಮಿಷದ ಪ್ರಸ್ತಾವನೆ, ಹೊರಗೆ ನೋಡಲು ಗೌರವದ ಹೊದಿಕೆ ಹೊದ್ದಿದ್ದರೂ, ಒಳಗೆ ದೇಶದ ಏಕತೆಯನ್ನು ಕುಗ್ಗಿಸುವ ಕುಯುಕ್ತಿಯೇ ಆಗಿತ್ತು…!!ಆ ಕ್ಷಣದಲ್ಲಿ ಜಯದೇವಿ ತಾಯಿಯವರು ಮೌನವಾಗಿರಲಿಲ್ಲ.ಅವರಲ್ಲಿ ಹೊತ್ತಿ ಉರಿದದ್ದು ರಾಷ್ಟ್ರಪ್ರೇಮದ ಜ್ವಾಲೆ.“ಕೇಸರಿ-ಇ -ಹಿಂದ್” ಎಂಬ ಹೆಸರಿನಲ್ಲಿ ಅವರ ಗುಲಾಮರನ್ನಾಗಿ ಮಾಡಿಕೊಳ್ಳುವ ಹುನ್ನಾರ ಕುತಂತ್ರ ಅರಿತವರಾಗಿದ್ದರು. ದೇಶದ ಧ್ವಜಕ್ಕೆ ತೋರುವ ಆದರವು ತ್ಯಾಗದ ಸಂಕೇತ, ಧೈರ್ಯದ ಪ್ರತೀಕ, ತಾಯ್ನಾಡಿನ ಗೌರವ.ಬ್ರಿಟಿಷರು ಅಧಿಕಾರದ ಸಿಂಹಾಸನವನ್ನು ತೋರಿಸಿದರು,ಸ್ಥಾನಮಾನಗಳ ಸಿಹಿ ಮಾತುಗಳನ್ನು ಹೇಳಿದರೂ ತಾಯಿಯ ಹೃದಯಕ್ಕೆ ಕೇಳಿಸಿಕೊಂಡದ್ದು ಒಂದೇ ಶಬ್ದ —“ಭಾರತಮಾತೆಯ ಹಿತಾಸಕ್ತಿ….“ನನ್ನ ದೇಶದ ಏಕತೆಯನ್ನು ಮಸುಕುಗೊಳಿಸುವ ಯಾವ ಒಪ್ಪಂದಕ್ಕೂ ನಾನು ಸಮ್ಮತಿಸುವುದಿಲ್ಲ,”ಎಂದು ಅವರು ಅಟಲ ಧೈರ್ಯದಿಂದ ಹೇಳಿದರು. ಆ ನಿರಾಕರಣೆ ಸಾಮಾನ್ಯ ಪದವಿರೋಧವಲ್ಲ —ಅದು ಮಣ್ಣಿನ ಮಗಳು ತನ್ನ ತಾಯ್ನಾಡಿಗೆ ಕೊಟ್ಟ ಶಪಥ.ಆ ದಿನ ಅವರು ಆಮಿಷವನ್ನು ತಳ್ಳಿಹಾಕಿದಾಗ,ದೇಶಪ್ರೇಮಿಗಳು ಸಾಕ್ಷಿಯಾಗಿ ನಿಂದರು. ಅವರ ಎತ್ತಿದ ಧ್ವನಿಯಲ್ಲಿ ರಾಷ್ಟ್ರಪ್ರೇಮವು ಘೋಷವಾಗಿ ಪ್ರತಿಧ್ವನಿಸಿತು.ಅವರು ತೋರಿಸಿದ ಧೈರ್ಯ —ನಿಜವಾದ ದೇಶಭಕ್ತಿ ….ಹೃದಯದ ಆಳದಿಂದ ಹೊರಹೊಮ್ಮುವ ನಿಷ್ಠೆ; ಧೇಶಮಾತೆಗೆ ತೋರಿದ ಗೌರವ. . *ಬ್ರಿಟಿಷರ ಇಂಥ ಆಸೆ ಆಮಿಷಕ್ಕೆ ಒಳಗಾಗದೆ ಜಾತಿಯ ಹೆಸರಿನಲ್ಲಿ ಸೇನೆ ಕಟ್ಟುವುದು ದೇಶದ ಅಹಿತಕ್ಕೆ ಕಾರಣವಾಗುವುದೆಂದು…ಯಾವುದೇ ಭೀತಿಗೂ ತಲೆಬಾಗಲಿಲ್ಲ. ಬ್ರಿಟಿಷರ ಪ್ರತ್ತಸ್ಸಾವನೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರು . *ನಡೆಯಣ್ಣ ಇಡು ಹೆಜ್ಜೆ ಮುಂದೆ ದೃಢತನದಿಂದೆ!! ಕದಳಿಯ ಬನಹೊಕ್ಕು ಚಣ ಮಜಗಜದ ತಾಣಎದುರಿಗೆ ಬರುವದು ಕಾಡಕೋಣ ತೆಗೆಯಲು ಪ್ರಾಣ ಕದಡಿಯ ಎಂಟು ದಿಕ್ಕು ಎಂಟಾನೇಗಳ ಸೊಕ್ಕು ಕಾನನದೊಳಗೆ ಪಕ್ಕು ಮುರಿಯಬೇಕಾದರೆ ಸೊಕ್ಕುಹೀಗೆ ಬ್ರಿಟಿಷರ ಸೊಕ್ಕನ್ನು ಮುರಿಯಬೇಕು ಅನ್ನುವ ಕರೆಯನ್ನು ಸಾರ್ವಜನಿಕರಿಗೆ ಕೊಡುತ್ತಿದ್ದರು *ನಡೆದಾರಿಗೆ ಅಡ್ಡ ಬಂದಿತಣ್ಣ ಹೆಡೆ ತೆಗೆದಾಚಣ ಬಿಡುವದು ತನ್ನು ಕೆಂಪುಗಣ್ಣ ಅದುವೆ ನಾಗಣ್ಣ ನಂಜೀನ ಅಂಜಿಕೆ ಹೊಲ್ಲ ಕೆಂಜೆಡೆಯವನ ಚಲ್ವ ಸಂಜೀವನಿ ಮದ್ದು ಬಲ್ಲ ಹಿಂಜರಿಯುವುದೇಕೆ ಇನ್ನು ಹಸಿದು ಹುಲಿ ಬರುವ ದಲ್ಲಿ ತಾಯಿ, ಪಸರಿಸಿ ಬಾಯಿ ವಸುಧೆ ನಡುಗುವ ಗುಡುಗಿನ ಛಾಯೆ ಅದುವೆ ಮಹಾಮಾಯಿ ಜಯ ಸಿದ್ದರಾಮನ ಸಿದ್ದಿ ಮಂತ್ರದ ಧ್ಯಾನ ಶುದ್ಧ ಮನದಿಂದಲೇ ಸಾಧನ ಇದ್ದುಗೆದೆ ಕದಳಿಯ ಬನ* ಹಸಿದು ಬರುವ ಬ್ರಿಟಿಷರನ್ನು ಬಗ್ಗು ಬಡಿಯಲೆಂದೆ ಅಂಜದೇ ಅಳುಕದೇ ಕೆಂಜಡಿಯವನ ಸಂಜೀವಿನಿ ಮದಿನ ಮೇಲೆ ನಂಬಿಕೆ ಇಟ್ಟು ಮುಂದೆ ನಡೆ ಅಂತ ಜನರಿಗೆ ಕರೆ ಕೊಡುತ್ತಿದ್ದರು. ಭಾರತೀಯ ಸ್ವಾತಂತ್ರ ಹೋರಾಟ ಹಾಗೂ ಇನ್ನಿತರ ಚಳುವಳಿಗಳಲ್ಲಿ ಪುರುಷರೇ ಮುಖ್ಯ ಎದುರಿಸುತ್ತ ಬಂದಿದ್ದರು .ಅವರಿಗೆ ಭೌತಿಕವಾಗಿ ಮಹಿಳೆಯರ ಬೆಂಬಲವೂ ಇದ್ದಿತು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಅದಾಗಲೇ ಸಾಮಾಜಿಕ ಸುಧಾರಣೆ ಸ್ವಾತಂತ್ರ ಹೋರಾಟ ಶೈಕ್ಷಣಿಕ ಬೆಳವಣಿಗೆ ಹಾಗೂ ಮಹಿಳಾ ದಿನಾಚರಣೆ ಅಂತ ಕ್ಷೇತ್ರಗಳಲ್ಲಿ ಮುಖ್ಯ ವಾಹಿನಿಯಲ್ಲಿ ಬಂದಿದ್ದರು. ಇದರೊಂದಿಗೆ ಗ್ರಾಮೀಣ ಭಾಗದ ಮಹಿಳೆಯರು ಸಹ ತಮ್ಮ ಮನೆಯ ಪುರುಷರಿಗೆ ರಾಷ್ಟ್ರೀಯ ಹೋರಾಟದಲ್ಲಿ ಪಾಲ್ಗೊಳ್ಳಲು ನೈತಿಕ ಹಾಗೂ ಭೌತಿಕ ಬೆಂಬಲವನ್ನು ನೀಡುತ್ತಿದ್ದರು. ತಮ್ಮ ಮನೆಯವರ ಬೆಂಬಲದಿಂದ ರಾಷ್ಟ್ರೀಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿದ್ದರು .ಸ್ವಾತಂತ್ರ ಹೋರಾಟದಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳಬೇಕೆಂಬುದೇ ಬಹು ಮುಖ್ಯ ಉದ್ದೇಶ ವಾಗಿತ್ತು..ಪುರುಷರು ಸೆರೆವಾಸವನ್ನು ಅನುಭವಿಸಿದಾಗ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ಮಹಿಳೆಯರ ಮೇಲಿತ್ತು .ಸತ್ಯಾಗ್ರಹ ರಚನಾತ್ಮಕ ಕಾರ್ಯಕ್ರಮಗಳು…ಚಳುವಳಿಯ ರೂಪರೇಷೆಗಳು ಮಹಿಳೆಯರ ಮನೋಬಲಕ್ಕೆ ಸೂಕ್ತವಾಗಿದ್ದು ಎಂದು ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಸಭೆಗಳನ್ನು ಕರೆಯಲು ಹೇಳುತ್ತಿದ್ದರು .ಅಂತಹ ಸಮಿತಿಗಳಲಿ ಜಯದೇವಿ ತಾಯಿಯವರು ಮುಂಚೂಣಿಯಲ್ಲಿ ಇರುತ್ತಿದ್ದರು ಈ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಗೋಖಲೆ ,ಮಾರ್ಗರೇಟ್ ಕಸಿನ್ಸ ಹಾಗೂ ಅನಿಬೆಸೆಂಟರ ಪ್ರಭಾವಕ್ಕೆ ಒಳಗಾಗಿದ್ದನ್ನು ನಾವು ಗಮನಿಸಬಹುದಾಗಿದೆ.ಬಹು ವರ್ಷಗಳಿಂದ ಮಹಿಳೆಯರು ತಮ್ಮ ಆರಂಭದ ಹೋರಾಟವನ್ನು ರಚನಾತ್ಮಕ ಕಾರ್ಯಗಳಿಗೆ ಸೀಮಿತಗೊಳಿಸಿಕೊಂಡಿದ್ದರು ನಂತರ ತಮ್ಮ ಕಾರ್ಯ ವ್ಯಾಪ್ತಿಯನ್ನು ಉಪ್ಪಿನ ಸತ್ಯಾಗ್ರಹ ಸ್ವದೇಶಿ ಚಳುವಳಿ ಮಧ್ಯಪಾನ ನಿಷೇಧ ದಂತ ಚಟುವಟಿಕೆ ವಿಸ್ತರಿಸಿದರು. ಕಾನೂನು ಭಂಗ ಚಳುವಳಿಯಲ್ಲಿ ಮಹಿಳೆಯರು ಪಾಲ್ಗೊಳ್ಳದ ಕುರಿತು ರಾಷ್ಟ್ರೀಯ ನಾಯಕ ಯೋಚಿಸುವಂತಾಯಿತು. ಕರ್ನಾಟಕದಲ್ಲಿ ರಾಷ್ಟ್ರೀಯ ಚಳುವಳಿಯಲ್ಲಿ ಪಾಲ್ಗೊಂಡ ಪ್ರಮುಖ ಮಹಿಳೆಯರಲ್ಲಿ ಜಯದೇವಿತಾಯಿ ಲಿಗಾಡೆಯವರು ಒಬ್ಬರು ಇವರೊಂದಿಗೆ ಹಲವು ಮಹಿಳೆಯರು ಪಾಲ್ಗೊಂಡಿದ್ದರು…… ಮುಖ್ಯವಾಗಿ ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ, ಕೃಷ್ಣ ಬಾಯಿ ಪಣಜಿ ಕರ್, ಅವರಂಥ ಮಹಿಳೆಯರು ತಮ್ಮ ಚಟುವಟಿಕೆಗಳನ್ನು ಪ್ರೆಸಿಡೆನ್ಸಿಯಾಚೆ ವ್ಯಾಪಕಗೊಳಿಸಿದರು. ಇದರಿಂದಾಗಿ ಕರ್ನಾಟಕದ ಪ್ರತಿ ಭಾಗಗಳಿಂದಲೂ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸಹತ್ತಿದರು ಬಳ್ಳಾರಿ ಸಿದ್ದಮ್ಮ, ನಾಗಮ್ಮ ಪಾಟೀಲ, ಸುಬ್ಬಮ್ಮಾ ಜೋಯಿಸ್, ಟಿ. ಸುನಂದಮ್ಮ, ಯಶೋದಮ್ಮ ದಾಸಪ್ಪ, ನಾಗರತ್ನಮ್ಮ ಹಿರೇಮಠ, ಪದ್ಮಾವತಿ ಬಿದರಿ, ಜಯದೇವಿತಾಯಿ ಲಿಗಾಡಿ ಶಕುಂತಲಾ ಕುರ್ತುಕೋಟಿ, ಚೆನ್ನಮ್ಮ ಹಳ್ಳಿಕೇರಿ ಇನ್ನೂ ಅನೇಕ ಮಹಿಳೆಯರು ರಾಜಕೀಯ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ
ಧಾರಾವಾಹಿ ಸಂಗಾತಿ ಕಂತು-ಎಂಟು ಸವಿತಾ ದೇಶಮುಖ ಅವರಿಂದ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದಮಹಾನ್ ಚೇತನ ಲೇ-ಸವಿತಾ ದೇಶಮುಖಜಯದೇವಿತಾಯಿಲಿಗಾಡೆಯವರ ಮೊಮ್ಮಗಳು ೧೯೩೨ರ ಸಮಯ….. ಜಯದೇವಿ ತಾಯಿಯವರು ತಮ್ಮ 20ನೆಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದರು…… ಮೂರು ಮಕ್ಕಳ ತಾಯಿಯಾಗಿ ಜೀವನದ ಕೆಲವು ಹಂತಗಳಲ್ಲಿ ತೇರ್ಗಡೆಯಾದ ನಂತರ…ಮನೆ, ಮಕ್ಕಳು, ಜವಾಬ್ದಾರಿಗಳ ಮಧ್ಯೆ … ಬಿಡುವಿನ ಸಮಯ ಸಿಕ್ಕಾಗಲೆಲ್ಲ ಜಯದೇವಿತಾಯಿಯ ಹೃದಯದಲ್ಲಿ ಒಂದು ಹೊಸ ಆಸೆ ಮೊಳಕೆಯೊಡೆದು ಅದು ಫಲ ಕೊಡುವ ಕಾಲ ಬಂದಿತ್ತು …ಮರಾಠಿ ಭಾಷೆ ಬರೆಯಲು ಓದಲು ಕಲಿತವರಾಗಿದ್ದರು .ಮನೆಯಲ್ಲಿ ಮಾತ್ರ ಕನ್ನಡದಲ್ಲಿ ಮಾತನಾಡಿದವರು,ಹಾಡುವರು.. ಮನೆಯ ಕೆಲಸ ಆಳುಗಳ ವಹಿವಾಟುವೂ ಕನ್ನಡದಲ್ಲಿ ನಡೆದಿರುತ್ತಿತ್ತು.ಮಕ್ಕಳೊಂದಿಗೂ ಕನ್ನಡ ಭಾಷೆಯಲಿ ಮಾತನಾಡುತಿದ್ದರು……. ಆದರೆ ಮನದೊಳಗೊಂದು ಅತಿ ದೊಡ್ಡ ಕೊರಗು —“ಕನ್ನಡ ಭಾಷೆ ಓದಲು ಬರೆಯಲು ಬರದ ಕೊರಗು ….??!! ಆ ಸಮಯದಲ್ಲಿ ಪ್ರತಿದಿನ “ವಾರದ” ಪಾಠಶಾಲೆಯಿಂದ ಇಬ್ಬರು ಜಂಗಮರು ಪ್ರಸಾದಕ್ಕೆ ಎಂದು ಮನೆಗೆ ಬರುತ್ತಿದ್ದರು. ಜಂಗಮ ವಿದ್ಯಾರ್ಥಿಳಿಗೆ ತಮಗೆ ಕನ್ನಡ ಭಾಷೆಯ ಜ್ಞಾನವನ್ನು ಕೊಡಬೇಕು ಎಂದು ಕೇಳಿದಾಗ ಅವರು ಸಂತಸದಿಂದ ಒಪ್ಪಿಕೊಂಡರು . *ಕೇವಲ ಎಂಟು ದಿನಗಳಲ್ಲಿ ಕನ್ನಡದ ಅಕ್ಷರ ಮಾಲೆಗಳನ್ನು ಅವರು ಕಲಿತರು ಮೂರು ಮಕ್ಕಳು ಆದ ನಂತರ…!!!* “ಜಂಗಮರು ಹಾಕಿ ಕೊಡುತ್ತಿದ್ದ ಅಕ್ಷರವನ್ನು ಬಹಳ ಸರಾಗವಾಗಿ, ಸರಳ- ಸಹಜವಾಗಿ ಕನ್ನಡವನ್ನು ನಾನು ಕಲಿತೆ ಅದು ನನ್ನ ತಾಯಿ ಭಾಷೆಯ ಮರ್ಮ…. ಬಲು ಬೇಗ ಒತ್ತಕ್ಷರಗಳನ್ನು ವರ್ಣಮಾಲೆಗಳನ್ನು ಬರೆಯಲು ಪ್ರಾರಂಭಿಸಿದೆ” ಅಂತ ಹೇಳ್ತಿದ್ದರು. ಕಲಿತ ಕನ್ನಡ ಭಾಷೆಯನ್ನು ಅದೆಷ್ಟು ಸಂಭ್ರಮಿಸಿದರು ಅಂದರೆ ಕೈಗೆ ಸಿಕ್ಕ ಎಲ್ಲ ವಚನಗಳ ಪುಸ್ತಕಗಳನ್ನು ತೆಗೆದುಕೊಂಡು ಓದಲು ಶುರು ಮಾಡಿದರು ಅವುಗಳನ್ನು ಚೆನ್ನಾಗಿ ಓದುತ್ತಿದ್ದೇನಾ ಇಲ್ಲವಾ ಅನ್ನೋದನ್ನ ತಿಳಿದುಕೊಳ್ಳಲು ಬಹಳ ಸಮಯವೇನು ಬೇಕಾಗಲಿಲ್ಲ ಅಂತ ಹೇಳುವರು… ಮೊದಲ ದಿನ ಕನ್ನಡದ “ಅ” ಅಕ್ಷರವನ್ನು ಬರೆಯುವಾಗ ಅವರ ಕೈ ಕಂಪಿಸಿತು…ವಯಸ್ಸು ಅಡ್ಡಬಂತು…ಮಕ್ಕಳು ನಗಬಹುದು ಅತ್ತೆ ಗಂಡ ಮುನಿಸಿಕೊಳ್ಳಬಹುದು ಎನ್ನುವ ಭಯವೂ ಬಂದಿತು…ಆದರೆ ಹೃದಯದ ಉತ್ಸಾಹ ಆ ಭಯಕ್ಕಿಂತ ದೊಡ್ಡದಾಗಿತ್ತು.“ಸಿದ್ದರಾಮ” ಎಂಬ ಪದವನ್ನು ಕನ್ನಡದಲ್ಲಿ ಓದಿದಾಗಅವರು ಕಣ್ಣೀರಿಟ್ಟರು…ಅದು ಕೇವಲ ಪದವಲ್ಲ,ಅದು ಅವರ “ಗುರುವಿನ ನಾಮ”…. “ಭಕ್ತಿಯ ರೂಪ ಒಡಮೂಡಿ ಕನ್ನಡ ಭಾಷೆಯಲ್ಲಿ ನೋಡಿ ಸಂತೋಷವಾಯಿತು…..ಆ ದಿನ ಅವರು ಮತ್ತೆ ಒಂದು ಬಾಲಕಿ ಆಗಿದ್ದರು —ಹೊಸ ಅಕ್ಷರಗಳ ಮುಂದೆ ಕುತೂಹಲದಿಂದಪ್ರತಿ ಪದವು ಮುತ್ತಿನಂತೆ ಸಂಗ್ರಹಿಸುತ್ತಿದ್ದರು.ಕನ್ನಡದಲ್ಲಿ ಮೊದಲ ಅಕ್ಷರ ಮಾಲೆಗಳ ನೋಡಿ ಕ್ಷಣಅವರ ಮುಖದಲ್ಲಿ ಮೂಡಿದ ಆ ನಗುಮಕ್ಕಳು ಹುಟ್ಟಿದಾಗ ಕಂಡ ನಗುವಿನಷ್ಟೇ ಪವಿತ್ರವಾಗಿತ್ತು.ಅದು ಕೇವಲ ಭಾಷೆ ಕಲಿತ ಸಂತಸವಲ್ಲ…ಅದು ತನ್ನ ಆತ್ಮವನ್ನು ಶರಣ ಸಂಸ್ಕೃತಿಗೆ- ಜೋಡಿಸಿದ ಸಂತಸ,ವಚನಗಳ ಹೆದ್ದಾರಿ,ತನ್ನ ಅನುಭಾವದ ಬಾಗಿಲು ತೆರೆದ ಸಂತಸ,…..ತಾನು ತಾಯಿಯಾಗಿದ್ದರೂ ತಾನೂ ಇನ್ನೂ ಕಲಿಯಬಲ್ಲೆ ಎಂಬ ಆತ್ಮವಿಶ್ವಾಸದ ಜಯಘೋಷ ಸಾರಿತ್ತು. ….ಅದೇಷ್ಟೋತ್ತು ಕಂಬನಿ ಸುರಿದವು ಅಂತ ಅಭಿಮಾನದಿಂದ ಹೇಳುತಿದ್ದರು.ಕಣ್ಣೀರಿನಲ್ಲಿ ಹೆಮ್ಮೆ ಇತ್ತು. ಮರಾಠಿಯ ಮಗಳಾಗಿ,,ಕನ್ನಡದ ಸೊಸೆಯಾಗಿ….,ಎರಡು ಭಾಷೆಗಳ ಸೇತುವೆಯಾದರು ಮುಂದೆ ….ಕನ್ನಡಿಗರ ತಾಯಾಗಿ ನಿಂದರು ಅಂತೇನು ಹೇಳಬೇಕಾಗಿ ಆಗಿಲ್ಲವೇ..!! ಎಲ್ಲ ಬಲ್ಲವಳೆಂಬ /ಇಲ್ಲವದು ಭ್ರಮೆಯೆನಗೆಬಲ್ಲವರ ಪಾದಹಿಡಿಯುವೆ -ಬಲ್ಲಿದರುಕಲಿಸಿರಿ ಮತ್ತು ನುಡಿಸಿರಿ!! ಅಂತ ಹೇಳತಾಬಲ್ಲವರಿಂದ ಕಲಿಯುತ ಮುಂದೆ ನಡೆದರು. 16-09-1895 ರಲ್ಲಿ ಸೊಲ್ಲಾಪುರದ ಮಹಾದಾನಿಯಾದ ರಾವ್ ಬಹದ್ದೂರ್ ಮಲ್ಲಪ್ಪ ವಾರದರು “ಸರಸ್ವತಿ ಸದನ “.ಎಂಬ ಶೈಕ್ಷಣಿಕ ಸಂಸ್ಕೃತಿಕ ಸಂಸ್ಥೆ ಸ್ಥಾಪನೆ ಮಾಡಿದ್ದರು . ಸರಸ್ವತಿ ಸದನ ಇಲ್ಲಿ ಮಹಿಳೆಯರಲ್ಲಿ ಸ್ವಾವಲಂಬಿ ಜೀವನದ ಅರಿವು, ಶಿಕ್ಷಣದ ಮಹತ್ವ,ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುತ್ತಿತ್ತು. ೧೯೧೦ ರಲ್ಲಿ ಸರಸ್ವತಿ ಸದನ ಮೂರು ವಿಭಾಗದಲ್ಲಿ ತನ್ನ ಕೆಲಸ ಹಮ್ಮಿಕೊಂಡಿತ್ತು. ಕನ್ನಡ ಮಾತನಾಡುವವರಿಗಾಗಿ ವಾರದ ಮಲ್ಲಪ್ಪನವರ ಮನೆಯಲ್ಲಿ “ವೀರಶೈವ ಮಹಿಳಾ ಜ್ಞಾನ” ಮಂದಿರ ಕಟ್ಟಲಾಗಿತ್ತು. ಇನ್ನು ಮರಾಠಿ ಮಾತನಾಡುವವರಿಗಾಗಿ ಶ್ರೀ ಶಂಕರ ರಾವ ದೇವಾಂಕರ್ ಅವರ ಮನೆಯಲ್ಲಿ “ಸರಸ್ವತಿ ಮಂದಿರ “ಕಟ್ಟಲಾಗಿತ್ತು . ಗುಜರಾತಿ ಭಾಷಿಕರಿಗಾಗಿ ಹಿರಾಚಂದ್ರ ನೇಮಿಚಂದ್ರ ಮನೆಯಲ್ಲಿ ಶ್ರಾವೀಕಾಶ್ರಮ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದರು.ಮಹಿಳೆಯರ ಒಳತಿಗಾಗಿ ಪ್ರತಿ ವಾರಕ್ಕೊಮ್ಮೆ ಸಭೆ ಸೇರಿ.. ಮೊದಮೊದಲಿಗೆ ಅರಿಶಿಣ ಕುಂಕುಮ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡರು.ಎಡಬಿಡದೆ ಚಟುವಟಿಕೆಗಳು ನಡೆಯುತ್ತಿದ್ದವು. ಅಲ್ಲಿ ಪ್ರಾರ್ಥನೆ, ಕೀರ್ತನೆ ,ಪುರಾಣ ಪ್ರವಚನ ಸಂಪ್ರದಾಯ ಮಡಿ-ಮೈಲಿಗೆ ಅಂಥ ಮೂಢ ನಂಬಿಕೆಗಳಿಂದ ಮುಕ್ತರಾಗಿ ..ಧಾರ್ಮಿಕ ಸರಿಯಾದ ತಿಳುವಳಿಕೆ ಕೊಡುವುದು…ಅವರ ಕಾಳಜಿ ಅವರೇ ವಹಿಸುವುದನ್ನು ಕಲಿಸುತ್ತಿದ್ದರು. ಸ್ವಾವಲಂಬನೆಯ ಜೀವನ ನಡೆಸುವುದು ಬಗ್ಗೆ ತಿಳುವಳಿಕೆಯನ್ನು ಹೇಳಿಕೊಡಲಾಗುತ್ತಿತ್ತು .ವಾರದ ಮಲ್ಲಪ್ಪನವರ ಪತ್ನಿಯರಾದ ಗೌರವ್ವಬಾಯಿ ಮತ್ತು ಬಸವ್ವಬಾಯಿ ಹಾಗೂ ಅವರ ಮಗಳು ಸಂಗವ್ವನವರು ಮೇಲ್ವಿಚಾರಣೆ ವಹಿಸಿಕೊಂಡಿದ್ದರು. ತಾಯಿಯೊಂದಿಗೆ ಜಯದೇವಿ ತಾಯಿಯವರು ಸರಸ್ವತಿ ಸದನದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ಮುಂದೆ 1932 ರಲ್ಲಿ ಮಹಿಳಾ ಜ್ಞಾನ ಮಂದಿರದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು ಏಕೆಂದರೆ ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರು ತಾಯಿಯವರ ಹೆಸರ ಮೇಲೆ ಜಗವನ್ನು ಖರೀದಿಸಿ ತಾಯಿಯವರ ಹೆಸರಿನಲ್ಲಿಯೇ ಕನ್ಯಾ ಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆಯು ಸೊಲ್ಲಾಪುರದಲ್ಲಿ 25 ವರ್ಷಗಳ ಕಾಲ ತಾಯಿಯವರ ಹೆಸರಿನಲ್ಲಿಯೇ ನಡೆದಿತ್ತು. ತಾಯಿಯವರು ಈ ಶಾಲೆ ಗೆ ಸಿದ್ದರಾಮನ ಹೆಸರನ್ನೇ ಇಡಬೇಕೆಂದು ಒತ್ತಾಯಿಸಿದರು. “ಸಿದ್ದೇಶ್ವರ” ಶಾಲೆಯಾಗಿ ಪರಿವರ್ತನೆಗೊಂಡಿತು. ಈ ಶಾಲೆಯಲ್ಲಿ ಅವಿಶ್ರಾಂತವಾಗಿ ಓದುವುದನ್ನು ಕನ್ನಡದಲ್ಲಿ ಬರೆಯುವುದನ್ನು ರೂಢಿಸಿಕೊಂಡರು. ಸಿದ್ದೇಶ್ವರ ಕನ್ಯಾ ಪಾಠಶಾಲೆ ಸಿದ್ದೇಶ್ವರ ಕನ್ಯಾ ಪಾಠಶಾಲೆ ಜಯದೇವಿತಾಯಿಯವರ ಕಾರ್ಯ ಮಾಡುವ ಮುಖ್ಯವಾದ ಕಾರ್ಯ ಕ್ಷೇತ್ರಗಳು ಅಂದರೆ …ವಾರದ ಸಂಸ್ಕೃತ ಪಾಠಶಾಲೆ ,ಮಹಿಳಾ ಜ್ಞಾನ ಮಂದಿರ, ಸರಸ್ವತಿ ಸದನ ಹಾಗೂ ಸಿದ್ದೇಶ್ವರ ಕನ್ಯಾ ಶಾಲೆ, ಬಾಲ ಶ್ರಾವಿಕಾಶ್ರಮ ಮಂದಿರ ಈ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ದುಡಿದರು .ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಮಹಿಳೆಯರಲ್ಲಿ ಶಿಕ್ಷಣದ ಅರಿವು ,ರಾಷ್ಟ್ರೀಯ ಚಿಂತನೆ ,ನಾಡ ನುಡಿ ಪ್ರಜ್ಞೆ ಸಮಾಜದ ಚಟುವಟಿಕೆಯ ಮೂಲಕ ಸ್ವಾವಲಂಬನೆಯ ಬದುಕು, ದೇಶಿಯ ಚಿಂತನೆಗಳನ್ನು ಬೆಳೆಸುತ್ತಿದ್ದರು. ಈ ಕಾಲಕ್ಕೆ ಗಾಂಧೀಜಿಯವರು ಭಾರತಾರದಾದ್ಯಂತ ಸ್ವಾತಂತ್ರ್ಯದ ಹೋರಾಟದಲ್ಲಿ ಜನರನ್ನು ಒಂದು ಗುಡಿಸುತ್ತಿದ್ದರು ಅವರ ಅಹಿಂಸಾವಾದ ,ಸ್ವದೇಶಿ ಚಿಂತನೆಯ ಚಟುವಟಿಕೆಗಳಲ್ಲಿ ಜಯದೇವಿ ತಾಯಿಯವರು ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಗಾಂಧೀಜಿ ಚಿಂತನೆಗಳು ಜಯದೇವಿಯವರಿಗೆ ತುಂಬಾ ಆಕರ್ಷಣೆ ಮಾಡಿದ್ದವು . ಇದೇ ಕಾಲಕ್ಕೆ ತಿಲಕರು ಸ್ವದೇಶಿ ಚಳುವಳಿಯ ನಾಲ್ಕು ಅಂಕಗಳಾದ ಸ್ವರಾಜ್ಯ ,ರಾಷ್ಟ್ರೀಯ ಶಿಕ್ಷಣ, ಸ್ವದೇಶಿ ಚಳುವಳಿ ,ವಿದೇಶಿ ಬಹಿಷ್ಕಾರ …..ಮೌಲ್ಯಗಳ ಪ್ರಚಾರಕ್ಕಾಗಿ ಮುಂಬೈ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದರುಆ ಕಾಲದಲ್ಲಿ ತಿಲಕರು ವಾರದವರ ಮನೆತನದಲ್ಲಿ ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಿರುವುದನ್ನು ನೋಡಿ ತಿಲಕರು ಸಾಮೂಹಿಕವಾಗಿ ಈ ರೀತಿಯಲ್ಲಿ ಗಣೇಶನನ್ನು ಪೂಜಿಸಿದರೆ ಸ್ವಾತಂತ್ರ ಹೋರಾಟದಲಿ ಎಲ್ಲ ಮತೀಯರು ಎಲ್ಲ ಜಾತಿಯವರು ಒಂದು ಸೇರಿ ಭಾರತೀಯರು ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಡಬಹುದು ಎನ್ನುವ ವೈಚಾರಿಕತೆಯನ್ನು ಪಡೆದುಕೊಳ್ಳುತ್ತಾರೆ. ಭಾರತದಾದ್ಯಂತ ಗಣೇಶ ಉತ್ಸವವನ್ನು ಪ್ರಾರಂಭಿಸುವುದನ್ನು ಶುರು ಮಾಡಿದರು. ತಿರಕರು ವಾರದ ಮಲ್ಲಪ್ಪನವರಿಗೆ ಧನ್ಯವಾದ ಹೇಳಿರುವ ಆಕರ ಲಭ್ಯವಾಗಿವೆ. ಅಂತೆಯೇ ಜಯದೇವಿ ತಾಯಿಯವರು ಕೂಡ ಗಣೇಶನ ಪೂಜೆಯನ್ನು ಅತಿ ಸಂಭ್ರಮದಿಂದ ಅನುಸರಿಸುತ್ತಿದ್ದರು ಹಾಗೆ ಗಾಂಧೀಜಿಯವರ ಆಚಾರ ವಿಚಾರಗಳನ್ನು ಕಾರ್ಯರೂಪದಲ್ಲಿ ತರುತ್ತಿದ್ದರು .ಅವರಲ್ಲಿಯ ರಾಷ್ಟ್ರ ಪ್ರೇಮವು ಉತ್ಕಟವಾಗಿತ್ತು. ರಾಷ್ಟ್ರೀಯ ಚಟುವಟಿಕೆ ಹಾಗೆ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು . ಕರ್ನಾಟಕದಲ್ಲಿ ಸುಮಾರು 48 ರಾಷ್ಟ್ರೀಯ ಶಾಲೆಗಳದ್ದವು. ಜಯದೇವಿ ತಾಯಿಯವರು ರಾಷ್ಟ್ರೀಯ ಶಾಲೆಗಳನ್ನು ಪ್ರೋತ್ಸಾಹಿಸುತ್ತಿದ್ದರು… ಸೊಲ್ಲಾಪುರದಲ್ಲಿ ಬಾಲ “ವಿದ್ಯಾ ಮಂದಿರ, ಶ್ರಾವಿಕಾಶ್ರಮ ಶಾಲೆ ,ಹುಬ್ಬಳ್ಳಿಯಲ್ಲಿ ‘ಭಾರತೀಯ ಹೈಸ್ಕೂಲ್,” ಧಾರವಾಡದಲ್ಲಿ “ಜಯದೇವಿತಾಯಿ ಲಿಗಾಡೆ” ಹೈಸ್ಕೂಲ್ ಶಾಲೆಗಳನ್ನು ಆರಂಭಿಸಿದ್ದರು. ಅಲ್ಲಿ ರಾಷ್ಟ್ರೀಯ ವಿಚಾರಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು. *ಸರಸ್ವತಿ ವಿದ್ಯಾ ಮಂದಿರ* ತಾಯಿ ಸಂಗವ್ವ ಮಡಿಕೆ ,ಭಾಗೀರಥಿಬಾಯ್, ಪಂಚವ್ವಬಾಯಿ ಅವರು ಅಸಹಕಾರ ಚಳುವಳಿಯಲ್ಲಿ ಧುಮುಕಿದ್ದರೂ ಅದೇ ರೀತಿಯಾಗಿ ತಾಯಿಯವರು ಗಂಡನ ಮನೆಯಲ್ಲಿ ಇದ್ದುಕೊಂಡು ಗಾಂಧೀಜಿಯವರು ಕರೆ ಕೊಡುತ್ತಿದ್ದ ಎಲ್ಲ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಕನ್ನಡವನ್ನು ಕಲಿಯುತ್ತಲೇ ಮುಂದೆ ಕನ್ನಡದ ವೇಧಾವಿ ಭಾಷಣಕಾರ್ತಿಯಾಗಿ ಪರಿವರ್ತಿಸಿದರು.ಮೊಟ್ಟ ಮೊದಲ ಬಾರಿ ಜಯದೇವಿ ತಾಯಿಯವರು ಭಾಷಣವನ್ನು ಮಾಡಿದ ನೆನಪನ್ನು ಮಾಡಿಕೊಳ್ಳುತ್ತಿದ್ದರು…… *ಮೊಟ್ಟ ಮೊದಲ ಬಾರಿ ಭಾಷಣ ಮಾಡಿದ ವಾರದ ವಾಡೆ* ಮೊದಲಸಲ ಬಾಷಣ ಮಾಡಿದ ವಾಡೆ ಮನೆಯ ಎದುರುಗಡೆ ಸ್ಥಿತವಾದ ವಾರದವರ ಮನೆಯಲ್ಲಿ ತಿಂಗಳಿಗೊಮ್ಮೆ ಅಕ್ಕಮಹಾದೇವಿಯ ಪುರಾಣ ಪಠಣ ಮಾಡಿದ ಗುರುಗಳು ಜಯದೇವಿ ತಾಯಿಯವರನ್ನು ಕರೆದು “ನಾಳೆ ನೀನೇ ಭಾಷಣವನ್ನು ಮಾಡಿ ಪುರಾಣದ ಸಮಾಪ್ತಿಯನ್ನು ಮಾಡಬೇಕು “ಎಂದು ಕೇಳಿಕೊಂಡರು… ಜಯದೇವಿ ತಾಯಿಯವರಿಗೆ ಕೈ ಕಾಲು ಕಂಪಿಸಿದವು ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂಗ ಆಯಿತುಅಂತ ಹೇಳುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಭಾಷಣ ಮಾಡುವುದು ಸಾಮಾನ್ಯ ಕೆಲಸವಾಗಿರಲಿಲ್ಲ ಏಕೆಂದರೆ ಕೇವಲ ತಾಯಿ ಭಾಷಣ ಮಾಡುವುದನ್ನು ಕೇಳುತ್ತಿದ್ದರು… ಆದರೆ ಭಾಷಣ ಮಾಡಿದವರಾಗಿರಲಿಲ್ಲ.. ತಂದೆಯ ಹತ್ತಿರ ಹೋಗಿ ಏನನ್ನು ಮಾತನಾಡಬೇಕು ಅನ್ನೋದನ್ನ ಸುಮಾರು 9 -10 ಪುಟಗಳಷ್ಟು ಭಾಷಣವನ್ನು ಬರೆದುಕೊಂಡು ಬಂದು…. ಪುಟಗಳಲ್ಲಿನ ಒಂದು ಅಕ್ಷರವನ್ನು ಕೂಡ ಬಿಡದಂತೆ ಮರು ದಿವಸವೇ ಭಾಷಣ ಮಾಡಿದರು.ಆ ಭಾಷಣವು ಎಲ್ಲರ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ಹಾಗೂ ಪೂರ್ತಿಯಾಗಿ ಎಲ್ಲರ ಮನ ಗೆದ್ದಿದ್ದರು.ತಾಯಿಯವರು ಮಾಡುತ್ತಿದ್ದ ಭಾಷಣವನ್ನು ಕೇಳಿದ ತಂದೆ ಕಣ್ಣುನೀರು ಉರಿದವು… ತಾಯಿ ಮಗಳನ್ನು ತಬ್ಬಿಕೊಂಡಿದ್ದರು .ಹಾಗೆ ಗೌರವ್ವಬಾಯಿಯು ಬೆರಳುಗಳಿಂದ ನಿವಾಳಿಸಿ ಲಟ್ಟಿ ಮುರದಿದ್ದರು.ಇನ್ನೂ ಸಮಾಜದ ಸ್ತ್ರೀಯರೆಲ್ಲರೂ …ಬಂದಂತಹ ಎಲ್ಲ ಅತಿಥಿಗಳು ಅತ್ಯಂತ ಹೆಮ್ಮೆಯಿಂದ ನೋಡುತ್ತಿರುವ ದೃಶ್ಯ ಮನಸ್ಸಿಗೆ ಬಹಳ ಪ್ರಫುಲ್ಲತೆ ತಂದಿದ್ದು ….. ಮನದಲ್ಲಿ ಸಾವಿರ ಬಾರಿ ಸಿದ್ದರಾಮಯ್ಯನವರು ನೆನೆಸಿ ಧನ್ಯವಾದಗಳು ಹೇಳಿದ್ದರು.ಹಾಗೆ ಅತ್ತೆಯು ಭಾಷಣಗಾರತೀಯ ಮಗಳು ಅಂತ ಅಣುಕಿಸುತ್ತಿರುವ ಮಾತುಗಳು ಕೂಡ ನೆನಪಿಗೆ ಬಾರದೇ ಇರಲಿಲ್ಲ ಅಂತ ಹೇಳಿದರು. ಮುಂದೆ ಪ್ರಯಾಗಬಾಯಿ ಅತ್ತೆಯು ಕೂಡ ತಾಯಿಯವರು ಮಾಡುವ ಭಾಷಣದ ಅಭಿಮಾನಿಗಳಾದರು.ಗಂಡ ಚೆನ್ನಮಲ್ಲಪ್ಪನವರು ತುಂಬಾ ಅಭಿಮಾನ ಪಡುವಂತ ಆಯ್ತು. *ಶರಣರ ಕರುಣೆಯು ಕಾಸರಕವಲೊಡೆದು ಹರೆದು ಹಾಯದಿತ್ತಎನ ಮೇಲೆ ಸಿದ್ದನ ವರವಾಗಿತ್ತು ..*… ಮುಂದೆ ಅವರ ಜನಜಾಗೃತಿಯ ಕಾರ್ಯ-ಭಾಷಣ ಗಾರ್ತಿಯ ಪಯಣ ಸಾಗುತ್ತಲೇ ನಡೆಯಿತು. ಅಲ್ಲಲ್ಲಿ ಎಲ್ಲ ಸಮಾಜದಲ್ಲಿ ಭಾಷಣಗಳನ್ನು ಮಾಡುತ್ತಿದ್ದರು. ಸುತ್ತಲಿನ ಹಳ್ಳಿಗಳಿಂದ ಊರುಗಳಿಂದ ಭಾಷಣ ಮಾಡುವುದಕ್ಕಾಗಿ ಆಮಂತ್ರಣ ಬರಲಾರಂಸಿದವು .ಅನೇಕ ಶರಣ ಅನುಭಾವಿಗಳ ಒಡನಾಟ ಬೆಳೆಯ ಲಾರಂಭಿಸಿತು. ಕನ್ನಡ ಮೇರು ಸಾಹಿತ್ಯದ ಅಧ್ಯಯನ, ಶರಣ ಸಂಸ್ಕೃತಿಯ ಪರಂಪರೆಯ ಆಚರಣೆಮಾಡುತ್ತಾ ನಾಡಿನ ಮೂಲೆ ಮೂಲೆಗಳಲ್ಲಿ ಹೋಗಿ ಭಾಷಣವನ್ನು ಕೊಡುವುದು ಸಮಾಜದ ಸೇವೆಯನ್ನು ಮಾಡುವುದು ರಾಜ್ಯದ ರಾಷ್ಟ್ರದ ಅನೇಕ ಸಂತರು ಮಹಾತ್ಮರು, ಶಿವಯೋಗಿಗಳು, ಮಹಾನುಭಾವರೊಂದಿಗೆ ಜೊತೆ ಗೂಡಿ ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳಲಾರಂಬಿಸಿದರು. ಜಯದೇವಿ ತಾಯಿ ಅವರ ಸರ್ವತೋಮುಖ ಸಮಾಜದ ಕಾರ್ಯಗಳಿಗೆ ಹೇಗೆ ಮುಂದುವರೆದವು ಅನ್ನುವದ ಮುಂದಿನ ವಾರ ನೋಡೋಣ ಬನ್ನಿ….. ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ ಕಂತು-ಏಳು ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ತಾಳಲಾರೆ ಯಾತನೆ/ಕೇಳೋಕೂಗು ನೀಲಕಂದರನೆ !! ಪಲ್ಲವಿ!!ಚಂದಿರನ ತಂಗಾಳಿ ನೊಂದ ಮನಕೆ ಬೀರಿ ಕಂದಳನು ಕಾಪಾಡ ಬಾರೋ!!ಬಾಳಿನ ತುಂಬೆಲ್ಲ ತಾಳಬಾರದು ಗೋಳುಹೇಳಲು ಬರೋದು ಎನಗಯ್ಯ !! ಅಂತ ಪಾಡುತ……ಚಂದಿರನ ಬೆಳದಿಂಗಳದ ಕೆಳಗೆ ಕುಳಿತು… ತೊರೆದು ಹೋದ ಚೊಚ್ಚಲ ಮಗುವನ್ನು ನೆಯುತ ಜಯದೇವಿ ತಾಯಿಯವರು ಖಾಲಿ ಹೃದಯ ಹೊತ್ತು, ಕಣ್ಣೀರು ಧಾರೆಯಲಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಬಹಳ ಹೊತ್ತು ಅತ್ತರು. ಆದರೆ ಜೀವನ ಯಾರಿಗೂ ಹೆಚ್ಚು ಕಾಲ ವಿರಾಮ ಕೊಡುವುದಿಲ್ಲವಲ್ಲಾ….!!! ಮತ್ತೆ ಗಂಡನ ಮನೆಗೆ ಹೊರಡಬೇಕು…..!!!ಗಂಡನ ಮನೆಗೆ ಹೋಗುವ ದಿನವೂ ಬಂತು…ತವರ ಬಾಗಿಲು ದಾಟಲು ಕಾಲುಗಳು ಮುಂದೆ ಸಾಗಲಿಲ್ಲ.ಪ್ರತಿ ಹೆಜ್ಜೆಯೂ ಒಂದು ನೆನಪನ್ನು ತುಳಿಯುವಂತೆ……ತವರಿನ ಗೋಡೆಗಳೆಲ್ಲಆ ಮಗು ನಗುವಿನ ಧ್ವನಿ ತುಂಬಿತ್ತು… ಕಳವಳ ಗೊಂಡ ಮನ…. ಕರಳು ಹಿಚುಕುವ ಸನ್ನಿವೇಶ… ಗಂಡನ ಮನೆಗೆ ಹೋಗುವ ದಾರಿಯಲ್ಲಿಮೌನವಾಗಿ ದೇವರನ್ನು ಕೇಳಿದಳು — ಕಳವಳಗೊಳ್ಳುತ್ತಾ ಬಳಲುತ್ತ ಬೇಡುವೆತಿಡಿಗೇಡಿಗೆ ಹೇಳೊ ಮನಶಾಂತಿಯ !! ನೊಂದ ಜೀವ ಬೆಂದ ಮನ ಸಂದುಸಂದಿನನೋವ ಅಂದಿಂದ ಮೈ ಮನಕೆಂದೇ !! ಹಂಣ್ಣಾದ ಈ ಮನಕೆ ಸಣ್ಣ ಮಾಡುವುದಕ್ಕೆ?!ಕಣ್ಣು ತೆರೆದು ಕರುಣಿಸಯ್ಯ ರೋಮರೋಮಂಗಳಿಗೆ ಸ್ವಾಮಿ ನಿನ್ನಯ ಒಲವು ಅಮರ ಧಾರೆಯ ಎರೆಯಯ್ಯಾ!! ಭವ ದೂರ ಭವನಾಶ ‘ಜಯ ಸಿದ್ದರಾಮೇಶನೆ’ ದಯದೋರೊ ಎನ್ನ ಭಯ ದೂರ ಸರಿಸೋ !! ಜಯದೇವಿ ತಾಯಿಯವರ ತಮ್ಮ ಶಿವಶಂಕರ್ ಮಡಕಿ ,ತಂಗಿಶ್ರೀದೇವಿ ಗಾಡವೆ, ,ಮಗಳು ಶಶಿಕಲಾ ಮಡಕಿ, ತಂಗಿ ಸುಮತಿ ಅಸ್ಟುರೆ ಗಂಡನ ಮನೆ ಅವರನ್ನು ಕಾಯುತ್ತಿತ್ತು…..ಆದರೆ ಕಣ್ಣುಗಳಲ್ಲಿ ಜೀವಂತವಾಗಿದ್ದಒಂದು ಚಿಕ್ಕ ಮುಖ…ಒಂದು ಅಪೂರ್ಣ ನಗುವಿನ ನೆನಹು ಮನದಲಿ ತುಂಬಿತ್ತು ………. ಅಲ್ಲಿ ಇನ್ನೂ ಏನ ಗ್ರಹಚಾರವಿದೆಯೋ..ಅತ್ತೆಯ ನೆನಪಾಗಿ ಕೈ ಕಾಲುಗಳು ನಡುಗಲಾರಂಭಿಸಿದವು. ಖಾಲಿ ಕೈಯಲ್ಲಿ ಹೇಗೆ ಹೋಗುವದು ಬರಿದಾದ ಒಡಲನ್ನು ತೆಗೆದುಕೊಂಡು…????ಹೆದರುತ್ತ ಹೆದರುತ್ತಲೇ ಗಂಡನ ಮನೆಯಲ್ಲಿ ಕಾಲಿಟ್ಟ ತಕ್ಷಣ ಅತ್ತೆ ಪ್ರಯಾಗಬಾಯಿ ಎದುರಾದರು …… ಎದುರಾದ ಅತ್ತೆ ಮುಖ ಕಳೆಗುಂದಿತು ಕರುಣಾ ಮಯಿಯಾಗಿ ಕಂಡರು……. ಮಡಿಲಲ್ಲಿ ಮಗು ಇಲ್ಲದ ಸೊಸೆಯ ಕಣ್ಣುಗಳೇ ಸಾವಿರ ಮಾತುಗಳ ಹೇಳುವದ ಕಂಡು……. ಬಾಗಿಲ ಬಳಿ ನಿಂತಿದ್ದ ಸೊಸೆಯನ್ನು ನೋಡಿಅತ್ತೆಯ ಹೃದಯ ಕಗ್ಗತ್ತಲಾಯಿತು…..ಸೊಸೆ ಒಂದು ಹೆಜ್ಜೆ ಒಳಗೆ ಇಟ್ಟಳು…….ಸೊಸೆಯ ಕಾಲನಡಿಗೆಯ ನಡುಗು.ಹೃದಯದಲ್ಲಿ ಹೊತ್ತಿ ಉರಿಯುವ ಶೋಕ……ಕಣ್ಣುಗಳಲ್ಲಿ ಅಳಲು ,ಒಣಗಿದ ಕಣ್ಣೀರು, ನೋವಿನ ನಿರಾಶೆ, ಜೀವ ಒಡೆದುಹೋದ ವ್ಯಥೆ ಹೇಳಿದವು… ಅತ್ತೆ ಮುಂದೆ ಬಂದು “ಇರ್ಲಿ ನಿನ್ನ ಮಗನ ಶಿವ ಕರ್ಸ್ಕೊಂಡಾನ ಇಂತಹ ಹತ್ತು ಮಕ್ಕಳನ್ನು ಮತ್ತೇ ಹೆರುವಂತಿ ಬಾ ಒಳಕ್ಕೆ ಬಾ “ಅಂದರಂತೆ ಕಣ್ಣಲ್ಲಿ ನೀರುತುಂಬಿಕೊಕಡಿದ್ದವು.. ಒಂದು ಕ್ಷಣದಲ್ಲಿ ‘ಅತ್ತೆ’ … ‘ತಾಯಿ’ ಆಗಿಬಿಟ್ಟಳು.ಸೊಸೆಯ ಖಾಲಿ ಕೈಗಳನ್ನು ಮಮತೆಯಿಂದ ಗಟ್ಟಿಯಾಗಿ ಹಿಡಿದರು.ಇದು ಮೊಟ್ಟಮೊದಲ ಬಾರಿ —ಪ್ರೀತಿಯಿಂದ ಸೊಸೆ ಎದೆಗೆ ತಲೆ ಒರಗಿಸಿಮುರಿದು ಬಿದ್ದಳು.ಇಬ್ಬರ ನೋವು ಒಂದಾಗಿ ಹರಿದ ಕ್ಷಣಗಳಿಗೆಆ ಮನೆಯ ಗೋಡೆಗಳು ಸಾಕ್ಷಿಯಾಗಿದ್ದವು —ಕಾಡುತ್ತಿದ್ದ ಅತ್ತೆ ಇವತ್ತು ಕರಗಿಬಿಟ್ಟಳು.ಸೊಸೆ ಮಾತಾಡಲಿಲ್ಲ. ಮೌನವಾಗಿ ಒಳ ನಡೆದರು. ಆ ದಿನದಿಂದ ಆ ಮನೆಯ ವಾತಾವರಣ ಬದಲಾಗಿತು.ಅತ್ತೇಯ ಕಾಡುವ ಮಾತುಗಳು ಇಲ್ಲವಾಗಿದ್ದವು….. ಕಾಲ ಕೆಲವೊಮ್ಮೆ ಶಿಕ್ಷಕ ಆಗುತ್ತೆ ಅಲ್ಲವೇ….!!! ಒಂದು ಮರಣ ಎರಡು ಹೃದಯಗಳನ್ನು ಹತ್ತಿರ ಮಾಡಿತು.ಅದಕ್ಕೆ ಜಯದೇವಿತಾಯಿಯವರು ಹೇಳ್ತಾರೆ “ಕಾಡುವವರು ಇರಬೇಕ/ ಕಡಿತನಕ ಜನುಮಕ್ಕ ನೋಡುವರ ಇರಬೇಕು ವರೆಗೆ ಹಚ್ಚಿ-ಈ ಮನೆಕ ನೀಡುವರು ಇರಬೇಕ ನಿಜದರಿವ!! ಕಾಡುವರು ನನಗ /ಕಡೆತನಕ ಇರಲವ್ವಕೇಡ ಬಯಸಿನು ನಾ ಅವರಿಗ-ಕಡೆತನಹಾಡಿ ಹರಿಸುತ ಸುಖಿಸುವೆ!! ಏಕೆಂದರೆ ಒಂದೊಂದು ಕಠಿಣ ಪರೀಕ್ಷೆಗಳು ಅವರನ್ನು ದೇವರ ಸಮೀಪ ಕರೆದು ಒಯ್ಯಯುತಿವೆ. ಅನ್ನುವುದು ಖಚಿತಗೊಳ್ಳಲಾರಂಭಿಸಿತ್ತು..ಅತ್ತೆಯ ಕಾಟಾಚಾರವು ಕೂಡಾ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸಿದ್ದವು ಅವರಿಗೆ ಸಕಾರಾತ್ಮಕ ಬದುಕನ್ನು ಬದುಕುವ ಪಾಠ ಕಲಿಸಿತ್ತು ಅಂತ ಹೇಳುತ್ತಿದ್ದರು. “ನೋವಿನ ಪೆಟ್ಟು ಬಿದ್ದಂತೇಲ್ಲ ಸಿದ್ದರಾಮನ ಸಾಮಿಪ್ಯಕೆ ಸಮಿಸತಾ ಹೋದೆ…. ಹಾಗೆ ಕನ್ನಡ ತಾಯಿಯನ್ನು ನಾನು ಅಪ್ಪಿಕೊಳ್ತಾ ಹೋದೆ …….ಮನದಲ್ಲಿ ಉಲ್ಬಣಿಸುತ್ತಿದ್ದ ವೇದನೆಗಳು… ಕಾವ್ಯದ ರೂಪದಲ್ಲಿ ಮನದ ಮೂಲೆಯಲ್ಲಿ ಹರಿದು ಬರುತ್ತಿತ್ತು ಕಷ್ಟಗಳನೆಲ್ಲ ನನ್ನ ತಾಯಿ ಭಾಷೆ ಕನ್ನಡಭಾಷೆಯಲ್ಲಿ ತೋಡಿಕೊಳ್ಳುತ್ತಿದ್ದೆ …. ಆದರೆ ಅವುಗಳನ್ನು ಶಬ್ದಾಂಕನ ಗೊಳ್ಳಿಸಲಿಕ್ಕೆ ಬೇಕಾಗುವ ಕನ್ನಡ ಶಬ್ದಗಳು ಬರೆಯುವ ಜ್ಞಾನ ಇನ್ನೂ ನನಗೆ ಇರಲಿಲ್ಲ ಏಕೆಂದರೆ ನಾಲ್ಕನೇ ಇಯತ್ತೆ ಮರಾಠಿ ಕಲಿತವಳು…ಕನ್ನಡ ಭಾಷೆಯನ್ನು ಬರೆಯಲು ನಾನು ಕಲಿತಿರಲಿಲ್ಲ .”ಅಂತ ಹೇಳ್ತಾ ಇದ್ದರು. ಜಯದೇವಿ ತಾಯಿಯವರ ಮೈದುನ ಜಗದೇವಪ್ಪನವರು ಗಂಡ ಚೆನ್ನಮಲ್ಲಪ್ಪನಂತೆ ವ್ಯಾಪಾರದಲ್ಲಿ ಜಾಣರೇನು ಆಗಿರಲಿಲ್ಲ…….!! ಕೆಟ್ಟ ಸಂಗತಿಯ ಗೆಳೆಯರಿಂದ ಅವರು ದಾರಿ ತಪ್ಪುತ್ತಿರುವುದನ್ನು ನೋಡಿದ ಪ್ರಯಾಗಬಾಯಿಯು ಒಬ್ಬ ಸುಂದರ ಮರಾಠವಾಡಾದ ಹೆಣ್ಣನ್ನು ನೋಡಿ ಮದುವೆ ಮಾಡಿದರು.ಆದರೆ ಮದುವೆಯಾಗಿ ಬಂದ ಓರಗಿತ್ತಿಯು ತಾಯಿಯವರ ತದ್ವಿರುದ್ಧ ಅವಳು ತುಂಬಾ ಚಂಚಲೆ, ಚಟಪಟ ಅಂತ ಮಾತನಾಡುವ ಎದುರುತ್ತರ ನೀಡುವ ಸೊಸೆ ….ಅತ್ತಿಯಂದಿರು ಹೇಳಿದ ಮಾತುಗಳನ್ನು ಕೇಳುತ್ತಿರಲಿಲ್ಲ… ಹೀಗಾಗಿ ಮದುವೆಯಾದ ಹೊಸತರಲ್ಲಿ ಪ್ರಯಾಗಬಾಯಿ ಸಣ್ಣ ಸೊಸೆಗೆ ಯಾವುದಾದರೂ ಸಣ್ಣ ಕೆಲಸ ಹೇಳಿದರು ಓರಗಿತ್ತಿಯು ಮಾಡುತ್ತಿರಲಿಲ್ಲ.ಅವಳು ರಾತ್ರಿ ಸಮಯ ಒಂಬತ್ತು ಗಂಟೆ ಆಗುತ್ತಿದ್ದಂತೆ ತನ್ನ ಗಂಡನ ಕೋಣೆಗೆ ಹೋಗಿಬಿಡುತ್ತಿದ್ದಳು . ಸಿರಿಮಂತ ಮನೆಯ ಸೊಸೆ ಅಲ್ಲವೇ ಬೆಳಗ್ಗಿನ ವಿಹಾರಕೆ ಅಂತ ಇಬ್ಬರೂ ಗಂಡ ಹೆಂಡದಿರು ಹೊರಟು ಹೋಗುತ್ತಿದ್ದರು.ಅತ್ತಿಯಂದಿರ ಹೇಳುವ ಕೆಲಸಗಳನ್ನು ಎಷ್ಟು ಕೇಳಬೇಕು ಅಷ್ಟೇ ಕೇಳುವಳು…ತಾನಾಯಿತು ತನ್ನ ಗಂಡನಾಯಿತು ಅಷ್ಟೇ ಅವಳ ಪ್ರಪಂಚವಾಗಿತ್ತು. ಜಯದೇವಿ ತಾಯಿಯವರಂತೆ ಸುಶೀಲ ಸದ್ಗುಣ ಸಾಧ್ವಿ ಸೊಸೆ ಆಗಿರಲಿಲ್ಲ ಹೀಗಾಗಿ ಸಹಜವಾಗಿ ಪ್ರಯಾಗಬಾಯಿಗೆ ಜಯದೇವಿ ತಾಯಿಯವರ ಮೇಲೆ ನಂಬಿಕೆ ಪ್ರೀತಿ ಮಮತೆ ಹುಟ್ಟಲಾರಂಭಿಸಿತು. ಅತ್ತೆಯಂದಿರ ನೆಚ್ಚಿನ ಸೊಸೆಯಾದರು . ಜಯದೇವಿ ತಾಯಿಯವರ ಗಂಡನ ತಮ್ಮನ ಮದುವೆಯಾದ ನಂತರ ತಾಯಿಯವರು ಎರಡನೆಯ ಹೆರಿಗೆ ಹೋದರು ಈ ಸಲ ಮೊದಲ ಹೇರಿಗೆ ಅಂತ ಉತ್ಸಾಹ ಸಂತಸ ಯಾವುದು ಇರಲಿಲ್ಲ ಯಾವ ಸಂಭ್ರಮ ಇರಲಿಲ್ಲ ಸಹಜವಾಗಿ ಹೊರಟು ನಿಂತರು. ಈ ಸಲದ ಹೇರಿಗೆಯು ಸುರಕ್ಷಿತವಾಗಿ ಸುಗಮವಾಗಿ ಸಾಗಿತು. ಅತ್ಯಂತ ಸುಂದರ ಹೆಣ್ಣು ಮಗುವಿಗೆ ಜನ್ಮವನ್ನು ಕೊಟ್ಟರು ಚಂದಿರನಂತೆ ಸುಂದರವಾಗಿದ್ದ ಮಗುವಿಗೆ ‘ಶಶಿಕಲಾ ‘ಎಂದು ನಾಮಕರಣ ಮಾಡಿ ಸಂತೈಸಿದರು .ಇಷ್ಟರಲ್ಲಿ ಬ್ರಿಟಿಷರ ಸೊತ್ತಾಗಿದ್ದ ಲಿಗಾಡೆ ಮನೆತನದ ಆಸ್ತಿಯನ್ನೆಲ್ಲ ಚೆನ್ನಮಲ್ಲಪ್ಪನವರಿಗೆ ಬ್ರಿಟಿಷರು ಆದರದಿಂದ ಒಪ್ಪಿಸಿದ್ದರು.ನಂತರ ಅವರು ಮೂರನೇ ಹೇರಿಗೆ ಹೋರಟರು ಹೀಗೆ ಮೇಲಿಂದ ಮೇಲೆ ತವರು ಮನೆಗೆ ಹೋಗುವುದು ಗಂಡನಿಗೆ ಬೇಸರ ತರುತ್ತಿದ್ದರು ಹೇರಿಗೆಯೂ ಮನೆಯಲ್ಲಿ ಆಗಲಿ ಅಂತ ಹೇಳುವ ಧೈರ್ಯ ಅವರಿಗೆ ಇರಲಿಲ್ಲ. ಅನಿವಾರ್ಯ ಹೋಗಲೇ ಬೇಕಾಲ್ಲ…ಮೂರನೆಯ ಹೇರಿಗೆ ಸುಂದರ ಗಂಡು ಮಗವನ್ನು ಹೆತ್ತರು. ಅವನಿಗೆ ‘ಶ್ರೀಕಂಠ ‘ಅಂತ ಹೆಸರಿಡಲಾಯಿತು. ಅತ್ಯಂತ ಅದ್ದೂರಿಯಾಗಿ ಸಂಭ್ರಮವನ್ನು ಆಚರಿಸಿದರು.ಗಂಡು ಮಗ ಅಂದರೆ ಕೇಳಬೇಕು ಆಗಿನ ಕಾಲದಲ್ಲಿ ಗಂಡು ಮಗ ಹುಟ್ಟಿದರೆ ಸ್ವರ್ಗದ ಬಾಗಿಲ ತೆರೆದಂತೆಆದರೆ ಜಯದೇವಿ ತಾಯಿಯವರು ಹೆಣ್ಣು ಗಂಡು ಎರಡನ್ನು ಸಮಾನತೆಯಲ್ಲಿ ನೋಡುವ ದೃಷ್ಟಿಕೋನವನ್ನು ಚಿಕ್ಕವರಿರುವಾಗಲೇ ಅವರು ಹೊಂದಿದವರಾಗಿದ್ದರು. ಅದಕ್ಕೆ ತಾಯಿಯವರು ಒಂದು ಕಡೆ ಬರೆಯುತ್ತಾರೆ ಹೆಣ್ಣು ಹುಟ್ಟೇದಂತ | ಕಣ್ಣೀರ ಕರಿಬ್ಯಾಡ ಸಣ್ಣಾಗಬ್ಯಾಡ ಮನದಾಗ -ತಾಯವ್ವಹೆಣ್ಣಿನ ಜಗದ ಕಣ್ಣೇನ || ಕಾನೂನು ಬದ್ಧವಾಗಿ ಹೆಣ್ಣು ಗಂಡು ಇಬ್ಬರೂ ಸಮಾನತೆ ಪಡೆಯುವಂತಹ ಕಾಲದಲ್ಲಿ ಜಯದೇವಿ ತಾಯಿಯವರು ಹುಟ್ಟಿದ್ದರೂ ಸಂಪ್ರದಾಯದಾಯಸ್ಥ ಕುಟುಂಬಕ್ಕೆ ಪುಷ್ಟಿ ಕೊಟ್ಟವರು.ಯಾವ ಕಾಲದಲ್ಲೂ ಹೆಣ್ಣು ಹುಟ್ಟಿ ಎರಡು ಮನೆಯಲ್ಲಿ ದೀಪ ಬೆಳಗುವಳಾಗಬೇಕು. ಕುಟುಂಬದ ಹೃದಯವಾಗಿ ನಿಲ್ಲಬೇಕು ನಿಜ . ಸೊಸೆಯಾಗಿ ಬಂದವಳು ಮೊದಲು ಸಹನೆ ಸೈಯ್ಯಮ ವಿನಯತೆ ಅವಳಿಗೆ ಆಭರಣ …ಹಿರಿಯರಿಗೆ ಆದರ ತೋರುತ್ತ ಕುಟುಂಬವ ನಿರ್ವಹಿಸುವುದೇ ಅವಳ ಧರ್ಮ. ಸಂಪ್ರದಾಯದ ಬಳುವಳಿಯನ್ನೇ ಬಳವಿಗೆ ಮಾಡಿದ್ದಾರೆ. ಕುಟುಂಬ ಜೀವನದ ಅನೇಕ ಏರಿಳಿತದ ಬಗ್ಗೆ ಹೇಳ್ತಾ ಹೋಗ್ತಾರೆ … ಗರತಿಯ ಬಗ್ಗೆ ಹೀಗೆ ಹೇಳ್ತಾರೆ “ದಯ ಬೇಕ ನುಡಿಯಲಿ |ಭಯ ಬೇಕ ನಡೆಯಲ್ಲಿ ದಯ ಬೇಕ ಸಕಲ ಜೀವನದಲ್ಲಿ -ತಾಯವ್ವಲಯ ಬೇಕು ಶಿವನ ನೆನಹುನಲಿ|| ಸೊಸೆಯಾದವಳು ಮೊದಲು ಮನೆ ಕೆಲಸ ಮಾಡಿ ಮನೆಯ ಮಂದಿಯ ಮನವನ್ನೇಲ್ಲ ಗೆಲ್ಲಬೇಕು ಗಂಡನ ಮನ ಗೆಲ್ಲಬೇಕು…. ವಿನಯಶೀಲರಾಗಿರಬೇಕು… ಎಲ್ಲರ ಬೇಕು ಬೇಡುಗಳನ್ನು ನೋಡುವಂಥವಳು ಆಗಿರಬೇಕು. ಮಾತಿಗೆ ಮಾತು ಬೆಳೆಸದಂಥವಳಿರಬಾರದು ಹೆಚ್ಚು ಅಗೆದರೆ ತಗ್ಗು ಬೀಳುವುದು ಹೆಚ್ಚು…. ಎಂಬಂತೆ ಮಾತಿನ ಗತಿ ಹೇಗಿರಬೇಕೆಂದರೆ ಮನಗಳನ್ನು ತಿಳಿಯಾಗಿಸಬೇಕು ಅನ್ನುತ್ತಿದ್ದರು ….ಮನೆಯ ಕಂಬವಾಗಿರಬೇಕು ಸೊಸೆ ಆದವಳು. ಸಿಟ್ಟಲಿ ಗಂಡ-ಅತ್ತೆಗ ಎದುರು ಉತ್ತರ ನುಡಿದರೆಮನೆಯವರ ಮನ ಸುಡು ಸುಡು ಸುಟ್ಟುಮರಳಿ ಸೊಸೆಯ ಕಡೆಗೆ ಚಟ್ಟಂತಹ ಸಿಡಿಯುವದಬಿರುಗಾಳಿ ಬೀಸಿದಂಗ ತೂರಿ ಬಂದ ಮಾತುಗಗನಕ್ಕಹಾರಿ ಒಯ್ದು ನೆಲಕ್ಕೆ ದೊಪ್ಪೆಂದ ಒಗೆವದ.. ಅಂತ ಹೇಳುವ ಮಾರ್ಮಿಕವಾದ ಉದಾರಣೆಯನ್ನು ಹೇಳುತ್ತಿದ್ದರು .ಹೆಣ್ಣಾದವಳು ನಗುನಗುತ ಮಾತಾಡಬೇಕುಹಗೆ ಎದುರಾದರೂ ಹೊಗೆ ನುಡಿ ಸಲ್ಲಕಾಣಲಾರದ ಕಣ್ಣು ಕಂಡ್ನಗ ಕಂಡಹಂಗ ಆಡಿ ಬಾಣಧಾಂಗ ಮಾತು ಮರಳಿ ಬಡೆಯದ ಮುನ್ನ ಜೋಕೆಯಿಂದಿದ್ದುತಾನು ಸುಟ್ಟುಕೊಂಡು ಇತರರ ಮನ ತಂಪಾಗಿರಬೇಕು….. ತುಪ್ಪ ಸಕ್ಕರೆ ಉಪ್ಪ-ಖಾರ ಉಣಿಸಿ ಒಪ್ಪುಳ್ಳ ಮಾತು ಕಲಿಸಿದರೆ ನಾಲಿಗೆ ಹಾಲಿನ ಹೆಪ್ಪುಗೆಡಿಸಿತ್ತು ಆಗಸಿರಿ ಇದ್ದು ಸುತರಿದ್ದು ಸುಖವಿಲ್ಲ ಹಿತವಿಲ್ಲದಿದ್ದರೆ ಫಲವೇನು….. ಎನ್ನುತ್ತಾರೆ ಕಡಿಮೆ ಎಂದರೆ ಮೂರು ತಲೆಮಾರಿನವರು ಜನರು ಕೂಡಿ ಇರುವ ಪದ್ಧತಿಯೇ ನಮ್ಮ ಸಂಸ್ಕೃತಿ ನಮ್ಮ ದೇಶದ ಪರಂಪರೆಯ ಬಳುವಳಿಯನ್ನು ನಾವು ಮೀರಬಾರದು ಅನ್ನುವುದು ಜಯದೇವಿ ತಾಯಿಯವರ ವಾದವಾಗಿತ್ತು. ಐದು ಜನ ಅತೇರ ಕೈಯಲ್ಲಿ ನಡೆದು ನಾಲ್ಕು ಜನ ಸೊಸೆಯೊಂದನ್ನು ನಡೆಸಿಕೊಂಡ ಗೊತ್ತು 23 ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಕಂಡತುಂಬಾ ಜೀವನದ ಅನುಭವದ ವಿಚಾರ. ಹರೆಯದ ಹೆಣ್ಣು ನೂರಾರು ಆಸೆ ಹೊತ್ತು ಅತ್ತೆಯ ಮನೆಗೆ ಬಂದಾಗ ತನ್ನ ಸುಖಕ್ಕಿಂತ ಮನೆಯಲ್ಲಿಯೇ ಹಿತ ರಕ್ಷಿಸುವುದೇ ಮೇಲು ತನ್ನ ಮನ ನೊಂದರು ಉಳಿದವರ ಮನನೊಯದಂತೆ ನೋಡಿಕೊಳ್ಳಬೇಕು ಅನ್ನುತ್ತಿದ್ದ . ಅವಿಭಕ್ತ ಕುಟುಂಬದಲ್ಲಿ ಬೆಳೆದ ತಾಯಿಯವರು ಸ್ವಾಭಿಮಾನದಿಂದಲೇ ಈ ಮಾತುಗಳ ಹೇಳಿದ್ದಾರೆ ನಮ್ಮ ಸಂಸ್ಕೃತಿಯಿಂದ ದೂರ ಸರಿಯದೇ ವ್ಯಕ್ತಿ ವಿಕಸನವನ್ನು ಮಾಡಿಕೊಳ್ಳಬಹುದು….. ಬೆಳೆಯಬಹುದು ಅನ್ನುವುದು ತೋರಿಸಿಕೊಟ್ಟ ಸಾಕ್ಷಾತ್ ನಿದರ್ಶನ ಅವರ ಜೀವನ. ಹಾಗೆ ಹೆಣ್ಣಾಗಿ ಸತ್ಯಕ್ಕಾಗಿ ಹೋರಾಡಬೇಕು, ಕೆಟ್ಟದ್ದನ್ನು ಪ್ರತಿಭಟಿಸಬೇಕು ,ಗಂಡನಿಗೆ ಸರಿ ಸಮಾನವಾಗಿ ನಿಲ್ಲಬೇಕು ಜೀವನದಲ್ಲಿ ಸಾಧನೆ ಮುಖ್ಯ ಗುರಿ ಆಗಿರಬೇಕು ಜ್ಞಾನಧ ಎತ್ತರಕ್ಕೆ ಇರಬೇಕು ಅನ್ನೋ ಧೋರಣೆಯನ್ನು ಕೂಡ ಹೊಂದಿದ್ದರು. ಮೊದಲು ಹೆಣ್ಣಾದವಳು ಸೋತು ಸೋತು ಗೆಲ್ಲಬೇಕು ಅನ್ನುವ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ವೈಶಿಷ್ಟ ಪೂರ್ಣವಾದ ವ್ಯಕ್ತಿ ವಿಶೇಷತೆ ತೋರುತ್ತದೆ. ವ್ಯಾಪಾರದಲ್ಲಿ ನೈಪುಣ್ಯತೆ ಹೊಂದಿರುವ ತಂದೆ ಚನ್ನಬಸಪ್ಪನವರ ಜೊತೆ ಕೂಡಿ ವ್ಯಾಪಾರವನ್ನು ಮಾಡುತ್ತಿದ್ದರು…ಗಂಡ ಚೆನ್ನಮಲ್ಲಪ್ಪನವರು. ಹಾಗೆ ಜಯದೇವಿ ತಾಯಿಯವರ ಅಕ್ಕ ತಂಗಿಯರು ಅಣ್ಣ ತಮ್ಮಂದಿರನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು.ಜಯದೇವಿ ತಾಯಿಯವರ ತಂಗಿಯಂದಿರು ಮಕ್ಕಳ ವಯಸ್ಸಿನವರಷ್ಟೇ ಇದ್ದರು .ಆಗಿನ ಕಾಲದಲ್ಲಿ ತಾಯಿ ಮಗಳ ಹೆರಿಗೆ ಜೊತೆ ಜೊತೆಗೆ ಆಗುವುದು ಸಹಜವಾಗಿತ್ತು…..ಹೀಗಾಗಿ ಜಯದೇವಿ ತಾಯಿಯವರ ತಂಗಿಯಂದಿರು ಹಾಗೂ ಮಕ್ಕಳು ಎಲ್ಲರೂ ಸೇರಿ ಶಾಲೆಗೆ ಹೋಗುತ್ತಿದ್ದರು. ಈ ಸಮಯದಲ್ಲಿ ತಾಯಿಯವರಿಗೆ ವಚನವನ್ನು ಓದುವ ಮಹದಾಸೆ ಹೆಚ್ಚಾಗಿ ತೊಡಗಿತ್ತು.ಶರಣರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಆಳವಾದ ಅಮೂಲ್ಯವಾದ ವಚನ ಸಾಹಿತ್ಯವನ್ನು ಅಭ್ಯೆಸಿಸಬೇಕು ತನ್ನಲ್ಲಿ …ಹುಟ್ಟುವ ಭಾವನೆಗಳನ್ನು ತಾಯಿ ಭಾಷೆಯಲ್ಲಿ ವ್ಯಕ್ತಪಡಿಸಬೇಕು ಅನ್ನುವ ತಳಮಳ ಅವರಲ್ಲಿ ಉಲ್ಬಣಗೊಳ್ಳಲಾರಂಭಿಸಿತು ….ಕನ್ನಡ
ಧಾರಾವಾಹಿ ಸಂಗಾತಿ ಕಂತು-ಆರು ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ “ಮಾತಾಡೋ ಮಾತಾಡೋ ಆತುಮದ ಲಿಂಗವೇ!! ಮುನಿಸುವುದೇತಕ್ಕೆ ಅನಿಮಿತ್ಯವಾಗಿ ನೀಎನ್ನಯ್ಯ ಮಾತಾಡು, ಚನ್ನೀಗ ಚರಲಿಂಗವೆ!! ನಂಬಿದೆ ನಂಬಿರುವೆ ಸಾಂಬ ನಿನ್ನಯ ಪಾದಕಂಬನಿ ಸುರಿಯುವವೊ ಶಂಭೋ ನೀ ಮಾತನಾಡೊ ಅಂಗೈಯದೊಳು ಬಂದು ಲಿಂಗರೂಪವ ತಾಳಿ ಕಂಗೊಳಿಸುವ ಶಿವನೆ ಮಂಗಳಮಯ ಲಿಂಗವೇ!! (“ತಾರಕ ತಂಬೂರಿ” ಕವನ ಸಂಕಲನ) ನಂಬಿರುವೆ ನಿನ್ನನ್ನೇ ಅಂತ ಅಂಗೈಯಲ್ಲಿ ಲಿಂಗವನ್ನು ಹಿಡಿದ…… ಎಳೆ ವಯಸ್ಸಿನ ಜಯದೇವಿ ತಾಯಿಯವರು ಸಂಸಾರದ ಕಷ್ಟಗಳ ಹೊರೆಹೊರಲಾಗದೆ ನೊಂದು ಆ ಲಿಂಗನನ್ನೆ ಬೇಡಿಕೊಳ್ಳುತ್ತಿದ್ದರು……. ನೋವಿನ ನೆರಳಲ್ಲಿ ದಿನಗಳನ್ನು ಎಣಿಸುತ್ತಿದ್ದ ಸೊಸೆಗೆ, ಅತ್ತೆಯ ಕಠೋರ ಮಾತುಗಳು ಮತ್ತು ದೌರ್ಜನ್ಯದ ನಡೆ ಬಲು ಹಿಂಸಿಸುತಿತ್ತು. ಪ್ರತಿದಿನವೂ ಅವರ ಮನಸ್ಸಿನಲ್ಲಿ ಬದುಕಿನ ಹೋರಾಟ—ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ.ಕಣ್ಣೀರನ್ನು ಒಳಗೇ ಹತ್ತಿಕ್ಕಿ, ಮನೆಯ ಗೋಡೆಗಳ ನಡುವೆ ತನ್ನ ನೋವನ್ನು ಹೂತು ಬದುಕುತ್ತಿದ್ದ ಜಯದೇವಿ ತಾಯಿಯವರು ಬಸವಣ್ಣನ ವಚನವನ್ನು ಯಾವಾಗಲೂ ಹೇಳುತ್ತಿದ್ದರಂತೆ, ತಂದೆ ನೀನು ತಾಯಿ ನೀನು ಬಂದು ನೀನು ಬಳಗ ನೀನು”, …….. ನನ್ನ ಸುಖ ದುಃಖವು ನಿನ್ನದೇ…. ಅನ್ನುವ ಅರ್ಪಣೆಯ ಭಾವ ಬೆರುರಲಾರಂಭಿಸಿತ್ತು. ಲಿಗಾಡೆಯವರ ಮನೆ ಜಯನಿಕೀತನ ತಾಯಿ ಸಂಗಪ್ಪನವರು ಹೇಳುವಂತೆ “ಸಹನೆಯಿಂದ ಇರು ಸಿದ್ದರಾಮ ಕಾಯುತ್ತಾನೆ ಅಂತ ಹೇಳುವ ಮಾತು ನೆನಪಿಟ್ಟುಕೊಂಡು ಜೀವನದ ದೋಣಿ ಸಾಗಿಸುತಿದಂತೆ…..sss ಜೀವನದಲ್ಲಿ ಸಂತಸದ ಅಲೆಗಳು ಅಪ್ಪಳಿಸಿದವು….ನೋವಿನ ಮೌನದ ಮಧ್ಯೆ ಒಂದು ದಿನ, ಅವರೊಳಗೆ ನಿಶ್ಶಬ್ದವಾಗಿ ಹೊಳೆಯುವ ಬೆಳಕು ಹುಟ್ಟಿತು…ತಾನು ಬಸೂರಿಯಾದ ಸುದ್ದಿ ಹೃದಯಕ್ಕೆ ತಂಪು ನೀಡಿತು…..!!!! ನೋವಿನ ಭಾರ ಕ್ಷಣ ಕಾಲದಲ್ಲಿ ಮಾಯವಾಗಿ ಹೋಯಿತೆನೊ ಅನ್ನಿಸಿತ್ತು.ಅವರಿಗೆ ಮೊದಲ ಬಾರಿಗೆ ತನ್ನದೇ ಆದ ಒಂದು ಆಂಶವು ಲೋಕಕ್ಕೆ ಬರುವದು… ತನಗಾಗಿಇನ್ನೊಂದು ಲೋಕವಿದೆ ಎನ್ನುವ ಭರವಸೆ ನೀಡತು, ಅವರು ಹೊಟ್ಟೆಗೆ ಕೈಯಿಟ್ಟು ಮೃದುವಾಗಿ ನಗುತ್ತಿದ್ದರು. ಆ ನಗು ಯಾರಿಗೂ ಕಾಣದಿದ್ದರೂ, ಅದು ಉತ್ಸವದ ಕ್ಷಣಗಳಾಗಿದ್ದವು.ಮಗುವಿನ ಸಣ್ಣ ಚಲನೆ-ಒಲನೆಯು….., ಅವರಿಗೆ ಮಾತಾಡುವ ಧೈರ್ಯ ಕಲಿಸಿತು— ಪ್ರತಿಯೊಂದು ಉಸಿರಾಟವೂ ಹೊಸ ಅರ್ಥ ಪಡೆದಿತು; ಪ್ರತಿಯೊಂದು ಕ್ಷಣವು ನಿರೀಕ್ಷೆಯ ಬೆಳಕಾಗಿ ಮೂಡಿತು.ನೋವಿನ ನಡುವೆ ಹುಟ್ಟಿದ ಆ ಆನಂದ ಕ್ಷಣಗಳು, ಅವರ ಬದುಕಿಗೆ ಅರ್ಥ ನೀಡಿದವು.ದೌರ್ಜನ್ಯದಿಂದ ಕಲುಷಿತವಾದ ಮನಸ್ಸಿನಲ್ಲಿ, ತಾಯ್ತನದ ಸ್ಪರ್ಶವು ಔಷಧಿಯಂತೆ ಕೆಲಸಮಾಡಿತು. ಆ ಮಗು ಅವರಿಗೆ ಶಕ್ತಿಯಾಯಿತು, ಭರವಸೆಯಾಯಿತು…!!! ಇನ್ನೇನು…. ನಿನ್ನೆವರೆಗೆ ಕಣ್ಣಲ್ಲಿ ಕಿಡಿ ತುಂಬಿಕೊಂಡು ಮಾತಾಡುತ್ತಿದ್ದ… .. “ನಿನಗೆ ಮಕ್ಕಳಾಗ ಯಾವ ಲಕ್ಷಣಗಳು ಕಾಣುವುದಿಲ್ಲ ನಾನು ಬೇರೆ ಮದುವೆ ಮಾಡ್ತೀನಿ ನನ್ನ ಮಗನಿಗೆ” ಅಂತ ಹೆದರಿಸುತ್ತಿದ್ದ …ಅತ್ತೆಯ ಹೃದಯದಲ್ಲಿ, ಒಮ್ಮಿಂದೊಮ್ಮೆಲೆ ಅನಿರೀಕ್ಷಿತವಾಗಿ ಸೊಸೆಯ ಬಸುರಿತನದ ಸಂತಸವು ಮೃದುತ್ವ ಮೂಡಿಸಿತು. ಸೊಸೆಯೊಳಗೆ ಜೀವ ಮೂಡಿದೆ ಎಂಬ ಸತ್ಯ ತಿಳಿದ ಕ್ಷಣ, ಆಕೆಯ ಕಠೋರತೆ ಕ್ಷಣಾರ್ಧದಲ್ಲಿ ಕರಗಿ ಹೋಗಿತ್ತು.ಕಾಡುತ್ತಿದ್ದ ಅಸಮಾಧಾನ ಮನಸ್ಸು, ತಾನೇ ಅರಿಯದಂತೆ ಮಗು ಬರುವ ನೆನಪುಗಳಲಿ ತೆಲಾಡಲಾರಂಭಿಸಿತು.ಸೊಸೆಯ ಹೊಟ್ಟೆಯ ಮೇಲೆ ಕೈ ಇಟ್ಟು ಇಟ್ಟು ನೋಡುವರಂತೆ ಅತ್ತೆ“ಇವಳೊಳಗೆ ನನ್ನ ಮನೆಯ ಭವಿಷ್ಯ ಉಸಿರಾಡುತ್ತಿದೆ” ಎಂಬ ಭಾವನೆಯು ಎದೆಗಿಳಿದು ಪ್ರೀತಿ ಉಕ್ಕಿ ಹರಿಯುತ್ತಿರೆ……ಬಿರುಸಾದ ಮಾತುಗಳ ಮೃದು ಎಚ್ಚರಿಕೆಯ ಮಾತು ಗಳಾದವು……!!!ಅತ್ತೆಗೆ..ಸೊಸೆಗೆ ಕಣ್ಣು ತಪ್ಪಿಸಿ ನೋಡಿದರೂ, ಆ ನೋಟದಲ್ಲಿ ಕಾಳಜಿ ಇತ್ತು. ಬಸೂರಿಯಾಗಿರುವ ಸೊಸೆಯಲ್ಲಿ ತಾನು ಹಗಲಿರಳು ಕಾಣಿಸುತ್ತಿರುವ ಕನಸಿನ ಪ್ರತಿಬಿಂಬ ಕಂಡಂತೆ ಆಯಿತು.ತಾನೇ ತಾಯಿ ಆದಷ್ಟು ಸಂತಸ ತಂದಿತ್ತು. ಕಠೋರತೆಯ ಹಿಂದೆ ಹೂತುಹೋದ ತಾಯಿಯ ಹೃದಯ, ಆ ಕ್ಷಣಗಳಲ್ಲಿ ನಿಧಾನವಾಗಿ ಹೊರಸುಸಲಾರಂಭಿಸಿತು.ನಿನ್ನೆವರೆಗೆ ನೋವಿನ ಮೂಲವಾಗಿದ್ದ ಅತ್ತೆಯೇ, ಆ ದಿನದಿಂದ ಸೊಸೆಗೆ ಧೈರ್ಯವಾಗಿ ನಿಂತಳು. ಬಸೂರಿಯಾದ ಆ ಸತ್ಯ, ಇಬ್ಬರ ನಡುವಿನ ಗೋಡೆಯನ್ನು ಕರಗಿಸಿ, ಪ್ರೀತಿಗೆ ದಾರಿ ಮಾಡಿಕೊಟ್ಟಿತು…..!!!! ಜಯದೇವಿ ತಾಯಿಯವರು ವಾಸವಾದ ಕೋಣೆ ಮಕ್ಕಳಿಗಾಗಿ ಪ್ರಯಾಗಬಾಯಿಯು ಕಂಡ ಕಂಡ ದೇವರಿಗೆ ಹರಕೆಯನ್ನು ಹೊತ್ತು ನೂರಾರು ದೇವರಗಳನ್ನು ಜಗಲಿಯ ಮೇಲೆ ಇಟ್ಟು ಪೂಜೆ ಮಾಡುತ್ತಿದ್ದರು. ತಿಳಿದು ತಿಳಿಯದೇ ಅನೇಕ ತರದ ಪೂಜೆಗಳಲ್ಲಿ ನಿರತರಾಗುತ್ತಿದ್ದರು. ಇಂದು ಅವರ ಕನಸು ನನಸಾಗಲಿರುವದೆಂದು ಅವರ ಸಂತಸಕ್ಕೆ ಮೇರೆ ಇರಲಿಲ್ಲ.ತಾಯಿ ಸಂಗವ್ವನವರು ಸಂತಸದಿಂದ ಮಗಳ ಬಯಕೆಯ ತರಹದ ಅಡಿಗೆ ಮಾಡಿ ಉಣಿಸಲಾರಂಭಿಸಿದರು. ಸರ್ವಸಾಮಾನ್ಯವಾಗಿ ಮಹಾರಾಷ್ಟ್ರದಲ್ಲಿ (ಚೊರ್ ಚೋಳಿ) ಕಳ್ಳ ಕುಬಸ ಮಾಡಿ….. ಮುಂದೆ ದೊಡ್ಡ ಕುಬಸದ ಕಾರ್ಯವನ್ನು ಮಾಡುವಂತೆ ಐದನೇ ತಿಂಗಳಿಗೆ ಸಿಮಂತದ ದೊಡ್ಡ ಕಾರ್ಯಕ್ರಮವನ್ನು ಮಾಡಿ ಎಲ್ಲ ಅತ್ತೆಯಂದಿರಿಗೆ ಭರ್ಜರಿಯಾದ ಪಿತಾಂಬರಾದ ಸೀರೆಯನ್ನು ಉಡಿಸಿ ಅವರನ್ನೆಲ್ಲ ಆನಂದ ಪಡಿಸಿದರು. ಮೊದಲ ಸಲ ಗರ್ಭಿಣಿ ಆದವರಿಗೆ ಅನೇಕ ತರದ ಸೀಮಂತದ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ. ಬೆಳದಿಂಗಳ ಕುಬಸು ,ಸೂರ್ಯೋದಯ ಕುಬಸು (ಜೋಪಾಳ) ಉಯ್ಯಾಲೆ ಕುಬಸ ,ನಾವೆಯ ಕುಬಸ, ಸಮುದ್ರ ತೀರದ ಕುಬುಸ , ಒಳಕುಬಸ ಹೊರ ಕುಬಸ,ದೇವರೆದುರಿನ ಕುಬಸ, ಸಣ್ಣ ಕುಬಸ ,ದೊಡ್ಡ ಕುಬಸ…. ಹೀಗೆ ಅನೇಕ ತರದ ಕುಬಸುಗಳನ್ನು ಮಾಡಲಾಗುವದು ಅವುಗಳನ್ನೆಲ್ಲವನ್ನು ಆಚರಿಸಲಾಯಿತು. ಇಲ್ಲಿ ಬೆಳದಿಂಗಳ ಕುಬಸ ಅಂದರೆ ಚಂದ್ರನ ದಿವ್ಯ ಬೆಳಕಿನಲ್ಲಿ ಆ ಬೆಳಕಿನ ಬಣ್ಣದ ಸೀರೆಯನ್ನು ಉಡಿಸಿ ಹೂವು ಮೂಡಿಸಿ ಆ ಬಿಳಿ ಬಣ್ಣದ ಸಿಹಿ ಊಟವನ್ನು ತಯಾರಾಸಿ ಉಣಬಡಿಸುವರು. ಇನ್ನು ಸೂರ್ಯೋದಯದ ಕುಬುಸ ಅಂದರೆ ಸೂರ್ಯನ ಬಣ್ಣದ ಸೀರೆ ಉಡಿಸಿ ಅದೇ ಬಣ್ಣದ ಹೂಗಳನ್ನು ಮೂಡಿಸಿ ಸೂರ್ಯನ ಕಿರಣಗಳ ಮಧ್ಯ ಕೂಡಿಸಿ,ಹೊಂಬಣ್ಣದ ಮೃಷ್ಟಾನ್ನ ಅಡುಗೆ ಮಾಡಿ ಉಣ ಬಡಿಸುವರು. “ಉಯ್ಯಾಲೆಯ ಕುಬುಸು”ಅಂದರೆ ಉಯ್ಯಾಲೆಗೆ ಹೂವುಗಳಿಂದ ಅಲಂಕರಿಸಿ ಬಣ್ಣ ಬಣ್ಣದ ಬಟ್ಟೆ ವಸ್ತ್ರಗಳನ್ನು ಉಡುಗೆ ತೊಡಿಸಿ ತರ ತರಹದ ಅಡುಗೆ ಉಣಬಡಿಸುವರು .ಇನ್ನು “ನಾವೆಯ ಕುಬಸು”ಎಂದರೆ ದೋಣಿಯಲಿ ಕುಡಿಸಿ ನೇರವೆರಿಸುವರು. ಶಿವಯೋಗಿ ಸಿದ್ದರಾಮೇಶ್ವರರು ಕಟ್ಟಿದ ಕೆರೆಯಲ್ಲಿ ದೋಣಿಗಳಲಿ ಕುಬುಸ ಹೂಡಲಾಯಿತು.ಶಿವಯೋಗಿ ಸಿದ್ದರಾಮೇಶ್ವರನ ದರ್ಶನಕ್ಕೆ ಬಂದ ಯಾತ್ರಿಕರು ಧೋಣಿಗಳಲ್ಲಿ ವಿಹರಿಸ ಬಹುದಾಗಿದೆ. ಈಗಲೂ ಭಕ್ತಾದಿಗಳು ದೋಣಿಯಲ್ಲಿ ಕುಳಿತು ಆನಂದಿಸುವ ವ್ಯವಸ್ಥೆ ಇದೆ.ಜಯದೇವಿ ತಾಯಿಯವರಿಗಾಗಿಯೇ ಒಂದು ದೊಡ್ಡ ದೋಣಿಯನ್ನು ಅಲಂಕರಿಸಿ ಕೆರೆಯ ಮಧ್ಯದಲ್ಲಿ ಸಿಮಂತದ ಆಚರಣೆ ಮಾಡಲಾಯಿತು.ದೇವರೆದುರಿನ ಕುಬಸು ಅಂದರೆ ವಿಶೇಷವಾಗಿ ಸಿದ್ದರಾಮನ ಗರ್ಭಗುಡಿಯ ಎದುರು ಕೂಡಿಸಿ ಅವನೆದುರಿಗೆ ಕುಬಸನ್ನು ಮಾಡಿ ಆನಂದಿಸಿದರು. ಅಲ್ಲಿ ಹತ್ತಿರದಲ್ಲಿರುವ ರೇವಣಸಿದ್ದೇಶ್ವರ ದೇವಾಲಯದಲ್ಲಿ ಕುಬಸಿನ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಅನೇಕಾಅನೇಕ ತರದ ಕುಬುಸಗಳನ್ನು ಮಾಡಿ ಕಣ್ಮನ ತುಂಬಿಕೊಂಡರು ಅತ್ತೆಯ ಮನೆಯವರು ಹಾಗೂ ತವರಿನವರು.ಇನ್ನೂ ಬಂಧು-ಬಳಗದವರು ಅಂದರೆ ದಿನಕ್ಕೆ ಮೂರು ನಾಲ್ಕು ಮನೆಯವರಿಂದ ಆಮಂತ್ರಣ ಬರುವುದು ಅಲ್ಲಿ ಎಲ್ಲಾ ಕಡೆಗೂ ಹೋಗಿ ಅವರ ಆದರ ಆಥಿತ್ಯವನ್ನು ಸ್ವೀಕರಿಸಿ ಊಟ ಮಾಡಲೇ ಬೇಕಿತ್ತು. ಆದರೆ ಜಯದೇವಿ ತಾಯಿಯವರು ಅತ್ಯಂತ ನಾಜಕಿನ ಆರೋಗ್ಯದ ಸ್ಥಿತಿ ಇದ್ದಿದ್ದ ಕಾರಣ ಹೆಚ್ಚು ಉಣ್ಣಲಾಗುತ್ತಿರಲಿಲ್ಲ.ಆದರೂ ಬಳಗದವರ ಪ್ರೀತಿಯ ಒತ್ತಾಯಕ್ಕೆ ಮಣಿದು ಸ್ವಲ್ಪ ಹೆಚ್ಚಿಗೆ ಊಟ ಮಾಡಬೇಕಾಗುತ್ತಿತ್ತು. ಹೀಗಾಗಿ ಬಹಳಷ್ಟು ಸೋತು ಸೋತು ಬರುತ್ತಿದ್ದರು. ಅಂತ ತಾಯಿಯವರು ಹೇಳುತ್ತಿದ್ದರು. ಅದು ಮುಂದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಅಂತ ಹೇಳುತ್ತಿದರು.“ಯಾರ ಒತ್ತಾಯಕ್ಕು ನಾವು ಊಟವನ್ನು ಹೆಚ್ಚಿಗೆ ಮಾಡಬಾರದು ನಮ್ಮ ದೇಹಕ್ಕೆ ಎಷ್ಟು ಬೇಕು ಅಷ್ಟನ್ನೇ ನಾವು ಸ್ವೀಕರಿಸಬೇಕು” ಮುಂದೆ ದೀರ್ಘಕಾಲದ ದುಷ್ಪರಿಣಾಮಗಳು ಶರೀರದ ಮೇಲೆ ಆಗುವ ಅನ್ನುತ್ತಿದ್ದರು. ಜಯದೇವಿ ತಾಯಿಯವರು ಪತಿ ಚೆನ್ನಮಲ್ಲಪ್ಪ ಲಿಗಾಡೆಯವ ಜೊತೆ ಅದೊಂದು ದಿನ ಮಗು ಭೂಮಿಗೆ ಬರುವ ಸಮಯವು ಬಂತ್ತು .ಅತ್ಯಂತ ಸುಂದರವಾದ ಮಲ್ಲಿಕಾರ್ಜುನನ್ನೇ ಹೊಲುವ ಮಗನನ್ನು ಜನ್ಮ ಕೊಟ್ಟರು. ಸೋನ್ನಲಿಗಿಯ ಸಿದ್ದರಾಮೇಶ್ವರರು ಆರಾಧಿಸುವ ದೈವ ಸಾಕ್ಷಾತ್ ಮಲ್ಲಿಕಾರ್ಜುನನೇ ಹುಟ್ಟಿ ಬಂದನು ಎನ್ನುವ ಸಂತಸದಲ್ಲಿ ಆ ಮಗುವಿಗೆ ಮಲ್ಲಿಕಾರ್ಜುನ ಅಂತನೇ ಹೆಸರಿಸಲಾಯಿತುಅತ್ತೆಯಂದಿರಗೆ ಎಲ್ಲಿಇಲ್ಲದ ಸಂತಸ … ಅದೆಷ್ಟೋ ದಿನಗಳಿಂದ ಮಕ್ಕಳಿಗಾಗಿ ಪರಿತಪಿಸುತ್ತಿರುವ ಲಿಗಾಡೆಯ ಮನೆತನದಲ್ಲಿ ಗಂಡು ಮಗ ಜನಿಸಿತು ಹೇಳತೀರದ ಆನಂದ ತುಂಬಿತುಳುತ್ತಿತ್ತು . ಆದರೆ ವಿಧಿಯ ಆಟವೇ ಬೇರೆಯಾಗಿತ್ತು…ಮಗು ಹುಟ್ಟಿದ ಸಲ್ಪ ದಿನದಲ್ಲಿ ತೀರಿಕೊಂಡಿತ್ತು. ಅದೇ ತಾನೇ ಸಂತಸ ಗೊಂಡಿರುವ ಎರಡು ಮನೆಗಳಲ್ಲಿ ಕತ್ತಲೆ ಆವರಿಸಿ ದಂತಾಗಿತ್ತು …… ಅತಿವ ನೋವುಉಂಟು ಮಾಡಿತು-ಬರಿದಾದ ಮಡಿಲು…… ಖಾಲಿತನವಷ್ಟೇ ಉಳದಿತ್ತು.ಸುಂದರವಾದ ಗಂಡು ಮಗುವಿನ ಉಸಿರಿನ ತಾಪ ಇನ್ನೂ ತಾಯಿಯ ಎದೆಯಲ್ಲೇ ಉಳಿದಿತ್ತು. ಮುದ್ದು ಮಗುವಿನ ಅಳು…..ನಿದ್ರೆಯಲ್ಲೂ ನಗುವ-ನಗೆ….ಇಗ ಆ ನಗು-ಅಳು ಮೌನವಾಗಿವೆ. ಹಾಸಿಗೆಯ ಮೇಲೆ ಮಡಚಿಟ್ಟ ಚಿಕ್ಕ ಚಿಕ್ಕ ಬಟ್ಟೆಗಳ ನೋಡಿ ತಾಯಿಯ ಕಣ್ಣಿರು ಮಳೆಯಾಗಿ ಹರಿದವು. ಅಳು ಕೇಳಿಸದೇ ಹೃದಯವೇ ಕಿತ್ತು ತಿನ್ನುತ್ತಿತ್ತು……ಒಮ್ಮೆ ಅವನನ್ನು ಹೊತ್ತ ಕೈಗಳು ಇದೀಗ ಖಾಲಿಯಾಗಿ ಗಾಳಿಯನ್ನು ಅಪ್ಪಿಕೊಳ್ಳುತ್ತಿವೆ……ಹಾಲು ತುಂಬಿದ ಎದೆ ಮಗುವಿಲ್ಲದ ನೋವಿನಿಂದ ಕಲ್ಲಾಗಿತ್ತು……. ಮನ ಕಲ್ಲಾಗಿತ್ತು….ssssss ಮುಂದೆ ತಾಯಿಯವರು ಇದನ್ನು ಬಹಳ ಅತ್ಯಂತ ಸುಂದರವಾಗಿ ವರ್ಣಿಸುತ್ತಾರೆ…… ಅಳುತ್ತಿದ್ಯಾ ಕಂದಾ ಅಳುವೆಯಾ? ನಿನ್ನ ಹಿಂದಣ ಜನುಮದ ಕೊಳೆ ತೊಳೆಯಲೆಂದು !!ಪಲ್ಲವಿ!! ತಾಯಿಯ ಗರ್ಭದಲ್ಲಿ ಕೈಕಾಲುಗಳ ಕಟ್ಟಿಬಾವಿಯೊಳು ಈಸಲು ಇಳಿಸಿದರೆಂದು!! ಮುಸುಕಿನೊಳಗೆ ಕಟ್ಟಿ ಬಿಸಿ ಎಡಬಲದಲ್ಲಿ ಉಸಿರಿಸಲು ನಿನಗೆ ಬರಲಿಲ್ಲವೆಂದು !! ಬರಿ ಕಾಯದಿಂದಲಿ ಧರೆಮೇಲೆ ಬೀಳುತಮುಟ್ಟು ಹೇಸಿಕೆಯಲಿ ಹೊರಳಾಡಿದೆನೆಂದು!!ಹಿಂದಣ ಜನುಮದ ತಾಯಿ ತಂದೆಗಳಿಲ್ಲಬಂದು ಬಳಗ ಎನಗೆ ಇಂದಿಲ್ಲವೆಂದು !! ಮೊಲೆ ಹಾಲು ಉಣಿಸುತ ಬಲು ಪ್ರೀತಿಯಲಿತಾಯಿ ಜಾಲದೊಳಗೆ ನಿನಗೆ ಕೊಳ್ಳುವಳೆಂದು!! ಹಿಂದಣ ಸುಖ ದುಃಖ ಇಂದು-ನೆನ್ನೆ ನೆನೆದುಬಿಕ್ಕಿಬಿಕ್ಕಿ ಅಳುವಿ ಏನು ತಿಳಿಯದೆಂದು!! ಹಿಂದಣದ ಪರಿ ಮತ್ತೆ ಮುಂದೆ ಬರುವುದೆಂದು ಬಂಧನ ಇದು ಈಗ ಬೇಸರಗೊಂಡು !! ಒಂಟಿಗನಾಗಿ ಬಂದು ಹೊಂಟು ಹೋಗುವದೇ ನೆಂಟರು ಎನಗಿಲ್ಲ ಯಾರಿಲ್ಲವೆಂದು,ಹೋದೆಯಾ!!ಅಳುತ್ತಿದ್ಯಾ ಕಂದಾ ಅಳುವೆಯಾ? ನಿನ್ನ ಹಿಂದಣ ಜನುಮದ ಕೊಳೆ ತೊಳೆಯಲೆಂದು !!ಪಲ್ಲವಿ (ತಾರಕ ತಂಬೂರಿ-ಕವನ ಸಂಕಲನ)ಈ ಕವನದಿ ಅಡಕವಾದ ಸಾರಾಂಶ ಅತ್ಯಂತ ಗಂಭೀರವಾದ-ತಾತ್ವಿಕ ಹಾಗೂ ಕರುಣಾಜನಕವಾದ ಭಾವವನ್ನು ಹೊತ್ತುಕೊಂಡಿದೆ.ಈ ಕವನವು ಮಗು ಅಳುವಿಕೆಗೆ ಕಾರಣವಾಗಿರುವ ಅಜ್ಞಾತ -ನೋವಿನ ಹಿಂದೆ ಇರುವ ಹಿಂದಿನ ಜನ್ಮದ ಪಾಪ–ಪುಣ್ಯ, ಸುಖ–ದುಃಖ ಮತ್ತು ಜೀವನದ ಅನಿವಾರ್ಯ ಬಂಧನಗಳನ್ನು ಪ್ರಶ್ನಿಸುವ ತಾಯಿಯ ಅಂತರಾಳದ ಮಾತುಗಳಾಗಿ ರೂಪಗೊಂಡಿವೆ.ತಾಯಿ ಮಗುವಿನ ಅಳುವನ್ನು ಕೇವಲ ಹಸಿವು ಅಥವಾ ಅಸೌಖ್ಯವೆಂದು ನೋಡದೆ, “ನಿನ್ನ ಹಿಂದಿನ ಜನ್ಮದ ನೋವುಗಳು ಈಗ ಅಳುವಾಗಿ ಹೊರಹೊಮ್ಮುತ್ತಿವೆಯೇ?” ಎಂದು ಭಾವಿಸುತ್ತ ಗರ್ಭದಲ್ಲೇ ಅನುಭವಿಸುವ ಬಂಧನ,ಜನನದ ವೇಳೆ ಉಸಿರಾಟದ ಸಂಕಟ,ಬಟ್ಟೆಯಿಲ್ಲದ ದೇಹದೊಂದಿಗೆ ಈ ಲೋಕಕ್ಕೆ ಬೀಳುವ ಅಸಹಾಯಕತೆ,ಹೋದ ಜನುಮದಲ್ಲಿ ಇದ್ದ ತಾಯಿ–ತಂದೆ ಬಂಧು–ಬಳಗವಿಲ್ಲದ ಏಕಾಂತತೆ.. ಹಿಂದಣ ಜನುಮದ ಜೀವನ,ಮೊಲೆಹಾಲು, ತಾಯಿಯ ಪ್ರೀತಿ ಸಿಗುವುದೇ ಎಂಬ ಅನಿಶ್ಚಿತತೆ….. ಇವೆಲ್ಲವನ್ನು ಹಿಂದಿನ ಜನ್ಮದ ಕರ್ಮಫಲಗಳ ಪರಿಣಾಮವಾಗಿ “ಮನುಷ್ಯ ಒಂಟಿಯಾಗಿ ಬಂದು,ಒಂಟಿಯಾಗಿಯೇ ಹೋಗುವವನು”—ಎಂಬ ಜೀವನದ ಸತ್ಯವನ್ನು ತಿಳಿಸಲಾಗಿದೆ. ಬಂಧುಗಳು, ಸಂಬಂಧಗಳು ಎಲ್ಲವೂ ಕ್ಷಣಿಕವೆಂಬ ತತ್ವವನ್ನೂ ಈ ಕವನ ಒತ್ತಿಹೇಳುತ್ತದೆ. ಅಂತಿಮವಾಗಿ ಮಾನವ ಜೀವನವು ಕರ್ಮಬಂಧನದಿಂದ ನಿಯಂತ್ರಿತ, ನೋವು ಸಹಜ, ಅಳುವು ಅಜ್ಞಾನದಿಂದ ಹೊರಡುವ ಪ್ರತಿಕ್ರಿಯೆ ಎಂಬ ತಾತ್ವಿಕ ಸಂದೇಶವನ್ನು ಸಾರುತ್ತದೆ. ಒಟ್ಟಿನಲ್ಲಿ ಮಗುವಿನ ಅಳುವಿನ ಮೂಲಕ ಮಾನವ ಜನ್ಮದ ನೋವು, ಕರ್ಮಸಿದ್ಧಾಂತ ಮತ್ತು ಬದುಕಿನ ಏಕಾಂತ ಸತ್ಯವನ್ನು ಪ್ರಶ್ನಿಸುವ ತಾತ್ವಿಕತೆ ಭರಿತವಾದ ಆಧ್ಯಾತ್ಮಿಕ ಮೆರಗು ಈ ಕವನಕ್ಕಿದೆ. ಹೀಗೆ ಗಾಢವಾದ ನೋವನ್ನು ಹೊತ್ತ ತಾಯಿ, ಕೈಯಲ್ಲಿ ಆಡುವ ಚೊಚ್ಚಲ ಮಗನನ್ನು ಕಳೆದುಕೊಂಡು ಬರಿ ಕೈಯಿಂದ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಹೃದಯಾಂತಕ ಸನ್ನಿವೇಶ ಮುಂದಿನವಾರ ನೋಡೋಣ……….( ಮುಂದುವರೆಯುವುದು) ಸವಿತಾ ದೇಶಮುಖ ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್
ಧಾರಾವಾಹಿ ಸಂಗಾತಿ ಕಂತು-ಐದು ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ ಜಯದೇವಿ ತಾಯಿಯವರ ಜೀವನ ವೃತ್ತಾಂತಭಾಗ- 5 ಸೊಲ್ಲಾಪುರದ ಲಿಗಾಡೆಯವರ ಮನೆತನದ ನಿಷ್ಠಾವಂತ ವಕೀಲರಾದ ‘ರಾಮಭಾವು ರಾಜವಾಡೆ’ ಅವರು ಬ್ರಿಟಿಷರ ವಿರುದ್ಧ ಕುತಂತ್ರ ಎಸಗಿದ್ದಕ್ಕಾಗಿ ಬಂಧಿಸಲಾಗಿತ್ತು. ಜಯದೇವಿ ತಾಯಿಯವರ ಅತ್ತೆ ಪ್ರಯಾಗಬಾಯಿ ರಾಜವಾಡೆಯವರ ಬಿಡುಗಡೆಯ ನಂತರ ಅತ್ಯಂತ ಆದರದಿಂದ ಬರಮಾಡಿಕೊಂಡು ಆದರಿಸಿ ಬ್ರಿಟಿಷರ ಭಿಡೆ ಹಿಡಿಯದೆ ಮತ್ತೆ ಆಸ್ತಿಯ ಕಾರಭಾರವನ್ನು ನಿರ್ವಹಿಸಿಕೊಂಡು ಹೋಗಲು ಅಣಿ ಮಾಡಿದರು.” ಪ್ರಯಾಗಬಾಯಿಯ ಕಠೋರ ಧ್ವನಿ …ಬಿರುಸು ನಡತೆ ಇದ್ದರೂ ನಿಜವಾದ ದೇಶಪ್ರೇಮ ರಾಷ್ಟ್ರ ನಿಷ್ಠೆಯನ್ನು ತೋರಿದರು .ತಾಯಿ ಸಂಗವ್ವ ಗಾಂಧಿ ವಾದವನು ಪ್ರಚಾರ ಮಾಡಿದರೆ ಅತ್ತೆ ಪ್ರಯಾಗಬಾಯಿಯೂ ಅದನ್ನು ನಡೆದು ತೋರಿಸಿದ್ದರು. ದೇಶಮಾತೆಗೆ ಅನೌಪಚಾರಿಕವಾಗಿ ಸಹಾಯ ಹಸ್ತ ನೀಡಿದ್ದರು” ಎನ್ನುತ್ತಿದ್ದರು ಜಯದೇವಿ ತಾಯಿಯವರು. ಅತ್ತೆ ಪ್ರಯಾಗಬಾಯಿ ಜಯದೇವಿಯ ತಾಯಿಯ ಮೇಲೆ ಸಿಡಿಮಿಡಿಕೊಳ್ಳಲು ಎರಡು ಕಾರಣಗಳಿದ್ದವು…. ಮದುವೆಯ ಸಮಯದಲ್ಲಿ ತವರಿನವರು(ಮಡಿಕಿ) ಮದುವೆಯ ದಿಬ್ಬಣವೆನೋ ಜನ ನೋಡುವಂತೆ ಏರಿಸಿದ್ದರು….. ಆದರೆ ಪ್ರಯಾಗಬಾಯಿಯವರಿಗೆ ಕೊಡುವ ಉಡುಗೊರೆಯ ಸೀರೆ ಅವರ ವರ್ಚಸ್ಸಿಗೆ ಹೊಂದುವಂತಿರಲಿಲ್ಲವೆಂದು ನಂಬಿದ ಅತ್ತೆ ….ಸೀರೆ ನೋಡುತ್ತಿದ್ದಂತೆ ಸಿಡಿಮಿಡಿಗೊಂಡು ಅಲ್ಲಿಂದ ಎದ್ದು ಹೋಗಿದ್ದರಂತೆ .ಇದು ಅದೆಂಥ ದೊಡ್ಡ ವಿಷಯವಾಗಿತ್ತು ಅಂದರೆ ತಾಯಿಯವರ ಜೀವನದ ಅತಿ ದೊಡ್ಡ ಘಾತಕದ ಘಟನೆಯಾಗಿತ್ತು ಅನ್ನುತ್ತಿದ್ದರು ತಾಯಿಯವರಿಗೆ ….ಸಮಯ ಸಿಕ್ಕಾಗಲೆಲ್ಲ ಆ ಮಾತನ್ನು ಆಡಿ ಆಡಿ ಮನಸ್ಸು ನೋಯಿಸುತ್ತಿದ್ದರಂತೆ. ಮುಂದೆ ಅವರು ಅದೆಷ್ಟೋ ಸೀರೆಗಳನ್ನು ತಂದು ಅವರೆದುರಿಗೆ ಹಾಕಿದರೂ ಆ ದಿನದ ಅವರು ಮರೆಯಲಿಲ್ಲ. ಇನ್ನೊಂದು ಕಾರಣವೆಂದರೆ ತಾಯಿಯವರು ಅತ್ಯಂತ ಬಳಕುವ ಅಂದರೆ ತೆಳ್ಳನೆ ದೇಹವನ್ನು ಹೊಂದಿದವರು ಊಟ ಮಾಡುವುದು ಕೇವಲ ಅರ್ಧ ರೊಟ್ಟಿ ಅಥವಾ ಚಪಾತಿ ಅಷ್ಟೇ… ಗಟ್ಟಿ ಮುಟ್ಟಾದ ಸೊಸೆ …ಆಸ್ತಿಯ ಕಾರಭಾರ ಹೊತ್ತುಕೊಳ್ಳುವ ಸೊಸೆ ಬೇಕಾಗಿತ್ತು. ಸೊಸೆಯನ್ನು ಹುಡುಕಾಡಿ ಪರಿಶೀಲಿಸಿ ಮದುವೆ ಮಾಡಿದ್ದರೇನೋ ನಿಜ ಆದರೆ ಜಯದೇವಿ ತಾಯಿಯು ಮನೆಗೆ ಬಂದ ಮೇಲೆ ಗೊತ್ತಾದದ್ದು ಇವರು ಅತ್ಯಂತ ಸರಳ-ಸಾಧು- ಲಿಂಗನಿಷ್ಠರು. ದೇವರಲ್ಲಿಯೇ ಮೈಮರೆಯುವಳು ಅನ್ನುವುದು ತಿಳಿದಾದ ಮೇಲೆ ಅವರಿಗೆ ಹೊಟ್ಟೆ ಬೇನೆ ಶುರುವಾಗಿತ್ತು.ಇಂಥ ನಾಜೂಕಾಗಿರುವಳು ಎಲ್ಲವನ್ನು ನಿಭಾಯಿಸುವುದು ಹೇಗೆ ಅನ್ನುವ ಸಮಸ್ಯೆ ಕಾಡುತಿತ್ತು. ತಾಯಿಯವರು ಕೆಲಸ ಮಾಡುವಾಗ ಮಧ್ಯದಲ್ಲಿ ಬಂದು ಅವರ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ನೋಡಿ ಮತ್ತೆ ದೂರಸರಿಸುವರಂತೆ ..,..”ನೋಡು ಏನು ತಿನ್ನೋದಿಲ್ಲ ಹೀಗೆ ಸ್ವರ್ಗಿ ಸ್ವರ್ಗಿ ಸಣ್ಣಗಿದ್ದಿ ಎಲ್ಲಾ ಆಸ್ತಿಯನ್ನು ಹೇಗೆ ನೋಡಿಕೊಳ್ತಿ …. ನಮಗೆ ಮೊಮ್ಮಕ್ಕಳನ್ನು ಹೇಗೆ ಹೆತ್ತು ಕೊಡ್ತೀಯಾ…”!! ಅನ್ನುವ ಚಿಂತೆ ಅವರನ್ನು ಕಾಡುತ್ತಿತ್ತಂತೆ. ಪ್ರಯಾಗಬಾಯಿಯೂ ಪ್ರತಿ ಸೋಮವಾರ ಸಿದ್ದರಾಮನ ದೇವಸ್ಥಾನಕ್ಕೆ ಗಾಡಿಯಲ್ಲಿ ಹೋಗುತ್ತಿದ್ದರು . ದೇವಸ್ಥಾನಕ್ಕೆ ಹೋಗಬೇಕಾದರೂ ಜರ್ತಾರಿಯ ಸೀರೆ ಉಟ್ಟು ವಜ್ರ ವೈಢೂರ್ಯ ತೊಟ್ಟು ಹೊರಡುವರು ..ಜಯದೇವಿ ತಾಯಿಯವರು ಅವರ ಜೊತೆ ಬರಲು ಹಠ ಮಾಡಿದಾಗ ಅವರಿಗೆ ಹಾಗೆ ಉಟ್ಟ ಸೀರಿ ಕರಿಮಣಿಯ ತಾಳಿ ಹಾಕಿಕೊಂಡೇ ಕರೆದುಕೊಂಡು ಹೋಗುತ್ತಿದ್ದರು.ಮದುವೆ ಸಮಾರಂಭಗಳಲ್ಲೂ ಅಷ್ಟೇ ತಾಯಿಯವರಿಗೆ ಮದುವೆ ಸಮಾರಂಭಗಳು ಬಂದರೆ ಕಳವಳ ಉಂಟಾಗುವುದು….. ಬಂಗಾರ ಇಲ್ಲದೆ ಹೋಗುವದು ಹೇಗೆ ಮನೆತನ ಮರ್ಯಾದಿಯ ಪ್ರಶ್ನೆಯಾಗಿತ್ತು ……ಹೀಗಾಗಿ ಓಡಿಹೋಗಿ ಹತ್ತಿರದಲ್ಲಿ ಇದ್ದ ತವರು ಮನೆಯಲ್ಲಿ ಹೊಸದಾಗಿ ಬಂದ ಅತ್ತಿಗೆಯರಿಂದ,ತಾಯಿಂದ ವಸ್ತಒಡವೆಗಳನ್ನು ಪಡೆದು ತೊಟ್ಟು ಹೋಗುವರು. ಮತ್ತೆ ತಿರುಗಿ ಬರುವಾಗ ಅವುಗಳನ್ನೆಲ್ಲ ಅಲ್ಲೇ ತವರು ಮನೆಯಲ್ಲಿ ಕಳಚಿಟ್ಟು ಮನೆಗೆ ಬರುವರು . ಪ್ರಯಾಗಬಾಯಿ ಎರಡು ಹೊತ್ತು ಲಿಂಗದ ಪೂಜೆ ಮಾಡುವರು ರಾತ್ರಿಯ ಪೂಜೆ ಮುಗಿಸಿ ಅವರಿಗೆ ಊಟ ಕೊಟ್ಟು ಆಳು ಕಾಳುಗಳಿಗೆ ಊಟ ಕೊಟ್ಟು ಎಲ್ಲ ತೆಗೆದಿಟ್ಟು ಅಡುಗೆಯ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಮೇಲೆ ಮಲಗುವ ಕೋಣೆಯತ್ತ ಹೆಜ್ಜೆ ಹಾಕಿದಾಗ ಮನೆಯಲ್ಲಿ ಎಲ್ಲರೂ ನಿದ್ರೆಯಲ್ಲಿ ಜಾರಿರುತಿದ್ದರು. ರಾತ್ರಿ ನಿರಾಳ ಮೌನ ಆವರಿಸಿತ್ತು…. ಗಡಿಯಾರ ಟಿಕ್ ಟಿಕ್ ಮಾತ್ರ ಅವರ ಉಸಿರಿಗೆ ತಾಳ ಹಾಕುತ್ತಿತ್ತು…. ನಿಧಾನವಾಗಿ ಹೆದರುತ್ತಲೇ ಗಡಿಯಾರದತ ನೋಡಿದರು ರಾತ್ರಿ ಒಂದು ಗಂಟೆ ಮೇಲೆ ಆಗಿದೆ…. ಕೋಣೆಯಲಿ ಕಾಲಿಡುವ ಮೊದಲೇ ತೀರ್ಪು ಬಂದುಬಿಟ್ಟಿತು ……..”ಗಂಡನ ಮೇಲೆ ಭಯ ಭಕ್ತಿ ಇಲ್ಲ ಅದಕ್ಕೆ ಇಷ್ಟು ತಡ ಮಾಡುವೆ ಅಲ್ಲೇ ಮೂಲೆಯಲ್ಲಿ ಸ್ಟ್ಯಾಂಡ್ಪ್ಪ(standup)ಅಂದು ಗಂಡನ ಧ್ವನಿ ಕೇಳಿದ ತಕ್ಷಣ ಹೆದರಿ ಅಲ್ಲಿ ಗೋಡೆಗೆ ಬೆನ್ನೂರು ನಿಂತು ಬಿಡುವರು ತನ್ನ ತಪ್ಪಾದರೂ ಏನು ಅಂತ ತಿಳಿಯದೆ ಗಂಡನ ಆಜ್ಞೆ ಅಲ್ಲವೇ ಪಾಲಿಸಲೇಬೇಕು….!! ಆದರೆ ಮಧ್ಯರಾತ್ರಿಯಲಿ ಹಾಗೆ ಕೋಣೆ ಮೂಲೆಯಲ್ಲಿ ನಿಂತು ನಿದ್ದೆ ಹೋಗಿ ಭೂತಾಯಿಯ ಮಡಿಲಲ್ಲಿ ಶರಣಾಗಿ ಮಲಗಿದ್ದು ಗೊತ್ತಾಗುತ್ತಿರಲಿಲ್ಲ….. ನಸುಕಿನಲ್ಲಿ ಗಡಬಡಿಸಿ ಎದ್ದರೆ ತಾವು ನೆರೆದ ಮೇಲೆ ಮಲಗಿದ್ದು ಅರಿವಾಗುತ್ತಿತ್ತು ಮೈ ಕೈಯಲ್ಲ ಇನ್ನಷ್ಟು ನೋವಾದರೂ ಕೆಳಗೆ ಇಳಿದು ಓಡಿ ಬಂದರೆ ಅಲ್ಲಿ ಅತ್ತೆಯ ಬೈಗಳ ಸುರಿಮಳೆ ಪ್ರಾರಂಭ ……!!!ಗಂಡ ಮಾತ್ರ ಏನು ನಡೆಯಲೇ ಇಲ್ಲ ಅನ್ನುವಂತೆ ಎದ್ದು ಕೆಳಗೆ ಬರುವರು ಅವರಿಗೆ ಯಾವ ವ್ಯವಹಾರಿಕ ಜ್ಞಾನ ಇಲ್ಲ ತನಗೆ ತಿಳಿದಷ್ಟು ನಡೆದುಕೊಳ್ಳುವರು ಏಕೆಂದರೆ ಐದು ಅತ್ತಿಯಂದಿರ ಅಚ್ಚುಮೆಚ್ಚಿನ ಮಗ ಬೇರೆ… ಮದುವೆಯಾದ ಹೊಸತರಲ್ಲಿ ಜಯದೇವಿ ತಾಯಿಯವರಿಗೆ ತಾನು ಎಲ್ಲಿ ಬದುಕಿ ಬಾಳುತ್ತಿದ್ದೇನೆ ಅನ್ನುವ ಜ್ಞಾನವೇ ಇಲ್ಲವಾಗಿತ್ತು ಅಂತ ತಾಯಿಯವರು ಹೇಳುತ್ತಿದ್ದರು . “ಗಂಡನ ಮನೆಯ ಎಲ್ಲ ಸದಸ್ಯರ ಮನಸ್ಸು ಗೆಲ್ಲ ಬೇಕಾಗಿತ್ತು. ಸಿದ್ದರಾಮನಲ್ಲಿ ಸೈ ಎನ್ನಿಸಿಕೊಳ್ಳಬೇಕಾಗಿತ್ತು. ಬಂದ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಹಾಗೆ ನುಂಗುತ್ತ ನಡೆದಿದೆ” ಅನ್ನುತ್ತಿದ್ದರು. ತಮ್ಮ ದುಃಖವನ್ನೆಲ್ಲ ಅಂಗೈಯಲ್ಲಿ ಇಟ್ಟುಕೊಂಡ ಲಿಂಗನಿಗೆ ಹೇಳುತ್ತಾ ಸಿದ್ದರಾಮನನ್ನು ಮಾತನಾಡಿಸುತ ದುಃಖವನ್ನು ಮರೆಯುವರು…. ಧಾರಾಕಾರವಾಗಿ ಕಣ್ಣೀರು ಸುರಿಸುವರು… *ನಿನ್ನ ಭಜಿಸಲೆಂದು ಉಲಿಯುವೆ ಜಯಗೀತ ಒಂದೊಂದು, ನನ್ನ ಜೀಯಾನಿನ್ನ ಬರುವಿಕೆಯ ಬಯಕೆ-ನೆನೆ ನೆನೆದು ಅಳಹೋಗಿಹಾಡು ಬಿಡುವೆ !!*(ಜಯಗೀತ ಕವನ ಸಂಕಲ) ಒಂದು ಕಡೆ ಬರುತ್ತಾರೆ ತಾಳ್ಮೆನು ಯಾತನೆಯ/ ಬಾಳುವೆನು ನಿನಗಾಗಿಕಾಳ ಬಂದರು ಹೆದರೇನು -ಸಿದ್ದರಾಮದಾಳಿ ತಂದರು ಮತ್ತೆ ನಿನ್ನನೇ ನೆನೆಯುವೆ!! “ಎಲ್ಲವೂ ನಿನ್ನ ಪಾದಕ್ಕೆ ಅರ್ಪಣೆ… ಎನ್ನ ಮಾನ ಅಪಮಾನ ನಿನ್ನದಯ್ಯಾ ಎನ್ನುತ್ತಿದ್ದೆಕಷ್ಟಗಳು ಹೆಚ್ಚಿದಂತೆ ಸಿದ್ದರಾಮನ ಮೇಲಿನ ಭಕ್ತಿ ಇನ್ನು ಗಟ್ಟಿಕೊಳ್ಳಲಾರಂಬಿಸಿತ್ತು. ಸುಖದ ಸಂಪತ್ತಿನಲ್ಲಿ ನಾನು ಸುಖವಾಗಿ ಒಂದು ವೇಳೆ ಬದುಕಿದ್ದರೆ …. ಸಿದ್ದರಾಮನನ್ನು ನೆನೆಯುತ್ತಿರಲಿಲ್ಲವೇನು…??!…ಸಿದ್ದರಾಮ ಪರೀಕ್ಷಿಸುತ್ತಿರುವ ನಾನು ಆ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು ಎನ್ನುವ ಛಲವನ್ನು ಹೊತ್ತ ಸೊಸೆಯಾಗಿದ್ದೆ ” ….ಅಂತ ಅನೇಕ ಸಲ ಹೇಳುತ್ತಿದ್ದರು. ತಾಯಿಯ ತವರಿನಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ಹೇಳಿಕೊಟ್ಟಿದ್ದರು. ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಗಂಡನಿಗೆ ಹೊಂದುಕೊಳ್ಳಬೇಕಾದರೆ ಸಹನೆ ಇರಬೇಕು ಆಗ ಮುಂದೆ ಎಲ್ಲವನ್ನು ಗೆಲ್ಲಬಹುದು ಅನ್ನುವುದನ್ನು ತಾಯಿ ಸಂಗವ್ವ ಜಯದೇವಿ ತಾಯಿಯವರಿಗೆ ಕಲಸಿದ ಪಾಠ .ನೆನೆಯುತಿದರು.. ಬಾಲ್ಯ ವಿವಾಹ ಒಂದು ಮದುವೆ ಅಲ್ಲ ಅದು ಬಾಲ್ಯದ ಅಂತ್ಯ. ಬೊಂಬೆಯ ಜೊತೆ ಆಟವಾಡುವ ಕೈಗಳಿಗೆ ಅಡುಗೆಯ ಪಾತ್ರೆಯ ಹೊರೆ ತಾಳೆದಾಗಿತ್ತು. ಪಾಠ ಪುಸ್ತಕ ಓದಬೇಕಾದ ಕಣ್ಣುಗಳಿಗೆ ಆಶ್ರುಗಳ ಅಭ್ಯಾಸ ಆಗಿಹೋಗಿತ್ತು. ಹೆಣ್ಣು ಮಗು ಹೆಂಡತಿಯಾಗುವ ಮುನ್ನ ಮಗುವಾಗಿ ಬದುಕುವ ಹಕ್ಕು ಕಸಿದುಕೊಂಡರೆ ಅದು ಒಂದು ಅಪರಾಧವೇ ಸರಿ ಅನ್ನುತ್ತಿದ್ದರು .ಅವಳಿಗೆ ಗಂಡನ ಮನೆ ಸಿಗುವುದು ಅನ್ನುವ ಸಂತಸವೇನು ಇರಬಹುದು ಆದರೆ ಮಗುವಿನ ಅತ್ಯ ಅಮೂಲ್ಯವಾದ ಬಾಲ್ಯದ ಬದುಕು ಸಿಹಿ ನೆನಪಿನ ಲೋಕವೂ ಕಳೆದು ಹೋಗುವುದು. ಬೆಳೆಯದ ದೇಹ- ಮನಸ್ಸಿಗೆ ತಾಳದ ಹಿಂಸೆ ಕೊಟ್ಟಂತಾಗುವುದು .ಅವಳು ನಿಭಾಯಿಸಲಾರದಂತ ಜವಾಬ್ದಾರಿ ಮಗುವಿನ ಮೇಲೆ ಒಡ್ದುವದು ಅಕ್ಷಮ್ಯ ಅಪಕೃತವಾಗುವುದು ಎನ್ನುತ್ತಿದ್ದರು. ಒಂದು ಹೆಣ್ಣು ಮಗು ಬಾಲ್ಯದಲ್ಲಿ ವಿವಾಹ ಮಾಡಿಕೊಂಡು ಜೀವನದಲ್ಲಿ ಸೋತು ಹೋದರೆ ಸೋಲು ಅವಳೊಬ್ಬಳದೇ ಅಲ್ಲ…. ಅದು ಒಂದು ತಲೆಮಾರಿನ ಸೋಲು ,!! “ಮಗು ಕುತ್ತಿಗೆಗೆ ತಾಳಿಯಲ್ಲ – ಅವಳಿಗೆ ಭವಿಷ್ಯ ಕೊಡಿ” ಅನ್ನುತ್ತಿದ್ದರು . “ಸಿರಿತನದ ಕುವರಿ ! ಸಿರಿವಂತರ ಸತಿಯಾದೆಸಿರಿತನದ ಶ್ರಂಗಾರವೆಲ್ಲವನು- ಭೋಗಿಸಿದೆಸಿರಿತನ ದೊರೆತನ ಹಿರಿತನ ಎನ್ನವಾರಿಸದೆಶ್ರೀ ಲೋಲನ ದರ್ಶನವೆಂದು ಕಾಯುತಿರುವೆ…!!” “ಸಿರಿತನದ ತಳಕಿನಲ್ಲಿ ನಾನು ಮುಳುಗದಿರಲಿ ಅಂತಾನೆ ಕಷ್ಟಗಳ ಕೊಡಿ ಹರಿಸಿದ ಸಿದ್ದರಾಮ…..ಸುಖದ ಸುಪ್ಪತ್ತಿನಲ್ಲಿ ಮುಳುಗದಿರಲಿಅಂತ ಏನೋ ಸಿದ್ದರಾಮನ ಪರೀಕ್ಷೆಯಲಿ….. ಗೆಲ್ಲಲೆಂದೆ ನಾನು ಕಷ್ಟಗಳನ್ನು ಸಂಭ್ರಮಿಸಲಾರಂಭಿಸಿದೆ. ಅನ್ನುತ್ತಾರೆ . ಸಿದ್ದರಾಮನಲ್ಲಿ ಒಂದಾಗಲು ಶುರುವಿಟ್ಟೆ ಲೋಕಕಲ್ಯಾಣದ ಕೆಲಸದತ್ತ ಹೊರಳಿದೆ” ಎನ್ನುವ ಮಾತು ಸುಳ್ಳಲ್ಲ . ಹಳೆಯ ಸಂಪ್ರದಾಯದ ಅತ್ತೆ ಮನೆಯ ವಾತಾವರಣ ಬೆಳೆದ ಮನೆಯ ವಾತಾವರಣಕ್ಕೂ ಅಜಗಜಾಂತರ ಅಂತರವಿತ್ತು .ಅತ್ತೆಯ ಬೈಗಳ ಪ್ರತಿ ಮಾತಿನಲ್ಲಿಯೂ ಒಳ್ಳೆಯದನ್ನು ಹುಡುಕಲು ಆರಂಭಿಸಿದರು. ಒಂದು ಸಲ ಪಡಸಾಲಿಯಲಿ ದೊಡ್ಡ ಕನ್ನಡಿಯ ನೋಡುತ ಜಯದೇವಿ ತಾಯಿಯವರು ಕುಂಕುಮ ಇಟ್ಟುಕೊಳ್ಳುವುದು ನೋಡಿದ ಪ್ರಯಾಗಬಾಯಿ ಜೋರಾಗಿ ಕಿರುಚಾಡಿಲಾರಂಭಿಸಿದರು .“ನಿನಗೆ ಸಂಸ್ಕಾರ ಅನ್ನೋದೇ ಇಲ್ಲ ಯಾರಾದರೂ ಅಂಗಳದಲ್ಲಿ ನಿಂತು ಕುಂಕುಮ ಇಡುವರೇ ನೀನು ಹೇಳಿ ಕೇಳಿ ಭಾಷಣ ಮಾಡುವಾಕೆಯ ಮಗಳು” ಎಂದು ಕೂಗಾಡಿದರಂತೆ.ಅವರು ಯಾಕೆ ಗದರಿಸಿದರಂತೆ ತಿಳಿಯಲಿಲ್ಲ ಕುಂಕುಮವನ್ನು ಅಂಗಳದಲ್ಲಿ ಹಚ್ಚಿಕೊಳ್ಳಬಾರದು ಅನ್ನುವ ಪದ್ಧತಿ ಇರಬೇಕೆನೊ ಅದಕ್ಕೆ ಅತ್ತೆ ಬೈದಿರಬೇಕು ಅಂದುಕೊಂಡರಂತೆ.ಆದರೆ ನನ್ನ ತಾಯಿಗೆ ಏಕೆ ಬೈದರು ಭಾಷಣ ಮಾಡುವುದು ತಪ್ಪೇ ಅಂತೆಲ್ಲ ಲೆಕ್ಕ ಹಾಕಿದರು.ಆದರೂ ಎದೆ ನಡುಗುತಿತ್ತು, ಕೈಕಾಲುಗಳು ಶಕ್ತಿ ಕುಂದುತಿದೆ ಅನ್ನಿಸಿಲಾರಿಂಭಿಸಿತ್ತು. ಆ ದೃಶ್ಯವನ್ನು ನೋಡಿದ ಪ್ರಯಾಗಬಾಯಿಯುಸಮೀಪ ಬಂದು …”ನೋಡು ಮನೆಯಲ್ಲಿ ಹಾಲ ತುಪ್ಪದ ಹೊಳೆ ಹರಿತಾ ಇದೆ ಚೆನ್ನಾಗಿ ಉಂಡು-ತಿಂದು ಇರಬೇಕು ಅಂತ ಹೇಳಿದ್ದು ಕೇಳಿ ಜೀವ ಬಂದಂತಾಯಿತು. ಮುಂದೆ ಕೆಲವು ದಿನಗಳು ಕಳೆದ ನಂತರ ಸೊಸೆಯ ಮೇಲೆ ಪ್ರೀತಿ ಹೆಚ್ಚ ಆರಂಭಿಸಿತು ಸೊಸೆಯ ತಾಳ್ಮೆ ಗಂಭೀರ ನಡೆನುಡಿಯನ್ನು ಪ್ರಯಾಗಬಾಯಿ ಗಮನಿಸುತ್ತಿದ್ದಂತೆ ಮನ ಕರಗಲಾರಂಭಿಸಿತ್ತು. ಆಗಾಗ ತಾಯಿಯವರನ್ನು ದಿಟ್ಟಿಸಿ ನೋಡುತ್ತಿದ್ದರಂತೆ ಅದೇಕೋ ಸೊಸೆ ಇನ್ನೂ ಸಣ್ಣ ಆಗಿ ಹೋಗುತ್ತಿರುವಂತೆ ಕಂಡು ಅಡುಗೆಯ ಬಸವ್ವಳನ್ನು ಕರೆದು ಇವಳಿಗೆ “ಇನ್ನು ಮೇಲಿಂದ ನನಗಾಗಿ ಮಾಡುವ ತುಪ್ಪದ ಅಡಿಗೆ ಇವಳಿಗೂ ಉಣ್ಣಿಸಬೇಕು” ಅಂತ ಆಜ್ಞೆ ಮಾಡಿದರಂತೆ .ಅದೇ ರೀತಿ ಕೆಲಸದವಳು ಬಂದು ತಾಯಿಯವರಿಗೆ “ನೋಡಿರಿ ಬಾಯಾರ……ನೀವು ಹೀಗೆ ಕಿವುಚಿ ಅದ್ದಾ-ಗಿದ್ದಾ ಊಟ ಮಾಡಿದರೆ ನಡೆಯುವುದಿಲ್ಲ ಚೆನ್ನಾಗಿ ಊಟ ಮಾಡಬೇಕು ಗಂಡು ಮಕ್ಕಳ ಹೆತ್ತು ಕೊಡಬೇಕು “ಅಂತ ಕೆಲಸದವಳು ಪ್ರೀತಿಯಿಂದ ಆಜ್ಞೆ ಮಾಡಿದಳಂತೆ. ಸಾಧು-ಸಂತರು ನೀರು ಕುಡಿದು ,ಇಲ್ಲ ತುಣುಕು ಅನ್ನ ಉಂಡು ಬದುಕುವಂತೆ ಜಯದೇವಿ ತಾಯಿಯವರು ಹುಟ್ಟುತ್ತಲೇ ಯೋಗಿಣಿ ಯಾಗಿದ್ದರು ಅವರು ಕೊನೆಯವರೆಗೂ ಅವರ ಊಟ ಅಷ್ಟೇ. ಅವರು ಊಟತಿಂಡಿಗಾಗಿ ಸಂಸಾರದ ಭೋಗಕ್ಕಾಗಿ ಹುಟ್ಟಿದವರಲ್ಲ ಬಸವಣ್ಣನ ತತ್ವದಂತೆ ಕಾಯಕವ ಮಾಡುತ್ತಾ ಸಂಸಾರ ಗೆದ್ದು ಮಹಾನ ಶರಣೆಯಾದವರು. ಎಲ್ಲ ಐದು ಜನ ಓರಗಿತ್ತಿಯರನ್ನು, ಮನೆಯ ಆಸ್ತಿ , ಹೊಲಗದ್ದೆ ,ಬಡ್ಡಿಯ ವಹಿವಾಟ ಎಲ್ಲವನ್ನು ಒಬ್ಬಳೇ ನಿಭಾಯಿಸುತ್ತ………ಇದ್ದ ಆಸ್ತಿಯನ್ನು ವೃದ್ಧಿಸಿ ಮುಂದೆ ಲಿಗಾಡಿ ಮನೆತನದ ವಿಜಯ ಪತಾಕೆಯನ್ನು ಹಾರಿಸಿ, ಕನ್ನಡ ನಾಡ ನುಡಿಗಾಗಿ ದುಡಿದ, ಸಿದ್ದರಾಮನ ಶ್ರೇಷ್ಠ ಭಕ್ತಳಾಗಿ,… ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಮಹಾನ ಕೊಡುಗೆ ನೀಡಲಿರುವರು ಅನ್ನುವದ ಅರಯದಾಗಿದ್ದರು…. ಅತ್ತೆ ಪ್ರಯಾಗಬಾಯಿ….ಅಲ್ಲವೇ…..! (ಮುಂದುವರೆಯುವುದು) ಸವಿತಾ ದೇಶಮುಖ ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್ ನೆಹರು ಅವಾರ್ಡ್ ವಿಜೇತರು). ಸುಪ್ರೀಂ ಕೋರ್ಟಿನ ನ್ಯಾಯವಾದಿಗಳುತಾಯಿ -ಲಲ್ಲೇಶ್ವರಿತಾಯಿ ಮೂಗಿ(30 ಶಿವಶರಣೆಯರ ಮೊದಲು ಪರಿಚಯಿಸಿದ ಲೇಖಕಿ)ವೃತ್ತಿ:ವಿಜಯಪುರದ ಆಲ್ ಇಂಡಿಯಾ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ
ಜಯದೇವಿ ತಾಯಿ ಲಿಗಾಡೆ ಅವರ ಜೀವನಗಾಥೆ
ಸವಿತಾ ದೇಶಮುಖ
ಜಯದೇವಿ ತಾಯಿ ಲಿಗಾಡೆಯವರ ಜೀವನಗಾಥೆ
ಎರಡನೆಕಂತು
ಅವರಮೊಮ್ಮಗಳು ಸವಿತಾ ದೇಶಮುಖ ಅವರಿಂದ
ಜಯದೇವಿ ತಾಯಿ ಲಿಗಾಡೆ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ
ಅವರಜೀವನಗಾಥೆ ಸವಿತಾ ದೇಶಮುಖ

