ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಹೊಸ ಪುಸ್ತಕಗಳು

ಪುಸ್ತಕ ಸಂಗಾತಿ ಹೊಸ ಪುಸ್ತಕಗಳು ಆತ್ಮೀಯರೆ ನೇರಿಶಾ ಪ್ರಕಾಶನ ಪ್ರಕಟಿಸಿರುವ ಪ್ರಕಟಣೆಗಳು ೧. ನೇರಿಶಾ – ನಂರುಶಿ ಕಡೂರು (ಗಜಲ್ ಸಂಕಲನ) –ಬೆಲೆ – 180 ೨. ಬದುಕು ಬರಿದಲ್ಲ – ರವಿ.ವೆ.ಕುರಿಯವರ (ಕವನ ಸಂಕಲ)ಬೆಲೆ – 100 ೩. ಮಣ್ಣಿನ ಕಣ್ಣುಗಳು- ನಂರುಶಿ ಕಡೂರು (ಖಸಿದಾ ಸಂಕಲನ)ಬೆಲೆ – 80 ೪. ಕಣ್ಣೆಂಜಲ ಕನ್ನಡಿ- ನೂರ ಅಹ್ಮದ ನಾಗನೂರ (ಗಜಲ್ ಸಂಕಲನ)ಬೆಲೆ -110 ೫. ಬೆಳಕ ನಿಚ್ಛಣಿಕೆ- ಚಂದ್ರಶೇಖರ ಪೂಜಾರ(ಚಂಪೂ) (ಗಜಲ್ ಸಂಕಲನ)ಬೆಲೆ – 100 ೬. ಸಿಹಿ ಜೀವಿಯ ಗಜಲ್ – ಸಿ.ಜಿ. ವೆಂಕಟೇಶ್ವರ (ಸಿಜಿವಿ) (ಗಜಲ್ ಸಂಕಲನ)ಬೆಲೆ- 120 ಐದು ಕೃತಿಗಳ ಬೆಲೆ ಒಟ್ಟು- ₹ 690 ಆಗುತ್ತದೆ.ಒಟ್ಟಿಗೆ ಖರೀದಿ ಮಾಡುವವರಿಗೆ ರಿಯಾಯಿತಿಯಲ್ಲಿ – ₹ 600 ರೂ ಗಳಿಗೆ ನೀಡಲಾಗುತ್ತದೆ. ಮತ್ತು ಅಂಚೆ ವೆಚ್ಚ ಉಚಿತವಾಗಿರುತ್ತದೆ. ಮಣ್ಣಿನ ಕಣ್ಣುಗಳು + ಕಣ್ಣೆಂಜಲ ಕನ್ನಡಿ+ಬೆಳಕ ನಿಚ್ಚಣಿಕೆ – ಈ ಮೂರು ಪುಸ್ತಕಗಳ ಬೆಲೆ ₹290 ರೂ ಆಗುತ್ತದೆ. ಮೂರನ್ನು ಒಟ್ಟಿಗೆ ಖರೀದಿಸುವವರಿಗೆ10% ರಿಯಾಯಿತಿ ಮತ್ತು ಅಂಚೆವೆಚ್ಚ ಉಚಿತವಾಗಿ ನೀಡಲಾಗುತ್ತದೆ. ನೇರಿಶಾ + ಬದುಕು ಬರಿದಲ್ಲ ಈ ಎರಡೂ ಸಂಕಲನಗಳ ಬೆಲೆ – 280 ಆಗತ್ತೆ‌.ಒಟ್ಟಿಗೇ ಖರೀದಿಸುವವರಿಗೆ 15 % ರಿಯಾಯಿತಿ ಮತ್ತು ಅಂಚೆ ವೆಚ್ಚವನ್ನು ಉಚಿತವಾಗಿ ನೀಡಲಾಗುತ್ತದೆ. ಸಿದ್ಧರಾಮ ಹೊನ್ಕಲ್ ರವರ ೧. ನಿನ್ನ ಪ್ರೇಮವಿಲ್ಲದ ಸಾಕಿ- 100೨. ಹೊನ್ನಮಹಲ್- 100೩. ಆತ್ಮ ಸಖಿಯ ಧ್ಯಾನದಲ್ಲಿ- 120೪. ಹೊನ್ನಗರಿಯ ಹೈಕುಗಳು- 120೫. ಆಕಾಶಕ್ಕೆ ಹಲವು ಬಣ್ಣಗಳು- 135 ಸಿದ್ಧರಾಮ ಹೊನ್ಕಲ್ ರವರ ಐದು ಕೃತಿಗೆ 575/- ಆಗುವುದು.ಕೇವಲ 400/-ದಲ್ಲಿ ದೊರೆಯುತ್ತದೆ.ಮತ್ತು ಬಿಡಿ ಪುಸ್ತಕಗಳ ಮೇಲೆ 25% ರಿಯಾಯಿತಿ ಜೊತೆಗೆ ಅಂಚೆವೆಚ್ಚ ಉಚಿತ. ನೇರಿಶಾ ಪ್ರಕಾಶನದ ಯಾವುದೇ ಬಿಡಿ ಪುಸ್ತಕಗಳ ಮೇಲೆ ೧೦% ರಿಯಾಯಿತಿ ಮತ್ತು ಅಂಚೆವೆಚ್ಚ ಉಚಿತ. ಪುಸ್ತಕಗಳಿಗಾಗಿ ಸಂಪರ್ಕಿಸಿ ನಂರುಶಿ ಕಡೂರು – 8073935296ನೂರ ಅಹ್ಮದ ನಾಗನೂರ – 9986886907ಚಂಪೂ – 91645 74818ಶಿವಕುಮಾರ ಕರನಂದಿ – 89710 22430ಎಸ್.ಎಸ್ ಅಲಿ – 97314 31234 ಪೋನ್ ಪೇ ನಂ-9663673639ಗೂಗಲ್ ಪೇ ನಂ-9731328023 ನೇರಿಶಾ ಪ್ರಕಾಶನ

ಹೊಸ ಪುಸ್ತಕಗಳು Read Post »

ಪುಸ್ತಕ ಸಂಗಾತಿ

ಹೊಂಗೆ ನೆರಳು

ಪುಸ್ತಕ ಸಂಗಾತಿ ಹೊಂಗೆ ನೆರಳು  ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನ ಪುಸ್ತಕ ಪರಿಚಯ ಹೊಂಗೆ ನೆರಳು  ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನ ಸಂಪಾದಕರು…ಶ್ರೀ ರಾಮು ಎನ್ ರಾಠೋಡ ಮಸ್ಕಿ  ಮೊ.ನಂ ೯೭೩೯೯೫೯೧೫೧ ಪ್ರಕಾಶಕರು..ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು.  ಮೊ.೭೮೯೨೭೯೩೦೫೪ ಶ್ರೀ ರಾಮು ಎನ್ ರಾಠೋಡ ಮಸ್ಕಿ ಇವರು ವೃತ್ತಿಯಿಂದ ಕೆ ಪಿ ಟಿ ಸಿ ಎಲ್  ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಉತ್ತಮ ಬರಹಗಾರರು ,ಕವಿಗಳು ,ಗಜಲ್ ಕಾರರು,ಸಂಘಟನಾಕಾರರು ಆಗಿದ್ದು ಕವಿವೃಕ್ಷ ಬಳಗ ರಾಯಚೂರು ಜಿಲ್ಲಾಧ್ಯಕ್ಷರಾಗಿ ಅತ್ಯಂತ ಉತ್ಸಾಹ ದಿಂದ ಕ್ರಿಯಾ ಶೀಲರಾಗಿ ತಾಲೂಕಾ ಮಟ್ಟದಲ್ಲಿ ಕವಿವೃಕ್ಷ ಬಳಗ ವನ್ನು ಸ್ಥಾಪಿಸಿ ಎಲೆಯಮರೆಯ ಯುವ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮಟ್ಟದ ಕವಿಗೋಷ್ಠಿಗಳನ್ನು ಆಯೋಜಿಸಿ ಹೊಸ ಹೊಸ ಕೃತಿಗಳನ್ನು ಲೋಕಾರ್ಪಣೆ ಕಾರ್ಯಕ್ರಮ ಗಳನ್ನು ಮಾಡುತ್ತಾ ಬಂದಿದ್ದಾರೆ.ಈಗ ಹೊಂಗೆ ನೆರಳು ಎಂಬ ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನಕ್ಕೆ ಸಂಪಾದಕರಾಗಿ ಕೃತಿ ಪ್ರಕಟಿಸಿ ಲೋಕಾರ್ಪಣೆ ಮಾಡಿ ಓದುಗರ ಕೈಗೆ ಇಟ್ಟಿದ್ದಾರೆ.      ಹೊಂಗೆ ನೆರಳು ಕೃತಿಯ ಶೀಷಿ೯ಕೆ ಓದಿದ ತಕ್ಷಣ ನೆನಪಾಯಿತು ಬೇಂದ್ರೆ ಯವರ ಯುಗಾದಿ ಕವಿತೆಯ ಸಾಲು,”ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಮತ್ತೆ ಕೇಳ ಬರುತಿದೆ” ಚೈತ್ರದ ಬಿಸಿಲು ಚಿಗುರಿ ಹಸಿರಾದ ಹೊಂಗೆ ಮರದ ನೆರಳಿಗೆ ದಣಿದ ಜೀವ ಮಲಗಿದಾಗ ಮರದಲಿ ಅರಳಿದ ಹೊಂಗೆ ಹೂ ಗಳ ಘಮ ಆಘ್ರಾಣಿಸಿ  ಕಣ್ಣು ಮುಚ್ಚಿ ಭೃಂಗಗಳ ಸಂಗೀತ ಆಸ್ವಾದಿಸಿದಾಗ ಮನವು ಸಂಭ್ರಮಿಸಿ ಪರವಶಕೊಳ್ಳುತ್ತದೆ .ಅದರಂತೆ ಓದುಗ ಗಜಲ್ ಗಳ ಒಳ ಹೊಕ್ಕಾಗ  ಗಂಧವು ಆತ್ಮಕ್ಕೆ ಪೂಸಿಸಬೇಕು ಅದು ಎಲ್ಲಾ ಮಗ್ಗಲಿನಿಂದ ಗ್ರಹಿಸಿ ಆತ್ಮ ವನ್ನು ಆವರಿಸಿ ಸಂದಾನಕ್ಕೆ ಇಳಿಯಬೇಕು.ಆ ಗಜಲ್ ದಲ್ಲಿರು ಮಧುರ ,ಮೃದು ಗೇಯತೆ ಲಾಲಿತ್ಯ ಭಾವ ತೀವ್ರತೆ ಓದುಗನನ್ನು ಮಂತ್ರ ಮುಗ್ಧವಾಗಿಸಿ ತನ್ನಲ್ಲಿಯೇ ತಾ ಗುನ್ ಗುನಾಯಿಸುವಂತೆ ಮಾಡಬೇಕು, ನವಿರಾದ ಭಾಷೆ ಸ್ವಾತಿಕ ಸ್ವಾದ ಓದುಗರಿಗೆ ನೀಡಬೇಕು.ಗಜಲ್ ಗಳಲ್ಲಿ ನಿರಾಕಾರನೊಂದಿಗೆ ಸಂವಾದಿಸುವ ಸತ್ವ ತುಂಬಿರುತ್ತದೆ.    ಪ್ರೀತಿ ,ಪ್ರೇಮ ವಿರಹ ಸಂದಾನಗಳು ಗಜಲ್ದ ಸ್ಥಾಯಿ ಗುಣವಾಗಿದ್ದರೂ ಅದರ ಜೊತೆಗೆ ಈಗ ಸಮಾಜಿಕ ಗಜಲ್ ಗಳು ರಚನೆ ಯಾಗುತ್ತಿವೆ.ಸಮಾಜದ ವಾಸ್ತವಿಕ ಸ್ಥಿತಿಗೆ ಕವಿ ಸ್ಪಂದಿಸಿ ಓರೆ ಕೋರೆಗಳನ್ನು ತಿದ್ದಲು ಗಜಲ್ ರಚನೆಯು ಆಗುತ್ತಿವೆ.. ಸುಕೋಮಲ ವಾದ  ಮಧುರ ಮೃದು ಶಬ್ದಗಳಲ್ಲಿ ಲಯ ಗೇಯತೆ ಯಿಂದ ಗಜಲ್ ರಚನೆ ಆದರೆ ಹಾಡಲು ಚಂದ,ಗಜಲ್ ಒಂದು ಹಾಡು ಗಬ್ಬ ವಾಗಿದ್ದು ಹಾಡಿದಾಗ ಅದರ ತೀವ್ರತೆ ಹೃದಯವನ್ನು ತಟ್ಟುತ್ತದೆ.ಅದಕ್ಕಾಗಿ ಭಾವತೀವ್ರತೆ ಯಿಂದ ಹಾಡಲು ಬರುವಂತಹ ಗಜಲ್ ಗಳನ್ನು ರಚಿಸಿದರೆ ಅವು ಬಹುಕಾಲ ಜನಮನದಲ್ಲಿ ನಿಲ್ಲುತ್ತವೆ.         ಪ್ರೀತಿ ಎಂದರೆ ಏನೆಂದು ವ್ಯಾಖ್ಯಾನಿಸಲು ಬರುವುದಿಲ್ಲವೋ ಅದೇ ರೀತಿ ಗಜಲ್ ಅಂದರೇನೆಂದು ವ್ಯಾಖ್ಯಾನಿಸುವುದು ಕಷ್ಟ.ಅವರವರ ಭಾವಕ್ಕೆ ಅವರವರ ಭಕ್ತಿಗೆ ನಿರಾಕಾರನಾದ ಭಗವಂತನು ಕಾಣಿಸಿಕೊಳ್ಳುವಂತೆ ಅದೇ ರೀತಿ ಯಾಗಿ ಗಜಲ್ ಸಾಹಿತ್ಯ ಓದುಗರ ಗ್ರಹಿಕೆಯಂತೆ ಹೊಳಪುಗಳನ್ನು ತೋರಿಸುವ ಸುಂದರವಾದ ಕಾವ್ಯ ಸಾಹಿತ್ಯ ವಾಗಿದೆ.         ಹೊಂಗೆ ನೆರಳು ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನದಲ್ಲಿ  ೪೮ ಗಜಲ್ ಕಾರರ ೭೪ ಗಜಲ್ ಗಳಿದ್ದು ಹಿರಿಯ ಕಿರಿಯ ಸಮಕಾಲಿನ ಗಜಲ್ ಕಾರರ ಉತ್ತಮ ಗಜಲ್ ಗಳಿವೆ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ” ಎಂಬಂತೆ ಈ ಸಂಕಲನದಲ್ಲಿ ನುರಿತ ಗಜಲ್ ಕಾರರ ಗಜಲ್ ಗಳ ಜೊತೆಗೆ ಯುವ ಉತ್ಸಾಹಿ ಬರಹಗಾರರ ಗಜಲ್ಗಳು ಇವೆ. ಯುವ ಬರಹಗಾರರು ವಯೋಸಹಜತೆ ಅನುಗುಣವಾಗಿ ಪ್ರೀತಿ ,ಪ್ರೇಮ,ವಿರಹ,ಪ್ರಣಯಗಳ ಜೊತೆಗೆ ಸಾಮಾಜಿಕ ವರ್ತಮಾನದ ತಲ್ಲಣಗಳ ಬಗ್ಗೆ ಗಜಲ್ ಗಳನ್ನು ರಚಿಸಿದ್ದಾರೆ. ಯುವ ಬರಹಗಾರರು ಉತ್ಸಾಹ ದಿಂದ ಗಜಲ್ ಗಳನ್ನು ರಚಿಸಿದ್ದಾರೆ ನಿಜ ,ಆದರೂ ಅವರು ತಮ್ಮ ಓದುವ ಹವ್ಯಾಸ ವನ್ನು ಹೆಚ್ಚಿಸಿಕೊಂಡರೆ ಇನ್ನೂ ಉತ್ತಮವಾದ ಗಜಲ್ ಗಳನ್ನು ಬರೆಯಲು ಸಾಧ್ಯ ವೆಂದು ನನ್ನ ಅನಿಸಿಕೆ.ಗಜಲ್ ರಚನೆಯಲ್ಲಿ ಅದರದೇ ಆದ ಛಂದಸ್ಸು ಜೊತೆಗೆ ಭಾವತೀವ್ರತೆ ಮತ್ತು ರೂಪಕ ,ಪ್ರತಿಮೆ ಗಳನ್ನು ಬಳಿಸಿ ಗಜಲ್ ರಚಿಸಿದಾಗ ಗಜಲ್ ಕಾವ್ಯ ಸುಂದರವಾಗುತ್ತದೆ.           ಹೊಂಗೆ ನೆರಳು ಗಜಲ್ ಸಂಕಲನಕ್ಕೆ ನಾಡಿನ ಹೆಸರಾಂತ ಗಜಲ್ ಕಾರರಾದ ಅಲ್ಲಾಗಿರಿರಾಜ್ ಕನಕಗಿರಿ ಯವರು ಮುನ್ನುಡಿ ಬರೆದಿದ್ದಾರೆ. ಇದರ ಜೊತೆಗೆ ಜಿಲ್ಲೆಯ ಅನೇಕ ಗಜಲ್ ಕಾರರು ತಮ್ಮ ಅನಿಸಿಕೆಗಳನ್ನು ಬರೆದು ಸಂಕಲನದ ಬಗ್ಗೆ ತಮ್ಮ ಮೆಚ್ಚುಗೆಯನ್ನು ತಿಳಿಸಿದ್ದಾರೆ.ಇದರಿಂದ ಸಂಕಲನದ ಮೌಲ್ಯ ಹೆಚ್ಚಾಗಿದೆಂದು ಹೇಳಬಹುದು. ನನ್ನ ಓದಿಗೆ ದಕ್ಕಿದ ಕೆಲವು ಗಜಲ್ ಗಳ ಮಿಸ್ರಾ ಗಳು  “ಕತ್ತಲೆಯ ಗೂಡಲಿ ಉಳಿದು ಉಸಿರು ಗಟ್ಟುತ್ತಿದೆ ನನಗೆ * ಬೆಳಗಲಿ ಉದಯಿಸುವ ಸೂರ್ಯ ಕಿರಣ ನೋಡಲು ಬಿಡು* (ಗಜಲ್ ೩೮) ಮೇಲಿ ಮಿಸ್ರಾ ದಲ್ಲಿ ಗಜಲ್ ಕಾರರು ಜಗದ ಅಜ್ಞಾನ ದ (ಕತ್ತಲೆ) ಕೂಪದಲ್ಲಿ ಇದ್ದು ಉಸಿರು ಗಟ್ಟುತ್ತಿದೆ,ಜ್ಞಾನದ ಬೆಳಕನ್ನು ಪಡೆಯಬೇಕಾಗಿದೆ  ನನ್ನನ್ನು ಬಂದಿಸ ಬೇಡ ವೆಂದು ಆತ್ಮ ಸಂಗಾತಿ ಯೊಂದಿಗೆ ಸಂವಾದಿಸುತ್ತಾನೆ.ಮನುಷ್ಯನು ಆಚರಿಸುವ ಮೂಢ ನಂಬಿಕೆಗಳಿಂದ,ಅಜ್ಞಾನ ದಿಂದ ಹೊರಬರಲು ಚಡಪಡಿಸುವ ತೀವ್ರಭಾವ ಗಜಲ್ ದಲ್ಲಿ ಎದ್ದು ಕಾಣುತ್ತದೆ. ಕಳೆದು ಹೋದ ರಾತ್ರಿ ಕನಸು ಮರೆತು ಹೋದರೇನು ಹೊನ್ನ ಬೆಳೆದಿಂಗಳನ್ನು ಸವಿಯೋಣ ಬಾ (ಗಜಲ್ ೧) ಮೇಲಿನ ಮಿಸ್ರಾ ದಲ್ಲಿ ಕವಿ ಜೀವನದಲ್ಲಿ ಕಳೆದ ಕಲ್ಪನೆಯ  ಸುಂದರ ದಿನಗಳು ಮರೆತು ಹೋದರೇನಾಯಿತು  ನಮ್ಮ ಮುಂದಿರುವ ವಾಸ್ತವಿಕ ಬಗ್ಗೆ ಯೋಚಿಸಿ ಸುಖ ಪಡೆಯೋಣ ಬಾ ಎಂದು ಆಶಾದಾಯಕದ  ನುಡಿಯನ್ನು ಬಾಳ ಸಂಗಾತಿಗೆ ಹೇಳುತ್ತಾರೆ. ಮಾತೆಕೋ ಮೌನವಾಗಿದೆ ಅವಳು ಬಾರದೆ ಇಂದು ಮನವೇಕೋ ನೊಂದಿದೆ ಇನಿಯಳು ಕಾಣದೆ ಇಂದು (ಗಜಲ್ ೧೨) ಮೇಲಿನ ಮತ್ಲಾದಲ್ಲಿ ಕವಿ ತನ್ನ ಪ್ರಿಯೆತಮೆಯ ಬರುವನ್ನು ಕಾಯುತ್ತಿದ್ದಾರೆ.ಅವಳಿಲ್ಲದೆ ಮಾತುಗಳು ಬಾರದೆ ಹೃದಯ ಮೌನವಾಗಿದೆ. ಮನವು ನೊಂದು ಬೆಂದು ಅವಳ ಬರುವಿಗಾಗಿ ಕಾಯುತ್ತಾ ಚಡಪಡಿಸುತಿದೆ  ಇಂದು ಎಂದು ಹೇಳುತ್ತಾ ವಿರಹಿಗಳ ಮಾನಸಿಕ ಸ್ಥಿತಿ ಯನ್ನು ಗಜಲ್ ದಲ್ಲಿ ವ್ಯಕ್ತ ಪಡಿಸಿದ್ದಾರೆ. ಚೆಂದದ ಚೆಲುವೆಯು ಮನಸನು ಕದಿಯಲು ಬಂದಿಹಳು ಪ್ರೀತಿಯ ಗೈಯಲು ತೋಳಲಿ ಬಂಧಿಸಲು ಬಂದಿಹಳು ( ಗಜಲ್ ೨೧) ಮೇಲಿನ ಮತ್ಲಾದಲ್ಲಿ ಪ್ರಿಯತಮ ತನ್ನ ಪ್ರೇಯಸಿಯ ಚೆಲುವನ್ನು ವಣಿ೯ಸುತ್ತಾ ನನ್ನ ಹೃದಯ ವನ್ನು ಕದಿಯಲು ಬಂದ ಕಳ್ಳಿ,ಪ್ರೀತಿಮಾಡುತ್ತಾ ತನ್ನ ಕೋಮಲವಾದ ತೋಳಿನಲ್ಲಿ ನನ್ನನ್ನು ಬಂಧಿಸಲು ಬಂದಿರುವಳೆಂದು ಹೇಳುತ್ತಾ ಗಜಲ್ ದಲ್ಲಿ ಅವಳು ತನ್ನ ಬಾಳಲ್ಲಿ ವಸಂತ ಗೀತೆ ಹಾಡುತ್ತಾ ಅಮೃತವನ್ನು ಉಣಿಸಲು ಬಂದಂತ ದೇವಲೋಕದ ಅಪ್ಸರೆ ಎಂದು ತನ್ನ ಪ್ರಿಯೆತಮೆ ಯನ್ನು ಭಾವನಾತ್ಮಕ ವಾಗಿ ವಣಿ೯ಸಿದ್ದಾರೆ. ಎದೆ ತುಂಬ ಕಾಡುವ ನೆನಪುಗಳು ಎಲ್ಲಿ ಬಚ್ಚಿಡಲಿ ಬಣ್ಣ ಬಣ್ಣಕ್ಕೆ ತಿರುಗುವ ರೆಕ್ಕೆಗಳು ಎಲ್ಲಿ ಬಚ್ಚಿಡಲಿ (ಗಜಲ್ ೩೪) ಮೇಲಿನ ಮತ್ಲಾದಲ್ಲಿ ಕವಿ ಮನದಲ್ಲಿ ಕಾಡುವ ಕೊರೆಯುವ ಹಳೆಯ ನೆನಪುಗಳನ್ನು ಹೇಗೆ ಮರೆಯಲಿ ಎಲ್ಲಿ ಬಚ್ಚಿಡಲಿ ಅವುಗಳನ್ನು ಎಂದು ಹೇಳುತ್ತಾ ಕ್ಷಣ ಕ್ಷಣಕ್ಕೆ ಬದಲಾಗುವ  ಬಣ್ಣ ಬಣ್ಣದ ಕನಸುಗಳನ್ನು (ರೆಕ್ಕೆಗಳು)ಎಲ್ಲಿ ಬಚ್ಚಿಡಲಿ ಎಂದು ತನ್ನ ಪ್ರಿಯತಮೆಗೆ ಹೇಳುತ್ತಾನೆ ಅವಳೊಂದಿಗೆ ಕಳೆದ ದಿನಗಳನ್ನು ಹೇಗೆ ಮರೆಯಲೆಂಬ ಚಡಪಡಿಕೆಯು ಈ ಗಜಲ್ ದಲ್ಲಿ ಎದ್ದು ಕಾಣುತ್ತದೆ. ಅದೆಷ್ಟೋ ಉಳಿದ ಎದೆಯ ಮಾತಿಗೆ ದನಿ ಬೇಕಿದೆ ದೂರಾದ ಜೀವವು ಪ್ರೀತಿಗೆ ಸೋತು ಬರಬೇಕಿದೆ (ಗಜಲ್ ೪೭) ಮೇಲಿನ ಮತ್ಲಾದಲ್ಲಿ ಗಜಲ್ ಕಾತಿ೯ಯು ತನ್ನ ಪ್ರಿಯಕರನ ಬರುವಿಗಾಗಿ  ಕಾಯುತ್ತಾ ನೀನಿಲ್ಲದೆ ನನ್ನ ಮನದ ಮಾತುಗಳು ಎದೆ ಆಳದಲ್ಲಿ ಉಳಿದಿವೆ,ನೀ ಬಂದು ಅವುಗಳಿಗೆ ದನಿಯಾಗ ಬೇಕಾಗಿದೆಂದು ಹೇಳುತ್ತಾ ,ನೀನು ಎಷ್ಟೇ ದೂರ ಇದ್ದರೂ ನನ್ನ ಶುದ್ಧ ವಾದ ಪ್ರೀತಿಗೆ ನೀನು ತಲೆಬಾಗಿ ಬರಲೇಬೇಕೆಂದು ಹಂಬಲುಸುತ್ತಾ ಪ್ರಿಯಕರನ್ನು ಆಹ್ವಾನಿಸುತ್ತಾ ಅವನ ಆಗಮನದ ನಿರೀಕ್ಷೆ ಯಲ್ಲಿ ಹಗಲು ರಾತ್ರಿ ಯನ್ನದೆ ತೆರೆದ  ಕಣ್ಣಿನಿಂದ  ನಿದ್ದೆ ಮಾಡದೆ ಹುಡುಕುತ್ತಿದ್ದಾಳೆ.ಇದು ವಿರಹದಲ್ಲಿ ಪ್ರಿಯತಮನನ್ನು  ಹುಡುಕಾಡುವ  ಗಜಲಾಗಿದೆ. * ನೂರು ನೋವುಗಳ ಸಂತೆ ಮನಕೆ ಅಂಟಿರಲು* * ಬಟ್ಟಲಿನ ಒಡಲಲಿ ತುಸು  ಒಲವಿನ ನಶೆಯಲ್ಲ ಸಾಕಿ*(ಗಜಲ್ ೫೫) ಮೇಲಿನ ಮಿಸ್ರಾ ದಲ್ಲಿ ಕವಿ ತನ್ನ ಮನದ ನೋವು ಸಾಕಿ ಯೊಂದಿಗೆ ಹಂಚಿಕೊಳ್ಳುತ್ತಾನೆ.ಮನಸಿನಲ್ಲಿ ನೂರು ನೋವುಗಳ ಸಂತೆ ನಡೆದಿದೆ ಅವು ಕರಳಿಗೆ ಅಂಟಿಕೊಂಡಿವೆ.ಹೃದಯ ಬಟ್ಟಿಲು ಬರಿದಾಗಿದೆ ಮರುಭೂಮಿ ಯಾಗಿ ಬಿರಿದಿದೆ,ಪ್ರೀತಿಯ ಮಳೆ ಇಲ್ಲದೆ ಒಣಗಿದೆ ನಿನ್ನೊಲವಿನ ಗುಟುಕು ಕುಡಿಯದೆ ಬದುಕಿನಲ್ಲಿ ಒಲವಿನ ನಶೆ ಎಲ್ಲಿಂದ ಬರಬೇಕೆಂದು ಸಾಕಿಯನ್ನು ಪ್ರಶ್ನಿಸುತ್ತಾ ಪ್ರಿಯೆತಮೆಯ ಪ್ರೇಮ ಇರದ ಬದುಕಿಗೆ ನೆಲೆ  ಎಲ್ಲೆಂದೆ ಎಂದು ಹಲಬುವ ಗಜಲ್ ಇದು. ಇಂತಹ ಪ್ರೀತಿಯ ಕನವರಿಕೆಯ ಮತ್ತು ವಿರಹದ ನೋವಿನ ಗಜಲ್ ಗಳು ಈ ಸಂಕಲನದಲ್ಲಿ ಸಾಕಷ್ಟು ಇವೆ ಇದರ ಜೊತೆಗೆ ವಿವಿಧ ವಿಷಯ ಗಳ ಗಜಲ್ ಗಳು ಕೂಡಾ ಇವೆ.ಹೊಂಗೆ ನೆರಳು ಗಜಲ್ ಸಂಕಲನವು ಓದಿಸಿಕೊಂಡು ಹೋಗುತ್ತದೆ.ಶ್ರೀ ರಾಮು ಎನ್ ರಾಠೋಡ ಮಸ್ಕಿ ಇವರ ಸಂಪಾದಕೀಯ ಕೆಲಸಕ್ಕೆ ಅಭಿನಂದನೆಗಳು ಹೇಳುತ್ತಾ ನನ್ನ ಬರಹಕ್ಕೆ ಮಿರಾಮ ಕೊಡುವೆ.          ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ

ಹೊಂಗೆ ನೆರಳು Read Post »

ಪುಸ್ತಕ ಸಂಗಾತಿ

ಆಸೆಯ ಕಂದೀಲ

ಪುಸ್ತಕ ಸಂಗಾತಿ  “ಆಸೆಯ ಕಂದೀಲ – ಬೆಳಕಿನ ಮೌನದ ಮಾತು ಹುಡುಕುತ್ತಾ…” ಕೃತಿ: “ಆಸೆಯ ಕಂದೀಲು“(ಕವನ ಸಂಕಲನ) ಕವಯತ್ರಿ: ಮಂಜುಳ.ಡಿ, ಬೆಂಗಳೂರು. ಪ್ರಕಾಶನ: ತೇಜು ಪಬ್ಲಿಕೇಷನ್ಸ್, ಬೆಂಗಳೂರು. ಬೆಲೆ: ₹೫೫ ಕವನ ಸಂಕಲನಗಳನ್ನು ಕೊಂಡು ಓದುವವರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಾಣುತ್ತಿರುವ ಸಮಯದಲ್ಲಿ, ಇಂದಿನ ಕಾಲಘಟ್ಟದಲ್ಲಿ ಕವಿತೆಗಳನ್ನು ಬರೆದು ಪ್ರಕಟಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸಂತಸದ ಸಂಗತಿಯೇ ಆಗಿದೆ. ಆದರೆ ಮನಸ್ಸಿಗೆ ಬಂದದ್ದನ್ನು ಗೀಚಿ ಪುಸ್ತಕದ ರೂಪದಲ್ಲಿ ಪ್ರಕಟಿಸಿ ತಾನೊಬ್ಬ ‘ಕವಿ/ಕವಯಿತ್ರಿ’ ಎಂಬ ಲೇಬಲ್ ಅನ್ನು ತಮಗೆ ತಾವೇ ನೀಡಿಕೊಂಡು ಸಂಭ್ರಮಿಸುವ ಸಂಸ್ಕೃತಿ ಜಾರಿಯಲ್ಲಿರುವುದನ್ನು ತಳ್ಳಿಹಾಕುವಂತಿಲ್ಲ! ಹೀಗಿದ್ದಾಗ ಅಂತಹ ಹಲವರ ನಡುವೆ ನಿಜಕ್ಕೂ ಉತ್ಕೃಷ್ಟವಾದ ಕವಿತೆಗಳನ್ನು ರಚಿಸುತ್ತಿರುವ ಲೇಖಕರನ್ನು ಅರಸುವುದು ಕಷ್ಟಸಾಧ್ಯವೆ ಸರಿ. ಅಂತಹ ವಿರಳರಲ್ಲಿ ವಿರಳರಾದ, ಫೇಸ್ಬುಕ್  ಸಾಮಾಜಿಕ ಜಾಲತಾಣದಲ್ಲಿ ಛಾಪು ಮೂಡಿಸಿ, ತಮ್ಮದೇ ಆದ ಓದುಗ ವರ್ಗವನ್ನು ಹೊಂದಿರುವ ಮಂಜುಳ.ಡಿ ರವರು, ತಮ್ಮ ವಿಭಿನ್ನ ಶೈಲಿಯ ಕವಿತೆಗಳಿಂದಲೇ ಪರಿಚಿತರಾದವರು. “ಆಸೆಯ ಕಂದೀಲು” ಕವನ ಸಂಕಲನ ‘ಮಂಜುಳ.ಡಿ’ ರವರ ಚೊಚ್ಚಲ ಕೃತಿಯಾಗಿದ್ದು, ಇದರೊಂದಿಗೆ “ಸಂಪಿಗೆ ಮರ” (ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟಣೆಯಾದ ಅಂಕಣ ಬರಹಗಳು) ಮತ್ತು “ನಿನಾದವೊಂದು…”(ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟನೆಯಾದ ಅಂಕಣ ಬರಹಗಳು) ಕೃತಿಗಳನ್ನು ಸಹ ಪ್ರಕಟಿಸಿದ್ದಾರೆ. “ಮುಸ್ಸಂಜೆಯ ಚಹದೊಂದಿಗೆ ಒಮ್ಮೆ ನೀ ಸಿಗು ಒಂದಷ್ಟು ಮಾತುಗಳ ಎಳೆ ಹೆಣೆಯುವ ನೀ ಮೌನದಲ್ಲಿ ಹೇಳುತ್ತಾ ಹೋಗು ನಾ ಸುಮ್ಮನೆ ಕೇಳುವೆ“ (ಮಾತಿನ ಎಳೆ)    ಮುಂಜಾನೆ ಮುಸುಕು ಇಬ್ಬನಿ ಮಬ್ಬಿನ ಈ ಚಳಿಯ ಘಳಿಗೆಯಲ್ಲಿ, ಬಾಲ್ಕಾನಿಯಲ್ಲಿ ನಿಂತು ಶುಷ್ಕ ಹಬೆಯಾಡುವ ಚಹಾದ ಒಂದೊಂದು ಗುಟುಕು ಹೀರುತ್ತಾ… ಮಂಜುಳ. ಡಿ ರವರ ಒಂದೊಂದು ಕವಿತೆಗಳನ್ನು ಆಸ್ವಾದಿಸುತ್ತಿದ್ದರೆ ಭಾವಗಳ ಅಮಲೇರುವ ನಶೆಯ ಗಂಧ ಮೈಮನಸ್ಸನ್ನು ಆವರಿಸುತ್ತದೆ. ಏಕತಾನತೆಯಲ್ಲಿ ತಲ್ಲೀನನಾಗಿರುವವನಲ್ಲಿ ನಿರ್ಲಿಪ್ತ ನದಿಯೊಂದು ಮೌನವಾಗಿ ಹರಿದಂತೆ ಅನುಭವವಾಗುತ್ತದೆ. ಶುದ್ಧ ಕಾವ್ಯಾತ್ಮಕವಾದ ಪರಿಭಾಷೆಯಲ್ಲಿ ಮಿಂದು ಪುಟಿದೆದ್ದಂತಿರುವ ಕಾವ್ಯದ ಸಾಲುಗಳು ನವೀನತೆಯಿಂದ ಅತ್ಯಾಪ್ತವಾಗುವ, ಮನಕೆ ಮುದ ನೀಡುವ, ರಮಿಸುವ, ಸಮ್ಮೋಹಿಸುವ, ಪರವಶಗೊಳಿಸುವ ಸರಳ ಭಾಷೆಯ ಹಾಗೂ ಸುಂದರ ಭಾವದ ಅಚ್ಚುಕಟ್ಟಾದ ರಚನೆಗಳು, ಅನಾಯಾಸವಾಗಿ ಕವಿಮನದ ಸೂಕ್ಷ್ಮ ಸಂವೇದನೆಯಿಂದ ಹೊಮ್ಮಿದ ಹಾಗೇ ಅಷ್ಟೇ ಅನಾಯಾಸವಾಗಿ ಓದುಗನನ್ನು ದಕ್ಕಿಸಿಕೊಳ್ಳುತ್ತವೆ. “ಅದು ಧ್ಯಾನವೋ ತಪನವೋ ಅರಿಯೆ ದಶಕವಾದರೂ ಒಂದಂಗುಲ ಕದಲದ ಒಂದೇ ತೀವ್ರತೆ ಅಂಗುಷ್ಠದಿಂದ ನೆಟ್ಟಿಯಂಚಿನವರೆಗೂ ಅರೆಗಳಿಗೆಯಲ್ಲಿ ಕರಗಿ ಹರಿದುಬಿಡಬೇಕೆಂಬ ಕಾತರತೆ“ (ಮುಗಿಲಿನಂಚಿನ ನೀಲಿ ಪರಿಚ್ಛೇದದಲ್ಲಿ ಉಲ್ಕಾಪಾತ) ಈ ತೆರನಾದ ವಿಭಿನ್ನ ಮತ್ತು ಅನನ್ಯ ಅಭಿವ್ಯಕಿಯನ್ನು, ಕೌಶಲ್ಯವನ್ನು ಕರಗತ ಮಾಡಿಕೊಂಡಿರುವ ಮಂಜುಳರವರ ಕವನ ಸಂಕಲನದಲ್ಲಿ  ತಮ್ಮದೇ ಛಾಪು ಮೂಡಿಸುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು. “ನಿನ್ನ ಕಂಡ ಮರುಕ್ಷಣ ನನ್ನೊಳು ಹರಿದು ನಿಂತ ನಿನ್ನ ಅಸ್ತಿತ್ವ“ “ನಿನ್ನದೇ ಬಣ್ಣ ಪಡೆದು ನಿಂತ ಪರಿ ನನ್ನ ಬಣ್ಣವ್ಯಾವುದೋ ಗುರುತಿಸಲಿ ಹೇಗೆ?” (ನಿನ್ನಲ್ಲಿ ಕರಾಗಿರುವ ನನ್ನ ಬಣ್ಣವಾವುದು?)     ಓದುಗ ಬೆರಳನ್ನು ಬಳಸಿ ಸಂಕಲನದ ಕವಿತೆಗಳನ್ನು ಓದುವಾಗ, ಅದರಲ್ಲಿನ ಹಸಿ ಸಿಹಿ ಭಾವ ಸುಮಗಳು ಓದುಗನ ಅಂಗೈ ಬೆರಳಿಗಂಟಿ ಮಗುಮ್ಮಾಗಿ ಘಮ್ ಎಂದು ನಕ್ಕು ಅಚ್ಚರಿ ಮೂಡಿಸುತ್ತವೆ! ಹಾಗಾಗಿ ಪ್ರಸ್ತುತ ಕವಿತೆಗಳಲ್ಲಿ ಮಿಂದು, ಕರಗಿ, ಒಂದಾಗಿ, ಕಳೆದು ಹೋಗುವ ಭಾವ ತೀವ್ರತೆ ಉಂಟಾಗುತ್ತದೆ. “ಬಿಟ್ಟು ಹೋಗುವ ಆತುರವೆಷ್ಟಿತ್ತು ನೋಡು ನಿನ್ನರ್ಧ ನನ್ನಲ್ಲೆ ಉಳಿಸಿ ಹೋದೆ“ ( ಮಾಸದ ಕಲೆ)    ಇಲ್ಲಿನ ಕವಿತೆಗಳು ಒಂದು ಮತ್ತೊಂದರ ನೆರಳಿಲ್ಲದೆ ಸ್ವತಂತ್ರವಾಗಿ ಮತ್ತು ವೈವಿಧ್ಯಮಯವಾಗಿ ಭಿನ್ನತೆಯನ್ನು ಕಾಯ್ದುಕೊಳ್ಳುವ ಜೊತೆಗೆ, ತಮ್ಮದೇ ಆದ ನವಿರಾದ ಶೈಲಿಯನ್ನು ಮೈಗೂಡಿಸಿಕೊಂಡಿದ್ದು; ಕ್ಲಿಷೆ ಅನಿಸುವ, ಜಿಜ್ಞಾಸೆ ಮೂಡಿಸುವ ಸವಕಲು ಪದಗಳ  ಪಂಜು ನಂದಿಸಿ, ಆಸೆಯ ಕಂದೀಲನ್ನು ಹೊಸತಾಗಿ ಹಚ್ಚಿದ್ದಾರೆ. ಅದರ ಪ್ರಭೆ ಉತ್ಸಾಹ ಭರಿತ, ಉಲ್ಲಾಸದಾಯಕ, ಉನ್ಮಾದದ ರಸಸಿದ್ಧಿಯ ಜೊತೆಗೆ ಉದಾತ್ತತೆಯ ತದಾತ್ಮಕತೆಯನ್ನು ಹುಟ್ಟಿಸಿ ಬೆರಗು ಮೂಡಿಸುವಂಥದ್ದು. “ಹೂಡಿದ ಸಂಚೊoದು ಯಾವುದೇ ಶಿಕ್ಷೆಯಿಲ್ಲದೆ ರಿಹಾ ಆಯಿತು ಕಣ್ಣುಗಳನ್ನು ಆಯುಧವೆಂದು ಪರಿಗಣಿಸಿಲ್ಲ“ (ಆಯುಧ) ಹೀಗೆ…. ಹಾರುವ ಹಕ್ಕಿಯ ರೆಕ್ಕೆಯ ತುದಿಯಾಗಿ ಆತ್ಮವನ್ನು ಸ್ಪರ್ಶಿಸುವ, ಹೂದಳಗಳಾಗಿ ಮನಸ್ಸನ್ನು ಆರ್ದವಾಗಿ ತಾಕುವ, ಕತ್ತಲಲ್ಲಿ ದೀಪವನ್ನು ಹಚ್ಚಿಟ್ಟಂತೆ ಬೆಳಗುವ, ಬಿಸಿಲ ಹೊಂಗಿರಣಗಳಿಗೆ ಹೊಳೆಯ ಅಲೆಗಳಾಗಿ ಹೊಳೆಯುವ, ಹೊಸ ಹೊಳಹು ಹಾಗು ನವ ಕಾಣ್ಕೆಗಳ ಮೂಲಕ ವಿಸ್ಮಯ ಲೋಕವೊಂದನ್ನು ಸೃಷ್ಟಿಸುವ, ತದಾತ್ಮಕತೆಯನ್ನು ಹುಟ್ಟಿಸಿ ಬೆರಗು ಮೂಡಿಸುತ್ತವೆ. ‘ನೆರಳೆ ಬೆಳಕನ್ನು ಬೆನ್ನಟ್ಟಿದ ಹಾಗೆ‘ __ ‘ಕಣ್ಣಿನಲ್ಲಿ ಬಿದ್ದ ಜಗವೀಗ ಒದ್ದೆ‘ __ ‘ಅಲ್ಲಾನ ಗೋಡೆಯ ಚೂರು‘ __ ‘ನೀ ಬರುವ ಹಾದಿಯಲ್ಲಿ ಕಣ್ಣ ಹಾಸಿ‘ __ ‘ನಿನ್ನ ನೋಟದ ಜ್ವಾಲೆಯೊಂದು ತಾಕಿ‘ __ ‘ಕಣ್ಣವೆಯ ಮೇಲೆ ಅನೂಹ್ಯ ಖಂಡಗಳ ನೆರಳು‘ __ ‘ಹೇಳು ಹೀಗೆ ನಿನ್ನ ಕಡಲಲ್ಲಿ ಕರಗಿ ನಿನ್ನದೇ ಬಣ್ಣ ತಳೆದ ನನ್ನ ಬಣ್ಣವಾದರೂ ಯಾವುದು?’ ಹೀಗೆ…. ಸುಲಭಕ್ಕೆ ಕಲ್ಪನೆಗೆ ದಕ್ಕದ ಅಪರೂಪದ, ಸೃಜನಶೀಲ, ಚಿಂತನೆಗೆ ಹಚ್ಚುವ ಅಲೌಕಿಕ ಅರ್ಥವನ್ನು, ಪಾರಮಾರ್ಥಿಕ ಅನುಭೂತಿಯೊಂದಿಗೆ ಬೆಸೆದು ರೂಪಕಗಳಾಗಿಸಿ ಪ್ರೇಮವನ್ನು ಧ್ಯಾನಿಸುವ ಪರಿ ಅಪರಿಮಿತವಾದುದು. “ಉಡುಗೊರೆಯಾಗಿ ಏನು ಬೇಕು ಎಂದಿಗೂ ಮುಗಿಯದ ಒಂದೇ ಒಂದು ಭೇಟಿ ಸಾಕು“ (ಉಡುಗೊರೆ) ಈ ತೆರನಾದ ಕವಿತೆಗಳ ತೀವ್ರತೆ, ಭಾವುಕತೆ, ತುಡಿತ, ಮಿಡಿತ, ಕಾವ್ಯ ಕಟ್ಟುವ ವಿಧಾನ ಹಾಗು ಕಾವ್ಯ ಕಟ್ಟುವ ಕೆಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗಝಲ್ ಪ್ರಕಾರದ ಒಂದಷ್ಟು ಲಕ್ಷಣಗಳು ಗೋಚರಿಸುತ್ತವೆ. ಈ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ಮಂಜುಳರವರು ಗಝಲ್ಗಳನ್ನು ರಚಿಸಿದ್ದಲ್ಲಿ ಉತ್ತಮ ಗಝಲಕಾರರಾಗುವ ಸಾಧ್ಯತೆಗಳಿವೆ ಅನಿಸುತ್ತದೆ. “ಮನೆಯಿಂದ ಮಂದಿರ, ಮಸೀದಿ ತುಸು ದೂರವೇ ಇದೆ ಸಾಗುವ ಹಾದಿಯಲ್ಲಿ ನೋವಿನಲ್ಲಿದ್ದವರ ಕೊಂಚ ನಗಿಸಿಬಿಡೋಣ“ (ಮನುಜಮತ)     ಶೋಕವು ನಿನಾದವಾಗುವ, ಲೋಕದ ಕಣ್ಣಿನ ಭಾಷೆಗೆ ಕವಿತೆ ಕ್ಯಾನುವಾಸಾಗುವ, ನೋವು ಕಂಬನಿಯಾಗಿ, ಮನದ ಬನಿಯಾಗಿ ಅಲಾಪಗೊಂಡು ಹೃದಯ ಮಿಡಿಯುವ, ಆ ಮೂಲಕ ನೋವು ಸಹ ಮುಗುಳ್ನಗೆಯಾಗುವ, ತುಡಿಯುವ, ಕಾಡುವ, ಕನವರಿಸುವ, ಕನಸಾಗುವ, ಪ್ರೇಮ ಆರಾಧನೆಯೊಂದಿಗೆ ವಿರಹವನ್ನು ಅಪ್ಪಿ ಸಲಹುವ, ಜೊತೆಗೆ ಸಿಟ್ಟು, ಸೆಡವು, ಹತಾಶೆ, ವ್ಯಾಮೋಹ, ಏಕಾಂತ, ಒಂಟಿತನ, ಮೌನ, ನಿಟ್ಟುಸಿರು, ನಗು, ಮುಗ್ಧತೆ, ಪ್ರಕೃತಿ, ಜಾತಿ, ಧರ್ಮ ಹೀಗೆ ಒಂದಷ್ಟು ತತ್ವ-ಸಿದ್ಧಾಂತ ಎಲ್ಲವೂ ಒಂದು ಯಾಖಃಚಿತ್ ರೂಪ ಪಡೆದು ರೂಪಕಗಳಾಗಿ ಕವಿತೆಗಳಲ್ಲಿ ಭಾವಾರ್ಥಗಳೊಡಗೂಡಿ ಸದ್ದಿಲ್ಲದೆ ಅನುಸಂಧಾನಿಸುವಂತೆ ಹರಿಯುವ ರೀತಿ…. ನನ್ನ ಪ್ರೀತಿಯ ಕವಯತ್ರಿ ಅಮೃತಾ ಪ್ರೀತಂ ರ ಕವಿತೆಗಳನ್ನು ನೆನಪಿಸಿದವು. ಅಮೃತಾ ರ ಕವಿತೆಗಳನ್ನು ಆಸ್ವಾದಿಸಿ, ಅನುಭವಿಸಿ, ಅವುಗಳ ಅಂತರ್ಯದಿ ಅವಿರ್ಭವಿಸಿ ಅಮಲೇರಿಸಿಕೊಂಡು ಕವಿತೆಗಳ ನಶೆಯಲ್ಲಿ ಧುತ್ತನಾಗಿ ಎಷ್ಟೋ ದಿನಗಳವರೆಗೆ ಕಾಡುವಂತೆ, ಮಂಜುಳ ರವರ ಆಸೆಯ ಕಂದೀಲು ಸಂಕಲನದ ಕವಿತೆಗಳು ಕಾಡುತ್ತವೆ. ತದಾತ್ಮಕತೆಯನ್ನು ಹುಟ್ಟಿಸಿ ಬೆರಗು ಮೂಡಿಸುತ್ತವೆ! ~’ನೆರಳೆ ಬೆಳಕನ್ನು ಬೆನ್ನಟ್ಟಿದ ಹಾಗೆ‘ ~’ಕಣ್ಣಿನಲ್ಲಿ ಬಿದ್ದ ಜಗವೀಗ ಒದ್ದೆ‘ ~’ಅಲ್ಲಾನ ಗೋಡೆಯ ಚೂರು‘ ~’ನೀ ಬರುವ ಹಾದಿಯಲ್ಲಿ ಕಣ್ಣ ಹಾಸಿ‘ ~’ನಿನ್ನ ನೋಟದ ಜ್ವಾಲೆಯೊಂದು ತಾಕಿ‘ ~’ಕಣ್ಣವೆಯ ಮೇಲೆ ಅನೂಹ್ಯ ಖಂಡಗಳ ನೆರಳು‘ ~’ಹೇಳು ಹೀಗೆ ನಿನ್ನ ಕಡಲಲ್ಲಿ ಕರಗಿ ನಿನ್ನದೇ ಬಣ್ಣ ತಳೆದ ನನ್ನ ಬಣ್ಣವಾದರೂ ಯಾವುದು?’ ಇಂತಹ ಸಾಲುಗಳು ಚಿಂತನೆಗೆ ಹಚ್ಚುವುದರೊಂದಿಗೆ, ಕವಿಮನದ ಕಲ್ಪನೆಯ ಅನುಭೂತಿಯನ್ನು  ಓದುಗನಿಗೂ ಪ್ರಾಸಾದಿಸುತ್ತವೆ.  “ಇದುವರೆಗಿನ ಸಂಗೀತ ವಿದ್ವಾಂಸರು ಯಾರನ್ನು ಒಳಗಿಳಿಸಿಕೊಂಡು ಹಾಡುತ್ತಾರೆನ್ನುವುದು ಸದಾ ಚಕಿತಗೊಳಿಸುವ ಸಂಗತಿ ನನಗೆ“ ಎಂಬಂತಹ ಕವಿತೆಯ ಹೊಳಹುಗಳು, ತೀರಾ ವಾಚ್ಯವೆನಿಸಿದರೂ ಕಾವ್ಯ ಲಹರಿಯೊಂದಿಗೆ ಓದಿಸಿಕೊಂಡು ಸಾಗುತ್ತವೆ. ಇದರ ಜೊತೆಗೆ, ಮುಖ್ಯವಾಗಿ ಕೊನೆಯ ಪುಟಗಳಲ್ಲಿ ಬಿಡಿ ಹೂಗಳಾಗಿ ಅರಳಿರುವ ಅಳಿದುಳಿದ ಕವಿತೆಗಳು ಉತ್ಕೃಷ್ಟ ರಚನೆಗಳಾಗಿದ್ದು, ಕವಿಮನಸಿನಾಗಸದ ನಕ್ಷತ್ರಗಳಂತೆ ಮಿನುಗುತ್ತವೆ. ಅವುಗಳಲ್ಲಿ ಕೆಲವು ಓದುಗರಿಗಾಗಿ ಈ ಕೆಳಗೆ ಹಂಚಿಕೊಂಡಿರುವೆ…. “ಮಳೆಯ ಹನಿಗಳಿಗೆ ಬಣ್ಣವಿಲ್ಲ ……………………… ಆದರೂ ಸುತ್ತಲೂ ಬಣ್ಣ ಚೆಲ್ಲಿದ ವಾತಾವರಣ“ (ರಂಗು) __ “ಯಾರದ್ದಾದರೂ ತಪ್ಪುಗಳನ್ನು ಎಣಿಸುವ ಮೊದಲು ಕನ್ನಡಿಯ ಮುಂದೆ ಒಮ್ಮೆ ಹಾದು ಹೋಗುವ“ (ಆತ್ಮಶೋಧ) __ “ಮನೆಯವರಿಗೂ ಬಿಟ್ಟು ಬರಲೇ ………… ನನ್ನನ್ನು ಇನ್ನೆಷ್ಟು ಬಿಡುತ್ತೀಯ ಹೇಳು“ (ವಿರಹಿ) __ “ಕಣ್ಣಿಂದ ಹೇಳಿದರೆ ನೀರ ಹನಿಗಳು ಪದಗಳಲ್ಲಿ ಹೇಳಿದರೆ ಕವಿತೆ“ (ನೋವೆಂದರೆ…) __ “ಕೆಳಜಾತಿಯವನೆಂದು ಆತನನ್ನು ಮನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ ಅವರು ಸಾಕಿದ ನಾಯಿ ಆ ಮನೆಯ ಒಳಗೆಲ್ಲ ಓಡಾಡುತ್ತಲ್ಲ“* (ಜಾತಿಮತಿ) ಮುಗಿಸುವ ಮುನ್ನ… “ಆಸೆಯ ಕಂದೀಲು…” ಸಂಕಲನದ ಒಟ್ಟು ಅರವತ್ತೈದು ಕವಿತೆಗಳೂ ಸಹ ಒಂದಾದ ನಂತರ ಮತ್ತೊಂದು ಓದುಗನನ್ನು ಅಪ್ಪುತ್ತಾ, ಆತ್ಮೀಯತೆಯಿಂದ, ಅಪ್ಯಯತೆಯಿಂದ ನಿರರ್ಗಳವಾಗಿ ಸಾಗುತ್ತವೆ. ಇಂತಹ ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಜವಾಬ್ದಾರಿ ಓದುಗರದ್ದಾಗಿದೆ. ಕವಯಿತ್ರಿ ‘ಮಂಜುಳ.ಡಿ’ ರವರ ಚೊಚ್ಚಲ ಪ್ರಯತ್ನ ನಿಜಕ್ಕೂ ಸಾರ್ಥಕತೆಯತ್ತ ಸಾಗಿದೆ. ಈ ಪಯಣ ಹೀಗೆ ಮುಂದುವರಿಯಲಿ, ಮತ್ತಷ್ಟು ಕೃತಿಗಳು ಪ್ರಕಟವಾಗಿ ಓದುಗರ ಮನಸ್ಸು ತಣಿಸಲಿ ಎಂಬ ಶುಭ ಹಾರೈಕೆಗಳೊಂದಿಗೆ… *****************************. ಜಬೀವುಲ್ಲಾ ಎಮ್. ಅಸದ್

ಆಸೆಯ ಕಂದೀಲ Read Post »

ಪುಸ್ತಕ ಸಂಗಾತಿ

ತ್ರಿದಳ

ಮಹಿಳೆಯರನ್ನು ಸಾಕ್ಷರರನ್ನಾಗಿಸಲು ಪ್ರೇರೇಪಿಸುವ ಕವಯಿತ್ರಿಯ ತ್ರಿಪದಿಯ ಸಾಲುಗಳು ಮಹಿಳಾ ಶಿಕ್ಷಣದ ಜಾಗೃತೆಯನ್ನು ಸಾರುತ್ತವೆ. ಜೀವನದ ವಾಸ್ತವ ಸತ್ಯಗಳನ್ನು ಸಾರುವ ತ್ರಿಪದಿಗಳು ತುಂಬಾ ಮಾರ್ಮಿಕವಾಗಿವೆ. ೭೦ ವರ್ಷದ ವಸಂತದಲ್ಲಿ ಜೀವನಾನುಭವದ ಅಮೃತ ಬಳ್ಳಿಯಲಿ ಅರಳಿದ ಕಾವ್ಯ ಕುಸುಮಗಳಾಗಿ ಶ್ರೀಮತಿ ವಾಸಂತಿ ಮೇಳೆದ ಅವರ ತ್ರಿದಳ ಸಂಕಲನದಲ್ಲಿ ಮೂಡಿಬಂದಿವೆ

ತ್ರಿದಳ Read Post »

ಪುಸ್ತಕ ಸಂಗಾತಿ

ತಡವಾಗಿ ಬಿದ್ದ ಮಳೆ

ಆ ನಿಟ್ಟಿನಲ್ಲಿ ವಿಮರ್ಶಕರನ್ನು ಸಹೃದಯಿ ಓದುಗರನ್ನು ಕೈಹಿಡಿದು ತನ್ನ ಅನಿಸಿಕೆಗಳ ಮಟ್ಟಕ್ಕೆ ಏರಿಸಿ ಚಿಂತನೆಗಳ ಆಳಕ್ಕೆ ಇಳಿಸಿ ಅಭಿಪ್ರಾಯ ವಿಸ್ತಾರದಲ್ಲಿ ಹಾರಿಸುತ್ತಾ ಅನುಭವದ ವಿವಿಧ ಸ್ತರಕ್ಕೆ ಕೊಂಡೊಯ್ಯುವ ಲೇಖಕ ಯಶಸ್ವಿಯಾಗುತ್ತಾನೆ . ಆಗ ಕೃತಿಗಳು ಸಾರ್ಥಕವೆನಿಸುತ್ತದೆ. ಅಂತಹ ಅಭಿವ್ಯಕ್ತಿ ಕೌಶಲ್ಯ ಜೊತೆಗೆ ಕರಪಿಡಿದು ಕರೆದೊಯ್ಯುವ ಸಾಮರ್ಥ್ಯ ಮೆಹಂದಳೆಯವರ ಕೃತಿಗಳಲ್ಲಿವೆ

ತಡವಾಗಿ ಬಿದ್ದ ಮಳೆ Read Post »

ಪುಸ್ತಕ ಸಂಗಾತಿ

ಪರಿಸರ ಕವನಗಳು

ನಮ್ಮ ಸಂಸ್ಕೃತಿಯ ಹಬ್ಬಗಳಲ್ಲಿ ಪರಿಸರವನ್ನು ಪೂಜಿಸುವ ಹಬ್ಬಗಳೇ ಪ್ರಧಾನವಾಗಿವೆ. ಅವುಗಳನ್ನು ಅಚರಿಸುವ ಮೂಲಕವೂ ನಾವು ಪರಿಸರ ಸಂರಕ್ಷಣೆ ಮಾಡಬೇಕೆಂದು ತಿಳಿಸುತ್ತಾರೆ.

ಪರಿಸರ ಕವನಗಳು Read Post »

ಪುಸ್ತಕ ಸಂಗಾತಿ

ಪೂರ್ವಿಯ ವಿಮಾನಯಾನ

ಮಕ್ಕಳ ಕಲ್ಪನೆಯ ವಿಸ್ತಾರಕ್ಕೆ ಇಂತಹ ಸಾಲುಗಳನ್ನು ನೀಡುತ್ತ…. ಮಕ್ಕಳು ಖುಷಿಯ ಹಾಡು ಹಾಡುತ್ತ ಮೋಡದ ರೆಕ್ಕೆಯ ಮೇಲೇರುವ ಸೋಜಿಗದ ವಿಸ್ತಾರಕ್ಕೆ ತೆರೆದುಕೊಳ್ಳುವಂತೆ ಮಾಡುತ್ತಿರುವ ನಾಗರಾಜ ಶೆಟ್ಟರಿಗೆ ವಂದಿಸುತ್ತ ಪೂರ್ವಿಯೊಂದಿಗಿನ ವಿಮಾನಯಾನದ ಅನುಭವ ಹಾಗೂ ಸಂತಸ ಕನ್ನಡದ ಎಲ್ಲ ಮಕ್ಕಳಿಗೂ ಸಿಗಲಿ ಎಂದು ಆಶಿಸುತ್ತೇನೆ.

ಪೂರ್ವಿಯ ವಿಮಾನಯಾನ Read Post »

ಪುಸ್ತಕ ಸಂಗಾತಿ

ಸಾಧ್ಯ ಅಸಾಧ್ಯಗಳ ನಡುವೆ

‘ ಸಾಧ್ಯ ಅಸಾಧ್ಯಗಳ ನಡುವೆ ‘
ಕಾದಂಬರಿ ಪರಿಚಯ
ಲೇಖಕರು:ಪ್ರಮೋದ್ ಕರಣಂ
ಪ್ರಕಾಶಕರು :ಶಾಶ್ವತ ಪಬ್ಲಿಕೇಶನ್
ಬೆಲೆ : ರೂ 180-00 ಅಂಚೆ ವೆಚ್ಚ ಉಚಿತ
ದೊರೆಯುವ ಸ್ಥಳ :9743224892

ಸಾಧ್ಯ ಅಸಾಧ್ಯಗಳ ನಡುವೆ Read Post »

ಪುಸ್ತಕ ಸಂಗಾತಿ

ರೈಲು ಹನಿ

ಆದರೆ ಎಲ್ಲಾ ಹನಿಗಳನ್ನು ಗಮನಿಸುತ್ತಾ ಹೋದಂತೆ ಕೆಲವೊಂದು ಅಂಶಗಳು ನನಗೆ ಕಂಡಂತೆ ಹನಿಗಳನ್ನು ಕಡಿಮೆ ಪದಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ಮಾಡಬಹುದಿತ್ತೇನೋ ಎನ್ನಿಸಿತು.

ರೈಲು ಹನಿ Read Post »

ಪುಸ್ತಕ ಸಂಗಾತಿ

ಪ್ಯಾರಿ ಪದ್ಯ

ಪುಸ್ತಕ ಸಂಗಾತಿ ಪ್ಯಾರಿ ಪದ್ಯ ನಾನಿವತ್ತು ಓದಿದ ಪುಸ್ತಕ       ” ಪ್ಯಾರಿ ಪದ್ಯ “ ******** ಎ.ಎಸ್.ಮಕಾನದಾರರು ಉತ್ತರ ಕರ್ನಾಕಟದಲ್ಲಿ ಅಪಾರ ಪ್ರೀತಿ ಗೌರವಕ್ಕೆ ಕಾರಣರಾದ ಸಾಹಿತಿಗಳ ಒಡನಾಡಿಗಳು.ಸೃಜನಶೀಲ ಸಾಹಿತಿಗಳಾಗಿ,ವಿಮರ್ಶಕರಾಗಿ,ಚಿಂತಕರಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಸರಳ ಸಜ್ಜನಿಕೆಯ ವ್ಯಕ್ತಿಗಳು.ವೃತ್ತಿಯಿಂದ ಕೌಟುಂಬಿಕ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕರಾಗಿ(ಗದಗ) ಸೇವೆ ಸಲ್ಲಿಸುತ್ತಾ,ಪ್ರವೃತ್ತಿಯಲ್ಲಿ ಉತ್ತಮ ಬರಹದ ಹತ್ತಾರು ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಎ.ಎಸ್.ಮಕಾನದಾರರು,ಕೇವಲ ಸಾಹಿತಿಗಳಷ್ಟೇ ಅಲ್ಲ.ಸ್ವತಹಃ ನಿರಂತರ ಪ್ರಕಾಶನದ ಸ್ಥಾಪಕರು.ಈ ನಿರಂತರ ಪ್ರಕಾಶನಕ್ಕೂ ಕವಿ ಸಾಹಿತಿಗಳಿಗೂ ಅಳಿಸಲಾಗದ ಸಂಬಂಧವಿದೆ.ಅನೇಕ ಉತ್ತಮ ಬರಹಗಾರರ ಕೃತಿಗಳನ್ನು ಕನ್ನಡ ಪುಸ್ತಕ ಲೋಕಕ್ಕೆ ಮೌಲಿಕ ಕೊಡುಗೆ ಕೊಟ್ಟ ಕೀರ್ತಿಯು ಎ.ಎಸ್.ಮಕಾನದಾರರ ಮುಡಿಗೇರಿದೆ.      2020-21 ರ  ವರುಷಗಳ ಕರೋನಾ ಭೀತಿಯ ಸವಾಲು ಎದುರಿಸಿಕೊಂಡು,ಕಷ್ಟ ಕಾಲದಲ್ಲಿಯೂ ಓದು ಬರಹವನ್ನು ತಪಸ್ಸಿನಂತೆ ಮಾಡಿಕೊಂಡಿದ್ದರ ಸಿದ್ಧಿಗೆ ಪ್ಯಾರಿ ಪದ್ಯ ಕಾವ್ಯ ಸಂಕಲನವು ಮಾನವೀಯ ಮೌಲ್ಯಗಳ ನೈಜ ಚಿತ್ರಣವನ್ನೊಳಗೊಂಡು ರೂಪ ತಾಳಿದೆ. ಆಶಯ,ವಸ್ತು,ರೂಪ-ಸ್ವರೂಪಗಳ ಪ್ಯಾರಿ ಪದ್ಯ ವು ಪರಿಮಳ ಚೆಲ್ಲಿದ ಕಾವ್ಯ ಗಂಧವಾಗಿದೆ.ಕೃತಿಯು ಒಂದು ಅನುಪಮ ಮನೋಪಕಾರಗಳ ಕಾಣಿಕೆಯಾಗಿದೆ.ಪುಸ್ತಕದೊಳಗೆ ಬಿಡಿಸಿದ ಚಿತ್ರಗಳಿಗೂ ನುಡಿಗಳಿಗೂ ವಿಚಾರಗಳ ನಂಟಿದೆ.ಈ ಬಗೆಯ ಪದ್ಯಗಳು ಕನ್ನಡದಲ್ಲಿ ಹೊಸತನ ಮತ್ತು ಹಿರಿದರ್ಥ ನೀಡುವ ಸಾರ್ಥಕ ಪ್ರಯತ್ನವೆನ್ನಬಹುದು.ಓದುಗರ ಕುತುಹಲವನ್ನು ಜಾಗೃತಗೊಳಿಸಿ ಅಭಿಮಾನ  ಹೆಚ್ಚಿಸುತ್ತದೆ. ರಚನೆಯಾದ ಸಾಲುಗಳಲ್ಲಿ ಕಣ್ಣಾಯಿಸೋಣ. ನೀನು ಸೂಜಿ ನಾನು ದಾರ ಹೊಲಿಯೋಣ ಗಡಿಗಳನು ಗಂಟೆಗಟ್ಟಲೇ ಕತೆ ಹೇಳಬೇಕಿಲ್ಲ.ಗಡಿ ಸಮಸ್ಯೆಯ ಅಪವಾದ ವಿವಾದಗಳನು ಊಹಾಪೋಹಗಳಿಂದ ಲೇಖಿಸುವುದು ಬೇಕಿಲ್ಲ. ಜಟಿಲವಾದ ಸಂಗತಿಯನ್ನು ಮೃದು ಮಾತಿನಲಿ ಬಿಡಿಸಿದ್ದಾರೆ.ಗಡಿಯ ವಿವಾದಗಳೆಂದರೆ ನಾವೆಲ್ಲರೂ ಹಲುಬುತ್ತೇವೆ.ಮನುಷ್ಯ-ಮನುಷ್ಯರಿಗಿಂತ ಹಿರಿದಾದ್ದೇನಿಲ್ಲ.ಈ ಮಣ್ಣಿನ  ಋಣ,ಭ್ರಾತ್ರುತ್ವದ ನೋವು ನಲಿವುಗಳನು,ಬೆರಳಿಗೆ ಸೂಜಿಯ ಮೊನಚು ತಾಕದಂತೆ ಹೊಲಿಯುವ ನಿಲುವನ್ನು ಕಲಾತ್ಮಕವಾಗಿ ಪ್ರಕಟಪಡಿಸಿದ್ದಾರೆ. ಎ.ಎಸ್.ಮಕಾನದಾರರ ಅನುಭವ ಅಸೀಮವಾದದ್ದು.ಇವರ ಸ್ವಪ್ರತಿಭೆಯು ಓದುಗರ ಅನುರಾಗ ಸೆಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿ ಬುದ್ಧನಾಗಲು ಭೋದಿವೃಕ್ಷವೇ ಬೇಕಿಲ್ಲ ಅರ್ಧಾಂಗಿ ಕರುಳ ಕುಡಿಯೂ ತ್ಯಜಿಸಬೇಕಿಲ್ಲ ಮೌನದ ಹಾದಿಯಲಿ ಹಾಡಿದರೆ ಸಾಕು ಕೈಗೆಟುಕದ ಕನಸನ್ನರಸುತ್ತಾ,ಜೀವನವನ್ನು ಕಳೆದುಕೊಳ್ಳುವುದು ಮೂರ್ಖತನವೆ.ಅವರಿವರು ಹುರಿದುಂಬಿಸಿ ಆಕಾಶಕ್ಕೆ ಏಣಿ ಹಾಕುವ ಪೊಳ್ಳು ಮಾತುಗಾರರು ಅಧಿಕವಾಗಿದ್ದಾರೆ.ಬುದ್ಧ,ಬಸವ,ಗಾಂಧಿ,ಮತ್ತು ಅಂಬೇಡ್ಕರ್ ಅವರಂತಾಗಲು ಸಾಧ್ಯವಾಗದಿದ್ದರೂ,ಅವರ ನಡೆ,ನುಡಿಯನು ಜೀವನದಲ್ಲಿ ಪಾಲಿಸಿದರೆ ಸಾಕು. ಸಧ್ಯದಲಿ ನಮಗೆ ಲಭಿಸಿದ ಅವಕಾಶ,ನಮಗಿರುವ ಇತಿಮಿತಿಯನ್ನು ಹಿರಿದುಗೊಳಿಸಿ ಬದುಕಿದರೆ ಸಾಕೆನ್ನುವ  ಕವಿಯ ಚಿಂತನಾ ಕ್ರಮವಾಗಿದೆ. ” ಶಬ್ದಗಳನು ಜಾಲಾಡಿದೆ ಕೋಶವೆಲ್ಲ ತಿರುವಿದೆ ಕಿರು ನಗೆ- ಭೋಧಿ ವೃಕ್ಷವಾಯಿತು *ದೀಪವು ಮತ್ತೊಂದು ದೀಪವನು ಬೆಳಗಿಸುವಂತೆ., ಕಾಡುಗಲ್ಲಿಗೆ ಆಕಾರ ನೀಡುವ ಶಿಲ್ಪಿಯಂತೆ.,ಹೂವುಗಳ ಪೋಣಿಸಿ ಮಾಲೆ ಮಾಡಿದಂತೆ, ಶಬ್ದಗಳ ಕಟ್ಟುವಿಕೆಯೂ ಕವಿಯ ಚಾಣಾಕ್ಷತನ.ಪ್ರಗತಿಪರ ಬರಹಗಾರರ ಆಳವಾದ ಅರಿವು ಕಾಣುತ್ತದೆ. ಇರಿಯಲು ಬಂದ ಚೂರಿಗೆ ಮುತ್ತಿಕ್ಕಿದೆ ಮುತ್ತಿನ ಮತ್ತಿನಲಿ ಚೂರಿ ಮೆತ್ತಗಾಯಿತು ಹಣ,ಹೆಸರು,ಸ್ಥಾನಮಾನ ಹೊಂದಿದವರು ನಾಗರೀಕತೆಯ ಹಮ್ಮಿನಲ್ಲಿರುವವರೀಗ ವಿರಳವೇನಿಲ್ಲ.ಪ್ರಬಲ ಶಕ್ತಿಯ ವಿರುದ್ಧ ತುಟಿ ಬಿಚ್ಚಿದರೆ,ಕೊರಳಿಗೆ ಕುತ್ತು ಬರುವುದು.ಇರಿಯಲು ಬಂದ ಚೂರಿಯೆಂದರೆ ಸಮಾಜದಲ್ಲಿರುವ  ಕೆಲವು ಕೆಟ್ಟ ಹುಳುಗಳೆ  ಹೊರತು ಇನ್ನಾವುದಾಗಿರಲು ಸಾಧ್ಯವಿಲ್ಲ.ಒಳ್ಳೆಯತನದಿಂದ ಒಂದು ಆದರ್ಶ ಮಾರ್ಗದರ್ಶಕರಾಗಿ ಮೃದು ಮಾತಿನಲ್ಲಿ ಸರಿ ದಾರಿಗೆ ತಂದಾಗ ಮಾತ್ರ ಗರ್ದಿತನವು ಮೆತ್ತಗಾಗುತ್ತದೆ. ಶಾಂತಿ ಮಂತ್ರದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯು ಜಗದ ಪ್ರಖ್ಯಾತರು. ಸುಟ್ಟುಕೊಂಡ ಬದುಕಿಗೆ ಇದ್ದಿಲು ಆಗುವ ಭಾಗ್ಯವೂ ಇಲ್ಲ ಮೇಲ್ನೋಟಕ್ಕೆ ಬಹು ಸರಳವೆನಿಸದರೂ,ಆಂತರ್ಯದಲ್ಲಿ ಬದುಕಿನ ತತ್ವ ಅಡಗಿದೆ. ದರ್ದಿನ ಮರುಹುಡುಕಾಟವಿದೆ. ಆರಿದ ದೀಪ ಉರಿಸು,ಉರಿವ ದೀಪ ಆರಿಸದಿರು ಜಗದ ಕತ್ತಲೆ ಕಳೆಯಲು ಸಮೆಯ ಬೇಕಾಗಿವುದು ಕನಸುಗಳಿಗೆ ಸಾಕಾಷ್ಟು ಚಿಗರು ಕವಲುಗಳಿವೆ.ಕಡಿಯುತ್ತಾ ಸಾಗಿದರೆ,ದಣಿದವರಿಗೆ ನೆರಳಿಲ್ಲ.ಜ್ಞಾನವು ಬೆಳಕಿನ ಸಂಕೇತವಾಗಿದೆ.ಜ್ಞಾನ ನೀಡುವ ಪರಿಣಿತರನ್ನು ಗೌರವಿಸಬೇಕು.ಸಮೆಯ ಎನ್ನುವುದೂ ಪ್ರಜ್ಞೆಯ ಸೂಚಕ ಪದವೆ.  ಎ.ಎಸ್.ಮಕಾನದಾರರ ಭಾವದ ಹರವು ವಿಶಾಲವಾಗಿದೆ.ಎದೆಯೊಳಗೆ ಉಳಿದು ಬಿಡುವ ವಾಸ್ತವದ ಸಂವೇದನೆಗಳನ್ನು ದಾಖಲಿಸಿದ್ದಾರೆ. ಉಸಿರಾಡುವವರು ಜೀವಂತ ಅದಾರಂತ ಏನು ಗ್ಯಾರಂಟಿ ಸತ್ತವರಲ್ಲಿ ಕೆಲವರು ಜೀವಂತ ಅದಾರಲ್ಲ ಇದಕ ನೀ ಏನಂತಿ? ಒಬ್ಬರು,ಇನ್ನೊಬ್ಬರನ್ನು ತುಳಿದು ಬದುಕುವ ವೃತ್ತಿಯನು ಕರಗತ ಮಾಡಿಕೊಂಡ ವಂಚಕರು ನಿರ್ಭಯದಿಂದ ಇದ್ದಾರೆ. ನೀತಿ ನಿಯಮ,ನಿಯತ್ತುಗಳ ಗಾಳಿಗೆ ತೂರಿ,ದುರ್ಬಲರ ಕನಸು ಕನವರಿಕೆ ಕಸಿದುಕೊಂಡು,ಮನುಷ್ಯತ್ವವನ್ನು ಮರೆತವರು ನಮ್ಮ ನಡುವೆ ಬದುಕುತ್ತಿದ್ದಾರೆ.ಹೀಗೆ ಅಂತವರು ತುಳಿತಕ್ಕೊಳಗಾದವರು,ಸತ್ತೂ ಜೀವಂತ ಉಸಿರಾಡುತ್ತಿದ್ದಾರೆ. ಈ ಪ್ಯಾರಿ ಪದ್ಯ ಸಂಕಲನದೊಳಗೆ ಹಲವಾರು ಸಾಲುಗಳು ಹೃದಯ ಸಂಬಂಧದ ಅನೇಕ ಭಾವುಕ ಎಳೆಗಳು ಪ್ರತಿಬಿಂಬಿತವಾಗಿವೆ. ಶತಮಾನದ ನಂಜಿಗೆ ಯಾವ ಹೊಳೆಯಲ್ಲಿ ತೊಳೆಯಬೇಕಿದೆ ಸಂತ ಶರಣರು ತಿಕ್ಕಿ ತೊಳೆದರೂ ಇನ್ನೂ ಉಳಿದಿದೆ. ಜಾತಿ, ಮತ ,ಪಂಥ, ಧರ್ಮ,ಮತ್ತು ಮೇಲು ಕೀಳು ಗಳ ಕಲಹವು ನಿನ್ನೆ ಮೊನ್ನೆಯದಲ್ಲ.,ಶತ ಶತಮಾನಗಳಿಂದ ಬಂದಿದೆ.ಒಂದೆಡೆಗೆ ಶರಣರು,ಪ್ರವಾದಿಗಳು,ದಾರ್ಶನಿಕರು,ಹಿರಿಯ ಕವಿಗಳು ಹರಗುತ್ತಾ ಬಂದರೂ,ಹಿಂದೆ ಹಿಂದೆಯೇ ರಕ್ತ ಬೀಜಾಸುರನಂತೆ ಜನ್ಮ ತಾಳಿದೆ ನಂಜು.ಇವತ್ತೇ ಈಗಿಂದೀಗಲೇ  ಕಡಲೊಳಗೆ ಅವಿತಿಟ್ಟು ಬಂದರೂ,ನಾಳೆಯ ದಿನ ತುರಿಕೆ ತೊಪ್ಪಲಿನಂತೆ ತೆರೆಯ ಮೇಲೆ ಉರಿದುರಿದು ಬೆವರಿಳಿಸುತ್ತದೆ ವ್ಯವಸ್ಥೆ. ಇಂತಹ ಗ್ರಹಿಕೆಯ ಅನುಭವ ನೀಡಿರುವ ಮಕಾನದಾರರ ಬರಹವು ಬೆರಗು ಮೂಡಿಸುತ್ತವೆ. ಸೋತ ಶಬ್ದಕೆ ಗಂಜಿ ಕುಡಿಸಿದೆ ಒಣಗಿದ ಎದೆಗೂಡಲಿ ಚಿತ್ತಾರ ಬಿಡಿಸಿದೆ **** ಸತ್ಯದ ಕತ್ತು ಹಿಸುಕಿದ ದಿಕ್ಕೇಡಿ ಸುಳ್ಳಿಗೆ ದತ್ತು ಪಡೆದ. ***** ಪುಟ ಪುಟವೂ ತಿರುವಿದೆ ಬಿಳಿಯ ಕಾಗದದಲಿ ಕಣ್ಣೀರು ಶಾಹಿ ಅಸ್ಪಷ್ಟ ಪದಗಳು ಹನಿಸುವ ಹನಿ ಹನಿಗೆ ತೇವಗೊಂಡ ಕಾಗದ ಕಾಗದದ ಕನಿಕರ ಹೃದಯಕ್ಕಿಲ್ಲ. ಪ್ಯಾರಿ ಪದ್ಯ ಸಂಕಲನದ ತುಂಬ, ಭಾವಗಳ ಹೊದಿಕೆ ಮಾತ್ರವಲ್ಲ.,ಪ್ರಭಾವ ಬೀರುವ ಅನುಭವ ತುಂಬಿದೆ.ನಾಡಿನ ನೆಲ,ಜಲ,ಗಡಿ,ಭಾನು,ಸ್ನೇಹದ ಕುರುಹು,ಪ್ರೇಮದ ನಿವೇದನೆಗಳು,ಹಪಾ ಹಪಿಯ ಚಾಪುಗಳು,ಜೀವಪರ ತುಡಿತಗಳು,ಓದಿಗೆ ದಕ್ಕುವ ಹೊಳಹುಗಳಿವೆ.ಎ.ಎಸ್.ಮಕಾನದಾರರು ಚಿಕ್ಕಂದಿನಿಂದಲೂ ಹಸಿವು,ಬಡತನ ಸೋಸಿ ಬಂದವರಾಗಿದ್ದರಿಂದ ಬದುಕು ಬರಹದ ಅನುಭವವು ಓದುಗರ ಚಿತ್ರಣ ಬದಲಿಸುತ್ತವೆ.ಇವರ ಕಾವ್ಯದ ಒಳಗಣ್ಣು ಸಾತ್ವಿಕ ವಿಚಾರಗಳ ದಿಟ್ಟಿಸುವ ಅಬಾಬಿಗಳಾಗಿವೆ.ನಿತ್ಯ ಮಗ್ಗಲು ಬದಲಿಸುವ ಮನಸುಗಳಿಗೆ  ಮತಿಯ ಯನ್ನೆಚ್ಚರಿಸುವ ವಾಣಿಯಾಗಿವೆ ಸಾಲುಗಳು.ಶುದ್ಧ ಭಾಷೆ,ತೂಕವುಳ್ಳ ಚಿಕ್ಕ ಚಿಕ್ಕ ಚೆಲ್ನುಡಿಗಳು ಸಹೃದಯರ ಸ್ಪೂರ್ತಿಗೆ ಈ ಪುಸ್ತಕವು ಕಾರಣವಾಗಿದೆ.ಎ.ಎಸ್.ಮಕಾನದಾರರ ಅವಿರತ ಸಾಹಿತ್ಯ ಸೇವೆ ಮುಂದುವರೆಯಲಿ,ಓದುಗರು ಪ್ರೋತ್ಸಾಯಿಸಲಿ ಎಂದು ಅಭಿನಂದಿಸುವೆ. ***       **** ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಪ್ಯಾರಿ ಪದ್ಯ Read Post »

You cannot copy content of this page

Scroll to Top