ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಕೌದಿ ಸ್ಮಿತಾ ರಾಘವೇಂದ್ರ ಮಂಚದ ಅಂಚಿನ ಮೂಲೆಯಲ್ಲೋನಾಗಂದಿಗೆಯ ಹಾಸಿನಲ್ಲೋತುಕ್ಕು ಹಿಡಿದ ಟ್ರಂಕಿನೊಳಗೋ ಭದ್ರವಾಗಿಯೇ ಇರುವ ಗಂಟು. ಆಗಾಗ ಸುಮ್ಮನೇ ಎಳೆದು ತಂದುಗಂಟಿಗೆ ಕೈ ಹಚ್ಚಿದಾಗೆಲ್ಲತರಾತುರಿಯ ಕೆಲಸವೊಂದು ಹಾಜರುಸಮಯ ಹೊಂದಿಸಿಕೊಂಡುಬಿಚ್ಚಿಕೊಳ್ಳುತ್ತವೆ ರಾಶಿ ರಾಶಿ ನೆನಪುಹರಿದಿಲ್ಲ,ಹುಕ್ಕು ಕಿತ್ತಿಲ್ಲ,ಮಾಸಿದ್ದೂ ಇಲ್ಲಮುದ್ದೆಯಾದ ಗೆರೆಗಳ ತುಂಬಆಪ್ಯಾಯ ಕಂಪುಮತ್ತೆ ಹೆಗಲೇರುವ ಒನಪು ಸಂಜೆ ಹೊತ್ತಿಗೆ ಸಾಕೆನ್ನಿಸುತ್ತದೆಇಳಿಸಂಜೆಯ ಬದುಕಿನಂತೆ.ಬಿಡಿಸಿಕೊಳ್ಳಲಾಗದ ನಂಟಿನಂತೆ ಬಣ್ಣ ಬಣ್ಣದ ಅರಿವೆಗಳ ಅರಿಯಬೇಕುಇನ್ನೂಬದುಕು ಸವೆದ ಪುಟಗಳ ಮಸುಕು ಅಕ್ಷರಗಳಂತೆತೊಟ್ಟು ಸಂಭ್ರಮಿಸಿದ ಹಲವು ಭಾವಬಿಡಲಾಗದು ಬಳಸಲಾಗದುಆದರೂ ಇರಬೇಕು ಜೊತೆಯಾಗಿಮುದುಡಿದ ಕನಸುಗಳು. ಹೊಸ ಭಾವ ತುಂಬುವ ಹುರುಪಿನಲಿಯಾವುದೋ ಗಳಿಗೆಯಲ್ಲಿಕತ್ತರಿಗೆ ಸಿಕ್ಕು ಚಂದನೆಯ ಚೌಕ ಚೌಕಮತ್ತೆ ಜೋಡಿಸಿ ಅಂದ ನೋಡುವಸಿಂಪಿಯ ಉತ್ಸಾಹ ವಿಶಾಲವಾಗಿ ಹರಡಿಕೊಂಡಹಳೆಯ ಹೆಂಚಿನ ಮನೆಯಂತೆಆಪ್ತ ಆಪ್ತಕಳೆದ ಬದುಕನ್ನೇಬರಸೆಳೆದು ಹುದುಗಿಸಿಮೆತ್ತಗಾಗಿಸುತ್ತವೆಪ್ರತೀ ರಾತ್ರಿ.ನೀಟಾದ ಎಳೆಗಳು ಹೇಳುತ್ತವೆಮತ್ತೆ ಮತ್ತೆ ಹೊಲಿ ಬದುಕ ಕೌದಿಯಂತೆ. *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನಪುಗಳಲ್ಲಿ ಅವಳು ಲಕ್ಷ್ಮೀ ಪಾಟೀಲ್ ಅವಳ ಏಕಾಂತ ತೆರೆಯುತ್ತದೆ ನಿತ್ಯ ಕೈ ಮುಟ್ಟಿಕೂದಲು ಹಿಡಿದರೆ ಎದುರು ಮರದ ಕೆಳಗೆಸಂಧ್ಯಾ ರಾಗದ ಸಂಜೆ ಅದೇ ಮರ ಕೈ ಮಾಡಿ ಕರೆಯುತ್ತದೆ ಕೂದಲ ಸಿಕ್ಕು ಬಿಡಿಸಿಕೊಳ್ಳಲುನೀಟಾಗಿ ನೆನಪುಗಳ ತಲೆ ಬಾಚಲುಏಕಾಂತಕ್ಕೆ ಜೊತೆ ಹುಡುಕಿ ಧ್ಯಾನಿಸಲು ಸಂಧ್ಯಾರಾಗದೆ ದುರು ತಾನು ಮತ್ತೊಂದು ಕವಿತೆಯಾಗಲು !ಬರೆಯದ ಭಾವ ಗಳೆಲ್ಲ ಸಿಕ್ಕುಗಳಂತೆ ಮುತ್ತುವವು ಧ್ಯಾನಸ್ಥಳಾಗುವಳಾಗ ಕವಿತೆಯ ಸುತ್ತ !ಎಷ್ಟೊಂದು ಕವಿತೆ ಬದುಕಿದೆನಲ್ಲ ಬರೆಯಲು ಬಂದಿದ್ದರೆಪೈಪೋಟಿಯಲ್ಲಿ ಕವಿತೆ ಗೆಲ್ಲಿಸಬಹುದಿತ್ತುಈ ಹೇನು ಹರಿದಾಡಿಸಿಕೊಳ್ಳುವ ಹಿಂಸೆಗೆಮುಕ್ತಿ ಸಿಗಬಹುದಿತ್ತು ಎಂದುಕೊಳ್ಳುವಳುಈ ಕವಿತೆಗಳಿಗೆಲ್ಲ ಆಕ್ರಮಿಸುವ ಚಟಏನೆಲ್ಲಾ ಕಿತ್ತು ಖಜಾನೆ ಖಾಲಿ ಮಾಡಿ ಹೋಗುತ್ತವೆಅಕಾಲ ವ್ರದ್ಧಾಪ್ಯಕ್ಕೆ ದೂಕಿ ಯವ್ವನ ಕೊಲೆ ಮಾಡಿದ ಕೈದಿಯಾಗುತ್ತವೆ ದಂಡ ತೆತ್ತು ಪಡೆಯುವ ತೀರ್ಪಿ ನಂತೆಭಯ ಕಟ್ಟುತ್ತವೆ ಈ ಒಳ ಮುಖದ ಮಂಕತ್ವಕ್ಕೆಆ ನೆರಳು ನೀಡುವ ಮರ ನಿತ್ಯಜ್ಞಾನೋದಯಮಾಡಿಸುವ ಬೋದಿ ವ್ರಕ್ಷದಂತೆ ಆಕಾಶಕ್ಕೆ ದಿಟ್ಟಿಸಿದರೆವ್ಯಥೆ ಗೊಂದುಷರಾ ಬರೆದ ನೀಲಮೇಘ ಶಾಮ ನಂತೆತಾನೀಗ ಕಾವ್ಯಕ್ಕೆ ಜೀವ ತುಂಬಲು ನಡೆಯುವಳುದಿಟ್ಟ ಬದುಕಿನ ಪಾಠ ಹೀಗೆ ನಿತ್ಯ ಪಡೆಯುವಳು ಕೃಷ್ನೆಅವಳು ಉರಿಯಕುಂಡದಿಂದ ಎದ್ದವಳುಉರಿಯನುಂಗಿ ಉಳಿಯುವುದು ತಿಳಿದವಳುಉರಿಯಬದುಕಿನ ಕಲೆ ಯಾದವಳುನೆನಪುಗಳಲ್ಲಿ ನೆಲೆಯಾದವಳು ನಮ್ಮಲ್ಲೂ ಹೀಗೆ ಕೃಷ್ನೆ *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾನು ಕೆಟ್ಟವಳು ಶೀಲಾ ಭಂಡಾರ್ಕರ್ ನಿನ್ನ ಪ್ರೀತಿಯ ಪರಿಮಾಣದಲ್ಲಿಒಂದಿಷ್ಟು ಆಚೆ ಈಚೆಯಾದಾಗನಾನು ಕೆಟ್ಟವಳು. ನನ್ನನ್ನು ಬದಿಗೆ ತಳ್ಳಿಇನ್ಯಾರನ್ನೋ ತಲೆ ಮೇಲೆಕೂರಿಸಿಕೊಂಡಾಗ,ನಾನು ಕೆಟ್ಟವಳು. ಅತಿಯಾಗಿ ಸಿಟ್ಟು ಬಂದಾಗನಿನ್ನ ಚುಚ್ಚಿ ನೋಯಿಸಿಖುಷಿ ಪಡುವಾಗನಿಜವಾಗಲೂನಾನು ಕೆಟ್ಟವಳು. ಇಷ್ಟೇ.. ನಾನು ಕೆಟ್ಟವಳಾಗುವುದುಇವಿಷ್ಟೇ ಸಂದರ್ಭಗಳಲ್ಲಿ. ನಾನು ಕೆಟ್ಟವಳಾದಮರುಕ್ಷಣವೇಮನವರಿಕೆಯಾಗಿಮತ್ತೆ ನಿನ್ನೆಡೆಗೆ ಬಂದಾಗ, ನೀನು ಎಂದಿನಂತೆಮುದ್ದಿಸುವಿಯಲ್ಲ..!ಆಗ ಮಾತ್ರ..ನೀನೇ ಕೆಟ್ಟವನು. ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರೇಮವೆಂದೂ ಹೇರಲ್ಪಡುವುದಿಲ್ಲ ಪೂರ್ಣಿಮಾ ಸುರೇಶ್ ಪ್ರೇಮವೆಂದೂ ಹೇರಲ್ಪಡುವುದಿಲ್ಲ.ಮತ್ತೆಮತ್ತೆ ನಿನ್ನೆಗಳನುಕರೆತಂದುಎದುರು ನಿಲ್ಲಿಸಿಯುದ್ಧ ಹೂಡುವೆಯೇಕೆ.. ಒಪ್ಪುವೆಜೊತೆ ಸೇರಿಯೇಬುತ್ತಿ ಕಟ್ಟಿದ್ದೆವುನಾಳೆಗೆ ನಡೆವ ನಡೆಎಡವಿದ ಹೆಜ್ಜೆತಿರುವುಗಳುಗಂಧ ಮಾರುತದಸೆಳೆತದಾರಿ ಕವಲಾಗಿನೀನುನೀನಾಗಿ ನಾನು ಒಂಟಿಯಾಗಿಅನಿವಾರ್ಯ ಹೆಜ್ಜೆಗಳು ಅದೆಷ್ಟು ಮಳೆ..ಸುರಿಸುರಿದುಒದ್ದೆ ಒದ್ದೆ ಒಳಕಂಪನ ಹೊರನಡುಕತೊಯ್ದ ಹಸಿವೆಗೆಹಳಸಿಹೋದತಂಗಳು ಬುತ್ತಿಚಾಚಿದ ಕೈ ಬೊಗಸೆಖಾಲಿ ಖಾಲಿ ಹೌದುಅದು ತಿರುವೊಂದರ ಆಕಸ್ಮಿಕಮನಸುಗಳ ಡಿಕ್ಕಿನಡೆದ ಹಾದಿಯ ಬೆವರಿನ ವಾಸನೆಮುಡಿದ ಹೂವಿನ ಘಮತನ್ಮಯತೆಯನುನಮ್ಮೊಳಗೆ ಅರಳಿಸಿತ್ತು ಬಿಗಿದ ತೆಕ್ಕೆ ಸಡಿಲಿಸಲೇ ಬೇಕುಉದುರಿ ಬಿದ್ದ ಹೂ ಎಸಳುಗಳು ಕೊಡವಿಕೊಂಡೆಅಂಟಿದಬೆವರು ಕಳಚುವ ಮಳೆಗೆನಾನೂ ಕಾದೆ ಬೇಡ. ತಂಗಳು ಬಿಡಿಸದಿರುಇರಲಿ ಬಿಡು ಮುದಿಯಾಗದೆ..ಹಾಗೆ. ನನಗೆ ನಾಳೆಗಳಲಿ ನಂಬಿಕೆಯಿದೆಹಳಸಿದ ನಿನ್ನೆಗಳನು ತೆರೆಯಲಾರೆ ಪ್ರೇಮವೆಂದೂ ಹೇರಲ್ಪಡುವುದಿಲ್ಲ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೇಪಥ್ಯ ಎಮ್ . ಟಿ . ನಾಯ್ಕ.ಹೆಗಡೆ ಆ ನೀಲಿ ಬಾನು, ಮಿನುಗು ತಾರೆಬೆಳೆದು ಕರಗುವ ಚಂದ್ರಈ ಭೂಮಿ – ಅದರ ಕಣಿವೆಮೊರೆವ ಕಡಲು….ಆ ತಂಗಾಳಿ, ಮುಂದೆ ಬಿರುಗಾಳಿನದಿಯ ಓಟ, ಆ ನಾದದುಂಬಿ ಗಾನಗಾಳಿಗಂಟಿದ ಬದುಕಿನಎಕ್ಕೆ ಬಿತ್ತಗಳೆಲ್ಲಾಬಿತ್ತುತ್ತಾ ಹೊರಟದ್ದುಯಾವ ಕತೆ ? ಯಾರ ಕತೆ ? ಗತಿಸಿದ ಸಾಮ್ರಾಜ್ಯಕರಗಿದ ಅರಮನೆಉರುಳಿದ ಕಿರೀಟಕ್ಕೆ–ಲ್ಲ, ಹಿನ್ನೆಲೆ ಏನು ಕತೆ ? ಬಂದ ಗುರುತುಗಳಿಹುದುನಿಂದ ಗುರುತುಗಳಿಹುದುಹೋದ ಗುರುತುಗಳಿಹುದುಆದರೆ —ಬಂದವರು ಬಂದಂತೆಹೋದುದು ಯಾಕೆ ? ಆ ಬಾನು , ಈ ಭೂಮಿ ,ಅದರ ಹೊನ್ನುಮತ್ತೆ ಮುಕುಟಎಲ್ಲಾ ತೊರೆದೇಹೋದುದು ಯಾಕೆ ?ಇಲ್ಲ … ಮರೆತೇ ಹೋದರೆ ? ಈ ಬಯಲಲಿ ಬದುಕ ಹರಡಿಕತೆ ಬರೆದವರು ಯಾರು ?ಬರೆವವರು ಯಾರು …? *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ರಸಧಾರೆ, ಮತ್ತಿತರೆ ಕವನಗಳು ವಸುಂಧರಾ ಕದಲೂರು ಹಸಿರೆಲೆ ಕಾನನಹಸುರಲೆ ಮಲೆಯೋ ಹೊಸ ಬಗೆ ನರ್ತನಹರುಷದ ನೆಲೆಯೋ ಹುಮ್ಮಸಿನ ಮನವೋಹುರುಪಿನ ಚೆಲುವೋ ಹರಸುವ ಖುಷಿಗೆಹಾತೊರೆವ ಕ್ಷಣವೋ ಸಂಭ್ರಮ ಸಂತಸಮಳೆ ಹನಿ ಜೊತೆಗೆ ಸುರಿದಿದೆ ಹರಿದಿದೆಜೀವರಸಧಾರೆಚೈತನ್ಯದೆಡೆಗೆ ‘ಮತ್ತಿತರೆ’ ಅತ್ತಲೂ ಇತ್ತಲೂಸುತ್ತಲೂ ಕತ್ತಲೆ ಬತ್ತಿದ ಹೊಳೆಬಾರದ ಮಳೆಬಿತ್ತದ ಇಳೆಕಟ್ಟಿದೆ ಕೊಳೆಸುಟ್ಟಿದೆ ಕಳೆ ಕದಡಿದ ಕನಸಿಗೆಹೊಸತರ ಕನವರಿಕೆ ಬೇಸರದ ಭಾರಕೆಬರಿ ಭಾವ ನಿಸೂರ ಇತ್ತಲಾಗಿ ಹೊತ್ತೂಹೋಗದು ಅತ್ತಲಾಗಿಚಿತ್ತವೂ ಸ್ವಸ್ಥವಾಗದು ಹಾಗಾಗಿಬೇಕಿಲ್ಲ ಯಾವುವೂಇತರೆಇನ್ನಿತರೆ ಮತ್ತಿತರೆ. ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ. ದೀಪಾ ಗೋನಾಳ ಏಷ್ಟವಸರಅದೆಷ್ಟು ಗಡಿಬಿಡಿಎಷ್ಟೇ ಬೇಗ ಎದ್ದರೂತಿಂಡಿತಿನ್ನಲೂ ಆಗುವುದೆ ಇಲ್ಲಅನುಗಾಲ ಒಳ ಹೊರಗೆ ಗುಡಿಸಿಹಸನ ಮಾಡುವುದರಲ್ಲೆಅರ್ಧಾಯುಷ್ಯ ,,,ತಿಂದರೊ ಇಲ್ಲವೊ..!?ಕಟ್ಟಿಕೊಟ್ಟ ಡಬ್ಬಿ ಇಟ್ಟುಕೊಂಡರೊ ಇಲ್ಲವೊ..!?ತೊಳೆದ ಬಾಟಲಿಗೆ ನೀರು ತುಂಬಿದ್ದೆ ಒಯ್ದರೊ ಇಲ್ಲವೊ..!?ಹಾಲಿನ ಪಾತ್ರೆಗೆ ಮುಚ್ಚಿದೆನೊ ಇಲ್ಲವೊ..!?ಮೊಸರು ಫ್ರಿಜ್ಜಿಗೆ ದಬ್ಬಿದೆನೊ ಇಲ್ಲವೊ..!?ಬದುಕೆಲ್ಲ ಉದ್ಘರಾದ ಹಾರ..ದಾರಿಯ ತುಂಬ ಹೋಯ್ದಾಟಮನಸ್ಸಿನ ಮಾತು ಕಿವಿಗೆ ಕೇಳುವಷ್ಟು ದೀರ್ಘ ಆಲೋಚನೆ ಒಳಗೊಳಗೆ..ಜೋಲಿ ಹೊಡಿಯುವ ಬಸ್ಸಿನಲ್ಲಿ ಎದುರಿಗೆ ನನ್ನಂತೆ ಅವಸರಕ್ಕೆಎದ್ದೋಡಿ ಬಂದವಳು ಹೇಳುತ್ತಾಳೆ,ಕುಂಕುಮ ಹಚ್ಚೆ ಇಲ್ಲ!!ಓಹ್! ಹೌದು ಕನ್ನಡಿ ಮುಂದೆ ನಿಲ್ಲಲೇ ಇಲ್ಲ, ನನ್ನ ನಾನು ನೋಡಿಕೊಂಡುಆಗುವುದಾದರೂ ಏನಿದೆಸೀಟು ಸಿಕ್ಕಮೇಲೆ ಬ್ಯಾಗಿನ ತುಂಬ ತಡಕಾಡಿ ಒಂದು ಬಿಂದಿಹಣೆಗೇರಿಸಬೇಕುಕಿಟಕಿ ಗಾಜಿನಲ್ಲೊಮ್ಮೆ ಮಸುಕುಮೊಗ ನೋಡಿಕೊಳ್ಳಬೇಕುಮತ್ತಿಳಿದು ಓಡಬೇಕುಮೊಳೆಹೊಡೆದ ಚಪ್ಪಲಿಗೆ ನೋವಾಗದಂತೆ ಪೂರ್ತಿ ಪಾದ ನೆಲಕ್ಕೂರದೆ ಹಕ್ಕಿಯಂತೆ ಹಾರಿಹಾರಿಕಛೇರಿ ಮೆಟ್ಟಿಲೇರಬೇಕು ಬಂದ ಕೂಡಲೆ ಮತ್ತೊಮ್ಮೆ ಸೊಂಟದ ಮೇಲಿನ ಸೀರೆ ಸರಿ ಮಾಡಿಕೊಂಡೆ ಕೂಡಬೇಕುಒಂದಿನಿತು ಮಗ್ಗಲು ಕುಳಿತವರಮತಿಭಂಗವಾಗದಂತೆ ಹೊಟ್ಟೆ ಚುರ್ ಎಂದದ್ದುನನಗೆ ಕೇಳಿಸಿಯೆ ಇಲ್ಲವೆಂಬಷ್ಟುಗಂಭೀರವಾಗಿ ಕುಳಿತಾಗಲೆಅವಳು ಎದ್ದು ಬಂದುನಾನು ಇಂದು ತಿಂಡಿ ತಿನ್ನಲಿಲ್ಲಡಬ್ಬಿಗೆ ಹಾಕಿಕೊಂಡು ಬಂದಿದ್ದೇನೆಬಾ ಎಂದು ಕೈ ಹಿಡಿದು ಜಗ್ಗಿ ಜಭರ್ದಸ್ತಿಲೆ ಹೊಟ್ಟೆಗೆ ಹಾಕುತ್ತಾಳೆ ಎರಡು ಹಿಡಿ ಎರಡು ಜಡೆ ಎಂದೂ ಕೂಡುವುದಿಲ್ಲ !ಹೆಣ್ಣಿಗೆ ಹೆಣ್ಣೆ ಶತ್ರು.. ಎಂಬುವರಮಾತು ಇಲ್ಲಿ ಶುದ್ಧ ಸುಳ್ಳುದುಡಿಮೆಗೆ ಟೊಂಕ ಕಟ್ಟುವ ಹೆಂಗಳೆಯರ ಹಸಿವುಹೆಂಗರುಳಿಗಿಲ್ಲಿ ಚೆಂದ ಅರ್ಥವಾಗುತ್ತದೆ..ನಮ್ಮ ಟೊಂಕದ ಮೇಲಿನ ಸೀರೆಜಾರಿದ್ದನ್ನಷ್ಟೆ ನೋಡುವಮೀಸೆಗಳಿಗೆ ಇದು ಅರ್ಥವಾಗದು.. ***********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಸಂಗಾತಿ

ಗಝಲ್ ಬಾಗೇಪಲ್ಲಿ ಕೃಷ್ಣಮೂರ್ತಿ ಬ್ರಹ್ಮಾಂಡದಿ ನೀನು ತೃಣಅದಕೆ ನೀ ಇರುವೆ ಋಣ ಹೇಗೆ ತೀರಿಸುವೆ ಅದನುಯೋಚಿಸು ಒಂದು ಕ್ಷಣ ಸದಾ ಸಲಹಲು ನಿನ್ನಬದಲಾಗಿಸು ನಿನ್ನ ಗುಣ ಅತಿಯಾಸೆಯಿಂದ ನೀನುಮಾಡಿರುವೆ ಎಲ್ಲಾ ರಣ ಸಿಕ್ಕ ಸಿಕ್ಕಲ್ಲೆಲ್ಲಾ ಅಗೆದುಮಾಡಿರುವೆ ಅದಕೆ ವ್ರಣ ಪರಿಸರ ರಕ್ಷಣೆ ಆಗಬೇಕುಸೇರು ನೀನು ಅದರ ಬಣ ಕ್ಷಮೆ ಎನೆ ಭೂಮಿ’ಮಂಕೇ’ಸಕಲರೂ ತೊಡಬೇಕು ರಕ್ಷಣೆಗೆ ಪಣ (ಚೋಟಿ ಬೆಹರ್ ರಚಿಸುವ ಯತ್ನ) **********

ಕಾವ್ಯಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಬದುಕು ಮತ್ತು ಬಣ್ಣಗಾರ ನೂರುಲ್ಲಾ ತ್ಯಾಮಗೊಂಡ್ಲು ಬದುಕು ಮತ್ತು ಬಣ್ಣಗಾರ ಹೊರಗೆ ಎಷ್ಟೊಂದು ಗೊಂದಲ, ಗಲಭೆ, ಚೀರಾಟ ಹುಟ್ಟು ಹಾಕಿದೆಪಾರ್ಲಿಮೆಂಟ್ ನ ಕೊಣೆಗಳು ಮೌನದ ಜಪದಲ್ಲಿ ಮುಳುಗಿವೆಯೋ ?ಇಲ್ಲ , ಹಾಗೆ ಆಗಲು ಸಾಧ್ಯವಿಲ್ಲಜೀವಮಿಡಿತದ ಸದ್ದು ಅಷ್ಟು ಬೇಗ ಅಳಿದುಹೋಗದುನಾನು ನನ್ನಂಥಹ ಲಕ್ಷ ಲಕ್ಷ ಎದೆಗಳಲಿ ಜೀಕುತ್ತಿರುವ ರಕ್ತ, ದಂಗೆ ,ಕ್ರಾಂತಿ ,ಬಂಡಾಯ ದನಿ ಕಮರಿ ಹೋಗದು ಕಾಲಭೈರನ ಹಾದಿ ಮುಗಿಲು ಹರಿಯೊವರೆಗೂ ಹಾದಿದೆರಂಗದ ಮರೆಯಲಿ ನಿನ್ನ ಮುಖವಾಡದ ವ್ಯಂಗ್ಯ ನಗೆಬೋಳೆ ಶಂಕರನ ಕಥಿತ ಕಥನ !ನಾಟಕಾಂಕಕ್ಕೆ ನೂರೆಂಟು ನೆಪದ ಪಾತ್ರ ಈಗ ನಿನ್ನಿಂದ ಸಾಧ್ಯ… ದೂರಿದಷ್ಟು ದುಬಾರಿಯಾದ ಬೈಗಳುಆದರೆ ಪೆಟ್ರೋಲ್ , ಗ್ಯಾಸ್, ಈರುಳ್ಳಿಗಿಂತ ಹೆಚ್ಚೇನಲ್ಲಜನರ ಸಂಕಟ ,ತಾಳ್ಮೆ , ಸಾವು ನೋವುಗಳ ಪಾತ್ರ ನಿಜದ ರಂಗದಲ್ಲಿ ರಣ ರಣಿಸುತ್ತಿವೆನೀನು ಮಾತ್ರ ಗೋಸುಂಬೆ ಬಣ್ಣಧಾರಿ !ನಿನಗೆ ಮಣ್ಣ ಕುಲದ ಬದುಕಿನ ಪಾತ್ರ ತಿಳಿಯದುಏಕೆಂದರೆನೀನು ಬಣ್ಣ ಕಲಸಿ ವರೆಸಿ ಈಗನೀನೇ ಮೆತ್ತುಕೊಂಡವನುಬಣ್ಣಗಳ ಬಣ್ಣನಿಯ ಮಾತಷ್ಟೇ ಆಡುವ ನೀನೇನುಸೂತ್ರಧಾರನೇನಲ್ಲನಿನ್ನ ಬಣ್ಣ ಬಣ್ಣ ತರ್ಕದ ಮುಖವಾಡ ಕಳಚಿಸಾಧ್ಯವಾದರೆ ಹೊರಗೆ ಬಾಇಲ್ಲ ಬಣ್ಣ ಬಳಿದುಕೊಂಡೇ ಉಳಿ…ನಾಳೆ ಮುಂಗಾರಲಿ ಬಣ್ಣ ಕೊಚ್ಚಿಹೋಗುವವರೆಗೂಈಗ, ಬಣ್ಣಗಾರನ ನಿಜದ ಬಣ್ಣ ಬಯಲಾಗಿದೆ ***********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ದೀಪಾಜಿ ಬದುಕು ಬಯಲಾಗಿದೆ ಬಾಳು ಹಣ್ಣಾಗಿದೆ ಬೇಕೆ ನಿನಗೀಗ ದೀಪದೇಹ ಬೆಂಡಾಗಿದೆ ಮನವೂ ಮಾಗಿಹೋಗಿದೆ ಬೇಕೆ ನಿನಗೀಗ ದೀಪ ಸುತ್ತಲು ಆವರಿಸಿ ನಿಂತ ಮಬ್ಬುಗತ್ತಲಿಗೆ ಎಷ್ಟೆಣ್ಣೆ ಸುರಿವೆಬಾಯ್ತುಂಬಿಕೊಂಡ ಗಾಳಿ ಉದುವ ದ್ವೇಷಿಗಳಿಗೆ ನಂಜಿದೆ ಬೇಕೆ ನಿನಗೀಗ ದೀಪ ಒಂದಿಷ್ಟು ಮೆಟ್ಟಿಲಾಚೆ ಬಾಗಿಲಿಲ್ಲದ ಬದುಕೊಂದಿದೆಸುತ್ತೆಲ್ಲ ಸಣ್ಣಗೆ ಮಳೆ ಇದೆ ದೀವಟಿಗೆ ಕುಡಿ ಮೇಲೆ ಅಂಗೈ ಹಿಡಿದೆ ಬೇಕೆ ನಿನಗೀಗ ದೀಪ.. ಕೂಸೆರಡು ಕೈಹಿಡಿದು ಪ್ರೇಮದಾರಿ ತೋರಿಸುತಿವೆಮುಳ್ಳ ಕಣಿವೆಯ ಮೇಲೆ ಮಮತೆಯ ಸೇತುವೆ ಕಟ್ಟಲಾಗಿದೆ ಬೇಕೆ ನಿನಗೀಗ ದೀಪ.. ಗಂವ್…ಎನ್ನುವ ಯೌವನವಿಲ್ಲ ಹುಚ್ಚೆಬ್ಬಿಸುವ ಕಾಮದ ತಹತಹಿ ಇಲ್ಲಇದ್ದುದೊಂದೆ ವಾತ್ಸಲ್ಲ ಹಿಡಿಯಷ್ಟು ಒಲವು ಇದೆ ಬೇಕೆ ನಿನಗೀಗ ದೀಪ… *******

ಕಾವ್ಯಯಾನ Read Post »

You cannot copy content of this page

Scroll to Top