ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಮಾ ಗಾಜರೆ ಅವರಕವಿತೆ, ” ಹೊಸವರುಷ”

ಕಾವ್ಯ ಸಂಗಾತಿ ಸುಮಾ ಗಾಜರೆ ” ಹೊಸವರುಷ” ಎಲ್ಲೆಲ್ಲೂ ಸಂಭ್ರಮ ಸಡಗರಹೊಸವರುಷದ ನವ್ಯ ಶೃಂಗಾರಮತ್ತೆ ಬರುತಿದೆ ಹೊಸ ವರುಷಕಾಲದ ಪುಟ ಸೇರಿತು ಈ ವರುಷ ವರ್ಷವಿಡೀ ಒಂದಷ್ಟು ಥಳಕುನೋವು ನಲಿವಿನ ಸರಕುಕಂಡ ಕನಸು ನನಸಾದದ್ದೆಷ್ಟೋಅರಳುತಿವೆ ಇನ್ನೂ ಮನದಲೆಷ್ಟೋ ಉಸಿರಿನ  ಹಸಿರಲಿ ಬೆರೆತಿರಲುಹೊಸವರುಷದ ಭರವಸೆಬವಣೆಯ ಭಾವದಲಿ ಕರಗಿರಲುಬಾಳ ಆಶೆಯ ವರಸೆ ಮತ್ತೆ ಬೆಳಕು ಮೂಡಿ ಬಂದಿದೆದಾರಿಯೊಂದು ತೆರೆದು ನಿಂತಿದೆಜೀವನ ಕ್ಷಣಗಳೆಲ್ಲ ಅಮೂಲ್ಯ ಬಂಧಮೌಲ್ಯಗಳಿರೆ ಎಂದೆಂದಿಗೂ ಚೆಂದ ತೂರಿ ಬರಲಿ ಹೊನ್ನ ಕಿರಣಗಳುಹೊಸದಾದ ವರುಷದಲಿಹಿರಿದಾಗಲಿ ಹೆಜ್ಜೆ ಗುರುತುಗಳುಸಾಧನೆಯ ಹಾದಿಯಲಿ ಚೆಂದದ ವರುಷದಿ ಮೂಡಲಿ ಚಿತ್ತಾರಹೊಸದಾದ ಹೊಂಗನಸಲಿನಿತ್ಯ ಇರಲಿ ದಿನಗಳ ಆಗರಧನ್ಯತೆಯ ದಾರಿಯಲಿ ಇರಲಿ ಜೊತೆಯಾಗಿ ಹಗಲಿರುಳುಗಳುಬರುವ ನಾಳೆಗಳಲಿಹದುಳವಾಗಲಿ ಮಧುರ ಮನಗಳುಶುಭದ ಘಳಿಗೆಯಲಿ ಸುಮಾ ಗಾಜರೆ   

ಸುಮಾ ಗಾಜರೆ ಅವರಕವಿತೆ, ” ಹೊಸವರುಷ” Read Post »

ಕಾವ್ಯಯಾನ

ರಾಜು ಅವರ ಕವಿತೆ “ಕಾಲಚಕ್ರ”

ಕಾವ್ಯ ಸಂಗಾತಿ ರಾಜು “ಕಾಲಚಕ್ರ” ಒಂದೊಂದೇ ಹೆಜ್ಜೆ ಇಟ್ಟು ನಡೆಯುತ್ತಿದ್ದಕಾಲನ ಗಡಿಯಾರಈಗೀಗ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡುತ್ತಿದೆ !ಮೊನ್ನೆಯಷ್ಟೇ ಕೇಕ್ ಕತ್ತರಿಸಿ ಕೇಕೆ ಹಾಕಿದ ದಿನಹಿಂದೆ ಸರಿದು ಮತ್ತೊಂದು ಎದುರಿಗೆ ಬಂದು ನಿಂತಿದೆ !! ಬೆನ್ನ ಹಿಂದೆ ಪಾಟಿ ಚೀಲ ಹಾಕಿಕೊಂಡುಶಾಲೆಯ ಫಸ್ಟ್ ಬೆಲ್ ಗೆ ಕಾಯುತ್ತಿದ್ದ ದಿನ ಕಳೆದುಮನೆಯಂಗಳದಲ್ಲಿ ಸ್ಕೂಲ್ ವ್ಯಾನ್ ಕಾಯುತ್ತಿದೆ !ಪಾಟಿ-ಪೇಣೆ ಅಟ್ಟಸೇರಿ ಲ್ಯಾಪ್‌ಟಾಪ್ ತೊಡೆಯೇರಿ ಕುಳಿತಿದೆ !! ಮನೆಯಂಗಳದ ಪುಟ್ಟ ಗಿಡವೀಗಎದೆಯೆತ್ತರ ಬೆಳೆದು ನೆರಳು ನೀಡುತ್ತಿದೆ !ಹಣ್ಣೆಲೆಗಳ ಕಳಚಿಕೊಂಡ ಮರವೀಗಚಿಗುರೆಲೆಗಳ ಹೊತ್ತು ಹಸಿರಾಗಿ ನಿಂತಿದೆ !! ಧಾವಂತದ,ದಣಿವರಿಯದ ಬದುಕಲ್ಲಿಹಿಂತಿರುಗಿ ನೋಡಿದರೆ ಹೆಜ್ಜೆ ಗುರುತು ಕಾಣದಾಗಿದೆ !ಮರಳ ಮೇಲಿನ ಹೆಜ್ಜೆ ಗುರುತುಸಾಗರದಲೆಗಳು ಅಳಿಸಿಹಾಕಿವೆ !! ಹೊಸತು ಹಳತಾಗಿ, ಹಳತು ಕಳೆದ್ಹೋಗಿಕಾಲಚಕ್ರ ಉರುಳುತ್ತಿದೆಮೂಗಿನ ಮೇಲೇರಿದ ಕನ್ನಡಕ ಕಣ್ಣುಗಳಿಗೆ ಬೆಳಕಾಗಿದೆ !ಕಾಲನ ಗಡಿಯಾರದ ಮುಳ್ಳುಗಳನ್ನು ತಡೆಯುವರಾರು !?? ರಾಜು ಪವಾರ್

ರಾಜು ಅವರ ಕವಿತೆ “ಕಾಲಚಕ್ರ” Read Post »

ಕಾವ್ಯಯಾನ, ಗಝಲ್

ಹಾ.ಮ ಸತೀಶ ಬೆಂಗಳೂರು ಅವರ ಗಜಲ್

ಕಾವ್ಯ ಸಂಗಾತಿ ಹಾ.ಮ ಸತೀಶ ಬೆಂಗಳೂರು ಗಜಲ್ ಸಾವಿರ ಬಾರಿ ಅಲೆದರೂ, ಪ್ರೀತಿಯು ಸಿಗಲಿಲ್ಲನಿನ್ನನೆ ಹುಡುಕುತ ಬಂದರೂ,ಪ್ರೀತಿಯು ಸಿಗಲಿಲ್ಲ ನಿನ್ನಯ ಹತ್ತಿರ ಬೇಡಿದೆ,ನೀನು ಹೋದೆ ಎಲ್ಲಿಗೆಜೀವ ನನಸಲಿ ನಿಂದರೂ,ಪ್ರೀತಿಯು ಸಿಗಲಿಲ್ಲ ಚೆಲುವ ಬೀರಿ ಮನಸನಿಂದು,ಕದಡಿ ಹೋದೆ ಏತಕೆಸವಿಯು ಬಂದು ಕೂತರೂ,ಪ್ರೀತಿಯು ಸಿಗಲಿಲ್ಲ ಚಿತ್ತದಲ್ಲಿ ಪ್ರೇಮರಾಗ, ಬೆರೆತು ಇರಲು ಹೋದೆಯಾಮೋಹ ಸಮಯ ಇದ್ದರೂ, ಪ್ರೀತಿಯು ಸಿಗಲಿಲ್ಲ ಸೊರಗಿ ಹೋದ ಮುಖದ ಭಾವ, ನನಗೆ ಏಕೆ ಈಶಅತ್ತು ಕರೆದು ಹೇಳಿದರೂ, ಪ್ರೀತಿಯು ಸಿಗಲಿಲ್ಲ ಹಾ.ಮ ಸತೀಶ ಬೆಂಗಳೂರು

ಹಾ.ಮ ಸತೀಶ ಬೆಂಗಳೂರು ಅವರ ಗಜಲ್ Read Post »

ಕಾವ್ಯಯಾನ

“ಮೌನ ನಮನ”ಸರಸ್ವತಿ ಕೆ ನಾಗರಾಜ್

ಕಾವ್ಯ ಸಂಗಾತಿ ಲಕ್ಷ್ಮೀದೇವಿ ಪತ್ತಾರ “ಮುಂದುವರೆದಿದೆ” ಹೊಸದೆನ್ನುವುದು ಈ ಜಗದಲ್ಲಿಯಾವುದಿದೆ ?ಗಮನವಿಟ್ಟು ನೋಡಿದರೆಎಲ್ಲವೂ ಹಳೆಯದರ ಹೊಸ ರೂಪವಷ್ಟೆ ಹುಟ್ಟುವುದು ಅದೇ ಹಳೆಯ ಆತ್ಮ ಸಾಯುವುದು ಅವೆ ಪಂಚಭೂತಗಳುಸತ್ತಿರುವುದು ಹಳೆಯ ಸಂಬಂಧಹುಟ್ಟುವುದು ಮತ್ಯಾವುದೋ  ಹೊಸ ಬಂಧ ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು  ಆಗದು ಸೃಷ್ಟಿಯು ಇಲ್ಲ  , ಲಯವೂ ಇಲ್ಲಅದೇ ಮುರಿದು ಕಟ್ಟುವ (  ಕಾರ್ಯ )ದೃಷ್ಟಿ ಕೆಟ್ಟದ್ದು ಕಳೆಯುವುದಿಲ್ಲಒಳ್ಳೆಯದು ಅಳಿಯುವುದಿಲ್ಲಕೊರಗಿ,ಮರುಗಲು ಕಾರಣವೇ ಇಲ್ಲ. ಈಗ ಇರುವುದೆಲ್ಲವೂ ಮೊದಲೂ ಇತ್ತುಮತ್ತೆ ಮತ್ತೆ ಮುಂದುವರಿಯುವದುಕಾಲಚಕ್ರದಲ್ಲಿ ಹಳೆಯದು ನವನವೀನ ಹೊಸದು ಹಳೆಯದಕ್ಕೆ ಹಚ್ಚಿದ ಬಣ್ಣಮುಂದುವರಿದಿದೆ ಹೊಸದೆನ್ನುವುದು ಈ ಜಗದಲ್ಲಿಯಾವುದಿದೆ ?ಗಮನವಿಟ್ಟು ನೋಡಿದರೆಎಲ್ಲವೂ ಹಳೆಯದರ ಹೊಸ ರೂಪವಷ್ಟೆ ಹುಟ್ಟುವುದು ಅದೇ ಹಳೆಯ ಆತ್ಮ ಸಾಯುವುದು ಅವೆ ಪಂಚಭೂತಗಳುಸತ್ತಿರುವುದು ಹಳೆಯ ಸಂಬಂಧಹುಟ್ಟುವುದು ಮತ್ಯಾವುದೋ  ಹೊಸ ಬಂಧ   ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು  ಆಗದು  ಸೃಷ್ಟಿಯು ಇಲ್ಲ  , ಲಯವೂ ಇಲ್ಲಅದೇ ಮುರಿದು ಕಟ್ಟುವ (  ಕಾರ್ಯ )ದೃಷ್ಟಿ ಕೆಟ್ಟದ್ದು ಕಳೆಯುವುದಿಲ್ಲಒಳ್ಳೆಯದು ಅಳಿಯುವುದಿಲ್ಲಕೊರಗಿ,ಮರುಗಲು ಕಾರಣವೇ ಇಲ್ಲ. ಈಗ ಇರುವುದೆಲ್ಲವೂ ಮೊದಲೂ ಇತ್ತುಮತ್ತೆ ಮತ್ತೆ ಮುಂದುವರಿಯುವದುಕಾಲಚಕ್ರದಲ್ಲಿ ಹಳೆಯದು ನವನವೀನ ಹೊಸದು ಹಳೆಯದಕ್ಕೆ ಹಚ್ಚಿದ ಬಣ್ಣ ಲಕ್ಷ್ಮೀದೇವಿ ಪತ್ತಾರ

“ಮೌನ ನಮನ”ಸರಸ್ವತಿ ಕೆ ನಾಗರಾಜ್ Read Post »

ಕಾವ್ಯಯಾನ, ಗಝಲ್

ರತ್ನರಾಯಮಲ್ಲ ಅವರ ಗಜಲ್ -ಮಿರ್ಜಾ ಗಾಲಿಬ್‌ ಬಗ್ಗೆ

ಕಾವ್ಯಸಂಗಾತಿ ರತ್ನರಾಯಮಲ್ಲ ಗಜಲ್ ಅನುದಿನ ಹೊಸ ಹೊಸ ಪಾಠಗಳನ್ನು ಕಲಿಸುತಿದ್ದಿಯಾ ಗಾಲಿಬ್ನಮ್ಮವರಿಂದಾಗುವ ನೋವುಗಳನ್ನು ಮರಿಸುತಿದ್ದಿಯಾ ಗಾಲಿಬ್ ಗಾಲಿಬ್ ಎಂಬುದೇ ನನಗೊಂದು ಸಂಜೀವಿನಿ ಬರಹದಲೆಯಲಿಷೇರ್ -ಶಾಯರಿಯಿಂದ ನೀನು ಹುಚ್ಚು ಹಿಡಿಸುತಿದ್ದಿಯಾ ಗಾಲಿಬ್ ಬದುಕಿನ ಏರಿಳಿತದಲಿ ನಿನ್ನ ಜೀವನವೇ ಸುಂದರ ಪ್ರಯೋಗ ಶಾಲೆಕಂಬನಿ ಕಡಲಲಿ ಒಲವಿಂದ ಕೈ ಹಿಡಿದು ನಗಿಸುತಿದ್ದಿಯಾ ಗಾಲಿಬ್ ನಡೆಯುತಿರಲು ಕಲ್ಲು ಮುಳ್ಳಿನ ಹಾದಿ ಮೇಲೂ ಪ್ರೀತಿ ಉಕ್ಕುವುದುಗಜಲ್ ಗುರುವಾಗಿ ದುನಿಯಾದಲಿ ದೀಪ ಹಚ್ಚಿಸುತಿದ್ದಿಯಾ ಗಾಲಿಬ್ ಹತಾಶೆಯ ಒಡಲಲಿ ಮಲ್ಲಿಗೆಯ ಸುಮಕೆ ನೀರುಣಿಸಿ ಪೋಷಿಸಿರುವೆನಿನ್ನ ಬಾಳ ಪುಟಗಳಿಂದ ಮಹಾಕಾವ್ಯವನು ಓದಿಸುತಿದ್ದಿಯಾ ಗಾಲಿಬ್ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ -ಮಿರ್ಜಾ ಗಾಲಿಬ್‌ ಬಗ್ಗೆ Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ಬೆಳೆವ ಭಾವವು ಮರೆತು ಬೀಗಲುಎದೆಯು ನೋಯುತಿದೆ ನೋಡುಕಳೆದ ಕ್ಷಣವು ಬೆಂಬಿಡದೆ ಕಾಡಲುಚಿಂತೆಯು ಬೇಯುತಿದೆ ನೋಡು ಬದುಕ ಪಯಣವು ಕಲ್ಲು ಮುಳ್ಳಿನಬೇಲಿಯ ತಂತಿಯಲ್ಲವೇಮದಿರೆ ನಿಶೆಯಲಿ ನಿದಿರೆ ಕಾಣದೆ  ಮನವು ಕಾಯುತಿದೆ ನೋಡು ಬೇಗುದಿ ತುಂಬಿರೆ ತಿಳಿಸಿ ಹೇಳುವಪರಿಯ ಅರಿಯೆನು ನಾನುನೀಗದ ಹಸಿವು ದಾಹದಿ ಬರಿದೆಕನಸು ಸಾಯುತಿದೆ ನೋಡು ಕತ್ತಲೆ ತುಂಬಿದೆ ದಾರಿಯು ಕಾಣದೆಕುಸಿದು ಬಿದ್ದಿರೆ ಪಾತಾಳಕೆಸುತ್ತುತ ಜೇಡವು ಮರಳಿ ಯತ್ನದಿಬಲೆಯ ನೇಯುತಿದೆ ನೋಡು ಕಂಗಳ ನೋಟಕೆ ರಾಧೆಯ ಒಲುಮೆಗೆಲ್ಲುವ ಭರವಸೆ ಮೂಡಿದೆತಿಂಗಳ ಬೆಳಕಿನ ಶೀತಲ ತಂಪಲಿಪ್ರೇಮದಿ ಮೀಯುತಿದೆ ನೋಡು ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

ಕಾವ್ಯಯಾನ, ಗಝಲ್

“ಕವಿ ಗಾಲಿಬ್‌ ಜನ್ಮದಿನಕ್ಕೊಂದು ಗಜಲ್”‌ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ “ಕವಿ ಗಾಲಿಬ್‌ ಜನ್ಮದಿನಕ್ಕೊಂದು ಗಜಲ್”‌ ಕಂಬನಿ ಹನಿಗಳಿಗೆ ಭೇದವಿಲ್ಲ ಹರಿಯುತ್ತವೆ ಗಾಲಿಬ್ಅತಿ ಸಂತಸಕೂ,ಸಂತಾಪಕೂ ಸುರಿಯುತ್ತವೆ ಗಾಲಿಬ್ ತೊಳೆದಷ್ಟೂ ಸ್ವಚ್ಛವಾಗುವಂತೆ ಕಂಬನಿ ಕಣ್ತೊಳೆವುದುಕೆಲ ಹೊತ್ತಿಗೆ ಹನಿಗಳು ಕಣ್ಣ ತೊರೆಯುತ್ತವೆ ಗಾಲಿಬ್ ಸಂತಾಪವು ರಜೆ ಮೇಲಿರಲು ಸಂತಸಗಳದ್ದೇ ಹಾವಳಿಅನಂದದ ಜತೆ ಬಾಷ್ಪಗಳಾಗಿ ಬೆರೆಯುತ್ತವೆ ಗಾಲಿಬ್ ಒಬ್ಬೊಬ್ಬರ ಕಣ್ಣೀರಿನ ಕಥೆ ಒಂದೊಂದು ಥರವೇ ಇದೆಮೊಸಳೆ ಆಶ್ರುಗಳು ಮೋಸದಿ ಕರೆಯುತ್ತವೆ ಗಾಲಿಬ್ ಈ ಕುಂಬಾರನಿಗೂ ಕಂಬನಿಗೂ ಖಾಸಾ ದೋಸ್ತಿಯಿದೆಬೇಕೆಂದಾಗ ಬೊಗಸೆಗಟ್ಟಲೆ ದೊರೆಯುತ್ತವೆ ಗಾಲಿಬ್ ಎಮ್ಮಾರ್ಕೆ

“ಕವಿ ಗಾಲಿಬ್‌ ಜನ್ಮದಿನಕ್ಕೊಂದು ಗಜಲ್”‌ಎಮ್ಮಾರ್ಕೆ Read Post »

ಕಾವ್ಯಯಾನ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ “ಬಣ್ಣದ ಬದುಕು”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಬಣ್ಣದ ಬದುಕು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಬಣ್ಣದ ಬದುಕು” ​ಕೆಲವುನಂಬಿಕೆಗಳೇ ಹಾಗೆಕಣ್ಣು ಮುಚ್ಚಿನಡೆದಾಗಲೆಲ್ಲಾ..ಜೊತೆಗಿದ್ದೇಹೃದಯದ ಬಡಿತವನ್ನೇಅಡವಿಡುವ ಹಾಗೆ! ​ಕೆಲವುಕಣ್ಣುಗಳೇ ಹಾಗೆನೋಡು-ನೋಡುತ್ತಲೇಆಂತರ್ಯವನು ತಿವಿದುಅಗಿಯುವ ಹಾಗೆ ​ಕೆಲವುಬಂಧಗಳೇ ಹಾಗೆಹೊರಗಿನಿಂದರೇಷ್ಮೆಯ ನೂಲಿನಂತೆ..ಆದರೆಒಳಗೊಳಗೆಉರುಳಾಗಿ ಕಾಡುವ  ಹಾಗೆ! ​ಕೆಲವುನೆರಳುಗಳೇ ಹಾಗೆಬೆಳಕಿದ್ದಾಗಬೆನ್ನಿಗಂಟಿಕೊಂಡಿದ್ದು..ಕತ್ತಲಾಗುತ್ತಿದ್ದಂತೆಯೇಕಾಣದಂತೆ……. ಮಾಯವಾಗುವ ಹಾಗೆ! ​ಕೆಲವುಹಣ್ಣುಗಳೇ ಹಾಗೆಉಣ್ಣು-ಉಣ್ಣುವಾಗಲೇಒಂದು ಬದಿ ಸಿಹಿಮಗದೊಂದು ಬದಿ ಕಹಿಯ ಹಾಗೆ ​ಕೆಲವುಬಣ್ಣಗಳೇ ಹಾಗೆಮನದೊಳಗೆಕೊಳೆಯಿದ್ದರೂ ಹೊರಗೆನಗು-ನಗುತ್ತಲೇಪ್ರಪಾತಕ್ಕೆ ನೂಕುವ ಹಾಗೆ! ​ಕೆಲವುಹೆಣ್ಣುಗಳೇ ಹಾಗೆಮುದ್ದಿಸಿ ಮೈಮರೆಸುತ್ತಲೇನಿದ್ದೆಯಲ್ಲೇ ಮೆಲ್ಲಗೆಉಸಿರುಗಟ್ಟಿಸುವ ಹಾಗೆ! ​ಈ ಮಣ್ಣೂ ಸಹ ಹಾಗೆಯೇ…ತನಗೆ ಬೇಕೆಂದಾಗತಕ್ಷಣವೇ ಕರೆದುಅಪ್ಪಿಕೊಂಡು ಶಾಶ್ವತವಾಗಿಮಲಗಿಸಿಕೊಳ್ಳುವ ಹಾಗೆ! ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ “ಬಣ್ಣದ ಬದುಕು” Read Post »

ಕಾವ್ಯಯಾನ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ”

ಕಾವ್ಯ ಸಂಗಾತಿ ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ” ನಿನ್ನೆದೆಯ ಹಸಿ ಹಸಿ ಪ್ರೀತಿ ಒರತೆಸಿಂಚನವಾಗಿದೆ ಮನದ ಬುಗ್ಗೆಯಲಿ ಮತ್ತೆ ಕನಸು ಹೊತ್ತು ಸಾಗಿದೆನಿನ್ನಧರ ಮಧುರ ಮುತ್ತಿಗೆ ಮಿಡುಕಿದಂತಾಯಿತು ಎದೆಯ ವೀಣೆಯಾರು ನುಡಿಸಿದರೊ ಪ್ರೇಮ ರಾಗವ ತಲ್ಲಣದ ಮನದಲಿ ಕಡಲ ಭೋರ್ಗರೆತನಿನ್ನ ಬೆರಳ ಸ್ಪರ್ಶದ ಅಪ್ಪುಗೆಯ ಸಾಂತ್ವಾನ ಶೀತ ಗಾಳಿಯ ಪ್ರೀತಿಗೆ ನೆನಪಿನ ಕಂಬಳಿ ಹೊದ್ದು  ಬೆಚ್ಚನೆಯ ಮುತ್ತನಿಟ್ಟು ಮಲಗು ಅಪ್ಪಿಕೊಳ್ಳುವೆ ಕನಸಿನಲಿ  ಬೇಡ ಬಿಡು ಒಸರುವ ತೊರೆ ಪ್ರೀತಿ ಭೂತಗನ್ನಡಿಯ ಹುಸಿ ಪ್ರೇಮ ಎಂದೆಯಾ  ಮೆಚ್ಚಿಕೊಳ್ಳುವ  ಮನಸ್ಸಿಲ್ಲದಿದ್ದರೆ ಕೊಚ್ಚಿ ಹಾಕಿಬಿಡು ಭಾವವನ್ನು ಚುಚ್ಚಬೇಡ ಹಚ್ಚಿಕೊಂಡ ಎದೆಯ ದನಿಗೆಬಿಚ್ಚು ಮನಸ್ಸಿನ ತುಡಿತಕೆ ನಾ ಬರುವ ದಾರಿಗೆ ನಿರೀಕ್ಷೆಯ ಹೂಹಾಸುಬಂದೇ ಬರುವೆನು ಕ್ಷಣದಲ್ಲಿ ನಿನ್ನ ಹೃದಯ ಗೂಡಿಗೆ ಡಾ. ಮೀನಾಕ್ಷಿ ಪಾಟೀಲ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ದುಃಸ್ವಪ್ನಗಳಿಗೆ ಹೆದರಿ ನಿದ್ದೆಮಾಡದಿದ್ದರೆ ಹೇಗೆ ಸಖಿಕಲ್ಲು-ಮುಳ್ಳಿಗೆ ಹೆದರಿ ಹೆಜ್ಜೆಯಿಡದಿದ್ದರೆ ಹೇಗೆ ಸಖಿ ಕತ್ತಲಲ್ಲೂ ಬೆಳಕನು ಹೊತ್ತು ಚಂದಿರ ಬರುವನಂತೆಕವಿದ ಇರುಳಿಗೆ ಹೆದರಿ ಕಣ್ತೆರೆಯದಿದ್ದರೆ ಹೇಗೆ ಸಖಿ ಆ ಮರುಭೂಮಿಯಲ್ಲೂ ಬುಗ್ಗೆ ಲಗ್ಗೆಯಿಡುವದಂತೆಬಿರುಬಿಸಿಲಿಗೆ ಹೆದರಿ ಹೊರಬರದಿದ್ದರೆ ಹೇಗೆ ಸಖಿ ಕಲ್ಲು ಉಳಿಯ ಪೆಟ್ಟು ಉಂಡು ಶಿಲೆಯಾಗುವದಂತೆಹಣೆ ಬರಹಕೆ ಹೆದರಿ ತಲೆಯೆತ್ತದಿದ್ದರೆ ಹೇಗೆ ಸಖಿ ಕುಂಬಾರನೆದೆ ಪಾತ್ರೆ ಸುಟ್ಟಷ್ಟೇ ಗಟ್ಟಿಯಾಗುವದಂತೆಕಡುಕಷ್ಟಗಳಿಗೆ ಹೆದರಿ ಎದುರಿಸದಿದ್ದರೆ ಹೇಗೆ ಸಖಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

You cannot copy content of this page

Scroll to Top