ವಿರಹ ವೇದನೆ
ನಿನ್ನ ಅಂತರಂಗದ ನುಡಿ ಕರೆಯುತಿದೆ ನನ್ನನು
ಮನದ ಮಾತಲಿ ಮೌನ ಹುದುಗಿಸಿ
ಏಕೆ? ಸತಾಯಿಸುತಿರುವೆ ಗೆಳತಿ ಬಂದು ಸಂತೈಸು
ನೀ ನಡೆವ ದಾರಿಯಲ್ಲಿ ಹೂಹಾಸಿ ಸ್ವಾಗತಿಸುವೆ//
ನಿನ್ನ ಅಂತರಂಗದ ನುಡಿ ಕರೆಯುತಿದೆ ನನ್ನನು
ಮನದ ಮಾತಲಿ ಮೌನ ಹುದುಗಿಸಿ
ಏಕೆ? ಸತಾಯಿಸುತಿರುವೆ ಗೆಳತಿ ಬಂದು ಸಂತೈಸು
ನೀ ನಡೆವ ದಾರಿಯಲ್ಲಿ ಹೂಹಾಸಿ ಸ್ವಾಗತಿಸುವೆ//
ಆದರೂ ಕಗ್ಗತ್ತಲ ಕರಾಳ ರಾತ್ರಿಯಲಿ
ಮನೆ ಬೆಳಗುವ ಹಣತೆಯಂತೆ
ಬತ್ತಿಲ್ಲ ಆಶಾವಾದ ಸತ್ತಿಲ್ಲ ಆತ್ಮವಿಶ್ವಾಸ
ಗೆದ್ದೇ ಗೆಲ್ಲುತ್ತೇವೆ ಮತ್ತೆ ಪುಟಿದು
ಗಜಲ್ ಪ್ರತಿಮಾ ಕೋಮಾರ ಹರಿಯುವ ನದಿಯೂ ಸ್ತಬ್ಧವಾದಂತೆ ಕಾಣುತ್ತಿದೆ ಇಂದುಮಾತಾಡುವ ಮನವೆಲ್ಲಾ ಮೌನ ಹೊದ್ದು ನಡೆಯುತ್ತಿದೆ ಇಂದು ಸೂರ್ಯಚಂದ್ರರ ಆಗಮನವೆಲ್ಲ ನಿಯಮ ಬದ್ಧವಾಗೇ ಇದೆಜಗವು ಮಾತ್ರ ಕತ್ತಲ ಕೂಪದಲ್ಲಿ ಮುಳುಗುತ್ತಿದೆ ಇಂದು ನಿನ್ನೆವರೆಗೂ ಹೂ ಮೊಗದಲ್ಲೆಲ್ಲ ಪ್ರೀತಿ ,ಚೆಲುವು ನಗುತ್ತಿತ್ತು ಎಲ್ಲರ ಒಳಹೊರಗೆ ಬರೀ ಆಕ್ರಂದನವೇ ಕೇಳಿ ಬರುತ್ತಿದೆ ಇಂದು ಭರವಸೆಯ ಬೆಳಕು ನೋವ ಜಡವ ಹತ್ತಿಯಾಗಿಸುವುದು ನಡುಗುವ ಭಯವೇ ಎಲ್ಲೆಲ್ಲೂ ಸುಳಿದಾಡುತ್ತಿದೆ ಇಂದು ಯಾರದೋ ಹನಿ ಕಣ್ಣೀರು “ಪ್ರತಿ”ಯ ವಿಲವಿಲ ಅನ್ನಿಸುತ್ತಿತ್ತುನಮ್ಮವರ ಸಾವಿಗೂ ಸ್ಪಂದಿಸಲಾಗದೆ ಎದೆಯು ಕಲ್ಲಾಗುತ್ತಿದೆ ಇಂದು ************
ಕಾಲಾಳುಗಳು ಕಾಣೆಯಾಗಿದ್ದಾರೆ
ಕುದುರೆಗಳು ಲಾಯದಲ್ಲಿದೆ
ಕೆನೆ ಮೆದ್ದಿವೆ
ಕೆನೆಯುತ್ತಿವೆ… ಆಹಾ…
ಅವುಗಳ ಕಿವಿ ತೂತಾಗಿದೆ
ಗಜಲ್ ರತ್ನರಾಯಮಲ್ಲ ಕಾಳಸಂತೆಯಲಿ ಹಾಸಿಗೆಗಳು ಕೊಳೆಯುತ್ತಿವೆಜೀವದ ಬಡತಿಗಾಗಿ ಆಸ್ಪತ್ರೆಗಳು ಹವಣಿಸುತ್ತಿವೆ ಜನನದಲ್ಲಿ ಮರಣವೂ ಇದೆ ಅಂಜುವವರಾರುಸಾವಿನಲ್ಲೂ ರಾಜಕೀಯ ಪಕ್ಷಗಳು ಚಿಗುರುತ್ತಿವೆ ಪಾಪ-ಪುಣ್ಯ ಬಾಲ್ಯದಿಂದಲೂ ಅನುರಣಿಸುತಿದೆಮಸಣಗಳೂ ಇಂದು ಧನವನ್ನು ಬೆಳೆಯುತ್ತಿವೆ ಆತ್ಮವಿಶ್ವಾಸದ ಫಸಲಿಗೆ ಪರಂಪರೆಯೇ ಇದೆ ಇಲ್ಲಿಮಾಧ್ಯಮಗಳೇ ಭಯ ಬಿತ್ತಿ ದುಡ್ಡು ದೋಚುತ್ತಿವೆ ಮರಣಕ್ಕೆ ಚುಂಬಿಸಲು ಭಯ ಪಡದಿರು ‘ಮಲ್ಲಿ’ಹಣದ ಹಾದರವು ಹೆಣಗಳನ್ನು ಉರುಳಿಸುತ್ತಿವೆ ****************
ಗಜಲ್. ವಿಜಯಲಕ್ಷ್ಮಿ ಕೊಟಗಿ ನನ್ನ ದೇಹದ ಬಣ್ಣ ಬಿಸಿಲನ್ನೇ ಉಂಡು ಕಪ್ಪಾಗಿದೆ ಕಾಮ್ರೇಡ್ನನ್ನ ಗಜಲ್ ದುಡಿದು ಹಕ್ಕಳೆದ್ದು ಕೆಂಪಾಗಿದೆ ಕಾಮ್ರೇಡ್ ನಾನು ಹಸಿವನ್ನು ತಣಿಸಲು ಕೆಸರಿಗಿಳಿಯಲು ಹೇಸದಿರಬಹುದುನನ್ನ ಗಜಲಿನಲ್ಲಿ ಸ್ವಾಭಿಮಾನದ ನಿರ್ಮಲ ಕನಸಿದೆ ಕಾಮ್ರೇಡ್ ನಾನು ಆಸ್ತಿ ಅಧಿಕಾರವಿಲ್ಲದ ಬಡವನೇ ಇರಬಹುದುನನ್ನ ಗಜಲಿಗೆ ಸಂವಿಧಾನದ ಒಡನಾಟವಿದೆ ಕಾಮ್ರೇಡ್ ನಾನು ನರಪೇತಲ ನಾರಾಯಣನಂತೆ ಇದ್ದಿರಬಹುದುನನ್ನ ಗಜಲಿಗೆ ಬಲಭೀಮನ ತಾಕತ್ತಿದೆ ಕಾಮ್ರೇಡ್ ನಾನು ದಲಿತ ಶೂದ್ರ ಕೂಲಿಕಾರ್ಮಿಕನೇ ಇರಬಹುದುನನ್ನ ಗಜಲ್ ಶ್ರಮಿಕರ ಬೆವರಿಗೆ ಅರ್ಪಿತವಾಗಿದೆ ಕಾಮ್ರೇಡ್ ನಾನು ಮನುಷ್ಯನೆಂದೇ ಭಾವಿಸದ ಧನಿಕರಿರಬಹುದುನನ್ನ ಗಜಲಿನಲಿ ಮಾನವೀಯತೆ ಜೀವಂತವಾಗಿದೆ ಕಾಮ್ರೇಡ್ ನಾನು ಶೋಷಣೆಯ ವಿರುದ್ಧ ಎತ್ತಿದ ಧ್ವನಿ ಒಂಟಿ ಇರಬಹುದುನನ್ನ ಗಜಲಿಗೆ ಬಹುಜನರ ಬೆಂಬಲವಿದೆ ಕಾಮ್ರೇಡ್ ಬಹುತ್ವ ಭಾರತದಲಿ ಮೂಲಭೂತವಾದಿಗಳ ಪ್ರಭುತ್ವ ಇರಬಹುದುವಿಜಿಯ ಗಜಲ್ ಹೊತ್ತಿಸಿದ ಕ್ರಾಂತಿಗೆ ಲಾಲ್ ಸಲಾಂ ಸಿಕ್ಕಿದೆ ಕಾಮ್ರೇಡ್. ************************
ಕಾವ್ಯಯಾನ ಕಾಯಕ ವೀರ ಕಾರ್ಮಿಕ ಚೈತ್ರಾ ತಿಪ್ಪೇಸ್ವಾಮಿ ಕಾಯಕಯೋಗಿ ಕಾರ್ಮಿಕ ಶ್ರೇಷ್ಠಕಾರ್ಖಾನೆಯೇ ಅವನ ಕರ್ಮಸ್ಥಾನದುಡಿಮೆಯ ಧರ್ಮವೇ ಜೀವಾಳ ಕಾರ್ಮಿಕ ಶ್ರಮದಿಂದ ದೇಶಕ್ಕೆ ಸರಕುಪಾಳಿಯ ಮೇಲೆ ಕೆಲಸವ ಮಾಡಿಲಾಭದ ಪ್ರಗತಿಗೆ ಕಾರಣವಾದ ಬೆವರು ಸುರಿಸಿ ದುಡಿವ ಶ್ರಮಿಕಯಂತ್ರಗಳೊಂದಿಗೆ ಕಾರ್ಯನಿರತಅರೆಕ್ಷಣ ತೊರೆಮನ ಕಾದಿದೆ ದುರಂತ ಕಾಯ ಸೋತರು ದೇಹ ದಣಿದರೂಕಾಯಕಕ್ಕೆ ಸಮಾನವಾದ ವೇತನ ಸಿಗುತ್ತಿಲ್ಲಹಗಲಿರುಳು ದುಡಿದರೂ ಕೆಲಸಕ್ಕೆ ರಕ್ಷಣೆ ಇಲ್ಲ ನೊಂದ ಮನಕೆ ಬೇಕಿದೆ ಸಾಂತ್ವನಕಾಯಕಲ್ಪ ನೀಡಬೇಕಿದೆ ಸರ್ಕಾರಕಾನೂನು ಕೊಡಬೇಕಿದೆಸಬಲತೆಯ ಮಾಲೀಕನ ಪ್ರೀತಿ ಕಾರ್ಮಿಕರಿಗೆ ಇರಲಿಕಾರ್ಮಿಕರ ಜೀವಕ್ಕೆ ಭದ್ರತೆ ಇರಲಿಕಾರ್ಮಿಕರ ಕಲ್ಯಾಣವೇ ದೇಶಕ್ಕೆ ಹಿತವಾಗಲಿ ********************
ಕಾವ್ಯಯಾನ ಒಲವ ಹಣತೆ ಭಾರತಿ ಕೇ ನಲವಡೆ ಅವಳು ಸುಂದರ ಮನಸಿನ ನಗುವ ಹೂವು ನನಗೆಬಂದಂಳೆಂದರೆ ಬೆಳದಿಂಗಳ ಬಾಲೆ ಧರೆಗಿಳಿದಂತೆ ಮನಕೆಕನಸು ಯಾರಿಗೂ ಕೇಡು ಬಯಸದ ಮುಗುದೆದಿನಪೂರ್ಣವಾಗದು ಅವಳನು ನೋಡದೆ ಸದಾ// ಬಿರಿದ ಸುಮದಂತೆ ಹುಸಿಮುನಿಸಿನಲೂ ಅಮೃತಧಾರೆಒಲವ ತುಂಬುವ ಮುಂಗಾರು ಮಳೆಯ ಪುಳಕದಂತೆಸರಳ ನಡೆಯ ನೀಳಜಡೆಯ ಕೃಷ್ಣಸುಂದರಿ ನೀನುನೊಂದವರಿಗೆ ಸಾಂತ್ವನದ ಹೊಳೆಯ ಹರಿಸುತ// ಇಂದೇಕೋ ಅವಳ ಮನೆ ಮುಂದೆ ರಾಶಿ ಜನರ ಸಾಲುಕದ್ದು ನೋಡುವ ನಾನು ಬಳಿ ಸಾಗಿದರೆ ಉಸಿರು ಕಟ್ಟಿದ ದೃಶ್ಯಕೊರೋನಾ ಮಾರಿಗೆ ಬಲಿಯಾದ ತಂದೆಯ ಸೇವೆಗೆತಾನೆ ಮೊದಲು ಬಲಿಯಾದಳು ಕೋಮಲೆಹೃದಯ ಕರಗಿದ ಸಮಯವದು ಕಂಬನಿಯಾಗಿ ಹರಿದಿತ್ತು// ನಿತ್ಯ ಹಸಿರಾದ ಮನವಿಂದು ಮರುಭೂಮಿಯಾಗಿದೆ ಗೆಳತಿಒಲವ ಹಣತೆ ಪ್ರೀತಿ ತೈಲವಿಲ್ಲದೆ ನಂದಿದೆ ಇಂದುಹೇಗೆ ಬದುಕಲಿ ಪ್ರಿಯೆ ನೀನಿಲ್ಲದ ಈ ಲೋಕದಲಿ ನಾನುನಿನ್ನ ಚಿರನೆನಪೆ ಸಾಕು ನನ್ನ ಬದುಕಿಗೆ ಚೈತನ್ಯ ******************************************************
You cannot copy content of this page