ಗಜಲ್
ನಿರ್ಭಯದಿ ಉಸಿರಾಡುವ ದಿನಗಳು ಸೇರಿಹೋಗಿವೆ ಭೂತಕ್ಕೆ
ಕಾಲನ ತುಳಿತಕೆ ಸತ್ತವನೂ ಅರಸಲೇಬೇಕಿದೆ ಮಸಣದಿ ತಾವು
ಕಾವ್ಯ ಜುಗಲ್ ಬಂದಿ ಖಾಲಿತನದ ಗಳಿಗೆಯ ಕವಿತೆಗಳು ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ… ಖಾಲಿತನದ ಗಳಿಗೆಯ ಕವಿತೆಗಳು ಗಳಿಗೆ-೧ ಖಾಲಿತನ ಹ್ಞೂಂ……..!! ಖಾಲಿತನವೆಂಬುದು ಬರೀ ಭ್ರಮೆಯಷ್ಟೇ..ಒಲವು- ಚೆಲುವು-ಬೆರಗು ಭಾವಗಳ ತೇವ ಇಂಗಿದ ಮೇಲೂಹಾಯ್ವ ನೆನಪ ಮಂದಾನಿಲ ಒತ್ತುತ್ತಲಿರುವುದುಕಾಣದಂತೆಮನದ ಗಡಿಗೆಯಲ್ಲಿ.. ಖಾಲಿತನವೆಂದೆಯಲ್ಲವೇ ತೋರು ಅದೆಲ್ಲಿ…?? ವೀಣಾ ಪಿ. ಭ್ರಮೆಯ ಭಾವವೇನಲ್ಲ ನನ್ನೊಳಗಿನ ಖಾಲಿತನ ಬಿಸಿಲ ಧಗೆಗೆ ಮುದುಡಿಹೋದ ಹೂವಿನ ಒಂಟಿತನ ತೆರೆದು ತೋರಲಿದೇನು ತನುವಿನ ಮೇಲಣ ಗಾಯವೇ ಕೆದಕಿ ಕೇಳಿ ಹಸಿಗಾಯವ ಮತ್ತೆ ಬಗೆಯುವುದು ತರವೇ?? ಮಾಧವ *****(ಮುಂದುವರೆಯಲಿದೆ)*****…. ಪರಿಚಯ: ಶ್ರೀಮತಿ ವೀಣಾ ಪಿ., ಹರಿಹರ …ಇತಿಹಾಸ ಉಪನ್ಯಾಸಕಿ, ಸಂಶೋಧಕಿ, ಕವಯಿತ್ರಿ ಹಾಗೂ ಬರಹಗಾರ್ತಿಯಾಗಿದ್ದು, ಕನ್ನಡ ಸಾಹಿತ್ಯ ಹಾಗೂ ಐತಿಹಾಸಿಕ ಸಂಶೋಧನಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಇವರ ಚೊಚ್ಚಲ ಕೃತಿ “ಭಾವೋದ್ದೀಪ್ತಿ”ಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಯೋಜನೆಯಡಿ ಆಯ್ಕೆಗೊಂಡು ಪ್ರಕಟಗೊಂಡಿದೆ. ಬದುಕಿನಲ್ಲಿ ಭರವಸೆಗಳ ಬೆಂಬತ್ತುವಿಕೆ ಇವರ ಬರವಣಿಗೆಯ ಮೂಲ ಆಶಯವಾಗಿದೆ.
ಗಜಲ್ ಡಾ.ರೇಣುಕ ಅರುಣಕುಮಾರ ಕಠಾರಿ ಹಣೆ ಬರಹವೆಂದು ಕೈ ಕಟ್ಟಿ ಮಾತಿದ್ದೂ ಸುಮ್ಮನೆ ಕೂಡಬೇಕೆ ಈ ಲೋಕದೆದುರುಒಳಮನೆಯ ಹೊಸ್ತಿಲಳೊಗೆ ಮೈಲಿಗೆಂದು ಕುದಿಯಬೇಕೆ ಈ ಲೋಕದೆದುರು ಮಡಿ ಮೈಲಿಗೆಯ ಮನದೆದುರು ಬೆತ್ತಲೆ ಒಂದಾಗಿದೆ ಬದುಕುಮನಸಿಗೆ ಮೈಲಿಗೆ ಇಲ್ಲವೆಂದು ತಿಳಿದರು ದೂರವಾಗಬೇಕೆ ಈ ಲೋಕದೆದುರು ಮೂರರೊಳಗೆ ಬಂಧನ ಮೂರರೊಳಗೆ ಬೆಂದೇನಾ ಧರ್ಮದೆದುರುಹೆಣ್ಣನೇ ದೇವರು ಮಾಡಿದ ಬದುಕಿನೊಳಗೆ ಮಾತನು ಅಡವಿಡಬೇಕೆ ಈ ಲೋಕದೆದುರು ಬೆಂಕಿಗೆ ಹಾರಿದವಳೊಬ್ಬಳು ಬೆನ್ನು ಹತ್ತಿದವಳೊಬ್ಬಳು ಕಲ್ಲಾಗಿ ಕಾದವಳೊಬ್ಬಳು ಚರಿತ್ರೆಯೇ ಹೀಗೆಗಾದೆಯೊಳಗೆ ನೇಣು ಬಿಗಿದರೂ ನಮ್ಮ ಕುಲವನು ಕುರುಡಾಗಬೇಕೆ ಈ ಲೋಕದೆದುರು ‘ರೇಣು’ ಕೇಳೆ ಮುಡಿಗಳೆಲ್ಲ ಒಂದಾಗಬೇಕು ನಡೆ ನುಡಿಯೊಳಗೆ ಇಂದೇಕತ್ತಲಾದ ಬೊಗಸೆಯೊಳಗೆ ಮೈಲಿಗೆ ತೊಳೆದು ಬೆಳಕ ಬುಗ್ಗೆ ಚಿಮ್ಮಿಸಬೇಕು ಈ ಲೋಕದೆದುರು. ************************************************************
ಕವಿತೆ ಅಮ್ಮಾ-ನೆನಪು! ಹೇಮಚಂದ್ರದಾಳಗೌಡನಹಳ್ಳಿ ಸದಾ ಕಾಡುವನನ್ನೊಳಗಲಿ ಇಣುಕುವ ಕೆಡುಕನು ಸುಡುವ,,ಹೊಸ ಆಲೋಚನೆ ಯೋಜನೆಗೆ ಪ್ರೇರಿಸುವ,,ನನ್ನುಸಿರೊಳಗೆ ಬೆರೆತೇನೋ ಉಸುರುತಿರುವಂತೆ,ನಿನ್ನ ನೆನಪು…. ಸದಾ ಕಾಡುವನನ್ನನಾಗ ತಿದ್ದಿ ತೀಡಿ ನಿನ್ನ ಮೆಚ್ಚು ರೂಪ ನೀಡಿಇಂದಿಗೂ ಕನಸಾಗಿ ಬಂದು ಕೂಗಿ ಎಬ್ಬಿಸುವ..ಸರಿ ದಾರಿದೋರಿ ಮುನ್ನಡೆಸುವ ಹಂಬಲಿ..ಹಸಗಟ್ಟಿದ ಹೊಟ್ಟೆಯ ಮಾಸಲು ಬಟ್ಟೆಯಮುಗುಳುನಗುಮೊಗದ ನಿನ್ನಾ ನೆನಪು ಸದಾ ಕಾಡುವದುಡಿದು ನೀನು ದಣಿದು ನಮಗೆ ತಣಿಸಿಹಸಿವನೇ ಹೊತ್ತು ಹುಸಿನಗುವಲದನು ಮುಚ್ಚಿಖಾಲಿಮಡಕೆ ನಮಗೆ ಹಣ್ಣುಗಳನೇ ತುಂಬಿಹಣ್ಣಿನಮಡಕೆ ಸ್ಥಾನ ನೀಡಿ..ತಿನ್ನದೊಂದನೂಜೋಪಾನಿಸಿ ನಡೆದಾ..ನಿನ್ನ ನೆನಪು.. ಸದಾ ಕಾಡುವಬೇಕು ನೀನೆಂಬ ಭಾವದ ನೋವತಾಳಿಕೊಂಡಿದೆ ಜೀವ; ಮಗಳಾಗಿ ಬಂದೆಂಬ ನಚ್ಚುಅವಳಿಗೆ ನೀನಿಲ್ಲದ ನೋವು ಒತ್ತರಿಸಿ ಒಮ್ಮೊಮ್ಮೆತಾಳಿಕೆಯ ಕಟ್ಟೆಯೊಡೆದ ಹನಿಯ ಕಣ್ಣುಣ್ಣುತದೆ..ನೀ ಕಲಿಸಿದ ಪಾಟ ಮರೆತಿಲ್ಲ ‘ನುಂಗಬೇಕುನಮ್ಮೊಳಗ ನೋವ ನಾವು..ಶಾಖವದು ಕಾಯಿ ಹಣ್ಣಾಗಲು ನಮಗೆ ನೋವು..ನುಂಗತೇನೆ..ಕಾಯತದೆ ನನ್ನ ಅಮ್ಮಾನಿನ್ನ ನೆನಪು…. ***************
ಕವಿತೆ ನನ್ನಪ್ಪನ ಕನ್ನಡಕ ವಿಶ್ವನಾಥ ಎನ್. ನೇರಳಕಟ್ಟೆ ನನ್ನಪ್ಪ ತೊಟ್ಟ ಕನ್ನಡಕ ಕಂಡಿದೆ ಎಲ್ಲವನ್ನೂ- ಏಳ್ನೂರರ ಪಗಾರದಲ್ಲಿ ಪ್ರತಿ ತಿಂಗಳ ಕ್ಯಾಲೆಂಡರ್ ತಿರುವಿಹಾಕಿದ್ದನ್ನುತಣ್ಣೀರು ಕುಡಿದು ಹೊಟ್ಟೆ ತಂಪಾಗಿಸಿಕೊಂಡದ್ದನ್ನುಕಣ್ಣೀರು ಕಾಣದಂತೆ ನಗೆಯಾಡಿದ್ದನ್ನು ಬಾಡಿಗೆ ಮನೆಯ ಮುರುಕುಬಾಗಿಲನ್ನು ರಾತ್ರಿ ಕಾದದ್ದನ್ನುವಾರಾನ್ನದ ಬೆಳಕಲ್ಲಿ ಬಾಳುಬೆಳಗಿಸಿಕೊಂಡದ್ದನ್ನುಬಿಟ್ಟಿ ಚಾಕರಿಗೆಜೊತೆಗಾರನಾದುದನ್ನು ಮನೆಯ ಫೌಂಡೇಶನ್ನಿಗೆಬೆವರಹನಿ ಬಿದ್ದುದನ್ನುಮಕ್ಕಳನ್ನು ನೆರಳಲ್ಲಿಟ್ಟುಬಿಸಿಲಲ್ಲಿ ಶತಪಥ ಓಡಾಡಿದ್ದನ್ನು ಮಕ್ಕಳಿಗೆ ಹೊಡೆದುದನ್ನುಹೆಂಡತಿಗೆ ಬೈದುದನ್ನುಹೊದಿಕೆಯೊಳಗಿನ ಕತ್ತಲಲ್ಲಿಸದ್ದೇಳದಂತೆ ಅತ್ತುದನ್ನು ಮಾಡದ ತಪ್ಪಿಗೆಬೈಸಿಕೊಂಡದ್ದನ್ನುಮರ್ಯಾದೆಗೆ ಅಳುಕಿತೆಪ್ಪಗಿದ್ದುದನ್ನುಬಿಗಿಗೊಂಡ ಮುಷ್ಟಿಸಡಿಲವಾದದ್ದನ್ನು *********************************
ಅಮ್ಮನಿಗೊಂದು ಗಜಲ್ ಸುಜಾತಾ ರವೀಶ್ ಅಣುರೂಪದಲಿಂದ ಅಸುವ ತುಂಬಿ ಪೊರೆದ ಚೈತನ್ಯಧಾಯಿ ಅಮ್ಮ ಭ್ರೂಣವಾದಾಗಿನಿಂದ ಕಸುವ ನೀಡಿ ಸಾಕಿದ ಜೀವನಧಾಯಿ ಅಮ್ಮ ನವಮಾಸಗಳು ಒಡಲಲ್ಲಿ ಕಂದನ ಭಾರ ಹೊತ್ತು ಸಲಹಿದೆಯಲ್ಲಮ್ಮ ತನ್ನ ಜೀವವನೆ ಒತ್ತೆಯಿಟ್ಟು ಭುವಿಗೆ ತಂದ ಮಮತಾಮಯಿ ಅಮ್ಮ ಅಮೃತಸದೃಶ ಎದೆ ಹಾಲೂಡಿಸಿ ಶಕ್ತಿ ತುಂಬಿಸಿದೆಯಲ್ಲಮ್ಮ ಅನೃತವಾಡದೆ ಬದುಕು ನಡೆಸ ಕಲಿಸಿದ ವಾತ್ಸಲ್ಯಮಯಿ ಅಮ್ಮ ಕೆಟ್ಟ ಮಕ್ಕಳಿರಬಹುದು ಎಂದೂ ಕುಮಾತೆಯರು ಲೋಕದಲ್ಲುಂಟೇನಮ್ಮ? ಸಿಟ್ಟು ಮಾಡಿಕೊಳ್ಳದೇ ಯಶಸ್ಸಿನ ದಾರಿ ತೋರಿದ ಸಹನಾಮಯಿ ಅಮ್ಮ ವಿಜಯ ಪಥದಿ ಸಾಧನೆಯ ಕಾಣಲು ದಾರಿದೀಪ ನೀನೇನಮ್ಮ ಸುಜಿಯ ರಥದ ಸಾರಥಿಯಾಗಿ ಸದಾ ಮುಂದಿರುವ ಆದರ್ಶಮಯಿ ಅಮ್ಮ *********************************
ಕವಿತೆ ಸತ್ವ ಪರೀಕ್ಷೆ ಲಕ್ಷ್ಮೀದೇವಿ ಪತ್ತಾರ ಸತ್ತವರ ಬಾಯಿಗೆ ಮಣ್ಣುಬದುಕುಳಿದರೆ ಹೋಳಿಗೆ , ಹುಗ್ಗಿ ಇದ್ದೆ ಇದೆ ಮುಂದೆ ಉಣ್ಣಲು ಸ್ವಲ್ಪ ತಾಳ್ಮೆ ಸಹನೆ ಇರಲಿ ಬಾಳಿಗೆಹೊರಗೆ ಬರದೆ ಇದ್ದದರಲ್ಲೆ ಹೊಂದಿಕೊಂಡು ಹೋಗಿ ಸುಮ್ಮನೆ ರಾಜಮಹಾರಾಜರೇ ಹದಿನಾಲ್ಕು ವರ್ಷಗಳ ಕಾಲ ವನವಾಸ ಗೈದರುಹದಿನಾಲ್ಕು ದಿನಗಳವರೆಗೆ ಮಾತ್ರಮನೆಯೊಳಗೆ ಇದ್ದರೆ ಏನು ತ್ರಾಸು ಇಂದು ಮನೆಯೆ ಆನಂದವಾಗಿರಲು ಬಲು ಸುರಕ್ಷಿತನಮ್ಮವರೊಂದಿಗೆ ಕಳೆಯಲು ಇದೂಂದು ಅವಕಾಶ ಇಂದಿನ ಕಷ್ಟದ ದಿನಗಳು ಕಳೆದರೆ ಸಾಕುಮುಂದೆ ಇದೆ ಭಾಗ್ಯದ ಬಾಗಿಲುಯಮ ಒಡ್ಡಿರುವನು ನಮ್ಮ ತಾಳ್ಮೆಗೊಂದು ಸವಾಲುಸತ್ವ ಪರೀಕ್ಷೆ ನಾವು ಗೆಲ್ಲುಲೇ ಬೇಕು ಬದುಕಿ ಬಾಳಲು *****************************
ಕವಿತೆ ಮೂರು ದಿನಗಳ ಆಚೆ… ಕವಿತಾ ಹೆಗಡೆ ಅಭಯಂ ಅಣುವೊಡೆದು ಚೂರಾಗಿ,ಪಿಂಡವೊಂದು ಬ್ರಹ್ಮಾಂಡಸೇರಲೊಲ್ಲದ ತಪ್ಪಿಗೆ,ನೀರಲ್ಲಿ ನೀರಾಗಿ,ಮಲಿನದ ಹೆಸರಲ್ಲಿ ಹರಿದುಹೋದರೆ;ರಜ ಸೋರಿದ್ದು ದೇಹಕ್ಕೆ,ತಮ ಕವಿದದ್ದು ಮನಕ್ಕೆ. ೧. ಆಚೆ ಕೂತರೆ:ಇಡೀ ಮನೆಯಲ್ಲಿ ಇವಳೊಬ್ಬಳೇ ಅಸ್ಪೃಶ್ಯೆ,ಮೂರು ದಿನ ಯಾಚನೆಯೇ ಜೀವನ.ಕೊಟ್ಟರುಂಟು …ತಿನ್ನು..ಉಡು.ಯಾತನೆಯೇ ಜೀವನ.ಕೂತು, ಮಲಗಿ ಬೇಸರಪಡು,ಇಲ್ಲ, ಹೊರೆ ಹೊರಗೆಸಲ ಮಾಡು.ಕತ್ತೆಯಾಗುವುದು ಲೇಸು! ೨. ಆಚೆಯಾಗಿ ಈಚೆಯಿದ್ದರೆ:ರಿಯಾಯತಿಯಿಲ್ಲದ ನಿತ್ಯ ಕರ್ಮಗಳು,ನೆಂಟರು, ಒಮ್ಮೊಮ್ಮೆ ದುಪ್ಪಟ್ಟಾಗುವಬಿಡುವಿಲ್ಲದೆ ಬೆಂಬತ್ತುವ ಜವಾಬ್ದಾರಿಗಳು.ಮಗುವಾದರೆ ಒಳ್ಳೆಯದಿತ್ತು! ೩. ಶಾಲೆಯ ಹುಡುಗಿ:ನೂರು ಆಚರಣೆ – ಸ್ಪರ್ಧೆಗಳಹೆಸರಲ್ಲಿ, ಎಳೆಜೀವವ ಕುಣಿಸಿ,ಹೆಣಗಿಸಿ, ಯಾರು ಯಾರದೋಕಾಣದ ಕಲ್ಲು ಮನ ರಂಜಿಸಲು ,ತಾಲೀಮಿನಲಿ ಬತ್ತಿದ ಕಾಲು.ನೋ ಸಿಂಕ್……..ಕ್ಷಣ ವಿರಮಿಸಿದರೂ ಮೂದಲಿಕೆ-“ಇಕಿನ ಮತ್ತ ಯದಕ್ಕೂತಗೋಬ್ಯಾಡ್ರಿ..ಕೆಟ್ ಆಲಸಿ ಇದಾಳಿಕಿ…”ಅವಕಾಶಗಳಿಗೆಲ್ಲ ಎಳ್ಳು ನೀರು! ೪. ಹೊಸ ನಟಿ:ಸೇದಿ ಹೋಗುವ ಕಾಲು,ಸಿಡಿವ ಸೊಂಟದ ಬಾಧೆ,ಎಲ್ಲಿಂದ ಬಂದೀತು ಭಾವನೆ?“ನಿಮ್ಮಂಥವ್ರೆಲ್ಲಾ ಯಾಕ್ರೀ ಬರ್ತೀರಾಫೀಲ್ಡಿಗೆ?…..ಪ್ಯಾಕ್ ಅಪ್..”ಮೊದಲ ಚಾನ್ಸಿಗೇ ಅರ್ಧಚಂದ್ರ ;ಇಲ್ಲ ಅದೇ ಕಡೆಯ ಚಿತ್ರ! ೫. ರಿಯಾಲಿಟಿ ಶೋ ಸ್ಪರ್ಧಿ:ಕನಿಷ್ಟ ಬಟ್ಟೆಯಲಿ,ಲಾಗ ಹಾಕುವ, ಹತ್ತುವ,ಹಾರುವ, ಕುಣಿವ, ಮಣಿವಸವಾಲು…”ಆಗದು ಎನ್ನುವಮಾತೇ ಆಡಕೂಡದು..”ಮತ್ತೆ ಮತ್ತೆ ತೆಗೆದುಕೊಂಡಹಿಂದೆ ಮುಂದೆ ಹಾಕುವ ಗುಳಿಗೆಗಳಅಡ್ಡ ಪರಿಣಾಮ, ಅಕಾಲ ವೃದ್ಧಾಪ್ಯ,ನಿಜದ ಮುದುಕಿಯಾದರೆ ಒಳ್ಳೆಯದಿತ್ತು! ೬. ಉದ್ಯೊಗಸ್ಥೆ:ಪರಿಪೂರ್ಣೆಯಾಗುವ ತವಕ,ಸಮಳೆನಿಸಿಕೊಳುವ ತುಡಿತ,ಮೂರರ ಚಕ್ರದಲಿ ಮಾತಿಲ್ಲ.ಗಿರಗಟ್ಟೆ ತಿರುಗುವ ಕರ್ಮದಲಿಕಾರಣ ಕೊಡುವ ಹಾಗಿಲ್ಲ.“ಪ್ರೆಸೆಂಟೇಶನ್ ತೃಪ್ತಿಕರವಾಗಿಲ್ಲ,ಸಮಯಕ್ಕೆ ಸಬ್ಮಿಟ್ಟಾಗಿಲ್ಲ…”ನಿವೃತ್ತಿ ದಿನಾಂಕ ಯಾವಾಗ! ಬಾಧೆಗಳ ಅಡಗಿಸಿದ ಹುಸಿ ನಗುಎದೆಯಲ್ಲಿ ಭಾವೋದ್ವೇಗದ ಅಳು.ಹಸಿ ಹಸಿ ಸುಳ್ಳು ರಜೆಯ ಜೀವಕೆಅಷ್ಟು ಬೇಗ ನಿಜದ ರಜೆ ಸಿಗುವುದೆ?ಮುಗಿದ ನಿರಾಳತೆ ಆರುವುದರೊಳಗೆಮತ್ತೆ ಬಂದೇ ಬಿಟ್ಟಿತು. ಮೂರಕ್ಕೆನೂರುಗಳ ನೋಟು ಪಡೆಯುತ ಅಣಕಿಸುತ.ಮೂರು ದಿನಗಳ ಆಚೆಯೋ ಈಚೆಯೋ;ಹುಡುಕಬೇಕಿದೆ ಹೊಸ ಬದುಕ –ಹೊಸ ಬೆಳಕ… *************
You cannot copy content of this page