ಸಂಕಟ
ನೋವು ಕೊಟ್ಟವರಿಗೇನು ಗೊತ್ತು
ನೋವು ಅನುಭವಿಸಿದವರ ಸಂಕಟ
ಕವಿತೆ ಮಾವನ ಕರೆ ಶೃತಿ ಮೇಲುಸೀಮೆ ಮೊಂಡ ಕೋಲ ಕಟ ಕಟ ಕುಟ್ಟುತ್ತಾಒಂಟಿ ಕಾಲ ಕುಂಟ ಮಾವಕೂಗ್ತಾ ಬಂದಿದ್ದ ಕೂಗ್ತಾ ಬಂದಿದ್ದ ನೀಲವ್ವ ತಾರವ್ವ ಎಂದುಕಣ್ ಅಗಲಿಸಿ ಕೇಳ್ತಾನೋಡ್ತಾ ನಿಂತಿದ್ದ ನೋಡ್ತಾ ನಿಂತಿದ್ದ ಹಸಿದ ಹೊಟ್ಟೆ , ಸಪ್ಪೆ ಮಾರಿ ಮಾಡ್ಕೊಂಡುತಿನ್ನಕ ತಾರವ್ವ ತಂಗ್ಯವ್ವ ಎಂದುಕರಿತಾ ನಿಂತಿದ್ದ ಕರಿತಾ ನಿಂತಿದ್ದ ಪುಟ್ಟಿ ಪುಟ್ಟಿ ಹಣ್ಣು ಮಾರುವಾಗರೊಕ್ಕ ಕೊಟ್ಟು ಒಯ್ಯನದಿದ್ದ ಮಾವ ಇಂದುಕಿಸೆಲೀ ರೊಕ್ಕ ಇಲ್ಲದೆ ಬಾಯಿ ಚಪ್ಪರಿಸುತದ್ದಸೊಸೆ ಮುಂದೆ ಸೋತು ಕೇಳ್ತಿದ್ದ ಸೋತು ಕೇಳ್ತಿದ್ದ ಬಾ ಮಾವ ಏನು ಉಂಡಿ ಎಂದಾಗತೊಂಬ್ಲ ತಿಂದು ಬಂದಿನಿ ,ರುಚಿ ಕೆಟ್ಟ ಬಾಯಿಗಂಗಳದಲ್ಲಿ ಅಂಬಲಿ ಆದ್ರೂಕೊಡವ್ವ ಎಂದಿದ್ದ ಕೊಡವ್ವ ಎಂದಿದ್ದ ಹೇಗಿದಿಯಾ ಮಾವ ಎಂದಾಗನನ್ನ ಬದುಕು ನಾಟಕದ ಪಾತ್ರ ಆದಂಗಾಗಿದೆಹರೆದರಲ್ಲಿ ವಿಜೃಂಭಿಸಿದ ಜೀವಸತ್ವ ಕಳಕೊಂಡ ಕಲ್ಕಿ ಜಗ ಎಂದಿದ್ದ ಕಲ್ಕಿ ಜಗ ಎಂದಿದ್ದ ಇದ್ದು ಇಲ್ಲದಂಗಿರುವ ಜೀವ್ನ ಕಾಳು ಇದೆ ಕೂಳಿಲ್ಲಹಣದ ಹುಚ್ಚು ಹಿಡಿದ ಮನಸುಎಲ್ಲಾ ಇದ್ದು ಇಲ್ಲೆ ಸುತ್ತುತ್ತಿದೆ ಏನು ಇಲ್ಲದಂಗ ಎಂದುನಿಟ್ಟುಸಿರು ಬಿಟ್ಟಿದ್ದ ನಿಟ್ಟುಸಿರು ಬಿಟ್ಟಿದ್ದ ****
ಕವಿತೆ ವೀಣಾ ನಿರಂಜನರವರ ಕವಿತೆ ನಕ್ಷತ್ರಗಳನ್ನು ನೋಡುವಾಗನನ್ನ ಜೊತೆಗಿರುತ್ತಿದ್ದ ಅಕ್ಕ ತಂಗಿಯರುಈಗ ಖುದ್ದು ನಕ್ಷತ್ರವಾಗಿದ್ದಾರೆಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗಿನಕ್ಷತ್ರವಾಗಿ ಬಿಡುವವರ ಕುರಿತುನಾನೀಗ ಯೋಚಿಸುತ್ತಿದ್ದೇನೆ ಅಂಗಳದ ತುಂಬ ಚೆಲ್ಲಿದ್ದಮಲ್ಲಿಗೆಯ ಹೂಗಳನ್ನಾಯುತ್ತಿದ್ದವರುಹೂಗಳು ಬಾಡುವ ಮುನ್ನವೇಪರಿಮಳವ ಅಲ್ಲೇ ಬಿಟ್ಟುನಡೆದೇ ಬಿಟ್ಟರು ಸದ್ದಿಲ್ಲದೆಆ ಪರಿಮಳವಿನ್ನೂ ಹಾಗೇ ಇದೆನನ್ನ ಮನದೊಳಗೆ ರಾತ್ರಿ ನೀರವ ಮೌನದಲ್ಲಿಬಿಚ್ಚಿ ಕೊಳ್ಳುತ್ತಿದ್ದ ಬದುಕ ಕಟ್ಟುವಕನಸುಗಳು, ಪಿಸುಮಾತು, ನಸುನಗೆಹಾಡಾಗಿ ಹೊಮ್ಮುತ್ತಿದ್ದ ಭಾವಗಳುಎದೆಯ ದನಿಗೆ ರಾಗವಾಗುವ ಮುನ್ನವೇಸ್ವರಗಳ ಕಳಚಿಟ್ಟು ನಡೆದರು ಎಲ್ಲೋ ದೂರದಲ್ಲಿ ಪುಟ್ಟ ನಕ್ಷತ್ರಗಳಾಗಿಮಿನುಗುತ್ತಿರುವ ಈ ನನ್ನ ಜನಕಾಲ ಕಾಲಕ್ಕೆ ಸುರಿವ ಮಳೆಯಂತೆ,ಕಡಲ ಭೋರ್ಗರೆತದಂತೆಎಲೆ ಕಳಚಿ ಮರುಹುಟ್ಟುಪಡೆಯುವ ವೃಕ್ಷ ಸಂಕುಲದಂತೆಮರಳಿ ಬಾರರೆ… ಹೊತ್ತು ಮುಳುಗುವ ಮುನ್ನವೇತೆರೆದುಕೊಳ್ಳುವಹೊತ್ತೇರುವ ಮುನ್ನವೇಮರೆಯಾಗುವ ಈ ತಾರಾ ಲೋಕನಮ್ಮೊಳಗೊಂದು ಬೆಳಕಿನ ಕಿರಣಹಡೆದು ಬಿಡುವ ಸೋಜಿಗದಲ್ಲಿರುವೆನಾನೀಗ… ******
ವೀಣಾ ನಿರಂಜನರವರ ಕವಿತೆ Read Post »
ಅವಳ ಹಿತ ಬಯಸಿ ಒಲವ ಹನಿಸಿ
ಪೂಜಿಸುವ ಭಕ್ತೆ ನಾನು
ಕಲ್ಲಾಗಿ ದೂರದಲೆ ಉಳಿದು
ಕಾಣದಂತಿರುವ ಅಭಯ ಹಸ್ತ ಅವ
You cannot copy content of this page