ಕಾವ್ಯ ಸಂಗಾತಿ ತೀರವಿರದ ಕಡಲು ಅರುಣಾ ನರೇಂದ್ರ ಆಡದೇ ಉಳಿದ ಮಾತುಗಳು ನಿನ್ನ ನೆನಪಲ್ಲೇಕಳೆದು ಹೋಗುತ್ತೇನೆಸಾಗರವ ಸೇರಿದಹನಿಯಂತೆನಿನ್ನೊಳಗೆಒಂದಾಗಿ ಬಿಡುತ್ತೇನೆ ನನ್ನ ಕಾವ್ಯದಲ್ಲಿಓದುಗರ ಮನಸೂರೆಗೊಂಡುವಿಜೃಂಭಿಸುವಪದಗಳುಅದೇಕೊ ಕಾಣೆಅವನ ಹಿಂದೆ ಹಿಂದೆಅಲೆಯುತ್ತಿವೆನೆಲೆ ಇಲ್ಲವೆಂಬಂತೆ ದಿನ ರಾತ್ರಿ ನಾನುನಿದ್ರಿಸುವುದಿಲ್ಲನಿನ್ನ ಕುರಿತಾಗಿಭಗವಂತನೊಡನೆಮಾತಾಡುತ್ತಿರುತ್ತೇನೆಧ್ಯಾನಸ್ಥ ಸ್ಥಿತಿಯಲ್ಲಿ ಆಡದೆ ಉಳಿದಒಡಲ ಮಾತುಬೋರಾಡಿ ಅಳುತ್ತಿದೆಕಣ್ಣೀರಲ್ಲೇ ಮುಳುಗಿ ಮಿಂದುಹಸಿಯಾಗುವುದರಲ್ಲೇನಾಲಿಗೆ ಖುಷಿ ಕಾಣುತ್ತಿದೆ ಅರುಣಾ ನರೇಂದ್ರ
ನಡೀ….!!-ದೇವರಾಜ್ ಹುಣಸಿಕಟ್ಟಿ ಕವಿತೆ
ಕಾವ್ಯ ಸಂಗಾತಿ ನಡೀ….!!- ದೇವರಾಜ್ ಹುಣಸಿಕಟ್ಟಿ ಕವಿತೆ ನಡೀ ಇಡೀ ಜೀವನವನ್ನೇಅನಾಮತ್ತ ಎತ್ತಿಪ್ರೀತಿಯಾಗಿಸಿ ಬಿಡುವ…!ಬದುಕಿನ ಪ್ರತಿ ತಿರುವಿಗೆಸಿಗುವ ದುಃಖವನ್ನೇಸಿಂಗರಿಸಿ ಬಿಡುವ….!ದಾರಿಯ ಮುಳ್ಳನ್ನೇ ಎತ್ತಿಹೂವಾಗಿಸಿ ಬಿಡುವ….!! ನಡೀ ಶಿಕ್ಷೆಯೋ ವರವೋಅವನ ಭಿಕ್ಷೆಯೆಂದುನಂಬಿ ನಡೆದು ಬಿಡುವ..! ಭೂಮಿ ಮ್ಯಾಲ ಬಿದ್ದಮಳಿ ಹನಿ ಎಲ್ಲಮುತ್ತಾಗಬೇಕಿಲ್ಲ ಗೆಳತಿನಡೀ ಮೊಳೆಯೋ ಬೀಜಕ್ಕಜೀವ ಜಲವಾಗಿ ಬಿಡುವ…!! ನೆರೆತ ಗಡ್ಡ ಮುಪ್ಪಿನಕುರುಹಲ್ಲ ಈಗೀಗ ಫ್ಯಾಷನ್ಅಂತ ಗೊತ್ತಿಲ್ಲ ಮರಳ…..!!ನಡೀ ಬಿಳಿಯ ಕೂದಲಿಗೆ ಡೈಹಾಕಬೇಕಿಲ್ಲ ಹೃದಯದಿಂದಹರೆಯಕ್ಕೆ ಮರಳಿ ಬಿಡುವ…!! ಕರ್ತಾರನ ಕಮ್ಮಟವಂತೆಬದುಕು…!ಏನಾದರೂ ಒಂದುಮಾಡಲಿ ಬಿಡುನಡೀ ಅವ್ಹಾ ಬಯಸಿದಂತೆಇದ್ದು ಬಿಡುವ….!! ನನ್ನನ್ನೇ ನಾನು ಮರೆತರೆಏನೂ ಮರೆತಿಲ್ಲಎಂದು ಅರಿತು ಬಿಡುವ…!ನಿನ್ನ ಪ್ರೀತಿಯಲ್ಲಿ ದೇವರನ್ನೂಮರೆತರೇ ಮಾತ್ರ ನಡೀ ಅದನ್ನೇಪ್ರೀತಿಯೆಂದು ತಿಳಿದು ಬಿಡುವ…..!
ನಡೀ….!!-ದೇವರಾಜ್ ಹುಣಸಿಕಟ್ಟಿ ಕವಿತೆ Read Post »
ದಕ್ಕಿಸಿಕೊಂಡಂತೆ…
ಕಾವ್ಯ ಸಂಗಾತಿ ದಕ್ಕಿಸಿಕೊಂಡಂತೆ… ವಸುಂಧರಾ ಕದಲೂರು ಒಮ್ಮೆ ತಾಕಿಸಿಕೊಂಡ ಮೇಲೆಮುರಳಿ ಕೊರಳಾಗಿ, ವೀಣೆಇಂಪಾಗಿ ಮೃದಂಗ ಮೃದುವಾಗಿಪ್ರತಿ ಚಲನೆಯೂ ನಾದವಾಯಿತು ಒಮ್ಮೆ ಸೋಕಿಸಿಕೊಂಡ ಮೇಲೆಪರಾಗ ಹೂವಾಗಿ; ಹೂ ಹಣ್ಣಾಗಿಮರವಾಗಿ ಬೇರಾಗಿ, ಬೇರು ತಾಆಳದಲಿ ಮರೆಯಾಗಿ ಉಸಿರಾಯಿತು ಒಮ್ಮೆ ನಿನ್ನ ಎದೆಗೆ ಇಳಿಸಿಕೊಂಡಮೇಲೆ ಪ್ರತಿ ಮಿಡಿತ ಹಾಡಾಗಿ,ಸೊಗಸು ಕನಸಾಯಿತು; ಸಾಗದನನಸಾಗದ ಕನಸುಗಳು ನೆನಪಿಗೆಬಂದು ಸುಖಾಸುಮ್ಮನೆ ಬೇಸರಹೊತ್ತು ತಂದಿತು… ದಕ್ಕಿಸಿಕೊಂಡಂತೆ ದಿಕ್ಕುಗಳೂದಕ್ಕುವವು
ಗಜಲ್-ಎ . ಹೇಮಗಂಗಾ
ಕಾವ್ಯಸಂಗಾತಿ ಎ . ಹೇಮಗಂಗಾರಬರ ಗಜಲ್ ಭಾವಬಳ್ಳಿಗೆ ನೇಹದ ಜೀವಜಲ ಹನಿಸಿದ ನೆನಪಿಂದ ನೀ ಮರೆಯಾದೆಬಾಳ ಇರುಳಿಗೆ ನಲ್ಮೆ ಬೆಳಕನು ಹರಿಸಿದ ನೆನಪಿಂದ ನೀ ಮರೆಯಾದೆ ಭೂತದಾ ಭೂತ ಬೇತಾಳದಂತೆ ಹಗಲಿರುಳೂ ಕಾಡುತ್ತಲೇ ಇತ್ತುಕಣ್ಸನ್ನೆಯಲೇ ಕೆಂಪೇರಿಸಿ ನಕ್ಕು ನಗಿಸಿದ ನೆನಪಿಂದ ನೀ ಮರೆಯಾದೆ ನೀನಿಲ್ಲದ ನನ್ನಿರುವಿಕೆಗೆ ಅರ್ಥವೇ ಇಲ್ಲವೆಂಬ ಭ್ರಮೆ ಕಾಡಿತ್ತೇಕೆ ?ಕೊರಗಿ ನಲುಗಿದವಳ ಅಪ್ಪಿ ಸಂತೈಸಿದ ನೆನಪಿಂದ ನೀ ಮರೆಯಾದೆ ಸವೆಸಿದ ಮುಳ್ಳು ಹಾದಿಯ ಇನ್ನೆಂದೂ ಹಿಂತಿರುಗಿ ನೋಡಲಾರೆಸಿಹಿ ಮುತ್ತನಿತ್ತು ಕಹಿಯೆಲ್ಲ ಮರೆಸಿದ ನೆನಪಿಂದ ನೀ ಮರೆಯಾದೆ ಸಾವಿಗೆ ಬೆನ್ನು ತಿರುವಿ ಹೊಸ ಬದುಕ ಬದುಕಲು ಕಾತರಿಸಿದ್ದೇನೆಜೊತೆ ಇರುವೆನೆಂಬ ವಚನವ ಉಳಿಸಿದ ನೆನಪಿಂದ ನೀ ಮರೆಯಾದೆ ಅವನ ಅಖಂಡ ಪ್ರೀತಿ ಲೇಪನದಿ ಹೃದಯದ ಗಾಯಗಳು ಮಾಗಿವೆನಡೆ, ನುಡಿಯಲಿ ನಿಷ್ಠೆ ತೋರಿ ಮೆಚ್ಚಿಸಿದ ನೆನಪಿಂದ ನೀ ಮರೆಯಾದೆ ಕಾರಣವಿಲ್ಲದೇ ನಿರ್ದಯಿ ನೀ ತೊರೆದುದೇ ಹೇಮ ಳಿಗೆ ಒಳಿತಾಗಿದೆಸವಿ ದಾಂಪತ್ಯ ಬಂಧನದಿ ನನ್ನ ಬಂಧಿಸಿದ ನೆನಪಿಂದ ನೀ ಮರೆಯಾದೆ
ಗಜಲ್-ದೇವರಾಜ್ ಹುಣಸಿಕಟ್ಟಿ
ಕಾವ್ಯ ಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ
ಗಜಲ್-ದೇವರಾಜ್ ಹುಣಸಿಕಟ್ಟಿ Read Post »
ಉಸಿರು ಮೀರಿದ ಕವಿತೆ-ಮುತ್ತು ಬಳ್ಳಾ ಕಮತಪುರ
ಕಾವ್ಯ ಸಂಗಾತಿ
ಉಸಿರು ಮೀರಿದ ಕವಿತೆ
ಮುತ್ತು ಬಳ್ಳಾ ಕಮತಪುರ
ಉಸಿರು ಮೀರಿದ ಕವಿತೆ-ಮುತ್ತು ಬಳ್ಳಾ ಕಮತಪುರ Read Post »
ನವೋದಯ -ಜಯಲಕ್ಷ್ಮಿ ಎಂ.ಬಿ. ಕವಿತೆ
ಕಾವ್ಯಸಂಗಾತಿ
ನವೋದಯ
ಜಯಲಕ್ಷ್ಮಿ ಎಂ.ಬಿ.
ನವೋದಯ -ಜಯಲಕ್ಷ್ಮಿ ಎಂ.ಬಿ. ಕವಿತೆ Read Post »
ಭರವಸೆ ಸರೋಜಾ ಶ್ರೀಕಾಂತ್ ಅಮಾತಿ
ಕಾವ್ಯ ಸಂಗಾತಿ
ಭರವಸೆ
ಸರೋಜಾ ಶ್ರೀಕಾಂತ್ ಅಮಾತಿ
ಭರವಸೆ ಸರೋಜಾ ಶ್ರೀಕಾಂತ್ ಅಮಾತಿ Read Post »









