ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗುರುವೆಂಬ ಬೆಳಕಿಗೆ.ವಿಷ್ಣು ಆರ್. ನಾಯ್ಕ

ಕಾವ್ಯ ಸಂಗಾತಿ ಗುರುವೆಂಬ ಬೆಳಕಿಗೆ ವಿಷ್ಣು ಆರ್. ನಾಯ್ಕ ಬಾ.. ದೇವ…ಗುರುದೇವಹೇ ದೇವ…ಪ್ರಭು ದೇವನೀ ದೇವ ಕನಿಕರಿಸು, ನೀ ಬೇಗ ಬಾವಿದ್ಯೆ ಸಿರಿ ವರವನ್ನು ಕೊಡು ಬೇಗ ಬಾ ಆದರ್ಶದುಸಿರಾಗಿ, ಮುನ್ನಡೆವ ಪಥವಾಗಿಗೈದ ಕಾರ್ಯದ ಕನಸ ನನಸಾಗಿ  ಬಾ..ಮೈದಳೆದು ಗುರುವೇ ನೀ ವರವಾಗಿ ಬಾ.. ಮಕ್ಕಳೆನ್ನುವ ಬಳ್ಳಿ  ಹೂ, ಮೊಗ್ಗು, ಹಣ್ಣುಗಳುಅಕ್ಕರ ರೂಪದಿ ತೊನೆವ ಶಕುತಿ ಕೊಡು ಬಾ..ನಕ್ಕ ಮೊಗ್ಗಿಗೆ ಜೀವ ನೀ ತುಂಬು ಬಾ… ವಿದ್ಯೆಯೆಂಬ ಶುಭ್ರ ವಾರಿಧಿಯ ಮಧ್ಯದೊಳುಮದದ ಮತ ಮೌಢ್ಯವನೆಲ್ಲ ನೀ ನೀಗು ಬಾ..ಸಾಧನೆಯ ಸಮರಸವ  ನೀ ತೋರು ಬಾ.. ರಾಜಕೀಯದ ರಂಗು ಶಿಕ್ಷಣದಿ ತುಂಬಿರಲುರಾಜಸದ ಕೊಳೆಯನ್ನು ಕಳೆ ಬೇಗ ಬಾ..ಬಿಜ್ಜೆಯೊಳು ಸಜ್ಜನತೆ ನೀ ತುಂಬು ಬಾ.. ನೀತಿ ಮೌಲ್ಯಗಳನೆಲ್ಲ ಹೆಡೆಮುರಿಯ ಕಟ್ಟಿರುವರೀತಿ ರಾಕ್ಷಸರನ್ನು ನೀನಳಿಸು ಬಾ..ಭೀತ ಮನಗಳನೆಲ್ಲ ನೀ ಮುದಗೊಳಿಸು ಬಾ ಧನವೆಂಬ ದಾನವನ ದುಷ್ಕಾರ್ಯವಳಿಸುತಲಿಜನಕೆ ಘನ ವಿದ್ಯೆಯನು ನೀ ಹಂಚು ಬಾ..ಮನದಿ ಕಾಂತಿಯ ತುಂಬಿ ಜಗ ಬೆಳಗು ಬಾ ಚೇತನವನಿಕೇತನದ ವರವಾಗಿ ರೂಪಿಸುವಗತದ ಬದುಕಿಗೆ ನೀ ಬಲ‌ ನೀಡು ಬಾ..ಋತದ ಕಾರ್ಯದಿ ಜಗವ ನೀ ಕಟ್ಟು ಬಾ..

ಗುರುವೆಂಬ ಬೆಳಕಿಗೆ.ವಿಷ್ಣು ಆರ್. ನಾಯ್ಕ Read Post »

ಕಾವ್ಯಯಾನ

ಗುರು ಡಾ ದಾನಮ್ಮ ಝಳಕಿ ಕವಿತೆ

ಶಿಕ್ಷಕ ದಿನಾಚರಣೆ ವಿಶೇಷ ಗುರು ಡಾ ದಾನಮ್ಮ ಝಳಕಿ ಕಂದನ‌ ಕಲಿಕೆಗೆತಾಯಿಯೇ ಗುರು ವಿದ್ಯಾರ್ಥಿಯ ಕಲಿಕೆಗೆಶಿಕ್ಷಕನೇ ಗುರು ಕಾರ್ಮಿಕನ‌ ಕಲಿಕೆಗೆಕೌಶಲ್ಯವೇ ಗುರು ರೈತನ‌ ಕಲಿಕೆಗೆನಿಸರ್ಗವೇ ಗುರು ಸೈನಿಕನ ಕಲಿಕೆಗೆತರಬೇತಿಯೇ ಗುರು ವಿಜ್ಞಾನಿಯ ಕಲಿಕೆಗೆತಂತ್ರಜ್ಞಾನವೇ ಗುರು ಆತ್ಮದ ಜ್ಞಾನಕ್ಕೆಅರಿವೇ ಗುರು ಅಂತರಂಗ ಬಹಿರಂಗಕ್ಕೆಶರಣರ ಅನುಭಾವವೇ ಗುರು ಗುರು ಜಂಗಮ ದಾಸೋಹಕ್ಕೆಬಸವಣ್ಣನೇ ಗುರು

ಗುರು ಡಾ ದಾನಮ್ಮ ಝಳಕಿ ಕವಿತೆ Read Post »

You cannot copy content of this page

Scroll to Top