ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ಆತ್ಮ ಸಾಕ್ಷಿ” ಅಂತರಾಳದಲ್ಲಿ ಮೃದು ಧ್ವನಿ ಮಿಡಿಯುತ್ತಅದು ಶಬ್ದವಲ್ಲ,ಆದರೂಎಲ್ಲ ಶಬ್ದಗಳಿಗಿಂತ ಗಟ್ಟಿಯಾದ ಸತ್ಯ.ಕತ್ತಲೆಯೊಳಗೆ ದೀಪವಾಗಿದಾರಿತಪ್ಪಿದ ಹೆಜ್ಜೆಗಳಿಗೆ ದಿಕ್ಕುತೋರಿಸುವದಲೋಕದ ಕಣ್ಣಿಗೆ ಕಾಣದಿದ್ದರೂಒಳಗಿನ ಕಣ್ಣಿಗೆ ಸ್ಪಷ್ಟವಾಗಿಗೋಚರಿಸುವ ಶಕ್ತಿ ನಟನೆಯ ಮುಖವಾಡಗಳ ಮಧ್ಯೆನಗುವಿನ ಹಿಂದೆ ಅಡಗಿದ ನೋವನ್ನುಮೌನವಾಗಿ ಓದುವ ಆತ್ಮಸಾಕ್ಷಿ, ಸುಳ್ಳಿನ ಹೊಳಪವಿನೊಳಗಿನಖಾಲಿತನವನ್ನು ನೋಟದಲ್ಲೇ ಗುರುತಿಸುತ್ತಯಶಸ್ಸಿನ ಶಿಖರದಲ್ಲಿದ್ದಾಗಮೃದುವಾಗಿ ಪ್ರಶ್ನಿಸುತ್ತ“ಈ ಗೆಲುವು ನಿನ್ನದೇನಿನ್ನ ಮೌಲ್ಯಗಳನ್ನುಸೋಲಿಸಿದ ಬೆಲೆಯಾ?ಸೋಲಿನ ನೆಲದಲ್ಲಿ ಕುಳಿತಾಗತಾಯಿ ಹಸ್ತದಂತೆತಲೆಯ ಮೇಲೆ ಕೈ ಇಟ್ಟು“ನೀನು ತಪ್ಪಲಿಲ್ಲ,ನಿನ್ನ ಉದ್ದೇಶ ಪವಿತ್ರವಾಗಿತ್ತು”ಆಶ್ವಾಸನೆ ನೀಡುವದು.ಸಮಯದ ಹೊಡೆತಗಳಿಗೆಅದು ಎಂದೂ ಜರಿಯುವುದಿಲ್ಲ,ಪರಿಸ್ಥಿತಿಗಳ ಒತ್ತಡಕ್ಕೆಅದು ಮೌನವಾಗುವುದಿಲ್ಲ.ತಾಳ ತಪ್ಪಿದಾಗನಿದ್ರೆಯಲ್ಲೂ ಕಾಡುವದುಸರಿ ಮಾಡಿದಾಗನಿಶ್ಚಿಂತೆ ಎಂಬ ಹೂವನ್ನಿಟ್ಟುಹೃದಯವನ್ನು ಹಗುರಗೊಳಿಸುವದು.ಲೋಕದ ನ್ಯಾಯಾಲಯಗಳುಸಾಕ್ಷ್ಯ ಕೇಳಬಹುದು,ಆದರೆಆತ್ಮಸಾಕ್ಷಿಉದ್ದೇಶವನ್ನ ತೂಕ ಹಾಕುತ್ತದೆ.ಅದಕ್ಕೆ ಅಲಂಕಾರ ಬೇಡ,ಪ್ರಶಂಸೆಯ ಅಗತ್ಯವಿಲ್ಲ,ಸತ್ಯವೇ ಅದರ ಉಸಿರು,ನೈತಿಕತೆಯೇ ಅದರ ಆಭರಣ.ಎಲ್ಲವೂ ಮೌನವಾದಾಗ,ಹೆಸರು, ಹುದ್ದೆ, ಗುರುತುಗಳೆಲ್ಲಕರಗಿದಾಗನಮ್ಮ ಜೊತೆಯಲ್ಲಿ ಉಳಿಯುವದುಈ ಮೌನದ ಸ್ನೇಹಿತ ಆತ್ಮಸಾಕ್ಷಿ._______________________ ಡಾ ತಾರಾ ಬಿ ಎನ್ ಧಾರವಾಡ