ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ‌ ಅವರ ಕವಿತೆ “ನಿನ್ನೀಮೌನ”

ಕಾವ್ಯಸಂಗಾತಿ ಕಲ್ಪನಾ ಎಸ್ ಪಾಟೀಲ‌ “ನಿನ್ನೀಮೌನ” ನೀ ತಾಳಿದ ಮೌನವು ಮಾತಿಗಿಂತ ಆಳವಾದ ಭಾಷೆ ನನಗಾಗಿದೆನನ್ನದೆ ಆಗಿದೆ ಸಖ ಅದನರಿವ ಆಸೆ ಅದು ಈ ಮನದೊಳಗೆ ಎದ್ದಿಹ ಸಾಗರದಲೆಗಳಶಾಂತಗೊಳಿಸುತ್ತಿದೆ ಶಬ್ದಕೆ ನಿಶ್ಯಬ್ಧವ ಕಲಿಸುತ್ತಿದೆ ಶಬ್ದಗಳು ನಿಂತಾಗ ಮೌನದೊಳಡಗಿದ ಅರ್ಥಗಳುಉಸಿರಾಡುತ್ತಿವೆ ಎಣಿಸಲು ತಪ್ಪುತ್ತಿಹ ಸಾಲುಗಳು ನಿನ್ನ ಕಣ್ಣಿನ ನೋಟವೇ ಕಥೆಯಾಗಿ ಹರಡುತ್ತದೆಎಂದೂ ಮಾಸದ ನೋವಿಗೆ ಆ ಮೌನವು ಮದ್ದಾಗಿದೆ ನನ್ನ ಸಂತೋಷಕ್ಕೂ ಸೌಮ್ಯ ವಸಂತವೂ ಹೌದುಗದ್ದಲದ ನಡುವೆ ಮೌನ ದೀಪದಂತೆ ಹೊಳೆವುದು ಹೃದಯದ ಸ್ಪಂದನಗಳನ್ನು ಕೇಳಲು ಕಲಿಸುತ್ತಿದೆಪ್ರಕೃತಿಯ ಪಾಠ ಮೌನದಲ್ಲೇ ಬರೆಯಲ್ಪಟ್ಟಿದೆ ಮರಗಳು ನದಿಗಳು ಸಹ ಅದನ್ನೇ ಜಪಿಸುತ್ತಿವೆಮೌನದಲ್ಲಿ ಆತ್ಮ ತನ್ನನ್ನು ತಾನು ಕಂಡುಕೊಳ್ಳುತ್ತಿದೆ ಅಹಂಕಾರ ಕರಗುವ ಕ್ಷಣವೂ ಅದೇ ಆಗಿದೆಮಾತುಗಳು ತಪ್ಪಿದಾಗ ಮೌನ ಸತ್ಯವ ಹೇಳುತ್ತಿದೆ ಕೋಪವ ಶಮನಗೊಳಿಸಿ ಬುದ್ಧಿಯ ಬೆಳಗಿಸುತ್ತಿದೆಮೌನವೇ ಶಕ್ತಿ ಮೌನವೇ ಶಾಂತಿ ಮೌನದಲೆ ಹೇಳಿದೆ ಮೌನದಲ್ಲಿ ಜೀವನ ತನ್ನ ಅರ್ಥವನ್ನು ಪತ್ತೆಹಚ್ಚುತ್ತಿದೆಆ ಜೀವನದ ಜೀವ ಸಖ ನೀನಾಗಿಹೆ ಎಂದೆ ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ‌ ಅವರ ಕವಿತೆ “ನಿನ್ನೀಮೌನ” Read Post »

ಕಾವ್ಯಯಾನ

ದೇವರಾಜ್ ಹುಣಸಿಕಟ್ಟಿ ಅವರ ಕವಿತೆ “ಮೂಡಬಹುದು ದೇವರು..”

ಕಾವ್ಯ ಸಂಗಾತಿ ದೇವರಾಜ್ ಹುಣಸಿಕಟ್ಟಿ “ಮೂಡಬಹುದು ದೇವರು..” ಹರೆಯದ ಕೈ ಗೊಂಬೆ..ಮೊನ್ನೆ ಮೊನ್ನೆಯಿಂದಅಂಗೈಯಲಿ ಆಡುತಿದೆ.. ಬಾಲ್ಯದಲಿ ಅಪ್ಪ ಕೊಡಿಸಿದ ಗೊಂಬೆ.. ಈಗ ಆಡಿಲ್ಲ..ಈಗೀಗ ಈ ಗೊಂಬೆ ಜೊತೆಗೆ ಆಡದಿರಲಾಗುವುದಿಲ್ಲ.. ಅರಸುತ್ತ ಹೆಜ್ಜೆ ಹೆಜ್ಜೆಗೂಕನಸುತ್ತ ಇರುಳಿರುಳಿಗೂಅರಳುವ ಮುದುಡುವಾಟದಲಿ…ತಲ್ಲಿನವಾಗಿ… ಆಗಸದ ನೆರಳುಸಾಗರದ ಅಲೆಗಳ ಮೇಲೆಮೂಡದಂತೆ ಒಂದೊಂದೇ..ನೀಲಿ ಚಿತ್ರಗಳು ತೆರೆದುಕೊಳ್ಳುತ್ತವೆ..ಕಣ್ಣು ತಟದಲಿ…ಬೆತ್ತಲಾದ ಚಿತ್ರಗಳು ಅಲೆಗಳಂತೆ..ದಡಕ್ಕೆ ಚಿಮ್ಮಿ ಮರಳುತ್ತವೆ..ಮತ್ತೊಂದು ಸರದಿಗೆ..ಕಾಯುತ್ತ ಕನಸುವವರೆಗೆ…ಮನದ ಪಟದಲಿ… ಒಂದೊಂದು ಆಟಕೂಮೋಜಿನ ಮಂಪರು…ಆರ್ಭಟ ಯುದ್ದೋನ್ಮಾದ..ಅರೆಗಳಿಗೆ..ಅಗ್ನಿ ಪರ್ವತ ದಿಂದಲಾವಾರಸ ಚಿಮ್ಮಿ ಹಾಗೆ.. ಹೊರಗೆ…ಬರಿದಾಗುವವರೆಗೆ.. ಆಗಾಗ ಲೊಮ್ಮೆ ಅಪರೂಪಕ್ಕೆರಕ್ತ ಚಂದನದಿ ಸ್ನಾನ ಮಾಡಿದ ಗರ್ಭ ಗುಡಿಯ ಹೊಕ್ಕು ಬರುವುದೂ ಇದೆ ಗೊಂಬೆ… ಅಲ್ಲಿ ಆಗ ಮೂಡಬಹುದು ದೇವರು..! ದೇವರಾಜ್ ಹುಣಸಿಕಟ್ಟಿ

ದೇವರಾಜ್ ಹುಣಸಿಕಟ್ಟಿ ಅವರ ಕವಿತೆ “ಮೂಡಬಹುದು ದೇವರು..” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿಯವರ ಕವಿತೆ “ಹೀಗಿರಲಿ ಬದುಕು”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಹೀಗಿರಲಿ ಬದುಕು” ಹೀಗಿರಲಿ ಬದುಕುಬಯಕೆಗಳ ಹೊರೆ ಹೊತ್ತುಸಾಗುವ ದಾರಿಯಲಿನನಸಾಗುವ ಕನಸುಗಳಿರಬೇಕು ಮನದ ಗೂಡಿನಲ್ಲಿಗೆಲುವಿನ ಹೆಜ್ಜೆ ಹಾಕುತ್ತಬಾನೆತ್ತರಕ್ಕೆ ಬೆಳೆಯಬೇಕು ಸೋಲು ಗೆಲುವಿನ ನಡುವೆಸವಾಲುಗಳ ಸೇತುವೆ ಕಟ್ಟಿಸಂತಸದಿ ಸಾಗಬೇಕು ಭಾವಗಳ ಬೆಸೆಯುತ್ತಹೊಸತನವ ಅರಸುತ್ತನಸುನಗುತ ನಲಿಯಬೇಕು ಸದ್ದಿಲ್ಲದೆ ಸಾಧಿಸುತಸುದ್ದಿಯಾಗಿ ಸಂಭ್ರಮಿಸಿಗದ್ದಲವಿಲ್ಲದೆ ಗದ್ದುಗೆ ಏರಬೇಕುಡಾ. ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿಯವರ ಕವಿತೆ “ಹೀಗಿರಲಿ ಬದುಕು” Read Post »

ಕಾವ್ಯಯಾನ

“ನನ್ನೊಳಗಿನ ನಾನು” ಸುಧಾ ಪಾಟೀಲ್

ಕಾವ್ಯ ಸಂಗಾತಿ ಸುಧಾ ಪಾಟೀಲ್ “ನನ್ನೊಳಗಿನ ನಾನು”   ನಾನೇ ನಗೆ, ನಾನೇ ಅಳುವ ನಿಶಬ್ದ ರಾತ್ರಿ ನಾನೇ  ಕತ್ತಲು ನಾನೇ ಬೆಳಕಿನ ಪಾತಿ ಹೊರಗಿನ ಹಾದಿಯಲಿ ನಾನು ಬೇರೆಯವರಂತೆ ಆದರೆ ಒಳಗಿನ ನಾನು ಇನ್ನೂ ಹುಡುಕುತ್ತಿರುವೆ  ಮನದ ಕಿಟಕಿಯಲಿ ಮೌನ ನಿಂತಿದೆಅಲ್ಲಿ ಹಳೆಯ ಕನಸು ಒಂದೇ ನಗುತ್ತಿದೆ ಹೃದಯದ ಕಣ್ಣಿನಲ್ಲಿ ಕಾಣುವ ಪ್ರತಿಬಿಂಬ  ಅದು ಯಾರು ? ನಾನೋ ?  ಇಲ್ಲ,  ನನ್ನೊಳಗಿನ  ನಾನು  ಒಮ್ಮೆ ಭಯ ಒಮ್ಮೆ ಧೈರ್ಯ ಒಮ್ಮೆ ಅಳಲು ಒಮ್ಮೆ ನಗುಈ ಎರಡರ ನಡುವಿನ ಸೇತುವೆಯಲಿನಾನೇ ನಿರ್ಮಾಪಕ ನಾನೇ ಸಂಚಾರಿ  ಹೊರಗಿನ ಲೋಕ ಬದಲಾದರೂ ಪರವಾಗಿಲ್ಲ ಒಳಗಿನ ನಾನು ಅರಳಬೇಕು ಅದು ನಿಜವಾದ ಸ್ವಾತಂತ್ರ್ಯಅದು ನಿಜವಾದ ಜೀವ ನಾದ ಸುಧಾ ಪಾಟೀಲ

“ನನ್ನೊಳಗಿನ ನಾನು” ಸುಧಾ ಪಾಟೀಲ್ Read Post »

ಕಾವ್ಯಯಾನ, ಗಝಲ್

“ಗಜಲ್‌ ಜುಗಲ್‌ ಬಂದಿ”ಅರುಣಾ ನರೇಂದ್ರ ಮತ್ತು ವೈ ಎಂ ಯಾಕೊಳ್ಳಿ

ಕಾವ್ಯ ಸಂಗಾತಿ “ಗಜಲ್‌ ಜುಗಲ್‌ ಬಂದಿ” ಅರುಣಾ ನರೇಂದ್ರ ವೈ ಎಂ ಯಾಕೊಳ್ಳಿ ಬಾಡದ ಹೂವ ಕಿತ್ತೆಸೆಯಬಹುದೇ ಮುಡಿಯಿಂದ ತೆಗೆದುಜಿಗಿತ ಪ್ರೀತಿ ಚಿವುಟಿ ಒಗೆಯಬಹುದೇ ಎದೆಯಿಂದ ತೆಗೆದು ಹೆಣ್ಣು ಮಣ್ಣು ಹೊನ್ನಿ ಗಾಗಿ ನೆತ್ತರು ಹರಿದಿದೆ ಈ ಭೂಮಿ ಮೇಲೆನೋವಾಯಿತೆಂದು ಕರುಳ ಕಿತ್ತು ಹಾಕಬಹುದೇ ಒಡಲಿಂದ ತೆಗೆದು ಗಿಡದಲ್ಲಿ ಅರಳಿದ ಹೂವಿಗಿಂತ ಕೃತಕ ಹೂಗಳೆ ಚಂದ ತೋರುತ್ತವೆಬೆಂಕಿ ಸುಟ್ಟಿತೆಂದು ದೀಪವನು ಗಾಳಿಗಿಡಬಹುದೇ ಒಳಗಿಂದ ತೆಗೆದು ಇಲ್ಲಿ ಮುಖವಾಡಗಳೇ ಮಾತಾಡುತ್ತಿವೆ ಯಾವುದನ್ನು ನಂಬುವುದು ಸತ್ಯ ಕಹಿಯೆಂದು ಸುಳ್ಳನ್ನೇ ಮೆರೆಸಬಹುದೇ ಪಾಪದಿಂದ ತೆಗೆದು ಅವ ಇಟ್ಟಂತೆ ಇರಬೇಕು ನಾವೆಲ್ಲ ಇರುವಷ್ಟು ದಿನ ನಗು ನಗುತ ಮೌನವಾದ ಅರುಣಾಗೆ ಮೂಗಿ ಅನ್ನಬಹುದೇ ಯಾದಿಯಿಂದ ತೆಗೆದು —- ಎದೆಯ ಮಾತನು ಬಿಚ್ಚಿ ಆಡಬಹುದೇ ಆಳದಿಂದ ತಗೆದುಮೂಡಿದ ಒಲವನು ತೊರೆಯಬಹುದೇ ಎದೆಯಿಂದ ತಗೆದು ಜಾತಿ‌ಮತ ಪಂಥಗಳ ಹೆಸರಲ್ಲಿ ಉಸಿರಾಡುತ್ತಿದೆ ಜಗವುಮನುಜ‌ಮತ ಉಳಿಯಬಹುದೇ ಮೋಸದಿಂದ ತಗೆದು ಒಡಲ ಕೂಸೆ ಒಮ್ಮೊಮ್ಮೆ ದೂರ ವಾಗಬಹುದು ಮರೆತುಕರುಳ ಕುಡಿಯನು ದೂರ ತಳ್ಳಬಹುದೆ ಸಿಟ್ಟಿನಿಂದ ತಗೆದು ತೋರಿಕೆಯ ಮಾತುಗಳು ಆಡಂಬರದ ಆಟಗಳು ಮೆರೆಯುತ್ತಿವೆಕೃತ್ರಿಮತೆಯೆದುರು ನಿಜ ಮರೆಸಬಹುದೆ  ಹುಸಿಯಿಂದ ತಗೆದು ಲೋಕವನಾಳುವ ಮಾಲೀಕನೊಬ್ಬ‌ ಮೇಲಿಹನು ಜೋಗಿಅವನ ತಕ್ಕಡಿಯಲ್ಲಿದೆ ನಮ್ಮ ಆಟ ಗೆಲ್ಲಬಹುದೆ ತಂತ್ರದಿಂದ ತಗೆದು ಡಾ ವೈ ಎಮ್ ಯಾಕೊಳ್ಳಿ

“ಗಜಲ್‌ ಜುಗಲ್‌ ಬಂದಿ”ಅರುಣಾ ನರೇಂದ್ರ ಮತ್ತು ವೈ ಎಂ ಯಾಕೊಳ್ಳಿ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ನೀಲಿ ಆಕಾಶ – ನೀನೇ ನನ್ನ ಹಾಡು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ನೀಲಿ ಆಕಾಶ – ನೀನೇ ನನ್ನ ಹಾಡು” ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯ ಹೇಳಿದೆನಿನ್ನ ನನ್ನ ಪ್ರೀತಿಯ ಹಾಡು. ನಿನ್ನ ಕಣ್ಣೊಳಗೆನೋಡುವ ಕನಸು,ನನ್ನ ಉಸಿರಲ್ಲೇನಿನ್ನ ಸುಗಂಧದ ಸೊಗಸು. ಎದೆ ಬಡಿತ ಎನ್ನುವಹೃದಯದ ಸದ್ದು,ಪ್ರತಿ ಕ್ಷಣ ಹೇಳುತ್ತದೆಪ್ರೀತಿ ಒಂದು ಮದ್ದು. ಓ ನಲ್ಲೆ, ನೀನುಆ ತೀರದ ನಕ್ಷತ್ರ,ನಾನು ಈ ತೀರದಒಂಟಿ ಯಾತ್ರಿಕ.ನಡುವೆ ನದಿ ಹರಿಯುತ್ತದೆಜುಳು ಜುಳು ಧ್ವನಿ,ನಿನ್ನ ನೆನಪಲ್ಲಿನಿಂತುಹೋಗುತ್ತದೆ ನನ್ನ ಪಯಣ. ಸುಪ್ರಿಯಾ, ನಾನುದೂರದಲ್ಲಿದ್ದರೂ,ನಿನ್ನ ಧ್ವನಿಯಲ್ಲೇಹತ್ತಿರವಾಗುತ್ತೇನೆ ನೋಡು.ನೀನು “ಬಾ ನಲ್ಲ” ಎಂದರೆಹೃದಯ ನಗುತ್ತದೆ,ಕೇಳಿಸದ ಮಾತನ್ನೂಮನಸ್ಸು ಅರಿತುಕೊಳ್ಳುತ್ತದೆ. ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯದಲ್ಲಿನೀನೇ ಆ ಪ್ರೀತಿಯ ಹಾಡು. ನೀಲಿ ಆಕಾಶದ ಮೋಡಎಲ್ಲಿ ಮಳೆಯಾಗುತ್ತವೋ,ನನ್ನ ಕಣ್ಣಿನ ಮೋಡನಿನ್ನ ನೆನಪಲ್ಲೇ ಕರಗುತ್ತವೋ.ಸ್ವಪ್ನದಲ್ಲಿ ಬಂದವನೇಮೌನದ ಸಂಗೀತ,ನಿನ್ನ ಸ್ಪರ್ಶವೇಮನಸ್ಸಿಗೆ ಸಿಹಿ ಸಂಪ್ರಿತ ಕೋಗಿಲೆ ಕೂಗುವಾಗನಿನ್ನ ನೆನಪು,ನಿನ್ನ ನಗುವೇನನ್ನ ಬದುಕಿನ ಹೊನಪು ನಿನ್ನ ಮಾತು ಕೇಳಿದರೆಮರೆತುಹೋಗುತ್ತದೆ ನೋವು,ನಿನ್ನ ಪ್ರೀತಿ ಸಾಕುನನ್ನ ಜೀವನದ ಔಷಧಿ ಅದು. ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯದಲ್ಲಿನೀನೇ ಆ ಪ್ರೀತಿಯ ಹಾಡು. ಸಮುದ್ರದ ಮುಂದೆ ನಿಂತುಅಲೆಗಳನ್ನು ನೋಡಿದರೆ,ನಿನ್ನ ಭಾವನೆಗಳುಅಲೆ ಅಲೆಯಾಗಿ ಬರುವುದು ನನಗೆ. ದೂರದಲ್ಲಿದ್ದರೂ ನೀನುಹತ್ತಿರವೇ ಕಾಣಿಸುವೆ,ನನ್ನ ಮನಸ್ಸಿನೊಳಗೆಪ್ರತಿ ಕ್ಷಣ ನಗಿಸುವೆ. ಮರೆಯಲು ನೋಡಿದರೂಮರೆಯಲಾಗದ ಕಮಾನು,ಬಣ್ಣದ ಚಿಟ್ಟೆಗಳಂತೆಮನಸಲ್ಲಿ ಹಾರಾಡು ನೀನು. ಕಾಲ ತಿರುಗಿದರೂಪ್ರೀತಿ ತಿರುಗದು,ಉಸಿರು ಇರುವವರೆಗೆಈ ಬಾಂಧವ್ಯ ಮುರಿಯದು.ಮತ್ತೊಂದು ಜನ್ಮ ಬಂದರೂಮತ್ತೆ ನೀನೇ ಸಾಕು,ಪ್ರೀತಿಯ ಹಾಡಾಗಿಯೇನಮ್ಮ ಕಥೆ ಇರಬೇಕು. ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯದಲ್ಲಿನೀನೇ ನನ್ನ ಜೀವದ ಹಾಡು. ಕೊನೆಯ ಉಸಿರಿರುವವರೆಗೆಹೇಳುತ್ತೇನೆ ನಿನ್ನ ಹೆಸರು,ನೀನು ಎಲ್ಲಿದ್ದರೂನನ್ನ ಪ್ರೀತಿ ನಿನ್ನತ್ತಲೇ ಹರಿದು ಹೋಗು. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ನೀಲಿ ಆಕಾಶ – ನೀನೇ ನನ್ನ ಹಾಡು” Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ “ನೀ ನನಗೆ ನಾ ನಿನಗೆ”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ ನೀ ನನಗೆ ನಾ ನಿನಗೆ” ದತ್ತ ಪದ :- ಪ್ರಿಯ ನೀ ನನಗಾಗಿ..ಶೀರ್ಷಿಕೆ:- ನೀ ನನಗೆ ನಾ ನಿನಗೆ ನಿನಗೆಂದೆ ಕಾಯ್ದು ಕುಳಿತೆ ಆ ಇರುಳಲಿಮಾಮರವು ಜೊತೆಯಾಗಿ ಮೌನದಲಿಬಂದೆ ಬರುವನೆಂಬ ಭರವಸೆ ಮನದಲಿನೀ ಕೊಟ್ಟ ಮಾತು ನೆನೆದು ನಗುತಲಿ ಪ್ರಿಯ ನೀ ನನಗಾಗಿ ಮೊಳ ಮಲ್ಲಿಗೆಯತಂದೆ ತರವೆ ಎನ್ನುವ ಆಸೆಯತರದೆ ಇದ್ದರೆ ತೋರೆ ನಾ ನಿರಾಸೆಯಬಲ್ಲೆ ನಾ ನಿನ್ನ ಅಂತಃಕರಣದ ಪ್ರೀತಿಯ ತೇಲಿದೆ ಮನ ನಿನ್ನ ನಾಮವ ಆಲಿಸೆಹಾರಿದೆ ಹಕ್ಕಿಯಾಗಿ ಆಗಸ ಚುಂಬಿಸೆಬಲ್ಲೆ ಏನು ಮಿಡಿವ ಹೃದಯದ ಒತ್ತಾಸೆಆಗುವಾಸೆ ನಿನ್ನ ಮಡಿಲೊಳು ನಾ ನಿನ್ನ ಕೂಸೆ ನೀ ನನಗೆ ನಾ ನಿನಗೆ ಜೊತೆಯಾಗುವದುಂಬಿಯಂತಾಗಿ ಮಕರಂದ ಹೀರುವಹೊಸೆದು ಬೆಸೆಯೋಣ ಮಧುರ ಬಂಧವಬೆರೆಯೋಣ ಮರೆತು ಈ ಜಗವ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ “ನೀ ನನಗೆ ನಾ ನಿನಗೆ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಹೂವೆಂದು ಕೈಗೆತ್ತಿಕೊಂಡೆ ಮುಳ್ಳಾಗಿ ಚುಚ್ಚಿತುಬಳ್ಳಿಯೆಂದು ನೀರೆರೆದೆ ಹಾವಾಗಿ ಮೇಲೆರಗಿತು!! ಹೇಗೆ ತೋರಲಿ? ಹಸಿಯಾದ ಹೃದಯದ ಗಾಯವನುಕರುಣೆಗಾಗಿ ಕೈಮುಗಿದೆ ಕಠೋರವಾಗಿ ಎದೆಗಿರಿಯಿತು!! ನಂಬಿಸಿ ಅನಾಯಾಸವಾಗಿ ಗಿಚ್ಚಬಹುದೇ ಹೀಗೆ ಮುತ್ತಿಟ್ಟು ಕೆನ್ನೆಯನು,ಗಲ್ಲವನು ಜೋರಾಗಿ ಕಿರುಚಿ ಹೇಳಿದೆ..ಕಿವುಡಾಗಿ ಕಚ್ಚಿತು!! ಮಾಯಾವಿ ಮಾತುಗಳು ಮನಸ್ಸಿಗಿಳಿದವು..ಈ ಯುದ್ಧ ಸಾಕು ಬೇಡವೆಂದೇ,ಮೋಹವಾಗಿ ಪಾಶವಾಯ್ತು!! ದೀಪಾವಳಿಯ ರಾತ್ರಿ ಕತ್ತಲೆಯಿತ್ತು..ಬೆಳಕಿನ ಜೊತೆ ಸರಸಬೇಡವೆಂದೇ..ಬೀಜವಾಗಿ  ಸಸಿಯಾಯಿತು!! ಬಾಳ ಕದ್ದವನಿನ್ನೂ ಸಿಕ್ಕಿಬಿದ್ದಿಲ್ಲಾ,,ಬಗಲಲ್ಲಿ ಕಂದ ನಗುತ್ತಿಲ್ಲಾಹುಡುಕಾಡಿದೆ ಬದುಕೇ ಮರಳುಗಾಡಾಗಿ ಭಾಸವಾಯ್ತು!! ಮರುಕವಷ್ಟೇ ಹುಟ್ಟೀತು,ನಷ್ಟವನು ಯಾವುದರಿಂದ ತುಂಬಲಿ ಜಯ?ಅಮೃತವೆಂದು ಸೇವಿಸಿದೆ ವಿಷವಾಗಿ ಕೊಂದಿತು!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಬಹುಮಾನ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಹುಮಾನ” ಸದ್ದು ಗದ್ದಲವಿಲ್ಲದಪ್ರಸಿದ್ಧಿ ಪ್ರಚಾರವಿಲ್ಲದಗಟ್ಟಿ ಜೀವಹಲವು ಕನಸುನಿತ್ಯ ಪಯಣಹೆಜ್ಜೆ ಹಾಕುವುದುನಿಂತಿಲ್ಲ ಸೋಲೋ ಗೆಲುವೋಗೊತ್ತಿಲ್ಲಅಳುಕು ಆತಂಕಆನಂದ ಐಸಿರಿಎಲ್ಲವೂ ವಿಧಿಯಾಟನಡೆದ ದಾರಿಯಶ್ರಮ ದೂರಸಂತೃಪ್ತಿ ಮೌನನನ್ನ ನಿನ್ನಯಪ್ರೀತಿ ಬಹುಮಾನ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಬಹುಮಾನ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಕವಿತೆ “ಬಚ್ಚಿಟ್ಟ ಬಯಕೆ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಬಚ್ಚಿಟ್ಟ ಬಯಕೆ” ಎದೆಯ ಗೂಡಿನಲ್ಲಿತುಂಬಿ ತುಳುಕುವಬಚ್ಚಿಟ್ಟ ಬಯಕೆಗಳನುಬಿಚ್ಚಿಡುವ ಆತುರ ಮನದ ಆಲಯದಲ್ಲಿಹುದುಗಿದ್ದ ಅದೆಷ್ಟೋಆಕರ್ಷಣೆಗಳ ಸೆಳೆತಕೆತೆರೆದುಕೊಳ್ಳುವ ಕಾತುರ ಮುಗಿಯದಷ್ಟು ಮಾತುಗಳುಮನದಾಳದಲ್ಲಿ ಮೊಳೆತಿವೆಚಿಗುರೊಡೆವ ಬಯಕೆಗೆಕನಸುಗಳು ಸಾವಿರ ಮಾತುಗಳು ಮೌನವಾಗಿಮೌನದಲ್ಲೇ ಹರಿಸಿ ಹಾರೈಸಿಸ್ಪಂದಿಸುವ ಜೀವಕ್ಕೆನೆನಪುಗಳ ನಿರಾಳತೆ ಮಧುರ ಕಾಣದ ಕಡಲನುಸೇರುವ ಕಾತುರಅಬ್ಬರದ ಅಳೆಗಳನ್ನುಅಪ್ಪಿಕೊಳ್ಳುವ ಅವಸರ ಆಕಾಶದ ನೀಲಿಗೆಕಾರ್ಮೋಡಗಳ ತೋರಣಇಳೆಗೆ ಮಳೆಯ ಸಿಂಚನಸೇರಲು ಮಾನಸ ಸರೋವರ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಕವಿತೆ “ಬಚ್ಚಿಟ್ಟ ಬಯಕೆ” Read Post »

You cannot copy content of this page

Scroll to Top