ಗಾಂಧಿ ವಿಶೇಷ ಗಾಂಧಿ ಮತ್ತು ನಾವು ನೀನು ನಶೆಯಲ್ಲಿ ಬಿದ್ದುದು ಒಂದೇ ಸಲಮೇಲೆದ್ದೆ ಇನ್ನೆಂದೂ ಬೀಳದ ಹಾಗೆ….ಸಾಮಾನ್ಯತೆಯಿಂದ ಏರಿದೆ ಅಸಾಮಾನ್ಯತೆಯೆಡೆಗೆಆತ್ಮಶಕ್ತಿಯ ಮೇರುವನ್ನೇರುತ್ತ ಮಹಾತ್ಮನಾದೆ…ನಿತ್ಯ ತಾರಕ ಮಂತ್ರವಾಯಿತು ರಾಮನಾಮ ನಿನಗೆಸತ್ಯಾಗ್ರಹ,ಅಹಿಂಸೆ,ಅಪರಿಗ್ರಹ ಮಂತ್ರದಂಡಗಳುಬಿದ್ದವರನ್ನೆತ್ತಿದೆ,ಸ್ವತಂತ್ರ ಭಾರತದಿ ಉಸಿರಾಡಿದೆವು ನಶೆಯಲ್ಲಿ ನಾವೂ ಹಲವು ಸಲ ಬಿದ್ದೆವು….ಮತ್ತೆ ಮತ್ತೆ ಬಿದ್ದೆವು ಮತ್ತೆಂದೂ ಏಳದ ಹಾಗೆ!ಮಾಣಿಕ್ಯದ ಬೆಲೆಯರಿಯದ ನಮಗೆ…ಸ್ವಾತಂತ್ರ್ಯವೂ ಮತ್ತೇರಿಸುವ ವಸ್ತುವಾಯಿತುಅಮಲಿನಲಿ ಕಳೆದುಕೊಂಡಿದ್ದೇವೆ ನಮ್ಮನ್ನು ನಾವೇಗಾಂಧಿ,ಕಲಿಯಲಿಲ್ಲ ಪಾಠ ತಪ್ಪುಗಳಿಂದ ನಾವೆಂದೂಗಾಂಧೀಜಿ ಪೆಟ್ಟಿಗೆ ತತ್ತರಿಸಿತು ಅಂಗ್ರೇಜಿ ಸಾಮ್ರಾಜ್ಯಅವ್ಯಕ್ತ ಅಸ್ತ್ರ ಪ್ರಯೋಗಕ್ಕೆ ಶರಣಾದದ್ದೇ ವಿಸ್ಮಯಮನುಷ್ಯನಿಗೆ ಮನುಷ್ಯನಾಗಿ ಸ್ಪಂದಿಸಿದರೀತಿಅನನ್ಯಕೋಟಿ ಭಾರತೀಯರ ಬಯಕೆಗೆತುಡಿವದನಿಯಾದೆನಿನ್ನ ಸಾಧನೆಗಳಿಗೆ ತವರಾಯಿತು ದಕ್ಷಿಣ ಆಫ್ರಿಕಾ!!ಹೆಜ್ಜೆ ಹೆಜ್ಜೆಗೆ ತೊಡರಿದ ಅಪಮಾನಗಳ ಸರಮಾಲೆಮುಂದಿನ ಶ್ರೇಷ್ಠ ಗೆಲುವಿಗೆ ಮೆಟ್ಟಿಲಾಯಿತು ಸೋಲೆಮಹಾತ್ಮನಾಗುವ ಹಾದಿಯ ಕಲ್ಲು ಮುಳ್ಳುಗಳಎಡಹಿದ್ದು ಇಲ್ಲೇ, ಅಪಾರ ಸಹನೆ ತೋರಿದ್ದು ಇಲ್ಲೇ!ಬರಲಿರುವ ಸ್ವಾತಂತ್ರ್ಯ ಹೋರಾಟಕ್ಕೆ ಪೂರ್ವಸಿದ್ಧತೆಸ್ವಾರ್ಥವಿನಿತಿಲ್ಲ, ನಿಷ್ಕಾಮ ದಳಗಳ “ಹೊಂದಾವರೆ”ಇರುವಲ್ಲಿಂದ ಇಲ್ಲಿವರೆ ಹೊರಳಿ ನೋಡದಿರು ತಂದೆಸ್ವಾರ್ಥದ ಹುಳುಗಳಾಗಿದ್ದೇವೆ ಎನ್ನಲು ಮನನಾಚಿದೆಹಣದ ಝಣ ಝಣ ಝಣತ್ಕಾರ ಕುಣಿಸುತಿದೆಅವನಿವನ,ಇವನವನ ಕಾಲೆಳೆಯುವುದೇ ದಂಧೆಪ್ರಕೃತಿ ಗೆ ಎದುರಾಗಿ ನಡೆದೀಗ ಫಲವುಣ್ಣುತ್ತಿದ್ದೇವೆ“ಕರೋನ”ಮಾರಣಹೋಮ ತಡೆಯಿಲ್ಲದೆಸಾಗಿದೆರಾಮರಾಜ್ಯದ ಸುಂದರಕನಸುಗಳ ಕಟ್ಟಿ ಕೊಟ್ಟೆ!!ನನಸಾಗಿಸುವ ಕಸುವು ನಮಗಿರಲಿಲ್ಲ ತಂದೆ!!!ಆಗಿದೆ ಅವ್ಯವಸ್ಥೆಯಗೂಡು,ಮನುಜನೆದೆಬೆಂಗಾಡು ******************************************* ಗಿರಿಜಾ ರಾಜ್
ಗಾಂಧಿ ವಿಶೇಷ ಗಾಂದೀಜಿ “ಸತ್ಯ, ಅಹಿಂಸೆ, ಸರ್ವೋದಯ, ಸತ್ಯಾಗ್ರಹ”ನಿಮ್ಮ ಈ ತತ್ವ ಗಳು ಇಂದಿಗೂ ಪ್ರಸ್ತುತಎಷ್ಟು ಸಲ ತಿಳಿ ಹೇಳಿದರೂ ಸಹ,ಕಲಿಯಲಿಲ್ಲ ಆದರೆ ಮಾನವ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳುತನಗಿಷ್ಟಬಂದಂತೆ ತಿರುಚುವನು ವಾಸ್ತವವನ್ನುಆಗಬೇಕಿಲ್ಲ ಅವನಿಗೆ ಸರ್ವೋದಯಇಲ್ಲದಿದ್ದವರ ಕರೆ ಬರೀ ಅರಣ್ಯ ರೋದನ ಅಹಿಂಸೆ ಪದಕ್ಕೀಗ ಅರ್ಥವೇನುಹಿಂಸೆಯಲ್ಲೇ ನಡೆಯುತ್ತಿದೆ ಪ್ರಪಂಚಮನಸ್ಸು ಇರಬೇಕು ತಿಳಿಬಾನಿನಂತೆಪಡೆಯಬೇಕು ಶಾಂತಿಯಿಂದ, ಸತ್ಯಾಗ್ರಹದಿಂದ ತಿಳಿಹೇಳುವುದು ಹೇಗೆ, ಈಗಿನ ಬುದ್ದಿಜೀವಿಗಳಿಗೆಬರೀ ಅಕ್ಟೋಬರ್ ಅಲ್ಲಿ ನೆನೆದರೆ ಸಾಲದುಗಾಂಧೀಜಿ ಹಾಗು ಅವರ ತತ್ವಗಳನ್ನುಅಳವಡಿಸಿಕೊಳ್ಳಿ ಬದುಕಲ್ಲಿ, ಮತ್ತದು ಮರಳಿ ಬಾರದು **************************** ಡಾ. ಸಹನಾ ಪ್ರಸಾದ್
ಗಾಂಧಿ ವಿಶೇಷ ಹೇ ರಾಮ್ ಹೇ ರಾಮ್…..ಬಿಕ್ಕುತಿದೆ ನೋಡಲ್ಲಿ ಸತ್ಯಅಹಿಂಸೆ, ವಿಷಾದದ ಕತ್ತಲಲಿಎಲ್ಲಿಯೋ ಕೇಳುತಿದೆ ಹೇ ರಾಮ್……ಗರಿಗರಿ ನೋಟುಗಳೆಣಿಕೆಯೊಳಗೆಹೂತು ಹೋದ ಸತ್ಯಕೆ ಕಂಬನಿ ಮಿಡಿದುಕೂಗುತಿದೆ ಧನಿಯೊಂದು ಹೇ ರಾಮ್ಭಗವದ್ಗೀತೆ ಹಿಡಿಯುವಕಳಂಕಕರಗಳಿಗೆ ಬೆಚ್ಚಿದೆ ನ್ಯಾಯ ದೇವತೆಮತ್ತಷ್ಟೂ ಕೇಳುತಿಹುದು ಹೇ ರಾಮ್……ಬಲ್ಲಿದವರ ದಾಸ್ಯ ಸಂಕೋಲೆಯಲಿಬಡವರ ಸ್ವಾತಂತ್ರ್ಯ ನರಳಿಹುದುಕೇಳಿ ಬರುತಿದೆ ದನಿಯೊಂದು ಹೇ ರಾಮ್…..ಹೊರಟಿಹುದು ಹಿಂಸೆಯ ಮೆರವಣಿಗೆಶಾಂತಿ ಧೂತನ ಅಹಿಂಸಾ ಮುಖವಾಡ ಹೊತ್ತುಕನಸೊಳಗೂ ದನಿ ಕೇಳಿದೆ ಹೇ ರಾಮ್…..ರಾಮರಾಜ್ಯದ ಕನಸು ಹುಸಿಯಾದುದಕೆವಿಷಾದ ನಗೆ ಚೆಲ್ಲಿದೆಗೋಡೆ ಮೇಲಿನ ಗಾಂಧಿ ಚಿತ್ರಮತ್ತೆ ಕೇಳುತಿದೆ ಹೇ ರಾಮ್…… ******************************** ಕೆ.ಟಿ. ಜಯಶ್ರೀ
ಗಾಂಧಿವಿಶೇಷ ಸರ್ವೋದಯ ಪ್ರತಿಯೊಬ್ಬರ ಅಗತ್ಯಗಳನ್ನು ಪ್ರಕ್ರತಿ ಪೂರೈಸಬಲ್ಲದು ಆದರೆ ಆಕರ್ಷಣೆಗಳನ್ನು ಖಂಡಿತ ಅಲ್ಲ. ಇದು ರಾಷ್ಟ್ರಪಿತ ಗಾಂಧೀಜಿ ಯವರ ನುಡಿ ಮುತ್ತು. ಅವರ ಗುರಿ ಸ್ವಾತಂತ್ರ್ಯ ಸಂಪಾದನೆಯ ಜೊತೆ ಜೊತೆಗೆ ಆನಂತರದ ದಿನಗಳ ರಾಜಕೀಯ ಶಿಕ್ಷಣ ಆರ್ಥಿಕತೆ ಕೃಷಿ ಮತ್ತು ಕೈಗಾರಿಕೆಯ ಮುನ್ನೋಟ ಸಿದ್ಧಪಡಿಸಿ ತಮ್ಮಕನಸನ್ನು ನನಸಾಗಿಸಲೂ ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು . ಅವರ ಮೂಲ ಧ್ಯೇಯ ಸರ್ವರಿಗೆ ಸಮ ಬಾಳು ಸರ್ವರಿಗೆ ಸಮ ಪಾಲು. ರಾಷ್ಟೀಯ ಏಕತೆಯು ಸಾಮಾಜಿಕ ಸೌಹಾರ್ದತೆಯಿಂದ ಮಾತ್ರ ಸಾಧ್ಯ ಎಂಬುದು ಗಾಂಧೀಜಿಯವರ ನಿಲುವಾಗಿತ್ತು. ಕೋಮು ,ಅಸ್ಪ್ರಶ್ಯತೆ ,ಶೋಷಣೆ ರಹಿತ ಸಮಾಜದಿಂದ ನವ ಭಾರತ ನಿರ್ಮಾಣ ರಾಮ ರಾಜ್ಯ ಸಾಧ್ಯವೆಂದರು. ಈ ಸರ್ವೋದಯದ ಪರಿಕಲ್ಪನೆ ಗಾಂಧೀಜಿಯವರಿಗೆ ದೊರಕಿದ ರೀತಿ ಬಹಳ ಸ್ವಾರಸ್ಯಕರವಾದುದು.ಕಾನೂನು ಪದವೀಧರರಾಗಿದ್ದ ಗಾಂಧೀಜಿಯವರು 1893 ರಲ್ಲಿ ದಕ್ಷಿಣ ಆಫ್ರಿಕದ ಕಂಪನಿಯೊಂದರಲ್ಲಿ ಉದ್ಯೋಗ ನಿರ್ವಹಿಸಲು ಹೋಗಿದ್ದಾಗ ಜೋಹಾನ್ಸ್ ಬರ್ಗ್ನ ನಿಂದ ರೈಲು ಪ್ರಯಾಣ ಮಾಡುತ್ತಿದ್ದರು ಆಗ ಅವರ ಕಿರಿಯ ಮಿತ್ರ ಪೋಲಕ್ ಎಂಬುವರು ಈ ಪುಸ್ತಕ ನಿಮ್ಮೊಂದಿಗಿರಲಿ ಪ್ರಯಾಣದ ವೇಳೆ ಓದಿರಿ ನಿಮಗಿದು ಸಮ್ಮತವಾಗುವುದು ಎಂದು ಹೇಳಿ ರಸ್ಕಿನ್ ಬರೆದಿದ್ದ ಅಂಟು ದಿಸ್ ಲಾಸ್ಟ್ ,ಕಟ್ಟಕಡೆಯವನತ್ತ , ರೈಲು ಹೊರಡುತ್ತಿದ್ದಂತೆ ಪುಸ್ತಕದ ಹವ್ಯಾಸವಿದ್ದ ಗಾಂಧೀಜಿ ಓದಲಾರಂಭಿಸಿದರು ಅದನ್ನು ಮುಗಿಸುವವರೆಗೂ ಹೊರ ಪ್ರಪಂಚದ ಅರಿವೇ ಇರಲಿಲ್ಲ . ಇದರಿಂದ ಅವರು ಕಂಡುಕೊಂಡ ಮೂರು ಅಂಶವೆಂದರೆ 1,ವ್ಯಕ್ತಿಯ ಹಿತ ಆತನ ಸಮಾ ಜದ ಹಿತದಲ್ಲಿಯೆ ಅಡಗಿದೆ. 2.ವ್ಯಕ್ತಿಯಲ್ಲಿ ಮೇಲು ಕೀಳೆಂಬುದಿಲ್ಲ.ವೃತ್ತಿಯಲ್ಲೂ ಮೇಲು ಕೀಳೆಂಬುದಿಲ್ಲ ಸಮಾನ ಗೌರವ ಮುಖ್ಯ . 3. ಶ್ರಮ ಜೀವಿಗಳ ಜೀವನವೇ ಶ್ರೇಷ್ಟ . ಈ ಹೊತ್ತಿಗೆ ಯನ್ನು ತಮ್ಮ ಮಾತೃಭಾಷೆ ಗುಜರಾತಿಗೆ ಅನುವಾದಿಸಿದರು ಸರ್ವೋದಯವೆಂದು ಹೆಸರಿಟ್ಟರು . ಸುಮಾರು 2000 ವರ್ಷಗಳ ಹಿಂದೆ ಜಿನಾಚಾರ್ಯ ಸಮಂತಭದ್ರರು ಈ ಸರ್ವೋದಯ ಪವಿತ್ರವಾದುದು ಒಳ್ಳೆಯದು ಎಂದಿದ್ದಾರೆ.ಸರ್ವೋದಯದ ಹಾದಿಯನ್ನು ಅನುಸರಿಸಿದವರೆಂದರೆ, 1.ಮಹಾತ್ಮ ಗಾಂಧೀಜಿ- ಭಾರತಕ್ಕೆ ಬಂದ ಮೇಲೆ ಸಾಬರಮತಿ ಮತ್ತು ಸೇವಾಗ್ರಾಮಗಳಲ್ಲಿ ಶ್ರಮಾಧಾರಿತ ಜೀವನಕ್ರಮ ಜಾರಿಗೆ ತಂದರು. 2 ವಿನೋಬಾ ಭಾವೆಯವರು 1951_ರಲ್ಲಿ ತೆಲಂಗಾಣದ ಪೋಚಮ್ ಎಂಬ ಹಳ್ಳಿಯಲ್ಲಿ ಭೂದಾನ ಪ್ರಾರಂಭಿಸಿದರು. ೭೫೦೦೦ ಕಿಮೀ ಪಾದ ಯಾತ್ರೆಮಾಡಿ ಉಳ್ಳವರಿಂದ ಇಲ್ಲದವರಿಗೆ ಭೂಮಿ ಹಂಚಿದ್ದರು ಜೊತೆಗೆ ಸಂಪತ್ತಿನ ದಾನ ,ಜ್ಞಾನ ದಾನ ,ಶ್ರಮ ದಾನ, ವನ್ನು ಜಾರಿಗೊಳಿಸಿದರು. 3. ಜಯಪ್ರಕಾಶ್ ನಾರಾಯಣ್. ೧೯೨೯ರಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು . ೨೫ವರ್ಷ ಹೋರಾಟ ನಡೆಸಿ ೧೯೬೫ _ರಲ್ಲಿ ಶಾಂತಿಯುತ ಹೋರಾಟಕ್ಕಾಗಿ ಮ್ಯಾಗ್ಸೇಸ್ ಪ್ರಶಸ್ತಿ ಲಭಿಸಿತ್ತು. ಮಧ್ಯ ಪ್ರದೇಶದ ಚಂಬಲ್ ಕಣಿವೆ ಢಕಾಯಿತರನ್ನು ತಮ್ಮ ಆತ್ಮ ಶಕ್ತಿಯ ಮೂಲಕ ಪರಿವರ್ತಿಸಿದರು. ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯದನ್ನು ಹೇಳಿದ್ದಾಗಿದೆ ಉಳಿದಿರುವುದು ಆಚರಣೆ ಮಾತ್ರ.-ಸ್ಯಾಕ್ರಟೀಸ್ ಲೋಕಾ ಸಮಸ್ತಸುಖಿನೋಭವಂತು ಎಂಬ ವೇ ದದಸಾರವೇ ಸರ್ವೋದಯದ ತಾತ್ಪರ್ಯವಾಗಿದೆ. ಕರೋನಾದಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ ,ಇನ್ನು ಮುಂದಾದರೂ ನಮ್ಮಲ್ಲಿ ಮಾನವೀಯ ಮೌಲ್ಯಗಳು ಜಾಗೃತ ಗೊಳ್ಳಲಿ ಹಾಗೆ ಸದಾಶಯದ ಹಾದಿ ನಮ್ಮದಾಗಲಿ. ಜೈ ಭಾರತ್. ******************************* ಶ್ರೀವಲ್ಲಿ ಶೇಷಾದ್ರಿ.
ಗಾಂಧಿ ವಿಶೇಷ ಹೇ ರಾಮ್ !! ಸಣಕಲು ಕಡ್ಡಿರಪ್ಪನೆ ಕಣ್ಣಿಗೆ ರಾಚುವ ಎಲುಬಿನ ಹಂದರಸದಾ ನೆತ್ತಿಗೆ ಹತ್ತಿದ ಶಾಂತಿ ಮಂತ್ರ; ಸತ್ಯದಅಮಲುಕೈಯಲ್ಲೊಂದು ಊರುಗೋಲುಬೆನ್ನು ಎದೆ ಸುತ್ತಿದೊಂದು ಬಿಳಿ ಶಾಲುಕಣ್ಣಿಗಂಟಿದ ಚಷ್ಮಮೊಣಕಾಲ ಮೇಲೆ ಪಂಚೆಸುತ್ತ ನೆರೆದ ಒಂದಷ್ಟು ಜನರ ಸಂತೆ !ನನ್ನೀ ವೇಷಕ್ಕೆ ಆತ ಗುರಿಯಿಟ್ಟು ಹೊಡೆದ !ಸತ್ಯಕ್ಕಲ್ಲ; ಶಾಂತಿಗಲ್ಲ !ಹೋಗಲಿ ಬೇಕಾಗಿದ್ದೇನೆಂದುಆತ ತೂರಿದ ಗುಂಡಿಗೂ ಅರಿವಿಲ್ಲ !ಅದು ನನ್ನ ಗುಂಡಿಗೆಗೂ ಇನ್ನೂ ದಕ್ಕಿಲ್ಲ !ನನ್ನ ಕೊಂದದ್ದಷ್ಟೆ –ಆತ ತಿರುಗಿ ನೋಡಲಿಲ್ಲ !ನಿರ್ಭಾವುಕನಾದನೇ, ಗಳಗಳ ಅತ್ತನೇತಪ್ಪಿತಸ್ಥ ಮನೋಭಾವವಿತ್ತೇಅಥವಾ ಸೆಟೆದು ನಿಂತನೇನಾನು ಗಮನಿಸಲಿಲ್ಲ !! ಪ್ರಾಣ ಹೋದದ್ದಷ್ಟೆ !ಹೋಗುವಾಗ ಆ ಕ್ಷಣ ಹೊರಬಿತ್ತಲ್ಲ ಅದೇ“ಹೇ ರಾಮ್” !!ಬಾಯಿಂದ ಬಂದ ಮೂರಕ್ಷರದ ಈಪದದಲ್ಲಿಗುಂಡು ಎದೆಗೆ ಕಚ್ಚಿಕೊಂಡಆ ಕ್ಷಣಗಳನು ನಾನು ಮರೆಯಲು ಯತ್ನಿಸಿದಂತೆಲ್ಲದೇಶದ ಮೂಲೆ ಮೂಲೆಯಲ್ಲೂರಾಜಕೀಯದ ಬೇಳೆ ಬೇಯಿಸಲುನನ್ನ ಹೆಸರ ಬಳಸಿಯೇ ತಯಾರಾಗುತ್ತದೆಮೋಸದ ಅಡುಗೆ !ನನ್ನ ಈ ಸತ್ತಮೂಗಿಗೂ ರಪ್ ಎಂದು ರಾಚುತ್ತದೆಕಮಟು ವಾಸನೆ !ಗುಂಡು ತೂರಿದವನಿಗೂ ಇಲ್ಲಿ ಸಾವಿಲ್ಲ !ತೂರಿಸಿಕೊಂಡ ನನಗೂ !!ಗೋ ಹತ್ಯೆಗೆ ನನ್ನ ಹೆಸರುಹೆಂಡಕ್ಕೆ, ಸತ್ಯಕ್ಕೆ ಶಾಂತಿಗೆ ಅಹಿಂಸೆಗೂ ನನ್ನಹೆಸರಿನ ತಳುಕು !ಅನುಷ್ಠಾನಕ್ಕಿಲ್ಲದ ಉಪದೇಶಕ್ಕಷ್ಟೇಸೀಮಿತವಾದನನ್ನೀ ಹೆಸರಿಗಂಟಿದ ಇಂಥ ಪದಗಳಚಲಾವಣೆಯಲ್ಲಿಬಿಳಿ ಟೋಪಿ ಹಾಕಿದ ಮಂದಿಯ ಜೇಬಲ್ಲಿಝಣಝಣ ಕಾಂಚಾಣ !ಜನರ ತಲೆ ಸವರಿ ಕಟ್ಟಿದ ಗಗನಚುಂಬೀ ಭವನಗಳೇಇವರ ವಾಸಸ್ಥಾನ !ಗಾಂಧಿ ಜನಿಸಿದ ನಾಡಲ್ಲೇ ಗಳಿಗೆಗೊಂದುಕ್ಷಣಕ್ಕೊಂದು ಹಿಂಸೆ, ಅನಾಚಾರ, ಅತ್ಯಾಚಾರಗಳಸರಣಿ ಸರಣಿ ದೃಷ್ಟಾಂತ !ದೇಶದ ರಾಜಕೀಯದ ಪಡಸಾಲೆಯಲ್ಲಿ ನನ್ನ ಅಂತೆನನಗೆ ಗುಂಡಿಕ್ಕಿದವನದೇ ಮಂತ್ರ !!ನಮ್ಮಿಬ್ಬರನೂ ಇಲ್ಲಿ ಇಡಲಾಗುತ್ತದೆ ಸದಾಜೀವಂತ !ಮತ್ತೆ ಮತ್ತೆ ಹುಟ್ಟುತ್ತೇವೆ, ಸಾಯುತ್ತೇವೆ –ಮುಕ್ತಿಯಿರಲಿ;ನೆಮ್ಮದಿಯೂ ಇಲ್ಲದೇ ಅತಂತ್ರ !!ಸತ್ಯ ಶಾಂತಿ ಅಹಿಂಸೆಯ ಎನ್ನ ಕನಸುಗಳೆಲ್ಲಆಗುವುದೆಂದು ಊರ್ಜಿತ !?ಹೇ ರಾಮ್ ! ಹೇ ರಾಮ್ !ಆಗುವುದೆಂದು ಊರ್ಜಿತ ?! ****************************************** ಸುಜಾತಾ ಲಕ್ಮನೆ
ಗಾಂಧಿ ವಿಶೇಷ ‘ಹಿಂದ್ ಸ್ವರಾಜ್’ನಲ್ಲಿ ಗಾಂಧಿ ಚಿಂತನೆ : ತಮ್ಮ ‘ಹಿಂದ್ ಸ್ವರಾಜ್’ ಎಂಬ ಮಹತ್ವದ ಕೃತಿಯಲ್ಲಿ ಗಾಂಧೀಜಿಯವರು ಹೇಳುವ ಮಾತುಗಳನ್ನು ಓದಿದರೆ ಭಾರತಕ್ಕಾಗಿ ಎಂಥ ಒಂದು ಸರಳ ಬದುಕಿನ ಕನಸನ್ನು ಅವರು ಕಂಡಿದ್ದರು ಎಂಬುದರ ಅರಿವಾಗುತ್ತದೆ. ಈ ಕೃತಿಯಲ್ಲಿ ಅವರ ಆಲೋಚನೆಗಳು ಹೀಗೆ ಸಾಗುತ್ತವೆ : ‘ಆಧುನಿಕತೆ ಎಂದರೇನು ? ಸಾಮಾನ್ಯರು ಹೇಳುವಂತೆ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಹಾಕಿಕೊಳ್ಳುವುದೆ? ಹೊಸ ಹೊಸ ಯಂತ್ರಗಳನ್ನು ಆವಿಷ್ಕರಿಸಿ ನಮ್ಮ ಶಾರೀರಿಕ ಶ್ರಮವನ್ನು ಹಗುರಗೊಳಿಸಿಕೊಳ್ಳುವುದೆ? ಪಾಶ್ಚಾತ್ಯ ನಾಗರಿಕತೆ ಇಂದು ಎತ್ತ ಸಾಗಿದೆ, ನಮ್ಮ ದೇಶಕ್ಕೆ ಅವರು ತಂದ ನಾಗರಿಕತೆ ನಮ್ಮ ಬದುಕನ್ನು ಎಷ್ಟರ ಮಟ್ಟಿಗೆ ಉತ್ತಮಗೊಳಿಸಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಒಮ್ಮೆ ಆಲೋಚಿಸಿ ನೋಡಿ. ಎತ್ತಿನ ಗಾಡಿಯಲ್ಲೋ ಕಾಲು ನಡಿಗೆಯಲ್ಲೋ ಊರಿಂದೂರಿಗೆ ಸಂಪರ್ಕವಿಟ್ಟುಕೊಂಡು ನಮ್ಮ ಜನರು ಸುಂದರ ಬದುಕನ್ನು ಸಾಗಿಸುತ್ತಿದ್ದ ಕಾಲವೊಂದಿತ್ತು. ಪಾಶ್ಚಾತ್ಯರಿಂದ ಬಂದ ಆಧುನಿಕತೆಯು ರೈಲುಗಳ ಮೂಲಕ ಭಾರತದ ಉತ್ತರ-ದಕ್ಷಿಣ ತುದಿಗಳನ್ನು ಜೋಡಿಸ ಒಂದಾಗಿಸಿತೆಂಬ ಭಾವನೆ ನಮ್ಮದು. ಆದರೆ ಉತ್ತರದಲ್ಲಿ ಹುಟ್ಟಿಕೊಂಡ ಅನೇಕ ಸಮಸ್ಯೆಗಳು ಕೂಡಾ ರೈಲುಗಳ ಮೂಲಕ ಶರವೇಗದಲ್ಲಿ ದಕ್ಷಿಣಕ್ಕೆ ರವಾನೆಯಾಗಲು ಸಾಧ್ಯ ಎಂಬ ಅದರ ಇನ್ನೊಂದು ಮುಖದ ಬಗ್ಗೆ ನಾವು ಯಾಕೆ ಆಲೋಚಿಸಲಿಲ್ಲ? ಆಧುನಿಕತೆಯ ಹೆಸರಿನಲ್ಲಿ ಇಂದು ಜಗತ್ತು ಭೋಗಮಯವಾಗುತ್ತಿದೆ. ಮೋಸ-ವಂಚನೆ-ಸುಲಿಗೆಗಳ ಮೂಲಕ ಹಣ ಗಳಿಸುವುದೊಂದೇ ಜನರ ಗುರಿಯಾಗಿ ಬಿಟ್ಟಿದೆ. ಊರಿನ ಹಿರಿಯರ ಮೂಲಕ ಜಗಳಗಳು ಇತ್ಯರ್ಥವಾಗಿ ನ್ಯಾಯ ಸಿಗುತ್ತಿದ್ದ ಕಾಲವೊಂದಿತ್ತು. ಜಗಳ ಯಾರ ಮಧ್ಯೆ ತಾನೇ ಬರುವುದಿಲ್ಲ? ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ-ತಮ್ಮಂದಿರು ಜಗಳವಾಡುವುದಿಲ್ಲವೆ? ಸಿಟ್ಟು ತಣಿದಾಗ ಎಲ್ಲವೂ ಸಹಜವಾಗಿ ಸರಿಯಾಗುತ್ತದೆ. ಆದರೆ ಆಂಗ್ಲರು ನಮಗೆ ಕಾನೂನು, ನ್ಯಾಯವಾದಿಗಳು ಮತ್ತು ಕೋರ್ಟು-ಕಛೇರಿಗಳನ್ನು ಕೊಡುಗೆಯಾಗಿತ್ತರು. ನಾವು ಜಗಳ ಮಾಡಿದರೆ ನಮ್ಮಲ್ಲಿರುವ ಹಣದ ಬಗ್ಗೆ ಮಾತ್ರ ಆಸಕ್ತಿ ಹೊಂದಿದ ಮೂರನೆಯವರಾದ ವಕೀಲರು-ನ್ಯಾಯಾಧೀಶರುಗಳು ಇಷ್ಟ ಬಂದಷ್ಟು ಕಾಲ ನಮ್ಮನ್ನು ಸತಾಯಿಸಿ ಕೊನೆಗೆ ತೀರ್ಪಿನ ಹೆಸರಿನಲ್ಲಿ ಏನೋ ಒಂದು ನಿರ್ಧಾರವನ್ನು ಘೋಷಿಸುತ್ತಾರೆ. ಹಾಗೆಯೇ ಸಹಜವಾದ ಔಷಧಿ ಮತ್ತು ಚಿಕಿತ್ಸೆಗಳು ನಮ್ಮ ಒಂದು ಜೀವನ ಕ್ರಮವಾಗಿತ್ತು. ಎಷ್ಟೋ ರೋಗಗಳು ಕಾಲ ಬಂದಾಗ ತಮ್ಮಷ್ಟಕ್ಕೆ ತಾವೇ ಗುಣವಾಗುತ್ತಿದ್ದವು. ನಮ್ಮ ದೇಹದ ಆರೋಗ್ಯವನ್ನು ನೋಡಿಕೊಳ್ಳುವ ಹೊಣೆ ನಮ್ಮದಲ್ವೆ? ನಾವು ನಮ್ಮ ಆಹಾರ-ವ್ಯಾಯಾಮಗಳ ಬಗ್ಗೆ ಅಸಡ್ಡೆ ತೋರಿಸಿದರೆ ಅದರಿಂದುಂಟಾಗುವ ತೊಂದರೆಗಳನ್ನು ಸಹಿಸಿಕೊಳ್ಳಲು ನಮ್ಮ ದೇಹ-ಮನಸ್ಸುಗಳು ಸಿದ್ಧವಾಗಿರಬೇಕು. ಆದರೆ ಆಧುನಿಕತೆಯು ನಮಗೆ ವಿವಿಧ ವೈದ್ಯರುಗಳನ್ನೂ ವೈವಿಧ್ಯಮಯ ಔಷಧಿಗಳನ್ನೂ ಕೊಟ್ಟಿದೆ. ಪರಿಣಾಮವಾಗಿ ನಾವು ನಮ್ಮ ದೇಹಬಲ ಮತ್ತು ಮನೋಬಲಗಳನ್ನು ಕಳೆದುಕೊಂಡು ಗುಲಾಮರಾದೆವು. ಆಧುನಿಕತೆಯ ಇನ್ನೊಂದು ಕೊಡುಗೆಯಾದ ಮಾಧ್ಯಮಗಳು ಶ್ರೀಸಾಮಾನ್ಯನನ್ನು ಮಾಹಿತಿಗಳ ಜಾಲದಲ್ಲಿ ಸಿಲುಕಿಸಿ ನಿಜವನ್ನು ಮರೆಮಾಚಿ ಆತನನ್ನು ಭ್ರಮಾಲೋಕಕ್ಕೆ ಒಯ್ಯುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಸತ್ಯಾಗ್ರಹದ ಮೂಲಕ ನಾವು ಬಯಸಿದ್ದನ್ನು ಸಾಧಿಸಲು ಹೇಗೆ ಸಾಧ್ಯ ಎಂದು ಆಧುನಿಕ ಮನಸ್ಸು ಕೇಳಬಹುದುೆ. ಯಾಕೆಂದರೆ ಅದಕ್ಕೆ ಗೊತ್ತಿರುವುದು ಆಯುಧಗಳ ಪ್ರಯೋಗ ಮಾತ್ರ. ಪಾಶ್ಚಾತ್ಯರು ನಮಗೆ ಇತಿಹಾಸದ ಘಟನೆಗಳನ್ನು ದಾಖಲಿಸುವ ವಿದ್ಯೆಯನ್ನು ಹೇಳಿ ಕೊಟ್ಟರು. ಏನು ಮಹಾ ಇತಿಹಾಸವೆಂದರೆ ? ಕೇವಲ ರಾಜ ಮಹಾರಾಜರುಗಳು ಅಧಿಕಾರ ದಾಹದಿಂದ ಕುರುಡರಾಗಿ ನಡೆಸಿದ ಯುದ್ಧಗಳ ಮತ್ತು ಹರಿಸಿದ ನೆತ್ತರ ಹೊಳೆಗಳ ಕಥೆ ತಾನೆ ? ನಿಜವಾದ ಇತಿಹಾಸವನ್ನು ಸೃಷ್ಟಿಸಿದವರು ಕೋಟಿ ಕೋಟಿ ಸಂಖ್ಯೆಯಲಿರುವ ನಮ್ಮ ರೈತರು, ಕೆಲಸಗಾರರು, ಕಲಾವಿದರು, ಕವಿಗಳು ಮತ್ತು ಚಿತ್ರಕಾರರು ಅಲ್ಲವೆ? ಅವರು ಬೆಳೆಸಿಕೊಂಡ ಆತ್ಮಬಲಗಳ ಮುಂದೆ ತಮ್ಮ ಮನಸ್ಸನ್ನೇ ಗೆಲ್ಲಲಾಗದ ದುರ್ಬಲ ವ್ಯಕ್ತಿತ್ವದ ರಾಜರುಗಳೆಲ್ಲಿ? ಆತ್ಮ ಬಲವಿಲ್ಲದವರು ಹಿಂಸೆಯ ಮೂಲಕ ಕಟ್ಟುವ ರಾಜ್ಯ ಎಷ್ಟು ಕಾಲ ಉಳಿಯಬಲ್ಲುದು? ಸತ್ಯಾಗ್ರಹಕ್ಕೆ ಇರುವ ಬೆಂಬಲ ಆತ್ಮಬಲದ್ದು. ಇದರ ಮೂಲಕ ಗೆಲುವು ಸಾಧಿಸಲು ಸಾಧ್ಯವಿಲ್ಲವೆಂಬುದು ಮೂರ್ಖತನ. ಇಂಥ ನೂರಾರು ಮೌಲ್ಯಗಳಿಂದ ತುಂಬಿರುವ ಗಾಂಧೀಜಿಯ‘ಹಿಂದ್ ಸ್ವರಾಜ್’ ಎಲ್ಲರೂ ಓದಲೇ ಬೇಕಾದ ಒಂದು ಅಮೂಲ್ಯ ಕೃತಿ. ಸಮಾಜದಲ್ಲಿ ಒಳ್ಳೆಯದನ್ನು ಅಹಿಂಸಾತ್ಮಕವಾಗಿ ಸಾಧಿಸಲು ಆಧುನಿಕ ಮನುಷ್ಯನಿಗೆ ಗಾಂಧೀಜಿಯವರು ನೀಡಿದ ಸಂದೇಶಗಳ ಸಾರಸತ್ವವನ್ನು ಹೀಗೆ ಸಂಗ್ರಹಿಸಿ ಹೇಳಬಹುದು ೧. ಒಳ್ಳೆಯದು ಎನ್ನುವುದು ಬಸವನ ಹುಳದಂತೆ ಪಯಣಿಸುತ್ತದೆ. ಕಾಯುವ ತಾಳ್ಮೆ ಇರಲಿ. ೨. ಅಹಿಂಸೆಯೆಂಬುದು ನಿಧಾನವಾಗಿ ಬೆಳೆಯುವ ಮರ. ಅದರ ಬೆಳವಣಿಗೆ ಕಣ್ಣಿಗೆ ಕಾಣಿಸದು. ಆದರೆ ಅದು ಖಚಿತ. ೩. ಬರೇ ಒಳ್ಳೆಯತನದಿಂದ ಅಷ್ಟೇನೂ ಉಪಯೋಗವಿಲ್ಲ. ಅದರ ಜತೆಗೆ ವಿವೇಕ, ಧೈರ್ಯ ಮತ್ತು ಸಂಕಲ್ಪಶಕ್ತಿಗಳಿರಬೇಕು. ಆತ್ಮನಿಷ್ಠೆಯ ಜತೆಗೆ ವಿವೇಚನೆಯನ್ನೂ ಬೆಳೆಸಿಕೊಳ್ಳ ಬೇಕು. ೪. ತತ್ವವಿಲ್ಲದ ರಾಜಕೀಯ, ಶ್ರಮವಿಲ್ಲದ ಸಂಪತ್ತು, ನೈತಿಕತೆಯಿಲ್ಲದ ವಾಣಿಜ್ಯ, ಗುಣವಿಲ್ಲದ ವಿದ್ಯೆ, ವಿವೇಕವಿಲ್ಲದ ಸಂತೋಷ, ಮಾನವೀಯತೆಯಿಲ್ಲದ ವಿಜ್ಞಾನ, ಮತ್ತು ತ್ಯಾಗವಿಲ್ಲದ ಆರಾಧನೆ- ಇವು ನಾವು ಸದಾ ದೂರವಿರಬೇಕಾದ ಏಳು ಮಹಾ ಪಾಪಗಳು. ೫. ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸಲಾರರು. ೬. ಸೇಡು ಅನ್ನುವುದು ಯಾವಾಗಲೂ ಇಡೀ ಜಗತ್ತನ್ನು ಕುರುಡಾಗಿಸಿಯೇ ಕೊನೆಯಾಗುತ್ತದೆ. ೭. ದುರ್ಬಲರು ಯಾವತ್ತೂ ಕ್ಷಮಿಸಲಾರರು. ಕ್ಷಮಿಸುವ ಶಕ್ತಿಯಿರುವುದು ಸಬಲರಿಗೆ ಮಾತ್ರ. ೮. ನೀವು ನಾಳೆಯೇ ಸಾಯುವಿರಿ ಎಂಬ ಆಲೋಚನೆಯೊಂದಿಗೆ ಕೆಲಸ ಮಾಡಿ. ನಿಮ್ಮ ಜೀವನ ಶಾಶ್ವತವೇನೋ ಎಂಬಂತೆ ಜ್ಞಾನ ಸಂಪಾದಿಸಿ. ೯. ನಿಮ್ಮನ್ನು ಹುಡುಕಿಕೊಳ್ಳುವ ಅತ್ಯುತ್ತಮ ಉಪಾಯವೆಂದರೆ ಬೇರೆಯವರ ಸೇವೆಯಲ್ಲಿ ನಿಮ್ಮನ್ನು ನೀವೇ ಮರೆಯುವುದು. ೧೦. ಅವರು ನಿಮ್ಮನ್ನು ಮೊದಲು ಕಡೆಗಣಿಸಬಹುದು. ನಂತರ ನಗಬಹುದು, ನಂತರ ಹೋರಾಡಬಹುದು, ನಂತರ ನೀವೇ ಗೆಲ್ಲುವಿರಿ. ೧೧. ನೀವು ಮಾನವತೆಯಲ್ಲಿ ನಂಬಿಕೆ ಕಳೆದುಕೊಳ್ಳಬಾರದು; ಮಾನವತೆ ಒಂದು ಸಾಗರ. ಸಾಗರದ ಕೆಲವು ಬಿಂದುಗಳು ಕೊಳಕಾಗಿ ಬಿಟ್ಟರೆ ಸಾಗರ ಕೊಳಕಾಗುವುದಲ್ಲ. ಆರೋಗ್ಯವೇ ಮನುಷ್ಯನ ನಿಜವಾದ ಐಶ್ವರ್ಯ. ಬೆಳ್ಳಿ ಬಂಗಾರಗಳ ಗಟ್ಟಿಗಳಲ್ಲ. ೧೨. ಸಂತೋಷ ಸಿಗುವುದು ನೀವು ಆಲೋಚಿಸುವ, ಹೇಳುವ ಮತ್ತು ಮಾಡುವ ವಿಷಯಗಳಲ್ಲಿ ಸಾಮರಸ್ಯವಿದ್ದಾಗ. ೧೩. ಕ್ರಿಯೆಯ ವಿನಃ ನೀವು ಎಲ್ಲೂ ತಲುಪಲಾರಿರಿ. ೧೪. ಭವಿಷ್ಯವು ನೀವು ವರ್ತಮಾನದಲ್ಲಿ ಏನು ಮಾಡುತ್ತೀರಿ ಎಂಬುದನ್ನು ಅವಲಂಬಿಸಿದೆ. ೧೫. ಭೂಮಿಯು ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುತ್ತದೆ. ಪ್ರತಿಯೊಬ್ಬನ ದುರಾಸೆಯನ್ನಲ್ಲ. ೧೬. ಶಕ್ತಿಯು ದೈಹಿಕ ಸಾಮರ್ಥ್ಯದಿಂದ ಬರುವುದಲ್ಲ. ಅಸೀಮ ಮನೋಬಲದಿಂದ ಮಾತ್ರ. ೧೭. ನಿಮ್ಮ ಕ್ರಿಯೆಗಳ ಪರಿಣಾಮವೇನೆಂದು ನಿಮಗೆ ಗೊತ್ತಿರಲಾರದು. ಆದರೆ ನೀವು ಏನೂ ಮಾಡದಿದ್ದರೆ ಪರಿನಾಮವೇ ಇರಲಾರದು. ೧೮. ಸ್ವಾತಂತ್ರ್ಯಕ್ಕೆ ನಿಜವಾದ ಬೆಲೆ ಬರುವುದು ತಪ್ಪು ಮಾಡಲಿಕ್ಕೂ ಸ್ವಾತಂತ್ರ್ಯವಿದ್ದರೆ ಮಾತ್ರ. ೧೯. ನೀವು ಮುಷ್ಟಿಯನ್ನು ಬಿಗಿ ಹಿಡಿದು ಕೈ ಕುಲುಕಲಾರಿರಿ. *********************************** ಡಾ.ಪಾರ್ವತಿ ಜಿ.ಐತಾಳ್
ಗಾಂಧಿ ವಿಶೇಷ ‘ನಮ್ಮ ಮಹಾತ್ಮ’ ಎಸ್. ವಿಜಯಗುರುರಾಜ ಗುಜರಾತಿನ ಸುಪುತ್ರಕಸ್ತೂರ್ ಬಾ ರ ಬಾಳಮಿತ್ರಆಫ್ರಿಕನ್ ಹಕ್ಕುಗಳಿಗಾಗಿ ಹೋರಾಡಿಅಜೇಯನಾದ ಬ್ಯಾರಿಸ್ಟರ್ ಮೇಲು ಕೀಳಿನ ಕತ್ತಲೆಯ ಕಳೆದುಐಕಮತ್ಯ ಸಾಧಿಸಿದ ಸಾಧಕಸಾಬರ್ಮತಿ ಆಶ್ರಮದಿ ನೆಲೆಸಿಚರಕದಿ ನೂಲು ನೇಯ್ದ ಗುರಿಕಾರಮಹೋನ್ನತ ಧ್ಯೇಯಗಳ ಹರಿಕಾರ ಉಪ್ಪಿನ ಸತ್ಯಾಗ್ರಹದಿ ದಂಡೀಯಾತ್ರೆಯಪಾದ ಸವೆಸಿದ ದಂಡನಾಯಕಉಪವಾಸ ಸತ್ಯಾಗ್ರಹಗಳ ಕೈಗೊಂಡುಹರಿಜನ ಅಸ್ಪೃಷ್ಯತೆಗಳ ನಿವಾರಿಸಿಮದ್ಯಪಾನ ವಿರೋಧಿ ಚಳುವಳಿಗಳ ಮುನ್ನಡೆಸಿದ ಮಹಾತ್ಮ ಕಸ್ತೂರ್ ಬಾ ಆಶ್ರಮದ ಆಶ್ರಯಧಾತೆಅನಾಥೆ ಲಕ್ಷಿö್ಮಯ ಲಾಲಿಸಿದ ಮಹಾಮಾತೆಸೇವಾಗ್ರಾಮದ ಕರ್ಮಭೂಮಿಯಲಿಕುಷ್ಠ ರೋಗಿಗಳ ಪಾಲಿಸಿದ ಶುಶ್ರೂಷಕಿಖಾದಿಯ ಒರಟಿನಿಲಿ ಮೃದು ಮನಸ ಸಾಧ್ವಿಧರ್ಮ ತ್ಯಾಗಗಳ ಸೇವಾ ಸಂಘರ್ಷಗಳಲಿಬಾಪುವಿನ ಬಲಗೈ ಆದ ಬಾ ಭಾರತಾಂಬೆಯ ಸೆರೆಯ ಬಿಡಿಸಲುಬ್ರಿಟಿಷರ ಕಪಿಮುಷ್ಟಿ ಸಡಿಸಲುಸೆರೆಮನೆಯೇ ಮನೆಯಾಗಿಸಿದಬಾಪೂ ಬಾ ರ ಜೀವನ ಯಾನಸ್ವಾತಂತ್ರö್ಯ ತಂದಿತ್ತು ಸ್ವಾತಂತ್ರö್ಯ ಗೀತೆ ಹಾಡಿಹೇ ರಾಮ್ ಹೇ ರಾಮ್ಎನ್ನುತ ಅಮರನಾದನಮ್ಮ ಮಹಾತ್ಮ ******************************
ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ
ಲೇಖನ ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ ಡಾ. ಸಹನಾ ಪ್ರಸಾದ್ ಇಂದಿನ ಜೀವನ ಬಹಳ ಸ್ಪರ್ಧಾತ್ಮಕವಾದುದು.ನಮ್ಮ ಯುವ ಜನಾಂಗವನ್ನು ನೋಡಿದಾಗ ಕೆಲವೊಮ್ಮೆ “ ಅಯ್ಯೋ ಪಾಪ” ಎನ್ನಿಸುವುದುಂಟು.ಎಷ್ಟು ಓದಿದರೂ ಸಾಲದು, ಎಷ್ಟು ಕಷ್ಟಪಟ್ಟರೂ, ಎಷ್ಟು ಅಂಕೆಗಳು ತೆಗೆದರೂ ಸಾಕಾಗುವುದಿಲ್ಲ. ಯಾವಾಗಲೂ ಒತ್ತಡದ ಬದುಕು. ಚಿಕ್ಕ ತರಗತಿಗಳಿಂದಲೇ ಶುರು.ತರಹ ತರಹದ ಕ್ಲಾಸುಗಳು, ಮನೆ ಪಾಠಗಳು, ಒಂದು ತರಗತಿಯಿಂದ ಇನ್ನೊಂದಕ್ಕೆ ಯಾವಾಗಲೂ ಓಟ. ನರ್ಸರಿಗೆ ಸೇರುವ ಮೊದಲೇ “ಕೋಚಿಂಗ್”. ವಿಧ ವಿಧವಾದ ಬಣ್ಣಗಳು,ಆಕೃತಿಗಳು, ಪದ್ಯಗಳನ್ನು ಕಂಠ ಪಾಠ ಮಾಡಬೇಕು. ತಾಯಿ ಪ್ರೀತಿಯಿಂದ ಮುದ್ದು ಮಾಡುತ್ತಾ ಕಲಿಸಬೇಕಾದ ವಿಷಯಗಳನ್ನು ಈಗ ದುಡ್ಡು ಕೊಟ್ಟು ಶಿಕ್ಷೆಯ ತರಹ ಕಲಿಸುವ ತರಗತಿಗಳು, ಅವನ್ನು ಅಳು ಮುಖದಿಂದ ಕಲಿವ ಮಕ್ಕಳು.ಸಂಜೆ ಆರಾಮವಾಗಿ ಆಟವಾಡಿಕೊಂಡಿರಬೇಕಾದ ಮಕ್ಕಳು ತರಗತಿಯಲ್ಲಿರುವುದನ್ನು ನೋಡಿದರೆ ಬೇಸರವಾಗುತ್ತದೆ, ಆಟವಾಡಿ ಬೆಳೆಯಬೇಕಾದ ಎಳೆ ಮನುಸ್ಸುಗಳು ಈ ರೀತಿಯ ಸತತವಾದ ಧಾಳಿಯಿಂದ ಕೊರಗುವ ಸಾಧತೆಗಳೂ ಇವೆ. ಎಷ್ಟೋ ಸಲ ತಾವು ಮಾಡಲಾಗದಿದ್ದನ್ನು ಮಕ್ಕಳಿಂದ ಮಾಡಿಸುವ, ತಮ್ಮ ಅಪೂರ್ಣ ಕನಸುಗಳನ್ನು ಅವರ ಮೂಲಕ ಸಾಕಾರಗೊಳಿಸುವ ಪೋಷಕರೂ ಸಿಗುತ್ತಾರೆ.ನಮ್ಮ ಮಕ್ಕಳ ಅಭಿವೃದ್ಧಿ ಎಲ್ಲಾ ರೀತಿಯಲ್ಲೂ ಆಗಲಿ, ಅವರ ಬೆಳವಣಿಗೆ ಪರಿಪೂರ್ಣವಾಗಲಿ ಎಂದು ಸದ್ದುದ್ದೇಶ ಹೋಂದಿರುವ ಮಾತಾ ಪಿತೃಗಳೂ ಇದ್ದಾರೆ. ಕೆಲವು ಮಕ್ಕಳು ಅತಿಯಾಗಿ ಚೂಟಿಯಾಗಿರುತ್ತಾರೆ.ಅಂತಹ ಮಕ್ಕಳನ್ನು ಹಿಡಿಯುವುದು ಬಲು ಕಷ್ಟ., ತಂಟೆ ಮಾಡದೆ, ಏನೋ ಒಂದು ತೊಂದರೆಗೆ ಸಿಕ್ಕಿಹಾಕಿಕೊಳ್ಳದೆ ಇದ್ದರೆ ಆ ಮಕ್ಕಳಿಗೆ ಸಮಾಧಾನವೇ ಇಲ್ಲ. ಅಂತಹ ಮಕ್ಕಳಿಗೆ ಈ ರೀತಿಯ ತರಗತಿಗಳಿಗೆ ಸೇರಿಸುವುದರಿಂದ ಸ್ವಲ್ಪ ಮಟ್ಟಿಗೆ ಅವರ ತುಂಟತನ ಕಡಿಮೆಯಾಗುತ್ತದೆ ಹಾಗೂ ಜ್ನಾನಾಭಿವೃದ್ಧಿ ಕೂಡ ಆಗುತ್ತದೆ.“ಮಕ್ಕಳಿಗೆ ಕಷ್ಟ ಎಂದರೇನು, ಅವರಿಗೆ ಇನ್ನೇನು ಕೆಲಸವಿರುತ್ತದೆ? ಎಲ್ಲ ಕಡೆ ಕರೆದೊಯ್ಯಲು,ಕೇಳಿದ್ದೆಲ್ಲಾ ಕೊಡಿಸಲು ನಾವಿದ್ದೇವೆ, ಕಲಿಯಲು ಏನು ಕಷ್ಟ” ಎಂದು ಕೇಳುವ ಪೋಷಕರು ಬಹಳ. ಅದು ನಿಜವೇ ಆದರೂ, ಮಕ್ಕಳ ಇಷ್ಟ ಹಾಗೂ ಆಸಕ್ತಿಯನ್ನೂ ಗಮನಿಸಿ ಪೋಷಕರು ಮುಂದುವರೆಯುವುದು ಮುಖ್ಯ.ಎಷ್ಟೋ ಜನ ವಿದ್ಯಾರ್ಥಿಗಳಿಗೆ ವಿಜ್ಞಾನ ಕಷ್ಟ. ಅದರಲ್ಲೂ ಗಣಿತವೆಂದರೆ ಅಲರ್ಜಿ.ಅಂತಹ ಮಕ್ಕಳನ್ನು ಬಲವಂತವಾಗಿ ವಿಜ್ಞಾನ ಓದುವುದಕ್ಕೆ ನೂಕಿದರೆ ಅದು ತುಂಬಾ ತಪ್ಪು.ಎಷ್ಟೂ ಜನ ಪೀಯೂಸೀಯಲ್ಲಿ ಗಣಿತ ತೆಗೆದುಕೊಂಡು, ಒದ್ದಾಡಿ, ಆಮೇಲೆ ತಮ್ಮ ತಮ್ಮ ಆಸಕ್ತಿಯ ಮೇಲೆ ಬೇರೆ ವಿಷಯ ಓದುವುದುಂಟು. ಕೆಲವು ಪೋಷಕರು ಇದನ್ನು ಅರ್ಥ ಮಾಡಿಕೊಂಡು ಮಕ್ಕಳಿಗೆ ಉತ್ತೇಜನ ನೀಡಿದರೆ,, ಇನ್ನೂ ಕೆಲವರು ಇದರಿಂದ ತಮ್ಮ ಅಭಿಮಾನಕ್ಕೆ ಧಕ್ಕೆ ಎಂದೇ ಭಾವಿಸುತ್ತಾರೆ. ಖ್ಯಾತ ವೈದ್ಯರೊಬ್ಬಳ ಮಗಳು ಕಲಾ ವಿಭಾಗಕ್ಕೆ ಸೇರಲು ಬಂದಿದ್ದಳು.ಅವಳು ಮುಂಚೆ ಓದಿದ್ದು ವಿಜ್ಞಾನ. ಅಂಕೆಗಳೂ ಸುಮಾರು ಚೆನ್ನಾಗಿಯೇ ಬಂದಿತ್ತು. ಸಾಮಾನ್ಯವಾಗಿ ಕೇಳುವಂತೆ ಯಾಕೆ ಈ ಬದಲಾವಣೆ ಎಂದು ವಿಚಾರಿಸಿದಾಗ , ಅವಳು ಹೇಳಿದ್ದು “ ನನಗೆ ಮುಂಚಿಂದಲೂ ಕಲೆಯ ಬಗ್ಗೆ ಒಲವು,ಅದರಲ್ಲೂ ಆಂಗ್ಲ ಸಾಹಿತ್ಯ ನನ್ನ ಅಚ್ಚು ಮೆಚ್ಚಿನ ವಿಷಯ.ಆದರೆ ನಮ್ಮ ಕುಟುಂಬದಲ್ಲಿ ಎಲ್ಲರೂ ವಿಜ್ಞಾನ ಓದಿದವರೆ, ವೈದ್ಯ ಅಥವಾ ಎಂಜಿನಿಯರ್ ಆಗಿರುವರೆ. ಇದುವರೆಗೂ ನಾನು ತೆಗೆದಿರುವ ಅಂಕಿಗಳಿಗೂ, ನನ್ನ ಆಸಕ್ತಿಗೂ ಏನೂ ಸಂಭಂಧವಿಲ್ಲ.ಅದೆಲ್ಲ ಟ್ಯೂಷನ್ ಮಹಿಮೆ ಅಷ್ಟೇ”. ಅವಳ ತಾಯಿಯ ಮುಖ ಕೋಪದಿಂದ ಗಂಟಿಕ್ಕಿತ್ತು.” ನಾನು ನನ್ನ ಆಸ್ಪತ್ರೆಯನ್ನು ಇವಳು ಮುಂದುವರೆಸುತ್ತಾಳೆ,ಅದನ್ನು ಬೆಳೆಸುತ್ತಾಳೆ ಎಂದು ಕನಸು ಕಟ್ಟಿದ್ದೆ.ಇವಳಿಗೆ ಅದರ ಪರಿವೆಯೇ ಇಲ್ಲ”. ಅವರ ಮಾತಿಗೆ ಸೊಪ್ಪು ಹಾಕದೆ ಆ ಹುಡುಗಿಗೆ ಸೀಟ್ ಕೊಡುವುದೆಂದು ನಿರ್ಧರಿಸಿದೆವು. ಆದರೆ ಸ್ವಲ್ಪ ದಿನದ ನಂತರ ತಿಳಿದುದೆಂದರೆ ಅವಳಿಗೆ ಬಲವಂತವಾಗಿ ಇಂಜಿನೀರಿಂಗ್ ಸೀಟ್ ಕೊಡಿಸಿದ್ದರು.ಕೆಲವು ವರುಷದ ನಂತರ ಸಿಕ್ಕಾಗ ಹೇಗಿದ್ದೆಯ ಎಂದು ಕೇಳಿದರೆ, ಅವಳ ಮಾತಿನಲ್ಲಿ ರೋಷ ಹೆಪ್ಪುಗಟ್ಟಿತ್ತು. ಎಲ್ಲ ಸೆಮ್ಮಿಸ್ಟರ್ನಲ್ಲೂ “ ಬ್ಯಾಕ್ ” ಇದೆ.ನಮ್ಮ ಮನೆಯವರ ಸಮಾಧಾನಕ್ಕಾಗಿ ಓದುತ್ತಿದ್ದೇನೆ. ಆದರೆ ಮನಸ್ಸೆಲ್ಲ ಸಾಹಿತ್ಯದ ಮೇಲೆ. ಕೆಲವೊಮ್ಮೆ, ಅವರಿಗೆ ಬುದ್ಧಿ ಕಲಿಸಲಿಕ್ಕಾದರೂ ಇದೆ ರೀತಿ ನಪಾಸಾಗುತಲೇ ಇರೋಣ ಎನಿಸುತ್ತದೆ”. ಅವಳ ಬಿಚ್ಚು ಮನಸ್ಸಿನ ಮಾತು ಕೇಳಿ ಎದೆ ಧಸಕ್ಕೆಂದಿತು. “ ನೋಡಮ್ಮ, ಇದು ನಿನ್ನ ಬದುಕು. ನೀನು ಇದೇ ರೀತಿ ಅಂಕಿಗಳು ತೆಗೆಯುತ್ತಿದ್ದರೇ , ನಿನಗೆ ಒಳ್ಳೆಯ ಕೆಲಸ ಸಿಗುವುದು, ನೀನು ನಿನ್ನ ಸಾಹಿತ್ಯದ ಕಡೆ ಗಮನ ಕೊಡುವುದಕ್ಕಾಗುವುದೇ ಇಲ್ಲ.ಯೋಚಿಸು, ಅವರಿಗೆ ಬುದ್ಧಿ ಕಲಿಸಲು ಹೋಗಿ ನಿನ್ನ ಬದುಕನ್ನು ನೀನೆ ನಾಶ ಮಾಡಿಕೊಳ್ಳಬೇಡ “ ಎಂದು ಹೇಳಿದಾಗ ಅವಳ ಕಣ್ಣಲ್ಲಿ ಅರ್ಥವಾದ ಭಾವ ಕಂಡು ಬಂದಿತು.”. ಅಡ್ಮಿಷನ್ ಸಮಯದಲ್ಲಿ ಮಕ್ಕಳ ಜತೆ ಪೋಷಕರಿಗೂ “ ಕೌನ್ಸಿಲ್ಲಿಂಗ್” ಬೇಕಾಗುತ್ತದೆ.ಮಕ್ಕಳಿಗೆ ನಮ್ಮ ಬದುಕಿನ ಒಂದು ಭಾಗದಂತೆ ನೋಡದೆ, ಅವರಿಗೂ ಅವರದೇ ಆದ ವ್ಯಕ್ತಿತ್ವ ಇದೆಯೆಂದು ಅರಿತು ಅವರನ್ನು ಗೌರವಿಸಿದಾಗ, ಅವರ ಬದುಕೂ ಸುಂದರ, ನಮ್ಮ ಬದುಕೂ ಸಾರ್ಥಕ! *****************************************
ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ Read Post »
ಥಾಂಕ್ಸ್ ಎಂದರೆ ಸಾಕೇ
ಲೇಖನ ಥಾಂಕ್ಸ್ ಎಂದರೆ ಸಾಕೇ ಶಾಂತಿವಾಸು ನನಗೆ ನಮ್ಮಪ್ಪ (ನಾವು ನಮ್ಮಪ್ಪನನ್ನು ಅಣ್ಣ ಅಂತಾನೇ ಕರೀತಿದ್ದಿದ್ದು) ಏನು ಅಂತ ಅರ್ಥವಾಗಿದ್ದು, ನಾನು ಮದುವೆ ಆದ ಮೇಲೇನೆ. ನನ್ನ ಮದುವೆಯಾದ ನಂತರ ಮೊದಲ ಸಲ ಅತ್ತೆ ಮನೆಗೆ ಹೊರಡಿಸಲು ಕೆಲವರು ಹಾಗೂ ಕರೆದುಕೊಂಡು ಹೋಗಲು ಬಂದ ನೆಂಟರು ಮನೆ ತುಂಬಾ ತುಂಬಿರುವಾಗ, ನಮ್ಮಪ್ಪ ಬಚ್ಚಲುಮನೆಯ ಒಳಗೆ ಸೇರಿಕೊಂಡು ಚಿಲಕ ಜಡಿದು ಕಿರಿಚಿ ಕಿರಿಚಿ ಅತ್ತಿದ್ದನ್ನು ಕಂಡು ಎಲ್ಲರಿಗೂ ಪರಮಾಶ್ಚರ್ಯ. ನಮ್ಮಪ್ಪನ ಹೃದಯದಲ್ಲಿಯೂ ಪ್ರೀತಿ ಎಂಬ ಒರತೆ ಜಿನುಗುತ್ತದೆ ಎಂದು ಎಲ್ಲರಿಗೂ ಗೊತ್ತಾಗಿದ್ದೇ ಆಗ. ಪಟಪಟ ಮಾತು, ಹಠ ಹಾಗೂ ಅತಿ ಶುದ್ಧತೆಯಿದ್ದ ನಾನು ನಮ್ಮಪ್ಪನ ಕಣ್ಣಲ್ಲಿ “ಸಾಧಕಿ”. ಅತೀ ಕೋಪ ಇದ್ದ ನಮ್ಮಪ್ಪ ಬಹಳ ಶಿಸ್ತಿನ ಸಿಪಾಯಿಯಾಗಿದ್ದರು. ಮನೆಗೆ ಯಾರೇ ಬಂದರೂ ಯಾರೂ ಮುಖ ಹೊರಹಾಕುವಂತಿರಲಿಲ್ಲ. ನನಗೊಬ್ಬಳಿಗೆ ಮಾತ್ರ ಅದರಲ್ಲೆಲ್ಲ ಸ್ವಲ್ಪ ಸಡಿಲತೆಯಿತ್ತು. ಬಂದವರೆದುರು ಮಾತು, ಡಾಕ್ಟರ್ ರಾಜ್ ಕುಮಾರ್ ಪರ ವಾದ, ಚರ್ಚೆ ಮಾಡುವುದಕ್ಕೂ ಮತ್ತು ಅವರಿಗೆಲ್ಲಾ ತಿಂಡಿ ಕಾಫಿ ಕೊಡುವುದಕ್ಕೂ ನನಗೆ ಮಾತ್ರ ಅವಕಾಶವಿತ್ತು. ನಾವು ನಾಲ್ಕು ಜನ ಅಕ್ಕತಂಗಿಯರು ಕೂರವ, ನಿಲ್ಲುವ ಭಂಗಿಗಳೆಲ್ಲ ಅವರು ಮಾಡಿದ ನಿಯಮಗಳ ಪಟ್ಟಿಯಲ್ಲಿದ್ದವು. ಮಕ್ಕಳು ಕೂರುವಂಥ ಪುಟ್ಟ ಪುಟ್ಟ ಕಬ್ಬಿಣದ ಕಟ್ಟಿನಲ್ಲಿ ಬಿಗಿದ ಪ್ಲಾಸ್ಟಿಕ್ ವೈರಿನ ಮೂರು ಖುರ್ಚಿಗಳನ್ನು ತಂದು ಅದರಲ್ಲಿಯೇ ಕೂರಲು ನಿರ್ಭಂಧ ಹೇರಿದ್ದರು. ನನಗೆ ಬುದ್ದಿ ಬಂದ ಮೇಲೆ (ನನಗೆ ಪ್ರಶ್ನೆ ಕೇಳುವಷ್ಟು ಬುದ್ದಿ ಬಂದದ್ದು ನನ್ನ 20 ವರ್ಷ ವಯಸ್ಸಿನ ನಂತರ) ಕೇಳಿದ್ದೆ “ಯಾಕಣ್ಣ ನಮ್ಮನ್ನ ಯಾವಾಗಲೂ ಪುಟ್ಟ ಖುರ್ಚಿ ಮೇಲೆ ಕೂರಿಸ್ತಿದ್ದೆ” ಅಂತ. ಅದಕ್ಕವರು “ಜಾಗ ದೊಡ್ಡದಿದ್ರೂ ಚಿಕ್ಕದಾಗಿ ಕೂತ್ಕೋಳ್ಳೋದನ್ನು ಕಲಿಸೋಕ್ಕೆ” ಎಂದಿದ್ದರು. ಯಾರಿಗೂ ಏನೂ ಅಲ್ಲವೆನಿಸುವ, ಅಷ್ಟು ಸಣ್ಣ ವಿಷಯ ಕೂಡಾ ನನ್ನ ತಂದೆಯ ಜೀವನದಲ್ಲಿ ಶಿಸ್ತಿನ ಭಾಗವಾಗಿತ್ತು. ನನ್ನ ತಂದೆಯ ಕೊನೇ ದಿನ ನನ್ನನ್ನು ಮನೆಗೆ ಕರೆಸಿಕೊಂಡು, ಪಕ್ಕದಲ್ಲೇ ರಾತ್ರಿ ಪೂರ್ತಿ ಕೂಡಿಸಿಕೊಂಡು ತಾನು ನಿದ್ದೆ ಮಾಡಿದ್ದರು. ಕೊನೆಯ ಊಟ ನನ್ನ ಕೈಯಿಂದ ಮಾಡಿ, ತಲೆಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ, ದೀರ್ಘವಾದ ಉಸಿರಿನೊಂದಿಗೆ ಹಾಗೇ ಹೊರಟುಬಿಟ್ಟರು. ನಾನು ತಣ್ಣಗಾದ್ರೆ ತಿನ್ನಲ್ಲ ಅಂತ ಪ್ರತಿದಿನ ಬೇಸರ ಮಾಡದೆ, ಎರಡು ಕಿಲೋಮೀಟರ್ ದೂರವಿದ್ದ ನನ್ನ ಶಾಲೆಯ ತನಕ ನಡೆದು ಊಟ ತಂದುಕೊಟ್ಟು, ಮತ್ತೆರಡು ಕಿಲೋಮೀಟರ್ ವಾಪಸ್ ಮನೆಗೆ ಬರುತ್ತಿದ್ದ ನನ್ನಪ್ಪನಿಗೋ, ತಾತನಿಗೋ ನಾನೆಂದೂ ಥಾಂಕ್ಸ್ ಹೇಳೇ ಇಲ್ಲ. ನನಗೆ ಊಟದ ಡಬ್ಬಿ ಕೊಟ್ಟುಬಂದು ನಮ್ಮಪ್ಪ, ಊಟ ಮಾಡಿ ಎರಡು ಕಿಲೋಮೀಟರ್ ದೂರದ ಕಾರ್ಖಾನೆಗೆ ಎರಡನೇ ಪಾಳಿಯ ಕೆಲಸಕ್ಕೆ ನಡೆದು ಹೋಗಬೇಕಿತ್ತು. ಅಲ್ಲಿ ಮೆಷಿನಿನ ಮುಂದೆ ನಿಂತು ಕೆಲಸ ಮಾಡಿ, ಮಧ್ಯರಾತ್ರಿ 12.30ಗೆ ಮನೆಗೆ ನಡೆದು ಬರುತ್ತಿದ್ದ ನನ್ನಪ್ಪನ ಕಷ್ಟಗಳು, ಪ್ರೀತಿ ನನಗೆ ತಿಳಿದದ್ದು ಮಾತ್ರ ಗಂಡನ ಮನೆ ಮೆಟ್ಟಿದ ನಂತರವೆ. ನಾಲ್ಕು ಹೆಣ್ಣು ಮಕ್ಕಳಿಗೂ 8 ಗಂಟೆ ಒಳಗೆ ಸ್ನಾನ, ಸೀಮೆಎಣ್ಣೆ ಸ್ಟವ್ವಿನಲ್ಲಿ ತಿಂಡಿ, ಬ್ಯಾಗು ಏನೇನೋ ಅವಸ್ಥೆ ಜೊತೆಗೆ ಎಂಟು ಜಡೆ ಹೆಣಿದ ಅಮ್ಮನಿಗೂ ನಾನೆಂದೂ ಥಾಂಕ್ಸ್ ಹೇಳಲಿಲ್ಲ. ಎಳವೆಯಲ್ಲಿ ಅಂದರೆ ಇಲ್ಲಿಗೆ 45 ವರ್ಷಗಳ ಹಿಂದೆ ಬೇನೆ ಬಂದು, ಮುಚ್ಚಿಹೋದ ಕಣ್ಣಿಗೆ ಹಾಕಲು, ಕಳ್ಳರ ಕೂಪವಾಗಿದ್ದ, ಆಗಿನ ಬೆಂಗಳೂರು ಹೊರವಲಯದಲ್ಲಿದ್ದ (ಈಗ ಈ ಜಾಗವನ್ನೂ ದಾಟಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿಕೊಂಡಿದೆ) 40 ಕ್ಯಾಂಡಲ್ ಬ್ರಿಡ್ಜ್ ಹತ್ತಿರವಿದ್ದ ಸೀಗೇ ಬೇಲಿಯ ಕೊರಡನ್ನು, ನನ್ನ ಸೋದರಮಾವನೊಡನೆ ನಡೆದೇ ಹೋಗಿ ತಂದು, ಪ್ರಾಣ ಹಾರಿಹೋಗುವಂತೆ ಊದಿದರೆ, ಬರುವ ಎಣ್ಣೆಯನ್ನು ಹಾಕಿ ಕಣ್ಣುಳಿಸಿದ ನನಪ್ಪನನ್ನು ಕಣ್ಣುಮುಚ್ಚುವ ತನಕ ಮಗುವಂತೆ ಕಾಯ್ದಿದ್ದೇನೆ. ಗಂಡ್ಯಾಕೆಂದು ಇಂದು ನಿಡುಸುಯ್ವ ಇದೇ ಜನ, ಅಂದು “ನಾಲ್ಕೂ ಹೆಣ್ಣು ಬೋಕಿಗಳೆಂದೂ, ಕೊಳ್ಳಿ ಇಡಲು ಒಬ್ಬ ಗಂಡು ಹೆರಲು ಯೋಗ್ಯತೆಯಿಲ್ಲದವಳು, ಕೊನೇ ಕಾಲದಲ್ಲಿ ನಿನಗ್ಯಾರು ಆಸರೆ” ಎನ್ನುತ್ತಾ ಮೂದಲಿಸಿ, ಹೆದರಿಸಿದಾಗೆಲ್ಲ, ಕೊರಗುತ್ತಿದ್ದ ನಮ್ಮಮ್ಮನ ಮನಸ್ಸನ್ನು ಮಾತ್ರ, ಅವರಿರುವ ತನಕವೂ ಬದಲಾಯಿಸಲಾಗದೆ ಸೋತಿದ್ದೇನೆ… ಇದುವೇ ಅಲ್ಲವೇ “ಸಹಜ ಜೀವನ” ಮಾತುಮಾತಿಗೆ ಥಾಂಕ್ಸ್ ಥಾಂಕ್ಸ್ ಅನ್ನುವುದು, ಮತ್ತು ನಮ್ಮ ಮಕ್ಕಳಿಗೆ ನಾವು ಮಾಡಲೇಬೇಕಾದ ಕರ್ತವ್ಯಕ್ಕೂ ಥಾಂಕ್ಸ್ ನಿರೀಕ್ಷಿಸುವ ಇಂದಿನ ಮನಃಸ್ಥಿತಿ ಖಂಡಿತ ಅಸಹಜ. ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ನನ್ನ ತಂದೆತಾಯಿಯರಿಗೋ ಮತ್ತು ಅವರ ಸಮವಯಸ್ಕರಿಗೋ ಈ ವಿಷಯದಲ್ಲಿ ಖಿನ್ನತೆ ಇರಲಿಲ್ಲ. ಯಾಕೆಂದ್ರೆ ಎಲ್ಲರೂ ಮಾಡುವ ಕೆಲಸವನ್ನೇ ನಾವು ಮಾಡುವುದೆಂಬ ಭಾವನೆಯಿತ್ತು. ಕುಟುಂಬಕ್ಕಾಗಿ ನಾನೇನೂ ವಿಶೇಷವಾದದ್ದನ್ನು ಮಾಡುತ್ತಿಲ್ಲ ಅನ್ನೋ ಹಾಗೆ ಹೇಳದೆ ಬದುಕಿಬಿಟ್ಟರು. ಮುಖ್ಯವಾಗಿ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ನಿರೀಕ್ಷೆಗಳೆ ಇರಲಿಲ್ಲ. ಬದಲಾದ ಪರಿಸ್ಥಿತಿಗಳು ಜೀವನದ ಸಹಜತೆಯನ್ನು ನುಂಗಿ ಖಿನ್ನತೆಯನ್ನು ಹುಟ್ಟುಹಾಕುತ್ತಿವೆ. ******************************************
ಥಾಂಕ್ಸ್ ಎಂದರೆ ಸಾಕೇ Read Post »
ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..!
ಲೇಖನ ವಿಮರ್ಶಾ ಲೋಕದ ದಿಗ್ಗಜ ಜಿ.ಎಸ್. ಆಮೂರ..! ಜಿ.ಎಸ್. ಅಮೂರರು ನಮನಗಲಿದ್ದಾರೆ ಈಗ. ಆದರೆ ಅವರ ಸಾಹಿತ್ಯ ಕೃತಿಗಳು ಮತ್ತು ಮಾಡಿದ ಪಿ.ಎಚ್.ಡಿಯ ಸಾಹಿತ್ಯ ಸೌರಭ ನಮ್ಮ ಜೊತೆಯಲ್ಲಿ ಇದೆ. ಆಗಲಿ, ಜಿ.ಎಸ್.ಅಮೂರರಿಗೆ ಅನಂತಾನಂತ ನಮನಗಳು… ೦೮.೦೫.೧೯೨೫ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ೪-೫ ದಶಕಗಳಿಂದಲೂ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೧೯೨೫ ರ ಮೇ ೮ ರಂದು. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಮನೆಗೆ ತರುತ್ತಿದ್ದ ಸದ್ಭೋಧ ಚಂದ್ರಿಕಾ, ಕರ್ಮವೀರ ಮುಂತಾದ ಪತ್ರಿಕೆಗಳ ಸಂಗ್ರಹವೇ ಇದ್ದು ಇದನ್ನೂ ಓದುತ್ತಾ ಬಂದಂತೆಲ್ಲಾ ಆಮೂರರಿಗೆ ಸಾಹಿತ್ಯದಲ್ಲಿ ಆಸ್ಥೆ ಬೆಳೆಯ ತೊಡಗಿತು. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ ಆಯಿತು. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪಡೆದ ಬಿ.ಎ.ಆನರ್ಸ್ ಪದವಿ (೧೯೪೭) ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವಿ (೧೯೪೯) ಪ್ರತಿ ವರ್ಷವೂ ರ್ಯಾಂಕ್ ಪಡೆದ ವಿದ್ಯಾರ್ಥಿ ಜಿ.ಎಸ್ ಅಮೂರರು. ೧೯೬೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ `THE CONCEPT OF COMEDY’ ಮಹಾ ಪ್ರಬಂಧ ಮಂಡಿಸಿ ಪಡೆದ ಪಿ.ಹೆಚ್.ಡಿ. ಪದವಿ ಪಡೆದರು. ಗದುಗಿನ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ (೧೮೬೪-೬೮) ಸೇರಿ ನಂತರ ೧೯೬೮ರಲ್ಲಿ ಔರಂಗಾಬಾದ್ನ ಮರಾಠವಾಡ ವಿದ್ಯಾಪೀಠದಲ್ಲಿ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿಯೂ ನಿವೃತ್ತರಾಗುವವರೆವಿಗೂ (೧೯೮೫) ಕಾರ್ಯ ನಿರ್ವಹಿಸಿದರು..! ಮುರಾಡವಾಡ ವಿದ್ಯಾಪೀಠದಲ್ಲಿದ್ದಾಗಲೇ ೧೯೭೨-೭೩ರಲ್ಲಿ ಫುಲ್ಬ್ರೈಟ್ ಫೆಲಿಶಿಪ್ ಪಡೆದು ಅಮೆರಿಕದ ಕೆಲಫೋರ್ನಿಯಾ (ಸಾಂಟಾಬಾರ್ಬರ) ಹಾಗೂ ಯೇಲ್ಸ್ ವಿಶ್ವವಿದ್ಯಾಲಯಗಳಲ್ಲಿ ಮತ್ತು ೧೯೭೩ರಲ್ಲಿ ಬ್ರಿಟಿಷ್ ಕೌನ್ಸಿಲ್ ಸಹಾಯದಿಂದ ಇಂಗ್ಲೆಂಡ್ನಲ್ಲಿ – ಹೀಗೆ ಎರಡುಬಾರಿ ಸಂಶೋಧನೆಯಲ್ಲಿ ನಿರತರಾಗಿದ್ದರು. ಇವರು ಪ್ರಾಧ್ಯಾಪಕರಾಗಿದ್ದಾಗ ೧೪ ವಿದ್ಯಾರ್ಥಿಗಳು ಪಿ.ಹೆಚ್.ಡಿ. ಹಾಗೂ ೩ ಎಂ.ಫಿಲ್. ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಿಂದ ಪದವಿ ಪಡೆದಿದ್ದಾರೆ. ಇವರ ಕನ್ನಡದ ಮೊದಲ ಕೃತಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾದುದು ಮಿಲ್ಟನ್ ಕವಿಯ ಮೇಲೆ ಬರೆದ ‘ಮಹಾಕವಿ ಮಿಲ್ಟನ್’ (೧೯೬೬). ನಂತರ ಮೊದಲ ವಿಮರ್ಶಾ ಪ್ರಬಂದಗಳ ಕೃತಿ ‘ಕೃತಿ ಪರೀಕ್ಷೆ’ಯಲ್ಲಿ ಕನ್ನಡದ ಪ್ರಮುಖ ಕಾದಂಬರಿಗಳಾದ ರಾವಬಹದ್ದೂರರ ‘ಗ್ರಾಮಾಯಣ’. ಅನಂತಮೂರ್ತಿಯವರ ಸಂಸ್ಕಾರ, ಶೌರಿ; ರಾಮಾನುಜನ್ರವರ ‘ಹಳದಿಮೀನು’, ಶಿವರಾಮ ಕಾರಂತರರ ಬೆಟ್ಟದ ಜೀವ ಮತ್ತು ಮರಳಿಮಣ್ಣಿಗೆ ಮುಂತಾದವುಗಳ ವಿಶ್ಲೇಶಣಾತ್ಮಾಕ ಲೇಖನಗಳಿಂದ ಕೂಡಿದೆ. ಇದಲ್ಲದೆ ಹಾಸನ ರಾಜಾರಾಯರು, ಶ್ರೀರಂಗರ ಕೃತಿಗಳ ಬಗ್ಗೆ, ಕೈಲಾಸಂರವರ ಇಂಗ್ಲಿಷ್ ನಾಟಕಗಳ ಬಗ್ಗೆಯೂ ಇದರಲ್ಲಿ ಲೇಖನಗಳಿವೆ. ಸಮಕಾಲೀನ ಕಥೆ-ಕಾದಂಬರಿ, ಕನ್ನಡ ಕಾದಂಬರಿಯ ಬೆಳವಣಿಗೆ, ಅ.ನ. ಕೃಷ್ಣರಾಯ, ಅರ್ಥಲೋಕ ಮುಂತಾದ ಕೃತಿಗಳಲ್ಲದೇ ಬೇಂದ್ರೆಯವರ ಗಂಗಾವತರಣವನ್ನೂ ಮಧ್ಯಬಿಂದುವಾಗಿಟ್ಟುಕೊಂಡು ಕಾವ್ಯ ಹಾಗೂ ಕಾವ್ಯೇತರ ಬರಹಗಳನ್ನೂ ವಿವೇಜಿಸುವ ‘ಭುವನದ ಭಾಗ್ಯ’ ಕೃತಿ, ವ್ಯವಸಾಯ, ಕನ್ನಡ ಕಥನ ಸಾಹಿತ್ಯ: ಕಾದಂಬರಿ, ವಿರಾಟಪುರುಷ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮುಂತಾದ ೩೯ ಕೃತಿಗಳಲ್ಲದೇ ಚಿತ್ತಾಲರ ಆಯ್ದ ಕಥೆಗಳು, ಕೆ ಸದಾಶಿವ ಅವರ ಕಥಾ ಸಾಹಿತ್ಯ, ಅವಳ ಕಥೆಗಳು, ಬೇಂದ್ರೆ ಕಾವ್ಯ, ಕನ್ನಡ ಕಥಾಲೋಕ, ಶ್ರೀರಂಗ ಸಾರಸ್ವತ, ಹುಯಿಲಗೋಳ ನಾರಾಯಣರಾಯರ ಸಮಗ್ರ ಸಾಹಿತ್ಯ ಮುಂತಾದವುಗಳನ್ನು ಸಂಪಾದಿಸಿದ್ದಾರೆ. ಇಂಗ್ಲಿಷ್ನಲ್ಲಿ ರಚಿಸಿರುವ ಕೃತಿಗಳು– ದಿ ಕಾನ್ಸೆಪ್ಟ್ ಆಫ್ ಕಾಮಿಡಿ, ಮನೋಹರ ಮಳಗಾಂವ್ಕರ್, ಆದ್ಯರಂಗಾಚಾಯ್, ದಿ ಕ್ರಿಟಿಕಲ್ ಸ್ಪೆಕ್ಟ್ರಮ್, ಇಮೇಜಸ್ ಅಂಡ್ ಇಂಪ್ರೆಷನ್ಸ್, ಎ.ಎನ್. ಕೃಷ್ಣರಾವ್, ಕ್ರಿಯೇಷನ್ಸ್ ಅಂಡ್ ಟ್ರಾನ್ಸ್ ಕ್ರಿಯೇಷನ್ಸ್, ದತ್ತಾತ್ರೇಯ ರಾಮಚಂದ್ರಬೇಂದ್ರೆ, ಪರ್ಸೆಷನ್ಸ್ ಆಫ್ ಮಾಡರ್ನ್ ಲಿಟರೇಚರ್, ಮೊದಲಾದ ೧೪ ಕೃತಿಗಳ ಜೊತೆಗೇ ಕ್ರಿಟಿಕಲ್ ಎಸ್ಸೆಸ್ ಹ್ಯಾನ್ ಇಂಡಿಯನ್ ರೈಟಿಂಗ್ ಇನ್ ಇಂಗ್ಲಿಷ್, ಕಾಲೊನಿಯಲ್ ಕೌನ್ಷಿಯಸ್ ನೆಸ್ ಇನ್ ಕಾಮನ್ವೆಲ್ತ್ ಲಿಟರೇಚರ್ ಮುಂತಾದ ಆರು ಕೃತಿಗಳನ್ನೂ ಸಂಪಾದಿಸಿದ್ದಾರೆ. ಹೀಗೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿರುವುದಲ್ಲದೇ ಬೆಂಗಳೂರು, ಕರ್ನಾಟಕ ವಿಶ್ವವಿದ್ಯಾಲಯ, ಬೆನಾರಸ್ ಹಿಂದೂ ವಿಶ್ವವಿದ್ಯಾಲಯ, ಮೈಸೂರಿನ ಧ್ವನ್ಯಾಲೋಕ ಮುಂತಾದೆಡೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ..! ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಗೌರವಗಳಿಸಿದ್ದಾರೆ. ಇವರ ‘ಅರ್ಥಲೋಕ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಸ.ಸ.ಮಾಳವಾಡ ಪ್ರಶಸ್ತಿ; ಭುವನದ ಭಾಗ್ಯ ಕೃತಿಗೆ ಭಾರತೀಯ ಭಾಷಾ ಪರಿಷತ್-ಕೊಲ್ಕತ್ತಾ, ಪ್ರೊ.ವಿ.ಎಂ. ಇನಾಂದಾರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ; ಕನ್ನಡ ಕಥನ ಸಾಹಿತ್ಯ: ಕಾದಂಬರಿ ಕೃತಿಗೆ ಬಿ.ಎಚ್. ಶ್ರೀಧರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಇವರಿಗೆ ಸಂದಿವೆ. ಇವಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ವಿಮರ್ಶಕ ರತ್ನ ಪ್ರಶಸ್ತಿ, ಅಖಿಲ ಭಾರತ ಮಾಧ್ವ ಮಹಾ ಮಂಡಲದಿಂದ ಕನ್ನಡ ಭಾಷಾ ಭೂಷಣ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಪಂಪ್ರಶಸ್ತಿ, ಮಾಸ್ತಿ ಪ್ರಶಸ್ತಿಗಳು ದೊರೆತಿವೆ. ಒಂದು ಕೃತಿಯನ್ನೂ ವಿಮರ್ಶಿಸುವಾಗ ಕೃತಿಯಲ್ಲಿ ಏನಿದೆ? ಏಕಿದೆ? ಎಂದು ವಿಮರ್ಶಿಸಬೇಕೇ ವಿನಃ ಏನಿಲ್ಲ, ಏನಿರಬೇಕಿತ್ತು ಎಂದು ಹುಡುಕುವುದು ವಿಮರ್ಶಕನ ಕೆಲಸವಾಗಬಾರದು ಮತ್ತು ವಿಮರ್ಶಕನಾದವನು ಅಂತಃ ಚಕ್ಷುಗಳನ್ನೂ ತೆರೆದು ಪೂರ್ವಾಗ್ರಹ ಪೀಡಿತನಾಗದೇ ಕೃತಿಯೊಡನೆ ಅನುಸಂಧಾನ ಮಾಡಬೇಕೆನ್ನುವುದೇ ಇವರ ಖಚಿತ ಅಭಿಪ್ರಾಯವಾಗಿದ್ದು, ವಿಮರ್ಶೆಯ ಕ್ಷೇತ್ರದಲ್ಲಿ ಹೊಸಹೊಸ ಅನ್ವೇಷಣೆಗಳನ್ನು ಮಾಡಿ ಹೊಸಹೊಸ ವಿಸ್ತೃತ ವಿಮರ್ಶಾ ವಿಧಾನಗಳನ್ನೂ ರೂಪಿಸತೊಡಗಿದ್ದರು..! ಇಂತಹ ಜಿ.ಎಸ್. ಅಮೂರ ಈಗ ನಮ್ಮನ್ನು ಅಗಲಿದ್ದಾರೆ. ಅವರಿಗಿದೋ ‘ನಮನ’ಗಳು… ************************************* ಕೆ.ಶಿವು.ಲಕ್ಕಣ್ಣವರ ***************************************************
ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..! Read Post »




