ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅಸಹಾಯಕ ಆತ್ಮಗಳು

(‘ಅಸಹಾಯಕಆತ್ಮಗಳು’ ಎನ್ನುವ ಮಾಲಿಕೆಯಲ್ಲಿ ನಾನುಬರೆದಈಕತೆಗಳುನೈಜಜೀವನದಚಿತ್ರಗಳಾಗಿದ್ದು, ಸಂಬಂದಿಸಿದಹೆಣ್ಣುಮಕ್ಕಳನ್ನುಸಂದರ್ಶಿಸಿಅವರಬಾಯಿಂದಲೇಕೇಳಿಬರೆದಕತೆಗಳಾಗಿವೆ-)ನಿಮ್ಮಲೇಖಕ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಳುವಿನ ಕ್ಷೀಣ ಶಬ್ಧವನ್ನು ಹೊರತುಪಡಿಸಿ ಹೆಚ್ಚಿನ ಜನವೂ ಇಲ್ಲ, ಗದ್ದಲವೂ ಇಲ್ಲ. ಕನಿಷ್ಟ ದೇಹ ತ್ಯಜಿಸಿರುವ ಆತ್ಮಕ್ಕೆ ಸಲ್ಲಬೇಕಾದ ಅಶ್ರುತರ್ಪಣವೂ ಇಲ್ಲದೆ ವಿದಾಯ ಸಲ್ಲಿಸಬೇಕಾದ ದುಃಸ್ಥಿತಿ! ಒಂದು ಸಣ್ಣ ಅತಿ ಸಣ್ಣ ನೋವಿನೆಳೆ ಮಾತ್ರ ಇಡೀ ಜೀವವನ್ನೇ ಹಿಂಡುತ್ತಿದೆ

Read Post »

ಅಂಕಣ ಸಂಗಾತಿ, ದೀಪದ ನುಡಿ

ಈ ಬದುಕಿನಲ್ಲಿ ಗಳಿಸಿದ ಪ್ರತಿಯೊಂದನ್ನೂ ಕಾಲದ ಜೊತೆಜೊತೆಗೇ ಮುಂದೆ ಸಾಗುತ್ತ ಪ್ರತಿಯೊಬ್ಬರೂ ಕಳೆದುಕೊಳ್ಳಲೇಬೇಕಾಗುತ್ತದೆ. ಹುಟ್ಟಿನೊಂದಿಗೆ ಅಂಟಿಕೊಂಡ ನಂಟುಗಳ ಜೊತೆಜೊತೆಗೇ ಗಳಿಸಿದ ಸಮಸ್ತವೂ ಬದುಕಿನ ಸಂಕಲನಕ್ಕೆ ಬಂದರೆ ಎಲ್ಲೆಲ್ಲಿ ಯಾವ ಯಾವುದರ ಘಳಿಗೆ ತೀರುತ್ತದೋ ಅಲ್ಲಲ್ಲಿ ಅವುಗಳೆಲ್ಲಾ ಬದುಕಿನಿಂದ ಕಳೆದುಹೋಗಲಾರಂಭಿಸುತ್ತವೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—23 ಆತ್ಮಾನುಸಂಧಾನ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ… ಬಿ.ಎ. ಪದವಿ ಶಿಕ್ಷಣ ಪಡೆಯುವುದಕ್ಕಾಗಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ ಸೇರಲು ಬಯಸಿದೆ. 1966ರಲ್ಲಿ ಮಾನ್ಯ ದಿನಕರ ದೇಸಾಯಿಯವರು ತಮ್ಮ ಕೆನರಾ ವೆಲ್ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಸ್ಥಾಪಿಸಿದ ಗೋಖಲೆ ಸೆಂಟನರಿ ಕಾಲೇಜು ನನ್ನಂಥ ಸಾವಿರಾರು ಬಡ ವಿದ್ಯಾರ್ಥಿ ಗಳ ಪದವಿ ಶಿಕ್ಷಣದ ಕನಸನ್ನು ನನಸಾಗಿಸಿದ್ದು ಈಗ ಇತಿಹಾಸ. ನಾನು ವಿದ್ಯಾರ್ಥಿಯಾಗಿ ಕಾಲೇಜು ಸೇರುವ ಹೊತ್ತಿಗೆ ಪದವಿ ಅಭ್ಯಾಸ ಮುಗಿಸಿದ ಮೊದಲ ತಂಡ ಕಾಲೇಜಿನಿಂದ ಹೊರಗೆ ಹೋಗಲು ಅಣಿಯಾಗುತ್ತಿತ್ತು. ಕಾಲೇಜಿನ ಸಂಸ್ಥಾಪಕ ಪ್ರಾಚಾರ್ಯರಾಗಿದ್ದ ಪ್ರೊ.ಕೆ.ಜಿ. ನಾಯ್ಕ ಅವರು ಅತ್ಯಂತ ಶಿಸ್ತು ಮತ್ತು ದಕ್ಷತೆಯಿಂದ ಕಾಲೇಜಿನ ಆಡಳಿತವನ್ನು ನಡೆಸುತ್ತಿದ್ದರು. ಅವರ ಮತ್ತು ಮಾನ್ಯ ದಿನಕರ ದೇಸಾಯಿಯವರ ಮಾರ್ಗದರ್ಶನದಂತೆಯೇ ಅಹರ್ನಿಶಿ ಕಾರ್ಯ ನಿರ್ವಹಿಸುವ ಅಧ್ಯಾಪಕ ಮತ್ತು ಆಫೀಸು ಸಿಬ್ಬಂದಿಗಳ ತಂಡ ಕಾಲೇಜನ್ನು ಒಂದು ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಕ್ರಿಯಾಶೀಲರಾಗಿದ್ದರು. ಎಲ್ಲ ವಿಭಾಗಗಳಲ್ಲಿ ಕಾರ್ಯನಿರತರಾಗಿದ್ದ ಪ್ರತಿಭಾ ಸಂಪನ್ನ ಅಧ್ಯಾಪಕ ವರ್ಗ ಕಾಲೇಜಿಗೆ ಒಂದು ವಿಶಿಷ್ಟ ಗಾಂಭೀರ್ಯವನ್ನು ತಂದುಕೊಟ್ಟಿತ್ತು. ಕಲಾ ವಿಭಾಗವಾಗಲಿ, ವಿಜ್ಞಾನ ವಿಭಾಗವಾಗಲಿ ಜ್ಞಾನದಿಂದ ಪರಿಪೂರ್ಣರೆನಿಸಿದ ಅಧ್ಯಾಪಕರಿಂದ ತುಂಬಿತ್ತು. ಪ್ರತಿ ಹಂತದ ಆಯ್ಕೆ ಅನುಷ್ಠಾನಗಳಲ್ಲಿ ಡಾ. ದಿನಕರ ದೇಸಾಯಿ ಮತ್ತು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯ ಕೆ.ಜಿ. ನಾಯ್ಕ ಅವರ ದೂರದರ್ಶಿತ್ವ ಉತ್ತಮ ಫಲಿತಾಂಶ ನೀಡಿತ್ತು. ಇದು ಮೂರ್ನಾಲ್ಕು ವರ್ಷಗಳ ಅಲ್ಪಾವಧಿಯಲ್ಲಿಯೇ ಕಾಲೇಜಿಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಗೌರವಾದರಗಳನ್ನು ದೊರಕಿಸಿಕೊಟ್ಟಿತ್ತು. ಸಂಸ್ಕೃತ ವಿಭಾಗದಲ್ಲಿ ಪ್ರೊ. ಎಂ.ಪಿ. ಭಟ್, ಕನ್ನಡ ವಿಭಾಗದ ಪ್ರೊ. ವಿ.ಎ. ಜೋಷಿ, ಕೆ.ವಿ. ನಾಯಕ ಇತಿಹಾಸ ವಿಭಾಗದಲ್ಲಿ, ಪ್ರೊ. ಎ.ಎಚ್. ನಾಯಕ, ಟಿ.ಟಿ. ತಾಂಡೇಲ್ ಇಂಗ್ಲೀಷ್ ವಿಭಾಗದಲ್ಲಿ, ಪ್ರೊ. ಎನ್.ಜಿ. ಸಭಾಹಿತ, ದಿವಾಸ್ಪತಿ ಹೆಗಡೆ, ಎಂ.ಎನ್. ಡಂಬಳ, ಶ್ರೀಮತಿ ನಿರ್ಮಲಾ ಗಾಂವಕರ ಹಿಂದಿ ವಿಭಾಗದಲ್ಲಿ, ಪ್ರೊ. ಕೆ.ಪಿ. ಕುಲಕರ್ಣಿ ಅರ್ಥಶಾಸ್ತ್ರ ವಿಭಾಗಕ್ಕೆ, ಪ್ರೊ. ಡಿ.ಆರ್.ಪೈ, ಡಿ.ವ್ಹಿ. ಹೆಗಡೆ ರಾಜ್ಯಶಾಸ್ತ್ರದಲ್ಲಿ, ಪ್ರೊ. ಎಂ.ಡಿ. ರಾಣಿ ಮುಂತಾದ ಮಹನೀಯರು ಕಲಾ ವಿಭಾಗದ ಗೌರವಾನ್ವಿತಿ ಅಧ್ಯಾಪಕರಾಗಿದ್ದಾರೆ. ವಿಜ್ಞಾನ ವಿಭಾಗದ ಗಣಿತ ಶಾಸ್ತ್ರಕ್ಕೆ ಸ್ವತಃ ಪ್ರಾಚಾರ್ಯರಾಗಿದ್ದಾಗ ಕೆ.ಜಿ. ನಾಯ್ಕ, ಪಿ.ಎಂ. ರಾಣೆ, ಎಂ.ಜಿ. ಹೆಗಡೆ ಮುಖ್ಯವಾಗಿದ್ದರು. ಪ್ರೊ. ಸಿ.ಎನ್. ಶೆಟ್ಟಿ, ಪ್ರೊ ವಿ.ಆರ್. ವೆರ್ಣೆಕರ್ ರಸಾಯನಶಾಸ್ತ್ರ ವಿಭಾಗದಲ್ಲಿ, ಪ್ರೊ. ಬಿ.ಎನ್. ಭಟ್, ಪ್ರೊ. ಮೋಹನ ಹಬ್ಬು ಭೌತಶಾಸ್ತ್ರ ವಿಭಾಗದಲ್ಲಿ, ಪ್ರೊ. ಶ್ರೀಮತಿ ಶಾಂತಾ ಥಾಮಸ್, ಆರ್.ಬಿ. ನಾಯ್ಕ ಜೀವಶಾಸ್ತ್ರ, ಸಸ್ಯಶಾಸ್ತ್ರ ವಿಭಾಗದಲ್ಲಿ ಕರ್ತವ್ಯನಿಷ್ಠರಾಗಿ ಕಾರ್ಯನಿರ್ವಹಿಸುತ್ತ ವಿಜ್ಞಾನ ವಿಭಾಗದ ಘನತೆಯನ್ನು ಹೆಚ್ಚಿಸಿದ್ದರು. ಆಡಳಿತ ಕಚೇರಿಯ ಮುಖ್ಯಸ್ಥರಾಗಿ ಕೃಷ್ಣಾನಂದ ಶೆಟ್ಟಿ ಎಂಬುವವರು ಕಾರ್ಯನಿರ್ವಹಿಸುತ್ತಿದ್ದರೆ, ಆನಂದು ಶೆಟ್ಟಿಯವರು ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಇವರಿಗೆ ಸೈಯದ್ ಎಂಬ ಮುಸ್ಲಿಂ ತರುಣನೊಬ್ಬ ಗುಮಾಸ್ತರಾಗಿ ಸಹಕರಿಸುತ್ತಿದ್ದರು. ನನ್ನ ನೆನಪಿನಲ್ಲಿ ಉಳಿದಂತೆ, ಕಾಲೇಜಿನ ಗ್ರಂಥಾಲಯದ ಜವಾಬ್ದಾರಿಯನ್ನು ವಿಷ್ಣು ನಾಯ್ಕ ಎಂಬ ತರುಣ ಬರಹಗಾರರೊಬ್ಬರು ನೋಡಿಕೊಳ್ಳುತ್ತಿದ್ದು ಒಂದೆರಡು ವರ್ಷಗಳಲ್ಲಿಯೇ ಅವರು ಕೆನರಾ ವೆಲಫೇರ್ ಸಂಸ್ಥೆಯದ್ದೇ ಆದ ಹೈಸ್ಕೂಲಿಗೆ ಶಿಕ್ಷಕರಾಗಿ ನೇಮಕಗೊಂಡು ದಾಂಡೇಲಿಗೆ ವರ್ಗಾವಣೆಯಾದರು. ಆ ಬಳಿಕ ಎಸ್.ಆರ್. ಉಡುಪಿ ಎಂಬ ಗ್ರಂಥಾಲಯ ವಿಜ್ಞಾನ ಪದವೀಧರರು ಇಲ್ಲಿ ನೇಮಕಗೊಂಡು ಸುದೀರ್ಘಕಾಲ ಗ್ರಂಥಾಲಯ ಆಡಳಿತವನ್ನು ಸಮರ್ಥವಾಗಿ ನಡೆಸಿದರು. ವಿದ್ಯಾರ್ಥಿ ಸಮುದಾಯದಲ್ಲಿ ಬಹು ಸಂಖ್ಯೆಯ ನಾಡವರು, ಕೊಂಕಣಿಗರು, ನಾಮಧಾರಿಗಳು, ಸ್ವಲ್ಪ ಪ್ರಮಾಣದಲ್ಲಿ ಹಾಲಕ್ಕಿಗಳು, ಕ್ರೈಸ್ತರು, ಮುಸ್ಲಿಂರು, ದಲಿತರು ಓದುತ್ತಿದ್ದರು. ಆರ್ಥಿಕ ಅಭಿವೃದ್ಧಿ ಹೊಂದಿರದ ಅಂದಿನ ಸಾಮಾಜಿಕ ಜೀವನದ ಪರಿಣಾಮ ವಿದ್ಯಾರ್ಥಿಗಳ ವೇಷ ಭೂಷಣಗಳಲ್ಲಿಯೇ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬಹುದೆಂದರೆ ಆರ್ಥಿಕ ಅನುಕೂಲತೆಯ ಕುಟುಂಬದ ಮಕ್ಕಳು ‘ಫುಲ್ ಪ್ಯಾಂಟ್’ ಧರಿಸಿ ಬರುತ್ತಿದ್ದರೆ, ಆರ್ಥಿಕ ಅನಾನುಕೂಲವಿದ್ದ ಕುಟುಂಬದ ಮಕ್ಕಳು ‘ಹಾಪ್ ಪ್ಯಾಂಟ್’ ಧರಿಸಿಯೇ ಕಾಲೇಜು ಪ್ರವೇಶಿಸಿದ್ದರು. ನಾನು, ನನ್ನ ಗೆಳೆಯರೆಲ್ಲ ಈ ಎರಡನೆಯ ದರ್ಜೆಯವರೇ ಆಗಿದ್ದು ಹಾಪ್ ಪ್ಯಾಂಟ್ ಧಾರಿಗಳಾಗಿ ಕಾಲೇಜಿನ ಮೆಟ್ಟಿಲೇರುತ್ತಿದ್ದಂತೆ ದಿಗಿಲುಗೊಂಡದ್ದು ಸಹಜ. ಹಿಂದಿನ ಎಲ್ಲ ಶಾಲೆ ಹೈಸ್ಕೂಲುಗಳಿಂದ ತೀರ ಭಿನ್ನವೇ ಆದಂತಿರುವ ಶಿಕ್ಷಣ ವ್ಯವಸ್ಥೆಗೆ ನಮ್ಮನ್ನು ಹೊಂದಿಸಿಕೊಳ್ಳುವುದಕ್ಕೆ ಬಹುಕಾಲವೇ ಬೇಕಾಯಿತು. ಅದರಲ್ಲಿಯೂ ಇಂಗ್ಲೀಷ್ ಭಾಷೆಯ ಅಲ್ಪ ಸ್ವಲ್ಪ ಅರಿವಿನಲ್ಲೇ ಪಿ.ಯು ಪರೀಕ್ಷೆ ಹೇಗೋ ದಾಟಿ ಬಂದ ನಮಗೆಲ್ಲ ಇಂಗ್ಲಿಷ್ ಮಾಧ್ಯಮದ ಪಾಠ ಪ್ರವಚನಗಳು ಅಕ್ಷರಶಃ ಗಾಬರಿ ಹುಟ್ಟಿಸಿದ್ದವ ಒಂದೊಂದು ತರಗತಿಯಲ್ಲಿ ತುಂಬಿ ತುಳುಕುವ ವಿದ್ಯಾರ್ಥಿ ಸಮುದಾಯ ಸೂಟು-ಬೂಟುಗಳಲ್ಲಿ ಗಂಭೀರವಾಗಿ ತರಗತಿಗಳನ್ನು ಪ್ರವೇಶಿಸಿ ನಿರರ್ಗಳವಾಗಿ ಇಂಗ್ಲೀಷ್ ಮಾಧ್ಯಮದಲ್ಲಿ (ಕನ್ನಡ ವಿಷಯ ಹೊರತಾಗಿ) ಉಪನ್ಯಾಸ ನೀಡುವ ಅಧ್ಯಾಪಕರ ವಾಗ್ ವೈಭವಕ್ಕೆ ಬೆರಗಾಗುತ್ತ ಹಿಂದಿನ ಸಾಲಿನ ಹುಡುಗರಾಗಿ ತರಗತಿಗೆ ಬಂದ ನಮ್ಮ ಗೆಳೆಯರ ಗುಂಪು ನಿಧಾನವಾಗಿ ಪುಸ್ತಕ ಪಾಠ ಇತ್ಯಾದಿಗಳನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತ ಕಾಲೇಜ್ ಕ್ಯಾಂಪಸ್ ಬದುಕಿಗೆ ಹೊಂದಿಕೊಳ್ಳತೊಡಗಿದ್ದೆವು. ************************************************************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ

ವಸುಂಧರಾ ಕದಲೂರು ಹೊಸ ಅಂಕಣ ‘ತೊರೆಯ ಹರಿವು’

ಸಮೂಹ ಪ್ರಜ್ಞೆ ಜಾಗೃತವಾಗಬೇಕಾದರೆ, ಸಾಮಾಜಿಕರ ವೈಯಕ್ತಿಕವಾದ ನಿಲವುಗಳು ಸ್ಪಷ್ಟವಾಗಿರಬೇಕು. ತರ್ಕಬದ್ಧವಾಗಿರಬೇಕು. ದೈನಂದಿನ ವಿವರಗಳಲ್ಲಿ ವಿಜ್ಞಾನವನ್ನು ಕೇವಲ ಉಪಯೋಗಿತ ಉಪಕರಣಗಳಿಗೆ ಸೀಮಿತಗೊಳಿಸಿಕೊಳ್ಳದೇ, ವಿವೇಚನೆಗೆ ಮೂಲ ಇಂಧನವಾಗಿಸಿ ಕೊಳ್ಳಬೇಕು

Read Post »

ಅಂಕಣ ಸಂಗಾತಿ, ಕಾಲಾ ಪಾನಿ

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-8 ಸ್ಕೂಬಾ ಡೈವಿಂಗ್ ಬಗ್ಗೆ ಓದಿ ಮಾತ್ರ ಗೊತ್ತು. ಸತೀಶ್ ಅವರನ್ನು ಬಿಟ್ಟು ನಾನು ಡೈವ್ ಮಾಡಲು ಹೋಗುವುದು ಸಾಧ್ಯವಿರಲಿಲ್ಲ. ಮಕ್ಕಳಿಬ್ಬರೂ ಗಣೇಶಣ್ಣನ ಕುಟುಂಬದ ಜೊತೆ ಸ್ಕೂಬಾ ಡೈವಿಂಗ್ ನ ಅನುಭವವನ್ನು ಪಡೆಯಲು ಹೋದರು. ಅಂಡಮಾನ್ ಗೆ ಹೊರಡುವಾಗ ಮಾಡಿದ ತಯಾರಿಯಲ್ಲಿ ಸಾಕಷ್ಟು ಚಿಲ್ಲರೆ ದುಡ್ಡು ಐವತ್ತು, ನೂರು, ಇನ್ನೂರರ ನೋಟುಗಳನ್ನು ಇಟ್ಟುಕೊಂಡಿದ್ದೆವು. ಹತ್ತು ಇಪ್ಪತ್ತರ ನೋಟುಗಳು ಕೂಡಾ. ಆದರೆ ಇಲ್ಲಿಯವರೆಗೆ ಎಲ್ಲಿಯೂ ನಾವು ಖರ್ಚು ಮಾಡುವ ಪ್ರಮೇಯವೇ ಬಂದಿರಲಿಲ್ಲ. ಶಾಪಿಂಗ್ ಗೆಂದು ಕೊನೆಯ ದಿನ  ಕರೆದುಕೊಂಡು ಹೋಗುತ್ತೇವೆಂದು ದರ್ಶನ್ ಮತ್ತು ರಾಕೇಶ್ ಆಶ್ವಾಸನೆ ಕೊಟ್ಟಿದ್ದರು. ಈ ದಿನದ ನೀರಿನ ಆಟಗಳ ಖರ್ಚು ಮಾತ್ರ ನಾವು ಕೊಡಬೇಕಾಗಿತ್ತು. ಸ್ಕೂಬಾ ಡೈವಿಂಗ್ ಲ್ಲಿ ಎರಡು ವಿಧ. Sea shore diving ಅಂದರೆ ದಡದಿಂದಲೇ ಸಮುದ್ರದ ತಳಕ್ಕೆ ಕೊಂಡು ಹೋಗುವುದು. ಇನ್ನೊಂದು deep sea diving. ದೊಡ್ಡದಾದ ದೋಣಿಯಲ್ಲಿ ಸಮುದ್ರದ ನಡು ಭಾಗಕ್ಕೆ ಕೊಂಡೊಯ್ದು ಅಲ್ಲಿಂದ ಜಿಗಿದು ಆಳಕ್ಕೆ ಹೋಗುವುದು. ಡೀಪ್ ಸೀ ಗೆ ಹೋಗುವುದೆಂದು ತೀರ್ಮಾನಿಸಿ ಎಲ್ಲರೂ ಹೊರಟರು. ಒಬ್ಬೊಬ್ಬರಿಗೆ ನಾಲ್ಕುವರೆ ಸಾವಿರ ರೂಪಾಯಿಗಳು. ಇವರು ಹೋಗುವ ಮೊದಲೇ ಒಂದು ತಂಡ ಹೊರಡುತ್ತಿರುವುದರಿಂದ ಇನ್ನು ಒಂದು ಗಂಟೆ ಕಾಯಬೇಕಿತ್ತು. ಅಲ್ಲಿಯವರೆಗೆ ಗಾಜಿನ ತಳದ ದೋಣಿಯಲ್ಲಿ ಸಮುದ್ರ ಯಾನಕ್ಕೆಂದು ಮಕ್ಕಳು ಮೂವರು ತಯಾರಾದರು. ಸಮುದ್ರದ ಆಳದಲ್ಲಿರುವ ಸುಂದರ ಪ್ರಪಂಚ ಗಾಜಿನ ಮೂಲಕ ಕೂತಲ್ಲಿಂದಲೇ ನೋಡಬಹುದಿತ್ತು. ಇದನ್ನಾದರೂ ನೋಡಬಹುದು ಅಂದುಕೊಂಡಿದ್ದೆ ಆದರೆ ಸಣ್ಣಗೆ ತಲೆ ಸುತ್ತುವ ಸಂಭವವಿದೆ ಎಂದುದರಿಂದ ಬೇಡವೆನಿಸಿತು. ಸಮುದ್ರದೊಳಗೆ ದೂರ ದೂರ ನಡುವಿನವರೆಗೂ ದೋಣಿಯಲ್ಲಿ ವಿಹರಿಸುವುದು, ದೋಣಿ ಓಲಾಡುವಾಗ ಕೆಳಗಿನ ದೃಶ್ಯವನ್ನು ವೀಕ್ಷಿಸುವುದು ಒಂದು ರೀತಿಯಲ್ಲಿ ಪುಳಕವೇನೋ ಸರಿ. ತಲೆಯೊಳಗೆ, ಹೊಟ್ಟೆಯೊಳಗೆ ವಿಚಿತ್ರ ಸಂಕಟವಂತೂ ಆಗಿಯೇ ಆಗುತ್ತದೆ. ಮೊದಲಿನ ರೀತಿಯಾಗಿದ್ದರೆ ಪರವಾಗಿರಲಿಲ್ಲ. ಈಗ ಜವಾಬ್ದಾರಿ ನನ್ನ ಮೇಲಿರುವುದರಿಂದ ನಾನು ಆರೋಗ್ಯವಾಗಿರುವುದು ಮುಖ್ಯವಾಗಿತ್ತು. ಮಕ್ಕಳು ಬಂದು ಅವರು ನೋಡಿದ್ದನ್ನು ಬಣ್ಣಿಸಿದ್ದೇ ಬಣ್ಣಿಸಿದ್ದು. ಅವರ ಖುಷಿ ನೋಡಿಯೇ ನನಗೂ ತೃಪ್ತಿಯಾಯಿತು. ಸ್ಕೂಬಾ ಡೈವಿಂಗ್ ಮಾಡುವವರಿಗೆ ಮೊದಲು ಕೆಲವು ಸೂಚನೆಗಳನ್ನು ನೀಡುತ್ತಾರೆ. ಕೆಲವು ಎಚ್ಚರಿಕೆಗಳು ಮತ್ತು ಕೆಲವು ಕೈ ಸನ್ನೆಗಳನ್ನು ಕಲಿಸುತ್ತಾರೆ. ನಾನು ಆರಾಮಾಗಿದ್ದೇನೆ, ಉಸಿರಾಟಕ್ಕೇನೂ ತೊಂದರೆಯಿಲ್ಲ, ಅಥವಾ ನನಗೆ ತೊಂದರೆ ಆಗುತ್ತಿದೆ, ನಾನು ಮೇಲೆ ಹೋಗಬೇಕು ಈ ತರದ ಸಂದೇಶಗಳನ್ನು ಕೈ ಸನ್ನೆಯಿಂದ ತಿಳಿಸಲು ಅಭ್ಯಾಸ ಮಾಡಿಸಿ, ಅವರಿಗೆ ಡೈವಿಂಗ್ ಉಡುಪುಗಳನ್ನು ತೊಡಲು ಕೊಟ್ಟರು. ಮೈಗೆ ಅಂಟಿಕೊಂಡಂತಹ ಬಿಗಿಯಾದ ಉಡುಪಿನಲ್ಲಿ ಎಲ್ಲರೂ ಸುಂದರವಾಗಿ ಕಾಣುತಿದ್ದರು. ನಮ್ಮ ದೀಕ್ಷಾಳಿಗೆ ಸಿಕ್ಕಿದ್ದು ಸ್ವಲ್ಪ ಬಿಗಿ ಇತ್ತಂತೆ. ಕನ್ನಡಿಯಲ್ಲಿ ನೋಡಿಕೊಂಡಾಗ ಚಂದ ಕಾಣ್ತಿದೆಯಲ್ಲಾ ಇರಲಿ ಅಂದುಕೊಂಡು ಸುಮ್ಮನಿದ್ದಳು. ಅವರನ್ನೆಲ್ಲಾ ಒಂದು ದೊಡ್ಡ ದೋಣಿಯೊಳಗೆ ಕೂರಿಸಿ ಕರೆದುಕೊಂಡು ಹೋದರು. ಪ್ರತಿಯೊಬ್ಬರಿಗೂ ಒಬ್ಬೊಬ್ಬ ಡೈವಿಂಗ್ ತರಬೇತಿ ಹೊಂದಿದ ಸಹಾಯಕರಿರುತ್ತಾರೆ.  ಆಮ್ಲಜನಕದ ಭಾರವಾದ ಸಿಲಿಂಡರ್ ಗಳನ್ನು ಹೊತ್ತು ಅದರ ಪೈಪ್ ನಿಂದ ಬರುವ ಗಾಳಿಯಲ್ಲಿ ಬಾಯಿಯಿಂದ ಉಸಿರಾಡಬೇಕು. ಅದರ ಎಲ್ಲಾ ನಿರ್ದೇಶನಗಳನ್ನು ಮೊದಲೇ ನೀಡಿರುತ್ತಾರೆ. ನಾವಿಬ್ಬರೂ ಒಂದು ಉದ್ದವಾದ ಕಲ್ಲಿನ ಬೆಂಚ್ ನೋಡಿ ಅಲ್ಲಿ ಕೂತೆವು. ಸಮುದ್ರದ ಅಲೆಗಳ ಸೌಂದರ್ಯ ನೋಡುತ್ತಾ ಕೂತಾಗ ಇಂಥಾದೊಂದು ದಿನ ನಾವು ಈ ದ್ವೀಪಕ್ಕೆ ಬಂದು ಹೀಗೆ ಕೂತು ಯಾವುದೇ ಚಿಂತೆಯಿಲ್ಲದೆ ಕಾಲ ಕಳೆಯುತ್ತೇವೆ ಎಂದು ಯಾವತ್ತೂ ಯೋಚಿಸಿಯೂ ಇರಲಿಲ್ಲ. ಕೂತಲ್ಲೇ ಸತೀಶ್ ಆಕಳಿಸಲು ತೊಡಗಿದರು. ನಿದ್ರೆ ಬರ್ತಿದೆ ಎಂದು ಆ ಬೆಂಚ್ ಮೇಲೆ ಉದ್ದಕ್ಕೆ ಮಲಗಿದರು. ಸಮುದ್ರದ ಅಲೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದುದರರಿಂದ ಸ್ಕೂಬಾ ಡೈವಿಂಗ್ ಗೆ ಹೊರಟವರನ್ನು ಅಲ್ಲಿಯೇ ಸ್ವಲ್ಪ ತಡೆದು ನಿಲ್ಲಿಸಿದ್ದರು. ಸುಮಾರು ಮುಕ್ಕಾಲು ಗಂಟೆಯ ನಂತರ ವಾತಾವರಣ ತಿಳಿಯಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದುದರಿಂದ ಮುಂದುವರೆದು ಹೋಗಿದ್ದರು. ಅದರ ಬಗ್ಗೆ ಅಲ್ಲಿ ಧ್ವನಿವರ್ದಕದಲ್ಲಿ ಘೋಷಿಸಿದುದರಿಂದ ನಮಗೆ ತಿಳಿಯಿತು. ಇಷ್ಟು ದೂರದ ಊರಿಗೆ ಬಂದು ಸಣ್ಣ ಪುಟಾಣಿ ಮಕ್ಕಳನ್ನು ಹೊರತು ಪಡಿಸಿದರೆ, ಎರಡು ಗಂಟೆಗಳಷ್ಟು ಕಾಲ ಸಮುದ್ರ ತೀರದಲ್ಲಿ ನಿಶ್ಚಿಂತೆಯಿಂದ ಮಲಗಿದ್ದು ಇವರೊಬ್ಬರೇ ಇರಬಹುದು ಎಂದು ಮನಸ್ಸಿನಲ್ಲೇ ನಗುತ್ತಾ ಕುಳಿತೆ. ನಾಲ್ಕೈದು ಜನರನ್ನು ಒಮ್ಮೆ ಕರೆದುಕೊಂಡು ಸಮುದ್ರದಾಳಕ್ಕೆ ಜಿಗಿದಿದ್ದಾರೆ. ಉಳಿದವರನ್ನು ದೋಣಿಯಲ್ಲೇ ಕೂರಿಸಿದ್ದರು. ಆ ದೋಣಿ ಸಮುದ್ರದ ಮೇಲೆ, ನಿಂತಲ್ಲಿಯೇ ನಿಂತು ತೇಲಾಡುವಾಗ ತಲೆ ಸುತ್ತಿದಂತೆ ಆಗುತಿತ್ತಂತೆ. ಡೈವಿಂಗ್ ತರಬೇತಿ ಪಡೆದು ಅಲ್ಲಿ ಕೆಲಸಕ್ಕೆಂದು ದೂರದೂರದ ಊರಿನಿಂದ ಹುಡುಗರು ಬಂದು ಸೇರಿದ್ದಾರೆ. ನೀರಿನೊಳಗೆ ಫೋಟೊಗಳನ್ನು ಕೂಡಾ ಅವರದೇ ಕ್ಯಾಮರಾಗಳಲ್ಲಿ ತೆಗೆದು ಕೊಡುತ್ತಾರೆ ಅವರವರ ಸಹಾಯಕರು. ಒಬ್ಬ ಹುಡುಗ ಯಾರ ಜೊತೆ ಹೋಗಲು ಕಳಿಸಿದರೂ ಹೋಗದೆ ದೀಕ್ಷಾಳ ಜೊತೆ ಹೋಗಲು ಎಂದು ಹೊರಟಾಗ ಅವನ ಜತೆ ಇದ್ದವರು ಅವನನ್ನು ಛೇಡಿಸಿ ನಕ್ಕರಂತೆ. ಸಮುದ್ರದೊಳಗೆ ಜಿಗಿದು ಸ್ವಲ್ಪ ಹೊತ್ತು ಉಸಿರಾಟ ಅಭ್ಯಾಸ ಆಗೋವರೆಗೆ ಸೆಣಸಾಡಿ ಉಡುಪು ಬಿಗಿಯಾಗಿದ್ದರಿಂದಲೋ ಏನೋ ಉಸಿರು ಕಟ್ಟಿದಂತಾಗಿ ಮೇಲೆ ಕರೆದು ಕೊಂಡು ಹೋಗಲು ಸನ್ನೆ ಮಾಡಿದಳಂತೆ. ಧಾತ್ರಿ, ಶ್ರೀಪಾದ ಇಬ್ಬರೂ ಆರಾಮಾಗಿದ್ದರು. ಗಣೇಶಣ್ಣನಿಗೂ ಮೊದಲಿಗೆ ಕಸಿವಿಸಿಯಾದರೂ ನಂತರ ಸರಿ ಹೋಯ್ತಂತೆ. ಸರಸ್ವತಿಯೂ ಖುಷಿಯಿಂದ ಎಲ್ಲವನ್ನೂ ನೋಡಿ ಅನುಭವಿಸಿ ಬಂದಿದ್ದರು. ಆಳದಲ್ಲಿ ಅದೆಷ್ಟು ಸುಂದರವೆಂದು ತಿಳಿಸಲು ಅವರ ಬಳಿ ಶಬ್ದಗಳೇ ಇರಲಿಲ್ಲ. ಬಣ್ಣ ಬಣ್ಣದ ಮೀನುಗಳು ನಮ್ಮನ್ನು ತಾಕಿಕೊಂಡೇ ಚಲಿಸುತ್ತವಂತೆ, ಒಳಗಿನ ಹವಳದ ಗಿಡಗಳಿಂದ ಬಣ್ಣಬಣ್ಣದ ಬೆಳಕು ಬಂದಂತೆ, ನೀಲಿ, ಕೆಂಪು, ನೇರಳೆ, ಹಳದಿ ಬಣ್ಣದ ಹವಳದ ಗುಪ್ಪೆಗಳು ನೋಡಲು ಕಣ್ಣೇ ಸಾಲುವುದಿಲ್ಲ. ಒಮ್ಮೆ ನೀರಿನೊಳಗೆ ಅಭ್ಯಾಸವಾಯಿತೆಂದರೆ ಮತ್ತೆ ಮೇಲೆ ಬರಲು ಮನಸ್ಸೇ ಬರುವುದಿಲ್ಲವಂತೆ. ದೀಕ್ಷಾ ಮೇಲೆ ಬಂದವಳೇ ಗಳಗಳನೆ ವಾಂತಿ ಮಾಡಿದ್ದು ನೋಡಿ ಆ ಹುಡುಗನ ಸಂಗಡಿಗರು ಮತ್ತೆ ಅವನನ್ನು ಛೇಡಿಸಿ ನಕ್ಕರಂತೆ. ಅವನು ಆಮೇಲೆ ಇವಳ ಕಡೆ ತಿರುಗಿಯೂ ನೋಡಿಲ್ಲ ಎಂದು ಹೇಳಿ, ಇನ್ನೊಮ್ಮೆ ನಾನು ಡೈವ್ ಮಾಡಿಯೇ ಮಾಡ್ತಿನಿ ಅವರೆಲ್ಲಾ ನಕ್ಕರಲ್ಲ, ಅವರ ಎದುರಿಗೆ ನಾನು ಚೆನ್ನಾಗಿ ಒಂದು ಗಂಟೆ ಸಮುದ್ರದೊಳಗೆ ಇದ್ದು ಬರ್ತೀನಿ ನೋಡ್ತಿರಿ. ಎಂದು ಆಮೇಲೆ ಸ್ವಲ್ಪ ಸೌಖ್ಯವಾದ ಮೇಲೆ ರಾಕೇಶ್ ಸರ್ ಬಳಿ ನಾಳೆ ಮತ್ತೆ ಮಾಡಬಹುದಾ ಎಂದು ಕೇಳಿದಳು. ಅವರು ಇಲ್ಲಮ್ಮಾ, ಸ್ಕೂಬಾ ಡೈವ್ ಮಾಡಿದ ಇಪ್ಪತ್ತನಾಲ್ಕು ಗಂಟೆಗಳ ನಂತರವೇ ವಿಮಾನಯಾನ ಮಾಡಬೇಕು ಎನ್ನುವ ನಿಯಮವಿದೆ , ಎಚ್ಚರಿಕೆಯ ದೃಷ್ಟಿಯಿಂದ ಅದಕ್ಕಾಗಿಯೇ ನಾವು ಹೊರಡುವ ಒಂದು ದಿನ ಮುಂಚೆ ಈ ಚಟುವಟಿಕೆಗಳಿಗಾಗಿ ಇಡುತ್ತೇವೆ ಎಂದರು. ಹಾಗಾದರೆ ಬರುವ ವರ್ಷ ನಾನೊಬ್ಬಳೇ ಬರ್ತೇನೆ ಎಂದು ಅವರ ಬಳಿ ಹೇಳಿದಳು‌.  ಸಮುದ್ರದಿಂದ ಮೇಲೆ ಬಂದ ಮೇಲೆ ಎಲ್ಲರಿಗೂ ಹೊಟ್ಟೆಯೊಳಗೆ ಸಂಕಟವಾಗಿ, ಯಾರೂ ಮದ್ಯಾಹ್ನದ ಊಟ ಮಾಡುವ ಯೋಚನೆಯಲ್ಲೇ ಇಲ್ಲ. ಸ್ವಲ್ಪ ಮೊಸರನ್ನ, ಸ್ವಲ್ಪ ಹಣ್ಣುಗಳನ್ನು ತಿಂದರೂ ಅದೂ ಹೊಟ್ಟೆಯೊಳಗೆ ಮಾತನಾಡಲು ಶುರು ಮಾಡಿತೆಂದು ಸುಮ್ಮನೆ ಹಾಗೆ ಬಿದ್ದುಕೊಂಡಿದ್ದರು. ನಮ್ಮದೆಲ್ಲಾ ಊಟ ಅವರು ಬರುವುದರೊಳಗೆ ಆಗಿತ್ತು. ಮತ್ತೆ ನಮ್ಮ ಪ್ರಯಾಣ ಪೋರ್ಟ್ ಬ್ಲೇರ್ ಗೆ ಹಡಗಿನಲ್ಲಿ ಹೋಗುವುದಿತ್ತು. ಈ ಸಲ ಹಡಗಿನಲ್ಲಿ ಮೇಲಿನ ಅಂತಸ್ತು ಇತ್ತು. ನಮ್ಮನ್ನು ಮೇಲಿನ ಅಂತಸ್ತಿನಲ್ಲಿ ಕೂರಿಸಿದರು. ಹಡಗಿನೊಳಗೆ ಸ್ಯಾಂಡ್ ವಿಚ್ ಮತ್ತು ಜ್ಯೂಸ್ ಕೊಟ್ಟಿದ್ದರಿಂದ ಊಟ ಮಾಡದೇ ಇದ್ದವರಿಗೆ ಅದನ್ನು ತಿಂದು ಸ್ವಲ್ಪ ಹಾಯೆನಿಸಿತು. ನನಗೆ ಸಣ್ಣಗೆ ಚಳಿಯಾಗಲು ಶುರುವಾಯ್ತು. ದೀಕ್ಷಾ ಅವಳ ಬ್ಯಾಗ್ ನಿಂದ ಒಂದು ಶಾಲು ತೆಗೆದು ನನಗೆ ಕೊಟ್ಟಳು. ಅದು ಅವಳ ಪ್ರೀತಿಯ ಶಾಲ್. ಹೊದ್ದುಕೊಂಡು ಬೆಚ್ಚಗೆ ಕೂತಿದ್ದು ನೆನಪಿದೆ. ಅದರ ಋಣ ನಮ್ಮೊಂದಿಗೆ ಆವತ್ತೇ ತೀರಿ ಕೊನೆಯಾಗುತ್ತದೆಂದು ಅಂದುಕೊಂಡಿರಲಿಲ್ಲ. ಇವತ್ತಿಗೂ ಶಾಲಿನ ಬಗ್ಗೆ ಮಾತನಾಡುವುದನ್ನು ಅವಳು ಬಿಟ್ಟಿಲ್ಲ. ಮೈಸೂರಿಗೆ ಅರ್ಬನ್ ಹಾಟ್ ಪ್ರದರ್ಶನ ಬಂದಾಗ ಖರೀದಿಸಿದ ತಿಳಿ ಗುಲಾಬಿ ಬಣ್ಣದ ಮೇಲೆ ಬಿಳಿಯ ಸಣ್ಣ ಸಣ್ಣ ಹೂಗಳಿದ್ದ ಕಾಶ್ಮೀರಿ ಶಾಲು ಅದು. ಕೊರೊನಾ ಶುರು ಆಗುವ ಮೊದಲೇ ಮತ್ತೊಮ್ಮೆ ಬಂತೆಂದು ಹೋಗಿ ಹುಡುಕಿದರೆ ಆ ಅಂಗಡಿಯೇ ಬಂದಿರಲಿಲ್ಲ. ಮೊನ್ನೆ ಮೊನ್ನೆ ಬಂದ ಹುನರ್ ಹಾಟ್ ಲ್ಲಿ ಹುಡುಕಿದರೂ ಇಲ್ಲ. ಅವಳನ್ನು ಖುಷಿ ಪಡಿಸೋಣ ಎಂದು ದುಬಾರಿ ಪಶ್ಮಿನಾ ಶಾಲು ಖರೀದಿಸಿ ತಂದುಕೊಟ್ಟರೂ ಆ ಶಾಲಿನಷ್ಟು ಚೆನ್ನಾಗಿಲ್ಲ ಎಂದೇ ಅಂದಳು. (ಮುಂದುವರೆಯುವುದು..) ************************************************************* – ಶೀಲಾ ಭಂಡಾರ್ಕರ್.

Read Post »

ಅಂಕಣ ಸಂಗಾತಿ, ದೀಪದ ನುಡಿ

ಅಂಕಣ ಬರಹ ಬೆಳೆದು ದೊಡ್ಡವರಾಗುವುದೆಂದರೆ ಬೆಳೆದು ದೊಡ್ಡವರಾಗುವುದೆಂದರೆ ಪ್ರಜ್ಞೆ ಮತ್ತು ಸೂಕ್ಷ್ಮತೆಗಳನ್ನು ಕಳೆದುಕೊಳ್ಳುವುದಲ್ಲ.ಹದಿಹರೆಯದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಮನೋಧೋರಣೆಯನ್ನ ನಂತರ ಬದಲಿಸುವುದು ಬಹಳ ಕಷ್ಟ. ಇದೇ ಕಾರಣಕ್ಕೆ ಹದಿಹರೆಯದ ಮಕ್ಕಳ ತಾಯ್ತಂದೆಯರು ಬಹಳ ವ್ಯಥಿತರಾಗುವುದು.ಮಕ್ಕಳು ಹೇಳುವ ಒಂದು ಸಣ್ಣ ಸುಳ್ಳು , ಅವರು ತೋರುವ ಒಂದು ಸಣ್ಣ ನಿರ್ಲಕ್ಷ್ಯ ತಂದೆ ತಾಯಿಗೆ ಬಹಳ ನೋವನ್ನುಂಟುಮಾಡುತ್ತದೆ. ಮಕ್ಕಳೇ ಅವರ ಜಗತ್ತು.ಮಕ್ಕಳಿಗಾಗೇ ಬದುಕು ಸವೆಸುವ ತಾಯ್ತಂದೆಯರನ್ನ ಮಕ್ಕಳು ಅರ್ಥ ಮಾಡಿಕೊಳ್ಳುವಲ್ಲಿ ಬಹಳಷ್ಟು ಸಲ ಎಲ್ಲೋ ಸೋಲುತ್ತಾರೆ. ಹಾಗೊಮ್ಮೆ ಅರ್ಥ ಮಾಡಿಕೊಂಡರೂ ಕಾಲ ಮಿಂಚಿ ಹೋಗಿರುತ್ತದೆ. ಆ ಮಕ್ಕಳು ಮುಂದೆ ತಾಯಿಯ ಅಥವಾ ತಂದೆಯ ಪಾತ್ರ ಧರಿಸಿದಾಗ ಹಳೆಯದೆಲ್ಲ ನೆನಪಾಗಿ ತೀವ್ರ ಪಶ್ಚಾತ್ತಾಪ ಪಡುತ್ತಾರೆ. ನಮ್ಮ ಮಕ್ಕಳು ಎಂದೂ ಕೆಟ್ಟ ಹಾದಿ ಹಿಡಿಯಲಾರರು ಎಂಬ ನಂಬಿಕೆಯಿಂದಲೇ ತಾಯ್ತಂದೆಯರು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದು. ಮಕ್ಕಳ ಯಾವುದೋ ಒಂದು ನಡೆಯಿಂದ ಈ ನಂಬಿಕೆಗೆ ಘಾಸಿಯಾದರೂ ಮತ್ತೆ ಅದನ್ನು ಗಳಿಸಲು ಸಾಧ್ಯವೇ ಇಲ್ಲ.     ಹದಿಹರೆಯದ ಮಕ್ಕಳ ದೃಷ್ಟಿಯಲ್ಲಿ ತಂದೆ ತಾಯಿಯರೆಂದರೆ ಸದಾ ತಮ್ಮ ಬಗ್ಗೆ ಪತ್ತೇದಾರಿ ಕೆಲಸ ಮಾಡುವವರು, ಅನುಮಾನಪಡುವವರು…ಸದಾ ಬೆನ್ನ ಹಿಂದೆ ಹಿಂಬಾಲಿಸುವವರು…ಸದಾ ತಮ್ಮ ಮೊಬೈಲ್ , ನೋಟ್ ಬುಕ್ ಗಳನ್ನ ಕಪಾಟು ,ಚೀಲಗಳನ್ನ ಹುಡುಕುವ ಪತ್ತೇದಾರರು..ನಾನು ದೊಡ್ಡವನಾದರೂ ನನ್ನ ಮೇಲೆ ನಂಬಿಕೆಯಿಲ್ಲ  , ಪ್ರೈವೆಸಿ ಕೊಡುವುದಿಲ್ಲ ಎನ್ನುವುದು ಬಹಳ ಮಕ್ಕಳ ದೂರು .ಆದರೆ ಇಲ್ಲಿ ತಾಯ್ತಂದೆಯರು ನಿಜಕ್ಕೂ ತಮ್ಮ ಮಕ್ಕಳ ಬಗೆಗಿನ ಕಾಳಜಿಯಿಂದ ಇಷ್ಟೆಲ್ಲಾ ಮಾಡುತ್ತಾರೆಯೇ ಹೊರತು ಅಪನಂಬಿಕೆಯಿಂದಲಲ್ಲ ಎನ್ನುವುದು ಆ ಬೆಳೆದ ಮಕ್ಕಳಿಗೆ ಅರ್ಥವಾಗುವುದೇ ಇಲ್ಲ.        ತಮ್ಮ ಮಕ್ಕಳ ನಡೆನುಡಿಯಲ್ಲಾಗುವ ಸೂಕ್ಷ್ಮ ಬದಲಾವಣೆಗಳೂ ತಾಯ್ತಂದೆಯರ ಹೃದಯಕ್ಕೆ ಕೂಡಲೇ ಪತ್ತೆಯಾಗಿಬಿಡುತ್ತದೆ.ಒಂದಾನೊಂದು ಕಾಲದಲ್ಲಿ ಅವರೂ ಮಕ್ಕಳೇ ಆಗಿದ್ದವರಲ್ಲವೆ!! ಈ ಆಧುನಿಕ ,ಡಿಜಿಟಲ್ ಯುಗದಲ್ಲಿ  ಎಲ್ಲರೂ ಅವರವರದೇ  ಆದ ಲ್ಯಾಪ್ ಟಾಪ್, ಮೊಬೈಲ್ ಗಳ ಹಿಡಿದು ಕೆಲಸ , ಆನ್ ಲೈನ್ ಕಲಿಕೆ , ಸೋಷಿಯಲ್ ಮೀಡಿಯಾ ಎಂದು ಮುಳುಗಿ ಹೋಗಿರುವಾಗ ಮಕ್ಕಳ ಬಗ್ಗೆ ಕಾಳಜಿ ಹೊಂದಿರುವ ಪೋಷಕರು ನಿಜಕ್ಕೂ ಆತಂಕಕ್ಕೆ ಒಳಗಾಗುತ್ತಾರೆ. ಬದುಕು ನಿಜಕ್ಕೂ  ಅಷ್ಟು ಸಲೀಸಲ್ಲ…ಹದಿಹರೆಯಕ್ಕೆ ಬಂದರೂ ಸಹಾ ಮಕ್ಕಳು ಈ ಜಗತ್ತಿಗೆ , ಈ ಬದುಕಿನ ಅನುಭವಗಳಿಗೆ ಅಪರಿಚಿತರೇ!!             ಅಪ್ಪ-ಅಮ್ಮದಿರ ಬಗ್ಗೆ ಇದಕ್ಕಾಗಿ ಅಸಮಾಧಾನಗೊಳ್ಳದೆ ನಿನಗೇನು ಗೊತ್ತು  ಈ ಜನರೇಷನ್ ಎಂದು ಹೀಯಾಳಿಸದೆ ಮಕ್ಕಳು ತಮ್ಮ ತಾಯ್ತಂದೆಯರ ವಯಸ್ಸು ,ಅನುಭವಗಳನ್ನ ಗೌರವಿಸಬೇಕಿದೆ. ತಾಯ್ತಂದೆಯರೇ ಬದುಕಲ್ಲ ..ಆದರೆ ತಾಯಗತಂದೆಯರು ಬದುಕಿನ ಬಹುಮುಖ್ಯ ಭಾಗ ಎಂಬುದನ್ನು ಮಕ್ಕಳು ಅರಿಯಬೇಕಿದೆ. ಒಂದೆಡೆ ಕುದಿರಕ್ತದ ವಯಸ್ಸು ಇನ್ನೊಂದೆಡೆ ಸ್ನೇಹಿತರು ಇವೆರಡರ ನಡುವೆ ಅಪ್ಪ ಅಮ್ಮದಿರಿಗೂ ಸಮಯ ಕೊಡುವ ,ಗೌರವ ಕೊಡುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕಿದೆ. ಅಪ್ಪ ಅಮ್ಮದಿರು ಮಕ್ಕಳಿಗೆ ಸ್ನೇಹಿತರೂ ಆಗಬಲ್ಲರೂ ಪೋಷಕರೂ ಆಗಬಲ್ಲರು .ಆದರೆ ಸ್ನೇಹಿತರೆಂದಿಗೂ ಅಪ್ಪ ಅಮ್ಮನ ಸ್ಥಾನ ತುಂಬಲು ಸಾಧ್ಯವೇ ಇಲ್ಲ.               ತಾಯ್ತಂದೆಯರಿಂದ ಮುಚ್ಚಿಟ್ಟ ವಿಷಯಗಳು , ಹೇಳಿದ ಸುಳ್ಳುಗಳು ಎಂದಿಗೂ ಮಕ್ಕಳನ್ನು ರಕ್ಷಿಸುವುದಿಲ್ಲ. ಹೀಗೆ ಮಾಡುವುದರ ಮೂಲಕ ಮಕ್ಕಳು ಕೇವಲ ತಮ್ಮ  ತಾಯ್ತಂದೆಯರಿಗೆ ಮೋಸ ಮಾಡುವುದಲ್ಲ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆಂದು ಅರಿವಾಗುವ ಹೊತ್ತಿಗೆ ಬಹಳ ತಡವಾಗಿಬಿಟ್ಟಿರುತ್ತದೆ.ಮಕ್ಕಳು  ಬೆಳೆದಂತೆಯೇ ತಾಯ್ತಂದೆಯರೂ ಬೆಳೆಯುತ್ತಾರೆಂಬುದನ್ನು ಮಕ್ಕಳು ಮರೆಯಬಾರದು. ವಯಸ್ಸು ಹೆಚ್ಚುತ್ತಿದ್ದಂತೆ ಆ ತಾಯ್ತಂದೆಯರ ಹೃದಯ ಬಯಸುವುದು ಮಕ್ಕಳ ಪ್ರೀತಿಯನ್ನು ಕಾಳಜಿಯನ್ನು. ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ ಅವರಿಂದ ಏನನ್ನೂ ಬಯಸಬಾರದು ,ನಿರೀಕ್ಷಿಸಬಾರದು  ಎಂದು ಎಷ್ಟೇ ಹೇಳಿಕೊಂಡರೂ ಆ ಜೀವಗಳು ಮಕ್ಕಳಿಗಾಗಿಯೇ ಬದುಕು ಸವೆಸಿ ಜೀವನದ ಸಂಧ್ಯೆಯಲ್ಲಿ ನಿಂತಾಗ ಬೇರಾವ ವಸ್ತು, ಹಣದ ನಿರೀಕ್ಷೆ ಅವರಿಗಿರುವುದಿಲ್ಲ. ಮಕ್ಕಳ ಪ್ರೀತಿ ಮತ್ತು ಸಾನಿಧ್ಯ ಎರಡೇ ಅವರ ನಿರೀಕ್ಷೆಗಳು!.                 ಸದಾ ಅಪ್ಪ ಅಮ್ಮದಿರ ಜೊತೆ ಮಕ್ಕಳು ಇರಲಾಗದು ರೆಕ್ಕೆ ಬಂದ ಹಕ್ಕಿಗಳು ಗೂಡು ತೊರೆದು ಹಾರಲೇ ಬೇಕು .ಅದೇ ಪ್ರಕೃತಿನಿಯಮ.ಆದರೆ ಹಾಗೆ ಹಾರಿ ಹೋದರೂ ಆಗಾಗ್ಗೆ ಮರಳಿ ಗೂಡಿಗೆ ಬಂದು ಕಾಳಜಿ ತೋರುವುದು ಮಾನವನ ಬದುಕಿನ ನಿಯಮವಾಗಬೇಕು.                 ಎಷ್ಟೋ ಬಾರಿ  ಮಕ್ಕಳು ನಾನೇನು ಹುಟ್ಟಿಸು ಎಂದು ಕೇಳಿದ್ದೆನಾ ಎಂದು ಅಪ್ಪ ಅಮ್ಮನನ್ನು ಕೇಳುವುದೂ ಇದೆ. ಈ ಇಂಥ ಮಾತುಗಳಿಂದ ಆ ಹಿರಿಜೀವಗಳಿಗಾಗುವ ಆಘಾತ ಆ ಮಕ್ಕಳಿಗೆ ಅರ್ಥವಾಗಬೇಕಾದರೆ ಅವರೂ ಅಪ್ಪ ಅಮ್ಮದಿರಾಗಬೇಕು!!!ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅಪ್ಪ ಅಮ್ಮನ ಮನ ನೋಯಿಸಿದ ಮಕ್ಕಳು ನಂತರ ಅರಿತು ಪಶ್ಚಾತ್ತಾಪ ಪಡುವ ಹೊತ್ತಿಗೆ ಅಲ್ಲೇನೂ ಉಳಿದಿರುವುದಿಲ್ಲ..ಗೋಡೆಗಂಟಿದ ಅಪ್ಪ ಅಮ್ಮನ  ಮೂಕ ಭಾವ ಚಿತ್ರಗಳ ಬಿಟ್ಟು!!                 ಬರಿದೆ ಪಶ್ಚಾತ್ತಾಪದಿಂದ ಪ್ರಯೋಜನವಿಲ್ಲ.ಹಿರಿಮರಗಳು ಉರುಳಿದ ಜಾಗದಲ್ಲಿ  ಕುಡಿಸಸಿಯಲ್ಲದೇ ಮತ್ತೊಮ್ಮೆ ಏಕಾಏಕಿ ಹಿರಿಯ ಮರವೊಂದು ಮೂಡದು.ಇಂದಿನ  ಬಹುತೇಕ ಮಕ್ಕಳಿಗೆ ಡಿಜಿಟಲ್ ಪ್ರಪಂಚ ಗೊತ್ತಿದೆ, ಸೋಷಿಯಲ್ ಮೀಡಿಯಾ ಗೊತ್ತಿದೆ, ಗೂಗಲ್ ಸರ್ಚ್ ಗೊತ್ತಿದೆಯೆ ವಿನಃ ಬದುಕಿನ ಭಾಷ್ಯ ಗೊತ್ತಿಲ್ಲ.ನಮ್ಮಿಷ್ಟದಂತೆ ಬದುಕುವುದೇ ಬದುಕು ಎನ್ನುವ ಕುರುಡು ಅಹಂ ಅವರನ್ನು ಹಾದಿ ತಪ್ಪಿಸುತ್ತಿದ್ದರೂ ಅದೇ ಸರಿಯಾದ ಹಾದಿ ಎಂದು ಭ್ರಮೆಯಲ್ಲಿ ನಡೆಯುತ್ತಿರುತ್ತಾರೆ. ದುರಂತವೆಂದರೆ ಗೂಗಲ್ ಗಿಂತ ಹೆಚ್ಚಿನ ಜ್ಞಾನ ಇಲ್ಲದ ಅಪ್ಪ ಅಮ್ಮ ಬದುಕಿನ ಅನುಭವಗಳನ್ನು ಬೊಗಸೆ ಬೊಗಸೆ ಮೊಗೆದು ಕುಡಿದಿದ್ದಾರೆ ,ಒಮ್ಮೆ ಕೈ ಚಾಚಿದರೆ ತಮ್ಮ ಬೊಗಸೆಗೂ ಅದನ್ನ ಧಾರೆಯೆರೆಯಲು ಕಾತರರಾಗಿದ್ದಾರೆಂಬ ಸತ್ಯ ಬಹಳಷ್ಟು ಮಕ್ಕಳಿಗೆ ಗೊತ್ತೇ ಆಗದು.                  ಬಹಳ ಹಿಂದೆ ಸಹೋದ್ಯೋಗಿಯೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ.”ಮಕ್ಕಳನ್ನ ದೊಡ್ಡ ಓದು ಓದಿಸಬಾರದು…ವಿದೇಶ ಸೇರಿ ಕೊನೆಗಾಲದಲ್ಲಿ  ನೋಡಲೂ ಬಾರದ ಸ್ಥಿತಿ ಬರೋದೇ ಬೇಡ..ಸುಮ್ನೆ ನಮ್ಮಂತೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಹತ್ತಿರವೇ ಇರಲಿ ”  ಸದಾ ಮಕ್ಕಳ ಏಳಿಗೆಯನ್ನೇ ಬಯಸುವ ಅದಕ್ಕಾಗಿ ಜೀವ ತೆರಲೂ ಸಿದ್ಧವಿರಬೇಕಾದ ತಂದೆಯೊಬ್ಬ ಹೀಗೆ ಹೇಳಿ ತಾಯಿ ಅದಕ್ಕೆ ಹೂಗುಟ್ಟುವ ಪರಿಸ್ಥಿತಿ  ಬಂದಿದೆಯೆಂದರೆ ನಾವಿರುವುದು ಎಂಥಹಾ ದುರಂತದ ಕಾಲದಲ್ಲಿ ಎಂದು ಖೇದವಾಗುತ್ತದೆ. ಆ ತಂದೆ ಹೀಗೆನ್ನಬೇಕಾದರೆ ಸುತ್ತ ಮುತ್ತ ನಡೆವ ಅದೆಷ್ಟು ಘಟನೆಗಳನ್ನ ನೋಡಿ ಆ ಮನಸ್ಸು ರೋಸಿಹೋಗಿರಬೇಕು!!              ನಮ್ಮ ಕಾಲ ಬೇರೆ ನಿಮ್ಮ ಕಾಲ ಬೇರೆ ..ಅದೆಲ್ಲ ಈಗ ಮೂರು ಕಾಸಿಗೂ ಬಾರದು ಎಂದು ಹಿರಿಯರ ಹಿತವಚನಗಳ ಮೂಲೆಗೊತ್ತುವ ಮಕ್ಕಳಿಗೆ  ಅಪ್ಪ ಅಮ್ಮನೆಂದರೆ ಶತಮಾನ ಹಳೆಯ ಧೂಳು ತುಂಬಿಕೊಂಡ ಮೂಟೆಗಳು!!  ದುರಂತವೆಂದರೆ ಇದೇ ಮಕ್ಕಳಿಗೆ ಮುಂದೊಂದು  ದಿನ ಅವರ ಮಕ್ಕಳಿಂದಲೂ ಇಂತಹುದೇ  ಕಟು ಅನುಭವ ಕಾದಿದೆಯೆನ್ನುವ ಅರಿವೂ ಇಲ್ಲದಿರುವುದು.              ದೀಪ ತಾನು ಬೆಳಗಿದರಷ್ಟೆ ಮತ್ತೊಂದು ದೀಪವನ್ನು ಬೆಳಗಿಸಬಲ್ಲುದು. ತಾಯ್ತಂದೆಯರ ಬಗ್ಗೆ ಅಕ್ಕರೆ, ಗೌರವ ಹೊಂದಿರುವ ಮತ್ತು ಅದನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವ ಮಕ್ಕಳಷ್ಟೇ ಭವಿಷ್ಯದಲ್ಲಿ ತಮ್ಮ ಮಕ್ಕಳಿಗೂ ಅದನ್ನು ಕಲಿಸಲು ಸಾಧ್ಯವಾಗುವುದು.       ಎಲ್ಲರೂ ಶ್ರವಣಕುಮಾರನಾಗಲಿ, ಶ್ರೀರಾಮನಾಗಲೀ ,ಭಕ್ತಪುಂಡಲೀಕನಂತಾಗಲೀ ತಾಯ್ತಂದೆಯರ ಸೇವೆ ಮಾಡಲು ಸಾಧ್ಯವಿಲ್ಲ ನಿಜ. ಆದರೆ ಸದಾ ತಾನು ನಿನ್ನೊಂದಿಗಿರುವೆ ಎಂಬ ಸಂತಸದಾಯಕ ಭಾವವನ್ನು  ಹೆತ್ತವರಲ್ಲಿ ಉಂಟುಮಾಡಲು  ಸೋಲಬಾರದು.                 ಮಕ್ಕಳೆಲ್ಲ ತಮ್ಮ ತಾಯ್ತಂದೆಯರ ಪಾಲಿನ ದೀಪವಾಗಲಿ .ಭವಿಷ್ಯದಲ್ಲಿ ಹೊಸ ದೀಪಗಳ ಹಚ್ಚುವ ಬೆಳಗುವ ಹಣತೆಗಳಾಗಲಿ.ಸಾಲು ದೀಪಗಳು ಬೆಳಗಿ ಸುತ್ತಮುತ್ತಲಿರುವ ಕತ್ತಲೆಯ ಮಣಿಸುವಂತಾಗಲಿ.      ತುಷ್ಟಯಾಂ ಮಾತರಿ ಶಿವೆ ತುಷ್ಟೇ ಪಿತರೀ ಪಾರ್ವತಿ | ತವ ಪ್ರೀತಿರ್ಭವೇದೇವಿ ಪರಬ್ರಹ್ಮ ಪ್ರಸೀದತಿ || ******************************************* ಶುಭಾ ಎ.ಆರ್  (ದೇವಯಾನಿ) ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ   

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಎರಡು ವಚನಗಳನ್ನು ಗಮನಿಸಿದರೆ ಎರಡು ತನ್ನ ಭಾಷೆ, ರಾಚನಿಕ ವಿನ್ಯಾಸ ಮತ್ತು ಕೇಳುಗನ ಮೇಲೆ ಬೀರುವ ಪರಣಾಮದಲ್ಲಿ ಭಿನ್ನವಾದ ಮಾರ್ಗಗಳನ್ನು ಹಿಡಿದವುಗಳೇ ಆಗಿವೆ. ಒಂದು ಪ್ರಶ್ನಾರ್ಥಕವಾಗಿ ನಡೆದರೆ, ಮತ್ತೊಂದು ಬದಲಾದ ಕಾಲ, ಸಮಾಜಕ್ಕೆ ಹಿಂದಿನ ಮೌಲ್ಯವೊಂದನ್ನು ಸಾರಿ ಹೇಳಬೇಕಾದಾಗ ಉಂಟಾದ ಖೇಧ, ಸಿಟ್ಟುಗಳು ಕೆಲಸ ಮಾಡಿವೆ. ‘ಅರಿವುಳ್ಳೊಡೆ’ ಎಂಬ ಒಂದು ಪದವನ್ನು ಬಳಸಿ ಅರಿವನ್ನು ಉಂಟುಮಾಡುವುದರ ಕಡೆಗೆ ತನ್ನ ಉದ್ದೇಶವನ್ನು ದಾಸಿಮ್ಮಯ್ಯ ಯಶಸ್ವಿಯಾಗಿ ಹಸ್ತಾಂತರ ಮಾಡಿಬಿಡುತ್ತಾನೆ, ಆದರೆ ಬಸವಣ್ಣನವರಲ್ಲಿ ಸಿಟ್ಟು, ದೋಷಣೆಗಳು ಬಂದಿವೆ

Read Post »

You cannot copy content of this page

Scroll to Top