ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾರ್ತಿಕದ ಮುಸ್ಸಂಜೆ

ಕವಿತೆ ಕಾರ್ತಿಕದ ಮುಸ್ಸಂಜೆ ಅಕ್ಷತಾ ರಾಜ್ ಕಾರ್ತಿಕದ ಸಂಜೆಯಲಿ ಹಚ್ಚಿಟ್ಟ ದೀಪದಲಿನಿಂತಿದ್ದೆ ನೀ ಬಂದು ಬಾಗಿಲಿನ ಹೊಸಿಲಿನಲಿಬೀಸುಗಾಳಿಗೆ ಹೊನ್ನಬಣ್ಣದ ಮುಂಗುರುಳುಮೆಲ್ಲುಸಿರ ಲೇಖನಿಯಲಿ ಗೀಚಿತ್ತು ನಿನ್ನ ಹೆಸರು || ಕತ್ತಲೆಯು ಆವರಿಸೆ ಬೆಳಕ ದೀವಿಗೆ ಎಲ್ಲೋಅರೆಕ್ಷಣದ ಮಬ್ಬಿಗೆ ಮಂದಬೆಳಕಿನ ಛಾಯೆಬೆಳಕು ಹೊತ್ತಿಹ ತೇರು ಸಾಗುತಿಹ ಬೀದಿಯಲಿನೀನು ನಿಂತಿಹುದಹುದೇ ಮುಂದಿದ್ದ ಸಾಲಿನಲಿ || ಹಾಡು ಕೂಜಣದ ಆ ದನಿಯ ಇಂಪಿನಲಿನಿನ್ನ ಮಾತಿನ ಒನಪು ಒಲ್ಲೆನೆನ್ನಲೇ ನಾನುಇಂದೇಕೋ ಕಾಡುತಿಹ ರಾಗ ತಾಳದ ಮೈತ್ರಿಮುನಿಸ ಸರಿಸಿ ಒಂದಿನಿತು ಬಹುದೇ ಬಳಿಗೆ || ಈ ಬೆಳಕು ಸಂಜೆಯಲಿ ಕಾಣದಿಹ ಇರುಳಿನಲಿಆ ಕನಸ ರಥವೊಂದು ಹೊರಟಿಹುದೆ ದಿಬ್ಬಣವುಬರೆದುಬಿಡು ಮೌನದಲಿ ಮುಚ್ಚಿಟ್ಟ ಭಾವವನುತಿರುವಿ ಓದುವೆನೊಮ್ಮೆ ಹಚ್ಚಿಟ್ಟ ಬೆಳಕಿನಲಿ || ***********************************

ಕಾರ್ತಿಕದ ಮುಸ್ಸಂಜೆ Read Post »

ಕಾವ್ಯಯಾನ

ನೇಗಿಲಿನ ಒಂದು ಸಾಲು

ಕವಿತೆ ನೇಗಿಲಿನ ಒಂದು ಸಾಲು ವಿಠ್ಠಲ ದಳವಾಯಿ ಶತಮಾನಗಳ ಇತಿಹಾಸ ಹೊಸೆದಿದೆ ನೇಗಿಲಿನ ಒಂದು ಸಾಲುಆತುಮಗಳ ಆಲಿಂಗನ ಬೆಸೆದಿದೆ ನೇಗಿಲಿನ ಒಂದು ಸಾಲು ಜೀವಜಾತ್ರೆಯ ಜಾಡಿನಲಿ ಅಡಿಗಡಿಗೂ ಸವಾಲಿನ ಹೊನಲುಹೂವಕಂಪನೆ ಹರಡುತ ಸಾಗಿದೆ ನೇಗಿಲಿನ ಒಂದು ಸಾಲು. ಹರಕುವಸ್ತ್ರ, ಮುರುಕು ಗುಡಿಸಲು, ಹಸಿದ ತೊಟ್ಟಿಲುಜಗದ ಕಣ್ಣೀರಿಗೆ ಮರುಗಿದೆ ನೇಗಿಲಿನ ಒಂದು ಸಾಲು. ಬೆವರು, ನೆತ್ತರು ಬಿತ್ತಿ ಅನ್ನವನು ಉಣಿಸಿದೆ ಲೋಕದ ಹಸಿವಿಗೆ.ತಣ್ಣೀರುಪಟ್ಟಿ ಕಟ್ಟಿ ಮಲಗಿದೆ ನೇಗಿಲಿನ ಒಂದು ಸಾಲು. ಹೆದ್ದಾರಿಯ ಹಿರಿಯಾಸೆ, ಸುಂದರ ನಗರಿಯ ಕನಸಿಗೆಒದ್ದೆಮನದಲೆ ಕನಿಕರಿಸಿದೆ ನೇಗಿಲಿನ ಒಂದು ಸಾಲು. ಅನ್ನದ ಬಟ್ಟಲಿನಲಿ ಮಣ್ಣು ಸುರಿಯಬೇಡ ‘ದೊರೆ’ಮಣ್ಣು, ಅನ್ನ ಕೊಟ್ಟೇ ಸಾಗುತ್ತದೆ ನೇಗಿಲಿನ ಒಂದು ಸಾಲು. *****************************************

ನೇಗಿಲಿನ ಒಂದು ಸಾಲು Read Post »

ಕಾವ್ಯಯಾನ

ದೂರ ದೂರದತೀರ

ಕವಿತೆ ದೂರ ದೂರದತೀರ ಶಾಂತಲಾ ಮಧು ದೂರ ದೂರದ ತೀರತೀರದೀದೂರಹಾಲ ಬೆಳದಿಂಗಳುನಕ್ಷತ್ರದಾ ಸರತಬ್ಬಿಮುದ್ದಾಡಿದಾ ನೆಲಬರ ಸಿಡಿಲು ಗುಡುಗುಮಳೆ ಅಪ್ಪಳಸಿ ಆಲಂಗಿಸಿ…ನಲಿದು ಹರಿದಾಡಿ ನೆಲ ದೂರ ದೂರದ ತೀರತೀರದೀ ದೂರ ತೆಂಗು ಅಡಕೆ ಮರತಬ್ಬಿದಾ ಬಳ್ಳಿಗಳುಹೂವಾಗಿ ಹಣ್ಣು ಕಾಯಾಗಿಮಣ್ಣಿನವಾಸನೆಗೆಮರುಳಾಗಿ ಸುಕಿಸಿದಾ ನೆಲ ದೂರ ದೂರದ ತೀರತೀರದೀ ದೂರ ಹಸಿರಿನಂಗಳಕೆ ಅದೆಕನಸಿನ ಚಾವಡಿ ಹೊದೆಸಿಲಕ್ಷಣ ವಿತ್ತ ಮೂರ್ತಿಕೆತ್ತಿಟ್ಟು ಜೀವದಾಳದಪ್ರಿತಿ ಸಂಸ್ಕೃುತಿಯಬೆೇರನಾಳದಲಿಹೂತ್ತಿಟ್ಟ ಆ ನೆಲ ದೂರ ದೂರದ ತೀರತೀರದೀ ದೂರ ಗುಡ್ಡ ಬೆಟ್ಟದಸಾಲುಪಶು ಪಕ್ಷಿ ಇಂಚರಒಡನಾಟ, .ಹಳ್ಳ ಕೊಳ್ಳದ ಸ್ಪರ್ಷಜೀವ ಚೇತನವಾಗಿಪಾಠ ಕಲಿಸಿದ ನೆಲ ದೂರ ದೂರದ ತೀರತೀರದೀ ದೂರ ಹಸುಳೆಯಾಗಿಸಿಮತ್ತೆ ಸಿಹಿ ಕಹಿಯನೆನಪಿಸುತ ಜೀವ ನಾಡಿಯಮೀಟಿ ಮಯ್ ಮರೆಸುತಕತ್ತಲ ಕವಡೆ ಯಾಟದಲಿಸೋಲು ಗೆಲುವಲಿಮಿಂದೆಂದಾ ನೆಲ ದೂರ ದೂರದ ತೀರತೀರದೀ ದೂರ ಕಾನನದ ಕಪ್ಪೆಯಾಟದಕೊಳದಲ್ಲಿನೀರ ನೆರಿಗೆಯಲಿಪ್ರತಿಬಿಂಬ ಹೆಣೆದುದಿನಒಂದು ಕ್ಷಣವಾಗಿಕ್ಷಣಿಕತೆಯನೆ ಮರೆತ ನೆಲ ದೂರ ದೂರದ ತೀರತೀರದೀ ದೂರ ಸಂಭ್ರಮದ ಕಡಲಲ್ಲಿನೆನಪ ದೋಣಿಯ ನಡೆಸಿಅಲೆಯ ಏರಿಳಿತಕೆಚೀರಿ ಚೀತ್ಕರಿಸಿನೀರ ದಾರಿಯಲಲ್ಲಲ್ಲಿಪ್ರತಿಬಿಂಬ ಹುಡುಕಿತಡಕಾಡಿ ದಾ ನೆಲ ದೂರ ದೂರದ ತೀರತೀರದೀ ದೂರ ಅವಳ ಮಾಸಿದಸೆರಗುಬಿದ್ದಿಹುದು ನೆಲದಲ್ಲಿಕೆಂಪು ಮಣ್ಣನು ತಬ್ಬಿಅಲ್ಲಿ ಮಾಗಿದ ಪ್ರೀತಿಹಸಿರಿನ ಹುಲ್ಲುಅವಳುಸಿರ ಬಸಿರನಲೆಯನೆಲ ದೂರ ದೂರದ ತೀರತೀರದೀ ದೂರ ***********************

ದೂರ ದೂರದತೀರ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಕೆ.ಸುನಂದಾ ಗೆಳತಿ ನಿನ್ನಸೌಂದರ್ಯ ಯಾವ ಶಿಲ್ಪಿಕೈ ಚಳಕವೊ ?** ವಿದ್ಯೆ ದುಡಿಮೆತಾಳ್ಮೆ ; ಇದ್ರೆ ಎಲ್ಲವೂಜಯಶೀಲವು** ಮನತಟ್ಟದೆಹುಟ್ಟೀತೇನು ; ಸ್ವಂತಿಕೆಮರೆತ ಕಾವ್ಯ** ಕಾವ್ಯ ಲಹರಿಬಸಿರಲ್ಲಿ ಪಳಗಿಜನ್ಮಿಸಬೇಕು** ಪಕ್ಟವಾಗದೇಕಿತ್ತರೆ ರುಚಿಸದುಸಾಹಿತ್ಯ ರಸ ** ತಾಳದು ಮನಬರೆದೆ ಕಾವ್ಯ ; ಉಕ್ಕಿಹೊರಹೊಮ್ಮಿತು** ಭವ್ಯತೆಯಲಿಹುಟ್ಟಿದ್ದು ಶಾಸ್ವತದಮಧುರ ಗೀತೆ** ಪಲ್ಲವಿಸಿತುಆತ್ಮದಿಂದ ; ಕಾವ್ಯದಸತ್ವ ಶಕ್ತಿಯು** ಭಾವ ಗರ್ಭದಿಕಾವ್ಯ ಕಟ್ಟಿ ; ಹುಟ್ಟಿದ್ದುರಸ ಭರಿತ**************************************

ಹಾಯ್ಕುಗಳು Read Post »

ಕಾವ್ಯಯಾನ

ಅನ್ನ ಕೊಟ್ಟವರು ನಾವು.

ಕವಿತೆ ಅನ್ನ ಕೊಟ್ಟವರು ನಾವು. ಅಲ್ಲಾಗಿರಿರಾಜ್ ಕನಕಗಿರಿ ನೆನಪಿರಲಿ ನಿಮಗೆ.ನೀವು ದೆಲ್ಲಿಯ ರಸ್ತೆ ಮುಚ್ಚಿಕೊಂಡರೆ,ನಾಳೆ ನಾವು ಹಳ್ಳಿ ಹಳ್ಳಿಯರಸ್ತೆ ಮುಚ್ಚುತ್ತೇವೆ. ಆಗ ಶುರುವಾಗುತ್ತದೆ ನೋಡಿ ಅಸಲಿ ಯುದ್ಧ. ಸರ್ಕಾರ ಎಂದರೆ ಸೇವಕ ಎನ್ನುವುದು ಮರೆತ್ತಿದ್ದಿರಿ ನೀವು.ಸಾಕುಮಾಡಿ ನೇತಾರರ ಹೆಸರಲ್ಲಿ ಬೂಟಾಟಿಕೆಯ ಕೆಲಸ. ಇಂದಲ್ಲ ನಾಳೆ ಪಾರ್ಲಿಮೆಂಟ್ ನಲ್ಲಿ,ಮನುಷ್ಯ ಪ್ರೀತಿಯ ಬೀಜ ಬಿತ್ತುತ್ತೇವೆ ನಾವು.ಮೊದಲು ಧರ್ಮದ ಅಮಲಿನಿಂದ ಹೊರ ಬನ್ನಿ ನೀವು. ಹೋರಾಟದ ನದಿ ಕೆಂಪಾಗುವ ಕಾಲ ಬಂತು.ನಿಮ್ಮ ಮುಖವಾಡ ಕಳಚಿ ಬಿಡಿನೇಗಿಲ ಯೋಗಿ ಮುಂದೆ…….. ನೆನಪಿರಲಿ ಅನ್ನ ಕೊಟ್ಟವರು ನಾವು.ವಿಷ ಬೀಜ ಬಿತ್ತಬೇಡಿ ನೀವು. ******************************************

ಅನ್ನ ಕೊಟ್ಟವರು ನಾವು. Read Post »

ಕಾವ್ಯಯಾನ

ಮಾಗಿ ಕಾಲ

ಕವಿತೆ ಮಾಗಿ ಕಾಲ ಡಾಲಿ ವಿಜಯ ಕುಮಾರ್. ಕೆ.ವಿ ಆವರಿಸಿದ ಚಳಿನನ್ನ ಮೈತಾಕದಂತೆಎದೆಯ ಚಿಪ್ಪಿನೊಳಗೆ ಕಾದನಿನ್ನ ಬಿಸಿ ಅಪ್ಪುಗೆಯ ಹಿತಕ್ಕೆಬರುವ ಮಾಸಗಳೆಲ್ಲಮಾಘಮಾಸವನ್ನೇಹೊತ್ತಿರಬಾರದೆ ಅನ್ನಿಸುತ್ತೆ… ಒಲಿದ‌ ಮನಸುಗಳಮಾಗಿಸಿ.ಬಿಗಿಯಾಗಿ ಬೆಸೆದುಬಲಿತ ಕನಸುಗಳಮಿಲನವಾಗಿಸುವಶಿಶಿರ ಋತುಪರಿಪೂರ್ಣತೆಯ ಭಾವಗಳಪೂರ್ಣವಿರಾಮದಂತೆ.ನನಗೆ… ಮನದ ಮಾತುಗಾರನಮಂತ್ರಿಸಿ ವಶೀಕರಿಸುವಮಾಘಮಾಸಮಡದಿ ಮನದರಸರಮನಸುಗಳ ಹೊಸೆದುಪ್ರತಿ ಹೊತ್ತಿನ ಪಾಲುದಾರಿಕೆಯಪರಮ ಸುಖಕೆಮುತ್ತುಗಳ ಮಳೆಗರೆಸುವಪ್ರತಿ ಮಾಗಿಯೂಇಲ್ಲಿ ಹೊಸ ವಸಂತಗಳೇ…… ಕಿಟಕಿಯಿಂದತೂರಿ ಬರುವಹೊಂಗಿರಣಗಳ ಅಲ್ಲೇತಡೆದು ನಿಲ್ಲಿಸುವೆ.ಇನಿಯನಮುದ ನೀಡುವಮುದ್ದು ಪ್ರೀತಿಯಕದ್ದು ನೋಡದಿರಲೆಂದು…. ಅಂತದ್ದೊಂದುಸವಿ ಸಾಕಾಗುವಷ್ಟುಸವಿದೇಬಿಡುವೆ.ಸುಮ್ಮನಿರಿಚಿಲಿಪಿಲಿ ರಾಗಗಳೇ.ಬೆಳಗಿನ ಕಾತರಿಕೆ ನನಗಿಲ್ಲ. ಇಂದಿನಕನಸುಗಳ ಕೈಚೆಲ್ಲಿದರೆಮನಮುಂದಿನ ಮಾಗಿಕಾಲಕ್ಕಾಗಿಕಾದು ಕೂರಬೇಕು….ಹೆಪ್ಪುಗಟ್ಟಿದ ಹಲವು ನೆನಪುಗಳಜೊತೆಗೆ…… ಮಾಗಿ-ಶಿಶಿರ-ಚಳಿಗಾಲ *******************************

ಮಾಗಿ ಕಾಲ Read Post »

ಕಾವ್ಯಯಾನ

ಶಬ್ದಗಳ ಸಂತೆಯಲ್ಲಿ.

ಕವಿತೆ ಶಬ್ದಗಳ ಸಂತೆಯಲ್ಲಿ. ವೀಣಾ ನಿರಂಜನ್ ಇಂದುಶಬ್ದಗಳು ಅರ್ಥದ ಒಜ್ಜೆ ತಾಳಲಾರದೆನನ್ನ ಮನೆಯ ಬಾಗಿಲಿಗೆ ಬಂದು ನಿಂತಿವೆನಾನೀಗಅವುಗಳಿಗೆ ಸರಳವಾದ ಉಡುಪು ತೊಡಿಸಿಮತ್ತೆ ಮರಳಿ ಕಳುಹಿಸಬೇಕಾಗಿ ಬಂದಿದೆ. ** ಸುಳ್ಳು ಸಂಚರಿಸುವಾಗಶಬ್ದಗಳ ಜಾತ್ರೆಯೇ ನೆರೆದಿರುತ್ತದೆಸತ್ಯ ಹೊರಗಡಿಯಿಡುವಾಗಮೌನದ ಮೆರವಣಿಗೆ ನಡೆಯುತ್ತದೆ ** ಶಬ್ದಗಳು ನಾಚಿದಾಗಮೌನ ಮಾತಾಡುತ್ತದೆಶಬ್ದಗಳು ಬಿಂಕ ತೋರಿದಾಗಮೌನ ನಾಚುತ್ತದೆ ** ಅಕ್ಷರಗಳ ಹೆತ್ತದಕ್ಕೆಪದಗಳಿಗೆ ಬೆರಗಾಗಿತ್ತುಪದಗಳ ಬವಣೆಗೆಅಕ್ಷರಗಳೇ ಸಾಕ್ಷಿಯಾಗಿದ್ದವು. **********************************

ಶಬ್ದಗಳ ಸಂತೆಯಲ್ಲಿ. Read Post »

ಕಾವ್ಯಯಾನ

ಜೀವನ ಪಯಣ (ಸುನೀತ ಕಾವ್ಯ)

ಸುನೀತ ಕಾವ್ಯ ಜೀವನ ಪಯಣ (ಸುನೀತ ಕಾವ್ಯ) ಸುನೀತ (ಐದು ಮಾತ್ರೆಯ ನಾಲ್ಕು ಗಣಗಳ ಹದಿನಾಲ್ಕು ಸಾಲುಗಳು) ಶುಭಲಕ್ಷ್ಮಿ ಆರ್ ನಾಯಕ ಸಾಗುತಿದೆ ಅನವರತ ಜೀವನ ರಥದ ಪಯಣಹಲವು ಮಧುರ ವಸಂತಗಳ ಹರೆಯವನು ದಾಟಿಕಾಲ ಗುರುವ ವೀಣೆಯ ತಂತಿಯ ಸದಾ ಮೀಟಿಸದ್ದುಗದ್ದಲದಿ ಮಾಡದೇ ಸಮಯದ ಹರಣ ಏಳು ಬೀಳುಗಳನು ಸಮ ದೂಗಿಸುವ ತಾಳ್ಮೆಯುಬದುಕಿನ ಸತ್ಯವನು ಅರಿತು ಅರುಹುವ ಛಲದಲ್ಲಿಸಾಗಿದೆ ಪಯಣವು ಗುರಿ ಸೇರೋ ತವಕದಲ್ಲಿಪಯಣದಲಿ ಬೇಕೆಮಗೆ ಎಂದಿಗೂ ಭರವಸೆಯು ಬಂದ ಸೋಲು ಗೆಲುವುಗಳ ಅನುನಯದಿ ಸವಿಯುತಮಾರ್ಗದ ಎಡರು ತೊಡರುಗಳ ಸಂಯಮದಿ ಸಹಿಸಿಆವರಿಪ ಹಮ್ಮು ಬಿಮ್ಮುಗಳ ವಿನಯದಿ ಅಳಿಸಿಹೊಂದಿಕೆ ಪ್ರೇಮ ಭಾವದ ಅರಿವಲಿ ಬೆರೆಯುತ ಜೀವನ ಪಥದೊಳು ಛಲ ವಿಶ್ವಾಸದಿ ನಡೆಯುವನೋವುಗಳ ಮರೆಯುತ್ತ ನೆಮ್ಮದಿಯನು ಪಡೆಯುವ **********************************************

ಜೀವನ ಪಯಣ (ಸುನೀತ ಕಾವ್ಯ) Read Post »

ಕಾವ್ಯಯಾನ

ನನ್ನ ಕವಿತೆ

ಕವಿತೆ ನನ್ನ ಕವಿತೆ ಲಕ್ಷ್ಮೀದೇವಿ ಪತ್ತಾರ ಹರುಕು ಬಟ್ಟೆಮುರುಕು ಮನೆಯಲಿಅರೆ ಹೊಟ್ಟೆ ಊಟದಲ್ಲೂಹೆತ್ತ ಮಕ್ಕಳು ಕಲಿತುಮನೆಗೆ ಆಸ್ತಿ ಆಗುವರೆಂಬಹೆತ್ತವರ ಹೊಟ್ಟೆ ತುಂಬಾ ಕನಸುನನ್ನ ಕವಿತೆ ಭೂಮಿ ಹರಗಿ ಹದಗೊಳಿಸಿಗಟ್ಟಿ ಬೀಜವ ಬಿತ್ತಿಮಳೆ ಬರುವುದೆಂಬ ಭರವಸೆ ಹೊತ್ತರೈತನ ನಿರೀಕ್ಷೆ ನನ್ನ ಕವಿತೆ ಕೆಲಸವಿಲ್ಲವೆಂದು ಕೊರಗದೆಸಿಕ್ಕ ಕೆಲಸವನ್ನ ಚೊಕ್ಕನಾಗಿ ಮಾಡಿ ಹೊಟ್ಟೆಗೆ ಹಿಟ್ಟು ಗಿಟ್ಟಿಸಿಕೊಳ್ಳುವ ಗಟ್ಟಿಗರ ಇಚ್ಛಾಶಕ್ತಿನನ್ನ ಕವಿತೆ ಬಾಳ ಪಥದ ಏರಿಳಿತಗಳನ್ನು ಎದುರಿಸಿ ಸಂಸಾರ ರಥವನ್ನು ಸುಗಮವಾಗಿ ದಡ ಸೇರಿಸುವ ಸ್ತ್ರೀ ರತ್ನ ನನ್ನ ಕವಿತೆ ಗಾಳಿ ಮಳೆ ಬಿಸಿಲು ಲೆಕ್ಕಿಸದೆಕಾಮನೆಗಳನ್ನು ಕಡಿಗಣಿಸಿವೈರಿಪಡೆಯ ನಿರ್ಣಾಮದ ಪಣ ತೊಟ್ಟಯೋಧನ ದೇಶಭಕ್ತಿ ನನ್ನ ಕವಿತೆ ಪ್ರಕೃತಿ ಪ್ರಕೋಪ, ವಿಕೋಪಗಳ ಎದುರಿಸಿರೋಗರುಜಿನಗಳ ನಿಯಂತ್ರಿಸಿಒಳ್ಳೆಯ ದಿನಗಳ ಆಶೆ,ಭರವಸೆಸಾಕಾರಗಳಿಸುವ ನಾಡಿನ ಸರ್ದಾರನನ್ನ ಕವಿತೆ *******************************

ನನ್ನ ಕವಿತೆ Read Post »

You cannot copy content of this page

Scroll to Top