ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಜಲ್

ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೆಜ್ಜೆ ಗುರುತು ಮಣ್ಣಿನ ಹುಡಿಯಲಿ ಅಳುಕಿದೆ ಸಾಕಿಎದೆಯ ದಾರಿಯಲಿ ನಡೆದು ಬದುಕು ತುಂಬಿ ತುಳುಕಿದೆ ಸಾಕಿ ಒಲವಿನ ಪರಿಮಳ ಒಡೆದ ಕನ್ನಡಿ ಚೂರಿಗೆ ಮುತ್ತಿಕ್ಕಿದೆ ನೋಡುಉಸಿರ ಬಸಿದು ಕನಸು ಕಟ್ಟಿ ಕಾಲು ಹಾದಿ ಸಾಗಲು ನರಳುತಿದೆ ಸಾಕಿ ಭಾವ ಬಯಲಿಗೆ ಬೆಸುಗೆ ಹಾಕಿ ಮೌನ ಮನೆ ಮಾಡಿದೆಬಾಹು ಬಂಧನದಿ ಬಂಧಿಯಾಗುವ ಹೊಸ ಕನಸು ಚಿಗುರುತಿದೆ ಸಾಕಿ ಕಮರಿದ ಆಸೆ ಹಸಿರಾಗಿ ಉಸಿರ ಸೂಸಲು ಬಂದಿದೆಒಳಗಿನ ಗಾಯ ಮಾಯುವ ಮುನ್ನ ಪ್ರತಿ ಬಿಂಬ ಕಾಡುತಿದೆ ಸಾಕಿ ಮರುಳನೆದೆಯ ಹಾಸಿಗೆಯಲಿ ನಕ್ಷತ್ರದ ಬೆಳಕು ಹರಡಿ ಚಿತ್ತಾರ ಚೆಲ್ಲಿವೆಹುಡಿ ತುಳಿದ ಪಾದಕೆ ಮಲ್ಲಿಗೆ ಹಾಸಿ ಮನವು ನಗುತಿದೆ ಸಾಕಿ ********************

ಗಜಲ್ Read Post »

ಕಾವ್ಯಯಾನ

ಜ್ಞಾನ ಬಿತ್ತಿದವ….ಬುದ್ದ

ಕವಿತೆ ಜ್ಞಾನ ಬಿತ್ತಿದವ….ಬುದ್ದ ಶಿವಲೀಲಾ ಶುದ್ಧೋದನ ಮಗನಂತೆ ಇವನುಮಗ್ಗುಲು ಹೊರಳಿಸಿದಂತೆಲ್ಲನಿದ್ರೆಯ ಕಂಬಳಿ ಕಿತ್ತೊಗೆದುಮೆಲ್ಲಗೆ ಸದ್ದಿಲ್ಲದಂತೆ ಎದ್ದೊದನಂತೆ ಹಣೆಗೊಂದು ಭಾವ ಲೇಪಿಸಿಕೊಂಡುವೈಭೋಗವ ವಸ್ತ್ರ ಕಳಚಿ ಬೆತ್ತಲಾಗಿಸಿಇರುಳಿಗೆಲ್ಲವ ಅರ್ಪಿಸಿ ಹೊಂಟವನುಬೀದಿ ಓಣಿಯಲಿ ದಿಟ್ಟಹೆಜ್ಜೆಯಿಟ್ಟವನು ನಿಶ್ಯಬ್ದ ದಾರಿಗುಂಟ ನಿಶಾಚರಿಗಳ ಘೀಳುರಕ್ತ ಸಿಕ್ತ ಪಾದದಲಿ ಮುಕ್ತಿಯ ಹಂಬಲವುಹಪಹಪಿಸಿದರು ಜ್ಞಾನ ದಾಹ ತೀರಲೊಲ್ಲದುದೇಹ ದಂಡಿಸಿದಷ್ಟು ಬಳಲಿತು ಭಾವದೊಡಲು ದಕ್ಕಿದುಡುಗೊರೆಯು ಮೋಕ್ಷವಾಗಲಿಲ್ಲಮೋಕ್ಷದ ಬೆನ್ನ ಹತ್ತಿದವಗೆ ದಿಕ್ಷೆಯಾಗಲಿಲ್ಲಆಸೆಯೇ ದುಃಖಕ್ಕೆ ಮೂಲವೆನ್ನುವಾಗೆಲ್ಲಕಾಯಕಕೆ ಮರಣಮೃದಂಗದಾ ಅಮಲೆಲ್ಲ ಮಿಂಚಿತೊಂದು ಬೆಳ್ಳಿರೇಖೆ ಕಣ್ಣಂಚಲ್ಲಿಪೂರ್ಣ ಚಂದಿರನ ಬೆಳದಿಂಗಳಲ್ಲಿದಿವ್ಯ ಮಂಗಳ ವಾದ್ಯ ಮೊಳಗಿದಂತೆಲ್ಲಹುಣ್ಣಿಮೆ ಶಶಿಯಲ್ಲಿ ಲೀನವಾದಂತೆಲ್ಲ ಭವ ಬಂಧನವ ಕಿತ್ತು ಬುದ್ದನಾದವಭವದ ಸೌಖ್ಯಕ್ಕಾಗಿ ಎಲ್ಲ ತೊರೆದವಶಾಂತಚಿತ್ತದಿಂದ ಪ್ರೀತಿ ಹರಿಸಿದವತಾಳ್ಮೆಯ ಗೂಡಲ್ಲಿ ಜ್ಞಾನ ಬಿತ್ತಿದವ ***************************

ಜ್ಞಾನ ಬಿತ್ತಿದವ….ಬುದ್ದ Read Post »

ಕಾವ್ಯಯಾನ

ಗೀತಕಾರಂಜಿ

ಕವಿತೆ ಗೀತಕಾರಂಜಿ ವಿದ್ಯಾಶ್ರೀ ಅಡೂರ್ ಗೀತೆ ಮೂಡಿ ಮನದೇರಾಗ ತಾಳ ಹಾಕಿ ಕುಣಿಯುತಿಹುದುನವಿಲಿನಂತೆ….ಕಾರ್ಮುಗಿಲು ಬಿಡದೆ ಮಳೆಯಸುರಿಸಿದಂತೆ…. ಹೊಕ್ಕಿ ಮನದಿ ವಿವಿಧ ಭಾವಸಿಕ್ಕಿದೆಲ್ಲ ನಲಿವು ನೋವಅಕ್ಕಪಕ್ಕ ಸುಳಿವ ಸಾವಕಂಡು ಹೃದಯ ನಲುಗಿಬೆದರಿದಂತೆ….ಮೊಂಡು ಹಠವ ಮಾಡಿ ನಮ್ಮಒಲಿಸಿದಂತೆ….. ಜರುಗಿ ಮನದ ಒಳಗೆ ಜಾತ್ರೆತುಂಬುತಿಹುದು ಹಿಡಿದ ಪಾತ್ರೆಕವಿತೆಯೊಂದು ನಿತ್ಯ ಯಾತ್ರೆಬರಡು ನೆಲದಿ ಹಸಿರಹರಡಿದಂತೆ…ಕೆಸರಲ್ಲೂನೂ ಕಮಲ ತಾನೇಅರಳಿದಂತೆ… ಬಿಸಿಲ ಬೇಗೆಯಲ್ಲಿ ಬೆವರಮಾಗಿ ಚಳಿಯಲ್ಲೂನು ಪದರಸೋನೆ ಮಳೆಯು ಕೂಡ ಮಧುರನೀಗುತಿಹುದು ಮನದ ಬರಡಕಾರಂಜಿಯಂತೆ…ಒಂಟಿ ಮನದ ಜತೆಗೆ ಜಗವೇನಡೆಯುವಂತೆ…. ******************************

ಗೀತಕಾರಂಜಿ Read Post »

ಕಾವ್ಯಯಾನ

ಬುದ್ಧನಾಗಲೂ ಕಷ್ಟವೀಗ

ಕವಿತೆ ಬುದ್ಧನಾಗಲೂ ಕಷ್ಟವೀಗ  ಹೇಮಚಂದ್ರ ದಾಳಗೌಡನಹಳ್ಳಿ ಈಗಲೀಗ ಎದ್ದು ಹೊರಡಬೇಕೆನಿಸುತಿದೆನಿನ್ನಂತೆ ತೊರೆದು ಎಲ್ಲವಕಂಡೊಂದು ಸಾವಿಗೇ; ಶರಣಾದೆ ಮುಕ್ತಿಗೆಭಾಜನ ನೀನೀಗಲೂ ಜನಭಕ್ತಿಗೆತಮಗೇ ಸಾವು ಬಂದಡರಿ ನಿಂತರೂನಿಂತ ಕಟ್ಟಡ ಕಾಮಗಾರಿಗೆ ಬಳಲಿಅಳಲುಗೊಂಡಳುತ ನರಳುವರ ಕಂಡು(ಈಗಲೀಗ) ತರಿದು‌ ಹಸುರ; ತೋಡಿ ನೆಲಬಸುರಮೀರಿದಂಕೆಗೆ ಮುತ್ತಿ ಮಾರಿ ಶಂಕೆಸುಳಿವ ಉಳಿದ ಗಾಳಿಯನೂ ಮುಕ್ತ ಮೂಸದಂತೆಮೂಗು ಬಾಯಿ ಬಂಧಿಸಿ; ಮನೆಯೊಳಗೇ ಸಂಧಿಸಿಕೊರೆದ ಕೊಳವೆ ಬಾವಿ ಕೆಲಸವರ್ಧಕೆ ನಿಂತುದಕೆಅವಲತ್ತುಕೊಂಡಳಲುತಿರುವ ತಿರುಕರ ಕಂಡು(ಈಗಲೀಗ) ಬಿರುಕು ಗೋಡೆ; ತೂತು ಮಾಡುಳ್ಳಮನೆಯೊಳಗೆ ಬರಲು ಮಳೆನೀರುಮಳೆಗೆ ಶಾಪ ಹಾಕುವ ಅಂಧರುಹುತ್ತಗಳ ಕೆಡವಿ ಮನೆಯ ಮಾಡಿತಮ್ಮನೆಯ ಸುತ್ತ ಹಾವುಗಳ ಹುತ್ತವೆಂದುಹಾವಿಗೆ ದೂರುವ ಮೂಳರ ಕಂಡು(ಈಗಲೀಗ) ಹೊರಟೂ ತೊರೆದು ಎಲ್ಲವ ಬುದ್ಧನಾಗಲುಗುಮಾನಿ ಬೆನ್ಹತ್ತಿ ಅಪರಾಧಿ ಮಾಡುತದೆನೆಲೆನಿಂತರೆ ಎಲ್ಲಾದರೊಂದು ಕಡೆಯಾರದೋ ಹೆಸರಿಗೆ ನೋಂದಣಿಯಾಗಿ ಪಾಳಬಿದ್ದ ನೆಲಮೂಲವ ಕೆಣಕಿ ಅಣಕಿಸುತದೆಇದ್ದರೂ ಮರೆತು ಹೊಂಟರೂ ಅರಿತುಕಷ್ಟವೀಗೀಗ ಸುಲಭವಲ್ಲಕಾಣುವ ಕಣ್ಣುಗಳಿಗೆ ಸಾವಿರದ ಭಾವತೆಗೆವುತವೆ ಜೀವಂತ ಜೀವ… **************

ಬುದ್ಧನಾಗಲೂ ಕಷ್ಟವೀಗ Read Post »

ಕಾವ್ಯಯಾನ

ಬಾಗಿಲು ಮುಚ್ಚಿದಾಗ

ಕವಿತೆ ಬಾಗಿಲು ಮುಚ್ಚಿದಾಗ ಅಬ್ಳಿ,ಹೆಗಡೆ  ಗಟ್ಟಿಮುಟ್ಟಾದ ಬಾಗಿಲಿಗೆ,       ಸುಂದರ,ಕಲೆಯಚಿತ್ತಾರ.     ..ಕದಮುಚ್ಚಿ,ಚಿಲಕ ಹಾಕಿದರೂ       ಅಭದ್ರ.ಮುರಿಯಲೂ ಬಹುದು       ಸೋಲಿನ ‘ಭೂತ’ಗಳು.       ಒಳಬರುವ ಹೆದರಿಕೆ,ರಾತ್ರಿ,       ಬಾನಂಗಳದಲ್ಲಿ ಆಡುವ-       ಮಕ್ಕಳ ತುಂಟಾಟಕ್ಕೆ ಸೋತು,       ಹೈರಾಣಾದ, ಅಸಹಾಯಕ                       ತಾಯಿ,ಚಂದ್ರ-        ಒಡೆದು,ಪುಡಿ,ಪುಡಿಯಾಗಿ‌ಸಿ,        ಒಳಬರಬಹುದು ಚಿಲಕ-        ವಿದ್ದರೂ.ಕಣ್ಣಕೋರೈಸುವ,        ಸೂರ್ಯನ ಪ್ರಖರ ತೇಜ-        ದೆದುರು,ಕೈಕಟ್ಟಿ ಕುಳಿತ,        .             ಕಳಾಹೀನ ಲಾಂದ್ರ.        ಅಭೇದ್ಯವಾದರೂ,ಭೇದಿಸಬಹುದು,        ಗಟ್ಟಿಮನಸ್ಸುಗಳ,ಹ್ರದಯಗಳ.       .ಸ್ರಷ್ಟಿಯನಂತ,ಸುಶ್ರಾವ್ಯ,         ತಾರಸ್ತಾಯಿಗಳ ಜುಗಲ್ಬಂದಿ-       . ಯಬ್ಬರದಲ್ಲಿ,ಮಂಕಾಗಿ                     .  ಮೂಲೆಸೇರಿದ ಮಂದ್ರ.        ಬಾಗಿಲು,ಕದ,ಚಿಲಕಗಳ,        ರಕ಼ಣೆಯಿದ್ದೂ,ಅವಿತಿಟ್ಟು-        ಕೊಳ್ಳುವ,ಹೇಡಿತನದಬದುಕಲ್ಲಿ        ಸೋಲುಗಳು ಒಳಬಂದು        ಸೋಲಿಸುವ,ಹೆದರಿಕೆ ಮಾತ್ರ,                           ನಿತ್ಯ,ನಿರಂತರ….! *************

ಬಾಗಿಲು ಮುಚ್ಚಿದಾಗ Read Post »

ಕಾವ್ಯಯಾನ

ಮತ್ತೆ ಹುಟ್ಟಿ ಬಾ ಬುದ್ದ

ಕವಿತೆ ಮತ್ತೆ ಹುಟ್ಟಿ ಬಾ ಬುದ್ದ ಅಭಿಜ್ಞಾ ಪಿ ಎಮ್ ಗೌಡ ಅಜ್ಞಾನವೆಂಬ ಕಗ್ಗತ್ತಲ ನಾಡಲಿಬರೀ ಬೆತ್ತಲೆಯಬೇತಾಳಗಳದ್ದೆ ಸದ್ದುಗದ್ದಲ….ಸ್ವಾರ್ಥವೆಂಬ ಪೈಶಾಚಿಕ ಜಗದೊಳಗೆಭ್ರಷ್ಟತೆಯ ತಿಮಿಂಗಲಗಳೆಒದ್ದಾಡುತಿವೆ ಆಸೆಯೆಂಬಐಭೊಗದ ಲಾಲಸೆಯೊಂದಿಗೆಝಣಝಣ ಕಾಂಚಾಣದವೇಷತೊಟ್ಟು.!ನಿನ್ನಾದರ್ಶಕೆವಿರುದ್ಧ ಪಣತೊಟ್ಟು ನಿಂತಿಹ ನಾಡಿಗೆಮತ್ತೆ ಹುಟ್ಟಿ ಬರುವೆಯಾ ಬುದ್ಧ.?….. ನೀ ಹೇಳಿದೆ ಬುದ್ಧ ಗುರುವೆಂದರೆಬರಿ ವ್ಯಕ್ತಿಯಲ್ಲ ಶಕ್ತಿಯೆಂದು.!ಇಂದು ಆ ವ್ಯಕ್ತಿಗೆಬೆಲೆಯು ಇಲ್ಲ ನೆಲೆಯು ಇಲ್ಲ.!ಮುಂದೆ ಗುರಿಯೂ ಇಲ್ಲಗುರುವಿನಾಶೀರ್ವಾದವೂ ಇಲ್ಲದೆಸಾಗುತಿಹ ಹಿಂಡು ಅಹಂನಮದವೇರಿದ ಸಲಗಗಳಂತಾಗಿದೆ.!ಅತಿಯಾಸೆಯ ಫಲಶೃತಿಧರಣಿಯೊಡಲ ಗರ್ಭಸೀಳಿಅಜ್ಞಾನದ ಅಮಲಲಿಸದಾ ತೂಕಡಿಸುತಿಹ ನಾಡಿಗೆನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.!… ನಿನ್ನೆಯ ಆದರ್ಶಗಳು ಸಂದೇಶಗಳುಭಾಷಣಕಾರನ ಭಾಷಣದಸ್ವಾರಸ್ಯಕತೆಗಷ್ಟೆ ಬುದ್ಧ.!ಜನರ ಮನಸೆಳೆವ ತಂತ್ರಗಾರಿಕೆಯಸೂತ್ರದಾರನ ಮಂತ್ರವಿದು ಗೊತ್ತ.!ಧೂಳಿಪಟ ಮಾಡುತಿಹನುಪ್ರಕೃತಿಯೊಡಲ ಸಂಪತ್ತಾ….ಇದ ನೋಡಲು ಬರುವೆಯಾ ಬುದ್ಧ..ಬುದ್ಧಿಯಿದ್ದು ಅವಿವೇಕಿಯಂತೆವರ್ತಿಸೊ ಜಗದೊಳಗೆನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.?… ಸತ್ಯ ಅಹಿಂಸೆಗಳನ್ನೆ ಕಾಲ್ಕಸ ಮಾಡಿಸುಳ್ಳಿನ ಸುಪ್ಪತ್ತಿಗೆಯಲಿರಾಜರೋಷವಾಗಿ ಮೆರೆಯುತಿಹನು…ಸದ್ಗುಣ ಸನ್ಮಾರ್ಗ ಸನ್ನಡತೆಗಳಪಥವ ಬದಲಿಸಿ ಗುರುವಿಗೆ ತಿರುಮಂತ್ರಹಾಕಿ ಬೀಗುತಿಹ ಮನುಜ.!ಏಷ್ಯಾದ ಬೆಳಕಾಗಿದ್ದ ನೀನು ,ಬುದ್ಧಅಗೋ.! ನೋಡುಈ ಕಗ್ಗತ್ತಲ ಕೋಟೆಯೆಂಬ ಜಗದೊಳಗೆಉಸಿರುಗಟ್ಟಿಸೊ ವಾತಾವರಣದಲಿಭ್ರಷ್ಟತೆಯ ಮಹಲುಗಳದ್ದೆ ಕಾರುಬಾರುತುಂಬಿಕೊಂಡಿರುವ ನಾಡಿಗೆನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.?… ಅಜ್ಞಾನ ಅನೀತಿಗಳ ಆಗರದಲಿಧರೆಯೊಡಲು ಧಗಧಗಿಸಿ ಉರಿದುವಹ್ನಿ ಜ್ವಾಲೆಯ ಕೆನ್ನಾಲಿಗೆಗೆಬಲಿಯಾಗುತಿಹ ನಾಡಿಗೆಮತ್ತೆ ಬರುವೆಯಾ.? ಬುದ್ಧ.!ಇಗೋ ನೋಡು.! ಮಾನವೀಯತೆಯದುಂದುಭಿಯ ಸದ್ದಡಗಿಸಿಕ್ರೌರ್ಯತೆ ಪರ್ವ ವಿಜೃಂಭಿಸಿವೆ.!ನಿನ್ನಾದರ್ಶಗಳನ್ನೆ ಮರೆತುತನಗರಿವಿದ್ದು ಅವನಿ ಅಳಿವಿನಂಚಿನಲಿಅವನೇ ಅಂತ್ಯವಾಗುತಿಹ ಜಗಕೆಮತ್ತೆ ಹುಟ್ಟಿ ಬರುವೆಯಾ.? ಬುದ್ಧ… ****************

ಮತ್ತೆ ಹುಟ್ಟಿ ಬಾ ಬುದ್ದ Read Post »

ಕಾವ್ಯಯಾನ

ಮಹಾಪಯಣಿಗ

ಕವಿತೆ ಮಹಾಪಯಣಿಗ ಡಾ. ಗುರುಸಿದ್ಧಯ್ಯಾ ಸ್ವಾಮಿ ಚೀನಾದ ಮೆನ್-ಪಾಪ್-ಕು ಹಳ್ಳಿಯ ಕುವರಯುವನಾಗೆ ಬೌದ್ಧನಾದ ಯುವಾನ್ ಚಾಂಗ್ಭಾರತದ ಬುದ್ಧ ನಿಧಿ ಕೈ ಮಾಡಿ ಕರೆಯಲುಬುದ್ಧ ನಾಡಿನತ್ತ ಅಡಿ ಇಟ್ಟ ಮಹಾಪಯಣಿಗ ಊಹಿಸಲಾಗಿದ ಕಷ್ಟಗಳ ಬೆನ್ನೇರಿ ಹೊರಟಕುದುರೆ ಒಂಟೆ ಹೇಸರಗತ್ತೆಗಳನೇರಿ ನಡೆದಕಾಲ್ನಡಿಗೆಯಲ್ಲೂ ದಾಟಿ ಮುನ್ನಡೆದ ಧೀರ ಮರುಭೂಮಿ ಹಿಮ ಪರ್ವತ ಗಿರಿಕಂದರಗಳ ಹರ್ಷ ತುಂಬಿತವನಿಗೆ ಹರ್ಷವರ್ಧನನ ಭೆಟ್ಟಿಸಂದರ್ಶಿಸಿದ ಹತ್ತು ಹಲವು ಬೌದ್ಧ ಪೀಠಗಳಓದಲು ಕಲಿತ ಸಂಸ್ಕೃತ ಪಾಲಿ ಭಾಷೆಗಳಸಂಗ್ರಹಿಸಿದ ಅನುವಾದಿಸಿದ ಹಸ್ತಪ್ರತಿಗಳ ಕಪಿಲವಸ್ತು ಪಾಟಲಿಪುತ್ರ ನಾಲಂದಾಗಳಿಗೆಭೆಟ್ಟಿ ಇತ್ತ ನಾಗಾರ್ಜುನ ಕೊಂಡಾದಿಗಳಿಗೆಕಾಂಚಿ ಪುನ್ನಾಟ ಬನವಾಸಿ ನಾಸಿಕಗಳ ಸುತ್ತಿದಮಹಾಬೌದ್ಧ ಸಮ್ಮೇಳನದಿ ಮನ್ನಣೆ ಪಡೆದ ತೆಂಕಣ ಪಡುವಣ ಭರತ ಭೂಮಿಯ ಸುತ್ತಿಕನ್ನಡಿ ಹಿಡಿದ ಕನ್ನಡಿಗರ ಸತ್ಯಸಂಧ ಸನ್ನಡೆತೆಗೆಗೌರವಿಸಿದರು ಅಸ್ಸಾಂ ಕಾಶ್ಮೀರಾದಿ ಅರಸರುತುಂಬ ಕ್ಲೇಶದಿಂದ ಬೀಳ್ಕೊಟ್ಟ ಹರ್ಷವರ್ಧನ ಮರಳಿದ ಬುದ್ಧನಾಡ ಮಹಾಪಯಣಿಗನಿಗೆಅದ್ದೂರಿ ಸ್ವಾಗತ ದೊರಕಿತು ಚಕ್ರವರ್ತಿಯಿಂದಅನುವಾದ ಮುಂದುವರಿಸಿದ ಚೈತ್ಯ ಕಟ್ಟಿಸಿದರಾಜಕುವರ ಮಂತ್ರಿಗಳೂ ಆತುರ ಪ್ರವಚನಕೆ ಅರಮನೆ ದೊರೆಯಿತು ಪ್ರವಾಸ ಕಥೆ ಅರಳಿತುಎಪ್ಪತ್ತೈದನೆಯ ಹೊತ್ತಿಗೆ ಹೊಸ್ತಿಲೊಳಗಿತ್ತುಹಲವು ಕಗ್ಗಂಟುಗಳನು ನಿಘಂಟು ಬಿಡಿಸಿತ್ತುದಣಿದ ದೇಹ ಮಹಾಪರಿನಿರ್ವಾಣ ಬೇಡಿತ್ತು ಬೌದ್ಧ ಭಿಕ್ಕುಗಳಿಗೆ ಬುದ್ಧನಾಡ ಸುತ್ತಿ ಎಂದಹೊಸ ಬೌದ್ಧ ತತ್ವ ಶಾಸ್ತ್ರ ಹೊಸೆದು ನಿಂದನಿರ್ವಾಣಗೈದ ಚೀನಾದ ನವ ಗೋಪುರವಾದಬುದ್ಧನಾಡು ತಾಯ್ನಾಡಿಗೆ ರಸಸೇತುವೆಯಾದ ************

ಮಹಾಪಯಣಿಗ Read Post »

You cannot copy content of this page

Scroll to Top