ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜಬೀವುಲ್ಲಾ ಎಮ್. ಅಸದ್ ಕವಿತೆ ಖಜಾನೆ

ಹುಡುಕಾಟ ಅವನನ್ನು ಹುಡುಕುತ್ತಿದ್ದೆನಿತ್ಯ ನಿರಂತರವಾಗಿಅವನಿಗಾಗಿ ಹಂಬಲಿಸುತ್ತಿದ್ದೆಅವನು ಕಾಣದೆ ಕೊರಗಿ ಹೋದಲ್ಲೆಲ್ಲ, ಬಂದಲ್ಲೆಲ್ಲಎಲ್ಲಿಯೂ ಇರುವಿಕೆಯಕುರುಹು ಕಾಣಲಿಲ್ಲಹುಡುಕುವಲ್ಲೆಲ್ಲಅವನು ಸಿಗಲೇ ಇಲ್ಲಬಹುಶಃ ಅಲ್ಲೆಲ್ಲ ಇರಲೇ ಇಲ್ಲ ಆದರೂ ಹುಡುಕ ಹೊರಟೆಮಸೀದಿ, ಮಂದಿರ,ಇಗರ್ಜಿಗಳ ಒಳಗೆಬೆಟ್ಟದ ಶಿಖರದ ತುತ್ತ ತುದಿಯ ಮೇಲೆಗುಹೆ, ಕಣಿವೆ, ಕಂದರಗಳ ನಡುವೆಹಿಮದ ಹರಳಲ್ಲೂಮರಳ ಕಣಕಣದಲ್ಲೂನದಿಯ ಅಲೆಗಳಲ್ಲಿಕಡಲ ಕಿನಾರೆಯಲ್ಲಿಮುಗಿಲ ಮಾರುತದಲ್ಲಿಹೊರಗೆಲ್ಲಿಯೂ ಅವನಅಸ್ತಿತ್ವ ಕಾಣದಾದೆ ಒಂದೆಡೆ ಕುಳಿತೆಬುದ್ದನಂತಾಗಿಮಾಯೆಯ ಲೋಕದಹೊರ ಕಣ್ಣು ಮುಚ್ಚಿದೆಒಳ ಅರಿವಿನ ಕಣ್ಣು ತೆರೆದೆನನ್ನ ಅಂತರಂಗದೊಳಗೆ ಇಣುಕಿದೆಅವನನ್ನು ಶೋಧಿಸಿದೆಬೆಳಕೊಂದನು ಕಂಡೆಎಲ್ಲೂ ಕಾಣದ ಅವನನನ್ನೊಳಗೆ ನಾ ಕಂಡುಪಾವನನಾದೆ ನಿಜ!ಅವನು ಎಲ್ಲೆಡೆಯೂ ಇದ್ದ,ಇದ್ದಾನೆ ಮತ್ತು ಇರುತ್ತಾನೆಅಣು ರೇಣು ತೃಣಕಾಷ್ಠಗಳಲ್ಲಿಇದ್ದೂ ಇಲ್ಲದಂತಾಗಿ ಸದಾ… ಸರ್ವದಾ…ಅವನಕಾಣುವ ಕಣ್ಣುಕುರುಡಾಗಿರ ಬಾರದಷ್ಟ ***************** ಪ್ರೀತಿ ಹಂಚುತ ಸಾಗು ಮೋಜಿನ ಕುದುರೆ ಏರಿಮನಸು ಹೊರಟಿದೆ ಸವಾರಿಕಾಣದೂರಿಗೆ ಯಾವ ದಾರಿ?ಕಾಣಿಸು ಪ್ರಭುವೆ ಒಂದು ಸಾರಿತಂದಾನ ತಾsನನ… ತಾನೇ ತಂದಾsನ… ಕಂಡದ್ದು ತಪ್ಪಿಲ್ಲಿಕಾಣದ್ದೆ ಸರಿ ಇಲ್ಲಿಕಂಡು ಕಾಣದ ಆಟಕೆದೇವನೆ ಮೂಕ ಸಾಕ್ಷಿ ಇಲ್ಲಿತಂದಾನ ತಾsನನ… ತಾನೇ ತಂದಾsನ… ಒಳಗೊಂದು ಹೊರಗೊಂದುಮುಖವೊಂದು ಮುಖವಾಡ ಹಲವುನೀತಿವಂತರಿಗಿದು ಕಾಲವಲ್ಲಸುಳ್ಳೆ ಸತ್ಯವಿಲ್ಲಿ, ಈ ಕಲಿಗಾಲದಲ್ಲಿತಂದಾನ ತಾsನನ… ತಾನೇ ತಂದಾsನ… ಎಷ್ಟು ಉಂಡರೂ ಹಸಿವಿಲ್ಲಿಉಟ್ಟರೂ ಬೆತ್ತಲೆಯೇಆಲಯದ ದಾಸರೆ ಎಲ್ಲಾಬಯಲಾಗುವವರಾರಿಲ್ಲವಲ್ಲತಂದಾನ ತಾsನನ… ತಾನೇ ತಂದಾsನ… ಬದುಕಿಗೆ ಕಷ್ಟ ನೂರುಹಲವು ಬಂಧಗಳ ತೇರುಸಂಕೋಲೆ ಬಿಡಿಸಿ ಹಕ್ಕಿಯಾಗಿ ಹಾರುಅನುಭವದಿ ಮಾಗಿ ಹಣ್ಣಾಗುತಂದಾನ ತಾsನನ… ತಾನೇ ತಂದಾsನ… ಬಿಸಿಲಿಗೆ ನೆರಳಿಲ್ಲಿನೆರಳಿಗೂ ಸಾವಿಲ್ಲಿಯಾವ ಜಾತಿ, ಯಾವ ಧರ್ಮಮನುಜರೆಲ್ಲರೂ ಒಂದೇ ಜಗದಲ್ಲಿತಂದಾನ ತಾsನನ… ತಾನೇ ತಂದಾsನ… ಕೊರಳಿಗೆ ಹಾಡುಕೊಳಲಿನ ಜಾಡುಜೀವ ಮರಳಿ ಮಣ್ಣಿಗೇನೆಪ್ರೀತಿ ಹಂಚುತ ಸಾಗುತಂದಾನ ತಾsನನ… ತಾನೇ ತಂದಾsನ… ******* ಕತ್ತಲ ನೆರಳು ಕಿಟಕಿಯ ಆಚೆ ನೋಡುತ್ತೇನೆಅಲ್ಲೊಂದು ಬಣ್ಣದ ಚಿತ್ತಾರದ ಚಿಟ್ಟೆಚಂಚಲವಾಗಿ ಹಾರುತ್ತಿದೆಅರಳಿ ನಗುವ ಹೂಗಳ ಮೇಲೆನನ್ನ ಮನಸ್ಸಿನ ರೂಪಕವಾಗಿ ಕಾಣದ ಲೋಕವೊಂದುಕರಬೀಸಿ ಕರೆಯುತ್ತಿದೆಹಕ್ಕಿಯಾಗಿ ರೆಕ್ಕೆ ಹರಡಿಹಾರಿ ಬಾ ಎಂದುಉಳಿದಿರುವೆ ಬಂಧಿಯಾಗಿ ಕವಾಯತ್ತು ನಡೆಸಿವೆ ನೆನಪುಗಳುಕನಸುಗಳ ಜೊತೆಗೂಡಿಮಸ್ತಕದಲ್ಲಿ ಒನಕೆ ಕುಟ್ಟುವ ಶಬ್ಧಬದುಕಿರುವೆ ಸಾವಾಗಿ ಸುತ್ತಮುತ್ತಲೂ, ಎತ್ತಲೂಪ್ರಶ್ನೆಗಳು ಕಾಡುತ್ತಿವೆಉತ್ತರ ಕಾಣದೆಬೆಳಕಿನ ನೆರವು ಪಡೆದುಕತ್ತಲ ನೆರಳಾಗಿ ವಿಧಿ ಮಲಗಿದೆಕಾಲು ಚಾಚಿ ಹಾಸಿಗೆಯಲ್ಲಿಭವಿಷ್ಯದ ಭಯವಾಗಿವಾಸ್ತವದ ಖಯಾಲಿನಲಿಕಡು ವೈರಿಯಾಗಿ ಜಬೀವುಲ್ಲಾ ಎಮ್. ಅಸದ್

ಜಬೀವುಲ್ಲಾ ಎಮ್. ಅಸದ್ ಕವಿತೆ ಖಜಾನೆ Read Post »

ಕಾವ್ಯಯಾನ

ವಿನುತ ಹಂಚಿನಮನಿ ಕವಿತೆ ಖಜಾನೆ

ನಾರಿ ನಿನಗ್ಯಾಕೇ ಆಭರಣ! ವಸ್ತ ವಡವಿ ನಿನಗೆ ಬೇಕೇ ನಲ್ಲೆಮಸ್ತ ಕಾಡಿಗೆ ಕುಂಕುಮ ಸಾಕಲ್ಲೆ ಕುತ್ತಿಗೆ ಸುತ್ತಿರುವ ಟೀಕಿ ಕಂಠೀಸರಕೆನಿನ್ನ ಶಂಖದ ಕೊರಳೇ ಶೋಭೆಯದಕೆ ವಜ್ರದೋಲೆಯ ಮಿಂಚು ಮಂಕಾಗಿದೆನಿನ್ನ ಕಣ್ಣಂಚಿನ ಸಂಚದಕೆ ಸವಾಲಾಗಿದೆ ನತ್ತು ಮಾತ್ರ ಒತ್ತಿ ಒತ್ತಿ ಹೇಳುತಿದೆನಿನ್ನ ಗತ್ತೇ ಅದನು ಸೋಲಿಸುತಿದೆ ಕೈಗಳಲಿರುವ ಜೋಡಿ ಕಡಗ ಕಂಕಣನಿನ್ನ ಬಾಳೆದಿಂಡಿನಂತಿರುವ ಕೈಗೆ ಗ್ರಹಣ ಹೆಜ್ಜೆಯ ಗೆಜ್ಜೆ ಸೋತಿವೆ ದಣಿದುನಿನ್ನ ನಡಿಗೆಯ ಲಾಸ್ಯಕೆ ಕುಣಿದು ತುಟಿಯ ರಂಗು ಮನದ ಭಾವಕೆಹಿತದಿ ನಾಚುತ ಪ್ರತಿಸ್ಪರ್ಧಿಯಾಗಿದೆ ನಡುವ ಸುತ್ತಿರುವ ಒಡ್ಯಾಣ ಪಟ್ಟಿಮನಸೋತಿದೆ ನಿನ್ನ ನಡುಗೆಗೆ ವಸ್ತ ವಡವಿ ನಿನಗ್ಯಾಕೆ ಹೆಣ್ಣೇಮುಗುಳುನಗೆ ಲಜ್ಜೆ ಸಾಕಲ್ಲವೇ ****************** ಪ್ರೀತಿಯ ಆಳ ನಿನ್ನ ದ್ವೇಷದಲಿ ಅಷ್ಟು ಅಗ್ನಿಯಿಲ್ಲನನ್ನ ಪ್ರೀತಿಯನದು ದಹಿಸಿ ಸುಡುವಷ್ಟು ನಿನ್ನ ದ್ರೋಹದಲಿ ಅಷ್ಟೊಂದು ಆಳವಿಲ್ಲನನ್ನ ಪ್ರೀತಿಯನದು ಮುಳುಗಿಸುವಷ್ಟು ಯಾವನಿಗಾಗಿ ಸಾಯಲು ತಯಾರಿದ್ದೆಅವನ ಸಲುವಾಗಿಯೇ ಜೀವಂತವಿದ್ದೆ ಮುಖಚರ್ಯೆಯಿಂದ ಸುರುವಾದ ರೀತಿಮನದಾಳದಲಿ ಇಳಿಯಲಾರದೇ ಪ್ರೀತಿ ದುಃಖ ಬಾಯಿ ಮಾತಿನಿಂದ ಹೊಮ್ಮಬೇಕೆವಿನೂತಳ ಕಣ್ಣಿನಿಂದ ಧುಮುಕಲಾರದೆ ವಿನುತ ಹಂಚಿನಮನಿ

ವಿನುತ ಹಂಚಿನಮನಿ ಕವಿತೆ ಖಜಾನೆ Read Post »

ಕಾವ್ಯಯಾನ

ಕೆಂಪು ಸೂರ್ಯ

ಕೆಂಪು ಸೂರ್ಯ ಮೀನು ಹಿಡಿದು ಹೊರಡಲುವಿದೇಶಿ ಕೆಂಪು ಕೋತಿಗಳುಎಸೆಯುತ್ತಿದ್ದ ಬಣ್ಣ ಬಣ್ಣದಚಾಕ್ಲೇಟ್ , ಬಿಸ್ಕತ್ಗಳನ್ನುಕ್ಯಾಚ್ ಹಿಡಿಯುತ್ತಿದ್ದುದನಮ್ಮ ಹುಡುಗರಅಸಹಾಯಕತೆಯನ್ನುಮತ್ತೊಬ್ಬ ಪರಂಗಿವೀಡಿಯೊ ಮಾಡುತ್ತಿದ್ದ ಕಂಡೆನ್ನರಕ್ತ ಕುದಿದು ಕಣ್ಣು ಕೆಂಪಾಗಿಕ್ಯಾಮರಾ ಕಿತ್ತು ನೆಲಕ್ಕೆಸೆದುಪುಡಿಗೈದು ನಡೆದೆಕುಯ್ಯುಗುಟ್ಟಿದ ಕೆಂಪು ಮೂತಿಯವಹೇಳುವಷ್ಟರಲ್ಲಿಪಶ್ಚಿಮದ ಸೂರ್ಯ ಕೆಂಪಾಗಿಚಂದ್ರ ಬರಲು ಆಣಿಯಾಗಿದ್ದ.. ಡಾ.ಎಂ.ಈ.ಶಿವಕುಮಾರ ಹೊನ್ನಾಳಿ

ಕೆಂಪು ಸೂರ್ಯ Read Post »

You cannot copy content of this page

Scroll to Top