ಗಜಲ್
ಮುಗ್ಧರನ್ನ ಶಿಕ್ಷಿಸುವ ಫರಮಾನ್ ಜಾರಿಯಾಗುತಿದೆ
ಸತ್ತರು ಪ್ರೇಮಿಗಳ ಅದೇ ಇತಿಹಾಸ ಮರುಕಳಿಸುತಿದೆ
ಗಜಲ್ ನಯನ. ಜಿ. ಎಸ್ ನೋವುಗಳ ಕಾವಿನಲಿ ಬೆಂದು ಬಳಲದಿರು ಕರೆಯುತಿದೆ ಬಾಳಿನ ರಹದಾರಿವ್ಯಥೆಗಳೊಳು ಸಿಲುಕುತ ನಿತ್ಯ ಕುಗ್ಗದಿರು ಆದರಿಸುತಿದೆ ಬಾಳಿನ ರಹದಾರಿ ! ಉಳಿವು ಅಳಿವುಗಳು ಸೃಷ್ಟಿಯ ನಿಯಮ ಅರಿತು ಬದುಕು ಉತ್ಸಾಹದಿನಿರಾಸೆಗಳ ಗುಂಗಿನಲಿ ಮುಳುಗದಿರು ಸೆಳೆಯುತಿದೆ ಬಾಳಿನ ರಹದಾರಿ ! ಎಡೆಬಿಡದೆ ಸುರಿಸಿದ ಶ್ರಮದ ಬೆವರನು ಹಾಳು ಗೆಡವದಿರು ಮನವೇಪ್ರತಿಫಲವು ಇರಲು ನೊಂದು ದೂರ ತಳ್ಳದಿರು ಸಾಗುತಿದೆ ಬಾಳಿನ ರಹದಾರಿ ! ಬುದ್ಧಿ ಜೀವಿಯು ಮನುಜ ಎಂಬುದ ಅರಿತು ತಿಳಿ ಸ್ಥಿತಿ ಗತಿಯ ಸೂಕ್ಷ್ಮದಿಭವಿಷ್ಯವಿದೆ ಬದುಕಿನಲಿ ನಿರ್ಲಕ್ಷಿಸದಿರು ಹೆಜ್ಜೆಯಿಡುತಿದೆ ಬಾಳಿನ ರಹದಾರಿ ! ಕಂಬನಿಗಳ ಭಾವವ ಕಂಡು ಮರುಗಿ ಮೌನವಾಗಿಹಳು ಇಂದು ‘ನಯನ’ದೃಢನಿರ್ಧಾರದ ದಿಟ್ಟತನದಿ ಮಂಕಾಗದಿರು ಓಡುತಿದೆ ಬಾಳಿನ ರಹದಾರಿ !!
ಗಜಲ್ ರಾಹುಲ ಮರಳಿ ಮನಸಿನ ಹಿಡಿತ ತಪ್ಪಿ ಭಾವನೆಗಳ ಬರವಾಗಿದೆ ಸಾಕಿಹೃದಯದಿ ಭಾವನೆಗಳಿಲ್ಲದೆ ಮನಸಿಗೆ ಘಾಸಿಯಾಗಿದೆ ಸಾಕಿ ಬೇಕು ಬೇಕೆಂಬ ಹಪಹಪಿಯಲಿ ಇದ್ದ ವೈಭವ ಅನುಭವಿಸುತಿಲ್ಲಸಾಕು ಎಂಬ ತೃಪ್ತಿ ಸುಖದ ಸುಪತ್ತಿಗೆಯಾಗಿದೆ ಸಾಕಿ ಅನ್ಯರ ಕಷ್ಟ ನೋಡುತಿರೆ ಕರಳು ಚುರ್ ಎನ್ನುವುದುಎನ್ನ ಹೃದಯ ಕಿವುಚಿದರೂ ಕೇಳವರಿಲ್ಲದಂತಾಗಿದೆ ಸಾಕಿ ಕೊಂಚ ಮದಿರೆ ದೊರೆತರೆ ನಶೆಯಲಿ ಹಾಯಾಗಿರಬಹುದುಮನದ ತುಮುಲಗಳನು ಹೊರಹಾಕಲು ಕಾವ್ಯ ರಚಿಸಬೇಕಾಗಿದೆ ಸಾಕಿ ಪ್ರೀತಿ ಪ್ರೇಮ ಸ್ನೇಹಗಳೆಂಬ ಸಂಬಂಧಗಳನು ಮನ ನಂಬಿದೆಜೀವಕವಿ ನೋವಿಂದ ಬಳಲಿದರೂ ಉಸಿರಾಡುವಂತಾಗಿದೆ ಸಾಕಿ
ಗಝಲ್ ತೂತು ಬಿದ್ದ ಹಚ್ಚಡದಲ್ಲಿ ಒದ್ದಾಡುತಿದೆದೇವನಿಟ್ಟ ಕನಸುಕಾದ ಹೆಂಚಿನ ರೊಟ್ಟಿಯಂತೆ ಸುಡುತಿದೆದೇವನಿಟ್ಟ ಕನಸು ನಿಗಿನಿಗಿ ಕೆಂಡವಾಗಿ ಮನವು ಕಂಪನೆಕಾಯ್ದು ಹೋಯಿತೇಬನದ ಸುಮದ ಆಸೆಯ ಕಮರಿಸುತಿದೆದೇವನಿಟ್ಟ ಕನಸು ತುತ್ತು ಕೂಳಿಗೂ ನಾನಾ ಬಗೆಯಲಿವೇಷ ತೊಡಿಸಿತೆಢಂಢಂಯೆಂದು ವಾದ್ಯ ಬಾರಿಸುತಿದೆದೇವನಿಟ್ಟ ಕನಸು ಶಾಪಗ್ರಸ್ತ ಅಹಲ್ಯೆಯಂತೆ ಹೃದಯಮುಕ್ತಿ ಬೇಡುತಿದೆಬಡತನದ ಬಾಣಲೆಯಲಿ ಬೇಯುತಿದೆದೇವನಿಟ್ಟ ಕನಸು ಸನ್ಯಾಸಿಯಂತೆ ಸನ್ಮಾರ್ಗ ಅರಸುತಿದೆಅಭಿನವನ ಕಾವ್ಯವಿದೂಷಕನ ತೆರದಿ ಹಾಸ್ಯ ಮಾಡುತಿದೆದೇವನಿಟ್ಟ ಕನಸು ಶಂಕರಾನಂದ ಹೆಬ್ಬಾಳ
ಗಜಲ್ ನಯನ. ಜಿ. ಎಸ್ ನಗುತಿಹ ಕಂಗಳ ಹಿಂದಿಹುದು ಕಡು ನೋವುಗಳು ಬಲ್ಲವರು ಯಾರುಅರಳು ತುಟಿಗಳೊಡಲಿನ ನೊಂದ ಮಾತುಗಳ ಆಲಿಸುವವರು ಯಾರು ! ನಕ್ಕಾಗ ನಗುತ , ನೊಂದಾಗ ಮೌನದಿ ಅತ್ತು ದಣಿಯುತ್ತಿದೆ ಮನಸ್ಸುಮನವ ಹಿಂಡುತಿದೆ ವ್ಯಂಗ್ಯಗಳ ಹಿಂಸೆ ಇದ ಅಳೆಯುವವರು ಯಾರು ! ನಿಶೆಯ ನಶೆಗೂ ಮರೀಚಿಕೆ ಆದಂತಿದೆ ಸುಖ ಸ್ವಪ್ನಗಳ ಸಿಹಿಯಾದ ನಶೆನೀರವ ಕ್ಷಣಗಳನೂ ಭೀತಿಗೊಳಿಸುತಿದೆ ಅಳಲು ಅರಿಯುವವರು ಯಾರು ! ಆಶೆಗಳ ಕನಸು ಹುಸಿಯಾಗುತಿದೆ ಕಪಟಿಗರ ಕ್ರೌರ್ಯದಿ ನಲುಗಿ ಕೊರಗಿಮನದ ತುಮುಲಗಳು ತಾರಕಕ್ಕೇರಿದೆ ಅರಿತು ಸಂತೈಸುವವರು ಯಾರು ! ಬಾಳ್ವೆಯು ಕಂಡಂತಿಲ್ಲ , ಬುಡಮೇಲಾದೀತು ಕನಸುಗಳು ಎಚ್ಚರ ‘ನಯನ’ಬಣ್ಣ ಬಣ್ಣದ ಬೂಟಾಟಿಕೆಯ ಜನರಿಹರು ಜೊತೆ ಬರುವವರು ಯಾರು !
ಗಜಲ್ ಜುಗಲ್ ಬಂದಿ ಇರುಳು ಮಲ್ಲೆ ಮಾಲೆ ಹಿಡಿದು ಅಮಲೇರಿಸಲು ಇದಾರು ಬಂದರುತುಂಟ ಕಣ್ಣಲಿ ಮಿಂಚಿನ ಕನಸು ತೋರಿಸಲು ಇದಾರು ಬಂದರು ವಾರದ ಪೇಟೆಯಲ್ಲಿ ಅಲೆಯುತಿರುವೆ ಕಳೆದ ಹೃದಯ ಹುಡುಕುತಾಸಂತೆಯಾ ಗದ್ದಲದಲಿ ಸಂಪಿಗೆ ಮುಡಿಸಲು ಇದಾರು ಬಂದರು ಹೃದಯ ವೀಣೆಯ ಮೀಟಿ ದೂರಾದ ವೈಣಿಕನಿಗೆ ಹಂಬಲಿಸಿದೆಮುರಿದ ಎದೆ ತಂಬೂರಿಗೆ ಶ್ರುತಿ ಸೇರಿಸಲು ಇದಾರು ಬಂದರು ನೆನಪಿನ ಮೊಗ್ಗುಗಳು ಬಿರಿದು ಏನೋ ಹೇಳಿ ಜಗವ ಮರೆಸಿದವುಮೆಲು ಹೆಜ್ಜೆ ಇಡುತ ನಯನ ಮುಚ್ಚಿ ಕಾಡಿಸಲು ಇದಾರು ಬಂದರು ಬದುಕ ಬಂಡಿ ಪಯಣ ರಣ ಬಿಸಿಲಿಗೆ ಬಾಯಾರಿ ದಣಿಯಿತು ಜೀವಬಳಲಿದ ಮೈ ಮನಕೆ ಅಧರ ಜೇನು ಕುಡಿಸಲು ಇದಾರು ಬಂದರು ಕ್ರೂರ ಕಾಲಚಕ್ರ ಸುಳಿಗೆ ಸಿಲುಕಿ ಬಾಳ ನೌಕೆ ಹೊಯ್ದಾಡಿತುಅನುರಾಗದ ಬದುಕಿನ ಒಳ ಗುಟ್ಟನು ತಿಳಿಸಲು ಇದಾರು ಬಂದರು ಶಶಿ ಇಲ್ಲದ ಏಕಾಂತದ ನಿಶೆ ಧಗೆಯಲಿ ಜೀವನವು ಸವೆಯಿತು“ಪ್ರಭೆ” ಯ ತುಟಿ ಅಂಚಿನಲಿ ನಗೆ ಹೂ ಅರಳಿಸಲು ಇದಾರು ಬಂದರು ************** ಪ್ರಭಾವತಿ ಎಸ್ ದೇಸಾಯಿ ಕಂಗಳಲಿ ಪ್ರೀತಿಯ ಬಟ್ಟಲಿದೆ ಕುಡಿಸಲು ಇದಾರು ಬಂದರುಬಾಹುಗಳಲಿ ಪ್ರೀತಿಯ ಜೋಗುಳ ಹಾಡಲು ಇದಾರು ಬಂದರು ಹುಡುಕಲೇನಿದೆ ಈ ಹೃದಯ ನಿನ್ನ ಎದೆಯಲ್ಲಿ ಮಿಲನವಾಗಿದೆಏಕಾಂತದಿ ಅಧರಕ್ಕೆ ಅಧರ ಸೇರಿಸಲು ಇದಾರು ಬಂದರು ದೂರಾಗುವ ಮಾತು ಕನಸಲ್ಲೂ ಕನವರಿಸದಿರು ಮುದ್ದು ಮರಿಆಲಿಂಗನದ ಬಿಸಿ ಅಂಟನ್ನು ಲೇಪಿಸಲು ಇದಾರು ಬಂದರು ಮರೆತವನಿಗೆ ನೆನಪುಗಳು ಊರುಗೋಲು ಆಗಬಲ್ಲವು ಗೆಳತಿಹೆಜ್ಜೆ ಮೇಲೆಜ್ಜೆಯಿಟು ಸಪ್ತಪದಿ ತುಳಿಯಲು ಇದಾರು ಬಂದರು ನಿನ್ನ ಸಾಂಗತ್ಯದಿ ದಣಿವೆನ್ನುವ ಭಾವ ಚಿರ ನಿದ್ರೆಯಲ್ಲಿದೆಮೈ ಸೋಕದೆ ಮನದಿ ಪ್ರೇಮರಸ ಬೆರೆಸಲು ಇದಾರು ಬಂದರು ಒಲವಿನ ದಡ ಸೇರದೆಯೆ ಸಂಸಾರ ನೌಕೆ ಮುಳಗದು ಬೇಗಂಸುಮೆಯ ಕಂಪನು ನನ್ನಯ ಬದುಕಲಿ ಹರಡಲು ಇದಾರು ಬಂದರು ಬನದ ತುಂಬೆಲ್ಲ ಅನುರಾಗದ ಮಣ್ಣಿದೆ ಮಲ್ಲಿಗೆಯ ಸಸಿ ನೆಡು‘ಮಲ್ಲಿ’ಯ ಬಾಳಿನ ಉಯ್ಯಾಲೆಯನು ತೂಗಲು ಇದಾರು ಬಂದರು ****** ರತ್ನರಾಯ ಮಲ್ಲ
ಗಜಲ್ ಪ್ರಕಾಶಸಿಂಗ್ ರಜಪೂತ ಒಡೆಯನಾ ಸಂದೇಶ ಒಂದಾಗಿ ಬಾಳುಬೀದಿ ಗಳು ಹಂಚಿ ಆಗದಿರು ಹಾಳು ಬರುವಾಗ ತಂದಿ ಏನು ಜಗಳಾಡಲು ಬಂದಿ ಏನುನಿನ್ನ ಕಾಡುವದು ಇಲ್ಲಿ ನಿತ್ಯ ಈ ಸವಾಲು ಒಂದೇ ಕುಲ ಒಂದು ಮತ ಒಂದು ನಿನ್ನ ಜಾತಿಕರ್ಮವೇ ಪರಿಚಯ ತಿಳಿಕೋ ನಿನ ಪಾಲು ಗುಡಿಯಲ್ಲಿ ಹುಡುಕಿದರೆ ಸಿಗುವನಾ ಒಡೆಯಾಇಳಿಯಬೇಕು ಅದಕ್ಕೆ ನೀ ಮನದ ಆಳು ಜೊತೆಯಲ್ಲಿ ಬರುವದಿಲ್ಲ ನೀ ಮಾಡಿದ ಸಂಚಯದುಖ್ಖ ನೀಡತೈತಿ ಅಯ್ಯ ನೀ ಕಟ್ಟಿದ ಜಾಲು ನೆನಪಿನಲ್ಲಿ ಇರಲಿ”ಪ್ರಕಾಶ”ನಾ ಸದಾ ಮಾತುಜಾತಿ ಮತ ಬದಿಗಿಟ್ಟು ಅರಸಾಗಿ ಆಳು
You cannot copy content of this page