ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಥಾಗುಚ್ಛ

“ಏ ಭೇಟಾ ಸಬ್ಜಿ ಲೇ”ಡಾ. ರೇಣುಕಾ ಹಾಗರಗುಂಡಗಿ ಅವರ ಕಥೆ

ಕಥಾ ಸಂಗಾತಿ ಡಾ. ರೇಣುಕಾ ಹಾಗರಗುಂಡಗಿ “ಏ ಭೇಟಾ ಸಬ್ಜಿ ಲೇ” ಬೆಗಳಾಗುತ್ತಲೆ ಹೊರಗಡೆ “ಬೇಟಾ ಸಬ್ಜಿ ಲೇ” ಅಂತ ಕರೆಯುವ ಕೂಗಿನ ಧ್ವನಿಯ ಒಡತಿ ಹೀರಾ ನಿಜವಾಗಿಯೂ ಸೌಂದರ್ಯದ ಖಣಿಯೇ ಸರಿ.  ಸುಕ್ಕುಗಟ್ಟಿದ ಆಕೆಯ  ಚರ್ಮ,ಮುಖದ ತುಂಬೆಲ್ಲ ನೆರಿಗೆಗಳಿದ್ದರೂ ಚಿಕ್ಕಚಿಕ್ಕ ಕಣ್ಣುಗಳು ಮೀಟುಕಿಸುತ್ತ ಆ ಲಂಬಾಣಿಯ ಶ್ರೀಮಂತದ ಉಡುಪು ಅಲ್ಲಲ್ಲಿ ಸ್ವಲ್ಪ ತೇಪೆಹಚ್ಚಿದ್ದರು ನಾನಿಯ ಚೆಲುವಿನ ಮುಂದೆ ಯಾವದೂ ಲೆಕ್ಕಕ್ಕಿಲ್ಲ. ಅಂಥ ಸೌಂದರ್ಯವತಿ ಹೀರಾ ನಾನಿ.                ಇಳೆ ವಯಸ್ಸಿನಲ್ಲಿರುವ ಈ ತಾಯಿಗೆ ದುಡ್ಡಿನ ಅವಶ್ಯಕತೆಯಾದರೂ ಯಾಕೆ  ಅಂತ ನಾನು ಹಾಗೆ ತೆಲೆಕೆಡಿಸಿಕೊಳ್ಳುತ್ತಲೆ ಇರುವಾಗ  ನನ್ನ ಪಕ್ಕದ ಮನೆಯ ಮಗು ಹೇಳ್ತು ಆಂಟಿ ಈ ಅಜ್ಜಿನ ನೀವು ಯಾರಂತ ಭಾವಿಸಿರುವಿರಿ, ಅವರು ರೋಹಿತ್ ಅಣ್ಣನ ನಾನಿ ಅಂತ, ಅದಕ್ಕೆ ನಾನು ಮತ್ತೆ ಯಾಕೆ ಇವರು ಹೀಗೆ ಬರ್ತಾರೆ ಅಂತ ಥಟ್ಟನೆ ಕೇಳಿದ ನನ್ನ ಪ್ರಶ್ನೆಗೆ ಮಗು ಹೇಳ್ತು ಆ ಅಜ್ಜಿ ರೋಹಿತ್ ಅಣ್ಣನ ಮಮ್ಮಿ ಅವರ ಮಮ್ಮಿ. ಅವರ ಮಕ್ಕಳು ಅವರಿಗೆ ಮನೆಯಿಂದ ಹೊರ ದೂಡಿದ್ದಾರೆ ಅದಕ್ಕೆ ಅಜ್ಜಿ ಈಗ ಮಗಳ ಮನೆಯಲ್ಲಿದ್ದಾರೆ. ಹಾಗೆ ಯಾಕೆ ಬಿಟ್ಟಿಕೂಳ ತಿನ್ನೋದು ಅಂತ ಸಬ್ಜಿ ಮಾರ್ತಾರೆ ಎಂದು ಮಗು ಹೇಳ್ತಾ ಓಡಿಹೋಯಿತು.                ನನಗಂತೂ ತುಂಬಾ ಬೇಸರವಾಯಿತು. ಮಕ್ಕಳನ್ನ ಬೆಳೆಸೋದರಲ್ಲಿ  ಪಾಲಕರು ಎಲ್ಲಿ ಎಡವುತ್ತಿದ್ದಾರೆ ಅಂತ ಯೋಚಿಸುತ್ತಲೇ ಹಾಗೆ ಫ್ಲ್ಯಾಶ್ ಬ್ಯಾಕ್ ಹೋದೆ. ಇದು ಈ ಒಂದು ಮನೆಯ ಹೀರಾ ನಾನಿಯ ಕಥೆ ಅಲ್ಲ.ಹಿಂಥ ಅನೇಕ ಹೀರಾ ನಾನಿಯರು ಶ್ರೀಮಂತ, ಬಡವರೆನ್ನದೆ ಎಲ್ಲಡೆಯು   ಮೂಲೆಗುಂಪಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣವಾದರೂ ಏನು? ಅಂತ ಯೋಚಿಸುತ್ತಲೇ ಇರುವಾಗ ನೆನಪಾದದ್ದು ನಾನು ಕಂಡ ಒಂದು ಮಧ್ಯಮ ವರ್ಗದ ಕುಟುಂಬ. ಅಲ್ಲಿ ಆ ದಂಪತಿಗಳು ಮಕ್ಕಳಿಲ್ಲದೆ ಹರಕೆಯನ್ನ ಹೊತ್ತು ಹೆತ್ತ ಮಕ್ಕಳೆ ತಮ್ಮ ತಂದೆತಾಯಿಗೆ ಇಳೆ ವಯಸ್ಸಲ್ಲಿ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಸ್ವಾರ್ಥದ ಮದ, ಬಯಕೆಯ ಹುಚ್ಚಾಟ,ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿರುವುದನ್ನ ಮನಗಂಡು ಇಡೀ ಕುಟುಂಬವನ್ನೆ ಬಿರುಗಾಳಿಗೆ ಸಿಲುಕಿಸಿ  ಆಸ್ತಿ, ಅಂತಸ್ತು ಅಂತ ಮನೆ ಒಡೆಯುವ ಕಾರ್ಯಕ್ಕೆ ಮುಂದಾಗುತ್ತಾರೆ.   ತಮಗೆ ಬೇಕಾದ ಮಕ್ಕಳ ಪರವಹಿಸಿ ದಂಪತಿಗಳಿರ್ವರೂ  ಬೇರೆಯಾಗುತ್ತಾರೆ.ಆಸ್ತಿಗಾಗಿ ಮಕ್ಕಳ ಕಿರಿಕಿರಿ ಅನುಭವಿಸುತ್ತಲೇ ಯಜಮಾನ ತೀರಿಹೋಗುತ್ತಾರೆ. ಮತ್ತೊಬ್ಬ ಮಗ ತಾಯಿಯನ್ನು ತಿನ್ನುವ ಎಣ್ಣೆ ಕೈತಪ್ಪಿ ಚಲ್ಲಿದ್ದಕ್ಕೆ ಮುಖಕ್ಕೆ ಉಗಿದು ಈಗ ಅಡುಗೆ ಹೇಗೆ ಮಾಡೋದು ಅಂತ ಅವಾಚ್ಯ ಮಾತುಗಳನ್ನೆಲ್ಲ ಅಂದು ರೇಲ್ವೆ ಹಳಿಯ ಮೇಲೆ ಬಿದ್ದು ಸಾಯಿ ಅಂತ ಮಗ ಕಿರುಚಾಡಿದರು ಆ ತಾಯಿ ಮಗನಿಗೆ  ಹಿಂದಿರುಗಿಸಿ ಒಂದು ಮಾತನಾಡದೆ ದುಃಖವನ್ನ ನುಂಗಿದಳು. ಇವಳೂ ಮತ್ತೊಬ್ಬ ಹೀರಾ ನಾನಿಯೇ..ಸರಿ ..ಹಿಂತಹ ಅನೇಕ ಅವಮಾನಗಳು ಸಹಿಸುತ್ತ ಮಗನ ಮೇಲಿರುವ ಮಮಕಾರಕ್ಕೆ ಮೂಕವಿಸ್ಮಿತಳಾಗಿ ಎಲ್ಲವೂ ಸಹಿಸುತ್ತ ಕುಗ್ಗಿಹೋದರು ಮಕ್ಕಳ ಬಗ್ಗೆ ಒಂದು ದಿನವು ಮತ್ತೊಬ್ಬರಲ್ಲಿ ದೂರ ಹೇಳಲಿಲ್ಲ.               ಮಕ್ಕಳ ಭವಿಷ್ಯಕ್ಕಾಗಿ ತಂದೆತಾಯಿಗಳು ತಾವು ಅರೆಹೊಟ್ಟೆ ತಿಂದು ನಾಳೆ ಮಕ್ಕಳಿಗೆ ಏನಾದರೂ ಸಹಾಯ ಆಗಬಹುದು ಅಂತ ಎಲ್ಲವನ್ನು ಕೂಡಿಟ್ಟು ತಮ್ಮ ಆಸೆ,ಆಕಾಂಕ್ಷೆಗಳನ್ನೆಲ್ಲ ತ್ಯಾಗಮಾಡಿ ತಮ್ಮ ಇಡೀ ಜೀವನವನ್ನೆ ಮಕ್ಕಳಿಗಾಗಿ ಮೂಡುಪಾಗಿಡುತ್ತಾರೆ . ಮಕ್ಕಳು ಸಹ ಹೆತ್ತವರ  ಪರಿಶ್ರಮವನ್ನು ಅರಿಯಬೇಕು. ಹಿರಿಯರನ್ನು ಕಡೆಗಾಣಿಸದೇ ಅವರನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕಿದೆ.ನಮಗಾಗಿ ತಮ್ಮದೆಲ್ಲವನ್ನು ಧಾರೆಯೆರೆದ ದೇವತೆಗಳನ್ನು ನಮ್ಮ ಕಣ್ಣುರೆಪ್ಪೆಯಂತೆ ಕಾಪಾಡಿಕೊಳ್ಳಬೇಕಿದೆ. ಅವರಿಂದಲೇ ನಾವು ಎಂಬುದು ಮನಗಾಣಬೇಕಿದೆ. ನಮ್ಮದೆಲ್ಲವನ್ನು ಅವರಿಗಾಗಿ ಸಮರ್ಪಿಸಬೇಕೆಂದೇನಿಲ್ಲ, ಅದು ಅವರ ಬಯಕೆಯೂ ಅಲ್ಲ. ಅವರಿಗೆ ಬೇಕಾದದ್ದು ನಮ್ಮ ಪ್ರೀತಿ,ಕಾಳಜಿ,ನಮ್ಮ ಮಕ್ಕಳ ಪ್ರೀತಿ ಅಷ್ಟು ಕೊಟ್ಟರೆ ಅವರಿಗೆ ಅದೇ ಸ್ವರ್ಗ ಅಲ್ಲವೇ? ಮನುಷ್ಯರಾಗಿ ಹುಟ್ಟಿದ ಮೇಲೆ ಮನುಷ್ಯರಂತೆ ಬಾಳಬೇಕಲ್ಲವೇ? ಈ ಮೂಲಕವಾದರೂ ಅಲ್ಲಲ್ಲಿ ಕಂಡು ಬರುವ ಹೀರಾ ನಾನಿಯರನ್ನು  ಕಾಣದ ಹಾಗೆ ಮಾಡುತ್ತ ನಮ್ಮ ಜೀವನ ಸಾರ್ಥಕಗೊಳಿಸೋಣ ಅಂತ.. ಡಾ. ರೇಣುಕಾ ಹಾಗರಗುಂಡಗಿ

“ಏ ಭೇಟಾ ಸಬ್ಜಿ ಲೇ”ಡಾ. ರೇಣುಕಾ ಹಾಗರಗುಂಡಗಿ ಅವರ ಕಥೆ Read Post »

ಕಥಾಗುಚ್ಛ

ಶಂಕರರಾವ ಉಭಾಳೆ ಅವರ ಕಥೆ “ಮಂಜಿನ ಲಿಂಗಕ್ಕೆ ಬಿಸಿಲ ಕಳಸ”

ಶಂಕರರಾವ ಉಭಾಳೆ ಅವರ ಕಥೆ “ಮಂಜಿನ ಲಿಂಗಕ್ಕೆ ಬಿಸಿಲ ಕಳಸ”

ರೋಗದೊಡ್ಡದೊ…! ಅಥವಾ ರೋಗಗ್ರಸ್ತ ಮನಸ್ಸು ದೊಡ್ಡದೋ…! ಹರಡುವ ರೋಗಕ್ಕಿಂತಲೂ ಕೊರಡಾಗಿರುವ ಮನಸ್ಥಿತಿಗೇನೆನ್ನುವುದು?

ಶಂಕರರಾವ ಉಭಾಳೆ ಅವರ ಕಥೆ “ಮಂಜಿನ ಲಿಂಗಕ್ಕೆ ಬಿಸಿಲ ಕಳಸ” Read Post »

ಕಥಾಗುಚ್ಛ

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ.

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ.
ನೆಲಕ್ಕೆ ಬಿದ್ದ ಈ ಹೂಗಳನ್ನು ಪೂಜೆಗೆ ಬಳಸುವುದಿಲ್ಲ ಎಂಬ ಕಾರಣಕ್ಕಾಗಿ ಅಷ್ಟು ತಾಜಾ ಹೂಗಳಾಗಿದ್ದರೂ ಅವು ಹಾಗೆಯೇ ಹುಟ್ಟಿದ್ದು ಸಾರ್ಥಕವಿಲ್ಲದಂತೆ ದೇವರ ಮುಡಿ ಸೇರದೆ ಕಸವಾಗಿ

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ. Read Post »

ಕಥಾಗುಚ್ಛ

ʼಪ್ರೇಮಾʼ ಸವಿತಾ ದೇಶಮುಖ ಅವರ ಸಣ್ಣ ಕಥೆ

ಕಥಾ ಸಂಗಾತಿ

ʼಪ್ರೇಮಾʼ

ಸವಿತಾ ದೇಶಮುಖ
ಒಂದೆಡೆ ತನ್ನ ಸುಖ ದುಃಖ ನೋವು ಹಂಚಿಕೊಂಡು ಒಡನಾಟದಲ್ಲಿದ್ದ ಪ್ರೀತಿಯ ಗೆಳತಿ ತನ್ನ ಗಂಡನನ್ನು ಲಪಟಾಯಿಸಿದ್ದಳು.ಈ ಆಘಾತಗಳಿಂದ ಪ್ರೇಮಳಿಗೆ ಕಂಬನಿ ಹರಿಯಲಿ ಇಲ್ಲ ನೋವಿನ ವಿರಹದ ಉರಿ ಎದೆಯಲ್ಲಿ ಉರಿದು ಬೂದಿಯಾಗಿ ಹೋಯಿತು.

ʼಪ್ರೇಮಾʼ ಸವಿತಾ ದೇಶಮುಖ ಅವರ ಸಣ್ಣ ಕಥೆ Read Post »

ಕಥಾಗುಚ್ಛ

 “ಅಸ್ತಂಗತ” ಸವಿತಾ ದೇಶಮುಖ ಅವರ ಸಣ್ಣ ಕಥೆ

ಕಥಾ ಸಂಗಾತಿ

ಸವಿತಾ ದೇಶಮುಖ

 “ಅಸ್ತಂಗತ”
ನಾಡಿನ ಏಕೀಕರಣದಲ್ಲಿ ಕಳೆದ ಒಂದೊಂದು ಘಟನೆಗಳನ್ನು ನೆನೆದರು. ಆಗಿನ ವಿದ್ಯಾರ್ಥಿಗಳಲಿದ್ದ ಆಚಾರ ವಿಚಾರಗಳು, ನೈತಿಕತೆ ಎಂಥ ಉತ್ತುಂಗಕೇರಿದ್ದವು. ಎಂಥ ರೋಮಾಂಚಕಾರಿ ಕಾಲವದು… ಆದರೆ

 “ಅಸ್ತಂಗತ” ಸವಿತಾ ದೇಶಮುಖ ಅವರ ಸಣ್ಣ ಕಥೆ Read Post »

ಕಥಾಗುಚ್ಛ

“ಮೋಹ ವ್ಯಾಮೋಹದ ಸುಳಿಯಲ್ಲಿ” ಬನಸ ಅವರ ಸಣ್ಣಕಥೆ

ಹೊಸದಾಗಿ ಮದುವೆ ಆಗಿದ್ದ ಶಿವಮೂರ್ತಿ ಹೆಂಡತಿ ಊಟಕೊಟ್ಟರೆ ತಿನ್ನಲಿಲ್ಲ,ಅಪ್ಪ ಅಮ್ಮರನ್ನು ಮಾತಾಡಲಿಲ್ಲ ರಾತ್ರಿಯಿಡಿ ಕಣ್ಣು ಮುಚ್ಚಿದರೆ ಸುಂದ್ರಿ ಸೌಂದರ್ಯ ಅವಳ ಬಡತನ ಅವಳ ತುಂಟಮಾತು ಆಕೆತಂದೆಯ ಕುಡಿತ ತಾಯಿಯ ಅಸಹಾಯಕತೆಯ ನೆನಪುಗಳು ಅವನನ್ನು ಕಾಡಿದವು.
ಕಥಾ ಸಂಗಾತಿ

ಬನಸ

ಅವರ ಸಣ್ಣಕಥೆ

“ಮೋಹ ವ್ಯಾಮೋಹದ ಸುಳಿಯಲ್ಲಿ”

“ಮೋಹ ವ್ಯಾಮೋಹದ ಸುಳಿಯಲ್ಲಿ” ಬನಸ ಅವರ ಸಣ್ಣಕಥೆ Read Post »

ಕಥಾಗುಚ್ಛ

ಬೊನ್ಸಾಯ್ ಕಥೆಗಳು,ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರಿಂದ

ಕಥಾ ಸಂಗಾತಿ

ಬೊನ್ಸಾಯ್ ಕಥೆಗಳು,

ನಿಂಗಮ್ಮ ಭಾವಿಕಟ್ಟಿ ಹುನಗುಂದ
‘ ಸಾರಿ ಕಣೇ ನನ್ನ ಫ್ರೆಂಡ್ ಆಸ್ಪತ್ರೆಲಿದ್ದಾನೆ ನಾನು ಹೋಗಬೇಕು ಮತ್ತೆ ಸಿಗೋಣ ಸೀ ಯು ‘ ಓಹ್ ಥ್ಯಾಂಕ್ ಗಾಡ್ ನಿಟ್ಟುಸಿರಿಟ್ಟು ಬೆಡ್ ಮೇಲೆ ಬಿದ್ದುಕೊಂಡಳು.

ಬೊನ್ಸಾಯ್ ಕಥೆಗಳು,ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರಿಂದ Read Post »

ಅನುವಾದ, ಕಥಾಗುಚ್ಛ

ಜಿ.ವಿ.ಶ್ರೀನಿವಾಸ್ ಅವರ ತೆಲುಗು ಕಥೆ ʼಪೃಥು ಪ್ರತಾಪʼ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್

ತನ್ನ ರಾಜ್ಯವನ್ನು, ತನ್ನನ್ನೇ ನಂಬಿದ ಜನರನ್ನು, ಅವರ ಪ್ರಾಣ-ಮಾನವನ್ನು ಗಾಳಿಗೆ ತೂರಿ, ಕೇವಲ ತನ್ನ ಪ್ರಾಣ ರಕ್ಷಣೆಗಾಗಿ ಯುದ್ಧ ಮಾಡದೆ ಓಡಿಹೋಗುವುದಕ್ಕಿಂತ, ಪ್ರಾಣತ್ಯಾಗ ಎಷ್ಟೋ ಶ್ರೇಷ್ಠವಾದುದು”

ಅನುವಾದ ಸಂಗಾತಿ

ಪೃಥು ಪ್ರತಾಪ

ತೆಲುಗು ಮೂಲ :ಜಿ.ವಿ.ಶ್ರೀನಿವಾಸ್

ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

ಜಿ.ವಿ.ಶ್ರೀನಿವಾಸ್ ಅವರ ತೆಲುಗು ಕಥೆ ʼಪೃಥು ಪ್ರತಾಪʼ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್ Read Post »

ಕಥಾಗುಚ್ಛ

“ಹೊಸ ತಾಯಿ” ಎನ್.ಆರ್.ರೂಪಶ್ರೀ ಅವರ ಸಣ್ಣಕಥೆ

ಕಥಾ ಸಂಗಾತಿ

ಎನ್.ಆರ್.ರೂಪಶ್ರೀ

“ಹೊಸ ತಾಯಿ”
ಕಮಲಕ್ಕ ಇದೇ ಕೈಯಲ್ಲಿ ಎತ್ತಿ ಆಡಿಸಿದ ಜೀವವನ್ನು ಮಣ್ಣು ಮಾಡಿಬಿಟ್ಟೆ ಎಂದು ರೋದಿಸುತ್ತ ಹೊರಳಾಡಿದಳು.ಮತ್ತೆ ಒಂಟಿಯಾಗಿ ಬಿಟ್ಟೆ ಎಂದು ಬಡಬಡಿಸಿದಳು.ಹೊಸ ಜೀವ ಹೋಗಿ ಬಿಟ್ಟಿತು ಎಂದು ಕೂಗಿದಳು.

“ಹೊಸ ತಾಯಿ” ಎನ್.ಆರ್.ರೂಪಶ್ರೀ ಅವರ ಸಣ್ಣಕಥೆ Read Post »

ಕಥಾಗುಚ್ಛ

ವ್ಯಾಕುಲತೆಯ ಅಮ್ಮ

ಕಥಾ ಸಂಗಾತಿ

ಬಿ ಟಿ ನಾಯಕ್

ವ್ಯಾಕುಲತೆಯ ಅಮ್ಮ

ಆ ವಿಸರ್ಜನೆಯ ಕೆಲಸ ಯಾವಾಗ
ಆಗುತ್ತದೆ ಎಂಬುದು ತಿಳಿಯದಾಗಿದೆ. ನನ್ನ ಪತಿಯ ಆತ್ಮ ಇಲ್ಲಿಯೇ ಓಡಾಡುತ್ತಾ ಇದೆ
ಎಂದು ನನಗೆ ಅನ್ನಿಸುತ್ತದೆ.

ವ್ಯಾಕುಲತೆಯ ಅಮ್ಮ Read Post »

You cannot copy content of this page

Scroll to Top