ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ, ಕಥಾಗುಚ್ಛ

ತೆಲುಗು ಕಥೆ “ನಾಸ್ತಿಕ ದೇವರು”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ ನಾಸ್ತಿಕ ದೇವರು ತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಶ್ರೀಶೈಲಂ ಪ್ರಾಜೆಕ್ಟ್ ಕಾಲೋನಿಯಲ್ಲಿ ಎಲ್ಲರನ್ನೂ ಅತ್ತೆ-ಮಾಮಾ ಎಂದು ಕರೆಯುವುದುವಾಡಿಕೆ. ಹಾಗಾಗಿ ಅವರು ಯಾವದೇ ಪ್ರದೇಶದವರಾಗಲಿ, ಯಾವುದೇ ಧರ್ಮದವರಾಗಲಿ, ಯಾವುದೇ ಜಾತಿಯವರಾಗಲಿ ಅಲ್ಲಿ ಅತ್ತೆ-ಮಾವ. ಮಕ್ಕಳು ನಮಗಿಂತ ದೊಡ್ಡವರಾಗಿದ್ದರೆ, ಅಣ್ಣ ಮತ್ತು ಅಕ್ಕಾ ಎಂದೇ ಕರೆಯುತ್ತಿದ್ದೆವು.  ಹಾಗೆ ನನ್ನ ತಂದೆಯ ಕಛೇರಿಯಲ್ಲಿ ಕೆಲಸಮಾಡುವ ಲಕ್ಷ್ಮೀರೆಡ್ಡಿ ಅವರು ನಮಗೆ ಮಾಮವಾದರು. .ಸ್ವಲ್ಪ ತೆಳ್ಳಗಿನ ಗುಂಗುರು ಕೂದಲನ್ನು ಹಿಂದಕ್ಕೆ ಬಾಚಿಕೊಂಡು ಬಿಳಿಅಂಗಿ ಹಾಕಿಕೊಂಡು ಮೊಣಕೈಯ ವರೆಗೆ ಮಡಚಿ ಸೈಕಾಲ್ ತುಳಿಯುತ್ತಿದ್ದರು. ಅವರು ನನ್ನ ತಂದೆಯ ಕಛೇರಿಯ ಅಕೌಂಟ್ಸ್ ವಿಭಾಗದಲ್ಲಿ ಕೆಲಸಮಾಡುತ್ತಿದ್ದರು. ಆ ದಿನಗಳಲ್ಲಿ ಪ್ರಾಜೆಕ್ಟ್  ಕೆಲಸಗಳು  ಬಿರುಸಿನಿಂದ ನಡೆಯುತ್ತಿದ್ದರಿಂದ ಕೆಲಸದ ಒತ್ತಡ ಹೆಚ್ಚಿತ್ತು. ಎಲ್ಲರೂ  ತಪಾಸಣೆಗೆ ಹೋಗಿ ನೋಟ್ ಮಾಡಿದ ಎಂ.ಬುಕ್ಸ್ ಗಳಲ್ಲಿನ (ಮೇಸರ್ಮೆಂಟ್ಸ್ ಬುಕ್ಸ್)  ವಿವರಗಳನ್ನು ಪರಿಶೀಲಿಸಿ, ಅವುಗಳನ್ನು ಎಣಿಸಿ ಅವು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು  ನಿರ್ಧರಿಸಿದರು. ಇದಲ್ಲದೆ ಅವರು ಕ್ಲೆಯಿಮ್  ಮಾಡಿದ ಮೊತ್ತವೂ, ಈ ವಿವರಗಳಿಗ ಅನುಗುಣವಾಗಿಯಿದಯೆ  ಅಥವಾ ಇಲ್ಲವೇ ಎಂಬುದನ್ನೂ ಸಹಾ ಪರಿಶೀಲಿಸುತ್ತಿದ್ದರು. ಕ್ಷೇತ್ರದಲ್ಲಿ ಕೆಲಸ ಮಾಡುವವರೆಲ್ಲರೂ ದಿನವಿಡೀ ಕೆಲಸ ಮಾಡುತ್ತಿದ್ದರು ಮತ್ತು ಸಂಜೆಯ ಹೊತ್ತಿಗೆ, ಅವರು ಆ ಪುಸ್ತಕಗಳನ್ನು  ಅಕೌಂಟ್ಸ್ ವಿಭಾಗಕ್ಕೆ ಸಲ್ಲಿಸುತ್ತಿದ್ದರು ಮತ್ತು ಉಳಿದ ಕೆಲಸವನ್ನು ನನ್ನ ತಂದೆ ಮನೆಗೆ ತರುತ್ತಿದ್ದರು.  ಅವುಗಳಲ್ಲಿ ಹೆಚ್ಚಿನವು ಘನ ಪರಿಮಾಣದ ಲೆಕ್ಕಾಚಾರಗಳಲ್ಲಿ ಇರುತ್ತಿದ್ದವು . ಎತ್ತರ, ಉದ್ದ, ಅಗಲ ಇರುತ್ತಿದ್ದವು- ಅದರ ಆಧಾರದಮೇಲೆ ಅವರು ಎಷ್ಟು ಘನಅಡಿ ಕೆಲಸ ಮಾಡಲಾಗಿದೆ ಎಂದು ಲೆಕ್ಕಹಾಕಿ ಅದನ್ನು ಯೂನಿಟ್ ರೇಟ್  ನಿಂದ  ಗುಣಿಸುತ್ತಿದ್ದರು.  ಆ ಲೆಕ್ಕಾಚಾರಗಳನ್ನು ಆಗಾಗ ಕಲಿತಿದ್ದರಿಂದ ನಾನು ಆಗಾಗ ಅಪ್ಪನ ಜೊತೆ ಕುಳಿತು ಕೆಲವು ಲೆಕ್ಕಾಚಾರಗಳನ್ನು ಮಾಡುತ್ತಿದ್ದೆ. ತುಂಬಾ ಕೆಲಸವಿದ್ದಾಗ, ಲಕ್ಷ್ಮಿರೆಡ್ಡಿ ಮಾಮ ಭಾನುವಾರ ಬೆಳಿಗ್ಗೆ ಟಿಫಿನ್  ಮಾಡಿದ ನಂತರ ಸೈಕಲ್‌ನಲ್ಲಿ ನಮ್ಮ ಮನೆಗೆ ಬರುತ್ತಿದ್ದರು. ಅವರು ಬರುತ್ತಾರೆಂದು ತಿಳಿದ ದಿನ ನಾನು ಅವರ ಆಗಮನಕ್ಕಾಗಿ ಸಾವಿರ ಕಣ್ಣುಗಳಿಂದ ಕಾಯುತ್ತಿದ್ದೆ. ನಾನು ಕಾಯುತ್ತಿದ್ದೇನೆ ಎಂದು ಗ್ರಹಿಸಿದ ಅವರು ಬಂದೊಡನೆ ‘ಮಾಸ್ಟರ್’ಎಂದು ಕರೆಯುತ್ತಿದ್ದರು. ಅದು ಕೇಳಿದ ತಕ್ಷಣ  ಎಲ್ಲಿದ್ದರೂ  ಓಡೋಡಿ ಬಂದು ಚಾಚಿದ  ಅವರ ಕೈಯಲ್ಲಿನ ಸೈಕಲ್ ಕೀಲಿಗಳನ್ನು ನಾಯಿ ಮರಿಯಂತೆ ಗಪ್ಪೆಂದು ಹಿಡಿದುಕೊಂಡು ಸರ್ರ್  ಎಂದು ಓಡಿಹೋಗುತ್ತಿದ್ದೆ. ಅಷ್ಟು ಆಸೆ ಯಾಕೆ  ನಮ್ಮ ಮನೆಯಲ್ಲಿ  ಸೈಕಲ್ಇರಲಿಲ್ಲ. ಆಫೀಸು ಅರ್ಧಕಿಲೋ ಮೀಟರ್ ಇರಲಿ  ಅಥವಾ  ಆರು ಕಿಲೋ ಮೀಟರ್ ಇದ್ದರೂ ನಮ್ಮ  ಅಪ್ಪ   ಆಫೀಸಿಗೆ ನಡೆದುಕೊಂಡೇ ಹೋಗುತ್ತಿದ್ದರು. ಬಾಡಿಗಗೆ  ಸೈಕಾಲ್ ಪಡೆದರೂ, ಒಂದು ಗಂಟೆಗಿಂತ ಹೆಚ್ಚು ಸಮಯ ಸವಾರಿ ಮಾಡಲು ನನಗೆ ಹಣ ಕೊಡುತ್ತಿರಲಿಲ್ಲ. ಅದಕ್ಕಾಗಿಯೇ ಲಕ್ಷ್ಮಿರೆಡ್ಡಿ ಮಾಮ ಬಂದಾಗ, ನಾನು ಕೀಲಿಗಳನ್ನು ತೆಗೆದುಕೊಂಡು, ಸೈಕಲ್ ಹತ್ತಿ ಅಡ್ಡ ಕಾಲಿಂದ ಫೆಡಲ್ ತುಳಿಯುತ್ತಾ ಕ್ಲಬ್ ಬಳಿಯ ಗ್ರೌಂಡ್ ಗೆ ಓಡಿಹೋಗುತ್ತಿದ್ದೆ!  ಅಡ್ಡ ಕಾಲು ಹಾಕಿ ಸೈಕಲ್ ತುಳಿಯುತ್ತಾ ಊರೆಲ್ಲಾ ತಿರುಗುತ್ತಿದ್ದೆ. ಒಂದೊಂದು ದಿನ ಒಂದೊಂದು ದಾರಿಯಲ್ಲಿ ಪ್ರಯಾಣ ಸಾಗುತ್ತಿತ್ತು.  ಮೂರನೇ ಸಾಲಿನಿಂದ ಕೆಳಗಿಳಿಯುವಾಗ ಡೌನ್ ನಲ್ಲಿ ಹೋಗುತ್ತಿರುವಾಗ  ತುಂಬಾ ಸಂತೋಷದಿಂದ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಯಿತು. ಮತ್ತೆ ನಾನು ಹಿಂತಿರುಗಿ ಅಪ್  ಏರುವಾಗ ಬೆವರು ಸುರಿಸುತ್ತಿದ್ದೆ. ಅಲ್ಲದೆ ನಾನು ವಾಟರ್ ವರ್ಕ್ಸ್ ನಿಂದ   ಎಡಕ್ಕೆ ತಿರುಗಿ, ವರ್ಕ್ ಷಾಪ್ ದಾಟಿ, ನಂತರ ಬರುವ ಮುಂದಿನ ತಿರುವುಗಳಿಗೆ ಹೆದರಿ ಹಿಂತಿರುಗುತ್ತಿದ್ದೆ. ಸ್ಕೂಲ್ , ಪಾರ್ಕ್, ಬಸ್ ಸ್ಟಾಂಡ್ ನಿಂದ  ನೇರವಾಗಿ ಉಮಾಮಹೇಶ್ವರ ಟಾಕಿಸ್ ತನಕ, ಎಲ್ಲಿಯೂ ಕಾಲು ಕೆಳಗೆ ಇಡದೆ ಸೈಕಲ್ ತುಳಿಯುವುದು ಸಾಧ್ಯವಾಗುತ್ತಿರವಿಲ್ಲ. SBI ಬಳಿ ಒಂದು ಸಣ್ಣ ಬೆಟ್ಟವಿತ್ತು. ಸೈಕಲ್ ತುಳಿಯುವ ಮತ್ತು ಕಾಲುಗಳನ್ನು ಕೆಳಗೆಇಡದೆ ಮೇಲಕ್ಕೆ ಏರುವ ಸ್ಪರ್ಧೆಗಳು ಸಹ ನಡೆಯುತ್ತಿದ್ದೆವು.  ನಮ್ಮ ತರಗತಿಯಲ್ಲಿ ಈಗಾಗಲೇ ಎತ್ತರವಾಗಿದ್ದ ಅನೇಕ ಮಕ್ಕಳು ತಮ್ಮ ಸೈಕಲ್‌ಗಳಲ್ಲಿ  ಚೆಕ್‌ಪೋಸ್ಟ್‌ ವರೆಗೆ ಸುಲಭವಾಗಿ ಹೋಗಿ ಬರುತ್ತಿದ್ದರು. ಅವರಲ್ಲಿ ಕೆಲವರು  ಶ್ರೀಶೈಲಕ್ಕೂ ಹೋಗಿ ಬಂದಿವೆ ಎಂದು ಹೇಳುತ್ತಿದ್ದರು. ಅವೆಲ್ಲವೂ ನನ್ನ ಪಾಲಿಗೆ ದೊಡ್ಡ ಸಾಹಸ ಕೃತ್ಯ ಗಳೆಂದು ಎನಿಸುತ್ತವೆ. ರಾಮಮಂದಿರ, ಕಾಗೆಗಳ ಸೆಂಟರ್, ಐ.ಟಿ.ಐ.. ಹೀಗೆ ಇಡೀ ಇಡೀ ಊರು ಸೈಕಲ್ ಮೇಲೆ ಎಷ್ಟು ರೌಂಡ್ಸ್ ಹಾಕಿದ್ದೇವೋ ಆ  ಹೀರೋ  ಸೈಕಲ್ ಗೂ, ನನಗೂ ಗೊತ್ತು. ಮತ್ತೆ ಯಾವಾಗಲೋ ಮಧ್ಯಾಹ್ನದ  ಊಟದ ಸಮಯಕ್ಕೆ ಅವರಿಗೆ ಸೈಕಲ್ ಹಿಂತಿರುಗಿಸುತ್ತಿದ್ದೆ. ನಾನೆಂದರೆ ಅವರಿಗೆ ತುಂಬಾ ಪ್ರೀತಿ ಮತ್ತು ಅಭಿಮಾನ. ನನ್ನನ್ನು ಮುದ್ದಾಗಿ,  ಇಷ್ಟದಿಂದ ‘ಮಾಸ್ಟರ್’  ಎಂದು ಕರೆಯುತ್ತಿದ್ದರು. ಅವರು  ದೊಡ್ಡ ಆಚರಣೆವಾದಿ ಎಂದು, ತಾವು ಏನು ಹೇಳುವರೋ  ಅದೇ  ಮಾಡುತ್ತಾರೆಂದು, ಏನು ಮಾಡುತ್ತಾರೋ ಅದೇ ಹೇಳುತ್ತಾರೆಂದು  ಅಪ್ಪ ಅಮ್ಮನೊಂದಿಗೆ ಹೇಳುವುದನ್ನು ಕೇಳುತ್ತಿದ್ದೆ. ಆ ಮಾತುಗಳಿಗೆ  ನಿಜವಾದ ಅರ್ಥವೇನೋ ಆ   ಸಮಯದಲ್ಲಿ ನನಗೆ ಅರ್ಥವಾಗಲಿಲ್ಲ. ಆದರೆ  ಆ ಮಾತುಗಳು ಎಲ್ಲೋ ಮನದಲ್ಲಿ  ನೆಲೆಗೊಂಡಿವೆ ಎಂದು ದೊಡ್ಡವನು ಆದಮೇಲೆ ವಿವಿಧ ಹಂತಗಳಲ್ಲಿ ನನಗೆ ತಿಳಿಯಿತು. ಸದಾ  ವೈಟ್ ಅಂಡ್ ವೈಟ್ ನಲ್ಲಿ ಕಾಣುತ್ತಿದ್ದ ಲಕ್ಷ್ಮೀರೆಡ್ಡಿ ಮಾವನ ಮನವೂ ಅಷ್ಟೇ ಬೆಳ್ಳಗಿತ್ತು. ಜೀವನವನ್ನು ಹೇಗೆ ಸುಲಭವಾಗಿ ಮತ್ತು ಸರಳವಾಗಿ ಬದುಕಬೇಕು ಎಂಬುದನ್ನು ನೀವು ಅವರನ್ನು  ನೋಡಿದರೆ ಅರ್ಥವಾಗುವುದು . ಸುನ್ನಿಪೆಂಟದಿಂದ , ಶ್ರೀಶೈಲದೇವಸ್ಥಾನ ಒಂಬತ್ತು, ಹತ್ತು ಕಿಲೋಮೀತರ್ ದೂರದಲ್ಲಿತ್ತು. ಪ್ರಾಜೆಕ್ಟ್ ನಲ್ಲಿ  ಕೆಲಸ ಮಾಡುವವರಿಗೆ ನೇರವಾಗಿ ಗರ್ಭಗುಡಿಗೆ ಪ್ರವೇಶವಿತ್ತು. ನಮ್ಮಪ್ಪ ವಾರಕ್ಕೊಮ್ಮೆಯಾದರೂ ದೇವರ ದರ್ಶನಕ್ಕೆ ಹೋಗುತ್ತಿದ್ದರು.  ಆಗ ಇಡೀ ಪ್ರಾಜೆಕ್ಟ್   ತುಂಬಾ , ಟಿಪ್ಪರ್ ಗಳು , ಜೀಪುಗಳು ವಿಪರೀತವಾಗಿ ಓಡಾಡುತ್ತಿದ್ದವು. ನನ್ನ ತಂದೆ ಡ್ಯಾಮ್  ಡಿವಿಜನ್  ಒಂದರಲ್ಲಿ ಡಿವಿಜಿನಲ್ ಅಕೌಂಟ್  ಆಫೀಸರ್ ಕೆಲಸ ಮಾಡುತ್ತಿದ್ದರು.  ಹಾಗೆ ಡ್ಯಾಮ್ ಸೈಟ್ ಗೆ ಹೋಗುವಾಗಯೋ, ಹೀಗೆ ಬರುವಾಗಯೋ  ಯಾವುದೋ ಒಂದು ವೆಹಿಕಲ್ ನಲ್ಲಿ ದೇವಸ್ಥಾನಕ್ಕೆ ಹೋಗಿ ದರ್ಶನ  ಮಾಡಿಕೊಂಡು ಬರುತ್ತಿದ್ದ ರು. ನಮ್ಮ ಮನೆಗೆ ಬಂಧುಗಳು ಬಂದರೆ ಅವರಿಗೆ ದೇವಾಸ್ಥಾನದಲ್ಲಿ ಸ್ವಾಮಿ ಮತ್ತು ಅಮ್ಮನ ದರ್ಶನ, ಹಾಗೂ ಸುತ್ತಮುತ್ತಲಿರುವ ಶಿಖರೇಶ್ವರಂ, ಹಠಕೇಶ್ವರಂ, ಪಾಲಧಾರ-ಪಂಚದಾರ, ಸಾಕ್ಷಿಗಣಪತಿ, ಡ್ಯಾಮ್ ಸೈಟ್ ಸ್ಥಳಗಳನ್ನು ತೋರಿಸುವುದು ಒಂದು ಸಂಪ್ರದಾಯ. ನಮಗಷ್ಟೇಅಲ್ಲ, ಅಲ್ಲಿರುವ ಎಲ್ಲರಿಗೂ ಇದು ಅನ್ವಯಿಸುತ್ತದೆ. ಒಂದುದಿನ, ನನ್ನ ತಂದೆಯ ಕಡೆಯ ಸಂಬಂಧಿಯೊಬ್ಬರು, ನನ್ನಚಿಕ್ಕಪ್ಪನಾಗುವರು, ನಮ್ಮನ್ನು ಭೇಟಿಮಾಡಲು ಬಂದರು.  ಅವರನ್ನು ದರ್ಶನಕ್ಕೆ ಕರೆದುಕೊಂಡು ಹೋಗಲು ನನ್ನ ತಂದೆ ಕಚೇರಿಯಿಂದ ಮನೆಗೆ ಬಂದು ಅವರನ್ನು ರೆಡೀ ಮಾಡಿಕೊಂಡು ಹೋಗುವಾಗ  ಜೀಪಿನಲ್ಲಿ ಲಕ್ಷ್ಮೀರೆಡ್ಡಿ ಮಾಮ ಕೂಡ ಕಾಣಿಸಿದರು. ಎಲ್ಲೋ ಹೋಗುವ ಮಧ್ಯದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ನಾನು  ಹೊರಗೆ ಕಾಣಿಸಿಕೊಂಡರೆ ನನ್ನನ್ನು ಬರಲು ಕರೆದರು ಲಕ್ಷ್ಮೀರೆಡ್ಡಿ ಮಾಮ. ಹಾಗಾಗಿ ಅಪ್ಪ, ಚಿಕ್ಕಪ್ಪ,ಮಾಮ, ನಾನು, ಸೇರಿ ಎಂದಿನಂತೆ ಹಠಕೇಶ್ವರಂ, ಫಾಲಧರ-ಪಂಚಧರ, ಸಾಕ್ಷಿಗಣಪತಿಯನ್ನು ನೋಡಿಕೊಂಡ ದೇವಸ್ಥಾನಕ್ಕೆ ಹೋದೆವು.  ಶಿಖರವು ಬೇರೆ ದಿಕ್ಕಿನಲ್ಲಿರುವುದರಿಂದ, ಅದು ರಿಟರ್ನ್ ನಲ್ಲಿ ಕವರ್ ಮಾಡುತ್ತಾರೆ. ಅಲ್ಲಿನ ಡ್ರೈವರ್ ಗಳಿಗೆ   ಇವೆಲ್ಲ ಕಟ್ಟಿಟ್ಟ ಬುತ್ತಿ. ದೇವಸ್ಥಾನದ ಮುಖ್ಯದ್ವಾರದ ಬಳಿ ಜೀಪು ನಿಂತಿತು. ನಾವೆಲ್ಲ ಇಳಿದೆವು. ಅರ್ಧಗಂಟೆಯ ನಂತರ ಬರುತ್ತೇನೆ ಎಂದು ಡ್ರೈವರ್  ಹೊರಟುಹೋದ. ಎಲ್ಲರೂ ದೇವಸ್ಥಾನದ ಒಳಗೆ ಹೋಗಲು ತಯಾರಾಗುತ್ತಿದ್ದಾಗ ಲಕ್ಷ್ಮೀರೆಡ್ಡಿ ಮಾಮ  ‘ಮಾಸ್ಟರ್ ನೀನು ಇರು’ ಎಂದ. ನಾನು ನಿಂತುಬಿಟ್ಟೆ. ನನ್ನ ತಂದೆ ಮತ್ತು ಇತರರು ಮುಂದೆಕ್ಕೆ ಹೋದರು.  ನನ್ನ ಕೈಹಿಡಿದು ಸ್ವಲ್ಪದೂರಕ್ಕೆ ಕರೆದೊಯ್ದರು. ಅಲ್ಲಿ ತನ್ನ ಜೇಬಿನಿಂದ ಐದು ರೂಪಾಯಿಯ ನೋಟನ್ನು ತೆಗೆದು,ಒಬ್ಬ ವ್ಯಕ್ತಿ ಯಿಂದ   ಐದು ಮತ್ತು ಹತ್ತು ಪೈಸೆ ಚಿಲ್ಲೆರೆಯಾಗಿ ಬದಲಾಯಿಸಿದನು.ಅದರಲ್ಲಿ ಕೆಲವನ್ನು ನನಗೆ ಕೊಟ್ಟನು, ಕೆಲವನ್ನು ತಮ್ಮ  ಬಳಿಯೇ ಇಟ್ಟುಕೊಂಡು ಭಿಕ್ಷುಕರ ಕಡೇಗೆ ಹೋಗಿ,ನನ್ನನ್ನು ಒಂದು ಕಡೆ ಯಿಂದ ಹಾಕಲು ಹೇಳಿ, ಅವರು ಇನ್ನೊಂದು ಕಡೆ ಯಿಂದ ಹಾಕುತ್ತಾ ಬಂದರು. ನಾವು ಎಲ್ಲವನ್ನೂ ಖರ್ಚು ಮಾದುತ್ತಾ,ವಿತರಣೆಮಾಡಿ ಕೈಖಾಲಿಮಾಡಿ ಮುಖ್ಯದ್ವಾರಕ್ಕೆ ಹಿಂತಿರುಗಿದೆವು. ವ “ನೀವು ಎಂದಾದರೂ  ಈ ಇಡೀ ಪ್ರಾಕಾರವನ್ನು ನೋಡಿದ್ದೀಯಾ?” ಎಂದು ಕೇಳಿದರು. ನಾನು ಇಲ್ಲ ಅಂದೆ. “ಹೋಗೋಣ ಬಾ ” ಎಂದು  ಕೈ ಹಿಡಿದು ಇಡೀ ಪ್ರಾಕಾರವನ್ನು  ಎಡಭಾಗದಿಂದ ಸುತ್ತಲು ಪ್ರಾರಂಭಿಸಿದೆವು. ಅವರು  ದೇವಸ್ಥಾನದ ಒಳಗೆ ಯಾಕೆ ಹೋಗಲಿಲ್ಲ ಅಂತ ಮನದಲ್ಲಿ ಒಂದು ಅನುಮಾನ ಕಾಡಿಸಿತು.  ಎಲ್ಲೆಲ್ಲಿಂದಲೋ ಸಾವಿರಾರು ಕಿಲೋಮೀಟರ್ ಗಳು  ಪ್ರಯಾಣಿಸಿ ಸ್ವಾಮಿಯ ದರ್ಶನಕ್ಕೆ  ಬರುತ್ತಾರೇ , ಇವರು ಇಷ್ಟು ಹತ್ತಿರದಲ್ಲಿದ್ದು  ಯಾಕೆ ಹೋಗುವು ದಿಲ್ಲವೋ ಅನ್ನಿಸಿತು.  ಅದಕ್ಕೂ ಮುನ್ನ ಕೂಡಾ ಒಮ್ಮೆ ಮಾತುಗಳಲ್ಲಿ  ಅಪ್ಪ, ಅಮ್ಮನೊಂದಿಗೆ ಹೇಳಿರುವಂತೆ  ನೆನಪಿದೆ – ಅವರು  ದೇವಸ್ಥಾನದೊಳಗೆ ಬರುವುದಿಲ್ಲ ಎಂದು. ನಾನೇ ಮೊದಲು ಮೌನವನ್ನು ಮುರಿದೆ “ಮಾಮ, ನೀವು ಯಾಕೆ  ದೇವಸ್ಥಾನದೊಳಗೆ ಹೋಗಿಲ್ಲ. ದೇವರನ್ನು ನೋಡಲಿಲ್ಲ?” ಎಂದು ಕೇಳಿದೆ.  ಅದಕ್ಕೆ ಅವರು “ನಾನು ನಾಸ್ತಿಕ” ಎಂದು ಉತ್ತರಿಸಿದರು. ನಾಸ್ತಿಕ ಎಂದರೆ ಏನು ಎಂದು ನನಗೆ ತಿಳಿದಿದೆ ಎಂಬ ನಂಬುಗೆಯಿಂದ.  “ಅಂದರೆ ನಾಸ್ತಿಕರು ದೇವರನ್ನು ನಂಬುವುದಿಲ್ಲವೇ?’’ ನಾನುಕೇಳಿದೆ.  “ಹೌದು” ಎಂದರು. “ಏಕೆ” “ನಿಮ್ಮ ದೃಷ್ಟಿಯಲ್ಲಿ ದೇವರು ಒಳ್ಳೆಯವನಾ? ಕೆಟ್ಟವನಾ?” ಅವರು ಕೇಳಿದರು. ಸಾಕ್ಷಾತ್ ದೇವರ ಬಗ್ಗೆ ಇಂಥದೊಂದು  ಪ್ರಶ್ನೆ ಕೇಳಿದರೆ ದೇವರನ್ನು ಹೀಗೆ  ಕ್ಯಾಟಗರೈಜ್  ಮಾಡಿದರೆ ಇನ್ನೇನಾದರೂ ಇದೆಯಾ? ಯಾವುದೇ ಕಾರಣಕ್ಕಾಗಿ ಅದು ಉತ್ತಮವೆಂದು ನಾನು ಮೌನವಹಿಸಿದ್ದೆ. ಅವರು ಮಾತು  ಮುಂದು ವರಿಸಿದರು- “ಸಿಂಪುಲ್ ಮಾಸ್ಟರ್, ದೇವರು ಒಳ್ಳೆಯವನಾಗಿದ್ದರೆ, ನಾವುಒಳ್ಳೆಯದನ್ನುಮಾಡಿದರೆ, ಅವನು ಅದನ್ನು ಗುರುತಿಸುತ್ತಾನೆ, ನಾವು ತಿಳಿಯದೆ ತಪ್ಪುಮಾಡಿದರೆ, ಅವನು ನಮ್ಮನ್ನು ಕ್ಷಮಿಸುತ್ತಾನೆ, ಮತ್ತು ನಾವು ತಿಳಿದೂ ತಪ್ಪುಮಾಡಿದರೆ, ಅವನು ನಮ್ಮನ್ನು ಶಿಕ್ಷಿಸುತ್ತಾನೆ ಎಂದು ನಂಬಿದರೆ, ಒಳ್ಳೆಯದನ್ನು ಮಾಡುತ್ತಲೇ ಇರಿ, ಮತ್ತು ತಪ್ಪುಗಳನ್ನು ಮಾಡಬೇಡಿ. ಒಂದು ಸಮಯ ದೇವರು ಕೆಟ್ಟವನಾಗಿದ್ದರೆ,” ಅವರು ಸ್ವಲ್ಪ ಸಮಯದ ನಂತರ ಹೇಳಿದರು, “ಕೆಟ್ಟ ಜನರಿಂದ ದೂರವಿರುವುದು ಉತ್ತಮ. ಅಲ್ಲವೇ” ಅದಕ್ಕಾಗಿಯೇ ಅವನೊಂದಿಗೆ ನಮಗೆ ಯಾವುದೇ ಕೆಲಸ ವಿಲ್ಲ. ಅವನಿಗೆ ನಮ್ಮೊಂದಿಗೆ ಯಾವುದೇ ಕೆಲಸ ವಿಲ್ಲ, ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಮಾಡುತ್ತಲೇ ಹೋಗಬೇಕು” ಎಂದ, ನಾನು ಬಹಳ ಸಮಯ ಯೋಚಿಸಿದೆ. ಈಬಾರಿ ಅವರು ಮೌನವನ್ನು ಮುರಿದು, “ಪೂರ್ವ ಕಾಲದಲ್ಲಿ ಅವರು ಇಷ್ಟಿಷ್ಟು ದೊಡ್ಡ ದೇವಾಲಯಗಳನ್ನು , ಗೋಪುರಗಳನ್ನು , ಶಿಲ್ಪಗಳನ್ನು ಏಕೆ ನಿರ್ಮಿಸಿದರೋ ನಿಮಗೆ ತಿಳಿದಿದೆಯೇ?”  ಎಂದು ಕೇಳಿದ. ನಾನು ತಲೆಯನ್ನು  ಅಡ್ಡವಾಗಿ ತಿರುವುದರೊಳಗೆ- “ಆ ಸಮಯದಲ್ಲಿ  ಈ ದೇವಾಲಯಗಳು ಮತ್ತು ದೇವಸ್ಥಾನಗಳು. ಸಂಸ್ಕೃತಿಕ  ಕೇಂದ್ರಗಳು. ಹತ್ತು ಜನ ಸೇರಿ ಏನಾದರೂ ಮಾಡಬೇಕಾದರೆ,  ಏನಾದರೂ ಚರ್ಚಿಸಬೇಕಾದರೆ  ಇರುವ ವೇದಿಕೆಗಳಿವು. ಅದೂ ಅಲ್ಲದೆ ಆ ಕಾಲದಲ್ಲಿ ಬೇರೆ ಕೆಲಸಗಳೂ ಯಾವು ಇರಲಿಲ್ಲ ಅಲ್ಲವೇ. ಅದಕ್ಕೆ ಇಂತಹ  ದೊಡ್ಡ ಕಟ್ಟಡಗಳನ್ನು ಕಟ್ಟಿಸಿ  ಅದಕ್ಕೆ ತಕ್ಕಷ್ಟು ಕೂಲೀ   ಹಣ ಕೊಡುವವರೇನೋ ? ” ಎಂದು ಉತ್ತರಿಸಿದರು. “ಮೇಲೆ ನೋಡು ಎಷ್ಟು ಬೆಳೆದಿಂಗಳು ಇದೀಯೋ ” ಎಂದು ಮೇಲೆ ತೋರಿಸಿದರು. ಹೌದು,ಬಹುಶಾ ಹುಣ್ಣಿಮೆಯ ದಿನ ವಾಗಿರಬಹುದು,  ಅಷ್ಟೊತ್ತಿಗೆ ಬೆಳಕು ಮರೆಯಾಗುತ್ತಾ ಕತ್ತಲಾಗುತ್ತಿತ್ತು. ಮೇಲೆ ಹಳದಿ ಹೂವಿನಂತೆ ಬೆಳದಿಂಗಳು. ಹಾಗೆ  ಆಕಾಶದತ್ತಾ ನೋಡುತ್ತಾ  ಎಷ್ಟೋ ತನ್ಮಯದಿಂದ ,ಇಂತಹ  ಬೆಳದಿಂಗಳ ರಾತ್ರಿಗಳಲ್ಲಿ ಕೆಲವು ಯಾವುದೋ ಝಾಮುದಲ್ಲಿ  ಶಿಲೆಗಳು ಮೃದುವಾಗುತ್ತವೆಯಂತೆ.  ಆಗ ಮಾತ್ರ ಅತ್ಯಂತ ಸಂಕೀರ್ಣವಾದ ಶಿಲ್ಪಗಳನ್ನು ಕೆತ್ತಲಾಗುತ್ತದೆಯಂತೆ. ದೇವತಾ  ವಿಗ್ರಹಗಳ ಮುಖಗಳು, ಆಭರಣಗಳು, ಇತ್ಯಾದಿಗಳನ್ನು ಆ ಸಮಯದಲ್ಲಿ ಮಾಡತ್ತಾರಂತೆ.  ಆ ಸಮಯಕ್ಕಾಗಿ  ಪೂರ್ತಿ ತಿಂಗಳು ಕಾಯುತ್ತಾರಂತೆ” ಎಂದು ಹೇಳಿದರು ಲಕ್ಷ್ಮೀರೆಡ್ಡಿ ಮಾಮ – ತನಗೆ ಯಾರೋ ಹೇಳಿದ ವಿಷಯ  ನೆನೆಪಿಸಿ ಕೊಳ್ಳುತ್ತಿದ್ದಂತೆಯೇ , ನನಗೆ ಹೇಳುತ್ತಿದ್ದಂತೆಯೇ  ಹೇಳಿದರು. ನನಗೆ ಅದು ತುಂಬಾ ಆಸಕ್ತಿದಾಯಕವಾಗಿ ಅನಿಸಿತು.  ಅದೇ ಸಂಭ್ರಮದಲ್ಲಿ ‘‘ಅಷ್ಟು ಎತ್ತರವಿರುವ ರಾಜಗೋಪುರಗಳು ಹೇಗೆ ಕಟ್ಟಿರುತ್ತಾರೆ? ಒಂದೇ ಶಿಲೆಯಲ್ಲಿ ಕೆತ್ತಿರ ಬಹುದೇ? ಅಥವಾ ಬಿಡಿಬಿಡಿ ಯಾಗಿ ಕೆಟ್ಟಿರುವವುಗಳನ್ನು ಒಂದರ ಮೇಲೆ ಒಂದರಂತೆ  ಜೋಡಿಸಲಾಗಿದೆಯೇ? ” ಎಂಬ ಪ್ರಶ್ನೆಯನ್ನು ತನ್ನಷ್ಟಕ್ಕೆ   ಕೇಳಿಕೊಂಡು ಮತ್ತು ಉತ್ತರವನ್ನೂ  ತಾನೇ ಹೇಳಲು ಆರಂಭಿಸಿದರು. “ಅರ್ಧ ಕೆತ್ತಿದ ಶಿಲೆಗಳನ್ನು ಬಲವಾಗಿ ಹೆಣಿದ ಹಗ್ಗಗಳಿಂದ ಕಟ್ಟಿ ಆನೆಗಲಿಂದ ಎಳೆದರು. ಮತ್ತು ಅವರು ಅಷ್ಟು ಎತ್ತರಕ್ಕೆ ಹೇಗೆ ಹತ್ತಿದರು ಎಂದು ನಿಮಗೆ ತಿಳಿದಿದೆಯೇ? ಅದನ್ನು ಸ್ಕಾ ಫೋಲ್ಡಿಂಗ್ ಎಂದು ಕರೆಯಲಾಗುತ್ತದೆ. ಅವರು ಅದರ ಎದುರಿನಲ್ಲಿ ತಾತ್ಕಾಲಿಕ ಕಟ್ಟಡವನ್ನು  ಇಳಿಜಾರಿನಲ್ಲಿ ನಿರ್ಮಿಸಿ,  ಭಾರವನ್ನು ಹೊತ್ತಿರುವ ಆನೆಗಳನ್ನು ಆ ಮಾರ್ಗದಲ್ಲಿ ಮುನ್ನಡೆಸಿ ಅವರಿಗೆ ಬೇಕಾದ ಎತ್ತರಕ್ಕೆ ಸೇರಿದ ತಕ್ಷಣ ಅವುಗಳನ್ನು ಅಲ್ಲಿ ಇಳಿಸುತ್ತಿದ್ದರು”, ಅವುಗಳನ್ನುಅಲ್ಲಿಇಳಿಸುತ್ತಿದ್ದರು.” ನಾನು ಆ ಸನ್ನಿವೇಶವನ್ನು ಊಹಿಸಿಕೊಳ್ಳಲು ಸ್ವಲ್ಪ ಗ್ಯಾಪ್ ಕೊಟ್ಟೆ. “ಈ ಎಲ್ಲಾ ಕಥೆಗಳನ್ನು ತಿಳಿದುಕೊಳ್ಳಲು ಬಯಸಿದರೆ, ಒಂದು ಮಧ್ಯಾಹ್ನ ಬಂದು ಗಮನಿಸಿ ನೋಡು. ಒಂದು ಭಾವವನ್ನು ತಿಳಿಸಲು ಶಿಲ್ಪಿಗಳು  ಎಷ್ಟು ಪ್ರಯತ್ನಿಸಿದರೋ ಅರ್ಥವಾಗುತ್ತದೆ. ಅವರ ಇಡೀ ಜೀವನವನ್ನು ಇವುಗಳಿಗೆ ಮೀಸಲಾಗಿಟ್ಟಿರಬೇಕು ಮತ್ತು ಅವುಗಳನ್ನು ಜೀವಂತಗೊಳಿಸಲು ಶ್ರಮಿಸಿರಬೇಕು. ಇವು ಐತಿಹಾಸಿಕ ಕಾಲ ಬಿಟ್ಟು ಹೋಗಿರುವ ಸಾಮಾಜಿಕ-ಸಾಂಸ್ಕೃತಿಕ ಕುರುಹುಗಳಾಗಿವೆ, ”ಎಂದುಅವರು ಹೇಳಿದರು. ಪ್ರಾಕಾರ ಸುತ್ತಲೂ ಕೆತ್ತಿರುವ ಅನೇಕ ಶಿವಪುರಾಣಗಳ ಕಥೆಗಳನ್ನು, ಶಿವಭಕ್ತರ ಇತಿಹಾಸಗಳನ್ನು ಅವರು ವಿವರಿಸುವಾಗ, ಅವರಿಗೆ ಇಷ್ಟು ವಿಷಯಗಳು ಹೇಗೆ ತಿಳಿದಿವೆ ಎಂದು ಆಶ್ಚರ್ಯವಾಯಿತು. ಅಕ್ಕಮಹಾದೇವಿಕಥೆ, ದಕ್ಷಯಜ್ಞ, ತ್ರಿಪುರಾಂತಕ

ತೆಲುಗು ಕಥೆ “ನಾಸ್ತಿಕ ದೇವರು”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

ಕಥಾಗುಚ್ಛ

“ಒಂಟಿ ಹೆಜ್ಜೆ(ಹುಡುಕಾಟದಲ್ಲಿ)” ಸಣ್ಣಕಥೆ ಪೃಥ್ವಿರಾಜ್ ಟಿ ಬಿ

ಕಥಾ ಸಂಗಾತಿ ಪೃಥ್ವಿರಾಜ್ ಟಿ ಬಿ “ಒಂಟಿ ಹೆಜ್ಜೆ(ಹುಡುಕಾಟದಲ್ಲಿ)” ಗ್ರಾಮದ ಅಂಚಿನಲ್ಲಿ ನಿಂತಿದ್ದ ಆ ಹಳೆಯ ಬಂಗಲೆ ಯಾರಿಗೂ ಸೇರಿದಂತೆ ಕಾಣುತ್ತಿರಲಿಲ್ಲ. ಒಮ್ಮೆ ಅದು ಭವ್ಯವಾಗಿತ್ತು ಎಂದು ಹೇಳಲು ಅದರ ಎತ್ತರದ ಗೋಡೆಗಳು, ದೊಡ್ಡ ಕಬ್ಬಿಣದ ಗೇಟು, ಅರ್ಧ ಕುಸಿದ ಬಾಲ್ಕನಿ ಸಾಕ್ಷಿಯಾಗಿದ್ದವು. ಈಗ ಅದರ ಗೋಡೆಗಳ ಮೇಲೆ ಹಚ್ಚಿದ ಬಿಳಿ ಬಣ್ಣ ಮಂಕಾಗಿ ಬೂದು ಬಣ್ಣದಂತೆ ಕಾಣುತ್ತಿತ್ತು. ಕಿಟಕಿಗಳಲ್ಲಿ ಒಡೆದ ಗಾಜುಗಳು ಗಾಳಿ ಬೀಸಿದಾಗ ವಿಚಿತ್ರ ಶಬ್ದ ಮಾಡುತ್ತವೆ. ರಾತ್ರಿಯಾದರೆ ಆ ಬಂಗಲೆಯಿಂದ ಯಾರೋ ನರಳಾಡುವಂತೆ ಕೇಳಿಸುವ ಶಬ್ದ ಊರಿನ ಮಕ್ಕಳಿಗೆ ನಿದ್ರೆಯೇ ಬರದಂತೆ ಮಾಡುತ್ತಿತ್ತು. ಬಂಗಲೆಯ ಪಕ್ಕದಲ್ಲೇ ಒಂದು ವಿಶಾಲವಾದ ಆಟದ ಮೈದಾನ. ಪ್ರತಿ ಸಂಜೆ ಅಲ್ಲಿ ಹುಡುಗರ ಗುಂಪು ಕ್ರಿಕೆಟ್ ಆಡುತ್ತಿರುತ್ತದೆ. ನಗುವಿನ ಕೂಗು, ಚೆಂಡಿನ ಸದ್ದು, ಸೋಲು–ಗೆಲುವಿನ ಜಗಳ—ಎಲ್ಲವೂ ಆ ಮೈದಾನದ ಜೀವಾಳ. ಆದರೆ ಆಟ ಆಡುತ್ತಾ ಇದ್ದರೂ ಯಾರೂ ಆ ಬಂಗಲೆಯ ಕಡೆಗೆ ನೋಡುವ ಧೈರ್ಯ ಮಾಡುತ್ತಿರಲಿಲ್ಲ.  “ಅದು ಭೂತ ಬಂಗಲೆ”, “ಅಲ್ಲಿ ಆತ್ಮ ಇದೆ”, “ಹೋದವರು ಮರಳಿ ಬಂದಿಲ್ಲ” ಎಂಬ ಮಾತುಗಳು ಮಕ್ಕಳ ನಡುವೆ ಹರಡಿದ್ದವು. ಆ ಹುಡುಗರಲ್ಲಿ ಒಬ್ಬನ ಹೆಸರು ಕಾರ್ತಿಕ್. ಅವನು ಇತರರಿಗಿಂತ ಸ್ವಲ್ಪ ಧೈರ್ಯಶಾಲಿ, ಆದರೆ ಒಳಗೆ ತುಂಬಾ ಸಂವೇದನಾಶೀಲ ಹುಡುಗ. ಅವನ ಕಣ್ಣುಗಳಲ್ಲಿ ಸದಾ ಕುತೂಹಲದ ಹೊಳಪು. ಆ ದಿನ ಸಂಜೆ ಆಟ ನಡೆಯುತ್ತಿತ್ತು. ಕಾರ್ತಿಕ್‌ನ ಸ್ನೇಹಿತ ರವಿ ದೊಡ್ಡ ಹೊಡೆತ ಹೊಡೆದ. ಬಾಲ್ ನೇರವಾಗಿ ಬಂಗಲೆಯ ಹತ್ತಿರ ಹೋಗಿ ಬಿದ್ದಿತು. ಎಲ್ಲ ಹುಡುಗರು ಒಬ್ಬರನ್ನೊಬ್ಬರು ನೋಡಿಕೊಂಡರು.“ಯಾರು ಹೋಗ್ತೀರಾ?” ಎಂದು ಒಬ್ಬನು ಕೇಳಿದ.ಕ್ಷಣಕಾಲ ಮೌನ. ಯಾರೂ ಮುಂದೆ ಬರಲಿಲ್ಲ. ಕೊನೆಗೆ ಕಾರ್ತಿಕ್ ಧೈರ್ಯ ಮಾಡಿ, “ನಾನು ಹೋಗ್ತೀನಿ” ಎಂದು ಹೇಳಿದ.ಅವನು ನಿಧಾನವಾಗಿ ಬಂಗಲೆಯ ಕಡೆಗೆ ನಡೆದು ಹೋದ. ಗೇಟಿನ ಹತ್ತಿರ ಬಂದಾಗ ತಣ್ಣನೆಯ ಗಾಳಿ ಅವನ ಮೈಮೇಲೆ ಹರಿದಂತೆ ಆಯಿತು. ಒಣ ಎಲೆಗಳು ಅವನ ಕಾಲಿಗೆ ಸಪ್ಪಳಿಸಿದವು. ಆ ಕ್ಷಣಕ್ಕೆ ಅವನಿಗೆ ಯಾರೋ ಹಿಂದಿನಿಂದ ಉಸಿರಾಡುತ್ತಿರುವಂತೆ ಭಾಸವಾಯಿತು. ಹೃದಯ ಜೋರಾಗಿ ಬಡಿದಿತು. “ಇದು ಕೇವಲ ಕಲ್ಪನೆ” ಎಂದು ತನ್ನನ್ನು ತಾನೇ ಸಮಾಧಾನ ಮಾಡಿಕೊಂಡು ಬಾಲ್ ತೆಗೆದುಕೊಳ್ಳಲು ಕೈ ಚಾಚಿದ.ಅಷ್ಟರಲ್ಲಿ ಒಳಗಿನಿಂದ ಯಾವುದೋ ನರಳಾಟದ ಶಬ್ದ—ಮಂದವಾದ, ನೋವಿನಿಂದ ತುಂಬಿದ ಶಬ್ದ—ಅವನ ಕಿವಿಗೆ ಬಿತ್ತು. ಕಾರ್ತಿಕ್ ಬೆಚ್ಚಿಬಿದ್ದ. ಕೈಯಲ್ಲಿ ಬಾಲ್ ಹಿಡಿದು ಓಡಿದ. ಸ್ನೇಹಿತರ ಬಳಿ ಬಂದು ತಲೆಸುತ್ತಿ ಕುಳಿತ.“ಏನಾಯ್ತು?” ಎಂದು ಎಲ್ಲರೂ ಕೇಳಿದರು.ಕಾರ್ತಿಕ್ ಶಬ್ದ ಕೇಳಿದ್ದನ್ನು ಹೇಳಿದ. ಹುಡುಗರ ಮುಖದಲ್ಲಿ ಭಯ ಮೂಡಿತು. ಆ ದಿನದ ಆಟ ಅಲ್ಲಿಯೇ ಮುಗಿಯಿತು. ಆ ದಿನದಿಂದ ಕಾರ್ತಿಕ್ ಮನಸ್ಸು ಅಶಾಂತ. ರಾತ್ರಿ ಮಲಗಿದಾಗಲೂ ಅವನ ಕಿವಿಗೆ ಅದೇ ಶಬ್ದ ಕೇಳಿಸುತ್ತಿರುವಂತೆ ಭಾಸ. ಕಣ್ಣು ಮುಚ್ಚಿದರೆ ಬಂಗಲೆ, ಕತ್ತಲೆ ದಾರಿಗಳು, ಮುರಿದ ಕಿಟಕಿಗಳು ಕಣ್ಣ ಮುಂದೆ ತೇಲುತ್ತವೆ.ಒಂದು ರಾತ್ರಿ ಅವನು ವಿಚಿತ್ರ ಕನಸು ಕಂಡ. ಆ ಬಂಗಲೆಯ ಗೇಟಿನ ಒಳಗೆ ಮಣ್ಣಿನಲ್ಲಿ ಸ್ಪಷ್ಟವಾಗಿ ಕಾಣುವ ಒಂಟಿ ಹೆಜ್ಜೆ ಗುರುತು. ಕೇವಲ ಒಂದೇ ಹೆಜ್ಜೆ—ಎರಡನೇ ಹೆಜ್ಜೆ ಇಲ್ಲ. ಆ ಗುರುತು ಅವನತ್ತ ಬರುತ್ತಿರುವಂತೆ ಭಾಸವಾಯಿತು. ಹೃದಯ ಬಡಿದುಕೊಂಡು ಅವನು ಎಚ್ಚರಗೊಂಡ. “ಒಂದು ಹೆಜ್ಜೆ ಮಾತ್ರ ಹೇಗೆ?” ಎಂದು ಅವನು ಯೋಚಿಸಿದ. ಆ ಕನಸು ಅವನ ಮನಸ್ಸನ್ನು ಬಿಡಲೇ ಇಲ್ಲ. ಮರುದಿನ ಬೆಳಿಗ್ಗೆ ಕುತೂಹಲ ಮತ್ತು ಭಯ ಎರಡೂ ಸೇರಿ ಅವನನ್ನು ಬಂಗಲೆಯ ಕಡೆಗೆ ಎಳೆದವು. ಶಾಲೆಗೆ ಹೋಗುವ ಮುನ್ನ ಸ್ವಲ್ಪ ದೂರದಿಂದ ಅವನು ನೋಡಿದ. ಆಶ್ಚರ್ಯ! ನಿಜವಾಗಿಯೂ ಗೇಟಿನ ಬಳಿ ಮಣ್ಣಿನಲ್ಲಿ ಒಂದೇ ಹೆಜ್ಜೆ ಗುರುತು ಕಾಣಿಸುತ್ತಿತ್ತು. ಅವನ ಕೈಕಾಲು ತಣ್ಣಗಾದವು.ಅವನು ಗೇಟಿನ ಹತ್ತಿರ ಹೋಗಲು ಯತ್ನಿಸಿದ. ಅಷ್ಟರಲ್ಲಿ ಊರಿನ ಒಬ್ಬ ವಯಸ್ಸಾದ ಮಹಿಳೆ ಅವನನ್ನು ನೋಡಿ ಕೂಗಿದರು,“ಏಯ್ ಹುಡುಗಾ! ಅಲ್ಲಿ ಏನೋ ಮಾಡ್ತಿಯಾ? ಹೋಗೋ ಮನೆಗೆ!”ಕಾರ್ತಿಕ್ ಬೆಚ್ಚಿಬಿದ್ದು ಹಿಂದಕ್ಕೆ ಸರಿದ. ಆದರೆ ಆ ಹೆಜ್ಜೆ ಗುರುತು ಅವನ ಮನಸ್ಸಿನಲ್ಲಿ ಇನ್ನಷ್ಟು ಗಾಢವಾಗಿ ಉಳಿಯಿತು. ಆ ರಾತ್ರಿ ಅವನು ನಿದ್ರೆ ಮಾಡಲಿಲ್ಲ. “ನಿಜವೇನಿದೆ ಅಲ್ಲಿ?” ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಕೊನೆಗೆ ಧೈರ್ಯ ಮಾಡಿಕೊಂಡು, ಮರುದಿನ ಯಾರಿಗೂ ತಿಳಿಯದಂತೆ ಮತ್ತೆ ಬಂಗಲೆಗೆ ಹೋಗುವ ನಿರ್ಧಾರ ಮಾಡಿದ. ಸೂರ್ಯ ಮಧ್ಯಾಕಾಶದಲ್ಲಿದ್ದ ಸಮಯ. ಗೇಟು ನಿಧಾನವಾಗಿ ಕಿರುಚುತ್ತ ತೆರೆದಿತು. ಒಳಗೆ ಕಾಲಿಟ್ಟಾಗ ಬಂಗಲೆಯೊಳಗಿನ ವಾಸನೆ ಹಳೆಯ ಮಣ್ಣಿನ, ಧೂಳಿನ, ಒಣ ಮರದ ವಾಸನೆಯಿಂದ ತುಂಬಿತ್ತು. ಗೋಡೆಗಳ ಮೇಲೆ ಹಳೆಯ ಚಿತ್ರಗಳು, ಮುರಿದ ಕುರ್ಚಿಗಳು, ಬಿದ್ದ ಕಾಗದಗಳು. ಪ್ರತಿಯೊಂದು ಹೆಜ್ಜೆಯೂ ಪ್ರತಿಧ್ವನಿಯಂತೆ ಕೇಳಿಸುತ್ತಿತ್ತು.ಅಷ್ಟರಲ್ಲಿ ಒಳಗಿನಿಂದ ನಿಧಾನವಾದ ಚಲನೆಯ ಶಬ್ದ. ಕಾರ್ತಿಕ್ ಉಸಿರು ಹಿಡಿದು ನಿಂತ. ಒಂದು ಕೋಣೆಯ ಬಾಗಿಲು ತೆರೆದು ಹೊರಬಂದದ್ದು—ಒಬ್ಬ ಮುದುಕ. ಅವನ ಮುಖದಲ್ಲಿ ದಟ್ಟವಾದ ಬಿಳಿ ಗಡ್ಡ, ಕಣ್ಣುಗಳಲ್ಲಿ ಅಪಾರ ನೋವು. ಅವನಿಗೆ ಒಂದೇ ಕಾಲು ಮಾತ್ರ ಇತ್ತು; ಮತ್ತೊಂದು ಕಾಲು ಯಾವುದೋ ಅಪಘಾತದಲ್ಲಿ ಕಳೆದುಕೊಂಡಿದ್ದ.ಕಾರ್ತಿಕ್‌ಗೆ ಕ್ಷಣಕಾಲ ಮಾತೇ ಬರಲಿಲ್ಲ. ಭಯಕ್ಕಿಂತ ಹೆಚ್ಚು ಅವನ ಮನಸ್ಸಿನಲ್ಲಿ ಕರುಣೆ ಮೂಡಿತು.“ಭಯಪಡಬೇಡ ಮಗನೇ,” ಎಂದು ಮುದುಕ ನಿಧಾನವಾಗಿ ಹೇಳಿದರು. “ನಿನ್ನ ಕನಸಿನಲ್ಲಿ ಕಂಡ ಒಂಟಿ ಹೆಜ್ಜೆ ನಾನು.”ಮುದುಕ ತನ್ನ ಕಥೆ ಹೇಳಲು ಶುರುಮಾಡಿದರು. ಒಮ್ಮೆ ಈ ಬಂಗಲೆ ಅವನ ಹೆಮ್ಮೆಯ ಮನೆ. ಅವನು ದೊಡ್ಡ ವ್ಯಾಪಾರಿ. ಅವನಿಗೆ ಅಪಾರ ಸ್ನೇಹಿತರು ಇದ್ದರು. ಆದರೆ ಅವನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡವರು ಅವನ ಆಸ್ತಿಯನ್ನು ಕಬಳಿಸಿದರು. ಒಂದು ಅಪಘಾತದಲ್ಲಿ ಅವನು ಕಾಲು ಕಳೆದುಕೊಂಡ. ಸ್ನೇಹಿತರೆಂದವರು ದೂರ ಸರಿದರು. ಕುಟುಂಬವೂ ಅವನನ್ನು ಬಿಟ್ಟು ಹೋದರು. ಕೊನೆಗೆ ಅವನು ಒಂಟಿಯಾಗಿ ಈ ಬಂಗಲೆಯಲ್ಲೇ ಉಳಿದ.“ನೋವಿನಿಂದ ಕೆಲವೊಮ್ಮೆ ನಾನೇ ನನ್ನನ್ನು ನಿಂದಿಸುತ್ತೇನೆ. ಅದೇ ಶಬ್ದ ನೀನು ಕೇಳಿದ್ದು,” ಎಂದು ಕಣ್ಣೀರಿನಿಂದ ಹೇಳಿದರು.ಕಾರ್ತಿಕ್‌ನ ಕಣ್ಣುಗಳು ತುಂಬಿಬಂದವು. ಅವನಿಗೆ ಭಯ ಅಲ್ಲ, ಅಪಾರ ದುಃಖ ಮತ್ತು ಸಹಾನುಭೂತಿ ಉಕ್ಕಿತು. “ನಾನು ಮತ್ತೆ ಬರುತ್ತೇನೆ,” ಎಂದು ಅವನು ಹೇಳಿದ.ಆ ದಿನದಿಂದ ಕಾರ್ತಿಕ್ ಆ ಮುದುಕನಿಗೆ ಆಹಾರ ತಂದು ಕೊಡಲು, ಮಾತನಾಡಲು ಬರುತ್ತಿದ್ದ. ಬಂಗಲೆ ಈಗ ಅವನಿಗೆ ಭಯದ ಸ್ಥಳವಲ್ಲ, ಮಾನವೀಯತೆಯ ಪಾಠ ಕಲಿಸಿದ ಸ್ಥಳವಾಯಿತು.ಒಂಟಿ ಹೆಜ್ಜೆ—ಭಯದ ಸಂಕೇತವಲ್ಲ, ಒಂಟಿತನದ ಸಂಕೇತ ಎಂದು ಅವನಿಗೆ ಅರ್ಥವಾಯಿತು. ಪೃಥ್ವಿರಾಜ್ ಟಿ ಬಿ

“ಒಂಟಿ ಹೆಜ್ಜೆ(ಹುಡುಕಾಟದಲ್ಲಿ)” ಸಣ್ಣಕಥೆ ಪೃಥ್ವಿರಾಜ್ ಟಿ ಬಿ Read Post »

ಕಥಾಗುಚ್ಛ

“ಸೋತು ಗೆದ್ದ ರೈತ” ಸಣ್ಣಕಥೆ,ಶ್ರೀದೇವಿ ಮ.ಗುಮ್ಮಗೋಳ ಅವರಿಂದ

ಶ್ರೀದೇವಿ ಮ.ಗುಮ್ಮಗೋಳ “ಸೋತು ಗೆದ್ದ ರೈತ” “ಎನ್ ಸವಕಾರ ಕರಿದರಂತಲ್ಲ ಎದಕ” ಎಂದು ಕೆಳಗಿನಮನಿ ರಾಮಪ್ಪ ಬಸನ ಗೌಡರ ಮುಂದೆ ಕೈ ಕಟ್ಟಿ ನಿಂತು ಕೇಳಿದ. “ನೋಡ ರಾಮ್ಯಾ ಈ ಸರಿ ನಾನು ಜಿಲ್ಲಾ ಪಂಚಾಯತ್ ಎಲಕ್ಷನ್ ನಿಲ್ಲಾಕ್ಕತ್ತೇನಿ. ಊರಾಗಿನ ರೈತರೆಲ್ಲರಿಗೂ ಹೇಳಿ ನೀನ ಓಟ ಹಾಕಸ್ಬೇಕು. ನಿನ್ನ ರೈತ ಸಂಘದ ಮುಖಂಡ ಮಾಡ್ತೇನಿ. ಎದಕ ಹೊಲ ಮನಿ ಅಂತ ಕತ್ತಿ ದುಡದಂಗ ದುಡಿತಿ.  ನಿನ್ನ ಕೈಯಾಗಿ ನಾಕ ರೊಕ್ಕಾಡ್ತಾವು” ರಾಮಪ್ಪನಿಗೆ ನಾಲ್ಕು ಎಕರೆ ಹೊಲ ಇತ್ತು. ಮಳಿ ಇಲ್ಲದಿದ್ದರ ಬೆಳಿ ಇಲ್ಲ. ಇನ್ನ ಮಳಿ ಬಂದರ ಬೆಳಿಗೆ ಸರಿಯಾದ ಬೆಲೆ ಇಲ್ಲ. ಒಟ್ಟನಲ್ಲಿ ಇಡಿ ನಾಡಿಗೆ ಅನ್ನ ನೀಡುವ ರೈತ ಒಂದಪ್ಪತ್ತಿನ ಕೂಳಿಗೂ ಪರದಾಡುವ ಸ್ಥಿತಿ. ರಾಮಪ್ಪನು ಯೊಚಿಸಿದ “ಭೂಮಿ ತಾಯವ್ವನ ನೆಚ್ಚಕೊಂಡು ಎಷ್ಟ ವರಷಾತು ದುಡಿಯಾಕ್ಕತು ಇನ್ನು ಎಲ್ಲ ಅದೇನಿ ಅಲ್ಲೆ ಅದೇನಿ. ಅದ ಮುರಕಲು ಮನಿ.. ಅದೇ ಹಳೆ ಜೋಡತ್ತುಗಳು…. ನೋಡ.. ಗೌಡರು ಪಂಚಾಯತ್ ಎಲಕ್ಷನ್ ಗೆದ್ದು ಹೋದ ಸಾರಿ ಟ್ರಾಕ್ಟರ್ ತುಗೊಂಡ್ರು ಹೊಸ ಮನಿ ಕಟ್ಟಿಸಿದ್ರು…. ಬರಿ ಹೊಲ ಅಷ್ಟಲ್ಲದ… ಹಿಂಗ ಬ್ಯಾರೆ ಕೆಲಸ ಹಿಡದಾರಂತ…. ಜೀವನದಾಗ ಮುಂದ ಬಂದಾರು. ತಾನು ಇವರ ಹೇಳದಂಗ ಇವರ ಹಿಂದ ಇವರ ದಾರಿಯೊಳಗ ಹೋದರ… ಮುಂದೊಂದು ದಿನಾ ನಾನು ರೈತ ಮುಖಂಡಾಗಿ ಎಲೆಕ್ಷನ ನಿಂತು ಗೆದ್ದ ಬಂದರ… ನನ್ನ ಬದುಕು ಬಂಗಾರ ಆಗ್ತೇತಿ” ಎಂದುಕೊಂಡ. ಗೌಡ ಹೋದ ಸಾರಿ ಪಂಚಾಯತ ಚೇರಮನ್ ಆಗಿ ಸರಕಾರದಿಂದ ಹಳ್ಳಿಗಳಿಗೆ ಕೊಡುವ ವಿವಿಧ ಫಂಡಗಳಲ್ಲಿ ಸಾಕಷ್ಟು ದುಡ್ಡು ಹೊಡೆದಿದ್ದ. ಮುಂದ ಇನ್ನೂ ಜಿಲ್ಲಾ ಪಂಚಾಯತ ಚುನಾವಣೆ ಯಲ್ಲಿ ಗೆದ್ದು ಮುಂದ ವಿಧಾನ ಸೌಧದಾಗ ಕುಳಿತುಕೊ ಮಹಾನ್ ಆಸೆ ಇಟ್ಟಕೊಂಡಿದ್ದ. ತನ್ನ ಈ ಆಸೆ ಇಡೇರಿಸಿಕೊಳ್ಳಲು ರಾಮಪ್ಪನನ್ನ ಉಪಯೋಗಿಸಿಕೊಂಡ.  ರಾಮಪ್ಪ ಹಳ್ಳಿಯಲ್ಲಿ ಎಲ್ಲರೊಂದಿಗೆ ಬೆರೆತು ಒಳ್ಳೆ ಸಂಬಂಧ ಇತ್ತು. ಬಹಳ ಸಂಬಾವಿತ ಮತ್ತು ಮುಗ್ದನಾಗಿದ್ದ.  ಯಾರ ಜೊತೆಗೂ ಜಗಳ ಆಡದ ಊರ ಜನರ ಮೆಚ್ಚುಗೆ ಗಳಿಸಿದ್ದ. ಎಪ್ಪತ್ತು ದಾಟಿದ ರಾಮಪ್ಪನಿಗೆ ಇದ್ದದ್ದು ಎರಡು ಹೆಣ್ಣು ಮಕ್ಕಳು ಅವರನ್ನು ಮದುವೆ ಮಾಡಿ ಕೊಟ್ಟಿದ್ದ. ಊರಿನಲ್ಲಿ ಕೆಲವೊಂದು ಸಮಸ್ಯೆ ಬಂದಾಗ ರಾಮಪ್ಪ ಯಾರಿಗೂ ನೊವಾಗದ ಹಾಗೆ ಬಗೆಹರಿಸಿದ್ದ.   ರಾಮಪ್ಪ ಗೌಡನ ಎಲೆಕ್ಷನ್ ಪ್ರಚಾರಕ್ಕೆ ಅವನ ಹಿಂದೆ ನಿಂತ‌.  ಊರೊಳಗ ಎಲ್ಲ ಮನಿ ಮನಿಗೂ ತೆರಳಿ “ನೋಡಪಾ ಗೌಡರಿಗೆ ಓಟ ಹಾಕ್ಬೇಕು. ನಮ್ಮ ಗೌಡರು ರೈತರಿಗೆ ಬಹಳಷ್ಟು ಅನುಕೂಲ ಆಗಾಕ ಸರಕಾರಕ್ಕ ಕೇಳಕೊತಾರು.” ಅಂದ ಗೌಡ ” ನೊಡ್ರಪ್ಪಾ ಇನ್ನ ಮುಂದ ಸಾಲ ಮಾಡಿ ನೇಣ ಹಾಕೊ ಪರಿಸ್ಥಿತಿ ಇಲ್ಲ. ನಿಮ್ಮ ಸಾಲ ಮನ್ನಾ ಆಗುಂಗ ಮಾಡ್ತೇನಿ. ಬೆಳೆಗೆ ಚುಲೊ ರೊಕ್ಕ ಬರುವ ವ್ಯವಸ್ಥಾ ಮಾಡ್ತೇನಿ. ಇನ್ನ ಮುಂದ ರೈತರ ಕಷ್ಟ ತೀರತು ಅಂತ ತೀಳಕೊರಿ” ಅಂದ ಬಸನಗೌಡನಿಗೆ ರಾಮಪ್ಪ ಜೊತೆ ಇದ್ದದ್ದರಿಂದ ಜನ ಗೌಡನಿಗೆ ಓಟ ಹಾಕಿದರು. ಗೌಡ ಗೆದ್ದು ಬಂದ. ಬಸನ ಗೌಡ  ಓಡಾಡಿದ್ದಕ್ಕಾಗಿ ರಾಮಪ್ಪನ ಕೈಯಲ್ಲಿ ಒಂದಿಷ್ಟು ದುಟ್ಟು ಕೊಟ್ಟ. ಅಷ್ಟು ದುಡ್ಡನ್ನು ರಾಮಪ್ಪ ತನ್ನ ಜೀವಮಾನದಲ್ಲೆ ನೋಡಿರಲಿಲ್ಲ. ಅದರಲ್ಲಿನ ದುಡ್ಡಿನಿಂದ ತಾನು ಮಾಡಿದ ಸಾಲವನ್ನು ತೀರಿಸಿದ.  ಆದರೆ ವಾಸ್ತವವಾಗಿ ರಾಮಪ್ಪ ತನ್ನನ್ನು ಮತ್ತು ತನ್ನ ಜನರನ್ನ ಓಟಿಗೆ ಮಾರಿದೆ ಎನ್ನುವ ಆಲೊಚನೆಯಾಗಲಿ ಬರಲೆ ಇಲ್ಲಾ.  ರೈತ ದೇಶದ ಬೆನ್ನಲಬು ಅಂತಾರೆ. ಆದರೆ ಬಸನಗೌಡಾ ಅದೇ ಬೆನ್ನಲಬನ್ನು ತನ್ನ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಂಡ. ಆ ಮೀಟಿಂಗ ಈ ಮೀಟಿಂಗು ಎನ್ನುತ ಬೆಂಗಳೂರಿಗೆ ಹೋಗತೊಡಗಿದವನು ಬರಬರುತ್ತ ಬೆಂಗಳೂರಿನಲ್ಲೆ ಇರತೊಡಗಿದ. ಸಚಿವನಾಗಬೇಕೆನ್ನುವದಕ್ಕಾಗಿ ಮುಂದಿನ ಪ್ಲಾನ್ ಹಾಕ ತೊಡಗಿದ. ರಾಮಪ್ಪನನ್ನು, ಓಟ ಗಿಟ್ಟಿಸಿಕೊಂಡ ಊರಿನ ಜನರನ್ನು ಮರತೆ ಬಿಟ್ಟ. ರಾಮಪ್ಪ ತಾನು ರೈತ ಮುಖಂಡನಾಗ್ತೇನಿ ಮುಂದ ಪಂಚಾಯತ್ ಚೇರಮನ್ ಆಗ್ತೇನಿ ಅಂತ ಕನಸು ಕಂಡು ಗೌಡನ ಹಿಂದೆ ಸುತ್ತಿದವನಿಗೆ ಬರಬರುತ್ತ ವಾಸ್ತವ ಅರ್ಥವಾಗತೊಡಗಿತು. ಹೆಂಡತಿ “ಎದಕ ಬೇಕಾಗಿತ್ತು  ನಿಮಗ ಆ ಗೌಡನ ಹಿಂದ ಸುತ್ತದು…. ಒಂದಿಷ್ಟ ದುಡ್ಡ ಕೊಟ್ಟು ಕೈತೊಳಕೊಂಡ…. ಸಾಲಾ ಏನೊ.. ಹರದರಿ ಆದರ…. ಹೊಲದಾಗ ನೀವಲ್ಲದ ಬಿತ್ತಿಗಿ ಕೂರಗಿ ಒಂದು ಇಲ್ಲದ ಹೊಲಾ ಪಾಳ ಬಿದ್ದೈತಿ. ನಾನಾದರೂ ಹೊಲದಾಗ ಏನಾದರೂ ಬಿತ್ತತೇನಿ ಅಂದರ… ಎದಕ ಬೇಕಿನ್ನ ಹೊಲ… ಗೌಡರು ಮುಂದ ಬಾಳು ಬಂಗಾರಕ್ತೈತಿ ಅಂದಾರು ಅಂತ ಹೇಳದಿ….. ಎಲ್ಲಿ ಬಂಗಾರ…. ಬರಿ ಅಂಗಾರ ತಿನ್ನುದಾತು….” ಎಂದು ಗಂಡನನ್ನ ಬೈದಳು. ಹೌದು ಪಾಪ ಮುಗ್ದನಾದ ರಾಮಪ್ಪ ಗೌಡನನ್ನ ನಂಬಿ ಹಾಳಾದ. ಬೆಳಿ ಇಲ್ಲದ ಭೂಮಿ ಹಾಳಾತು. ರಾಮಪ್ಪ ನೊಂದಕೊಂಡು ಅಂದು ಹೊಲಕ ಹೋಗಿ ನೋಡಿದರ ಬೂಮಿಯೊಳಗ ಎಲ್ಲಾ ಕಡೆ ಕಸಾ ಬೆಳದಿತ್ತು. ಎತ್ತುಗಳಿಗೆ ಸರಿಯಾಗಿ ಮೇವು ಇಲ್ಲದ ಸಣಕಲಾಗಿದ್ದವು. ನೋಡಿ ಮರಾಮರಾ ಅಂತ ಮರಗಿದ. ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟ. ರಾಮಪ್ಪ ತನ್ನ ತೆಲೆಯೊಳಗ ಗೌಡ ಬೆಳೆದ ಕಸಾ ಕಿತ್ತೊಗದ‌. ಕಳೆದುಕೊಂಡ ಮಗಾ ತನ್ನ ತಾಯಿಯ ಮಡಿಲನ್ನು ಸೇರಿದಾಗ ಬಿಕ್ಕಿ ಬಿಕ್ಕಿ ಅಳುವಂತೆ ಅಂದು ಭೂತಾಯಿಯ ಮಣ್ಣನ್ನ ತನ್ನ ಕೈ ಮುಷ್ಟಿಯಲ್ಲಿ ಹಿಡಿದು ಬಿಕ್ಕಿ ಬಿಕ್ಕಿ ಅತ್ತಾ. ಮನಸಿಗೆ ಪಕ್ಕದಲ್ಲಿರುವ ಗಿಡಕ್ಕೆ ಹಗ್ಗದಿಂದ ನೇಣುಹಾಕಿಕೊಳ್ಳಬೇಕೆನಿಸಿತು.  ಆಕಾಶದ ಕಡೆ ಮುಖ ಮಾಡಿದಾಗ. ಬದುಕು ವಿಶಾಲವಾಗೈತಿ. ಬದುಕು ಇಷ್ಟಕ್ಕೆ ಮುಗದಿಲ್ಲ ಎಂದು ತನ್ನಲ್ಲೆ ಸಮಾದಾನ ಪಟ್ಟುಕೊಂಡ. ಒಂದು ದೃಡ ನಿರ್ದಾರಕ್ಕೆ ಬಂದವನಂತೆ ಎದ್ದುನಿಂತ ಮುಂದೆಂದು ಎಡವದ ಹಾಗೆ ಎದ್ದುನಿಂತ. ಕೈಯಲ್ಲಿ ಕುಡುಗೋಲು ಹಿಡಿದು ಕಸ ಕೀಳತೊಡಗಿದ. ‘ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂದುವಿಲ್ಲ’ ಎನ್ನುವಂತೆ ತನ್ನ ಭೂತಾಯಿಯನ್ನು ಬಿಟ್ಟು ಒಂದು ಕ್ಷಣ ಅಗಲದಂತೆ ಮೈಮುರಿದು ದುಡಿಯತೊಡಗಿದ.  ಒಣಗಿದ್ದ ನೆಲವನ್ನು ತನ್ನ ಉಸಿರಿನಿಂದ ಹಸುರಾಗಿಸಿದ.  ಹಟಕ್ಕೆ ಬಿದ್ದವನಂತೆ ತನಗೀರುವ ನಾಲ್ಕೆ ನಾಲ್ಕು ಎಕರೆಯ ಬರಾಡಾದ ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದ. ಸುತ್ತ ಮುತ್ತ ಹಳ್ಳಿಯಲ್ಲಿ ಜನ ಇದ್ದರೆ ರಾಮಪ್ಪನಂತ ರೈತ ಇರಬೇಕು ಎಂದು ಕೊಂಡಾಡ ತೋಡಗಿದರು. ತನ್ನ ಸಾಧನೆಯಿಂದ  ಉತ್ತಮ ರೈತ ಎಂಬ ಪ್ರಶಸ್ತಿ ಪಡೆದ.    ಶ್ರೀದೇವಿ. ಮ. ಗುಮ್ಮಗೋಳ

“ಸೋತು ಗೆದ್ದ ರೈತ” ಸಣ್ಣಕಥೆ,ಶ್ರೀದೇವಿ ಮ.ಗುಮ್ಮಗೋಳ ಅವರಿಂದ Read Post »

ಕಥಾಗುಚ್ಛ

ಶಕುಂತಳ ಕೆ ಬೆಳ್ಳರ್ಪಾಡಿ ಅವರ ನ್ಯಾನೊ ಕಥೆಗಳು.

ಕಥಾ ಸಂಗಾತಿ ಶಕುಂತಳ ಕೆ ಬೆಳ್ಳರ್ಪಾಡಿ ನ್ಯಾನೊ ಕಥೆಗಳು. 1.ಕಾರಣ. ಈ ನನ್ನ ಮುಖದಲ್ಲಿರುವ ಹೊಳಪಿಗೆ ಕಾರಣ ಈ ಕತ್ತಲು,ನನ್ನ ಮನದ ಅಂಧಕಾರ ಓಡಿಸಿರುವುದು ಜೋಡಿಸಿಟ್ಟ ಪುಸ್ತಕಗಳು ಜೊತೆಗೆ ನಿದ್ದೆ ಬರದಂತೆ ನನ್ನ ರೆಪ್ಪೆಗಳನ್ನು ಕಾಯುತ್ತಿರುವುದು ಒಂದು ಬಟ್ಟಲು ಕಾಫಿ. ಇದೇ ನನ್ನ ಲೋಕ.  2.ಬದುಕು ರಂಗೋಲಿ ಬಿಡಿಸುವ ಹುಡುಗಿಯ ಜೀವನ ರಂಗೋಲಿಯಷ್ಟೇ ಸುಂದರವಾಗಿರಬಹುದು ಅಂದುಕೊಳ್ಳುವಾಗಲೇ ಮನೆಯೊಳಗಿನ ಅಸಭ್ಯ ಜೋರು ಮಾತು ಜೊತೆಗೆ ಮಳೆ ನೀರು ಬಿದ್ದು ಮಣ್ಣು ಸೇರಿದ ಬಣ್ಣ ಅವಳ ಕಥೆಯನ್ನು ಸಾರಿ ಸಾರಿ ಹೇಳಿತು 3.ಮುಖವಾಡ ಬಣ್ಣ ಲೇಪಿಸಿ ಒಣಗಲಿಟ್ಟ ಮುಖವಾಡಗಳು ಮಾರಾಟವಾದರೂ ಮಾರಿದವನ ಹೊಟ್ಟೆ ಚುರುಗುಟ್ಟುತ್ತಲೇ ಇತ್ತು. ಶಕುಂತಳ ಕೆ ಬೆಳ್ಳರ್ಪಾಡಿ

ಶಕುಂತಳ ಕೆ ಬೆಳ್ಳರ್ಪಾಡಿ ಅವರ ನ್ಯಾನೊ ಕಥೆಗಳು. Read Post »

ಕಥಾಗುಚ್ಛ

“ಒಬ್ಬ” ಸಣ್ಣ ಕಥೆ ನಾಗರಾಜ ಬಿ. ನಾಯ್ಕ ಅವರಿಂದ

ಕಥಾ ಸಂಗಾತಿ ನಾಗರಾಜ ಬಿ. ನಾಯ್ಕ “ಒಬ್ಬ”  ಗುಡ್ಡದ ತುದಿಗೆ ಒಂಟಿ ಮನೆ. ಅಲ್ಲಿಂದ ಹೊರಗೆ ನೋಡಿದರೆ ಕಣ್ಣು ಮುಟ್ಟುವಷ್ಟು ಕಡಲು. ಅವನು ಆಗಾಗ ನಿಂತು ಆ ಕಡಲನ್ನು ನೋಡುವನು. ಅಲೆಗಳ ಕುಣಿತ ಅವನೊಳಗೆ ಹೊಸ ಸಂಚಲನವ ನೀಡುವುದು.  ತನಗೆ ಎಷ್ಟು ವರ್ಷ ಗೊತ್ತಿಲ್ಲ ಅವನಿಗೆ. ತನ್ನವರು ಎನ್ನುವರು ಯಾರೂ ಪರಿಚಯವಿಲ್ಲ ಅವನಿಗೆ. ಸುಮ್ಮನೆ ದುಡಿಯುವುದು, ತಿನ್ನುವುದು ಅದೊಂದೇ ಅವನ ಗುರುತು. ಎಲ್ಲರಿಗೂ ಅವನು ಬೇಕು. ಆದರೆ ಅವನು ಮಾತ್ರ ಒಂಟಿ. ಯಾವ ಹಂಗೂ ಇರದ ಬದುಕು ಅವನದ್ದು . ಒಮ್ಮೊಮ್ಮೆ ಆಕಾಶ ನೋಡುತ್ತಾ ಮಲಗುವ. ನೋಡಿದ ಆಗಸದಲ್ಲಿ ಯಾರದೋ ಮುಖ ಅವನಿಗೆ ಕಾಣುವುದು. ವಿಚಿತ್ರ ಎನಿಸುವುದು ಅವನಿಗೆ ಮೋಡಗಳಲ್ಲಿ, ಆಕಾಶದಲ್ಲಿ ಮುಖಗಳು ಕಾಣುವುದು. ಒಮ್ಮೊಮ್ಮೆ ಓಡಾಡುವ ಜನರ ನಡುವಿನ ಮುಖದ ಭಾವವನ್ನ ಅವನು ಗುರುತಿಸುವ. ಅವರಾರು ತನ್ನವರಲ್ಲ ಎನಿಸುವುದು ಅವನಿಗೆ. ವ್ಯವಹಾರ ಎನಿಸುವ ಜೀವನ ಅವನಿಗೆ ಬೇಸರ ತರಿಸುವುದು. ಆದರೂ ಅವನು ಬದುಕುವನು ಅವರೊಟ್ಟಿಗೆ. ಅವರೆಲ್ಲರೂ ಒಂಟಿ ಅಂದುಕೊಳ್ಳುವನು ಆಗಾಗ. ಆದರೆ ಅವರ ಮುಖಭಾವದಲ್ಲಿ ಅವರಾರು ಒಂಟಿ ಎನ್ನುವುದು ಇರುವುದಿಲ್ಲ ಎಂದುಕೊಂಡು ಮನೆಗೆ ಹೋದರೆ ಮಾತನಾಡಿಸುವ ಜೀವಗಳು ಅನೇಕ ಅವರಿಗೆ ಎಂದುಕೊಳ್ಳುವನು. ಆದರೆ ಅವನಿಗೆ ಯಾರಿಲ್ಲ ಮಾತನಾಡುವವರು. ಯಾರು ಇಲ್ಲದ ಮನೆಯಲ್ಲಿ ಸಾಕಿದ ಬೆಕ್ಕು, ಸಾಕಿದ ನಾಯಿ ಒಂದೆರಡು ಆಕಳು ಇವುಗಳನ್ನು ಬಿಟ್ಟರೆ ಅವನಿಗೆ ತನ್ನವರು ಎನ್ನುವರು ಯಾರು ಇಲ್ಲ. ಆದರೆ ಅವುಗಳೇ ಅವನ ಸರ್ವಸ್ವ. ಕಾಡಿನ ದಾರಿ. ದಿನಾಲು ಒಂಟಿ ಸಾಗುವವನು. ಅವನೆಂದುಕೊಂಡಂತೆ ಅವನ ಬದುಕು. ಹಸಿವೆಯಾದರೆ ತಿನ್ನುವನು ಅನ್ನವನ್ನು. ಯಾರೋ ಕೊಟ್ಟ ಹಣ್ಣನ್ನು ,ಯಾರು ಕಟ್ಟಿಕೊಟ್ಟ ರೊಟ್ಟಿಯನ್ನು. ಹಸಿವಿಗೆ ಎಂದು ಉಣ್ಣುವಾಗ ಕೊಟ್ಟ ಕರಗಳನ್ನು ಎಣಿಸುವ ಆತ ಮುಖವನ್ನ ಸ್ಮರಿಸುವ ಹಂಚಿ ತಿನ್ನುವ ತನ್ನೊಟ್ಟಿಗೆ ಬಂದ ಬೆಕ್ಕು ನಾಯಿ ದನ ಕರುಗಳ ಜೊತೆ.        ಬೀಸುವ ಗಾಳಿಗೆ ಮೈಯೊಡ್ಡಿ ಕುಳಿತಾಗ ಅವನಲ್ಲಿ ಹೊಸ ಹುರುಪು. ಮರದ ನೆರಳಿಗೆ ಎಂದು ಬಂದು ಕುಳಿತಾಗ ಹಕ್ಕಿಗಳು ಉಲಿವವು. ಸುತ್ತ ಹುಟ್ಟಿದ ಮರಗಿಡಗಳಲ್ಲಿ ಅನೇಕ ಹಕ್ಕಿಗಳು ಬಂದು ಚಿಲಿಪಿಲಿ ಎನ್ನುವವು. ತಿಂದು ಎಸೆದ ಬೀಜಗಳು ಸಸಿಯಾಗಿ ಹುಟ್ಟಿ ಮರವಾಗಿ ಬೆಳೆದು ನಿಂತು ಉಪಕರಿಸುವ ರೀತಿಗೆ ಅವನು ಸೋಲುತ್ತಾನೆ. ಎತ್ತರವಾಗಿ ಬೆಳೆದು ನಿಂತ ಮರದ ನೆರಳಿಗೆ ಕುಳಿತು ಗುಡ್ಡದ ಕೆಳಗೆ ಇರುವ ಕಡಲಲ್ಲಿ ರವಿ ಮುಳುಗುವ ವಿಹಂಗಮ ನೋಟವನ್ನು ಕಾಣುತ್ತಾನೆ. ಸೂರ್ಯ ಒಂದು ಪ್ರಶ್ನೆ ಅವನಿಗೆ. ಎಷ್ಟೆಲ್ಲಾ ಕಲಾಕೃತಿಗಳು ಅವನ ಬೆಳಕಿನ ಸೃಷ್ಟಿ ಎಂಬುದರಿತು ಹೆಮ್ಮೆ ಪಡುತ್ತಾನೆ. ಕೆಂಬಣ್ಣದ ಆಗಸದಲ್ಲಿ ಬೆಳ್ಳಕ್ಕಿಗಳ ಸಾಲೊಂದು ಓಡುವ ಸಂಭ್ರಮವ ನೋಡಿ ಅಂತರಂಗದಿ ಕರಗುತ್ತಾನೆ. ಪಯಣದ ದಿಕ್ಕುಗಳ ನೋಡಿ ಆನಂದಿಸಿ ಸುಮ್ಮನಾಗುತ್ತಾನೆ. ತನ್ನೊಳಗೆ ತಾನೇ ಪ್ರಶ್ನೆಯ ಎಳೆದುಕೊಂಡು ಎಲ್ಲೆಲ್ಲೂ ಸುತ್ತಿ ಬರುತ್ತಾನೆ. ಸಂಜೆಯ ಕತ್ತಲಿಗೆ ಗುಡ್ಡದ ಜೀರುಂಡೆಗಳ ಸದ್ದು ಕೇಳುತ್ತದೆ. ಮರಗಿಡಗಳಲ್ಲಿ ಹಕ್ಕಿ ಮಲಗಿರುವ ಮೌನ ಕತ್ತಲೆಗೆ ಒರಗಿ ನಿದ್ದಿಸುವ ಕೌತುಕಕ್ಕೆ ಬೆರಗಾಗುತ್ತಾನೆ. ಕತ್ತಲೆಯ ಮಧ್ಯೆ ಬೆಳಗುವ ಚಂದಿರನ ಕಂಡು ನಸು ನಗುತ್ತಾನೆ. ನನ್ನಂತೆ ನೀನು ಸುಖಿ ಎನ್ನುತ್ತಾನೆ. ಅಚ್ಚರಿಗಳ ಆಶಾ ಗೋಪುರ ಅವನದಾಗುತ್ತದೆ. ತಾನು ಒಬ್ಬನೇ ಎನ್ನುವ ಅವನಲ್ಲದ ಭಾವ ಅವನನ್ನು ತಾಕದೇ ಮರೆಯಾಗುತ್ತದೆ. ಹಸಿವೆ, ನಿದ್ದೆಯ ದಾಟಿ ಬೆಳಕು ಹರಿಯುತ್ತದೆ. ಹೊಸ ಬೆಳಕಿನ ಸೃಷ್ಟಿಗೆ ಕಾದು ಎದ್ದು ಹೊರಡುತ್ತಾನೆ. ಬಾಗಿಲಿಲ್ಲದ ಮನೆಯ ಬಿಟ್ಟು. ಸಾಕಿದ ಬೆಕ್ಕು ಬಂದು ಮ್ಯಾಂವ್ ಎಂದು ಕಳುಹಿಸಿ ಹೋಗುತ್ತದೆ. ಊರ ದಾರಿಗಳಲ್ಲಿ ಸಾಗುವಾಗ ಮಂದಹಾಸ ಬೀರುತ್ತ ನಡೆವ. ನಡೆವಾಗ ಎದುರಾದ ಯಾರೋ ಹೆಸರು ಹೇಳಿ ಕರೆಯುವರು. ಓ ಎಂದು ನಾಲ್ಕು ಮಾತು ಆಡಿ ಹೋಗಿಬಿಡುವ. ಕರೆದ ಮನೆಯ ಅಂಗಳದಲ್ಲಿ ಕುಳಿತು ಕೊಟ್ಟ ಕೆಲಸವ ಮಾಡಿ ಹೊರಡುವವ. ಅವನ ಕೆಲಸದ ಚಾಕ ಚಕ್ಯತೆ ಒಂದು ಕುಶಲತೆ ಎನಿಸುತ್ತಿತ್ತು. ಅವನು ನೆಟ್ಟ ಗಿಡ ತಾನೇ ತಾನಾಗಿ ಚಿಗುರು ಬಿಡುತ್ತಿತ್ತು. ಹಸಿರು ಅವನ ಕೈಯಾರೆ ಬೆಳೆದು ಇಳೆಯ ಹಸಿರಿಗೊಂದು ಹೆಸರಾಗುತ್ತಿತ್ತು. ಆತ್ಮ ಅಭಿಮಾನ ಗೌರವಕ್ಕೆ ಋಣಿ ಎಂದುಕೊಳ್ಳುತ್ತಿದ್ದ. ಅವನೇ ಬೆಳೆಸಿ ಉಪಕರಿಸಿದ ಮರಗಳು ಬೆಳೆದು ಊರ ತುಂಬಾ ಹರಡಿದ್ದವು.              ಕಾಲದ ಕನ್ನಡಿಗೆ ಹಲವು ಗುರುತು. ಅವನು ಆಗಾಗ ಅಂದುಕೊಳ್ಳುವ. ಅದಾರೋ ಕೊಟ್ಟ ತಿಂಡಿ ತಿಂದು ಅಲ್ಲಿ ಇಲ್ಲಿ ಬೆಳೆದು ದೊಡ್ಡವನಾದ ಮೇಲೆ ಈ ಊರಿಗೆ ಬಂದು ನಿಂತವ. ತನ್ನವರಲ್ಲದ ಜನರ ನಡುವೆ ಜಾತ್ರೆಗೆಂದು ಬಣ್ಣ ತುಂಬಲೆಂದು ಬಂದವ. ಅದೇನೋ ಖುಷಿ ಅನಿಸಿ ಈ ರೀತಿ ದಿನ ಒಂದೊಂದು ಊರು ಅಲೆಯುವುದು ಸಾಕಾಗಿ ಇಲ್ಲೇ ಉಳಿದರೆ ಸಾಕು ಎಂದು ಉಳಿದವ. ದೂರದ ಗುಡ್ಡದಂಚಿನ ಮರದ ಕೆಳಗೆ ಮಲಗಿ ಹಲವು ದಿನ ಕಳೆದವ. ಒಂಟಿತನ ಕಾಡಲಿಲ್ಲ ಅವನಿಗೆ. ಏಕೆಂದರೆ ಒಂಟಿಯಾಗಿ ಬೆಳೆದವನಿಗೆ ಅದು ಕರಗತ. ಈಗೀಗ ನಗುವುದು ಕಲಿತಿದ್ದ. ತನ್ನಂತೆ ಇದ್ದ ಇತರರ ನೆನಪಿಸಿಕೊಂಡ. ಅವರೆಲ್ಲಾ ಎಲ್ಲಿ ತಲುಪಿರಬಹುದು ಎಂದು ಯೋಚಿಸಿದ. ತಾನೇ ಸುಖಿ ಎಂದುಕೊಂಡ. ಹಸಿವೆಯಾದಾಗ ಗುಡ್ಡದಿಂದ ಇಳಿದು ಬಂದು ಊರ ದಾರಿ ಹಿಡಿದ. ಯಾರೋ ಊಟ ಕೊಟ್ಟರು. ಕೆಲಸ ಕೊಟ್ಟರು. ಒಂಟಿಯಾದರೂ ಜೀವನ ಸಾಗಿತು. ಅದೊಂದು ದಿನ ವಯಸ್ಸಾದ ಅಜ್ಜಿಯೊಬ್ಬಳ ಮನೆಗೆ ಹೋಗಿದ್ದ. ಇದ್ದ ಒಬ್ಬ ಮಗ ಬಾರದ ನೋವು ಅಜ್ಜಿಗೆ ಕಾಡಿತ್ತು. ತುಂಬಾ ಮಾತನಾಡಿದ ಅಜ್ಜಿ ಜೊತೆಗೆ. ಅಜ್ಜಿಗೆ ಮಗ ಸಿಕ್ಕಂತಾಯಿತು. ಅವನೂ ಖುಷಿ ಪಟ್ಟ. ಈ ಲೋಕದ ಮಾಯೆಗೆ ಬೆರಗಾದ. ಕಾಲದ ಕರೆಗಂಟೆಯಲ್ಲಿ ಕರಗಿಹೋದ ನೋವುಗಳ ಎಣಿಸಿದ. ಅವನ ಮನೆಗೆ ಕಿಟಕಿ ಬಾಗಿಲು ಯಾವುದು ಇರಲಿಲ್ಲ. ಚಪ್ಪರದೊಳಗಿನ ಬದುಕಿನ ಜೀವಂತಿಕೆಗೆ ಸಾಕ್ಷಿಯಾಗಿದ್ದ. ಹತ್ತಾರು ವರ್ಷಗಳ ಕಾಲ ಉಳಿದ. ಈಗ ಅವನಿಗೆ ಊರಿನ ಜನರ ನಂಟು ಹೆಚ್ಚಾಗಿತ್ತು ‌. ಕರೆವವರು ಬಹಳ ಅವನಿಗೆ. ಅದೊಂದು ದಿನ ಆ ಊರಿನ ಜಾತ್ರೆ ನಡೆಯುತ್ತಿತ್ತು. ಅವನು ಜಾತ್ರೆಗೆ ಹೋದ‌. ಕಂಡ ಮುಖಗಳಲ್ಲಿ ಬದುಕಿನ ಭಾವಗಳ ಹುಡುಕಿದ. ಅರೇ ಹೌದಲ್ಲ ಇದೇ ನನ್ನ ಬದುಕಾಗಿತ್ತು. ಜಾತ್ರೆಗೆ ಬಂದ ಎಲ್ಲರೂ ಸೇರಿ ಸಂಭ್ರಮದಿಂದ ನಡೆವಾಗ ಹೆಮ್ಮೆ ಎನಿಸುತ್ತಿತ್ತು. ಅದೆಷ್ಟು ಜಾತ್ರೆಗಳ ಸುತ್ತಿದ್ದ ಅವನು. ಮತ್ತೆ ಅದೇ ಬದುಕು ಅವನ ಸುತ್ತಿ ಕೊಂಡಿತು. ಜಾತ್ರೆ ಇದ್ದಷ್ಟು ದಿನ ಅಲ್ಲೇ ಉಳಿದ. ಜಾತ್ರೆ ಮುಗಿಯಿತು. ಬಂದವರು ಹೊರಟರು ಒಂಟಿಯಾಗಿ. ಅವನೆಂದುಕೊಂಡ ಇವರೊಡನೆ ಹೊರಟರೆ ಹೇಗೆ ಅಂದುಕೊಂಡ. ಆ ಗುಡ್ಡದ ಗುಡಿಸಲೇ ವಾಸಿ ಎನಿಸಿ ಮರಳಿದ…….. ಇರುವವರೆಗೆ ಒಬ್ಬನಾಗಿಯೇ ಉಳಿದ. ಊರಿಗೆ ಮರಳಿದ ಅವನ ಕಂಡವರಿಗೆ ಖುಷಿ ಎನಿಸಿತು. ತಾನೇ ಕಟ್ಟಿದ ಗುಡಿಸಲಿಗೆ ಬಂದು ಕುಳಿತು ಹೊರಗೆ ನೋಡಿದ. ಅಸ್ತದ ವಿಶಾಲ ನೋಟ ಅಚ್ಚರಿಯೊಳಗಿನ ಬಂಧುತ್ವ ಎನಿಸಿತು. ಜಗದ ನಿಯಮಕೆ ಎಲ್ಲವೂ ವಾಸ್ತವದ ಪ್ರತಿಬಿಂಬಗಳು. ನನ್ನ ಉಸಿರು ಕೂಡಾ ಹಾಗೆ ಅಂದುಕೊಂಡ. ಬದುಕಿದ. ಎಲ್ಲರೊಳಗೆ ನಾನು ಒಬ್ಬ ಎಂದು ಅಂದುಕೊಂಡ. ಸಾಗುವ ಬದುಕಿನ ಚಿತ್ರದಲ್ಲಿ ಸಾಗಿ ಹೋದ ಒಬ್ಬನಾಗಿ. ನಾಗರಾಜ ಬಿ. ನಾಯ್ಕ.

“ಒಬ್ಬ” ಸಣ್ಣ ಕಥೆ ನಾಗರಾಜ ಬಿ. ನಾಯ್ಕ ಅವರಿಂದ Read Post »

ಕಥಾಗುಚ್ಛ

“ತಪ್ಪು” ಸಣ್ಣ ಕಥೆ, ಚಂದ್ರಿಕಾ ನಾಗರಾಜ್ ಹಿರಿಯಡಕ

ಕಥಾ ಸಂಗಾತಿ ಚಂದ್ರಿಕಾ ನಾಗರಾಜ್ ಹಿರಿಯಡಕ “ತಪ್ಪು” ಕೈಯಲ್ಲಿ ಹಿಡಿದಿದ್ದ ಚಾಕುವಿನಿಂದ ಒಂದೊಂದೇ ಹನಿ ರಕ್ತ ನೆಲಕ್ಕೆ ಬೀಳುತ್ತಿತ್ತು.‌ ಒಂದು ನೊಣ ಬಂದು  ರಕ್ತವನ್ನೊಮ್ಮೆ ಮೂಸಿ ಹಾರಿತು. ಸ್ವಲ್ಪ ಸಮಯದ ಬಳಿಕ ಮತ್ತೆ ನಾಲ್ಕು ನೊಣಗಳು ರಕ್ತದ ಮೇಲೆ ಕುಳಿತು, ಹಾರಿ, ಮತ್ತೆ ಕುಳಿತು ನೆಕ್ಕುವ ಕಾರ್ಯದಲ್ಲಿ ನಿರತವಾದವು.‘ತಪ್ಪು ಮಾಡಿ ಬಿಟ್ನಾ?’ ಸುತ್ತ ಕತ್ತಲೆ ಕವಿದಂತಾಯಿತು.ಅಮ್ಮನ ಹತ್ರ ಮುದ್ದೆ, ನಾಟಿ ಕೋಳಿ ಸಾರು ಮಾಡು ಅಂದಿದ್ದೆ…ಸಂಜೆ ಬರ್ತಾ ಹೂವ ತಂದು ಬಿಡು…ಶುಕ್ರವಾರಲಾ ದೇವ್ರಿಗೆ ಹಾಕೋಕೆ  ಅಂದಿದ್ಲು…ಅದಕ್ಕೂ ಮೊದಲು ಸುಮಾ ಆಂಜನೇಯ ಗುಡಿ ಹತ್ರ ಸಿಕ್ತೀನಿ ಅಂದಿದ್ಲು…ಎಲ್ಲವೂ ಕಣ್ಣೆದುರು ಒಂದು ಕ್ಷಣ ತೇಲಿ ಹೋದವು.ಆವತ್ತೇನಾಗಿತ್ತು….ಅಮ್ಮ, ಏಳಮ್ಮ…ಮೈ ಕೈ ಸುಡ್ತಾ ಇದ್ಯಲಾ…ತಾಯಿಯ ಹಣೆ ಮುಟ್ಟಿದ ರಾಘು ಸಣ್ಣಗೆ ಕಂಪಿಸಿದ. ಭಯಗೊಂಡ. ಯಾವಾಗಲೂ ಲವಲವಿಕೆಯಿಂದ, ಮನೆ ಕೆಲಸ, ಜೊತೆ ಸಾಹುಕಾರರ ಮನೆ ಕೆಲಸ ಮಾಡಿಕೊಂಡಿದ್ದ ತಾಯಿ ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದರೆ ಮಗನಿಗೆ ಹೇಗಾಗಬೇಡ…ಊರಿನ ಆಸ್ಪತ್ರೆಗೆ ತೋರಿಸಿದಾಗ ಹೊಟ್ಟೆಯಲ್ಲಿ ಬೆಳೆದಿರುವ ಗಡ್ಡೆ ಬಗ್ಗೆ…ಆಪರೇಷನ್ ಮಾಡಿಸಲು ನಗರದ ಆಸ್ಪತ್ರೆಯನ್ನು ಸೂಚಿಸಿದರು.ಪಕ್ಕದ ಮನೆಯರೆಲ್ಲ ಮನೆಗೆ ಬಂದು ನೂರು ಮಾತಾಡಿದರು. ಮಗನಿಗೆ ಕಷ್ಟ ಕೊಡಬಾರದೆಂದು ತಾಯಿ ಇಷ್ಟು ವರ್ಷಗಳ ಕಾಲ ಹೊಟ್ಟೆ ನೋವು ಸಹಿಸಿಕೊಂಡಿದ್ದರ ಮುಂದೆ ಲಕ್ಷಾಂತರ ಖರ್ಚು ದೊಡ್ಡದಾಗಿ ಕಾಣಲಿಲ್ಲ ರಾಘುಗೆ. ಆದ್ರೆ, ದುಡ್ಡಿಗಾಗಿ ಏನ್ ಮಾಡೋದು?ತಾನು ಕೆಲಸ ಮಾಡುತ್ತಿದ್ದ ತೋಟದ ಒಡೆಯನ ಮುಂದೆ ಹೋಗಿ ಕೈಯೊಡ್ಡಿದ.‘ಅಷ್ಟೊಂದ್ ದುಡ್ಡು ಕೊಡೋಕಾಗಲ್ಲಯ್ಯ…’ ಎಂದು ಬಿಟ್ಟಿದ್ದರು. ಸಾಲ ಕೊಡೋರು ಯಾರು ಸಿಕ್ಕಿರಲಿಲ್ಲ. ಆಗಲೇ ರಾಘು ತಪ್ಪು ಮಾಡಿದ್ದ. ಆ ಕ್ಷಣಕ್ಕೆ ಅವನಿಗೆ ಸರಿ ಕಂಡಿದ್ದು ಅದೊಂದೆ.‌ಅಂದೊಂದು ದಿನ ಧನಿಯ ಪತ್ನಿಯ ಚಿನ್ನದ ಸರ ಕದ್ದು ಬಿಟ್ಟ. ಅದ್ಯಾರಲ್ಲೋ ಅಡವಿಟ್ಟು ಹಣ ಪಡೆದು ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದ. ಅತ್ತ ಆಪರೇಷನ್ ನಡೆಯುತ್ತಿದ್ದರೆ, ಇತ್ತ ರಾಘುವೇ ಚಿನ್ನ ಕದ್ದಿರುವುದೆಂದು ಗೊತ್ತಾಗಿ ಕೈಗೆ ಕೋಳ ಹಾಕಲಾಯಿತು. **** ಅವತ್ ನಾನು ಆ ತಪ್ಪು ಮಾಡದೇ ಹೋಗಿದ್ರೆ ಅಮ್ಮನ ಉಳಿಸಿಕೊಳ್ಳಲಾಗ್ತಿತ್ತೆ? ರಾಘು ಕಣ್ಣಿಂದ ಒಂದು ಹನಿ ಕಣ್ಣೀರು ಜಾರಿ ನೆಲಕ್ಕೆ ಬಿದ್ದಿದ್ದ ರಕ್ತದ ಹನಿಗಳ ಜೊತೆಯಾಯಿತು. ಈಗ ರಕ್ತದ ಮೇಲೆ ನೊಣಗಳು ಮಾತ್ರವಲ್ಲ ಇರುವೆಗಳ ಸಂಚಾರವೂ ಶುರುವಾಗಿತ್ತು. ಕೈ ಮೇಲೆ ಹಾರಾಡುತ್ತಿದ್ದ ನೊಣಗಳು ರಾಘುವಿಗೆ ಹಿಂಸೆ ಎನಿಸುತ್ತಿರಲಿಲ್ಲ. ಮನಸ್ಸಿನೊಳಗಿನ ಸಾವಿರ ಯೋಚನೆಗಳು ಹೊರಪ್ರಪಂಚದ ಚಲನ ವಲನಗಳ ಮೇಲೆ ನಿಗಾ ಇಡಲು ಅವಕಾಶ ಕೊಡಬಲ್ಲುದೇ…ರಾಘು ತಾಯಿ ಚೇತರಿಸಿಕೊಳ್ಳುತ್ತಿದ್ದಂತೆ ಮಗ ಜೈಲು ಸೇರಿರುವ ವಿಚಾರ ತಿಳಿಯಿತು. ತನಗಾಗಿ ಮಗ ಮಾಡಿದ ತಪ್ಪಿಗೆ ಸಂಕಟ ಪಟ್ಟ ಆಕೆ ಧನಿಯ ಮುಂದೆ ಅಂಗಾಲಾಚಿದಳು. ಆಕೆಯ ದುಃಖ ಅರಿತ ಧನಿಯ ಪತ್ನಿ ಪತಿಯಲ್ಲಿ ಹೇಳಿ ರಾಘುವನ್ನು ಸೆರೆ ಮನೆಯಿಂದ ಹೊರ ಬರುವಂತೆ ಮಾಡಿದಳು.***ಕೆಲಸ ಕೊಟ್ಟ ಮನೆಗೆ ಕನ್ನ ಹಾಕಿದವನಿಗೆ ಮತ್ತೆ ಕೆಲಸ ಕೊಡಲೊಪ್ಪಲಿಲ್ಲ ತೋಟದ ಯಜಮಾನ. ಕಂಗೆಟ್ಟು ಹೋದ ರಾಘುಗೆ ದಾರಿ ತೋರಿಸಿದ್ದು, ಮಣ್ಣು. ಹಿತ್ತಲಿನಲ್ಲಿದ್ದ ಪುಟ್ಟ ಜಾಗದಲ್ಲಿ ಬಸಳೆ, ಹರಿವೆ ನಲಿದವು. ತೊಂಡೆ ಕಾಯಿ ಚಪ್ಪರ ನಕ್ಕಿತು. ಬೆಂಡೆ ಕಾಯಿ, ಅಲಸಂಡೆ ಕೈ ಕುಲುಕಿದವು. ರಾಘು ಚೆಂದದ ಜೀವನ ಆರಂಭಿಸಿದ್ದ. ಮಾವನ ಮಗಳು ಸುಮಾ ಬದುಕ ಪಯಣಕೆ ಜೊತೆಯಾಗಲು‌ ಅಣಿಯಾದಳು. ಆದರೆ, ಅವರ ಕನಸುಗಳಿಗೆ ವಿಧಿ ಹರಸಲಿಲ್ಲ…***ತಾಯಿಗಾಗಿ ರಾಘು ಕದ್ದಿದ್ದ…ಆದರೆ, ಕೆಲವರು ಆತನ ಆ ತಪ್ಪನ್ನು ಕೆಣಕುತ್ತಿದ್ದರು. ಅವರಲ್ಲಿ ಮಂಜು, ಭದ್ರ ಕೂಡ ಇಬ್ಬರು.ಅಂಗಡಿಗೆ ಬಂದವರೆ ‘ಕಳ್ಳ, ಇದಕ್ಕೆಷ್ಟೋ, ಅದಕ್ಕೆಷ್ಟೋ’, ‘ಕಳ್ಳ ಎಲ್ಲಿಂದ ಕದ್ಕೊಂಡ್ ಬಂದ್ಯೋ ಸೊಪ್ಪನ್ನ’ ಎಂದು ದಿನ ನಿತ್ಯ ಹಂಗಿಸುತ್ತಿದ್ದರು. ರಾಘು ತಾಳ್ಮೆಯಿಂದಲೇ ಇದ್ದ.‌ ಆದ್ರೆ, ಅವತ್ತು ಅದೇನಾಯ್ತೋ ಬುದ್ಧಿಯ ಮೇಲೆ ಕೋಪಾಗ್ನಿ ಉರಿಯಿತು.‘ಕಳ್ಳಂಗೆ ಮದ್ವೆ ಅಂತೆ…ಹುಡ್ಗಿ ಕಳ್ಳಿನೇ ಇರ್ಬೇಕು…ಅಥವಾ…’ ಮಂಜು, ಭದ್ರನಾ ನಗು ಕೆರಳಿಸಿತು.    ಹಲ್ಲು ಕಚ್ಚಿ ನಿಂತ. ‘ಕಳ್ಳ ಯಾಕೋ ಮಾತಾಡ್ತಿಲ್ಲ’ ರಾಘುಗೆ ತಡೆಯಲಾಗಲಿಲ್ಲ. ಅಲ್ಲೇ ಇದ್ದ ಚಾಕುವನ್ನು ಹಿಡಿದ. ರಾಘುವಿನ ಅನಿರೀಕ್ಷಿತ ದಾಳಿಗೆ ಭದ್ರ, ಮಂಜು ತತ್ತರಿಸಿ ಹೋದರು. ನೆಲಕ್ಕುರುಳಿದ ಇಬ್ಬರ ಮೇಲೂ ರಾಘು ಕೈಯಲ್ಲಿದ್ದ ಚಾಕು ತನಗಿಷ್ಟ ಬಂದಹಾಗೆ ಇರಿದು ಬಿಟ್ಟಿತ್ತು.‌ ಒದ್ದಾಡಿ ಒದ್ದಾಡಿ ಇಬ್ಬರು ಉಸಿರು ಚೆಲ್ಲಿದರು.ರಾಘು ಕುಸಿದು ಕುಳಿತ…ಇಬ್ಬರ ಹೆಣಗಳ ನಡುವೆ…ಕೈಯಲ್ಲಿ ರಕ್ತ ಸಿಕ್ತ ಚಾಕು…ಎದೆಯೊಳಗೆ ಭಾರ!ದೊಡ್ಡ ತಪ್ಪು ಮಾಡ್ದೆ…ಕಳ್ಳ‌‌…ಅಲ್ಲ…ಕೊಲೆಗಾರ ಆದ್ನ…..ರಾಘು ಎದ್ದ…ಓಡಲಾರಂಭಿಸಿದ…ಅಮ್ಮ…ಸುಮಾ…ಕಣ್ಣ ಮುಂದೆ ಹಾದು ಹೋದಂತಾಯಿತು. ರಾಘು ಓಡುತ್ತಿದ್ದ. ಕೈಯಲ್ಲಿದ್ದ ಚಾಕು ಎಸೆದ. ದುಃಖದ ಸಂಕೇತವಾಗಿ ಕಣ್ಣಿಂದ ಜಾರುತ್ತಿದ್ದ  ನೀರನ್ನು ತೋಳಿನಿಂದ ಒರೆಸಿಕೊಳ್ಳುತ್ತಾ ಓಡುತ್ತಿದ್ದ. ಚಂದ್ರಿಕಾ ನಾಗರಾಜ್ ಹಿರಿಯಡಕ

“ತಪ್ಪು” ಸಣ್ಣ ಕಥೆ, ಚಂದ್ರಿಕಾ ನಾಗರಾಜ್ ಹಿರಿಯಡಕ Read Post »

ಕಥಾಗುಚ್ಛ

“ಕ್ಷಮೆ” ಸುಮತಿ ಪಿ ಅವರ ಸಣ್ಣ ಕಥೆ

ಕಥಾ ಸಂಗಾತಿ ಸುಮತಿ ಪಿ “ಕ್ಷಮೆ” ಅಂದು ಕೋಮಲ ಅದೆಷ್ಟು ಬೇಡಿಕೊಂಡರೂ ನಾನು ಅವಳಿಗೆ ತವರಿಗೆ ಹೋಗುವುದಕ್ಕೆ ಒಪ್ಪಿಗೆ ನೀಡದೇ ತಪ್ಪು ಮಾಡಿದೆನಲ್ಲ!!!. ಪಾಪ! ಕೋಮಲ ತವರಿಗೆ ಹೋಗಬೇಕೆಂಬ ಹಿರಿದಾಸೆಯನ್ನು ಇಟ್ಟುಕೊಂಡಿದ್ದಳು. ಅಂದು ಮಾವಯ್ಯನವರ ಬಾಯಿಯಿಂದ ತಪ್ಪಿ ಬಂದ ಒಂದೇ ಒಂದು ಮಾತಿನಿಂದಾಗಿ ಸಿಟ್ಟುಗೊಂಡಂತಹ ನಾನು ನಿನಗೆ ತವರು ಮನೆ ಬೇಕಾ ? ಗಂಡನ ಮನೆ ಬೇಕಾ?..ಎರಡರಲ್ಲಿ ಒಂದನ್ನು ನೀನೇ ಆರಿಸಿಕೊ…ಎಂದು ಗಟ್ಟಿಯಾಗಿ ಹೇಳಿದಾಗ, ಹೆಣ್ಣಿಗೆ ಮದುವೆಯಾದ ಮೇಲೆ ಗಂಡನ ಮನೆಯೇ ಸರ್ವಸ್ವವೆಂದರಿತ ಕೋಮಲ, ಕಣ್ಣೀರು ಹಾಕುತ್ತಾ ಹಿಂತಿರುಗಿ ನೋಡದೆ ನನ್ನ ಹಿಂದೆ ಬಂದಿದ್ದಾಗಲೂ,ನಾನು ಅವಳ ಮನಸ್ಸನ್ನು ಅರಿಯದೆ ಹೋದೆನಲ್ಲ!!!. ಪಾಪ ಅವಳ ತಂದೆ ಇಹಲೋಕ ತ್ಯಜಿಸಿದಾಗಲೂ ನನ್ನ ಅನುಮತಿ ಸಿಗಲಾರದೆಂದು ತವರಿಗೆ ಹೋಗದೆ, ಗಂಡನೇ ಸರ್ವಸ್ವವೆಂದು ಗಂಡನಿಗಾಗಿ, ತನ್ನಿಬ್ಬರು ಮಕ್ಕಳಿಗಾಗಿ ನೋವನ್ನೆಲ್ಲ ನುಂಗಿ, ತನ್ನ ಮಕ್ಕಳು ಗಂಡನಿಗಾಗಿ ಜೀವನವಿಡೀ ದುಡಿದು,ಪ್ರಾಣವನ್ನೇ ತ್ಯಜಿಸಿದಳಲ್ಲ! ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಅಂದು ಅವಳು “ಒಂದು ಬಾರಿ ನಮ್ಮಪ್ಪನನ್ನು ಕ್ಷಮಿಸಿ ಬಿಡಿರಿ”ಎಂದು ಗೋಗರೆದು ಕೇಳಿದಾಗಲೂ ನಾನು, ಅದೆಂಥ ಕಠೋರ ಮನಸ್ಸಿನವನಾಗಿದ್ದೆ. ಅಂದು ಅವಳನ್ನು ಸಮಾಧಾನಿಸಿ, ನನ್ನ ಸಿಟ್ಟು ಕಡಿಮೆ ಮಾಡಿ, ಅವಳೊಂದಿಗೆ ತವರಿಗೆ ಹೋಗಬೇಕಿತ್ತು.ಆದರೆ ನನ್ನ ಅಹಂ ನನಗೆ ಹೆಚ್ಚಾಗಿತ್ತು. ಕ್ಷಮೆ ಎನ್ನುವ ಶಬ್ದ ಕೇಳಿದಾಗಲೇ ನನಗೆ ಸಿಟ್ಟು ನೆತ್ತಿಗೇರುತ್ತಿತ್ತು. ಆದರೆ ನನ್ನ ಕೋಮಲ ಎಲ್ಲವನ್ನು ಸಹಿಸಿ, “ಈ ಗಂಡಸರೇ ಹೀಗೆ” ಎಂದು ಗೊಣಗುತ್ತಿದ್ದರೂ, ನನ್ನೊಂದಿಗೆ ಹೊಂದಿಕೊಂಡು ಹೋಗುತ್ತಿದ್ದಳು. ಆ ನೆನಪು ಇಂದಿಗೂ ನನ್ನನ್ನು  ಸೂಜಿಯ ಮೊನೆಯಂತೆ ಚುಚ್ಚುತ್ತನೋಯಿಸುತ್ತಿದೆ. ರಾಮರಾಯರು ಆ ಹಳ್ಳಿಯಲ್ಲಿ ಗುತ್ತಿನ ಮನೆಯ ಗುರಿಕಾರರಾಗಿದ್ದರು. ಅವರ ಹಿರಿಯ ಮಗಳೇ ಕೋಮಲ.ಕೋಮಲಳನ್ನು ಮೆಚ್ಚಿ ಮದುವೆಯಾಗಿದ್ದ ಕೀರ್ತನ ರಾಮರಾಯರ ಹಿರಿಯಳಿಯನಾಗಿದ್ದ. ರಾಮರಾಯರಿಗೆ ಮತ್ತಿಬ್ಬರು ಹೆಣ್ಣು ಮಕ್ಕಳಿದ್ದರು. ರಾಮರಾಯರ ಹೆಂಡತಿ ಮೊದಲೇ ಮರಣ ಹೊಂದಿದ್ದರಿಂದ, ಹಿರಿಯ ಮಗಳಾದ ಕೋಮಲ ತನ ಇಬ್ಬರು ತಂಗಿಯರಿಗೆ ಅಮ್ಮನ ಸ್ಥಾನದಲ್ಲಿ ಇದ್ದುಕೊಂಡು, ಒಳ್ಳೆಯ ಸಂಸ್ಕಾರವನ್ನು ನೀಡಿದ್ದಳು. ಗುತ್ತಿನ ಮನೆಯವರಾದ್ದರಿಂದ ಊರಿನ ನಾಲ್ಕು ಜನರಿಗೆ ನೀತಿ ಮಾತನ್ನು ಹೇಳುವ ಮನೆತನದಲ್ಲಿ ಯಾವುದೇ ಕೆಟ್ಟ ನಡವಳಿಕೆಗಳು ನಡೆಯದಂತೆ ಬಹಳ ಎಚ್ಚರಿಕೆಯಿಂದ ರಾಮರಾಯರು ನನ್ನ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿದ್ದರು. ಮದುವೆಯಾದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕೋಮಲ ಆಗಾಗ ತವರಿಗೆ ಹೋಗಿ ತನ್ನಿಬ್ಬರು ತಂಗಿಯಂದಿರಿಗೆ ಎಚ್ಚರಿಕೆಯ ಮಾತನ್ನು ಹೇಳುತ್ತಾ, ಸಲಹೆ ಸೂಚನೆಗಳನ್ನು ನೀಡುತ್ತಾ, ತಾಯಿಯ ಸ್ಥಾನದ ತನ್ನ ಕರ್ತವ್ಯವನ್ನು ನೆರವೇರಿಸುತ್ತಾ, ತವರು ಮನೆ ಹಾಗೂ ಗಂಡನ ಮನೆ ಎರಡೂ ಮನೆಯಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಳು. ಮೂರು ನಾಲ್ಕು ವರ್ಷಗಳಲ್ಲಿ ಕೋಮಲಳ ತಂಗಿಯಂದಿರಿಗೆ ಮದುವೆಯಾಯಿತು. ಇಬ್ಬರ ಗಂಡಂದಿರು ಒಳ್ಳೆಯ ಸ್ಥಿತಿವಂತರಾಗಿದ್ದರು. ಹಾಗೆ ನೋಡಿದರೆ ಕೋಮಲಳ ಗಂಡ ಕೀರ್ತನ್ ನಿಗೆ ಗುಮಾಸ್ತ ಕೆಲಸವನ್ನು ಬಿಟ್ಟರೆ,  ಆಸ್ತಿ ಪಾಸ್ತಿ ಏನೂ ಇರಲಿಲ್ಲ.ಅಂದಿನಿಂದ ಕೀರ್ತನ ನ ಮನೆಯಲ್ಲಿ ಇರುಸು ಮುರುಸು ಪ್ರಾರಂಭವಾಯಿತು . ಇದಕ್ಕೆ ಮುಖ್ಯ ಕಾರಣ ಕೀರ್ತನನ ಮನಸಲ್ಲಿದ್ದ ಕೀಳರಿಮೆ. ಮಾವ ಕರೆದಾಗಲಿಲ್ಲ ಕೋಮಲಳೊಂದಿಗೆ ಹೋಗುತ್ತಿದ್ದ ಕೀರ್ತನ ಇದೀಗ ಹೋಗುವುದನ್ನು ಕಡಿಮೆ ಮಾಡತೊಡಗಿದ. ಕೋಮಲ ಒತ್ತಾಯಿಸಿದರೂ, ನೀನು ಹೋಗಿ ಬಾ ನನಗೆ ಕೆಲಸ ಇದೆ ಎಂದು ಅವಳೊಬ್ಬಳನ್ನೇ ಕಳುಹಿಸುತ್ತಿದ್ದ. ಮಕ್ಕಳು “ಅಪ್ಪಾ ನೀನೂ ಬಾ” ಎಂದು ಹಠ ಮಾಡಿ ಕರೆದರೆ ಏನು ಮಾಡಲಾಗದೆ ಮಕ್ಕಳೊಂದಿಗೆ ಹೋಗಿ ಅವರನ್ನು ಅಲ್ಲಿ ಬಿಟ್ಟು, ತಾನು ರಾತ್ರಿ ಉಳಿದುಕೊಳ್ಳದೆ ಹಿಂದಿರುಗಿ ಬರುತ್ತಿದ್ದ. ಅದೊಂದು ದಿನ ಕೋಮಲಳ ಮನೆಯಲ್ಲಿ ಪೂಜೆ ನಡೆಯುವುದಿತ್ತು. ಕೋಮಲ ಈ ಬಾರಿ ಗಂಡ ಕೀರ್ತನನಿಗೆ ನೀವು ಬರಲೇಬೇಕೆಂದು ಹಠ ಹಿಡಿದಳು.“ನೀನು ಮಕ್ಕಳು ಹೋಗಿ ಬನ್ನಿ “ಎಂದಾಗ ಕೇಳಿಸದೆ ಒತ್ತಾಯಪೂರ್ವಕವಾಗಿ ಗಂಡನನ್ನು ಕರೆದುಕೊಂಡು ಮಕ್ಕಳ ಜೊತೆಗೆ ಹೊರಟಳು. ಆ ದಿನ  ತನ್ನ ಮಾವ ಉಳಿದಿಬ್ಬರು ಅಳಿಯಂದಿರಿಗೆ ಕೊಟ್ಟಷ್ಟು ಗೌರವ ಹಿರಿಯ ಅಳಿಯನಾದ ನನಗೆ ಕೊಡುತ್ತಿಲ್ಲ ಎಂದು ಕೋಪಗೊಂಡು ಕೀರ್ತನ್  ಜಗಳ ಮಾಡಿಕೊಂಡು, ಊಟವನ್ನೂ ಮಾಡದೆ ಹೊರಡಲನುವಾದಾಗ, ಕೋಮಲ ನಮ್ಮ ತಂದೆಯವರಿಗೆ ಪ್ರಾಯವಾಗಿದೆ ಏನೋ ತಪ್ಪಿ ಬಾಯಿಂದ ಮಾತು ಬಂದಿರಬಹುದು ಕಣ್ರಿ. ಅದನ್ನೇ ಏಕೆ ದೊಡ್ಡದು ಮಾಡುತ್ತೀರಾ. ಅಪ್ಪನ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ ಹೋಗಬೇಡಿ, ಊಟ ಮಾಡಿ ಒಟ್ಟಿಗೆ ಹೋಗೋಣವಂತೆ ಎಂದಾಗ, ಇಲ್ಲ ಕಣೇ ನನಗೆ ಅನುಭವಿಸಿದ್ದೆ ಬೇಕಾದಷ್ಟು ಆಯಿತು ಈ ಮನೆಯ ಊಟ ಯಾರಿಗೆ ಬೇಕಾಗಿದೆ? “ನಿನಗೆ ತವರು ಮನೆ ಹೆಚ್ಚೊ ಗಂಡನ ಮನೆ ಹೆಚ್ಚೊ ನಿನ್ನ ನಿರ್ಧಾರಕ್ಕೆ ಬಿಟ್ಟಿದ್ದು” ಎಂದು ಹೊರಡಲನುವಾದಾಗ,ಕೋಮಲ ನೋವಿನಿಂದಲೇ ಗಂಡ ಕೀರ್ತನನ ಹಿಂದೆಯೇ ಬಂದುಬಿಟ್ಟಿದ್ದಳು. ಅಂದಿನಿಂದ ಮಕ್ಕಳಾಗಲಿ, ಅವಳಾಗಲಿ ಆ ಮನೆಗೆ ಕಾಲಿಡಲಿಲ್ಲ. ಎರಡೂ ಮನೆಗಳ ಸಂಪರ್ಕ ಕಡಿದಂತೆ ಆಯಿತು. ಮುಂದೊಂದು ದಿನ ಕೋಮಲಳ ತಂದೆ ತೀರಿ ಹೋದ ಸುದ್ದಿಯನ್ನು ಕೋಮಲ ಊರಿನವರಿಂದ ತಿಳಿದು, “ನಾನೊಂದು ಸಲ ತಂದೆಯ ಮುಖವನ್ನು ನೋಡಬೇಕು” ಎಂದು ಗಂಡನನ್ನು ಅಂಗಲಾಚಿದರೂ ಕೀರ್ತನ್ ಒಪ್ಪಿಗೆಯನ್ನು ನೀಡಿರಲಿಲ್ಲ. ಅತ್ತು ಅತ್ತು ಕೋಮಲ ಸುಮ್ಮನಾಗಿದ್ದಳು. ಹೌದು ಕ್ಷಮೆ ಎನ್ನುವ ಪದಕ್ಕೆ ಬಹಳ ಹಿರಿದಾದ ಅರ್ಥವಿದೆ. ಎರಡು ಮನಸ್ಸುಗಳನ್ನು ಬೆಸೆಯುವ ಎರಡು ಕುಟುಂಬಗಳನ್ನು ಹೊಸೆಯುವ, ಸಮಾಜವನ್ನು ಒಂದುಗೂಡಿಸುವ ಶಕ್ತಿ ಇದೆ. ಅಂದು ನಾನು ಕೋಮಲ ಸಾರಿ ಸಾರಿ ಬೇಡಿದಾಗ ನನ್ನ ಅಹಂ ಬಿಟ್ಟು ನಾನು ಕ್ಷಮಿಸುತ್ತಿದ್ದರೆ ಎರಡು  ಕುಟುಂಬಗಳ ನಡುವೆ ಗೋಡೆ ನಿರ್ಮಾಣವಾಗುತ್ತಿರಲಿಲ್ಲ. ಅವಳು ಆ ಸಂದರ್ಭದಲ್ಲಿ ಎಷ್ಟು ನೊಂದಿದ್ದಳೊ !! ಸಾಯುವಾಗಲೂ ಅದೇ ನೋವಿನಲ್ಲಿ ಆಕೆ ಇಹಲೋಕ ತ್ಯಜಿಸಿದ್ದಳು. ನಾನು ಮಾಡಿದ ತಪ್ಪಿಗೆ ನನಗೀಗ ಶಿಕ್ಷೆಯಾಗುತ್ತಿದೆ. ನನ್ನ ಮಕ್ಕಳಿಗೆ ತವರಿಗೆ ಹೋಗಬೇಕು, ತಾಯಿ ಇಲ್ಲದಿದ್ದರೂ ತಂದೆಯನ್ನು ಕಾಣಬೇಕು ಎಂಬ ತುಡಿತವೂ ಇಲ್ಲದೆ ಗಂಡ ಮಕ್ಕಳು ಎಂದು ಹಾಯಾಗಿದ್ದಾರೆ. ಇದು ದೇವರು ನನಗೆ ಕೊಟ್ಟ ಶಿಕ್ಷೆ ಅಲ್ಲದೆ ಮತ್ತಿನ್ನೇನು? ಅಂದು ನಾನು ಮಾವಯ್ಯ ಹೇಳಿದ ಮಾತನ್ನು ಮರೆತು ಕ್ಷಮಿಸಿ ಬಿಡುತ್ತಿದ್ದರೆ, ಇಷ್ಟೆಲ್ಲ ನೋವು ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಕಾಲ ಮಿಂಚಿ ಹೋಗಿದೆ, ಇನ್ನು ಕ್ಷಮಿಸಬೇಕೆಂದರೆ ನನ್ನವಳಿಲ್ಲ. ಮನಸ್ಸಿನ ತೊಳಲಾಟವನ್ನು ಮಕ್ಕಳಲ್ಲಿ ಹೇಳಬೇಕೆಂದರೆ ಮಕ್ಕಳೂ ಬರುತ್ತಿಲ್ಲ. ನಾನು ನೀಡದ ಕ್ಷಮೆಗೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ. ನಾನು ತಪ್ಪಿ ಬಿದ್ದರೂ ಹಿಂಸೆ ಅನುಭವಿಸಿದರೂ ಪರವಾಗಿಲ್ಲ. ನನ್ನ ಮಕ್ಕಳಿಗೆ ಕ್ಷಮಾ ಗುಣದ ಬಗ್ಗೆ ಹೇಳಬೇಕು. ಕ್ಷಮೆ ಎನ್ನುವುದು ಮನುಷ್ಯನ  ಬದುಕಿನಲ್ಲಿ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ.ದೇವರೇ ಆ ಅವಕಾಶವನ್ನಾದರೂ ಒದಗಿಸಿ ಕೊಡುವೆಯಾ? ನನ್ನ ಮನಸ್ಸಿಗೆ ನೆಮ್ಮದಿಯನ್ನು ಕರುಣಿಸುವೆಯಾ……. ಡಾ.ಸುಮತಿ ಪಿ

“ಕ್ಷಮೆ” ಸುಮತಿ ಪಿ ಅವರ ಸಣ್ಣ ಕಥೆ Read Post »

ಕಥಾಗುಚ್ಛ

“ಏ ಭೇಟಾ ಸಬ್ಜಿ ಲೇ”ಡಾ. ರೇಣುಕಾ ಹಾಗರಗುಂಡಗಿ ಅವರ ಕಥೆ

ಕಥಾ ಸಂಗಾತಿ ಡಾ. ರೇಣುಕಾ ಹಾಗರಗುಂಡಗಿ “ಏ ಭೇಟಾ ಸಬ್ಜಿ ಲೇ” ಬೆಗಳಾಗುತ್ತಲೆ ಹೊರಗಡೆ “ಬೇಟಾ ಸಬ್ಜಿ ಲೇ” ಅಂತ ಕರೆಯುವ ಕೂಗಿನ ಧ್ವನಿಯ ಒಡತಿ ಹೀರಾ ನಿಜವಾಗಿಯೂ ಸೌಂದರ್ಯದ ಖಣಿಯೇ ಸರಿ.  ಸುಕ್ಕುಗಟ್ಟಿದ ಆಕೆಯ  ಚರ್ಮ,ಮುಖದ ತುಂಬೆಲ್ಲ ನೆರಿಗೆಗಳಿದ್ದರೂ ಚಿಕ್ಕಚಿಕ್ಕ ಕಣ್ಣುಗಳು ಮೀಟುಕಿಸುತ್ತ ಆ ಲಂಬಾಣಿಯ ಶ್ರೀಮಂತದ ಉಡುಪು ಅಲ್ಲಲ್ಲಿ ಸ್ವಲ್ಪ ತೇಪೆಹಚ್ಚಿದ್ದರು ನಾನಿಯ ಚೆಲುವಿನ ಮುಂದೆ ಯಾವದೂ ಲೆಕ್ಕಕ್ಕಿಲ್ಲ. ಅಂಥ ಸೌಂದರ್ಯವತಿ ಹೀರಾ ನಾನಿ.                ಇಳೆ ವಯಸ್ಸಿನಲ್ಲಿರುವ ಈ ತಾಯಿಗೆ ದುಡ್ಡಿನ ಅವಶ್ಯಕತೆಯಾದರೂ ಯಾಕೆ  ಅಂತ ನಾನು ಹಾಗೆ ತೆಲೆಕೆಡಿಸಿಕೊಳ್ಳುತ್ತಲೆ ಇರುವಾಗ  ನನ್ನ ಪಕ್ಕದ ಮನೆಯ ಮಗು ಹೇಳ್ತು ಆಂಟಿ ಈ ಅಜ್ಜಿನ ನೀವು ಯಾರಂತ ಭಾವಿಸಿರುವಿರಿ, ಅವರು ರೋಹಿತ್ ಅಣ್ಣನ ನಾನಿ ಅಂತ, ಅದಕ್ಕೆ ನಾನು ಮತ್ತೆ ಯಾಕೆ ಇವರು ಹೀಗೆ ಬರ್ತಾರೆ ಅಂತ ಥಟ್ಟನೆ ಕೇಳಿದ ನನ್ನ ಪ್ರಶ್ನೆಗೆ ಮಗು ಹೇಳ್ತು ಆ ಅಜ್ಜಿ ರೋಹಿತ್ ಅಣ್ಣನ ಮಮ್ಮಿ ಅವರ ಮಮ್ಮಿ. ಅವರ ಮಕ್ಕಳು ಅವರಿಗೆ ಮನೆಯಿಂದ ಹೊರ ದೂಡಿದ್ದಾರೆ ಅದಕ್ಕೆ ಅಜ್ಜಿ ಈಗ ಮಗಳ ಮನೆಯಲ್ಲಿದ್ದಾರೆ. ಹಾಗೆ ಯಾಕೆ ಬಿಟ್ಟಿಕೂಳ ತಿನ್ನೋದು ಅಂತ ಸಬ್ಜಿ ಮಾರ್ತಾರೆ ಎಂದು ಮಗು ಹೇಳ್ತಾ ಓಡಿಹೋಯಿತು.                ನನಗಂತೂ ತುಂಬಾ ಬೇಸರವಾಯಿತು. ಮಕ್ಕಳನ್ನ ಬೆಳೆಸೋದರಲ್ಲಿ  ಪಾಲಕರು ಎಲ್ಲಿ ಎಡವುತ್ತಿದ್ದಾರೆ ಅಂತ ಯೋಚಿಸುತ್ತಲೇ ಹಾಗೆ ಫ್ಲ್ಯಾಶ್ ಬ್ಯಾಕ್ ಹೋದೆ. ಇದು ಈ ಒಂದು ಮನೆಯ ಹೀರಾ ನಾನಿಯ ಕಥೆ ಅಲ್ಲ.ಹಿಂಥ ಅನೇಕ ಹೀರಾ ನಾನಿಯರು ಶ್ರೀಮಂತ, ಬಡವರೆನ್ನದೆ ಎಲ್ಲಡೆಯು   ಮೂಲೆಗುಂಪಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣವಾದರೂ ಏನು? ಅಂತ ಯೋಚಿಸುತ್ತಲೇ ಇರುವಾಗ ನೆನಪಾದದ್ದು ನಾನು ಕಂಡ ಒಂದು ಮಧ್ಯಮ ವರ್ಗದ ಕುಟುಂಬ. ಅಲ್ಲಿ ಆ ದಂಪತಿಗಳು ಮಕ್ಕಳಿಲ್ಲದೆ ಹರಕೆಯನ್ನ ಹೊತ್ತು ಹೆತ್ತ ಮಕ್ಕಳೆ ತಮ್ಮ ತಂದೆತಾಯಿಗೆ ಇಳೆ ವಯಸ್ಸಲ್ಲಿ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಸ್ವಾರ್ಥದ ಮದ, ಬಯಕೆಯ ಹುಚ್ಚಾಟ,ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿರುವುದನ್ನ ಮನಗಂಡು ಇಡೀ ಕುಟುಂಬವನ್ನೆ ಬಿರುಗಾಳಿಗೆ ಸಿಲುಕಿಸಿ  ಆಸ್ತಿ, ಅಂತಸ್ತು ಅಂತ ಮನೆ ಒಡೆಯುವ ಕಾರ್ಯಕ್ಕೆ ಮುಂದಾಗುತ್ತಾರೆ.   ತಮಗೆ ಬೇಕಾದ ಮಕ್ಕಳ ಪರವಹಿಸಿ ದಂಪತಿಗಳಿರ್ವರೂ  ಬೇರೆಯಾಗುತ್ತಾರೆ.ಆಸ್ತಿಗಾಗಿ ಮಕ್ಕಳ ಕಿರಿಕಿರಿ ಅನುಭವಿಸುತ್ತಲೇ ಯಜಮಾನ ತೀರಿಹೋಗುತ್ತಾರೆ. ಮತ್ತೊಬ್ಬ ಮಗ ತಾಯಿಯನ್ನು ತಿನ್ನುವ ಎಣ್ಣೆ ಕೈತಪ್ಪಿ ಚಲ್ಲಿದ್ದಕ್ಕೆ ಮುಖಕ್ಕೆ ಉಗಿದು ಈಗ ಅಡುಗೆ ಹೇಗೆ ಮಾಡೋದು ಅಂತ ಅವಾಚ್ಯ ಮಾತುಗಳನ್ನೆಲ್ಲ ಅಂದು ರೇಲ್ವೆ ಹಳಿಯ ಮೇಲೆ ಬಿದ್ದು ಸಾಯಿ ಅಂತ ಮಗ ಕಿರುಚಾಡಿದರು ಆ ತಾಯಿ ಮಗನಿಗೆ  ಹಿಂದಿರುಗಿಸಿ ಒಂದು ಮಾತನಾಡದೆ ದುಃಖವನ್ನ ನುಂಗಿದಳು. ಇವಳೂ ಮತ್ತೊಬ್ಬ ಹೀರಾ ನಾನಿಯೇ..ಸರಿ ..ಹಿಂತಹ ಅನೇಕ ಅವಮಾನಗಳು ಸಹಿಸುತ್ತ ಮಗನ ಮೇಲಿರುವ ಮಮಕಾರಕ್ಕೆ ಮೂಕವಿಸ್ಮಿತಳಾಗಿ ಎಲ್ಲವೂ ಸಹಿಸುತ್ತ ಕುಗ್ಗಿಹೋದರು ಮಕ್ಕಳ ಬಗ್ಗೆ ಒಂದು ದಿನವು ಮತ್ತೊಬ್ಬರಲ್ಲಿ ದೂರ ಹೇಳಲಿಲ್ಲ.               ಮಕ್ಕಳ ಭವಿಷ್ಯಕ್ಕಾಗಿ ತಂದೆತಾಯಿಗಳು ತಾವು ಅರೆಹೊಟ್ಟೆ ತಿಂದು ನಾಳೆ ಮಕ್ಕಳಿಗೆ ಏನಾದರೂ ಸಹಾಯ ಆಗಬಹುದು ಅಂತ ಎಲ್ಲವನ್ನು ಕೂಡಿಟ್ಟು ತಮ್ಮ ಆಸೆ,ಆಕಾಂಕ್ಷೆಗಳನ್ನೆಲ್ಲ ತ್ಯಾಗಮಾಡಿ ತಮ್ಮ ಇಡೀ ಜೀವನವನ್ನೆ ಮಕ್ಕಳಿಗಾಗಿ ಮೂಡುಪಾಗಿಡುತ್ತಾರೆ . ಮಕ್ಕಳು ಸಹ ಹೆತ್ತವರ  ಪರಿಶ್ರಮವನ್ನು ಅರಿಯಬೇಕು. ಹಿರಿಯರನ್ನು ಕಡೆಗಾಣಿಸದೇ ಅವರನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕಿದೆ.ನಮಗಾಗಿ ತಮ್ಮದೆಲ್ಲವನ್ನು ಧಾರೆಯೆರೆದ ದೇವತೆಗಳನ್ನು ನಮ್ಮ ಕಣ್ಣುರೆಪ್ಪೆಯಂತೆ ಕಾಪಾಡಿಕೊಳ್ಳಬೇಕಿದೆ. ಅವರಿಂದಲೇ ನಾವು ಎಂಬುದು ಮನಗಾಣಬೇಕಿದೆ. ನಮ್ಮದೆಲ್ಲವನ್ನು ಅವರಿಗಾಗಿ ಸಮರ್ಪಿಸಬೇಕೆಂದೇನಿಲ್ಲ, ಅದು ಅವರ ಬಯಕೆಯೂ ಅಲ್ಲ. ಅವರಿಗೆ ಬೇಕಾದದ್ದು ನಮ್ಮ ಪ್ರೀತಿ,ಕಾಳಜಿ,ನಮ್ಮ ಮಕ್ಕಳ ಪ್ರೀತಿ ಅಷ್ಟು ಕೊಟ್ಟರೆ ಅವರಿಗೆ ಅದೇ ಸ್ವರ್ಗ ಅಲ್ಲವೇ? ಮನುಷ್ಯರಾಗಿ ಹುಟ್ಟಿದ ಮೇಲೆ ಮನುಷ್ಯರಂತೆ ಬಾಳಬೇಕಲ್ಲವೇ? ಈ ಮೂಲಕವಾದರೂ ಅಲ್ಲಲ್ಲಿ ಕಂಡು ಬರುವ ಹೀರಾ ನಾನಿಯರನ್ನು  ಕಾಣದ ಹಾಗೆ ಮಾಡುತ್ತ ನಮ್ಮ ಜೀವನ ಸಾರ್ಥಕಗೊಳಿಸೋಣ ಅಂತ.. ಡಾ. ರೇಣುಕಾ ಹಾಗರಗುಂಡಗಿ

“ಏ ಭೇಟಾ ಸಬ್ಜಿ ಲೇ”ಡಾ. ರೇಣುಕಾ ಹಾಗರಗುಂಡಗಿ ಅವರ ಕಥೆ Read Post »

ಕಥಾಗುಚ್ಛ

ಶಂಕರರಾವ ಉಭಾಳೆ ಅವರ ಕಥೆ “ಮಂಜಿನ ಲಿಂಗಕ್ಕೆ ಬಿಸಿಲ ಕಳಸ”

ಶಂಕರರಾವ ಉಭಾಳೆ ಅವರ ಕಥೆ “ಮಂಜಿನ ಲಿಂಗಕ್ಕೆ ಬಿಸಿಲ ಕಳಸ”

ರೋಗದೊಡ್ಡದೊ…! ಅಥವಾ ರೋಗಗ್ರಸ್ತ ಮನಸ್ಸು ದೊಡ್ಡದೋ…! ಹರಡುವ ರೋಗಕ್ಕಿಂತಲೂ ಕೊರಡಾಗಿರುವ ಮನಸ್ಥಿತಿಗೇನೆನ್ನುವುದು?

ಶಂಕರರಾವ ಉಭಾಳೆ ಅವರ ಕಥೆ “ಮಂಜಿನ ಲಿಂಗಕ್ಕೆ ಬಿಸಿಲ ಕಳಸ” Read Post »

ಕಥಾಗುಚ್ಛ

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ.

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ.
ನೆಲಕ್ಕೆ ಬಿದ್ದ ಈ ಹೂಗಳನ್ನು ಪೂಜೆಗೆ ಬಳಸುವುದಿಲ್ಲ ಎಂಬ ಕಾರಣಕ್ಕಾಗಿ ಅಷ್ಟು ತಾಜಾ ಹೂಗಳಾಗಿದ್ದರೂ ಅವು ಹಾಗೆಯೇ ಹುಟ್ಟಿದ್ದು ಸಾರ್ಥಕವಿಲ್ಲದಂತೆ ದೇವರ ಮುಡಿ ಸೇರದೆ ಕಸವಾಗಿ

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ. Read Post »

You cannot copy content of this page

Scroll to Top