ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ, ಕಥಾಗುಚ್ಛ

ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು

ಅನುವಾದ ಸಂಗಾತಿ ಶೋಭನ್‌ ಬಾಬು-ಗಣೇಶ್‌ ಬೀಡಿ ತೆಲುಗುಮೂಲ ಜಿ.ಉಮಾಮಹೇಶ್ವರ್‌ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು ಶ್ರೀಶೈಲದಂತಹ ಆಧ್ಯಾತ್ಮಿಕ ಕ್ಷೇತ್ರದ ಅಂಚಿನಲ್ಲಿ ಇರುವುದರಿಂದಲೋ ಅಥವಾ ಮಧ್ಯಮ ವರ್ಗದ ನೌಕರರ  ಕುಟುಂಬಗಳು ಅಧಿಕವಾಗಿ ಇರುವುದರಿಂದಲೋ ಮತ್ತು ಸುನ್ನಿಪೆಂಟದಲ್ಲಿ  ಭಕ್ತಿ ಕಾರ್ಯಕ್ರಮಗಳು, ಮತ್ತು ಹಬ್ಬಗಳ ಸಂಭ್ರಗಳು ಚೆನ್ನಾಗಿ ಇರುತ್ತಿದ್ದವು. ವಿನಾಯಕಚವಿತಿಗೆ, ರಾಮನವಮಿಗೆ ಚಪ್ಪರಗಳನ್ನು ಹಾಕುವವರು. ಒಂಬತ್ತು ದಿನಗಳ ಹಬ್ಬದ ಗಡಿಬಿಡಿಯಲ್ಲಿ ನಾಟಕಗಳು, ಹರಿಕಥೆಗಳು, ಬುರ್ರಕಥೆಗಳು ಅದರಲ್ಲಿ ಭಾಗವಾಗಿದ್ದವು. ಚಿಕ್ಕಮಕ್ಕಳಿಗೆ ಹಾಡುಗಳು, ಏಕಪಾತ್ರಾಭಿನಯಗಳು, ನೃತ್ಯಸ್ಪರ್ಧೆಗಳಲ್ಲಿ ಬಹುಮಾನಗಳು ವಿತರಿಸುವವರು. ಶಿವರಾತ್ರಿಗೆ ಸಿನಿಮಾ ಹಾಲುಗಳಲ್ಲಿ ತ್ರೀ ಶೋಸ್ ಹಾಕುವವರು. ಧನುರ್ಮಾಸದಲ್ಲಿ ನಗರ ಸಂಕೀರ್ತನೆಗಳು ಚಳಿಯನ್ನು ಜಯಿಸುತ್ತವೆ. ಸಂಕ್ರಾಂತಿಗೆ ಅಘೋಷಿತ ರಂಗೋಳಿ ಸ್ಪರ್ಧೆಗಳು ನಡೆಯುತ್ತಿದ್ದವು. ಯಾರ ರಥ ಎಷ್ಟು ದೂರ ಸಾಗಿತೋ ಎಂದು ಅಳೆಯುತ್ತಿದ್ದರು. ದೊಡ್ಡ ದೊಡ್ಡ ರಂಗೋಳಿಗಳಿಗೆ ವಿಶೇಷ ಪ್ರಶಂಸೆಗಳು ದೊರೆಯುತ್ತಿದ್ದವು. ಅಕ್ಕಾತಂಗಿಯರು,ತಾಯಿ-ಆತ್ತೆಗಳು ರಂಗೊಳಿಗಳು ಹಾಕುತ್ತಿದ್ದಾರೆ  ಅಣ್ಣ-ತಮ್ಮಂದಿರು, ತುಂಟ ಮಕ್ಕಳು ಸ್ವಂತ ರಂಗೊಳಿಗಳಿಗೆ ಕಾಪಾಲಾ ಕಾಯುತ್ತಾ, ಹೊರಗಿನ ರಂಗೊಳಿಗಳನ್ನು ವಿಶ್ಲೇಷಿಸುತ್ತಾ ತಿರುಗಾಡುತ್ತಿದ್ದರು. ಸುನ್ನಿಪೆಂಟಗೆ ಸಂಬಂಧಿಸಿದವರೆಗೂ ಸತ್ಯನಾರಾಯಣಸ್ವಾಮಿ ದೇವಸ್ಥಾನ, ರಾಮಮಂದಿರಗಳು ಭಕ್ತಿ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿವೆ.ಶ್ರೀಶೈಲದಲ್ಲಿ ಸಹಜ ಸಿದ್ಧವಾಗಿ ಕೆಲವುರು ಸಾಧುಗಳು, ಸನ್ಯಾಸಿಗಳು ಯಾವಾಗಲೂ ಕಂಡು ಬರುತ್ತಿರುತ್ತಾರೆ. ಇವರಲ್ಲದೆ, ಹೊರ ಪ್ರದೇಶಗಳಿಂದಲೂ ಕೆಲವರು ಬಂದು ಇಲ್ಲಿ ಯಾವುದೋ ಸತ್ರದಲ್ಲಿ ಊಟ ಮಾಡುತ್ತಾ, ಕಾಲ ಕಳೆಯುತ್ತಾ   ಬದುಕುವವರು ಅನೇಕರು ಇರುವವರು. ಮುಮುಕ್ಷುವುರಾದ ಸಾಧುಗಳು ಯಾರೋ, ಭಿಕ್ಷುಕುರಾದ ಸನ್ಯಾಸಿಗಳು ಯಾರೋ ಕಂಡುಹಿಡಿಯುವುದು ತುಂಬಾಕಷ್ಟ. ಉಡುಗೆ ತೊಡುಗೆಗಳಿಂದ, ಹಾವಭಾವಗಳಿಂದ, ಮಾತಿನ ಪದ್ಧತಿ ಸುಮಾರಾಗಿ ಒಂದೇ ವಿಧವಾಗಿ ಇರುತ್ತದೆ.ಒಮ್ಮೆ ಪೂರ್ಣಾನಂದ ಸ್ವಾಮಿ ಎಂಬ ಸ್ವಾಮಿಗಳು ತಮ್ಮ ಪತ್ನಿಸಮೇತ ಶ್ರೀಶೈಲಕ್ಕೆ ಬಂದರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು, ಮತ್ತು ಸತ್ಯನಾರಾಯಣ ಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು ಪ್ರವಚನಗಳನ್ನು ಹೇಳುತ್ತಾ ಸುಮಾರು ಮೂರುತಿಂಗಳ ಕಾಲವು ಅವರು ಸುನ್ನಿಪೆಂಟದಲ್ಲಿ ಕಳೆದರು. ಹಾಗಾಗಿ ಪೂರ್ಣಾನಂದಸ್ವಾಮಿಗಳು ಶ್ರೀಶೈಲದಲ್ಲಿದ್ದ ಮೂರುತಿಂಗಳಲ್ಲಿ ಒಂದುತಿಂಗಳು ನಮ್ಮ ಮನೆಯಲ್ಲಿಯೇ ಇದ್ದರು. ಪೂರ್ಣಾನಂದಸ್ವಾಮಿಗಳು, ತಾವು ವೇದಾಂತಂ ಲಕ್ಷ್ಮಯ್ಯನವರ ಶಿಷ್ಯರೆಂದು, ಅವರ ಊರು ಕಡಪಜಿಲ್ಲೆಯ ಮಾಮಿಡಾಲಪಲ್ಲೆ ಎಂದೋ, ಇನ್ನೂ ಯವುದೋ ಊರು ಎಂದು ಹೇಳಿದ್ದು ನೆನಪಿದೆ. ಪ್ರತಿದಿನ, ಸಾಯಂಕಾಲ ಆರರಿಂದ ಏಳರ ವರೆಗೆ ಅವರು  ಉಪದೇಶ ಮಾಡುತ್ತಿದ್ದರು. ಆಗ ಹೆಂಗಸರೆಲ್ಲ ಆ ಸಮಯಕ್ಕೆ  ಸೇರಿ ಸ್ವಲ್ಪ ಹೊತ್ತು ಕಾಲಕ್ಷೇಪ ಮಾಡುತ್ತಿದ್ದರು. ಭಾನುವಾರಗಳಲ್ಲಿ ಮಾತ್ರ ಮಧ್ಯಾಹ್ನ ಮೂರರಿಂದ ನಾಲ್ಕರವರೆಗೂ ಹೇಳುತ್ತಿದ್ದರು.ಒಂದುದಿನ ಯಾವುದೋ ಕೆಲಸಕ್ಕೆ ನನ್ನ ತಾಯಿಯನ್ನು ಕರೆದುಕೊಂಡು ಬರಬೇಕೆಂದು ಅಪ್ಪ ಹೇಳಿದರೇ ನಾನು ದೇವಸ್ಥಾನಕ್ಕೆ ಹೋಗಿದ್ದೆ. ಇನ್ನೊಂದು ಐದು ನಿಮಿಷಗಳಲ್ಲಿ ಮುಗಿಯುತ್ತದೆ. ಕೂತ್ಕೋ ಅಂದರೆ, ನಾನೂ ಕೂತ್ಕೊಂಡು ಕೇಳುತ್ತಿದ್ದೇನೆ. ಅವರು ಶ್ಯಾಸೆದ ಬಗ್ಗೆ, ಶ್ಯಾಸೆ ಮೇಲಿನ ಧ್ಯಾಸದ ಬಗ್ಗೆ, ಮೌನವಾಗಿ ಮಾಡುವ ಧ್ಯಾನದ ಬಗ್ಗೆ ಹೇಳುತ್ತಾ  ಅಧ್ಯಾತ್ಮಿಕ ಸಂಬಂಧವಾದ ಮಾತುಗಳೇನೊ ಹೇಳಿತ್ತಿದ್ದರು.ನಾನು ಏನೋ  ಯೋಚಿಸುತ್ತಾ ಕೂತಿದ್ದಾರೆ ನಾಗಮಣಿ ಅತ್ತೆ ನನ್ನನ್ನು ಹತ್ತಿರಕ್ಕೆ ಕರೆದು –“ಈ ಸ್ವಾಮಿ ಇಷ್ಟೊಂದು ಮಾತುಗಳು ಹೇಳ್ತಾನೆ, ಆದರೆ, ಇವರಿಗೆ ಸಿನಿಮಾ ಹುಚ್ಚು ಹೋಗಿಲ್ಲ” ಎಂದಳು.ವಾಸ್ತವಕ್ಕೆ ಈ ಚರ್ಚೆಯಲ್ಲಿ ಚಲನ ಚಿತ್ರಗಳ ಪ್ರಸ್ತಾವನೆ ಏಕೆ ಬಂದವೋ ನನಗೆ ಅರ್ಥವಾಗಿಲ್ಲ. ಆ ಅತ್ತೆ ಸಿನಿಮಾಗಳು ಚೆನ್ನಾಗಿ ನೋಡುತ್ತಾಳೆ. ಚೆನ್ನಾಗಿ ಫಾಲೋ ಆಗುತ್ತಾಳೆ  ಕೂಡಾ. ಇವರಿಗೆ ಸಿನಿಮಾಹುಚ್ಚು ಎಂದು ಹೇಗೆ ನಿರ್ಧರಿಸಿದ್ದಾಳೋ  ತಿಳಿಯದೆ ನಾನು ತಲೆ ಕೆಡಿಸಿಕೊಂಡಾಗ, ಅವರೇ ನನ್ನನ್ನು ಮತ್ತಿಷ್ಟೂ ಹತ್ತಿರಕ್ಕೆ ಕರೆದು-“ಬೇಕಿದ್ದರೆ ಕೇಳು, ಅವರು ಮಾತು ಮಾತಿಗೆ ಶೋಭನ್ ಬಾಬು, ಶೋಭನ್ ಬಾಬು ಎನ್ನುತ್ತಿದ್ದಾನೆ”ನಾನು ಸ್ವಲ್ಪ ಕಿವಿಕೊಟ್ಟು ಶ್ರದ್ಧೆ ಯಿಂದ ಕೇಳಿದಾಗ, ಹಾಗೆ ಅನಿಸಿತು, ಆದರೆ ಅದಲ್ಲ ಅಂತಲೂ ಅನಿಸಿತು. ನನಗೆ ತೆಲುಗು ಭಾಷೆಯೆಂದರೆ ಒಲವು, ಮನೆಯಲ್ಲಿದ್ದ ಪುಸ್ತಕಗಳನ್ನು(ಪೂರ್ಣಾನಂದಸ್ವಾಮಿ ಅವರವು ಕೂಡಾ) ನೋಡಿದ್ದೇನೆ. ಅದರಿಂದ ಮತ್ತಿಷ್ಟೂ ಶ್ರದ್ಧೆಯಿಂದ ಕೇಳಿದರೆ  ಆಗ  ಸ್ಫುರಿಸಿತು ಆ ಪದವು, ಅದರ ಅರ್ಥ್!ಆ ಅತ್ತೆ ಮತ್ತೆ ಕರೆದು  “ಗಮನಿಸಿದ್ದೀಯಾ?” ಎಂದು ಕೇಳಿದಳು.ಆಗ ನಾನು ಅವಳಿಗೆ ಹೇಳಿದೆ –“ಅತ್ತೆ, ಅದು ನೀವು ಅಂದುಕೊಂಡಂತೆ ಶೋಭಾನ್ ಬಾಬು ಅಲ್ಲ – ಸೋಹಂ ಭಾವ – ಅಂದರೆ ನಾನೇ ದೇವರು ಎಂಬ ಭಾವನೆ ” ಎಂದು ಹೇಳಿದರೆ  ಅವಳ ಮುಖ ಸಂಪೂರ್ಣವಾಗಿ ಕಳೆಗುಂದಿತ್ತು. ನಂಬಿದಂತೆ ಕಾಣಿಸಲಿಲ್ಲ. ಮನೆಗೆ ಬಂದಮೇಲೆ ನನ್ನ ಅಕ್ಕಗೆ ಹೇಳಿದೆ. ಈಗಲೂ  ಆ ವಿಷಯವನ್ನು ನೆನೆದರೆ  ತಡೆಯಲಾರದಷ್ಟು ನಗು ಬರುತ್ತದೆ.ಇನ್ನೊಂದು ಸಲ ಸನ್ಯಾಸಿಯೊಬ್ಬರು ಮಹದೇವಪ್ಪನವರನ್ನು ಭೇಟಿಮಾಡಿ  ತಾನು ಬಂದು ವ್ರತವನ್ನು ಸಂಕಲ್ಪಿಸಿದ್ದೇ ನೆಂದು ಅದು ಮುಗಿಯುವ ತನಕ ಅವರ ಸಹಾಯ ಬೇಕೆಂದು ಕೇಳಿದ. ಬೋಳ ಶಂಕರನಂತಹ  ಮಹದೇವಪ್ಪ ಮಾಮಾ ಆ ವ್ರತವು ಏನು, ಅದು ಮುಗಿಸಲು ಎಷ್ಟು ದಿನಗಳು ಬೇಕಾಗುತ್ತವೋ  ಅದಕ್ಕೆ  ಏನೇನು ಬೇಕಾಗುತ್ತವೋ ಏನೂ  ಕೇಳದೆ ಅವರಿಗೆ ಅಭಯ ಕೊಟ್ಟರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಆಶ್ರಯವೂ ಕೊಡಿಸಿದರು. ಒಂದುವಾರ ಅವರಿಗೆ ಎರಡು ಸಲ ಊಟ ಕಳುಹಿಸುವ ಸರದಿ ನಮ್ಮದಾಗಿತ್ತು.ದೇವಸ್ಥಾನದ ಈಶಾನ್ಯದ  ಮೂಲೆಯಲ್ಲಿ ಸ್ವಲ್ಪ ಖಾಲೀ ಜಾಗವಿತ್ತು. ಅಲ್ಲಿಯೇ ಅವರು ತಮ್ಮ ಚೀಲ ಇಟ್ಟುಕೊಂಡು, ಅಲ್ಲಿಯೇ ಇದ್ದ ನಲ್ಲಿಯ ಬಳಿ ಸ್ನಾನ ಮಾಡುತ್ತಿದ್ದರು. ಅವರು ಅಷ್ಟೊಂದು ಪೂಜೆ ಪುಂಸ್ಕಾರಗಳು ಮಾಡಿದಂತೆ ಕಾಣಿಸುತ್ತಿರಲಿಲ್ಲ. ಯಾವಾಗಲೂ ಮೌನವಾಗಿ ಏನೋ ಯೋಚಿಸುತ್ತಿದ್ದವನಂತೆ ಇರುವವನು. ಆಗಾಗ, ಕೆಲವೊಮ್ಮೆ ಗೋಡೆಗೆ ಒರಗಿ ಮಲಗಿದ್ದೇನೋ  ಧ್ಯಾನ ಮಾಡುತ್ತಿದ್ದಾನೋ ತಿಳಿಯದ ಸ್ಥಿತಿಯಲ್ಲಿ ಇರುತ್ತಿದ್ದ.ಅಯ್ಯಪ್ಪಸ್ವಾಮಿ ದೇವಸ್ಥಾನ ನಮ್ಮ  ಕಾರ್ಯಕಲಾಪಕ್ಕೆ ಮುಖ್ಯವಾದ ಜಾಗಾ. ಅದು ದೊಡ್ಡ  ಜನಸಂದಣಿ ಇರುವ ದೇವಸ್ಥಾನ ವಲ್ಲ. ಆ ಪ್ರಾಜೆಕ್ಟ್ ನಲ್ಲಿ ಉದ್ಯೋಗಿಯೊಬ್ಬರು ಆ ದೇವಸ್ಥಾನಕ್ಕೆ ಧರ್ಮ ಕರ್ತ, ಪೂಜಾರಿ  ಎಲ್ಲಾ ಅವನೇ ಆಗಿ ನಡೆಸುತ್ತಿದ್ದನು. ಆ ದೇವಸ್ಥಾನ, ಅವರ ಮನೆ ಪೂಜಾ ಕೋಣೆಗೆ ತುಂಬಾ ದೊಡ್ಡದಾಗಿದಂತೆ,  ಮತ್ತು ಸಾಂಪ್ರದಾಯಿಕ ದೇವಸ್ಥಾನಗಳಿಗೆ ತುಂಬಾ ಚಿಕ್ಕದಾಗಿದಂತೆ ಕಾಣಿಸುತ್ತಿತ್ತು. ಅವರ ಮನೆ ಒಳೆಗೆಯಿಂದ ದೇವಸ್ಥಾನಕ್ಕೆ ದಾರಿಯಿತ್ತು. ದೇವಸ್ಥಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ, ಪೂಜೆ, ನೈವೇದ್ಯ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಅವರ ಮಗನ  ಹೆಸರು ಮಣಿಕಂಠ. ಅದೇನೇ ಇರಲಿ, ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯ ವರೆಗೂ ಅದು ಮಕ್ಕಳ ಆಟಗಳ  ಜಾಗಾವಾಗಿತ್ತು.ಶನಿವಾರ ಸಂಜೆ ಏಳುಗಂಟೆಗೆಲ್ಲಾ , ‘ಈಗಲಪೆಂಟ’ದಿಂದ ಒಬ್ಬ ಮಲಯಾಳ/ ತಮಿಳ ಭಜನ ತಂಡ ಬರುತ್ತಿತ್ತು. ಅಲ್ಲಿಯ ವರೆಗೂ ಅಲ್ಲಲ್ಲಿ ಆಟವಾಡುತ್ತಿದ್ದ ಮಕ್ಕಳೆಲ್ಲರು ಮನೆಗೆ  ಹೋಗಿ ಕೈಕಾಲೂ ತೊಳೆದುಕೊಂಡು ಬಂದು  ಭಜನೆಯಲ್ಲಿ ಭಾಗ ವಹಿಸುವವರು. ಘಂಟೆಸಾಲ ಅವರ ಶುಕ್ಲಾಂಬರಧರಂದಿಂದ ಪ್ರಾರಂಭವಾಗಿ “ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ”, “ಚಂದ್ರಶೇಖರ, ಚಂದ್ರಶೇಖರ” ಎಂಬ ಭಜನೆಗಳ ಮೂಲಕ  “ಒನ್ರಾಮ್ ತಿರುಪ್ಪಡಿ ಶರಣಂ ಪುನ್ನಯ್ಯಪ್ಪ” ಎಂದು  ಸಾಗುವ ಸೋಪಾನದ ಗೀತೆಯೊಂದಿಗೆ ಕೊನೆಗೊಳ್ಳುವುದು.  ಸೋಪಾನಗಳ ಹಾಡು ಉಂಬಾ ಉತ್ಸಾಹದಿಂದ  ತುಂಬಿ ತುಳುಕುತ್ತಿತ್ತು. ಪ್ರತಿಯೊಂದು ಸೋಪಾನಕ್ಕೆ ಒಂದು ಚರಣವಿದೆ. ಪ್ರತಿಚರಣ ಮುಗಿಯುತ್ತಿದ್ದಂತೆ, ಪ್ರಸಾದಕ್ಕೆ ಹತ್ತಿರವಾಗುತ್ತಿದ್ದ ತೃಪ್ತಿ. ನಡುವೆ ಕಾಲಕ್ಷೇಪಕ್ಕಾಗಿ ನಾನು ಶಿವ ಶಿವ ಶಂಕರ…  ಎನ್ನುತ್ತಾ ಭಕ್ತ  ಕನ್ನಪ್ಪ ಗೀತವನ್ನು ಹಾಡುತ್ತಿದ್ದೆ.  ಆ ಭಜನ ತಂಡಕ್ಕೇ ನನ್ನ ಹೆಸರು ಶಿವ ಶಿವ ಶಂಕರ ಎಂದೇ ಗುರುತು. ಕೊನೆಗೆ ಮಂಗಳಾರತಿಯ ನಂತರ ಅರ್ಚಕರು ಬಿಸಿಬಿಸಿ ಚಕ್ಕರ ಪೊಂಗಲಿಯನ್ನು  ಚಿಕ್ಕ ಚಿಕ್ಕ  ದೊನ್ನೆಗಳಲ್ಲೋ , ಎಲೆಗಳಲ್ಲೋ  ಹಂಚುವವರು.  ಅಂದು ರಾತ್ರಿ ಆರತಿ ಮುಗಿಸಿದ ಮೇಲೆ ತಿನ್ನುವ ಆ ಪ್ರಸಾದ ಅದ್ಬುತವಾದ ರುಚಿಯಿಂದ, ಆಹಾ… ಅನ್ನಿಸುವಷ್ಟು ರುಚಿಯಾಗಿ ಇರುತ್ತಿತ್ತು. ಬಹಳಷ್ಟು ಬಾರಿ  ಆ ಪ್ರಸಾದದ ಮೇಲೆ ಅನುರಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದರೆ  ಅದರಲ್ಲಿ ಸ್ವಲ್ಪವಾದರೂ ಸುಳ್ಳು ಇಲ್ಲ..ಹಾಗೆ ಆದಿವಾರದ ಬೆಳಿಗ್ಗೆ ತಮ್ಮ ತಮ್ಮ ಮನೆಗಳಲ್ಲಿ ತಾವು ತಿಂಡಿ ಮುಗಿಸಿಕೊಂಡು ಎಲ್ಲಿ ಆಟ ಆಡಬಹುದು, ಏನು ಆಡಬೇಕು ಎಂದು ಚರ್ಚಿಸಿತ್ತಿದ್ದೆವು. ಹಾಗೆ ನಾವು ಚರ್ಚಿಸಲು ಹೋಗುವ ಮೊತ್ತ ಮೊದಲಿನ ಪ್ರದೇಶ ಅಯ್ಯಪ್ಪಸ್ವಾಮಿ ದೇವಸ್ಥಾನವು.  ಆ ದಿನವೂ ಎಂದಿನಂತೆ ಎಲ್ಲರೂ ಗುಂಪು ಸೇರಿ ಯಾವಾವು ಆಟಗಳು ಆಡಬೇಕೋ ಚರ್ಚಿಕೊಳ್ಳುತ್ತಿದ್ದರೆ ಸಾಧುವು ನನ್ನನು ಆತ್ತ ಇತ್ತ  ನೋಡಿ  ಇಲ್ಲಿಬಾ ಎಂಬಂತೆ ಕೈ ಸನ್ನೆ ಮಾಡಿದ.  ನನ್ನೇ ಎಂದು ನಿರ್ಧರಿಸಿಕೊಂಡು ನಾನೇ ಅವಾರ ಕಡೆಗೆ ಹೋದ. ಅವರು ನನ್ನನ್ನು ದೇವಸ್ಥಾನದ ಹಿಂಭಾಗಕ್ಕೆ ಕರೆದೊಯ್ದು, ಮೇಲಿನ ಜೇಬಿನಿಂದ ಒಂದು ರೂಪಾಯಿ ನೋಟು ತೆಗೆದು, ‘ಒಂದು ಗಣೇಶ್ ಬೀಡಿ ಕಟ್ಟು ತೆಗೆದುಕೊಂಡು ಬಾ ಮಗು. ಹಾಗೆ ನಿನಗೂ ಬೇಕಾದರೆ,  ಐದುಪೈಸೆಗೆ ಏನಾದರೂ  ಕೊಂಡುಕೋ’  ಎಂದು ಹೇಳಿ ಆ ರೂಪಾಯನ್ನು ಕೈಯಲ್ಲಿ ಇಟ್ಟ.ನಾನು ಏನೂ ಯೋಚಿಸದೆಯೇ  ಅಂಗಡಿಯ ಕಡೆಗೆ ಓಡಿದೆ. ಮಲ್ಲಿಕಾರ್ಜುನ ಟಾಕೀಸುಗೆ ತಿರುಗುವ ಮೂಲೆಯಲ್ಲಿ ಒಂದು ಅಂಗಡಿ ಇತ್ತು. ಅಲ್ಲೇ ನಾವು ರೂಢಿಯಾಗಿ ಸಾಮಾನುಗಳನ್ನು ತಂದುಕೊಳ್ಳುತ್ತಿದ್ದೆವು. ಆ ಅಂಗಡಿಯಲ್ಲಿ ಇಬ್ಬರು ಸಹೋದರರು ಇರುತ್ತಿದ್ದರು. ನಾವು ಅವರನ್ನು ಚಿಕ್ಕ ಶೆಟ್ಟಿ  ಮತ್ತು ದೊಡ್ಡ ಶೆಟ್ಟಿ ಎಂದು ಕರೆದುಕೊಳ್ಳುತಿದ್ದೆವು.   .ಚಿಕ್ಕ ಶೆಟ್ಟಿ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತಾ, ಉತ್ತಮ ಗ್ರಾಹಕರ ಪ್ರಜ್ಞೆಯನ್ನು ತೋರಿಸುವವನು. ನಾನು ಬೀಡಿ ಕೇಳಿದೊಡನೆ ಒಂದು ಕಟ್ಟು ಕೊಟ್ಟು ಏನೋ ಕೇಳುತ್ತಿದ್ದಾಗ ನಾನು ಓಡುತ್ತಾ ಬಂದುಬಿಟ್ಟೆ. ದೇವಸ್ಥಾನದಲ್ಲಿ ಗಣೇಶ್ ಬೀಡಿಗಳ ಕಟ್ಟು, ಉಳಿದ ಚಿಲ್ಲರೆ, ಸಾಧುವಿಗೆ ನೀಡಿ, ನನ್ನ ಆಟಗಳಲ್ಲಿ ನಾನು ಮುಳುಗಿಹೋದೆ.ಒಂದು ವಾರದ ನಂತರ, ಅಪ್ಪ ಯಥಾಲಾಪವಾಗಿ  ಪಡಶಾಲೆಯಲ್ಲಿ ಇದ್ದ ನನ್ನನ್ನು ಕರೆದು “ಏನೋ ಬೀಡಿ ಸೇದುತ್ತಿದ್ದೀಯಾ?”  ಎಂದು ಸ್ವಲ್ಪ ಕಟುವಾಗಿಯೇ ಕೇಳಿದರು.  ನನ್ನ ಬಾಯಿಂದ ಮಾತು ಬರಲಿಲ್ಲ. ಅಷ್ಟರಲ್ಲಿ ಅಮ್ಮನೂ ಬಂದಳು. ವಿಷಯ ತಿಳಿದುಕೊಂಡು, “ಛ, ಚ ಅವನು ಏಕೆ ಸೇದುತ್ತಾನೆ? ” ಎಂದು ನನ್ನನ್ನು ಸಮರ್ಥಿಸಿದಳು.ಮತ್ತೆ ತಾನೇ “ಇಷ್ಟಕ್ಕೂ ನಿಮಗೆ ಯಾರು ಹೇಳಿದರು?” ಎಂದು ಕೇಳಿದಾಗ, ಅಪ್ಪ “ಯಾರೋ ಹೇಳಿದರೆ ನಾನೇಕೆ ನಂಬುತ್ತೇನೆ,  ಯಾರ ಹತ್ರ  ಇವನು ಖರೀದಿಸಿದನೋ  ಅವನೇ, ಚಿಕ್ಕಶೆಟ್ಟಿ ಹೇಳಿದ” ಎಂದ.ನನಗೆ ವಿಷಯವು ಅರ್ಥವಾಯಿತು. ನಾನು ಮುಗುಳ್ನಗುತ್ತಾ “ಓಹ್, ಅದಾ, ದೇವಸ್ಥಾನದಲ್ಲಿ ಸ್ವಾಮಿ ಇದ್ದಾನಲ್ಲ, ಕಳೆದ ಭಾನುವಾರ ಅವರು ಖರೀದಿಸಿಕೊಂಡು ಬಾ ಅಂತ ಹೇಳಿದರು. ಆಗ ನಾನು  ಖರೀದಿಸಿದೇ. ನಾನು ಕುಡಿಯಲು ಅಲ್ಲ.”ಎಂದೆ.ಅಪ್ಪ ನಂಬುವಂತೆ ಕಾಣಲಿಲ್ಲ. “ನೀವು ತಪ್ಪು ಮಾಡಿದ್ದು ಅಲ್ಲದೆ, ಅಪರಾಧವನ್ನು ಇನ್ನೊಬ್ಬರಿ ಮೇಲೆ ಹಾಕುವೇ ” ಎಂದು ಅವರು ಪ್ರತಿದಾಳಿ ನಡೆಸಿದರು.ಆ ಮಾತುಗಳಿಗೆ ನನ್ನ ಮುಖವು ಕೆಂಪಾಯಿತು. ದುಃಖವಾಯಿತು. ಕೀಚಲು ಧ್ವನಿಯಲ್ಲಿ ನಮ್ಮಮ್ಮಯೊಂದಿಗೆ, “ಬೇಕಾದರೆ ಈಗಲೇ ದೇವಸ್ಥಾನಕ್ಕೆ ಹೋಗೋಣ. ಅವರಿಂದಲೇ ಮಾತನಾಡಿಸುವೆ” ಎಂದೆ.ನನ್ನ  ನಿರಪರಾಧತ್ವ ಮೇಲೆ ನನಗಿಂತಲೂ ಜಾಸ್ತಿ ನಂಬಿಕೆ ಇರುವ ಅಮ್ಮ ತಕ್ಷಣ-“ಹೋಗಿ ಅವರನ್ನೇ ಕೇಳೋಣ” ಎಂದಳು.ನನ್ನ ತಂದೆಯೂ ಅಂಗಿ ಧರಿಸುತ್ತಾ-“ತಕ್ಷಣ ಹೋಗಿ ಮಹದೇವಪ್ಪ ಮಾಮನವರನ್ನು ಕರೆದುಕೊಂಡುಬಾ ಹೋಗು, ಇಲ್ಲಿ ಇದ್ದಂತೆ ಬರಬೇಕು. ಏಕೆ ಎಂದು ಕೇಳಿದರೆ ಬಂದಾಗಾ ಅಪ್ಪ ಹೇಳುತ್ತರಂತೆ ಎಂದು ಹೇಳು. ನಾವು ದೇವಸ್ಥಾನದ ಹೊರಗೆ ಇರುತ್ತೇವೆ” ಎಂದೆ.ನಾನು ಮಿಂಚಿನ ವೇಗದಿಂದ ಹೋಗಿ ಹತ್ತು ನಿಮಿಷದಲ್ಲಿ ಮಹದೇವಪ್ಪ ಮಾಮಾನ ಜೊತೆ ದೇವಸ್ಥಾನಕ್ಕೆ ಬಂದೆ. ಅಪ್ಪ ಮಾಮನೊಂದಿಗೆ ಏನೋ ಮಾತಾಡಿದರು. ಮಾಮ, ಹಿಂದೆ ಅಪ್ಪ, ಆ ಹಿಂದೆ ಅಮ್ಮ, ನಾನು ದೇವಸ್ಥಾನದ ಒಳಗೆ ಹೋಗಿ ಸ್ವಾಮಿ ಕುಳಿತಿದ್ದ ಜಾಗಕ್ಕೆ ಸೇರೀದೆವು .ನಮ್ಮ ಬರುವಿಕೆಯನ್ನು ನಿಜಕ್ಕೆ ಊಹಿಸದ ಅವರು, ‘ರಾತ್ರಿ ಊಟ ತೆಗೊಂಡು ಯಾರೋ ಭಕ್ತರು ಬರಬೇಕಾದ ಸಮಯದಲ್ಲಿ ಇವರು ಬಂದಿದ್ದರೇನು?’ ಎಂದು ಆಶ್ಚರ್ಯ ಹೋದ. ಸ್ವಲ್ಪ ತಬ್ಬಿಬ್ಬಾದ.ಮಹದೇವಪ್ಪ ಮಾಮ ಅವು ಇವು ಮಾತಾಡಿ-“ನೀವು ಈ ಹುಡುಗನೊಂದಿಗೆ ಹೋದ ವಾರ

ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು Read Post »

ಕಥಾಗುಚ್ಛ

“ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ”ಸಣ್ಣ ಕಥೆ,ವೀಣಾ ಹೇಮಂತ್ರ ಗೌಡ ಪಾಟೀಲರಿಂದ

ಕಥಾ ಸಂಗಾತಿ ವೀಣಾ ಹೇಮಂತ್ರ ಗೌಡ ಪಾಟೀಲ “ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ” ನಸುಕಿನ 5:ರ ಸಮಯ. ಮಾಡಿದ ಎಲ್ಲಾ ಅಡುಗೆಗಳನ್ನು ಒಂದೆಡೆ ಜೋಡಿಸಿದ ಸುಮಾಳ ಬೆನ್ನು ನೋವಿನಿಂದ ಮುಲುಗುಟ್ಟುತ್ತಿದ್ದರೆ ದೇಹ ಒಲೆಯ ಝಳದ ಜೊತೆಗೆ ಜ್ವರದ ತಾಪದಿಂದ ಕಾಯುತ್ತಿತ್ತು. ಅಡುಗೆ ಮನೆಯ ಬಾಗಿಲಲ್ಲಿ ಬಂದು ನಿಂತ ಅತ್ತೆ ರಮಾ ಬಾಯಿ ಎಲ್ಲ ಕೆಲಸ ಮುಗಿಯಿತೆ? ಎಂದು ಬಿಗುಮಾನದಿಂದ ಕೇಳಿದರು. ತಲೆಯೆತ್ತದೆ ಗೋಣಾಡಿಸಿದ ಸೊಸೆ ಸುಮಳನ್ನು ನೋಡಿ ಅವರ ಅತ್ತೆತನದ ಹಮ್ಮು ಸಂತೃಪ್ತಿಗೊಂಡಿತು.ತುಸು ದರ್ಪದ ಧ್ವನಿಯನ್ನು ಹೆಚ್ಚಿಸಿ ಬರಿ ಇಡ್ಲಿ ವಡೆ ಚಟ್ನಿ ಸಾಂಬಾರ್ ಸಾಲುವುದಿಲ್ಲ ಒಂದಷ್ಟು ಕೇಸರಿಬಾತ್ ಹಾಗೂ ಉಪ್ಪಿಟ್ಟು ಕೂಡ ಮಾಡಿಬಿಡು ಸುಮಾ ಎಂದು ಹೇಳಿದರು. ಈಗಾಗಲೇ ದೇಹವೆಲ್ಲಾ ಬಿಸಿಯಾಗಿ ಬೆನ್ನು ಹೊಡೆತದಿಂದ ಒದ್ದಾಡುತ್ತಿದ್ದ ಸುಮಾಳ ಮುಖದಲ್ಲಿ ವ್ಯಂಗ್ಯದ ನಗು ಮೂಡಿತು. ಮನದಲ್ಲಿ ನಿಶ್ಚಯ ಮಡುಗಟ್ಟಿತು. ಆಯ್ತು ಎಂದು ತಲೆ ಆಡಿಸಿದ ಆಕೆ ಡಬ್ಬದಿಂದ ರವೆಯನ್ನು ತೆಗೆದು ಹುರಿಯಲು ಆರಂಭಿಸಿದಳು. ರವೆಯ ಕಣಗಳು ನಿಧಾನವಾದ ಉರಿಗೆ ಹದವಾಗಿ ಹುರಿಯಲ್ಪಟ್ಟು ಘಮ್ಮನೆಯ ಸುವಾಸನೆಯನ್ನು ಹೊರಡಿಸಿದ್ದರೆ ಅಸಹನೆಯನ್ನು ಮೂಡಿಸುವ ಕಳೆದ ನಾಲ್ಕು ವರ್ಷಗಳ ಆಕೆಯ ವೈವಾಹಿಕ ಬದುಕಿನ ಪುಟಗಳು ಒಂದೊಂದಾಗಿ ಮೊದಲಿನಿಂದ ತೆರೆಯಲು ಆರಂಭಿಸಿದ್ದವು.ಜಿಲ್ಲಾ ಕೇಂದ್ರವೊಂದರ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಮುಖ್ಯ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಳನ್ನು ನೋಡಲು ಬಂದ ಸುದೀಪ್ ಗೆ ಮೆಚ್ಚುಗೆಯಾದದ್ದು ಆಕೆಯ ಸ್ಳಿಗ್ಧ ಸೌಂದರ್ಯವಾದರೆ ಅತ್ಯಂತ ಸೌಮ್ಯ ಮುಖಭಾವವನ್ನು ಕಂಡ ಸುದೀಪನ ತಾಯಿ ತನ್ನ ತಾಳಕ್ಕೆ ತಕ್ಕಂತೆ ಯುವತಿಯನ್ನು ಕುಣಿಸಬಹುದು ಎಂಬ ಭಾವ ಒಪ್ಪಿಗೆ ಸೂಸಲು ಕಾರಣವಾಗಿತ್ತು. ತಾಯಿ ಮತ್ತು ಮಗನ ಮಾತಿಗೆ ಎದುರಾಡದ ತಂದೆ ತಮ್ಮ ಸಮ್ಮತಿಯನ್ನು ಸೂಚಿಸಿದರು.ಇರುವುದರಲ್ಲಿಯೇ ಚೆನ್ನಾಗಿ ಮದುವೆ ಮಾಡಿಕೊಟ್ಟ ಸುಮಳ ಪಾಲಕರು ತಮ್ಮ ತಲೆಯ ಮೇಲಿನ ಹೊರೆ ಇಳಿದ ಭಾವವನ್ನು ಅನುಭವಿಸಿದರು. ತಾಯಿಯ ತವರುಮನೆಯಿಂದ ಬಂದು ಒಂದು ತುಂಬಿಟ್ಟ ಸೇರನ್ನು ಒದ್ದು ಬಲಗಾಲಿಟ್ಟು ಮನೆಯನ್ನು ಪ್ರವೇಶಿಸಿದ ಸೊಸೆಯ ಕೈಯಿಂದ ಕುಟುಂಬಕ್ಕೆ ಸಂಬಂಧಿಸಿದ ತಿಜೋರಿಯಲ್ಲಿ ಸುಮಾಳ ಆಸ್ತಿ ಪತ್ರ ಹಾಗೂ ಒಡವೆಗಳನ್ನು ಇಸಿದುಕೊಂಡು ಆಕೆಯ ಅತ್ತೆ ಭದ್ರಪಡಿಸಿದರು. ಮಧುಚಂದ್ರದ ಅವಧಿ ಮುಗಿಯುವ ಮೊದಲೇ ಸುಮಾಳ ಹರಿವಿಗೆ ಬಂದದ್ದು ಆಕೆಯ ಪತಿ ತನ್ನ ತಾಯಿಯ ಮಾತನ್ನು ತೆಗೆದುಹಾಕುವುದಿಲ್ಲ ಎಂಬುದರ ಅರಿವಾಗಿತ್ತು. ಮಾವ ಕೂಡ ಕೋಲೆ ಬಸವನಂತೆ ತಲೆಯಾಡಿಸುವುದು ಆಕೆಯ ಅರಿವಿಗೆ ಬಂದಿತ್ತು. ಸ್ವಭಾವತಃ ಮೆದುವಾಗಿದ್ದ ಸುಮಾ ತನ್ನ ಮನೆಯ ಪರಿಸ್ಥಿತಿಗಿಂತ ಅಷ್ಟೇನೂ ಭಿನ್ನವಾಗಿಲ್ಲದ ಗಂಡನ ಮನೆಗೆ ಸಹಜವಾಗಿಯೇ ಒಗ್ಗಿಕೊಂಡಳು. ಆದರೆ ದಿನ ದಿನಕ್ಕೆ ಅತ್ತೆಯ ಕಠಿಣತೆ ಹೆಚ್ಚಾಗುತ್ತಾ ಹೋಯಿತು ಹಾಗೂ ಗಂಡ ತಾಯಿಯೊಂದಿಗೆ ಹೊಂದಿಕೊಂಡು ಹೋಗು, ತಾಯಿ ಹೇಳಿದಂತೆ ಕೇಳು,ಅಮ್ಮನ ಮನಸ್ಸಿಗೆ ಬೇಸರವಾಗದಂತೆ ನೋಡಿಕೋ ಎಂದು ಹೇಳುವುದನ್ನು ಕೇಳಿ ಆಕೆಗೆ ಬೇಸರವಾಗತೊಡಗಿತು. ಅದರಲ್ಲೂ ಅತ್ತೆ ತನ್ನನ್ನು ಮನೆಯಲ್ಲಿ ಎಲ್ಲರ ಸೇವೆ ಮಾಡುವ ಸೇವಕಿ ಎಂಬಂತೆ ಬಿಂಬಿಸತೊಡಗಿದಾಗ ಆಕೆಯ ಬೇಸರ ನೋವಿಗೆ ಎಡೆ ಮಾಡಿಕೊಟ್ಟಿತು. ದಿನಗಳೆದಂತೆ ಅತ್ತೆಯ ದರ್ಪ, ಮಾವನ ಕಾಠಿಣ್ಯ ಹಾಗೂ ಗಂಡನ ನಿಷ್ಕ್ರಿಯತೆ ಆಕೆಯಲ್ಲಿ ಒಂದು ಬಗೆಯ ಬೇಸರವನ್ನು ಉಂಟು ಮಾಡಿ, ಆಕೆ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಳು. ಇದರ ಜೊತೆಗೆ ಮಕ್ಕಳಾಗದೇ ಇರುವುದು ಆಕೆಯ ಬೇಸರವನ್ನು ಮತ್ತಷ್ಟು ಹೆಚ್ಚಿಸಿತ್ತು.ಕೆಲ ತಿಂಗಳುಗಳ ಹಿಂದೆ ತವರಿಗೆ ಹೋದ ಆಕೆ ತನ್ನೊಂದಿಗೆ ಓದುತ್ತಿದ್ದ ತನ್ನ ಆತ್ಮೀಯ ಸ್ನೇಹಿತೆಯೊಂದಿಗೆ ಈ ಕುರಿತು ನೋವನ್ನು ತೋಡಿಕೊಂಡಾಗ ಸ್ನೇಹಿತೆ ಹೇಳಿದ ಮಾತುಗಳು ಆಕೆಯ ಕಣ್ಣಿಗೆ ಕಟ್ಟಿದ ಪರದೆಯನ್ನು ಕೊಂಚ ತೆರೆಯಿತು.ತನ್ನ ತಾಯಿಯ ತವರು ಮನೆಯಿಂದ ತನಗೆ ದೊರೆತ ಆಸ್ತಿಯ ಕಾಗದ ಪತ್ರಗಳು, ಒಡವೆ ವಸ್ತುಗಳು ಅತ್ತೆಯ ಅಲಮಾರಿಯಲ್ಲಿ ಇರುವುದು ಹಾಗೂ ಆಕೆ ಅದನ್ನು ತಮ್ಮ ಕುಟುಂಬಕ್ಕೆ ಕೊಡುಗೆಯಾಗಿ ಬಂದದ್ದು ಎಂದು ಹೇಳುವ ಮೂಲಕ ಅದನ್ನು ಕುಟುಂಬದ ಆಸ್ತಿಯಾಗಿ ಪರಿಗಣಿಸುತ್ತಿರುವುದು ತಪ್ಪು ಎಂಬುದು ಆಕೆಗೆ ಅರಿವಾಯಿತು.ಮರಳಿ ಬಂದ ನಂತರ ಅದೊಂದು ಬಾರಿ ಚಿನ್ನದ ಒಡವೆಗಳನ್ನು ಸಂಬಂಧಿಕರ ಮನೆಯ ಮದುವೆಗೆ ಹೋದಾಗ ಅತ್ತೆಯ ತಿಜೋರಿಯ ಸೇಫ್ ನಿಂದ ಹೊರ ತೆಗೆದು ಉಪಯೋಗಿಸಿ ಮರಳಿ ಎತ್ತಿಡುವಾಗ ತನ್ನೆಲ್ಲ ಶೈಕ್ಷಣಿಕ ಕಾಗದ ಪತ್ರಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಸ್ತಿಯ ಪತ್ರಗಳನ್ನು ಹಾಗೂ ಒಡವೆಗಳನ್ನು ಸುಮಾ ಎತ್ತಿಟ್ಟುಕೊಂಡಳು. ಇಂದು ಅತ್ತೆಯ ಕಾಠಿಣ್ಯದ ಆಜ್ಞೆಗಳು ಆಕೆಯ ಮನಸ್ಸಿನಲ್ಲಿ ಹರಳುಗಟ್ಟುತ್ತಿದ್ದ ಯೋಚನೆಗಳಿಗೆ ಅಂತಿಮ ಸ್ವರೂಪವನ್ನು ನೀಡಿದವು ಅಂತೆಯೇ ಕೇಸರಿಬಾತ್ ಮತ್ತು ಉಪ್ಪಿಟ್ಟನ್ನು ಮಾಡಿ ಪೂರೈಸಿ ಎಲ್ಲವನ್ನು ಒಂದೆಡೆ ಟೇಬಲ್ ಮೇಲೆ ಜೋಡಿಸಿ ಇಟ್ಟ ಆಕೆ ಅದರ ಬಳಿ ತಾನು ಮನೆ ಬಿಟ್ಟು ಹೋಗುತ್ತಿರುವುದಾಗಿ ಬರೆದ ಕಾಗದವೊಂದನ್ನು ಇಟ್ಟಳು.ತೀವ್ರ ಆಯಾಸದಿಂದ ತನ್ನ ಕೋಣೆಗೆ ಬಂದ ಆಕೆ ಸ್ನಾನ ಮಾಡಿ ಆರಾಮದಾಯಕ ಉಡುಪೊಂದನ್ನು ಧರಿಸಿ ಒಂದಷ್ಟು ಬಟ್ಟೆಗಳನ್ನು, ಹಾಗೂ ಒಳಉಡುಪುಗಳನ್ನು  ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡು ಅವಶ್ಯಕ ಕಾಗದ ಪತ್ರಗಳನ್ನು ಜೋಡಿಸಿಟ್ಟುಕೊಂಡು ದೇವರ ಕೋಣೆಗೆ ಬಂದು ದೀಪವನ್ನು ಮುಡಿಸಿ ದೇವರಿಗೆ ನಮಸ್ಕರಿಸಿ ದೃಢ ನಿರ್ಧಾರದಿಂದ ತನ್ನ ಬ್ಯಾಗಿನೊಂದಿಗೆ ಮನೆಯ ಹೊರಗೆ ಕಾಲಿಟ್ಟಳು.ಮನೆಯ ಬಾಗಿಲನ್ನು ದಾಟಿ ರಸ್ತೆಗೆ ಬರುತ್ತಿದ್ದಂತೆಯೇ ಎದುರಿಗೆ ಕಂಡ ಆಟೋವೊಂದನ್ನು ಕೂಗಿ ಕರೆದ ಆಕೆ ಢವಗುಡುತ್ತಿದ್ದ ಎದೆಯ ಬಡಿತವನ್ನು ಸ್ಥಿಮಿತಕ್ಕೆ ತರಲು ಪ್ರಯತ್ನಿಸುತ್ತಾ ಅದರಲ್ಲಿ ಕುಳಿತು ರೈಲು ನಿಲ್ದಾಣಕ್ಕೆ ಹೋಗುವಂತೆ ನಿರ್ದೇಶಿಸಿ ಹಿಂದಕ್ಕೊರಗಿ ಕುಳಿತುಕೊಂಡಳು.ಇತ್ತ ಮನೆಯಲ್ಲಿ ಆಕೆಯ ಸುಳಿವಿರದೆ ಮನೆಯ ಎಲ್ಲೆಡೆ ಹುಡುಕಲು ಆರಂಭಿಸಿದರು. ಟೇಬಲ್ ನ ಮೇಲಿದ್ದ ಕಾಗದವನ್ನು ಓದಿದ ಮಾವ ನಖಶಿಖಾಂತ ಬೆವೆತರೆ ಅತ್ತೆ ಕ್ರೋಧದಿಂದ ತಪ್ತಳಾದಳು.ಗಂಡ ಆಕೆಗೆ ಕರೆ ಮಾಡಿದ. ಕರೆಯನ್ನು ಆಕೆ ಸ್ವೀಕರಿಸಿದ ಕೂಡಲೇ ‘ಎಲ್ಲಿರುವೆ ಸುಮಾ, ಮನೆಯಲ್ಲಿ ಎಲ್ಲರೂ ಗಾಬರಿಯಾಗಿದ್ದಾರೆ’ ಎಂದು ಕೇಳಿದ. ನಾನು ಮನೆ ಬಿಟ್ಟು ಹೊರಟಿದ್ದೇನೆ. ನಿಮಗೆ ಬೇಕಾದ ಅಡುಗೆಯನ್ನು ಮಾಡಿ ಟೇಬಲ್ ಮೇಲೆ ಇಟ್ಟಿದ್ದೇನೆ ಎಂದು ಅತ್ಯಂತ ಶಾಂತವಾಗಿ ಆಕೆ ಹೇಳಿದಳು.‘ಮನೆಗೆ ಅಷ್ಟೊಂದು ಜನ ಬರುತ್ತಿದ್ದಾರೆ ಅಂತಹದರಲ್ಲಿ ಮನೆಯ ಸೊಸೆಯಾಗಿ ನೀನೇ ಇಲ್ಲವೆಂದರೆ ಹೇಗೆ ?’ ಎಂದು ಸುದೀಪ್ ಕೇಳಿದ. ನಿಮಗೆ ಬೇಕಾಗಿರುವುದು ಮನೆಯ ಸೊಸೆಯಲ್ಲ ಕೇವಲ ಕೆಲಸದಾಕೆ. ಕಳೆದ ನಾಲ್ಕು ವರ್ಷಗಳಲ್ಲಿ ನಾನು ಆ ಮನೆಯ ಸೊಸೆಯಾಗಿ ಕಾರ್ಯನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಕೆಲಸದವಳಾಗಿ ಬದುಕಿದ್ದೆ ಎಂಬುದು ನಿಮಗಿಂತ ಚೆನ್ನಾಗಿ ಬೇರೆ ಯಾರಿಗೆ ಗೊತ್ತು ? ಎಂದು ಆಕೆ ತುಸು ತೀಕ್ಷ್ಣವಾಗಿ ಹೇಳಿದಳು. ಆಕೆಯ ಧ್ವನಿಯಲ್ಲಿದ್ದ ತೀಕ್ಷ್ಣತೆ ಹಾಗೂ ಗಟ್ಟಿತನವನ್ನು ಗುರುತಿಸಿದ ಆಟೋ ಡ್ರೈವರ್ ಜೋರಾಗಿ ಕೇಳಿಸುತ್ತಿದ್ದ ಸ್ಪೀಕರ್ ನ ಕಿವಿಯನ್ನು ಮೆಲ್ಲನೆ ತಿರುವಿ ನಂತರ  ತನ್ನ ಆಟೋ ನಿಲ್ಲಿಸಿ ‘ಮೇಡಂ, ಎಲ್ಲಿಗೆ ಹೋಗಬೇಕು? ಎಂದು ತಗ್ಗಿದ ದನಿಯಲ್ಲಿ ಕೇಳಿದ.ಕೂಡಲೇ ಎಚ್ಚೆತ್ತು ಸುಮಾ ‘ರೈಲ್ವೇ ಸ್ಟೇಷನ್ ಗೆ ನಡೆಯಿರಿ ಅಣ್ಣ ‘ ಎಂದು ಹೇಳಿದಳು. ಸ್ಟೇಷನ್ ಗೆ ಬಂದ ಆಕೆ ಮೈಸೂರಿಗೆ ತೆರಳುವ ರೈಲನ್ನು ಏರಿ ಕುಳಿತಳು. ಅತ್ತೆಯ ಮನೆಯ ಯಾವೊಬ್ಬ ಸದಸ್ಯರ ಫೋನ್ ಕರೆಯನ್ನು ಆಕೆ ಸ್ವೀಕರಿಸಲಿಲ್ಲ…. ಗಂಡನದ್ದು ಕೂಡ.ರೈಲು ಮೈಸೂರನ್ನು ತಲುಪಿದಾಗ ಆಟೋ ಏರಿದ ಆಕೆತನ್ನ ಚಿಕ್ಕಮ್ಮನ ಮನೆಗೆ ಬಂದು ಬಾಗಿಲು ತಟ್ಟಿದಳು. ಬಾಗಿಲನ್ನು ತೆರೆದ ಚಿಕ್ಕಮ್ಮ ಈಕೆಯನ್ನು ನೋಡಿದ ಕೂಡಲೇ ಆಶ್ಚರ್ಯದಿಂದ ನಿಂತಳು. ನಾನು ಮತ್ತೆ ಮರಳಿ ಗಂಡನ ಮನೆಗೆ ಹೋಗಲು ಸಿದ್ದವಿಲ್ಲ ಚಿಕ್ಕಮ್ಮ ಎಂದು ಹೇಳಿದಾಗ ಅಕ್ಕನ ಮಗಳನ್ನು ಮೆದುವಾಗಿ ತಬ್ಬಿ ಒಳಗೆ ಕರೆದೊಯ್ದ ಚಿಕ್ಕಮ್ಮ ಆಕೆಗೆ ಸಾಂತ್ವನ ಹೇಳಿ ಮುಖ ತೊಳೆದು ಬರಲು ಹೇಳಿ ಬಿಸಿ ತಿಂಡಿಯನ್ನು ಹಾಕಿ ಕೊಟ್ಟರು. ತಿಂಡಿಯನ್ನು ತಿನ್ನುತ್ತಲೇ ನಡೆದ ವಿಷಯವನ್ನು ಆಕೆ ಹೇಳಿದಳು.ಅಂದು ಅವರ ಕುಟುಂಬದ ವಾಟ್ಸಪ್ ಗುಂಪಿನಲ್ಲಿಆ ದಿನ ಮುಂಜಾನೆ ಸುಮಳ ಅತ್ತೆಯ ಮನೆಯಲ್ಲಿ  ನಡೆದ ವಿಷಯದ ಚರ್ಚೆ ಆಗಲಾರಂಭಿಸಿತು. ಕುಟುಂಬದ ಹಿರಿಯರು ಮನೆಯ ವಿಷಯವನ್ನು ಹೀಗೆ ಹೊರಗೆ ತರುವ ಅವಶ್ಯಕತೆ ಇದೆ ಎಂಬಂತೆ ಗುಂಪಿನಲ್ಲಿ ಚರ್ಚಿಸಿದಾಗ ಸುಮಾಳ ಮುಖದಲ್ಲಿ ವಿಷಾದದ ಕಿರುನಗೆ ಮೂಡಿತು. ಮನೆಯ ನಾಲ್ಕು ಗೋಡೆಗಳ ಒಳಗೆ ಈ ಕುರಿತು ಚರ್ಚಿಸಲು ಮನೆಯವರು ತಯಾರಿರಲಿಲ್ಲವಾದ ಕಾರಣ  ಮನೆಯ ಸಮಸ್ಯೆ ನಾಲ್ಕು ಜನರಿಗೆ ತಿಳಿಯುವಂತೆ ಮಾಡಬೇಕಾಯಿತು ಎಂದು ಬರೆದ ಆಕೆ ಅದನ್ನು ಗುಂಪಿನಲ್ಲಿ ಹಂಚಿಕೊಂಡಳು.. ಎಲ್ಲರ ಬಾಯಿಗೆ ಬೀಗ ಬಿದ್ದಂತಾಯಿತು.ಮುಂದಿನ ಎರಡು ದಿನಕ್ಕೆ ಮೈಸೂರಿಗೆ ಬಂದಿಳಿದ ಸುದೀಪ್ ಆಕೆಯ ಮನವೊಲಿಸಲು ಪ್ರಯತ್ನಿಸಿದ. ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ತನ್ನ ತಾಯಿಯ ಕುರಿತು ಮಾತ್ರ ಯೋಚಿಸಿದ್ದ ಪತಿಯನ್ನು ನಂಬಲು ಸುಮ ಸಿದ್ಧವಿರಲಿಲ್ಲ. ನಿರಾಶನಾಗಿ ಹಿಂದಿರುಗಿದ ಪತಿ. ಮತ್ತೆ ಒಂದು ವಾರದ ಬಳಿಕ ಮರಳಿ ಬಂದ. ಆತನ ಮುಖದಲ್ಲಿ ಗಾಂಭೀರ್ಯವಿತ್ತು. ಕೇವಲ ಒಂದೇ ವಾರದಲ್ಲಿ ಹತ್ತು ವರ್ಷ ಹೆಚ್ಚು ವಯಸ್ಸಾದಂತೆ ತೋರುತ್ತಿದ್ದ ಆತ ಈ ಬಾರಿ ಆಕೆಯನ್ನು ಮರಳಿ ಬಾ ಎಂದು ಅಂಗಲಾಚಲಿಲ್ಲ. ಬದಲಾಗಿ ತಾನು ತಮ್ಮಿಬ್ಬರ ಕುರಿತು ಮಾತನಾಡಿದ್ದು ಇನ್ನು ಮುಂದೆ ಆಕೆಯ ಎಲ್ಲ ಚಟುವಟಿಕೆಗಳಿಗೆ ಬೆಂಬಲವಾಗಿ ನಿಲ್ಲುವ, ಆಕೆಗೆ ಬೇಕಾದ ಎಲ್ಲಾ ಅಗತ್ಯ ಸಹಾಯಗಳನ್ನು ನೀಡುವುದಾಗಿ ಹೇಳಿದ. ಆಕೆಗೆ ತನ್ನೊಂದಿಗೆ ಬಾಳಲು ಇಷ್ಟವಿಲ್ಲ ಎಂದಾದರೆ ವಿಚ್ಛೇದನ ನೀಡಲು ಕೂಡ ಸಿದ್ದ ಎಂದು ಹೇಳಿದ.‘ ನನಗೆ ಯೋಚಿಸಲು ಕೊಂಚ ಸಮಯ ಬೇಕು’ ಎಂದಷ್ಟೇ ಹೇಳಿದ ಆಕೆಯ ಮಾತನ್ನು ಗೌರವಿಸಿ ಮರಳಿ ಊರಿಗೆ ಹೊರಟು ಹೋದ. ಒಂದೆರಡು ವಾರಗಳು ಕಳೆದ ಬಳಿಕ ತನ್ನ ಚಿಕ್ಕಮ್ಮನ ಸಹಾಯದಿಂದ ಆಕೆ ಉದ್ಯೋಗಸ್ಥ ಜನರಿಗೆ ಕ್ಯಾರಿಯರ್ ಊಟ ತಲುಪಿಸುವ ಕೆಲಸವನ್ನು ಆರಂಭಿಸಿದಳು. ಮೊದಲ ವಾರ ಕೇವಲ ಎಂಟು ಜನರಿಂದ ಆರಂಭವಾದ ಆಕೆಯ ಕ್ಯಾರಿಯರ್ ಊಟದ ಸರ್ವಿಸ್ ಕೆಲವೇ ವಾರಗಳಲ್ಲಿ 40 ರಿಂದ 50 ಜನರಿಗೆ ವಿಸ್ತಾರವಾಯಿತು. ಕೈಯಲ್ಲಿ ಎರಡರಿಂದ ಮೂರು ಆಳುಗಳನ್ನು ಕೆಲಸಕ್ಕೆ ಇಟ್ಟುಕೊಂಡ ಆಕೆ ಇದೀಗ ತುಸು ದೊಡ್ಡ ಪ್ರಮಾಣದಲ್ಲಿ ಮನೆಯ ಹಿಂಭಾಗದಲ್ಲಿ ಶೆಡ್ ಹಾಕಿಸಿ ಅಲ್ಲಿ ರುಚಿ ಹಾಗೂ ಶುಚಿಗೆ ಹೆಸರಾದ ಪುಟ್ಟ ಕ್ಯಾರಿಯರ್ ಸರ್ವಿಸನ್ನು ಆರಂಭಿಸಿದರು.ಪ್ರತಿ ಶನಿವಾರ ಸಾಯಂಕಾಲ ಬರುತ್ತಿದ್ದ ಸುದೀಪ ಸಲಹೆ ಸೂಚನೆಗಳನ್ನು ಹಾಗೂ ಸಹಾಯ ಸಹಕಾರಗಳನ್ನು ನೀಡುತ್ತಿದ್ದ. ತಾನೇ ಲಿಸ್ಟ್ ಮಾಡಿಕೊಂಡು ಆಕೆಯ ಕೇಟರಿಂಗ್ ಕೆಲಸಕ್ಕೆ ಬೇಕಾಗುವ ಪದಾರ್ಥಗಳನ್ನು ತಂದು ಕೊಡುತ್ತಿದ್ದ… ಆದರೆ ಅವರಿಬ್ಬರ ಮಧ್ಯದಲ್ಲಿ ಇದ್ದುದು ದಾಂಪತ್ಯವಲ್ಲ ಕೇವಲ ಸ್ನೇಹ ಭಾವ. ಇದೀಗ ಆತನಲ್ಲಿ ಪತಿಯ ಜವಾಬ್ದಾರಿಯ ಅರಿವು ಮೂಡಿದ್ದು ಜೀವನಪೂರ್ತಿ ಆಕೆಗಾಗಿ ಕಾಯಲು ಆತ ಸಿದ್ದನಿದ್ದ. ಸರಿಸುಮಾರು ಆರು ತಿಂಗಳ ನಂತರ ತನ್ನ ನೌಕರಿಗೆ ವರ್ಗಾವಣೆ ಮಾಡಿಸಿಕೊಂಡು ಆತ ಮೈಸೂರಿಗೆ ಬಂದು ನೆಲೆಸಿದ…. ಈಗಲೂ ಕೂಡ ಆತನಲ್ಲಿ ಈ ಹಿಂದೆ ತಾವು ನಡೆದುಕೊಂಡ ರೀತಿಯ ಕುರಿತು ಪಶ್ಚಾತ್ತಾಪದ ಭಾವವಿದ್ದು, ಇನ್ನು ಮುಂದೆ ಆಕೆಗೆ ನೋವಾಗದಂತೆ ಬದುಕಬೇಕು ಎಂಬ ನಿರ್ಧಾರ ಕೂಡ ಇತ್ತು.ಅದೊಂದು ದಿನ ಆಕೆಯ ಅತ್ತೆ ಮಾವ ಬಂದು ಇಳಿದರು. ಅವರಿಬ್ಬರ ಮುಖದಲ್ಲಿ ಸೋತು ಹೋದ ಭಾವವಿತ್ತು. ಕೊನೆಗೂ ನೀನು ನಿನ್ನ ಹಟ ಸಾಧಿಸಿದೆ ಎಂದು ಅತ್ತೆ ಹೇಳಿದಾಗ ನಸುನಕ್ಕ ಸುಮತಿ ಒಳ್ಳೆಯತನವನ್ನು ಕೈಲಾಗದತನ ಎಂದು ತಿಳಿದುಕೊಳ್ಳುವುದು ತಪ್ಪು ಅತ್ತೆ, ನಾವು ಹಿರಿಯರಿಗೆ ಕೊಡುವ ಗೌರವವನ್ನು ಅವರು ಭಯ, ಹೆದರಿಕೆ ಎಂದು ಭಾವಿಸಬಾರದು. ದಾಂಪತ್ಯದಲ್ಲಿ ಗಂಡ ಹೆಚ್ಚು ಹೆಂಡತಿ ಕಡಿಮೆ ಎಂಬ ಭಾವ ಎಂದಿಗೂ ಬೇಡ… ಅವರಿಬ್ಬರೂ ಪರಸ್ಪರರಿಗೆ ಪೂರಕವಾಗಿ ಬದುಕಬೇಕು. ಒಬ್ಬರು ಕೇವಲ ಪಡೆಯುವ ಹಾಗೂ ಮತ್ತೊಬ್ಬರು ಕೊಟ್ಟು ಬರಿದಾಗುವ ಪ್ರಕ್ರಿಯೆ ದಾಂಪತ್ಯದಲ್ಲಿ ಖಂಡಿತವಾಗಿಯೂ

“ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ”ಸಣ್ಣ ಕಥೆ,ವೀಣಾ ಹೇಮಂತ್ರ ಗೌಡ ಪಾಟೀಲರಿಂದ Read Post »

ಕಥಾಗುಚ್ಛ

“ಮನೆಯೊಳಗಿಲ್ಲ ಮನದೊಡೆಯ” ಸಣ್ಣ ಕಥೆ,ಶ್ರೀದೇವಿ. ಮ.ಗುಮ್ಮಗೋಳ ಅವರಿಂದ

ಕಥಾ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಮನೆಯೊಳಗಿಲ್ಲ ಮನದೊಡೆಯ” ದಿನ ಬೆಳಗ್ಗೆ ವಾಕಿಂಗಿಗೆ ಹೋಗುವಾಗ ಆ ಮನೆ ಅದೇಕೊ ನನ್ನನ್ನು ಸೂಜಿ ಗಲ್ಲಿನಂತೆ ಸೆಳೆಯುತ್ತಿತ್ತು.  ಹಳೆಯದಾದ ದೊಡ್ಡ ಹಂಚಿನಮನೆ. ಸುತ್ತಲು ವಿಶಾಲವಾದ ಜಾಗದಲ್ಲಿ ಹುಲ್ಲು ಕಡ್ಡಿ ಬೆಳೆದಿತ್ತು. ಒಂದೆರಡು ಮಾವಿನ ಗಿಡಗಳು ಬೊಳಾಗಿದ್ದವು. ಚಿಕ್ಕುಗಿಡದಲ್ಲಿ ಹಣ್ಣುಗಳಾಗಿದ್ದರೂ ಅದನ್ನಾರೂ ಹರಿದಂತೆ ಕಾಣಿಸುತ್ತಿರಲಿಲ್ಲ. ಸುತ್ತಲು ಹುಲ್ಲಿನ ಪೊದೆ. ಗಿಡಗಳ ಮದ್ಯೆ ಒಂದು ಹುತ್ತು ಬೆಳೆದಿತ್ತು. ಕಂಪೌಂಡಿಗೆ ಸುಣ್ಣಬಣ್ಣವಿಲ್ಲದೇ ಹಾಳಾಗಿತ್ತು. ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆ ಮನೆಗೆ ಬೀಗ ಹಾಕಲಾಗಿತ್ತು. ಬಹುಶಃ ಆ ಮನೆಯಲ್ಲಿ ಯಾರು ಇರುತ್ತಿರಲಿಲ್ಲವೆಂದು ಕಾಣುತ್ತದೆ. ಹೋಗುವಾಗ ಬರುವಾಗೊಮ್ಮೆ ಆ ಮನೆಯನ್ನೆ ಸ್ವಲ್ಪ ಹೊತ್ತ ನೋಡುತ್ತ ನಿಲ್ಲುತ್ತಿದ್ದೆ‌. ಅಂದು ಆ ಮನೆಯ ಮುಂದೆ ನೋಡುತ ನಿಂತಾಗ ನನ್ನದೇ ಯೊಚನಾಲಹರಿಯಲ್ಲಿ ಮುಳಗಿಹೋಗಿದ್ದೆ. ಒಂದಾನೊಂದು ಕಾಲದಲ್ಲಿ ಈ ಮನೆ ಅಜ್ಜ ಅಜ್ಜಿ ಮಗ ಹೆಂಡತಿ ಮೊಮ್ಮಕ್ಕಳಿಂದ ಮನೆ ತುಂಬಿರಬಹುದು. ಮನೆಯ ಅಂಗಳ ನಂದನವನವಾಗಿದಿತ್ತು. ತರಹ ತರಹದ ಹಣ್ಣುಗಳ ಗಿಡಗಳು. ತರತರಹದ ಹೂಗಳ ಗಿಡಗಳು ಅಂಗಳದಲ್ಲಿ ಬೆಳದಿದ್ದವೇನೊ, ಬೆಳಗಿನ ಜಾವ ಹಕ್ಕಿಗಳ ಕಲರವದ ನೀನಾದ, ಮದ್ಯಾಹ್ನದಲ್ಲಿ ದುಂಬಿಗಳ ಜೇಂಕಾರ, ತರತರಹದ ಪಾತರಗಿತ್ತಿಗಳ ಹಾರಾಟವಿತ್ತೇನೊ. ಹೌದು ಒಂದಾನೊಂದು ಕಾಲದಲ್ಲಿ ಸಜ್ಜನರ ಗೂಡಿಂದ ಸುಂದರವಾದ ಹೂದೋಟದಿಂದ ಎಲ್ಲರ ಮನಗೆದ್ದಿತೇನೊ ಎಂದು ಯೋಚಿಸುತ ಕನಸಿನ ನನ್ನ ಲೋಕದಿಂದ ಹೊರಬಂದಾಗ ಮನೆ ನೋಡಿ ಬಸವಣ್ಣನವರ ವಚನವೊಂದು ಕಣ್ಮುಂದೆ ಹಾದು ಹೋಯಿತು. ಮನೆಯೊಳಗೆ ಮನೆಯೊಡಯನಿದ್ದಾನೊ ಇಲ್ಲವೊ ಹೊಸ್ತಿಲಲ್ಲಿ ಹುಲ್ಲು ಹುಟ್ಟಿಮನೆಯೊಳಗೆ ರಜ ತುಂಬಿ…..  ಎನ್ನುವ ವಚನ ಮನದಲ್ಲೆ ಗುಣಗುಣಿಸುತ್ತಾ ನಡೆದೆ. ಹೀಗೇಯೆ ಒಂದು ವಾರದ ನಂತರ ಆ ಮನೆಯ ಮುಂದೆ ಹಾದು ಹೋಗುವಾಗ ಮನೆಯ ಬಾಗಿಲು ತೆಗೆದಂತೆ ಮನೆಯಲ್ಲಿ ಯಾರೊ ಇದ್ದಂತನಿಸಿತು. ಮನೆಯ ಗೇಟಿನ ಸಮೀಪ ನಿಂತು ನೋಡತೊಡಗಿದೆ. ಒಳಗಿಂದ ಒಬ್ಬ ಎಪ್ಪತ್ತರ ಆಸು ಪಾಸಿನ ಒಬ್ಬ ವ್ಯಕ್ತಿ ಹೊರಗಡೆ ಬಂದು ಮನೆಯ ವಿಶಾಲವಾದ ಹುಲ್ಲು ಕಸ ಕಡ್ಡಿ ಬೆಳೆದ ವರಾಂಡವನ್ನು ದಾಟುತ್ತ ಗೇಟ ಕಡೆಗೆ ಬಂದರು. ನಾನು ನೋಡುತ್ತ ನಿಂತಿದ್ದನ್ನು ನೋಡಿದ ಆ ವ್ಯಕ್ತಿ “ಬನ್ನಿ ಸರ್ ಒಳಗೆ ಯಾರ‌ಬೇಕಾಗಿತ್ತು” ಎಂದು ಕೇಳಿದರು. ನಾನು “ಏನೂ ಬೇಕಿಲ್ಲ ಸರ್. ದಿನಾ ನಾನು ಇದೆ ಮಾರ್ಗದಲ್ಲಿ ವಾಕಿಂಗಿಗೆ ಹೋಗುತ್ತೇನೆ. ನಿಮ್ಮ ಮನೆ ಯಾವಾಗಲೂ ಬೀಗ ಹಾಕಿರುತ್ತತ್ತು. ಇವತ್ತು ಯಾರೊ ಇದ್ದ ಹಾಗೆ ಅನಿಸಿತು ಅದಕೆ ನೋಡಿದೆ. ನನ್ನ ಹೆಸರು ಮಹಾಲಿಂಗ ಪಾಟೀಲ ಅಂತ. ಇಲ್ಲಿಯೇ ಕೆನರಾ ಬ್ಯಾಂಕನಲ್ಲಿ ಕ್ಲರ್ಕ ಆಗಿ ಕೆಲಸ ಮಾಡುತ್ತಿದ್ದೇನೆ…..ಅಂದ್ಹಾಗೆ ನಿಮ್ಮ ಹೆಸರೇನು ಸರ್…. ನೀವು ಏನ್ ಮಾಡಿಕೊಂಡಿದಿರಾ” ಎಂದು ಕೇಳಿದೆ. ಆ ವ್ಯಕ್ತಿ “ಪಾಟೀಲರೆ… ನನ್ನ ಹೆಸರು… ವೆಂಕಟೇಶ ದೇಸಾಯಿ ಅಂತ. ನಾನು ಸ್ಕೂಲ ಮಾಸ್ತರು. ಹೆಡಮಾಸ್ಟರಾಗಿ ರಿಟೈರ್ಡಾಗಿ ಈಗ ಹತ್ತು ವರ್ಷವಾಯಿತು. ನಡಿರಿ ನಾನು ವಾಕಿಂಗಗೆ ಹೋಗುತ್ತಿದ್ದೇನೆ. ನನಗೂ ಕಂಪನಿ ಸಿಕ್ಕಂಗಾಯಿತು” ಎಂದು ನನ್ನ ಜೊತೆಗೆ ಬಂದರು. ಒಂದು ವಾರದ ಹತ್ತಿರವಾಗಿತ್ತು ನಾನು ಅವರ ಮನೆಯ ಬಳಿಗೆ ಹೋಗುತ್ತಲೇ ದೇಸಾಯಿ ಮಾಸ್ತರರು ನನ್ನ ಜೊತೆಯಾಗುತ್ತಿದ್ದರು. ಹಲವು ಸಲ ನಿವೂ ಇದುವರೆಗೆ ಎಲ್ಲಿದ್ದಿರಿ. ಇಷ್ಟು ದೊಡ್ಡ ಮನೆ ಸುತ್ತಲು ವಿಶಾಲವಾದ ಜಾಗ ಬಿಟ್ಟು ಹೋಗುವಂತ ಪರಿಸ್ಥಿತಿ ಏನು? ಮನೆಯ ವರಾಂಡದಲೆಲ್ಲಾ ಹುಲ್ಲು ಕಡ್ಡಿ ಬೆಳೆದಿದೆ. ಬಹುಶಃ ನಿಮಗೆ ಮಕ್ಕಳಾರು ಇಲ್ಲವೇ? ಅಥವಾ ನಿಮ್ಮ ಮದುವೆಯೇ ಆಗಿಲ್ಲವೇ? ಎಂದು ಅನೇಕ ಪ್ರಶ್ನೆಗಳನ್ನು ಕೇಳಬೇಕೆಂದರೂ ಸಮಯ ಬಂದಾಗ ಅವರೆ ಹೇಳುತ್ತಾರೆ ಎಂದು ಸುಮ್ಮನಾದೆ. ಒಂದು ದಿನ ಹಾಗೆ ನನ್ನ ಕೆಲಸದ ಬಗ್ಗೆ, ಮತ್ತು ಹೆಂಡತಿ ನನಗಿಬ್ಬರೂ ಆರತಿಗೊಬ್ಬಳು ಕೀರ್ತಿಗೊಬ್ಬ ಇಬ್ಬರು ಮಕ್ಕಳು. ನಮ್ಮ ಮನೆ ಸಣ್ಣದಾದರೂ ನಂದನವನದಂತಿದೆ ಎಂದು ಹೇಳಿದೆ. ಇದೆ ಅವಕಾಶವೆಂದು ನಿಮಗೆ ಎಷ್ಟು ಮಕ್ಕಳು ಅಥವಾ ನೀವು ಬ್ರಹ್ಮಚಾರಿಯಾ? ಮನೆ ಅಷ್ಟೂ ದೊಡ್ಡದಿದ್ದರೂ ಸುತ್ತ ಮುತ್ತಲು ಕಸ ಬೆಳೆದು ನೋಡುವರಾರು ಇಲ್ಲ ಅಥವಾ ನಿಮಗೆ ಮಕ್ಕಳೆ ಇಲ್ಲವೇ? ಎಂದಾಗ ದೇಸಾಯಿ ಮಾಸ್ತರು  “ಅಯ್ಯೊ ಬ್ರಹ್ಮಚಾರಿ ಏನಿಲ್ಲ ನನಗೆ ಮದುವೆಯಾಗಿ ಎರಡು ಗಂಡು‌ಮಕ್ಕಳು ಇದ್ದಾರೆ. ಆದರೆ ಏನೂ ಮಾಡುವದು ಮಕ್ಕಳ ಮನಸ್ಸಿನೊಳಗೆ ಆಸೆ, ದುರಾಸೆ, ಅಸಹನೆ, ತಾತ್ಸಾರದ ಕಸ ಬೆಳೆದಾಗ , ನನ್ನವರು, ನನ್ನದು ಎನ್ನುವ ಭಾವನೆಯೇ ಇಲ್ಲದಾದಾಗ ಮನೆ ಏನು ಹಸನಾಗಿದ್ದಿತು. ಇನ್ಮೂ ಮನೆ ಹೊರಗೆ ಕೇಳಬೇಕೆ ಯಾರೂ ನೋಡದಂತಾಗಿ ಕಸ ಕಡ್ಡಿ ಬೆಳೆಯುವದು ಸಹಜವೇ ತಾನೆ…..  ಸಣ್ಣವರಿದ್ದಾಗ ಮಕ್ಕಳು ಮರಿ ಅಂತ ಅವರಿಗೋಸ್ಕರ ಅವರ ಭವಿಷ್ಯಕ್ಕೊಸ್ಕರ ಎನೆಲ್ಲಾ ಜವಾಬ್ದಾರಿಗಳನ್ನ, ಕಷ್ಟಗಳನ್ನ ಅನುಭವಿಸುತ್ತೇವೆ. ಆದರೆ ಅದೇ ಕಷ್ಟ ಕಾರ್ಪಣ್ಯಗಳು ನಾವು ವಯಸ್ಸಾದಾಗ ಮಕ್ಕಳು ನಮಗಾಗಿ ಹೊರವರು ಎನ್ನುವದು ಭ್ರಮೆ, ಸುಳ್ಳು ನಿರೀಕ್ಷೆ” ಎಂದರು. ಅವರು ತಮ್ಮ ಕಥೆ ಹೇಳ ತೊಡಗಿದರು. ******** ನಾನು ಸ್ಕೂಲ ಮಾಸ್ತರರಾಗಿ ಸೇರಿಕೊಂಡೆ. ಅಪ್ಪನಿಂದ ಬಳುವಳಿಯಾಗಿ ಬಂದ ಊರಲ್ಲಿಯ ಎರಡು ಎಕರೆ ಹೊಲ. ಈ ವಿಶಾಲ ಮನೆಗೆ ವಿಶಾಲಮ್ಮ ನನ್ನ ಮಡದಿಯಾಗಿ ಬಂದಳು. ನನ್ನ ಕಷ್ಟ ಸುಖಗಳಲ್ಲಿ ಜೊತೆಯಾದಳು. ನನಗೆ ಇಬ್ಬರು ಮುದ್ದಾದಗಂಡು ಮಕ್ಕಳಾದರು. ರಘುರಾಮ ಮತ್ತು ಶ್ರೀರಾಮ ಎಂದು ಹೆಸರಿಟ್ಟೆ. ಇಬ್ಬರಿಗೂ ಎರಡು ವರ್ಷಗಳ ಅಂತರ. ಇಬ್ಬರನ್ನು ಊರಲ್ಲಿಯ ಎರಡು ಎಕರೆ ಹೊಲ‌ಮಾರಿ ಚೆನ್ನಾಗಿ ಓದಿಸಿದೆ. ಮೊದಲನೇಯ ಮಗ ತಾಲೂಕ‌ ಛೇರಿಯಲ್ಲಿಗುಮಾಸ್ತನಾದ. ಎರಡನೇಯವ ಇಂಜನೀಯರಿಂಗ ಓದಿ ಮುಂಬೈಯಲ್ಲಿ ಉದ್ಯೊಗ ಅರಸಿ ಹೊರಟ. ಮೊದಲನೇಯ ಮಗ ನನ್ನ ಜೊತೆಯೇ ಇದೆ ಮನೆಯಲ್ಲಿ ಇರತೊಡಗಿದ. ಇಬ್ಬರಿಗೂ ಶ್ರೀಮಂತ ಕುಟುಂಬದ ಸುಂದರ ಹುಡಗಿಯರನ್ನು ನೋಡಿ ಮದುವೆ ಮಾಡಿದೆ. ಮೊದಲನೆಯ ರಘುರಾಮನ ಹೆಂಡತಿ ಬಹಳ ದುರಾಶೆಯ, ತಳಕು ಬಳುಕಿನ ಬದುಕಿಗೆ ಮಾರು ಹೋದ ಹುಡಗಿಯಾಗಿದ್ದಳು. ಅವಳು ಗಂಡನಿಗೆ ಫ್ರಿಜ್, ವಾಸಿಂಗ ಮಶಿನ್, ಬೆಲೆ ಬಾಳುವ ರೇಷ್ಮೆ ಬಟ್ಟೆ, ಒಡವೆಗಾಗಿ ಗಂಡನನ್ನ ಪೀಡಿಸ ತೊಡಗಿದಳು. ಹೆಂಡತಿಯ ಆಶೆಗೆ ಮಗ ರಘುರಾಮ ಲಂಚ ಪಡೆಯತೊಡಗಿದ. ಒಮ್ಮೆ ಸಿಕ್ಕಿ ಹಾಕಿಕೊಂಡು ಜೈಲು ಸೇರಿದ. ಹೆಂಡತಿ ತವರು ಮನೆ ಸೇರಿದಳು.  ಹಾಗೊ ಹೀಗೊ ಮಾಡಿ ಮಗನನ್ನು ಬಿಡಿಸಿಕೊಂಡು ಬಂದೆ. ತೀವ್ರ ಆಘಾತಕ್ಕೆ ಒಳಗಾದ ಮಗ ಆತ್ಮ ಹತ್ಯೆ ಮಾಡಿಕೊಂಡ. ಎರಡನೇಯ ಮಗ ಇದ್ದು ಇಲ್ಲದಂತವ. ಎಷ್ಟೊಂದು ಓದಿಸಿ ದೊಡ್ಡ ಸಂಪಾದನೆ ತರುವಂತ ಇಂಜನೀಯರನ್ನಾಗಿ ಮಾಡಿದೆ. ಆದರೆ ಆ ಮಗನ ಮನೆಗೆ ಹೋದರೆ ಅಲ್ಲಿ ನಮ್ಮನ್ನು ಅಸಹನೆಯಿಂದ, ತಾತ್ಸಾರದಿಂದ ನೋಡುತ್ತಿದ್ದರು. ಬೇಡವೆಂದು ಇಲ್ಲಿಯೇ ಉಳಿದೇವು. ಹೆಂಡತಿ ನಾನು ಚೆನ್ನಾಗಿ ಇರುವವರೆಗೆ ಮನೆ ಮನೆಂಗಳ ಎಲ್ಲವೂ ಚೆನ್ನಾಗಿ ನೋಡಿಕೊಂಡು ಹೋಗುತ್ತಿದ್ದೇವು. ಆದರೆ ನನ್ನ ಹೆಂಡತಿಗೆ ಅಸ್ತಮಾ ಸೇರಿತು. ಆಗ ನನ್ನ ಮಗನಾಗಲಿ ಸೊಸೆಯಾಗಲಿ ನಮ್ಮ ಕಡೆ ಬನ್ನಿ ನೋಡುತ್ತೇವೆ ಅನ್ನಲೇ ಇಲ್ಲ. ನನಗೆ ಕೈಲಾದಷ್ಟು ಹೆಂಡತಿಯನ್ನು ಗುಣಪಡಿಸಲು ಆಸ್ಪತ್ರೆಗೆ ತೊರಿಸಿದೆ. ಆದರೆ ಅವಳು ಉಳಿಯಲಿಲ್ಲ.  ನನ್ನ ಹೆಂಡತಿ ತೀರಿ ಹೋಗಿ ಈಗ ನಾಲ್ಕೈದು ವರ್ಷಗಳಾಗಿವೆ. ನನಗೂ ವಯಸ್ಸಾಗಿದ್ದರಿಂದ ಇಲ್ಲಿ ಒಬ್ಬನೇ ಇರಲಾಗದೆ ಅನಿವಾರ್ಯವಾಗಿ ಮಗನ ಮನೆಯಲ್ಲಿದ್ದೇನೆ. ಸೊಸೆಯ ತಾತ್ಸಾರ, ಅಸಹನೆಯ ನಡೆಯನ್ನು ಸಹಿಸಿಕೊಂಡು ಇನ್ನೂ ಬದುಕಿದ್ದೇನೆ. ಮಗ ಮನೆಯನ್ನು ಮಾರಿ ಬಿಡು ಅಪ್ಪಾ ಅನ್ನುತ್ತಿದ್ದಾನೆ. ನಾಡು ಬಾ ಅನ್ನುತ್ತೆ ಕಾಡು ಹೋಗು ಅನ್ನುತ್ತೆ.  ಅದೇಕೊ ಮನಸ್ಸಿಗೆ ನನ್ನ ವಿಶಾಲಳು ನನ್ನನ್ನು ಕರೆದಂತೆ ಬಾಸವಾಯಿತು. ಅವಳ ಪೊಟೊ ಇದೆ ಮನೆಯಲ್ಲಿದೆ. ಅದನ್ನು ತೆಗೆದುಕೊಳ್ಳಲು ಹಾಗೆಯೆ ಮನೆ ಮಾರುವದಕ್ಕೆ ಎಜಂಟರನ್ನು ವಿಚಾರಿಸಲು ಒಂದುವಾರ ಇದ್ದು ಹೋದರಾಯಿತು ಎಂದು ಬಂದೆ. ಇಲ್ಲಿಗೆ ಬಂದ ಮೇಲೆ ಅದೇಕೊ ಮಗನ ಆತ್ಮ ಹತ್ಯೆ, ಹೆಂಡತಿಯ ಸಾವಿನ ಹಳೆಯ ನೆನಪುಗಳು ಕಾಡಿದವು. ನಿನ್ನೆ ಒಬ್ಬ ಎಜೆಂಟನಿಗೆ ಮನೆಯನ್ನು ಮಾರುವ ಬಗ್ಗೆ ತಿಳಿಸಿದ್ದೇನೆ.  ನಾಳೆ ಮಗನ ಹತ್ತಿರ ಹೊರಟಿದ್ದೇನೆ. ಎಂದು ತಮ್ಮ ಕಥೆ ಹೇಳಿದರು. ನಾನು “ಮನೆಗೆ ಒಮ್ಮೆ ಬಂದು ಹೋಗಿ ಸರ್” ಎಂದು ಅಹ್ವಾನಿಸಿದೆ. “ಇಲ್ಲ ನಾಳೆ ಬೆಳಿಗ್ಗೆಯೇ ಹೊರಡುತ್ತಿದ್ದೇನೆ. ನೋಡೊಣ ದೇವರು ನಿಮ್ಮನ್ನು ಮತ್ತೊಮ್ಮೆ ಕಾಣುವ ಭಾಗ್ಯ ಬರೆದಿದ್ದಿರೆ ಖಂಡಿತಾ ಭೇಟಿ ಆಗೋಣ” ಎನ್ನುತಿರಲು ಅವರ ಮನೆ ಗೇಟು ಬಂತು. ದೇಸಾಯರು ಕೈಯಲ್ಲಿ ಕೋಲು ಹಿಡಿದು ಗೇಟ ಬಾಗಿಲು ತೆಗೆದು ಒಳ ಹೊರಟರು ಹಿಂದೆಯೇ ಅವರನ್ನು ನೋಡುತ ಸ್ವಲ್ಪ ಹೊತ್ತು ನಿಂತೆ.   *******  ಅದೇಕೊ ಅವರ ಕಥೆ ಕೇಳಿ ಮನಕೆ ಬೇಸರವಾಗಿ ಒಂದೆರಡು ದಿನ ವಾಕಿಂಗಗೆ ಹೋಗಲು ಮೂಡೆ ಬರಲಿಲ್ಲ. ಹೆಂಡತಿ “ಏಕೆ ವಾಕಿಂಗೆ ಹೋಗುವದಿಲ್ಲವೇ? ಏನಾದರೂ ತೊಂದರೆಯಾ” ಎಂದಾಗ. “ಏನಿಲ್ಲ ಆಮೇಲೆ ಹೇಳುತ್ತೇನೆ” ಎಂದು ವಾಕಿಂಗೆ ಹೊರಟೆ. ನನ್ನ ಕಾಲಗಳದೇಕೊ ದೇಸಾಯರ ಮನೆ ಹತ್ತಿರ ಬಂದಾಗ ತಾವಾಗಿಯೇ ನಿಂತು ಕೊಂಡವು.  ಮನದೊಡೆಯ ಮನೆಯೊಳಗೆ ಇರಲಿಲ್ಲ. ಮನವೇಕೊ ಬಾರವಾದಂತೆನಿಸಿತು. ಬಾಗಿಲ ಬಳಿ ಬಂದಾಗ ಬಾಗಿಲಿಗೆ ಕೀಲಿ ಹಾಕಿತ್ತು. ಮೊದಲ ಅನೇಕ ಬಾರಿ ನೋಡಿದಾಗ ಮನದಲ್ಲಿ ಗುಣಗಣಿಸುತ್ತಿದ್ದ ಬಸವಣ್ಣನವರ ವಚನ  ದೂರದ ಗಾಳಿಯಲ್ಲಿ ತೇಲಿ ಬಂದು ಕಿವಿಯಲ್ಲಿ ಗುನುಗುನಿಸಿದಂತೆ ಭಾಸವಾಯಿತು.  *ಮನೆಯೊಳಗೆ* *ಮನೆಯೊಡೆಯನಿದ್ದಾನೊ* *ಇಲ್ಲವೊ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ* *ಮನೆಯೊಳಗೆ ರಜ ತುಂಬಿ* *ಮನೆಯೊಳಗೆ* *ಮನೆಯೊಡೆಯನಿದ್ದಾನೊ* *ಇಲ್ಲವೊ ತನುವಿನಲ್ಲಿ ಹುಸಿ ತುಂಬಿ* *ಮನದೊಳಗೆ ವಿಷಯ ತುಂಬಿ* *ಮನದೊಳಗೆ* [ *ಮನದೊ]ಡೆಯನಿದ್ದಾನೊ* *ಇಲ್ಲವೊ ಇಲ್ಲ* *ಕೂಡಲಸಂಗಮದೇವಾ* . ಶ್ರೀದೇವಿ. ಮ.ಗುಮ್ಮಗೋಳ

“ಮನೆಯೊಳಗಿಲ್ಲ ಮನದೊಡೆಯ” ಸಣ್ಣ ಕಥೆ,ಶ್ರೀದೇವಿ. ಮ.ಗುಮ್ಮಗೋಳ ಅವರಿಂದ Read Post »

ಕಥಾಗುಚ್ಛ

ಸುಮಲತಾ ಗಡಿಯಪ್ಪನವರ ಸಣ್ಣ ಕಥೆ”ಒಂಟಿತನ”

ಕಥಾ ಸಂಗಾತಿ ಸುಮಲತಾ ಗಡಿಯಪ್ಪನವರ “ಒಂಟಿತನ” ನಾರಾಯಣರಾಯರ ಮನೆಗೆ ಬೆಳಕು ಬರುವುದು ಸೂರ್ಯನಿಂದಲ್ಲ; ಅದು ನೆನಪುಗಳ ಮಿಡಿತದಿಂದ. ಮುಂಜಾನೆ ಕಿಟಕಿಯ ಅಂಚಿನಿಂದ ಸರಿದುಬರುವ ತಣ್ಣನೆಯ ಗಾಳಿ, ಅವರ ಕಿವಿಯಲ್ಲಿ ಲಕ್ಷ್ಮೀದೇವಿಯ ಧ್ವನಿಯಾಗಿ ಅರಳುತ್ತಿತ್ತು—“ಏಳಿ… ಕಾಫಿ ತಣ್ಣಗಾಗುತ್ತಿದೆ.” ಆದರೆ ಕಣ್ಣು ತೆರೆದ ಕ್ಷಣವೇ ಎದುರುಗೊಳ್ಳುವುದು ಖಾಲಿ ಹಾಸಿಗೆ. ಹತ್ತು ವರ್ಷಗಳ ಹಿಂದೆ ಶಾಶ್ವತ ನಿದ್ರೆಗೆ ಜಾರಿದ ಪತ್ನಿಯ ಕೊರತೆ, ಪ್ರತಿದಿನವೂ ಹೊಸ ಗಾಯದಂತೆ ಎದೆಯನ್ನು ಕೀಳುತ್ತಿತ್ತು. ಕಾಲ ಮುಂದಕ್ಕೆ ಓಡುತ್ತಿತ್ತು; ಅವರ ಮನಸ್ಸು ಮಾತ್ರ ಹಿಂದೆ ಉಳಿದಿತ್ತು. ಕನ್ನಡಿಯ ಮುಂದೆ ನಿಂತಾಗ ಅವರು ತಮ್ಮ ಪ್ರತಿಬಿಂಬವನ್ನೇ ಗುರುತಿಸಲಾರರು. ಒಮ್ಮೆ ಈ ಮನೆಯ ಆಧಾರವಾಗಿದ್ದ ಮುಖ ಈಗ ನೆರಳಿನಂತೆ ಕುಗ್ಗಿತ್ತು—ಬಿಳಿಬಿದ್ದ ಕೂದಲು, ಒಳಗೆ ಕುಸಿದ ಕಣ್ಣುಗಳು, ನಿಶ್ಯಬ್ದ ನಿಟ್ಟುಸಿರು. ಗೋಡೆಗಳಲ್ಲೂ ಒಂಟಿತನದ ವಾಸನೆ ಅಂಟಿಕೊಂಡಂತಿತ್ತು. ಅಡುಗೆಮನೆಯ ಪಾತ್ರೆಗಳು ನೆನಪಿನಲ್ಲಿ ಮಾತನಾಡುತ್ತಿದ್ದವು. ಲಕ್ಷ್ಮೀದೇವಿಯ ಕೈರೇಖೆಯ ರುಚಿ ಇನ್ನೂ ಅವುಗಳೊಳಗೆ ಉಳಿದಿತ್ತು; ಆದರೆ ಅನ್ನಕ್ಕೆ ರುಚಿ ಇರಲಿಲ್ಲ. ಆಗ ಅವರಿಗೆ ಅರಿವಾಯಿತು—ರುಚಿ ಅನ್ನದಲ್ಲಿರಲಿಲ್ಲ, ಜೊತೆಯಲ್ಲಿತ್ತು. ಮಕ್ಕಳು ಇದ್ದರು—ದೂರದ ನಗರಗಳಲ್ಲಿ. ದೊಡ್ಡ ಹುದ್ದೆ, ದೊಡ್ಡ ಮನೆ, ದೊಡ್ಡ ಕನಸುಗಳು. ಆದರೆ ಅಪ್ಪನ ಬದುಕು ಮಾತ್ರ ನಿಧಾನವಾಗಿ ಕರಗುತ್ತಿತ್ತು. ತಿಂಗಳಲ್ಲಿ ಒಮ್ಮೆ ಬರುವ ಫೋನ್ ಕರೆ—“ಅಪ್ಪ, ಆರೋಗ್ಯ ಹೇಗಿದೆ?” ಪ್ರಶ್ನೆಯಲ್ಲೇ ಮುಗಿದುಹೋಗುತ್ತಿತ್ತು. ಅವರು ಎಂದಿನಂತೆ “ಚೆನ್ನಾಗಿದ್ದೇನೆ” ಎನ್ನುತ್ತಿದ್ದರು. ಸಮಾಜ ಕಲಿಸಿದ ಪಾಠ—ಗಂಡಸು ಅಳಬಾರದು, ನೋವು ತೋರಿಸಬಾರದು—ಅವರ ನಾಲಿಗೆಯನ್ನು ಕಟ್ಟಿಹಾಕಿತ್ತು. ಸಂಜೆಯಾದರೆ ಮನೆ ಇನ್ನಷ್ಟು ಭಾರವಾಗುತ್ತಿತ್ತು. ಗೋಡಿಯ ಮೇಲಿನ ಲಕ್ಷ್ಮೀದೇವಿಯ ಫೋಟೋ ಮುಂದೆ ಕುಳಿತು ಅವರು ಮೃದುವಾಗಿ ಮಾತಾಡುತ್ತಿದ್ದರು:“ನೀನಿಲ್ಲದೆ ಮಾತಾಡೋದಕ್ಕೂ ಅರ್ಥವಿಲ್ಲ ಲಕ್ಷ್ಮೀ…” ಉತ್ತರ ಸಿಗುತ್ತಿರಲಿಲ್ಲ. ಮೌನ ಮಾತ್ರ ಉಸಿರಾಡುತ್ತಿತ್ತು. ಒಂದು ರಾತ್ರಿ ಎದೆನೋವು ಹಠಾತ್ತಾಗಿ ದಾಳಿ ಮಾಡಿತು. ಉಸಿರು ಭಾರ, ಕೈ ಕಾಲು ಜಡ. ಫೋನ್ ಪಕ್ಕದಲ್ಲೇ ಇತ್ತು; ಆದರೆ ಕರೆ ಮಾಡಲು ಮನಸ್ಸು ಒಪ್ಪಲಿಲ್ಲ—“ಮಕ್ಕಳಿಗೆ ತೊಂದರೆ ಕೊಡಬಾರದು.” ಆ ಕ್ಷಣದಲ್ಲಿ ಅವರಿಗೆ ಸಾವು ಭಯವಲ್ಲ; ಯಾರಿಗೂ ಗೊತ್ತಾಗದೆ ಸಾಯುವ ಭಯ ಹೆಚ್ಚಾಗಿತ್ತು. ವರ್ಷಗಳ ಕಾಲ ಒತ್ತಿಹಿಡಿದ ನೋವು ಒಮ್ಮೆಲೆ ಒಡೆದು ಹರಿಯಿತು. ಕಣ್ಣೀರು ಜಾರಿ ಬಿದ್ದಿತು. ಅವರು ತಮ್ಮೊಳಗೆ ನುಡಿಯಿದರು:“ನಾನು ಗಂಡಸು… ಆದರೂ ನನಗೂ ಭಯವಾಗುತ್ತೆ.” ಮರುದಿನ ಬೆಳಗ್ಗೆ ಪಕ್ಕದ ಮನೆಯ ಚಿಕ್ಕ ಹುಡುಗಿ ಹಾಲು ಕೊಡಲು ಬಂದಳು. ಬಾಗಿಲು ಅರ್ಧ ತೆರೆದಿತ್ತು. ಅವಳು ಒಳಗೆ ಬಂದು ಆತಂಕದಿಂದ ಹೇಳಿದಳು:“ಅಜ್ಜ, ನಿನ್ನೆ ನೀವು ಕಾಣಿಸಲಿಲ್ಲ… ನನಗೆ ಭಯ ಆಯ್ತು.” ಆ ಒಂದು ವಾಕ್ಯ ಅವರ ಒಳಗಿನ ಕತ್ತಲೆಗೆ ದೀಪ ಹಚ್ಚಿತು. ಯಾರೋ ತನ್ನ ನ್ನು ಗಮನಿಸಿದ್ದಾರೆ ಎಂಬ ಅರಿವು, ಅವರನ್ನು ಮತ್ತೆ ಬದುಕಿನ ಕಡೆ ತಿರುಗಿಸಿತು. ಆ ದಿನ ಅವರು ಮೊದಲ ಬಾರಿ ನಗುಸಹಿತ “ಬಾ ಮಗಳೇ, ಕುಡಿ ಕಾಫಿ” ಎಂದರು. ನಾರಾಯಣರಾಯರಿಗೆ ಸ್ಪಷ್ಟವಾಯಿತು—ಮನುಷ್ಯನಿಗೆ ಅನ್ನ, ನೀರು, ಔಷಧಿ ಮಾತ್ರ ಸಾಲದು; ಮಾತು, ಕಾಳಜಿ, ಜೊತೆಗಾರಿಕೆ ಬೇಕು.ಹಿರಿಯ ವಿಧುರನ ನೋವು ಕಣ್ಣಿಗೆ ಕಾಣುವುದಿಲ್ಲ.ಅವನು ಕೂಗುವುದಿಲ್ಲ, ಬೇಡಿಕೊಳ್ಳುವುದಿಲ್ಲ—ಮೌನವಾಗಿ ಕರಗುತ್ತಾನೆ. ಸುಮಲತಾ ಗಡಿಯಪ್ಪನವರ

ಸುಮಲತಾ ಗಡಿಯಪ್ಪನವರ ಸಣ್ಣ ಕಥೆ”ಒಂಟಿತನ” Read Post »

ಕಥಾಗುಚ್ಛ

 ಶ್ರೀದೇವಿ. ಮ. ಗುಮ್ಮಗೋಳ ಅವರ ಸಣ್ಣಕಥೆ “ಬಾಡಿದ ಮೊಗ್ಗು ಅರಳಿತು”

ಕಥಾ ಸಂಗಾತಿ  ಶ್ರೀದೇವಿ. ಮ. ಗುಮ್ಮಗೋಳ “ಬಾಡಿದ ಮೊಗ್ಗು ಅರಳಿತು” pic=chat gpt ಅಂದು ನಾನು ಯುನಿವರ್ಸಿಟಿ ಕ್ಲಾಸ್ ಮುಗಿಸಿ ಮನೆಗೆ ಹೋಗಲು ಬಸ್ ಸ್ಟಾಪ್ ನಲ್ಲಿ ನಿಂತಿದ್ದೆ. ಹಿಂದಿನಿಂದ ಬೆನ್ನಿಗೆ ಯಾರೊ ಗುದ್ದಿದಂತಾಯಿತು‌. ಹೊರಳಿ ನೋಡಿದೆ. “ಎಯ್ ಭಾರತಿ…. ಹೇಗಿದ್ದಿಲೇ…. ನಾನು ಸುಜಾತಾ. ಎಷ್ಟ ವರಷ ಆತು ನಿನ್ನ ನೋಡಿ….. ಹೆಂಗದ್ದಿ ಹಂಗ ಇದಿ….. ಒಂಚೂರು ಬದಲಾಗಿಲ್ಲ” ಎಂದ ಅವಳನ್ನೆ ದಿಟ್ಟಿಸಿ ನೋಡತೊಡಗಿದೆ.  ಗುಲಾಬಿ ಬಣ್ಣದ ಸೀರೆ ಉಟ್ಟು ಬಿಳಿ ಬಣ್ಣದ ರವಿಕೆ ತೊಟ್ಟಿದ್ದಳು. ಮುಖ ನೋಡಿ ಗುರುತು ಹಿಡಿದೆ. ಅವಳು ನನ್ನ ಪ್ರೈಮರಿ ಸ್ಕೂಲಿನ ಸ್ನೇಹಿತೆ ಕ್ಲಾಸ್ ಮೇಟ್ ಸುಜಾತಾ. ಆಗ ನಾವು ಹಳ್ಳಿಯಲ್ಲಿದ್ದೇವು. ನಮ್ಮ ತಂದೆ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ಪ್ರೈಮರಿ ಎಜುಕೇಶನ್ ಹಳ್ಳಿಯಲ್ಲೆ ಆಯಿತು. ನಂತರ ನಮ್ಮ ತಂದೆಗೆ ವರ್ಗವಾಗಿ ನಗರಕ್ಕೆ ಬಂದೇವು.    “ಓ… ನೀನಾ ಅರಾಮ ಅದೇನಿ.   ನೀನು ಇಲ್ಲಿ….. ಕಾಲೇಜ ಅಡ್ಮಿಶನ್ ಮಾಡ್ಸಿದಿಯಾ….?  ನಾನು ಎಂ.ಏ ಎಕ್ಸಟರ್ನಲ್ ಮಾಡಾಕ್ಕತ್ತೇನಿ… ನಿನ್ನ ನೋಡಿ ಎಷ್ಟೊ ವರಷಗಳಾದವು ಬಾ ಇಲ್ಲಿ ಕೂತು ಮಾತಾಡೋಣ” ಎಂದು ಪಕ್ಕದಲ್ಲೆ ಇದ್ದ ಪಾರ್ಕಗೆ ಕರೆದುಕೊಂಡು ಹೋದೆ. ಸಮೀಪದಲ್ಲೆ ಇದ್ದ ಒಂದು ಬೆಂಚ್ ಮೇಲೆ‌ ಇಬ್ಬರು ಕುಳಿತೇವು.  ಒಬ್ಬರಿಗೊಬ್ಬರು ಕುಶಲೋಪಚರಿ ಮಾತನಾಡಿದೇವು. ಅವಳು ಸಮೀಪದ ಒಂದು ಹಳ್ಳಿಯಲ್ಲಿ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿದಳು. “ಲೇ… ಅಂದು ನೀನು ನನಗೆ ಸಹಾಯ ಮಾಡದ ಇದ್ದಿದ್ದರ ನಾ ಇವತ್ತು ಟೀಚರ್ ಆಗಿರ್ತಿದ್ದಿಲ್ಲ. ನನ್ನ ಮಾವನ ಊರಲ್ಲಿ ಪಾತ್ರೆ ಮುಸುರೆ ತಿಕ್ಕುತ ನಾಲ್ಕೈದು ಮಕ್ಕಳ ತಾಯಿಯಾಗಿ ಹಳ್ಳಿಯಲ್ಲಿ ಕೆಲಸಕ್ಕೆ ಬಾರದವಳಾಗಿ ಬದಕ್ತಿದ್ನಿ. ಶಿಕ್ಷಣದಿಂದ ವಂಚಿತಳಾಗ್ತಾ ಇದ್ನಿ. ನನ್ನ ಮದುವೆಯೊಳಗ ಆದ ಘಟನೆಯಿಂದ ಮನಿಯವರಿಗೂ ತಿಳುವಳಿಕೆ ಬಂದು ನನಗ ಓದು ಮುಂದ ವರಿಸಿದರು.  ಈಗ ಟೀಚರಾಗಿ ಹಳ್ಳಿಯಲ್ಲಿ ಕೆಲಸಾ ಮಾಡಕ್ಕತ್ತೇನಿ. ಅದಕ ನೀನ.. ಕಾರಣ ನಿನಗ.. ಎಷ್ಟ ಥ್ಯಾಂಕ್ಸ ಹೇಳಿದರು ಸಾಲದು….” ಅಂದ್ಲು. “ಎಯ್ ಬಿಡ ಸುಜಾತಾ… ಆ ಟೈಮ್ನಾಗ ನನಗ ಏನೊ ತಿಳಿತೊ… ಏನೊ ಒಟ್ಟನಲ್ಲಿ ನೀನು ಶಿಕ್ಷಣದಿಂದ ವಂಚಿತಳಾಗುದು ತಪ್ಪತು ಅನ್ನುದು ನನಗ ಬಾಳ ಖುಷಿ ಅನಸ್ತದ….. ನಡಿ ನಮ್ಮನಿಗ ಹೋಗುನ ನಿನ್ನ ನೋಡಿ ಮನಿಯೊಳಗ ಅಪ್ಪ ಅವ್ವನು ಖುಷಿ ಪಡತಾರ” ಅಂದೆ. “ಇಲ್ಲ ಇನ್ನೊಂದಿನ ಬರತೇನಿ ನಿನ್ನ ಅಡ್ರೆಸ್ ಕೊಡು.” ಎಂದು ನನ್ನ ವಿಳಾಸ ಇಸಿದುಕೊಂಡಳು. ನನ್ನ ನೆನಪುಗಳು ಬಾಲ್ಯ ದಿನಗಳತ್ತ ಜಾರಿದವು. ************ ಸುಜಾತಾ ಮತ್ತು ನಾನು ಒಂದೇ ತರಗತಿಯಲ್ಲಿ ಓದುತಾ ಇದ್ವಿ. ಸುಜಾತಾ ಅಪ್ಪ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ತುಂಬಾ ಬಡವರು. ಇಬ್ಬರು ಅಣ್ಣಂದಿರು.  ಸುಜಾತಾ ಓದುವದರಲ್ಲಿ ಮುಂದಿದ್ದಳು. ಯಾವಾಗಲೂ ಕ್ಲಾಸಿಗೆ ಫಸ್ಟ ಬರುತ್ತಿದ್ದಳು. ಮಾಸ್ತರು “ನೋಡ್ರಿ ಸುಜಾತನ ನೋಡಿ ಕಲಿರಿ…. ಅವರಪ್ಪ ಕೂಲಿ ಕೆಲಸಾ ಮಾಡತಾನು. ಆದರೂ… ಹೆಂಗ ಕಷ್ಟ ಪಟ್ಟ ಓದತಾಳು.” ಎಂದು ಹೇಳುತ್ತಿದ್ದರು.  ನಾವಿಬ್ಬರೂ ಆಗ ಏಳನೇ ತರಗತಿಯಲ್ಲಿದ್ದಿವಿ. ಸಜಾತಾ ಒಂದು ವಾರ ಶಾಲೆಗೆ ಬರಲಿಲ್ಲ. ಅವರಜ್ಜಿ ತೀರಿಕೊಂಡಿದ್ದರು. ಮೂರ್ನಾಲ್ಕು ತಿಂಗಳಿಗೆ ಪರೀಕ್ಷೆ ಇತ್ತು.  ಶಾಲೆಗೆ ಬರಲು ಶುರು ಮಾಡಿದ ಮೇಲೆ ಯಾಕೊ ಸುಜಾತ ಮೊದಲಿನ ತರಹ ಲವಲವಿಕೆಯಿಂದ ನಗನಗತಾ ಇರಲಿಲ್ಲ. ಯಾವಾಗಲೂ ಒಬ್ಬಂಟಿಯಾಗಿ ಮೌನವಾಗಿರ ತೊಡಗಿದಳು. ನಾನು ಆಟಕ್ಕೆಲ್ಲಾ ಅವಳನ್ನು ಒತ್ತಾಯದಿಂದ ಹಿಡಿದೇಳದುಕೊಂಡು ಹೋಗುತ್ತಿದ್ದೆ. ಅವಳ ಬದಲಾಗಿರುವದನ್ನು ನೋಡಿ ಒಂದ ದಿನ ಕೇಳಿದೆ “ಸುಜಿ…ಯಾಕೆ ಒಂತಾರ ಅದಿ. ಹಿಂಗ್ಯಾಕ ಮಾಡಕ್ಕತ್ತಿ….. ನನ್ನ ಜೊತಿ ಆಟನು ಅಡವಲ್ಲಿ.‌‌‌‌ ಚಂದಂಗ….. ಮಾತಾಡುವಲ್ಲಿ ಹಂಗಂದರ…‌ ನಾನ ನಿನ್ನ ಚಾಳಿ ಟೂ ಬಿಡತೇನಿ ನೋಡ ಮತ್ತ…” ಆಗ ಸುಜಾತ ಅಳತೊಡಗಿದಳು. ನಾನು ಅವಳನ್ನು ಗಟ್ಡಿಯಾಗಿ ಹಿಡಿದು ತಬ್ಬಿಕೊಂಡು “ಯಾಕ ಸುಜಿ…ಯಾಕ ಅಳಾತಿ…. ಏನ ಆತು ಹೇಳು..” “ಲೇ ಭಾರಿ… ನಮ್ಮನ್ಯಾಗ ನಮ್ಮಾವನ ಜೋಡಿ ನನಗ ಮದ್ವಿ…..ಮಾಡತರಂತ ನನಗ ಇಷ್ಟ ಇಲ್ಲ ನಾನ ಓದಬೇಕು. ಸಾಲಿ ಕಲಿಬೇಕು” ಅಂದು ಒಂದೇ ಸವನೇ ಅಳತೊಡಗಿದಳು. ನನಗೂ ಅಳು ಬಂದಂಗ ಆತು. “ಲೇ ಹಂಗರ ನೀನು… ನನ್ನ ಬಿಟ್ಟ ಹೋಗ್ತಿ… ನೀನು ಹೋಗುದ ಬ್ಯಾಡ. ಸ್ಯಾಣ ಅದಿ ನೀ… ಸಾಲಿ ಕಲಿಬೇಕು” ಎಂದೆ. ಇಬ್ಬರು ಒಬ್ಬರಿಗೊಬ್ಬರು ಸಮಾದಾನ ಮಾಡಿಕೊಂಡು ಮನಿಗೆ ಹೋದೆವು. ಮುಂದಿನ ವಾರ ಅವಳ ಮದುವೆ ಇತ್ತು. ಏಕೊ ನನಗೂ ಪಾಪ ಅನಿಸಿತ್ತು. ಎನ ಮಾಡೊದು ತಿಳಿಯಲಿಲ್ಲ. ಹಿರಿಯರನ್ನು ಎದುರಿಸಿ ನಡೆಯುವಂತ ದಿನಗಳು ಆಗಿರಲಿಲ್ಲ. ಮನೆಯಲ್ಲಿ ನನ್ನ ಅಪ್ಪ ಅಮ್ಮ ಸುಶಿಕ್ಷಿತರಾಗಿದ್ದರು. ಶಾಲೆಯ ಎಲ್ಲ ವಿಷಯಗಳನ್ನ ನಾನು ಮನೆಯಲ್ಲಿ ಹೇಳತಾ ಇದ್ದೆ. ಮರುದಿನ ಊಟಕ್ಕೆ ಕೂತಾಗ ಅಪ್ಪ ಅಮ್ಮನಿಗೆ “ಅಪ್ಪ ಅಮ್ಮಾ ಪಾಪ ಸುಜಾತನ್ನ ಮದ್ವಿ ಮಾಡತಾರಂತ….ಅವಳಗ ಮದ್ವಿ ಆಗಾಕ ಇಷ್ಟನ ಇಲ್ಲಂತ‌. ಪಾಪ ಅಳಾಕ್ಕತ್ತಿದ್ಲು. ಅಕೀನ ಮದ್ವಿ ನಿಲ್ಲಸಾಕ ಬರುದಿಲ್ಲಾ? ” ಅಂತ ಕೇಳದೆ.  ನಮ್ಮ ತಂದೆ “ಅಯ್ಯೊ! .. ಇಷ್ಟ ಸಣ್ಣ ವಯಸ್ಸಿಗೆ ಮದುವಿ ಮಾಡಾಕತ್ತಾರು….. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಪರಾಧ. ಇದಕ್ಕೆ ದಂಡ ಮತ್ತು ಶಿಕ್ಷೆ‌ ಐತಿ… ಏನ್ ತಿಳಲಾರದ ಅನಕ್ಷರಸ್ಥರು…. ಹಿಂಗ… ಮಕ್ಕಳ ಭವಿಷ್ಯನ ಹಾಳ ಮಾಡತಾರು…. ನನ್ನ ಸ್ನೇಹಿತನೊಬ್ಬ ಮಕ್ಕಳ ಮತ್ತು ಕಲ್ಯಾಣ ಇಲಾಖೆಯೊಳಗ ಕೆಲಸಾ ಮಾಡತಾನು ನಾನು ವಿಚಾರಸತೇನಿ” ಅಂದರು. “ಅಪ್ಪಾ …ಅಪ್ಪಾ ಹೆಂಗರ ಮಾಡಿ ಸುಜಾತನ ಮದ್ವಿ ನಿಲ್ಲುಂಗ ಮಾಡು” ಅಂತ ಗೋಗರದೆ. ನನ್ನಪ್ಪ ಪೊನಿನಲ್ಲಿ ಯಾರದೊ ಜೊತೆ ಮಾತನಾಡಿದರು. ******* ಅಂದು ಮನೆಯ ಮುಂದೆ ಸುಜಾತಳ ಮದುವೆ ನಡೆಯುತ್ತಿತ್ತು. ಸುಜಾತ ಕೆಂಪು ಸೀರೆಯನ್ನು ಉಟ್ಟು, ಹಣೆಗೆ ಕುಂಕುಮ ಕೈ ತುಂಬ ಹಸಿರು ಬಳೆ ತೊಟ್ಟು ವಧುವಿನಂತೆ ಶೃಂಗಾರಗೊಂಡಿದ್ದಳು. ಆದರೆ ಮುಖದಲ್ಲಿ ಹರ್ಷವಿರಲಿಲ್ಲ. ಅಳು ಒತ್ತಿ ಒತ್ತಿ ಬರುತ್ತಿತ್ತು. ಅಲಂಕರಿಸಿದ ತಾಟಿನಲ್ಲಿ ಬಾಡಿದ ಹೂವನ್ನು ಇಟ್ಟಂತೆ ಬಾಸವಾಗುತ್ತಿತ್ತು.  ಅರಳುತಿರುವ ಮೊಗ್ಗನ್ನು ಚಿವುಟಿದಂತೆನಿಸಿತು. ಅವಳ ಸೋದರ ಮಾವನಿಗೆ ಅವಳು ಬುಜಕ್ಕಿಂತಲೂ ಕೆಳಗೆ ಅವನ ಮೊಣಕೈ ಗೆ ಬರುತ್ತಿದ್ದಳು. ನಾನು ಒಳಗೊಳಗೆ ವ್ಯಥೆ ಪಡುತ್ತಿದ್ದೆ ಅಪ್ಪನಿಗೆ ಹೇಳಿದ್ದೆ. ಅಪ್ಪನಿಂದ ಮದುವೆ ನಿಲ್ಲಸಲು ಆಗುವದಿಲ್ಲವೆಂದು ಕಾಣಿಸುತ್ತದೆ. ಇಲ್ಲವಾದರೆ ಇಷ್ಟೊತ್ತಿಗೆ ಅಪ್ಪ ಸುಜಾತಳ ತಂದೆ ತಾಯಿಗೆ ತಿಳಿ ಹೇಳಿ ಮದುವೆ ನಿಲ್ಲಿಸಿತ್ತಿದ್ದರು. ಪಾಪ ಸುಜಾತಾಳನ್ನು ತಾನಿನ್ನು ಶಾಲಿಯಲ್ಲಿ ನೋಡಲು ಸಾದ್ಯವಿಲ್ಲ ಎಂದುಕೊಂಡು ಒಳಗೆ ಮನಸ್ಸಿಗೆ ನೋವಾಯಿತು.  ಅಷ್ಟರಲ್ಲಿ ಯಾವುದೊ ಗಾಡಿಯೊಂದು ಜನರ ಮಧ್ಯೆ ಬಂದು ನಿಂತಿತು. ತಿರುಗಿ ನೋಡಿದೆ ಜೀಪಿನಿಂದ ಸೀರೆಯುಟ್ಟ ಇಬ್ಬರು ಹೆಂಗಸರು ಒಬ್ಬ ಪೊಲಿಸ್ ಮತ್ತು ಮತ್ತೊಬ್ಬ ದಡೂತಿ ಮನುಷ್ಯನಿದ್ದ. ಪೊಲಿಸ್ ನನ್ನು ನೋಡಿ ಜನರೆಲ್ಲಾ ಗಾಬರಿಯಾದರು. ಅವರು ಸುಜಾತಳ ತಂದೆ ತಾಯಿಯನ್ನು ಕರೆಯಿಸಿದರು. ಪೊಲಿಸ್ “ನೋಡಮ್ಮಾ ಹದಿನೆಂಟು ವರುಷದ ಒಳಗಿನ ಹೆಣ್ಣು ಮಕ್ಕಳನ್ನ ಮದುವೆ ಮಾಡು ಹಾಗಿಲ್ಲ. ಅದರಲ್ಲೂ ಇನ್ನೂ ಸಾಲಿ ಕಲಿಯುತ್ತಿರುವ ಇಂತಹ ಪುಟ್ಟ ಮಕ್ಕಳನ್ನು ಮದುವೆ ಮಾಡಿಸುವದು ಅಪರಾಧ. ಮೊದಲು ಮದುವೆಯನ್ನು ನಿಲ್ಲಿಸಿ ಇಲ್ಲಾ ಅಂದರೆ ಜೈಲಗೆ ಹೋಗಬೇಕಾಗುತ್ತದೆ ದಂಡ ಕಟ್ಟಬೇಕಾಗುತ್ತದೆ.” ಎಂದು ಗದರಿಸಿದ. ಇಬ್ಬರು ಹೆಂಗಸರು ಬಂದು ಸುಜಾತಳನ್ನು ಮದುವೆ ಮಂಟಪದಿಂದ ಹೊರಗೆ ಕರೆದು ಕೊಂಡು ಬಂದು ಅವಳ ಉಡುಗೆ ತೊಡುಗೆಗಳನ್ನು ಬದಲಾಯಿಸಲು ಹೇಳಿದರು. ಹೆದರಿದ ಸುಜಾತಳ ತಂದೆ ತಾಯಿ ಅವರು ಹೇಳಿದಂತೆ ಮದುವೆ ನಿಲ್ಲಿಸಿದರು. ನಾನು ನನ್ನ ಗೆಳತಿ ಸುಜಾತಳನ್ನು ಹೋಗಿ ತಬ್ಬಿಕೊಂಡೆ. ಬಾಡಿದ ಅವಳ ಮುಖದಲ್ಲಿ ಮಂದಹಾಸವನ್ನು ಕಂಡೆ. ಬಾಡಿದ ಮೊಗ್ಗು ಸಂತೊಷದಿಂದ ಹಿರಿ ಹಿರಿ ಹಿಗ್ಗಿತು. ನಳನಳಸಿತು.……. ಅದರ ಮುಂದಿನ ವರುಷ ನಮ್ಮ ತಂದೆಗೆ ನಗರಕ್ಕೆ ವರ್ಗವಾಗಿ ನಾವು ಊರು ಬಿಟ್ಟು ಹೋದೇವು.  ಸುಜಾತ ಮತ್ತು ನನ್ನ ಸಂಪರ್ಕವೇ ಇರಲಿಲ್ಲ. ಈಗ ಅವಳು ಸಿಕ್ಕಿದ್ದು ನನಗೆ ಬಹಳವೇ ಸಂತೋಷ ತಂದಿತ್ತು. ಅಂದೇನಾದರೂ ಅವಳ ಮದುವೆ ನಿಲ್ಲದಿದ್ದರೆ ಮೊಗ್ಗಾಗಿದ್ದ ಸುಜಾತ ಹೂವಾಗಿ ಅರಳುವ ಮುಂಚೆಯೇ ಬಾಡಿ ಹೋಗುತ್ತಿದ್ದಳು. ಇಂದು ಅವಳ ಮುಖ ನೋಡಿ ಬಾಡಿದ ಮೊಗ್ಗು ಅರಳಿ ನಕ್ಕಂತೆ ಕಂಡಿತು.  ಶ್ರೀದೇವಿ. ಮ. ಗುಮ್ಮಗೋಳ

 ಶ್ರೀದೇವಿ. ಮ. ಗುಮ್ಮಗೋಳ ಅವರ ಸಣ್ಣಕಥೆ “ಬಾಡಿದ ಮೊಗ್ಗು ಅರಳಿತು” Read Post »

ಅನುವಾದ, ಕಥಾಗುಚ್ಛ

“ವೈರುಧ್ಯಗಳು” ಭಾಗವತುಲ ಕೃಷ್ಣಾರಾವು ಅವರತೆಲುಗು ಕಥೆಯ ಕನ್ನಡಾನುವಾದ‌ ಕೋಡೀಹಳ್ಳಿಮುರಳೀ ಮೋಹನ್

ಅನುವಾದ ಸಂಗಾತಿ “ವೈರುಧ್ಯಗಳು” ತೆಲುಗು ಮೂಲ: ಭಾಗವತುಲ ಕೃಷ್ಣಾರಾವುಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್ ಸಮಯ ರಾತ್ರಿ ಹತ್ತೂವರೆ. ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಆನಂದರಾಯರಿಗೆ ಇದು ಗಾಢ ನಿದ್ರೆಯ ಸಮಯ. ಶಿಸ್ತಿನ ಸಿಪಾಯಿಯಂತಿದ್ದ ಅವರಿಗೆ ಹತ್ತು ಗಂಟೆಯಾದರೆ ಸಾಕು, ಬಾಹ್ಯ ಪ್ರಪಂಚದ ಸಂಪರ್ಕ ಕಡಿತಗೊಳ್ಳುತ್ತಿತ್ತು. ಆದರೆ ಅಂದು ರಾತ್ರಿ ಫೋನಿನ ಕರ್ಕಶ ಶಬ್ದ ಅವರ ನಿಶ್ಯಬ್ದ ಲೋಕವನ್ನು ಸೀಳಿತು. ನಿದ್ರೆಗಣ್ಣಿನಲ್ಲೇ ಫೋನು ಎತ್ತಿದ ರಾಯರು, ಮಂಪರಿನ ಧ್ವನಿಯಲ್ಲೇ “ಹಲೋ” ಎಂದರು. ಅತ್ತ ಕಡೆಯಿಂದ ಸಹೋದ್ಯೋಗಿ ನಾಗರಾಜು ಮಾತಾಡುತ್ತಿದ್ದರು. “ಏನಪ್ಪಾ ಆನಂದ್.. ಮನೆಯಲ್ಲೇ ‘ಅಂಗಡಿ’ (ಬಾರ್) ತೆರೆದಿದ್ದೀಯಾ ಅನ್ಸುತ್ತೆ? ಆ ಧ್ವನಿ ಕೇಳಿದರೆ ಹಾಗೇ ಅನ್ನಿಸುತ್ತಿದೆಯಲ್ಲಪ್ಪಾ!” ಎಂದು ವ್ಯಂಗ್ಯವಾಗಿ ನಕ್ಕರು. ರಾಯರಿಗೆ ಆಘಾತವಾಯಿತು. ಅದು ಕುಡಿತದ ಅಮಲಲ್ಲ, ನಿದ್ರೆಯ ಮಂಪರು ಎಂದು ನಾಗರಾಜುಗೆ ಅನಿಸಲೇ ಇಲ್ಲ. ಬೇಸರದಿಂದಲೇ ಫೋನು ಇಟ್ಟರು. ಕೆಲವೇ ನಿಮಿಷಗಳಲ್ಲಿ ಮತ್ತೊಂದು ಕರೆ. ಈ ಬಾರಿ ವಿಶ್ವನಾಥ್ ಎಂಬ ಇನ್ನೊಬ್ಬ ಸಹೋದ್ಯೋಗಿ. ಅದೇ ನಿದ್ರೆಯ ಧ್ವನಿಯನ್ನು ಕೇಳಿದ ವಿಶ್ವನಾಥ್ ತಕ್ಷಣ ಗಾಬರಿಗೊಂಡು, “ಆನಂದ್, ಯಾಕೋ ಧ್ವನಿ ಸರಿ ಇಲ್ಲ. ಹಲ್ಲು ನೋವೇನಾದರೂ ಇದೆಯೇ? ಸುಮ್ಮನೆ ನರಳಬೇಡ, ನಾಳೆನೇ ಒಬ್ಬ ಒಳ್ಳೆ ದಂತವೈದ್ಯರನ್ನು ಹೋಗಿ ನೋಡು” ಎಂದು ಪ್ರೀತಿಯಿಂದ ಸಲಹೆ ನೀಡಿದರು. ಮರುದಿನ ಬೆಳಗ್ಗೆ ಪೆಟ್ರೋಲ್ ಬಂಕ್ ಹತ್ತಿರ ಆನಂದರಾಯರ ಜೀವನದ ಎರಡನೇ ಪಾಠ ಕಾದಿತ್ತು. ಬಂಕ್‌ನ ಉದ್ದನೆಯ ಸಾಲಿನಲ್ಲಿ ನಿಂತಿದ್ದಾಗ, ಒಬ್ಬ ಯುವಕ ಓಡುತ್ತಾ ಬಂದು ಅವರ ಪಾದಗಳಿಗೆ ನಮಸ್ಕರಿಸಿದ. ಆತ ಅವಿನಾಶ್. ವರ್ಷಗಳ ಹಿಂದೆ ತೆಲುಗು ಮಾಧ್ಯಮದಿಂದ ಬಂದು ಇಂಗ್ಲಿಷ್ ಮಾತಾಡಲು ಒದ್ದಾಡುತ್ತಿದ್ದ ಆ ಹುಡುಗನಿಗೆ ರಾಯರು ಮಾರ್ಗದರ್ಶನ ನೀಡಿದ್ದರು. ಇಂದು ಆತ ಐಐಟಿ ಪದವೀಧರನಾಗಿ ಉನ್ನತ ಸ್ಥಾನದಲ್ಲಿದ್ದಾನೆ. ಕೃತಜ್ಞತೆಯಿಂದ ಹೂಗುಚ್ಛ ನೀಡಿ, “ನಾಳೆ ಮನೆಗೆ ಬಂದು ಅಮ್ಮನವರ ಆಶೀರ್ವಾದ ಪಡೆಯುತ್ತೇನೆ” ಎಂದು ವಿನಯದಿಂದ ಹೊರಟುಹೋದ. ರಾಯರು ಗಾಡಿ ಸ್ಟಾರ್ಟ್ ಮಾಡುವಷ್ಟರಲ್ಲಿ ಮತ್ತೊಬ್ಬ ಹಳೆಯ ಶಿಷ್ಯ ತರುಣ್ ಎದುರಾದ. ಕೈಯಲ್ಲೊಂದು ಸಿಗರೇಟು, ಕಣ್ಣಿಗೆ ಕಪ್ಪು ಕನ್ನಡಕ—ಪಕ್ಕಾ ಇಂದಿನ ‘ಜುಲಾಯಿ’ ಯುವಕನಂತೆ ಕಾಣುತ್ತಿದ್ದ. ಅಂದು ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿದ್ದು ಕಿಡಿಗೇಡಿತನ ಮಾಡುತ್ತಾ ಫೇಲ್ ಆಗುತ್ತಿದ್ದವನು ಈತ. “ಅಂಕಲ್, ಜಂಕ್ಷನ್ ವರೆಗೆ ಲಿಫ್ಟ್ ಕೊಡ್ತೀರಾ?” ಎಂದು ತರುಣ್ ಕೇಳಿದಾಗ, ರಾಯರ ಮುಖದಲ್ಲಿ ಅಸಹ್ಯ ಮೂಡಿತು. ಏನೂ ಕೇಳದವರಂತೆ ಅವರು ಗಾಡಿ ಓಡಿಸಿ ಮುಂದೆ ಹೋದರು. ಮನೆಗೆ ಹಿಂದಿರುಗುವಾಗ ರಾಯರ ಮನಸ್ಸಿನಲ್ಲಿ ದ್ವಂದ್ವಗಳ ಸಂತೆ. ಒಂದೇ ಧ್ವನಿಯನ್ನು ಕೇಳಿದ ಇಬ್ಬರು ಸಹೋದ್ಯೋಗಿಗಳು ಬೇರೆ ಬೇರೆಯಾಗಿ ಹೇಗೆ ಅರ್ಥೈಸಿಕೊಂಡರು? ಒಬ್ಬನೇ ಗುರುವಿನ ಹತ್ತಿರ ಓದಿದ ಇಬ್ಬರು ಶಿಷ್ಯರು ಇಷ್ಟು ವ್ಯತಿರಿಕ್ತವಾಗಿ ಹೇಗೆ ಬೆಳೆದರು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಒಂದು ಕೃಷ್ಣ ಮಂದಿರದ ಹತ್ತಿರ. ಅಲ್ಲಿ ಘಂಟಸಾಲ ಅವರ ಕಂಠಸಿರಿಯಲ್ಲಿ ಭಗವದ್ಗೀತೆಯ ಶ್ಲೋಕಗಳು ಕೇಳಿಬರುತ್ತಿದ್ದವು. ‘ಶ್ರದ್ಧಾತ್ರಯ ವಿಭಾಗ’ ಯೋಗದ ಆ ಶ್ಲೋಕಗಳು ರಾಯರ ಸಂಶಯಗಳಿಗೆ ಕನ್ನಡಿ ಹಿಡಿದವು. ಮನುಷ್ಯರು ನೋಡಲು ಒಂದೇ ರೀತಿ ಇದ್ದರೂ, ಅವರ ಆಹಾರ ಮತ್ತು ಅಭ್ಯಾಸಗಳಿಂದ ರೂಪುಗೊಳ್ಳುವ ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳು ಅವರ ವರ್ತನೆಯನ್ನು ನಿರ್ಧರಿಸುತ್ತವೆ ಎಂಬ ಸತ್ಯ ಅವರಿಗೆ ಹೊಳೆಯಿತು. “ಮೆಣಸಿನ ಗಿಡಕ್ಕೆ ಎಷ್ಟು ಸಿಹಿ ನೀರು ಹಾಕಿದರೂ ಅದು ಖಾರವಾದ ಮೆಣಸಿನಕಾಯಿಯನ್ನೇ ನೀಡುತ್ತದೆ. ಮಾವು ಮತ್ತು ಸಪೋಟ ಗಿಡಗಳು ಯಾವಾಗಲೂ ಸಿಹಿಯಾದ ಹಣ್ಣುಗಳನ್ನೇ ಕೊಡುತ್ತವೆ.” ಆನಂದರಾಯರಿಗೆ ಜ್ಞಾನೋದಯವಾಯಿತು. ಒಬ್ಬ ಗುರುವಾಗಿ ಅವರು ಎಲ್ಲರಿಗೂ ಒಂದೇ ರೀತಿಯ ಪಾಠ ಮಾಡಿದ್ದರು, ಆದರೆ ವಿದ್ಯಾರ್ಥಿಗಳು ಅವರವರ ಸ್ವಭಾವಕ್ಕೆ ತಕ್ಕಂತೆ ಅದನ್ನು ಸ್ವೀಕರಿಸಿದ್ದರು. ಸಂಶಯಗಳೆಲ್ಲಾ ಮಂಜಿನಂತೆ ಕರಗಿದವು. ಅವರು ಕೇವಲ ಇಂಗ್ಲಿಷ್ ಮೇಷ್ಟ್ರಾಗಿ ಅಲ್ಲ, ಜೀವನದ ದೊಡ್ಡ ಪಾಠವನ್ನು ಕಲಿತ ವಿದ್ಯಾರ್ಥಿಯಾಗಿ ಸಂತೋಷದಿಂದ ಮನೆಗೆ ಹೆಜ್ಜೆ ಇಟ್ಟರು. ತೆಲುಗು ಮೂಲ: ಭಾಗವತುಲ ಕೃಷ್ಣಾರಾವುಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್

“ವೈರುಧ್ಯಗಳು” ಭಾಗವತುಲ ಕೃಷ್ಣಾರಾವು ಅವರತೆಲುಗು ಕಥೆಯ ಕನ್ನಡಾನುವಾದ‌ ಕೋಡೀಹಳ್ಳಿಮುರಳೀ ಮೋಹನ್ Read Post »

ಕಥಾಗುಚ್ಛ

ಶ್ರೀದೇವಿ ಮ ಗುಮ್ಮಗೋಳ ಅವರ ಸಣ್ಣಕಥೆ “ಬದುಕು ಇಬ್ಬದಿ”

ಕಥಾ ಸಂಗಾತಿ ಶ್ರೀದೇವಿ ಮ ಗುಮ್ಮಗೋಳ “ಬದುಕು ಇಬ್ಬದಿ” ಅಂದು ರಜನಿ ಮಕ್ಕಳಿಗೆ ಕ್ಲಾಸಿನಲ್ಲಿ ಸಮಾಜಶಾಸ್ತ್ರದ ಕುಟುಂಬದ ಕುರಿತು ಪಾಠ ಮಾಡುತ್ತಿದ್ದಳು. ಸಮಾಜದಲ್ಲಿ ಕುಟುಂಬ ಅಂದರೆ ಏನು ಕುಟುಂಬದ ಪ್ರಕಾರಗಳಾವವು, ಮಹತ್ವ  ಏನು ಎನ್ನುವದನ್ನು ಮಕ್ಕಳಿಗೆ ವಿವರಿಸಿ ಹೇಳುತ್ತಿದ್ದಳು. “ನೋಡಿ ಒಂದು ಕುಟುಂಬ ಸಮಾಜದ ಸಂಸ್ಥೆ. ಕುಟುಂಬದ ಸಂತೊಷ ನೆಮ್ಮದಿ ಮತ್ತು ಸ್ಥಿರತೆ ಆ ಕುಟುಂದಲ್ಲಿರುವ ಪ್ರತಿಯೊಬ್ಬರ ನಡುವಿನ ಪ್ರೀತಿ, ಸಹಕಾರ, ಹೊಂದಾಣಿಕೆ, ಸಹಬಾಳ್ವೆಯ ಮೇಲೆ ನಿಂತಿದೆ. ನಾನು ಹೆಚ್ಚು ನೀನು ಕಡಿಮೆ ಎನ್ನುವ ಮನೊಭಾವ ಇರುವ ಕುಟುಂಬ ನೆಮ್ಮದಿಯಾಗಿ ಇರಲಾರದು. ಕುಟುಂಬದ ಪ್ರತಿ ಸದಸ್ಯ ಆ ಕುಟುಂಬದ ಗೋಡೆ ಇದ್ದ ಹಾಗೆ. ಪ್ರತಿಯೊಬ್ಬರ ಮದ್ಯೆ ಸಹಾನುಭೂತಿ, ಪ್ರೀತಿ, ಕಾಳಜಿಯ ಸಿಮೆಂಟು ಗಟ್ಟಿಯಾಗಿದ್ದಾಗ ಕುಟುಂಬದ ಗೊಡೆಗಳ ಮದ್ಯೆ ಬಿರುಕು ಬೀಳಲಾರದು.” ಎಂದು ಹೇಳುತ್ತಿದ್ದಂತೆ ಒಳಗಡೆ ಬಂದ ಪ್ಯೂನ್ “ಮೆಡಮ್ ನಿಮ್ಮನ್ನು ಯಾರೊ ಬೇಟಿ ಆಗಲು ಬಂದಿದ್ದಾರೆ” ಎಂದು ಹೇಳಿ ಹೊರಟ. ರಜನಿ ಯಾರಿರಬಹುದು? ನನಗೆ ಈಗ ನನ್ನಮ್ಮನ ಕಡೆಯ ಸಂಬಂಧಿಕರಾದ ಇಬ್ಬರೂ ಮಾವಂದಿರು ಒಬ್ಬ ತಂಗಿಯನ್ನು ಬಿಟ್ಟರೆ ಯಾರೂ ಸಂಬಂಧಿಕರಿಲ್ಲ. ಅವರೆಲ್ಲಾ ಸೀದ ಮನೆಗೆ ಬರುತ್ತಿದ್ದರು. ನನ್ನ ಕಾಲೇಜ ಕಡೆ ಬರುವಂತದೇನಿದೆ. ಅದು ಅಲ್ಲದೇ ಈ ಊರಿಗೆ ಬಂದು ಕೇವಲ ಒಂದು ವರ್ಷವಾಯಿತು ಕರಾವಳಿ‌ ತೀರದ   ಈ ಊರಲ್ಲಿ ನನಗಿನ್ನೂ ಅತೀಯಾಗಿ ಪರಿಚಿತರು ಯಾರು ಇಲ್ಲ. ಅಂದ ಮೇಲೆ ಮಕ್ಕಳ ಪಾಲಕರು ಯಾರಾದರೂ ಬಂದಿರುವರಾ? ಎಂದು ಹೀಗೆ ಮನದಲ್ಲೆ ಗೇಣಿಕೆ ಹಾಕುತ ರಜನಿ ಕ್ಲಾಸ್ ರೂಮಿನಿಂದ ಹೋರಗೆ ಬಂದಳು. ರಜನಿ ಕಾರವಾರದ ಪಿ.ಯು. ಕಾಲೇಜ ಒಂದಕ್ಕೆ ಉಪನ್ಯಾಸಕಳಾಗಿ ನೇಮಕಗೊಂಡಿದ್ದಳು. ದೂರದಲ್ಲಿ ಪ್ರಶಾಂತ ಅವಳಿಗಾಗಿ ಕಾಯುತ ನಿಂತಿದ್ದ. ಅವನನ್ನು ನೋಡಿ ರಜನಿಯ ಎದೆ ಒಮ್ಮೆಲೆ ಜಲ್ಲೆಂದಿತು. ಏಕೆ ಇವನು ಇಲ್ಲಿ ಬಂದಿದ್ದಾನೆ.  ಅವನ ಬದುಕಿನಿಂದ ದೂರಾಗಿ ಎರಡು ವರ್ಷದ ಮೇಲಾಯಿತು. ತನ್ನ ಅವನ ಋಣ ತೀರಿದ ಮೇಲೆ ಮತ್ಯಾವ ಋಣಕ್ಕಾಗಿ, ಘನ ಕಾರ್ಯಕ್ಕೆ ತನಗೆ ಬೇಟಿಯಾಗಿತ್ತಿದ್ದಾನೆಂದು ರಜನಿಗೆ ತಿಳಿಯದಾಯಿತು. ರಜನಿಯನ್ನು ನೋಡಿದ ಪ್ರಶಾಂತ ಅವಳಡೆಗೆ ಬಂದು “ರಜನಿ ನನಗೆ ಗೊತ್ತು ನನ್ನನ್ನು ನೀನು ಇಲ್ಲಿ ನೋಡಿ ನಿನಗೆ ಬೇಸರವಾಗಿರಬಹುದು. ಯಾಕಪ್ಪ ಇವನು ಇಲ್ಲಿ ಬಂದ ಎಂದುಕೊಳ್ಳುತಿರಬಹುದು. ನಿನ್ನ ಜೊತೆ ಸ್ವಲ್ಪ ಮಾತನಾಡುವದಿತ್ತು ಮಾತನಾಡಬಹುದಾ?” ಎಂದಾಗ ರಜನಿಗೆ ಏನು ಹೇಳಬೇಕು ತಿಳಿಯದಾಯಿತು. ರಜನಿಯ ಮನಸ್ಸು ಬೆಣ್ಣೆಯಂತದ್ದು.  ನಾನು ಅವನಂತೆ ವರ್ತಿಸಿದರೆ ಅವನಿಗೂ ನನಗೂ ಏನು ವ್ಯತ್ಯಾಸ ಎಂದುಕೊಂಡು “ಆಯಿತು ಈಗ ನನಗೆ ಕ್ಲಾಸ್ ಇದೆ. ನಾಲ್ಕು ಗಂಟೆಗೆ ಕಾಲೇಜ ಬಿಡುತ್ತದೆ. ಆಗ ಮಾತನಾಡೋನ” ಅಂದಳು. ಆಗ ಪ್ರಶಾಂತ “ಹಾಗಾದರೆ ಅಲ್ಲಿಯವರೆಗೆ ಇಲ್ಲಿ ನನಗೆ ಸ್ವಲ್ಪ ಕೆಲಸವಿದೆ. ನಾಲ್ಕು ಗಂಟೆಗೆ ನೀನು ಬೀಚ್ ಹತ್ತಿರ ಬಾ” ಎಂದು ಹೇಳಿದವನೆ ಹೊರಟು ಬಿಟ್ಟನು. ಪ್ರಶಾಂತನ ಬದುಕಿನಿಂದ ಹೊರ ಬಂದು ಈಗ ತಾನೆ ತಣ್ಣಗೆ ಉಸಿರಾಡುತ್ತಿರುವ ರಜನಿಗೆ ಮತ್ತೆ ಬೆಂಕಿಯ ಸಹವಾಸ ತನಗೇಕೆ ಬೇಕಿತ್ತು ಸುಮ್ಮನೆ ನಾನು ಬರುವದಿಲ್ಲವೆಂದು ಹೇಳಿಬಿಡಬಾರದಿತ್ತೆ ಎಂದು ಮತ್ತೊಮ್ಮೆ ಮನ ಹೋಯ್ದಾಡಿತು. ಆದದ್ದಾಗಲಿ ನಮ್ಮಿಬ್ಬರ ಮದ್ಯೆ ಈಗ ಯಾವ ಸಂಬಂಧವು ಉಳಿದಿಲ್ಲ ನೋಡೊಣ ಏತಕ್ಕೆ ಬಂದಿರುವನು ಎಂದು ತಿಳಿದ ಮೇಲೆ ಯೋಚಿಸಿದರಾಯಿತು ಎಂದುಕೊಂಡಳು. ಅದೇಕೊ ಪ್ರಶಾಂತನಿಂದಾಗಿ ಕ್ಲಾಸಿಗೆ ಬಂದರು ಅವಳಿಗೆ ಪಾಠ ಮಾಡುವ ಮೂಡೆ ಬರಲಿಲ್ಲ. ಅಷ್ಟಕ್ಕೆ ಪಾಠ ನಿಲ್ಲಿಸಿ ಸ್ವಲ್ಪ ಕೆಲಸವಿದೆ ನಾಳೆ ಪಾಠ ಮುಂದುವರೆಸುವೆ ಎಂದು ಹೇಳಿ ಸ್ಟಾಪ್ ರೂಮ್ ಗೆ ಬಂದು ತನ್ನ ಚೇರ ಮೇಲೆ ಕುಳಿತಳು. ಕಿಟಕಿಯ ಆಚೆ ತೂರಿಬರುತ್ತಿದ್ದ ಗಾಳಿ ಹಿತ ನೀಡಿತಾದರೂ ಮನದಾಳದ ಕಹಿ ನೆನಪುಗಳು ಕಣ್ಮುಂದೆ ಹಾದು ಹೋದವು. ******* ರಜನಿ ಮಾಸ್ಟರ ಡಿಗ್ರಿ ಓದಿ ಮುಂದೆ ಪಿ. ಎಚ್. ಡಿ ಮಾಡುತ್ತಿದ್ದಳು. ಅವಳಿಗೆ ತಾನು ಮುಂದೆ ಲೆಕ್ಚರ್ ಆಗಬೇಕೆಂಬ ಮಹದಾಸೆ ಇತ್ತು. ಆದರೆ ಪಿ.ಎಚ್.ಡಿ ಮುಗಿಯುತ್ತಲೇ ಅವರ ತಂದೆ ಅವಳಿಗೆ ಗಂಡು ನೋಡಿ ಮದುವೆ ಮಾಡಲು ತಯಾರಿ ನಡೆಸಿದರು. ಅವಳಿಗೆ ಇಷ್ಟವಿಲ್ಲದಿದ್ದರೂ ತನ್ನ ಹಿಂದೆ ಇರುವ ಇನ್ನೊಬ್ಬ ತಂಗಿಗಾಗಿ ತಾನು ಮದುವೆಯಾಗಲೇಬೇಕೆಂಬ ಅಪ್ಪನ ಒತ್ತಾಯಕ್ಕೆ ಕಟ್ಟು ಬಿದ್ದು ಒಪ್ಪಿಕೊಂಡಳು. ಒಬ್ಬ ಸುಂದರನಾದ ಪ್ರಶಾಂತ ಎನ್ನುವ ಹುಡಗನೊಂದಿಗೆ ಅವಳ ಮದುವೆಯಾಯಿತು. ಅವನು ಸರಕಾರಿಯಲ್ಲಿ ಗುಮಾಸ್ತನಾಗಿದ್ದ. ಮದುವೆಯ ಬಗ್ಗೆ, ಗಂಡ ಸಂಸಾರದ ಬಗ್ಗೆ ನೂರಾರು ಕನಸು ಕಂಡಿದ್ದ ರಜನಿಗೆ ಕನಸುಗಳು ಬರೀ ಕನಸಾಗಿಯೇ ಉಳಿದವು. ಮದುವೆಯಾದ ಹೊಸತರಲ್ಲಿ ರಾಮನಂತೆ ಕಂಡ ಗಂಡ ಅವಳ ಬಾಳಿನ ರಾವಣನಾದ. ರಜನಿಗೆ ಸ್ವಾತಂತ್ರ್ಯವೇ ಇರಲಿಲ್ಲ. ಮನೆಯಲ್ಲಿ ಗುಲಾಮಳಂತೆ ಕಾಣುತ್ತಿದ್ದ. ಅತ್ತೆ ಮಾವರ ಸೇವೆ ಮಾಡಿ ಗಂಡನಿಗೆ ಬೇಕಾದ ಅಚ್ಚುಕಟ್ಟಾದ ಅಡುಗೆ ಮಾಡಿದರೂ ಒಂದು ದಿನವೂ ಅವಳನ್ನ ನೀನು ನಮಗಾಗಿ ದುಡಿಯುತ್ತಿದ್ದಿಯಾ ಎಂದು ಹೇಳಲಿಲ್ಲ. ರಜನಿಯ ಅತ್ತೆ ಮಾವ ಗಂಡ ಎಲ್ಲರೂ ಸ್ವಾರ್ಥಿಗಳೆ. ತಮಗೆ ಏನೆಲ್ಲಾ ಬೇಕು ಎಲ್ಲವನ್ನು ಮಶಿನ್ ನಂತೆ ರಜನಿಯಿಂದ ಮಾಡಿಸಿಕೊಳ್ಳುತ್ತಿದ್ದರೂ. ಆದರೆ ಒಂದು ದಿನವೂ ನೀನು ನಮ್ಮಂತೆಯೇ ಮನುಷ್ಯಳು ನಿನಗೂ ಸ್ವಲ್ಪ ವಿಶ್ರಾಂತಿ ಬೇಕು ಎಂದು ಒಂದು ದಿನವೂ ಅತ್ತೆಯಾಗಲಿ, ಮಾವನಾಗಲಿ ಕಡೆಗೆ ಗಂಡನಾಗಲಿ ಹೇಳುತ್ತಿರಲಿಲ್ಲ. ಪ್ರಶಾಂತ ಅವಳನ್ನು ಹೊರಗಡೆ ಸಿನಿಮಾ, ಹೊಟೆಲು, ಪಾರ್ಕು ಅಂತ ಒಂದು ದಿನವೂ ಸುತ್ತಾಡಿಸಿಕೊಂಡು ಬರುತ್ತಿರಲಿಲ್ಲ. ಅವಳಿಗೂ ಒಂದು ಬದುಕಿದೆ. ಅವಳಿಗೂ ಆಸೆ ಆಕಾಂಕ್ಷೆಗಳಿವೆ ಎಂದು ಒಂದು ದಿನವೂ ಯೊಚಿಸಲಿಲ್ಲ. ಹೀಗೆಯೇ ಸಾಗಿರುವಾಗ ಒಮ್ಮೆ ರಜನಿಯ ಮಾವ ಕರುಳು ಬೇನೆಯಿಂದ ಕಾಯಿಲೆ ಬಿದ್ದ. ಮಾವನಿಗೆ ಹೊತ್ತು ಹೊತ್ತಿಗೆ ಸರಿಯಾಗಿ ಬಿಸಿ ಬಿಸಿ ಅಡುಗೆ ಮಾಡಿ ಬಡಿಸುತ್ತಿದ್ದಳು.  ಅತ್ತೆ ಮಾಡಿಟ್ಟದ್ದನ್ನು ಗಂಡನಿಗೆ ಒಂದು ದಿನವೂ ಬಡಿಸದೇ ಎಲ್ಲವನ್ನು ಸೊಸೆಯ ಮೇಲೆ ಹಾಕಿ ಮನೆ ಮನೆ ತಿರುಗುತ್ತಿದ್ದಳು. ಅವಳ ಸೇವೆಯಿಂದ ಮಾವ ಗುಣಮುಖನಾದ. ಅದನ್ನು ಒಂದು ದಿನವೂ ಹೇಳದೇ ಎಲ್ಲರ ಮುಂದೆ ತಾನೇ ಪತಿವೃತೆಯಂತೆ ಗಂಡನ ಸೇವೆ ಮಾಡಿದಂತೆ ಮಾತಿನಲ್ಲಿ ಮನೆ ಕಟ್ಟೆ ಎಲ್ಲರನ್ನೂ ನಂಬಿಸುತ್ತಿದ್ದಳು. ಗಂಡನೂ ಕೂಡಾ ನಿನ್ನಂದಲೇ ಅಪ್ಪ ಗುಣಮುಖನಾದ ಅದರಲ್ಲಿ ನಿನ್ನ ಪಾತ್ರ ದೊಡ್ಡದು ಎಂದು ಒಂದೂ ದಿನವೂ ಹೇಳಲಿಲ್ಲ.  ಜೊತೆಗೆ ಅತ್ತೆ ಎಷ್ಟೆ ಮಾಡಿದರು ಏನಾದರೊಂದು‌ ಖ್ಯಾತೆ ತೆಗೆದು ಮಗನ ಮುಂದೆ ಸೊಸೆಯ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಗಂಡ ಹೆಂಡಿರ ಮದ್ಯೆ ಜಗಳ ತಂದಿಡುತ್ತಿದ್ದಳು. ಅನೇಕ ಬಾರಿ ರಜನಿಯ ಮೇಲೆ ಕೈಯನ್ನು ಮಾಡಿದ್ದ. ಹೀಗರಲೂ ಒಮ್ಮೆ ರಜನಿಯ ತಂದೆಗೆ ಸಿರಿಯಸ್ಸಾಗಿ ಆಸ್ಪತ್ರೆಗೆ ದಾಖಲಿಸಿದರು. ರಜನಿಯ ತಂದೆಗೆ ಹೃದಯಘಾತವಾಗಿತ್ತು. ತನ್ನ ತಂದೆಯ ಸೇವೆಯನ್ನು ಮಾಡಿಸಿಕೊಂಡ ಪ್ರಶಾಂತ ತನ್ನ ತಂದೆಯಂತೆ ಅವಳಿಗೂ ಅವಳ ತಂದೆ ಇದ್ದಾರೆ ಗಂಡಮಕ್ಕಳಾರು ಇಲ್ಲ ಹೆಂಡತಿಯನ್ನು ಇಂತಹ ಸಮಯದಲ್ಲಿ ಮಗಳನ್ನು ತವರು ಮನೆಗೆ ಕಳಿಸಿ ಅವಳ ತಂದೆಯ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂಬ ದೊಡ್ಡ ಮನಸ್ಸು ಪ್ರಶಾಂತನಲ್ಲಿರಲಿಲ್ಲ. ಸಂಕುಚಿತ ಮನೋಭಾವನೆಯ ಪ್ರಶಾಂತ ರಜನಿಯನ್ನು ತವರು ಮನೆಗೆ ತಂದೆಯನ್ನು ನೋಡಲು ಕಳಿಸಲೇ ಇಲ್ಲ. “ಇದಾರಲ್ಲ ನಿನ್ನ ತಂಗಿ ತಾಯಿ ನೋಡಿಕೊಳ್ಳುತ್ತಾರೆ” ಎಂದು ಉಡಾಪೆ ಉತ್ತರಕೊಟ್ಟು ರಜನಿಯ ಮನಸ್ಸಿಗೆ ಗಾಯ ಮಾಡಿದ. ಕರಳು ತಂದೆಯನ್ನು ಕಾಣಲು ಹಾತೊರೆಯುತ್ತಿತ್ತು. ಗಂಡನ ವರ್ತನೆ ರಜನಿಯ ಮನಸ್ಸಿನ ಮೇಲೆ ದೊಡ್ಡದೊಂದು ಕಂದಕವನ್ನೆ ಕೊರೆಯಿತು. ತಂದೆಯನ್ನು ನೋಡಲು ಗಂಡ ಕಳಿಸಲೇ ಇಲ್ಲ. ರಜನಿಯ ಅಪ್ಪ ತೀರಿಕೊಂಡ.ಮಾವನ ಸೇವೆಯನ್ನು ಮಾಡಿದ ರಜನಿಯನ್ನು ಸ್ವತಃ ಅವಳ ತಂದೆ ಅನಾರೊಗ್ಯ ಬಳಲಿದಾಗ ಆಗಲಿ ಕಡೆಗೆ ಸತ್ತಾಗ ಅಪ್ಪನ ಮುಖವನ್ನು ನೋಡಲು ಕಳಿಸದೆ ಮೆರೆದ ಗಂಡನ ಅಮಾನವಿಯತೆ ರಜನಿಯ ಮನಸ್ಸಿಗೆ ಮತ್ತೊಂದು ಆಘಾತ ನೀಡಿತು. ಏನೆನೊ ಕನಸುಗಳನ್ನು ಕಟ್ಟಿಕೊಂಡು ಅವಳ ಬದುಕು ಒಂದಾದ ಮೇಲೊಂದರಂತೆ ಗಂಡ, ಗಂಡನ ಮನೆಯ ಅತ್ತೆ ಮಾವರ ವರ್ತನೆಯಿಂದ ದುಃಖದ ಅಲೆಗಳ ಹೊಡೆತ ಸಂಸಾರದ ಬಗ್ಗೆ ಗಂಡನಿಂದ ಒಂದೊಂದೆ ಹೆಜ್ಜೆ ದೂರ ಸರೆಯುವಂತೆ ಮಾಡಿತು. ಇದರ ಜೊತೆಗೆ ಮತ್ತೊಂದು ಆಘಾತ ಅವಳನ್ನು ಮತ್ತಷ್ಟು ಕುಗ್ಗುವಂತೆ ಮಾಡಿತು. ಅವಳಿಗೆ ಆ ಒಂದು ಘಟನೆಯಿಂದ ಪ್ರೀತಿ, ವಿಶ್ಚಾಸದ ಬಗ್ಗೆ ಇದ್ದ ನಂಬಿಕೆಯನ್ನೆ ಕೊನೆಗಾನುವಂತೆ ಮಾಡಿತು. ಒಂದು ದಿನ ರೂಮಿನಲ್ಲಿ ಗಂಡ ಬಹಳ ಹೊತ್ತು ಒಂದು ಹೆಣ್ಣಿನ ಜೊತೆ ಮಾತನಾಡುವದನ್ನು ಕೇಳಿಸಿಕೊಂಡಳು. ಆ ಮಾತಿನಲ್ಲಿ ಯಾವುದೊ ಅನೈತಿಕ ಸಂಬಂಧದ ವಾಸನೆ ಹೊಡೆಯಿತು. ರಜನಿ ಗಂಡನನನ್ನು ವಿಚಾರಿಸಿದಾಗ ಮೊದಲೆಲ್ಲಾ ಅಂತಹದೇನಿಲ್ಲ ಎನ್ನುತ ನಡೆದ. ಇಬ್ಬರ ಮದ್ಯೆ ಈ ವಿಷಯಕ್ಕೆ ಆಗಾಗ ಜಗಳ ಶುರುವಾಯಿತು. ಒಂದು ದಿನ ಪ್ರಶಾಂತ “ಹೌದು ನನಗೆ ಅವಳಿಗೂ ಸಂಬಂಧವಿದೆ. ಅವಳು ನನ್ನ ಆಫಿಸಿನಲ್ಲಿ ಕೆಲಸ ಮಾಡುತ್ತಾಳೆ. ಗಂಡ ಕುಡುಕ. ನನ್ನ ಮದುವೆಗೂ ಮುಂಚೆ ಅವಳು ಗಂಡನನ್ನು ಬಿಟ್ಟು ನಿನ್ನನ್ನು ಗಾಡವಾಗಿ ಪ್ರೀತಿಸುತ್ತೇನೆ ಎಂದು ನನ್ನ ದುಂಬಾಲು ಬಿದ್ದಳು. ಅವಳ ಪ್ರೀತಿಗೆ ಕರಗಿದೆ. ನಮ್ಮಿಬ್ಬರ ಮದ್ಯೆ ದೈಹಿಕ ಸಂಬಂಧವಿದೆ. ನಾನು ಅವಳನ್ನು ಮದುವೆಯಾಗಬೆಕೆಂದೆ. ಮನೆಯಲ್ಲಿ ಮನೆಯ ಮರ್ಯಾದೆಗೊಸ್ಕರ ಬೇರೆ ಹೆಣ್ಣನ್ನು ಮದುವೆಯಾಗು ಎಂದು ಗಂಟು ಬಿದ್ದರು. ಅದಕ್ಕಾಗಿ ನಿನ್ನ ಮದುವೆಯಾದೆ. ಈಗೇನು… ನಿನಗೆ ಬೇಕಾದರೆ ಇರು ಬೇಡವಾದರೆ ಹೋಗು…” ಎಂದು ಎಷ್ಟು ಸಲೀಸಾಗಿ ಹೇಳಿ ಬಿಟ್ಟ. ಮದುವೆ,  ದಾಂಪತ್ಯ ಬಂಧನ, ಕುಟುಂಬದ ಬಗ್ಗೆ ಇವನೀಗೇನಾದರೂ ಅರಿವಿದೆಯಾ? ಇವನಿಗೆ ಸಮಾಜಿಕ ಬದ್ದತೆ ಇದೆಯಾ?. ಕುಟುಂಬದ ಬಗ್ಗೆ ಸಂಸಾರದ ಬಗ್ಗೆ ಕಾಳಜಿ ಕಳಿಕಳಿ ಇದ್ದರೆ ತನ್ನ ಅನೈತಿಕ ಸಂಬಂಧವನ್ನು ಈ ರೀತಿ ಮುಂದುವರೆಸುತ್ತಿದ್ದಿಲ್ಲಾ.  ಪ್ರಶಾಂತನ ದೃಷ್ಟಿಯಲ್ಲಿ ರಜನಿ ಕೇವಲ ತನಗಾಗಿ ಮಕ್ಕಳನ್ನು ಹೆರಲು ಬಂದ, ತಂದೆ ತಾಯಿಯ ಮತ್ತು ತನ್ನ ಚಾಕರಿಯನ್ನು ಮಾಡಲು ಬಂದ ಒಂದು ಯಂತ್ರವಾಗಿದ್ದಳೇ ಹೊರತು. ಒಂದು ಜೀವವಾಗಲಿ ಅವಳಿಗೂ ಭಾವನೆಗಳು ಆಸೆ ಆಕಾಂಕ್ಷೆಗಳಿವೆ. ಅವಳಿಗೂ ಒಂದು ಬದುಕಿದೆ ಎಂದು ತಿಳಿಯಲೇ ಇಲ್ಲ . ಹೆಣ್ಣಿನ ಮನಸ್ಸು ನಂಬಿಕೊಂಡು ಬಂದವನ ನಿಷ್ಕಲ್ಮಷವಾದ ಪ್ರೀತಿ ಆಸರೆ, ಕಾಳಜಿ, ಕನಿಕರಕ್ಕೆ ಜೀವ ಹಾತೊರೆಯುವದು ಎಂದು ಪ್ರಶಾಂತನಿಗೆ ಅನಿಸಲೇ ಇಲ್ಲ.  ಅವಳ ಮತ್ತು ತನ್ನ ಸುಃಖ ದುಃಖಗಳನ್ನು ಇಬ್ಬರೂ ಸಮನಾಗ ಹಂಚಿಕೊಂಡು ಸಂತೋಷದಿಂದ ಜೀವನ ನಡೆಸಬೇಕು ಎಂದು ಅವನು ಬಯಸಲೇ ಇಲ್ಲವೆಂಬಂತೆ ಕಾಣುತ್ತಿತ್ತು. ಗಂಡನನಿಂದ ಬೇರೆಯಾಗಬೇಕೆಂದಳು.   ಅಷ್ಟರಲ್ಲಿ ರಜನಿಯು ಮೂರು ತಿಂಗಳ ಗರ್ಬಿಣಿಯಾದಳು.  ತನಗಲ್ಲವಾದರೂ ಇನ್ನ ಮೇಲೆ ಹುಟ್ಟುವ ಮಗುವಿಗಾದರೂ, ಭವಿಷ್ಯದಲ್ಲಿ ತನ್ನೊಡಲೊಳಗೆ ಚಿಗುರೆಡುಯುತ್ತಿದ್ದ ಹೊಸ ಜೀವದಲ್ಲಿ ಹೊಸ ಕನಸುಗಳನ್ನು, ಆಸೆಗಳನ್ನು ಹೊತ್ತು  ಗಂಡನ ಗಂಡನ‌ಮನೆಯವರ ನೋವನ್ನು ಬದುಕಿದರಾಯಿತೆಂದು ನಿರ್ದಾರ ಮಾಡಿದಳು.  ಒಮ್ಮೆ ರಜನಿಯ ಅತ್ತೆ ಬಿದ್ದು ಕಾಲಿಗೆ ಪೆಟ್ಟಾಯಿತು ಅದನ್ನೆ ನೆವ ಮಾಡಿಕೊಂಡು ಮಲಗಿಕೊಂಡೆ ಎಲ್ಲ ಸೇವೆಯನ್ನು ಸೊಸೆ ಕಡೆ ಮಾಡಿಸಿಕೊಳ್ಳತೊಡಗಿದಳು. ತಿಂಗಳು ತುಂಬುತ್ತಿದ್ದ ಸೊಸೆಗೆ ಹೊಟ್ಟೆಯಲ್ಲಿ ಒಂದು ಕೂಸಿದೆ ಅವಳಿಗೆ ಆಯಾಸವಾಗುತ್ತದೆ ಅವಳಿಗೂ ವಿಶ್ರಾಂತಿ ಬೇಕು ಎಂದು ಯೊಚಿಸಿದ ಸ್ವಾರ್ಥಿ ಮತ್ತು ಕಟುಕ ಹೆಣ್ಣಾಗಿದ್ದಳು. ಎಲ್ಲರೂ ಎರಡು ಹೊತ್ತು ಉಂಡರೆ ಇವಳು ಕೂತಲ್ಲೆ ನಾಲ್ಕೈದು ಬಾರಿ ಸೊಸೆ ಕಡೆಯಿಂದ ನೀಡಿಸಿಕೊಂಡು ಉಂಡರು ಮಗನ ಮುಂದೆ ನನಗೆ ಸರಿಯಾಗಿ ‌ನೀಡುತ್ತಿಲ್ಲ ಎಂದು ಸೊಸೆಯ ಬಗ್ಗೆ ಮಗನ ಮುಂದೆ ಅಪಾದನೆ ಹೊರೆಸಿದಳು. ಹೊಡೆತಗಳ ಮೇಲೆ ಹೊಡೆತಗಳನ್ನು ತಿಂದು ಮಾನಸಿಕವಾಗಿ ಜರ್ಜಿತಳಾಗಿ ರೊಸಿ ಹೋಗಿದ್ದ ರಜನಿ ಅತ್ತೆಯನ್ನು ತರಾಟೆಗೆ ತೆಗೆದುಕೊಂಡಳು. ಆಗ ಪ್ರಶಾಂತ ಅವಳು

ಶ್ರೀದೇವಿ ಮ ಗುಮ್ಮಗೋಳ ಅವರ ಸಣ್ಣಕಥೆ “ಬದುಕು ಇಬ್ಬದಿ” Read Post »

ಅನುವಾದ, ಕಥಾಗುಚ್ಛ

ತೆಲುಗು ಕಥೆ “ನಾಸ್ತಿಕ ದೇವರು”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ ನಾಸ್ತಿಕ ದೇವರು ತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಶ್ರೀಶೈಲಂ ಪ್ರಾಜೆಕ್ಟ್ ಕಾಲೋನಿಯಲ್ಲಿ ಎಲ್ಲರನ್ನೂ ಅತ್ತೆ-ಮಾಮಾ ಎಂದು ಕರೆಯುವುದುವಾಡಿಕೆ. ಹಾಗಾಗಿ ಅವರು ಯಾವದೇ ಪ್ರದೇಶದವರಾಗಲಿ, ಯಾವುದೇ ಧರ್ಮದವರಾಗಲಿ, ಯಾವುದೇ ಜಾತಿಯವರಾಗಲಿ ಅಲ್ಲಿ ಅತ್ತೆ-ಮಾವ. ಮಕ್ಕಳು ನಮಗಿಂತ ದೊಡ್ಡವರಾಗಿದ್ದರೆ, ಅಣ್ಣ ಮತ್ತು ಅಕ್ಕಾ ಎಂದೇ ಕರೆಯುತ್ತಿದ್ದೆವು.  ಹಾಗೆ ನನ್ನ ತಂದೆಯ ಕಛೇರಿಯಲ್ಲಿ ಕೆಲಸಮಾಡುವ ಲಕ್ಷ್ಮೀರೆಡ್ಡಿ ಅವರು ನಮಗೆ ಮಾಮವಾದರು. .ಸ್ವಲ್ಪ ತೆಳ್ಳಗಿನ ಗುಂಗುರು ಕೂದಲನ್ನು ಹಿಂದಕ್ಕೆ ಬಾಚಿಕೊಂಡು ಬಿಳಿಅಂಗಿ ಹಾಕಿಕೊಂಡು ಮೊಣಕೈಯ ವರೆಗೆ ಮಡಚಿ ಸೈಕಾಲ್ ತುಳಿಯುತ್ತಿದ್ದರು. ಅವರು ನನ್ನ ತಂದೆಯ ಕಛೇರಿಯ ಅಕೌಂಟ್ಸ್ ವಿಭಾಗದಲ್ಲಿ ಕೆಲಸಮಾಡುತ್ತಿದ್ದರು. ಆ ದಿನಗಳಲ್ಲಿ ಪ್ರಾಜೆಕ್ಟ್  ಕೆಲಸಗಳು  ಬಿರುಸಿನಿಂದ ನಡೆಯುತ್ತಿದ್ದರಿಂದ ಕೆಲಸದ ಒತ್ತಡ ಹೆಚ್ಚಿತ್ತು. ಎಲ್ಲರೂ  ತಪಾಸಣೆಗೆ ಹೋಗಿ ನೋಟ್ ಮಾಡಿದ ಎಂ.ಬುಕ್ಸ್ ಗಳಲ್ಲಿನ (ಮೇಸರ್ಮೆಂಟ್ಸ್ ಬುಕ್ಸ್)  ವಿವರಗಳನ್ನು ಪರಿಶೀಲಿಸಿ, ಅವುಗಳನ್ನು ಎಣಿಸಿ ಅವು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು  ನಿರ್ಧರಿಸಿದರು. ಇದಲ್ಲದೆ ಅವರು ಕ್ಲೆಯಿಮ್  ಮಾಡಿದ ಮೊತ್ತವೂ, ಈ ವಿವರಗಳಿಗ ಅನುಗುಣವಾಗಿಯಿದಯೆ  ಅಥವಾ ಇಲ್ಲವೇ ಎಂಬುದನ್ನೂ ಸಹಾ ಪರಿಶೀಲಿಸುತ್ತಿದ್ದರು. ಕ್ಷೇತ್ರದಲ್ಲಿ ಕೆಲಸ ಮಾಡುವವರೆಲ್ಲರೂ ದಿನವಿಡೀ ಕೆಲಸ ಮಾಡುತ್ತಿದ್ದರು ಮತ್ತು ಸಂಜೆಯ ಹೊತ್ತಿಗೆ, ಅವರು ಆ ಪುಸ್ತಕಗಳನ್ನು  ಅಕೌಂಟ್ಸ್ ವಿಭಾಗಕ್ಕೆ ಸಲ್ಲಿಸುತ್ತಿದ್ದರು ಮತ್ತು ಉಳಿದ ಕೆಲಸವನ್ನು ನನ್ನ ತಂದೆ ಮನೆಗೆ ತರುತ್ತಿದ್ದರು.  ಅವುಗಳಲ್ಲಿ ಹೆಚ್ಚಿನವು ಘನ ಪರಿಮಾಣದ ಲೆಕ್ಕಾಚಾರಗಳಲ್ಲಿ ಇರುತ್ತಿದ್ದವು . ಎತ್ತರ, ಉದ್ದ, ಅಗಲ ಇರುತ್ತಿದ್ದವು- ಅದರ ಆಧಾರದಮೇಲೆ ಅವರು ಎಷ್ಟು ಘನಅಡಿ ಕೆಲಸ ಮಾಡಲಾಗಿದೆ ಎಂದು ಲೆಕ್ಕಹಾಕಿ ಅದನ್ನು ಯೂನಿಟ್ ರೇಟ್  ನಿಂದ  ಗುಣಿಸುತ್ತಿದ್ದರು.  ಆ ಲೆಕ್ಕಾಚಾರಗಳನ್ನು ಆಗಾಗ ಕಲಿತಿದ್ದರಿಂದ ನಾನು ಆಗಾಗ ಅಪ್ಪನ ಜೊತೆ ಕುಳಿತು ಕೆಲವು ಲೆಕ್ಕಾಚಾರಗಳನ್ನು ಮಾಡುತ್ತಿದ್ದೆ. ತುಂಬಾ ಕೆಲಸವಿದ್ದಾಗ, ಲಕ್ಷ್ಮಿರೆಡ್ಡಿ ಮಾಮ ಭಾನುವಾರ ಬೆಳಿಗ್ಗೆ ಟಿಫಿನ್  ಮಾಡಿದ ನಂತರ ಸೈಕಲ್‌ನಲ್ಲಿ ನಮ್ಮ ಮನೆಗೆ ಬರುತ್ತಿದ್ದರು. ಅವರು ಬರುತ್ತಾರೆಂದು ತಿಳಿದ ದಿನ ನಾನು ಅವರ ಆಗಮನಕ್ಕಾಗಿ ಸಾವಿರ ಕಣ್ಣುಗಳಿಂದ ಕಾಯುತ್ತಿದ್ದೆ. ನಾನು ಕಾಯುತ್ತಿದ್ದೇನೆ ಎಂದು ಗ್ರಹಿಸಿದ ಅವರು ಬಂದೊಡನೆ ‘ಮಾಸ್ಟರ್’ಎಂದು ಕರೆಯುತ್ತಿದ್ದರು. ಅದು ಕೇಳಿದ ತಕ್ಷಣ  ಎಲ್ಲಿದ್ದರೂ  ಓಡೋಡಿ ಬಂದು ಚಾಚಿದ  ಅವರ ಕೈಯಲ್ಲಿನ ಸೈಕಲ್ ಕೀಲಿಗಳನ್ನು ನಾಯಿ ಮರಿಯಂತೆ ಗಪ್ಪೆಂದು ಹಿಡಿದುಕೊಂಡು ಸರ್ರ್  ಎಂದು ಓಡಿಹೋಗುತ್ತಿದ್ದೆ. ಅಷ್ಟು ಆಸೆ ಯಾಕೆ  ನಮ್ಮ ಮನೆಯಲ್ಲಿ  ಸೈಕಲ್ಇರಲಿಲ್ಲ. ಆಫೀಸು ಅರ್ಧಕಿಲೋ ಮೀಟರ್ ಇರಲಿ  ಅಥವಾ  ಆರು ಕಿಲೋ ಮೀಟರ್ ಇದ್ದರೂ ನಮ್ಮ  ಅಪ್ಪ   ಆಫೀಸಿಗೆ ನಡೆದುಕೊಂಡೇ ಹೋಗುತ್ತಿದ್ದರು. ಬಾಡಿಗಗೆ  ಸೈಕಾಲ್ ಪಡೆದರೂ, ಒಂದು ಗಂಟೆಗಿಂತ ಹೆಚ್ಚು ಸಮಯ ಸವಾರಿ ಮಾಡಲು ನನಗೆ ಹಣ ಕೊಡುತ್ತಿರಲಿಲ್ಲ. ಅದಕ್ಕಾಗಿಯೇ ಲಕ್ಷ್ಮಿರೆಡ್ಡಿ ಮಾಮ ಬಂದಾಗ, ನಾನು ಕೀಲಿಗಳನ್ನು ತೆಗೆದುಕೊಂಡು, ಸೈಕಲ್ ಹತ್ತಿ ಅಡ್ಡ ಕಾಲಿಂದ ಫೆಡಲ್ ತುಳಿಯುತ್ತಾ ಕ್ಲಬ್ ಬಳಿಯ ಗ್ರೌಂಡ್ ಗೆ ಓಡಿಹೋಗುತ್ತಿದ್ದೆ!  ಅಡ್ಡ ಕಾಲು ಹಾಕಿ ಸೈಕಲ್ ತುಳಿಯುತ್ತಾ ಊರೆಲ್ಲಾ ತಿರುಗುತ್ತಿದ್ದೆ. ಒಂದೊಂದು ದಿನ ಒಂದೊಂದು ದಾರಿಯಲ್ಲಿ ಪ್ರಯಾಣ ಸಾಗುತ್ತಿತ್ತು.  ಮೂರನೇ ಸಾಲಿನಿಂದ ಕೆಳಗಿಳಿಯುವಾಗ ಡೌನ್ ನಲ್ಲಿ ಹೋಗುತ್ತಿರುವಾಗ  ತುಂಬಾ ಸಂತೋಷದಿಂದ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಯಿತು. ಮತ್ತೆ ನಾನು ಹಿಂತಿರುಗಿ ಅಪ್  ಏರುವಾಗ ಬೆವರು ಸುರಿಸುತ್ತಿದ್ದೆ. ಅಲ್ಲದೆ ನಾನು ವಾಟರ್ ವರ್ಕ್ಸ್ ನಿಂದ   ಎಡಕ್ಕೆ ತಿರುಗಿ, ವರ್ಕ್ ಷಾಪ್ ದಾಟಿ, ನಂತರ ಬರುವ ಮುಂದಿನ ತಿರುವುಗಳಿಗೆ ಹೆದರಿ ಹಿಂತಿರುಗುತ್ತಿದ್ದೆ. ಸ್ಕೂಲ್ , ಪಾರ್ಕ್, ಬಸ್ ಸ್ಟಾಂಡ್ ನಿಂದ  ನೇರವಾಗಿ ಉಮಾಮಹೇಶ್ವರ ಟಾಕಿಸ್ ತನಕ, ಎಲ್ಲಿಯೂ ಕಾಲು ಕೆಳಗೆ ಇಡದೆ ಸೈಕಲ್ ತುಳಿಯುವುದು ಸಾಧ್ಯವಾಗುತ್ತಿರವಿಲ್ಲ. SBI ಬಳಿ ಒಂದು ಸಣ್ಣ ಬೆಟ್ಟವಿತ್ತು. ಸೈಕಲ್ ತುಳಿಯುವ ಮತ್ತು ಕಾಲುಗಳನ್ನು ಕೆಳಗೆಇಡದೆ ಮೇಲಕ್ಕೆ ಏರುವ ಸ್ಪರ್ಧೆಗಳು ಸಹ ನಡೆಯುತ್ತಿದ್ದೆವು.  ನಮ್ಮ ತರಗತಿಯಲ್ಲಿ ಈಗಾಗಲೇ ಎತ್ತರವಾಗಿದ್ದ ಅನೇಕ ಮಕ್ಕಳು ತಮ್ಮ ಸೈಕಲ್‌ಗಳಲ್ಲಿ  ಚೆಕ್‌ಪೋಸ್ಟ್‌ ವರೆಗೆ ಸುಲಭವಾಗಿ ಹೋಗಿ ಬರುತ್ತಿದ್ದರು. ಅವರಲ್ಲಿ ಕೆಲವರು  ಶ್ರೀಶೈಲಕ್ಕೂ ಹೋಗಿ ಬಂದಿವೆ ಎಂದು ಹೇಳುತ್ತಿದ್ದರು. ಅವೆಲ್ಲವೂ ನನ್ನ ಪಾಲಿಗೆ ದೊಡ್ಡ ಸಾಹಸ ಕೃತ್ಯ ಗಳೆಂದು ಎನಿಸುತ್ತವೆ. ರಾಮಮಂದಿರ, ಕಾಗೆಗಳ ಸೆಂಟರ್, ಐ.ಟಿ.ಐ.. ಹೀಗೆ ಇಡೀ ಇಡೀ ಊರು ಸೈಕಲ್ ಮೇಲೆ ಎಷ್ಟು ರೌಂಡ್ಸ್ ಹಾಕಿದ್ದೇವೋ ಆ  ಹೀರೋ  ಸೈಕಲ್ ಗೂ, ನನಗೂ ಗೊತ್ತು. ಮತ್ತೆ ಯಾವಾಗಲೋ ಮಧ್ಯಾಹ್ನದ  ಊಟದ ಸಮಯಕ್ಕೆ ಅವರಿಗೆ ಸೈಕಲ್ ಹಿಂತಿರುಗಿಸುತ್ತಿದ್ದೆ. ನಾನೆಂದರೆ ಅವರಿಗೆ ತುಂಬಾ ಪ್ರೀತಿ ಮತ್ತು ಅಭಿಮಾನ. ನನ್ನನ್ನು ಮುದ್ದಾಗಿ,  ಇಷ್ಟದಿಂದ ‘ಮಾಸ್ಟರ್’  ಎಂದು ಕರೆಯುತ್ತಿದ್ದರು. ಅವರು  ದೊಡ್ಡ ಆಚರಣೆವಾದಿ ಎಂದು, ತಾವು ಏನು ಹೇಳುವರೋ  ಅದೇ  ಮಾಡುತ್ತಾರೆಂದು, ಏನು ಮಾಡುತ್ತಾರೋ ಅದೇ ಹೇಳುತ್ತಾರೆಂದು  ಅಪ್ಪ ಅಮ್ಮನೊಂದಿಗೆ ಹೇಳುವುದನ್ನು ಕೇಳುತ್ತಿದ್ದೆ. ಆ ಮಾತುಗಳಿಗೆ  ನಿಜವಾದ ಅರ್ಥವೇನೋ ಆ   ಸಮಯದಲ್ಲಿ ನನಗೆ ಅರ್ಥವಾಗಲಿಲ್ಲ. ಆದರೆ  ಆ ಮಾತುಗಳು ಎಲ್ಲೋ ಮನದಲ್ಲಿ  ನೆಲೆಗೊಂಡಿವೆ ಎಂದು ದೊಡ್ಡವನು ಆದಮೇಲೆ ವಿವಿಧ ಹಂತಗಳಲ್ಲಿ ನನಗೆ ತಿಳಿಯಿತು. ಸದಾ  ವೈಟ್ ಅಂಡ್ ವೈಟ್ ನಲ್ಲಿ ಕಾಣುತ್ತಿದ್ದ ಲಕ್ಷ್ಮೀರೆಡ್ಡಿ ಮಾವನ ಮನವೂ ಅಷ್ಟೇ ಬೆಳ್ಳಗಿತ್ತು. ಜೀವನವನ್ನು ಹೇಗೆ ಸುಲಭವಾಗಿ ಮತ್ತು ಸರಳವಾಗಿ ಬದುಕಬೇಕು ಎಂಬುದನ್ನು ನೀವು ಅವರನ್ನು  ನೋಡಿದರೆ ಅರ್ಥವಾಗುವುದು . ಸುನ್ನಿಪೆಂಟದಿಂದ , ಶ್ರೀಶೈಲದೇವಸ್ಥಾನ ಒಂಬತ್ತು, ಹತ್ತು ಕಿಲೋಮೀತರ್ ದೂರದಲ್ಲಿತ್ತು. ಪ್ರಾಜೆಕ್ಟ್ ನಲ್ಲಿ  ಕೆಲಸ ಮಾಡುವವರಿಗೆ ನೇರವಾಗಿ ಗರ್ಭಗುಡಿಗೆ ಪ್ರವೇಶವಿತ್ತು. ನಮ್ಮಪ್ಪ ವಾರಕ್ಕೊಮ್ಮೆಯಾದರೂ ದೇವರ ದರ್ಶನಕ್ಕೆ ಹೋಗುತ್ತಿದ್ದರು.  ಆಗ ಇಡೀ ಪ್ರಾಜೆಕ್ಟ್   ತುಂಬಾ , ಟಿಪ್ಪರ್ ಗಳು , ಜೀಪುಗಳು ವಿಪರೀತವಾಗಿ ಓಡಾಡುತ್ತಿದ್ದವು. ನನ್ನ ತಂದೆ ಡ್ಯಾಮ್  ಡಿವಿಜನ್  ಒಂದರಲ್ಲಿ ಡಿವಿಜಿನಲ್ ಅಕೌಂಟ್  ಆಫೀಸರ್ ಕೆಲಸ ಮಾಡುತ್ತಿದ್ದರು.  ಹಾಗೆ ಡ್ಯಾಮ್ ಸೈಟ್ ಗೆ ಹೋಗುವಾಗಯೋ, ಹೀಗೆ ಬರುವಾಗಯೋ  ಯಾವುದೋ ಒಂದು ವೆಹಿಕಲ್ ನಲ್ಲಿ ದೇವಸ್ಥಾನಕ್ಕೆ ಹೋಗಿ ದರ್ಶನ  ಮಾಡಿಕೊಂಡು ಬರುತ್ತಿದ್ದ ರು. ನಮ್ಮ ಮನೆಗೆ ಬಂಧುಗಳು ಬಂದರೆ ಅವರಿಗೆ ದೇವಾಸ್ಥಾನದಲ್ಲಿ ಸ್ವಾಮಿ ಮತ್ತು ಅಮ್ಮನ ದರ್ಶನ, ಹಾಗೂ ಸುತ್ತಮುತ್ತಲಿರುವ ಶಿಖರೇಶ್ವರಂ, ಹಠಕೇಶ್ವರಂ, ಪಾಲಧಾರ-ಪಂಚದಾರ, ಸಾಕ್ಷಿಗಣಪತಿ, ಡ್ಯಾಮ್ ಸೈಟ್ ಸ್ಥಳಗಳನ್ನು ತೋರಿಸುವುದು ಒಂದು ಸಂಪ್ರದಾಯ. ನಮಗಷ್ಟೇಅಲ್ಲ, ಅಲ್ಲಿರುವ ಎಲ್ಲರಿಗೂ ಇದು ಅನ್ವಯಿಸುತ್ತದೆ. ಒಂದುದಿನ, ನನ್ನ ತಂದೆಯ ಕಡೆಯ ಸಂಬಂಧಿಯೊಬ್ಬರು, ನನ್ನಚಿಕ್ಕಪ್ಪನಾಗುವರು, ನಮ್ಮನ್ನು ಭೇಟಿಮಾಡಲು ಬಂದರು.  ಅವರನ್ನು ದರ್ಶನಕ್ಕೆ ಕರೆದುಕೊಂಡು ಹೋಗಲು ನನ್ನ ತಂದೆ ಕಚೇರಿಯಿಂದ ಮನೆಗೆ ಬಂದು ಅವರನ್ನು ರೆಡೀ ಮಾಡಿಕೊಂಡು ಹೋಗುವಾಗ  ಜೀಪಿನಲ್ಲಿ ಲಕ್ಷ್ಮೀರೆಡ್ಡಿ ಮಾಮ ಕೂಡ ಕಾಣಿಸಿದರು. ಎಲ್ಲೋ ಹೋಗುವ ಮಧ್ಯದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ನಾನು  ಹೊರಗೆ ಕಾಣಿಸಿಕೊಂಡರೆ ನನ್ನನ್ನು ಬರಲು ಕರೆದರು ಲಕ್ಷ್ಮೀರೆಡ್ಡಿ ಮಾಮ. ಹಾಗಾಗಿ ಅಪ್ಪ, ಚಿಕ್ಕಪ್ಪ,ಮಾಮ, ನಾನು, ಸೇರಿ ಎಂದಿನಂತೆ ಹಠಕೇಶ್ವರಂ, ಫಾಲಧರ-ಪಂಚಧರ, ಸಾಕ್ಷಿಗಣಪತಿಯನ್ನು ನೋಡಿಕೊಂಡ ದೇವಸ್ಥಾನಕ್ಕೆ ಹೋದೆವು.  ಶಿಖರವು ಬೇರೆ ದಿಕ್ಕಿನಲ್ಲಿರುವುದರಿಂದ, ಅದು ರಿಟರ್ನ್ ನಲ್ಲಿ ಕವರ್ ಮಾಡುತ್ತಾರೆ. ಅಲ್ಲಿನ ಡ್ರೈವರ್ ಗಳಿಗೆ   ಇವೆಲ್ಲ ಕಟ್ಟಿಟ್ಟ ಬುತ್ತಿ. ದೇವಸ್ಥಾನದ ಮುಖ್ಯದ್ವಾರದ ಬಳಿ ಜೀಪು ನಿಂತಿತು. ನಾವೆಲ್ಲ ಇಳಿದೆವು. ಅರ್ಧಗಂಟೆಯ ನಂತರ ಬರುತ್ತೇನೆ ಎಂದು ಡ್ರೈವರ್  ಹೊರಟುಹೋದ. ಎಲ್ಲರೂ ದೇವಸ್ಥಾನದ ಒಳಗೆ ಹೋಗಲು ತಯಾರಾಗುತ್ತಿದ್ದಾಗ ಲಕ್ಷ್ಮೀರೆಡ್ಡಿ ಮಾಮ  ‘ಮಾಸ್ಟರ್ ನೀನು ಇರು’ ಎಂದ. ನಾನು ನಿಂತುಬಿಟ್ಟೆ. ನನ್ನ ತಂದೆ ಮತ್ತು ಇತರರು ಮುಂದೆಕ್ಕೆ ಹೋದರು.  ನನ್ನ ಕೈಹಿಡಿದು ಸ್ವಲ್ಪದೂರಕ್ಕೆ ಕರೆದೊಯ್ದರು. ಅಲ್ಲಿ ತನ್ನ ಜೇಬಿನಿಂದ ಐದು ರೂಪಾಯಿಯ ನೋಟನ್ನು ತೆಗೆದು,ಒಬ್ಬ ವ್ಯಕ್ತಿ ಯಿಂದ   ಐದು ಮತ್ತು ಹತ್ತು ಪೈಸೆ ಚಿಲ್ಲೆರೆಯಾಗಿ ಬದಲಾಯಿಸಿದನು.ಅದರಲ್ಲಿ ಕೆಲವನ್ನು ನನಗೆ ಕೊಟ್ಟನು, ಕೆಲವನ್ನು ತಮ್ಮ  ಬಳಿಯೇ ಇಟ್ಟುಕೊಂಡು ಭಿಕ್ಷುಕರ ಕಡೇಗೆ ಹೋಗಿ,ನನ್ನನ್ನು ಒಂದು ಕಡೆ ಯಿಂದ ಹಾಕಲು ಹೇಳಿ, ಅವರು ಇನ್ನೊಂದು ಕಡೆ ಯಿಂದ ಹಾಕುತ್ತಾ ಬಂದರು. ನಾವು ಎಲ್ಲವನ್ನೂ ಖರ್ಚು ಮಾದುತ್ತಾ,ವಿತರಣೆಮಾಡಿ ಕೈಖಾಲಿಮಾಡಿ ಮುಖ್ಯದ್ವಾರಕ್ಕೆ ಹಿಂತಿರುಗಿದೆವು. ವ “ನೀವು ಎಂದಾದರೂ  ಈ ಇಡೀ ಪ್ರಾಕಾರವನ್ನು ನೋಡಿದ್ದೀಯಾ?” ಎಂದು ಕೇಳಿದರು. ನಾನು ಇಲ್ಲ ಅಂದೆ. “ಹೋಗೋಣ ಬಾ ” ಎಂದು  ಕೈ ಹಿಡಿದು ಇಡೀ ಪ್ರಾಕಾರವನ್ನು  ಎಡಭಾಗದಿಂದ ಸುತ್ತಲು ಪ್ರಾರಂಭಿಸಿದೆವು. ಅವರು  ದೇವಸ್ಥಾನದ ಒಳಗೆ ಯಾಕೆ ಹೋಗಲಿಲ್ಲ ಅಂತ ಮನದಲ್ಲಿ ಒಂದು ಅನುಮಾನ ಕಾಡಿಸಿತು.  ಎಲ್ಲೆಲ್ಲಿಂದಲೋ ಸಾವಿರಾರು ಕಿಲೋಮೀಟರ್ ಗಳು  ಪ್ರಯಾಣಿಸಿ ಸ್ವಾಮಿಯ ದರ್ಶನಕ್ಕೆ  ಬರುತ್ತಾರೇ , ಇವರು ಇಷ್ಟು ಹತ್ತಿರದಲ್ಲಿದ್ದು  ಯಾಕೆ ಹೋಗುವು ದಿಲ್ಲವೋ ಅನ್ನಿಸಿತು.  ಅದಕ್ಕೂ ಮುನ್ನ ಕೂಡಾ ಒಮ್ಮೆ ಮಾತುಗಳಲ್ಲಿ  ಅಪ್ಪ, ಅಮ್ಮನೊಂದಿಗೆ ಹೇಳಿರುವಂತೆ  ನೆನಪಿದೆ – ಅವರು  ದೇವಸ್ಥಾನದೊಳಗೆ ಬರುವುದಿಲ್ಲ ಎಂದು. ನಾನೇ ಮೊದಲು ಮೌನವನ್ನು ಮುರಿದೆ “ಮಾಮ, ನೀವು ಯಾಕೆ  ದೇವಸ್ಥಾನದೊಳಗೆ ಹೋಗಿಲ್ಲ. ದೇವರನ್ನು ನೋಡಲಿಲ್ಲ?” ಎಂದು ಕೇಳಿದೆ.  ಅದಕ್ಕೆ ಅವರು “ನಾನು ನಾಸ್ತಿಕ” ಎಂದು ಉತ್ತರಿಸಿದರು. ನಾಸ್ತಿಕ ಎಂದರೆ ಏನು ಎಂದು ನನಗೆ ತಿಳಿದಿದೆ ಎಂಬ ನಂಬುಗೆಯಿಂದ.  “ಅಂದರೆ ನಾಸ್ತಿಕರು ದೇವರನ್ನು ನಂಬುವುದಿಲ್ಲವೇ?’’ ನಾನುಕೇಳಿದೆ.  “ಹೌದು” ಎಂದರು. “ಏಕೆ” “ನಿಮ್ಮ ದೃಷ್ಟಿಯಲ್ಲಿ ದೇವರು ಒಳ್ಳೆಯವನಾ? ಕೆಟ್ಟವನಾ?” ಅವರು ಕೇಳಿದರು. ಸಾಕ್ಷಾತ್ ದೇವರ ಬಗ್ಗೆ ಇಂಥದೊಂದು  ಪ್ರಶ್ನೆ ಕೇಳಿದರೆ ದೇವರನ್ನು ಹೀಗೆ  ಕ್ಯಾಟಗರೈಜ್  ಮಾಡಿದರೆ ಇನ್ನೇನಾದರೂ ಇದೆಯಾ? ಯಾವುದೇ ಕಾರಣಕ್ಕಾಗಿ ಅದು ಉತ್ತಮವೆಂದು ನಾನು ಮೌನವಹಿಸಿದ್ದೆ. ಅವರು ಮಾತು  ಮುಂದು ವರಿಸಿದರು- “ಸಿಂಪುಲ್ ಮಾಸ್ಟರ್, ದೇವರು ಒಳ್ಳೆಯವನಾಗಿದ್ದರೆ, ನಾವುಒಳ್ಳೆಯದನ್ನುಮಾಡಿದರೆ, ಅವನು ಅದನ್ನು ಗುರುತಿಸುತ್ತಾನೆ, ನಾವು ತಿಳಿಯದೆ ತಪ್ಪುಮಾಡಿದರೆ, ಅವನು ನಮ್ಮನ್ನು ಕ್ಷಮಿಸುತ್ತಾನೆ, ಮತ್ತು ನಾವು ತಿಳಿದೂ ತಪ್ಪುಮಾಡಿದರೆ, ಅವನು ನಮ್ಮನ್ನು ಶಿಕ್ಷಿಸುತ್ತಾನೆ ಎಂದು ನಂಬಿದರೆ, ಒಳ್ಳೆಯದನ್ನು ಮಾಡುತ್ತಲೇ ಇರಿ, ಮತ್ತು ತಪ್ಪುಗಳನ್ನು ಮಾಡಬೇಡಿ. ಒಂದು ಸಮಯ ದೇವರು ಕೆಟ್ಟವನಾಗಿದ್ದರೆ,” ಅವರು ಸ್ವಲ್ಪ ಸಮಯದ ನಂತರ ಹೇಳಿದರು, “ಕೆಟ್ಟ ಜನರಿಂದ ದೂರವಿರುವುದು ಉತ್ತಮ. ಅಲ್ಲವೇ” ಅದಕ್ಕಾಗಿಯೇ ಅವನೊಂದಿಗೆ ನಮಗೆ ಯಾವುದೇ ಕೆಲಸ ವಿಲ್ಲ. ಅವನಿಗೆ ನಮ್ಮೊಂದಿಗೆ ಯಾವುದೇ ಕೆಲಸ ವಿಲ್ಲ, ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಮಾಡುತ್ತಲೇ ಹೋಗಬೇಕು” ಎಂದ, ನಾನು ಬಹಳ ಸಮಯ ಯೋಚಿಸಿದೆ. ಈಬಾರಿ ಅವರು ಮೌನವನ್ನು ಮುರಿದು, “ಪೂರ್ವ ಕಾಲದಲ್ಲಿ ಅವರು ಇಷ್ಟಿಷ್ಟು ದೊಡ್ಡ ದೇವಾಲಯಗಳನ್ನು , ಗೋಪುರಗಳನ್ನು , ಶಿಲ್ಪಗಳನ್ನು ಏಕೆ ನಿರ್ಮಿಸಿದರೋ ನಿಮಗೆ ತಿಳಿದಿದೆಯೇ?”  ಎಂದು ಕೇಳಿದ. ನಾನು ತಲೆಯನ್ನು  ಅಡ್ಡವಾಗಿ ತಿರುವುದರೊಳಗೆ- “ಆ ಸಮಯದಲ್ಲಿ  ಈ ದೇವಾಲಯಗಳು ಮತ್ತು ದೇವಸ್ಥಾನಗಳು. ಸಂಸ್ಕೃತಿಕ  ಕೇಂದ್ರಗಳು. ಹತ್ತು ಜನ ಸೇರಿ ಏನಾದರೂ ಮಾಡಬೇಕಾದರೆ,  ಏನಾದರೂ ಚರ್ಚಿಸಬೇಕಾದರೆ  ಇರುವ ವೇದಿಕೆಗಳಿವು. ಅದೂ ಅಲ್ಲದೆ ಆ ಕಾಲದಲ್ಲಿ ಬೇರೆ ಕೆಲಸಗಳೂ ಯಾವು ಇರಲಿಲ್ಲ ಅಲ್ಲವೇ. ಅದಕ್ಕೆ ಇಂತಹ  ದೊಡ್ಡ ಕಟ್ಟಡಗಳನ್ನು ಕಟ್ಟಿಸಿ  ಅದಕ್ಕೆ ತಕ್ಕಷ್ಟು ಕೂಲೀ   ಹಣ ಕೊಡುವವರೇನೋ ? ” ಎಂದು ಉತ್ತರಿಸಿದರು. “ಮೇಲೆ ನೋಡು ಎಷ್ಟು ಬೆಳೆದಿಂಗಳು ಇದೀಯೋ ” ಎಂದು ಮೇಲೆ ತೋರಿಸಿದರು. ಹೌದು,ಬಹುಶಾ ಹುಣ್ಣಿಮೆಯ ದಿನ ವಾಗಿರಬಹುದು,  ಅಷ್ಟೊತ್ತಿಗೆ ಬೆಳಕು ಮರೆಯಾಗುತ್ತಾ ಕತ್ತಲಾಗುತ್ತಿತ್ತು. ಮೇಲೆ ಹಳದಿ ಹೂವಿನಂತೆ ಬೆಳದಿಂಗಳು. ಹಾಗೆ  ಆಕಾಶದತ್ತಾ ನೋಡುತ್ತಾ  ಎಷ್ಟೋ ತನ್ಮಯದಿಂದ ,ಇಂತಹ  ಬೆಳದಿಂಗಳ ರಾತ್ರಿಗಳಲ್ಲಿ ಕೆಲವು ಯಾವುದೋ ಝಾಮುದಲ್ಲಿ  ಶಿಲೆಗಳು ಮೃದುವಾಗುತ್ತವೆಯಂತೆ.  ಆಗ ಮಾತ್ರ ಅತ್ಯಂತ ಸಂಕೀರ್ಣವಾದ ಶಿಲ್ಪಗಳನ್ನು ಕೆತ್ತಲಾಗುತ್ತದೆಯಂತೆ. ದೇವತಾ  ವಿಗ್ರಹಗಳ ಮುಖಗಳು, ಆಭರಣಗಳು, ಇತ್ಯಾದಿಗಳನ್ನು ಆ ಸಮಯದಲ್ಲಿ ಮಾಡತ್ತಾರಂತೆ.  ಆ ಸಮಯಕ್ಕಾಗಿ  ಪೂರ್ತಿ ತಿಂಗಳು ಕಾಯುತ್ತಾರಂತೆ” ಎಂದು ಹೇಳಿದರು ಲಕ್ಷ್ಮೀರೆಡ್ಡಿ ಮಾಮ – ತನಗೆ ಯಾರೋ ಹೇಳಿದ ವಿಷಯ  ನೆನೆಪಿಸಿ ಕೊಳ್ಳುತ್ತಿದ್ದಂತೆಯೇ , ನನಗೆ ಹೇಳುತ್ತಿದ್ದಂತೆಯೇ  ಹೇಳಿದರು. ನನಗೆ ಅದು ತುಂಬಾ ಆಸಕ್ತಿದಾಯಕವಾಗಿ ಅನಿಸಿತು.  ಅದೇ ಸಂಭ್ರಮದಲ್ಲಿ ‘‘ಅಷ್ಟು ಎತ್ತರವಿರುವ ರಾಜಗೋಪುರಗಳು ಹೇಗೆ ಕಟ್ಟಿರುತ್ತಾರೆ? ಒಂದೇ ಶಿಲೆಯಲ್ಲಿ ಕೆತ್ತಿರ ಬಹುದೇ? ಅಥವಾ ಬಿಡಿಬಿಡಿ ಯಾಗಿ ಕೆಟ್ಟಿರುವವುಗಳನ್ನು ಒಂದರ ಮೇಲೆ ಒಂದರಂತೆ  ಜೋಡಿಸಲಾಗಿದೆಯೇ? ” ಎಂಬ ಪ್ರಶ್ನೆಯನ್ನು ತನ್ನಷ್ಟಕ್ಕೆ   ಕೇಳಿಕೊಂಡು ಮತ್ತು ಉತ್ತರವನ್ನೂ  ತಾನೇ ಹೇಳಲು ಆರಂಭಿಸಿದರು. “ಅರ್ಧ ಕೆತ್ತಿದ ಶಿಲೆಗಳನ್ನು ಬಲವಾಗಿ ಹೆಣಿದ ಹಗ್ಗಗಳಿಂದ ಕಟ್ಟಿ ಆನೆಗಲಿಂದ ಎಳೆದರು. ಮತ್ತು ಅವರು ಅಷ್ಟು ಎತ್ತರಕ್ಕೆ ಹೇಗೆ ಹತ್ತಿದರು ಎಂದು ನಿಮಗೆ ತಿಳಿದಿದೆಯೇ? ಅದನ್ನು ಸ್ಕಾ ಫೋಲ್ಡಿಂಗ್ ಎಂದು ಕರೆಯಲಾಗುತ್ತದೆ. ಅವರು ಅದರ ಎದುರಿನಲ್ಲಿ ತಾತ್ಕಾಲಿಕ ಕಟ್ಟಡವನ್ನು  ಇಳಿಜಾರಿನಲ್ಲಿ ನಿರ್ಮಿಸಿ,  ಭಾರವನ್ನು ಹೊತ್ತಿರುವ ಆನೆಗಳನ್ನು ಆ ಮಾರ್ಗದಲ್ಲಿ ಮುನ್ನಡೆಸಿ ಅವರಿಗೆ ಬೇಕಾದ ಎತ್ತರಕ್ಕೆ ಸೇರಿದ ತಕ್ಷಣ ಅವುಗಳನ್ನು ಅಲ್ಲಿ ಇಳಿಸುತ್ತಿದ್ದರು”, ಅವುಗಳನ್ನುಅಲ್ಲಿಇಳಿಸುತ್ತಿದ್ದರು.” ನಾನು ಆ ಸನ್ನಿವೇಶವನ್ನು ಊಹಿಸಿಕೊಳ್ಳಲು ಸ್ವಲ್ಪ ಗ್ಯಾಪ್ ಕೊಟ್ಟೆ. “ಈ ಎಲ್ಲಾ ಕಥೆಗಳನ್ನು ತಿಳಿದುಕೊಳ್ಳಲು ಬಯಸಿದರೆ, ಒಂದು ಮಧ್ಯಾಹ್ನ ಬಂದು ಗಮನಿಸಿ ನೋಡು. ಒಂದು ಭಾವವನ್ನು ತಿಳಿಸಲು ಶಿಲ್ಪಿಗಳು  ಎಷ್ಟು ಪ್ರಯತ್ನಿಸಿದರೋ ಅರ್ಥವಾಗುತ್ತದೆ. ಅವರ ಇಡೀ ಜೀವನವನ್ನು ಇವುಗಳಿಗೆ ಮೀಸಲಾಗಿಟ್ಟಿರಬೇಕು ಮತ್ತು ಅವುಗಳನ್ನು ಜೀವಂತಗೊಳಿಸಲು ಶ್ರಮಿಸಿರಬೇಕು. ಇವು ಐತಿಹಾಸಿಕ ಕಾಲ ಬಿಟ್ಟು ಹೋಗಿರುವ ಸಾಮಾಜಿಕ-ಸಾಂಸ್ಕೃತಿಕ ಕುರುಹುಗಳಾಗಿವೆ, ”ಎಂದುಅವರು ಹೇಳಿದರು. ಪ್ರಾಕಾರ ಸುತ್ತಲೂ ಕೆತ್ತಿರುವ ಅನೇಕ ಶಿವಪುರಾಣಗಳ ಕಥೆಗಳನ್ನು, ಶಿವಭಕ್ತರ ಇತಿಹಾಸಗಳನ್ನು ಅವರು ವಿವರಿಸುವಾಗ, ಅವರಿಗೆ ಇಷ್ಟು ವಿಷಯಗಳು ಹೇಗೆ ತಿಳಿದಿವೆ ಎಂದು ಆಶ್ಚರ್ಯವಾಯಿತು. ಅಕ್ಕಮಹಾದೇವಿಕಥೆ, ದಕ್ಷಯಜ್ಞ, ತ್ರಿಪುರಾಂತಕ

ತೆಲುಗು ಕಥೆ “ನಾಸ್ತಿಕ ದೇವರು”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

ಕಥಾಗುಚ್ಛ

“ಒಂಟಿ ಹೆಜ್ಜೆ(ಹುಡುಕಾಟದಲ್ಲಿ)” ಸಣ್ಣಕಥೆ ಪೃಥ್ವಿರಾಜ್ ಟಿ ಬಿ

ಕಥಾ ಸಂಗಾತಿ ಪೃಥ್ವಿರಾಜ್ ಟಿ ಬಿ “ಒಂಟಿ ಹೆಜ್ಜೆ(ಹುಡುಕಾಟದಲ್ಲಿ)” ಗ್ರಾಮದ ಅಂಚಿನಲ್ಲಿ ನಿಂತಿದ್ದ ಆ ಹಳೆಯ ಬಂಗಲೆ ಯಾರಿಗೂ ಸೇರಿದಂತೆ ಕಾಣುತ್ತಿರಲಿಲ್ಲ. ಒಮ್ಮೆ ಅದು ಭವ್ಯವಾಗಿತ್ತು ಎಂದು ಹೇಳಲು ಅದರ ಎತ್ತರದ ಗೋಡೆಗಳು, ದೊಡ್ಡ ಕಬ್ಬಿಣದ ಗೇಟು, ಅರ್ಧ ಕುಸಿದ ಬಾಲ್ಕನಿ ಸಾಕ್ಷಿಯಾಗಿದ್ದವು. ಈಗ ಅದರ ಗೋಡೆಗಳ ಮೇಲೆ ಹಚ್ಚಿದ ಬಿಳಿ ಬಣ್ಣ ಮಂಕಾಗಿ ಬೂದು ಬಣ್ಣದಂತೆ ಕಾಣುತ್ತಿತ್ತು. ಕಿಟಕಿಗಳಲ್ಲಿ ಒಡೆದ ಗಾಜುಗಳು ಗಾಳಿ ಬೀಸಿದಾಗ ವಿಚಿತ್ರ ಶಬ್ದ ಮಾಡುತ್ತವೆ. ರಾತ್ರಿಯಾದರೆ ಆ ಬಂಗಲೆಯಿಂದ ಯಾರೋ ನರಳಾಡುವಂತೆ ಕೇಳಿಸುವ ಶಬ್ದ ಊರಿನ ಮಕ್ಕಳಿಗೆ ನಿದ್ರೆಯೇ ಬರದಂತೆ ಮಾಡುತ್ತಿತ್ತು. ಬಂಗಲೆಯ ಪಕ್ಕದಲ್ಲೇ ಒಂದು ವಿಶಾಲವಾದ ಆಟದ ಮೈದಾನ. ಪ್ರತಿ ಸಂಜೆ ಅಲ್ಲಿ ಹುಡುಗರ ಗುಂಪು ಕ್ರಿಕೆಟ್ ಆಡುತ್ತಿರುತ್ತದೆ. ನಗುವಿನ ಕೂಗು, ಚೆಂಡಿನ ಸದ್ದು, ಸೋಲು–ಗೆಲುವಿನ ಜಗಳ—ಎಲ್ಲವೂ ಆ ಮೈದಾನದ ಜೀವಾಳ. ಆದರೆ ಆಟ ಆಡುತ್ತಾ ಇದ್ದರೂ ಯಾರೂ ಆ ಬಂಗಲೆಯ ಕಡೆಗೆ ನೋಡುವ ಧೈರ್ಯ ಮಾಡುತ್ತಿರಲಿಲ್ಲ.  “ಅದು ಭೂತ ಬಂಗಲೆ”, “ಅಲ್ಲಿ ಆತ್ಮ ಇದೆ”, “ಹೋದವರು ಮರಳಿ ಬಂದಿಲ್ಲ” ಎಂಬ ಮಾತುಗಳು ಮಕ್ಕಳ ನಡುವೆ ಹರಡಿದ್ದವು. ಆ ಹುಡುಗರಲ್ಲಿ ಒಬ್ಬನ ಹೆಸರು ಕಾರ್ತಿಕ್. ಅವನು ಇತರರಿಗಿಂತ ಸ್ವಲ್ಪ ಧೈರ್ಯಶಾಲಿ, ಆದರೆ ಒಳಗೆ ತುಂಬಾ ಸಂವೇದನಾಶೀಲ ಹುಡುಗ. ಅವನ ಕಣ್ಣುಗಳಲ್ಲಿ ಸದಾ ಕುತೂಹಲದ ಹೊಳಪು. ಆ ದಿನ ಸಂಜೆ ಆಟ ನಡೆಯುತ್ತಿತ್ತು. ಕಾರ್ತಿಕ್‌ನ ಸ್ನೇಹಿತ ರವಿ ದೊಡ್ಡ ಹೊಡೆತ ಹೊಡೆದ. ಬಾಲ್ ನೇರವಾಗಿ ಬಂಗಲೆಯ ಹತ್ತಿರ ಹೋಗಿ ಬಿದ್ದಿತು. ಎಲ್ಲ ಹುಡುಗರು ಒಬ್ಬರನ್ನೊಬ್ಬರು ನೋಡಿಕೊಂಡರು.“ಯಾರು ಹೋಗ್ತೀರಾ?” ಎಂದು ಒಬ್ಬನು ಕೇಳಿದ.ಕ್ಷಣಕಾಲ ಮೌನ. ಯಾರೂ ಮುಂದೆ ಬರಲಿಲ್ಲ. ಕೊನೆಗೆ ಕಾರ್ತಿಕ್ ಧೈರ್ಯ ಮಾಡಿ, “ನಾನು ಹೋಗ್ತೀನಿ” ಎಂದು ಹೇಳಿದ.ಅವನು ನಿಧಾನವಾಗಿ ಬಂಗಲೆಯ ಕಡೆಗೆ ನಡೆದು ಹೋದ. ಗೇಟಿನ ಹತ್ತಿರ ಬಂದಾಗ ತಣ್ಣನೆಯ ಗಾಳಿ ಅವನ ಮೈಮೇಲೆ ಹರಿದಂತೆ ಆಯಿತು. ಒಣ ಎಲೆಗಳು ಅವನ ಕಾಲಿಗೆ ಸಪ್ಪಳಿಸಿದವು. ಆ ಕ್ಷಣಕ್ಕೆ ಅವನಿಗೆ ಯಾರೋ ಹಿಂದಿನಿಂದ ಉಸಿರಾಡುತ್ತಿರುವಂತೆ ಭಾಸವಾಯಿತು. ಹೃದಯ ಜೋರಾಗಿ ಬಡಿದಿತು. “ಇದು ಕೇವಲ ಕಲ್ಪನೆ” ಎಂದು ತನ್ನನ್ನು ತಾನೇ ಸಮಾಧಾನ ಮಾಡಿಕೊಂಡು ಬಾಲ್ ತೆಗೆದುಕೊಳ್ಳಲು ಕೈ ಚಾಚಿದ.ಅಷ್ಟರಲ್ಲಿ ಒಳಗಿನಿಂದ ಯಾವುದೋ ನರಳಾಟದ ಶಬ್ದ—ಮಂದವಾದ, ನೋವಿನಿಂದ ತುಂಬಿದ ಶಬ್ದ—ಅವನ ಕಿವಿಗೆ ಬಿತ್ತು. ಕಾರ್ತಿಕ್ ಬೆಚ್ಚಿಬಿದ್ದ. ಕೈಯಲ್ಲಿ ಬಾಲ್ ಹಿಡಿದು ಓಡಿದ. ಸ್ನೇಹಿತರ ಬಳಿ ಬಂದು ತಲೆಸುತ್ತಿ ಕುಳಿತ.“ಏನಾಯ್ತು?” ಎಂದು ಎಲ್ಲರೂ ಕೇಳಿದರು.ಕಾರ್ತಿಕ್ ಶಬ್ದ ಕೇಳಿದ್ದನ್ನು ಹೇಳಿದ. ಹುಡುಗರ ಮುಖದಲ್ಲಿ ಭಯ ಮೂಡಿತು. ಆ ದಿನದ ಆಟ ಅಲ್ಲಿಯೇ ಮುಗಿಯಿತು. ಆ ದಿನದಿಂದ ಕಾರ್ತಿಕ್ ಮನಸ್ಸು ಅಶಾಂತ. ರಾತ್ರಿ ಮಲಗಿದಾಗಲೂ ಅವನ ಕಿವಿಗೆ ಅದೇ ಶಬ್ದ ಕೇಳಿಸುತ್ತಿರುವಂತೆ ಭಾಸ. ಕಣ್ಣು ಮುಚ್ಚಿದರೆ ಬಂಗಲೆ, ಕತ್ತಲೆ ದಾರಿಗಳು, ಮುರಿದ ಕಿಟಕಿಗಳು ಕಣ್ಣ ಮುಂದೆ ತೇಲುತ್ತವೆ.ಒಂದು ರಾತ್ರಿ ಅವನು ವಿಚಿತ್ರ ಕನಸು ಕಂಡ. ಆ ಬಂಗಲೆಯ ಗೇಟಿನ ಒಳಗೆ ಮಣ್ಣಿನಲ್ಲಿ ಸ್ಪಷ್ಟವಾಗಿ ಕಾಣುವ ಒಂಟಿ ಹೆಜ್ಜೆ ಗುರುತು. ಕೇವಲ ಒಂದೇ ಹೆಜ್ಜೆ—ಎರಡನೇ ಹೆಜ್ಜೆ ಇಲ್ಲ. ಆ ಗುರುತು ಅವನತ್ತ ಬರುತ್ತಿರುವಂತೆ ಭಾಸವಾಯಿತು. ಹೃದಯ ಬಡಿದುಕೊಂಡು ಅವನು ಎಚ್ಚರಗೊಂಡ. “ಒಂದು ಹೆಜ್ಜೆ ಮಾತ್ರ ಹೇಗೆ?” ಎಂದು ಅವನು ಯೋಚಿಸಿದ. ಆ ಕನಸು ಅವನ ಮನಸ್ಸನ್ನು ಬಿಡಲೇ ಇಲ್ಲ. ಮರುದಿನ ಬೆಳಿಗ್ಗೆ ಕುತೂಹಲ ಮತ್ತು ಭಯ ಎರಡೂ ಸೇರಿ ಅವನನ್ನು ಬಂಗಲೆಯ ಕಡೆಗೆ ಎಳೆದವು. ಶಾಲೆಗೆ ಹೋಗುವ ಮುನ್ನ ಸ್ವಲ್ಪ ದೂರದಿಂದ ಅವನು ನೋಡಿದ. ಆಶ್ಚರ್ಯ! ನಿಜವಾಗಿಯೂ ಗೇಟಿನ ಬಳಿ ಮಣ್ಣಿನಲ್ಲಿ ಒಂದೇ ಹೆಜ್ಜೆ ಗುರುತು ಕಾಣಿಸುತ್ತಿತ್ತು. ಅವನ ಕೈಕಾಲು ತಣ್ಣಗಾದವು.ಅವನು ಗೇಟಿನ ಹತ್ತಿರ ಹೋಗಲು ಯತ್ನಿಸಿದ. ಅಷ್ಟರಲ್ಲಿ ಊರಿನ ಒಬ್ಬ ವಯಸ್ಸಾದ ಮಹಿಳೆ ಅವನನ್ನು ನೋಡಿ ಕೂಗಿದರು,“ಏಯ್ ಹುಡುಗಾ! ಅಲ್ಲಿ ಏನೋ ಮಾಡ್ತಿಯಾ? ಹೋಗೋ ಮನೆಗೆ!”ಕಾರ್ತಿಕ್ ಬೆಚ್ಚಿಬಿದ್ದು ಹಿಂದಕ್ಕೆ ಸರಿದ. ಆದರೆ ಆ ಹೆಜ್ಜೆ ಗುರುತು ಅವನ ಮನಸ್ಸಿನಲ್ಲಿ ಇನ್ನಷ್ಟು ಗಾಢವಾಗಿ ಉಳಿಯಿತು. ಆ ರಾತ್ರಿ ಅವನು ನಿದ್ರೆ ಮಾಡಲಿಲ್ಲ. “ನಿಜವೇನಿದೆ ಅಲ್ಲಿ?” ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಕೊನೆಗೆ ಧೈರ್ಯ ಮಾಡಿಕೊಂಡು, ಮರುದಿನ ಯಾರಿಗೂ ತಿಳಿಯದಂತೆ ಮತ್ತೆ ಬಂಗಲೆಗೆ ಹೋಗುವ ನಿರ್ಧಾರ ಮಾಡಿದ. ಸೂರ್ಯ ಮಧ್ಯಾಕಾಶದಲ್ಲಿದ್ದ ಸಮಯ. ಗೇಟು ನಿಧಾನವಾಗಿ ಕಿರುಚುತ್ತ ತೆರೆದಿತು. ಒಳಗೆ ಕಾಲಿಟ್ಟಾಗ ಬಂಗಲೆಯೊಳಗಿನ ವಾಸನೆ ಹಳೆಯ ಮಣ್ಣಿನ, ಧೂಳಿನ, ಒಣ ಮರದ ವಾಸನೆಯಿಂದ ತುಂಬಿತ್ತು. ಗೋಡೆಗಳ ಮೇಲೆ ಹಳೆಯ ಚಿತ್ರಗಳು, ಮುರಿದ ಕುರ್ಚಿಗಳು, ಬಿದ್ದ ಕಾಗದಗಳು. ಪ್ರತಿಯೊಂದು ಹೆಜ್ಜೆಯೂ ಪ್ರತಿಧ್ವನಿಯಂತೆ ಕೇಳಿಸುತ್ತಿತ್ತು.ಅಷ್ಟರಲ್ಲಿ ಒಳಗಿನಿಂದ ನಿಧಾನವಾದ ಚಲನೆಯ ಶಬ್ದ. ಕಾರ್ತಿಕ್ ಉಸಿರು ಹಿಡಿದು ನಿಂತ. ಒಂದು ಕೋಣೆಯ ಬಾಗಿಲು ತೆರೆದು ಹೊರಬಂದದ್ದು—ಒಬ್ಬ ಮುದುಕ. ಅವನ ಮುಖದಲ್ಲಿ ದಟ್ಟವಾದ ಬಿಳಿ ಗಡ್ಡ, ಕಣ್ಣುಗಳಲ್ಲಿ ಅಪಾರ ನೋವು. ಅವನಿಗೆ ಒಂದೇ ಕಾಲು ಮಾತ್ರ ಇತ್ತು; ಮತ್ತೊಂದು ಕಾಲು ಯಾವುದೋ ಅಪಘಾತದಲ್ಲಿ ಕಳೆದುಕೊಂಡಿದ್ದ.ಕಾರ್ತಿಕ್‌ಗೆ ಕ್ಷಣಕಾಲ ಮಾತೇ ಬರಲಿಲ್ಲ. ಭಯಕ್ಕಿಂತ ಹೆಚ್ಚು ಅವನ ಮನಸ್ಸಿನಲ್ಲಿ ಕರುಣೆ ಮೂಡಿತು.“ಭಯಪಡಬೇಡ ಮಗನೇ,” ಎಂದು ಮುದುಕ ನಿಧಾನವಾಗಿ ಹೇಳಿದರು. “ನಿನ್ನ ಕನಸಿನಲ್ಲಿ ಕಂಡ ಒಂಟಿ ಹೆಜ್ಜೆ ನಾನು.”ಮುದುಕ ತನ್ನ ಕಥೆ ಹೇಳಲು ಶುರುಮಾಡಿದರು. ಒಮ್ಮೆ ಈ ಬಂಗಲೆ ಅವನ ಹೆಮ್ಮೆಯ ಮನೆ. ಅವನು ದೊಡ್ಡ ವ್ಯಾಪಾರಿ. ಅವನಿಗೆ ಅಪಾರ ಸ್ನೇಹಿತರು ಇದ್ದರು. ಆದರೆ ಅವನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡವರು ಅವನ ಆಸ್ತಿಯನ್ನು ಕಬಳಿಸಿದರು. ಒಂದು ಅಪಘಾತದಲ್ಲಿ ಅವನು ಕಾಲು ಕಳೆದುಕೊಂಡ. ಸ್ನೇಹಿತರೆಂದವರು ದೂರ ಸರಿದರು. ಕುಟುಂಬವೂ ಅವನನ್ನು ಬಿಟ್ಟು ಹೋದರು. ಕೊನೆಗೆ ಅವನು ಒಂಟಿಯಾಗಿ ಈ ಬಂಗಲೆಯಲ್ಲೇ ಉಳಿದ.“ನೋವಿನಿಂದ ಕೆಲವೊಮ್ಮೆ ನಾನೇ ನನ್ನನ್ನು ನಿಂದಿಸುತ್ತೇನೆ. ಅದೇ ಶಬ್ದ ನೀನು ಕೇಳಿದ್ದು,” ಎಂದು ಕಣ್ಣೀರಿನಿಂದ ಹೇಳಿದರು.ಕಾರ್ತಿಕ್‌ನ ಕಣ್ಣುಗಳು ತುಂಬಿಬಂದವು. ಅವನಿಗೆ ಭಯ ಅಲ್ಲ, ಅಪಾರ ದುಃಖ ಮತ್ತು ಸಹಾನುಭೂತಿ ಉಕ್ಕಿತು. “ನಾನು ಮತ್ತೆ ಬರುತ್ತೇನೆ,” ಎಂದು ಅವನು ಹೇಳಿದ.ಆ ದಿನದಿಂದ ಕಾರ್ತಿಕ್ ಆ ಮುದುಕನಿಗೆ ಆಹಾರ ತಂದು ಕೊಡಲು, ಮಾತನಾಡಲು ಬರುತ್ತಿದ್ದ. ಬಂಗಲೆ ಈಗ ಅವನಿಗೆ ಭಯದ ಸ್ಥಳವಲ್ಲ, ಮಾನವೀಯತೆಯ ಪಾಠ ಕಲಿಸಿದ ಸ್ಥಳವಾಯಿತು.ಒಂಟಿ ಹೆಜ್ಜೆ—ಭಯದ ಸಂಕೇತವಲ್ಲ, ಒಂಟಿತನದ ಸಂಕೇತ ಎಂದು ಅವನಿಗೆ ಅರ್ಥವಾಯಿತು. ಪೃಥ್ವಿರಾಜ್ ಟಿ ಬಿ

“ಒಂಟಿ ಹೆಜ್ಜೆ(ಹುಡುಕಾಟದಲ್ಲಿ)” ಸಣ್ಣಕಥೆ ಪೃಥ್ವಿರಾಜ್ ಟಿ ಬಿ Read Post »

ಕಥಾಗುಚ್ಛ

“ಸೋತು ಗೆದ್ದ ರೈತ” ಸಣ್ಣಕಥೆ,ಶ್ರೀದೇವಿ ಮ.ಗುಮ್ಮಗೋಳ ಅವರಿಂದ

ಶ್ರೀದೇವಿ ಮ.ಗುಮ್ಮಗೋಳ “ಸೋತು ಗೆದ್ದ ರೈತ” “ಎನ್ ಸವಕಾರ ಕರಿದರಂತಲ್ಲ ಎದಕ” ಎಂದು ಕೆಳಗಿನಮನಿ ರಾಮಪ್ಪ ಬಸನ ಗೌಡರ ಮುಂದೆ ಕೈ ಕಟ್ಟಿ ನಿಂತು ಕೇಳಿದ. “ನೋಡ ರಾಮ್ಯಾ ಈ ಸರಿ ನಾನು ಜಿಲ್ಲಾ ಪಂಚಾಯತ್ ಎಲಕ್ಷನ್ ನಿಲ್ಲಾಕ್ಕತ್ತೇನಿ. ಊರಾಗಿನ ರೈತರೆಲ್ಲರಿಗೂ ಹೇಳಿ ನೀನ ಓಟ ಹಾಕಸ್ಬೇಕು. ನಿನ್ನ ರೈತ ಸಂಘದ ಮುಖಂಡ ಮಾಡ್ತೇನಿ. ಎದಕ ಹೊಲ ಮನಿ ಅಂತ ಕತ್ತಿ ದುಡದಂಗ ದುಡಿತಿ.  ನಿನ್ನ ಕೈಯಾಗಿ ನಾಕ ರೊಕ್ಕಾಡ್ತಾವು” ರಾಮಪ್ಪನಿಗೆ ನಾಲ್ಕು ಎಕರೆ ಹೊಲ ಇತ್ತು. ಮಳಿ ಇಲ್ಲದಿದ್ದರ ಬೆಳಿ ಇಲ್ಲ. ಇನ್ನ ಮಳಿ ಬಂದರ ಬೆಳಿಗೆ ಸರಿಯಾದ ಬೆಲೆ ಇಲ್ಲ. ಒಟ್ಟನಲ್ಲಿ ಇಡಿ ನಾಡಿಗೆ ಅನ್ನ ನೀಡುವ ರೈತ ಒಂದಪ್ಪತ್ತಿನ ಕೂಳಿಗೂ ಪರದಾಡುವ ಸ್ಥಿತಿ. ರಾಮಪ್ಪನು ಯೊಚಿಸಿದ “ಭೂಮಿ ತಾಯವ್ವನ ನೆಚ್ಚಕೊಂಡು ಎಷ್ಟ ವರಷಾತು ದುಡಿಯಾಕ್ಕತು ಇನ್ನು ಎಲ್ಲ ಅದೇನಿ ಅಲ್ಲೆ ಅದೇನಿ. ಅದ ಮುರಕಲು ಮನಿ.. ಅದೇ ಹಳೆ ಜೋಡತ್ತುಗಳು…. ನೋಡ.. ಗೌಡರು ಪಂಚಾಯತ್ ಎಲಕ್ಷನ್ ಗೆದ್ದು ಹೋದ ಸಾರಿ ಟ್ರಾಕ್ಟರ್ ತುಗೊಂಡ್ರು ಹೊಸ ಮನಿ ಕಟ್ಟಿಸಿದ್ರು…. ಬರಿ ಹೊಲ ಅಷ್ಟಲ್ಲದ… ಹಿಂಗ ಬ್ಯಾರೆ ಕೆಲಸ ಹಿಡದಾರಂತ…. ಜೀವನದಾಗ ಮುಂದ ಬಂದಾರು. ತಾನು ಇವರ ಹೇಳದಂಗ ಇವರ ಹಿಂದ ಇವರ ದಾರಿಯೊಳಗ ಹೋದರ… ಮುಂದೊಂದು ದಿನಾ ನಾನು ರೈತ ಮುಖಂಡಾಗಿ ಎಲೆಕ್ಷನ ನಿಂತು ಗೆದ್ದ ಬಂದರ… ನನ್ನ ಬದುಕು ಬಂಗಾರ ಆಗ್ತೇತಿ” ಎಂದುಕೊಂಡ. ಗೌಡ ಹೋದ ಸಾರಿ ಪಂಚಾಯತ ಚೇರಮನ್ ಆಗಿ ಸರಕಾರದಿಂದ ಹಳ್ಳಿಗಳಿಗೆ ಕೊಡುವ ವಿವಿಧ ಫಂಡಗಳಲ್ಲಿ ಸಾಕಷ್ಟು ದುಡ್ಡು ಹೊಡೆದಿದ್ದ. ಮುಂದ ಇನ್ನೂ ಜಿಲ್ಲಾ ಪಂಚಾಯತ ಚುನಾವಣೆ ಯಲ್ಲಿ ಗೆದ್ದು ಮುಂದ ವಿಧಾನ ಸೌಧದಾಗ ಕುಳಿತುಕೊ ಮಹಾನ್ ಆಸೆ ಇಟ್ಟಕೊಂಡಿದ್ದ. ತನ್ನ ಈ ಆಸೆ ಇಡೇರಿಸಿಕೊಳ್ಳಲು ರಾಮಪ್ಪನನ್ನ ಉಪಯೋಗಿಸಿಕೊಂಡ.  ರಾಮಪ್ಪ ಹಳ್ಳಿಯಲ್ಲಿ ಎಲ್ಲರೊಂದಿಗೆ ಬೆರೆತು ಒಳ್ಳೆ ಸಂಬಂಧ ಇತ್ತು. ಬಹಳ ಸಂಬಾವಿತ ಮತ್ತು ಮುಗ್ದನಾಗಿದ್ದ.  ಯಾರ ಜೊತೆಗೂ ಜಗಳ ಆಡದ ಊರ ಜನರ ಮೆಚ್ಚುಗೆ ಗಳಿಸಿದ್ದ. ಎಪ್ಪತ್ತು ದಾಟಿದ ರಾಮಪ್ಪನಿಗೆ ಇದ್ದದ್ದು ಎರಡು ಹೆಣ್ಣು ಮಕ್ಕಳು ಅವರನ್ನು ಮದುವೆ ಮಾಡಿ ಕೊಟ್ಟಿದ್ದ. ಊರಿನಲ್ಲಿ ಕೆಲವೊಂದು ಸಮಸ್ಯೆ ಬಂದಾಗ ರಾಮಪ್ಪ ಯಾರಿಗೂ ನೊವಾಗದ ಹಾಗೆ ಬಗೆಹರಿಸಿದ್ದ.   ರಾಮಪ್ಪ ಗೌಡನ ಎಲೆಕ್ಷನ್ ಪ್ರಚಾರಕ್ಕೆ ಅವನ ಹಿಂದೆ ನಿಂತ‌.  ಊರೊಳಗ ಎಲ್ಲ ಮನಿ ಮನಿಗೂ ತೆರಳಿ “ನೋಡಪಾ ಗೌಡರಿಗೆ ಓಟ ಹಾಕ್ಬೇಕು. ನಮ್ಮ ಗೌಡರು ರೈತರಿಗೆ ಬಹಳಷ್ಟು ಅನುಕೂಲ ಆಗಾಕ ಸರಕಾರಕ್ಕ ಕೇಳಕೊತಾರು.” ಅಂದ ಗೌಡ ” ನೊಡ್ರಪ್ಪಾ ಇನ್ನ ಮುಂದ ಸಾಲ ಮಾಡಿ ನೇಣ ಹಾಕೊ ಪರಿಸ್ಥಿತಿ ಇಲ್ಲ. ನಿಮ್ಮ ಸಾಲ ಮನ್ನಾ ಆಗುಂಗ ಮಾಡ್ತೇನಿ. ಬೆಳೆಗೆ ಚುಲೊ ರೊಕ್ಕ ಬರುವ ವ್ಯವಸ್ಥಾ ಮಾಡ್ತೇನಿ. ಇನ್ನ ಮುಂದ ರೈತರ ಕಷ್ಟ ತೀರತು ಅಂತ ತೀಳಕೊರಿ” ಅಂದ ಬಸನಗೌಡನಿಗೆ ರಾಮಪ್ಪ ಜೊತೆ ಇದ್ದದ್ದರಿಂದ ಜನ ಗೌಡನಿಗೆ ಓಟ ಹಾಕಿದರು. ಗೌಡ ಗೆದ್ದು ಬಂದ. ಬಸನ ಗೌಡ  ಓಡಾಡಿದ್ದಕ್ಕಾಗಿ ರಾಮಪ್ಪನ ಕೈಯಲ್ಲಿ ಒಂದಿಷ್ಟು ದುಟ್ಟು ಕೊಟ್ಟ. ಅಷ್ಟು ದುಡ್ಡನ್ನು ರಾಮಪ್ಪ ತನ್ನ ಜೀವಮಾನದಲ್ಲೆ ನೋಡಿರಲಿಲ್ಲ. ಅದರಲ್ಲಿನ ದುಡ್ಡಿನಿಂದ ತಾನು ಮಾಡಿದ ಸಾಲವನ್ನು ತೀರಿಸಿದ.  ಆದರೆ ವಾಸ್ತವವಾಗಿ ರಾಮಪ್ಪ ತನ್ನನ್ನು ಮತ್ತು ತನ್ನ ಜನರನ್ನ ಓಟಿಗೆ ಮಾರಿದೆ ಎನ್ನುವ ಆಲೊಚನೆಯಾಗಲಿ ಬರಲೆ ಇಲ್ಲಾ.  ರೈತ ದೇಶದ ಬೆನ್ನಲಬು ಅಂತಾರೆ. ಆದರೆ ಬಸನಗೌಡಾ ಅದೇ ಬೆನ್ನಲಬನ್ನು ತನ್ನ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಂಡ. ಆ ಮೀಟಿಂಗ ಈ ಮೀಟಿಂಗು ಎನ್ನುತ ಬೆಂಗಳೂರಿಗೆ ಹೋಗತೊಡಗಿದವನು ಬರಬರುತ್ತ ಬೆಂಗಳೂರಿನಲ್ಲೆ ಇರತೊಡಗಿದ. ಸಚಿವನಾಗಬೇಕೆನ್ನುವದಕ್ಕಾಗಿ ಮುಂದಿನ ಪ್ಲಾನ್ ಹಾಕ ತೊಡಗಿದ. ರಾಮಪ್ಪನನ್ನು, ಓಟ ಗಿಟ್ಟಿಸಿಕೊಂಡ ಊರಿನ ಜನರನ್ನು ಮರತೆ ಬಿಟ್ಟ. ರಾಮಪ್ಪ ತಾನು ರೈತ ಮುಖಂಡನಾಗ್ತೇನಿ ಮುಂದ ಪಂಚಾಯತ್ ಚೇರಮನ್ ಆಗ್ತೇನಿ ಅಂತ ಕನಸು ಕಂಡು ಗೌಡನ ಹಿಂದೆ ಸುತ್ತಿದವನಿಗೆ ಬರಬರುತ್ತ ವಾಸ್ತವ ಅರ್ಥವಾಗತೊಡಗಿತು. ಹೆಂಡತಿ “ಎದಕ ಬೇಕಾಗಿತ್ತು  ನಿಮಗ ಆ ಗೌಡನ ಹಿಂದ ಸುತ್ತದು…. ಒಂದಿಷ್ಟ ದುಡ್ಡ ಕೊಟ್ಟು ಕೈತೊಳಕೊಂಡ…. ಸಾಲಾ ಏನೊ.. ಹರದರಿ ಆದರ…. ಹೊಲದಾಗ ನೀವಲ್ಲದ ಬಿತ್ತಿಗಿ ಕೂರಗಿ ಒಂದು ಇಲ್ಲದ ಹೊಲಾ ಪಾಳ ಬಿದ್ದೈತಿ. ನಾನಾದರೂ ಹೊಲದಾಗ ಏನಾದರೂ ಬಿತ್ತತೇನಿ ಅಂದರ… ಎದಕ ಬೇಕಿನ್ನ ಹೊಲ… ಗೌಡರು ಮುಂದ ಬಾಳು ಬಂಗಾರಕ್ತೈತಿ ಅಂದಾರು ಅಂತ ಹೇಳದಿ….. ಎಲ್ಲಿ ಬಂಗಾರ…. ಬರಿ ಅಂಗಾರ ತಿನ್ನುದಾತು….” ಎಂದು ಗಂಡನನ್ನ ಬೈದಳು. ಹೌದು ಪಾಪ ಮುಗ್ದನಾದ ರಾಮಪ್ಪ ಗೌಡನನ್ನ ನಂಬಿ ಹಾಳಾದ. ಬೆಳಿ ಇಲ್ಲದ ಭೂಮಿ ಹಾಳಾತು. ರಾಮಪ್ಪ ನೊಂದಕೊಂಡು ಅಂದು ಹೊಲಕ ಹೋಗಿ ನೋಡಿದರ ಬೂಮಿಯೊಳಗ ಎಲ್ಲಾ ಕಡೆ ಕಸಾ ಬೆಳದಿತ್ತು. ಎತ್ತುಗಳಿಗೆ ಸರಿಯಾಗಿ ಮೇವು ಇಲ್ಲದ ಸಣಕಲಾಗಿದ್ದವು. ನೋಡಿ ಮರಾಮರಾ ಅಂತ ಮರಗಿದ. ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟ. ರಾಮಪ್ಪ ತನ್ನ ತೆಲೆಯೊಳಗ ಗೌಡ ಬೆಳೆದ ಕಸಾ ಕಿತ್ತೊಗದ‌. ಕಳೆದುಕೊಂಡ ಮಗಾ ತನ್ನ ತಾಯಿಯ ಮಡಿಲನ್ನು ಸೇರಿದಾಗ ಬಿಕ್ಕಿ ಬಿಕ್ಕಿ ಅಳುವಂತೆ ಅಂದು ಭೂತಾಯಿಯ ಮಣ್ಣನ್ನ ತನ್ನ ಕೈ ಮುಷ್ಟಿಯಲ್ಲಿ ಹಿಡಿದು ಬಿಕ್ಕಿ ಬಿಕ್ಕಿ ಅತ್ತಾ. ಮನಸಿಗೆ ಪಕ್ಕದಲ್ಲಿರುವ ಗಿಡಕ್ಕೆ ಹಗ್ಗದಿಂದ ನೇಣುಹಾಕಿಕೊಳ್ಳಬೇಕೆನಿಸಿತು.  ಆಕಾಶದ ಕಡೆ ಮುಖ ಮಾಡಿದಾಗ. ಬದುಕು ವಿಶಾಲವಾಗೈತಿ. ಬದುಕು ಇಷ್ಟಕ್ಕೆ ಮುಗದಿಲ್ಲ ಎಂದು ತನ್ನಲ್ಲೆ ಸಮಾದಾನ ಪಟ್ಟುಕೊಂಡ. ಒಂದು ದೃಡ ನಿರ್ದಾರಕ್ಕೆ ಬಂದವನಂತೆ ಎದ್ದುನಿಂತ ಮುಂದೆಂದು ಎಡವದ ಹಾಗೆ ಎದ್ದುನಿಂತ. ಕೈಯಲ್ಲಿ ಕುಡುಗೋಲು ಹಿಡಿದು ಕಸ ಕೀಳತೊಡಗಿದ. ‘ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂದುವಿಲ್ಲ’ ಎನ್ನುವಂತೆ ತನ್ನ ಭೂತಾಯಿಯನ್ನು ಬಿಟ್ಟು ಒಂದು ಕ್ಷಣ ಅಗಲದಂತೆ ಮೈಮುರಿದು ದುಡಿಯತೊಡಗಿದ.  ಒಣಗಿದ್ದ ನೆಲವನ್ನು ತನ್ನ ಉಸಿರಿನಿಂದ ಹಸುರಾಗಿಸಿದ.  ಹಟಕ್ಕೆ ಬಿದ್ದವನಂತೆ ತನಗೀರುವ ನಾಲ್ಕೆ ನಾಲ್ಕು ಎಕರೆಯ ಬರಾಡಾದ ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದ. ಸುತ್ತ ಮುತ್ತ ಹಳ್ಳಿಯಲ್ಲಿ ಜನ ಇದ್ದರೆ ರಾಮಪ್ಪನಂತ ರೈತ ಇರಬೇಕು ಎಂದು ಕೊಂಡಾಡ ತೋಡಗಿದರು. ತನ್ನ ಸಾಧನೆಯಿಂದ  ಉತ್ತಮ ರೈತ ಎಂಬ ಪ್ರಶಸ್ತಿ ಪಡೆದ.    ಶ್ರೀದೇವಿ. ಮ. ಗುಮ್ಮಗೋಳ

“ಸೋತು ಗೆದ್ದ ರೈತ” ಸಣ್ಣಕಥೆ,ಶ್ರೀದೇವಿ ಮ.ಗುಮ್ಮಗೋಳ ಅವರಿಂದ Read Post »

You cannot copy content of this page

Scroll to Top