ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಒಂದು ಜೀವನ ಸಾಲದು ( ಆತ್ಮ ಕಥೆ) ಒಂದು ಜೀವನ ಸಾಲದು ( ಆತ್ಮ ಕಥೆ)ಮೂಲ : ಕುಲದೀಪ್ ನಯ್ಯರ್ಅನುವಾದ : ಆರ್. ಪೂರ್ಣಿಮಾಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ :೨೦೧೮ಬೆಲೆ :ರೂ.೪೪೬ಪುಟಗಳು : ೫೯೨ ಇದು ಪ್ರಸಿದ್ಧ ಪತ್ರಕರ್ತ ಕುಲದೀಪ ನಯ್ಯರ್ ಅವರ ಆತ್ಮಕಥೆಯ ಅನುವಾದ.  ಸಾಕಷ್ಟು ದೀರ್ಘವಾಗಿರುವ ಈ ಕೃತಿಸ್ವಾತಂತ್ರ್ಯೋತ್ತರ.      ಭಾರತದಲ್ಲಿ ಘಟಿಸಿದ ಅನೇಕ ದುಃಖಕರ ಘಟನೆಗಳನ್ನು ನಿರೂಪಿಸುತ್ತದೆ.  ಹಾಗೆಯೇ  ಸ್ವಾತಂತ್ರ್ಯ   ಪೂರ್ವದಲ್ಲಿ ದೇಶವನ್ನು ವಿಭಜನೆಯತ್ತ ಕೊಂಡೊಯ್ದ ರಾಜಕೀಯ ಸನ್ನಿವೇಶಗಳನ್ನು ಕುರಿತೂ ಹೇಳುತ್ತದೆ. ಸಾಮಾನ್ಯ ಆತ್ಮಕಥೆಯಲ್ಲಿರುವಂತೆ ಇಲ್ಲಿ ನಿರೂಪಕನ ಅಂತರಂಗದ ನೋಟವಿಲ್ಲ. ಇದು ಪೂರ್ತಿಯಾಗಿ ಬಹಿರಂಗದ ಘಟನೆಗಳ ಚಿತ್ರಣ.  ಚರಿತ್ರೆಯ ಘಟನೆಗಳನ್ನು ಆಧರಿಸಿದ್ದು. ಆದ್ದರಿಂದ ಇಂದು ಪ್ರತಿಯೊಬ್ಬ ಭಾರತೀಯನೂ ಓದಲೇ ಬೇಕಾದ ಅತ್ಯಂತ ಪ್ರಸ್ತುತವಾದ ಸಮಕಾಲೀನ ಚರಿತ್ರಕೋಶವಿದು. ಸಿಯಾಲ್ ಕೋಟ್‌ನಲ್ಲಿ ಜನಿಸಿದ ಕುಲದೀಪ ನಯ್ಯರ್ ಮೊದಲು ವಕೀಲರಾಗ ಬಯಸಿದ್ದು,  ದೇಶವಿಭಜನೆಯ ನಂತರ ಭಾರತಕ್ಕೆ ಬಂದ ಬಗೆ, ದಾರಿಯುದ್ದಕ್ಕೂ ಧರ್ಮಾಂಧರಿಂದಾದ ನರಮೇಧವನ್ನು ಕಂಡದ್ದು, ಮುಂದೆ ತಾನು ಶಾಂತಿಗಾಗಿ ಶ್ರಮಿಸಬೇಕೆಂದು ನಿರ್ಧರಿಸಿದ್ದು, ಸಿಯಾಲ್ ಕೋಟನ್ನು ಬಿಟ್ಟು ಬಂದಾಗ ತಾನೊಂದು ವೈರಿ ದೇಶವನ್ನು ಬಿಟ್ಟು ಬರುತ್ತಿದ್ದೇನೆ ಎಂದು ಸ್ವಲ್ಪವೂ ಅನ್ನಿಸದಿದ್ದದ್ದು, ದೆಹಲಿಯಲ್ಲಿ ಒಂದು ಉರ್ದು  ಪತ್ರಿಕೆಯಲ್ಲಿ ವರದಿಗಾರರಾಗಿ ಸೇರಿದ್ದು,  ಗಾಂಧೀಜಿಯವರ ಹತ್ಯೆಯ ಕರಾಳ ಘಟನೆಯಿಂದ ಆಘಾತಗೊಂಡದ್ದು, ಇಂಡಿಯನ್ ಎಕ್ಸ್ ಪ್ರೆಸ್   ಪತ್ರಿಕೆಗೆ ಸೇರಿಕೊಂಡದ್ದು, ಲಾಲ್ ಬಹಾದ್ದೂರ ಶಾಸ್ತ್ರಿಯವರ ಮಾಧ್ಯಮ ಸಲಹೆಗಾರರಾಗಿದ್ದು,  ಪಾಕಿಸ್ಥಾನದೊಂದಿಗೆ ಶಾಂತಿ ಒಪ್ಪಂದಕ್ಕಾಗಿ ಶಾಸ್ತ್ರಿಯ    ವರೊಂದಿಗೆ ರಷ್ಯಾದ ತಾಷ್ಕೆಂಟಿಗೆ ಹೋಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರವನ್ನು ವಿರೋಧಿಸಿದ್ದು, ಸದಾ ವಾಕ್ ಸ್ವಾತöತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯಗಳಿ ಗಾಗಿ ಹೋರಾಡಿದ್ದು, ಗಾಂಧಿವಾದಿಯಾಗಿ ರೈತರು, ದಲಿತರು , ಸ್ತ್ರೀಯರು ಮತ್ತು ಸಮಾಜದ ದಮನಿತ ವರ್ಗದವರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಿದ್ದು- ಹೀಗೆ ತಮ್ಮ ವೈಯಕ್ತಿಕ ಬದುಕಿನೊಂದಿಗೆ ಬೆಸೆದುಕೊಂಡಿದ್ದ ನೂರಾರು ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳನ್ನು ಇಲ್ಲಿ ನಿರೂಪಿಸುತ್ತಾರೆ. ಆರ್.ಪೂರ್ಣಿಮಾ ಅವರ ಅನುವಾದದ ಭಾಷೆ ಸುಂದರವೂ ಸುಲಲಿತವೂ ಆಗಿದೆ. ಬಹಳ ದೀರ್ಘವಾದ ಒಂದು ಕಥನವಾದರೂ ಅನುವಾದಕಿ ಎಲ್ಲೂ ತಾಳ್ಮೆ ಕಳೆದುಕೊಳ್ಳದೆ ಏಕಪ್ರಕಾರದ ಸಮತೋಲನವನ್ನು ಕಾಯ್ದುಕೊಂಡದ್ದು ಅವರ ಅಪಾರ ಪರಿಶ್ರಮ-ಪ್ರತಿಭೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಮುದ್ರಣದ ಗುಣಮಟ್ಟ, ರಕ್ಷಾಪುಟ, ಬಳಸಿದ ಕಾಗದ-ಹೀಗೆ ಎಲ್ಲ ದೃಷ್ಟಿಯಿಂದಲೂ ಪುಸ್ತಕದ ಬಾಹ್ಯ ನೋಟ ನೋಡುಗರ ಗಮನ ಸೆಳೆಯುತ್ತದೆ. ******************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ನೈಸು-ಬಿರುಸು ಒಮ್ಮೆ ತೊಗಲುಬೊಂಬೆ ಕಲಾವಿದರಾದ ಬೆಳಗಲ್ಲು ವೀರಣ್ಣನವರ ಜತೆಗೆ ಮಾತಾಡುತ್ತ ಕುಳಿತಿದ್ದೆ. ಮಾತುಕತೆ ನಡುವೆ ಅವರ ಮನೆಯಿಂದ ಫೋನುಕರೆ ಬಂತು. ಅವರು ಎತ್ತಿಕೊಂಡು ಮರಾಠಿಯಲ್ಲಿ ಮಾತಾಡಿದರು. ಮಾತು ಮುಗಿದ ಬಳಿಕ ನನ್ನತ್ತ ಹುಳ್ಳಗೆ ನೋಡಿ `ನಮ್ಮದು ಒರಟು ಮರಾಠಿ’ ಎಂದರು. ಉತ್ತರ ಕರ್ನಾಟಕದ ತಿರುಗಾಟದಲ್ಲಿ ಕೆಲವರು ನನ್ನ ಕನ್ನಡಕ್ಕೆ `ನಿಮ್ಮ ಮಾತು ನೈಸು. ನಮ್ಮದು ಬಿರುಸು’ ಎಂದು ಪ್ರತಿಕ್ರಿಯಿಸುವುದುಂಟು. ವಿಚಾರಿಸಿ ನೋಡಿದರೆ, ಬಿರುಸೆಂದು ಭಾವಿಸಿದವರ ಮಾತಲ್ಲಿ ಆಡುಮಾತಿನ ಪ್ರಾದೇಶಿಕ ರೂಪಗಳು ಹೆಚ್ಚ್ಚಿರುತ್ತವೆ, ನೈಸೆಂದು ಕರೆಯಲಾಗುವ ಮತುಗಳಲ್ಲಿ ಬರೆಹದ ಶಿಷ್ಟತೆಯ ಪ್ರಮಾಣ ಹೆಚ್ಚಿರುತ್ತದೆ. ಪ್ರಶ್ನೆಯೆಂದರೆ, ತಮ್ಮ ವಾಗ್ರೂಪದ ಬಗ್ಗೆ ಈ ತಪ್ಪೊಪ್ಪಿಗೆಯ ಅಥವಾ ಕೀಳರಿಮೆಯ ದನಿಯಾಕೆ ಕಾಣಿಸಿಕೊಳ್ಳುತ್ತದೆ? ಈ ಕೀಳರಿಮೆ ಕನ್ನಡಕ್ಕೆ ಸೀಮಿತವಲ್ಲ, ಪ್ರಾದೇಶಿಕ ರೂಪಭೇದಗಳನ್ನು ಆಡುವ ಎಲ್ಲ ಭಾಷಿಕ ಸಮುದಾಯಗಳಲ್ಲೂ ಇದೆ. ಲಖನೊ-ದೆಹಲಿಯ ಉರ್ದುರೂಪಗಳು ಶ್ರೇಷ್ಠವೆಂಬ ನಂಬಿಕೆ ಭಾರತದ ಉಳಿದ ಪ್ರಾಂತ್ಯದ ಭಾಷಿಕರಲ್ಲಿದೆ. ಅದರ ಮುಂದೆ ಹೈದರಾಬಾದಿನ `ದಖನಿ’, ಸಿರಿವಂತರ ಮದುವೆಗೆ ಬಂದಿರುವ ಬಡವರ ತರಹ ಮುದುಡಿಕೊಳ್ಳುತ್ತದೆ. ತೆಲಂಗಾಣದ ತೆಲುಗು `ಒರಟು’ ಎಂಬ ಧೋರಣೆ ವಿಜಯವಾಡಾ-ಗೋದಾವರಿ ಭಾಗದವರಲ್ಲಿದೆ. ತೆಲುಗು ಸಿನಿಮಾಗಳಲ್ಲಿ ಯಜಮಾನಿಕೆ ಮಾಡುತ್ತಿರುವುದು ಇದೇ ಕರಾವಳಿಯ `ನೈಸು’ ತೆಲುಗು. ಸಿನಿಮಾಗಳು ತೆಲಂಗಾಣದ ನಟರನ್ನಿಟ್ಟುಕೊಂಡು ಹೈದರಾಬಾದ್ ಸ್ಟುಡಿಯೊಗಳಲ್ಲಿ ತಯಾರಾದರೂ, ವಿಜಯವಾಡ ಸೀಮೆಯ ಉಚ್ಚಜಾತಿಗಳಾಡುವ ಸಂಸ್ಕøತಭೂಯಿಷ್ಠ ತೆಲುಗನ್ನೇ ಬಳಸುತ್ತವೆ; ತಮಿಳು ಮಲೆಯಾಳ ವಿಷಯದಲ್ಲೂ ಇಂತಹ ಪ್ರಾದೇಶಿಕ ಶ್ರೇಣೀಕರಣ ಭಾವವಿದೆ. ತಿರುವನಂತಪುರದ ನಂಬೂದಿರಿಗಳ ಮಲೆಯಾಳವು ಮಿಗಿಲಾದುದೆಂಬ ಅಭಿಪ್ರಾಯ ಕೇರಳದಲ್ಲಿ ರೂಢವಾಗಿದೆ; ಪುಣೆಯ ಮರಾಠಿ ಶುದ್ಧವೆಂದೂ ವಿದರ್ಭದ ಅಥವಾ ಕೊಂಕಣದ ಮರಾಠಿಗಳು ಬೆರಕಿಯೆಂದೂ ಮಹಾರಾಷ್ಟ್ರಿಗರ ಗ್ರಹಿಕೆಯಿದೆ. ಬಹುಶಃ ಈ ತರತಮಪ್ರಜ್ಞೆ ಅಖಿಲ ಭಾರತೀಯವಾಗಿದೆ. ಇದೊಂದು ಭಾಷಿಕ ಬೇನೆ. ಭಾಷೆಯಲ್ಲಿ ಇದೆಯೆಂದು ನಂಬಲಾಗಿರುವ `ಒರಟು’ತನವು, ಪ್ರಕೃತಿಗೆ ಹತ್ತಿರವಾಗಿದ್ದು ಮೂಲರೂಪವನ್ನು ಗ್ರಾಮೀಣ ಜೀವಂತಿಕೆಯನ್ನು ಉಳಿಸಿಕೊಂಡಿರುವ ಎಂಬರ್ಥವಿದ್ದರೆ ಚಿಂತೆಯಿಲ್ಲ. ಅದು ಅಸೂಕ್ಷ್ಮ ಕಲಬೆರಕೆ ಎಂಬರ್ಥವಿದ್ದರೆ ಸಮಸ್ಯೆ. ಬೆಳಗಲ್ ವೀರಣ್ಣನವರು ಕಿಳ್ಳೆಕ್ಯಾತ ಸಮುದಾಯವರು. ಇದನ್ನು ಒಳಗೊಂಡಂತೆ ಕರ್ನಾಟಕದ ಗೋಸಂಗಿ ಹಕ್ಕಿಪಿಕ್ಕಿ ಬುಡ್ಗಜಂಗಮ ಮುಂತಾದ ಅಲೆಮಾರಿ ಕಲಾವಿದ ಸಮುದಾಯಗಳ ಮನೆಮಾತು ಮರಾಠಿ. ಈ ಸಮುದಾಯಗಳು ಮಹಾರಾಷ್ಟ್ರದಿಂದ ಯಾವಾಗ ಯಾಕಾಗಿ ಗುಳೆ ಬಂದವೊ ತಿಳಿಯದು. ಬಹುಕಾಲ ಕರ್ನಾಟಕದೊಳಗಿದ್ದ ಕಾರಣ, ತಮ್ಮದೇ ಆದ ಕನ್ನಡಮಿಶ್ರಿತ ಮರಾಠಿಯನ್ನು ರೂಪಿಸಿಕೊಂಡಿವೆ. ಈ ಮರಾಠಿಯು ಕನ್ನಡ-ತೆಲುಗು ಪ್ರದೇಶದಲ್ಲಿ ಬೆಳೆದಿರುವುದರಿಂದ ಸಹಜವಾಗಿ ದಟ್ಟ ದ್ರಾವಿಡತನದಿಂದ ಕೂಡಿದೆ. ಅದಕ್ಕಾಗಿ ಅವರು ಅದನ್ನು ಬಿರುಸೆಂದು ನಿರೀಕ್ಷಣ ಜಾಮೀನು ಅರ್ಜಿ ಹಾಕಿಕೊಳ್ಳುವುದರ ಅಗತ್ಯವಿಲ್ಲ. ಆದರೆ ವಾಸ್ತವದಲ್ಲಿ ಎಲ್ಲ ಭಾಷಿಕ ಮುಜುಗರಗಳ ಹಿಂದೆ ಉತ್ಕøಷ್ಟತೆಯ ಮಾದರಿಯೊಂದು ಕಣ್ಮುಂದೆ ಮೌಲ್ಯಮಾಪಕ ಅಧಿಕಾರ ಸ್ಥಾನದಲ್ಲಿ ನಿಂತಿರುತ್ತದೆ.ಜನ ತಮ್ಮ ನುಡಿ ಒರಟೆಂದು ಪರಿಭಾವಿಸಲು ವರ್ಗವೂ ಒಂದು ಕಾರಣ. ಚಲನಚಿತ್ರಗಳಲ್ಲಿ ತಮಾಶೆಗಾಗಿ ಬಳಕೆಯಾಗುವುದಕ್ಕೂ ಉತ್ತರ ಕರ್ನಾಟಕವು ರಾಜಕೀಯ ಅಧಿಕಾರ, ಸಂಪತ್ತಿನ ಹಂಚಿಕೆ, ಆಧುನಿಕತೆ ವಿಷಯದಲ್ಲಿ ಹಿಂದುಳಿದಿರುವುದಕ್ಕೂ ಸಂಬಂಧವಿದೆ. ಇಂಗ್ಲೀಶ್ ಮಾತಾಡುವ ಸಮುದಾಯಗಳಲ್ಲಿ, ಪದಬಳಕೆ, ವಾಕ್ಯರಚನೆ, ಉಚ್ಚಾರಣ ರೀತಿಯಲ್ಲಿರುವ ಭೇದಗಳು ಸೃಷ್ಟಿಸಿರುವ ತರತಮಗಳು ಅನಂತ. ಅಮೆರಿಕೆಯಲ್ಲಿ ಕಪ್ಪುಜನ ಮಾತಾಡುವ ಇಂಗ್ಲೀಶನ್ನು ಕೆಟ್ಟದೆಂದು ಬಿಳಿಯರು ವ್ಯಂಗ್ಯ ಮಾಡುವರೆಂದು ಕೇಳಿರುವೆ. ಭಾರತದಲ್ಲೇ ಬಿಹಾರಿಗಳ (ಭೋಜಪುರಿ) ಅಥವಾ ಕೇರಳಿಗರ ಇಂಗ್ಲೀಶ್ ಉಚ್ಚಾರಗಳನ್ನು ಕುರಿತು ಬಹಳ ಜೋಕುಗಳಿವೆ. ತಮ್ಮ ಇಂಗ್ಲೀಶ್ ಉಚ್ಚಾರಣೆಗಾಗಿ ಸ್ವತಃ ಆಂಗ್ಲ ಪ್ರಾಧ್ಯಾಪಕರೇ ಅಪಮಾನಿತರಾದ ಸನ್ನಿವೇಶಗಳನ್ನು ಅವರ ಆತ್ಮಕತೆಗಳು ಹೇಳುತ್ತವೆ.ನಮ್ಮದು ಬಹುಸಾಂಸ್ಕøತಿಕ ಬಹುಭಾಷಿಕ ಬಹುಧಾರ್ಮಿಕ ದೇಶವೆಂದೂ, ಏಕಸಂಸ್ಕøತಿ ಏಕಧರ್ಮ ಏಕಭಾಕ ದೇಶಗಳಲ್ಲಿಲ್ಲದ ವೈವಿಧ್ಯ ಮತ್ತು ಕೂಡುಬಾಳುವೆ ಇಲ್ಲಿದೆಯೆಂದೂ ಅಭಿಮಾನದಿಂದ ಕೊಂಡಾಡುತ್ತೇವೆ. ಆದರೆ ಬಾಹುಳ್ಯ ಮತ್ತು ವೈವಿಧ್ಯದ ಒಳಗೆ ಕ್ರಿಯಾಶೀಲವಾಗಿರುವ ತರತಮಗಳನ್ನು ಮರೆಮಾಚುತ್ತೇವೆ. ಪಾಕಿಸ್ತಾನದ ಉರ್ದು ಹಾಗೂ ಬಾಂಗ್ಲಾದೇಶದ ಬಂಗಾಳಿಗಳ ಪ್ರಾದೇಶಿಕ ಭಿನ್ನತೆಗಳಲ್ಲೂ ಇಂತಹವೇ ತಾರತಮ್ಯಗಳಿವೆ. ಶ್ರೇಣೀಕರಣವು ಉಪಖಂಡದ ಸಾಮಾಜಿಕ ಧಾರ್ಮಿಕ ಬದುಕಿನ ನೆತ್ತರೊಳಗೇ ಸೇರಿಹೋದಂತಿದೆ. ಅದರ ಝಳ ಭಾಷೆಯ ಮೂಲಕ ಮುಖದೋರುತ್ತಿದೆ.ಸಾಮಾನ್ಯವಾಗಿ ಎಲ್ಲ ಸಮಾಜಗಳಲ್ಲೂ ಉಚ್ಚಜಾತಿ, ಮೇಲ್ವರ್ಗ, ನಗರವಾಸಿ, ಆಧುನಿಕರು, ಅಕ್ಷರಸ್ಥರು, ಅಧಿಕಾರ ಕೇಂದ್ರಕ್ಕೆ ಸಮೀಪ ಇರುವವರು ಆಡುವ ಭಾಷಿಕ ರೂಪ ಮತ್ತು ಉಚ್ಚಾರಗಳು ಶ್ರೇಷ್ಠವೆಂದು ಪರಿಗಣಿತವಾಗಿರುತ್ತವೆ. ಕೆಳಜಾತಿ, ಕೆಳವರ್ಗ, ಗ್ರಾಮೀಣ, ಆನಾಧುನಿಕ ಹಾಗೂ ಹಿಂದುಳಿದ ಪ್ರದೇಶದ ಜನರು ತಮ್ಮ ಭಾಷೆಗೆ ಮಾತ್ರವಲ್ಲ, ಸಂಸ್ಕøತಿ ಉಡುಪು ಆಹಾರಗಳನ್ನು ಕೀಳ್ಗಳೆವ ಸಿದ್ಧಾಂತಗಳಿಗೆ ಸಮ್ಮತಿ ಕೊಟ್ಟಿರುತ್ತಾರೆ. ಭಾಷಾವಿಜ್ಞಾನದ ಪ್ರಕಾರ ಭಾಷೆಯಲ್ಲಿ ಒರಟು-ನೈಸು, ಶ್ರೇಷ್ಠ-ಕನಿಷ್ಠ ಎಂಬುದು ಇರುವುದಿಲ್ಲ. ನಿರ್ದಿಷ್ಟ ಭಾಷೆ ವಿಭಿನ್ನ ಚಾರಿತ್ರಿಕ ಸಾಮಾಜಿಕ ಭೌಗೋಳಿಕ ಕಾರಣಗಳಿಂದ ಬಹುರೂಪಧಾರಣೆ ಮಾಡುವುದನ್ನು ಅದು ವಿವರಿಸುತ್ತದೆ. ಆದರೆ, ಚಾರಿತ್ರಿಕ ಒತ್ತಡಗಳಿಂದ ಹುಟ್ಟುವ ಈ ಬಹುತ್ವದೊಳಗೆ ಅಡಗಿರುವ ಭೇದಪ್ರಜ್ಞೆಯ ದೆಸೆಯಿಂದ, ಅದರ ರೂಪಗಳಲ್ಲಿರುವ ಶ್ರೇಷ್ಠ ಮತ್ತು ಕೀಳು ಭಾವವು ಚಾಲ್ತಿಗೆ ಬಂದುಬಿಡುತ್ತದೆ. ಈ ಭೇದಕ್ಕೆ ಕಾರಣ, ಭಾಷಿಕ ರೂಪದೊಳಗಿನ ಪದರಚನೆ ವಾಕ್ಯರಚನೆಗಳಲ್ಲ. ಅವನ್ನಾಡುವ ಜನರ ಹಿನ್ನೆಲೆಗಳು. ಶ್ರೇಷ್ಠವೆಂದೂ ನೈಸೆಂದೂ ಭಾವಿಸಲಾದ ರೂಪವು `ಕೆಳ’ `ಒರಟು’ `ಅಶುದ್ಧ’ ಎನಿಸಿಕೊಂಡಿರುವುದನ್ನು ಗೇಲಿ ಮಾಡುತ್ತದೆ. ಧಾರವಾಡ (ಕೆಲವೊಮ್ಮೆ ಮಂಗಳೂರು) ಕನ್ನಡವು ಬೆಂಗಳೂರು ಕೇಂದ್ರಿತ ಸಿನಿಮಾಗಳಲ್ಲಿ ಬಹುಕಾಲ ಹಾಸ್ಯಪಾತ್ರಗಳಲ್ಲಿ ಬಳಕೆಯಾಗುತ್ತಿತ್ತು. ಆದರೆ ಈಗೀಗ ಧಾರವಾಡ ಕನ್ನಡದಲ್ಲಿ ಸಿನಿಮಾ ಸೀರಿಯಲ್ ತಯಾರಾಗುತ್ತಿವೆ. ಆದರೆ ಅಲ್ಲೆಲ್ಲೂ ಮೈಸೂರು ಕನ್ನಡವನ್ನು ತಮಾಶೆಗಾಗಿ ಬಳಸಿಕೊಂಡಿರುವ ನಿದರ್ಶನಗಳನ್ನು ನಾನು ನೋಡಲಿಲ್ಲ. ಸಂಸ್ಕøತಭೂಯಿಷ್ಠ ಅಧಿಕೃತ ಹಿಂದಿಯ ಅಹಮಿಕೆ ಮತ್ತು ಕೃತಕತೆಯನ್ನು ಗೇಲಿಮಾಡುವ `ಚುಪ್ಕೆಚುಪ್ಕೆ’ ತರಹದ ಚಿತ್ರಗಳು ಕನ್ನಡದಲ್ಲಿ ಬಂದಂತಿಲ್ಲ. ಜನರನ್ನು, ಅವರ ಜಾತಿ ಪ್ರದೇಶ ಧರ್ಮ ವೃತ್ತಿ ಭಾಷೆಗಳ ನೆಲೆಯಿಂದ ಕೀಳರಿಮೆಗೊಳಿಸುವುದು, ಅವರ ಸಹಜ ವಿಕಾಸದ ಪ್ರಕ್ರಿಯೆಯನ್ನು ಮುರುಟಿಸುತ್ತದೆ. ಈ ಅಸಹಜ ಸನ್ನಿವೇಶ ಎರಡು ಹೊರದಾರಿಗಳನ್ನು ಹುಟ್ಟಿಸುತ್ತದೆ. ಒಂದು- ಶ್ರೇಷ್ಠವೆನಿಸಿರುವ ಭಾಷಿಕ ರೂಪವನ್ನು ಕುರುಡಾಗಿ ಅನುಕರಿಸುವುದಕ್ಕೆ. ಕರ್ನಾಟಕದ ನಗರ ಮಧ್ಯಮವರ್ಗದ ಮುಸ್ಲಿಮರು ಫಾರಸಿಯುಕ್ತ ಉರ್ದುವನ್ನು ವೈಯಾರದಲ್ಲಿ ಬಳಸುವುದರಲ್ಲಿ ಇದನ್ನು ಗಮನಿಸಬಹುದು. ಎರಡು- `ಒರಟು’ ಎನಿಸಿಕೊಂಡಿರುವ ರೂಪವನ್ನೇ ಕೆಚ್ಚಿನಿಂದ ಬಳಸುವುದು. ಉತ್ತರ ಕರ್ನಾಟಕದ ಕೆಲವು ಲೇಖಕರು ಮೈಸೂರು ಬೆಂಗಳೂರಿಗೆ ಹೋದರೂ ಜಿಗುಟುತನದಿಂದ ತಮ್ಮ ಪ್ರಾದೇಶಿಕ ರೂಪವನ್ನೇ ಬಳಸುತ್ತಿರುವರು. ಆದರೂ ಈ ಕೆಚ್ಚು ಕೆಲವರ ವೈಯಕ್ತಿಕ ಹಠವಾಗಿ ಉಳಿದಿಕೊಂಡಿದೆ. ಅದು ಬರೆಹಕ್ಕೆ ವಿಸ್ತರಣೆಯಾಗಿದ್ದು ಕಡಿಮೆ. ಟಪ್ಪಾಲು ಮುಟ್ಟಿತು ಎನ್ನುವುದಕ್ಕೂ ಪತ್ರ ತಲುಪಿತು ಎನ್ನುವುದಕ್ಕೂ ಅರ್ಥವ್ಯತ್ಯಾಸವಿಲ್ಲ. ಆದರೆ ಭಾವ ಮತ್ತು ಸೊಗಡಿನಲ್ಲಿ ಭಿನ್ನತೆಯಿದೆ. ಸ್ನಾನ, ಮೈತೊಳೆ, ಜಳಕಗಳ ನಡುವೆ; ಆಕಳು-ಹಸು-ಗೋವುಗಳ ನಡುವೆ ಪ್ರಾದೇಶಿಕ ಮಾತ್ರವಲ್ಲ, ಸಾಂಸ್ಕøತಿಕ ಫರಕುಗಳೂ ಇವೆ. ತೆಲುಗಿನಲ್ಲಿ ಮಳೆಯ ಅರ್ಥವುಳ್ಳ `ಯಾನಮು’ ಮತ್ತು `ವರ್ಷಮು’ಗಳು ಬಳಸುವವರ ಸ್ಥಾನನಿರ್ಣಯ ಮಾಡುತ್ತವೆ. ಸಮುದಾಯಗಳು ತಮ್ಮ ಭಾಷಿಕ ರೂಪಗಳನ್ನು ಕೀಳರಿಮೆಯಿಲ್ಲದೆ ಬಳಸುವುದು ಪ್ರಜಾಸತ್ತಾತ್ಮಕ ಹಕ್ಕಿನ ಸಂಗತಿ. ಆಯಾ ಪ್ರದೇಶದ ಅಥವಾ ಸಮುದಾಯಗಳ ಆಲೋಚನಕ್ರಮ, ಅನುಭವ ಜಗತ್ತು, ತಾತ್ವಿಕ ನಂಬಿಕೆ, ಸಾಂಸ್ಕøತಿಕ ನಡಾವಳಿಗಳು, `ಒರಟು’ ಎನಿಸಿಕೊಂಡ ರೂಪಗಳಲ್ಲಿ ಹಾಲಿನೊಳಗಿನ ತುಪ್ಪದಂತೆ ಅಡಗಿರುತ್ತವೆ. ಇದರ ಸಾಂಸ್ಕøತಿಕ ಅನನ್ಯತೆಯನ್ನು ಲೋಕಕ್ಕೆ ಲೇಖಕರು ಕಾಣಿಸುವರು. ಇದೊಂದು ಮಹತ್ವದ ಸಾಂಸ್ಕøತಿಕ ಹೊಣೆ ಕೂಡ. ಶ್ರೇಷ್ಠ ಶುದ್ಧ ನೈಸು ಅನಿಸಿಕೊಂಡಿರುವ ರೂಪಗಳಲ್ಲಿರದ ಕಸುವು ಚೆಲವುಗಳು `ಒರಟು’ `ಕಲಬೆರಕೆ’ `ಕೀಳು’ ಎನಿಸಿದ ರೂಪಗಳಲ್ಲಿ ಇರುವುದುಂಟು. ಸಾಮಾನ್ಯವಾಗಿ ಪ್ರಮಾಣೀಕರಣ ಪಡೆದ ಅಧಿಕೃತ ಭಾಷಿಕ ರೂಪಗಳು ಅತಿಬಳಕೆಯಿಂದ ಸವೆದಿರುತ್ತವೆ; ಒರಟೆನಿಸಿಕೊಂಡ ರೂಪವಿನ್ಯಾಸಗಳು ತಾಜಾತನದಿಂದ ಬೆಳಗುತ್ತಿರುತ್ತವೆ. ತಮ್ಮ ಮೇಲೆ ಕವಿದುಬಿದ್ದಿರುವ ಕೀಳರಿಮೆಯ ಧೂಲಿನ ದೆಸೆಯಿಂದ ಅವು ವಿಭಿನ್ನ ನಿಯೋಗಗಳಲ್ಲಿ ಬಳಕೆಯಾಗದೆ ಹಿಂಜರಿದು ನಿಂತಿರುತ್ತವೆ. ಈ ಹಿಂಜರಿಕೆ ಕೆಲವೊಮ್ಮೆ ಅವುಗಳ ಕಣ್ಮರೆಗೆ ಕಾರಣವಾಗಬಹುದು. ಉರ್ದು ಗಾದೆ ಮತ್ತು ನುಡಿಗಟ್ಟುಗಳನ್ನು ನೋಡುವಾಗ ನನಗೆ ಈ ಘೋರಸತ್ಯ ಹೊಳೆಯುತ್ತದೆ. ಅಲ್ಲಿ ಜೀವಂತಿಕೆಯಿಂದ ನಳನಳಿಸುವ ಎಷ್ಟೊಂದು ಗಾದೆಗಳಿವೆ. `ಜೀನಾ ಕರಗೆ ಹವ್ವಾ, ಗಾಂಡಕೊ ಬಂದಿ ತವ್ವಾ’ (=ಬಾಳುವೆ ಮಾಡೆ ಹವ್ವಕ್ಕ ಅಂದರೆ ಕುಂಡೆಗೆ ಕಾವಲಿ ಕಟ್ಕೊಂಡಿದ್ದಳಂತೆ) ಇವುಗಳಲ್ಲೊಂದು. ಇವು ಜನಬಳಕೆಯಲ್ಲಿ ಮುಜಗರವಿಲ್ಲದೆ ಸಹಜವಾಗಿ ಬಳಕೆಯಾಗುತ್ತವೆ. ಇವುಗಳಲ್ಲಿರುವ ನೇರಗುಣ, ತೀಕ್ಷ್ಣತೆ, ಹರಳುಗಟ್ಟಿದ ಅನುಭವ, ಕಾವ್ಯದ ಲಯಬದ್ಧತೆ ಮತ್ತು ಸಂಕ್ಷಿಪ್ತತೆ, ಧ್ವನಿಪೂರ್ಣತೆಗಳು ಜೀವಂತವಾಗಿವೆ. ನಗರ ಪ್ರದೇಶದ ಮಧ್ಯಮವರ್ಗದ ಜನರ ಪ್ರೌಢಉರ್ದುವಿಗೆ ಹೋಲಿಸಿದರೆ ಇದರ ಶಕ್ತಿ ಎದ್ದುಕಾಣುತ್ತದೆ. ಆದರೆ ಕರ್ನಾಟಕದ ಉರ್ದು ಲೇಖಕರು ಇದರ ಅನುಸಂಧಾನವನ್ನೇ ಮಾಡಿದಂತಿಲ್ಲ. ಫಾರಸಿಭೂಯಿಷ್ಠ ರಮ್ಯ ಉರ್ದುವಿನ ಯಜಮಾನಿಕೆಯಲ್ಲಿ ಅವರ ಬರೆಹ ಮಾತು ಬಳಲುತ್ತಿವೆ ಅನಿಸುತ್ತದೆ. ನಮ್ಮ ಅನೇಕ ತತ್ವಪದಕಾರರು ಈ ಪ್ರಾದೇಶಿಕ ‘ಒರಟು’ ಕನ್ನಡವನ್ನು ತಮ್ಮ ಬರೆಹದಲ್ಲಿ ಬಳಸಿರುವುದುಂಟು. ಇದನ್ನು ಬಹಳ ತಡವಾಗಿ ಆಧುನಿಕ ಲೇಖಕರು ಮುಜುಗರಬಿಟ್ಟು ಬಳಸಿದರು. ಇದನ್ನು ಪಾತ್ರಗಳಾಡುವ ಸಂಭಾಷಣೆಯಲ್ಲಿ ಮಾತ್ರವಲ್ಲ, ಅದರ ಹಿಂದೆ ಮುಂದೆ ಇರುವ ನಿರೂಪಣ ಭಾಷೆಯಲ್ಲೂ ತಂದರು. ಕೀಳೀಕರಿಸಿದ ಭಾಷಿಕ ರೂಪಗಳನ್ನು ತಿಳಿವಿನ ಅನುಸಂಧಾನದೊಳಗೆ ತರುವುದು ಅಸ್ಮಿತೆ ಹೋರಾಟ ಮಾತ್ರವಲ್ಲ, ಸಮಾಜವಾದಿ ಕ್ರಿಯೆ ಕೂಡ. ಇದು ಹದುಳದಾಯಕ ಸಮಾಜವನ್ನು ಕಟ್ಟುವಾಗ, ಎಲ್ಲ ಜನವರ್ಗಗಳನ್ನು ಒಳಗೊಳ್ಳುವ ಅಭಿವೃದ್ಧಿ ಮೀಮಾಂಸೆಗೂ ಸಂಬಂಧಿಸುವ ತತ್ವ. ******************************* ರಹಮತ್ ತರೀಕೆರೆ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ  ರಾಗದ ಬೆನ್ನೇರಿ ಬಂತು ಭಾವನಾ ವಿಲಾಸ ಕರ್ನಾಟಕ ಸಂಗೀತದಲ್ಲಿ’ ಕದನ ಕುತೂಹಲ’ ಅನ್ನೋ ರಾಗ ಇದೆ. ಈ ರಾಗದ ಸ್ವರಗಳನ್ನು ಸಾಕಷ್ಟು ವೇಗವಾಗಿ ಹಾಡುತ್ತಾರೆ. ಸಮುದ್ರಮಥನದ ಸಮಯದಲ್ಲಿ ಆಕಡೆ ರಾಕ್ಷಸರು,ಈ ಕಡೆ ದೇವತೆಗಳು ಅಮೃತಕ್ಕಾಗಿ ಕಡಲನ್ನು ಕಡೆಯುವಾಗಲೂ, ಎರಡೂ ವಿರುದ್ಧ ಪಂಗಡಗಳ ನಡುವೆ ಕದನವೇ. ಮನಸ್ಸೊಳಗೂ ಅಷ್ಟೇ, ಯಾವುದೇ ಹೊಸ ಆವಿಷ್ಕಾರದ ಬೆಣ್ಣೆ ಮೂಡುವುದು, ವಿರುದ್ಧ ಚಿಂತನೆಗಳ ಮಂಥನದಿಂದಲೇ. ಈ ರಾಗವನ್ನು ನೀವು ಆಲಿಸುವಾಗ ಒಂದು ಮಂಥನದ ಅನುಭವ ಆಗುತ್ತೆ. ರಾಗ ಎಂದರೆ ಒಂದು ನಿರ್ದಿಷ್ಟ ಆಯ್ಕೆಯ ಸ್ವರಗಳನ್ನು ಬೇರೆ ಬೇರೆ ಕಾಂಬಿನೇಷನ್ ಗಳಲ್ಲಿ ಹಾಡುವುದು. ಸ ರಿ ಗ ಮ ಪ ದ ನಿ ಎಂಬ ಸಪ್ತ ಸ್ವರಗಳು. ಅವುಗಳಲ್ಲಿ ಎರಡು ಅಥವಾ ಮೂರು ಬಗೆಯ ರಿ, ಗ ಮ, ಧ, ನಿ ಗಳಿವೆ. ರಿ : ಶುದ್ಧ ರಿ ( ರಿ1),  ಚತುಶ್ರುತಿ ರಿ ( ರಿ2) ಶಟ್ಶ್ರುತಿ ರಿ ( ರಿ3) ಗ : ಶುದ್ಧ ಗ ( ಗ1), ಸಾಧಾರಣ ಗ ( ಗ2), ಅಂತರ ಗ ( ಗ3) ಮ : ಶುದ್ಧ ಮ ( ಮ1), ಪ್ರತಿ ಮ ( ಮ2) ಧ :  ಶುದ್ಧ ಧ ( ಧ1), ಚತುಶ್ರುತಿ ಧ ( ಧ2) ಶಟ್ಶ್ರುತಿ ಧ ( ಧ3) ನಿ :  ಶುದ್ಧ ನಿ ( ನಿ1), ಕೈಶಿಕಿ ನಿ ( ನಿ2), ಕಾಕಲಿ ನಿ ( ನಿ3) ಸ ಮತ್ತು ಪ ಗಳನ್ನು ಆಧಾರಕ್ಕಾಗಿ ( ರೆಫರೆನ್ಸ್) ಉಪಯೋಗಿಸುವುದರಿಂದ, ಅವುಗಳಲ್ಲಿ ಒಂದೇ ವಿಧ.  ಈ ಸ್ವರಗಳ ಲಿಸ್ಟ್ ನಿಂದ, ನಾವು ಬೇಕಾದಂತೆ ಸ್ವರಗಳನ್ನು ಹೆಕ್ಕಿ ಮಾಲೆ ಕಟ್ಟಿದರೆ ಅದು ಒಂದು ರಾಗವಾಗುತ್ತೆ.  ಉದಾಹರಣೆಗೆ, ಸ, ರಿ1, ಗ1, ಮ1, ಪ, ಧ1, ನಿ1,  ಹೆಕ್ಕಿದರೆ ಅದೊಂದು ರಾಗ. ಹೀಗೆ ನೂರಾರು ಕಾಂಬಿನೇಷನ್ ಗಳನ್ನು ಮಾಡುವ ಮೂಲಕ ನಮಗೆ ಅಷ್ಟೂ ರಾಗಗಳ ಸಾಂಗತ್ಯ ಸಿಗುತ್ತೆ. ಇಲ್ಲಿ ವೈಜ್ಞಾನಿಕವಾಗಿ ನೋಡಿದರೆ, ಸ್ವರ ಎಂದರೆ ಒಂದು ಫ್ರೀಕ್ವೆನ್ಸಿ. ರಾಗದಲ್ಲಿ ಮೇಲೆ ಹೇಳಿದಂತೆ ಹಲವು ಫ್ರೀಕ್ವೆನ್ಸಿ ಗಳ ಮಾಲೆ ಇದೆ. ಮನುಷ್ಯನ ಕಿವಿಯ ಮೂಲಕ ಗ್ರಾಹ್ಯವಾಗುವ ಒಂದೊಂದು ಫ್ರೀಕ್ವೆನ್ಸಿ ಯೂ ಮಿದುಳಿನಲ್ಲಿ ಒಂದೊಂದು ಸಂವೇದನೆಯಾಗಿ ಮನಸ್ಸನ್ನು ಸ್ಪರ್ಶಿಸುತ್ತೆ. ಈ ಸಂವೇದನೆಯ ಸಾಹಿತ್ಯಿಕ ಹೆಸರೇ ಭಾವ. ಯಾವುದೇ  ಭಾಷೆಯನ್ನು ಮತ್ತು ಸಾಹಿತ್ಯವನ್ನು ಮೀರಿ, ಸ್ವರಗಳು, ಮನಸ್ಸೊಳಗೆ ಭಾವ ಸ್ಪಂದನೆ ಮಾಡಬಲ್ಲವು. ಶಿವರಂಜಿನಿ ಅಂತ ಒಂದು ರಾಗವಿದೆ.  ಇದರ ಆಲಾಪನೆಯನ್ನು ನೀವು ಆಲಿಸಿದರೆ ಶೋಕದ ಆರ್ದ್ರ ಭಾವ, ಭಕ್ತಿಯ ಸಮರ್ಪಣಾ ಭಾವ, ವಿರಹದ ನೋವಿನ ಅನುಭವ ಆಗುತ್ತೆ. ಹಾಗೆಯೇ ಮೋಹನ, ಯಮನ್ ಇತ್ಯಾದಿ ರಾಗಗಳು ಪ್ರೀತಿಯ ಉತ್ಕಟತೆಯಲ್ಲಿ, ಒಲವ ಧಾರೆಯಲ್ಲಿ ಮಿಂದ ಅನುಭೂತಿ ಕೊಡುತ್ತದೆ. ಸಾಹಿತ್ಯದ ಪದಗಳು ತಮ್ಮ ಅರ್ಥಗಳ ಮೂಲಕ, ಭಾವಕ್ಕೆ ಲಿಪಿಯಾದರೆ, ರಾಗಗಳು, ಭಾವದ ಅಮೂರ್ತ, ಅವರ್ಣನೀಯ ಅನುಭೂತಿ ಸ್ಫುರಿಸುತ್ತವೆ. ಈಗ ಭಾವಪೂರ್ಣ ಸಾಹಿತ್ಯದ ಭಾವಕ್ಕೆ ಹೊಂದುವ ರಾಗದಲ್ಲಿ, ಆ ಕವಿತೆಯನ್ನು ಹಾಡಿದರೆ!. ಅದು ರುಚಿಯಾದ ಅನ್ನ ಸಾರಿಗೆ, ಘಮಗಮ ತುಪ್ಪ ಬಡಿಸಿದ ಹಾಗೆ. ಸಾಹಿತ್ಯದ ಭಾವವನ್ನು ಚಿಂತನಶೀಲ ಮನಸ್ಸು ರಸಹಿಂಡುವಾಗ, ರಾಗದ ಸ್ವರಗಳು ಅದೇ ಹೊತ್ತಿಗೆ ಶ್ರವಣ ಮಾಧ್ಯಮದ ಮೂಲಕ ಎದೆಯೊಳಗೆ ಸ್ಪಂದನೆಯ ಲಬ್ ಡಬ್ ಆಗುತ್ತವೆ. ಹಾಡಿನ ಜತೆಗಿನ ಇತರ ವಾದ್ಯಗಳು, ಲಯ ಕಂಪನಗಳು ನಮ್ಮೊಳಗೆ ಒಂದು ಹೊಸ ಲೋಕ ಸೃಷ್ಟಿ ಮಾಡುತ್ತವೆ. ಈಗ, ಈ ಹಾಡು, ನಾಟಕದ್ದೋ, ಚಲನ ಚಿತ್ರದ್ದೋ, ಅಥವಾ ನಾಟ್ಯದ್ದೋ ಆಗಿದ್ದರೆ, ಭಾವೋತ್ಕರ್ಷಕ್ಕೆ ಮೂರನೆಯ ಆಯಾಮ ಸಿಗುತ್ತೆ. ಬರೇ ಅಭಿನಯದಿಂದಲೂ ಭಾವ ಪ್ರಕಟ ಮಾಡಲೂ ಬಹುದು, ಭಾವ ಸಂವಹನ ಮಾಡಬಹುದು ತಾನೇ. ಹಾಲುಗಲ್ಲದ ಬೊಚ್ಚುಬಾಯಿಯ ಮಗುವಿನ ಮುಗುಳು ನಗು ಸಂವಹಿಸುವ ಭಾವಕ್ಕೆ ಸಾಹಿತ್ಯ ಇದೆಯೇ?. ರಾಗ, ಕವಿತೆ ಮತ್ತು ಅಭಿನಯ ( ಶ್ರವಣ, ಭಾಷೆ ಮತ್ತು ದೃಶ್ಯ, ಮಾಧ್ಯಮ) ಈ ಮೂರೂ ವಿಧಾನದಿಂದ ನಮ್ಮ ಮನಮುಟ್ಟುವ ಪ್ರಯತ್ನ, ಸಿನೆಮಾ ಮತ್ತು ನಾಟಕದ ಹಾಡುಗಳದ್ದು. ಆ ಮೂಲಕ, ಮೂರೂ ರೀತಿಯಲ್ಲಿ  ಹಾಡಿನ ಪ್ರಸ್ತುತಿ, ನಮ್ಮೊಳಗೆ ಕಲ್ಪನಾಶಕ್ತಿಯ ನಾಲ್ಕನೇ ಆಯಾಮವನ್ನು ಸೃಜಿಸುತ್ತೆ. ಅದು ತುಂಬಾ ಹೊಸತಾದ ಅವರ್ಣನೀಯವಾದ ಪಿಕ್ಚರೈಸೇಷನ್ ನ ಕದ  ತೆರೆಯುತ್ತೆ. ಈ ಅನುಭವ ವ್ಯಕ್ತಿಯ ಹಳೆ ನೆನಪುಗಳ ಜತೆಗೆ ಅತ್ಯಂತ ಯುನೀಕ್ ಆಗಿರುತ್ತೆ. ಲಂಕೇಶ್ ಬರೆದ ಹಾಡು ಕೆಂಪಾದವೋ ಎಲ್ಲ ಕೆಂಪಾದವೋ. ಈ ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು, ಎಸ್ ಪಿ. ಬಾಲಸುಬ್ರಹ್ಮಣ್ಯಂ. ಹಾಡಿನಲ್ಲಿ ಪುನಃ ಪುನಃ ‘ ಕೆಂಪಾದವೋ’ ಎಂಬ ಸಾಲು ಇಂಪು ಲಹರಿಯಾಗಿ ಹರಿಯುತ್ತೆ. ( ಚಲನ ಚಿತ್ರ: ಎಲ್ಲಿಂದಲೋ ಬಂದವರು, ಸಂಗೀತ : ವಿಜಯ ಭಾಸ್ಕರ್) **     ***     ** ಕೆಂಪಾದವೋ ಎಲ್ಲ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ ಊರು ಕಂದಮ್ಮಗಳು ಕೆಂಪಾದವೋ ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ ನುಡಿ ನುಡಿದು ಹೋದಾಗ ಪಚ್ಚಯ ತೆನೆಯಂತ ಭೂಮಿಯು ಎಲ್ಲಾನು ಕೆಂಪಾದವೋ ನನಗಾಗ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ **     ***     ** ಕೆಂಪು ಬಣ್ಣ, ಕ್ರಾಂತಿಯ ಬಣ್ಣ. ಪರಿವರ್ತನೆಯ ಬಣ್ಣ. ಕ್ರಾಂತಿ, ರಕ್ತಕ್ರಾಂತಿಯೇ ಆಗಬೇಕೆಂದಿಲ್ಲ. ಜಗತ್ತಿನ ಪ್ರತೀ ಜೀವವೂ ಬದಲಾವಣೆಗೆ ಹಾತೊರೆಯುತ್ತೆ.  ಪ್ರಕೃತಿಯಲ್ಲಿ ಎರಡು ರೀತಿಯ ಬದಲಾವಣೆಯನ್ನು ಕಾಣಬಹುದು. ಮೊದಲನೆಯದ್ದು,ನಿಧಾನವಾದ, ನಿರಂತರವಾದ ಬದಲಾವಣೆ. ನಮಗೆ ದಿನ ದಿನ ,ಕ್ಷಣ ಕ್ಷಣ ಕಳೆದಂತೆ ವಯಸ್ಸಾಗುತ್ತಲ್ಲ,ಹಾಗೆ. ನಮ್ಮೊಳಗೆ ಅರಿವಿಲ್ಲದೆಯೇ ನಡೆಯುವ ಜೆನೆಟಿಕ್ ಬದಲಾವಣೆಗಳೂ ಅತ್ಯಂತ ಸೂಕ್ಷ್ಮ. ಜೀವ ವಿಕಾಸಕ್ಕೆ ಅದು ಮೂಲ.  ಎರಡನೆಯ ಬದಲಾವಣೆ ಪ್ರಳಯದಂತಹಾ ಬದಲಾವಣೆ. ಪ್ರಕೃತಿಯಲ್ಲಿ ಯಾವಾಗಲೂ ಮಲ್ಟಿಪೋಲಾರ್ ಪ್ರಕ್ರಿಯೆಗಳ ನಡುವೆ ಒಂದು ಸಮತೋಲನ ಇರುತ್ತೆ. ಆ ಸಮತೋಲನ ಯಾವುದೋ ಕಾರಣಕ್ಕೆ ( ಕೆಲವೊಮ್ಮೆ ಮಾನವ ನಿರ್ಮಿತ) ಸಮತೋಲನ ತಪ್ಪಿ, ಅಸಮತೋಲನ ಬೆಳೆಯುತ್ತಾ ಹೋಗುತ್ತೆ. ಈ ಅಸಮತೋಲನ, ಹೊರಲಸಾಧ್ಯ ಹೊರೆಯಾದಾಗ, ಹಠಾತ್ತಾದ, ಶಕ್ತಿಯುತವಾದ, ಭೂಕಂಪದಂತಹಾ ಘಟನೆ ನಡೆದು ಒಂದು ಕ್ಷಣಕ್ಕೆ ಎಲ್ಲವೂ ಅಲ್ಲೋಲಕಲ್ಲೋಲವಾಗಿ ಹೊಸ ಸಮತೋಲನಕ್ಕೆ ವ್ಯವಸ್ಥೆ ದಾಟಿಬಿಡುತ್ತೆ. ಇಂತಹ ವಿಪ್ಲವಕಾರೀ ಬದಲಾವಣೆಯಲ್ಲಿ ಸಾಕಷ್ಟು ,ಸಾವು ನೋವು ಸಂಭವಿಸುತ್ತೆ. ಹೇಗೇ ಇರಲಿ. ಬದಲಾವಣೆ ಮತ್ತು ವಿಕಾಸ ( evolution) ಜಗತ್ತಿನ ಭೂತ,ವರ್ತಮಾನ ಮತ್ತು ಭವಿಷ್ಯದ  ಅಂಗ.  ಬದಲಾವಣೆಗಾಗಿ ಗಿಡ,ಮರ, ಭೂಮಿ,ಬಾನು, ಪಚ್ಚೆ ಪೈರು ಎಲ್ಲವೂ ಹಾತೊರೆಯುವುದನ್ನು ,ಲಂಕೇಶ್ ಅವರು ಕೆಂಪಾದವೋ ಎಲ್ಲ ಕೆಂಪಾದವೋ ಅನ್ನುವ ಸಾಲುಗಳಲ್ಲಿ ಬಿಂಬಿಸಿದ್ದಾರೆ. ಹಾಡು ಕೇಳಿದಂತೆ, ಈ ಬದಲಾವಣೆಯತ್ತ ತುಡಿತ ಮನಸ್ಸೊಳಗೆ ತೀವ್ರವಾಗಲು,ಇದರ,ಸಂಗೀತ, ಹಾಡಿದ ಬಗೆ, ಲಯ ಕೂಡಾ ಕಾರಣ ಅಲ್ಲವೇ. ಈ ಕವಿತೆಯಲ್ಲಿ ಜನಪದ ಧ್ವನಿ ಹಾಡಿಗೆ ನೆಲದ ಪರಿಮಳ ಕೊಡುತ್ತೆ. ಈ ಕವಿತೆಯ ಕೊನೆಯ ಸಾಲು, “ನನಗಾಗ ಕೆಂಪಾದವೋ” ಲಂಕೇಶ್ ಅವರು ಅನುಭವ, ಸಿದ್ಧಾಂತ, ಮತ್ತು ಚಿಂತನೆ, ವ್ಯಕ್ತಿ ಕೇಂದ್ರಿತ ಎಂದು ನಂಬಿದಂತಿದೆ. ಕವಿತೆಯಲ್ಲಿ ಹೇಳಿದ ಅಷ್ಟೂ ವಿಷಯಗಳು ಕೆಂಪಾದವೋ ಅಂತ ಕಂಡದ್ದು ವ್ಯಕ್ತಿಯ  ಮನಸ್ಸಿಗೆ. ಲಂಕೇಶ್ ಅವರು ಇದೇ ಚಿತ್ರಕ್ಕೆ ಬರೆದ ಇನ್ನೊಂದು ಕವಿತೆ “ಎಲ್ಲಿದ್ದೆ ಇಲ್ಲೀ ತನಕ, ಎಲ್ಲಿಂದ ಬಂದ್ಯವ್ವ” ಹಾಡಾಗಿ ಹರಿದದ್ದು, ಎಸ್.ಪಿ.ಬಿ. ಅವರ ನಾದಬಿಂದುವಿನಿಂದಲೇ. ಜಾನಪದ ಶೈಲಿಯ ಭಾವಗೀತೆಗಳ ಸಂಕಲನ,ದೊಡ್ಡರಂಗೇ ಗೌಡರ, ಮಾವು- ಬೇವು. ಮಾವಿನ ತಳಿರು ಜನಪದ ಹಬ್ಬಗಳ ತೋರಣವಾದರೆ ಬೇವು ಬೆಲ್ಲ, ಬದುಕಿನ ಸಮತತ್ವ.  ಈ ಆಲ್ಬಮ್‌ ನ ಅಷ್ಟೂ ಹಾಡುಗಳು ಹಳ್ಳಿಯ ಶುಭ್ರ ಪರಿಸರದ ಮನಸ್ಸಿನ, ಸಂಭ್ರಮದ, ಪ್ರೀತಿ, ಪ್ರೇಮಗಳ ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಎಂಬಂತೆ ರಸಿಕ ಮನಸ್ಸಿಗೆ ಮುಟ್ಟುತ್ತವೆ. ಇಂತಹ ಹಾಡುಗಳಿಗೆ ಅಶ್ವಥ್ ಅವರು ರಾಗ ಸಂಯೋಜನೆ ಮಾಡಿ, ಎಸ್.ಪಿ ಬಿ. ಅವರು ಹಾಡಿದರೆ, ಅದು ಜೀವ ಭಾವದ ಔತಣ. ಅದರ ಒಂದು ಹಾಡು ಹೀಗಿದೆ. **     ***     ** ಮುಂಜಾನೆ ಮಂಜೆಲ್ಲ ಚಂದಾಗೈತೆ ಸಂಗಾತಿ ತುಟಿ ಹಂಗೆ ಹವಳsದ ಮಣಿ ಹಂಗೆ ಹೊಳಪಾಗೈತೆ… ಸಂಪಿಗೆ ತೂಗಿ ಚೆಂಡು ಹೂ ಬಾಗಿ ನೇಸರ ನಗೆಸಾರ ಶುರುವಾಗೈತೆ ಸೂಲಂಗಿ ತೆನೆಗೆ ಬಾಳೆಲೆ ಕೊನೆಗೆ ತಂಗಾಳಿ ಸುಳಿದಾಡಿ ಹಾಡಾಗೈತೆ ಕಣ್ಣಾಗಿ ಸಂಗಾತಿ ಕುಣಿದ್ಹಂಗೈತೆ.. ಮೋಡದ ದಂಡು ಓಡೋದ ಕಂಡು ರಂಗೋಲಿ ವೈನಾಗಿ ಬರೆದ್ಹಂಗೈತೆ ಆಕಾಶದ  ಬದಿಗೆ ಗುಡ್ಡದ ತುದಿಗೆ ಹೊಂಬಿಸಿಲು ರಂಗಾಗಿ ಬೆಳಕಾಗೈತೆ ಮೈದುಂಬಿ ಮನಸೋತು ಮೆರೆದಂಗೈತೆ.. **     ***     ** ಇದರ ಪ್ರತಿಯೊಂದು ಪದಗಳೂ ರಾಗ ಹೀರಿ ಗಾಯಕನ ಕಂಠದಿಂದ ಹೊಮ್ಮಿದಾಗ, ಭಾವ ಕಳೆಗಟ್ಟುತ್ತೆ. ಭಾವಮಧುವಿನ ಉನ್ಮತ್ತವಾದ ಸ್ಥಿತಿಯಿಂದ ಹೊರಬರಲಾಗದ ಸ್ಥಿತಿ ರಸಿಕ ಕೇಳುಗನದ್ದು. ಬಾಲಸುಬ್ರಹ್ಮಣ್ಯಂ ಅವರ ರೇಶ್ಮೆ ಸ್ಪರ್ಶದ ಕಂಠ, ತಗ್ಗು ಸ್ಥಾಯಿಯಿಂದ ತಾರಸ್ಥಾಯಿಗೆ ಕ್ಷಣಗಳಲ್ಲಿ ಏರಿಳಿಯುವ ಪ್ರತಿಭೆ ಮತ್ತು ಎದೆತುಂಬಿ ಹಾಡುವ ಸಮರ್ಪಣೆ,  ಚೆನ್ನಾಗಿ ಹದ ಬಂದ ಸಕ್ಕರೆ ಪಾಕದ ನೂಲೆಳೆಯ ಧಾರೆಯಂತೆ ಕಡಿಯದೆ ಹರಿಯುವ ಸರಾಗ, ಕವಿತೆಯ ಅರ್ಥಕ್ಕೆ ವ್ಯೋಮದವಕಾಶ ಒದಗಿಸುತ್ತವೆ. ರಾಗಸ್ವರಗಳು ಮಿಡಿದಾಗ ಅಂತರಂಗದ ತಂತಿಗಳಲ್ಲಿ ಭಾವ ಅನುರಣಿಸುತ್ತವೆ. ಹೀಗೆಯೇ ‘ ಪರಸಂಗದ ಗಂಡೆ ತಿಮ್ಮ ‘ ಚಿತ್ರದಲ್ಲಿ, ದೊಡ್ಡ ರಂಗೇ ಗೌಡರ ಕವಿತೆ ಹೀಗಿದೆ. “ನೋಟದಾಗೆ ನಗೆಯಾ ಮೀಟೀ ಮೋಜಿನಾಗೆ ಎಲ್ಲೆಯ ದಾಟೀ. ಮೋಡಿಯ ಮಾಡಿದೋಳ ಪರಸಂಗ ಐತೇ  ಪರಸಂಗ ಐತೇ.. ಮೋಹಾವ ತೋರಿದೋಳ ಪರಸಂಗ ಐತೇ  ಪರಸಂಗ ಐತೇ… ಬರಡಾ..ದ ಬದ್ಕೀ..ಗೆ ಹೊಸಾ ನೇಸ್ರು ಅರಳೈತೇ.”  ರಾಜನ್-ನಾಗೇಂದ್ರ ಅವರ ರಾಗ ಸಂಯೋಜನೆಯಲ್ಲಿ ಈ ಕವಿತೆಗೆ ನಾದಭಾವ ತುಂಬಿದ್ದು ಎಸ್. ಪಿ.ಬಿ. ದೊಡ್ಡರಂಗೇಗೌಡರ ಹಳ್ಳಿಯ ಭಾವಚಿತ್ರವನ್ನು ಕಣ್ಣಿಗೊತ್ತಿದ ನಂತರ, ಕೆ.ಎಸ್ ನರಸಿಂಹ ಸ್ವಾಮಿ ಅವರ ಮೈಸೂರು ಮಲ್ಲಿಗೆಯ ಪ್ರೇಮಗೀತೆಯತ್ತ ಹೊರಳೋಣವೇ.. **    ***     *** ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು || ಹುಣ್ಣಿಮೆಯ ರಾತ್ರಿಯಲಿ ಉಕ್ಕುಹುದು ಕಡಲಾಗಿ ನಿನ್ನೊಲುಮೆ ನನ್ನ ಕಂಡು, ನಿನ್ನೊಳಿದೆ ನನ್ನ ಮನಸು ಸಾಗರನ ಹೃದಯದಲಿ ರತ್ನ ಪರ್ವತ ಮಾಲೆ ಮಿಂಚಿನಲಿ ನೇವುದಂತೆ ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ ಸಾಗುವುಹು ಕನಸಿನಂತೆ, ನಿನ್ನೊಳಿದೆ ನನ್ನ ಮನಸು ಅಲೆ ಬಂದು ಕರೆಯುಹುದು ನಿನ್ನೊಲುಮೆ ಅರಮನೆಗೆ ಹೊರಗಡಲ ರತ್ನಪುರಿಗೆ ಅಲೆ ಇಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ ಒಳಗುಡಿಯ ಮೂರ್ತಿಮಹಿಮೆ, ನಿನ್ನೊಳಿದೆ ನನ್ನ ಮನಸು ***    ***    **** ಈ ಹಾಡಿಗೆ ಸಂಗೀತ ಅಶ್ವಥ್ ಅವರದ್ದು. ಹಾಡು ಮೈಸೂರು ಮಲ್ಲಿಗೆ ಚಲನಚಿತ್ರದ್ದು. ಬಾಲಸುಬ್ರಹ್ಮಣ್ಯಂ ಅವರು ಈ ಹಾಡನ್ನು ಪ್ರೇಮದ ಆರಾಧಕನಾಗಿ ಹಾಡಿದ್ದಾರೆ. ಈ ಹಾಡುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆಯೇ?!.  ಇವುಗಳನ್ನು ಅನುಭವಿಸಬೇಕು. ಇವುಗಳ ಭಾವದಬ್ಬಿಯಲಿ ಮೀಯಬೇಕು,ಕರಗಬೇಕು. ಅದು ಸಾಧ್ಯವಾಗುವುದೇ ಗಾಯಕನ ಪ್ರಸ್ತುತಿಯಿಂದ,ರಾಗ ಸಂಯೋಜನೆಯಿಂದ. ಗಾಯಕ, ನಟ, ಕವಿ,ಚಿತ್ರಕಾರ, ಇಂತಹ ಕಲಾವಿದರು, ಭಾವನೆ ,ಸಂವೇದನೆ ಮತ್ತು ಕಲ್ಪನೆಯ ಪ್ರತಿಭಾಸಂಪನ್ನರು. ಬ್ರಹ್ಮ, ಜೀವ ಸೃಷ್ಟಿ ಮಾಡಿದರೆ ಕಲಾವಿದರು ಜೀವಭಾವ ಸೃಷ್ಟಿಕರ್ತರು. ಅಮ್ಮ ಮತ್ತು ಅಪ್ಪ,ಎರಡೂ ಏಕಕಾಲದಲ್ಲಿ ಆಗಬಲ್ಲವರೆಂದರೆ ಕಲಾವಿದರೇ. ಹಾಗಾಗಿ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ ಬಸ್ ಸ್ಟ್ಯಾಂಡೆನ್ನುವ ಮಾಯಾಲೋಕ ಚಲನೆ ಎನ್ನುವ ಪದದ ನಿಜವಾದ ಅರ್ಥವೇನೆಂದು ತಿಳಿಯಬೇಕಾದರೆ ಈ ಬಸ್ ಸ್ಟ್ಯಾಂಡಿನಲ್ಲಿ ಅರ್ಧ ಗಂಟೆ ಸುಮ್ಮನೆ ನಿಂತುಬಿಡಬೇಕು; ಅವಸರದಲ್ಲಿ ಅತ್ತಿತ್ತ ಓಡಾಡುತ್ತ ಬೋರ್ಡು ಹುಡುಕುವವರನ್ನು, ಕಂಟ್ರೋಲ್ ರೂಮಿನಿಂದ ಅಶರೀರವಾಣಿಯಂತೆ ಮೊಳಗುವ ಅನೌನ್ಸ್‌ಮೆಂಟಿಗೆ ಬ್ಯಾಗನ್ನೆತ್ತಿಕೊಂಡು ಬಸ್ಸಿನೆಡೆಗೆ ಓಡುವವರನ್ನು, ಒಂದು ನಿಮಿಷವೂ ಆಚೀಚೆಯಾಗದಂತೆ ಅದೆಲ್ಲಿಂದಲೋ ಓಡಿಬಂದು ಹೊರಡುತ್ತಿರುವ ಬಸ್ಸನ್ನು ಹತ್ತಿಕೊಳ್ಳುವವರನ್ನು ಸಹನೆಯಿಂದ ಗಮನಿಸಬೇಕು! ಬಸ್ಸಿನ ಹಾಗೂ ಅದರ ಚಲನೆಯ ಹೊರತಾಗಿ ಬೇರಾವ ವಿಷಯಗಳೂ ಆ ಕ್ಷಣದ ಅಲ್ಲಿನ ಬದುಕುಗಳ ಎಣಿಕೆಗೆ ಸಿಕ್ಕುವುದಿಲ್ಲ. ಭೂಮಿ ಸೂರ್ಯನನ್ನು ಪರಿಭ್ರಮಿಸುವ, ಇನ್ಯಾವುದೋ ಉಪಗ್ರಹವೊಂದು ಭೂಮಿಯನ್ನು ಸುತ್ತುತ್ತಿರುವ ಯಾವುದೇ ನಿರ್ಣಯಾತ್ಮಕ ತತ್ವಗಳಿಗೆ ಒಳಪಡದ ಸರಳವಾದ ಚಲನೆಯ ಸಿದ್ಧಾಂತವೊಂದು ಬಸ್ಸಿನ ಅಸ್ತಿತ್ವದೊಂದಿಗೆ ನಿರ್ಣಯಿಸಲ್ಪಡುತ್ತದೆ. ಬಸ್ಸು ಯಾವ ಸಮಯಕ್ಕೆ ಬಸ್ ಸ್ಟ್ಯಾಂಡನ್ನು ತಲುಪಿತು, ಅದರ ಬೋರ್ಡು ಯಾವಾಗ ಬದಲಾಯಿತು, ಅದರ ನಿರ್ಗಮನಕ್ಕೆ ನಿಗದಿಯಾದ ಅವಧಿಯೇನು ಹೀಗೆ ಸಮಯದ ಸುತ್ತ ಸುತ್ತುವ ಮಾಹಿತಿಗಳೇ ಅತ್ತಿತ್ತ ಸುಳಿದು ಚಲನೆಯ ದಿಕ್ಕುಗಳನ್ನು ನಿರ್ಧರಿಸುತ್ತಿರುತ್ತವೆ. ಅಂತಹ ನಿರ್ಣಾಯಕ ಹಂತದಲ್ಲಿ ಬಸ್ ಸ್ಟ್ಯಾಂಡೊಂದು ಪುಟ್ಟ ಗ್ರಹದಂತೆ ಗೋಚರವಾಗಿ, ತನ್ನ ನಿಯಮಗಳಿಗನುಸಾರವಾಗಿ ಬದುಕುಗಳ ಚಲನೆಯ ಬೋರ್ಡನ್ನು ಬದಲಾಯಿಸುತ್ತಿರುವಂತೆ ಭಾಸವಾಗುತ್ತದೆ.           ನಾನು ಬಸ್ಸಿಗಾಗಿ ಕಾಯುತ್ತ ನಿಂತಿರುತ್ತಿದ್ದ ಕಾಲದಲ್ಲಿ ಈ ಬಸ್ಸಿನ ಬೋರ್ಡುಗಳೆಡೆಗೆ ನನಗೊಂದು ವಿಚಿತ್ರವಾದ ಕುತೂಹಲವಿತ್ತು. ಬೋರ್ಡೇ ಇರದ ಬಸ್ಸೊಂದು ತುಂಬಾ ಸಮಯದಿಂದ ಸ್ಟ್ಯಾಂಡಿನಲ್ಲಿಯೇ ನಿಂತಿದೆಯೆಂದರೆ ಅದು ಡಿಪೋಗೆ ಹೋಗುವ ಬಸ್ಸು ಎಂದು ಅದ್ಹೇಗೋ ತೀರ್ಮಾನವಾಗಿ ಆ ಬಸ್ಸಿನ ನಂಬರನ್ನಾಗಲೀ, ಅದರ ಆಗುಹೋಗುಗಳನ್ನಾಗಲೀ ಯಾರೂ ಗಮನಿಸುತ್ತಲೇ ಇರಲಿಲ್ಲ; ಡ್ರೈವರೊಬ್ಬ ಆ ಬಸ್ಸಿನೆಡೆಗೆ ನಡೆದುಕೊಂಡು ಹೋಗುತ್ತಿದ್ದರೂ ಅಲ್ಲಿರುವ ಯಾರ ಗಮನವೂ ಅದರ ಕಡೆಗೆ ಹರಿಯುತ್ತಿರಲಿಲ್ಲ. ಅದೇ ಬೋರ್ಡು ಹಾಕುವವ ಬಸ್ಸಿನೆಡೆಗೆ ಚಲಿಸಿದಾಗ ಮಾತ್ರ ಅಲ್ಲಿರುವವರೆಲ್ಲರ ದೃಷ್ಟಿಯೂ ಅವನನ್ನೇ ಅನುಸರಿಸುತ್ತ ತೀಕ್ಷ್ಣವಾಗತೊಡಗುತ್ತಿತ್ತು. ಅಷ್ಟು ಹೊತ್ತು ಅಲ್ಲಿಯೇ ನಿಂತಿರುತ್ತಿದ್ದ ಬಸ್ಸಿನ ಅಸ್ತಿತ್ವಕ್ಕೊಂದು ಬೆಲೆಯೇ ಇಲ್ಲದಂತೆ ಭಾಸವಾಗಿ, ನಾಲ್ಕಾರು ಅಕ್ಷರಗಳ ಬೋರ್ಡೊಂದು ನಿಮಿಷಾರ್ಧದಲ್ಲಿ ಅದರ ಇರುವಿಕೆಯ ಸ್ವರೂಪವನ್ನು ಬದಲಾಯಿಸಿಬಿಡುವುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು. ಈ ಬೋರ್ಡುಗಳೆಲ್ಲ ಅದ್ಯಾವ ಫ್ಯಾಕ್ಟರಿಯಲ್ಲಿ ತಯಾರಾಗಬಹುದು, ಅದರ ಮೇಲೆ ಅಕ್ಷರಗಳನ್ನು ಬರೆಯುವವ ಯಾವ ಊರಿನವನಾಗಿರಬಹುದು, ತಾನೇ ಬರೆದ ಬೋರ್ಡನ್ನು ಹೊತ್ತು ಹೊರಡಲು ರೆಡಿಯಾದ ಬಸ್ಸನ್ನೇರುವಾಗ ಅವನ ಮನಸ್ಸಿನ ಭಾವನೆಗಳೇನಿರಬಹುದು ಎನ್ನುವಂತಹ ವಿಚಿತ್ರವಾದ ಆಲೋಚನೆಗಳೂ ಆಗಾಗ ಸುಳಿಯುತ್ತಿದ್ದವು. ಕಂಟ್ರೋಲ್ ರೂಮಿನ ಪಕ್ಕ ಒಂದಕ್ಕೊಂದು ಅಂಟಿಕೊಂಡು ನಿಂತಿರುತ್ತಿದ್ದ ಬೋರ್ಡುಗಳಲ್ಲಿ ತನಗೆ ಬೇಕಾಗಿದ್ದನ್ನು ಮಾತ್ರ ಎತ್ತಿಕೊಂಡು ವಿಚಿತ್ರವಾದ ಗತ್ತಿನಲ್ಲಿ ಓಡಾಡುತ್ತಿದ್ದ ಬೋರ್ಡು ಹಾಕುವವನೇ ಸ್ಟ್ಯಾಂಡಿನಲ್ಲಿ ಕಾಯುತ್ತಿರುವವರೆಲ್ಲರ ಬದುಕಿನ ಚಲನೆಯನ್ನು ನಿರ್ಧರಿಸುತ್ತಿರುವಂತೆ ಭಾಸವಾಗುತ್ತಿತ್ತು.           ಈ ಕಂಟ್ರೋಲ್ ರೂಮ್ ಎನ್ನುವುದೊಂದು ಮಾಯಾಲೋಕದ ಕಲ್ಪನೆಯನ್ನು ಕಣ್ಣೆದುರು ತೆರೆದಿಡುವ ಜಾಗ. ಅಸಾಧಾರಣವಾದ ಲವಲವಿಕೆಯ ಆ ಸ್ಥಳದಲ್ಲಿ ನಡೆಯುವ ಮಾತುಕತೆಗಳು, ಅದ್ಯಾವುದೋ ಗುರುತು-ಪರಿಚಯಗಳಿಲ್ಲದ ಊರಿನಲ್ಲಿ ಸಂಜೆಯ ಹೊತ್ತು ನಡೆದ ಘಟನೆಗಳನ್ನು ತಮ್ಮದಾಗಿಸಿಕೊಂಡ ಜೋಕುಗಳು, ಬಸ್ಸಿನ ಆಗಮನವನ್ನೇ ಕಾಯುತ್ತಿರುವಂತೆ ತೋರುವ ಬಾಯಿಪಾಠದಂತಹ ಅನೌನ್ಸ್‌ಮೆಂಟುಗಳು ಎಲ್ಲವೂ ಸೇರಿಕೊಂಡು ಅಲ್ಲೊಂದು ವಿಶಿಷ್ಟವಾದ ಜೀವಂತಿಕೆಯ ಸಂವಹನವೊಂದು ಪ್ರತಿನಿಮಿಷವೂ ಹುಟ್ಟಿಕೊಳ್ಳುತ್ತಿರುತ್ತದೆ. ರೂಮಿನ ಒಳಹೋಗುತ್ತಿರುವ ಡ್ರೈವರಿನೊಂದಿಗೆ ಹೊರಬರುತ್ತಿರುವ ಕಂಡಕ್ಟರ್ ಒಬ್ಬ ಮುಖಾಮುಖಿಯಾಗಿ, ಬಾಗಿಲಿನಲ್ಲಿ ನಗುವೊಂದರ ವಿನಿಮಯವಾಗಿ, ಯಾರೋ ನಿರ್ಧರಿಸಿದ ಚಲನೆಯೊಂದು ಪರಿಚಯವೇ ಇಲ್ಲದ ಇಬ್ಬರ ನಗುವಿನಲ್ಲಿ ಸಂಧಿಸುತ್ತಿರುವಂತೆ ಅನ್ನಿಸುತ್ತದೆ. ಬೆಂಚಿನ ಮೇಲೆ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದ ಶಾಲೆಗೆ ಹೋಗುವ ಮಗುವೊಂದು ಎದ್ದುಬಂದು, ಕಂಟ್ರೋಲ್ ರೂಮಿನ ಸರಳುಗಳನ್ನು ಹಿಡಿದುಕೊಂಡು ತಲೆ ಮೇಲೆತ್ತಿ ಬಸ್ಸಿನ ನಂಬರನ್ನು ವಿಚಾರಿಸುವಾಗಲೆಲ್ಲ ಕಾರಣವಿಲ್ಲದೆ ಆ ಮಗುವಿನ ಮೇಲೊಂದು ಪ್ರೀತಿ ಹುಟ್ಟಿಕೊಳ್ಳುತ್ತದೆ. ಪಡ್ಡೆ ಹುಡುಗರೆಡೆಗೆ ಒಂದು ಅಸಡ್ಡೆಯನ್ನು ತೋರಿಸುವ ಕಂಟ್ರೋಲ್ ರೂಮಿನ ಯಜಮಾನ ಮಗುವಿನ ಪ್ರಶ್ನೆಗೆ ನಗುನಗುತ್ತ ಉತ್ತರಿಸುವಾಗ, ಸರಳುಗಳ ಒಳಗೆ ಕುಳಿತೇ ಇರುವ ಮಾನವೀಯ ಧ್ವನಿಯೊಂದು ಸರಳುಗಳಾಚೆ ಹರಿದು ಕಾಯುವಿಕೆಯ ಅಸಹನೆಗಳೆಲ್ಲವನ್ನೂ ಕಡಿಮೆ ಮಾಡುತ್ತದೆ. ಬಾಗಿಲನ್ನೇ ಮುಚ್ಚದ ಕಂಟ್ರೋಲ್ ರೂಮಿನ ಗೋಡೆಯ ಮೇಲಿನ ದೊಡ್ಡ ಗಡಿಯಾರವೊಂದು ಬಾಗಿಲಿನಲ್ಲಿ, ಮೈಕಿನಲ್ಲಿ, ಸರಳುಗಳ ಸಂದಿಗಳಲ್ಲಿ ಸಂಧಿಸುವ ಸಂವಹನಗಳ ಸಮಯವನ್ನು ತನ್ನದಾಗಿಸಿಕೊಳ್ಳುತ್ತ ಚಲಿಸುತ್ತಲೇ ಇರುತ್ತದೆ.           ಬಸ್ ಸ್ಟ್ಯಾಂಡೊಂದು ತನ್ನೊಳಗಿನ ಚುರುಕುತನವನ್ನು ಕಂಪೌಂಡಿನಾಚೆಯೂ ವಿಸ್ತರಿಸಿಕೊಳ್ಳುವ ರೀತಿ ಅಚ್ಚರಿ ಹುಟ್ಟಿಸುವಂಥದ್ದು. ನಾಲ್ಕೇ ಅಡಿಗಳ ಜಾಗದಲ್ಲಿ ಅಕ್ಕಪಕ್ಕದವರಿಗೆ ಒಂದು ಹನಿಯೂ ಸಿಡಿಯದಂತೆ ಎಳನೀರು ಕತ್ತರಿಸುವವನ ಪಕ್ಕದ ಮೂರಡಿಯಲ್ಲಿ ಹೂ ಮಾರುವವನ ಬುಟ್ಟಿ, ಹಣ್ಣಿನ ಅಂಗಡಿಯೊಂದಿಗೆ ಅಂಟಿಕೊಂಡಂತೆ ಕಾಣುವ ಜ್ಯೂಸ್ ಪಾರ್ಲರು, ಜೊತೆಗೊಂದು ಬೀಡಾ ಅಂಗಡಿಯ ರೇಡಿಯೋ ಸೌಂಡು, ಸಂಜೆಯಾಗುತ್ತಿದ್ದಂತೆ ಬೇಕರಿಯ ಗಾಜಿನ ಬಾಕ್ಸುಗಳ ಮೇಲೆ ಹಾಜರಾಗುವ ಬೋಂಡಾ-ಬಜ್ಜಿಗಳೆಲ್ಲವೂ ಬಸ್ ಸ್ಟ್ಯಾಂಡಿನ ಲೋಕದೊಂದಿಗೆ ಒಂದಾಗಿಹೋಗಿ ಸೌಂದರ್ಯಪ್ರಜ್ಞೆಯ ಹೊಸದೊಂದು ಪರಿಕಲ್ಪನೆಯನ್ನು ಹುಟ್ಟುಹಾಕುತ್ತವೆ. ಬಸ್ಸಿನ ಓಡಾಟದಿಂದಾಗಿ ನೆಲಬಿಟ್ಟು ಮೇಲೆದ್ದ ಬೇಸಿಗೆಯ ಧೂಳಾಗಲೀ, ಮಳೆಗಾಲದ ರಾಡಿಯಾಗಲೀ, ಬೇಕರಿಯ ಚಹಾದ ಕಪ್ಪನ್ನು ಮುತ್ತಿಕೊಳ್ಳುವ ನೊಣಗಳಾಗಲೀ ಆ ಸೌಂದರ್ಯದ ಭಾವವನ್ನು ಕೊಂಚವೂ ಅಲ್ಲಾಡಿಸುವುದಿಲ್ಲ. ಬೇಕರಿಯೆದುರು ನಿಂತಿರುವ ಕಾಲೇಜು ಹುಡುಗರ ಗ್ಯಾಂಗೊಂದು ಜ್ಯೂಸು ಕುಡಿಯುತ್ತಿರುವ ಹುಡುಗಿಯರೆಡೆಗೆ ಕಳ್ಳದೃಷ್ಟಿ ಬೀರುವ ಅಪ್ರತಿಮ ನೋಟಕ್ಕೆ ಸಾಲುಸಾಲು ಅಂಗಡಿಗಳ ಪಕ್ಕದಲ್ಲಿ ನಿಧಾನವಾಗಿ ಚಲಿಸುವ ಬಸ್ಸು ಸಾಕ್ಷಿಯಾಗುತ್ತದೆ. ಆ ಸಾಲು ಅಂಗಡಿಗಳ ನಡುವೆಯೇ ಅಲ್ಲೊಂದು ಇಲ್ಲೊಂದು ಪ್ರೇಮವೂ ಮೊಳಕೆಯೊಡೆದು ಕಳ್ಳಹೆಜ್ಜೆಗಳನ್ನಿಡುತ್ತ ಬಸ್ ಸ್ಟ್ಯಾಂಡಿನೆಡೆಗೆ ಚಲಿಸುತ್ತದೆ. ಹಾಗೆ ಚಿಗುರಿದ ಒಲವೊಂದು ಅದೇ ಬಸ್ ಸ್ಟ್ಯಾಂಡಿನ ಬೆಂಚುಗಳ ಮೇಲೆ ಬೆಳೆದು, ಬದಲಾದ ಬೋರ್ಡಿನ ಬಸ್ಸನ್ನೇರಿ ತಂಟೆ-ತಕರಾರುಗಳಿಲ್ಲದೆ ಊರು ಸೇರಿ ಬೇರೂರುತ್ತದೆ.           ಈ ಬಸ್ ಸ್ಟ್ಯಾಂಡುಗಳಲ್ಲಿ ಹುಟ್ಟಿಕೊಳ್ಳುವ ಅನುಬಂಧಗಳ ಬಗ್ಗೆ ವಿಚಿತ್ರವಾದ ಆಸಕ್ತಿಯೊಂದು ನನ್ನಲ್ಲಿ ಈಗಲೂ ಉಳಿದುಕೊಂಡಿದೆ. ಸ್ಟ್ಯಾಂಡಿಗೆ ಬಂದ ಪ್ರತಿಯೊಂದು ವಿದ್ಯಾರ್ಥಿಯನ್ನೂ ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಿಸುವುದು ತಮ್ಮ ಗುರುತರವಾದ ಜವಾಬ್ದಾರಿಯೆನ್ನುವಂತೆ ಹಾಜರಾಗುತ್ತಿದ್ದ ಸಿಟಿ ಬಸ್ಸಿನ ಡ್ರೈವರು-ಕಂಡಕ್ಟರುಗಳನ್ನು ಕಂಡಾಗ ಆಗುತ್ತಿದ್ದ ನೆಮ್ಮದಿ-ಸಮಾಧಾನಗಳ ಅನುಭವವನ್ನು ಜಗತ್ತಿನ ಬೇರಾವ ಸಂಗತಿಯೂ ದೊರಕಿಸಿಕೊಟ್ಟ ನೆನಪಿಲ್ಲ. ಬಸ್ಸಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಡಿಪೋಗೆ ಹೋಗಲೆಂದು ನಿಂತಿರುತ್ತಿದ್ದ ಖಾಲಿ ಬಸ್ಸಿನೊಳಗೆ ಕುಳಿತು, ಬೇರೆ ಕಾಲೇಜಿನ ಹುಡುಗಿಯರೊಂದಿಗೆ ಮಾಡುತ್ತಿದ್ದ ಕಾಲಕ್ಷೇಪದ ಮಾತುಕತೆಯ ಭಾಗವಾಗುತ್ತಿದ್ದ ಹುಡುಗರ ಚಹರೆಗಳು ನೆನಪಿನಿಂದ ಮರೆಯಾಗುವುದಿಲ್ಲ. ಆ ಗ್ಯಾಂಗಿನಲ್ಲಿದ್ದ ಹುಡುಗನೊಬ್ಬನ ಮೇಲೆ ಚಿಕ್ಕದೊಂದು ಪ್ರೇಮವೂ ಹುಟ್ಟಿ, ಆತನ ಬಸ್ಸು ಹೊರಟುಹೋಗುವ ಸಮಯದಲ್ಲಿ ಕದ್ದುನೋಡುತ್ತಿದ್ದಾಗ, ಅಚಾನಕ್ಕಾಗಿ ಆತನೂ ತಿರುಗಿನೋಡಿ ಸೃಷ್ಟಿಯಾಗುತ್ತಿದ್ದ ನೈಜವಾದ ರೋಮಾಂಚಕ ದೃಶ್ಯವೊಂದು ಯಾವ ಸಿನೆಮಾದಲ್ಲಿಯೂ ಕಾಣಿಸಿಕೊಂಡಿಲ್ಲ. ಹೊಟೆಲಿನ  ಎಸಿ ರೂಮಿನಲ್ಲಿ ಕುಳಿತು ದೋಸೆ ತಿನ್ನುವಾಗಲೆಲ್ಲ ಬಸ್ ಸ್ಟ್ಯಾಂಡಿನ ಕ್ಯಾಂಟೀನಿನಲ್ಲಿ ಮಸಾಲೆದೋಸೆ ತಿನ್ನುವ ಆಸೆಯೊಂದು ಆಸೆಯಾಗಿಯೇ ಉಳಿದುಹೋದದ್ದು ನೆನಪಾಗಿ, ತಿನ್ನುತ್ತಿರುವ ದೋಸೆಯ ರುಚಿ ಹೆಚ್ಚಿದಂತೆ ಅನ್ನಿಸುವುದೂ ಸುಳ್ಳಲ್ಲ. ಪ್ರತಿದಿನ ಬೆಳಗ್ಗೆ ರಸ್ತೆಯಲ್ಲಿ ತರಕಾರಿ ಮಾರುವವನ ಧ್ವನಿವರ್ಧಕದಲ್ಲಿ ತರಕಾರಿಯ ಹೆಸರುಗಳನ್ನು ಕೇಳುವಾಗಲೆಲ್ಲ, ಕಂಟ್ರೋಲ್ ರೂಮಿನ ಮೈಕಿನಿಂದ ಹೊರಬರುತ್ತಿದ್ದ ಊರಿನ ಹೆಸರುಗಳೆಲ್ಲ ಒಂದೊಂದಾಗಿ ನೆನಪಾಗುತ್ತವೆ. ಆ ಹೆಸರುಗಳನ್ನು ಹೊತ್ತ ಬೋರ್ಡುಗಳೆಲ್ಲ ಡಿಪೋದಿಂದ ಸ್ಟ್ಯಾಂಡಿಗೆ ಬರುವ ಫಸ್ಟ್ ಬಸ್ಸುಗಳಿಗಾಗಿ ಕಾಯುತ್ತಿರಬಹುದು ಎನ್ನುವ ಯೋಚನೆಯೊಂದು ಹಾದುಹೋಗಿ, ಮಾಯಾಲೋಕದಂತಹ ಬಸ್ ಸ್ಟ್ಯಾಂಡಿನ ಸಹಜಸುಂದರ ನೆನಪನ್ನು ನನ್ನದಾಗಿಸಿಕೊಳ್ಳುತ್ತೇನೆ. ************************************************* ಇದು ಈಅಂಕಣದ ಕೊನೆಯ ಕಂತು – ಅಂಜನಾ ಹೆಗಡೆ ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಅಂಕಣ ಬರಹ ಹಲವು ಬಣ್ಣಗಳನ್ನು ಹೊತ್ತ ಭಾವನೆಗಳ ಕೋಲಾಜ್ ಆಕಾಶಕ್ಕೆ ಹಲವು ಬಣ್ಣಗಳು (ಗಜಲ್ ಸಂಕಲನ)ಕವಿ- ಸಿದ್ಧರಾಮ ಹೊನ್ಕಲ್ಬೆಲೆ-೧೩೦/-ಪ್ರಕಾಶನ- ಸಿದ್ಧಾರ್ಥ ಎಂಟರ್‍ಪ್ರೈಸಸ್              ಇಲ್ಲಿ ಕತ್ತಲೆ ಕಳೆದು ಬೆಳಕು ಮೂಡಿಸಿದವರೆ ಸಂತ ಸೂಫಿಗಳು ಬಸವಾದಿ ಶರಣರು ಸಾಕಿ ಎನ್ನುತ್ತ ತಮ್ಮ ನೆಲದ ಗಟ್ಟಿ ದನಿಗಳನ್ನು ಉಲ್ಲೇಖಿಸಿ ಗಜಲ್‌ಲೋಕಕ್ಕೆ ಬಂದಿರುವ ಕವಿ ಸಿದ್ಧರಾಮ ಹೊನ್ಕಲ್ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಾ ಹಳಬರು. ಕಥೆ, ಕವನ, ಪ್ರವಾಸ ಕಥನ, ಪ್ರಬಂಧಗಳು ಹೀಗೆ ಹತ್ತಾರು ಪ್ರಕಾರಗಳಲ್ಲಿ ಕೈಯಾಡಿಸಿರುವ ಸಿದ್ಧರಾಮ ಹೊನ್ಕಲ್ ತಮ್ಮದೇ ನೆಲದ ಗಜಲ್‌ನ್ನು ಆತುಕೊಳ್ಳಲು ಇಷ್ಟು ತಡಮಾಡಿದ್ದೇಕೆ ಎಂದು ನಾನು ಬಹಳ ಸಲ ಯೋಚಿಸಿದ್ದೇನೆ. ಉತ್ತರ ಕರ್ನಾಟಕದ ಮಣ್ಣಿನಲ್ಲೇ ಹಾಸಿಕೊಂಡಿರುವ ಗಜಲ್‌ಗೆ  ಒಲಿಯದವರೇ ಇಲ್ಲ. ಗಜಲ್‌ನ ಶಕ್ತಿಯೇ ಅಂತಹುದ್ದು. ಗಜಲ್‌ನ ಜೀವನ ಪ್ರೀತಿಯೇ ಹಾಗೆ. ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳುವ ಸಮಷ್ಠಿ ಅದು. ಜಿಂಕೆಯ ಆರ್ತನಾದದ, ಮನದ ಮಾತುಗಳನ್ನು ನವಿರಾಗಿ ಹೇಳುವ, ಗೇಯತೆಯೊಂದಿಗೆ ಸಕಲರನ್ನು ಸೆಳೆದಿಟ್ಟುಕೊಳ್ಳುವ ಗಜಲ್ ಎನ್ನುವ ಮೋಹಪಾಶ ಹಾಗೆ ಯಾರನ್ನೂ ಬಿಡುವುದಿಲ್ಲ. ಇಲ್ಲಿ ಸಿದ್ಧರಾಮ ಹೊನ್ಕಲ್ ಆಕಾಶದ ಹಲವು ಬಣ್ಣಗಳನ್ನು ತಮ್ಮ ಪುಸ್ತಕದಲ್ಲಿ ಹಿಡಿದಿಟ್ಟುಕೊಂಡು ನಮ್ಮೆದುರಿಗೆ ನಿಂತಿದ್ದಾರೆ. ಒಂದು ಹಂತಕೆ ಬರುವವರೆಗೆ ಯಾರೂ ಗುರ್ತಿಸುವುದಿಲ್ಲಹಾಗಾಗಿ ಯಾರ ಮೆಚ್ಚುಗೆಗಾಗಿ ಕಾಯಬೇಡಎಂದು ತಮಗೆ ತಾವೇ ಹೇಳಿಕೊಂಡಂತೆ ಗಜಲ್ ಲೋಕದಲ್ಲಿ ಗುರುತಿಸಿಕೊಳ್ಳುವುದು ಅಷ್ಟೇನು ಸುಲಭದ್ದಾಗಿರಲಿಲ್ಲ ಎನ್ನುವ ವೈಯಕ್ತಿಕ ಮಾತಿನ ಜೊತೆಗೇ ಸಾಮಾಜಿಕ ಸತ್ಯವೊಂದನ್ನು ನಾಜೂಕಾಗಿ ಹೇಳಿಬಿಡುತ್ತಾರೆ. ಯಾವುದೇ ಒಂದು ಕ್ಷೇತ್ರವಿರಲಿ ಆರಂಭದಲ್ಲಿ ಯಾರು ಗುರುತಿಸುತ್ತಾರೆ ಹೇಳಿ? ಅದು ಸಾಹಿತ್ಯ ಕ್ಷೇತ್ರವಿರಬಹುದು, ಕ್ರೀಡೆಯಾಗಿರಬಹುದು ಅಥವಾ ಇನ್ಯಾವುದೇ ವಲಯದಲ್ಲಾಗಿರಬಹುದು. ಒಂದು ವ್ಯಕ್ತಿಯನ್ನು ಗುರುತಿಸಲು ಹಲವಾರು ವರ್ಷಗಳ ಕಾಲ ಕಾಯಬೇಕು. ಒಂದು ಹಂತಕ್ಕೆ ಬಂದಮೇಲೆ ತಾನೇ ತಾನಾಗಿ ಎಲ್ಲರಿಂದ ಗುರುತಿಸಲ್ಪಟ್ಟರೂ ಆರಂಭದಲ್ಲಿ ಮೂಲೆಗುಂಪಾಗುವುದು ಸಹಜ. ಹೀಗಾಗಿ ಯಾರ ಮೆಚ್ಚುಗೆಗಾಗಿ ಕಾಯುವ ಅಗತ್ಯವಿಲ್ಲ. ನಮ್ಮ ಆತ್ಮಬಲವೇ ನಮ್ಮನ್ನು ಕಾಪಾಡಬೇಕು ಎಂಬ ಮಾತು ಎಲ್ಲರಿಗೂ ಅನ್ವಯಿಸುವ ಮಾತು.                   ಗಜಲ್ ಹಾಗೆ ಎಲ್ಲ ಭಾವಗಳನ್ನು ತನ್ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಅದಕ್ಕೆ ಅದರದ್ದೇ ಆದ ಹತ್ತಾರು ನಿಯಮಗಳಿವೆ. ತನ್ನದೇ ಆದ ಸಿದ್ಧ ಮಾದರಿಯ ಭಾವಗಳಿವೆ. ಪ್ರೀತಿ ಪ್ರೇಮ ಕ್ಕೆ ಒಗ್ಗಿಕೊಳ್ಳುವ ಗಜಲ್ ಅದಕ್ಕಿಂತ ವಿರಹಕ್ಕೆ ಹೆಚ್ಚು ಹತ್ತಿರವಾಗುತ್ತದೆ. ಹಾಗೆಂದು ತರ್ಕಕ್ಕೆ, ಆಧ್ಯಾತ್ಮಿಕಕ್ಕೆ ಗಜಲ್ ಒಗ್ಗುವುದಿಲ್ಲ ಎಂದಲ್ಲ. ಗಜಲ್‌ನ ಮೂಲವೇ ಅಲ್ಲಿದೆ. ಪ್ರೇಮದೊಳಗಿನ ತಾರ್ಕಿಕತೆಗೆ ಹಾಗೂ ಪ್ರೇಮದೊಳಗಿನ ಆಧ್ಯಾತ್ಮಿಕತೆಗೆ ಗಜಲ್‌ನ ಪೂರ್ವಸೂರಿಗಳು ಹೆಚ್ಚು ಒತ್ತು ನೀಡಿದ್ದನ್ನು ಗಮನಿಸಬೇಕು. ಪ್ರೇಮದ ಕೊನೆಯ ಗುರಿಯೇ ಆಧ್ಯಾತ್ಮ ಎಂಬುದನ್ನು ಮರೆಯುವಂತಿಲ್ಲ. ಹಾಗೆಂದು ಗಜಲ್ ಸಾಮಾಜಿಕ ಕಳಕಳಿಯನ್ನು ಬೇಡ ಎನ್ನುವುದೇ? ಖಂಡಿತಾ ಇಲ್ಲ. ಹಿತವಾದ ಮಾತಿನ ಎಲ್ಲವನ್ನೂ ಗಜಲ್ ಅಪ್ಪಿಕೊಳ್ಳುತ್ತದೆ. ಅದು ಸಾಮಾಜಿಕ ಅಸಮಾನತೆ ಇರಲಿ, ಪರಿಸರ ರಕ್ಷಣೆ ಇರಲಿ ಎಲ್ಲವೂ ಗಜಲ್‌ಗೆ ಸಮ್ಮತವೇ.ಸಸಿಯೊಂದು ಹಚ್ಚಿದರೆ ತಾನೆ ಬೆಳೆದು ಹೆಮ್ಮರವಾಗಿ ಹೂ ಹಣ್ಣು ಕೊಡುವುದುಹಚ್ಚುವ ಮುಂಚೆ ಭೂಮಿಯ ಹಸನಾಗಿಸುವುದು ನೀ ಕಲಿ ಗೆಳೆಯಾಎನ್ನುತ್ತಾರೆ ಕವಿ. ಸಸಿಯನ್ನು ನೆಟ್ಟರೆ ಮಾತ್ರ ಭೂಮಿ ಹಸನಾಗುವ ಮಾತು ಎಷ್ಟು ಮಾರ್ಮಿಕವಾಗಿ ಇಲ್ಲಿ ಮೂಡಿದೆ. ಸಸಿಯನ್ನೇ ನೆಡದೇ ಹಣ್ಣು ಬೇಕು ಹೂವು ಬೇಕು ಎಂದರೆ ಎಲ್ಲಿಂದ ತರಲಾದೀತು? ಕೃಷಿಯನ್ನು ಕೀಳಾಗಿ ಕಾಣುವ ಎಲ್ಲರ ಕುರಿತಾಗಿ ಈ ಮಾತು ಅನ್ವಯಿಸುತ್ತದೆ.  ಕವಿಗೆ ಸಮಾಜದ ರೀತಿ ನೀತಿಗಳು ಗೊತ್ತಿದೆ. ಇಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ಯಾರೋ ಬಂದು ನಮ್ಮ ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟುತ್ತಾರೆ ಎಂಬ ಭ್ರಮೆಯಲ್ಲಿ ಇರಬೇಕಿಲ್ಲ. ಯಾರೂ ನಮ್ಮನ್ನು ಪ್ರೋತ್ಸಾಹಿಸುವುದಿಲ್ಲ. ಯಾರಾದರೂ ಸ್ವಲ್ಪ ಬೆಳವಣಿಗೆ ಕಂಡರೆ ಅವರ ಕಾಲು ಹಿಡಿದು ಎಳೆಯುವ ಮನೋಭಾವವೇ ಈ ಸಮಾಜದಲ್ಲಿ ತುಂಬಿಕೊಂಡಿದೆ. ಹೀಗಾಗಿಯೇ ಕವಿ,ಸಹಜ ಬೆನ್ನು ತಟ್ಟಿ ನಗು ಅರಳಿಸುವವರು ಜಗದಲ್ಲಿಲ್ಲಎಲ್ಲರೂ ಮಾನವೀಯರಿದ್ದಾರೆಂಬ ಭ್ರಮೆ ನಿನಗೆ ಬೇಡ ಗೆಳೆಯಎನ್ನುತ್ತಾರೆ. ನಮ್ಮ ಬೆನ್ನು ತಟ್ಟಿ ನಗು ಅರಳಿಸುವವರು ಸಿಗುವುದಿಲ್ಲ. ಕೇವಲ ನೋವು ನೀಡಿ ಸಂಭ್ರಮಿಸುವವರು ಮಾತ್ರ ನಮ್ಮ ಸುತ್ತಮುತ್ತ ತುಂಬಿಕೊಂಡಿದ್ದಾರೆ. ನಮ್ಮ ಸಮಾಜ ಜಾತಿ, ಧರ್ಮ ಮುಂತಾದ ಬೇಡದ ವ್ಯಾಧಿಯನ್ನು ತಲೆಯಲ್ಲಿ ತುಂಬಿಕೊಂಡು ನರಳುತ್ತಿದೆ.ಈ ಭೂಮಿಯಲ್ಲಿ ಗೀತೆ ಕುರಾನ್ ಬೈಬಲ್ ಗುರುವಾಣಿ ಹೀಗೆ ಏನೆಲ್ಲ ಒಳ್ಳೆಯದು ಬಿತ್ತಿಹರುಈ ಸಮಾನತೆಯ ಸಾಮರಸ್ಯ ಹೊಸ ಹೂವು ಏಕೆ ಮತ್ತೆ ಮತ್ತೆ ಅರಳುತ್ತಿಲ್ಲ ಸಾಕಿ ಪ್ರತಿ ಧರ್ಮದಲ್ಲೂ ಮನುಷ್ಯತ್ವವನ್ನೇ ಬೋಧಿಸಿದ್ದಾರೆ. ಮಾನವನ ಏಳ್ಗೆ ಇರುವುದೇ ಪ್ರೀತಿ ಮ,ತ್ತು ಸಹಬಾಳ್ವೆಯಲ್ಲಿ ಎಂದಿದ್ದರೂ ನಾವು ಮಾತ್ರ ಜಾತಿ ಧರ್ಮದ ಹೆಸರು ಹೇಳಿಕೊಂಡು ಕಚ್ಚಾಡುತ್ತಿದ್ದೇವೆ. ಗೀತೆ ಇರಲಿ, ಕುರಾನ್ ಇರಲಿ, ಬೈಬಲ್ ಇರಲಿ ಅಥವಾ ಗುರುವಾಣಿಯೇ ಇರಲಿ. ಎಲ್ಲರೂ ಪ್ರೀತಿಯೇ ಜಗದಲ್ಲಿ ಸರ್ವೋತ್ತಮ ಎಂದರೂ ಅದನ್ನು ಯಾರೂ ಆಚರಣೆಗೆ ತರುತ್ತಿಲ್ಲ. ನಾವು ಗೀತೆಯನ್ನು ನಂಬುತ್ತೇವೆ. ಅಂತೆಯೇ ಕುರಾನ್ ಹಾಗು ಬೈಬಲ್‌ನ್ನೂ ಕೂಡ. ಗೀತೆ, ಕುರಾನ್ ಬೈಬಲ್‌ನಲ್ಲಿರುವುದೇ ಪರಮಸತ್ಯ ಎಂದು  ಭಾವಿಸುತ್ತ ಅದನ್ನು ಆಚರಣೆಗೆ ತರುತ್ತಿರುವುದಾಗಿ ಭ್ರಮೆಗೊಳಗಾಗಿದ್ದೇವೆ. ಆದರೆ ವಾಸ್ತವದಲ್ಲಿ ನಾವ್ಯಾರೂ ನಮ್ಮ ಧರ್ಮಗ್ರಂಥಗಳನ್ನು ತಿಳಿದೇ ಇಲ್ಲ.  ಅದು ಬೋಧಿಸಿದ ಪ್ರೇಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡೇ ಇಲ್ಲ ಎಂಬ ವಿಷಾದ ಕವಿಗಿದೆ. ಸತ್ಯವಾಡಿದ ಹರಿಶ್ಚಂದ್ರ ಚಂದ್ರಮತಿಯನ್ನ ಮಾರಿಕೊಂಡದ್ದು, ಧರ್ಮರಾಯ ಧರ್ಮವನ್ನು ಉಳಿಸಲು ಹೋಗಿ ದ್ರೌಪದಿಯನ್ನೇ ಪಣಕ್ಕಿಟ್ಟು ಕಳೆದುಕೊಂಡಿದ್ದನ್ನು ಹೇಳುತ್ತ ಸಮಾಜದಲ್ಲಿ ಯಾರಂತೆ ಇರಬೇಕು ಎಂದು ಕೇಳುತ್ತಾರೆ. ಧರ್ಮ ಎಂದರೆ ಎಲ್ಲವನ್ನೂ ಒಳಗೊಂಡದ್ದು ಎನ್ನುವ ವಿಶ್ವ ಕುಟುಂಬದ ಮಾತು ಇಲ್ಲಿ ಕೇಳಿಸುತ್ತದೆ. ಹೀಗಾಗಿಯೇ ಜಾತಿ ಧರ್ಮದ ಹೆಸರಿನಲ್ಲಿ ‘ಮಾತು ಮಾತಲ್ಲಿ ಕೊಳ್ಳಿ ಇಟ್ಟು ಮನಸ್ಸು ಮುರಿಯುವುದು ಬೇಕಿರಲಿಲ್ಲ ಈಗ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.ಕೆಲವರಿಗೆ ಜಾತಿಯದು ಹಲವರಿಗೆ ಧರ್ಮದ್ದು ಹೀಗೆ ಹೆಣ್ಣು ಮಣ್ಣಿನ ಹುಚ್ಚುಹೀಗೆ ಬಹುತೇಕರಿಗೆ ಹಣ ಅಧಿಕಾರ ಅಂತಸ್ತಿನ ಹುಚ್ಚು ತಲೆ ಕೆಡಿಸಿಕೊಬೇಡ ಸಖಿಎನ್ನುವ ಮಾತುಗಳಲ್ಲಿ ಸಮಾಜದ ಸತ್ಯ ಅಡಗಿದೆ. ಕೆಲವರು ಧರ್ಮ ಜಾತಿಯ ಉನ್ಮಾದದಲ್ಲಿ ತೇಲುತ್ತಿದ್ದರೆ ಕೆಲವರು ಹಣ, ಅಧಿಕರ ಹಾಗೂ ಅಂತಸ್ತಿನ ಗುಲಾಮರಾಗಿದ್ದಾರೆ. ಇನ್ನು ಕೆಲವರಿಗೆ ಹೆಣ್ಣಿನ ಹುಚ್ಚು. ಭಾರತ ಹೆಣ್ಣಿನ ಯೋನಿಯಿಂದ ಹರಿಯುವ ರಕ್ತದಲ್ಲಿ ಶುಭ್ರಸ್ನಾನ ಮಾಡುತ್ತಿದೆ. ಅತ್ಯಾಚಾರಗಳು ಹೆಚ್ಚಾಗಿರುವ ಈ ಕಾಲದಲ್ಲಿ ಇಂತಹ ಸಾಲುಗಳು ನಮ್ಮನ್ನು ಪದೇಪದೇ ಎಚ್ಚರಿಸುತ್ತವೆ. ‘ತನ್ನ ಹೆತ್ತವಳು ಒಡಹುಟ್ಟಿದವಳು ಒಂದು ಹೆಣ್ಣಂದರಿಯದ ಅವಿವೇಕಿ ಮೃಗಗಳಿವು’ ಎಂದು ವಿಷಾದಿಸುತ್ತಲೇ ಹೆಣ್ಣು ಪ್ರತಿ ಜೀವಕ್ಕೂ ನೀಡುವ ಸುಖವನ್ನು ನವಿರಾಗಿ ಹೇಳುತ್ತಾರೆ. ಕತ್ತಲೆಯಲಿ ಕಳೆದವನ ಬದುಕಿಗೆ ಬೆಳಕಾಗಿ ಬಂದವಳು ನೀ ಸಖಿಕಮರಿದ ಈ ಬದುಕಿಗೆ ಜೀವರಸ ತುಂಬಿದವಳು ನೀ ಸಖಿಹೆಣ್ಣು ಬದುಕಿನ ಕತ್ತಲೆಯನ್ನು ಹೋಗಲಾಡಿಸಿದವಳು. ಬದುಕಿಗೆ ಬೆಳಕಾಗಿ, ಬೆಳದಿಂಗಳಾಗಿ ಬಂದವಳು. ಬೇಸರದ ಬದುಕಿಗೆ ಆ ಪ್ರಿಯತಮೆ ಜೀವರಸವನ್ನು ತುಂಬುತ್ತಾಳೆ. ಜೀವಕ್ಕೆ ಜೀವವಾದ ಪ್ರಿಯತಮೆ ನಮ್ಮ ಬಾಳಿಗೆ ಬೆಳಕನ್ನು ತರುವ ಕಂದಿಲು ಎನ್ನುವುದು ತಪ್ತಗೊಂಡ ಎದೆಯೊಳಗೆ ಒಂದಿಷ್ಟು ತಂಪು ಸೂಸುತ್ತಾರೆ.ಕನಸಿನಲ್ಲಿ ಕಾಡುವಳು ಖುಷಿಯಲ್ಲೂ ಕುದಿಯುವಳುಬಿಸಿಲನ್ನೇ ಉಂಡು ಎಲ್ಲೆ ನೆರಳಾದಳು ಸಾಕಿ ಎನ್ನುವ ಮಾತಿನಲ್ಲಿಯೂ ಆ ಗೆಳತಿ ಉರಿಬಿಸಿಲಿನಲ್ಲೂ ತಮ್ಮನ್ನು ಸಲಹುವ ಕುರಿತು ಮನಸ್ಸು ಬಿಚ್ಚಿ ಹೇಳುತ್ತಲೇ ಕನಸಿನಲ್ಲಿ ಕಾಡುವ ಈ ಸುಂದರಿ ವಿರಹವನ್ನೂ ಕೊಡಬಲ್ಲಳು ಎನ್ನುತ್ತಾರೆ. ಹಾಗೆ ನೋಡಿದರೆ ವಿರಹವಿಲ್ಲದ ಪ್ರೇಮಕ್ಕೆ ಸವಿ ಎಲ್ಲಿದೆ? ವಿರಹವೇ ಪ್ರೇಮದ ಮಧುರತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಈ ಜಗತ್ತಿನ ಎಲ್ಲ ಪ್ರೇಮಿಗಳೂ ಒಪ್ಪಿಕೊಂಡಿದ್ದಾರೆ. ಹಾಗಿದ್ದ ಮೇಲೆ ಈಗಾಗಲೇ ಹೇಳಿದಂತೆ ವಿರಹಕ್ಕೆಂದೇ ರಚಿತವಾಗಿರುವ ಗಜಲ್‌ನಲ್ಲಿ ವಿರಹವಿರದಿದ್ದರೆ ಏನು ಚೆನ್ನ ಹೇಳಿ?ಹತ್ತಿರವಿದ್ದೂ ಅಪರಿಚಿತರಂತೆ ದೂರವಾದವರ ಬಗ್ಗೆ ಕೇಳಿದ್ದೆದೂರವಿದ್ದೂ ಹತ್ತಿರವಾಗಿ ನಿನ್ನ ಸೇರುವಷ್ಟರಲಿ ನೀ ಕನಸಾದೆಈ ಹುಡುಗಿಯರೇನೂ ಕಡಿಮೆಯವರಲ್ಲ. ಹುಡುಗರನ್ನು ಕಾಡುವುದೇ ತಮ್ಮ ಜೀವನದ ಮಹದೋದ್ದೇಶ ಎಂದುಕೊಂಡವರು. ಹೀಗಾಗಿ ಇನ್ನೇನು ತನ್ನವಳಾದಳು ಎಂದುಕೊಳ್ಳುವಾಗಲೇ ದೂರ ಸರಿದು ತಮಾಷೆ ನೋಡುತ್ತಾರೆ. ಅಪರಿಚಿತಳು ಎಂದು ಸುಮ್ಮನಾದರೆ ತಾವಾಗಿಯೇ ಹತ್ತಿರ ಬಂದು ಆತ್ಮೀಯರಾಗುತ್ತಾರೆ. ದೂರವನ್ನು ಕ್ಷಣ ಮಾತ್ರದಲ್ಲೇ ಕರಗಿಸಿದರೂ ಕೈಗೆಟುಕದಂತೆ ಕನಸಾಗಿಬಿಡುವ ಕಲೆ ಹುಡುಗಿಯರಿಗಷ್ಟೇ ಗೊತ್ತಿದೆ. ಕವಿಗೆ ಹೀಗೆ ಪುಳಕ್ಕನೆ ಮಿಂಚಂತೆ ಮಿಂಚಿ ಮಾಯವಾಗುವ ಈ ಹುಡುಗಿಯರ ಕುರಿತು ವಿಚಿತ್ರ ತಲ್ಲಣವಿದೆ.ಈ ಪ್ರೀತಿ ಪ್ರೇಮ ವಿರಹ ಕಾಮದ ಬಗ್ಗೆ ಅನೇಕ ಕಥೆಗಳು ಗೊತ್ತುಹೊನ್ನಸಿರಿಯ ಈ ಅಲೌಕಿಕ ಪ್ರೀತಿ ಅರಿವಾಗುವಷ್ಟರಲಿ ನೀ ನಕ್ಷತ್ರವಾದೆಸದಾ ಜೊತೆಗಿರುತ್ತೇನೆ ಎಂದು ಆಣೆ ಕೊಟ್ಟು ಭಾಷೆಯಿತ್ತವರು ಹೀಗೆ ಒಮ್ಮೆಲೆ ದೂರ ಸರಿದು ನಕ್ಷತ್ರಗಳಾಗಿಬಿಡುವುದನ್ನು ಸಲೀಸಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಆದರೂ ಕವಿ ‘ಕಂದಿಲು ಬೇಡ ಕಣ್ಣ ಕಾಂತಿಯಲ್ಲಿ ಬಾ’ ಎನ್ನುತ್ತಾರೆ. ಇದು ಪ್ರೇಮದ ಪರಾಕಾಷ್ಟೆ. ತನ್ನ ಪ್ರೇಯಸಿಯ ಕಣ್ಣಿನ ಕಾಂತಿ ಎಲ್ಲ ಕಂದಿಲುಗಳ ಬೆಳಕನ್ನೂ ಮೀರಿಸುವಂತಹುದ್ದು ಎನ್ನುವುದು ಸಹಜ.ಕಾಯುವಲ್ಲಿ ಇರುವ ಕಾತರ ಸನಿಹದಲ್ಲಿ ಇರುವುದಿಲ್ಲಸಾಂಗತ್ಯಕ್ಕಾಗಿ ಸದಾ ಬಯಸಿ ಕಾಯುತ್ತಾನೆಹೀಗೆ ಕಾಯುವಿಕೆಯನ್ನು ನಿರಂತರವಾಗಿಸುತ್ತ, ಕಾಯುವುದೇ ತಪಸ್ಸು ಎಂದು ತಿಳಿದುಕೊಳ್ಳುವ ಕವಿಗೆ ಪ್ರೇಮ ಕೂಡ ಜೀವನದಲ್ಲಿ ಬೇಕಾಗಿರುವ ಭಾವಗಳಲ್ಲಿ ಒಂದು ಎಂಬ ಅರಿವಿದೆ. ಹೀಗಾಗಿಪ್ರೇಮಿಸಲಾಗದು ವಂಚಿಸಲಾಗದು ನಿನಗೆ ಮರೆತುಬಿಡುಹಂಬಲಿಸಿರಬಹುದು ಅಂಗಲಾಚಲಾಗದು ನಿನಗೆ ಮರೆತುಬಿಡು.ಎಂದು ಕೈಗೆ ಸಿಗದ್ದನ್ನು ಮರೆತು ಮುಂದೆ ಸಾಗಬೇಕಾದ ಜೀವನದ ಕುರಿತು ಎಚ್ಚರವಹಿಸುತ್ತಾರೆ. ಕೈಕೊಟ್ಟ ಪ್ರೇಮಿಯ ಬಗ್ಗೆ ಬೇಸರವಾಗುತ್ತದೆ ಎಂಬುದೇನೋ ನಿಜ. ಹಾಗೆಂದು ಅದೆಷ್ಟು ಸಮಯ ಕೊರಗಲಾದೀತು ಹೇಳಿ? ಹೀಗಾಗಿ ಆದದ್ದನ್ನೆಲ್ಲ ಮರೆತು ಮುಂದೆ ಸಾಗಬೇಕಾದ ಅನಿವಾರ್‍ಯತೆಯನ್ನು ಹೇಳುತ್ತಲೇ ಒಪ್ಪತ್ತಿನ ಗಂಜಿಗೂ, ತುಂಡು ರೊಟ್ಟಿಗೂ ಹೋರಾಟವಿದುಹಸಿವೆಯೇ ಖೋಡಿ ಏನೆಲ್ಲ ಮಾಡಿ ಹೆಣಗುತಿಹಳು ತಾಯಿಎಂದು ನಮ್ಮ ನಡುವೆ ತುತ್ತು ಕೂಳಿಗೂ ಕಷ್ಟ ಅನುಭವಿಸುತ್ತಿರುವವರ ವೇದನೆಯನ್ನು ಕಟ್ಟಿಕೊಡುತ್ತಾರೆ. ಮನೆ ನಡೆಸಲು ತಾಯಿ ಎಂಬ ಹೆಣ್ಣು ಅನುಭವಿಸುವ ಕಷ್ಟವನ್ನು ಗಂಡು ಅನುಭವಿಸಲಾರ. ಎಷ್ಟೋ ಮನೆಗಳಲ್ಲಿ ಹೆತ್ತಿಕೊಂಡ ತಪ್ಪಿಗಾಗಿ ಮಕ್ಕಳನ್ನು ಸಾಕುವ ಕರ್ಮ ತಾಯಿಯದ್ದೇ ಆಗಿರುತ್ತದೆ. ತನ್ನ ಕಾಮಕ್ಕಾಗಿ ಅವಳನ್ನು ಬಳಸಿಕೊಂಡು ತಾಯಿಯನ್ನಾಗಿ ಮಾಡಿದ ಮನೆಯ ಯಜಮಾನ ಎನ್ನಿಸಿಕೊಂಡ ಗಂಡಸು ಆ ಎಲ್ಲ ಜವಾಬ್ಧಾರಿಯನ್ನು ತಾಯಿಯ ತಲೆಗೆ ಕಟ್ಟಿ ನಿರುಮ್ಮಳವಾಗಿ ಬಿಡುವುದು ಈ ಸಮಾಜದ ಚೋದ್ಯಗಳಲ್ಲಿ ಒಂದು      ಈ ಎಲ್ಲದರ ನಡುವೆ ನಮ್ಮ ಗೋಮುಖ ವ್ಯಾಘ್ರತನವೊಂದು ಇದೆಯಲ್ಲ ಅದು ಈ ಸಮಾಜಕ್ಕೆ ಕಂಟಕ. ಬದುಕಿನಲ್ಲಿ ಯಾವ್ಯಾವುದೋ ಕಾರಣಕ್ಕಾಗಿ ಮುಖವಾಡ ಹಾಕುವವರ ಸಂಖ್ಯೆ ಬಹುದೊಡ್ಡದಿದೆ. ಆದರೆ ಸತ್ತ ಮೇಲೂ ‘ಸೇರಿದರೆ ಸೇರಲಿ ತಮ್ಮ ದೇಹದ ಬೂದಿಯು ಗಂಗೆಯಲಿ ಅನ್ನುವವರ ಬಹುದೊಡ್ಡ ಸಾಲುಂಟು’ ಎಂದು ಕವಿ ಬೇಸರಿಸುತ್ತಾರೆ. ಗಂಗೆಯನ್ನು ಸ್ವಚ್ಛಗೊಳಿಸಬೇಕಿದೆ ಎನ್ನುತ್ತಲೇ ತಮ್ಮ ದೇಹದ ಬೂದಿಯೂ ಗಂಗೆಯಲ್ಲಿ ಸೇರಿ ಜೀವಿತಾವಧಿಯಲ್ಲಿ ಮಾಡಿದ ಪಾಪಗಳೆಲ್ಲ ಕಳೆದುಹೋಗಲಿ ಎನ್ನುತ್ತ ಸ್ವರ್ಗ ಬಯಸುವವರ ಕುರಿತಾಗಿ ಹೇವರಿಕೆಯಿದೆ.ಸುತ್ತ ಪರಸ್ಪರರು ಬೆನ್ನು ನೀವಿಕೊಳ್ಳುವುದು ಇವನಿಗೇಕೆ ಅರ್ಥವಾಗುವುದಿಲ್ಲನೀ ನನಗಿದ್ದರೆ ನಾ ನಿನಗೆ ಎಂಬ ಸೋಗಲಾಡಿಗಳ ಮಧ್ಯೆ ಭ್ರಮ ನಿರಸನವಾಗುತ್ತಿದೆ ಸಾಕಿಎಂಬ ಸಾಲು ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿ ಕಾಣುತ್ತದೆ. ಎಲ್ಲೆಡೆಯೂ ಗುಂಪುಗಳದ್ದೇ ಸಾಮ್ರಾಜ್ಯ. ನೀವು ನಮ್ಮ ಪರವಾಗಿದ್ದರೆ ಮಾತ್ರ ನಾವು ನಿಮ್ಮ ಪರವಾಗಿರುತ್ತೇವೆ ಎನ್ನುವ ದೊಡ್ಡವರು ಎನ್ನಿಸಿಕೊಂಡಿರುವವರ ಮಾತು ತೀರಾ ಅಸಹ್ಯ ಹುಟ್ಟಿಸುವಂತಹುದ್ದು. ತಮ್ಮ ಗುಂಪಿಗೆ ಸೇರಿದವರಿಗೆ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತ, ಪ್ರಶಸ್ತಿಗಳ ಸರಮಾಲೆಯನ್ನೇ ಕಟ್ಟಿ ಕೊರಳಿಗೆ ಹಾಕುವ ಬಲಾಢ್ಯರಿಗೆ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಾಗಬೇಕಿದೆ. ಇದಕ್ಕೆ ಇಂದಿನ ಸಾಹಿತ್ಯ ಲೋಕ ಕೂಡ ಹೊರತಾಗಿಲ್ಲ. ಕವಿ ತಮ್ಮ ಸಾಲುಗಳಲ್ಲಿಯೇ ಇಂತಹ ಸೋಕಾಲ್ಡ್ ಪ್ರಮುಖರನ್ನು ವ್ಯಂಗ್ಯವಾಡುತ್ತಾರೆ. ಸಿದ್ಧರಾಮ ಹೊನ್ಕಲ್

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅನುವಾದಕ್ಕಾಗಿ ಸದಾ ಇಂಗ್ಲಿಷ್ ಕ್ಲಾಸಿಕ್‌ಗಳನ್ನೇ ಆರಿಸಿಕೊಳ್ಳುವ ಶ್ಯಾಮಲಾ ಮಾಧವ ಅವರು ಸಾರ್ವಕಾಲಿಕ ಪ್ರಸ್ತುತಿಯುಳ್ಳ ಮೇರಿ ಷೆಲ್ಲಿಯ ‘ಫ್ರಾಂಕಿನ್‌ಸ್ಟೈನ್’ ಎಂಬ ಅದ್ಭುತ ವಸ್ತುವುಳ್ಳ ಕಾದಂಬರಿಯನ್ನು ಅನುವಾದಿಸಿದ್ದಾರೆ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಹೊಸ ದನಿ – ಹೊಸ ಬನಿ – ೮. ತಲೆ ಬರಹ ಇಲ್ಲದೆಯೂ ತಲೆದೂಗಿಸುವ ನಾಗಶ್ರೀ ಎಸ್ ಅಜಯ್ ಕವಿತೆಗಳು. ಬೆಂಗಳೂರಿನ ಗಾಂಧಿ ಬಜಾರಿಗೆ ಕಾಲ್ನಡಿಗೆಯ ಅಂತರದ ಬಿ.ಪಿ.ವಾಡಿಯಾ ಸಭಾಂಗಣ. ಕವಿ ವಾಸುದೇವ ನಾಡಿಗರ ಕವನ ಸಂಕಲನದ ಬಿಡುಗಡೆ ಸಮಾರಂಭ. ವೇದಿಕೆಯಲ್ಲಿ ಸರ್ವ ಶ್ರೀ ಮೂಡ್ನಾಕೂಡು ಚಿನ್ನಸ್ವಾಮಿ, ಜಿ.ಕೆ.ರವೀಂದ್ರ ಕುಮಾರ್, ಸುಬ್ರಾಯ ಚೊಕ್ಕಾಡಿಯಂಥ ಅತಿರಥ ಮಹಾರಥರು. ಪುಸ್ತಕ ಬಿಡುಗಡೆಯ ಆತಂಕದಲ್ಲಿ ಕವಿ ದಂಪತಿ. ತುಂಬಿದ ಸಭೆಯ ಗೌರವಾನ್ವಿತರಿಗೆಲ್ಲ ಕಲಾಪದ ಸೊಗಸು ಮತ್ತು ಸಂದರ್ಭಕ್ಕೆ ತಕ್ಕ ಕವಿ ನುಡಿಗಳನ್ನೂ ಹಿತದ ಮಾತುಗಳನ್ನೂ ಆಡುತ್ತ ಸಭೆಗೆ ಶೋಭೆ ತರುತ್ತಿದ್ದ ನಿರೂಪಕಿ. ಇತ್ತೀಚೆಗೆ ಸಮಾರಂಭಗಳಲ್ಲಿ ನಿರೂಪಕರದೇ ಕಾರುಬಾರು. ಬರಿಯ ವಾಚಾಳಿತನ ಮತ್ತು ಹಗುರ ನಗೆ ಚಟಾಕಿ ಹಾರಿಸಿ ವೇದಿಕೆಯ ಗಣ್ಯರನ್ನು ನೋನುತ್ತ ಅಭಿನಂದಿಸಿದರೆ ಅವರ ಕೆಲಸ ಮುಕ್ತಾಯ. ಕಾರ್ಯಕ್ರಮ ಯಾವುದೇ ಇರಲಿ, ಈ ನಿರೂಪಕರ ಶೈಲಿ ಮಾತ್ರ ಬದಲಾಗದು. ಹಾಡಿದ್ದೇ ಹಾಡುವ ಹೇಳಿದ್ದೇ ಹೇಳುವ ಅವೇ ಅವೇ ಹಗುರ ಚಟಾಕಿಗಳು. ಅಪರೂಪಕ್ಕೆ ಈ ಬರಹದ ಮೊದಲಲ್ಲಿ ಹೇಳಿದ ಸಭೆಯಲ್ಲಿ ಆ ಸಮಾರಂಭದ ನಿರೂಪಕಿಯ ಮಾತು, ಆಕೆ ನಡು ನಡುವೆ ಕೋಟ್ ಮಾಡುತ್ತಿದ್ದ ಕನ್ನಡದ ಮಹಾ ಕವಿಗಳ ಪದ್ಯದ ಸಾಲುಗಳು, ಹಿತ ಮಿತದ ಸಂಕ್ಷೇಪ…ಆಕೆ ಕನ್ನಡ ಸಾಹಿತ್ಯವನ್ನು ಓದಿಕೊಂಡಿದ್ದಾರೆಂದು ಮತ್ತು ಸಾಹಿತ್ಯದ ಮೇಲೆ ವಿಶೇಷ ಒಲವು ಇಟ್ಟುಕೊಂಡಿದ್ದಾರೆ ಎಂಬುದನ್ನೂ ಸ್ಪಷ್ಟವಾಗಿ ಹೇಳುತ್ತಿತ್ತು. ಆಕೆಯ ಹೆಸರು ನಾಗಶ್ರೀ ಅಜಯ್ ಎಂದು ಆಮೇಲೆ ಗೊತ್ತಾಯಿತು. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ೯ ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಕನ್ನಡ ಸಾಹಿತ್ಯದಲ್ಲಿ ಮತ್ತು ಕಾರ್ಯಕ್ರಮ ನಿರೂಪಣೆಯಲ್ಲಿ  ಆಕೆ ಆಸಕ್ತರು ಎಂದೂ ಆಮೇಲೆ ತಿಳಿಯಿತು. ಸುರಹೊನ್ನೆ, ಅವಧಿ ಜಾಲತಾಣಗಳಲ್ಲಿ ಮತ್ತು ಫೇಸ್ಬುಕ್ಕಿನಲ್ಲೂ ಅವರ ಕವಿತೆಗಳನ್ನು ಗಮನಿಸುತ್ತ ಬಂದಂತೆ ನಿರೂಪಕರು ಎಂದ ಕೂಡಲೇ ಬಾಯಿಪಾಠ ಮಾಡಿದ ಮಾತನ್ನು ನಾಟಕೀಯವಾಗಿ ಒಪ್ಪಿಸುವವರು, ಸುಮ್ಮನೇ ನೋನುತ್ತ ಜೋಕ್ ಹೇಳುವವರು  ಎಂದು ಅಂದುಕೊಂಡಿದ್ದ ನನ್ನ ಅರಿವನ್ನು ಬದಲಾಯಿಸಿಕೊಳ್ಳಬೇಕಾಯಿತು!! ಬದುಕೆಂದರೇನೆಂದು ಹುಡುಕುವ ಹೊತ್ತಿಗೆ ಮುಕ್ಕಾಲು ಉರಿದ ಊದುಬತ್ತಿ ಸುತ್ತ ಪರಿಮಳ ಉಸಿರಿಗೂ ಚೌಕಾಸಿ. ಇಂಥ ಅದ್ಭುತ ರೂಪಕಗಳ ಕವಿತೆಯ ಮೂಲಕವೇ ಬದುಕ ಅರ್ಥವನ್ನು ತೇದು ತೇದು ಅದರ ಘಮದಲ್ಲೇ ಉಳಿದು ಬಿಡುವ ತಹತಹಿಕೆ ಇವರ ಕವಿತೆಗಳ ಆಂತರ್ಯ. ಹಚ್ಚಿಕೊಂಡರೆ ಹೇಗೆಂದು ಒಮ್ಮೆ ನನ್ನ ಜತೆಗಿದ್ದು ನೋಡು ಉಬ್ಬಸದ ಕಡೆ ಉಸಿರಿನಲೂ ನಿನ್ನದೇ ಹೆಸರು ಉಸುರುವ ಹುಚ್ಚುಚ್ಚು ಹುಡುಗಿ ನಾನು ಪ್ರೀತಿ ಪ್ರೇಮ ಪ್ರಣಯಗಳನ್ನು ಕುರಿತು ಬರೆಯದೇ ‘ಕವಿ’ ಎನ್ನುವ ಅಭಿದಾನಕ್ಕೆ ಪಾತ್ರರಾಗುವುದಾದರೂ ಹೇಗೆ ಸಾಧ್ಯ ಎನ್ನುವ ಪುರಾತನ ಪ್ರಶ್ನೆಗೆ ನಾಗಶ್ರೀ ಪದ್ಯಗಳೂ ಹೊರತಲ್ಲ! ತಾನು ಕವಿಯೆಂದು ಘೋಷಿಸದೆಯೂ ಓದುಗನಲ್ಲಿ ಇದನ್ನು ಬರೆದವರು ಕವಿಯಲ್ಲದೇ ಮತ್ತಿನ್ನೇನು ಅನ್ನುವ ಪ್ರಶ್ನಿಸುವ ಸಾಲನ್ನೇ ಗಮನಿಸಿ; ಅಕ್ಷರ ಗೊತ್ತಿರುವವರೆಲ್ಲ ಅನ್ನಿಸಿದ್ದನ್ನು ಗೀಚಬಹುದು, ಆದರೆ ಆಂತರ್ಯದ ಸಾಲುಗಳು ಮಾತ್ರ ಕವಿತೆಯಾಗಿ ಅರಳಬಲ್ಲವು. ಉಬ್ಬಸವೇ ಮೂಲತಃ ಪ್ರಾಣಾಂತಿಕ ವ್ಯಾಧಿ. ಅಂಥ ವ್ಯಾಧಿಯಲ್ಲಿ ನರಳುತ್ತಿದ್ದರೂ ತನ್ನಿನಿಯನ ಧ್ಯಾನದಲ್ಲೇ ಅವನನ್ನು ಹಚ್ಚಿಕೊಳ್ಳುವ ಆ ಹುಡುಗಿಯನ್ನು ಮೆಚ್ಚಲಾರದೇ ಹೇಗೆ ಉಳಿಯಬಹುದು? ಇದೇ ಪದ್ಯದ ಮುಂದಣ ಸಾಲುಗಳನ್ನು ಅಲ್ಲಲ್ಲಿಗೆ ತುಂಡು ಮಾಡದೇ ಗದ್ಯವಾಗಿಸಿ ಓದಿ ನೋಡಿದರೆ; ಸಿಟ್ಟಿನ ಸಟ್ಟುಗದಲಿ ಒಂದೇಟು ಮುಟ್ಟಿಸಿ ಟೂ ಬಿಟ್ಟು ಮೂತಿಯುಬ್ಬಿಸಿ ಕೊನೆಯ ಸಂದೇಶ ಕೊನೆಯ ಮಾತು ಗಟ್ಟಿ ತೀರ್ಮಾನಗಳ ಮಾರಕಾಸ್ತ್ರ ಪ್ರಯೋಗಗಳು ಇನ್ನೂ ಹೊಸ್ತಿಲು ದಾಟುವಂತಿಲ್ಲ ಆಗಲೇ ಮೊದಮೊದಲ ಪ್ರೇಮ ಸಲ್ಲಾಪ ನೆನಪಾಗುವುದು ನಸುನಾಚಿಕೆಯಲಿ ತುಸು ಬಿರಿವುದು ತುಟಿ ಗದ್ದೆಯಂಚಿನ ಬದು ಒಡೆದಂತೆ ಕೊಚ್ಚಿ ಹೋಗುವುದು ಮುನಿಸು ಅಷ್ಟೇಕೆ ವಿವರಿಸಲಿ? ಹಚ್ಚಿಕೊಂಡವರಿಗಷ್ಟೇ ಗೊತ್ತು ಮೆಚ್ಚಿಕೊಂಡವರ ಸುಖ-ದುಃಖ, ಇಚ್ಚೆಯಿದ್ದವರ ಆಳು ಈ ಸ್ವರ್ಗ- ನರಕ ಪ್ರಾಯಶಃ ಪ್ರಯೋಗ ಎಂದರೆ ಇದೇ ಇರಬೇಕು. ಪದ್ಯಗಂಧೀ ಗದ್ಯ ಎಂದೆಲ್ಲ ಕರೆದುಕೊಳ್ಳುವವರ ನಡುವೆ ಗದ್ಯ ಗಂಧೀ ಪದ್ಯ ಬರೆಯುವ ಈ ಕವಿ ಯಾಕೋ ತೀರ ಸಹಜವಾಗಿ ನಿತ್ಯವೂ ಘಟಿಸುವ ಘಟನಾವಳಿಗಳನ್ನೆಲ್ಲ ಒಟ್ಟಾಗಿಸಿ ಬದುಕಿನ ಪ್ರಭಾವಳಿಯನ್ನಾಗಿಸುತ್ತಾರಲ್ಲ ಈ ಕವಿ ಇವರನ್ನು ಪ್ರಭಾವಿಸುತ್ತಿರುವುದು ಕೆ ಎಸ್ ನ ಅಲ್ಲದೇ ಮತ್ತಿನ್ನಾರು ಎನ್ನುವುದೂ ಆತುರದ ನಿರ್ಧಾರವೇ ಆದೀತು! ಜನಜಂಗುಳಿಯ ಮಧ್ಯೆಯೇ ತೀರಾ ಒತ್ತರಿಸಿ ಬಂದ ಅಳು ಕಡಿಮೆ ಬಿದ್ದ ಟಿಕೇಟು ಕಾಸು ಎಡವಿದಾಗ ಹರಿದ ಅಂಗಿ ಸದಾ ಮೇಲಾಟ ತೋರಿದವರ ಅಣಕು ನೋಟ ಕಿತ್ತ ಉಂಗುಷ್ಟದ ತೇಪೆ ಚಪ್ಪಲಿ ಜಾತ್ರೆಯಂತಹ ಮದುವೆಗೆ ತಪ್ಪು ಅಂದಾಜಿನಲಿ ತೊಟ್ಟ ಸಾದಾ ಅರಿವೆ ಇಲ್ಲಿ ಕವಿ ಬದುಕಿನ ಸೂಕ್ಷ್ಮಗಳನ್ನು ಅವಲೋಕಿಸುವ ರೀತಿ ಸದ್ಯ ಅಬ್ಬರದಲ್ಲಿ ಬೊಬ್ಬಿರಿಯುವ, ಸಮಾನತೆಯ ಬೇಡಿಕೆ ಇಟ್ಟು ಇದ್ದವರಿಂದ ಕಿತ್ತು ತಮ್ಮದಾಗಿಸಿಕೊಳ್ಳುವ ಹಕ್ಕೊತ್ತಾಯದ ಗದರಿಲ್ಲ, ತಮ್ಮನ್ನು ಯಾರೋ ತುಳಿದರು ಎನ್ನುವ ದೂರು ಮೊದಲೇ ಇಲ್ಲ ಅಥವ ಹತಭಾಗ್ಯದ ಬಗ್ಗೆ ದುಃಖವೂ ಇಲ್ಲ; ಇರುವುದು ಬರಿಯ ವಾಸ್ತವದ ನಿಜ ಚಿತ್ರ. ನಾಗಶ್ರೀ ಕವಿತೆಗಳಲ್ಲಿ  ಹೆಚ್ಚಿನವು ಶೀರ್ಷಿಕೆಯೇ ಇಲ್ಲದೆ ಪ್ರಕಟವಾದವು. ಫೇಸ್ಬುಕ್ಕಿನಲ್ಲಿ ಶೀರ್ಷಿಕೆ ಇಲ್ಲದೆಯೂ ಪ್ರಕಟಿಸಬಹುದು. ಆದರೆ ಅಂತರ್ಜಾಲದ ಪತ್ರಿಕೆಗಳಲ್ಲೂ ಇವರ ತಲೆ ಬರಹ ಇಲ್ಲದೆಯೂ ಆ ಪದ್ಯಗಳ ಝಳದಲ್ಲಿ ತಲೆದೂಗಿಸುವಂತೆ ಮಾಡಬಲ್ಲ ಹಲವು ಪದ್ಯಗಳು ಇವೆ. ಅಪರೂಪಕ್ಕೆಂಬಂತೆ “ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ” ಶೀರ್ಷಿಕೆಯ ಕವಿತೆಯಲ್ಲಿ ವಾಸ್ತವವಾಗಿ ಗಾಳಿಪಟದ ಚಿತ್ರ ಬರುವುದೇ ಇಲ್ಲ! ಬರಿಯ ಶೀರ್ಷಿಕೆಯಲ್ಲೇ ಬದುಕನ್ನೇ ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟವನ್ನಾಗಿಸಿರುವ ಕವಿತೆ ಹೇಳುತ್ತಿರುವುದು ದುರಂತಗಳ ಸರಮಾಲೆಯಲ್ಲಿ ಸಿಕ್ಕೂ ಮತ್ತೆ ಮೇಲೇರಬಯಸುವ ಗಾಳಿಪಟದ ಆಶೆಯಂಥ ಬದುಕನ್ನು!! ಪದ್ಯದ ಕಡೆಯ ಸಾಲು ಹೀಗಿದೆ; ಹೀಗಂತ ಗೊತ್ತಿದ್ದೂ ನಾನೇನೂ ಮಾಡಲಾರೆ ನಾಲ್ಕು ಹನಿ ಕಂಬನಿ ಹೊರತು ಮತ್ತೇನೂ ಕೊಡಲಾರೆ ಕೊಸರಷ್ಟು ಹಸಿಪ್ರೀತಿ ಉಳಿಸಿಟ್ಟಿರುವೆ ಸ್ವೀಕರಿಸು. ಬರಿಯ ಇಂಥ ಹತಾಶೆಗಳ ಚಿತ್ರಣದಲ್ಲಿ ವಾಸ್ತವವನ್ನು ಮರೆಮಾಚುತ್ತ ರಮ್ಯತೆಯನ್ನು ಬಯಸುವ ರೀತಿ ಕೆ ಎಸ್ ನ ಅವರಲ್ಲದೇ ಈ ನಾಗಶ್ರೀಗೂ ಒಲಿದಿರುವುದು ಅಪ್ಪಟ ಸತ್ಯ. ಬಹಳ ಗೊತ್ತೆಂಬ ಹಮ್ಮಿನಲಿ ಹೊಸ ಬಣ್ಣಗಳ ಹುಡುಕುವೆವು ಸೃಜಿಸಿದ ಮತ್ತಾವ ಬಣ್ಣಕ್ಕೂ ಸ್ವತಂತ್ರ ಅಸ್ತಿತ್ವವಿಲ್ಲ ಇದರ ಹೆಸರಿಗೆ ಅದರ ಉಲ್ಲೇಖ ಅದರ ಚಿತ್ತಾರಕ್ಕೆ ಇದರ ಸಹಯೋಗ ಹೊಸತು-ಹಳತು ಹೆಸರಿಗಷ್ಟೇ ವಿರುದ್ಧ ನನ್ನ ತಿಳುವಳಿಕೆಗದು ಜೋಡಿಪದ ಎಂದು ಮುಂದುವರೆಯುವ ಪದ್ಯ ಸಾಮಾನ್ಯ ಪ್ರತಿಮೆಗಳ ಅನಾವರಣದಲ್ಲೇ ಅಸಾಮಾನ್ಯ ರೂಪಕವೊಂದನ್ನು ಸೃಷ್ಟಿಸಿ ಭಲ ಭಲಾ ಎನ್ನಿಸುತ್ತದೆ. ಪದ್ಯ ಮುಗಿಯುವುದು ಹೀಗೆ; ಹಾಗಲ್ಲ ಹೀಗೆಂದರೂ ಹೀಗಲ್ಲ ಹಾಗೆಂದರೂ ಒಪ್ಪುವದು ಬಿಡುವುದು ಅವರವರ ಇಷ್ಟ ಇದ್ದ ಬಣ್ಣಗಳಲೆ ಹೊಸ ಕನಸು ಕಾಣುವುದು ಇರುವ ಭಾವಗಳಲೆ ಹೊಸ ಸಾಲು ಬರೆಯುವುದು ನನಗಿಷ್ಟ ಎಂದೆಂದೂ ಇಂಥ ಸಹಜ ಆಸೆಗಳನ್ನು ಮಾತ್ರ ತನ್ನ ಕವಿತೆಗಳ ಮುಖ್ಯ ಶೃತಿಯನ್ನಾಗಿರಿಸಿಕೊಂಡಿರುವ ಈ ಕವಿತೆಗಳು ಮತ್ತೆ ಮತ್ತೆ ಓದಿದರೆ ಹಳಹಳಿಕೆಯಂತೆ, ತನ್ನ ಕೈಗೆಟುಕದ ಸಂತಸದ ಬಗೆಗಿನ ತಿರಸ್ಕಾರದಂತೆ ಅಥವ ಶ್ರೇಣೀಕೃತ ಸಮಾಜದ ಶ್ರೇಣೀಕರಣದ ಉತ್ತುಂಗದಲ್ಲಿದ್ದೂ ಒಳಗೇ ಟೊಳ್ಳಾಗಿರುವ ಆ ಸಮಾಜದ ಕಿರೀಟದ ಹೊಳಪು ಕಳೆದ ಮಣಿಯಂತೆ ಕಾಣುತ್ತದೆ. ಆದರೆ ಬರಿಯ ಇಂಥ ಹಳಹಳಿಕೆಗಳು ಸದಾ ಸರ್ವದಾ ಯಾವುದೇ ಕವಿಯ ನಿತ್ಯ ಮಂತ್ರವಾಗಬಾರದು. ಹಾಗಾದಲ್ಲಿ ಅಳುಬುರುಕ ಕವಿ ಎಂಬ ಅಭಿದಾನಕ್ಕೆ ಸಿಕ್ಕು ತಾನೇ ತೋಡಿಕೊಂಡ ಹೊಂಡದಲ್ಲಿ ಕವಿ ಬೀಳುತ್ತಾನೆ. ಹಾಗಾಗದೇ ಇರಲು ಮೊದಲು ಈ ಕವಿ ತಾನಿರಿಸಿಕೊಂಡು ಬಂದಿರುವ ಕ್ಷೋಬೆಯಿಂದ ಹೊರಗೆ ಬರಬೇಕು ಮತ್ತು ನಿಜಕ್ಕೂ ಈ ಹಳವಂಡದಿಂದ ಮೇಲೆದ್ದು ಬರುವ ಮಾರ್ಗವನ್ನು ಹುಡುಕಬೇಕು. ಬಿದ್ದಮೇಲೂ ತಿರುಗುತ್ತಲೇ ಇರುವ ಗಾಲಿ ಸತ್ತಮೇಲೂ ಸುತ್ತುತ್ತಲೇ ಇರುವ ಆತ್ಮ ಏನೋ ಹೇಳ ಹೊರಟು ಮತ್ತೇನೋ ಆಗುವಾಗ ಒಂದು ಮನಸ್ಸು ಒಡೆಯಬಹುದು ಮತ್ತೆ ಸೇರಲೆಂದು ಶತಪ್ರಯತ್ನ ಏಕೆ? ಸಿಕ್ಕಿದ್ದು ದಕ್ಕಿದ್ದು ಋಣವಿದ್ದಷ್ಟೇ ಈ ಪದ್ಯ ಕಾವ್ಯದ ಪ್ರಯೋಗದಲ್ಲಿ ನಿಷ್ಕ್ರಮಣದ ಹಾದಿಯಲ್ಲಿದ್ದ ಅಧ್ಯಾತ್ಮದ ಪುನರ್ಪ್ರವೇಶ ಎಂದೇ ಅನ್ನಿಸುತ್ತಿದೆ. ಬದುಕಿನಾಚೆಗೆ ಏನಿದೆ, ಸತ್ತವರು ನಂತರ ಎಲ್ಲಿಗೆ ಹೋಗುತ್ತಾರೆ, ಪೂರ್ವಾಪರದ ಸಂಗತಿಗಳು ಏನಿವೆ ಎನ್ನುವುದನ್ನೆಲ್ಲ ಪದ್ಯದ ವಸ್ತುವನ್ನಾಗಿಸುವುದಕ್ಕೆ ಸಾಕಷ್ಟು ಅಧ್ಯಯನ ಮತ್ತು ಅಧ್ಯಾಪನಗಳ ಅನುಕ್ರಮಣಿಕೆಯ ಅವಶ್ಯಕತೆ ಅನಿವಾರ್ಯ. ನಾಗಶ್ರೀ ಈ ವಿಚಾರದಲ್ಲಿ ಸಾಕಷ್ಟು ದೂರ ಕ್ರಮಿಸಿರುವುದು ಅವರ ಪದ್ಯಗಳ ರೀತಿಯಲ್ಲೇ ಶೃತವಾಗುತ್ತದೆ. ನಡೆದು ಬಿಡಬೇಕು ಆಚೆ ಹಚ್ಚಹಸುರಿನ ಬಯಲಿನೆಡೆಗೆ ವಿಶಾಲ ಸಮುದ್ರದ ಏಕಾಂತಕೆ ಕಡೇಪಕ್ಷ ರಾತ್ರಿಯಾಗುವುದನೆ ಕಾದಿದ್ದು ನಕ್ಷತ್ರಲೋಕದ ವಿಹಂಗಮ ದರ್ಶನಕೆ ಇವೆಲ್ಲಾ ದುರ್ಲಭದ ನಗರಜಾತ್ರೆಯಲಿ ಮಗುವೊಂದರ ಕಣ್ಣಬೆಳಕೊಳಗೆ ಹಣ್ಣುಮುದುಕರ ಮನೆಯಂಗಳಕೆ ನಡೆದುಬಿಡಬೇಕು ದೂರ ದೂರ ಮತ್ತೆ ಸಣ್ಣತನಗಳು ನಂಬಿಕೆಯ ನೆಲೆಯ ಕುರೂಪಗೊಳಿಸದಂತೆ ಈ ಇಂಥ ಆಶಯ ಸದಾ ಉನ್ಮತ್ತತೆ ಮತ್ತು ಸ್ವಪ್ರತಿಷ್ಠೆಯನ್ನು ಮುಂದು ಮಾಡುವ ಲೋಕಾಂತದ ನಾಯಕ ಮಣಿಗಳಲ್ಲಿ ಅಸಾಧ್ಯದ ಧಾತು. ಲೋಕಾಂತದ ದಂದುಗಗಳಲ್ಲಿದ್ದೂ ಏಕಾಂತದ ಸಂಗತಕ್ಕಷ್ಟೇ ಹಾತೊರೆಯುವ ಮೃದು ಮನಸ್ಸಿನ ಅಸ್ತಿವಾರ. ಇಂಥ ಲೌಕಿಕದಾಚೆಗಿನ ಸಂಗತಿಗಳಲ್ಲೇ ಇರುವ ಈ ಕವಿ ಒಮ್ಮೊಮ್ಮೆ ಹೀಗೂ ಹೇಳಬಲ್ಲರು; ಉದ್ದು-ಕಡಲೆ-ಹೆಸರು ಗುರುತಿಸಲೂ ಇಪ್ಪತ್ತು ವರ್ಷ ತೆಗೆದುಕೊಂಡ ಜಾಣರಲ್ಲವೆ ನೀವು ಗಂಡು ಹೆಣ್ಣುಗಳ ನಡುವಿನ ಗುದ್ದಾಟ ನಿನ್ನೆ ಮೊನ್ನೆಯ ಪ್ರಶ್ನೆ ಏನಲ್ಲ. ಗಂಡು ಹೆಚ್ಚೆಂಬ ವಾದದ ಜೊತೆಯೇ ಹೆಣ್ಣು ಕೀಳಲ್ಲವೆಂಬ ಸಮದರ್ಶತ್ವವೂ ಇದ್ದೇ ಇದೆ. ಆದರೆ ಬದುಕನ್ನು ಅರಿಯುವುದಕ್ಕೆ ಅನುಭವಗಳೇ ಮುಖ್ಯ. ಅದು ಗಂಡೋ ಹೆಣ್ಣೋ ಲಿಂಗಾಧಾರಿತ ಅಲ್ಲದ ಆದರೆ ಬದುಕಿನ ನಿಜ ದರ್ಶನದಿಂದ ಹುಟ್ಟುವ ದರುಶನ. ಅದನ್ನು ಕಾಂಬುವ ಪರಿ ಬೇರೆ ಬೇರೆ ಅಷ್ಟೆ. ನಾಗಶ್ರೀ ಕವಿತೆಗಳಲ್ಲಿ ಪುರಾಣ ಪಾತ್ರಗಳು ನೇರವಾಗಿ ಪ್ರಸ್ತಾಪ ಆಗುವುದಿಲ್ಲ. ಆ ಅಂಥ ಕಾವ್ಯ ನಾಯಕರ ಒಣ ಉಪದೇಶಗಳೂ, ಹುಚ್ಚು ಆವೇಶಗಳೂ ಮೈ ತಳೆಯದೇ ಆ ಅಂಥ ಕಾವ್ಯ ನಾಯಕರು ಈ ಒಣ ನೆಲದಲ್ಲಿ ಉದುರಿಸಿ ಹೋದ ಆದರ್ಶಗಳು ಮಾತ್ರ ಸ್ಥಾಯಿ ಶೃತಿಯಾಗಿ ಈ ಕವಿಯ ಹಾಡಿಗೆ ಹಾದಿಯ ಸಾಥಿಯಾಗಿವೆ ಮತ್ತು ಆ ಅದೇ ಕಾರಣಕ್ಕೇ ಸದ್ಯ ಬರೆಯುತ್ತಿರುವವರಿಗಿಂತ ಭಿನ್ನವಾಗಿ ಅವರ ಕವಿತೆಗಳ ಆಪ್ತ ಓದಿಗೆ ಅನುಗೊಳಿಸುತ್ತವೆ. ಸಹೃದಯರ ಸಾಧಾರಕ್ಕಾಗಿ ನಾಗಶ್ರೀ ಅಜಯ ಅವರ ಆಯ್ದ ಆರು ಪದ್ಯಗಳು; ೧. ಹಚ್ಚಿಕೊಂಡರೆ ಹೇಗೆಂದು ಒಮ್ಮೆ ನನ್ನ ಜತೆಗಿದ್ದು ನೋಡು ಉಬ್ಬಸದ ಕಡೆ ಉಸಿರಿನಲೂ ನಿನ್ನದೇ ಹೆಸರು ಉಸುರುವ ಹುಚ್ಚುಚ್ಚು ಹುಡುಗಿ ನಾನು ಥಂಡಿ ಹವೆಯಲಿ ಎದ್ದ ಎದೆನಡುಕ ವಿರಹ ಬೆಚ್ಚನೆಯ ಉಣ್ಣೆಯಂಗಿ ಸುಡುವ ಚಹಾ ಬಿಸಿಯಾಗಿಸದು ಎಂದು ನಿನ್ನ ನೆವದಿಂದ ಜೋಮು ಬಿಡಿಸಿ ಕುಣಿಕುಣಿದು ಓಡುವ ಮರಿಜಿಂಕೆ ಪಾದಗಳು ಸಿಟ್ಟಿನ ಸಟ್ಟುಗದಲಿ ಒಂದೇಟು ಮುಟ್ಟಿಸಿ ಟೂ ಬಿಟ್ಟು ಮೂತಿಯುಬ್ಬಿಸಿ ಕೊನೆಯ ಸಂದೇಶ ಕೊನೆಯ ಮಾತು ಗಟ್ಟಿ ತೀರ್ಮಾನಗಳ ಮಾರಕಾಸ್ತ್ರ ಪ್ರಯೋಗಗಳು ಇನ್ನೂ ಹೊಸ್ತಿಲು ದಾಟುವಂತಿಲ್ಲ ಆಗಲೇ ಮೊದಮೊದಲ ಪ್ರೇಮಸಲ್ಲಾಪ ನೆನಪಾಗುವುದು ನಸುನಾಚಿಕೆಯಲಿ ತುಸುಬಿರಿವುದು ತುಟಿ ಗದ್ದೆಯಂಚಿನ ಬದು ಒಡೆದಂತೆ ಕೊಚ್ಚಿ ಹೋಗುವುದು ಮುನಿಸು ಅಷ್ಟೇಕೆ ವಿವರಿಸಲಿ? ಹಚ್ಚಿಕೊಂಡವರಿಗಷ್ಟೇ ಗೊತ್ತು ಮೆಚ್ಚಿಕೊಂಡವರ ಸುಖ-ದುಃಖ ಇಚ್ಚೆಯಿದ್ದವರ ಆಳು ಈ ಸ್ವರ್ಗ- ನರಕ ೨. ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ ನೀನು ದೂರದ ಬೆಟ್ಟದಲಿ ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ ಬೇಸಿಗೆಯ ಸುಡು ಮಧ್ಯಾಹ್ನ ಮೊಸರಲಿ ಅದ್ದಿ, ಉಪ್ಪು ಹಚ್ಚಿ ಒಣಗಲೆಂದೇ ಇಟ್ಟ ಮೆಣಸಿನಕಾಯಿ ಮಳೆಗಾಲದ ಸಂಜೆ ಜಡಿಯಲಿ ತೊಯ್ದು ತೊಪ್ಪೆಯಾದ ಒದ್ದೆ

Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಂಕಣ ಬರಹ ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು        (ಟೈಂ ಬ್ಯಾಂಕ್ ಅಕೌಂಟ್ ಮೆಂಟೇನನ್ಸ್- ಹೀಗೆ ಮಾಡಿ ನೋಡಿ )           ಟೈಂ ನೋಡೋಕೂ ಟೈಂ ಇಲ್ಲ. ಎಲ್ಲಾ ಟೈಮಿನೊಳಗೂ ಮೈ ತುಂಬ ಕೆಲಸ. ಎಲ್ಲಿ ಕುಂತರೂ ಕೆಲಸ ಕೈ ಮಾಡಿ  ಕರಿತಾವ..ಮೈ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದಂಗ ಕೆಲಸ ಮಾಡಿದರೂ ಕೆಲಸ ಮುಗಿತಿಲ್ಲ. ಆದರೂ ಮಾಡಿದ ಕೆಲಸ ಒಂದೂ  ನೆಟ್ಟಗಾಗ್ತಿಲ್ಲ ಎನ್ನುವದು ಅನೇಕರ ಗೊಣಗಾಟ. ಇಂಥ ಟೈಮಿನೊಳಗ ಕನಸು ಬೇರೆ ಕಾಡ್ತಾವ. ಕನಸು ಕಾಣಬೇಕೋ ನೆಟ್ಟಗಾಗುವಂಗ ಕೆಲಸ ಮಾಡೂ ರೀತಿನ ಬದಲಿಸಬೇಕೋ ಏನೂ ತಿಳಿತಿಲ್ಲ. ಎಲ್ಲಾ ಗೊಂದಲಮಯ. ಈ ಗೊಂದಲಕ್ಕೆ ಮಂಗಳಾರತಿ ಹಾಡಬೇಕಂದರೆ ಇದನ್ನು ಗಮನವಿರಿಸಿ ಓದಿ ಇದರಲ್ಲಿಯ ನಿಯಮ ಪಾಲಿಸಿ.ಕೆಲಸಕ್ಕೆ ಉತ್ತಮ ಫಲ ತಾನೆ ಸಿಗುತ್ತೆ ನೋಡಿ.. ಕಾಲ ಮಿತ್ರನೂ ಹೌದು ಶತ್ರುವು ಹೌದು ಅರೆ ಅದ್ಹೇಗೆ ಮಿತ್ರ ಶತ್ರು ಆಗುವದು ಸಾಧ್ಯವಿದೆ ಅಂತಿರೇನು? ಕಾಲವನ್ನು ನಾವು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡರೆ ಮಾತ್ರ ಮಿತ್ರ ಇಲ್ಲದೇ ಹೋದರೆ ಶತ್ರು. ಬದುಕನ್ನು ನಂದನವನದಂತೆ ಸುಂದರಗೊಳಿಸುವ ದಿವ್ಯಶಕ್ತಿ ಮತ್ತು ಬಿರುಗಾಳಿಯಂತೆ ಹಾಳುಗೆಡುವುವÀ ದೈತ್ಯಶಕ್ತಿಯೂ ಇದಕ್ಕಿದೆ. ಕಾಲವನ್ನು ತಡೆಯೋರು ಯಾರು ಇಲ್ಲ. ಕಾಲ ಸಮುದ್ರದ ಅಲೆಯಂತೆ ಯಾರಿಗೂ ಕಾಯಲ್ಲ. ಕಾಲದ ಕಾಲಿಗೆ ಸಿಕ್ಕು ಹಲುಬದಿರಿ. ಚಿರದುಃಖಿಗಳಾಗದಿರಿ. ಅದನ್ನು ನೀವು ನಿಮ್ಮ ಆಪ್ತಮಿತ್ರನನ್ನಾಗಿಸಿಕೊಳ್ಳಿ. ಕಾಲವನ್ನು ಉಪೇಕ್ಷಿಸಿದರೆ ಅದು ನಮ್ಮನ್ನೂ ಉಪೇಕ್ಷಿಸುತ್ತದೆ. ಎನ್ನುವದು ನೆನಪಿರಲಿ ಕಾಲವನ್ನು. ಗೌರವಿಸಿದರೆ ನಮ್ಮನ್ನು ಗೌರವಿಸುವ ಕಾಲ ಬರುತ್ತೆ. ವ್ಯರ್ಥವಾಗಿ ವ್ಯಯ ಮಾಡಿದರೆ ನಮ್ಮ ಕಾಲುಗಳನ್ನೇ ಇಲ್ಲದಂತೆ ಮಾಡುತ್ತೆ. ಸದುಪಯೋಗಪಡಿಸಿಕೊಂಡರೆ ಸುಖದ ಉಡುಗೊರೆಯಾಗುತ್ತೆ. ಹೀಗೆ ಉಡುಗೊರೆಯಾಗಿಸಿಕೊಳ್ಳಲು ಕಳೆದು ಹೋದ ಸಮಯ ಒಡೆದ ಮುತ್ತಿನಂತೆ ಮರಳಿ ಮತ್ತೆಂದೂ ಬಾರದು ಎಂಬುದು ಮನದಲ್ಲಿರಲಿ. ಕೈಯಲ್ಲಿ ಹಿಡಿದುಕೊಂಡರೆ ಕಾಲಡಿಯಲ್ಲಿ ಬೀಳುತ್ತೆ.      ಕಾಲವನ್ನು ಕೊಳ್ಳುವ ಶ್ರೀಮಂತ ಜಗತಿನಲ್ಲಿ ಇನ್ನೂ ಹುಟ್ಟಿಲ್ಲ. ಹಣದಿಂದ ಜಗತ್ತಿನ ಎಲ್ಲ ವೈಭೋಗಗಳನ್ನು ನಮ್ಮದಾಗಿಸಿಕೊಂಡು ಮೆರೆಯಬಹುದು.  ಆದರೂ ಕಾಲವನ್ನು ಕೊಳ್ಳುವ ಶಕ್ತಿಯನ್ನು ಕಾಲ ಜಗತ್ತಿನ ನಂಬರ್ ಒನ್ ಶ್ರೀಮಂತನಿಗೂ ಕೊಟ್ಟಿಲ್ಲ.ಇಂಥ ಶಕ್ತಿಯುತ  ಕಾಲವನ್ನು ಅಂಗೈಯಲ್ಲಿ ತಡೆದು ಹಿಡಿದಿಟ್ಟುಕೊಂಡರೆ ನಮ್ಮ ಕಾಲಡಿಯಲ್ಲಿ ಬೀಳುತ್ತೆ. ಹಿಡಿದಿಟ್ಟುಕೊಳ್ಳುವ ಶಕ್ತಿ ಮನಸ್ಸಿಗೆ ಮಾತ್ರ ಇದೆ.ಹೀಗೆ ಮನಸ್ಸು ಮಾಡಿದರೆ ಕಾಲನಿಗೆ ಯಜಮಾನರಾಗಬಹುದು. ಯಜಮಾನರಾಗಲು ಶಿಸ್ತು ಸಂಯಮವೆಂಬ ಹಣ ಬೇಕೇ ಬೇಕು. ದಿನದ ಪ್ರತಿ ಕ್ಷಣ ಹೇಗೆ ಕಳೆಯಬೇಕೆಂಬ ವೇಳಾಪಟ್ಟಿ ಹಿಂದಿನ ದಿನದ ರಾತ್ರಿಯೇ ಸಿದ್ಧವಾಗಿರಬೇಕು ನೀವು ಹಾಕಿಕೊಂಡೆ ವೇಳಾ ಪಟ್ಟಿಯ ಅನುಷ್ಟಾನದಲ್ಲಿ ಕೆಲವು ಅಡೆತಡೆಗಳು ಬಂದೇ ಬರುತ್ತವೆ ಅವಗಳನ್ನು ಜಾಣ್ಮೆಯಿಂದ ಪರಿಹರಿಸಿ..ಕಾಲದ ಸದುಪಯೋಗಪಡಿಸಿಕೊಂಡವನೇ ಜಾಣ. ಅವನೇ ಗೆಲುವಿನ ಸರದಾರ. ಸಮಯ ಸರಿಯಾಗಿ ಉಪಯೋಗಿಸುತ್ತ ಹೋದ ಹಾಗೆ ಆತ್ಮವಿಶ್ವಾಸದ ಬಲ ಹೆಚ್ಚುತ್ತೆ. ಆತ್ಮವಿಶ್ವಾಸವಿರುವವನು ಸಾಧನೆಗೆ ಬೇಗ ಹತ್ತಿರವಾಗುತ್ತಾನೆ. ದಿನದ ಒಟ್ಟು ಕಾಲವನ್ನು ಅಂಗೈಯಲ್ಲಿಟ್ಟುಕೊಂಡು ಗುರಿ ಸಾಧನೆಗೆ ಮೀಸಲಿಟ್ಟು ಕಾರ್ಯ ಪ್ರವೃತ್ತರಾಗಬೇಕು. ಹೀಗೆ ಮಾಡುವದರಿಂದ ಬೆರಗು ಸೃಷ್ಟಿಸಬಹುದು. ಕಾಲವನ್ನು ನಿಮಗಿಷ್ಟ ಬಂದಂತೆ ಆಡಿಸೋ ಶಕ್ತಿ ನಿಮಗಿದೆ.  ವಿದ್ಯಾರ್ಥಿ ದಿಸೆಯಲ್ಲಿಯೇ ವೇಳಾ ಪಟ್ಟಿಯ ಅನುಸರಣೆಯ ರೂಡಿ ಅಂಟಿಸಿಕೊಳ್ಳಿ. ಸೋಮಾರಿತನದ ರೋಗದಿಂದ ಮುಕ್ತವಾದರೆ ಮಾತ್ರ ಕಾಲ ನಿಮ್ಮ ಕೈಗೆ ಸಿಗೋದು. ಸೋಮಾರಿತನಕ್ಕೆ ಮತ್ತು ಕಾಲಕ್ಕೆ ಎಣ್ಣೆ ಸೀಗೆಕಾಯಿ ಸಂಬಂಧ. ಕಾಲ ಎಲ್ಲ ಸಂಪತ್ತನ್ನೂ ಮೀರಿದ್ದು. ಈ ಸಂಪತ್ತಿನ ಒಡೆಯರಾಗಬೇಕೆಂದರೆ ಶ್ರದ್ಧೆ ಮತ್ತು ಪರಿಶ್ರಮದ ಅವಶ್ಯಕತೆಯಂತೂ ಇದ್ದೇ ಇದೆ. ಗುರಿಯ ಗೆರೆ ಮುಟ್ಟೋಕೆ ಕಾಲನ ಸಾಥ್ ಬೇಕೆ ಬೇಕು. ತಿಥಿ ಮಿತಿ ನೋಡದೆ ಒಂದೇ ಸಮನೆ ಓಡಬೇಕು. ಯಾವುದೇ ರಸ್ತೆಯಲ್ಲಿ ಸುಮ್ಮನೆ ಗೊತ್ತು ಗುರಿಯಿಲ್ಲದೆ ನಡೆಯುವದನ್ನು ಬಿಟ್ಟು ಗುರಿ ಯಾವುದು? ಎಷ್ಟು ಸಮಯದವರೆಗೆ ಅದರ ಜೊತೆ ಕಾಲು ಹಾಕಬೇಕು ಎನ್ನುವದನ್ನು  ಮೊದಲೇ ನಿರ್ಧರಿಸಬೇಕು.         ಹಿತ ಚಕ್ರದೊಂದಿಗೆ ಕಾಲು ಹಾಕಿ      ಬೇರೆ ಎಲ್ಲರಿಗೂ ಹೊಂದಿಕೆಯಾಗುವಂತೆ ತನ್ನನ್ನ್ನು ಕತ್ತರಿಸಿಕೊಳ್ಳುವವÀನು ತನ್ನ ಸ್ವಂತ ಆಕಾರವನ್ನೇ ಕಳೆದುಕೊಳ್ಳುತ್ತಾನೆ. ಎಂಬುದೊಂದು ನುಡಿಮುತ್ತು. ನಿನ್ನ ಸ್ಡಂತ ಆಸಕ್ತಿಗಳ ಬಗ್ಗೆ ಯೋಚಿಸಿದ್ರೆ ಪರರ ಹಿತಾಸಕ್ತಿಗಳನ್ನು ಚೆನ್ನಾಗಿ ಪೋಷಿಸಬಲ್ಲಿರಿ. ಇದೇ  ಹಿತಚಕ್ರ . ಈ ಹಿತಚಕ್ರದೊಂದಿಗೆ ಕಾಲು ಹಾಕಿದರೆ ಕಾಲದ ಮೌಲ್ಯ ನಿಮಗೆ ಪೂರ್ಣ ದಕ್ಕುತ್ತದೆ. ಉತ್ತಮ ನಾಯಕರು ಹುಟ್ಟಿ ಬಂದವರಲ್ಲ. ಕಾಲನ ಸದುಪಯೋಗದಿಂದ ರೂಪಗೊಂಡವರು. ಎಂಬ ಮಾತು ಮನದಲ್ಲಿರಲಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಅಂದುಕೊಳ್ಳುತ್ತಾರೊ ಎಂಬ ಯೊಚನೆಯಲ್ಲಿ ಬೀಳದಿರಿ. ನಿಮ್ಮಲ್ಲಿ ಇಲ್ಲದುದುರ ಬಗ್ಗೆ ಕೊರಗುವ ಬದಲು ನಿಮ್ಮಲ್ಲಿರುವ ಪ್ರತಿಭೆಯ, ಸದ್ಗುಣಗಳನ್ನು ಪೋಷಿಸಿ ಬೆಳೆಸಲು ಕಾಲ ಕಳೆಯಿರಿ. ಆಶಾರಹಿತ ಭಾವವೇ ಬೇಸರ. ಆಯಾಸವೆನಿಸಿದಾಗ ವಿರಾಮಕ್ಕೆ ಜಾಗ ಮಾಡಿಕೊಡಿ ಹೊರತು ಬೇಸರಕ್ಕಲ್ಲ. ಇಂದು ನಿಮ್ಮ ಕೈಯಲ್ಲಿದೆ. ಸಾಧನೆಗೆ ಬೇಕಾಗಿರುವ ಮೊದಲ ಭಾವ ಕನಸು. ಕಾಲ ಮತ್ತು ಕನಸಿನ ನಡುವೆ ಅವಿನಾಭಾವ ಸಂಬಂಧವುಂಟು. ಕಣ್ಣಲ್ಲಿ ಕನಸಿಲ್ಲದಿದ್ದರೆ ಹೋಗುವ ದಾರಿ ತಿಳಿಯುವದಿಲ್ಲ. ಸಾಧನೆಯಲ್ಲಿ ಕನಸು ಪ್ರಥಮ ಹೆಜ್ಜೆ. ಮೊದಲ ಹೆಜ್ಜೆ ಗಟ್ಟಿಯಾಗಿರಬೇಕು. ದಿಟ್ಟವಾಗಿರಬೇಕು. ಆತಂಕವನು ದೂರ ಸರಿಸಿ ಕಂಡ ಕನಸಿಗೆ ಶಕ್ತಿ ಸಾಮಥ್ರ್ಯ ಕೊಡಬೇಕಾದರೆ ನಿನ್ನೆ ನಾಳೆಗಳ ಚಿಂತೆಯಲ್ಲಿ ಇಂದನ್ನು ಹಾಳು ಮಾಡಿಕೊಳ್ಳದಿರಿ.ನಿನ್ನೆ ಇತಿಹಾಸ ನಾಳೆ ನಿಗೂಢ ಇಂದು ಉಡುಗೊರೆ ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಯೋಜನೆ ಹಾಕಿಕೊಳ್ಳಿ ಯೋಜನೆ ಅನ್ನುವದು ಮಾನಸಿಕ ದೂರ ದೃಷ್ಟಿ. ಪ್ರತಿ ಕೆಲಸಕ್ಕೂ ಲೆಕ್ಕಾಚಾರ ಹಾಕಿ ತರ್ಕಬದ್ಧವಾಗಿ ಯೋಚಿಸಿ ಸಮಯದ ಸದುಪಯೋಗದ ಕುರಿತು ಮೈಂಡ್ ಟ್ಯೂನಿಂಗ್(ಮೆದುಳು ಹದಗೊಳಿಸುವದು) ಮಾಡಿಕೊಂಡರಂತೂ ಭಯ ಉದ್ವೇಗ ಖಿನ್ನತೆಗಳು ಮಾಯವಾಗುತ್ತವೆ. ಕಾಲದ ಹಗ್ಗವನ್ನು ಗಟ್ಟಿಯಾಗಿ ಹಿಡಿದು, ಹಿಡಿದ ಕಾರ್ಯದಲ್ಲಿ ತಲ್ಲೀನವಾದರೆ ವಿಜಯದ ಮಾಲೆ ನಿಮ್ಮ ಕೊರಳನ್ನು ಹುಡುಕಿಕೊಂಡು ಬರುತ್ತೆ. ಕೆಲವೊಂದಕ್ಕೆ ಇಲ್ಲ ಅನ್ನಿ ಸಮಯವನ್ನು ರಬ್ಬರ ತರ ಹಿಗ್ಗಿಸೋಕೂ ಆಗಲ್ಲ ಕುಗ್ಗಿಸೋಕೂ ಆಗಲ್ಲ. ಒಂದು ದಿನಕ್ಕಿರೋದು 1440 ನಿಮಿಷ ಮಾತ್ರ. ಸಾಧಿಸಬೇಕಾದ ಗುರಿಗೆ ಈ ಸಮಯ ಸಾಕಾಗಲ್ಲ. ಅಂತಿಮವಾಗಿ ನಿಮ್ಮ ಸಮಯವನ್ನು ಹಾಳು ಮಾಡಲು ನಿಂತವರಿಗೆ ನಿರ್ದಾಕ್ಷಿಣ್ಯವಾಗಿ ಇಲ್ಲ ಎಂದು ಹೇಳಲು ಕಲಿಯಿರಿ. ದಾಕ್ಷಿಣ್ಯಕ್ಕೆ ಬಿದ್ದು ಅಮೂಲ್ಯ ಸಮಯ ಹಾಳು ಮಾಡಿಕೊಳ್ಳದಿರಿ. ನೀವು ಕೆಲಸ ಮಾಡುವ/ಓದುವ ಕೋಣೆಯಲ್ಲಿ ನನ್ನ ಸಮಯ ಅಮೂಲ್ಯ ಎಂದು ದೊಡ್ಡದಾಗಿ  ಬರೆದು ಅಂಟಿಸಿ. ಸಮಯ ಪಾಲಿಸದವರ ಜೊತೆ ಅತಿಯಾದ ಸ್ನೇಹಬೇಡ. ಯಾರೋ ಯಾವುದೊ ಇಲ್ಲ ಸಲ್ಲದ ಕೆಲಸಕ್ಕೆ ಕರೆದರೆ ಇಲ್ಲ ಎನ್ನಲಾಗದೆ ಅವರ ಹಿಂದೆ ಕಾಲು ಎಳೆದುಕೊಂಡು ಹೊಗದಿರಿ. ನಿಮ್ಮ ಅತೀ ಜರೂರು ಕೆಲಸದ ಕಾರಣ ಹೇಳಿ ನಯವಾಗಿ ನಿರಾಕರಿಸಿ. ಹರಟೆ ತಡರಾತ್ರಿಯವರೆಗೂ ಹೊರಗೆ ತಿರುಗಾಡುವದು ಅಪರಿಚಿತ ವ್ಯಕ್ತಿಗಳೊಂದಿಗೆ ವಾಟ್ಸಪ್ ಫೇಸ್ ಬುಕ್ಗಳಲ್ಲಿ  ಅನವಶ್ಯಕ ಚಾಟ್ ಮಾಡೋದು ಇವೆಲ್ಲವುಗಳಿಗೆ ಮುಲಾಜಿಲ್ಲದೆ ಇಲ್ಲ ಅನ್ನಿ. ಕಲೆ ಕರಗತಗೊಳಿಸಿಕೊಳ್ಳಿ ಸಮಯ ಆಭಾವದಿಂದ ಕೆಲಸದ ಒತ್ತಡ ಹೆಚ್ಚುತ್ತಿದೆ. ಅಂತ ಕಾರಣ ಹೇಳುವದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಬಹಳ ಕೆಲಸಗಳಲ್ಲಿ ತೊಡಗಿಸಿಕೊಂಡವರು ಎಲ್ಲ ಕೆಲಸಗಳನ್ನು ಮಾಡಿ ಮುಗಿಸುವಷ್ಟು ಸಮಯ ಹೊಂದಿರುತ್ತಾರೆ. ನೀವೊಂದು ಮಹಲು ಕಟ್ಟುವದಾದರೆ ಕೈತುಂಬ ಕೆಲಸವಿರುವ ವಾಸ್ತುಶಿಲ್ಪಿಯ ಬಳಿ ಹೋಗಿ. ಎನ್ನುವ ನುಡಿಮುತ್ತು ಸಮಯ ನಿರ್ವಹಣೆ ಒಂದು ಕಲೆ ಎನ್ನುವದನ್ನು ಸಾರಿ ಹೇಳುತ್ತೆ. ಸಮಯ ನಿರ್ವಹಣೆಯಲ್ಲಿ ಆದ್ಯತೆಗೆ ಪ್ರಥಮ ಆದ್ಯತೆಯಿದೆ. ಅದರಲ್ಲಿ ತುರ್ತು ಮತ್ತು ಮಹತ್ವದ್ದು. ಅಂತ ಎರಡು ಪ್ರಕಾರ ತುರ್ತು ಅನಿವಾರ್ಯವಾದ ಕೆಲಸಗಳಿದ್ದರೆ ಶ್ರದ್ಧೆ ಶಿಸ್ತು ಆಸಕ್ತಿಯಿಂದ ತೊಡಗಿಸಿಕೊಳ್ಳಿ. ತಕ್ಷಣದ್ದು ಮತ್ತು ಅನಿವಾರ್ಯವಾದದ್ದು  ಅಂದರೆ ತಕ್ಷಣಕ್ಕೆ ನಿಮಗೆ ಖುಷಿ ಕೊಡಬಹುದು. ಆದರೆ ಅದರ ಅಗತ್ಯ ನಿಮಗಿಲ್ಲ. ಎನ್ನುವಂತದಕ್ಕೆ ಮಾರು ಹೋಗಲೇಬೇಡಿ. ಅನಿವಾರ್ಯ ಮತ್ತು ತಕ್ಷಣವಲ್ಲದ್ದು ಅಂದರೆ ಭವಿಷ್ಯತ್ತಿನಲ್ಲಿ ಲಾಭದಾಯಕವಾದುದು. ಈಗ ಮಾಡದೇ ಹೋದರೆ ಮುಂದೆ ತೊಂದರೆ ಆಗುವಂತಹುದು. ಸಮಯಾವಕಾಶ ಬಹಳವಿದೆಯೆಂದು ಮುಂದೂಡುತ್ತ ಬಂದರೆ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳುವದು ನೂರಕ್ಕೆ ನೂರುಷ್ಟು ಖಚಿತ. ಮುಂಬರುವ ವಾರ್ಷಿಕ ಪರೀಕ್ಷೆಗೆ ಸ್ಪರ್ಧಾತ್ಮಕ  ಪರೀಕ್ಷೆಗೆ .ಇನ್ನೂ ಸಾಕಷ್ಟು ಸಮಯವಿದಿಯೆಂದು ಉಪೇಕ್ಷಿಸಿ ತಯಾರಿ.ಮಾಡದೇ ಹೋದರೆ ಸಮಸ್ಯೇಗೆ ಆಹ್ವಾನ ನೀಡಿದಂತೆ ಸರಿ. ಊಟ ಆಟ ಟಿವಿ ಮನರಂಜನೆ ಕುಟುಂಬ ಗೆಳತನಕ್ಕೆ ಅಗತ್ಯವಿರುವಷ್ಟು ಸಮಯ ಎತ್ತಿಡಿ. ಟೈಂ ಬ್ಯಾಂಕ್ ಬ್ಯಾಲೆನ್ಸ್ ಒಂದು ದಿನ ಬ್ಯಾಂಕಿನ ಖಾತೆಯಲ್ಲಿ ಪ್ರತಿದಿನವೂ ಪ್ರತಿಯೊಬ್ಬರಿಗೂ ಬೆಳ್ಳಂಬೆಳಿಗ್ಗೆ 86400 ಸೆಕೆಂಡುಗಳು ಜಮೆಯಾಗಿರುತ್ತವೆ. ಈ ಸೆಕೆಂಡುಗಳನ್ನು ಅಂದೇ ಖರ್ಚು ಮಾಡಬೇಕು. ಇಲ್ಲಿ ಓವರ್ ಡ್ರಾಫ್ಟ್ ಸೌಲಭ್ಯವಿಲ್ಲ. ಅಂದಿನದು ಅಂದು ಖರ್ಚು ಮಾಡಬೇಕು ಇಲ್ಲದಿದ್ದರೆ ಖಾತೆಯಲ್ಲಿ ಬ್ಯಾಲೆನ್ಸ್ ನಿಲ್ ಆಗಿ ಹೋಗುತ್ತೆ. ದೇವರು ನೀಡಿದ ಟೈಂ ಬ್ಯಾಂಕಿನ ಸೆಕೆಂಡುಗಳನ್ನು ತಪ್ಪದೇ ಸದ್ವಿನಿಯೊಗಪಡಿಸಿಕೊಳ್ಳಬೇಕು. ಟೈಂ ವೇಗವಾಗಿ ಜಾರುತ್ತಿದೆಯಾದರೆ ನೀವು ತುಂಬಾ ಬಿಜಿ ಎಂದರ್ಥ. ಬಿಜಿಯಾಗಿರುವ ಸಾಧಕರಿಗೆ ಸಮಯ ನಿರ್ವಹಣೆ ತುಂಬಾ ಆಕರ್ಷಣೀಯವಾಗಿ ಸೆಳೆಯುತ್ತೆ ಹೀಗಾಗಿ ಅವರು ನಮ್ಮ ಟೈಂ ಬ್ಯಾಂಕಿನಲ್ಲಿ ಪ್ರತಿದಿನದ ಒಂದೊಂದು ಸೆಕಂಡನ್ನು ಕಳೆದುಕೊಳ್ಳಲು ಇಚ್ಛಿಸುವದಿಲ್ಲ.             ಕಳೆದುಕೊಂಡಿದ್ದು ವಸ್ತು ಆದರೆ ಹುಡುಕಬಹುದು. ಸಿಗದಿದ್ದರೆ ಮತ್ತೊಂದು ಪಡೆದುಕೊಳ್ಳಲೂಬಹುದು. ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು ಪಡೆದುಕೊಳ್ಳಲೂ ಆಗದು. ಎನ್ನುವದನ್ನು ಮನಸ್ಸಿನಲ್ಲಿ ಬೇರೂರಿಸಿಕೊಂಡು ನಿಖರವಾದ ಗುರಿಯೊಂದಿಗೆ ಸಂವಹನ ಕಲೆ ಜಾಣ್ಮೆ ವ್ಯಹವಾರ ಕೌಶಲ ಬೆರೆಸಿ ಕಾಲದ ಜೊತೆ ಕಾಲು ಹಾಕಿದರೆ ಕಣ್ಣು ಕಂಡ ಕನಸುಗಳೆಲ್ಲ ನನಸಾಗಿ ಗೆಲುವು ನಿನ್ನ ಕಾಲಡಿಯಲ್ಲಿ ನಿಂತಿರುತ್ತದೆ ಹಾಗದರೆ ತಡವೇಕೆ? .ಬನ್ನಿ ಟೈಂ ಬ್ಯಾಂಕ್ ಬ್ಯಾಲನ್ಸ್ನ್ನು  ಬೇಗ ಬೇಗ ಇಂದಿನಿಂದ ಇಂದೇ ಗುರಿ ಸಾಧನೆಗಾಗಿ ಖಾಲಿ ಮಾಡಿ ಯಶ ಗಳಿಸಿ.             =============================================== ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು                                                         

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ ಕೆ.ಬಿ.ವೀರಲಿಂಗನಗೌಡ್ರ ಪರಿಚಯ ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಪ್ರಕಟಿತ ಕೃತಿಗಳು ‘ಅರಿವಿನ ಹರಿಗೋಲು’ (ಕವನ ಸಂಕಲನ), ‘ಅವಳು ಮಳೆಯಾಗಲಿ’ (ಕಥಾ ಸಂಕಲನ), ಘಟಸರ್ಪ (ಸಾಮಾಜಿಕ ನಾಟಕ), ‘ಸಾವಿನಧ್ಯಾನ’ (ಲೇಖನಗಳ ಸಂಕಲನ), ‘ಮೌನ’ (ಸಂಪಾದಿತ) ಸಂದರ್ಶನ ಪ್ರಶ್ನೆ  :ನೀವು ಚಿತ್ರ ಮತ್ತು ಕವಿತೆಗಳನ್ನು ಏಕೆ ಬರೆಯುತ್ತಿರಿ? ಉತ್ತರ           :ನನ್ನೊಳಗೆ ನುಸುಳುವ ತುಮುಲಗಳನ್ನು ಹೊರಹಾಕಿ ಹಗುರಾಗುವುದಕ್ಕೆ.  ಪ್ರಶ್ನೆ  :ಚಿತ್ರ ಮತ್ತು ಕವಿತೆ ಹುಟ್ಟುವ ಕ್ಷಣ ಯಾವುದು? ಉತ್ತರ           :ಒಂದು ನೋವು ತಿಂದಾಗ, ಇನ್ನೊಂದು ನೋವಿಗೆ ಕಾಲವೇ ಮುಲಾಮು ಸವರುವಾಗ. ಪ್ರಶ್ನೆ  :ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಉತ್ತರ           :ನಿರ್ದಿಷ್ಟವಾದ ವಸ್ತು ವ್ಯಾಪ್ತಿ ಅಂದ್ರೆ ಅದೊಂದು ಚೌಕಟ್ಟು ಅನ್ಸತ್ತೆ, ಚೌಕಟ್ಟಿಗೆ ಸಿಲುಕದೆ  ಮೆಲ್ಲಗೆ ಎಲ್ಲವ           ದಾಟಿಕೊಂಡು ಅಲ್ಲಮರ ಬಯಲಿಗೆ ಹೋಗಲು ಕನವರಿಸುವೆ, ಬಯಲೇ ನನ್ನ ವಸ್ತು ಮತ್ತು      ವ್ಯಾಪ್ತಿ. ಇನ್ನು        ನನ್ನನ್ನು ಪದೇ ಪದೇ ಕಾಡುವ ವಿಷಯ ಅಂದ್ರೆ, ಚಾಡಿ ಕೇಳಲಷ್ಟೇ          ತೆರೆದುಕೊಳ್ಳುವ ಕೆಲ ಹಾಳು ಕಿವಿಗಳಿಗೆ, ಜೀವಪ್ರೀತಿಯ ಹಾಡನ್ನು ಹೇಗೆ ತಾಗಿಸುವುದು! ಪ್ರಶ್ನೆ  :ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೇ? ಉತ್ತರ           :ಅನುಭವಿಸದೇ ಬರೆಯುವುದು ಬಾಲ್ಯ, ಅನುಭವಿಸಿ ಬರೆಯುವುದು ಹರೆಯ, ಅನುಭವ     ಅನುಭಾವ ಆಗುವುದೇ ಮುಪ್ಪು ಅಥವಾ ಮುಕ್ತಿ ಅಂತಾ ಅಂದ್ಕೊತಿನಿ. ಪ್ರಶ್ನೆ  :ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಉತ್ತರ           :ಜಾತಿ ಧರ್ಮ ಮತ್ತು ಹಣಕ್ಕಾಗಿ ಅಮೂಲ್ಯವಾದ ಮತವನ್ನೇ ಮಾರಿಕೊಳ್ಳೊರು, ತೂರಿಕೊಳ್ಳೊರು, ಅಡ ಇಡೊವ್ರು ಇರೊವರ್ಗೂ ರಾಜಕೀಯ ಸನ್ನಿವೇಶ ಚೆನ್ನಾಗಿರಲ್ಲ.. ಪ್ರಶ್ನೆ  :ಧರ್ಮ ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಉತ್ತರ           : ಈ ಎರಡೂ ನಮ್ಮೊಳಗೆ ಮಾನವೀಯ ಪ್ರೀತಿ ತುಂಬಿ, ಚೂರು ದಾರಿ ತಪ್ಪಿದಾಗ ಎಡಬಿಡದೇ ಕಾಡಿ             ನಿದ್ದೆಗೆಡಿಸಿ ಭಯ ಹುಟ್ಟಿಸಬೇಕಿತ್ತು, ಆದರೆ ಹಾಗಾಗದೇ ಸ್ವಾರ್ಥದ ಸರಕಾಗುತ್ತಿರುವುದರ ಕುರಿತು    ತುಂಬಾ ಬೇಸರವಿದೆ. ಪ್ರಶ್ನೆ  : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತಿದೆ? ಉತ್ತರ           : ಮುಖಗಳಿಗಿಂತ ಮುಖವಾಡಗಳೇ ಹೆಚ್ಹೆಚ್ಚು ರಾಚುತ್ತಿವೆ ಅಂತಾ ಅನ್ನಸ್ತಿದೆ. ಪ್ರಶ್ನೆ  : ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ನೇರ ರಾಜಕಾರಣಕ್ಕಿಂತ, ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ. ಪ್ರಶ್ನೆ  :ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ಉತ್ತರ           :“ರಿಪೇರಿಯ ಹಂತವನ್ನೂ ಮೀರಿ ಹೋಗುತ್ತಿದೆ” ಎಂದ ಲಂಕೇಶ್‍ರ ಮಾತೇ ಹೇಳುತ್ತದೆ. ಪ್ರಶ್ನೆ  :ನಿಮ್ಮ ಕನಸುಗಳೇನು? ಉತ್ತರ           :ಬಯಲು ಸೀಮೆಯಲಿ ಕಾಡು ಬೆಳೆಸುವುದು, ಬೆಳೆಸಿದ ಆ ಕಾಡ ನೆರಳಲಿ ಕುಳಿತು ಸ್ನೇಹ ಪ್ರೀತಿ ಸೌಹಾರ್ದತೆಯ ಆಟ ಪಾಠ ಸಂವಾದ ನಡೆಸುವುದು. ಪ್ರಶ್ನೆ  :ಕನ್ನಡ ಹಾಗೂ ಅನ್ಯ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ          ಯಾರು? ಉತ್ತರ           : ಕನ್ನಡದ ಕುವೆಂಪು, ತೇಜಸ್ವಿ, ಲಂಕೇಶ್, ನಿಸ್ಸಾರಹ್ಮದ್, ದೇವನೂರು ಮಹಾದೇವ  ತುಂಬಾ ಇಷ್ಟ, ಇನ್ನು      ಚಾಲ್ರ್ಸಬಕೊವಸ್ಕಿ, ರೂಮಿ, ಬ್ರೆಕ್ಟ್, ಬೋದಿಲೇರ್ ಮತ್ತು ಗೀಬ್ರಾನ್‍ರ ಅನುವಾದಿತ ಬರಹಗಳು             ಸಹ ಕನ್ನಡದಷ್ಟೇ ಇಷ್ಟವಾಗ್ತಾವೆ. ಪ್ರಶ್ನೆ  :ಈಚೆಗೆ ಓದಿದ ಕೃತಿಗಳಾವವು? ಉತ್ತರ           :‘ನೋವೂ ಒಂದು ಹೃದ್ಯ ಕಾವ್ಯ’ ರಂಗಮ್ಮ ಹೊದೇಕಲ್ಲರ ಕವನ ಸಂಕಲನ, ‘ಏಪ್ರಿಲ್ ಫೂಲ್’ ಹನುಮಂತ ಹಾಲಿಗೇರಿಯವರ ಕಥಾ ಸಂಕಲನ. ‘ದೀಪದ ಗಿಡ’ ಬಸೂ ದ್ವಿಪದಿಗಳು. ಪ್ರಶ್ನೆ  :ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ           :ಮಕ್ಕಳಿಗೆ ಪಾಠ ಮಾಡುವುದು. ಪ್ರಶ್ನೆ  :ಇಷ್ಟವಾದ ಸ್ಥಳ ಯಾವುದು? ಉತ್ತರ           :ಬಯಲು ಪ್ರಶ್ನೆ  :ತುಂಬಾ ಇಷ್ಟಪಡುವ ಸಿನಿಮಾ ಯಾವುದು? ಉತ್ತರ           :ದಿಯಾ ಪ್ರಶ್ನೆ  :ನೀವು ಮರೆಯಲಾರದ ಘಟನೆ ಯಾವುದು? ಉತ್ತರ           :ಪ್ರಕಟಿತ ಕಥೆಗೆ ನೋಟಿಸ್ ಪಡೆದು, ಒಂದು ಬಡ್ತಿ ಕಳೆದುಕೊಂಡಿದ್ದು. ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಕನಸಿನೂರಿನ ಕಿಟ್ಟಣ್ಣ ಕನಸಿನೂರಿನ ಕಿಟ್ಟಣ್ಣ ( ಮಕ್ಕಳ ಕಾದಂಬರಿ)ಮಲೆಯಾಳ ಮೂಲ : ಇ.ಪಿ.ಪವಿತ್ರನ್ ಕನ್ನಡಕ್ಕೆ : ಕೆ.ಪ್ರಭಾಕರನ್: ದೇಸಿ ಪುಸ್ತಕಪ್ರಕಟಣೆಯ ವರ್ಷ :೨೦೧೫ಬೆಲೆ :ರೂ.೮೦ಪುಟಗಳು :೧೩೮ ಕನ್ನಡದಲ್ಲಿ ಅತಿ ವಿರಳವೆಂದು ಹೇಳಬಹುದಾದ ಮಕ್ಕಳ ಕಾದಂಬರಿ ಪ್ರಕಾರಕ್ಕೆ ಕೊಡುಗೆಯಾಗಿ ಈ ಕಾದಂಬರಿ ಅನುವಾದವಾಗಿ ಬಂದಿದೆ ಎನ್ನಬಹುದು.  ಶೀರ್ಷಿಕೆಯೇ ಸೂಚಿಸುವಂತೆ ಕಿಟ್ಟಣ್ಣ ಈ ಕಥೆಯ ನಾಯಕ. ಕನಸಿನೂರು ಎಂಬ ಪುಟ್ಟ ಹಳ್ಳಿಯ ಮಧ್ಯಮ ವರ್ಗದ ಜಮೀನ್ದಾರಿ ಕುಟುಂಬವೊಂದರಲ್ಲಿ ಪುರಾಣದ ಕೃಷ್ಣನಂತೆ ಜಡಿಮಳೆಯ ಆರ್ಭಟದ ನಡುವೆ ಹುಟ್ಟುವ ಕಿಟ್ಟಣ್ಣ ಮುಂದೆ ಉದ್ದಕ್ಕೂ ಪವಾಡಗಳನ್ನು ಸೃಷ್ಟಿಸುತ್ತ ಹೋಗುತ್ತಾನೆ.  ಕಿಟ್ಟಣ್ಣನ ಬುದ್ಧಿಶಕ್ತಿ, ಅವನ ನಿಸರ್ಗ ಪ್ರೇಮ, ನಿಸರ್ಗದೊಂದಿಗಿನ ಅವನ ವಿಚಿತ್ರ ಒಡನಾಟ, ಅವನ ಸಾಹಸಗಳು, ಅವನ ಬದುಕಿನಲ್ಲಾಗುವ ಆಕಸ್ಮಿಕ ತಿರುವುಗಳು ಮತ್ತು ಆಶ್ಚರ್ಯಕರ ಬೆಳವಣಿಗೆಗಳು ಇಡೀ ಕಾದಂಬರಿಯ ಕಥಾನಕದ ಕವಲುಗಳಾಗಿ ಟಿಸಿಲೊಡೆಯುತ್ತ ಹೋಗುತ್ತವೆ.  ಮಕ್ಕಳನ್ನು ಖುಷಿ ಪಡಿಸಲು ಬೇಕಾಗುವ ಎಲ್ಲ ಸರಕುಗಳೂ ಇಲ್ಲಿವೆ. ಮಕ್ಕಳ ಕುತೂಹಲವನ್ನು ಹೆಜ್ಜೆ ಹೆಜ್ಜೆಗೂ ಹೆಚ್ಚಿಸುವಂತಹ ನೂರಾರು ಘಟನೆಗಳಿಂದ ಕಾದಂಬರಿ ತುಂಬಿದೆ. ನಂಬಲಸಾಧ್ಯವಾದ ನೂರಾರು ಅಚ್ಚರಿಗಳು ಇದೊಂದು ಕನಸಿನ ಕಂತೆಯೇನೋ ಎಂಬ ಭಾವನೆಯನ್ನು ಹುಟ್ಟಿಸುತ್ತವೆ.  ಹಳ್ಳಿಯ ಹಸಿರು ನಿಸರ್ಗ, ಪ್ರಾಣಿ-ಪಕ್ಷಿಗಳ ಓಡಾಟ, ದಟ್ಟ ಕಾಡಿನ ರುದ್ರ ರಮಣೀಯ ದೃಶ್ಯಗಳು ಮತ್ತು ಅತಿಯಾಗಿ ತಿಂದರೂ ಅರಗಿಸಿಕೊಳ್ಳುವ ದೈತ್ಯನಾಗಿ ಬೆಳೆಯುವ ಕಿಟ್ಟಣ್ಣನ ಪರಿ ಕಾದಂಬರಿಗೆ ಫ್ಯಾಂಟಸಿಯ ಸ್ಪರ್ಶವನ್ನು ಕೊಟ್ಟಿವೆ.  ಆದರೆ ದೇವಸ್ಥಾನದಿಂದ ಕಳವಾಗುವ ಗಣಪತಿ ವಿಗ್ರಹವು ಕಾಡಿನ ಭಯಾನಕತೆಯೊಳಗೆ ಬಯಲಾಗುವ ಮೂಲಕ ಪತ್ತೆಯಾಗುವ ಕಳ್ಳರ ಜಾಲ  ಹಾಗೂ ಆ ಬಗ್ಗೆ ಮುಂದುವರಿಯುವ ಕಾರ್ಯಾಚರಣೆಗಳು , ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳು ನಮ್ಮನ್ನು ಕನಸಿನೂರಿನಿಂದ ವಾಸ್ತವ ಪ್ರಪಂಚಕ್ಕೆ ತರುತ್ತವೆ.  ಒಟ್ಟಿನಲ್ಲಿ ಈಗಾಗಲೇ ಮಕ್ಕಳ ಮನಸ್ಸನ್ನು ಬಹುವಾಗಿ ಸೆಳೆದಿರುವ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯ ಇನ್ನೊಂದು ಮುಖವೇ ‘ಕನಸಿನೂರಿನ ಕಿಟ್ಟಣ್ಣ’ ಎನ್ನಬಹುದು. ಇಂದು ಮಕ್ಕಳಿಗೆ ಖುಷಿ ಕೊಡುವ, ಮಕ್ಕಳ ಮನಸ್ಸನ್ನು ತೆರೆದಿಡುವ, ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸುವ, ಅವರಲ್ಲಿ ಧೈರ್ಯವನ್ನೂ ಸಾಹಸ ಪ್ರವೃತ್ತಿಯನ್ನೂ ಪ್ರೋತ್ಸಾಹಿಸುವ ಸಾಹಿತ್ಯವನ್ನು ನಾವು ಮಕ್ಕಳಿಗೆ  ಕೊಡ ಬೇಕಾಗಿದೆ. ಈ ನಿಟ್ಟಿನಲ್ಲಿ ‘ಕನಸಿನೂರಿನ ಕಿಟ್ಟಣ್ಣ’  ಒಂದು ಒಳ್ಳೆಯ ಸೇರ್ಪಡೆ. ಈಗಾಗಲೇ ಮಲೆಯಾಳದಿಂದ ಆರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಪ್ರಭಾಕರನ್ ಈ ಕೃತಿಯನ್ನು ಸರಳ ಸುಂದರ ಭಾಷೆಯಲ್ಲಿ ಅನುವಾದಿಸಿದ್ದಾರೆ. ******************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top