ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನ್ನಡವೆಂದರೆ ಕುವೆಂಪು !
ಕವಿಶೈಲದ ಇಂಚರ ಇಂಪು
ಮಲೆನಾಡಿನ ಹಸಿರಿದೆ
ಜೋಗದ ಭರವಿದೆ
ಕಾಜಾಣದ ಕರೆಯಿದೆ
ಅದರಲಿ
ಅಮ್ಮನ ಲಾಲಿಯ ತಂಪು ಇದೆ !

ಬೇಂದ್ರೆ ಎಂದರೆ ಬೆಂದರೆ ಬರುವ ಪರಿಪಾಕ
ಕಾವ್ಯಗಂಗೆ ಇಳೆಗಿಳಿವ ಭಗೀರಥ ಕಾಯಕ
ನಾಕು ತಂತಿ ಮೀಟುವ ಶಬ್ದ ವೈಣಿಕ
ದರ್ಶನ, ಸಂಗೀತ, ಗಣಿತ ಲಯ ಮಾಂತ್ರಿಕ
ಪಂಡಿತ ಪಾಮರರ ಪ್ರೀತಿಪಾತ್ರ
ಕನ್ನಡಾಂಬೆಯ ಔರಸ ಪುತ್ರ
ಕಾವ್ಯಾಂತರಿಕ್ಷದ ಧ್ರುವ ನಕ್ಷತ್ರ
ವರಕವಿಯ ಕೀರುತಿ ಸರ್ವತ್ರ


About The Author

Leave a Reply

You cannot copy content of this page

Scroll to Top