ಸಂಮಿಶ್ರಣ

ಡಾ.ಪ್ರತಿಭಾ

ಅಬ್ಬರಿಸುವ ಕಡಲಿಗೆ
ಯಾವತ್ತೂ ಶಾಂತವಾಗಿ
ಹರಿಯುವ ನದಿಗಳು ಸಾಕ್ಷಿ

ಖಾಲಿಯಾಯಿತೆ ಸಿಹಿ
ನೀರಿನ ಒರತೆ
ಹಾಕಿಕೊಂಡು ತನಗೆ
ತಾನೇ ಪ್ರಶ್ನೆಗಳ

ಸ್ವಂತಿಕೆಯ ಕಳೆದುಕೊಳ್ಳುವ
ಅಪಾಯ ಇದ್ದರೂ
ಒಂದು ನೆಮ್ಮದಿ ಯ ಭಾವ.

ಅಬ್ಬರದ ಅಲೆಗಳು
ಸದ್ದು ಮಾಡಿ ಸುಮ್ಮನಾಗಲು
ಮೂಡಿತು ನೆಮ್ಮದಿಯ
ಭಾವ

ಶಾಶ್ವತವೇನಲ್ಕ ಈ ಬದುಕು
ನೋವು, ನಲಿವು
ಸುಖ,ದುಃಖಗಳ ಸಂಮ್ಮಿಶ್ರಣ

********

Leave a Reply

Back To Top