ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರಕವಿತೆ ಮಲಯಾಮಾರುತ

ನಗು ಮುಖದವಳೇ //
ನಲಿ ಶುಕದವಳೇ //
ನವಿಲಂತೆ ಕುಣಿದವಳೇ
ಜಿಂಕೆಯಂತೆ ಜಿಗಿದವಳೇ//ನಗು//

ಮಾಯ ಮೃಗದಂತೆ ಬಂದವಳೇ
ಬಾನ ಚುಕ್ಕಿಯಂತೆ ಮಿಂಚಂವಳೇ/
ನೀ ಅನುರಾಗದ ಮೋಹದಲಿ
ಒಂದಾದ ಹೃದಯಗಳ ಕೊಂದವಳೇ//

ಅಂದದ ಹೂವಿನ ಶೃಂಗಾರದಲಿ ನೋವಿನ ಶಯ್ಯೇಯ ಮುಳ್ಳಾದವಳೇ../
ತಂಪಾದ ವಸಂತ ಗಾಳಿಯಲಿ ಬಿರುಗಾಳಿಯಾಗಿ ನೀ ಬಂದವಳೇ..//

ಸುರಿಯುವ ವರ್ಷಾಧಾರೆಯಲಿ
ಬಿರು ಮಿಂಚು ಗುಡುಗಾದವಳೇ../
ಬೀರು ಸ್ವಾರ್ಥದ ನುಡಿಯಲ್ಲಿ
ಅರ್ತಿಯ ಮನವ ಜರಿದವಳೇ..//

ಬಾಳಿನ ದೋಣಿ ತೇಲುತಲಿ
ಬಿಸಿಲಿನ ಬೇಗೆಯಲಿ ಬೇಯುತಲಿ..
ನಾದ ಸ್ವರದಲಿ ಅಪಸ್ವರ ಮೂಡಿ
ಬಿಸುಡು ಮಲಯಾಮಾರುತ ರಾಗವಾದೆ..//


Leave a Reply

Back To Top