ಕ್ರೀಡಾ ಸಂಗಾತಿ
ಶಾರದಾ ಜೈರಾಂ ಬಿ.
ʼಐ.ಪಿ.ಎಲ್. ಕ್ರೀಡೆಯನ್ನು
ಜೂಜಾಟದ ಅಡ್ಡೆಯಾಗಿಸಿದ
ಪ್ರಾಂಚೈಸಿಗಳುʼ

ಭಾರತದಲ್ಲಿ ಟ್ವೆಂಟಿ 20 ಕ್ರಿಕೆಟ್ ಪಂದ್ಯಾವಳಿಗಳು ಒಂದು ವೃತ್ತಿಪರ ಲೀಗ್ ಆಗಿದೆ.ಇದನ್ನು ಭಾರತದ ಕ್ರಿಕೆಟ್ (ಬಿಸಿಸಿಐ) ನಿಯಂತ್ರಣ ಮಂಡಳಿ ಆರಂಭಿಸಿದ್ದು.
2008ರಲ್ಲಿ ಮೊದಲ ಐಪಿಎಲ್ ಪಂದ್ಯಾವಳಿ ಪ್ರಾರಂಭವಾಗಿದ್ದು.
ಐಪಿಎಲ್ ಎಂದರೆ ಮನರಂಜನೆ ಮಾತ್ರವಲ್ಲದೇ,ಹಣದ ಹೊಳೆಯು ಹೌದು.ಅವರವರು ನೀಡಿದ ಪ್ರದರ್ಶನಕ್ಕೆ ತಕ್ಕ ಹಾಗೇ ಹಣ ಸಿಗುತ್ತದೆ.ಜಗತ್ತಿನ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಲೀಗ್ ಕ್ರಿಕೆಟ್ ನ ಟೂರ್ನಿಯಾಗಿರುವ ಇಲ್ಲಿನ ತಂಡಗಳು ಗೆಲ್ಲುವ ತಂಡಕ್ಕೆ 20ಕೋಟಿ ಹಣ, ರನ್ನರ್ ಆಫ್ ತಂಡಕ್ಕೆ 13 ಕೋಟಿ ರೂಪಾಯಿ ಹಣ ಇದರಲ್ಲಿ ತುಸು ಹೆಚ್ಚಾಗಲೂಬಹುದು.
ಅಂದಿನಿಂದ ಪ್ರಾರಂಭವಾದ ಈ ಟೂರ್ನಿಗಳು ಪ್ರಸ್ತುತೆಗೆ ಅದೆಷ್ಟು ವ್ಯಾಪಕವಾಗಿ ಹರಡಿದೆಯೆಂದರೆ ನಿನ್ನೆ ಸೇರಿದ ಜನಸ್ತೋಮ ಆದ ಅವಘಡವೇ ಸಾಕ್ಷಿ ಎಂಬಂತಿದೆ.
ಇದೇನೂ ದೇಶದ ಪ್ರತಿಷ್ಠೆಯ ಪ್ರತೀಕ ಎಂಬಂತೆ ಸುದ್ದಿಯನ್ನು ರೋಚಕತೆಯಿಂದ ವರದಿ ಮಾಡುವ ಮಾಧ್ಯಮಗಳು ಇದ ನೋಡಿ ಮುಗ್ಧ ಜನರು ವಶೀಕರಣಕ್ಕೆ ಒಳಗಾದಂತೆ ಆ ಐಪಿಎಲ್ ಮಾಯೆಗೆ ಸಿಲುಕಿದ್ದಾರೆ.
ಯುವ ಸಮೂಹ ದೇಶದ ಪ್ರಗತಿ ಕಡೆ, ತನ್ನ ಭವಿಷ್ಯದ ಬಗ್ಗೆ ಗಮನಹರಿಸಬೇಕು ಆದರೆ ಬಹುಪಾಲು ಮಂದಿ ಈ ಮೋಜು ಮಸ್ತಿಯ ದಾಸರಾಗಿದ್ದಾರೆ ವಿವೇಚನೆ ಇಲ್ಲದಂತೆ ವರ್ತಿಸುತ್ತಿದ್ದಾರೆ, ಅಸಭ್ಯತೆಯ ಕುಣಿತ ಕೇಕೆ,ಹಣ ದೋಚುವ ಖಾಸಗಿ ಕಂಪನಿಗಳ ಜಾಹಿರಾತು ಹಾವಳಿ ಒಟ್ಟಿನಲ್ಲಿ ಸಮಾಜದ ಶ್ರೀಮಂತ ವರ್ಗದ ಜನರು ಕೊಂಡು ಹುಟ್ಪುಹಾಕಿದ ಹಕ್ಕು ಸ್ವಾಮ್ಯದ ತಂಡಗಳು.
ಕ್ರೀಡೆಯನ್ನು ಮನರಂಜನೆಗೆ ಮಾತ್ರ ನೋಡಿ ಸುಮ್ಮನಾಗದೆ ನಮ್ಮ ದೇಶಾಭಿಮಾನ, ದೇಶಭಕ್ತಿ ಎಂಬಂತೆ ಪರಿಭಾವಿಸಿ ಹುಚ್ಚಾಟ ಅಭಿಮಾನದ ಅತಿರೇಕದ ವರ್ತನೆಗಳು ಹೇಸಿಗೆ ಹುಟ್ಟಿಸುತ್ತದೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ
ಅತಿವೇಗದ ಈ ಚುಟುಕು ಪಂದ್ಯ ಬಹುಬೇಗನೇ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ ಏಕೆಂದರೆ ಇಲ್ಲಿ ಟೆಸ್ಟ್,ಏಕದಿನ ಪಂದ್ಯದಂತೆ ನಿಧಾನಗತಿ ಇಲ್ಲ ಟೈಮಿಂಗ್ ಎಂಬುದು ಕೆಲವರು ಪಾಲಿಸುವರಷ್ಟೇ ಬಂದ ಬಾಲನ್ನೆಲ್ಲಾ ಬೌಂಡರಿ ಗೆರೆಯಾಚೆ ಇಲ್ಲ ಆಕಾಶದೆಡೆ ಚಿಮ್ಮಿಸುವ ಧಾವಂತ ಆಟಗಾರನಿಗೆ.ಅಬ್ಬರದ ಸಂಗೀತ ಜೊತೆಗೆ ಅರೆನಗ್ನ ವಸ್ತ್ರ ಧರಿಸಿ ಕುಣಿವ ಹುರುಪು ತುಂಬುವ ತರುಣಿಯರು.
ಅಂದು ಗಿರಣಿ ಗೆ ಹಿಟ್ಟು ಹಾಕಿಸಲು ಹೋಗಿದ್ದೆ ಅಲ್ಲಿನ ಹುಡುಗರು ಸುಮಾರು 20ವಯಸ್ಸಿನವರು ಅವರೆಲ್ಲರ ಮಾತು ಈ ಆರ್ ಸಿ ಬಿ ಪಂದ್ಯದ ಬಗ್ಗೆಯೇ ಹಾಗೇ ಇಂತಿಷ್ಟು ಹಣ ಕಟ್ಟು ಎಂಬ ಬಾಜಿ ಮಾತು.
ವಿದ್ಯಾವಂತ ಸಮೂಹವೂ ಇದಕ್ಕೆ ಹೊರತಾಗಿಲ್ಲ ನಾನು ಕಂಡಂತೆ ಈ ಪಂದ್ಯಗಳಿಗೆ ಹಣ ಕಟ್ಟಿ ಸಾಲದ ಶೂಲ ತಡೆಯಲಾರದೇ ನೇಣಿಗೆ ಶರಣಾದವರನ್ನು ಕಂಡಿದ್ದೇನೆ.ಅವರ ಸಾವಿನಿಂದ ಕುಟುಂಬ ಇನ್ನೂ ಆ ನೋವಿನಿಂದ ಹೊರಬರದೇ ಒದ್ದಾಡುವುದು ಕಂಡಿದ್ದೇನೆ.
ಜೂಜಿನಲ್ಲಿ ಉದ್ದಾರ ಆದವರು ಯಾರು ಇಲ್ಲ ಆ ಮೋಹದ ಪಾಶಕ್ಕೆ ಬಲಿಯಾದವರು ಒಂದಲ್ಲ ಒಂದು ದಿನ ತಾವೇ ಬಲಿಯಾಗುವುದು ತಿಳಿದು ಅದರಿಂದ ಹೊರಬಾರರು.
ಇಂದಿನ ದಿನಗಳಲ್ಲಿ ದೇಶ,ವಿದೇಶದ ವಿದ್ಯಮಾನಗಳನ್ನು ಕ್ಷಣಾರ್ಧದಲ್ಲಿ ನಾಲ್ಕು ಗೋಡೆಗಳ ನಡುವೆ ಇದ್ದೆ ತಿಳಿಯಬಹುದಾಗಿದೆ.ಅದರ ಬದಲು ಪ್ರತ್ಯಕ್ಷವಾಗಿ ನೋಡಬೇಕು ಎಂದು ನೋಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡವರು,ಅಪಾರ ಜನಸಂದಣಿಯ ನಡುವೆ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣಬಿಟ್ಟ ಅಮಾಯಕ ಜೀವಗಳಿಗೆ ಬೆಲೆ ಕಟ್ಟಲು ಸಾಧ್ಯವೇ, ಅವರನ್ನು ನಂಬಿದ ಅವಲಂಬಿತ ಕುಟುಂಬಕ್ಕೆ ಆ ದುಃಖ,ಆದ ನಷ್ಟ ಭರಿಸಲು ಸಾಧ್ಯವಿಲ್ಲ.
ಸಾವು ನೋವುಗಳಾದಾಗ ದೋಷಾರೋಪ ಸಹಜ ಆದರೆ ಲಕ್ಷೋಪಾದಿ ಜನ ಸಾಗರಕ್ಕೆ ನೇಮಿಸಿದ ಸ್ವಲ್ಪ ಪೋಲೀಸ್ ಸಿಬ್ಬಂದಿ ನಿಯಂತ್ರಿಸಲಾಗದ ಅಸಹಾಯಕ ಪರಿಸ್ಥಿತಿಗೆ ಯಾರು ಹೊಣೆ,ಆದ ಅನಾಹುತ ಹಾಕಿದ್ದ ಬ್ಯಾರಿಕೇಡ್ ದಾಟಿ ತಮ್ಮ ನೆಚ್ಚಿನ ಆಟಗಾರರನ್ನು ಕಾಣಲು ಜನರನ್ನು ಸಹ ದಬ್ಬಿ ತುಳಿವ ಕೃತ್ಯ ನಿಜಕ್ಕೂ ವಿಷಾದದ ಸಂಗತಿ.
ಒಂದು ಕ್ರೀಡೆ ಅಂತಾ ಬಂದಾಗ ಮನರಂಜನೆಗಾಗಿ ನೋಡಿ ಸುಮ್ಮನಾಗುವ ಬದಲು ಭಾವನಾತ್ಮಕವಾಗಿ ಉದ್ರೇಕದಿಂದ ಕುಣಿದಾಡಿ, ಮನುಷ್ಯ ಮನುಷ್ಯ ತುಳಿದು ಸಾವಿಗೀಡಾದ ಘಟನೆ ಹೃದಯಹೀನರು ಮಾಡುವಂತದ್ದು.
ಆಟದ,ಆಟಗಾರ ಯಾವುದೇ ಆಗಲಿ ಅಭಿಮಾನ ಅತಿರೇಕದ ವರ್ತನೆ ಆಗಬಾರದು.ಬಹುಮಾನ ಪಡೆದ ತಂಡ,ತಂಡದ ಆಟಗಾರರು, ಪ್ರಾಯೋಜಕರು ಇನ್ನಿತರೆ ವರ್ಗದ ಜನರಿಗೆ ಯಾವುದೇ ರೀತಿಯ ತೊಂದರೆಗಳಾಗಿಲ್ಲ ಬಹುಮಾನ ಪಡೆದು ಆರಾಮಾಗಿದ್ದಾರೆ.ಆದರೆ ಸಾವುನೋವು ಗಳಿಗೆ ಬಲಿಯಾಗಿದ್ದು ಅಮಾಯಕರ ಪ್ರಾಣಗಳು.
ನಿಮ್ಮ ನಂಬಿದ ಕುಟುಂಬಗಳಿಗೇ ನೀವೇ ಆಸ್ತಿ ಆ ಸಚಿವ, ಸಿನಿಮಾ ತಾರೆ, ಮಾಜಿ ಪ್ರಧಾನಿ ನೋಡಿದರು ನಮ್ಮದೇನೂ ಎಂಬ ಸಮರ್ಥನೆ ಬೇಡ ಅವರು ಮಾಡುವ ಕೆಲಸಗಳನ್ನೆಲ್ಲ ನಿಭಾಯಿಸಿ ತುಸು ರಂಜನೆಗಾಗಿ ನೋಡುವರು ನಮ್ಮಂತೆ ಮಾಡುವ ಕೆಲಸ ಬದಿಗಿಟ್ಟು ಅಲ್ಲ ಎಂಬ ವಿವೇಚನೆ ಇರಲಿ.
ಕ್ರೀಡೆ ಎಂದ ಮೇಲೆ ಸೋಲು ಗೆಲುವು ಸಮ್ಮಿಶ್ರಣ ಯಾರಾದರೂ ಸೋಲಬೇಕು ಮನಕೆ ಘಾಸಿ ಮಾಡಿಕೊಳ್ಳದೇ ಮನರಂಜನೆಗಾಗಿ ಮಾತ್ರ ವೀಕ್ಷಿಸಿ ಇನ್ನೊಂದು ವಿಚಾರ ತಿಳಿದಿರಲಿ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಕ್ಕೆ ಒಂದು ಪೋಸ್ಟ್ ಹಾಕಿದರು ಅದಕ್ಕು ವರಮಾನವಿದೆ.ಸೆಲೆಬ್ರಿಟಿ ಎಂದಾಗ ತಿಂದರು,ತಿನ್ನದಿದ್ದರೂ, ರಸ್ತೆ ಬದಿ ತಿಂದರು,ಐಷಾರಾಮಿ ಹೋಟೆಲ್ನಲ್ಲಿ ತಿಂದರೂ ಸುದ್ದಿ ಯೇ ಅವರಿಂದ ಕಲಿಯಬಹುದಾದ ಗುಣ ಕಲಿಯಲು ಪ್ರಯತ್ನಿಸಿ.ಅಷ್ಟು ವರ್ಷಗಳ ಸೋಲಿನ ಅವಮಾನದಿಂದ ಹತಾಶರಾಗದೇ ಭರವಸೆಯಿಂದ ಮುನ್ನಡೆದ, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ಸಾಗಿ ಕೊನೆಗೆ ಜಯ ಸಾಧಿಸಿದ್ದು ನಮಗೊಂದು ಪಾಠವಾಗಲಿ ಆ ಆನಂದಭಾಷ್ಪವನ್ನು ಕುಟುಂಬದೊಂದಿಗೆ ಹಂಚಿಕೊಂಡಿದ್ದು ಟಿವಿ ಪರದೆಯಲ್ಲಿ ನೋಡಿರೀರುತ್ತೀರಿ.ನಿಮ್ಮ ಗೆಲುವು ಸೋಲು ಯಾವುದೇ ಇರಲಿ ನಿಮ್ಮ ಕುಟುಂಬ ಸದಾ ಜೊತೆ ಇರುವುದು, ನಿಮ್ಮ ಒಳಿತನ್ನೇ ಬಯಸುವ ಜೀವಗಳ ಮರೆಯದಿರಿ ಬದುಕು ಬರಿದು ಮಾಡದೇ ಭರ್ತಿಯಾಗಿಸೋಣವಲ್ಲವೇ?
ಕೊನೆಯದಾಗಿ ಆ ಘಟನೆ ನಡೆದ ಪ್ರತ್ಯಕ್ಷದರ್ಶಿಗಳ ಮಾತು ಕೇಳಿದರೆ ನಿಜಕ್ಕೂ ನಾವು ಮನುಷ್ಯರೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.ಮಂಗಗಳ ಗುಂಪೇ ನೋಡಿದ್ದೇನೆ ಒಂದು ಮಂಗ, ಇಲ್ಲ ಪಕ್ಷಿ ತನ್ನ ಗುಂಪಿನಿಂದ ಬೇರೆಯಾದ ತಕ್ಷಣ ಉಳಿದವೆಲ್ಲಾ ಒಂದೆಡೆ ಸೇರಿ ತವಕದಿಂದ ತಮ್ಮ ಬಳಿ ಎಳೆದುಕೊಳ್ಳುತ್ತವೆ ಅಷ್ಟು ಸಂವೇದನೆ ಇರುತ್ತದೆ.ಇನ್ನು ಪ್ರಾಣಿಗಳಿಗಿಂತ ಗುಣದಲ್ಲಿ ಮೇಲು ಎನ್ನಿಸಿಕೊಳ್ಳುವ ಮಾನವ ಅದಕ್ಕೂ ಕೀಳಾಗಿದ್ದಾನೆ ಎನ್ನುವುದೇ ಸಮಂಜಸವಾಗಿದೆ.ಒಬ್ಬ ವ್ಯಕ್ತಿ ಕುಸಿದ ಎಂದ ತಕ್ಷಣ ಕೈ ಹಿಡಿದು ಎಬ್ಬಿಸಬೇಕು ಇಲ್ಲ ಅವರಿಗೊಂದು ರಕ್ಷಕೋಟೆಯಂತೆ ಕಾಪಾಡಬೇಕು ಅದರ ಬದಲು ಒಬ್ಬರ ಮೇಲೋಬ್ಬರು ಮನುಷ್ಯರನ್ನೇ ತುಳಿದು ಹೋಗುತ್ತಾರೆ ಎಂದರೆ ಅವರು ಮನುಷ್ಯರೇ ಅಲ್ಲ ಮೃಗಕ್ಕಿಂತ ಕಡೆಯೇ ಕಲಿತ ಸಂಸ್ಕಾರವೆಂತದ್ದು, ಪೋಷಕರೇ ನಿಮ್ಮನ್ನೇ ವಿಮರ್ಶಿಸಿಕೊಳ್ಳಿ ಹೀಗೆ ಬೆಳೆಸಿದ್ದೀರಾ ನಿಮ್ಮ ಮಕ್ಕಳನ್ನು ಎಂದು ಒಬ್ಬನ ನೋವಿಗೆ ಕಿಂಚಿತ್ತೂ ಪ್ರತಿಕ್ರಿಯಿಸದೇ ಹಾಗೇ ತುಳಿಯುತ್ತಲೂ ಆರ್ ಸಿಬಿ ಗೆ ಜೈ ಎನ್ನುವ ವಿಕೃತ ಮನಸ್ಸಿನ ಜನರಿದ್ದಾರೆ ಎಂದರೆ ಮಾನವ ಜನ್ಮಕ್ಕೆ ಕಳಂಕ.ಅಂಧಾಭಿಮಾನ ಅಮಾಯಕರ ಪ್ರಾಣಗಳಿಗೆ ಮಾರಕವಾದದ್ದು ಕರಾಳ ದಿನ ಮಾನವೀಯತೆಗೂ ಮಿಗಿಲು ಯಾವುದಿದೆ ನಿರ್ಧರಿಸಿ ನೀವೇ?
ಶಾರದಾಜೈರಾಂ ಬಿ.
