ಕಾವ್ಯ ಸಂಗಾತಿ
ರಾಜು ಪವಾರ್
“ಸಂಧಾನ”

ಪ್ರತಿ ಸಾರಿ ಕವತೆ ಬರೆಯಲು ಕುಳಿತಾಗ
ಅಕ್ಷರಗಳು ಹರತಾಳ ಹೂಡುತ್ತವೆ,
ಅಮಾನವೀಯತೆ, ನೋವು, ದು:ಖ-ದುಮ್ಮಾನ, ಕೊಲೆ-ಸುಲಿಗೆ, ಸಂಘರ್ಷ ಭರಿತ ಕವಿತೆ ಬರೆಯಲು ಮಾತ್ರ ನಮ್ಮನ್ನು ಬಳಸುತ್ತಿರಿ ಎಂದು!
ಹೀಗೆಯೇ ಮುಂದುವರೆದರೆ ಕೋರ್ಟಿನಲ್ಲಿ ‘ಮಾನಹಾನಿ ಕೇಸು’ ದಾಖಲಿಸುತ್ತೇವೆ ಎಂದು ಹೆದರಿಸುತ್ತವೆ!!
ಒಲವು-ಚೆಲುವು,ಪ್ರೇಮ, ತ್ಯಾಗ, ಪ್ರಕೃತಿ, ಪ್ರೀತಿ, ಸೌಗಂಧ, ಮಾನವೀಯತೆ ಹೀಗೆ ಹಲವು ವಿಷಯಗಳಿವೆ ಕವಿತೆ ಬರೆಯಲು,
ಬಳಸಿರಿ ಅವುಗಳಲ್ಲಿ!!
ಪ್ರೀತಿಯ ಪುಳಕ ಅನುಭವಿಸುತ್ತೇವೆ!
ಪ್ರಕೃತಿಯ ಮಡಿಲಲ್ಲಿ
ಹೂಗಳ ಸುಗಂಧ ಸವಿಯುತ್ತೇವೆ!
ಸ್ನೇಹದ ಸವಿಯುಂಡು
ಮಾನವೀಯತೆಯ ಮೌಲ್ಯ ಅರಿಯುತ್ತೇವೆ!
ನಲ್ಲ-ನಲ್ಲೆಯ ಪ್ರೀತಿಯಲ್ಲಿ ಒಲವ ಗೀತೆ ಹಾಡುತ್ತೇವೆ!
ಹೌದು!! ಅಕ್ಷರಗಳ ಹರತಾಳ
ಸರಿಯಾಗಿಯೇ ಇದೆ ಎಂದು
ಮನಸ್ಸು ಹೇಳುತ್ತದೆ.
ಮರು ಕ್ಷಣವೇ,
ಪ್ರೀತಿ-ಪ್ರೇಮ,ಸ್ನೇಹ-ಸೌಗಂಧ
ಒಲವು-ಚಲವು
ಇಷ್ಟೇ ಸಾಕೆ ಕವಿತೆ ಬರೆಯಲು!?
ಜಗದ ಅಂಕು-ಡೊಂಕು ತಿದ್ದಬೇಡವೆ?
ಮನದ ಕಹಿ ಮರೆಯಬೇಡವೆ?
ಮೃಗೀಯ ಮನಸು ಮಾನವೀಯತೆ ಎಡಗೆ ಮರುಳಬೇಡವೆ?
ದು:ಖ-ದುಮ್ಮಾನ ದೂರಾಗಿ
ಸುಖ-ಶಾಂತಿ ನೆಲಸಬೇಡವೆ?
ದ್ವೇಷ-ಅಸುಯೆಗಳಳಿದು
ಸ್ನೇಹ-ಪ್ರೀತಿ ಅರಳಬೇಡವೆ?
ನಾ ಬರೆಯುವ ಕವಿತೆಯಿಂದ
ಒಬ್ಬರಲ್ಲಾದರೂ ಪರಿಣಾಮ ಬೀರಿದರೆ
ಸಾರ್ಥಕವಲ್ಲವೆ ಕವಿತೆ!!?
ಅಕ್ಷರಗಳು,ಹೌದಲ್ಲವೆ!? ಎಂದು ಅಚ್ಚರಿಪಟ್ಟು ನನ್ನ ಜೊತೆ ಸಂಧಾನ ಮಾಡಿಕೊಳ್ಳುತ್ತವೆ!!
————-
ರಾಜು ಪವಾರ್…

ಬಹಳ ಉತ್ತಮವಾಗಿದೆ ಸರ್ ಈ ನಿಮ್ಮ ಕವಿತೆ
Bahala sogasagide
Ok sir keep it up
ನಿಮ್ಮ ಪದ ಕೋಶ ಸಮೃದ್ಧವಾಗಿದೆ,
ಸುಂದರ ಸಾಲುಗಳ ಸರಪಳಿ ಹೀಗೆ ಮುಂದುವರೆಯಲಿ…
ನಮನ