“ನೆರಳು-ಬೆಳಕು” ನಿರಂಜನ ಕೇಶವ ನಾಯಕ ಅವರ ಕವಿತೆ

ಇಂದು ನಿನ್ನೆಯಂತಿಲ್ಲ;
ನಾಳೆ ಇಂದಿನಂತಿರದು.

ಮಣ್ಣ ನೀರು ತಿಳಿಯಾಗುತಲಿದೆ,
ನಾಳೆಯ ಹೊಂಬೆಳಕು
ಮೆಲ್ಲನೆ ಹಾದು,
ಮೂಡುವ ಬಣ್ಣಗಳ
ಪುಟ್ಟ ಗೆರೆಗಳು,
ವಿಶಾಲ ಗೋಡೆಗೆ
ಕೊಂಚ ಹೊಳಪ
ನೀಡಬಲ್ಲವು.

ನೆರಳು-ಬೆಳಕಿನ
ಅದಲು ಬದಲು
ಗೋಡೆಯ ಮೇಲೆ..


3 thoughts on ““ನೆರಳು-ಬೆಳಕು” ನಿರಂಜನ ಕೇಶವ ನಾಯಕ ಅವರ ಕವಿತೆ

  1. ಪ್ರತಿಭೆಯ ಗೆರೆಗಳು ಸುಂದರವಾಗಿ
    ಮೂಡಿಬರುತ್ತಿವೆ.

Leave a Reply

Back To Top