ಕಾವ್ಯ ಸಂಗಾತಿ
“ನೆರಳು-ಬೆಳಕು”
ನಿರಂಜನ ಕೇಶವ ನಾಯಕ

ಇಂದು ನಿನ್ನೆಯಂತಿಲ್ಲ;
ನಾಳೆ ಇಂದಿನಂತಿರದು.
ಮಣ್ಣ ನೀರು ತಿಳಿಯಾಗುತಲಿದೆ,
ನಾಳೆಯ ಹೊಂಬೆಳಕು
ಮೆಲ್ಲನೆ ಹಾದು,
ಮೂಡುವ ಬಣ್ಣಗಳ
ಪುಟ್ಟ ಗೆರೆಗಳು,
ವಿಶಾಲ ಗೋಡೆಗೆ
ಕೊಂಚ ಹೊಳಪ
ನೀಡಬಲ್ಲವು.
ನೆರಳು-ಬೆಳಕಿನ
ಅದಲು ಬದಲು
ಗೋಡೆಯ ಮೇಲೆ..
ನಿರಂಜನ ಕೇಶವ ನಾಯಕ

ಪ್ರತಿಭೆಯ ಗೆರೆಗಳು ಸುಂದರವಾಗಿ
ಮೂಡಿಬರುತ್ತಿವೆ.
ಉತ್ತಮ ಕವನ.
Good poem.