ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಪುಟ್ಟ ಪದಗಳೇ……

ಭಾವದ ಹೂನಗು
ಚೆಲ್ಲುವ ಮನಸೇ
ಒಲವಿನ ಹಾಡನು
ಹಾಡಿ ಬಿಡು
ಮಣ್ಣಿನ ಗುರುತನು
ಸಾರುವ ಮಾತೇ
ಹೂವಾಗಿ ಅರಳಿ ಬಿಡಿ
ಪುಟ್ಟ ಪದಗಳೇ
ನೀರಲ್ಲಿ ಮೀನಾಗಿ
ಮೊಗದಲ್ಲಿ ನಗೆ ಚೆಲ್ಲಿ
ಬೆಳಕಲ್ಲಿ ಮಿನುಗುವ
ನಕ್ಷತ್ರದಂತೆ
ಉಳಿಯುತ್ತಾ ನಲಿಯುತ್ತ
ಕಾಲ ಕಳೆದು ಬಿಡಿ
ಮಂಜು ನೀರಾಗುವಲ್ಲಿ
ಮಾತು ಮೌನದಿ
ನಿಂತು ಉಳಿಸಲಿ
ಬದುಕನ್ನ
ತಂಗಾಳಿ ತಾ ಬೀಸಿ
ಹೂ ಹಾಸಿ ಚೆಲ್ಲಿರಲು
ನೆಲ ನೆರಳು ಬೊಗಸೆಯಲ್ಲಿ
ಬಿಂದುವಿನ ಬಿಂದು
ಗೆರೆಯಾಗಬಲ್ಲದು
ಅನುಬಂಧದ ನೆಲೆಯೂ
ಒಂದು ಬದುಕಂತೆ…….
ನಾಗರಾಜ ಬಿ.ನಾಯ್ಕ
