ಕಾವ್ಯ ಸಂಗಾತಿ
“ಸಿಹಿಯ ಹಬ್ಬ” ಕವಿತೆ
ಮನ್ಸೂರ್ ಮೂಲ್ಕಿ

ಬಾನು ಮಂಜಾಗಿದೆ ಬಾನು ಮಂಜಾಗಿದೆ ಮುಗಿಲು ಮೂಡಿ ಮಳೆಯು ಸುರಿಯೊ ತವಕ ಮೂಡಿದೆ.
ಬಿಸಿಲ ನೆಲಕೆ ತಂಪೆರಗಿ ಸಸಿಯು ನಗುವ ಬೀರಲಿ
ತಂಪು ಗಾಳಿ ಬೀಸುತ್ತಿರಲು ಗಿಡಗಳೆಲ್ಲ ನಲಿಯುತಿರಲಿ
ಹಣ್ಣುಗಳು ಉದುರುತಿರಲು ಮಕ್ಕಳೆಲ್ಲ ಹೆಕ್ಕಿಕೊಂಡು ಸವಿದು ನೋಡಿದೆ
ಸಿಹಿಯ ಹಬ್ಬ ಮಾಡುತ್ತಿರಲು ಮನವು ನಲಿದು ನಗುವುಮೂಡಿದೆ
ಸುರಿಯೋ ಮಳೆಯ ಮಧ್ಯದಲ್ಲಿ ಕಾಮನಬಿಲ್ಲು ಮೂಡಿ
ಬಾನ ಅಂದ ನೋಡಬೇಕು ಏನು ಚಂದವೋ ಅದೇನು ಚಂದವೋ
ಹೂವುಗಳು ಉದುರಿಕೊಂಡು ನೆಲದಲ್ಲಿ ಹರಡಿಕೊಂಡು ತೋಟವೆಲ್ಲ ಬಣ್ಣವಾಗಿದೆ
ಘಮಿಸೊ ಹೂವ ಹೆಕ್ಕಿಕೊಂಡು ಮುಡಿಯಲ್ಲಿ ಮುಡಿದುಕೊಂಡು ಕನಸ ನಗುವ ಬೀರಿಕೊಂಡು ನಡೆದಳಾಕೆ ಊರ ಮನೆಗೆ
ಮನ್ಸೂರ್ ಮೂಲ್ಕಿ
