ಕಾವ್ಯ ಸಂಗಾತಿ
ಕೆ ಜೆ ಪೂರ್ಣಿಮಾ
“ಯೂಟರ್ನ್”

ಬೇಹುಗಾರಿಕೆಯ ವ್ಯವಸ್ಥೆಗೆ
ಬೆಸೆದ ಭಾವಗಳೆರಡು ಬೇಸರಕ್ಕೆ ಸಾಗಿದೆ…
ಭವಿಷ್ಯ ಬದುಕಿಗೆ ಬೆರಗು ಮೂಡಿಸಿದ ಮರುಳನ ಮಾತು ಮರೆಯಾಗಿದೆ…..
ಮಳೆಯೂ ಬಂದರೇನು? ಬಿಸಿಲು ಬಿದ್ದರೇನು? ಮನದ ನೋವು ಅಳಿಯದಾಗಿದೆ….
ನೆನ್ನೆ ಇಂದು,ಏಕೆ ಬಂತೋ…
ಅಂದು ಅಂದಿನ ಮೊನ್ನೆಯ ಮಧುರ ಮಾತು ಮೌನ ಮುರಿದು ತಿರುಗಿ ಬಾರದೆ….
ದೂರ ದೂರ ಹೋದರೇನು? ದಾರಿ ತುಂಬ ದೂರವಿದ್ದರೇನು?
ಕಲಹವಾಗಿ ಬೇರೆ ಯಾದರೇನು?
ಕನಸಿನ ಕನವರಿಕೆಯಲಿ ನಿನ್ನ ನಾ ಜೊತೆಯಾಗಿದೆ…….
ನಿನ್ನ ಬಲವೇ ನನಗೆ ಬದುಕು ನನ್ನ ಒಲವು ನಿನಗೆ ನಗುವು…
ಇರಲಿ ಬಿಡು, ದೂರದಿಗಂತ ಬದುಕು ಅನಂತ ಅರಿತುದಾಗಿದೆ…..
ತಿರುಗು ಪಡೆದ ಬದುಕು ಮರೆತು ಸಾಗಿದೆ… ಆದರೂ ತಿರುವು ಪಡೆದ ನೆನಪು ಮನವ ಕೊರಗಿಸಿದೆ….. ಆದರೆ ಏನು ಬಂದ ವಸಂತದಲ್ಲಿ ಕೋಗಿಲೆ ಮತ್ತೆ ಕೂಗಿದೆ… ಬದುಕು ಸಾಗಿದೆ….
ಕೆ ಜೆ ಪೂರ್ಣಿಮಾ
