ಬುದ್ದನೇಕೆ ನಕ್ಕ? ಡಾ.ಶಶಿಕಾಂತ ಪಟ್ಟಣ ರಾಮದುರ್ಗ

ಬುದ್ಧನೇಕೆ ನಕ್ಕ
ಪಾಪ ಅವನಿಗೂ
ಹೆಂಡರು ಮಕ್ಕಳು
ಬಿಟ್ಟು ಹೊರಟ
ಕಾಡಿಗೆ
ಅನುಭವ ಅರಿವಿನ
ಹುಡುಕಾಟ

ಸತ್ಯ ಸಮತೆ ಶಾಂತಿ
ಪ್ರೀತಿ ಅವನ ಮಂತ್ರ
ಬೋಧಿ ವೃಕ್ಷದ ಕೆಳಗೆ
ಜ್ಞಾನ ದೀವಿಗೆ ಜ್ಯೋತಿ
ಅಹಿಂಸಾ ಮೂರ್ತಿ
ವಿಶ್ವಕ್ಕೆ ಪಸರಿಸಿದನು
ಮಾನವ ಪ್ರೀತಿ

ಪೋಖ್ರಾನ್ ನಲ್ಲಿ
ಅಣು ಬಾಂಬ್ ಪರೀಕ್ಷೆ
ಕಂದಹಾರದಲ್ಲಿ ಉಗ್ರರ
ಅಟ್ಟ ಹಾಸ ದಾಳಿ
ತುಂಡಾಗಿ ಬಿದ್ದ ಬುದ್ಧ
ಸಮರಸದ ತೋಟದಲ್ಲಿ
ರಕ್ತ ಕೋಡಿ ಹರಿಯಿತು

ಭಾಷಣ ಲೇಖನಕೆ
ವಸ್ತುವಾದ ಸಿದ್ಧಾರ್ಥ
ಬುದ್ಧ ಶರಣಂ ಗಚ್ಛಾಮಿ
ಕೆಡುವಿದರು ಸನಾತನಿಗಳು
ವಿಹಾರ ಬುದ್ಧ ಮೂರ್ತಿ
ಭಾರತ ಬಿಟ್ಟ ಮಂದಹಾಸ
ಬುದ್ಧನೇಕೆ ನಕ್ಕ ನನ್ನ ಪ್ರಶ್ನೆ


2 thoughts on “ಬುದ್ದನೇಕೆ ನಕ್ಕ? ಡಾ.ಶಶಿಕಾಂತ ಪಟ್ಟಣ ರಾಮದುರ್ಗ

  1. ಸನಾತನಿಗಳು ಭೌಧ ವಿಹಾರ ಹಾಗೂ ಬುದ್ಧನ ಮೂರ್ತಿಗಳನ್ನು ಕೆಡವಿದ ಬಗ್ಗೆ ಐತಿಹಾಸಿಕ ದಾಖಲೆಗಳು ಏನಾದರೂ ಇದ್ದರೆ ದಯವಿಟ್ಟು ಒದಗಿಸಿ. ಇಂದಿಗೂ ಸ್ವಚ್ಛಂದವಾಗಿ, ನೆಮ್ಮದಿಯಿಂದ ನಮ್ಮ ನಡುವೆಯೇ(ಉದಾ: ಮುಂಡಗೋಡ) ಬದುಕುತ್ತಿರುವ ಬೌದ್ಧರಿಗೆ ಸನಾತನಗಳಿಂದ ಯಾವ ತೊಂದರೆಯೂ ಆಗುತ್ತಿಲ್ಲ. ಇದರ ಬಗ್ಗೆಯೂ ನಿಮ್ಮ ಸ್ಪಷ್ಟನೆ ನೀಡಿ.

  2. ಅಫ್ಘಾನಸ್ತಾನ, ಪಾಕಿಸ್ತಾನ, ಚೀನಾದಲ್ಲಿ ಬೌದ್ಧ ರನ್ನು ಕೊಲೆ ಮಾಡಿದವರು ಸ್ತೂಪಗಳನ್ನ ನಾಶ ಮಾಡಿದವರು ಯಾರು? ಅಲ್ಲಿ ಸನಾತನಿಗಳು ಇಲ್ಲ

Leave a Reply

Back To Top