ಕಾವ್ಯ ಸಂಗಾತಿ
ಭುವನೇಶ್ವರಿ ರು. ಅಂಗಡಿ ಅ
ಅವ್ವ ಹೊರೆಯಲ್ಲ

ಹೊರುವಾಗ ಹೆರುವಾಗ ಗೊತ್ತಿರಲಿಲ್ಲ
ಅವಳಿಗೆ ತಾನೇ ಹೊರೆಯಾಗುವ
ದಿನವೊಂದು ಬರಬಹುದೆಂದು….
ಮೊಲೆ ಹಾಲು ಉಣಿಸುವಾಗ ತಿಳಿಯಲಿಲ್ಲ
ಲೋಟ ಹಾಲಿಗೂ ಹಪಹಪಿಸುವ
ಗಳಿಗೆಯೊಂದು ಬರಬಹುದೆಂದು…..
ಮಗನ ಮೊಣಕಾಲ್ ಗಾಯಕೆ ಸೀರೆಯ
ಸೆರಗು ಹರಿದು ಕಟ್ಟುವಾಗ ಚಿಂತಿಸಲಿಲ್ಲ
ಹರಕು ಸೀರೆಯ ಉಡುವ ದಿನಗಳು
ಬರಬಹುದೆಂದು…..
ನಿದ್ರೆ ಮಾಡುವ ವಯಸ್ಸಲ್ಲಿ ಮಗನ
ಮೇಲೆ ಒಂದು ಸೊಳ್ಳೆಯೂ ಕೂರದಂತೆ
ಕಾದವಳಿಗೆ ಅರಿವಿರಲಿಲ್ಲ ನಿದ್ದೆಯೇ
ಹತ್ತದ ಮುಪ್ಪು ಆವರಿಸೀತೆಂದು……
ಮಗನ ಬದುಕು ಕಟ್ಟಲು ದುಡಿದ
ಜೀವವೊಂದು ಇಂದು ಬಚ್ಚಲು ಮನೆಯಲ್ಲಿ
ಕುಳಿತು ಅಳುತಿದೆ
ಮಗನಿಗೆ ಕಣ್ಣೀರು ಕಾಣಬಾರದೆಂದು……
ಉಸಿರು ನಿಂತ ಮೇಲೆ ಕೊನೆಯ ಸ್ನಾನಕೆ
ಕರೆದೊಯ್ಯುವಾಗ ದಿಂಬಿನ ಕೆಳಗೊಂದು
ಕಂಡ ಕಾಸಿನ ಗಂಟು
ಅಂತ್ಯಕ್ರಿಯೆ ಮಗನಿಗೆ ಹೊರೆಯಾಗಬಾರದೆಂದು…..
ಅವ್ವ ಹೊರೆ ಅಲ್ಲ…..
ಅವ್ವ ಇಲ್ಲದ ದಿನಗಳು ತೀರಾ ಹೊರ
ಭುವನೇಶ್ವರಿ ರು. ಅಂಗಡಿ

ಸುಂದರ.
ಹೊರೆ ಎಂಬ ಬಿಂಬದ ಸುತ್ತ ಹೆಣೆದ ಭಾವ ಹಂದರ
ಅವ್ವನ ಪ್ರತಿಮೆ ಚನ್ನಾಗಿದೆ. ರವಿ ದೇವರಡ್ಡಿ